Viral Video | ಮನದೊಡತಿ ಮಡದಿಗೆ ಅದ್ಭುತ ಉಡುಗೊರೆ ಕೊಟ್ಟ ಪತಿ; ರಿಸೆಪ್ಷನ್​​ನಲ್ಲಿ ವಿಶೇಷ ಕ್ಷಣ - Vistara News

ವೈರಲ್ ನ್ಯೂಸ್

Viral Video | ಮನದೊಡತಿ ಮಡದಿಗೆ ಅದ್ಭುತ ಉಡುಗೊರೆ ಕೊಟ್ಟ ಪತಿ; ರಿಸೆಪ್ಷನ್​​ನಲ್ಲಿ ವಿಶೇಷ ಕ್ಷಣ

ವರುಣ್​ ತನ್ನ ಪತ್ನಿ ಪೃಥಾಗೆ ನೀಡಿದ ಗಿಫ್ಟ್​ ನೋಡಿ ನೆಟ್ಟಿಗರೂ ಖುಷಿಪಟ್ಟಿದ್ದಾರೆ. ಇದೊಂದು ಭಾವನಾತ್ಮಕ ಕ್ಷಣ ಎಂದು ಕಮೆಂಟ್ ಮಾಡಿದ್ದಾರೆ. ಒಬ್ಬ ಪತಿ ಇದಕ್ಕಿಂತ ಉತ್ತಮ ಉಡುಗೊರೆ ಕೊಡಲು ಸಾಧ್ಯವಿಲ್ಲ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Groom Surprises Bride With Special Gift
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ಪ್ರೀತಿಪಾತ್ರರಿಂದ ಉಡುಗೊರೆ ಪಡೆಯುವುದು, ಅವರಗೆ ಗಿಫ್ಟ್​ ಕೊಡುವುದೆಲ್ಲ ನಿಜಕ್ಕೂ ಅದ್ಭುತ ಕ್ಷಣ ಎನ್ನಿಸಿಕೊಳ್ಳುತ್ತದೆ. ಅದರಲ್ಲೂ ಸಂಗಾತಿಯಿಂದ ಏನಾದರೂ ಉಡುಗೊರೆ ಪಡೆಯುವುದು ಇದೆಯಲ್ಲ, ಅದರ ಸಂತೋಷ ಏನೆಂಬುದನ್ನು ಬಲ್ಲವರೇ ಬಲ್ಲರು. ಆ ಉಡುಗೊರೆ ಮತ್ತು ಅದನ್ನು ಪಡೆದ/ ಕೊಟ್ಟ ಕ್ಷಣವೆಲ್ಲ ತುಂಬ ವಿಶೇಷ ಅನ್ನಿಸಿಕೊಳ್ಳುತ್ತದೆ. ಅದರಲ್ಲೂ ಉಡುಗೊರೆ ವಿಷಯದಲ್ಲಿ ಕೊಡುವುದಕ್ಕಿಂತಲೂ ಪಡೆಯುವುದರಲ್ಲೇ ಮಹದಾನಂದವಿದೆ ಎಂಬುದು ಸುಳ್ಳಲ್ಲ.

ಅಂಥದ್ದೊಂದು ಅದ್ಭುತ ಆನಂದ ಮತ್ತು ವಿಶೇಷ ಕ್ಷಣವನ್ನು ಯುವಕನೊಬ್ಬ ತನ್ನ ಮಡದಿಗೆ ಒದಗಿಸಿಕೊಟ್ಟಿದ್ದಾನೆ. ಈ ನವ ದಂಪತಿ ಮದುವೆ ರಿಸಪ್ಷನ್ ಅದ್ದೂರಿ ಸಮಾರಂಭ ನಡೆಯುತ್ತಿತ್ತು. ಆ ಸಂಜೆ ಸಂಗೀತಮಯವಾಗಿತ್ತು. ಅತಿಥಿಗಳೂ ತುಂಬಿದ್ದರು. ಆಗಲೇ ವರ ವರುಣ್​​ ತನ್ನ ಪತ್ನಿ ಪೃಥಾಳಿಗೆ ಒಂದು ಅದ್ಭುತ ಉಡುಗೊರೆ ಕೊಟ್ಟಿದ್ದಾನೆ. ಹಾಗಂತ ಇದು ಯಾವುದೇ ಚಿನ್ನಾಭರಣವಾಗಲೀ, ಬೆಲೆಬಾಳುವ ವಸ್ತುವಾಗಲೀ ಅಲ್ಲ. ಬೆಲೆಯನ್ನೇ ಕಟ್ಟಲಾಗದ ಪ್ರೀತಿಯೇ ತುಂಬಿರುವ ಪೇಂಟಿಂಗ್​.

ವರುಣ್​ ಚಿತ್ರಕಲಾವಿದ. ಪತ್ನಿಗೊಂದು ವಿಶೇಷ ಉಡುಗೊರೆ ಕೊಡಲು ನಿರ್ಧರಿಸಿದ ಅವನು ಆಕೆಯ ಕಣ್ಣೆದುರಲ್ಲೇ ಅವಳದ್ದೇ ಚಿತ್ರ ಬಿಡಿಸಿದ್ದಾನೆ. ಪತಿ ಪೂರ್ಣವಾಗಿ ಚಿತ್ರ ಬಿಡಿಸಿ, ಕ್ಯಾನ್ವಾಸ್​​ನ್ನು ಉಲ್ಟಾ ಹಿಡಿಯುವವರೆಗೂ ಪತ್ನಿ ಪೃಥಾಳಿಗೆ ಅದು ತನ್ನದೇ ಚಿತ್ರ ಎಂದು ಗೊತ್ತೇ ಆಗಲಿಲ್ಲ. ಹಿನ್ನೆಲೆಯಲ್ಲಿ ಹಾಡು ಬರುತ್ತಿದ್ದರೆ, ವರುಣ್ ​ ಕ್ಯಾನ್ವಾಸ್​ ಮೇಲೆ ರೇಖೆಗಳನ್ನು ಎಳೆಯುತ್ತಿದ್ದ. ಮೊದಲು ಒಂದು ಲವ್​ ಸಿಂಬಾಲ್​ (ಹೃದಯದ ಚಿತ್ರ) ಬಿಡಿಸಿಕೊಂಡು, ನೋಡನೋಡುತ್ತಿದ್ದಂತೆ ತನ್ನ ಪತ್ನಿಯ ಚಿತ್ರ ಬಿಡಿಸಿದ್ದ. ವರುಣ್​ ಕ್ಯಾನ್ವಾಸ್​ ಮೇಲೆ ತಲೆಕೆಳಗಾಗಿ ಬಿಡಿಸಿ, ನಂತರ ಅದನ್ನು ಸೀದಾ ಮಾಡಿದ್ದ. ಪತಿಯ ಕೈಯಲ್ಲಿ ಅರಳಿದ ತನ್ನ ಭಾವಚಿತ್ರವನ್ನು ನೋಡಿ ಪತ್ನಿ ಸಖತ್​ ಖುಷಿಯಾಗಿದ್ದಳು.
ಈ ವಿಡಿಯೊ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ಸಿಕ್ಕಾಪಟೆ ಖುಷಿಪಟ್ಟಿದ್ದಾರೆ. ಒಬ್ಬ ಪತಿ ಇದಕ್ಕಿಂತ ಉತ್ತಮ ಉಡುಗೊರೆ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ‘ಅಬ್ಬಾ ಇದೆಷ್ಟು ಭಾವನಾತ್ಮಕ ಕ್ಷಣ’ ಎಂದೂ ಹಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video | ʻಆಪ್ ಕಾ ಆನಾ ದಿಲ್ ಧಡ್ಕಾನಾʼ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ ಪುಟ್ಟ ಹುಡುಗಿ! ವಿಡಿಯೊ ಇಲ್ಲಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಕೇಶ ವಿನ್ಯಾಸಕ್ಕೆ ಸಲಾಕೆ ಬಳಸಿದ ಕ್ಷೌರಿಕ!

ಕ್ಷೌರಿಕನೊಬ್ಬ ತನ್ನ ಗ್ರಾಹಕರಿಗೆ ಸಲಾಕೆಯಿಂದ ಕ್ಷೌರವನ್ನು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಹೆಚ್ಚು ಮಂದಿಯ ಗಮನ ಸೆಳೆದಿದ್ದು, ಸಾಕಷ್ಟು ಮಂದಿ ಬೆಚ್ಚಿ ಬೀಳುವಂತೆ ಮಾಡಿದೆ.

VISTARANEWS.COM


on

By

Viral video
Koo

ಕ್ಷೌರ ಮಾಡಲು ಸೆಲೂನ್ ಗೆ (barber salon) ಹೋದಾಗ ಕ್ಷೌರಿಕನ (Barber) ಕೈಯಲ್ಲಿ ಕತ್ತರಿ, ಟ್ರಿಮ್ಮರ್ ಬದಲಿಗೆ ಸಲಾಕೆ ಇದ್ದರೆ ಗ್ರಾಹಕ ಒಮ್ಮೆ ಹೌಹಾರುವುದು ಖಚಿತ. ಆದರೆ ಇಲ್ಲೊಬ್ಬ ಕ್ಷೌರಿಕ ಕೇಶ ವಿನ್ಯಾಸಕ್ಕೆ (hair style) ಸಲಾಕೆ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾನೆ. ಈತನ ವಿಡಿಯೋ ಈಗ ವೈರಲ್ (Viral Video) ಆಗಿದೆ.

ಕ್ಷೌರಿಕನು ತನ್ನ ಕೆಲಸವನ್ನು ಚೂಪಾದ ಕತ್ತರಿ ಅಥವಾ ಕೂದಲಿನ ಟ್ರಿಮ್ಮರ್ ಬಳಸಿ ಮಾಡುತ್ತಾನೆ ಎಂಬುದು ಎಲ್ಲರ ನಿರೀಕ್ಷೆ. ಕೆಲವೊಮ್ಮೆ, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಕೇಶ ವಿನ್ಯಾಸಕರು ವಿವಿಧ ತಂತ್ರಗಳನ್ನು ಬಳಸುತ್ತಾರೆ.

ಮುಖ್ಯವಾಗಿ ಕೂದಲಿನ ಒಡೆದ ತುದಿಗಳನ್ನು ಸುಡಲು ಬೆಂಕಿಯನ್ನು ಬಳಸುತ್ತಾರೆ. ಆದರೆ ಇಲ್ಲೊಬ್ಬ ಯುವಕನಿಗೆ ಕ್ಷೌರಿಕನು ಕೇಶ ವಿನ್ಯಾಸ ಮಾಡಲು ಕತ್ತರಿ ಅಥವಾ ಟ್ರಿಮ್ಮರ್‌ಗಳನ್ನು ಬಳಸದೆ ಅಸಾಂಪ್ರದಾಯಿಕ ಸಾಧನವನ್ನು ಬಳಸಲು ನಿರ್ಧರಿಸಿದ. ಇದು ಸಾಕಷ್ಟು ಸಾಹಸಮಯವಾಗಿತ್ತು.

ಕ್ಷೌರಿಕನೊಬ್ಬ ತನ್ನ ಗ್ರಾಹಕರಿಗೆ ಸಲಿಕೆಯಿಂದ ಕ್ಷೌರವನ್ನು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಹೆಚ್ಚು ಮಂದಿಯ ಗಮನ ಸೆಳೆದಿದ್ದು, ಸಾಕಷ್ಟು ಮಂದಿ ಬೆಚ್ಚಿ ಬೀಳುವಂತೆ ಮಾಡಿದೆ. ಒಬ್ಬ ಯುವಕ ಕುರ್ಚಿಯಲ್ಲಿ ಕುಳಿತು ಕ್ಷೌರಿಕನಿಂದ ಕೂದಲನ್ನು ಕತ್ತರಿಸುವುದನ್ನು ಇದು ತೋರಿಸುತ್ತದೆ. ಅವನು ತನ್ನ ಕೂದಲನ್ನು ಕ್ಷೌರ ಮಾಡಲು ಹೇರ್ ಟ್ರಿಮ್ಮರ್ ಬದಲಿಗೆ ಸಲಾಕೆಯನ್ನು ಬಳಸುತ್ತಾನೆ.

ಕ್ಷೌರಿಕನು ಗ್ರಾಹಕರ ಕೂದಲನ್ನು ಒರಟಾಗಿ ಮತ್ತು ಅಸಮವಾಗಿ ಕಾಣುವಂತೆ ಮಾಡುತ್ತದೆ. ಈ ಕ್ಲಿಪ್ ಇನ್ ಸ್ಟಾ ಗ್ರಾಮ್ ನಲ್ಲಿ ಸುಮಾರು 40 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಸಾಕಷ್ಟು ನೆಟ್ಟಿಗರು ಇದಕ್ಕೆ ಕಾಮೆಂಟ್ ಮಾಡಿ ಆಘಾತ ಮತ್ತು ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರನು ಬ್ರೋ, ನೀವು ಜೆಸಿಬಿಗೆ ಕರೆ ಮಾಡಬಹುದಿತ್ತು ಎಂದು ಹೇಳಿದ್ದರೆ, ಮತ್ತೊಬ್ಬರು ನಾನು ಈ ವಿಡಿಯೋವನ್ನು ನೋಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.


ಮತ್ತೊಬ್ಬರು ಕಾಮೆಂಟ್ ನಲ್ಲಿ ನೀವು ಯಾವ ರೀತಿಯ ಎಂಜಿನಿಯರಿಂಗ್ ಮಾಡಿದ್ದೀರಿ ಸಹೋದರ, ಯಾರ್ ಇದು ನಾಟಕ ಯಾವುದು? ಎಂದು ತಿಳಿಸಿದ್ದಾರೆ.

ಕ್ಷೌರಿಕನು ಸಲಿಕೆಯಿಂದ ಚಿಕ್ಕ ಹುಡುಗನ ತಲೆಯನ್ನು ಬೋಳಿಸಿಕೊಂಡ ರೀತಿ ತುಂಬಾ ಸಾಂದರ್ಭಿಕವಾಗಿತ್ತು ಮತ್ತು ಗಮನವನ್ನು ಸೆಳೆಯಲು ಅವನು ಹೊಸ ಪ್ರವೃತ್ತಿಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ.

ಇದನ್ನೂ ಓದಿ: Manu Bhaker: ವಯಲಿನ್‌ ಮೂಲಕ ರಾಷ್ಟ್ರಗೀತೆ ನುಡಿಸಿದ ಮನು ಭಾಕರ್; ವಿಡಿಯೊ ವೈರಲ್​

ಇತ್ತೀಚೆಗೆ, ಮತ್ತೊಂದು ಕ್ಲಿಪ್ ವೈರಲ್ ಆಗಿದೆ. ಅಲ್ಲಿ ಖಾತೆಯು ಬೇರೆ ಗ್ರಾಹಕರ ಮೇಲೆ ಸಲಿಕೆ ಬಳಸಿ ಕ್ಷೌರಿಕನ ಮತ್ತೊಂದು ಕ್ಲಿಪ್ ಅನ್ನು ಪೋಸ್ಟ್ ಮಾಡಿದೆ. ಅವರು ತಮ್ಮ ಗ್ರಾಹಕರಿಗೆ ಹಿಂದಿನಿಂದ ಕಳೆಗುಂದಿದ ಕೇಶವಿನ್ಯಾಸವನ್ನು ನೀಡಿದರು ಮತ್ತು ಸಲಿಕೆ ಬಳಸಿ ಕೂದಲನ್ನು ತೆಗೆದರು.


ಈ ಕ್ಲಿಪ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವನು ಈಗಾಗಲೇ ಕೂದಲನ್ನು ತೆಗೆದು ಸಲಿಕೆಯನ್ನು ಬಳಸಿ ವಿಶೇಷ ವಿನ್ಯಾಸ ನೀಡಲು ಬಳಸಿದಂತೆ ತೋರುತ್ತದೆ. ಈ ಕ್ಲಿಪ್‌ ಬಗ್ಗೆ ಯಾವುದೇ ದೃಢೀಕರಣ ಖಾತ್ರಿಪಡಿಸಲಾಗದಿದ್ದರೂ ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.

Continue Reading

ಕ್ರೀಡೆ

Virat Kohli: ಗಂಭೀರ್​ ಮಾರ್ಗದರ್ಶನದಂತೆ ಅತ್ಯಂತ ಜೋಶ್​ನಿಂದ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಕೊಹ್ಲಿ; ಫೋಟೊ ವೈರಲ್​

Virat Kohli: ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್​ ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

VISTARANEWS.COM


on

Virat Kohli
Koo

ಕೊಲಂಬೊ: ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದ ಜೋಶ್​ನಲ್ಲಿರುವ ಟೀಮ್​ ಇಂಡಿಯಾ ಇದೀಗ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಗಸ್ಟ್​ 2ರಂದು ನಡೆಯಲಿದೆ. ಈಗಾಗಲೇ ಲಂಕಾ ತಲುಪಿರುವ ಏಕದಿನ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಬುಧವಾರ ವಿರಾಟ್​ ಕೊಹ್ಲಿ(Virat Kohli) ಅವರು ನೂತನ ಕೋಚ್​ ಗೌತಮ್ ಗಂಭೀರ್(Head Coach Gambhir)​ ಜತೆ ಅತ್ಯಂತ ಆತ್ಮೀಯವಾಗಿ ಚರ್ಚಿಸುತ್ತಿರುವುದು ಕಂಡು ಬಂತು. ಈ ಫೋಟೊ(photo viral) ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಅವರು ಗಂಭೀರ್(Gautam Gambhir)​ ಜತೆ ಬ್ಯಾಟಿಂಗ್​ ಮಾರ್ಗದರ್ಶನ ಮತ್ತು ಆತ್ಮೀಯವಾಗಿ ಚರ್ಚಿಸುತ್ತಿರುವ ಫೋಟೊವನ್ನು ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಕಂಡ ಅನೇಕ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಗಂಭೀರ್​ ಕೋಚ್​ ಆಗುತ್ತಿದ್ದಂತೆಯೇ ಕೆಲ ನೆಟ್ಟಿಗರು ಗಂಭೀರ್​ ಮತ್ತು ಕೊಹ್ಲಿ ನಡುವಣ ಆನ್ ಫೀಲ್ಡ್ ಜಗಳ ಮತ್ತೆ ಶುರುವಾಗಿ ಇದು ತಂಡಕ್ಕೆ ಭಾದಿಸಲಿದೆ ಎಂದು ಹೇಳಿದ್ದರು. ನೆಟ್ಟಿಗರು ಈ ಮಾತು ಹೇಳಲು ಕೂಡ ಕಾರಣವಿತ್ತು. ಅದೇನೆಂದರೆ, ವಿರಾಟ್​ ಕೊಹ್ಲಿ ಮತ್ತು ಗಂಭೀರ್​ ಐಪಿಎಲ್​ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್​ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಕೂಡ ಗಂಭೀರ್ ಪ್ರದರ್ಶಿಸಿದ್ದರು. ಹೀಗಿರುವಾಗ ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಇಬರಿಬ್ಬರು ಎಲ್ಲ ಮುನಿಸು ಮರೆತು ಆತ್ಮೀಯವಾಗಿರುವಂತೆ ಕಾಣಿಸಿದೆ.

ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಕೊಹ್ಲಿ ಅವರು ಬಿಸಿಸಿಐ ಬಳಿ ತಾನು ಗಂಭೀರ್ ಜತೆಗೆ ನಡೆಸಿದ ಕಿತ್ತಾಟಗಳನ್ನು ಮರೆತು ಅವರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ, ಗಂಭೀರ್​ ಕೂಡ ತಾನು ಕೊಹ್ಲಿ ಜತೆ ಉತ್ತಮ ಬಾಂಧವ್ಯದೊಂದಿಗೆ ಇರುವುದಾಗಿ ತಿಳಿಸಿದ್ದಾಗಿ ವರದಿಯಾಗಿತ್ತು.

ಇದನ್ನೂ ಓದಿ Virat Kohli: ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿ ಕೋಚ್​ ಗಂಭೀರ್​ ವಿಚಾರದಲ್ಲಿ ಕೊಹ್ಲಿ ಕೊಟ್ಟ ಆಶ್ವಾಸನೆ ಏನು?

ದಾಖಲೆ ಬರೆಯಲು ಕೊಹ್ಲಿ ಸಜ್ಜು

ವಿರಾಟ್​ ಕೊಹ್ಲಿಗೆ(Virat Kohli) ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಹೌದು, ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಸದ್ಯ 292* ಏಕದಿನ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 13,848* ರನ್(virat kohli odi runs)​ ಬಾರಿಸಿದ್ದಾರೆ. ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 152 ರನ್​ ಬಾರಿಸಿದರೆ 14 ಸಾವಿರ ರನ್​ ಮೈಲುಗಲ್ಲು ತಲುಪಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್ ಗಳಿಸಿದ ಸಾರ್ವಕಾಲಿದ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಹೆಸರಿನಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದರೆ, ಕುಮಾರ ಸಂಗಕ್ಕಾರ 404 ಪಂದ್ಯಗಳನ್ನಾಡಿ 14,234 ರನ್ ಬಾರಿಸಿದ್ದಾರೆ. ಕೊಹ್ಲಿಗೆ ಸಂಗಕ್ಕಾರ ದಾಖಲೆ ಮುರಿಯುವ ಅವಕಾಶವಿದೆ. ಆದರೆ ಸಚಿನ್​ ದಾಖಲೆ ಮುರಿಯುವುದು ಕಷ್ಟ ಸಾಧ್ಯ.

Continue Reading

Latest

Crocodile Attack: ತಂದೆಯ ಜೀವ ಉಳಿಸಲು ಮೊಸಳೆ ಬಾಯಿಗೆ ಕೈ ಹಾಕಿದ ಬಾಲಕ!

Crocodile Attack: ರಬಿಯುಲ್ ಶೇಖ್ ಎಂಬ 12 ವರ್ಷದ ಬಾಲಕ ತನ್ನ ತಂದೆಯನ್ನು ಉಳಿಸುವ ಪ್ರಯತ್ನದಲ್ಲಿ ಸುಂದರ್ ಬನ್‌ನಲ್ಲಿ ಮೊಸಳೆಯೊಂದಿಗೆ ಹೋರಾಡಿದ್ದಾನೆ. ಆದರೆ ಆತನ ನಿರಂತರ ಹೋರಾಟದ ಹೊರತಾಗಿಯೂ, ಅವನು ತನ್ನ ತಂದೆಯನ್ನು ಮೊಸಳೆಯ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಳ್ಳಿಗೆ ಹೋಗಿ ಮಗ ಕೆಲವು ಜನರೊಂದಿಗೆ ಹಿಂದಿರುಗಿದ. ಆದರೆ ಅಷ್ಟರಲ್ಲಿ ಮೊಸಳೆ ಆತನ ತಂದೆಯನ್ನು ನದಿಗೆ ಎಳೆದುಕೊಂಡು ಹೋಗಿತ್ತು.

VISTARANEWS.COM


on

Crocodile Attack
Koo


ಮಳೆಗಾಲದಲ್ಲಿ ನದಿಗಳಲ್ಲಿ ನೀರು ತುಂಬಿ ಹರಿಯುವುದರಿಂದ ನದಿಯಲ್ಲಿರುವ ಮೊಸಳೆಗಳು ದಡಕ್ಕೆ ಬಂದು ಸೇರುತ್ತವೆ. ಅವುಗಳಿಗೆ ಆಹಾರ ಸಿಗದಿದ್ದಾಗ ಕೆಲವೊಮ್ಮೆ ಅವುಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಅಂತಹದೊಂದು ಘಟನೆ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಮೀನುಗಾರಿಕೆಗಾಗಿ ನದಿಗೆ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಮೊಸಳೆ ದಾಳಿ (Crocodile Attack)ಮಾಡಿದ್ದು, ಆಗ ಆತನ ಜೊತೆಗಿದ್ದ 12 ವರ್ಷದ ಬಾಲಕನೊಬ್ಬ ತನ್ನ ತಂದೆಯನ್ನು ಮೊಸಳೆ ಹಿಡಿತದಿಂದ ರಕ್ಷಿಸಲು ಮೊಸಳೆ ಜೊತೆಗೆ ಹೋರಾಡಿದ್ದಾನೆ.

ರಬಿಯುಲ್ ಶೇಖ್ ಎಂಬ 12 ವರ್ಷದ ಬಾಲಕ ತನ್ನ ತಂದೆಯನ್ನು ಉಳಿಸುವ ಪ್ರಯತ್ನದಲ್ಲಿ ಸುಂದರ್ ಬನ್‌ನಲ್ಲಿ 10 ಅಡಿ ಉಪ್ಪುನೀರಿನ ಮೊಸಳೆಯೊಂದಿಗೆ ಹೋರಾಡಿದ್ದಾನೆ. ಆದರೆ ಆತನ ನಿರಂತರ ಹೋರಾಟದ ಹೊರತಾಗಿಯೂ, ಅವನು ತನ್ನ ತಂದೆಯನ್ನು ಮೊಸಳೆಯ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ದಕ್ಷಿಣ 24-ಪರಗಣದ ಪಥರ್ ಪ್ರತಿಮಾದ ಸತ್ಯದಾಸ್ಪುರ ಗ್ರಾಮದ ಜಗದ್ದಲ್ ನದಿಯ ದಡದಲ್ಲಿ ಭಾನುವಾರ ಈ ಘಟನೆ ನಡೆದಿದೆ. ತಂದೆ ಮಗ ಇಬ್ಬರೂ ನದಿಗೆ ಮೀನುಗಾರಿಕೆಗೆ ಹೋಗಿದ್ದರು. ಮೀನುಗಾರಿಕೆ ಬಲೆಯನ್ನು ಹಿಂಪಡೆಯಲು ಪ್ರಯತ್ನಿಸುತ್ತಿದ್ದ 45 ವರ್ಷದ ಅಸ್ಮುದ್ದೀನ್ ಶೇಖ್ ಮೇಲೆ ಮೊಸಳೆ ದಾಳಿ ಮಾಡಿದೆ. ಇದನ್ನು ನೋಡಿದ ಮಗ ಮೊಸಳೆಯ ಮೇಲೆ ಹಾರಿ ತನ್ನ ತಂದೆಯ ತೋಳನ್ನು ಮೊಸಳೆಯ ಬಾಯಿಂದ ಬಿಡಿಸಲು ತನ್ನ ಕೈಗಳಿಂದ ಅದರ ದವಡೆಗಳನ್ನು ತೆರೆಯಲು ಪ್ರಯತ್ನಿಸಿದನು. ತನ್ನ ಮಗ ಹೆಣಗಾಡುತ್ತಿರುವುದನ್ನು ನೋಡಿದ ಅಸ್ಮಾವುದ್ದೀನ್, ಹಳ್ಳಿಗೆ ಹೋಗಿ ಕೆಲವು ಜನರನ್ನು ತನ್ನೊಂದಿಗೆ ಕರೆತರುವಂತೆ ಮಗನಿಗೆ ಹೇಳಿದ್ದಾನೆ. ಬಾಲಕ ನದಿಯ ದಡಕ್ಕೆ ಧಾವಿಸಿ ಕೆಲವು ನಿಮಿಷಗಳಲ್ಲಿ ಕೆಲವು ಜನರೊಂದಿಗೆ ಹಿಂದಿರುಗಿದನು. ಆದರೆ ಅಷ್ಟರಲ್ಲಿ ಮೊಸಳೆ ಆತನ ತಂದೆಯನ್ನು ನದಿಗೆ ಎಳೆದುಕೊಂಡು ಹೋಗಿತ್ತು.

ಇದನ್ನೂ ಓದಿ: ಕೆಸರು ಗದ್ದೆಯಲ್ಲಿ ಹೊರಳಾಡಿದ ದಂಪತಿ; ವೈರಲ್ ಆಯ್ತು ಇವರಿಬ್ಬರ ನಾಗಿನಿ ಡ್ಯಾನ್ಸ್‌!

ಆನಂತರ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅರಣ್ಯ ಅಧಿಕಾರಿಗಳ ಸಹಾಯದಿಂದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಅಸ್ಮುದ್ದೀನ್ ಅವರ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನ್ನ ತಂದೆಯನ್ನು ಉಳಿಸಲು ಅಸಾಮಾನ್ಯ ಧೈರ್ಯವನ್ನು ತೋರಿಸಿದ ಹುಡುಗನನ್ನು ಪೊಲೀಸರು ಹೊಗಳಿದ್ದಾರೆ. ಆದರೆ ಎಷ್ಟೇ ಹೋರಾಡಿದರೂ ತನ್ನ ತಂದೆಯ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗದೆ ಆತ ದುಃಖಿಸುತ್ತಿದ್ದಾನೆ.

Continue Reading

Latest

Viral Video: ನಾಗದೇವತೆ ವಿಗ್ರಹದ ಮೇಲೆ ಹೆಡೆ ಬಿಚ್ಚಿ ನಿಂತ ನಾಗರ ಹಾವು!

Viral Video: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಶಂಭು ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಗದೇವತಾ ವಿಗ್ರಹದ ಮೇಲೆ ಭಕ್ತರು ಬೃಹತ್ ನಾಗರ ಹಾವನ್ನು ನೋಡಿದ್ದಾರೆ. ಹಾವು ತನ್ನ ದೊಡ್ಡ ಹೆಡೆಯನ್ನು ತೆರೆದು ನಾಗದೇವತೆಯ ವಿಗ್ರಹದ ಮೇಲೆ ನಿಂತಿದೆ. ಸ್ಥಳೀಯರು ನಾಗ ದೇವತೆಯ ವಿಗ್ರಹದ ಮೇಲೆ ನಿಂತ ಹಾವಿನ ವಿಡಿಯೊವನ್ನು ತೆಗೆದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Viral Video
Koo


ಕಣ್ಣಿಗೆ ಕಾಣುವ ದೇವರೆಂದರೆ ಅದು ನಾಗರ ಹಾವು ಎನ್ನುತ್ತಾರೆ. ಆಗಸ್ಟ್ 9ರಂದು ಎಲ್ಲೆಡೆ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಜನರು ತಾವು ನಂಬಿದ ನಾಗದೇವನಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಆದರೆ ಇದೀಗ ನಾಗರ ಪಂಚಮಿ ಹಬ್ಬ ಸಮೀಪಿಸುತ್ತಿದ್ದಂತೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ನಾಗದೇವರು ಪ್ರತ್ಯೇಕ್ಷರಾಗಿ ಭಕ್ತರಿಗೆ ದರ್ಶನ ನೀಡಿದ್ದಾರೆ. ಇಲ್ಲಿನ ಶಂಭು ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಗದೇವತಾ ವಿಗ್ರಹದ ಮೇಲೆ ನಾಗರ ಹಾವು ಹೆಡೆ ಬಿಚ್ಚಿ ನಿಂತಿದ್ದು, ಇದನ್ನು ಕಂಡು ಭಕ್ತರು ಇದು ಶಿವನ ಮಹಿಮೆ ಎಂದು ಹಾವಿಗೆ ಕೈಮುಗಿದು ಭಕ್ತಿಯ ಸಾಗರದಲ್ಲಿ ಮುಳುಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಶಂಭು ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಗದೇವತಾ ವಿಗ್ರಹದ ಮೇಲೆ ಭಕ್ತರು ಬೃಹತ್ ನಾಗರ ಹಾವನ್ನು ನೋಡಿದ್ದಾರೆ. ಹಾವು ತನ್ನ ದೊಡ್ಡ ಹೆಡೆಯನ್ನು ತೆರೆದು ನಾಗದೇವತೆಯ ವಿಗ್ರಹದ ಮೇಲೆ ನಿಂತಿದೆ. ಸ್ಥಳೀಯರು ನಾಗ ದೇವತೆಯ ವಿಗ್ರಹದ ಮೇಲೆ ನಿಂತ ಹಾವಿನ ವಿಡಿಯೊವನ್ನು ತೆಗೆದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ, ಈ ವಿಷಯವು ಪಟ್ಟಣದಾದ್ಯಂತ ಹರಡಿತು. ಇದು ಹೆಚ್ಚಿನ ಸಂಖ್ಯೆಯ ಭಕ್ತರು ಮತ್ತು ಕುತೂಹಲಕಾರಿ ವೀಕ್ಷಕರನ್ನು ದೇವಾಲಯದತ್ತ ಸೆಳೆದಿದೆ. ಹಾಗಾಗಿ ಭಕ್ತರು ದೇವರ ದರ್ಶನಕ್ಕೆ ಬಂದಿದ್ದಾರೆ. ದೇವಾಲಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಅನೇಕರು ಈ ಘಟನೆಯನ್ನು ಶುಭ ಸಂಕೇತವೆಂದು ಪರಿಗಣಿಸಿದರು, ಮತ್ತು ಇದನ್ನು ದೇವರ ಆಶೀರ್ವಾದವೆಂದು ಸಂತೋಷಗೊಂಡಿದ್ದಾರೆ.

ಮುಂಜಾನೆ ದೇವಾಲಯದ ಅರ್ಚಕರು ದೈನಂದಿನ ಆಚರಣೆಗಳನ್ನು ನಡೆಸುತ್ತಿದ್ದಾಗ, ನಾಗದೇವತೆ ವಿಗ್ರಹದ ಮೇಲೆ ಹಾವು ತನ್ನ ಹೆಡೆಯನ್ನು ಬಿಚ್ಚಿರುವುದನ್ನು ನೋಡಿದ್ದಾರೆ. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ದೇವಾಲಯದಲ್ಲಿ ಭಕ್ತರು ಶಿವನ ಕೊರಳಿನ ಆಭರಣವಾಗಿರುವ ನಾಗದೇವತೆಗಳಿಗೂ ಪ್ರಾರ್ಥನೆ ಸಲ್ಲಿಸುತ್ತಾರೆ. ಹಾಗಾಗಿ ಭಗವಾನ್ ಶಿವನ ಆಲಯದಲ್ಲಿ ಈ ಹಾವು ನಾಗದೇವರ ವಿಗ್ರಹದ ಮೇಲೆ ಕಂಡುಬಂದಿದ್ದು, ಊರಿನ ಉದ್ಧಾರಕ್ಕಾಗಿ ಶಿವನು ಕಳುಹಿಸಿದ ಧೂತ ಎಂದು ಜನರು ನಂಬಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಮಲಗಿದ್ದ ಮಹಿಳೆಯ ತಲೆಕೂದಲಿನಲ್ಲಿ ಹರಿದಾಡಿದ ಹಾವು!

ಇಲ್ಲಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೂ, ನಾಗರಹಾವು ಹೆದರಲಿಲ್ಲ. ಅದು ನಾಗಾ ದೇವತೆ ವಿಗ್ರಹದ ಮೇಲೆ ಹಾಗೆಯೇ ನಿಂತುಕೊಂಡಿದೆ. ಹಾವು ಹೋಗದ ಕಾರಣ, ಸ್ಥಳೀಯರು ಹಾವು ಹಿಡಿಯುವವರಿಗೆ ಮಾಹಿತಿ ನೀಡಿದರು. ಅವನು ಬಂದು ಹಾವನ್ನು ಹಿಡಿಯಲು ಬಹಳ ಸಮಯ ಶ್ರಮಿಸಿದನು. ಆದರೆ ಅವನಿಗೆ ಅದನ್ನು ಹಿಡಿಯಲಾಗದೆ ಬಿಟ್ಟುಹೋದನು. ಈ ಘಟನೆಗೆ ಗ್ರಾಮಸ್ಥರು ಪ್ರತಿಕ್ರಿಯಿಸಿದ್ದಾರೆ. “ನಾವು ಅಂತಹ ಸನ್ನಿವೇಶವನ್ನು ಎಂದಿಗೂ ನೋಡಿಲ್ಲ ಮತ್ತು ಇದು ನಮ್ಮ ಅದೃಷ್ಟ” ಎಂದು ಹೇಳಿದ್ದಾರೆ. ಎಲ್ಲವೂ ಶಿವಯ್ಯನ ಮಹಿಮೆ ಎಂದು ಭಕ್ತರು ಹೇಳುತ್ತಾರೆ.

Continue Reading
Advertisement
Pakistani Army
ದೇಶ11 mins ago

ಪಾಕಿಸ್ತಾನದ ಮತ್ತೊಂದು ಕುತಂತ್ರ ಬಯಲು: ಪಿಒಕೆಯಲ್ಲಿ ಸಮವಸ್ತ್ರದ ಬದಲು ಪಠಾಣಿ ಸೂಟ್ ಧರಿಸಿ ಬೇಹುಗಾರಿಕೆಗೆ ಮುಂದಾದ ಪಾಕ್‌ ಸೇನೆ

shiradi landslide
ಹಾಸನ25 mins ago

Shiradi Landslide: ಶಿರಾಡಿ ಘಾಟಿ ಸಂಚಾರ ಮುಕ್ತ, ನಿಮ್ಮದೇ ರಿಸ್ಕ್‌ನಲ್ಲಿ ಸಂಚರಿಸಿ!

Actor Darshan siddharudha life journey book sent to Darshan
ಸ್ಯಾಂಡಲ್ ವುಡ್27 mins ago

Actor Darshan: ನಟ ದರ್ಶನ್‌ಗೆ ಹುಬ್ಬಳ್ಳಿ ಸಿದ್ಧಾರೂಢ ಮಠದಿಂದ ಪುಸ್ತಕ ರವಾನೆ

Paris Olympics Boxing
ಕ್ರೀಡೆ36 mins ago

Paris Olympics Boxing: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಕ್ಸರ್‌ ನಿಶಾಂತ್‌ ದೇವ್‌; ಟಿಟಿಯಲ್ಲಿ ಶ್ರೀಜಾ ಅಕುಲಾ ಪರಾಭವ

sri reddy me too fame telugu actress post goes viral
ಟಾಲಿವುಡ್47 mins ago

Sri Reddy: ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ; ಅರೆಬೆತ್ತಲೆ ಪ್ರತಿಭಟನೆ ಮೂಲಕ ಸದ್ದು ಮಾಡಿದ ನಟಿ ಶ್ರೀರೆಡ್ಡಿ ಪೋಸ್ಟ್‌ ವೈರಲ್‌!

soldier death mandya
ಮಂಡ್ಯ1 hour ago

Soldier Death: ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ಯೋಧ ಮೃತ್ಯು

Khaled Meshaal
ವಿದೇಶ1 hour ago

Ismail Haniyeh Killing: ಹಮಾಸ್‌ನ ಹೊಸ ಮುಖ್ಯಸ್ಥನಾಗಿ ಖಲೀದ್‌ ಮೆಶಾಕ್‌? ಈತನ ಹಿನ್ನೆಲೆ ಏನು?

Anshuman Gaekwad
ಕ್ರೀಡೆ1 hour ago

Anshuman Gaekwad: ಮಾಜಿ ಕ್ರಿಕೆಟಿಗ ಅಂಶುಮಾನ್‌ ಗಾಯಕ್ವಾಡ್‌ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Actor Jaggesh tears after seeing the current state of Kannada film industry
ಸಿನಿಮಾ1 hour ago

Actor Jaggesh: ಕನ್ನಡ ಚಿತ್ರರಂಗದ ಈಗಿನ ಸ್ಥಿತಿಗತಿ ಕಂಡು ಕಣ್ಣೀರಿಟ್ಟ ನವರಸ ನಾಯಕ ಜಗ್ಗೇಶ್‌!

LPG Price Hike
ವಾಣಿಜ್ಯ2 hours ago

LPG Price Hike: ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌; ಬೆಂಗಳೂರಿನಲ್ಲಿ ಇಷ್ಟಾಗಿದೆ ದರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ4 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ4 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ4 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌