ವೈರಲ್ ನ್ಯೂಸ್
Viral Video : ನಾಯಿ ಕಾಲನ್ನು ಕಚ್ಚಿ ಎಳೆಯುತ್ತಿದ್ದರೂ ಲೆಕ್ಕಿಸದೆ ರೀಲ್ಸ್ ಮಾಡಿದ ವ್ಯಕ್ತಿ!
ನಾಯಿ ಕಾಲನ್ನು ಕಚ್ಚುತ್ತಿದ್ದರೂ ಲೆಕ್ಕಿಸದೆ ನೃತ್ಯ ಮಾಡಿರುವ ವ್ಯಕ್ತಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಇಲ್ಲಿದೆ ನೋಡಿ ಆ ವಿಡಿಯೊ.
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಂನಲ್ಲಿ ವೈರಲ್ (Viral Video) ಆಗಬೇಕು ಎನ್ನುವುದು ಅನೇಕರ ಕನಸಾಗಿಬಿಟ್ಟಿದೆ. ಅದಕ್ಕೆಂದು ನಾನಾ ಸರ್ಕಸ್ಗಳನ್ನೂ ಮಾಡಿಬಿಡುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ರೀಲ್ಸ್ ಮಾಡುತ್ತಿದ್ದಾನೆ. ಕಾಲನ್ನು ನಾಯಿ ಕಚ್ಚಿ ಎಳೆಯುತ್ತಿದ್ದರೂ ಲೆಕ್ಕಿಸದೆ ರೀಲ್ಸ್ ಮಾಡಿರುವ ಈ ವ್ಯಕ್ತಿಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ಸುದ್ದಿಯಲ್ಲಿದೆ.
ರೆನಾಲ್ಡೊ ಸೋರೆಸ್ ಹೆಸರಿನ ವ್ಯಕ್ತಿ ಇನ್ಸ್ಟಾಗ್ರಾಂನಲ್ಲಿ ಇಂಥದ್ದೊಂದು ವಿಡಿಯೊ ಹಂಚಿಕೊಂಡಿದ್ದಾನೆ. ಅದರಲ್ಲಿ ಅವನು ಮ್ಯೂಸಿಕ್ ಒಂದಕ್ಕೆ ಹೆಜ್ಜೆ ಹಾಕಿದ್ದಾನೆ. ಚಪ್ಪಾಳೆ ಹೊಡೆಯುವ ಸ್ಟೆಪ್ ಇರುವ ಆ ನೃತ್ಯ ಮಾಡುವಾಗ ಅಲ್ಲೇ ಇದ್ದ ನಾಯಿಯೊಂದು ಆತನ ಬಲಗಾಲನ್ನು ಹಿಡಿದುಕೊಂಡು ಬಲವಾಗಿ ಕಚ್ಚಿದೆ. ಆತ ನೃತ್ಯ ಮಾಡುತ್ತಾ ಅದೆಷ್ಟೇ ಮುಂದೆ ಹೋದರೂ ಬಿಡದ ನಾಯಿ ಕಾಲನ್ನು ಕಚ್ಚುತ್ತಾ ಆತನ ಜತೆಯಲ್ಲೇ ಬಂದಿದೆ. ಆತನ ರೀಲ್ ಮುಗಿದರೂ ನಾಯಿ ಮಾತ್ರ ಕಚ್ಚುವುದನ್ನು ಬಿಟ್ಟಿಲ್ಲ.
ಇದನ್ನೂ ಓದಿ: Viral Video: ರೀಲ್ಸ್ ಮಾಡಲು ನವಿಲು ಹಿಡಿದು, ಎಲ್ಲ ಗರಿ ಕಿತ್ತು ಕ್ರೌರ್ಯ ಮೆರೆದ ವ್ಯಕ್ತಿ; ಇಲ್ಲಿದೆ ವಿಡಿಯೊ
ಈ ರೀಲ್ನಲ್ಲಿ ಜನರು ರೆನಾಲ್ಡೊ ಅನ್ನು ನೋಡುವುದಕ್ಕಿಂತ ಹೆಚ್ಚಾಗಿ ನಾಯಿಯನ್ನೇ ನೋಡಿದ್ದಾರೆ. ನಾಯಿ ಅಷ್ಟು ಜೋರಾಗಿ ಕಚ್ಚುತ್ತಿದ್ದರೂ ಲೆಕ್ಕಿಸದೆ ನೃತ್ಯ ಮಾಡುತ್ತಿರುವ ನಿಮಗೆ ಏನೆಂದು ಹೇಳಬೇಕು ಎಂದು ಅನೇಕರು ಪ್ರಶ್ನಿಸಲಾರಂಭಿಸಿದ್ದಾರೆ. “ಈ ರೀತಿ ಮಾಡುವುದನ್ನು ಹುಚ್ಚು ಅನ್ನುತ್ತಾರೆ” ಎಂದು ಕೆಲವರು ಬೈದಿದ್ದಾರೆ. “ರೀಲ್ ಮಾಡುವುದನ್ನು ಬಿಟ್ಟು ಮೊದಲು ನಿಮ್ಮ ಕಾಲಿನ ಬಗ್ಗೆ ಗಮನ ಕೊಡಿ” ಎಂದು ಅನೇಕರು ಬುದ್ಧಿ ಮಾತು ಹೇಳಿದ್ದಾರೆ.
ಈ ವಿಡಿಯೊವನ್ನು ಮಾರ್ಚ್ 21ರಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದೆ. 1.7 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊವನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ವಿಡಿಯೊವನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ರೆನಾಲ್ಡೊ ಜತೆ ಆತನಿಗೆ ಕಚ್ಚಿನ ನಾಯಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದೆ.
ದೇಶ
Viral Video: ಟಾರ್ಗೆಟ್ ರೀಚ್ ಆಗದ್ದಕ್ಕೆ ಸಹೋದ್ಯೋಗಿಗೆ ಬೈದ ಎಚ್ಡಿಎಫ್ಸಿ ಅಧಿಕಾರಿ ಸಸ್ಪೆಂಡ್
Viral Video: ಟಾರ್ಗೆಟ್ ರೀಚ್ ಆಗಿಲ್ಲ ಎಂದು ಕೋಲ್ಕೊತಾ ಎಚ್ಡಿಎಫ್ಸಿ ಬ್ಯಾಂಕ್ನ ಹಿರಿಯ ಅಧಿಕಾರಿಯೊಬ್ಬರು ಕಿರಿಯ ಸಹೋದ್ಯೋಗಿಗಳಿಗೆ ಬಾಯಿಗೆ ಬಂದಂತೆ ಬೈದಿದ್ದರು. ಈ ವಿಡಿಯೊ ವೈರಲ್ ಆಗಿ, ಜನರಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಹಿರಿಯ ಅಧಿಕಾರಿಯನ್ನು ಎಚ್ಡಿಎಫ್ಸಿ ಅಮಾನತುಗೊಳಿಸಿದೆ.
ಕೋಲ್ಕೊತಾ: ಯಾವುದೇ ಕಂಪನಿ ಇರಲಿ, ಬಾಸ್ಗಳಿಂದ ಸಹೋದ್ಯೋಗಿಗಳು ಬೈಗುಳ ತಿನ್ನುವುದು ಸಹಜ. ಅದರಲ್ಲೂ, ಬ್ಯಾಂಕ್ಗಳಲ್ಲಿ, ಮೆಡಿಕಲ್ ರೆಪ್ರೆಸೆಂಟೇಟಿವ್ ಸೇರಿ ಟಾರ್ಗೆಟ್ ಇರುವ ಕ್ಷೇತ್ರಗಳಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಯ ಸಹೋದ್ಯೋಗಿಗಳಿಗೆ ಬೈಗುಳ ಫ್ರೀ. ಹೀಗೆ, ಆನ್ಲೈನ್ ಮೀಟಿಂಗ್ನಲ್ಲಿ ಕಿರಿಯ ಸಹೋದ್ಯೋಗಿಗೆ ಬಾಯಿಗೆ ಬಂದಂತೆ ಬೈದ ಹಿರಿಯ ಸಹೋದ್ಯೋಗಿಯನ್ನು ಎಚ್ಡಿಎಫ್ಸಿ (Viral Video) ವಜಾಗೊಳಿಸಿದೆ.
ಹೌದು, ಕಿರಿಯ ಸಹೋದ್ಯೋಗಿಗೆ ಎಲ್ಲರ ಎದುರು ಅವಮಾನವಾಗುವ ರೀತಿ ಬೈದ, ಕೋಲ್ಕೊತಾ ಎಚ್ಡಿಎಫ್ಸಿ ಬ್ಯಾಂಕ್ ಹಿರಿಯ ಅಧಿಕಾರಿ ಸೌಮಿ ಚಕ್ರವರ್ತಿ ಅವರನ್ನು ಎಚ್ಡಿಎಫ್ಸಿ ಬ್ಯಾಂಕ್ ಅಮಾನತುಗೊಳಿಸಿದೆ. ಟಾರ್ಗೆಟ್ ರೀಚ್ ಆಗದ ಹಿನ್ನೆಲೆಯಲ್ಲಿ ಆನ್ಲೈನ್ ಮೀಟಿಂಗ್ನಲ್ಲಿ ಕಿರಿಯ ಸಹೋದ್ಯೋಗಿ ಮೇಲೆ ರೇಗಾಡಿದ, ಕಿರಿಯ ಸಹೋದ್ಯೋಗಿ ಮಾತನಾಡಲು ಕೂಡ ಬಿಡದಂತೆ ಕಿರುಚಾಡಿದ ವಿಡಿಯೊ ವೈರಲ್ ಆಗಿತ್ತು. ವಿಡಿಯೊ ವೈರಲ್ ಆಗುತ್ತಲೇ ಎಚ್ಡಿಎಫ್ಸಿ ಕ್ರಮ ತೆಗೆದುಕೊಂಡಿದೆ.
ಇಲ್ಲಿದೆ ನೋಡಿ ವಿಡಿಯೊ
An HDFC Bank Senior VP is seen shouting at his employees for not meeting targets
— CA Kanan Bahl (@BahlKanan) June 5, 2023
Confirmed from a friend who understands Bengali, he is asking his junior to sell 75 insurance policies in a day🤯
Is this why these bank employees missell us policies and investment products? pic.twitter.com/SGNabDZinR
ಬ್ಯಾಂಕ್ ಸೇವೆಗಳನ್ನು ಮಾಡಿಸದ ಹಾಗೂ ಹೆಚ್ಚಿನ ಜನರಿಂದ ವಿಮೆ ಪಾಲಿಸಿಗಳನ್ನು ಮಾಡಿಸದ ಕಾರಣ ಸೌಮಿ ಚಕ್ರವರ್ತಿಯು ಆನ್ಲೈನ್ ಮೀಟಿಂಗ್ ವೇಳೆ ಸಹೋದ್ಯೋಗಿಗಳಿಗೆ ಬೆಂಗಾಲಿ ಭಾಷೆಯಲ್ಲಿ ಬೈದಿದ್ದರು. “ನೀನು ಕಳೆದ ಎರಡು ದಿನದಲ್ಲಿ ಎಷ್ಟು ಸೇವಿಂಗ್ ಹಾಗೂ ಕರೆಂಟ್ ಅಕೌಂಟ್ ಓಪನ್ ಮಾಡಿಸಿದ್ದೀಯಾ” ಎಂದು ಒಬ್ಬರಿಗೆ ಕೇಳುತ್ತಾರೆ. ಆಗ ಅವರು ಉತ್ತರಿಸುವ ಮೊದಲೇ ಮತ್ತೊಬ್ಬ ಸಹೋದ್ಯೋಗಿಗೆ ಬೈಯುತ್ತಾರೆ. “ನೀನು 15 ಖಾತೆ ಓಪನ್ ಮಾಡಿಸಬೇಕಿತ್ತು. ಕೇವಲ ಐದು ಮಾಡಿಸಿದ್ದೀಯಾ” ಎಂದು ಜೋರಾಗಿ ಕಿರುಚಿದ್ದಾರೆ.
ಇದನ್ನೂ ಓದಿ: Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು
ಸಹೋದ್ಯೋಗಿಗಳಿಗೆ ಬೈದ, ಜೋರಾಗಿ ಕಿರುಚಿದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಯನ್ನು ಅಮಾನತು ಮಾಡಿರುವ ಕುರಿತು ಎಚ್ಡಿಎಫ್ಸಿ ಮಾಹಿತಿ ನೀಡಿದೆ. “ಸಹೋದ್ಯೋಗಿಗಳ ಜತೆ ವಿಚಿತ್ರವಾಗಿ ವರ್ತಿಸಿದ, ಅವರಿಗೆ ಅವಮಾನವಾಗುವ ರೀತಿ ಬೈದ ಹಿರಿಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಹಾಗೆಯೇ, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ” ಎಂದು ಎಚ್ಡಿಎಫ್ಸಿ ಸರ್ವಿಸ್ ಮ್ಯಾನೇಜರ್ ಅಜಯ್ ಮಾಹಿತಿ ನೀಡಿದ್ದಾರೆ.
ದೇಶ
Viral Video: ಒಬ್ಬಳ ಕೈಯಲ್ಲಿ ಚಪ್ಪಲಿ, ಮತ್ತೊಬ್ಬಳ ಕೈಯಲ್ಲಿ ಬಾಟಲ್; ಮೆಟ್ರೋದಲ್ಲಿ ಜಡೆಜಗಳ
Viral Video: ದೆಹಲಿ ಮೆಟ್ರೋದಲ್ಲಿ ಸಹ ಪ್ರಯಾಣಿಕರು ಎಷ್ಟು ಜಗಳ ಬಿಡಿಸಿದರೂ ಇಬ್ಬರು ಮಹಿಳೆಯರು ಪರಸ್ಪರ ಬೈದಾಡಿಕೊಂಡಿದ್ದಾರೆ. ಇದರ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ನವದೆಹಲಿ: ರಾಷ್ಟ್ರ ರಾಜಧಾನಿಯ ಮೆಟ್ರೋ ರೈಲುಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಇತ್ತೀಚೆಗೆ, ಯುವಕತಿ-ಯುವತಿ ಲಿಪ್ ಲಾಕ್ ಮಾಡಿದ, ಯುವಕನೊಬ್ಬ ಎಲ್ಲರೆದುರೇ ಹಸ್ತಮೈಥುನ ಮಾಡಿಕೊಂಡ ವಿಡಿಯೊಗಳು ವೈರಲ್ ಆಗಿವೆ. ಈತ ಇಂತಹದ್ದೇ ಪ್ರಸಂಗ ನಡೆದಿದೆ. ಇಬ್ಬರು ಹೆಣ್ಣುಮಕ್ಕಳು ದೆಹಲಿ ಮೆಟ್ರೋದಲ್ಲಿ ಜಗಳವಾಡಿದ್ದು, ಈ ವಿಡಿಯೊ (Viral Video) ಈಗ ಭಾರಿ ವೈರಲ್ ಆಗಿದೆ.
ಹೌದು, ಚಲಿಸುತ್ತಿರುವ ಮೆಟ್ರೋದಲ್ಲಿಯೇ ಇಬ್ಬರು ಹೆಣ್ಣುಮಕ್ಕಳು ಜಗಳವಾಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಮಧ್ಯೆ ವಾಗ್ವಾದದೊಂದಿಗೆ ಜಗಳ ಆರಂಭವಾಗಿದೆ. ವಾಗ್ವಾದ ಅತಿರೇಕಕ್ಕೆ ಹೋಗಿದೆ. ಆಗ ಒಬ್ಬರು ಚಪ್ಪಲಿ ಕೈಗೆತ್ತಿಕೊಂಡಿದ್ದಾರೆ. ಇನ್ನೊಬ್ಬ ಮಹಿಳೆಯು ನೀರಿನ ಬಾಟಲ್ ಹಿಡಿದು ಎದುರಾಳಿಗೆ ಆವಾಜ್ ಹಾಕಿದ್ದಾರೆ. ಚಲಿಸುವ ರೈಲಿನಲ್ಲಿ ಹೀಗೆ ಇಬ್ಬರ ಮಧ್ಯೆ ಜಗಳವಾಗುತ್ತಿದ್ದರೆ, ಒಂದಷ್ಟು ಮಹಿಳೆಯರು ಜಗಳ ಬಿಡಿಸಲು ಯತ್ನಿಸಿದ್ದಾರೆ. ಮತ್ತೊಂದಿಷ್ಟು ಸ್ತ್ರೀಯರು ಸುಮ್ಮನೆ ಜಗಳ ನೋಡಿ ಮಜಾ ತೆಗೆದುಕೊಂಡಿದ್ದಾರೆ.
ಜಗಳದ ವಿಡಿಯೊ ಇಲ್ಲಿದೆ
After porn, Delhi Metro's has become a battleground 😂 pic.twitter.com/vNwHWsXOAY
— Hasna Zaroori Hai 🇮🇳 (@HasnaZarooriHai) June 5, 2023
“ಮೊದಲು ನೀನೇ ಜಗಳ ಶುರು ಮಾಡಿದ್ದು” ಎಂದು ಒಬ್ಬ ಮಹಿಳೆ ಎಂದರೆ, “ನಿನ್ನಿಂದಲೇ ಇದೆಲ್ಲ ಆಗಿದ್ದು” ಎಂದು ಮತ್ತೊಬ್ಬರು ಆರೋಪ ಮಾಡಿದ್ದಾರೆ. ಇದೇ ವೇಳೆ ಒಬ್ಬರು, ಮೈಕ್ ಮೂಲಕ ರೈಲು ಸಿಬ್ಬಂದಿಗೆ ಮತ್ತೊಬ್ಬ ಮಹಿಳೆ ಬಗ್ಗೆ ದೂರು ನೀಡಿದ್ದಾರೆ. ಇದರಿಂದ ಕುಪಿತಗೊಂಡ ಮಹಿಳೆಯು, ತನ್ನ ಎದುರಾಳಿಯ ತಾಯಿ ಬಗ್ಗೆ ಅವಾಚ್ಯವಾಗಿ ಬೈದಿದ್ದಾರೆ. ಇದಕ್ಕೂ ಮತ್ತೊಬ್ಬ ಮಹಿಳೆ ಬೈಗುಳದ ಮೂಲಕವೇ ತಿರುಗೇಟು ನೀಡಿದ್ದಾರೆ. ಇನ್ನೂ ಸಿಟ್ಟು ಹೆಚ್ಚಾಗಿ, ಮಹಿಳೆಯು ನೀರು ಎರಚುವ ಮೂಲಕ ಸಿಟ್ಟು ತೀರಿಸಿಕೊಂಡಿದ್ದಾರೆ.
ಇದನ್ನೂ ಓದಿ: Viral News : ಮ್ಯಾಕ್ಡೊನಾಲ್ಡ್ಸ್ನಲ್ಲಿ ಕೂತಿದ್ದ ಬಾಲಕನ ಚಡ್ಡಿಯೊಳಗೇ ಹೋಗಿ ಕಚ್ಚಿದ ಇಲಿ! ಇಲ್ಲಿದೆ ವೈರಲ್ ವಿಡಿಯೊ
ಹೀಗೆ, ಪುಟ್ಟ ಮಕ್ಕಳಂತೆ ಮೆಟ್ರೋದಲ್ಲಿ ಇಬ್ಬರು ಮಹಿಳೆಯರು ಜಗಳವಾಡಿದ ವಿಡಿಯೊ ವೈರಲ್ ಆಗುತ್ತಲೇ, ಜನ ತರಹೇವಾರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಹೀಗೆ ಮೆಟ್ರೋದಲ್ಲಿ ಜಗಳವಾಡುವುದು ಸರಿಯಲ್ಲ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು, “ಫುಲ್ ವಿಡಿಯೊ ನೋಡಿದೆ. ಇಬ್ಬರು ಹೆಣ್ಣುಮಕ್ಕಳು ಜಗಳ ಆಡುವುದು ನೋಡಿ ಮಜಾ ಬಂತು” ಎಂದು ಮತ್ತೊಬ್ಬರು ಹೇಳಿದ್ದಾರೆ. “ಜಗಳ ಮನರಂಜನೆಯಿಂದ ಕೂಡಿದೆ” ಎಂದೂ ಕೂಡ ಯುವತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ, ದೆಹಲಿ ಮೆಟ್ರೋದಲ್ಲಿ ಕಿಸ್ಸಿಂಗ್, ಫೈಟಿಂಗ್ನಂತಹ ಘಟನೆಗಳು ಜಾಸ್ತಿಯಾಗುತ್ತಿದ್ದು, ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕ
Video Viral: ವಿರೋಧಿಗಳ ಒಂದು ಪತ್ರಕ್ಕೂ ಸಹಿ ಹಾಕಲ್ಲ ಎಂದ ಚಲುವರಾಯಸ್ವಾಮಿ; ಸಚಿವರ ಎಡವಟ್ಟು, ಸರ್ಕಾರಕ್ಕೆ ಇಕ್ಕಟ್ಟು!
N Chaluvarayaswamy: ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿರುವ ಎನ್. ಚಲುವರಾಯಸ್ವಾಮಿ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ನಡೆದ ಮತದಾರರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಮತದಾರರ ವಿರೋಧಿಗಳ ಯಾವ ಪತ್ರಕ್ಕೂ ಸಹಿ ಹಾಕುವುದಿಲ್ಲ ಹೇಳಿದ್ದಾರೆ.
ಮಂಡ್ಯ: ಕೃಷಿ ಸಚಿವ, ನಾಗಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಚಲುವರಾಯಸ್ವಾಮಿ ಅವರು ವಿವಾದಗಳ ಮೇಲೆ ವಿವಾದದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ನ ಗ್ಯಾರಂಟಿ (Congress Guarantee) ಯೋಜನೆಗಳನ್ನು ಚೀಪ್ ಗಿಮಿಕ್ ಎಂದು ನೀಡಿದ್ದ ಹೇಳಿಕೆ ವೈರಲ್ ಆಗಿರುವ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿರೋಧಿಗಳ ಒಂದು ಪತ್ರಕ್ಕೂ ನಾನು ಪೆನ್ನು ಹಿಡಿದು ಸಹಿ ಹಾಕಲ್ಲ ಎಂದು ಹೇಳಿಕೆ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೊ ಸಹ ಈಗ ವೈರಲ್ (Video Viral) ಆಗಿದೆ.
ನಾಗಮಂಗಲ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಎನ್. ಚಲುವರಾಯಸ್ವಾಮಿ, ನನ್ನ ಬಳಿ ಕಾಮಗಾರಿಗಳ ಪಟ್ಟಿ ಹಿಡಿದು ಬರುವವರನ್ನು ನಗುತ್ತಾ ಮಾತನಾಡಿಸಿ ಕಳಿಸುತ್ತೇನೆ. ನಿಮ್ಮ ನಿಮ್ಮ ಊರಿನಲ್ಲಿ ಮುಂದಿನ ಯೋಜನೆಗಳ ಕುರಿತು ಯಾವುದು ಉತ್ತಮ ಎಂದು ನೀವೇ ನಿರ್ಧಾರ ಮಾಡಿ ಹೇಳಿ. ನಿಮ್ಮ ಗ್ರಾಮ ಪಂಚಾಯಿತಿಗೆ ಏನು ಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಿ. ನಾನು ಯಾವುದಕ್ಕೂ ತಲೆ ಹಾಕುವುದಿಲ್ಲ. ನಿಮ್ಮ ಅಭಿಪ್ರಾಯದ ಹೊರತು ಪೆನ್ನು ಹಿಡಿದು ಒಂದು ಪತ್ರಕ್ಕೂ ಸಹಿ ಹಾಕಲ್ಲ. ಈ ಬಗ್ಗೆ ನಿಮಗೆ ಆತಂಕವೂ ಬೇಡ, ಬೇಸರವೂ ಬೇಡ ಎಂದು ಹೇಳಿದ್ದಾರೆ. ಈ ಮೂಲಕ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
ವೈರಲ್ ಆಗಿದ್ದ ಚೀಪ್ ಗಿಮಿಕ್ ವಿಡಿಯೊ!
ಈ ಬಾರಿಯ ಚುನಾವಣೆಯಲ್ಲಿ ಘೋಷಣೆ ಮಾಡಲಾಗಿರುವ ಗ್ಯಾರಂಟಿ (Congress Guarantee) ಯೋಜನೆಗಳು ಚುನಾವಣೆ ಗಿಮಿಕ್ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಅವರು ಹೇಳಿರುವ ವಿಡಿಯೊವೊಂದು ವೈರಲ್ (Video Viral) ಆಗಿದೆ. ಚುನಾವಣೆ ವೇಳೆ ಅಧಿಕಾರವನ್ನು ಹಿಡಿಯುವುದೇ ಬಹುಮುಖ್ಯ ಆಗಿದ್ದರಿಂದ ನಮಗೆ ಇಷ್ಟ ಇದೆಯೋ ಇಲ್ಲವೋ, ಸಿದ್ದರಾಮಯ್ಯ (CM Siddaramaiah) ಅವರಿಗೆ ಇಷ್ಟ ಆಗುತ್ತದೆಯೋ ಇಲ್ಲವೋ? ಇಂಥ ಚೀಪ್ ಗಿಮಿಕ್ಗಳನ್ನು ಮಾಡಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಹೇಳಿಕೆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲೀಗ ಹರಿದಾಡುತ್ತಿದೆ.
ವಿಡಿಯೊದಲ್ಲಿ ಏನಿದೆ?
“ಈ ಹಿಂದೆಯೂ ಸಹ ಹಲವಾರು ಉಚಿತ ಯೋಜನೆಗಳನ್ನು ನಾವೇ ವಿರೋಧ ಮಾಡಿಕೊಂಡು ಬಂದಿದ್ದೇವೆ. ಇದು ದೇಶದಲ್ಲಿಯೇ ಚರ್ಚೆ ಆಗಿರುವ ವಿಚಾರವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಮುಂದೆ ಫ್ರೀ.. ಫ್ರೀ.. ಎಂದು ಹೋದರೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ನಾವೂ ಚರ್ಚೆ ಮಾಡಿದ್ದೇವೆ. ಈಗ ನಾವುಗಳೂ ಅದೇ ಲೈನ್ನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್ ಎಲ್ಲವೂ ಮುಖ್ಯವಾಗುತ್ತದೆ. ಸರ್ಕಾರ ಬಂದರೆ ತಾನೇ ನಾವೂ ಏನಾದರೂ ಮಾಡುವುದಕ್ಕೆ ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ಕೆಲಸ ಮಾಡುವುದಕ್ಕೆ ಆಗುವುದು ಎನ್ನುವ ದೃಷ್ಟಿ ಬಂದಾಗ ಅಂದು ಫಲಿತಾಂಶವೇ ಅನಿವಾರ್ಯ ಆಗುತ್ತದೆ. ಹಾಗಾಗಿ ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ (ಗ್ಯಾರಂಟಿ) ಚೀಪ್ ಪಾಪ್ಯುಲಾರಿಟಿ, ಇಲ್ಲದ್ದು ಪಲ್ಲದ್ದು ಎಲ್ಲವನ್ನೂ ಮಾಡುತ್ತೇವೆ. ಆದರೆ, ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ” ಎಂದು ಹೇಳಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ?
ಇಲ್ಲಿ ಚಲುವರಾಯಸ್ವಾಮಿ ಅವರು ನೀಡಿರುವ ಹೇಳಿಕೆಯಲ್ಲಿ, “ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ ” ಎಂದು ಹೇಳಿರುವುದು ಸಹ ಈಗ ಚರ್ಚೆಯ ಭಾಗವಾಗಿದೆ. ಅಂದರೆ, ಈ ರೀತಿಯ ಉಚಿತ ಗ್ಯಾರಂಟಿ ಘೋಷಣೆಯು ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ? ಚುನಾವಣೆ ಗೆಲ್ಲುವುದಕ್ಕೋಸ್ಕರ ಅನಿವಾರ್ಯವಾಗಿ ಘೋಷಣೆ ಮಾಡಿದರೇ? ಅಥವಾ ಹೈಕಮಾಂಡ್ ನಿರ್ಧಾರಕ್ಕೆ ಅವರು ತಲೆ ಬಾಗಬೇಕಾಯಿತೇ? ಎಂಬ ಬಗ್ಗೆಯೂ ಈಗ ಚರ್ಚೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: Text Book: ಹೊಸ ಪಠ್ಯಕ್ರಮ ರಚನೆಗೆ ಸಮಿತಿ; ಬಿಜೆಪಿ ಅವಧಿಯ ಅಧ್ಯಾಯಗಳಿಗೆ ಕೊಕ್?
ಚುನಾವಣಾ ಪೂರ್ವ ಹೇಳಿಕೆ?
ಇದು ಚುನಾವಣೆ ನಡೆಯುವುದಕ್ಕಿಂತ ಮೊದಲು ಮಾಡಿದ ವಿಡಿಯೊ ಇರಬಹುದು ಎಂದೂ ಹೇಳಲಾಗುತ್ತಿದ್ದು, ಈ ಬಗ್ಗೆ ಈಗಿನ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ದೇಶ
Viral News: ಪಲ್ಟಿಯಾದ ಬಿಯರ್ ತುಂಬಿದ ಲಾರಿ, ಸಿಕ್ಕಿದ್ದೇ ಚಾನ್ಸು ಅಂತ ಬಾಟಲಿ ಎತ್ತಿಕೊಂಡು ಕುಡುಕರು ಪರಾರಿ
Viral News: ಸುಮಾರು 200 ಕೇಸ್ ಬಿಯರ್ ಬಾಟಲಿಗಳು ರಸ್ತೆಯ ತುಂಬ ಬಿದ್ದಿದ್ದು, ಜನ ಮುಗಿಬಿದ್ದು ಬಾಟಲಿಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಇದರಿಂದ ಟ್ರಕ್ ಮಾಲೀಕನು ತೊಂದರೆ ಅನುಭವಿಸುವಂತಾಗಿದೆ.
ಹೈದರಾಬಾದ್: ‘ಹಣ ಕಂಡರೆ ಹೆಣ ಕೂಡ ಬಾಯಿಬಿಡುತ್ತದೆ’ ಎಂಬ ಮಾತನ್ನು ಆಧುನಿಕ ಕಾಲದಲ್ಲಿ ‘ಎಣ್ಣೆ (ಮದ್ಯ) ಕಂಡರೆ ಹೆಣ ಕೂಡ ಬಾಯಿಬಿಡುತ್ತದೆ’ ಎಂಬುದಾಗಿ ಬದಲಿಸಿಕೊಳ್ಳಬಹುದು. ಅಷ್ಟರಮಟ್ಟಿಗೆ ದೇಶದಲ್ಲಿ ಮದ್ಯಪ್ರಿಯರ ಸಂಖ್ಯೆ ಜಾಸ್ತಿಯಾಗಿದೆ. ಹೀಗೆ ಮದ್ಯಪ್ರಿಯರು ಜಾಸ್ತಿಯಾದ ಕಾಲಘಟ್ಟದಲ್ಲಿಯೇ ಆಂಧ್ರಪ್ರದೇಶದಲ್ಲಿ ಬಿಯರ್ ಬಾಟಲಿ ತುಂಬಿದ ಟ್ರಕ್ವೊಂದು ಪಲ್ಟಿಯಾಗಿದ್ದು, ಜನ ಮುಗಿಬಿದ್ದು ಕೈಗೆ ಸಿಕ್ಕಷ್ಟು ಬಿಯರ್ ಬಾಟಲಿ (Viral News) ಎತ್ತಿಕೊಂಡು ಪರಾರಿಯಾಗಿದ್ದಾರೆ.
ಹೌದು, ಸುಮಾರು 200 ಕೇಸ್ಗಳಿರುವ ಟ್ರಕ್ ಆಂಧ್ರಪ್ರದೇಶದ ಕಾಸಿಂಕೋಟಾ ಮಂಡಲ್ ಜಿಲ್ಲೆಯ ಬಯಾವರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಪಲ್ಟಿಯಾಗಿದೆ. ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಟ್ರಕ್ ಮಗುಚಿ ಬೀಳುತ್ತಲೇ ಬಿಯರ್ ಬಾಟಲಿಗಳು ರಸ್ತೆ ತುಂಬ ಬಿದ್ದಿವೆ. ಈ ಸುದ್ದಿ ತಿಳಿದ ಸುತ್ತಮುತ್ತಲಿನ ಜನ ಓಡಿಬಂದಿದ್ದಾರೆ. ಮುಗಿಬಿದ್ದು ಬಿಯರ್ ಬಾಟಲಿಗಳನ್ನು ಎತ್ತಿಕೊಂಡು ಓಡಿದ್ದಾರೆ.
ಟ್ರಕ್ ಮಗುಚಿ ಬೀಳುತ್ತಲೇ ಒಂದಷ್ಟು ಬಾಟಲಿಗಳು ಒಡೆದಿವೆ. ಆದರೂ, ಹೆಚ್ಚಿನ ಪ್ರಮಾಣದ ಬಾಟಲಿಗಳು ಇದ್ದ ಕಾರಣ ಬಾಟಲ್ಗಳು ಒಡೆದಿಲ್ಲ. ಹಾಗಾಗಿ, ನೂರಾರು ಮದ್ಯಪ್ರಿಯರು ಓಡೋಡಿ ಬಂದು ಕೈಗೆ ಸಿಕ್ಕಷ್ಟು ಬಿಯರ್ ಬಾಟಲಿಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಇದಕ್ಕಾಗಿ ನೂಕುನುಗ್ಗಲು ಕೂಡ ಉಂಟಾಗಿದೆ ಎಂದು ತಿಳಿದುಬಂದಿದೆ. ಆದರೆ, ಲಕ್ಷಾಂತರ ರೂಪಾಯಿ ಮೌಲ್ಯದ ಬಿಯರ್ ರಸ್ತೆಪಾಲು ಆಗಿರುವುದಕ್ಕೆ, ಜನ ತೆಗೆದುಕೊಂಡು ಓಡಿಹೋಗಿರುವುದಕ್ಕೆ ಮಾಲೀಕ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Actor Sharwanand: ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಖ್ಯಾತ ನಟ; ಮದುವೆಯ ಆನಂದದ ಫೋಟೊಗಳು ವೈರಲ್!
ಬಿಯರ್ ತುಂಬಿದ ಟ್ರಕ್ ಪಲ್ಟಿಯಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಮದ್ಯ ಸೇವಿಸುವವರು, ಸೇವಿಸದವರು ಕೂಡ ಟ್ರಕ್ ಬಿದ್ದ ಜಾಗಕ್ಕೆ ಓಡೋಡಿ ಬಂದಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾದ ಟ್ರಕ್ ಚಾಲಕ ಎಷ್ಟು ಬೇಡಿಕೊಂಡರೂ ಕೇಳದೆ ಜನ ಬಿಯರ್ ಬಾಟಲಿ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಬಿಯರ್ ಬಾಟಲಿ ಖಾಲಿಯಾದ ಬಳಿಕ ಬಂದವರಿಗೆ ನಿರಾಸೆಯಾಗಿದೆ ಎಂದು ತಿಳಿದುಬಂದಿದೆ. ಫ್ರೀ ಆಗಿ ಬಿಯರ್ ಬಾಟಲಿ ಸಿಕ್ಕವರು ಮಾತ್ರ ಮಜಾ ಮಾಡುತ್ತಿದ್ದಾರೆ.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ12 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಅಂಕಣ23 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ22 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ22 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?