ವೈರಲ್ ನ್ಯೂಸ್
ರೈಡ್ ಕ್ಯಾನ್ಸಲ್ ಮಾಡಲು ಉಬರ್ ಚಾಲಕ ಕೊಟ್ಟ ಕಾರಣವನ್ನು ಮೆಚ್ಚಿಕೊಂಡ ಯುವತಿ; ನೆಟ್ಟಿಗರಿಂದಲೂ ಹೊಗಳಿಕೆ
ಕ್ಯಾಬ್ ಡ್ರೈವರ್ಗಳಿಗೂ ಈ ಕ್ಯಾನ್ಸಲ್ ಎಂಬ ಆಯ್ಕೆ ಇರುತ್ತದೆ. ಅವರೂ ಕೂಡ ಒಮ್ಮೊಮ್ಮೆ ನಮ್ಮ ರೈಡ್ ರಿಕ್ವೆಸ್ಟ್ನ್ನು ಒಪ್ಪಿಕೊಂಡು ಸ್ವಲ್ಪ ಸಮಯದ ಬಳಿಕ ಅದನ್ನು ರದ್ದುಗೊಳಿಸುವುದನ್ನು ನೋಡಿದ್ದೇವೆ.
ಉಬರ್, ಓಲಾ ಕ್ಯಾಬ್ಗಳನ್ನು ಬುಕ್ ಮಾಡಿಯಾದ ಮೇಲೆ ಕೆಲವೊಮ್ಮೆ ನಾವು ಅದನ್ನು ಕ್ಯಾನ್ಸಲ್ ಮಾಡುತ್ತೇವೆ. ಈ ಕ್ಯಾಬ್ಗಳನ್ನು ಬುಕ್ ಮಾಡಿಯಾದ ಮೇಲೆ ನಾವು ಆ್ಯಪ್ ನೋಡಿ ಡ್ರೈವರ್ ನಮ್ಮ ಲೊಕೇಶನ್ ತಲುಪುವ ಸಮಯ ಸೇರಿ, ಚಾಲಕ ಬರುತ್ತಿರುವ ಮಾರ್ಗವನ್ನೆಲ್ಲ ತಿಳಿದುಕೊಳ್ಳಬಹುದು. ಹೀಗೆ ಕೆಲವೊಮ್ಮ ವಾಹನ ಬುಕ್ ಮಾಡಿಯಾದ ಮೇಲೆ, ಚಾಲಕನ ಸಮಯ ನಮಗೆ ಸರಿ ಹೊಂದದೆ ಇದ್ದರೆ, ಆತ ಬರಲು ವಿಳಂಬ ಮಾಡಿದರೆ ಅಥವಾ ಲೊಕೇಶನ್ ತಲುಪಿದ ಮೇಲೆ ನಾವು ಹತ್ತಬೇಕಾದ ಕ್ಯಾಬ್ ಸ್ವಚ್ಛವಾಗಿಲ್ಲದೆ ಇದ್ದರೆ, ನಾವು ಬುಕ್ಕಿಂಗ್ನ್ನು ಕ್ಯಾನ್ಸಲ್ ಮಾಡುತ್ತೇವೆ ಮತ್ತು ನಾವೇಕೆ ಕ್ಯಾಬ್ ಕ್ಯಾನ್ಸಲ್ ಮಾಡುತ್ತಿದ್ದೇವೆ ಎಂಬುದಕ್ಕೆ ಕಾರಣವನ್ನೂ ಕೊಡುತ್ತೇವೆ.
ಇನ್ನೊಂದು ಕಡೆ ಕ್ಯಾಬ್ ಡ್ರೈವರ್ಗಳಿಗೂ ಈ ಕ್ಯಾನ್ಸಲ್ ಎಂಬ ಆಯ್ಕೆ ಇರುತ್ತದೆ. ಅವರೂ ಕೂಡ ಒಮ್ಮೊಮ್ಮೆ ನಮ್ಮ ರೈಡ್ ರಿಕ್ವೆಸ್ಟ್ನ್ನು ಒಪ್ಪಿಕೊಂಡು ಸ್ವಲ್ಪ ಸಮಯದ ಬಳಿಕ ಅದನ್ನು ರದ್ದುಗೊಳಿಸುವುದನ್ನು ನೋಡಿದ್ದೇವೆ. ಕೆಲವು ಡ್ರೈವರ್ಗಳು ತಮ್ಮ ಕಸ್ಟಮರ್ಗೆ ಕರೆ ಮಾಡಿಕೊಂಡು, ಹೋಗಬೇಕಾದ ಸ್ಥಳ ಯಾವುದೆಂದು ಕೇಳಿ ಬಳಿಕ ಕ್ಯಾನ್ಸಲ್ ಮಾಡುತ್ತಾರೆ. ಅವರೇಕೆ ನಮ್ಮ ರೈಡ್ ಮನವಿ ತಿರಸ್ಕರಿಸಿದರು ಎಂಬುದೇ ನಮಗೆ ಅರ್ಥವಾಗುವುದಿಲ್ಲ.
ಹೀಗಿರುವಾಗ ಬೆಂಗಳೂರಿನ ಉಬರ್ ಡ್ರೈವರ್ ಒಬ್ಬ ಅತ್ಯಂತ ಪ್ರಾಮಾಣಿಕವಾಗಿ ಕಾರಣ ಕೊಟ್ಟು ಯುವತಿಯೊಬ್ಬಳ ರೈಡ್ ರಿಕ್ವೆಸ್ಟ್ನ್ನು ರದ್ದುಗೊಳಿಸಿದ್ದಾನೆ. ಆ ಯುವತಿಯ ಹೆಸರು ಅಶ್ಮಿತಾ ಎಂದಾಗಿದ್ದು, ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ ಮತ್ತು ಚಾಲಕನ ಪ್ರಾಮಾಣಿಕತೆ ಮೆಚ್ಚುವಂಥದ್ದು ಎಂದಿದ್ದಾರೆ. ನಾನು ಊಬರ್ನಲ್ಲಿ ಕ್ಯಾಬ್ ಬುಕ್ ಮಾಡಿದಾಗ ಭರತ್ ಎಂಬ ಚಾಲಕ ಅದನ್ನು ಸ್ವೀಕರಿಸಿದ. ಆದರೆ ಕೆಲವೇ ಹೊತ್ತಲ್ಲಿ ಆ್ಯಪ್ ಮೂಲಕ ನನಗೆ ಸಂದೇಶ ಕಳಿಸಿ, ‘ನಾನು ಈ ರೈಡ್ ಕ್ಯಾನ್ಸಲ್ ಮಾಡುತ್ತಿದ್ದೇನೆ. ಯಾಕೆಂದರೆ ನನಗೆ ತುಂಬ ನಿದ್ದೆ ಬರುತ್ತಿದೆ’ ಎಂದು ಹೇಳಿದ. ಆತ ಪ್ರಾಮಾಣಿಕವಾದ ಕಾರಣವನ್ನೇ ಕೊಟ್ಟು ಕ್ಯಾನ್ಸಲ್ ಮಾಡಿಕೊಂಡ ಎಂದಿದ್ದಾರೆ. ಹಾಗೇ, ಆತನ ಸಂದೇಶದ ಸ್ಕ್ರೀನ್ಶಾಟ್ಗಳನ್ನೂ ಕಳಿಸಿದ್ದಾರೆ.
ಇದನ್ನೂ ಓದಿ: ವೈರಲ್ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!
ಇದನ್ನು ನೋಡಿದ ನೆಟ್ಟಿಗರು ಆ ಡ್ರೈವರ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಹಾಗೇ, ತಮಗೆ ಆದ ಕೆಲವು ಕೆಟ್ಟ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ‘ನನಗೊಂದು ಕೆಟ್ಟ ಅನುಭವ ಆಗಿತ್ತು. ತಡರಾತ್ರಿ 3ಗಂಟೆ ಹೊತ್ತಿಗೆ ನಾನು ಕ್ಯಾಬ್ನಲ್ಲಿ ಹೋಗುತ್ತಿದ್ದೆ. ಆ ಡ್ರೈವರ್ ಮಾರ್ಗ ಮಧ್ಯೆ ಗಾಡಿ ನಿಲ್ಲಿಸಿ, ನನಗೆ ನಿದ್ದೆ ಬರುತ್ತಿದೆ, ಮುಂದೆ ಹೋಗಲು ಸಾಧ್ಯವೇ ಆಗುತ್ತಿಲ್ಲ ಎಂದು ಗಾಡಿ ನಿಲ್ಲಿಸಿಯೇ ಬಿಟ್ಟಿದ್ದ. ಆದರೆ ಈ ಡ್ರೈವರ್ ಪ್ರಾಮಾಣಿಕ’ ಎಂದು ಒಬ್ಬರು ಕಮೆಂಟ್ ಬರೆದಿದ್ದಾರೆ. ಹಾಗೇ ಇನ್ನೊಬ್ಬರು ಕಮೆಂಟ್ ಮಾಡಿ, ‘ನಾನೊಂದು ದಿನ ಕ್ಯಾಬ್ ಬುಕ್ ಮಾಡಿದೆ. ಕ್ಯಾಬ್ ಬುಕ್ ಆಗಿ ಐದು ನಿಮಿಷವಾದರೂ ಆ ಚಾಲಕ ತನ್ನ ಜಾಗದಿಂದ ಕದಲಲಿಲ್ಲ. ನಾನು ಆತನಿಗೆ ಕರೆ ಮಾಡಿ ಪ್ರಶ್ನಿಸಿದರೆ, ನಾನು ನಿಮ್ಮ ಕರೆಗಾಗಿಯೇ ಕಾಯುತ್ತಿದ್ದೆ ಎಂದು ಹೇಳಿದ, ತೀರ ಬಾಲಿಶ ಅನ್ನಿಸಿಬಿಟ್ಟಿತು’ ಎಂದು ಹೇಳಿದ್ದಾರೆ.
ತಂತ್ರಜ್ಞಾನ
Viral News : ಚಾಟ್ಜಿಪಿಟಿ ಬಗ್ಗೆ ಪಾಠ ಮಾಡಿ ಮೂರೇ ತಿಂಗಳಲ್ಲಿ 28 ಲಕ್ಷ ರೂ. ದುಡಿದ!
ಜಾಟ್ಜಿಪಿಟಿ ಬಗ್ಗೆ ಅರ್ಥ ಮಾಡಿಸುವುದಕ್ಕೆ, ಅದನ್ನು ಕಲಿಸುವುದಕ್ಕೆಂದೇ ಯವಕನೊಬ್ಬ ಕೋರ್ಸ್ ನಡೆಸುತ್ತಿದ್ದಾನೆ. ಅದರಿಂದ ಆತನಿಗೆ ಮೂರೇ ತಿಂಗಳಲ್ಲಿ 28 ಲಕ್ಷ ರೂ. ಲಾಭ ಬಂದಿರುವುದಾಗಿಯೂ (Viral News) ವರದಿಯಾಗಿದೆ.
ಬೆಂಗಳೂರು: ಚಾಟ್ಜಿಪಿಟಿ (ChatGPT) ಬಗ್ಗೆ ಇತ್ತೀಚಿನ ದಿನಗಳಲ್ಲಿ ನೀವು ಕೇಳಿರುತ್ತೀರಿ. ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ(ಎಐ) ಬಗ್ಗೆ ಎಲ್ಲೆಲ್ಲೂ ಸುದ್ದಿಯಾಗುತ್ತಿದೆ. ತಾಂತ್ರಿಕ ಕ್ಷೇತ್ರದಲ್ಲಿ ಸಮಸ್ಯೆ ಉಂಟು ಮಾಡಬಹುದು ಎನ್ನಲಾಗಿದ್ದ ಈ ಎಐ ಇದೀಗ ಯುವಕನೊಬ್ಬನಿಗೆ ಬದುಕನ್ನೂ ಕಟ್ಟಿಕೊಟ್ಟಿದೆ. ಈ ಎಐ ಅನ್ನೇ ನಂಬಿಕೊಂಡು ಯುವಕನೊಬ್ಬ ಕೇವಲ ಮೂರು ತಿಂಗಳುಗಳಲ್ಲಿ ಬರೋಬ್ಬರಿ 28 ಲಕ್ಷ ರೂ. ಲಾಭ (Viral News) ಗಳಿಸಿಕೊಂಡಿದ್ದಾನೆ.
ಇದನ್ನೂ ಓದಿ: Viral News: ಮಥುರಾ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತ ಕುಳಿತಿದ್ದವನ ಕೊಲೆ
ಲ್ಯಾನ್ಸ್ ಜಂಕ್(23) ಹೆಸರಿನ ವ್ಯಕ್ತಿ ಚಾಟ್ಜಿಪಿಟಿಯನ್ನೇ ತನ್ನ ಆದಾಯ ಮೂಲವಾಗಿಸಿಕೊಂಡಿದ್ದಾರೆ. ಚಾಟ್ಜಿಪಿಟಿಯನ್ನು ಹಲವರು ಸರಾಗವಾಗಿ ಬಳಕೆ ಮಾಡುತ್ತಿದ್ದರೆ, ಇನ್ನೂ ಹಲವರು ಬಳಸಲಾಗದೆ ಒದ್ದಾಡುತ್ತಿದ್ದದ್ದನ್ನು ಲ್ಯಾನ್ಸ್ ಗಮನಿಸಿದ್ದಾರೆ. ಅದಕ್ಕಾಗಿ ಜನರಿಗೆ ಚಾಟ್ಜಿಪಿಟಿ ಬಗ್ಗೆ ತಿಳಿಸುವುದಕ್ಕೆಂದೇ ಉಡೆಮಿ ಆಪ್ನಲ್ಲಿ ಕೋರ್ಸ್ ಒಂದನ್ನು ಆರಂಭಿಸಿದ್ದಾರೆ. “ಚಾಟ್ಜಿಪಿಟಿ ಮಾಸ್ಟರ್ಕ್ಲಾಸ್: ಎ ಕಂಪ್ಲೀಟ್ ಚಾಟ್ಜಿಪಿಟಿ ಗೈಡ್ ಫಾರ್ ಬಿಗಿನರ್ಸ್” ಹೆಸರಿನಲ್ಲಿ ಕೋರ್ಸ್ ಆರಂಭಿಸಿದ್ದು, ಕೋರ್ಸ್ ಆರಂಭವಾದ ಕೆಲವೇ ದಿನಗಳಲ್ಲಿ ಬರೋಬ್ಬರಿ 15,000 ಮಂದಿ ಕೋರ್ಸ್ ಸೇರಿಕೊಂಡಿದ್ದಾರೆ. ಅದರಿಂದಾಗಿ ಒಟ್ಟಾರೆಯಾಗಿ 35,000 ಡಾಲರ್ ಅಂದರೆ 28 ಲಕ್ಷ ರೂ. ಲಾಭವನ್ನೂ ಗಳಿಸಿದ್ದಾರೆ.
“ಜನರು ಚಾಟ್ಜಿಪಿಟಿ ಬಗ್ಗೆ ಭಯ ಪಟ್ಟಿರುವುದು ನನಗೆ ಗೊತ್ತಾಯಿತು. ಆ ಭಯವನ್ನು ಹೋಗಲಾಡಿಸುವ ಪ್ರಯತ್ನವನ್ನು ನಾನು ಮಾಡಿದೆ. ನಾನೇನು ಚಾಟ್ಜಿಪಿಟಿ ಬಗ್ಗೆ ಬೇರೆ ಕಡೆ ತರಬೇತಿ ಪಡೆದಿಲ್ಲ. ನಾನಾಗೇ ನಾನು ಪ್ರಯತ್ನಗಳನ್ನು ಮಾಡಿ ಅನುಭವ ಪಡೆದೆ” ಎಂದು ಹೇಳಿದ್ದಾರೆ ಲ್ಯಾನ್ಸ್.
ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಜಂಕ್ ಒಟ್ಟಾರೆಯಾಗಿ ಏಳು ಗಂಟೆಗಳ ಕೋರ್ಸ್ ಅನ್ನು ಕೊಡುತ್ತಿದ್ದಾರೆ. ಅದಕ್ಕೆಂದೇ ಒಟ್ಟು 50 ತಜ್ಞರಿಂದ ವಿಡಿಯೊಗಳನ್ನು ಮಾಡಿಸಿಕೊಂಡಿದ್ದಾರೆ. ಆ ವಿಡಿಯೊಗಳನ್ನು ಮಾಡುವುದಕ್ಕೆಂದೇ ಜಂಕ್ ಅವರಿಗೆ ಮೂರು ವಾರಗಳು ತಗುಲಿವೆ. ಒಬ್ಬ ವಿದ್ಯಾರ್ಥಿಗೆ 20 ಡಾಲರ್ನಂತೆ ಶುಲ್ಕ ವಿಧಿಸಲಾಗುತ್ತಿದೆ. ಅಮೆರಿಕ, ಭಾರತ, ಜಪಾನ್, ಕೆನಡಾ ಸೇರಿ ಹಲವಾರು ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಈ ಕೋರ್ಸ್ ಸೇರಿಕೊಂಡಿರುವುದಾಗಿ ಹೇಳಲಾಗಿದೆ.
ಪ್ರಮುಖ ಸುದ್ದಿ
Chai Chatbot: ಬೆಲ್ಜಿಯಂನಲ್ಲಿ ವ್ಯಕ್ತಿ ಆತ್ಮಹತ್ಯೆ; ಚಾಟ್ಜಿಪಿಟಿ ಮಾದರಿಯ ಚಾಟ್ಬಾಟ್ಗೆ ಅಡಿಕ್ಟ್ ಆಗಿದ್ದೇ ಕಾರಣ?
Chai Chatbot: ತಂತ್ರಜ್ಞಾನದ ಬಳಕೆ ಇತಿಮಿತಿಯಲ್ಲಿದ್ದಷ್ಟು, ಎಷ್ಟು ಬೇಕೋ ಅಷ್ಟೇ ಬಳಕೆ ಮಾಡಿದಷ್ಟು ಉತ್ತಮ ಎಂಬ ಮಾತಿಗೆ ಪುಷ್ಟಿ ಬಂದಿದೆ. ಇದಕ್ಕೆ ನಿದರ್ಶನ ಎಂಬಂತೆ, ಬೆಲ್ಜಿಯಂನಲ್ಲಿ ವ್ಯಕ್ತಿಯೊಬ್ಬರು ಅತಿಯಾಗಿ ಚಾಟ್ಜಿಪಿಟಿ ಮಾದರಿಯ ಚಾಟ್ಬಾಟ್ ಬಳಸಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬ್ರುಸ್ಸೆಲ್ಸ್: ಭಾರತ ಸೇರಿ ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಚಾಟ್ಬಾಟ್ ಆದ ಚಾಟ್ಜಿಪಿಟಿಯದ್ದೇ ಸುದ್ದಿಯಾಗುತ್ತಿದೆ. ಚಾಟ್ಜಿಪಿಟಿ ಚಾಟ್ಬಾಟ್ನಿಂದ ಜನರ ಉದ್ಯೋಗಕ್ಕೆ ಸಂಕಷ್ಟ ಎದುರಾಗಲಿದೆ. ಇದೇ ಜಗತ್ತನ್ನು ಆಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ, ಮೆಟಾ, ಗೂಗಲ್, ಟ್ವಿಟರ್ನಂತಹ ದಿಗ್ಗಜ ಸಂಸ್ಥೆಗಳು ಕೂಡ ಚಾಟ್ಬಾಟ್ ಅಭಿವೃದ್ಧಿಪಡಿಸುತ್ತಿವೆ. ಆದರೆ, ಬೆಲ್ಜಿಯಂನಲ್ಲಿ ಇದೇ ಚಾಟ್ಜಿಪಿಟಿ ಮಾದರಿಯ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಚಾಟ್ಬಾಟ್ ಆದ ಚೈ (Chai Chatbot)ಗೆ ಅಡಿಕ್ಟ್ ಆಗಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಪತಿಯ ಆತ್ಮಹತ್ಯೆಗೆ ಚೈ ಚಾಟ್ಬಾಟ್ ಕಾರಣ ಎಂಬುದಾಗಿ ಆರೋಪ ಮಾಡಿದ್ದಾರೆ.
ಚೈ ಎಂಬ App ಡೌನ್ಲೋಡ್ ಮಾಡಿಕೊಂಡ ನನ್ನ ಪತಿಯು ಆರು ವಾರಗಳಿಂದ ಅದನ್ನೇ ಬಳಸುತ್ತಿದ್ದರು. ಜಾಗತಿಕ ಹವಾಮಾನ ಬದಲಾವಣೆ, ಅದರಿಂದಾಗುವ ಪರಿಣಾಮ, ಮನುಕುಲಕ್ಕೆ ಎದುರಾಗುವ ಸಮಸ್ಯೆ ಕುರಿತು ಅವರಿಗೆ ಭೀತಿಯಾಗಿದೆ. ಇದೇ ಭಯದಿಂದ ಅವರು ಮಾನಸಿಕವಾಗಿ ಕುಗ್ಗಿ, ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅವರು ಆರು ವಾರದಿಂದ ನಿರಂತರವಾಗಿ ಚೈ ಚಾಟ್ಬಾಟ್ಅನ್ನು ಬಳಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಆದಾಗ್ಯೂ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪಿರೆ ಎಂಬುದಾಗಿ ಹಾಗೂ ಆತನ ಪತ್ನಿಯ ಹೆಸರು ಕ್ಲೈರ್ ಎಂಬುದಾಗಿ ತಿಳಿದುಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪತಿಗೆ ಭೀತಿ ಇತ್ತು ಎಂದ ಮಹಿಳೆ
“ಇತ್ತೀಚೆಗೆ ನಾನು ನನ್ನ ಪತಿಯ ಜತೆ ಮಾತನಾಡಿದಾಗಲೆಲ್ಲ ಅವರು ಜಾಗತಿಕ ತಾಪಮಾನದ ಕುರಿತು ಮಾತನಾಡುತ್ತಿದ್ದರು. ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಬೀರುವ ಪರಿಣಾಮಗಳ ಬಗ್ಗೆ ಅವರು ಆತಂಕಕ್ಕೀಡಾಗಿದ್ದರು. ತಾಪಮಾನದ ಏರಿಕೆ ಕುರಿತು ಮನುಷ್ಯರು ಕಂಡುಕೊಳ್ಳಬಹುದಾದ ಪರಿಹಾರಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೇಳುತ್ತಿದ್ದರು. ಹಾಗೊಂದು ವೇಳೆ, ಪರಿಹಾರ ಕಂಡುಕೊಳ್ಳದಿದ್ದರೆ ಏನೆಲ್ಲ ಆಗಬಹುದು ಎಂದು App ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಇದೇ ರೀತಿ ಅವರು ಚಾಟ್ಬಾಟ್ನಲ್ಲಿಯೇ ತಲ್ಲೀನರಾಗಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ChatGPT Subscription: ದಕ್ಷತೆ ಹೆಚ್ಚಳ; ನೌಕರರಿಗೆ ಚಾಟ್ಜಿಪಿಟಿ ಉಚಿತ ಸಬ್ಸ್ಕ್ರಿಪ್ಶನ್ ನೀಡಿದ ಬೆಂಗಳೂರು ಕಂಪನಿ
ಆದಾಗ್ಯೂ, ಘಟನೆ ಕುರಿತು ಚಾಟ್ಬಾಟ್ ಸಂಸ್ಥೆ ಚೈ ಪ್ರತಿಕ್ರಿಯಿಸಿದ್ದು, “ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತದೆ. ಆದರೆ, ಆತ್ಮಹತ್ಯೆಯಂತಹ ಸೂಕ್ಷ್ಮ ಪ್ರಕರಣಗಳ ಕುರಿತು ನಾವು ಎಚ್ಚರಿಕೆ ನೀಡುತ್ತೇವೆ” ಎಂದು ಸ್ಪಷ್ಟನೆ ನೀಡಿದೆ. ಆದಾಗ್ಯೂ, ಚೈ ರಿಸರ್ಚ್ನ ಚಾಟ್ಬಾಟ್ಅನ್ನ ಜಗತ್ತಿನಾದ್ಯಂತ 50 ಲಕ್ಷ ಜನ ಬಳಸುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಚಾಟ್ಜಿಪಿಟಿ ಚಾಟ್ಬಾಟ್ ಖ್ಯಾತಿ ಗಳಿಸುತ್ತಿದ್ದು, ಲೇಖನ, ಪತ್ರ, ರಾಜೀನಾಮೆ ಪತ್ರ ಬರೆಯುವುದು, ಕೋಡ್ ರಚಿಸುವುದು ಸೇರಿ ಹಲವು ರೀತಿಯಲ್ಲಿ ಬಳಕೆಯಾಗುತ್ತಿದೆ. ಅಷ್ಟೇ ಅಲ್ಲ, ಇದು ಕಂಪನಿಗಳಿಗೆ ಅನುಕೂಲ ಆಗುತ್ತಿದೆ. ಕಿರಿಯ ಉದ್ಯೋಗಿಗಳು ಚಾಟ್ಜಿಪಿಟಿಯಿಂದ ಕೌಶಲ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಕ್ಯಾಪಿಟಲ್ ಮೈಂಡ್ ಎಂಬ ಕಂಪನಿಯು ಉದ್ಯೋಗಿಗಳಿಗೆ ಚಾಟ್ಜಿಪಿಟಿಯ ನೋಂದಣಿ ಶುಲ್ಕ ನೀಡಿದೆ.
ವೈರಲ್ ನ್ಯೂಸ್
Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ವಿಡಿಯೊದಲ್ಲೋ, ಫೋಟೋದಲ್ಲೋ ನಾವು ವಿವಿಧ ಬಗೆಯ ಖಾದ್ಯಗಳನ್ನು ನೋಡಿದರೆ ಸಾಕು ನಮ್ಮ ಬಾಯಲ್ಲೂ ನೀರೂರುತ್ತದೆ. ನಮಗೂ ತಿಂದುಬಿಡಬೇಕು ಎನ್ನಿಸುತ್ತದೆ. ಹಾಗೇ, ಈ ನಾಯಿಗೂ ಅನ್ನಿಸಿತು.
ಸಾಕಿದ ನಾಯಿಗಳ ಆಟ-ತುಂಟಾಟ, ಮುಗ್ಧತೆಯನ್ನೆಲ್ಲ ಪ್ರಸ್ತುತ ಪಡಿಸುವ ಹಲವು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಮನೆಯಲ್ಲಿ ಸಾಕುವ ಶ್ವಾನಗಳು ಮನೆ ಸದಸ್ಯರಂತೆ ಆಗಿಬಿಡುತ್ತವೆ. ಮನೆಯಲ್ಲಿ ಎಲ್ಲ ಕಡೆ ಓಡಾಡಿಕೊಂಡು, ಸೋಫಾ-ಬೆಡ್ ಮೇಲೆ ಮಲಗುತ್ತ, ಟಿವಿ ನೋಡಿಕೊಂಡು ಸಖತ್ ಎಂಜಾಯ್ ಮಾಡಿಕೊಂಡಿರುತ್ತವೆ.
ಈಗ ಲ್ಯಾಬ್ರಡರ್ ನಾಯಿಯೊಂದು ಟಿವಿಯಲ್ಲಿ ಕಾಣಿಸುವ ತಿಂಡಿ ನಿಜವೆಂದು ಭಾವಿಸಿ, ಓಡಿ ಹೋಗಿ ಟಿವಿ ಸ್ಕ್ರೀನ್ಗೆ ಬಾಯಿ ಹಾಕಿದ ಕ್ಯೂಟ್ ವಿಡಿಯೊವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೊದಲ್ಲೋ, ಫೋಟೋದಲ್ಲೋ ನಾವು ವಿವಿಧ ಬಗೆಯ ಖಾದ್ಯಗಳನ್ನು ನೋಡಿದರೆ ಸಾಕು ನಮ್ಮ ಬಾಯಲ್ಲೂ ನೀರೂರುತ್ತದೆ. ನಮಗೂ ತಿಂದುಬಿಡಬೇಕು ಎನ್ನಿಸುತ್ತದೆ. ತಿಂಡಿ/ತಿನಿಸು ಚಿತ್ರ-ವಿಡಿಯೊ ಕಂಡಾಕ್ಷಣ ಅದನ್ನು ಬಾಯಿಗೆ ಹಾಕಿಕೊಳ್ಳಬೇಕು ಎಂದೆನಿಸುವುದು ಸಹಜವಾದರೂ, ನಾವು ಮನುಷ್ಯರಿಗೆ ಅದು ಫೋಟೋ/ವಿಡಿಯೊ ಎಂದು ಗೊತ್ತಿರುತ್ತದೆ. ಆದರೆ ನಾಯಿಗಳು ಹಾಗಲ್ಲ. ಅದು ನಿಜವಲ್ಲ ಎಂಬುದು ಅವಕ್ಕೆ ತಕ್ಷಣಕ್ಕೇ ಗೊತ್ತಾಗುವುದಿಲ್ಲ.
ಇದನ್ನೂ ಓದಿ: Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!
ಹಾಗೇ ಈ ನಾಯಿ ಕೂಡ. ತನ್ನ ಸಾಕಿದ ಮನೆಯಲ್ಲಿ ಅಳವಡಿಸಲಾಗಿರುವ ದೊಡ್ಡದಾದ ಟಿವಿಯಲ್ಲಿ ಬರುತ್ತಿರುವ ದೃಶ್ಯ ನಿಜವೆಂದೇ ಭಾವಿಸಿಬಿಟ್ಟಿತು. ಟಿವಿಯಲ್ಲಿ ಒಂದು ಹೋಟೆಲ್ನ ಸನ್ನಿವೇಶ ಬರುತ್ತಿತ್ತು. ಅಲ್ಲಿ ಹಲವರು ಕುಳಿತು ತಿಂಡಿ ತಿನ್ನುತ್ತಿದ್ದಾರೆ. ಅದರಲ್ಲಿ ಒಬ್ಬ ಹುಡುಗ ಒಂದು ಕೈಯಲ್ಲಿ ಆಹಾರ ಸೇವಿಸುತ್ತ, ಎಡಗೈಯಲ್ಲಿ ಅದ್ಯಾವುದೋ ತಿಂಡಿಯನ್ನು ಹಿಡಿದುಕೊಂಡಿದ್ದಾನೆ. ಅಷ್ಟೊತ್ತು ಟಿವಿ ನೋಡುತ್ತಿದ್ದ ನಾಯಿ, ಹುಡುಗ ಎಡಗೈಯಲ್ಲಿ ತಿನಿಸನ್ನು ಹಿಡಿದು, ಸ್ವಲ್ಪವೇ ಚಾಚುತ್ತಿದ್ದಂತೆ ಓಡಿ ಹೋಗಿ ಅಲ್ಲಿ ಬಾಯಿ ಹಾಕಿದೆ. ಟಿವಿ ಸ್ಕ್ರೀನ್ನ್ನು ನಾಲಿಗೆಯಿಂದ ನೆಕ್ಕಿದೆ. ಹೀಗೆ ಎರಡು ಬಾರಿ ಮಾಡಿದ ನಂತರ ಅದು ಮುಖದಲ್ಲಿ ಬೇಸರದ ಭಾವ ಹೊತ್ತು, ಮರಳಿ ಬಂದು ಕುಳಿತಿದೆ. ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ.
ವಿಡಿಯೋಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
ವೈರಲ್ ನ್ಯೂಸ್
Viral News : ನೂಡಲ್ಸ್ನಿಂದಲೇ ರಸ್ತೆ ಗುಂಡಿ ಮುಚ್ಚುವ ವ್ಯಕ್ತಿ! ವೈರಲ್ ಆಗ್ತಿದೆ ಈತನ ಕೆಲಸ
ಬ್ರಿಟನ್ನಲ್ಲೂ ರಸ್ತೆ ಗುಂಡಿಗಳ ಸಮಸ್ಯೆಯಿದೆ. ಈ ಸಮಸ್ಯೆಯನ್ನು ಅಲ್ಲಿನ ವ್ಯಕ್ತಿಯೊಬ್ಬರು ವಿಶೇಷ ರೀತಿಯಲ್ಲಿ ಸರ್ಕಾರದ ಗಮನಕ್ಕೆ ತರಲು ಯತ್ನಿಸುತ್ತಿದ್ದು, ಆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ.
ಲಂಡನ್: ರಸ್ತೆ ಗುಂಡಿ ಸಮಸ್ಯೆ ನಮ್ಮ ಬೆಂಗಳೂರಿನ ಮಂದಿಗೆ ಚೆನ್ನಾಗಿ ಗೊತ್ತಿರುವಂತದ್ದು. ಕೇವಲ ಬೆಂಗಳೂರು ಮಾತ್ರವಲ್ಲ, ದೇಶ ವಿದೇಶದಲ್ಲೂ ಈ ರಸ್ತೆ ಗುಂಡಿ ದೊಡ್ಡ ಸಮಸ್ಯೆಯೇ. ಅಭಿವೃದ್ಧಿಹೊಂದಿರುವ ರಾಷ್ಟ್ರ ಎಂದು ಕರೆಸಿಕೊಳ್ಳುವ ಬ್ರಿಟನ್ನಲ್ಲೂ ಈ ಸಮಸ್ಯೆ ತಪ್ಪಿದ್ದಲ್ಲ. ಅಲ್ಲಿಯೂ ಕೂಡ ಈ ರಸ್ತೆ ಗುಂಡಿ ವಿಚಾರದಲ್ಲಿ ಸಾಕಷ್ಟು ಮಂದಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿ, ಸೋತಿದ್ದಾರೆ. ಇದೀಗ ಈ ವ್ಯಕ್ತಿಯೊಬ್ಬರು ವಿಶೇಷ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯುತ್ತಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ (Viral News) ಆಗಿದೆ.
ಇದನ್ನೂ ಓದಿ: Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!
ಮಾರ್ಕ್ ಮೊರೆಲ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಿಸ್ಟರ್ ಪ್ಯಾಥ್ಹೋಲ್ ಎಂದೇ ಕರೆಯಲಾಗುತ್ತದೆ. ಕಾರಣ ಅವರು ಮಾಡುತ್ತಿರುವ ಕೆಲಸ. ರಸ್ತೆಗಳಲ್ಲಿರುವ ಗುಂಡಿಗಳಿಂದ ಚಾಲಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಇವರು ಹತ್ತು ವರ್ಷಗಳಿಂದ ಸರ್ಕಾರಕ್ಕೆ ಮನವರಿಕೆ ಮಾಡಿಸುವ ಯತ್ನದಲ್ಲೇ ಇದ್ದಾರಂತೆ. ಗುಂಡಿಗಳಿಗೆ ರಬ್ಬರ್ ತುಂಬುವುದು, ಬೇರೆ ಬೇರೆ ವಸ್ತು ತುಂಬಿಸಿ ಗುಂಡಿ ಮುಚ್ಚುವ ಕೆಲಸವನ್ನು ಅವರು ಈವರೆಗೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇದೀಗ ವಿಶೇಷ ರೀತಿಯಲ್ಲಿ ಗುಂಡಿ ಮುಚ್ಚುವುದಕ್ಕೆ ಆರಂಭಿಸಿದ್ದಾರೆ.
ಮಾರ್ಕ್ ಅವರು ರಸ್ತೆ ಗುಂಡಿಗಳಿಗೆ ತಿನ್ನುವ ನೂಡೆಲ್ಸ್ ಅನ್ನೇ ಹಾಕಿ ಮುಚ್ಚಲಾರಂಭಿಸಿದ್ದಾರೆ. ಅದಕ್ಕೆಂದೇ ನೂಡಲ್ಸ್ ಕಂಪನಿಯೊಂದರ ಜತೆಗೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಎಲ್ಲೆಲ್ಲಿ ಗುಂಡಿ ಕಾಣುತ್ತದೆಯೋ ಅಲ್ಲೆಲ್ಲಾ ಅವರು ನೂಡಲ್ಸ್ ತುಂಬಲಾರಂಭಿಸಿದ್ದಾರೆ. ನೂಡಲ್ಸ್ ಗುಂಡಿಯೊಳಗೆ ನೀಟಾಗಿ ಕುಳಿತುಕೊಳ್ಳುತ್ತದೆ ಎಂದೂ ಅವರು ಹೇಳಿದ್ದಾರೆ. ಅವರ ಮೂಲ ಊರಾದ ಬ್ರಾಕ್ಲೆ ನಗರದಲ್ಲಿ ಬಹುತೇಕ ಗುಂಡಿಗಳನ್ನು ಇದೇ ರೀತಿಯಲ್ಲಿ ಮುಚ್ಚಿದ್ದಾರೆ.
ಈ ಮಾರ್ಕ್ ಅವರ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿರುವಂತಹ ವಿಚಾರ. ನನ್ನ ಈ ಕೆಲಸದಿಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಗುಂಡಿ ಮುಚ್ಚಲಿ ಎನ್ನುತ್ತಾರೆ ಮಾರ್ಕ್.
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ20 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ10 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ11 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್