Viral News: ಸ್ತನ ಸೌಂದರ್ಯ ಶಸ್ತ್ರಚಿಕಿತ್ಸೆಯ ವಿಡಿಯೊ; ಆಸ್ಪತ್ರೆ ವಿರುದ್ಧ ಮಹಿಳೆಯಿಂದ ಕೇಸ್‌! - Vistara News

ವೈರಲ್ ನ್ಯೂಸ್

Viral News: ಸ್ತನ ಸೌಂದರ್ಯ ಶಸ್ತ್ರಚಿಕಿತ್ಸೆಯ ವಿಡಿಯೊ; ಆಸ್ಪತ್ರೆ ವಿರುದ್ಧ ಮಹಿಳೆಯಿಂದ ಕೇಸ್‌!

Viral News: ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ. ತಮ್ಮ ಕಾಯಿಲೆಯ ವಿಷಯವನ್ನು ವೈದ್ಯರು ಗೌಪ್ಯವಾಗಿ ಇಡುತ್ತಾರೆ ಎಂಬ ನಂಬಿಕೆ. ಆದರೆ ಚೀನಾದ ಈ ಆಸ್ಪತ್ರೆಯೊಂದು ಮಹಿಳೆಯೊಬ್ಬಳ ಖಾಸಗಿ ಅಂಗದ ಶಸ್ತ್ರಚಿಕಿತ್ಸೆಯ ವಿಡಿಯೊವನ್ನು ಎಲ್ಲೆಡೆ ಹರಿಬಿಟ್ಟು ಮಹಿಳೆ ತಲೆತಗ್ಗಿಸುವ ಹಾಗೆ ಮಾಡಿದೆ. ಮಹಿಳೆ ಜನವರಿಯಲ್ಲಿ ಮಧ್ಯ ಚೀನಾದ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆಯಲ್ಲಿ ಸ್ತನದ ಗಾತ್ರ ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ತಿಂಗಳುಗಳ ನಂತರ, ಇತರ ಹಲವಾರು ಮಹಿಳೆಯರೊಂದಿಗೆ ತನ್ನ ವಿಡಿಯೊ ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವುದನ್ನು ಕಂಡು ಅವಳು ಶಾಕ್ ಆಗಿ ಕ್ರಮಕ್ಕೆ ಮುಂದಾಗಿದ್ದಾಳೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವೊಂದು ಆಸ್ಪತ್ರೆಗಳು ತಮ್ಮಲ್ಲಿ ನಡೆದ ಶಸ್ತ್ರಚಿಕಿತ್ಸೆಗಳನ್ನು ವಿಡಿಯೊ ಮಾಡಿ ಯುಟ್ಯೂಬ್‍ನಲ್ಲಿ ಪೋಸ್ಟ್ ಮಾಡುತ್ತಾರೆ. ಹಾಗಾಗಿ ನಾವು ಯುಟ್ಯೂಬ್‍ನಲ್ಲಿ ಹಲವು ಶಸ್ತ್ರಚಿಕಿತ್ಸೆಗಳ ವಿಡಿಯೊಗಳನ್ನು ನೋಡುತ್ತೇವೆ. ಆದರೆ ಚೀನಾದಲ್ಲಿ ಮಹಿಳೆಯೊಬ್ಬಳ ಸ್ತನ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆಯನ್ನು ರಹಸ್ಯವಾಗಿ ಚಿತ್ರೀಕರಿಸಿದ ಆಸ್ಪತ್ರೆ ಅದನ್ನು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೊ ಎಲ್ಲೆಡೆ ವೈರಲ್‌ (Viral News) ಆಗಿದೆ. ಇದರಿಂದ ನೊಂದ ಮಹಿಳೆ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ವರದಿ ಪ್ರಕಾರ, ಮಹಿಳೆ ಜನವರಿಯಲ್ಲಿ ಮಧ್ಯ ಚೀನಾದ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆಯಲ್ಲಿ ಸ್ತನದ ಗಾತ್ರದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ತಿಂಗಳುಗಳ ನಂತರ, ಇತರ ಹಲವಾರು ಮಹಿಳೆಯರೊಂದಿಗೆ ತನ್ನ ವಿಡಿಯೊ ಚೀನಾದ ಸೋಶಿಯಲ್ ಮೀಡಿಯಾದ ಪ್ಲಾಟ್‍ಫಾರ್ಮ್‍ನಲ್ಲಿ ಪ್ರಸಾರವಾಗುತ್ತಿರುವುದನ್ನು ಕಂಡು ಅವಳು ಶಾಕ್‌ ಆದಳು. ಈ ಕ್ಲಿಪ್‍ನಲ್ಲಿ ಆಕೆಗೆ ಶಸ್ತ್ರಚಿಕಿತ್ಸೆಯ ನಂತರ, ಬ್ಯಾಂಡೇಜ್ ಮತ್ತು ಅರಿವಳಿಕೆಗೆ ಒಳಗಾಗಿರುವುದನ್ನು ತೋರಿಸಿದೆ ಎಂದು ವರದಿಯಾಗಿದೆ.

Viral News

ಈ ಘಟನೆಯ ಬಗ್ಗೆ ಬೇಸರಗೊಂಡ ಮಹಿಳೆ ತನ್ನ ಜೀವನದಲ್ಲಿ ರಹಸ್ಯವಾಗಿಡಬೇಕಾಗಿದ್ದ ಈ ವಿಚಾರವನ್ನು ಬಹಿರಂಗಪಡಿಸಬಾರದೆಂದು ತಿಳಿಸಿ ವಿಡಿಯೊ ಶೂಟ್ ಮಾಡಿದ ವ್ಯಕ್ತಿಯನ್ನು ಗುರುತಿಸುವಂತೆ ಮತ್ತು ವಿಡಿಯೊವನ್ನು ಡಿಲೀಟ್ ಮಾಡುವಂತೆ ಆಕೆ ಪದೇ ಪದೇ ಆಸ್ಪತ್ರೆಯನ್ನು ಸಂಪರ್ಕಿಸಿ ವಿನಂತಿಸಿಕೊಂಡಿದ್ದಾಳೆ. ಹಾಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಮತ್ತು ಪರಿಹಾರವನ್ನು ನೀಡುವಂತೆ ಆಕೆ ಆಸ್ಪತ್ರೆಯ ಅಧಿಕಾರಿಗಳನ್ನು ಕೇಳಿದ್ದಾಳೆ. ಆದರೆ ಆಸ್ಪತ್ರೆಯ ಅಧಿಕಾರಿಗಳು ಕ್ಷಮೆಯಾಚಿಸಲು ಹಾಗೂ ವಿಡಿಯೊವನ್ನು ಡಿಲೀಟ್ ಮಾಡಲು ನಿರಾಕರಿಸಿದ್ದಾರೆ. ಈ ವಿಡಿಯೊವನ್ನು ಯಾರು ಮಾಡಿದರೆಂದು ಪತ್ತೆಹಚ್ಚುವುದು ಅಸಾಧ್ಯ ಎಂದು ಆಸ್ಪತ್ರೆ ಹೇಳಿದೆ.

ಆದರೆ ವಿಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿ ಯಾರು ಎಂಬುದು ಆಸ್ಪತ್ರೆಯವರಿಗೆ ತಿಳಿದಿರಬೇಕು. ಯಾಕೆಂದರೆ ಆಸ್ಪತ್ರೆಯ ಆಪರೇಟಿಂಗ್ ಥಿಯೇಟರ್‌ನೊಳಗೆ ವೈದ್ಯರ ಅನುಮತಿ ಇಲ್ಲದೇ ಸಾಮಾನ್ಯ ಜನರು ಬರಲು ನಿಷೇಧವಿದೆ. ಮತ್ತು ಈ ವಿಡಿಯೊದಲ್ಲಿ ವೈದ್ಯರು ಮತ್ತು ನರ್ಸ್‍ಗಳಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರಿಂದಾಗಿ ಹೊರಗಿನವರು ಪ್ರವೇಶಿಸಲು ಮತ್ತು ವಿಡಿಯೊ ಮಾಡಲು ಸಾಧ್ಯವಿಲ್ಲ ಎಂದು ಮಹಿಳೆ ವಾದಿಸಿದ್ದಾಳೆ. ಆದರೆ ವಿಡಿಯೊವನ್ನು ರೆಕಾರ್ಡ್ ಮಾಡಿದ ವ್ಯಕ್ತಿಯು ಆಸ್ಪತ್ರೆಯಿಂದ ಹೊರಹೋಗಿದ್ದಾನೆ ಮತ್ತು ಅವರು ತಮ್ಮ ಬಗ್ಗೆ ಮಾಹಿತಿಯನ್ನು ನೀಡಿಲ್ಲ ಎಂದು ಆಸ್ಪತ್ರೆ ಹೇಳಿಕೊಂಡಿದೆ. ಹಾಗಾಗಿ ಆಸ್ಪತ್ರೆಯ ವಿರುದ್ದ ಸಿಟ್ಟಿಗೆದ್ದ ಮಹಿಳೆ ಆಸ್ಪತ್ರೆಯ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾಳೆ.

ಇದನ್ನೂ ಓದಿ: ವಾಟರ್‌ ಟ್ಯಾಂಕ್‌ ಮೇಲಿನಿಂದ ಜಿಗಿದ ವಿದ್ಯಾರ್ಥಿ; ವಿಡಿಯೋ ಇದೆ

ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಾರಣ ಆಸ್ಪತ್ರೆಯ ಈ ಪ್ರತಿಕ್ರಿಯೆಗೆ ಆನ್‍ಲೈನ್‍ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆಯ ಬೇಜವಾಬ್ದಾರಿಯ ಬಗ್ಗೆ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿದ ಹೆನಾನ್ನ ಟಿಯಾನ್ಕ್ಸಿನ್(Tianxin) ಕಾನೂನು ಸಂಸ್ಥೆಯ ವಕೀಲ ಮಾ ಬಿನ್, ರೋಗಿಗಳ ಮುಖಗಳನ್ನು ಅವರ ಒಪ್ಪಿಗೆಯಿಲ್ಲದೆ ತೋರಿಸುವ ವಿಡಿಯೊಗಳನ್ನು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡುವುದು ಗೌಪ್ಯತೆ ಹಕ್ಕುಗಳು ಮತ್ತು ಇಮೇಜ್ ಹಕ್ಕುಗಳ ಉಲ್ಲಂಘನೆಯಾಗಿದೆ . ವಿಡಿಯೊವನ್ನು ಹೊರಗಿನ ವ್ಯಕ್ತಿ ಮಾಡಿದ್ದರೂ ಕೂಡ ಅದಕ್ಕೆ ಆಸ್ಪತ್ರೆಯೇ ಜವಾಬ್ದಾರವಾಗಿರುತ್ತದೆ ಎಂದು ತಿಳಿಸಿದ್ದಾರೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

King Cobra Rescue: 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಹಿಡಿದದ್ದು ಹೇಗೆ? ವಿಡಿಯೊ ನೋಡಿ

King Cobra Rescue: ಆಗುಂಬೆಯಲ್ಲಿ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ವನ್ಯಜೀವಿ ಅಧಿಕಾರಿಗಳು ರಕ್ಷಿಸಿ ಇತ್ತೀಚೆಗೆ ಕಾಡಿಗೆ ಬಿಟ್ಟಿದ್ದರು. ಆಗುಂಬೆ ರೈನ್ ಫಾರೆಸ್ಟ್ ಸಂಶೋಧನಾ ಕೇಂದ್ರದ (ಎಆರ್‌ಆರ್‌ಎಸ್‌) ಕ್ಷೇತ್ರ ನಿರ್ದೇಶಕ ಅಜಯ್ ಗಿರಿ ಅವರು ಅದರ ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ನೀವೂ ಈ ವಿಡಿಯೊ ನೋಡಿ.

VISTARANEWS.COM


on

King Cobra Rescue
Koo

ಬೆಂಗಳೂರು: ಕಾಳಿಂಗ ಸರ್ಪ ಬಹಳ ಅಪರೂಪವಾಗಿ ಕಂಡುಬರುವಂತಹ ಹಾವು. ಇದು ಬಹಳ ಅಪಾಯಕಾರಿ ಕೂಡ. ಇವು ಹೆಚ್ಚಾಗಿ ದಟ್ಟ ಕಾಡಿನ ಪೊದೆಗಳಲ್ಲಿ ಕಂಡು ಬರುತ್ತದೆ. ಆಗುಂಬೆಯ ಸಮೀಪ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ(King Cobra Rescue)ವೊಂದು ಪ್ರತ್ಯಕ್ಷವಾಗಿ ಆತಂಕ ಮೂಡಿಸಿತ್ತು. ಅದನ್ನು ರಕ್ಷಣೆ ಮಾಡಿರುವ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆಗುಂಬೆಯಲ್ಲಿ 12 ಅಡಿ ಉದ್ದದ ಈ ಬೃಹತ್ ಕಾಳಿಂಗ ಸರ್ಪವನ್ನು ವನ್ಯಜೀವಿ ಅಧಿಕಾರಿಗಳು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು. ಆಗುಂಬೆ ರೈನ್ ಫಾರೆಸ್ಟ್ ಸಂಶೋಧನಾ ಕೇಂದ್ರದ (ಎಆರ್‌ಆರ್‌ಎಸ್‌) ಕ್ಷೇತ್ರ ನಿರ್ದೇಶಕ ಅಜಯ್ ಗಿರಿ ಅವರು ಅದರ ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿದೆ.

ಕಾಳಿಂಗ ಸರ್ಪ ರಸ್ತೆ ದಾಟುತ್ತಿರುವುದನ್ನು ಗ್ರಾಮಸ್ಥರು ನೋಡಿದ್ದರು. ಆದರೆ ನಂತರ ಅದು ಮನೆಯೊಂದರ ಕಾಂಪೌಂಡ್‍ನಲ್ಲಿರುವ ಪೊದೆಯಲ್ಲಿ ವಾಸವಾಗಿದ್ದು, ಇದನ್ನು ನೋಡಿದ ಮನೆಯ ಮಾಲೀಕರು ಕೂಡಲೇ ಅರಣ್ಯ ಇಲಾಖೆ ಮತ್ತು ಎಆರ್‌ಆರ್‌ಎಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಿರ್ದೇಶಕ ಅಜಯ್ ಗಿರಿ ಅವರು ಸರ್ಪದ ಬಳಿ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ನಂತರ ಗಿರಿ ಮತ್ತು ಅವರ ತಂಡ ಸ್ಥಳಕ್ಕೆ ಬಂದು ರಾಡ್ ಸಹಾಯದಿಂದ ಮರವೇರಿದ ಸರ್ಪವನ್ನು ಕೆಳಗಿಳಿಸಿದರು. ನಂತರ, ಅದನ್ನು ಚೀಲದಲ್ಲಿ ಹಾಕಿ ಶೀಘ್ರದಲ್ಲೇ ಕಾಡಿಗೆ ಬಿಡಲಾಯಿತು.

ಘಟನೆಯನ್ನು ವಿವರಿಸಿದ ಗಿರಿ ತಮ್ಮ ಪೋಸ್ಟ್ ನಲ್ಲಿ, “ಪರಿಸ್ಥಿತಿಯ ಬಗ್ಗೆ ಎಆರ್‌ಆರ್‌ಎಸ್‍ಗೆ ಮಾಹಿತಿ ನೀಡಲಾಯಿತು. ಕರೆ ಮಾಡಿದಾಗ ನಾವು ಸ್ಥಳೀಯರಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಸೂಚನೆ ನೀಡಿದೆವು. ನಂತರ ಸ್ಥಳಕ್ಕೆ ಧಾವಿಸಿದ್ದೇವೆ. ತಪಾಸಣೆಯ ನಂತರ ನಾವು ಹಾವನ್ನು ಚೀಲದೊಳಗೆ ಹಾಕಿ ರಕ್ಷಿಸಿದೆವು. ನಾವು ಸ್ಥಳೀಯರಿಗೆ ಸರ್ಪದ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ನೀಡಿದೆವು. ಸರ್ಪವನ್ನು ಹಿಡಿಯಲು ಅದಕ್ಕೆ ಬೇಕಾದ ಸಾಮಗ್ರಿಗಳನ್ನೂ ಕೊಟ್ಟಿದ್ದೇವೆ. ನಂತರ ಸ್ಥಳೀಯರು ಮತ್ತು ಉಸ್ತುವಾರಿ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಮಗಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗುಪ್ತಾಂಗ ತೋರಿಸಿದ ವಿಕೃತ ಕಾಮಿ!

ಇನ್ಸ್ಟಾಗ್ರಾಂನಲ್ಲಿ ಸುಮಾರು 13,000 ಫಾಲೋವರ್ಸ್‌ಗಳನ್ನು ಹೊಂದಿರುವ ಅಜಯ್ ಗಿರಿ, ಆಗಾಗ ಹಾವುಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಕಾಳಿಂಗ ಸರ್ಪದ ಈ ವಿಡಿಯೊಗೆ ಸಂಬಂಧಿಸಿದಂತೆ, ಸುಸಂತ ನಂದ ಅವರು ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಜಯ್ ಗಿರಿ ಮತ್ತು ಅವರ ತಂಡವನ್ನು ಶ್ಲಾಘಿಸಿದ್ದಾರೆ.

Continue Reading

ಕ್ರೈಂ

Robbery Case: ಕಾರಿನಲ್ಲಿ ಬಂದ ಡಕಾಯಿತರು; ಬ್ಯಾಗ್‌ ಕಸಿಯಲು ವಿದ್ಯಾರ್ಥಿನಿಯನ್ನು 20 ಅಡಿ ದೂರ ಎಳೆದೊಯ್ದರು! ಆಘಾತಕಾರಿ ವಿಡಿಯೊ

Robbery Case: ದುಡಿದು ಜೀವನ ಸಾಗಿಸುವುದಕ್ಕೆ ಸಾವಿರ ದಾರಿಯಿದ್ದರೂ, ಕೆಲವರು ಕಳ್ಳತನವನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಬಸ್‌ಗಾಗಿ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯಿಂದ ದರೋಡೆಕೋರರು ಸರ, ಮೊಬೈಲ್ ಫೋನ್ ಮತ್ತು ಪರ್ಸ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಅವಳ ಕುತ್ತಿಗೆಯಲ್ಲಿದ್ದ ಬ್ಯಾಗ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಯತ್ನದಲ್ಲಿ ಅವರು ಆಕೆಯನ್ನು ಹಿಡಿದುಕೊಂಡೇ ಕಾರನ್ನು ಓಡಿಸಿದ್ದಾರೆ. ಈ ವಿಡಿಯೊ ಬೆಚ್ಚ ಬೀಳಿಸುತ್ತದೆ.

VISTARANEWS.COM


on

Robbery Case
Koo

ಮಂಡಿ-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೊ ವೈರಲ್ ಆದ ನಂತರ ಮೂವರನ್ನು ಬಂಧಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಂಜಾಬ್ ಮೂಲದ ಮೂವರು ವ್ಯಕ್ತಿಗಳು, ಶುಕ್ರವಾರ ಮಧ್ಯಾಹ್ನ 3:00 ರ ಸುಮಾರಿಗೆ ಸುಜಾ ಸಂದ್ರಾಹಲ್ ಗ್ರಾಮದ ನಿವಾಸಿ ನೇಹಾ ವರ್ಮಾ (20) ಎಂಬ ಕಾಲೇಜು ವಿದ್ಯಾರ್ಥಿನಿ ಬಸ್‍ಗಾಗಿ ಕಾಯುತ್ತಿದ್ದಾಗ ಅವಳನ್ನು ಗುರಿಯಾಗಿಸಿಕೊಂಡರು. ನಂತರ ಅವಳಿಂದ ಸರ, ಮೊಬೈಲ್ ಪೋನ್ ಮತ್ತು ಪರ್ಸ್ ಕಸಿದುಕೊಂಡಿದ್ದಾರೆ. ಅವಳ ಕುತ್ತಿಗೆಯಲ್ಲಿದ್ದ ಬ್ಯಾಗ್ ಅನ್ನು ಕಸಿದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಆಗ ಅವರು ಆಕೆಯನ್ನು ಹಿಡಿದುಕೊಂಡೇ ಕಾರನ್ನು ಓಡಿಸಿದರು, ನೇಹಾಳನ್ನು ಸುಮಾರು 20 ಅಡಿಗಳಷ್ಟು ಎಳೆದುಕೊಂಡು ಹೋಗಿ ರಸ್ತೆಗೆ ಎಸೆದಿದ್ದಾರೆ.

ಈ ಘಟನೆಯ ನಂತರ, ಶಂಕಿತರು ಜೋಗಿಂದರ್ ನಗರದತ್ತ ತೆರಳಿದರು, ಅಲ್ಲಿ ಅವರು ಸಾಯಿ ಬಜಾರ್‌ನಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಹೋಮ್ ಗಾರ್ಡ್ ಅಧಿಕಾರಿ ಮತ್ತು ಮಹಿಳೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ಹೋಮ್‌ಗಾರ್ಡ್ ಅಧಿಕಾರಿ ಶಂಕಿತರಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾದರು, ಆದರೆ ಗೊಂದಲದಲ್ಲಿ, ದಾಳಿಕೋರರು ಅಲ್ಲಿ ನಿಲ್ಲಿಸಿದ್ದ ಐದು ವಾಹನಗಳಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 30 ಅಡಿ ದೂರ ಎಗರಿ ಬಿದ್ದ ಮಹಿಳಾ ಕಾನ್‌ಸ್ಟೇಬಲ್‌

ಅವರು ಅಪ್ರೋಚ್ ರಸ್ತೆಯ ಬಳಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರಿನ ನಂಬರ್ ಪ್ಲೇಟನ್ನು ಕೂಡ ಬದಲಾಯಿಸಿದರೂ, ಅಂತಿಮವಾಗಿ ಗುಮ್ಮಾದಲ್ಲಿ ಪೊಲೀಸರು ಶಂಕಿತರನ್ನು ಸೆರೆಹಿಡಿದಿದ್ದಾರೆ. ಮೂವರು ವ್ಯಕ್ತಿಗಳನ್ನು ಪಂಜಾಬ್ ಮೂಲದವರು ಎಂದು ಗುರುತಿಸಲಾಗಿದ್ದು, ಈಗ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಬೈಜನಾಥ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Continue Reading

ಕ್ರಿಕೆಟ್

Viral Video: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಗುಳ್ಳೆ ನರಿ; ವಿಡಿಯೊ ವೈರಲ್​

Viral Video: ಲಂಡನ್​ನಲ್ಲಿ ಕ್ರಿಕೆಟ್​ ಪಂದ್ಯವೊಂದು ನಡೆಯುತ್ತಿದ್ದ ವೇಳೆ ಕಂದು ಬಣ್ಣದ ನರಿಯೊಂದು(Brown Fox) ಏಕಾಏಕಿಯಾಗಿ ಮೈದಾನಕ್ಕೆ ನುಗ್ಗಿದೆ. ನೆರದಿದ್ದ ಪ್ರೇಕ್ಷಕರು ಮತ್ತು ಆಟಗಾರರ ಗದ್ದಲದಿಂದ ಹೆದರಿಕೊಂಡ ಈ ನರಿ ಕೆಲ ಕಾಲ ಮೈದಾನದ ಸುತ್ತಲೂ ಓಡಿ ಕೊನೆಗೂ ಮೈದಾನದಿಂದ ಜಿಗಿದು ಹೊರ ಹೋಗಿದೆ.

VISTARANEWS.COM


on

Viral Video
Koo

ಲಂಡನ್​: ಸಾಮನ್ಯವಾಗಿ ಕ್ರಿಕೆಟ್​ ಪಂದ್ಯದ ವೇಳೆ ನಾಯಿ, ಹಾವು, ಬೆಕ್ಕು ಕಾಣಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಪಂದ್ಯದ ವೇಳೆ ಇವುಗಳು ಮೈದಾನಕ್ಕೆ ಬಂದು ಪಂದ್ಯಗಳು ಅಡಚಣೆಯಾದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಆದರೆ, ಈ ಬಾರಿ ವಿಶೇಷ ಅತಿಥಿಯಂತೆ ನರಿಯೊಂದು(Monitor Lizard) ಮೈದಾನಕ್ಕೆ ಬಂದಿದೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ. ಲಂಡನ್​ನಲ್ಲಿ ಈ ಘಟನೆ ನಡೆದಿದೆ.

ಲಂಡನ್​ನಲ್ಲಿ ಕ್ರಿಕೆಟ್​ ಪಂದ್ಯವೊಂದು ನಡೆಯುತ್ತಿದ್ದ ವೇಳೆ ಕಂದು ಬಣ್ಣದ ನರಿಯೊಂದು(Brown Fox) ಏಕಾಏಕಿಯಾಗಿ ಮೈದಾನಕ್ಕೆ ನುಗ್ಗಿದೆ. ನೆರದಿದ್ದ ಪ್ರೇಕ್ಷಕರು ಮತ್ತು ಆಟಗಾರರ ಗದ್ದಲದಿಂದ ಹೆದರಿಕೊಂಡ ಈ ನರಿ ಕೆಲ ಕಾಲ ಮೈದಾನದ ಸುತ್ತಲೂ ಓಡಿ ಕೊನೆಗೂ ಮೈದಾನದಿಂದ ಜಿಗಿದು ಹೊರ ಹೋಗಿದೆ. ಆಟಗಾರರು ನರಿ…ನರಿ ಎಂದು ಕೂಗುತ್ತಿರುವುದನ್ನು ವಿಡಿಯೊದಲ್ಲಿ ಕೇಳಬಹುದಾಗಿದೆ.

ಕೆಲವು ತಿಂಗಳುಗಳ ಹಿಂದೆ ಕೊಲಂಬೊದಲ್ಲಿ ನಡೆದಿದ್ದ ಅಫಘಾನಿಸ್ತಾನ ಮತ್ತು ಶ್ರೀಲಂಕಾ(Sri Lanka vs Afghanistan) ನಡುವಣ ಏಕೈಕ ಟೆಸ್ಟ್​ ಪಂದ್ಯದಲ್ಲಿ ಉಡವೊಂದು(Monitor Lizard) ಬೌಂಡರಿ ಗೆರೆ ದಾಟಿ ಮೈದಾನಕ್ಕೆ ಎಂಟ್ರಿ ಕೊಟ್ಟಿತ್ತು. ಸೀಳಿದಂತಿದ್ದ ಕೆಂಗುಲಾಬಿ ಬಣ್ಣದ ನಾಲಿಗೆಯನ್ನು ಹೊರಚಾಚುತ್ತಾ ಮೈದಾನದಲ್ಲಿ ಓಡಾಡಿತ್ತು. ಈ ವಿಡಿಯೊ ಕೂಡ ವೈರಲ್ ಆಗಿತ್ತು. 

ಉಡವನ್ನು ಕಂಡ ಫೀಲ್ಡ್​ ಅಂಪೈರ್ ಬೌಲಿಂಗ್​ ನಡೆಸಲು ಓಡಿ ಬಂದ ನಿಜತ್ ಮಸೂದ್ ಅವರನ್ನು ತಡೆದು ನಿಲ್ಲಿಸಿ ಬಳಿಕ ಮೈದಾನ ಸಿಬ್ಬಂದಿಗೆ ಉಡವನ್ನು ಹೊರಗಡೆ ಹಾಕುವಂತೆ ಸೂಚನೆ ನೀಡಿದ್ದರು. ಈ ವೇಳೆ ಮೈದಾನದ ಹೊರಗಿದ್ದ ಅಂಪೈರ್​ ಉಡವನ್ನು ಓಡಿಸಲು ಕೆಲ ಕಾಲ ಹರ ಸಾಹಸ ಪಟ್ಟು ಅಂತಿಮವಾಗಿ ಉಡವನ್ನು ಮೈದಾನದಿಂದ ಓಡಿಸಿದ್ದರು.

ದಿಟ್ಟ ಹೋರಾಟ ನಡೆಸಿದ ವಿಂಡೀಸ್​


ಇಂಗ್ಲೆಂಡ್‌ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ದಿಟ್ಟ ಆಟವಾಡುವ ಮೂಲಕ ತೀವ್ರ ಪೈಪೋಟಿ ನೀಡಿದೆ. ಇಂಗ್ಲೆಂಡ್​ ತಂಡದ ಮೊದಲ ಇನಿಂಗ್ಸ್​ನ 416 ರನ್ನಿಗೆ ಉತ್ತರವಾಗಿ ಬ್ಯಾಟಿಂಗ್​ ನಡೆಸುತ್ತಿರುವ ವೆಸ್ಟ್​ ಇಂಡೀಸ್​ ಕಾವೆಮ್‌ ಹಾಜ್‌(120) ಅಮೋಘ ಶತಕದ ನೆರವಿನಿಂದ 5 ವಿಕೆಟಿಗೆ 351 ರನ್‌ ಗಳಿಸಿ ದ್ವಿತೀಯ ದಿನದಾಟ ಮುಂದುವರಿಸಿದೆ. ಇನ್ನೂ 65 ರನ್​ ಹಿನ್ನಡೆಯಲ್ಲಿದೆ. ಸದ್ಯದ ಪರಿಸ್ಥಿತಿ ನೋಡುವಾಗ ವಿಂಡೀಸ್​ ಮೊದಲ ಇನಿಂಗ್ಸ್​ನಲ್ಲಿ ಭಾರೀ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ. ಜಾಸನ್​ ಹೋಲ್ಡರ್​(23) ಮತ್ತು ಜೋಶುವಾ ಡಾ ಸಿಲ್ವಾ(32) ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ Viral Video: ನೋಡ ನೋಡ್ತಿದ್ದಂತೆ ಕುಸಿದು ಬಿತ್ತು ಕ್ಲಾಸ್‌ರೂಂ ಗೋಡೆ; ಒಳಗಿದ್ದ ಮಕ್ಕಳ ಕತೆ ಏನಾಯ್ತು ಗೊತ್ತಾ? ವಿಡಿಯೋ ಇದೆ

ಮುಂಬೈ ತಂಡ ಸೇರಲಿದ್ದಾರೆ ಬೆನ್ ಸ್ಟೋಕ್ಸ್​​

ದಕ್ಷಿಣ ಆಫ್ರಿಕಾದ ಪ್ರೀಮಿಯರ್ ಫ್ರ್ಯಾಂಚೈಸ್ ಲೀಗ್ ಎಸ್ಎ 20 ಯ ಮುಂದಿನ ಆವೃತ್ತಿಯಲ್ಲಿ ಇಂಗ್ಲೆಂಡ್ ಸ್ಟಾರ್ ಬೆನ್ ಸ್ಟೋಕ್ಸ್ (Ben Stokes) ಎಂಐ ಕೇಪ್ ಟೌನ್​ ತಂಡಕ್ಕೆ ಆಡಲು ಸಹಿ ಹಾಕಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಎಸ್ಎ 20 ಅನ್ನು 2023 ರಲ್ಲಿ ಒಟ್ಟು ಆರು ತಂಡಗಳೊಂದಿಗೆ ಪ್ರಾರಂಭಿಸಲಾಯಿತು. ಎಲ್ಲಾ ತಂಡಗಳು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಮಾಲೀಕರ ಒಡೆತನದಲ್ಲಿವೆ. ಎಂಐ ಕೇಪ್ ಟೌನ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಪಾಲುದಾರ ತಂಡವಾಗಿದೆ.

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಬೆನ್ ಸ್ಟೋಕ್ಸ್ ಎಸ್ಎ 20 ನ ಮೂರನೇ ಆವೃತ್ತಿಯಲ್ಲಿ ಕೇಪ್ ಟೌನ್ ಮೂಲದ ಫ್ರಾಂಚೈಸಿಗಾಗಿ ಆಡುವುದನ್ನು ಕಾಣಬಹುದು. ಮುಂದಿನ ಜನವರಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಆಡಲು ಇಂಗ್ಲೆಂಡ್ ಟೆಸ್ಟ್ ನಾಯಕನಿಗೆ 800,000 ಪೌಂಡ್ (ಅಂದಾಜು 8.65 ಕೋಟಿ ರೂ.) ವರೆಗೆ ಆಫರ್ ನೀಡಲಾಗಿದೆ ಎಂದು ವರದಿ ತಿಳಿಸಿದೆ. ಬೆನ್ ಸ್ಟೋಕ್ಸ್ ಇತ್ತೀಚಿನ ದಿನಗಳಲ್ಲಿ ಟಿ 20 ಯಿಂದ ದೂರವಿದ್ದರೂ, ಅವರು ಇನ್ನೂ ವಿಶ್ವದ ಅತ್ಯುತ್ತಮ ಆಲ್​ರೌಂಡರ್​ಗಳಲ್ಲಿ ಒಬ್ಬರು. ಅವರು ಇತ್ತೀಚೆಗೆ ನಿಯಮಿತವಾಗಿ ಬೌಲಿಂಗ್ ಪುನರಾರಂಭಿಸಿದ್ದಾರೆ. ಇದು ಅವರನ್ನು ಇನ್ನಷ್ಟು ಮೌಲ್ಯಯುತವಾಗಿಸುತ್ತದೆ.

Continue Reading

ಕ್ರೈಂ

Tantrik Arrest: ರೋಗ ಗುಣಪಡಿಸುವುದಾಗಿ ಹೇಳಿ ಯುವತಿಯ ತಲೆಗೆ 18 ಸೂಜಿ ಚುಚ್ಚಿದ ಮಂತ್ರವಾದಿ!

Tantrik Arrest: ವೈದ್ಯಕೀಯ ರಂಗ ಎಷ್ಟೇ ಮುಂದುವರಿದಿದ್ದರೂ ಜನ ಮಾತ್ರ ಇನ್ನೂ ಸುಧಾರಿಸಿಲ್ಲ. ಆರೋಗ್ಯದ ಸಮಸ್ಯೆ ಕಾಡಿದಾಕ್ಷಣ ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆಯುವ ಬದಲು ತಂತ್ರಿಗಳ ಮನೆಮುಂದೆ ಹೋಗಿ ನಿಲ್ಲುತ್ತಾರೆ. ಇದರಿಂದ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಿಕೊಳ್ಳುತ್ತಾರೆ. ಒಡಿಶಾದ ಯುವತಿಯೊಬ್ಬಳು ನಾಲ್ಕು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ವೈದ್ಯಕೀಯ ಚಿಕಿತ್ಸೆಯನ್ನು ಪಡೆದರೂ ಕೂಡ ಅವಳ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿಲ್ಲ. ಆಗ ಅವಳ ಕುಟುಂಬದವರು ತಂತ್ರಿ ಸಹಾಯವನ್ನು ಪಡೆಯಲು ಮುಂದಾಗಿದ್ದರು. ಇದರ ಪರಿಣಾಮ ಮಾತ್ರ ಭೀಕರ.

VISTARANEWS.COM


on

Tantrik Arrest
Koo

ತಂತ್ರವಿದ್ಯೆಗಳ ಪ್ರಯೋಗದ ಬಗ್ಗೆ ಜನರಿಗೆ ಇಂದಿಗೂ ನಂಬಿಕೆ ಇದೆ. ಹಾಗಾಗಿ ಕೆಲವು ಜನ ತಮಗೆ ಯಾವುದೇ ಸಮಸ್ಯೆಯಾದರೂ ಅದಕ್ಕಾಗಿ ಆಸ್ಪತ್ರೆಗೆ ಹೋಗುವ ಬದಲು ಭೂತ ಪ್ರೇತದ ನೆಪದಲ್ಲಿ ತಂತ್ರಿಗಳ ಬಳಿಗೆ ಹೋಗಿ ತಂತ್ರ ವಿದ್ಯೆ ಪ್ರಯೋಗಿಸುತ್ತಾರೆ. ಇದರಿಂದ ಮತ್ತಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಇದೀಗ ಅಂತಹದೊಂದು ಘಟನೆ ಒಡಿಶಾದಲ್ಲಿ ನಡೆದಿದ್ದು, ಇದರಿಂದ ಯುವತಿಯ ಸ್ಥಿತಿ ಗಂಭೀರವಾಗಿದೆ. ಒಡಿಶಾದ ಬಾಲಂಗೀರ್ ಜಿಲ್ಲೆಯಲ್ಲಿ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದ 19 ವರ್ಷದ ಯುವತಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ತಲೆಗೆ ಅನೇಕ ಸೂಜಿಗಳನ್ನು ಚುಚ್ಚಿದ ಆರೋಪದ ಮೇಲೆ ತಂತ್ರಿಯೊಬ್ಬನ್ನು (Tantrik Arrest) ಬಂಧಿಸಲಾಗಿದೆ.

Tantrik Arrest

ಈ ಘಟನೆ ಬೆಳಕಿಗೆ ಬಂದ ನಂತರ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವರಗಳ ಪ್ರಕಾರ, ಯುವತಿ ಕಳೆದ ನಾಲ್ಕು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ವೈದ್ಯಕೀಯ ಚಿಕಿತ್ಸೆಯನ್ನು ಪಡೆದರೂ ಕೂಡ ಅವಳ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗಲಿಲ್ಲ, ಆಗ ಅವಳ ಕುಟುಂಬದವರು ತಂತ್ರಿ ಸಹಾಯವನ್ನು ಪಡೆಯಲು ಮುಂದಾಗಿದ್ದಾರೆ. ಹಾಗಾಗಿ ಯುವತಿ ತನ್ನ ಹೆತ್ತವರೊಂದಿಗೆ ತಂತ್ರಿಗಳ ಬಳಿಗೆ ಬಂದಿದ್ದಾಳೆ.

ಆರೋಪಿಯನ್ನು ತಂತ್ರಿ ಸಂತೋಷ್ ರಾಣಾ ಎಂಬುದಾಗಿ ಗುರುತಿಸಲಾಗಿದೆ. ಆತ ಮಹಿಳೆಯನ್ನು ಕೋಣೆಯೊಳಗೆ ಕರೆದೊಯ್ದಿದ್ದಾನೆ. ಒಂದು ಗಂಟೆಯ ನಂತರ ಅವನು ಅವಳನ್ನು ಹೊರಗೆ ಕರೆತಂದ. ಆದರೆ ಯುವತಿಯ ಪೋಷಕರು ಆಕೆ ಮತ್ತಷ್ಟು ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ನಂತರ ಅವಳ ತಲೆಯೊಳಗೆ ಸೂಜಿಗಳನ್ನು ಪತ್ತೆ ಮಾಡಿದರು. ತನ್ನ ಮಗಳ ತಲೆಯೊಳಗೆ ಎಂಟು ಸೂಜಿಗಳನ್ನು ತೆಗೆದುಹಾಕಿದ್ದೇನೆ ಎಂಬುದಾಗಿ ಆಕೆಯ ತಂದೆ ತಿಳಿಸಿದ್ದಾರೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಸಿಟಿ ಸ್ಕ್ಯಾನ್ ನಡೆಸಲಾಯಿತು, ಆಗ ಆಕೆಯ ತಲೆಯಲ್ಲಿ ಇನ್ನೂ 10 ಸೂಜಿಗಳನ್ನು ಚುಚ್ಚಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಈ ಸಮಯದಲ್ಲಿ ಅವಳು ಪ್ರಜ್ಞೆ ತಪ್ಪಿದ್ದಳು. ಹಾಗಾಗಿ ತಲೆಗೆ ಸೂಜಿ ಚುಚ್ಚಿದ ಬಗ್ಗೆ ಆಕೆಗೆ ಹೇಳಲು ಆಗಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಬಾಲಕಿ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ; ವಿಡಿಯೊ ಮನೆಗೇ ಕಳಿಸಿದ ದುಷ್ಟರು

ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಂತ್ರಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಈ ಘಟನೆಯು ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಇದು ತಂತ್ರ ವಿದ್ಯೆಗಳ ಮೂಲಕ ನೀಡುವ ಚಿಕಿತ್ಸೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ತಿಳಿಸುತ್ತದೆ ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗದವರ ದುರ್ಬಲತೆಯನ್ನು ಎತ್ತಿ ತೋರಿಸಿದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಅರ್ಹ ವೈದ್ಯಕೀಯ ಸಹಾಯವನ್ನು ಪಡೆಯುವುದು ಉತ್ತಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ಅಂತಹ ತಂತ್ರಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

Continue Reading
Advertisement
Ravindra Jadeja
ಕ್ರಿಕೆಟ್13 mins ago

Ravindra Jadeja: ಟೀಮ್​ ಇಂಡಿಯಾ ಪರ ಜಡೇಜಾ ಇನ್ನು ಏಕದಿನ ಆಡುವುದು ಅನುಮಾನ; ಕಾರಣವೇನು?

Bangladesh protests
ವಿದೇಶ14 mins ago

Bangladesh Protests: ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ; 1000 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್‌; ಸಾವಿನ ಸಂಖ್ಯೆ 115ಕ್ಕೆ ಏರಿಕೆ

Star suvarna Ravi Shankar entered television suvarna grahamanthri
ಕಿರುತೆರೆ25 mins ago

Star Suvarna: `ಸುವರ್ಣ ಗೃಹಮಂತ್ರಿ’ಯ ಸಾರಥಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ರವಿಶಂಕರ್

Paris Olympics 2024
ಕ್ರೀಡೆ33 mins ago

Paris Olympics 2024 : ಒಲಿಂಪಿಕ್ಸ್​ಗೆ ತೆರಳಿರುವ ಭಾರತದ ಹಿರಿಯ ಮತ್ತು ಕಿರಿಯ ಸ್ಪರ್ಧಿಗಳು ಯಾರು ಗೊತ್ತೇ? ಇಲ್ಲಿದೆ ಅವರ ವಿವರ

Union Budget 2024
ದೇಶ46 mins ago

Union Budget 2024: ಸ್ಟಾಂಡರ್ಡ್‌ ಡಿಡಕ್ಷನ್‌, 80 ಸಿ ಮೊತ್ತ ಹೆಚ್ಚಳ; ಬಜೆಟ್‌ನಲ್ಲಿ ಏನೆಲ್ಲ ತರಿಗೆ ರಿಲೀಫ್?

Kanguva Movie Suriya to have 3 different looks in Siva
ಕಾಲಿವುಡ್53 mins ago

Kanguva Movie: ʻಕಂಗುವʼ ಚಿತ್ರದಲ್ಲಿ ಮೂರು ಅವತಾರಗಳಲ್ಲಿ ಮಿಂಚಲಿದ್ದಾರಂತೆ ಸೂರ್ಯ

Building Collapsed
ದೇಶ58 mins ago

Building Collapsed: ಭಾರೀ ಮಳೆಗೆ ನಾಲ್ಕು ಅಂತಸ್ತಿಗೆ ಕಟ್ಟಡ ಧರಾಶಾಹಿ; ಮಹಿಳೆ ಬಲಿ

Opposition Party leader R Ashok pressmeet about Valmiki Development Corporation scam
ಕರ್ನಾಟಕ1 hour ago

R Ashok: ವಾಲ್ಮೀಕಿ ಹಗರಣ; ಮುಖ್ಯಮಂತ್ರಿ ಏನು ಕತ್ತೆ ಕಾಯುತ್ತಿದ್ದರೇ ಎಂದ ಆರ್‌. ಅಶೋಕ್‌

King Cobra Rescue
ವೈರಲ್ ನ್ಯೂಸ್1 hour ago

King Cobra Rescue: 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಹಿಡಿದದ್ದು ಹೇಗೆ? ವಿಡಿಯೊ ನೋಡಿ

ಕ್ರೀಡೆ1 hour ago

Mohammed Shami: ಪಾಕ್​ ಮಾಜಿ ನಾಯಕ ಇಂಜಮಾಮ್ ಬೆಂಡೆತ್ತಿದ ಮೊಹಮ್ಮದ್​ ಶಮಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ1 day ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌