Viral Video: ಛೇ...ಇವರೆಂಥಾ ರಾಕ್ಷಸರು! ಕೈ ಕಾಲು ಕಟ್ಟಿ ಥಳಿಸಿ ದಲಿತ ಯುವಕನ ಹತ್ಯೆ - Vistara News

ವೈರಲ್ ನ್ಯೂಸ್

Viral Video: ಛೇ…ಇವರೆಂಥಾ ರಾಕ್ಷಸರು! ಕೈ ಕಾಲು ಕಟ್ಟಿ ಥಳಿಸಿ ದಲಿತ ಯುವಕನ ಹತ್ಯೆ

Viral Video: ಅಕ್ರಮ ಮದ್ಯ ದಂಧೆಕೋರರು ರಾಮೇಶ್ವರ ವಾಲ್ಮೀಕಿಯನ್ನು ಅಪಹರಿಸಿದ್ದರು, ಇದಾದ ಬಳಿಕ ನಾಲ್ಕೈದು ಜನ ಸೇರಿಕೊಂಡು ಆತನ ಕೈ ಮತ್ತು ಕಾಲುಗಳನ್ನು ಕಟ್ಟಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನೂ ಕೂಡ ಮಾಡಿದ್ದಾರೆ. ವಿಡಿಯೋದಲ್ಲಿ ವಾಲ್ಮೀಕಿಯ ಕಾಲುಗಳನ್ನು ಹಗ್ಗದಿಂದ ಒಂದು ರಾಡ್‌ಗೆ ಕಟ್ಟಿ ಮತ್ತೊಬ್ಬ ಆತನ ಕೈಗಳನ್ನು ಹಿಡಿದಿರುತ್ತಾನೆ. ಮತ್ತೊಬ್ಬ ಕಿಡಿಗೇಡಿ ಕೋಲಿನಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಾಲ್ಮೀಕಿ ಕೊನೆಯುಸಿಳೆದಿದ್ದಾನೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜಸ್ಥಾನ: ದಲಿತ ಯುವಕ(Dalit Youth)ನನ್ನು ಅಪಹರಿಸಿ ಹಗ್ಗದಲ್ಲಿ ಕಟ್ಟಿ ಥಳಿಸಿ ಕೊಂದಿರುವ ಅಮಾನವೀಯ ಘಟನೆ ರಾಜಸ್ಥಾನ(Rajasthan)ದಲ್ಲಿ ನಡೆದಿದೆ. ಜುನ್‌ಜುನ್‌ ಜಿಲ್ಲೆಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ರಾಮೇಶ್ವರ ವಾಲ್ಮೀಕಿ(Rameshwar Valmiki) ಎಂದು ಗುರುತಿಸಲಾಗಿದೆ. ಇನ್ನು ಈ ಶಾಕಿಂಗ್‌ ಘಟನೆಯ ವಿಡಿಯೋವನ್ನು(Viral Video) ಸ್ವತಃ ದುಷ್ಕರ್ಮಿಗಳೇ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದಾದ ಬಳಿಕ ಆಪ್‌ ಮುಖಂಡ ಸಂಜಯ್‌ ಸಿಂಗ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಿಡಿ ಕಾರಿದ್ದಾರೆ.

ಘಟನೆ ವಿವರ:

ಮೇ ̆̆14 ರಂದು ಜುನ್‌ಜನ್‌ ಜಿಲ್ಲೆಯ ಬಲೋಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಕ್ರಮ ಮದ್ಯ ದಂಧೆಕೋರರು ರಾಮೇಶ್ವರ ವಾಲ್ಮೀಕಿಯನ್ನು ಅಪಹರಿಸಿದ್ದರು, ಇದಾದ ಬಳಿಕ ನಾಲ್ಕೈದು ಜನ ಸೇರಿಕೊಂಡು ಆತನ ಕೈ ಮತ್ತು ಕಾಲುಗಳನ್ನು ಕಟ್ಟಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನೂ ಕೂಡ ಮಾಡಿದ್ದಾರೆ. ವಿಡಿಯೋದಲ್ಲಿ ವಾಲ್ಮೀಕಿಯ ಕಾಲುಗಳನ್ನು ಹಗ್ಗದಿಂದ ಒಂದು ರಾಡ್‌ಗೆ ಕಟ್ಟಿ ಮತ್ತೊಬ್ಬ ಆತನ ಕೈಗಳನ್ನು ಹಿಡಿದಿರುತ್ತಾನೆ. ಮತ್ತೊಬ್ಬ ಕಿಡಿಗೇಡಿ ಕೋಲಿನಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಾಲ್ಮೀಕಿ ಕೊನೆಯುಸಿಳೆದಿದ್ದಾನೆ.

ಬಿಜೆಪಿ ವಿರುದ್ಧ ಆಪ್‌ ಕಿಡಿ

ಇನ್ನು ವಾಲ್ಮೀಕಿ ಮೇಲಿನ ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವ ಆಪ್‌ ಮುಖಂಡ ಸಂಜಯ್‌ ಸಿಂಗ್‌ ಪ್ರಧಾನಿ ಮೋದಿ ಮತ್ತು ರಾಜಸ್ಥಾನ ಸಿಎಂ ಭಜನ್‌ಲಾಲ್‌ ವಿರುದ್ಧ ಕಿಡಿ ಕಾರಿದ್ದಾರೆ. ಇದು ರಾಜಸ್ಥಾನದಲ್ಲಿ ಡಬಲ್‌ ಎಂಜಿನ್‌ ಸರ್ಕಾರದ ನೈಜ ಸ್ಥಿತಿ. ದಲಿತರ ಮೀಸಲಾತಿ ಕಿತ್ತುಕೊಂಡು ಅವರು ಹೊಡೆದು ಬಡಿದು ಕೊಲ್ಲಲು ಬಿಜೆಪಿಗೆ 400 ಸ್ಥಾನಗಳು ಬೇಕಾಗಿವೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:Mother Dies: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು; 35 ಲಕ್ಷ ಬಿಲ್‌ ಕಟ್ಟಿ ಮೃತದೇಹ ತೆಗೆದುಕೊಳ್ಳಿ ಎಂದ ಆಸ್ಪತ್ರೆ!

ಐವರ ಬಂಧನ

ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐವರು ಕಿಡಿಗೇಡಿಗಳನ್ನು ಅರೆಸ್ಟ್‌ ಮಾಡಿದ್ದಾರೆ. ದೀಪೇಂದ್ರ ಅಲಿಯಾಸ್ ಚಿಂಟು ರಜಪೂತ್, ಪ್ರವೀಣ್ ಅಲಿಯಾಸ್ ಪಿಕೆ ಮೇಘವಾಲ್, ಪ್ರವೀಣ್ ಅಲಿಯಾಸ್ ಬಾಬಾ ಮೇಘವಾಲ್, ಸುಭಾಷ್ ಅಲಿಯಾಸ್ ಚಿಂಟು ಮೇಘವಾಲ್, ಮತ್ತು ಸತೀಶ್ ಅಲಿಯಾಸ್ ಸುಖ ಮೇಘವಾಲ್ ಬಂಧಿತ ಆರೋಪಿಗಳು. ಆರೋಪಿಗಳು ಈ ಹಿಂದೆಯೂ ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬ ವರದಿಗಳಿವೆ. ಸೂರಜ್‌ಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

Viral News: ಮುಖಕ್ಕೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಅಮ್ಜದ್ ಅರೆಸ್ಟ್!

Viral News: ಕ್ರೀಂ, ಲೋಷನ್ ಹಚ್ಚಿ ಫೇಸ್ ಮಸಾಜ್ ಮಾಡುವುದರ ಬಗ್ಗೆ ಕೇಳಿರುತ್ತೀರಿ. ಆದರೆ ಉತ್ತರಪ್ರದೇಶದ ಈ ಮುಸ್ಲಿಂ ಕ್ಷೌರಿಕ ತನ್ನ ಬಳಿ ಫೇಸ್ ಮಸಾಜ್ ಮಾಡಿಸಿಕೊಳ್ಳಲು ಬಂದ ಯುವಕನ ಮುಖಕ್ಕೆ ಎಂಜಲು ಹಚ್ಚಿ ಮಸಾಜ್ ಮಾಡಿದ್ದಾನೆ, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈತನ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

VISTARANEWS.COM


on

Viral News
Koo

ಹುಡುಗಿಯರ ಹಾಗೇ ಹುಡುಗರಿಗೂ ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಹಾಗಾಗಿ ಹುಡುಗಿಯರು ಬ್ಯೂಟಿ ಪಾರ್ಲರ್ ನಲ್ಲಿ ಫೇಸ್ ಮಸಾಜ್, ಫೇಶಿಯಲ್ ಮಾಡಿಸಿಕೊಂಡ ಹಾಗೆ ಹುಡುಗರು ಕ್ಷೌರದ ಅಂಗಡಿಯಲ್ಲಿ ಫೇಸ್ ಮಸಾಜ್, ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬ ಕ್ಷೌರದಂಗಡಿಯಲ್ಲಿ ಫೇಸ್ ಮಸಾಜ್ ಮಾಡಿಕೊಳ್ಳಲು ಹೋಗಿ ಅವಾಂತರ ಮಾಡಿಕೊಂಡ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral News) ಆಗಿದೆ.

ಫೇಸ್‌ ಮಸಾಜ್‌ ಮಾಡಿಕೊಂಡರೆ ಮುಖದಲ್ಲಿ ರಕ್ತಸಂಚಲನ ಚೆನ್ನಾಗಿ ಆಗುತ್ತದೆ. ದಣಿದ ಮುಖಕ್ಕೆ ರಿಲೀಫ್‌ ಆಗುತ್ತೆ ಎಂದು ಕೆಲವರು ದುಡ್ಡು ಸುರಿದು ಮಸಾಜ್‌ ಮಾಡಿಕೊಳ್ಳುತ್ತಾರೆ. ಹೀಗೆ ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿನ ಕ್ಷೌರದಂಗಡಿಗೆ ವ್ಯಕ್ತಿಯೊಬ್ಬ ಫೇಸ್ ಮಸಾಜ್ ಮಾಡಿಕೊಳ್ಳಲು ಹೋಗಿದ್ದಾನೆ. ಆದರೆ ಕ್ಷೌರದಂಗಡಿಯವನು ಕ್ರೀಂ, ಲೋಷನ್‌ಗಳನ್ನು ಹಚ್ಚಿ ಮುಖಕ್ಕೆ ಮಸಾಜ್‌ ಮಾಡುವುದರ ಬದಲು ಎಂಜಲು ಉಗಿದು ಮಸಾಜ್‌ ಮಾಡಿದ್ದಾನಂತೆ. . ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆರೋಪಿ ಅಮ್ಜದ್ ಎಂಬುದಾಗಿ ತಿಳಿದುಬಂದಿದೆ. @TruestoryUP ಎಂಬ ಹೆಸರಿನ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಈತನ ಘೋರ ಕೃತ್ಯದ ದೃಶ್ಯ ವೈರಲ್ ಆಗಿದ್ದು, ಈತನ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:James Wan: ಜೇಮ್ಸ್‌ ವಾನ್‌ ನಿರ್ದೇಶನದ ಈ 6 ಥ್ರಿಲ್ಲರ್‌ ಚಿತ್ರಗಳನ್ನು ತಪ್ಪದೇ ನೋಡಿ!

ಜೂನ್ 8ರಂದು ಈ ವಿಡಿಯೊ ಹಂಚಿಕೊಂಡಿದ್ದು, ಇದನ್ನು16 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಮತ್ತು ಈತನ ಕೃತ್ಯದ ವಿರುದ್ಧ ವೀಕ್ಷಕರು ಪ್ರತಿಕ್ರಿಯೆ ನೀಡಿದ್ದಾರೆ.

Continue Reading

Latest

Viral Video: ನಾಯಿ ಜತೆ ವಾಕಿಂಗ್ ನೋಡಿರುತ್ತೀರಿ, ಹುಲಿ ಜತೆ? ಈ ವಿಡಿಯೊ ನೋಡಿ!

Viral Video: ವಾಕಿಂಗ್ ಮಾಡಿದರೆ ದೇಹದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.ನಗರದ ಮಂದಿ ವಾಕಿಂಗ್‌ಗೆ ತಾವು ಪ್ರೀತಿಯಿಂದ ಸಾಕಿದ ನಾಯಿಯನ್ನು ಕೂಡ ಕರೆದುಕೊಂಡು ಹೋಗುವುದು ನಾವು ಕಂಡಿರುತ್ತೇವೆ. ಇಂತಹ ಸಾಕು ಪ್ರಾಣಿಯ ಜೊತೆ ಎಲ್ಲರೂ ವಾಕಿಂಗ್ ಹೋಗುತ್ತಾರೆ. ಆದರೆ ದುಬೈನ ಈ ಬೆಡಗಿ ಮಾತ್ರ ಮನುಷ್ಯರು ಬೆಚ್ಚಿಬೀಳುವ ಹುಲಿಯ ಜೊತೆ ಪಾರ್ಕ್‌ನಲ್ಲಿ ವಾಕಿಂಗ್ ಮಾಡಿದರೆ ನೋಡಿದವರ ಎದೆ ಝಲ್ ಎನ್ನದೆ ಇರುತ್ತಾ ಹೇಳಿ!

VISTARANEWS.COM


on

Viral Video
Koo

ಹುಲಿ ಎಂದರೆ ಎಲ್ಲರೂ ಭಯಭೀತರಾಗುತ್ತಾರೆ. ಯಾಕೆಂದರೆ ಹುಲಿ ತನ್ನ ಆಹಾರಕ್ಕಾಗಿ ಪ್ರಾಣಿಗಳು ಮಾತ್ರವಲ್ಲ ಮನುಷ್ಯರನ್ನೂ ಕೊಂದು ತಿನ್ನುತ್ತದೆ. ಹಾಗಾಗಿ ಹುಲಿಯನ್ನು ಎದುರು ನೋಡುವುದು ಬೇಡ ದೂರದಲ್ಲಿ ಅದರ ಗರ್ಜನೆ ಕೇಳಿದರೂ ಸಾಕು ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಾರೆ. ಅಂತಹದರಲ್ಲಿ ದುಬೈನಲ್ಲಿ ಮಹಿಳೆಯೊಬ್ಬಳು ವಾಕಿಂಗ್‌ಗಾಗಿ ಹುಲಿಯೊಂದಿಗೆ ನಡೆದುಕೊಂಡು ಬಂದರೆ ಅಲ್ಲಿದ್ದವರ ಪರಿಸ್ಥಿತಿ ಹೇಗಿರಬೇಡ ಹೇಳಿ. ಈ ಮಹಿಳೆ ಹುಲಿ ಜೊತೆ ನಡೆದುಕೊಂಡು ಬರುವ ದೃಶ್ಯ ಎಲ್ಲರಲ್ಲೂ ಭಯವನ್ನು ಹುಟ್ಟಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ (Viral Video) ಆಗಿದೆ.

ನಾಯಿ ಕುತ್ತಿಗೆಗೆ ಚೈನ್‌ ಕಟ್ಟಿಕೊಂಡು ವಾಕಿಂಗ್‌ಗೆ ಹೋಗುವವರು ನಿಮಗೆ ರಸ್ತೆಯಲ್ಲಿ ನೂರಾರು ಜನರು ಸಿಗುತ್ತಾರೆ. ಆದರೆ ದುಬೈಯಲ್ಲಿ ಮಹಿಳೆಯೊಬ್ಬಳು ವಾಕಿಂಗ್‌ಗೆ ಬರುವಾಗ ಕಾಡಿನಲ್ಲಿರಬೇಕಾದ ಹುಲಿಯನ್ನು ತನ್ನ ಜೊತೆ ಕರೆದುಕೊಂಡು ಬಂದರೆ ಹೇಗಿರಬೇಡ ಹೇಳಿ. ಹುಲಿಯ ಕುತ್ತಿಗೆಗೆ ಸರಪಳಿಯನ್ನು ಕಟ್ಟಿ ನಾಯಿಯಂತೆ ಕರೆದುಕೊಂಡು ಬರುತ್ತಿರುವ ಈಕೆಯ ಧೈರ್ಯ ನೋಡಿ ಎಲ್ಲರೂ ಬೆಕ್ಕಸ ಬೆರಗಾಗಿದ್ದಾರೆ. ಹುಲಿಯ ಜೊತೆ ವಾಕಿಂಗ್‌ಗೆ ಹೋಗುವುದನ್ನು ವಿಡಿಯೊ ಮಾಡಿ “ ನನ್ನ ಮುದ್ದಿನ ಹುಲಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದೇನೆ “ ಎಂದು ಶೀರ್ಷಿಕೆ ಬರೆದು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.

ಇವಳ್ಯಾರು ಎಂಬ ಕುತೂಹಲ ನಿಮಗೂ ಆಗಿರಬಹುದು ಅಲ್ವಾ…?ಈಕೆ ಇನ್ ಸ್ಟಾಗ್ರಾಂ, ಟಿಕ್ ಟಾಕ್ ಮತ್ತು ಯೂಟ್ಯೂಬ್ ನಲ್ಲಿ ಜಪ್ರಿಯರಾಗಿದ್ದ ನಾಡಿಯಾ ಖಾರ್ ಎನ್ನಲಾಗಿದೆ. ಈಕೆ ಫ್ಯಾಷನ್ ವಿಷಯಕ್ಕೆ ಹೆಸರುವಾಸಿಯಾಗಿದ್ದಾಳೆ. ಆಗಾಗ ಐಷರಾಮಿ ಕಾರುಗಳು, ವ್ಲಾಗ್ ಗಳು ಮತ್ತು ಕಿರು ವಿಡಿಯೊಗಳನ್ನು ಪ್ರದರ್ಶಿಸುತ್ತಿರುತ್ತಾಳೆ. ಇದೀಗ ಅವಳು ದುಬೈನಲ್ಲಿ ಹುಲಿಯ ಜೊತೆಗೆ ನಡೆದುಕೊಂಡು ಬರುತ್ತಿರುವ ವಿಡಿಯೊ ಪೋಸ್ಟ್ ಮಾಡಿದ್ದಾಳೆ. ವಿಡಿಯೊದಲ್ಲಿ ಅವಳು ಮೃಗಾಲಯದ ಒಳಗೆ ಮತ್ತು ದುಬೈನ ಸಾರ್ವಜನಿಕ ಉದ್ಯಾನವನದಲ್ಲಿ ಹುಲಿಯೊಂದಿಗೆ ನಡೆಯುತ್ತಿರುವ ವಿಡಿಯೊ ವೈರಲ್ ಆಗಿದೆ. ಇದಕ್ಕೆ 6 ಮಿಲಿಯನ್ ವೀಕ್ಷಣೆ ಮತ್ತು 100000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ಹಾಗೇ ಈ ವಿಡಿಯೊಗೆ ಹೆಚ್ಚಿನ ಪ್ರತಿಕ್ರಿಯೆ ಬಂದಿದ್ದು, ಕೆಲವರು ಹುಲಿಯನ್ನು ನಾಯಿಯಂತೆ ಸಾಕಿಕೊಂಡಿರುವುದಕ್ಕೆ ಆಕೆಯ ಕೃತ್ಯವನ್ನು ಟೀಕಿಸಿದರೆ, ಕೆಲವರು ಅದನ್ನು ಕಂಡು ಆಶ್ಚರ್ಯಚಕಿತರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು “ಪ್ರಾಣಿಗಳ ಕ್ರೌರ್ಯವನ್ನು ಕ್ಷಮಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ! ಆಕೆ ಕೊಟ್ಟ ಕಾರಣ ಮಜವಾಗಿದೆ!

ದುಬೈಯಲ್ಲಿ ಕ್ರೂರ ಪ್ರಾಣಿಗಳನ್ನು ಸಾಕು ಪ್ರಾಣಿಗಳಂತೆ ಸಾಕುತ್ತಾರೆ. ಇಲ್ಲಿ ಹುಲಿ, ಸಿಂಹ, ಕರಡಿಗಳಂತಹ ನರಭಕ್ಷಕ ಪ್ರಾಣಿಗಳನ್ನು ಪಳಗಿಸಿ ಖಾಸಗಿ ಮೃಗಾಲಯದಲ್ಲಿ ಸಾಕುತ್ತಾರೆ. ಅದರ ಜೊತೆಗೆ ಕೋತಿ ಮತ್ತು ಜಿರಾಫೆಗಳಂತಹ ಪ್ರಾಣಿಗಳಿಗೂ ವಸತಿ ನೀಡುತ್ತಾರೆ. ಇದು ಅವರಿಗೆ ಪ್ರಾಣಿಗಳ ಮೇಲಿದ್ದ ಕಾಳಜಿಯನ್ನು ತೋರಿಸುತ್ತದೆ.

ಈಗ ಸೋಷಿಯಲ್‌ ಮೀಡಿಯಾದ್ದೇ ಹವಾ. ತಿಂದಿದ್ದು, ಕುಡಿದಿದ್ದು, ಹೆತ್ತಿದ್ದು ಎಲ್ಲವನ್ನೂ ಇದರಲ್ಲಿ ಹಾಕುತ್ತಾರೆ. ಆ ದೇಶದಲ್ಲಿ ಬೆಡಗಿಯೊಬ್ಬಳು ಹಸಿ ಹಾವನ್ನೇ ತಟ್ಟೆಯಲ್ಲಿಟ್ಟುಕೊಂಡು ತಿಂದರೆ, ಮತ್ತೊಬ್ಬಳು ಹರೆಯದ ಹುಡುಗಿ ಅಜ್ಜನನ್ನೇ ಪ್ರೀತಿಸಿ ಮದುವೆಯಾದಳು. ಈಗ ಲೈಕ್ಸ್‌, ಕಾಮೆಂಟ್‌ಗಳಿಗಾಗಿ ಏನು ಬೇಕಾದರೂ ಮಾಡುವುದಕ್ಕೆ ಸೈ ಅನ್ನುವ ಹಂತದಲ್ಲಿ ನಾವಿದ್ದೇವೆ.

Continue Reading

ಕ್ರೈಂ

Bribe Case: ಕಸ ಗುಡಿಸುತ್ತಲೇ ಉನ್ನತ ಹುದ್ದೆಗೇರಿದ್ದ ಮಹಿಳೆ ಕಸ ಗುಡಿಸುವವರಿಂದಲೇ ಲಂಚ ಸ್ವೀಕರಿಸುವಾಗ ಬಂಧನ!

ರಾಜ್ಯ ನಾಗರಿಕ ಸೇವಾ ಪರೀಕ್ಷೆ ಬರೆದು ಎಲ್ಲರಿಗೂ ಮಾದರಿಯಾಗಿದ್ದ ಸ್ವೀಪರ್ ಆಶಾ ಕಂದರ ಈಗ ಭಾರೀ ಲಂಚ (Bribe Case) ಪಡೆದು ಉದ್ಯೋಗ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳವು ಅವರನ್ನು 1.75 ಲಕ್ಷ ರೂಪಾಯಿ ಲಂಚದೊಂದಿಗೆ ಬಂಧಿಸಿದೆ.

VISTARANEWS.COM


on

By

Bribe Case
Koo

ಜೋಧ್‌ಪುರ: ಕೆಲವು ವರ್ಷಗಳ ಹಿಂದೆ ಕಸ ಗುಡಿಸುವ (sweeper) ಕೆಲಸ ಮಾಡುತ್ತಿದ್ದು, ಬಳಿಕ ರಾಜಸ್ಥಾನ (Rajasthan) ಆಡಳಿತ ಸೇವೆ (RAS) ಪರೀಕ್ಷೆಯಲ್ಲಿ (Exam) ಉತ್ತೀರ್ಣರಾಗಿ ಸುದ್ದಿಯಾಗಿದ್ದ ಆಶಾ ಕಂದರ (ಭಾಟಿ) (Asha Kandara) ಈಗ ಮತ್ತೆ ಗಮನ ಸೆಳೆದಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಾಗಿರುವುದು ಲಂಚ (Bribe Case) ಪಡೆದಿರುವುದರಿಂದ. ಭಾರೀ ಲಂಚ ಪಡೆದು ಉದ್ಯೋಗ ದಂಧೆ ನಡೆಸುತ್ತಿದ್ದ ಆಶಾ ಅವರನ್ನು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (state Anti-Corruption Bureau) ಬಂಧಿಸಿದೆ. ವಿಶೇಷವೆಂದರೆ ಅವರು ಕಸ ಗುಡಿಸುವ ಕೆಲಸ ಕೊಡಿಸುವಾಗಿ ಲಂಚ ಪಡೆದು ಸಿಕ್ಕಿ ಬಿದ್ದಿದ್ದಾರೆ.

ರಾಜ್ಯ ನಾಗರಿಕ ಸೇವಾ ಪರೀಕ್ಷೆ ಬರೆದು ಎಲ್ಲರಿಗೂ ಮಾದರಿಯಾಗಿದ್ದ ಅವರ ಈ ಕ್ರಮಕ್ಕೆ ಸಾಕಷ್ಟು ಟೀಕೆಯೂ ವ್ಯಕ್ತವಾಗಿದೆ. ಜೂನ್ 12ರಂದು ರಾತ್ರಿ ಭ್ರಷ್ಟಾಚಾರ ನಿಗ್ರಹ ದಳವು 1.75 ಲಕ್ಷ ರೂಪಾಯಿ ಲಂಚದೊಂದಿಗೆ ಆಶಾ ಅವರನ್ನು ಬಂಧಿಸಿದೆ ಎಂದು ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಜೈಪುರದ ಹೆರಿಟೇಜ್ ನಗರ ನಿಗಮದಲ್ಲಿ ಕೆಲಸ ಮಾಡುತ್ತಿರುವ ಆಶಾ ಅವರು ಸ್ವೀಪರ್ ನೇಮಕಾತಿಗೆ ಬದಲಾಗಿ ಲಂಚ ಸ್ವೀಕರಿಸುತ್ತಿದ್ದಾರೆ ಎಂಬ ಮಾಹಿತಿ ಎಸಿಬಿಗೆ ಲಭಿಸಿದ್ದರಿಂದ ಅವರನ್ನು ಬಂಧಿಸಲಾಗಿದೆ.


ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಪ್ರಕಾರ, ಆಶಾ ಅವರು ಜೂನ್ 11ರಂದು ರಾತ್ರಿ ಜೈಪುರದಿಂದ ಪಾಲಿಗೆ ಹೊರಟರು. ಆದರೆ ಅವರ ಮಗ ಹಣದೊಂದಿಗೆ ಜೈತರನ್‌ಗೆ ಬಂದಿದ್ದು, ಈತನೊಂದಿಗೆ ಯೋಗೇಂದ್ರ ಚೌಧರಿ ಎಂಬ ಬ್ರೋಕರ್ ಕೂಡ ಇದ್ದರು. ಜೈತರನ್ ಬಾರ್‌ನ ಹೃದಯಭಾಗದಲ್ಲಿರುವ ಹೊಟೇಲ್ ವೊಂದರಲ್ಲಿ ಇಬ್ಬರೂ ತಂಗಿದ್ದರು.
ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಇನ್ಸ್‌ಪೆಕ್ಟರ್ ಕಾಂಚನ್ ಭಾಟಿ ಅವರು 1.75 ಲಕ್ಷ ರೂ. ನಗದು ಹಣದೊಂದಿಗೆ ಆಶಾ ಅವರನ್ನು ಬಂಧಿಸಲಾಗಿದೆ. ಅವರು ಮೂರೂವರೆ ಲಕ್ಷಕ್ಕೆ ಉದ್ಯೋಗ ಒಪ್ಪಂದ ಮಾಡಿಕೊಂಡಿರುವುದಾಗಿ ಎಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ: Anekal News : ಯುವತಿ ಕೈ ಬಲಿ ಪಡೆದ ಅಕ್ರಮ ಡ್ರೈ ಕ್ಲೀನಿಂಗ್ ಕಾರ್ಖಾನೆ; ಚಿಕಿತ್ಸೆ ಕೊಡಿಸದೆ ಮಾಲೀಕ ಎಸ್ಕೇಪ್‌

ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಆಶಾ 2018ರಲ್ಲಿ ಪ್ರಮುಖ ಆರ್‌ಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನಂತರ ಸುದ್ದಿಯಾಗಿದ್ದರು. 2021ರಲ್ಲಿ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಒಂಟಿ ತಾಯಿಯಾದ ಆಶಾ ಅವರು ಐಎಎಸ್ ಪರೀಕ್ಷೆಗಳಿಗೆ ತಯಾರಾಗುವುದಾಗಿ ಹೇಳಿದ್ದರು.

ವಿದ್ಯುತ್ ಶಾಕ್ ನಿಂದ ಬಾಲಕ ಸಾವು

ವಿದ್ಯುತ್ ಶಾಕ್‌ನಿಂದ 7ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಆಕಾಶ್ (13) ಮೃತ ದುರ್ದೈವಿ.

ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಆವರಣದ ನೇರಳೆ ಮರದಲ್ಲಿ ಹಣ್ಣು ಕೀಳಲು ಆಕಾಶ್ ಮರ ಹತ್ತಿದ್ದ. ಈತನ ಜತೆಗೆ ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು. ಹಣ್ಣು ಕೀಳುವಾಗ ಆಕಾಶ್‌ ಮರದಿಂದ ಜಾರಿ ಬೀಳುತ್ತಿದ್ದ. ಈ ವೇಳೆ ಅಚಾನಕ್‌ ಆಗಿ ವಿದ್ಯುತ್ ತಂತಿ ಹಿಡಿದಿದ್ದಾನೆ. ಇದರಿಂದ ಕರೆಂಟ್‌ ಶಾಕ್‌ ಆಗಿ ಆತ ಕೆಳಗೆ ಬಿದ್ದಿದ್ದಾನೆ.

ಕೂಡಲೇ ಅಲ್ಲಿದ್ದವರು ಆಕಾಶ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕಾಶ್ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ವಿದೇಶ

Gold Heist: ಜ್ಯುವೆಲರಿ ಶಾಪ್‌ಗೆ ನುಗ್ಗಿ ಚಿನ್ನ ಕದ್ದ 20 ಕಳ್ಳರು; ಸಿನಿಮಾ ಸ್ಟೈಲಲ್ಲೇ ದರೋಡೆ ಮಾಡಿದ ವಿಡಿಯೊ ಇಲ್ಲಿದೆ!

Gold Heist: ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಚಿನ್ನಾಭರಣಗಳ ಮಳಿಗೆಗೆ ನುಗ್ಗಿದ 20 ಮುಸುಕುಧಾರಿ ಧರೋಡೆಕೋರರು, ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಜೂನ್‌ 12ರಂದು ಮಧ್ಯರಾತ್ರಿ ಇವರು ಮಳಿಗೆಗೆ ನುಗ್ಗಿದ್ದಾರೆ. ಮುಖದ ತುಂಬ ಮುಸುಕು ಧರಿಸಿದ್ದ, ಕೈಯಲ್ಲಿ ಸುತ್ತಿಗೆಗಳನ್ನು ಹಿಡಿದುಕೊಂಡೇ ಬಂದಿದ್ದ ದರೋಡೆಕೋರರು, ಅಂಗಡಿಯಲ್ಲಿ ಗ್ಲಾಸ್‌ಗಳನ್ನು ಒಡೆದು, ಅವಸರದಲ್ಲಿಯೇ ಆಭರಣಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

VISTARANEWS.COM


on

Gold Heist
Koo

ವಾಷಿಂಗ್ಟನ್:‌ ಬ್ಯಾಂಕ್‌ಗೆ ನುಗ್ಗಿ ಕೋಟ್ಯಂತರ ರೂಪಾಯಿಯನ್ನು ದರೋಡೆ ಮಾಡುವ ಮನಿ ಹೈಸ್ಟ್‌ (Money Heist) ಎಂಬ ರೋಚಕ ವೆಬ್‌ ಸಿರೀಸ್‌ಅನ್ನು ನೀವು ನೋಡಿರಬಹುದು. ಮಾಸ್ಟರ್‌ ಪ್ಲಾನ್‌ ಮೂಲಕ ದರೋಡೆ ಮಾಡುವ ಸಿರೀಸ್‌ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದೆ. ಆದರೆ, ಅಮೆರಿಕದಲ್ಲಿ ಮನಿ ಹೈಸ್ಟ್‌ ಮಾದರಿಯಲ್ಲಿಯೇ ಸುಮಾರು 20 ದರೋಡೆಕೋರರು ಚಿನ್ನಾಭರಣಗಳ ಮಳಿಗೆಗೆ ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ (Gold Heist) ಮಾಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಹೌದು, ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಚಿನ್ನಾಭರಣಗಳ ಮಳಿಗೆಗೆ ನುಗ್ಗಿದ 20 ಮುಸುಕುಧಾರಿ ಧರೋಡೆಕೋರರು, ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಜೂನ್‌ 12ರಂದು ಮಧ್ಯರಾತ್ರಿ ಇವರು ಮಳಿಗೆಗೆ ನುಗ್ಗಿದ್ದಾರೆ. ಮುಖದ ತುಂಬ ಮುಸುಕು ಧರಿಸಿದ್ದ, ಕೈಯಲ್ಲಿ ಸುತ್ತಿಗೆಗಳನ್ನು ಹಿಡಿದುಕೊಂಡೇ ಬಂದಿದ್ದ ದರೋಡೆಕೋರರು, ಅಂಗಡಿಯಲ್ಲಿ ಗ್ಲಾಸ್‌ಗಳನ್ನು ಒಡೆದು, ಅವಸರದಲ್ಲಿಯೇ ಆಭರಣಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಇಡೀ ಕಳ್ಳತನದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಲ್ಲಿದೆ ದರೋಡೆಯ ವಿಡಿಯೊ

ದರೋಡೆಕೋರರು ಮೊದಲು ಜ್ಯುವೆಲರಿ ಸ್ಟೋರ್‌ನ ಬಾಗಿಲನ್ನು ಒದ್ದು, ಸುತ್ತಿಗೆಯಿಂದ ಹೊಡೆದು ಮುರಿದುಹಾಕಿದ್ದಾರೆ. ಏಕಕಾಲಕ್ಕೆ ಅವರು ಮಳಿಗೆಗೆ ನುಗ್ಗಿದ್ದು, ಪ್ರತಿಯೊಂದು ಗಾಜುಗಳನ್ನು ಒಡೆದು, ಚಿನ್ನ, ವಜ್ರದ ಆಭರಣಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೆಲವೇ ಕೆಲವು ನಿಮಿಷಗಳಲ್ಲಿ ಇಡೀ ಮಳಿಗೆಯ ಆಭರಣಗಳನ್ನು ಗುಡಿಸಿ ಗುಂಡಾಂತರ ಮಾಡಿದ್ದಾರೆ.

ಬಂಧಿತ ಆರೋಪಿಗಳು

ದರೋಡೆಕೋರರು ಹಲವು ಕಾರುಗಳಲ್ಲಿ ಬಂದು ದರೋಡೆ ಮಾಡಿದ್ದಾರೆ. ಕೂಡಲೇ ಪೊಲೀಸರು ಇವರ ಕಾರುಗಳನ್ನು ಬೆನತ್ತಿದರೂ ಕೇವಲ ಐವರು ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಬಂಧಿತರಿಂದ ಕೆಲ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಐವರನ್ನೂ ಜೈಲಿಗೆ ಹಾಕಿದ್ದಾರೆ. ದರೋಡೆಕೋರರು ಕದ್ದಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ ಎಷ್ಟು ಎಂಬುದು ಇದುವರೆಗೆ ಗೊತ್ತಿಲ್ಲ. ಮಳಿಗೆಯಲ್ಲಿ ಕಳ್ಳತನ ಮಾಡಲು ದರೋಡೆಕೋರರು ಹಲವು ದಿನಗಳಿಂದ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಉಳಿದ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: Robbery Case: ನಗರದಲ್ಲಿ ಬೀಡು ಬಿಟ್ಟಿದೆ ತುಪ್ಪ ಕಳ್ಳತನ ಮಾಡೋ ಗ್ಯಾಂಗ್; ನಂದಿನಿ ಪಾರ್ಲರ್‌, ಸೂಪರ್ ಮಾರ್ಕೆಟ್‌ ಇವರ ಟಾರ್ಗೆಟ್‌

Continue Reading
Advertisement
Apple With sticker
Latest4 mins ago

Apple With sticker: ಸೇಬು ಹಣ್ಣುಗಳ ಮೇಲೆ ಸ್ಟಿಕ್ಕರ್; ಏನಿದರ ಹಿಂದಿರುವ ರಹಸ್ಯ?

Viral News
Latest4 mins ago

Viral News: ಮುಖಕ್ಕೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಅಮ್ಜದ್ ಅರೆಸ್ಟ್!

Viral Video
Latest16 mins ago

Viral Video: ನಾಯಿ ಜತೆ ವಾಕಿಂಗ್ ನೋಡಿರುತ್ತೀರಿ, ಹುಲಿ ಜತೆ? ಈ ವಿಡಿಯೊ ನೋಡಿ!

Health Tips
Latest20 mins ago

Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Temple Bell
ಧಾರ್ಮಿಕ25 mins ago

Temple Bell: ದೇವಾಲಯದಿಂದ ಹಿಂತಿರುಗುವಾಗ ಗಂಟೆ ಬಾರಿಸಲೇಬಾರದು ಯಾಕೆ ಗೊತ್ತೇ?

Morning Nutrition
ಆರೋಗ್ಯ28 mins ago

Morning Nutrition: ಆರೋಗ್ಯಕರ ಆಗಿರಬೇಕಿದ್ದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?

Karnataka Weather Forecast
ಮಳೆ58 mins ago

Karnataka Weather : ರಾಜ್ಯಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ; ಬಿರುಗಾಳಿ ಸಾಥ್‌

Siddaramaiah
ಸಂಪಾದಕೀಯ1 hour ago

ವಿಸ್ತಾರ ಸಂಪಾದಕೀಯ: ಬೆಲೆ ಏರಿಕೆ ಮಾಡುವುದೇ ರಾಜ್ಯ ಸರ್ಕಾರದ 6ನೇ ‘ಗ್ಯಾರಂಟಿ’ ಆಗದಿರಲಿ!

International Yoga Day 2024
ಆರೋಗ್ಯ1 hour ago

International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

Dina Bhavishya
ಭವಿಷ್ಯ2 hours ago

Dina Bhavishya : ಬಹುದಿನಗಳ ಕನಸು ನನಸಾಗುವ ಸಮಯವಿದು; ಕುಟುಂಬ ಸದಸ್ಯರಿಂದ ಸಿಗಲಿದೆ ಬೆಂಬಲ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ18 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌