Viral Video: ಅಬ್ಬಾ.. ಮದ್ವೆ ಮಂಟಪದಲ್ಲೇ ಬಿಗ್‌ ಫೈಟ್‌; ವರನಿಗಾಗಿ ಯುವತಿಯರ ಮಾರಾಮಾರಿ-ವಿಡಿಯೋ ವೈರಲ್‌ - Vistara News

ವೈರಲ್ ನ್ಯೂಸ್

Viral Video: ಅಬ್ಬಾ.. ಮದ್ವೆ ಮಂಟಪದಲ್ಲೇ ಬಿಗ್‌ ಫೈಟ್‌; ವರನಿಗಾಗಿ ಯುವತಿಯರ ಮಾರಾಮಾರಿ-ವಿಡಿಯೋ ವೈರಲ್‌

Viral Video:ಇಬ್ಬರು ಯುವತಿಯರು ವೇದಿಕೆಯಲ್ಲೇ ಯುವಕನಿಗಾಗಿ ಹೊಡೆದಾಟ ನಡೆಸಿದ್ದಾರೆ. ಇಲ್ಲಿ ಮಧು ಮತ್ತು ವರನ ಪ್ರೇಯಸಿ ನಡುವೆ ಮಾರಾಮಾರಿ ನಡೆದಿದೆ. ಒಬ್ಬರನೊಬ್ಬರು ಬೈದಾಡಿಕೊಂಡು ಇಬ್ಬರು ಜುಟ್ಟು ಹಿಡಿ ಹೊಡೆದಾಟ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Viral video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸಿನಿಮಾಗಳಲ್ಲಿ ತ್ರಿಕೋನ ಪ್ರೇಮಕಥೆ(Love story)ಗಳನ್ನು ನೋಡಿರ್ತೀರಿ. ಒಬ್ಬನಿಗಾಗಿ ಇಬ್ಬರು ಮಹಿಳೆಯರ ನಡುವಿನ ಫೈಟ್‌ ಅಥವಾ ಒಬ್ಬಳಿಗೋಸ್ಕರ ಇಬ್ಬರು ಹುಡುಗರ ನಡುವೆ ಮಾರಾಮಾರಿ ಹೀಗೆ ಹಲವಾರು ಸೀನ್‌ಗಳನ್ನು ಸಿನಿಮಾಗಳಲ್ಲಿ ನೋಡಿರ್ತೇವೆ. ಇದೀಗ ಅಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇಲ್ಲಿ ಮದುವೆ ಮಂಟಪದಲ್ಲೇ ವರನಿಗಾಗಿ ಇಬ್ಬರು ಯುವತಿಯರ ನಡುವೆ ಮಾರಾಮಾರಿ ನಡೆದಿದ್ದು, ಈ ಫೈಟ್‌ ಯಾವ WWFಗೂ ಕಡಿಮೆಯಿಲ್ಲ. ಈ ವೈರಲ್‌(Viral Video) ಆಗಿರುವ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅನಿತಾ ಸುರೇಶ್‌ ಶರ್ಮಾ ಎಂಬ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು, ಇಬ್ಬರು ಯುವತಿಯರು ವೇದಿಕೆಯಲ್ಲೇ ಯುವಕನಿಗಾಗಿ ಹೊಡೆದಾಟ ನಡೆಸಿದ್ದಾರೆ. ಇಲ್ಲಿ ಮಧು ಮತ್ತು ವರನ ಪ್ರೇಯಸಿ ನಡುವೆ ಮಾರಾಮಾರಿ ನಡೆದಿದೆ. ಒಬ್ಬರನೊಬ್ಬರು ಬೈದಾಡಿಕೊಂಡು ಇಬ್ಬರು ಜುಟ್ಟು ಹಿಡಿ ಹೊಡೆದಾಟ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Pakistan: ಟಾಪ್‌ ಕಂಪನಿಗಳಲ್ಲಿ ಭಾರತೀಯರೇ CEO; ಆದರೆ ನಮ್ಮ ಮಕ್ಕಳು? ಪಾಕ್‌ ಸಂಸದನ ವಿಡಿಯೊ ವೈರಲ್‌

ಯುವಕ ಇನ್ನೇನು ತಾಳಿ ಕಟ್ಟಬೇಕೆನ್ನುವ ಹೊತ್ತಲ್ಲಿ ಮದುವೆ ಮಂಟಪಕ್ಕೆ ಬಂದಿದ್ದ ಆತನ ಪ್ರೇಯಸಿ ತಕರಾರು ಮಾಡಿದ್ದಾಳೆ. ಆಗ ವೇದಿಕೆಯಲ್ಲಿದ್ದ ವಧು ಕೂಡ ಆಕೆಯ ಜೊತೆ ಜಗಳಕ್ಕಿಳಿದಿದ್ದಾಳೆ. ಇನ್ನು ಇಬ್ಬರು ಯುವತಿಯರೂ ಕೆಂಪು ಬಣ್ಣ ಮದುವೆ ಲೆಹಂಗಾ ತೊಟ್ಟಿದ್ದು, ಎಲ್ಲರೆದುರೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ನಡುವಲ್ಲಿದ್ದ ವರ ಇಬ್ಬರನ್ನೂ ತಡೆಯಲು ಪ್ರಯತ್ನಿಸಿದ್ದನಾದರೂ ಯುವತಿಯರಿಬ್ಬರು ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇನ್ನು ಮದುವೆ ಆಗಮಿಸಿದ ಅತಿಥಿಗಳಲ್ಲಿ ಒಬ್ಬರು ಈ ಘಟನೆ ವಿಡಿಯೋ ಮಾಡಿದ್ದು, ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಐದು ದಿನಗಳ ಹಿಂದೆ ಇನ್‌ಸ್ಟಾ ಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, 1ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿದೆ.

ವಿಡಿಯೋ ನೋಡಿರುವ ನೆಟ್ಟಿಗರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಹುಡುಗ ಸರ್ಕಾರಿ ನೌಕರನಾಗಿರಬೇಕು ಅದಕ್ಕಾಗಿ ಈ ಫೈಟ್‌ ಎಂದು ಒಬ್ಬರು ಕಮೆಂಟ್‌ ಮಾಡಿದ್ದರೆ, ದೇವರೇ ನನ್ನನ್ನು ಮೇಲೆ ಕರೆಸಿಕೋ.. ಇವನಿಗೂ ಗರ್ಲ್‌ಫ್ರೆಂಡ್‌ ಇದ್ದಾಳೆ ಅಂತಾ ಮತ್ತೊಬ್ಬ ಕಮೆಂಟ್‌ ಹಾಕಿದ್ದಾನೆ. ಪಕ್ಕದಲ್ಲಿ ಇನ್ನೊಬ್ಬ ವರ ಇದ್ದಾನೆ ಸರಿಯಾಗಿ ನೋಡಿ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಮಗನಿಗೆ ಮುಸಲ್ಮಾನರ ಕ್ಯಾಪ್‌ ಹಾಕಿದ ನಟಿ; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ!

ಕಿರುತೆರೆ ನಟಿ ಕಿಶ್ವರ್ ಮರ್ಚೆಂಟ್ ಅವರು ಪೋಸ್ಟ್ (Viral Video) ಮಾಡಿರುವ ವಿಡಿಯೋದಲ್ಲಿ ಪತಿ ಮತ್ತು ನಟ ಸುಯ್ಯಾಶ್ ರಾಯ್‌ ಅವರು ಮಗ ನಿರ್ವೈರ್‌ಗೆ ಮುಸ್ಲಿಮರು ನಡೆಸುವ ಪ್ರಾರ್ಥನೆ ವಿಧಿಗಳನ್ನು ಕಲಿಸುತ್ತಿರುವುದನ್ನು ನೋಡಿರುವ ಸಾಕಷ್ಟು ಮಂದಿ ಬೇರೆ ಬೇರೆ ಅಭಿಪ್ರಾಯಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

By

Viral Video
Koo

ಕಿರುತೆರೆ ನಟಿ (TV actress) ಕಿಶ್ವರ್ ಮರ್ಚೆಂಟ್ (Kishwer Merchantt) ಅವರು ಸಾಮಾಜಿಕ ಜಾಲತಾಣದಲ್ಲಿ (social media) ಮಗ ಸ್ಕಲ್ ಕ್ಯಾಪ್ (skull cap) ಧರಿಸಿರುವ ವಿಡಿಯೋವನ್ನು (Viral Video) ಪೋಸ್ಟ್ ಮಾಡಿದ್ದು, ಇದು ಭಾರಿ ಚರ್ಚೆ ಹುಟ್ಟಿಸಿದೆ. ನಟಿಯನ್ನು ಟ್ರೋಲ್ ಮಾಡಿ ಅನೇಕರು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ನಟ ಸುಯ್ಯಶ್ ರಾಯ್‌ (Suyyash Rai) ಅವರನ್ನು ವಿವಾಹವಾಗಿರುವ ಕಿಶ್ವರ್ ಮರ್ಚೆಂಟ್ ಅವರ ಮಗ ನಿರ್ವೈರ್ ಸ್ಕಲ್ ಕ್ಯಾಪ್ ಧರಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿದ ಬಳಿಕ ಟ್ರೋಲ್‌ಗೆ ಗುರಿಯಾಗಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಶ್ವರ್, ನಾನು ಹಿಂದೂವನ್ನು ಮದುವೆಯಾಗಿರುವ ಮುಸ್ಲಿಂ. ಆದರೂ ನಾನು ಚರ್ಚ್, ಗುರುದ್ವಾರ ಅಥವಾ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು, ನನ್ನ ಮಗನನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತೇನೆ ಮತ್ತು ದೇವರು ನಿಜವಾಗಿ ಒಬ್ಬನೇ ಎಂದು ನಂಬುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಕಿಶ್ವರ್ ಮರ್ಚೆಂಟ್ ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅವರ ಮಗ ನಿರ್ವೈರ್ ಮುಸ್ಲಿಂ ಆಚರಣೆಗಳನ್ನು ಮಾಡುತ್ತಿರುವುದು ಕಂಡು ಬಂದಿದೆ. ಕಿಶ್ವರ್ ಅವರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಅವರ ಪತಿ ಮತ್ತು ನಟ ಸುಯ್ಯಾಶ್ ರಾಯ್‌ ಅವರು ಮಗ ನಿರ್ವೈರ್‌ಗೆ ಮುಸ್ಲಿಮರು ನಡೆಸುವ ಪ್ರಾರ್ಥನೆ ವಿಧಿಗಳನ್ನು ಕಲಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಯುವಕ ಸ್ಕಲ್ ಕ್ಯಾಪ್ ಧರಿಸಿದ್ದಾನೆ.
ಇದರಿಂದ ಕಿಶ್ವರ್ ಸಾಕಷ್ಟು ದ್ವೇಷದ ಕಾಮೆಂಟ್‌ಗಳನ್ನು ಸ್ವೀಕರಿಸಿದರು ಮತ್ತು ಅವರ ಮಗ ನಿರ್ವೈರ್‌ ನನ್ನು ಟ್ರೋಲ್ ಮಾಡಲಾಯಿತು.

ಮುಸ್ಲಿಂ ಆಗಿರುವ ಕಿಶ್ವರ್ ಅವರು ಹಿಂದೂ ಆಗಿರುವ ಸುಯ್ಯಶ್ ರಾಯ್‌ ಅವರನ್ನು ವಿವಾಹವಾಗಿದ್ದಾರೆ. ಮುಸ್ಲಿಮರು ಎಂದಾದರೂ ಭಗವಾನ್ ಅಥವಾ ರಾಮ್ ಎಂಬ ಪದವನ್ನು ಹೇಳುತ್ತಾರಾ? ಮುಸ್ಲಿಂ ಎಂದಾದರೂ ದೇವಸ್ಥಾನಕ್ಕೆ ಹೋಗುತ್ತಾನಾ? ಹಾಗೆ, ನಾವು ಇನ್ನೂ ಮಸೀದಿಗಳಿಗೆ ಹೋಗುತ್ತೇವೆ ಎಂದು ಪ್ರಶ್ನಿಸುವ ಕಾಮೆಂಟ್‌ಗಳು ಇದ್ದವು.

ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಕಿಶ್ವರ್‌, ನಾನು ಮುಸ್ಲಿಂ ಆದರೂ ಗುರುದ್ವಾರ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ದೀಪಾವಳಿ ಮತ್ತು ಕ್ರಿಸ್‌ಮಸ್‌ನಂತಹ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇನೆ. ಪತಿ ಹಿಂದೂವಾದರೂ ಮಗ ಬೇರೆ ಧರ್ಮದ ಬಗ್ಗೆ ಕಲಿಯುವ ಬಗ್ಗೆ ಅವರಲ್ಲಿ ಯಾವುದೇ ಆತಂಕ ವಿಲ್ಲ ಎಂದು ಹೇಳಿದ್ದಾರೆ.


ತಂದೆ ಮಗನ ಮುದ್ದಾದ ವಿಡಿಯೋ

ಈ ವಿಡಿಯೋ ತಂದೆ ಮಗನದ್ದು ತುಂಬಾ ಮುದ್ದಾಗಿದೆ. ಆದ್ದರಿಂದ ನಾನು ಅದನ್ನು ಪೋಸ್ಟ್ ಮಾಡಿದ್ದೇನೆ. ನಾನು ಹಿಂದೂವನ್ನು ಮದುವೆಯಾಗಿರುವ ಮುಸ್ಲಿಂ ಎಂದು ಹೆಚ್ಚಿನವರಿಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಮಗ ಸಣ್ಣ ವಯಸ್ಸಿನಿಂದಲೇ ಎಲ್ಲ ಆಚರಣೆಗಳನ್ನು ನೋಡುತ್ತಿದ್ದಾನೆ. ಈ ಮುದ್ದಾದ ವಿಡಿಯೋಗಾಗಿ ಟ್ರೋಲ್ ಮಾಡುವುದು ಮೂರ್ಖತನ. ಆ ಜನರು ಕೇವಲ ಬುದ್ಧಿಹೀನರು ಮತ್ತು ಅವರು ಕೇವಲ ದ್ವೇಷವನ್ನು ಹರಡಲು ಅಲ್ಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: YouTuber Dhruv Rathee: ಧ್ರುವ ರಾಥಿಯ ಮೋದಿ ವಿರೋಧಿ ವಿಡಿಯೊ ಗೊತ್ತು; ಅವರ ಲವ್‌ ಸ್ಟೋರಿ ಗೊತ್ತಾ?

ಮಗನಿಗೆ ಹಿಂದೂ ಹೆಸರನ್ನು ಇಟ್ಟಿದ್ದೇನೆ. ದೇವರು ಒಬ್ಬನೇ ಎಂದು ನಂಬುವ ಮೂಲಕ ತನ್ನ ಮಗನಿಗೆ ಪ್ರತಿಯೊಂದು ಧರ್ಮವನ್ನು ಕಲಿಸಲು ಬಯಸುತ್ತಾನೆ ಎಂದು ಕಿಶ್ವರ್ ತಿಳಿಸಿದ್ದಾರೆ.

ಅವನು ಮುಸಲ್ಮಾನರ ಟೋಪಿ ಧರಿಸಿ ಮುಂದೆ ಎಲ್ಲವನ್ನೂ ಕೆಟ್ಟದಾಗಿ ಮಾಡುತ್ತಾನೆ ಎನ್ನುವುದು ಅಸಹ್ಯಕರವಾಗಿದೆ. ಹೀಗೆ ಹೇಳುವವರ ಬಗ್ಗೆ ನನಗೆ ಅನುಕಂಪವಿದೆ. ಯಾಕೆಂದರೆ ಮಕ್ಕಳ ಚಿಂತನೆಗಳು ಅವರ ಪಾಲನೆಯಲ್ಲಿರುತ್ತದೆ. ನನ್ನ ಮಗು ಹಾಗೆ ಇರಬೇಕೆಂದು ನಾನು ಬಯಸುವುದಿಲ್ಲ ಮತ್ತು ಅದಕ್ಕಾಗಿಯೇ ನಾನು ಅವನನ್ನು ಎಲ್ಲೆಡೆ ಕರೆದುಕೊಂಡು ಹೋಗುತ್ತೇನೆ. ದೇವರು ಒಬ್ಬನೇ ಎಂದು ನಂಬುವಂತೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Continue Reading

ವಿದೇಶ

Donkey Population In Pak: ಹೆಚ್ಚುಹೆಚ್ಚು ಕತ್ತೆಗಳನ್ನು ಸಾಕಿ, ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿ; ಪಾಕ್‌ಗೆ ಚೀನಾ ಸಲಹೆ!

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಕೃಷಿ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆ ಕಂಡು ಬಂದಿದೆ. ಮುಖ್ಯವಾಗಿ ಕತ್ತೆಗಳ ಸಂಖ್ಯೆಯಲ್ಲಿ ಕಳೆದ ಒಂದು ವರ್ಷದಲ್ಲಿ ಗಣನೀಯ ಏರಿಕೆಯಾಗಿದೆ. 2022- 23ರ ಆರ್ಥಿಕ ವರ್ಷದಲ್ಲಿ ಕತ್ತೆಗಳ ಸಂಖ್ಯೆಯು (Donkey Population In Pak) 5.9 ಮಿಲಿಯನ್‌ಗೆ ತಲುಪಿದ್ದು, ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 1.72 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ.

VISTARANEWS.COM


on

By

Donkey Population In Pak
Koo

ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ (pakistan) ಕಳೆದ ಒಂದು ವರ್ಷದಲ್ಲಿ ಕತ್ತೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು (Donkey Population In Pak), ಇದು ದೇಶದ ಕೃಷಿ (agricultural) ಚಟುವಟಿಕೆಗಳಲ್ಲಿ ಆಶಾದಾಯಕ ಬೆಳವಣಿಗೆಯನ್ನು ತೋರಿಸಿದೆ. ಕತ್ತೆಗಳ (donkey) ಸಂಖ್ಯೆಯು 2022-23ರ ಆರ್ಥಿಕ ವರ್ಷದಲ್ಲಿ 5.9 ಮಿಲಿಯನ್‌ ತಲುಪಿದ್ದು ಹಿಂದಿನ ಅವಧಿಯಲ್ಲಿ 5.7 ಮಿಲಿಯನ್‌ ನಷ್ಟಿತ್ತು. ಒಂದು ವರ್ಷದಲ್ಲಿ ಕತ್ತೆಗಳ ಸಂಖ್ಯೆ ಸರಿಸುಮಾರು ಎರಡು ಲಕ್ಷ ಹೆಚ್ಚಳವಾಗಿದೆ.

ಆರ್ಥಿಕ ಬಿಕ್ಕಟ್ಟು ದೇಶದ ಬಹುತೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿರುವುದನ್ನು 2023- 24ರ ಆರ್ಥಿಕ ಸಮೀಕ್ಷೆಯಲ್ಲಿ (Economic Survey) ತಿಳಿದು ಬಂದಿದೆ. ಈ ಕುರಿತ ಆರ್ಥಿಕ ವರ್ಷದ ಪ್ರಮುಖ ಸಾಮಾಜಿಕ ಆರ್ಥಿಕ ಸಾಧನೆಗಳನ್ನು ವಿವರಿಸುವ ಪೂರ್ವ ಬಜೆಟ್ ದಾಖಲೆ ತಿಳಿಸಿದೆ.

ಜಾನುವಾರು ವಲಯದಲ್ಲಿ ಆಶಾದಾಯಕ ಬೆಳವಣಿಗೆ

ಪಾಕಿಸ್ತಾನದಲ್ಲಿ ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿ ಜಾನುವಾರು ವಲಯವು ಹೊರಹೊಮ್ಮುತ್ತಿದೆ. ಒಟ್ಟು ಜಾನುವಾರು ಸಂಖ್ಯೆಯಲ್ಲಿ ಎಮ್ಮೆಗಳ ಸಂಖ್ಯೆಯು 43.7 ಮಿಲಿಯನ್‌ನಿಂದ 45 ಮಿಲಿಯನ್‌ಗೆ ಏರಿಕೆಯಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಕುರಿ ಮತ್ತು ಮೇಕೆಗಳ ಸಂಖ್ಯೆಯು ಕ್ರಮವಾಗಿ 32.3 ಮತ್ತು 84.7 ಮಿಲಿಯನ್‌ಗೆ ಏರಿಕೆಯಾಗಿದೆ. ಸಮೀಕ್ಷೆಯ ಒಂದು ಕುತೂಹಲಕಾರಿ ಸಂಶೋಧನೆಯೆಂದರೆ ಕತ್ತೆಗಳ ಸಂಖ್ಯೆಯು 2022-23 ರ ಆರ್ಥಿಕ ವರ್ಷದಲ್ಲಿ 5.9 ಮಿಲಿಯನ್‌ಗೆ ತಲುಪಿದ್ದು, ಒಂದು ವರ್ಷದಲ್ಲಿ ಸುಮಾರು ಒಂದು ಲಕ್ಷ ಹೆಚ್ಚಳವಾಗಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 1.72 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ.

ಕತ್ತೆಗಳ ಸಂಖ್ಯೆ ಹೆಚ್ಚಿದ್ದರೂ ಪಾಕಿಸ್ತಾನದ ಒಟ್ಟಾರೆ ಆರ್ಥಿಕ ಸಾಧನೆ ನಿರೀಕ್ಷೆಗೂ ಮೀರಿ ಕುಸಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಕೇವಲ ಶೇ. 2.4ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಆರ್ಥಿಕ ಸಮೀಕ್ಷೆಯಲ್ಲಿ ವಿವರಿಸಿದಂತೆ ಸರ್ಕಾರದ ಗುರಿಯಾದ ಶೇ. 3.5ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.

ಸಮೀಕ್ಷೆಯ ಸಂಶೋಧನೆಗಳು ಕೃಷಿ ಮತ್ತು ಆರ್ಥಿಕ ಅಂಶಗಳ ನಡುವಿನ ಅಸಮಾನತೆಯನ್ನು ಎತ್ತಿ ತೋರಿಸುತ್ತವೆ. ಕತ್ತೆಗಳ ಸಂಖ್ಯೆಯ ಹೆಚ್ಚಳವು ಗ್ರಾಮೀಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಕೆಲವು ಸಕಾರಾತ್ಮಕ ಪ್ರವೃತ್ತಿಗಳನ್ನು ಪ್ರತಿಬಿಂಬಿಸಬಹುದಾದರೂ ಇದು ವಿಶಾಲವಾದ ಆರ್ಥಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆರ್ಥಿಕತೆಯಲ್ಲಿ ಕಳಪೆ ಕಾರ್ಯಕ್ಷಮತೆಯು ಪಾಕಿಸ್ತಾನವು ತನ್ನ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ.

ಪಾಕಿಸ್ತಾನಿಗಳಿಗೆ ಕತ್ತೆಗಳು ಏಕೆ ನಿರ್ಣಾಯಕ?

ಕತ್ತೆಗಳು ಪಾಕಿಸ್ತಾನದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. ಈ ಪ್ರಾಣಿಗಳು ಸರಕು ಮತ್ತು ಜನರ ಸಾಗಣೆ, ಕೃಷಿ ಕೆಲಸ, ಮತ್ತು ಅನೇಕ ಕುಟುಂಬಗಳಿಗೆ ಜೀವನಾಧಾರದ ನಿರ್ಣಾಯಕ ಮೂಲವಾಗಿ ಸೇವೆ ಸಲ್ಲಿಸುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ಅನಿವಾರ್ಯವಾಗಿವೆ.

ಶಕ್ತಿ, ವಿಶ್ವಾಸಾರ್ಹತೆ ಮತ್ತು ಒರಟಾದ ಭೂಪ್ರದೇಶಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಕತ್ತೆಗಳು ಕೆಲವು ಕೈಗಾರಿಕೆಗಳು ಮತ್ತು ಸಮುದಾಯಗಳಿಗೆ ಅತ್ಯಗತ್ಯ. ಆಧುನಿಕ ಸಾರಿಗೆ ಮೂಲಸೌಕರ್ಯವು ಅಸಮರ್ಪಕ ಅಥವಾ ಅಸ್ತಿತ್ವದಲ್ಲಿಲ್ಲದ ಪ್ರದೇಶಗಳಲ್ಲಿ ಅವುಗಳ ಉಪಯುಕ್ತತೆಯು ವಿಶೇಷವಾಗಿ ಗಮನಾರ್ಹವಾಗಿದೆ. ಇದು ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಕತ್ತೆಗಳನ್ನು ಆರ್ಥಿಕ ರಚನೆಯ ಅವಿಭಾಜ್ಯ ಅಂಗವನ್ನಾಗಿ ಮಾಡುತ್ತದೆ. ಇದು ಸ್ಥಳೀಯ ಆರ್ಥಿಕತೆಗಳಿಗೆ ಮತ್ತು ಪಾಕಿಸ್ತಾನದ ಹಲವಾರು ಜನರ ದೈನಂದಿನ ಜೀವನಕ್ಕೆ ಗಣನೀಯವಾಗಿ ಕೊಡುಗೆ ನೀಡುತ್ತದೆ.

ಒಂದು ವರದಿಯ ಪ್ರಕಾರ ಪಾಕಿಸ್ತಾನವು ಚೀನಾಕ್ಕೆ ಕತ್ತೆಗಳನ್ನು ರಫ್ತು ಮಾಡುವ ಮೂಲಕ ವಾರ್ಷಿಕವಾಗಿ ಲಕ್ಷಾಂತರ ಡಾಲರ್‌ಗಳನ್ನು ವಿದೇಶಿ ವಿನಿಮಯದಲ್ಲಿ ಗಳಿಸಲು ಯೋಜನೆ ರೂಪಿಸಿದೆ. ಪಾಕಿಸ್ತಾನವು ವಿಶ್ವದಲ್ಲೇ ಅತೀ ಹೆಚ್ಚು ಕತ್ತೆಗಳನ್ನು ಹೊಂದಿರುವ ಮೂರನೇ ರಾಷ್ಟ್ರವಾಗಿದೆ. ಇದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.


ಚೀನಾಕ್ಕೆ ಹೆಚ್ಚು ಕತ್ತೆಗಳು ಏಕೆ ಬೇಕು?

ಇ-ಜಿಯಾವೋ ಎಂದು ಕರೆಯಲ್ಪಡುವ ಚೀನಾದ ಸಾಂಪ್ರದಾಯಿಕ ಔಷಧಕ್ಕೆ ಪ್ರತಿ ವರ್ಷ ಲಕ್ಷಾಂತರ ಕತ್ತೆಗಳು ಚೀನಾದಲ್ಲಿ ಬಲಿಯಾಗುತ್ತಿದೆ. ಕತ್ತೆ ಚರ್ಮದಿಂದ ಹೊರತೆಗೆಯಲಾಗುವ ಕಾಲಜನ್ ಬಳಸಿ ತಯಾರಿಸಲಾದ ಇ-ಜಿಯಾವೊ ಆಹಾರ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸುವ ಪ್ರಮುಖ ಅಂಶವಾಗಿದೆ. ಈ ಔಷಧವು ರಕ್ತವನ್ನು ಸಮೃದ್ಧಗೊಳಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ರೋಗಗಳನ್ನು ತಡೆಯುತ್ತದೆ ಎನ್ನಲಾಗುತ್ತದೆ.

ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಚೀನಾ ಇತರ ದೇಶಗಳಿಂದ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತಿದೆ ಮತ್ತು ಪಾಕಿಸ್ತಾನವು ತನ್ನ ಸ್ನೇಹಿತ ರಾಷ್ಟ್ರವಾದ ಚೀನಾದಿಂದ ಈ ಮೂಲಕ ಸ್ವಲ್ಪ ಲಾಭ ಪಡೆಯಲು ಪ್ರಯತ್ನಿಸುತ್ತಿದೆ.

ಚೀನಾದಲ್ಲಿ ಕತ್ತೆಗಳ ಸಂಖ್ಯೆ ಇಳಿಕೆ

ಚೀನಾದ ಕತ್ತೆಗಳ ಸಂಖ್ಯೆಯು 1992ರಲ್ಲಿ 11 ಮಿಲಿಯನ್‌ನಿಂದ 2024ರಲ್ಲಿ 2 ಮಿಲಿಯನ್‌ ಗೆ ಇಳಿದಿದೆ. ಹೀಗಾಗಿ ಅದು ತನ್ನ ಇ-ಜಿಯಾವೋ ಉದ್ಯಮಕ್ಕಾಗಿ ಸಾಗರೋತ್ತರದಿಂದ ಕತ್ತೆ ಚರ್ಮವನ್ನು ಆಮದು ಮಾಡಿಕೊಳ್ಳುತ್ತಿದೆ.

ಕತ್ತೆಗಳು ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಿಗಳಿಗೆ ಭರವಸೆಯೇ?

ಕತ್ತೆಗಳು ಅನೇಕ ಪಾಕಿಸ್ತಾನಿಗಳಿಗೆ ಕೊನೆಯ ಭರವಸೆಯಾಗಿರಬಹುದು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗೆ. ಸ್ಥಳೀಯ ಆರ್ಥಿಕತೆಯು ಈ ಪ್ರಾಣಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ವಿತ್ತ ಸಚಿವ ಮುಹಮ್ಮದ್ ಔರಂಗಜೇಬ್ ಅನಾವರಣಗೊಳಿಸಿದ ಸಮೀಕ್ಷೆಯ ಪ್ರಕಾರ, ಕೃಷಿ ವಲಯದ ಶೇ. 60.84 ಮತ್ತು ಜಿಡಿಪಿಯ ಶೇ. 14.63 ಪಾಲನ್ನು ಹೊಂದಿರುವ ಜಾನುವಾರುಗಳು 2023- 24ರಲ್ಲಿ ಶೇ.3.89 ರಷ್ಟು ಪ್ರಗತಿ ಸಾಧಿಸಿದ್ದು, ಕಳೆದ ವರ್ಷ ಶೇ.3. 70ರಷ್ಟಿತ್ತು.

ಜಾನುವಾರು ವಲಯದ ಒಟ್ಟು ಮೌಲ್ಯವರ್ಧನೆಯು 2022- 23 ರಲ್ಲಿ 5,587 ಶತಕೋಟಿ ರೂಪಾಯಿಗಳಿಂದ 2023- 24 ರಲ್ಲಿ 5,804 ಶತಕೋಟಿಗಳಿಗೆ ಏರಿಕೆಯನ್ನು ತೋರಿಸಿದೆ. ಇದು ಶೇಕಡಾ 3.9 ರ ಬೆಳವಣಿಗೆಯ ದರವನ್ನು ತೋರಿಸಿದೆ. ಜಾನುವಾರು ವಲಯವು ಕೃಷಿ ಬೆಳವಣಿಗೆಯಲ್ಲಿ ತನ್ನ ಪಾಲು ಪ್ರಮುಖವಾಗಿರುವುದನ್ನು ಭದ್ರಗೊಳಿಸಿದೆ. ಇದು 2024ರ ಆರ್ಥಿಕ ಅವಧಿಯಲ್ಲಿ ಕೃಷಿ ಮೌಲ್ಯದ ಸುಮಾರು ಶೇ. 60.84 ಮತ್ತು ರಾಷ್ಟ್ರೀಯ ಜಿಡಿಪಿಯ ಶೇ.14.63ರಷ್ಟು ಪಾಲನ್ನು ಹೊಂದಿದೆ.

ಇದನ್ನೂ ಓದಿ: Wild Elephant Attack : ನಾಡಿಗೆ ಬಂದ ಕಾಡಾನೆಯಿಂದ ರೈತನ ಮೇಲೆ ದಾಳಿ, ಕಾಲು ಮುರಿತ


ಪಾಕಿಸ್ತಾನಕ್ಕೆ ಹೆಚ್ಚಾಗುತ್ತಿವೆ ಸವಾಲುಗಳು

ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯಲ್ಲಿ ಕತ್ತೆಗಳ ಸಂಖ್ಯೆಯ ಹೆಚ್ಚಳವು ದೇಶದ ಆರ್ಥಿಕತೆಗೆ ಅದರ ಪ್ರಾಮುಖ್ಯತೆ ಮತ್ತು ಪ್ರಸ್ತುತತೆಯನ್ನು ಸೂಚಿಸುತ್ತದೆ. ಈಗಾಗಲೇ ಪಾಕಿಸ್ತಾನವು ತನ್ನ ಆರ್ಥಿಕ ಬೆಳವಣಿಗೆಯ ಗುರಿಗಳನ್ನು ಸಾಧಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಹೆಚ್ಚಿನ ಹಣದುಬ್ಬರ ದರಗಳು ಮತ್ತು ಸಮರ್ಥನೀಯ ವಿತ್ತೀಯ ಕೊರತೆಗಳು ಹೂಡಿಕೆದಾರರ ವಿಶ್ವಾಸವನ್ನು ದುರ್ಬಲಗೊಳಿಸಿದೆ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಪಡಿಸಿದೆ.

ಅಲ್ಲದೇ ಭಯೋತ್ಪಾದನೆ ಮತ್ತು ದಂಗೆಯಂತಹ ಭದ್ರತಾ ಸವಾಲುಗಳು ಭದ್ರತೆಗೆ ಸಂಬಂಧಿಸಿದ ವೆಚ್ಚಗಳನ್ನು ಹೆಚ್ಚಿಸಿವೆ. ಅಭಿವೃದ್ಧಿಗೆ ಮತ್ತಷ್ಟು ಅಡ್ಡಿಯುಂಟುಮಾಡಿದೆ. ಅಸಮರ್ಪಕ ಮೂಲಸೌಕರ್ಯ ಮತ್ತು ಅಸಮರ್ಥ ಅಧಿಕಾರಶಾಹಿಯಂತಹ ರಚನಾತ್ಮಕ ದೌರ್ಬಲ್ಯಗಳು ಉತ್ಪಾದಕತೆಯನ್ನು ನಿರ್ಬಂಧಿಸುತ್ತವೆ ಮತ್ತು ಆರ್ಥಿಕ ವಿಸ್ತರಣೆಗೆ ಅಡ್ಡಿಯಾಗುತ್ತವೆ.

Continue Reading

ಪ್ರಮುಖ ಸುದ್ದಿ

Weight Lifting: ಮೊಣಕಾಲಿನ ಸಂಧಿವಾತವಿದ್ದರೂ 68ನೇ ವಯಸ್ಸಿನಲ್ಲಿ 60 ಕೆಜಿ ಭಾರ ಎತ್ತುವ ಅಜ್ಜಿ!

Weight Lifting: ಆರೋಗ್ಯದ ವಿಷಯಕ್ಕೆ ಬಂದಾಗ ಕೆಲವರು ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ. ಇಲ್ಲೊಬ್ಬರು ಅಜ್ಜಿ ತಮಗೆ ಸಂಧಿವಾತ ಸಮಸ್ಯೆ ಇದೆ ಎಂದು ಗೊತ್ತಾದ ತಕ್ಷಣ ಕೊರಗದೇ ವೇಟ್‌ಲಿಪ್ಟಿಂಗ್‌ಗೆ ಮುಂದಾಗಿದ್ದಾರೆ. ಅಜ್ಜಿಯ ಈ ಸಾಹಸ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

VISTARANEWS.COM


on

weight lifting
Koo

ಬೆಂಗಳೂರು: ನಮ್ಮಲ್ಲಿ ಹೆಚ್ಚಿನ ಜನರು ವಯಸ್ಸಾದ ಮೇಲೆ ಸಂಧಿವಾತ ಸಮಸ್ಯೆಯಿಂದ ನರಳುತ್ತಿರುವುದನ್ನು ನಾವು ನೋಡಿರುತ್ತೇವೆ. ಇದರಿಂದ ಅವರಿಗೆ ನಡೆಯಲು, ಕುಳಿತುಕೊಳ್ಳಲು, ಕೆಲಸ ಮಾಡಲು ಕಷ್ಟವಾಗುತ್ತದೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಪಡೆಯಬೇಕು ಇಲ್ಲವಾದರೆ ಇದು ನಮ್ಮನ್ನು ಹಾಸಿಗೆ ಹಿಡಿಯುವಂತೆ ಮಾಡುತ್ತದೆ. ಇನ್ನು ಈಗಿನ ಯುವಜನತೆ ಬೆಳಿಗ್ಗೆದ್ದು ವಾಕಿಂಗ್‌ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಇಲ್ಲೊಬ್ಬರು ಅಜ್ಜಿ ಮೊಣಕಾಲಿನ ಸಂಧಿವಾತ ಸಮಸ್ಯೆ ಇದ್ದರೂ ವೇಟ್‌ಲಿಪ್ಟಿಂಗ್ (Weight Lifting )ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ. ಸಂಧಿವಾತದಿಂದ ಬಳಲುತ್ತಿದ್ದ 68 ವರ್ಷದ ಈ ಅಜ್ಜಿ ಪ್ರತಿದಿನ 60 ಕೆಜಿ ತೂಕವನ್ನು ಎತ್ತುತ್ತಾರಂತೆ. ಇದಕ್ಕೆ ಸಂಬಂಧಿಸಿದ ಪೋಸ್ಟ್ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ.

ಅಜ್ಜಿಯ ವೇಟ್‌ಲಿಪ್ಟಿಂಗ್ ಹಿಂದಿನ ಕತೆ

ಕೆಲವರು ಯಾವುದಾದರೂ ಆರೋಗ್ಯ ಸಮಸ್ಯೆ ಬರುವವರೆಗೂ ಆರೋಗ್ಯದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಇನ್ನು ಕೆಲವರು ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಾಗ ಕಾಳಜಿ ವಹಿಸಿ ಅದರಿಂದ ಹೊರಗೆ ಬರುವುದಕ್ಕೆ ನೋಡುತ್ತಾರೆ. ಈ ಅಜ್ಜಿಯ ವಿಷಯದಲ್ಲೂ ಅದೇ ಆಗಿದ್ದು. ಸೆಪ್ಟೆಂಬರ್ 2022ರಲ್ಲಿ ಇವರಿಗೆ ಸಂಧಿವಾತ ಸಮಸ್ಯೆ ಇರುವುದು ಗೊತ್ತಾಯಿತು. ವಯಸ್ಸಾಯಿತು ಎಂದು ಸುಮ್ಮನಿರದೇ ಈ ಅಜ್ಜಿ ತಾನು ಫಿಟ್‌ ಆಗಿರಬೇಕು ಎಂದು ವೇಟ್‌ಲಿಪ್ಟಿಂಗ್ ಮಾಡುವುದಕ್ಕೆ ಶುರುಮಾಡಿದರಂತೆ. ತಾಯಿಗೆ ಬೆಂಬಲವಾಗಿ ನಿಂತಿದ್ದು ಅವರ ಮಗ. ನಂತರ ವೇಟ್‌ಲಿಪ್ಟಿಂಗ್‌ ತರಬೇತುದಾರರ ಅಡಿಯಲ್ಲಿ ಕೂಡ ಇವರು ಕಲಿಯುತ್ತಿದ್ದಾರಂತೆ. ಈಗ ಯಾವುದೇ ನೋವು ಇಲ್ಲ ಎಂಬುದಾಗಿ ಅವರ ಮಗ ತಿಳಿಸಿದ್ದಾರೆ. ಈ ಅಜ್ಜಿಯ ಆರೋಗ್ಯದ ಕಾಳಜಿ, ಹುಮ್ಮಸ್ಸು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ತೂಕ ಎತ್ತುವುದು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ ಕೂಡ ಮೊಣಕಾಲಿನ ಸಂಧಿವಾತ ಸಮಸ್ಯೆ ಇರುವವರು ಇದನ್ನು ಮಾಡುವಾಗ ಎಚ್ಚರಿಕೆಯಿಂದಿರಬೇಕು. ಭಾರೀ ತೂಕ ಎತ್ತುವುದು ಮೊಣಕಾಲುಗಳನ್ನು ಒಳಗೊಂಡಂತೆ ಕೀಳುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಮೊಣಕಾಲಿನ ಸಂಧಿವಾತ ಹೊಂದಿರುವವರಿಗೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಮೂಳೆ ತಜ್ಞರು ಹೇಳಿದ್ದಾರೆ.

ವೇಟ್‌ಲಿಪ್ಟಿಂಗ್ ಪ್ರಾರಂಭಿಸುವ ಮುನ್ನ ಆರೋಗ್ಯ ತಜ್ಞರು ಮತ್ತು ವೈದ್ಯರ ಬಳಿ ಸಮಾಲೋಚನೆ ಮಾಡುವುದು ಸೂಕ್ತ. ಅವರು ವ್ಯಕ್ತಿ ನಿರ್ದಿಷ್ಟ ಸ್ಥಿತಿ ಮತ್ತು ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ನಿಮಗೆ ಸೂಕ್ತವಾದ ಸಲಹೆಗಳನ್ನು ನೀಡುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

ಅಲ್ಲದೇ ಕಡಿಮೆ ಪ್ರಭಾವ ಬೀರುವ ವ್ಯಾಯಾಮಗಳು ಅಥವಾ ವಾಟರ್ ಏರೋಬಿಕ್ಸ್ ನಂತಹ ಪರ್ಯಾಯಗಳು ಮೊಣಕಾಲುಗಳ ಮೇಲೆ ಕಡಿಮೆ ಒತ್ತಡವನ್ನುಂಟುಮಾಡುತ್ತದೆ ಮತ್ತು ಪ್ರಯೋಜನಕಾರಿಯಾಗಿದೆ. ಕೀಲುಗಳು ಮತ್ತು ಬೆನ್ನಿನ ಮೇಲೆ ಒತ್ತಡ ಹೇರುವ ಬದಲು ಸ್ನಾಯುಗಳನ್ನು ಬಲಪಡಿಸುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.
ಹಾಗಾಗಿ ವೇಟ್‌ಲಿಪ್ಟಿಂಗ್ ಮಾಡುವುದು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾದರೂ ಕೂಡ ಸಂಧಿವಾತ ಸಮಸ್ಯೆ ಇರುವವರು ಇದನ್ನು ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಹಾಗೇ ತಮ್ಮ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

Continue Reading

ಪ್ರಮುಖ ಸುದ್ದಿ

Online Order Tragedy: ಆನ್‌ಲೈನ್‌ನಿಂದ ತರಿಸಿದ ಐಸ್‌ಕ್ರೀಂನಲ್ಲಿತ್ತು ಮನುಷ್ಯರ ಬೆರಳು!

Online Order Tragedy ಮಹಿಳೆಯೊಬ್ಬಳು ದಿನಸಿ ವಸ್ತುಗಳ ಜೊತೆಗೆ ತನ್ನ ಸಹೋದರನಿಗಾಗಿ ಐಸ್ ಕ್ರೀಂ ಕೋನ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾಳೆ. ಐಸ್ ಕ್ರೀಂ ತಿನ್ನುವಾಗ 2 ಸೆಂಟಿಮೀಟರ್ ಉದ್ದವಿರುವ ಮನುಷ್ಯನ ಕೈಬೆರಳು ಇರುವುದು ಪತ್ತೆಯಾಗಿದೆ.

VISTARANEWS.COM


on

Online Order Tragedy
Koo

ಮುಂಬೈ: ಇತ್ತೀಚಿನ ದಿನಗಳಲ್ಲಿ ಜನರು ಬೆಳಗ್ಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟದವರೆಗೂ ಆನ್‌ಲೈನ್‌ನಲ್ಲಿಯೇ ಆರ್ಡರ್‌ ಮಾಡುತ್ತಾರೆ. ಇನ್ನು ಆನ್‌ಲೈನ್‌ ಸರ್ವಿಸ್‌ಗಳು ಒಂದಕ್ಕಿಂತ ಒಂದು ಸ್ಪೀಡ್‌ ಆಗಿದ್ದು ಆರ್ಡರ್‌ ಕೊಟ್ಟು ಕಣ್ಣುಮುಚ್ಚುವುದರೊಳಗೆ ಮನೆಯ ಕಾಲಿಂಗ್‌ ಬೆಲ್‌ ಸದ್ದಾಗುತ್ತದೆ. ಇದರಿಂದ ಜನರಿಗೆ ಮಾರುಕಟ್ಟೆಗೆ ಹೋಗಿ ಬಿಸಿಲು, ಮಳೆಯಲ್ಲಿ ಸುತ್ತಾಡುವುದು ತಪ್ಪುತ್ತದೆ .ಆರಾಮಾಗಿ ಮನೆಯಲ್ಲಿಯೇ ಕುಳಿತು ತಮಗೆ ಏನು ಬೇಕೋ ಅದನ್ನು ಆರ್ಡರ್‌ ಮಾಡಬಹುದು. ಆದರೆ ಈ ಆನ್‌ಲೈನ್‌ ಸರ್ವಿಸ್‌ನಿಂದ ತೊಂದರೆಯಾದ ಘಟನೆ ಕೂಡ ಸಾಕಷ್ಟಿದೆ. ಇತ್ತೀಚೆಗಷ್ಟೇ ಬಾಲಕಿಯೊಬ್ಬಳು ಆನ್‌ಲೈನ್‌ನಲ್ಲಿ ಆರ್ಡರ್‌ (Online Order Tragedy) ಮಾಡಿದ ಕೇಕ್‌ ತಿಂದು ಮರಣಹೊಂದಿದ ಘಟನೆ ಇನ್ನೂ ಮಾಸಿಲ್ಲ, ಅದರ ಬೆನ್ನಲ್ಲೇ ಈಗ ಮಹಿಳೆಯೊಬ್ಬರು ಆನ್‌ಲೈನ್ ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಂನಲ್ಲಿ ಮನುಷ್ಯನ ಕೈಬೆರಳು ಇರುವುದು ಪತ್ತೆಯಾಗಿದೆ.

ಮುಂಬೈನ ಮಲಾಡ್ ಪ್ರದೇಶದ ಮಹಿಳೆಯೊಬ್ಬಳು ದಿನಸಿ ವಸ್ತುಗಳ ಜೊತೆಗೆ ತನ್ನ ಸಹೋದರನಿಗಾಗಿ ಯುಮ್ಮೋ ಐಸ್ ಕ್ರೀಂ ಕಂಪೆನಿಯ ಮೂರು ಬಟರ್ ಸ್ಕಾಚ್ ಕೋನ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾಳೆ. ಮನೆಗೆ ಬಂದ ಐಸ್ ಕ್ರೀಂ ಅನ್ನು ಸಹೋದರ ಬಿಚ್ಚಿ ತಿನ್ನುವಾಗ ನಾಲಿಗೆಗೆ ಏನೋ ತಗುಲಿದ ಹಾಗೆ ಆಗಿದೆ. ಆಗ ಆತ ಅದನ್ನು ಹೊರತೆಗೆದಾಗ ಅದು ಮನುಷ್ಯನ ಕೈಬೆರಳಾಗಿದ್ದು ಸುಮಾರು 2 ಸೆಂಟಿಮೀಟರ್ ಉದ್ದವಿತ್ತು ಎಂಬುದಾಗಿ ತಿಳಿದುಬಂದಿದೆ. ಮಹಿಳೆಯ ಸಹೋದರ ವೈದ್ಯನಾಗಿದ್ದ ಕಾರಣ ಆತ ಅದು ಮನುಷ್ಯನ ಕೈ ಬೆರಳು ಎಂದು ಕೂಡಲೇ ಪತ್ತೆ ಹಚ್ಚಿದ್ದಾನೆ.

ಈ ಬಗ್ಗೆ ಮಹಿಳೆ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಯುಮ್ಮೋ ಐಸ್ ಕ್ರೀಂ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಾಗೇ ಐಸ್ ಕ್ರೀಂನಲ್ಲಿ ಪತ್ತೆಯಾದ ಮಾನವನ ಕೈಬೆರಳನ್ನು ಫೊರೆನ್ಸಿಕ್‌ಗೆ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಐಸ್ ಕ್ರೀಂ ಕಂಪನಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 272, 271 ಮತ್ತು 336 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Kangana Ranaut: ಸಂಸದೆಯಾಗಿರುವ ನಟಿ ಕಂಗನಾ ರಣಾವತ್‌ಗೆ ಸಿಗುವ ಸಂಬಳ, ಇತರ ಸವಲತ್ತುಗಳು ಏನೇನು?

ಈ ಹಿಂದೆ ಕೂಡ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಕಿತ್ತಳೆ ಹಣ್ಣು ಆರ್ಡರ್ ಮಾಡಿ ಅದರಲ್ಲಿ ಜೀವಂತ ಹುಳಗಳು ಹರಿದಾಡುತ್ತಿರುವುದನ್ನು ನೋಡಿದ್ದಾರೆ. ಹಾಗಾಗಿ ಆನ್ಲೈನ್ನಲ್ಲಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡಿ ಬಳಸುವ ಮುನ್ನ ಜನರು ಎಚ್ಚರಿಕೆಯಿಂದರಬೇಕು. ಇಲ್ಲವಾದರೆ ಇದರಿಂದ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ.

Continue Reading
Advertisement
Maruti Suzuki
ಆಟೋಮೊಬೈಲ್17 mins ago

Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

Reliance Retail Tira unveils skin care brand Akind
ದೇಶ45 mins ago

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Union Budget 2024
ದೇಶ48 mins ago

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

AIDSO protest demanding investigation into corruption in NEET entrance exam
ರಾಯಚೂರು51 mins ago

Raichur News: ನೀಟ್ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಮಾನ್ವಿಯಲ್ಲಿ ಎಐಡಿಎಸ್ಒ ಪ್ರತಿಭಟನೆ

Joshimath Teshil Now Jyotirmath
ದೇಶ59 mins ago

Joshimath Teshil Now Jyotirmath: ಉತ್ತರಾಖಂಡದ ಜೋಶಿಮಠ ಈಗ ಜ್ಯೋತಿರ್ಮಠ!

ATM Cash Withdrawal Fee
ವಾಣಿಜ್ಯ1 hour ago

ATM Cash Withdrawal Fee: ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ 21 ರೂ.ಗೆ ಏರಿಕೆ?

Siddaramaiah
ಕರ್ನಾಟಕ2 hours ago

ಸರ್ಕಾರಿ ನೌಕರರಿಗೆ ನಿರಾಸೆ; ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ಬಗ್ಗೆ ಯಾವುದೇ ನಿರ್ಣಯ ಇಲ್ಲ!

NEET UG Result 2024
ಶಿಕ್ಷಣ2 hours ago

NEET UG Result 2024: ಏನಿದು ನೀಟ್‌ ವಿವಾದ? ಗ್ರೇಸ್‌ ಅಂಕ ಕೊಟ್ಟಿದ್ಯಾಕೆ? ಮರು ಪರೀಕ್ಷೆ ಮಾಡೋದ್ಯಾಕೆ?

Actor Darshan
ಕರ್ನಾಟಕ2 hours ago

Actor Darshan: ಅಪ್ಪನನ್ನು ಬೈದಿದ್ದಕ್ಕೆ ಥ್ಯಾಂಕ್ಸ್‌ ಎಂದ ದರ್ಶನ್‌ ಪುತ್ರ ವಿನೀಶ್;‌ ಪೋಸ್ಟ್‌ನಲ್ಲಿ ಇನ್ನೇನಿದೆ?

Viral Video
ವೈರಲ್ ನ್ಯೂಸ್3 hours ago

Viral Video: ಮಗನಿಗೆ ಮುಸಲ್ಮಾನರ ಕ್ಯಾಪ್‌ ಹಾಕಿದ ನಟಿ; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌