Income Tax Refund : ತೆರಿಗೆ ರಿಫಂಡ್‌ಗೆ ಕಾಯುತ್ತಿದ್ದೀರಾ? ನೀವೇ ಸುಲಭವಾಗಿ ಪರಿಶೀಲಿಸಿ Vistara News

ಪ್ರಮುಖ ಸುದ್ದಿ

Income Tax Refund : ತೆರಿಗೆ ರಿಫಂಡ್‌ಗೆ ಕಾಯುತ್ತಿದ್ದೀರಾ? ನೀವೇ ಸುಲಭವಾಗಿ ಪರಿಶೀಲಿಸಿ

Income Tax Refund ತೆರಿಗೆ ರಿಫಂಡ್‌ ಏಕೆ ಬಂದಿಲ್ಲ ಎಂದು ಕಾಯುತ್ತಿದ್ದೀರಾ? ಹಾಗಿದ್ದರೆ ನೀವೇ ಕೆಳಕಂಡಂತೆ ಸುಲಭವಾಗಿ ಪರಿಶೀಲಿಸಬಹುದು. ವಿವರ ಇಲ್ಲಿದೆ.

VISTARANEWS.COM


on

notes
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಳೆದ 2022-23ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ 2023ರ ಜುಲೈ 31 ಕೊನೆಯ ದಿನಾಂಕವಾಗಿತ್ತು. 6.77 ಕೋಟಿ ಮಂದಿ ಐಟಿ ರಿಟರ್ನ್‌ ಸಲ್ಲಿಸಿದ್ದರು. ಗಡುವು ತಪ್ಪಿದವರು ಈಗ ಪೆನಾಲ್ಟಿ ಕಟ್ಟಿ ಐಟಿ ರಿಟರ್ನ್‌ ಸಲ್ಲಿಸಲು ಅವಕಾಶ ಇದೆ. ನೀವು ಈಗಾಗಲೇ ಐಟಿ ರಿಟರ್ನ್‌ ಸಲ್ಲಿಸಿದ್ದು, ರಿಫಂಡ್‌ಗೆ ಕಾಯುತ್ತಿದ್ದರೆ, ನಿಮ್ಮ ಸ್ಟೇಟಸ್‌ ಏನಾಗಿದೆ ಎಂಬುದನ್ನು ನೋಡಬಹುದು. ನಿಮಗೆ ರಿಫಂಡ್‌ ವಿಳಂಬವಾಗಲು ಕಾರಣವೇನು ಎಂಬುದನ್ನು ಕೂಡ ತಿಳಿದುಕೊಳ್ಳಬಹುದು.

ಐಟಿಆರ್‌ ರಿಫಂಡ್‌ ಸ್ಟೇಟಸ್‌ ಪರಿಶೀಲನೆ ಹೇಗೆ?

step 1 : ಇ-ಫೈಲಿಂಗ್‌ ಪೋರ್ಟಲ್‌ ತೆರೆಯಿರಿ.

step 2 : ಪೋರ್ಟಲ್‌ ತೆರೆದ ಬಳಿಕ Quick Links ಸೆಕ್ಷನ್‌ ಅನ್ನು ಸ್ಕ್ರಾಲ್‌ ಡೌನ್‌ ಮಾಡಿ Know Your Refund Status ಮೇಲೆ ಕ್ಲಿಕ್ಕಿಸಿ.

step 3 : ನಿಮ್ಮ PAN ನಂಬರ್‌, ಅಸೆಸ್‌ಮೆಂಟ್‌ ವರ್ಷ, ( ಈಗ 2023-24 ಅಸೆಸ್‌ಮೆಂಟ್‌ ವರ್ಷ) ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ.

Step 4 : ನಿಮಗೆ OTP ಸಿಗುತ್ತದೆ. ಅದನ್ನು ನಿಗದಿತ ಸ್ಥಳದಲ್ಲಿ ನಮೂದಿಸಿ.

ಆಗ ನಿಮಗೆ ಪೋರ್ಟಲ್‌ ಐಟಿ ರಿಫಂಡ್‌ ಸ್ಟೇಟಸ್‌ ಅನ್ನು ತೋರಿಸುತ್ತದೆ. ನಿಮ್ಮ ಐಟಿಆರ್‌ ಬ್ಯಾಂಕ್‌ ಡಿಟೇಲ್ಸ್‌ನಲ್ಲಿ ಯಾವುದಾದರೂ ಇಶ್ಶೂ ಇದ್ದರೆ, ಹೀಗೆ ತೋರಿಸುತ್ತದೆ: No records found, please check your E-filing processing status by navigating through e -File – > Income Tax Returns -> View Filed Returns.

ತೆರಿಗೆ ರಿಫಂಡ್‌ 7ರಿಂದ 120 ದಿನಗಳಲ್ಲಿ ಸಿಗುತ್ತದೆ. ಹೀಗಾಗಿ ನಿಮ್ಮ ಐಟಿಆರ್‌ ಪ್ರೊಸೆಸಿಂಗ್‌ನಲ್ಲಿದ್ದರೆ ರಿಫಂಡ್‌ ಕೂಡ ವಿಳಂಬವಾದೀತು. ರಿಫಂಡ್‌ ವಿಳಂಬಕ್ಕೆ ಇತರ ಕಾರಣಗಳು ಇಂತಿವೆ.

ಇದನ್ನೂ ಓದಿ:ವಿಸ್ತಾರ MoneyGuide: ನಿವೃತ್ತರಾಗುವುದಕ್ಕೆ ಮುನ್ನ ಈ 5 ಪ್ರಮಾದಗಳನ್ನು ಮಾಡದಿರಿ

ಅಸಮರ್ಪಕ ಮಾಹಿತಿ: (Incorrect Information): ತೆರಿಗೆದಾರರು ತಮ್ಮ ಬ್ಯಾಂಕ್‌ ಖಾತೆ ನಂಬರ್‌, ಹೆಸರು, ವಿಳಾಸ ಇತ್ಯಾದಿ ವಿವರಗಳನ್ನು ಅಸಮರ್ಪಕವಾಗಿ ಕೊಟ್ಟಿದ್ದರೆ ರಿಫಂಡ್‌ನಲ್ಲಿ ವಿಳಂಬವಾದೀತು.

ಫೈಲಿಂಗ್‌ ಮಾಡುವಾಗ ಲೋಪದೋಷ: (Filing Errors) : ಟ್ಯಾಕ್ಸ್‌ ರಿಟರ್ನ್‌ ವೇಳೆ ಮಾಡುವ ಪ್ರಮಾದಗಳ ಪರಿಣಾಮ ರಿಫಂಡ್‌ನಲ್ಲಿ ವಿಳಂಬವಾದೀತು.

ಔಟ್‌ಸ್ಟ್ಯಾಂಡಿಂಗ್‌ ಡಿಮಾಂಡ್‌ (Outstanding Demand) : ತೆರಿಗೆದಾರ ಸರ್ಕಾರಕ್ಕೆ ಹಣ ಕೊಡಬೇಕಿದ್ದರೆ, ರಿಫಂಡ್‌ ಅನ್ನು ತೆರಿಗೆ ಬೇಡಿಕೆಗೆ ಬದಲಿಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

ರಾಜ್ಯದಲ್ಲಿ ಡೆಂಗ್ಯು ಜ್ವರ (Dengue fever) ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಸೊಳ್ಳೆಗಳಿಂದ ದೂರವಿರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

VISTARANEWS.COM


on

dengue flue
Koo

ಬೆಂಗಳೂರು: ಬದಲಾದ ವಾತಾವರಣದ ಪರಿಣಾಮ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು (Dengue Fever) ಹೆಚ್ಚಾಗಿ ವರದಿಯಾಗುತ್ತಿದೆ. 15 ಸಾವಿರದ ಗಡಿಯತ್ತ ಸಾಗುತ್ತಿದ್ದು, ಆತಂಕ ಮೂಡಿಸಿದೆ. ಆರೋಗ್ಯ ಇಲಾಖೆ (Health department) ಈ ವಿಚಾರದಲ್ಲಿ ಅಲರ್ಟ್‌ ಆಗಿದೆ.

ರಾಜ್ಯದಲ್ಲಿ ಡೆಂಗ್ಯೂ 14,955 ಪ್ರಕರಣಗಳು ದಾಖಲಾಗಿವೆ. ಒಂದು ತಿಂಗಳ ಅವಧಿಯಲ್ಲಿ 1,829 ಪ್ರಕರಣಗಳು ದೃಢಪಟ್ಟಿವೆ. ಈವರೆಗೆ ರಾಜ್ಯದ 31 ಜಿಲ್ಲೆಗಳಿಂದ 7,282 ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 7,673 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಡೆಂಗ್ಯೂ ಜ್ವರ ಶಂಕಿತರ ತಪಾಸಣೆ ಮಾಡಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 9,620 ಮಂದಿ ಡೆಂಗ್ಯೂ ಜ್ವರದಿಂದ ಬಳಲಿದ್ದರು. ಕಳೆದ ವರ್ಷ ಡೆಂಗ್ಯೂನಿಂದ 9 ಮಂದಿ ಬಲಿಯಾಗಿದ್ದರು ಕೂಡ. ಈ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ಸೇರಿ ಒಟ್ಟು ಒಂಬತ್ತು ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 52,721 ಡೆಂಗ್ಯು ಶಂಕಿತರನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ 33,326 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಕಳೆದ ಒಂದು ತಿಂಗಳಲ್ಲಿ 839 ಮಂದಿಯಲ್ಲಿ ಡೆಂಗ್ಯು ದೃಢಪಟ್ಟಿದೆ. ಡೆಂಗ್ಯೂ ಜೊತೆಗೆ 28 ಜಿಲ್ಲೆಗಳಲ್ಲಿ ಚಿಕೂನ್‌ ಗುನ್ಯಾ ಪ್ರಕರಣಗಳೂ ಪತ್ತೆಯಾಗಿದ್ದು, ತಲೆನೋವು ಮೂಡಿಸಿದೆ. 60 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ ಗುನ್ಯಾ ಶಂಕಿತರ ತಪಾಸಣೆ ಮಾಡಲಾಗಿದೆ.

ಸೊಳ್ಳೆಗಳನ್ನು ಆದಷ್ಟು ತಡೆಗಟ್ಟಲು ಸೂಚಿಸಲಾಗಿದೆ. ತೆರೆದ ಪ್ರದೇಶಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಹುಟ್ಟುತ್ತಿವೆ. ಇವುಗಳನ್ನು ನಿವಾರಿಸಬೇಕು. ಮನೆಗೆ ಹಾಗೂ ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದು, ಮಾಸ್ಕಿಟೋ ರಿಪೆಲ್ಲೆಂಟ್‌ಗಳನ್ನು ಬಳಸಲು ಸೂಚಿಸಲಾಗಿದೆ.

ಜಿಲ್ಲೆ- ಪ್ರಕರಣಗಳು
ಕಲಬುರಗಿ- 662
ಮೈಸೂರು – 646
ಉಡುಪಿ – 635
ದಕ್ಷಿಣ ಕನ್ನಡ – 492
ಶಿವಮೊಗ್ಗ – 404
ತುಮಕೂರು – 315
ಚಿತ್ರದುರ್ಗ – 300

ಚಿಕೂನ್ ಗುನ್ಯಾ ಪ್ರಕರಣಗಳು
ಮೈಸೂರು – 196
ವಿಜಯಪುರ – 163
ಕಲಬುರಗಿ – 132
ಶಿವಮೊಗ್ಗದಲ್ಲಿ 125
ಒಟ್ಟು 1,481 ಮಂದಿ

Continue Reading

ಕರ್ನಾಟಕ

Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್‌, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ

ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಾಪಾಸ್ ಪಡೆಯಲು ರಾಜ್ಯ ಸಚಿವ ಸಂಪುಟದಲ್ಲಿ (Karnataka Cabinet meeting) ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

Vistara Editorial, Government should conduct exam without any lapse
Koo

ಬೆಂಗಳೂರು: ಬಿಜೆಪಿ ಸರ್ಕಾರ ಸಮಯದಲ್ಲಿ ಜಾರಿಗೆ ತರಲಾಗಿದ್ದ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಾಪಾಸ್ ಪಡೆಯಲು ರಾಜ್ಯ ಸಚಿವ ಸಂಪುಟದಲ್ಲಿ (Karnataka Cabinet meeting) ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಮೊದಲು ಕೃಷಿ ಭೂಮಿ‌ ಹೊಂದಿದವರು ಮಾತ್ರ ಕೃಷಿ ಭೂಮಿ ಖರೀದಿಗೆ ಅವಕಾಶ ಇತ್ತು. 2022ರಲ್ಲಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ ತಂದು, ಆ ಮೂಲಕ ಯಾರು ಬೇಕಾದರೂ ಭೂಮಿ ಖರೀದಿಗೆ ಅವಕಾಶ ಮಾಡಿ ಕೊಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯ ಈ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಾಪಾಸ್ ಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೆಲವೊಂದು ಹೊಸ ತಿದ್ದುಪಡಿಗಳೊಂದಿಗೆ ನೂತನ ವಿಧೇಯಕವನ್ನು ಈ ಬಾರಿಯ ಅಧೀವೇಶನದಲ್ಲೇ ಮಂಡಿಸಲು ತೀರ್ಮಾನಿಸಲಾಗಿದೆ.

ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡಬಹುದೆನ್ನುವ ಕಾನೂನು ಈ ಮೂಲಕ ರದ್ದಾಗಲಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದ ಈ ಕಾನೂನಿಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೋರಾಟಕ್ಕೆ ಬಿಜೆಪಿ ಸರ್ಕಾರ ಮಣಿಯದೆ ಕಾಯ್ದೆ ಜಾರಿ‌ ಮಾಡಿತ್ತು. ಈ ಮೂಲಕ ನಗರವಾಸಿ ಶ್ರೀಮಂತರು ರೈತರಿಂದ ಕೃಷಿ ಭೂಮಿ ಖರೀದಿ ಮಾಡುವುದು ಸುಲಭವಾಗಿತ್ತು. ಇದನ್ನು ತಡೆಗಟ್ಟಲು ಹೊಸ ವಿಧೇಯಕ ತರಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಕೆಲವು ಕಾನೂನುಗಳನ್ನು ರದ್ದುಗೊಳಿಸುವ ತೀರ್ಮಾನಗಳನ್ನು ಹಾಲಿ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಈಗಾಗಲೇ ಕೈಗೊಂಡಿದೆ. ಇದನ್ನು ಬಿಜೆಪಿ ವಿರೋಧಿಸಿದೆ.

ಇದನ್ನೂ ಓದಿ: Cabinet Meeting: ಸಮವಸ್ತ್ರ ಪೂರೈಕೆಗೆ ತಡೆಹಿಡಿದಿದ್ದ ಹಣ ಬಿಡುಗಡೆಗೆ ಸಚಿವ ಸಂಪುಟ ಸಮ್ಮತಿ

Continue Reading

ಅಂಕಣ

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Raja Marga Column : ಚೆನ್ನಾಗಿಯೇ ಇದ್ದ ಮಗಳು ಒಮ್ಮಿಂದೊಮ್ಮೆಗೆ ಮೌನಕ್ಕೆ ಜಾರಿದಳು. ಚಿಗರೆಯಂತಿದ್ದವಳು ಜಿಗಿಯುವುದನ್ನೇ ಮರೆತಳು. 13 ವರ್ಷದ ಹುಡುಗಿಗೆ ಏನಾಯಿತು.? ನಾನು ಆಕೆಯನ್ನು ಈ ಸಂಕಟದಿಂದ ಹೊರತಂದಿದ್ದು ಹೇಗೆ?

VISTARANEWS.COM


on

Raja Marga Father and Daughter
Koo
RAJAMARGA Rajendra Bhat

ಮೊನ್ನೆ ಮೊನ್ನೆ ತನ್ನ 13ನೆಯ ಹುಟ್ಟುಹಬ್ಬವನ್ನು ಸೆಲೆಬ್ರೇಟ್ (13 year old daughter) ಮಾಡಿದ ನನ್ನ ಮಗಳು ಇಂದಿಗೂ ರಾತ್ರಿ ಮಲಗುವುದು ಅಪ್ಪನ ಕಾಲಿನ ಮೇಲೆಯೇ. ಅಪ್ಪನ ಬಾಯಿಂದ ಅದ್ಭುತವಾದ ಕಾಲ್ಪನಿಕ ಕಥೆಗಳನ್ನು ಕೇಳುತ್ತ, ಜೋಗುಳದ ಹಾಡುಗಳನ್ನು ಕೇಳುತ್ತ ಆಕೆ ದೊಡ್ಡವಳಾದವಳು. ಅವಳೀಗ ಪ್ರೈಮರಿ ಶಿಕ್ಷಣವನ್ನು (Primary Education) ಮುಗಿಸಿ ಹೊಸತೊಂದು ಖಾಸಗಿ ಹೈಸ್ಕೂಲಿಗೆ (Private High school) ಸೇರಿದವಳು. ನನ್ನ ಮಗಳು ಈಗ ಎಂಟನೇ ಕ್ಲಾಸ್ (Raja Marga Column).

ಅವಳೀಗ ಮೊದಲಿನ ಹಾಗೆ
ಮನಸ್ಸು ಬಿಚ್ಚಿ ಮಾತಾಡುವುದಿಲ್ಲ!

ರಾತ್ರಿ ಮಲಗುವ ಮೊದಲು ಅವಳು ಇಡೀ ದಿನ ನಡೆದ ಪ್ರತೀ ಒಂದು ಘಟನೆಯನ್ನೂ ಅಪ್ಪನಿಗೆ ಹೇಳುತ್ತಾಳೆ. ಆಗ ಅವಳಿಗೆ ಯಾವ ಫಿಲ್ಟರ್ ಅಡ್ಡ ಬರುವುದಿಲ್ಲ. ಇದನ್ನು ಹೇಳಬೇಕೋ ಬೇಡವೋ ಎಂಬ ಗೊಂದಲ ಇರುವುದಿಲ್ಲ. ಟೀಚರ್ ಹೊಗಳಿದ್ದು, ಕ್ಲಾಸ್‌ಮೇಟ್ ಗೀರಿದ್ದು, ಆಕೆಯ ಓರಗೆಯ ಹುಡುಗ ಕಣ್ಣು ಹೊಡೆದು ಲವ್ ಯು ಅಂದದ್ದು….ಎಲ್ಲವನ್ನೂ ಅವಳು ಹೇಳಿಯೇ ಹೇಳುತ್ತಾಳೆ.

ಆದರೆ ಇತ್ತೀಚೆಗೆ ಯಾವುದನ್ನೂ ಹೇಳದೆ ಆಕೆ ಮೌನವಾಗಿದ್ದಾಳೆ. ಆಕೆಯ ಕಣ್ಣುಗಳಲ್ಲಿ ಅಗಾಧವಾದ ಭಯ ಹೊರಗೆ ಇಣುಕುತ್ತದೆ. ಉತ್ಸಾಹದ ಚಿಲುಮೆ ಆಗಿದ್ದ ನನ್ನ ಪ್ರಿನ್ಸೆಸ್ ಈಗ ಮಂಕಾಗಿರುವುದು ನನಗೆ ಅಚ್ಚರಿ ತರುತ್ತದೆ. ಆರಂಭದಲ್ಲಿ ಹೊಸ ಶಾಲೆಗೆ ಸೇರಿದ್ದಾಳೆ, ಹೊಂದಾಣಿಕೆ ಕಷ್ಟ ಆಗಿರಬಹುದು ಎಂದು ನಾನು ಭಾವಿಸಿದ್ದೆ. ಅಥವಾ ಪ್ರಾಯಕ್ಕೆ ಬಂದಿದ್ದ ಕಾರಣ ಗೊಂದಲಗಳು ಇರಬಹುದು ಎಂದು ಯೋಚಿಸಿದ್ದೆ. ಆದರೆ ಅವಳ ನೋವಿಗೆ ಅದ್ಯಾವುದೂ ಕಾರಣ ಅಲ್ಲ ಎಂದು ಗೊತ್ತಾದಾಗ ನಾನು ಅವಳ ಬಾಯಿ ಬಿಡಿಸುವುದು ಅನಿವಾರ್ಯ ಆಯಿತು. ಒಮ್ಮೆಗೇ ಅವಳು ನನ್ನ ಕುತ್ತಿಗೆಯ ಸುತ್ತ ಬಳಸಿ ಹಿಡಿದು ಜೋರಾಗಿ ಅಳಲು ಆರಂಭ ಮಾಡಿದಳು! ಎಷ್ಟೋ ದಿನಗಳಿಂದ ಒತ್ತಿ ಹಿಡಿದ ಅಣೆಕಟ್ಟು ಪ್ರವಾಹವಾಗಿ ಹರಿಯಲು ಆರಂಭ ಆಯಿತು.

Raja Marga Father and Daughter

ಅಪ್ಪಾ, ನನಗೆ ಈ ಶಾಲೆ ಬೇಡ!

ನನ್ನ ಪ್ರಿನ್ಸೆಸ್ ಹಾಗೆಂದು ಹಠ ಹಿಡಿದು ಅಳುವಾಗ ನನಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ಅವಳು ಸೇರಿದ ಹೈಸ್ಕೂಲ್‌ ನಮ್ಮೂರಲ್ಲಿಯೆ ಪ್ರಸಿದ್ಧವಾದ ಶಾಲೆ. ಒಳ್ಳೆಯ ಅಧ್ಯಾಪಕರು ಇದ್ದಾರೆ. ಚಂದ ಪಾಠ ಮಾಡುವ ಶಾಲೆ ಅದು. ಪರೀಕ್ಷೆಯ ರಿಸಲ್ಟ್ ತುಂಬ ಚೆನ್ನಾಗಿದೆ. ಸೌಲಭ್ಯಗಳು ಚೆನ್ನಾಗಿವೆ. ಹಾಗಿರುವಾಗ ಅವಳು ಯಾಕೆ ಆ ಶಾಲೆ ಬೇಡ ಅಂತಾಳೆ? ನನಗೆ ಅರ್ಥ ಆಗಲಿಲ್ಲ.

ಆಗ ಅವಳ ಅಳು ನಿಯಂತ್ರಣಕ್ಕೆ ಬಂದಿತ್ತು. ನನ್ನ ಪ್ರಿನ್ಸೆಸ್ ಈಗ ಒಂದೊಂದಾಗಿ ಕಾರಣವನ್ನು ಹೇಳುತ್ತಾ ಹೋದಂತೆ ನಾನು ಬೆಚ್ಚಿ ಬಿದ್ದೆ.

ಓವರ್ ಟು ಮೈ ಪ್ರಿನ್ಸೆಸ್….

ಅಪ್ಪ, ನಾನು ಓದಿದ ಪ್ರೈಮರಿ ಶಾಲೆಯಲ್ಲಿ ನನಗೆ ಯಾವ ಒತ್ತಡವೂ ಇರಲಿಲ್ಲ. ತುಂಬಾ ಗೆಳೆಯರು, ನೂರಾರು ಚಟುವಟಿಕೆಗಳು, ಚಂದ ಚಂದ ಕನಸುಗಳು, ಆಟಗಳು, ನೃತ್ಯಗಳು, ಹಾಡುಗಳು ಎಲ್ಲವೂ ಇದ್ದವು. ಒಂದು ದಿನವೂ ನಮ್ಮ ಅಧ್ಯಾಪಕರು ಪರೀಕ್ಷೆಗಳ ಬಗ್ಗೆ ಮಾತಾಡಿರಲಿಲ್ಲ. ನಮ್ಮ ಓರಗೆಯ ಗೆಳೆಯರು ಒಬ್ಬರಿಗೆ ಒಬ್ಬರು ಸಪೋರ್ಟ್ ಮಾಡುತ್ತಿದ್ದರು. ಚಂದ ಕಲಿಯುವ ವಾತಾವರಣ ಇತ್ತು. ನಮ್ಮ ಮಧ್ಯೆ ಸ್ಪರ್ಧೆ ಇರಲೇ ಇಲ್ಲ. ಶಿಕ್ಷಕರು ತಾರತಮ್ಯ ಮಾಡಿದ್ದೇ ಇಲ್ಲ.

ಈಗ ಎಲ್ಲವನ್ನೂ ಬಾಯಿಪಾಠ ಮಾಡಿಸುತ್ತಾರೆ!

ಆದರೆ ಈಗ ನಮ್ಮ ಹೈಸ್ಕೂಲ್ ಅದಕ್ಕೆ ವಿರುದ್ಧವಾಗಿದೆ. ಅಧ್ಯಾಪಕರು ಚಂದ ಪಾಠ ಮಾಡುತ್ತಾರೆ. ಆದರೆ ಪ್ರತೀ ದಿನವೂ ಪರೀಕ್ಷೆ, ಪರೀಕ್ಷೆ ಎಂದು ಗೋಳು ಹೊಯ್ದುಕೊಳ್ಳುತ್ತಾರೆ. ಅನಾವಶ್ಯಕವಾಗಿ ಬಾಯಿಪಾಠ ಮಾಡಲು ಒತ್ತಾಯ ಮಾಡುತ್ತಾರೆ. ನಾನು ಪ್ರೈಮರಿ ಶಾಲೆಯಲ್ಲಿ ಎಂದಿಗೂ ಬಾಯಿಪಾಠ ಮಾಡಿದ್ದು ಇಲ್ಲ. ಎಲ್ಲವನ್ನೂ ನಮ್ಮ ಅಧ್ಯಾಪಕರು ಅರ್ಥ ಮಾಡಿ ಬಿಡುತ್ತಿದ್ದರು. ಬಾಯಿಪಾಠದ ಅಗತ್ಯವೇ ಬೀಳಲಿಲ್ಲ. ಆದರೆ ಈಗ ಇಲ್ಲಿನ ಅಧ್ಯಾಪಕರು ಬಲವಂತವಾಗಿ ಬಾಯಿಪಾಠ ಮಾಡಿಸುತ್ತಾರೆ. ನಮ್ಮದೇ ವಾಕ್ಯ ಮಾಡಿ ಉತ್ತರ ಬರೆದರೆ ಮಾರ್ಕ್ ಕೊಡುವುದೇ ಇಲ್ಲ! ಒಂದೊಂದು ಉತ್ತರವನ್ನು ಹತ್ತು ಸಲ ಬರೆಸುತ್ತಾರೆ. ಅದರಿಂದ ನಮಗೇನು ಲಾಭ? ನಾನು ಬಾಲ್ಯದಿಂದಲೂ ಕ್ರಿಯೇಟಿವ್ ಆಗಿ ಕಲಿತವಳು. ಯಾಂತ್ರಿಕವಾಗಿ ಕಲಿಯುವುದು ನನ್ನಿಂದ ಆಗೋದಿಲ್ಲ ಅಪ್ಪ. ಅವರು ಕೊಟ್ಟ ನೋಟ್ಸ್ ಬಾಯಿಪಾಠ ಮಾಡಿ ಉತ್ತರ ಬರೆಯುವುದು ಅದ್ಯಾವ ಬುದ್ಧಿವಂತಿಕೆ?

ನನಗೆ ಒಮ್ಮೆ ಹೇಳಿದರೆ ಎಲ್ಲವೂ ಅರ್ಥ ಆಗುತ್ತದೆ ಅಪ್ಪ. ಮತ್ತೆ ಅವರು ಯಾಕೆ ಒಂದೊಂದು ವಾಕ್ಯ ಮೂರು ಮೂರು ಬಾರಿ ಹೇಳುತ್ತಾರೆ?

Raja Marga Father and Daughter

ಶಿಕ್ಷಕರು ನಮಗೆ ಚುಚ್ಚಿ ನೋವು ಕೊಟ್ಟು ಮಾತಾಡ್ತಾರೆ

ನಮ್ಮ ಶಿಕ್ಷಕರು ತರಗತಿಯಲ್ಲಿ ಅನಾವಶ್ಯಕವಾಗಿ ಕಂಪೇರ್ ಮಾಡ್ತಾರೆ. ಅವಳನ್ನು ನೋಡಿ ಕಲಿ, ಇವನನ್ನು ನೋಡಿ ಕಲಿ ಎಂದೆಲ್ಲ ಹೇಳುತ್ತಾರೆ. ನನಗದು ಇಷ್ಟ ಆಗೋದಿಲ್ಲ ಅಪ್ಪ. ನಾನು ನಾನೇ ಆಗಿರೋದು ನನಗೆ ಇಷ್ಟ. ನಾನ್ಯಾಕೆ ಅವನ ಹಾಗೆ, ಅವಳ ಹಾಗೆ ಇರಬೇಕು? ಮಾತು ಮಾತಿಗೂ ಚುಚ್ಚಿ ಮಾತಾಡ್ತಾರೆ.

ಮೊನ್ನೆ ನಮ್ಮ ಗಣಿತ ಮ್ಯಾಮ್ ಬೋರ್ಡ್ ಮೇಲೆ ಒಂದು ಲೆಕ್ಕ ತಪ್ಪು ಮಾಡಿದರು. ನಾನು ಎದ್ದು ನಿಂತು ಅದು ತಪ್ಪು ಅಂತ ಹೇಳಿದ್ದೆ. ಆಗ ಆ ಮ್ಯಾಮ್ ಗಟ್ಟಿಯಾಗಿ ‘ಕೂತ್ಕೋ ಕೂತ್ಕೋ. ನೀನು ಗಣಿತ ಮೇಷ್ಟ್ರ ಮಗಳು ಎಂದು ಗೊತ್ತಿದೆ!’ ಎಂದರು. ನನಗೆ ಅಳು ಬಂತು ಅಪ್ಪ. ನಾನೇನು ತಪ್ಪು ಹೇಳಿದ್ದೇನೆ? ಅವರ್ಯಾಕೆ ನಿಮ್ಮ ಬಗ್ಗೆ ಹಗುರವಾಗಿ ಮಾತಾಡಬೇಕು? ನನಗದು ಇಷ್ಟ ಆಗೋದಿಲ್ಲ ಅಪ್ಪ.

ಶಿಕ್ಷಕರು ಇಲ್ಲಿ ತಾರತಮ್ಯ ಮಾಡ್ತಾರೆ ಅಪ್ಪ

ನಮ್ಮ ಶಾಲೆಯಲ್ಲಿ ಬಡವರ ಮಕ್ಕಳು, ಶ್ರೀಮಂತರ ಮಕ್ಕಳು ಎಂಬ ತಾರತಮ್ಯ ಇದೆ ಅಪ್ಪ. ಶ್ರೀಮಂತರ ಮಕ್ಕಳು ಶಾಲೆಗೆ ಹೆಚ್ಚು ಡೊನೇಶನ್ ಕೊಡುವ ಕಾರಣ ಅವರಿಗೆ ಹೆಚ್ಚು ಮಾರ್ಕ್, ಅವರಿಗೆ ಹೆಚ್ಚು ಬಹುಮಾನ, ಅವರಿಗೆ ಹೆಚ್ಚು ಹೊಗಳಿಕೆ. ನನಗದು ಇಷ್ಟ ಆಗೋದಿಲ್ಲ ಅಪ್ಪ.

ಮೊನ್ನೆ ಒಂದು ಸಣ್ಣ ಸ್ಪೆಲ್ಲಿಂಗ್ ತಪ್ಪು ಮಾಡಿದ್ದಕ್ಕೆ ಬೈದರು. ನೂರು ಸಲ ಬರೆಯಲು ಹೇಳಿದರು. ನಾನೇನಾದರೂ ಬೇಕೆಂದೇ ತಪ್ಪು ಮಾಡುತ್ತೇನಾ? ತಪ್ಪು ಮಾಡಲು ಅವಕಾಶ ಇಲ್ಲದ ಶಾಲೆ ನನಗೆ ಬೇಡ. ನನ್ನ ಕ್ರಿಯೇಟಿವ್ ಟ್ಯಾಲೆಂಟ್ ಅವರಿಗೆ ಬೇಡ ಅಂದರೆ ನನಗೆ ಶಾಲೆಯೇ ಬೇಡ!‌ ನಮ್ಮದು ಶಾಲೆ ಎಂಬ ಭಾವನೆ ಬರುವುದಿಲ್ಲ ಅಪ್ಪ.

Raja Marga Father and Daughter

ಅದು ರ‍್ಯಾಂಕ್ ಪಡೆಯುವ ಒಂದು ಕಾರ್ಖಾನೆ!

ಒಂದೇ ಒಂದು ಬದುಕಿನ ಪಾಠ ಇಲ್ಲ. ಎಲ್ಲರೂ ಮಾರ್ಕ್, ಮಾರ್ಕ್ ಎಂದು ಅರಚುತ್ತಾರೆ. ರ‍್ಯಾಂಕ್ ಪಡೆಯುವ ಮಕ್ಕಳಿಗೆ ಸಪರೇಟ್ ಕ್ಲಾಸಸ್ ಮಾಡ್ತಾರೆ. ಕಡಿಮೆ ಮಾರ್ಕ್ ತೆಗೆದುಕೊಳ್ಳುವ ಮಕ್ಕಳಿಗೆ ಬೇರೆ ಅಧ್ಯಾಪಕರು ಪಾಠ ಮಾಡ್ತಾರೆ. ಪರೀಕ್ಷೆಗೆ ಬರುವ ಪ್ರಶ್ನೆಗಳನ್ನು ಮಾತ್ರ ಹೇಳಿಕೊಡುತ್ತಾರೆ. ನಾವೇನಾದರೂ ಕುತೂಹಲಕ್ಕೆ ಪ್ರಶ್ನೆ ಕೇಳಿದರೆ ಅಧಿಕ ಪ್ರಸಂಗಿ ಎಂದು ಬೈತಾರೆ. ನನಗೆ ಈ ಶಾಲೆ ಬೇಡ ಅಪ್ಪ.

ಓರಗೆಯ ಗೆಳೆಯರಲ್ಲ ಅವರು‌, ಸ್ಪರ್ಧಿಗಳು!

ಇನ್ನು ನಮ್ಮ ಓರಗೆಯ ಇತರರು ನನಗೆ ಗೆಳೆಯರಾಗಿ ಕಾಣುತ್ತಿಲ್ಲ. ಅವರು ನನ್ನ ಜೊತೆಗೆ ರೇಸಿಗೆ ನಿಂತ ಹಾಗೆ ವರ್ತಿಸುತ್ತಾರೆ. ಅವರಿಗಿಂತ ನನಗೆ ಒಂದು ಮಾರ್ಕ್ ಹೆಚ್ಚು ಬಂದರೂ ಉರಿದು ಸಾಯುತ್ತಾರೆ. ಯಾವುದೇ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬಂದರೆ ಪಾರ್ಶಿಯಾಲಿಟಿ ಎಂದು ಬೊಬ್ಬೆ ಹೊಡೆಯುತ್ತಾರೆ. ನನ್ನ ವಿರುದ್ಧ ಶಿಕ್ಷಕರ ಬಳಿ ಹೋಗಿ ಚಾಡಿ ಹೇಳುತ್ತಾರೆ. ನಾನು ಓದಬಾರದು ಎಂದು ನಾನು ಕಷ್ಟ ಪಟ್ಟು ಬರೆದ ನೋಟ್ಸ್ ಪುಟಗಳನ್ನು ಹರಿಯುತ್ತಾರೆ. ಹಿಂಸೆ ಕೊಡುತ್ತಾರೆ. ಶಿಕ್ಷಕರಿಗೆ ಗಿಫ್ಟ್ ತಂದುಕೊಟ್ಟು ಪ್ಲೀಸ್ ಮಾಡ್ತಾರೆ.

ಅಂತಹ ಮಕ್ಕಳನ್ನು ನಮ್ಮ ಟೀಚರ್ಸ್ ತಲೆಯ ಮೇಲೆ ಹೊತ್ತು ಪೂಜೆ ಮಾಡ್ತಾರೆ. ಸ್ಕೂಲ್ ಡೇನಲ್ಲಿಯೂ ಅಂತಹ ಮಕ್ಕಳಿಗೆ ಮಾತ್ರ ವೇದಿಕೆ. ಅವರಿಗೆ ಸಾಲು ಸಾಲು ಬಹುಮಾನಗಳು! ಉಳಿದವರಿಗೆ ಏನೂ ಇಲ್ಲ.

ನಮ್ಮ ಶಾಲೆಯಲ್ಲಿ ಮಾರ್ಕ್ ಪಡೆಯುವುದು ಮಾತ್ರ ಟ್ಯಾಲೆಂಟ್!

ಬೇರೆ ಯಾವ ಟ್ಯಾಲೆಂಟ್ ಕೂಡ ನಮ್ಮ ಶಿಕ್ಷಕರಿಗೆ ಬೇಡ. ಸ್ಪೋರ್ಟ್ಸ್, ಗೇಮ್ಸ್, ನಾಟಕ, ಸ್ಕಿಟ್, ಹಾಡು, ಡ್ಯಾನ್ಸ್ ಇದ್ಯಾವುದಕ್ಕೂ ನಮ್ಮ ಶಾಲೆಯಲ್ಲಿ ವೇದಿಕೆ ಇಲ್ಲ. ಗೇಮ್ಸ್ ಪೀರಿಯಡ್ ಇದ್ದಾಗಲೂ ಟೀಚರ್ಸ್ ಬಂದು ಗಣಿತ, ವಿಜ್ಞಾನ, ಇಂಗ್ಲಿಷ್ ಪಾಠ ಮಾಡ್ತಾರೆ. ನಮ್ಮ ಇಂಗ್ಲಿಷ್ ಟೀಚರ್ ಇವತ್ತಿಗೂ ಭಾಷಾಂತರ ವಿಧಾನದಲ್ಲಿ ಪಾಠ ಮಾಡ್ತಾರೆ. ನಮಗೆ ಇಂಗ್ಲೀಷ್ ಭಾಷೆಯಲ್ಲಿಯೇ ಮಾತಾಡಬೇಕು ಅನ್ನುತ್ತಾರೆ. ಅವರು ಸ್ಟಾಫ್ ರೂಂನಲ್ಲಿ ಇಂಗ್ಲಿಷ್‌ ಬಿಟ್ಟು ಬೇರೆಲ್ಲಾ ಭಾಷೆ ಮಾತಾಡುತ್ತಾರೆ! ನನಗೆ ಈ ಶಾಲೆ ಬೇಡವೇ ಬೇಡ ಅಪ್ಪ. ಪ್ಲೀಸ್ ಬೇರೆ ಕಡೆ ಸೇರಿಸಿ.

ಇದನ್ನೂ ಓದಿ : Raja Marga Column : ಗಂಡ, ಮಕ್ಕಳ ಕೊಂದವರ ಕ್ಷಮಿಸಿದ್ದೇನೆ ಎಂದು ಹೇಳಿದ್ದರು ಆಕೆ!

ಭರತವಾಕ್ಯ

ನನ್ನ ಮಗಳ ನಿರ್ಧಾರ ಸರಿ ಇತ್ತು. ನಾಳೆಯೇ ಅವಳನ್ನು ಬೇರೆ ಶಾಲೆಗೆ ಸೇರಿಸುವ ಭರವಸೆ ಕೊಟ್ಟೆ. ಅವಳು ಥ್ಯಾಂಕ್ಸ್ ಅಪ್ಪ ಎಂದು ನನ್ನ ಕೆನ್ನೆಗೆ ಮುತ್ತು ಕೊಟ್ಟು ನಿದ್ದೆಗೆ ಜಾರಿದಳು.

Continue Reading

ಆರೋಗ್ಯ

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

vistara editorial: ಇನ್‌ಫ್ಲುಯೆಂಜಾ ಮತ್ತು ಚಳಿಗಾಲದ ಋತುವಿನಿಂದಾಗಿ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. ಜನರೂ ಎಚ್ಚರ ವಹಿಸಬೇಕಿದೆ.

VISTARANEWS.COM


on

Vistara editorial, Let's take precautions for pneumonia infection
Koo

ಕೋವಿಡ್ ಬಳಿಕ ಚೀನಾದಲ್ಲಿ ಕೋಲಾಹಲ ಸೃಷ್ಟಿಸಿರುವ ನ್ಯುಮೋನಿಯಾ ರೀತಿಯ ಸೋಂಕು (Pneumonia Outbreak) ಇದೀಗ ಭಾರತಕ್ಕೂ ಹರಡಿರುವುದು ಖಚಿತವಾಗಿದೆ. ದೆಹಲಿಯ ಏಮ್ಸ್ (AIIMS Delhi) ಆಸ್ಪತ್ರೆಯಲ್ಲಿ ಇದರ 7 ಪ್ರಕರಣ ಪತ್ತೆಯಾಗಿದೆ. ದಿಲ್ಲಿಯಲ್ಲಿ ಕಾಣಿಸಿಕೊಂಡಿರುವುದು ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ಬ್ಯಾಕ್ಟೀರಿಯಾ (Pneumonia Outbreak) ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್‌ ಘೋಷಿಸಿದ ಭಾರತ ತೀವ್ರ ಮುನ್ನೆಚ್ಚರಿಕೆ ವಹಿಸಿತ್ತು. ಒಟ್ಟು 67 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 7 ಮಾದರಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. 2023ರ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಕೆಲವೇ ದಿನಗಳ ಹಿಂದೆ ಈ ಬಗ್ಗೆ ಆಸ್ಪತ್ರೆಗಳ ಸನ್ನದ್ಧತೆ ಪರಿಶೀಲಿಸುವಂತೆ ಭಾರತದಲ್ಲಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿತ್ತು. ಈ ಬಗ್ಗೆ ಇನ್ನಷ್ಟು ಎಚ್ಚರ ವಹಿಸುವುದು ಸೂಕ್ತವಾಗಿದೆ(Vistara editorial).

ಚೀನಾದಲ್ಲಿ ಈ ಸೋಂಕು ತೀವ್ರಗತಿಯಲ್ಲಿ ಪಸರಿಸಿ ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯಗಳ ಆಸ್ಪತ್ರೆಗಳು ಭರ್ತಿಯಾಗಿವೆ. ಆ ಮೂಲಕ ಕೋವಿಡ್‌ ನಂತರ ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಪಸರಿಸಲಿದೆಯೇ ಎಂಬ ಆತಂಕ ಕಾಣಿಸಿಕೊಂಡಿತ್ತು. ಚೀನಾದಲ್ಲಿ ಆತಂಕ ಹುಟ್ಟಿಸಿದ ಈ ಸೋಂಕಿನಿಂದಾಗಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯ ಮತ್ತೆ ಜಾರಿ ಮಾಡಲಾಗಿದೆ. ಈ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ. ಭಾರತಕ್ಕೂ ಮೊದಲು ಅಮೆರಿಕದ ಓಹಿಯೋ ಮತ್ತು ಮಸಾಚ್ಯುಸೆಟ್ಸ್ ರಾಜ್ಯದ 3-14ರ ವಯೋಮಾನದ ಮಕ್ಕಳಲ್ಲಿ ಏಕಾಏಕಿ ಭಾರಿ ಪ್ರಮಾಣದ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿದೆ. ವೈದ್ಯಕೀಯ ಇಲಾಖೆ ಇದನ್ನು ಸೋಂಕು ಸ್ಫೋಟ ಎಂದು ಪರಿಗಣಿಸಿ ತುರ್ತು ಕ್ರಮಗಳನ್ನು ಕೈಗೊಂಡಿದೆ. ನಮ್ಮಲ್ಲಿ ಕರ್ನಾಟಕ ಸೇರಿ ಆರು ರಾಜ್ಯಗಳು ತಮ್ಮ ಆರೋಗ್ಯ ಮೂಲಸೌಕರ್ಯವನ್ನು ಅಲರ್ಟ್ ಮೋಡ್‌ನಲ್ಲಿ ಇಡಲು ಮುಂದಾಗಿವೆ. ಉಸಿರಾಟದ ಸಮಸ್ಯೆಗಳು ಕಂಡುಬಂದ ರೋಗಿಗಳನ್ನು ನಿಭಾಯಿಸಲು ಆಸ್ಪತ್ರೆಗಳು ಮತ್ತು ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಕೇಳಿಕೊಂಡಿವೆ.

ಭಾರತದಲ್ಲಿ ಪತ್ತೆಯಾದ ನ್ಯುಮೋನಿಯಾ ಬ್ಯಾಕ್ಟೀರಿಯಾವು (pneumonia bacteria) ಕೊರೋನಾವೈರಸ್‌ನಂತೆ (‌Corona Virus) ಪಸರಿಸುವ ಸಾಧ್ಯತೆ ಕಡಿಮೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೊರೊನಾ ವೈರಸ್‌ ಕಾಲಿಟ್ಟ ಆರಂಭ ಕಾಲದಲ್ಲೂ ತಜ್ಞರು ಹೀಗೇ ಹೇಳಿದ್ದರು ಎಂಬುದನ್ನು ನೆನಪಿಡಬೇಕು. ಮುಂದೆ ಅದು ಎಷ್ಟು ಅನಾಹುತ ಮಾಡಿತು ಎಂಬುದನ್ನು ಹೇಳಬೇಕಿಲ್ಲ. ಕೋವಿಡ್‌ ಬಂದಾಗ, ಉಸಿರಾಟದ ಸಮಸ್ಯೆಯು ಮಾರಣಾಂತಿಕವಾಗಬಹುದು ಎಂಬ ಅರಿವು ಯಾರಿಗೂ ಇರಲಿಲ್ಲ. ನ್ಯುಮೋನಿಯಾದ ಮುಂದುವರಿದ ಹಂತದಲ್ಲೂ ಉಸಿರಾಟದ ತೊಂದರೆಯು ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ಜ್ವರ, ಶ್ವಾಸಕೋಶದಲ್ಲಿ ಅಲ್ಪ ಪ್ರಮಾಣದ ಉರಿ ಕಾಣಿಸಿಕೊಳ್ಳುವುದು ಸದ್ಯ ಈ ಸೋಂಕಿನ ಲಕ್ಷಣಗಳಾಗಿವೆ. ವೈದ್ಯರು ರೋಗಿಗಳಿಗೆ ಔಷಧ ನೀಡಿ ಮನೆಯಲ್ಲೆ ಆರೈಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ. ಆದರೆ ಮಕ್ಕಳಲ್ಲಿ ಈ ಜ್ವರ ಕಂಡುಬಂದರೆ ಹೆತ್ತವರ ಜಂಘಾಬಲ ಉಡುಗುವುದು ಸ್ವಾಭಾವಿಕ.

ಇನ್‌ಫ್ಲುಯೆಂಜಾ ಮತ್ತು ಚಳಿಗಾಲದ ಋತುವಿನಿಂದಾಗಿ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. ವರದಿಗಳ ಪ್ರಕಾರ, ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಈ ಸೋಂಕು ಪೀಡಿತ ವ್ಯಕ್ತಿಗಳಲ್ಲಿ ಶ್ವಾಸಕೋಶದ ಉರಿಯೂತ ಮತ್ತು ಹೆಚ್ಚಿನ ಜ್ವರ ಉಂಟುಮಾಡುತ್ತದೆ. ಆದರೆ ಕೆಮ್ಮಿನಂತಹ ಇತರ ಲಕ್ಷಣಗಳು ಕಾಣೆಯಾಗಿವೆ. ಉಸಿರಾಟದ ಕಾಯಿಲೆಗಳ ಪೀಕ್ ಸೀಸನ್‌ನಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಈ ʼನಿಗೂಢ ನ್ಯುಮೋನಿಯಾ’ ಪ್ರಕರಣಗಳ ಉಲ್ಬಣ ಉಂಟಾಗಿದೆ. ಇದು ಪ್ರತಿರೋಧಕ ಶಕ್ತಿಯ ಕೊರತೆಯಿಂದ ಕಾಣಿಸಕೊಂಡಿರಬಹುದು ಎಂಬುದು ತಜ್ಞರ ಅನುಮಾನ. ಇದು ಹೊಸ ವೈರಸ್‌ ಅಲ್ಲ, ಮೊದಲು ಅಸ್ತಿತ್ವದಲ್ಲಿರುವುದೇ ಎಂದು ಗೊತ್ತಾಗಿದೆ.

ಅದೇನೇ ಇರಲಿ, ನಮ್ಮ ಮುನ್ನೆಚ್ಚರಿಕೆ ನಾವು ವಹಿಸೋಣ. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು, ಸಾಬೂನು ಮತ್ತು ನೀರಿನಿಂದ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು, ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಸ್ಪರ್ಶಿಸುವುದನ್ನು ತಪ್ಪಿಸುವುದು, ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವುದು, ಅಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಮಾಸ್ಕ್ ಬಳಸುವುದು, ಫ್ಲೂ ಪೀಡಿತ ವ್ಯಕ್ತಿಗಳಿಂದ ಕನಿಷ್ಠ ಅಂತರವನ್ನು ಕಾಪಾಡಿಕೊಳ್ಳುವುದು, ಸಾಕಷ್ಟು ನಿದ್ರೆ ಮಾಡುವುದು ಹಾಗೂ ದೈಹಿಕವಾಗಿ ಕ್ರಿಯಾಶೀಲರಾಗಿರುವುದು ಇದರ ಮುನ್ನೆಚ್ಚರಿಕೆಗಳಾಗಿವೆ. ಇವು ವೈಯಕ್ತಿಕ ಮುನ್ನೆಚ್ಚರಿಕೆಗಳಾದರೆ, ಸರ್ಕಾರವೂ ಸಾಕಷ್ಟು ಎಚ್ಚರ ತೆಗೆದುಕೊಂಡು ಆರೋಗ್ಯ ಸೇವೆಯನ್ನು ಸನ್ನದ್ಧತೆಯಲ್ಲಿಡಬೇಕಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಶ್ಮೀರಿ ಪಂಡಿತರ ಅಳಲು ಕೊನೆಯಾಗಲು ಹೊಸ ವಿಧೇಯಕ ನೆರವಾಗಲಿ

Continue Reading
Advertisement
dengue flue
ಆರೋಗ್ಯ14 mins ago

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

Vistara Editorial, Government should conduct exam without any lapse
ಕರ್ನಾಟಕ35 mins ago

Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್‌, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ

Raja Marga Father and Daughter
ಅಂಕಣ48 mins ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Hair Care Tips
ಆರೋಗ್ಯ1 hour ago

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

Heavy Rain warning In karnataka
ಉಡುಪಿ2 hours ago

Karnataka Weather : ಬಟ್ಟೆ ತೊಳೆಯೋಕೆ ವೀಕೆಂಡ್‌ವರೆಗೂ ಕಾಯ್ಬೇಡಿ; ಇನ್ನೊಂದು ವಾರ ಭಾರಿ ಮಳೆ!

Vistara editorial, Let's take precautions for pneumonia infection
ಆರೋಗ್ಯ2 hours ago

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

How To Remove Tea Stains From Clothes
ಲೈಫ್‌ಸ್ಟೈಲ್2 hours ago

How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು!

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Vistara News impact, Governmet to scrap 7 d rule of SCSP and TSP act
ಕರ್ನಾಟಕ9 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್9 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ14 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ14 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ20 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌