Rohit Sharma : ಒಂದು ಸಿಕ್ಸರ್ ಬಾರಿಸಿದರೆ ಕೊಹ್ಲಿಯ ದಾಖಲೆ ಮುರಿಯುತ್ತಾರೆ ರೋಹಿತ್​ ಶರ್ಮಾ - Vistara News

ಪ್ರಮುಖ ಸುದ್ದಿ

Rohit Sharma : ಒಂದು ಸಿಕ್ಸರ್ ಬಾರಿಸಿದರೆ ಕೊಹ್ಲಿಯ ದಾಖಲೆ ಮುರಿಯುತ್ತಾರೆ ರೋಹಿತ್​ ಶರ್ಮಾ

VISTARANEWS.COM


on

Rohit Sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ವಿಶ್ವ ಕಪ್ ಪಂದ್ಯಕ್ಕಾಗಿ (T20 World Cup 2024) ಇತ್ತಂಡಗಳು ಸಜ್ಜಾಗುತ್ತಿವೆ. ಏತನ್ಮಧ್ಯೆ ಅಭಿಮಾನಿಗಳು ಭಾರತ ತಂಡದ ಯಾರು ಉತ್ತಮ ಪ್ರದರ್ಶನ ನೀಡಬಹುದು ಎಂದು ಅಂದಾಜಿಸುತ್ತಿದ್ದಾರೆ. ಉತ್ತಮ ಫಾರ್ಮ್​ನಲ್ಲಿರುವ ರೋಹಿತ್​ ಶರ್ಮಾ(Rohit Sharma), ಸೂರ್ಯಕುಮಾರ್, ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಈ ಬಾರಿ ಭರ್ಜರಿ ಪ್ರದರ್ಶನ ನೀಡಬಹುದು ಎಂದು ಅಂದಾಜಿಸಿದ್ದಾರೆ. ಹಿಂದಿನ ಪ್ರದರ್ಶನಗಳನ್ನು ನೋಡಿದರೆ ಹೌದು. ಇದೇ ವೇಳೆ ಇದುವರೆಗೆ ಮಿಂಚಲು ವಿಫಲಗೊಂಡಿರುವ ವಿರಾಟ್​ ಕೊಹ್ಲಿಯ ಬ್ಯಾಟ್​ನಿಂದಲೂ ರನ್​ ಮೂಡಿ ಬರಬಹುದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಇವೆಲ್ಲದರ ನಡುವೆ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ದಾಖಲೆಯೊಂದಕ್ಕಾಗಿ ಜಿದ್ದಿಗೆ ಬೀಳುವ ಎಲ್ಲ ಸಾಧ್ಯತೆಗಳಿವೆ. ಯಾಕೆಂದರೆ ಟಿ20 ವಿಶ್ವ ಕಪ್​ನಲ್ಲಿ ಅತ್ಯಧಿಕ ರನ್​ ಬಾರಿಸಿ ದಾಖಲೆಯನ್ನು ಮುರಿಯಲು ರೋಹಿತ್ ಶ್ರಮಿಸಿದರೆ ಕೊಹ್ಲಿ ಮುಂದಕ್ಕೆ ಹೋಗಲು ಯತ್ನಿಸಲಿದ್ದಾರೆ.

ವಿರಾಟ್ ಕೊಹ್ಲಿ ಪ್ರಸ್ತುತ ಟಿ 20 ವಿಶ್ವಕಪ್​​ನಲ್ಲಿ 1,216 ರನ್​ಗಳೊಂದಿಗೆ ಪ್ರತಿಷ್ಠಿತ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ 1,211 ರನ್ ಗಳಿಸಿದ್ದು, ತಮ್ಮ ಸಹ ಆಟಗಾರನನ್ನು ಹಿಂದಿಕ್ಕಲು ಕೇವಲ ಒಂದು ಸಿಕ್ಸರ್​​ ದೂರದಲ್ಲಿದ್ದಾರೆ. ರೋಹಿತ್ ಪ್ರಭಾವಶಾಲಿ ಪಟ್ಟಿಯಲ್ಲಿ 12 ಅರ್ಧಶತಕಗಳು ಸೇರಿವೆ. ಇದು ಆಟದ ಕಿರು ಸ್ವರೂಪದಲ್ಲಿ ಅವರ ಸ್ಥಿರತೆ ಮತ್ತು ಪ್ರಾಬಲ್ಯವನ್ನು ಒತ್ತಿಹೇಳುತ್ತದೆ.

ಪ್ರಸ್ತುತ ಪಂದ್ಯಾವಳಿಯಲ್ಲಿ, ರೋಹಿತ್ ಅದ್ಭುತ ಫಾರ್ಮ್​ ಕಂಡುಕೊಂಡಿದ್ದಾರೆ. ಏಳು ಇನ್ನಿಂಗ್ಸ್​ಗಳಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 248 ರನ್​ಗಳನ್ನು ಗಳಿಸಿದ್ದಾರೆ. ಈ ಮೂಲಕ ಪಂದ್ಯಾವಳಿಯ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಮೂರು ಬಾರಿ ಐಸಿಸಿ ಫೈನಲ್ ತಲುಪಿದೆ. ಆದಾಗ್ಯೂ, 2023 ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್​ನ್ಲಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದರಿಂದ ತಂಡವು ಬೇಸರಕ್ಕೆ ಒಳಗಾಗಿದೆ.

2022 ರ ಟಿ 20 ವಿಶ್ವಕಪ್​​ನಲ್ಲಿ ನಾಯಕನಾಗಿ ಅವರ ಉದ್ಘಾಟನಾ ಪಂದ್ಯಾವಳಿಯಲ್ಲಿ, ಭಾರತವು ಸೆಮಿಫೈನಲ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತು. ಬಾರ್ಬಡೋಸ್​ನಲ್ಲಿ ನಡೆಯಲಿರುವ ಫೈನಲ್ ಈ ಸ್ವರೂಪದಲ್ಲಿ ಭಾರತವನ್ನು ಐಸಿಸಿ ಪ್ರಶಸ್ತಿಗೆ ಮುನ್ನಡೆಸಲು ರೋಹಿತ್ ಶರ್ಮಾ ಅವರಿಗೆ ಕೊನೇ ಅವಕಾಶವಾಗಿದೆ.

ಭಾರತವೇ ವಿಶ್ವ ಕಪ್ ಗೆಲ್ಲುತ್ತದೆ ಎಂದ ಕುಲ್ದೀಪ್​ ಕೋಚ್​

ಕುಲದೀಪ್ ಯಾದವ್ ಅವರ ಬಾಲ್ಯದ ತರಬೇತುದಾರ ಕಪಿಲ್ ದೇವ್ ಪಾಂಡೆ ಭಾರತವೇ ವಿಶ್ವ ಕಪ್​ ಗೆಲ್ಲುತ್ತದೆ (T20 World cup) ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಹಾಲಿ ಆವೃತ್ತಿಯಲ್ಲಿ ಕುಲ್ದೀಪ್ ಯಾದವ್ ಅವರ ಪ್ರದರ್ಶನವನ್ನೂ ಮೆಚ್ಚಿದ್ದಾರೆ. ನ್ಯೂಯಾರ್ಕ್​ನಲ್ಲಿ ವೇಗದ ಬೌಲಿಂಗ್​ಗೆ ಪೂರಕ ಪಿಚ್ ಇದ್ದ ಕಾರಣ ಯುಎಸ್ಎಯಲ್ಲಿ ಆಡಿದ ಪಂದ್ಯಾವಳಿಯ ಗುಂಪು ಹಂತಗಳ ಪಂದ್ಯದಲ್ಲಿ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ವಿಂಡೀಸ್​ನಲ್ಲಿ ನಡೆದ ಸೂಪರ್​ 8 ಹಂತದಲ್ಲಿ ಅವರಿಗೆ ಅವಕಾಶಗಳು ಲಭಿಸಿವೆ.

ಇದನ್ನೂ ಓದಿ: T20 World Cup Final : ಭಾರತ ತಂಡದ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ

ನಿಸ್ಸಂಶಯವಾಗಿ ಅವರು (ಕುಲ್ದೀಪ್) ಭಾರತೀಯ ತಂಡದ ಬೆನ್ನೆಲುಬು. ಕಳೆದ ನಾಲ್ಕು ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಯಾವ ರೀತಿಯ ಆಟಗಾರ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ದೇಶಕ್ಕಾಗಿ ಪ್ರದರ್ಶನ ನೀಡುವುದನ್ನು ನೋಡಲು ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ ಎಂದು ಕಪಿಲ್ ದೇವ್ ಪಾಂಡೆ ಹೇಳಿದರು.

ಕುಲದೀಪ್ ಯಾದವ್ ಆಡಿರುವ ನಾಲ್ಕು ಪಂದ್ಯಗಳಲ್ಲಿ 9.40ರ ಸರಾಸರಿಯಲ್ಲಿ 5.87ರ ಎಕಾನಮಿ ರೇಟ್​ನಲ್ಲಿ 10 ವಿಕೆಟ್​​ಗಳನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್​ನಲ್ಲಿ 19 ರನ್​ಗೆ 3 ವಿಕೆಟ್ ಪಡೆದು ಭಾರತ ಫೈನಲ್​ ಪ್ರವೇಶಿಸಲು ಸಹಾಯ ಮಾಡಿದ್ದರು. ಎಡಗೈ ಮಣಿಕಟ್ಟು ಸ್ಪಿನ್ನರ್ ಕಳೆದ ಒಂದು ವರ್ಷದಿಂದ ಆಟದ ಎಲ್ಲಾ ಸ್ವರೂಪಗಳಲ್ಲಿ ಪ್ರಭಾವಶಾಲಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್​​ನಲ್ಲೂ ಕುಲ್ದೀಪ್ ನಿರ್ಣಾಯಕ ಪಾತ್ರ ವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

IND vs SA : ಲ್ಲಾ ಮೂರು ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. ಏಕದಿನ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ತಮ್ಮ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದರೆ, ಏಕೈಕ ಟೆಸ್ಟ್​ನಲ್ಲಿ ಭಾರತವೇ ಗೆದ್ದಿದೆ.

VISTARANEWS.COM


on

IND vs SA
Koo

ಬೆಂಗಳೂರು: ಆತಿಥೇಯ ಭಾರತ ಮಹಿಳೆಯ ಕ್ರಿಕೆಟ್​ ತಂಡದ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿಗೆ (IND vs SA ) ದಕ್ಷಿಣ ಆಫ್ರಿಕಾ ಕ್ರಿಕೆಟ್​ ಸಂಸ್ಥೆ ಸೋಮವಾರ (ಜುಲೈ 1) ತನ್ನ ತಂಡವನ್ನು ಪ್ರಕಟಿಸಿದೆ. ಜುಲೈ 5 ರಿಂದ 9 ರವರೆಗೆ ಪಂದ್ಯಗಳು ನಡೆಯಲಿವೆ. ಎಲ್ಲಾ ಮೂರು ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. ಏಕದಿನ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ತಮ್ಮ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದರೆ, ಏಕೈಕ ಟೆಸ್ಟ್​ನಲ್ಲಿ ಭಾರತವೇ ಗೆದ್ದಿದೆ.

ಕ್ಲೋಯಿ ಟ್ರಯಾನ್ ದಕ್ಷಿಣ ಆಫ್ರಿಕಾ ತಂಡಕ್ಕೆ ತಂಡಕ್ಕೆ ಸೇರಿದ ಆಟಗಾರ್ತಿ. ಬೆನ್ನುನೋವಿನಿಂದ ಚೇತರಿಸಿಕೊಂಡ ನಂತರ ಟ್ರಿಯಾನ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಅವರು ಈಗಾಗಲೇ ಭಾರತಕ್ಕೆ ಆಗಮಿಸಿದ್ದಾರೆ ಮತ್ತು ಚೆನ್ನೈನಲ್ಲಿ ನೆಟ್ ಅಭ್ಯಾಸ ನಡೆಸುತ್ತಿದ್ದಾರೆ. ಪ್ರವಾಸಿ ತಂಡ ಏಕ ದಿನ ಪಂದ್ಯವಾಡಿದ ಡೆಲ್ಮಿ ಟಕರ್ ಮತ್ತು ನೊಂಡುಮಿಸೊ ಶಂಗಾಸೆ ಅವರನ್ನು ಟಿ 20 ಪಂದ್ಯಗಳಿಗೆ ಸೇರಿಸದಿರಲು ನಿರ್ಧರಿಸಿದ್ದಾರೆ. ಆಲ್​ರೌಂಡರ್​ಗಳು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ತಂಡದ ಭಾಗವಾಗಿದ್ದರು ಅವರು ಮನೆಗೆ ಮರಳಲಿದ್ದಾರೆ. ವಿಕೆಟ್ ಕೀಪರ್ ಮೈಕ್ ಡಿ ರೈಡರ್ ಕೂಡ ಟಿ 20 ಐ ತಂಡದ ಭಾಗವಾಗಿದ್ದಾರೆ. ಕಳೆದ ತಿಂಗಳು ಅವರು ಭಾರತ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಎರಡರಲ್ಲಿ ಆಡಿದ್ದರು.

ಟಿ20 ಸರಣಿಗೆ ಆಯ್ಕೆಯಾಗಿರುವ 15 ಆಟಗಾರರ ತಂಡದೊಂದಿಗೆ ನಾವು ಉತ್ಸುಕರಾಗಿದ್ದೇವೆ. ಗಾಯದಿಂದ ಚೇತರಿಸಿಕೊಂಡ ಕ್ಲೋಯ್ ಅವರನ್ನು ನಾವು ತಂಡಕ್ಕೆ ಸೇರಿಸಿದ್ದೇವೆ. ಅವರು ತಂಡಕ್ಕೆ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರನ್ನು ಮತ್ತೆ ಅಂಗಣದಲ್ಲಿ ನೋಡಲು ನಾವು ಕಾಯಲು ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಮಧ್ಯಂತರ ಮುಖ್ಯ ಕೋಚ್ ದಿಲ್ಲಾನ್ ಡು ಪ್ರೀಜ್ ಹೇಳಿದ್ದಾರೆ.

ಇದನ್ನೂ ಓದಿ: Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ

ನಾವು ಭಾರತ ವಿರುದ್ಧ ಕೊನೆಯ ಮೂರು ಟಿ 20 ಪಂದ್ಯಗಳನ್ನು ಆಡಿದ್ದೇವೆ. ನಾವು ತವರಿಗೆ ಮರಳುವ ಮೊದಲು ಮತ್ತು ಬಾಂಗ್ಲಾದೇಶದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್​​ಗಾಗಿ ನಮ್ಮ ಅಂತಿಮ ಸಿದ್ಧತೆ ಪ್ರಾರಂಭಿಸಲಿದ್ದೇವೆ ಎಂದು ಡು ಪ್ರೀಜ್ ಹೇಳಿದರು.

ದಕ್ಷಿಣ ಆಫ್ರಿಕಾ ಮೇಲೆ ಸರಣಿ ಗೆಲುವು

ಏಕದಿನ ಮತ್ತು ಏಕೈಕ ಟೆಸ್ಟ್ ಪಂದ್ಯವನ್ನು ಸೋತ ನಂತರ ದಕ್ಷಿಣ ಆಫ್ರಿಕಾ ಮುಂಬರುವ ಟಿ 20 ಐ ಸರಣಿಯನ್ನು ಗೆಲ್ಲಲು ಮುಂದಾಗಿದೆ. ಆ ತಂಡ ಪ್ರವಾಸದಲ್ಲಿ ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ ಮತ್ತು ಮುಂಬರುವ ಸರಣಿಯಲ್ಲಿ ಸೋಲಿನ ಸರಣಿಯನ್ನು ಮುರಿಯು ಭರವಸೆಯಲ್ಲಿದ್ದಾರೆ. ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದಿದ್ದ ಭಾರತ, ಟೆಸ್ಟ್​​ನಲ್ಲೂ 10 ವಿಕೆಟ್​ಗಳ ಭರ್ಜರಿ ಗೆಲುವು ಕಂಡಿತ್ತು.

ಭಾರತ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ:

ಲಾರಾ ವೊಲ್ವಾರ್ಡ್ (ನಾಯಕಿ), ಅನ್ನೆಕ್ ಬಾಷ್, ತಜ್ಮಿನ್ ಬ್ರಿಟ್ಸ್, ನಾಡಿನ್ ಡಿ ಕ್ಲೆರ್ಕ್, ಅನಾರಿ ಡಿರ್ಕ್ಸೆನ್, ಮೈಕ್ ಡಿ ರೀಡರ್, ಸಿನಾಲೊ ಜಫ್ತಾ, ಮಾರಿಜಾನೆ ಕಾಪ್, ಅಯಬೊಂಗಾ ಖಾಕಾ, ಮಸಾಬಟಾ ಕ್ಲಾಸ್, ಸುನೆ ಲೂಸ್, ಎಲಿಸ್-ಮೇರಿ ಮಾರ್ಕ್ಸ್, ನೊಂಕುಲುಲೆಕೊ ಮಲಾಬಾ, ತುಮಿ ಸೆಖುಖುನೆ, ಕ್ಲೋಯ್ ಟ್ರಿಯಾನ್.

Continue Reading

ಕ್ರಿಕೆಟ್

Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ

Virat Kohli: “ಪ್ರೀತಿಯ ನರೇಂದ್ರ ಮೋದಿ ಸರ್, ನಿಮ್ಮ ಪ್ರೀತಿಯ ಮಾತುಗಳಿಗೆ ಮತ್ತು ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು. ಕಪ್ ಗೆದ್ದ ಈ ತಂಡದ ಭಾಗವಾಗಿರುವುದು ಒಂದು ಸೌಭಾಗ್ಯ . ಇದು ಇಡೀ ರಾಷ್ಟ್ರಕ್ಕೆ ಸಂತೋಷ ನೀಡಿದ ಈ ಕ್ಷಣದ ಸಂಭ್ರಮ ನಮಗಿದೆ ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Virat Kohli
Koo

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup 2024 ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ ಶುಭಾಶಯ ತಿಳಿಸಿದ್ದರು. ಇದೇ ವೇಳೆ ಟಿ20 ಮಾದರಿಯಲ್ಲಿ ನಿವೃತ್ತಿ ಪಡೆದ ಕೊಹ್ಲಿ, ಹಾಗೂ ರೋಹಿತ್​ಗೂ ವಿಶೇಷ ಹಾರೈಕೆಗಳನ್ನು ತಿಳಿಸಿದ್ದರು. ಆ ಸಂದೇಶಕ್ಕೆ ವಿರಾಟ್ ಕೊಹ್ಲಿ (Virat Kohli) ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿದ ಭಾರತ ಇತಿಹಾಸದಲ್ಲಿ ಎರಡನೇ ಬಾರಿಗೆ ಟಿ 20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. 2007 ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದ ನಂತರ ಮೊದಲ ಬಾರಿಗೆ ಈ ಟ್ರೋಫಿ ಗೆದ್ದಿತು. ಸೆಮಿಫೈನಲ್ ತನಕ ಬ್ಯಾಟಿಂಗ್​ನಲ್ಲಿ ಹೆಣಗಾಡುತ್ತಿದ್ದ ವಿರಾಟ್ ಕೊಹ್ಲಿ, ಫೈನಲ್​​ನಲ್ಲಿ ನಿರ್ಣಾಯಕ ಅರ್ಧ ಶತಕ ಬಾರಿಸಿದ್ದರು.

ಭಾರತ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿತ್ತು. ಆದರೆ ಮಾಜಿ ನಾಯಕ ಕೊಹ್ಲಿ 76 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಉತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ವಿಜಯದ ನಂತರ, ಪ್ರಧಾನಿ ಮೋದಿ ಟೀಮ್ ಇಂಡಿಯಾ ಸದಸ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಸ್ಮರಣೀಯ ವಿಜಯಕ್ಕಾಗಿ ಅವರನ್ನು ಅಭಿನಂದಿಸಿದ್ದರು.

ಮೋದಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿಶೇಷ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಪಂದ್ಯದ ನಂತರ ಟಿ 20 ಯಿಂದ ನಿವೃತ್ತಿ ಘೋಷಿಸಿದರು, ಆದರೆ ಪಂದ್ಯಾವಳಿಯು ದ್ರಾವಿಡ್ ಅವರ ಕೊನೆಯ ಕೋಚಿಂಗ್​​ ನೇಮಕವಾಗಿತ್ತು. ಫೈನಲ್​​ನಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್​​ಗಾಗಿ ಕೊಹ್ಲಿಯನ್ನು ಪ್ರಧಾನಿ ಶ್ಲಾಘಿಸಿದ್ದರು. ಎಕ್ಸ್ ಮೂಲಕ ವಿಶೇಷ ಸಂದೇಶ ಪೋಸ್ಟ್ ಮಾಡಿದ್ದರು.

ಪ್ರಧಾನಿ ಮೋದಿಯವರ ಸಂದೇಶಕ್ಕೆ ಕೊಹ್ಲಿ ಸೋಮವಾರ (ಜುಲೈ 1) ಉತ್ತರಿಸಿದ್ದಾರೆ. ಎಕ್ಸ್ ನಲ್ಲಿ, ಭಾರತದ ಬ್ಯಾಟಿಂಗ್ ಸೂಪರ್ ಸ್ಟಾರ್ ತಮ್ಮನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರೀತಿಯ ನರೇಂದ್ರ ಮೋದಿ ಸರ್, ನಿಮ್ಮ ಪ್ರೀತಿಯ ಮಾತುಗಳಿಗೆ ಮತ್ತು ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು. ಕಪ್ ಗೆದ್ದ ಈ ತಂಡದ ಭಾಗವಾಗಿರುವುದು ಒಂದು ಸೌಭಾಗ್ಯ . ಇದು ಇಡೀ ರಾಷ್ಟ್ರಕ್ಕೆ ಸಂತೋಷ ನೀಡಿದ ಈ ಕ್ಷಣದ ಸಂಭ್ರಮ ನಮಗಿದೆ ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿಯ ಅದ್ಭುತ ಟಿ 20 ಐ ವೃತ್ತಿಜೀವನ

ಟಿ20 ಕ್ರಿಕೆಟ್​​ನಲ್ಲಿ ಅತ್ಯಂತ ಬಲಿಷ್ಠ ಬ್ಯಾಟರ್​ಗಳಲ್ಲಿ ಒಬ್ಬರಾಗಿ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. 2010 ರಲ್ಲಿ ಆಟದ ಕಿರು ಸ್ವರೂಪದಲ್ಲಿ ಪಾದಾರ್ಪಣೆ ಮಾಡಿದ ಬ್ಯಾಟಿಂಗ್ ದಿಗ್ಗಜ 2012 ರಲ್ಲಿ ಮೊದಲ ಟಿ 20 ವಿಶ್ವಕಪ್​​ನಲ್ಲಿ ಆಡಿದ್ದರು.

ಇದನ್ನೂ ಓದಿ: ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

ಬ್ಯಾಟಿಂಗ್ ಘಟಕದ ಮುಖ್ಯ ಆಧಾರವಾಗುವ ಜತೆಗೆ ಟಿ 20 ಐ ತಂಡದ ಅವಿಭಾಜ್ಯ ಸದಸ್ಯರಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ವಿರಾಟ್ ಕೊಹ್ಲಿ ಒಟ್ಟು 125 ಟಿ 20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದವರು. ರೋಹಿತ್ ಶರ್ಮಾ ಮಾತ್ರ ಟಿ20ಐನಲ್ಲಿ ಅವರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ.

125 ಪಂದ್ಯಗಳನ್ನಾಡಿರುವ ಕೊಹ್ಲಿ 48.69ರ ಸರಾಸರಿಯಲ್ಲಿ 4188 ರನ್ ಗಳಿಸಿದ್ದಾರೆ. ಅವರು ಟಿ 20 ಪಂದ್ಯಗಳಲ್ಲಿ ಒಂದು ಶತಕ ಮತ್ತು 38 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟಿ 20 ವಿಶ್ವಕಪ್​ನಲ್ಲಿ ದಾಖಲೆಯೂ ಅಷ್ಟೇ ಪ್ರಭಾವಶಾಲಿಯಾಗಿದೆ. ಕೊಹ್ಲಿ ಪ್ರಸ್ತುತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. 35 ಪಂದ್ಯಗಳಲ್ಲಿ 15 ಅರ್ಧಶತಕಗಳ ಸಹಾಯದಿಂದ 1292 ರನ್ ಗಳಿಸಿದ್ದಾರೆ.

Continue Reading

Latest

Sha Rukh Khan: ಸಾಲದ ಇಎಂಐ ಕಟ್ಟಲಾಗದೆ ಕಾರನ್ನು ಕಳೆದುಕೊಂಡಿದ್ದ ಶಾರುಖ್ ಖಾನ್!

Sha Rukh Khan: ಕೋಟಿ ಕೋಟಿ ಸಂಭಾವನೆ ಪಡೆಯುವ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಕೂಡ ಒಂದು ಕಾಲದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲಿದ್ದರಂತೆ. ಕಾರಿನ ಇಎಂಐ ಪಾವತಿಸಲು ಸಾಧ್ಯವಾಗದ ಕಾರಣ ಶಾರುಖ್ ಖಾನ್ ಅವರ ಕಾರನ್ನು ಬ್ಯಾಂಕ್‌ನವರು ತೆಗೆದುಕೊಂಡು ಹೋಗಿದ್ದರು ಎಂದು ಶಾರುಖ್ ಖಾನ್ ಬಗ್ಗೆ ಅವರ ಸ್ನೇಹಿತೆ ನಟಿ ಜೂಹಿ ಚಾವ್ಲಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆಗ ಶಾರುಕ್ ಖಾನ್ ನಟಿ ಜೂಹಿ ಚಾವ್ಲಾ ಹಾಗೂ ನಟ ಜಾಕಿಶ್ರಾಫ್ ಅವರ ಕಾರಿನಲ್ಲಿ ಓಡಾಡುತ್ತಿದ್ದರಂತೆ.

VISTARANEWS.COM


on

Sha Rukh Khan
Koo

ಮುಂಬೈ : ಹಣದ ಸಮಸ್ಯೆ ಎನ್ನುವುದು ಬಡವರಿಗೆ, ಮಧ್ಯಮವರ್ಗದವರಿಗೆ ಮಾತ್ರವಲ್ಲ, ಕೆಲವೊಮ್ಮೆ ಶ್ರೀಮಂತರು, ಸ್ಟಾರ್ ನಟರೂ ಕೂಡ ಆರ್ಥಿಕ ಸಮಸ್ಯೆಯಿಂದ ಬಳಲುತ್ತಾರೆ. ಶಾರುಖ್ ಖಾನ್ (Sha Rukh Khan) ಅವರು ಬಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರು. ಕೋಟಿ ಕೋಟಿ ಸಂಭಾವನೆ ಪಡೆಯುವ ಈ ಸ್ಟಾರ್ ನಟ ಕೂಡ ಆರ್ಥಿಕ ಸಮಸ್ಯೆಯಿಂದ ಒಂದು ಕಾಲದಲ್ಲಿ ಬಳಲಿದ್ದರು ಎಂದು ಅವರ ಸ್ನೇಹಿತೆ ನಟಿ ಜೂಹಿ ಚಾವ್ಲಾ ಹೇಳಿಕೆ ನೀಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Sha Rukh Khan

ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ 90ರ ದಶಕದಲ್ಲಿ ಬಾಲಿವುಡ್‌ನ ಹಲವಾರು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಆವಾಗಿನಿಂದ ಇವರಿಬ್ಬರು ಆಪ್ತ ಸ್ನೇಹಿತರಾಗಿದ್ದರು. ಇಬ್ಬರೂ ಸೇರಿ ಡ್ರೀಮ್ಸ್‌ ಅನ್‌ಲಿಮಿಟೆಡ್‌ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿದ್ದರು.

Sha Rukh Khan

ಅಲ್ಲದೇ ಇವರಿಬ್ಬರು ಐಪಿಎಲ್ ತಂಡದ ಮಾಲೀಕರಾಗಿ ಸಹ ಜೊತೆಯಾಗಿದ್ದರು. ಇತ್ತೀಚೆಗೆ, ಕಾರ್ಯಕ್ರಮವೊಂದರಲ್ಲಿ, ನಟಿ ಜೂಹಿ ಚಾವ್ಲಾ ಅವರು ಮಾತನಾಡಿ ಇಎಂಐ ಪಾವತಿಸಲು ಸಾಧ್ಯವಾಗದ ಕಾರಣ ಶಾರುಖ್ ಖಾನ್ ಅವರ ಕಾರನ್ನು ಬ್ಯಾಂಕ್‌ನವರು ತೆಗೆದುಕೊಂಡು ಹೋಗಿದ್ದರು ಎಂಬ ಸಂಗತಿಯನ್ನು ಶಾರುಖ್ ಖಾನ್ ವೃತ್ತಿ ಜೀವನದ ಆರಂಭದ ದಿನಗಳನ್ನು ಸ್ಮರಿಸಿಕೊಂಡು ಹೇಳಿದ್ದಾರೆ.

Sha Rukh Khan

ಶಾರುಖ್ ಖಾನ್ ಅವರ ಬಳಿ ಕಪ್ಪು ಜಿಪ್ಸಿ ಕಾರ್ ಇತ್ತು. ಶಾರುಖ್ ಖಾನ್ ಅವರು ಹಗಲಿರುಳು ತಮ್ಮ ಸಿನಿಮಾ ಶೂಟಿಂಗ್‌ಗಾಗಿ ಆ ಕಾರಿನಲ್ಲೇ ಹೋಗುತ್ತಿದ್ದರು. ಆದರೆ ಕೆಲವು ಕಾರಣಗಳಿಂದಾಗಿ, ಅವರು ತಮ್ಮ ಕಾರಿಗೆ ಇಎಂಐ ಪಾವತಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಕಾರನ್ನು ತೆಗೆದುಕೊಂಡು ಹೋದರು ಎಂದು ಹೇಳಿದ್ದಾರೆ. ಅಲ್ಲದೇ ಅವರಿಗೆ ಮುಂಬೈನಲ್ಲಿ ಮನೆ ಇರಲಿಲ್ಲ. ಹಾಗೇ ಅವರಿಗೆ ಅಡುಗೆ ಮಾಡಲು ಯಾರೂ ಇರಲಿಲ್ಲ. ಅವರ ಬಗ್ಗೆ ಚಿಂತಿಸುತ್ತಿದ್ದೆ ಎಂದು ನಟಿ ಹಿಂದೆ ನಡೆದ ಘಟನೆಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಆದರೆ ಈಗ ಅವರು ದೊಡ್ಡ ನಟ ಆಗಿದ್ದಾರೆ ಎಂದು ಅವರು ಖುಷಿ ಪಟ್ಟಿದ್ದಾರೆ.

2015ರಲ್ಲಿ ಇದೇ ವಿಚಾರದ ಬಗ್ಗೆ ನಟ ಶಾರುಖ್ ಖಾನ್‌ವರು ಕೂಡ ಟಿವಿ ಚಾನೆಲ್‌ವೊಂದರಲ್ಲಿ ಹೇಳಿದ್ದರು. ತಾನು ಖರೀದಿಸಿದ ಮೊದಲ ಕಾರಿಗೆ ಇಎಂಐ ಕಟ್ಟಲು ಆಗದ ಕಾರಣ ಬ್ಯಾಂಕಿನವರು ತೆಗೆದುಕೊಂಡು ಹೋಗಿದ್ದರು. ಆಗ ನಟಿ ಜೂಹಿ ಚಾವ್ಲಾ ತಮ್ಮ ಕಾರನ್ನು ನೀಡಿರುವುದಾಗಿ ಹೇಳಿದ್ದರು. ಮತ್ತು ಕೆಲವೊಮ್ಮೆ ನಟ ಜಾಕಿಶ್ರಾಫ್ ಅವರ ಕಾರಿನಲ್ಲಿ ಓಡಾಡುತ್ತಿದ್ದೆ ಎಂದು ತಿಳಿಸಿದ್ದರು.

Sha Rukh Khan

ಇದನ್ನೂ ಓದಿ: ದಳಪತಿ ವಿಜಯ್‌ಗೆ ಭುಜದ ಮೇಲಿನ ಕೈ ತೆಗೆಯಲು ಹೇಳಿದ ಹುಡುಗಿ; ವಿಡಿಯೊ ವೈರಲ್

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹಿರಿಯ ನಟ ಗೋವಿಂದ್ ನಾಮದೇವ್ ಅವರು 2000ರಲ್ಲಿ ಬಿಡುಗಡೆಯಾದ “ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ” ಚಿತ್ರದ ಚಿತ್ರೀಕರಣ ಸಮಯದಲ್ಲಿ ಶಾರುಖ್ ಖಾನ್ ಅವರ ಜೊತೆ ಕಳೆದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ಆ ವೇಳೆ ಅವರು ಕೆಲಸದ ಒತ್ತಡದಿಂದ ಅವರು ಧೂಮಪಾನ ಮಾಡುತ್ತಿದ್ದರು ಎಂದು ಶಾಕಿಂಗ್ ಹೇಳಿಕೆ ನೀಡಿದ್ದರು.

Continue Reading

ಪ್ರಮುಖ ಸುದ್ದಿ

ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

ZIM v IND 2024 :ಭಾರತ ವಿರುದ್ಧದ ಸರಣಿಯಲ್ಲಿ ನಖ್ವಿಯ ಭಾಗವಹಿಸುವಿಕೆ ಅವರ ಪೌರತ್ವದ ಸ್ಥಾನಮಾನದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ ಎಂದು ಜಿಂಬಾಬ್ವೆ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ. ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಬೆಲ್ಜಿಯಂನ ಬ್ರಸೆಲ್​​ನಲ್ಲಿ ಪಾಕಿಸ್ತಾನಿ ಪೋಷಕರಿಗೆ ಜನಿಸಿದ್ದರು ನಖ್ವಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರು ಜಿಂಬಾಬ್ವೆಯನ್ನು ಪ್ರತಿನಿಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಅವರನ್ನು ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು.

VISTARANEWS.COM


on

ZIM v IND 2024
Koo

ಬೆಂಗಳೂರು: ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಜುಲೈ 6 ರಂದು ಪ್ರಾರಂಭವಾಗಲಿರುವ ವಿಶ್ವ ಚಾಂಪಿಯನ್ ಭಾರತ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಗೆ (ZIM v IND 2024) ಜಿಂಬಾಬ್ವೆ ಕ್ರಿಕೆಟ್​ ಸಂಸ್ಥೆ ಸೋಮವಾರ (ಜುಲೈ 1) ತನ್ನ ತಂಡವನ್ನು ಪ್ರಕಟಿಸಿದೆ. ಅನುಭವಿ ಆಲ್​ರೌಂಡರ್​ ಸಿಕಂದರ್ ರಾಜಾ ಅವರನ್ನು ಜಿಂಬಾಬ್ವೆ ತಂಡದ ನಾಯಕರನ್ನಾಗಿ ಘೋಷಿಸಲಾಗಿದೆ. ತಂಡದಲ್ಲಿ ಬೆಲ್ಜಿಯಂ ಮೂಲದ ಆಟಗಾರ ಅಂಟಮ್ ನಖ್ವಿ ಕೂಡ ಸೇರಿಕೊಂಡಿದ್ದಾರೆ.

ಭಾರತ ವಿರುದ್ಧದ ಸರಣಿಯಲ್ಲಿ ನಖ್ವಿಯ ಭಾಗವಹಿಸುವಿಕೆ ಅವರ ಪೌರತ್ವದ ಸ್ಥಾನಮಾನದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ ಎಂದು ಜಿಂಬಾಬ್ವೆ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ. ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಬೆಲ್ಜಿಯಂನ ಬ್ರಸೆಲ್​​ನಲ್ಲಿ ಪಾಕಿಸ್ತಾನಿ ಪೋಷಕರಿಗೆ ಜನಿಸಿದ್ದರು ನಖ್ವಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರು ಜಿಂಬಾಬ್ವೆಯನ್ನು ಪ್ರತಿನಿಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಅವರನ್ನು ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು.

ಕೆರಿಬಿಯನ್ ಮತ್ತು ಯುಎಸ್ಎಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಲು ಜಿಂಬಾಬ್ವೆ ತಂಡ ವಿಫಲಗೊಂಡಿತ್ತು. ಆ ಬಳಿ ಜಿಂಬಾಬ್ವೆ ಹೊಸ ಮುಖ್ಯ ಕೋಚ್ ಜಸ್ಟಿನ್ ಸಮ್ಮನ್ಸ್ ಅವರ ಅಡಿಯಲ್ಲಿ ತಂಡವನ್ನು ಪುನರ್​ರಚನೆ ಮಾಡಲಾಯಿತು. ಇತ್ತೀಚೆಗೆ ಮುಕ್ತಾಯಗೊಂಡ ಟಿ 20 ವಿಶ್ವಕಪ್​ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ಹೊಸ ಮುಖ್ಯ ಕೋಚ್ ಜಸ್ಟಿನ್ ಸಮ್ಮನ್ಸ್ ಅವರ ಅಡಿಯಲ್ಲಿ ಪುನರ್ನಿರ್ಮಾಣ ಮಾಡುವ ಗುರಿಯನ್ನು ಹೊಂದಿರುವ ಜಿಂಬಾಬ್ವೆ, ರಾಜಾ ನೇತೃತ್ವದ ಯುವ ತಂಡವನ್ನು ಆಯ್ಕೆ ಮಾಡಿದೆ. ಇದು ಭಾರತ ವಿರುದ್ಧ ಆಡಿ ತನ್ನು ಅನುಭವ ಹೆಚ್ಚಿಸಿಕೊಳ್ಳಲಿದೆ.

ಇದನ್ನೂ ಓದಿ: IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಮಹಿಳೆಯರ ತಂಡಕ್ಕೆ10 ವಿಕೆಟ್​ ಭರ್ಜರಿ ಭರ್ಜರಿ ಜಯ

86 ಟಿ 20 ಪಂದ್ಯಗಳನ್ನು ಹೊಂದಿರುವ ನಾಯಕ ರಾಜಾ ತಂಡದ ಅತ್ಯಂತ ಅನುಭವಿ ಆಟಗಾರ. ಲ್ಯೂಕ್ ಜಾಂಗ್ವೆ ಜಿಂಬಾಬ್ವೆ ಪರ ಚುಟುಕು ಸ್ವರೂಪದಲ್ಲಿ 63 ಪಂದ್ಯಗಳನ್ನು ಆಡಿದ ಇನ್ನೊಬ್ಬ ಆಟಗಾರ. ವೇಗದ ಬೌಲರ್​ಗಳಾದ ರಿಚರ್ಡ್ ಎನ್ಗರವ (52 ಟಿ 20 ಐ) ಮತ್ತು ಬ್ಲೆಸ್ಸಿಂಗ್ ಮುಜರಬಾನಿ (51 ಟಿ 20 ಐ) ತಂಡದಲ್ಲಿರುವ ಇತರ ಅನುಭವಿ ಕ್ರಿಕೆಟಿಗರು. ಅಲ್ಲಿನ ಅನುಭವಿ ಆಟಗಾರರಾದ ಕ್ರೇಗ್ ಎರ್ವಿನ್ ಮತ್ತು ಸೀನ್ ವಿಲಿಯಮ್ಸ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ರಿಯಾನ್ ಬರ್ಲ್, ಜಾಯ್ಲಾರ್ಡ್ ಗುಂಬಿ ಮತ್ತು ಐನ್ಸ್ಲೆ ಎನ್ಡ್ಲೋವು ಕೂಡ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಜಿಂಬಾಬ್ವೆ ತಂಡ: ಸಿಕಂದರ್ ರಾಜಾ (ನಾಯಕ), ಅಕ್ರಮ್ ಫರಾಜ್, ಬೆನೆಟ್ ಬ್ರಿಯಾನ್, ಕ್ಯಾಂಪ್ಬೆಲ್ ಜೋನಾಥನ್, ಚಟಾರಾ ತೆಂಡೈ, ಜೊಂಗ್ವೆ ಲ್ಯೂಕ್, ಕೈಯಾ ಇನ್ನೋಸೆಂಟ್, ಮದಂಡೆ ಕ್ಲೈವ್, ಮಡ್ವೆರೆ ವೆಸ್ಲಿ, ಮಾವುಮಣಿ ತಡಿವಾನಾಶೆ, ಮಸಕಡ್ಜಾ ವೆಲ್ಲಿಂಗ್ಟನ್, ಮಾವುಟಾ ಬ್ರಾಂಡನ್, ಮುಜರಬಾನಿ ಬ್ಲೆಸ್ಸಿಂಗ್, ಮೈಯರ್ಸ್ ಡಿಯೋನ್, ನಖ್ವಿ ಅಂಟಮ್, ಎನ್ಗರವಾ ರಿಚರ್ಡ್, ಶುಂಬಾ ಮಿಲ್ಟನ್.

Continue Reading
Advertisement
IND vs SA
ಪ್ರಮುಖ ಸುದ್ದಿ30 mins ago

IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

Mangalore Jail
ಕರ್ನಾಟಕ41 mins ago

Mangalore Jail: ಮಂಗಳೂರು ಜೈಲಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ; ಇಬ್ಬರಿಗೆ ಗಾಯ

Virat Kohli
ಕ್ರಿಕೆಟ್54 mins ago

Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ

Challa Sreenivasulu Setty
ವಾಣಿಜ್ಯ54 mins ago

Challa Sreenivasulu Setty: ಚಲ್ಲಾ ಶ್ರೀನಿವಾಸುಲು ಸೆಟ್ಟಿ; ಅಂದು ಪ್ರೊಬೆಷನರಿ ಅಧಿಕಾರಿ, ಈಗ ಎಸ್‌ಬಿಐ ಅಧ್ಯಕ್ಷ!

CM Siddaramaiah
ವೈರಲ್ ನ್ಯೂಸ್1 hour ago

CM Siddaramaiah: ಏರ್‌ಪೋರ್ಟ್‌ನಲ್ಲೇ ಟಿ20 ವಿಶ್ವಕಪ್‌ ಫೈನಲ್‌ ವೀಕ್ಷಿಸಿದ್ದ ಸಿಎಂ ಸಿದ್ದರಾಮಯ್ಯ; 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡ ವಿಡಿಯೊ!

Sha Rukh Khan
Latest1 hour ago

Sha Rukh Khan: ಸಾಲದ ಇಎಂಐ ಕಟ್ಟಲಾಗದೆ ಕಾರನ್ನು ಕಳೆದುಕೊಂಡಿದ್ದ ಶಾರುಖ್ ಖಾನ್!

ZIM v IND 2024
ಪ್ರಮುಖ ಸುದ್ದಿ1 hour ago

ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

A total of Rs 13.93 crore livelihood relief for the farmer families of the district says DC Gangubai Manakar
ಉತ್ತರ ಕನ್ನಡ2 hours ago

Uttara Kannada News: ಜಿಲ್ಲೆಯ ರೈತ ಕುಟುಂಬಗಳಿಗೆ 13.93 ಕೋಟಿ ರೂ. ಜೀವನೋಪಾಯ ಪರಿಹಾರ: ಡಿಸಿ

IND vs SA:
ಪ್ರಮುಖ ಸುದ್ದಿ2 hours ago

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಮಹಿಳೆಯರ ತಂಡಕ್ಕೆ10 ವಿಕೆಟ್​ ಭರ್ಜರಿ ಭರ್ಜರಿ ಜಯ

Viral News
Latest2 hours ago

Viral News: ಮಹಿಳೆಯ ಬೆತ್ತಲೆ ದೇಹದ ಮೇಲೆ ಮೃಷ್ಟಾನ್ನ ಬಡಿಸುವ ರೆಸ್ಟೋರೆಂಟ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ4 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌