ಕಾರ್ಸ್‌24 ಕಂಪನಿಯಿಂದ 600 ಸಿಬ್ಬಂದಿ ವಜಾ - Vistara News

ವಾಣಿಜ್ಯ

ಕಾರ್ಸ್‌24 ಕಂಪನಿಯಿಂದ 600 ಸಿಬ್ಬಂದಿ ವಜಾ

ಬಳಸಿದ ಕಾರುಗಳ ಮಾರಾಟ ವಲಯದ ಕಂಪನಿ ಕಾರ್ಸ್‌ 24, ಗುರುವಾರ 600 ಸಿಬ್ಬಂದಿಯನ್ನು ವಜಾಗೊಳಿಸಿದೆ. ಆರ್ಥಿಕ ಬಿಕ್ಕಟ್ಟು ಉದ್ಯೋಗನಷ್ಟಕ್ಕೆ ಕಾರಣವಾಗುತ್ತಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಳಸಿದ ಕಾರುಗಳನ್ನು ಮಾರಾಟ ಮಾಡುವ ಕಾರ್ಸ್‌24 ಕಂಪನಿಯು 600 ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ಒಟ್ಟು 9,000 ಸಿಬ್ಬಂದಿಯನ್ನು ಕಂಪನಿ ಒಳಗೊಂಡಿದೆ.

ಇದರೊಂದಿಗೆ ಸ್ಟಾರ್ಟಪ್‌ಗಳಾದ ಅನ್‌ಅಕಾಡೆಮಿ, ವೇದಾಂತು, ಮೀಶೊ ಬಳಿಕ ಕಾರ್ಸ್‌ 24ನಲ್ಲಿ ಉದ್ಯೋಗ ಕಡಿತ ಆದಂತಾಗಿದೆ. ಕಂಪನಿಯು ಕಳೆದ ಡಿಸೆಂಬರ್‌ನಲ್ಲಿ ಆಲ್ಫಾ ವೇವ್‌ ಗ್ಲೋಬಲ್‌ ಸಂಸ್ಥೆಯಿಂದ 400 ದಶಲಕ್ಷ ಡಾಲರ್‌ (770 ಕೋಟಿ ರೂ.) ಹೂಡಿಕೆಯನ್ನು ಗಳಿಸಿತ್ತು. ಗ್ಲೋಬಲ್‌ ಕಾರ್ಸ್‌24ರಲ್ಲಿ ಸಾಫ್ಟ್‌ಬ್ಯಾಂಕ್‌, ಅಲ್ಫಾ ವೇವ್‌ ಗ್ಲೋಬಲ್‌ ಕಾರ್ಸ್‌24ರಲ್ಲಿ ಹೂಡಿಕೆ ಮಾಡಿವೆ.

2022ರಲ್ಲಿ ಸ್ಟಾರ್ಟಪ್‌ಗಳಲ್ಲಿ ಹುದ್ದೆ ಕಡಿತ

ಅನ್‌ಅಕಾಡೆಮಿ ಗ್ರೂಪ್‌1000
ವೇದಾಂತು624
ಕಾರ್ಸ್‌ 24600
ಟ್ರೆಲ್300
ಲಿಡೊ200
ಫ್ಯುರ್ಲೆನ್ಕೊ180
ಮೀಶೊ150

ಇದನ್ನೂ ಓದಿ: ಷೇರುಪೇಟೆಯಲ್ಲಿ ಕರಗಿದ 11 ಲಕ್ಷ ಕೋಟಿ ಡಾಲರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

GST Council meeting : ಹೊಸ ತೆರಿಗೆ ಪ್ರಕಾರ ಯಾವುದು ಅಗ್ಗ ಮತ್ತು ದುಬಾರಿ?

GST Council meeting : ಭಾರತೀಯ ರೈಲ್ವೆಯಲ್ಲಿ ನೀಡಲಾಗುವ ಸೇವೆಗಳಾದ ಪ್ಲಾಟ್ಫಾರ್ಮ್ ಟಿಕೆಟ್ ಮಾರಾಟ, ವಿಶ್ರಾಂತಿ ಕೊಠಡಿ ಸೌಲಭ್ಯ, ಕಾಯುವಿಕೆ ಕೋಣೆಗಳು, ಬ್ಯಾಗೇಜ್​ಗಳನ್ನು ಇಡುವ ಕ್ಲಾಕ್​ ರುಮ್​ ಸೌಲಭ್ಯಗಳು ಮತ್ತು ಬ್ಯಾಟರಿ ಚಾಲಿತ ವಾಹನಗ ಸೇವೆಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕೆಲವೊಂದು ವೆಚ್ಚಗಳು ಕಡಿಮೆಯಾಗಲಿವೆ.

VISTARANEWS.COM


on

GST Council meeting
Koo

ಬೆಂಗಳೂರು: ನವದೆಹಲಿಯಲ್ಲಿ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ 53ನೇ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆ (GST Council meeting) ನಡೆಯಿತು. ಸಭೆಯಲ್ಲಿ ತೆರಿಗೆ ಸಂಗ್ರಹ ಕುರಿತು ಹಲವಾರು ಬದಲಾವಣೆಗಳನ್ನು ಮಾಡಲಾಯಿತು. ಪ್ರಮುಖವಾಗಿ ತೆರಿಗೆದಾರರಿಗೆ ನಿಯಮ ಪಾಲನೆ ಹೊರೆ ಮತ್ತು ಕುಂದುಕೊರತೆಗಳನ್ನು ಸರಾಗಗೊಳಿಸಲು ಜಿಎಸ್​ಟಿ ಕೌನ್ಸಿಲ್ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ. ” ಶನಿವಾರ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ವ್ಯಾಪಾರ ಸೌಲಭ್ಯ ಪಾಲನೆ ಹೊರೆಯನ್ನು ಕಡಿಮೆಗೊಳಿಸುವುದು ಮತ್ತು ಅನುಸರಣೆಯನ್ನು ಸರಾಗಗೊಳಿಸುವ ದೃಷ್ಟಿಯಿಂದ ತೆರಿಗೆದಾರರಿಗೆ ಪರಿಹಾರ ನೀಡಲು ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಸಭೆಯಲ್ಲಿ ಜಿಎಸ್ಟಿ ಕೌನ್ಸಿಲ್ ತೆಗೆದುಕೊಂಡ ನಿರ್ಧಾರಗಳ ಪ್ರಕಾರ ಯಾವುದು ಅಗ್ಗ ಹಾಗೂ ಯಾವುದು ದುಬಾರಿ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ರೈಲ್ವೆ ಸೇವೆಗಳು: ಭಾರತೀಯ ರೈಲ್ವೆಯಲ್ಲಿ ನೀಡಲಾಗುವ ಸೇವೆಗಳಾದ ಪ್ಲಾಟ್ಫಾರ್ಮ್ ಟಿಕೆಟ್ ಮಾರಾಟ, ವಿಶ್ರಾಂತಿ ಕೊಠಡಿ ಸೌಲಭ್ಯ, ಕಾಯುವಿಕೆ ಕೋಣೆಗಳು, ಬ್ಯಾಗೇಜ್​ಗಳನ್ನು ಇಡುವ ಕ್ಲಾಕ್​ ರುಮ್​ ಸೌಲಭ್ಯಗಳು ಮತ್ತು ಬ್ಯಾಟರಿ ಚಾಲಿತ ವಾಹನಗ ಸೇವೆಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕೆಲವೊಂದು ವೆಚ್ಚಗಳು ಕಡಿಮೆಯಾಗಲಿವೆ.

ಹಾಸ್ಟೆಲ್ ಸೇವೆಗಳು: ಶಿಕ್ಷಣ ಸಂಸ್ಥೆಗಳ ಹೊರಗೆ ವಿದ್ಯಾರ್ಥಿಗಳು ಪಡೆಯುವ ಹಾಸ್ಟೆಲ್ ವಸತಿ ಸೇವೆಗಳಿಗೆ ಜಿಎಸ್ಟಿ ಕೌನ್ಸಿಲ್ ಪ್ರತಿ ವ್ಯಕ್ತಿಗೆ ತಿಂಗಳಿಗೆ 20,000 ರೂ.ಗಳವರೆಗೆ ವಿನಾಯಿತಿ ನೀಡಿದೆ. ಆದರೆ, ಈ ವಿನಾಯಿತಿ 90 ದಿನಗಳವರೆಗೆ ಮಾತ್ರ ಇರುತ್ತದೆ. ಆದಾಗ್ಯೂ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಇದರಿಂದ ಲಾಭವಾಗುತ್ತದೆ.

ತೆರಿಗೆ ನೋಟಿಸ್ ಮೇಲಿನ ದಂಡದ ಮೇಲಿನ ಬಡ್ಡಿ: 2017-18, 2018-19 ಮತ್ತು 2019-20ರ ಹಣಕಾಸು ವರ್ಷಗಳಿಗೆ ಜಿಎಸ್ಟಿ ಕಾಯ್ದೆಯ ಸೆಕ್ಷನ್ 73 ರ ಅಡಿಯಲ್ಲಿ ಹೊರಡಿಸಲಾದ ತೆರಿಗೆ ಬೇಡಿಕೆ ನೋಟಿಸ್ ಮೇಲಿನ ದಂಡದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಜಿಎಸ್ಟಿ ಕೌನ್ಸಿಲ್ ಶಿಫಾರಸು ಮಾಡಿದೆ. ಮಾರ್ಚ್ 31, 2025 ರೊಳಗೆ ಪೂರ್ಣ ತೆರಿಗೆ ಮೊತ್ತವನ್ನು ಪಾವತಿಸುವ ತೆರಿಗೆದಾರರು ಈ ಪ್ರಯೋಜನ ಪಡೆಯುತ್ತಾರೆ.

ಇದನ್ನೂ ಓದಿ: GST Council Meeting : ಪೆಟ್ರೋಲ್, ಡೀಸೆಲ್ ಜಿಎಸ್​​ಟಿ ವ್ಯಾಪ್ತಿಗೆ ಬರಲಿದೆಯೇ? ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್: ಯಾವುದೇ ಇನ್​ವಾಯ್ಸ್​ ಅಥವಾ ಡೆಬಿಟ್ ನೋಟ್ ಮೇಲೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಿಸ್ತರಣೆ ಪಡೆಯಲು ಜಿಎಸ್ಟಿ ಕೌನ್ಸಿಲ್ ಒಪ್ಪಿದೆ.

ಕಾರ್ಟನ್ ಬಾಕ್ಸ್ ಗಳ ಮೇಲಿನ ಜಿಎಸ್​ಟಿ ಇಳಿಕೆ : ಎಲ್ಲಾ ರೀತಿಯ ಕಾರ್ಟನ್ ಬಾಕ್ಸ್ ಗಳ ಮೇಲಿನ ಜಿಎಸ್ ಟಿಯನ್ನು ಶೇ 18ರಿಂದ ಶೇ 12ಕ್ಕೆ ಇಳಿಸಲು ಜಿಎಸ್ ಟಿ ಕೌನ್ಸಿಲ್ ಶಿಫಾರಸು ಮಾಡಿದೆ. ಇದರಿಂದಾಗಿ ಇ ಕಾಮರ್ಸ್​ ಕಂಪನಿಗಳಿಗೆ ಉಳಿತಾಯವಾಗಲಿದ್ದು ಗ್ರಾಹಕರಿಗೂ ಲಾಭವಾಗಲಿದೆ.

ಜಿಎಸ್ಟಿ ರಿಟರ್ನ್: ಜಿಎಸ್​ಟಿ ಕೌನ್ಸಿಲ್ 2024-25ರ ಹಣಕಾಸು ವರ್ಷ ಮತ್ತು ನಂತರದ ವರ್ಷಗಳಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಏಪ್ರಿಲ್ 30 ರಿಂದ ಜೂನ್ 30 ರವರೆಗೆ ವಿಸ್ತರಿಸಿದೆ. ಇದರಿಂದ ತೆರಿಗೆದಾರರಿಗೆ ಇನ್ನಷ್ಟು ಅವಧಿ ದೊರೆಯಲಿದೆ.

ಸೋಲಾರ್​ ಕುಕ್ಕರ್​ಗಳು ದುಬಾರಿ: ಸೌರ ಕುಕ್ಕರ್​ಗಳಿಗೆ ಏಕರೂಪದ ಶೇಕಡಾ 12ರಷ್ಟು ಜಿಎಸ್​ಟಿ ಶಿಫಾರಸು ಮಾಡಲಾಗಿದೆ. ಈ ಕುಕ್ಕರ್​ಗಳು ಒಂದು ಅಥವಾ ಎರಡೆರಡು ಶಕ್ತಿ ಮೂಲಗಳಿಂದ ಕೆಲಸ ಮಾಡುವುದಾದರೂ ಒಂದೇ ದರ ವಿಧಿಸಲಾಗಿದೆ. ಹೀಗಾಗಿ ಸೋಲಾರ್​ ಕುಕ್ಕರ್​ಗಳು ದುಬಾರಿಯಾಗಲಿವೆ.

ಹಾಲಿನ ಕ್ಯಾನ್​ಗಳು: ಎಲ್ಲಾ ಹಾಲಿನ ಕ್ಯಾನ್​ಗಳ ಮೇಲೆ ಅವುಗಳು ಹೊಂದಿರುವ ವಸ್ತುಗಳನ್ನು (ಉಕ್ಕು, ಕಬ್ಬಿಣ, ಅಲ್ಯೂಮಿನಿಯಂ) ಲೆಕ್ಕಿಸದೆ ಏಕರೂಪದ ಶೇಕಡಾ 12 ರಷ್ಟು ಜಿಎಸ್​ಟಿ ದರವನ್ನು ಜಿಎಸ್ಟಿ ಕೌನ್ಸಿಲ್ ಶಿಫಾರಸು ಮಾಡಿದೆ. ಹಿಂದೆ ಇದಕ್ಕೆ ಪ್ರತ್ಯೇಕ ದರವನ್ನು ನಿಗದಿ ಮಾಡಲಾಗಿತ್ತು. ಹೀಗಾಗಿ ಕಡಿಮೆ ಜಿಎಸ್​ಟಿ ಇದ್ದ ಕ್ಯಾನ್ ಹಾಲಿನ ಬೆಲೆ ಹೆಚ್ಚಾಗಲಿವೆ.

ಸ್ಪ್ರಿಂಕ್ಲರ್​ಗಳು : ಬೆಂಕಿ ಅಥವಾ ನೀರಿನ ಸ್ಪ್ರಿಂಕ್ಲರ್​ಗಳಿಗೆ ಸೇರಿ ಎಲ್ಲಾ ರೀತಿಯ ಸ್ಪ್ರಿಂಕ್ಲರ್​ಗಳು ಏಕರೂಪದ ಜಿಎಸ್ಟಿ ದರವನ್ನು ಶೇಕಡಾ 12 ರಷ್ಟು ಹೊಂದಿರುತ್ತದೆ. ಇದು ಕೂಡ ಸ್ವಲ್ಪ ದುಬಾರಿಯಾಗಿದೆ.

Continue Reading

ವಾಣಿಜ್ಯ

EPFO Balance Check: ಜುಲೈ ಅಂತ್ಯದಲ್ಲಿ ಪಿಎಫ್ ಖಾತೆಗೆ ಬಡ್ಡಿ ಹಣ ಬರಲಿದೆ; ಪರಿಶೀಲಿಸುವುದು ಹೇಗೆ?

ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ಶೀಘ್ರದಲ್ಲೇ ಬಡ್ಡಿ ಮೊತ್ತ (EPFO Balance Check) ಜಮೆಯಾಗಲಿದೆ. ಜುಲೈ ಅಂತ್ಯದ ವೇಳೆಗೆ ಬಡ್ಡಿ ಹಣ ಇಪಿಎಫ್ ಒ ಸದಸ್ಯರ ಖಾತೆಗೆ ತಲುಪೂವ ನಿರೀಕ್ಷೆ ಇದೆ. ಬಡ್ಡಿ ಹಣ ಖಾತೆಗೆ ಬಂದಿದೆಯೇ ಇಲ್ಲವೇ, ಎಷ್ಟು ಬಂದಿದೆ ಎಂಬುದನ್ನು ಪರಿಶೀಲಿಸಲು ಸಾಕಷ್ಟು ದಾರಿಗಳಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

EPFO Balance Check
Koo

ಭವಿಷ್ಯ ನಿಧಿ (Employees’ Provident Fund) ಹೊಂದಿರುವ ಉದ್ಯೋಗಿಗಳು ತಮ್ಮ ಖಾತೆಗೆ ಬಡ್ಡಿ (interest) ಮೊತ್ತ ಜಮೆಯಾಗುವುದನ್ನು (EPFO Balance Check) ಕಾಯುತ್ತಿದ್ದಾರೆ. ಅಂತವರಿಗೆ ಇದೀಗ ಸಿಹಿ ಸುದ್ದಿ. ಜುಲೈ (july) ಅಂತ್ಯದ ವೇಳೆಗೆ ಬಡ್ಡಿ ಹಣ ಇಪಿಎಫ್ ಒ (EPFO) ಸದಸ್ಯರ ಖಾತೆಗೆ ತಲುಪಬಹುದು. ಇದಕ್ಕಾಗಿ ಶೀಘ್ರದಲ್ಲೇ ಹಣಕಾಸು ಸಚಿವಾಲಯ (Finance Ministry) ಅಧಿಕೃತ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆ ಇದೆ.

ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಫೆಬ್ರವರಿಯಲ್ಲಿ ಆರ್ಥಿಕ ವರ್ಷ 2024 ಕ್ಕೆ ಶೇ. 8.25ರ ಬಡ್ಡಿ ದರವನ್ನು ಅನುಮೋದಿಸಿದೆ. ಆದರೆ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಲು ಹಣಕಾಸು ಸಚಿವಾಲಯವು ಇನ್ನೂ ಕಾಯುತ್ತಿದೆ. ಸಾರ್ವತ್ರಿಕ ಚುನಾವಣೆಗಳಿಂದಾಗಿ ಇದು ವಿಳಂಬವಾಗಿದೆ. ಇದು ಜುಲೈ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಹಣ ಬಂದಿದೆಯೇ ತಿಳಿಯುವುದು ಹೇಗೆ?

ಇಪಿಎಫ್ ಖಾತೆಯ ಪಾಸ್‌ಬುಕ್ ಅನ್ನು ಪರಿಶೀಲಿಸುತ್ತಿದ್ದರೆ ನಿಮ್ಮ ಇಪಿಎಫ್ ಬಡ್ಡಿ ಹಣ ಬಂದಿದೆಯೋ ಇಲ್ಲವೋ ಎಂಬುದು ನಿಮಗೆ ತಿಳಿಯುತ್ತದೆ. ಮಿಸ್ಡ್ ಕಾಲ್ ಅಥವಾ ಎಸ್ ಎಂಎಸ್ ನಂತಹ ಸೌಲಭ್ಯಗಳ ಮೂಲಕ ಇಪಿಎಫ್ ಒ ​​ಪೋರ್ಟಲ್ ಮೂಲಕ ನೀವು ಇಪಿಎಫ್ ಪಾಸ್‌ಬುಕ್ ಅನ್ನು ಪರಿಶೀಲಿಸಬಹುದು.

EPFO Balance Check

ಇಪಿಎಫ್‌ಒ ​​ಪೋರ್ಟಲ್‌ನಲ್ಲಿ ಹೇಗೆ ಪರಿಶೀಲಿಸುವುದು?

ಮೊದಲನೆಯದಾಗಿ ಇಪಿಎಫ್ ಒ ​​ಪೋರ್ಟಲ್ https://www.epfindia.gov.in/site_en/index.php ಗೆ ಹೋಗಿ. ಇದಕ್ಕಾಗಿ ನಿಮ್ಮ ಯುಎಎನ್ (ಯುನಿವರ್ಸಲ್ ಖಾತೆ ಸಂಖ್ಯೆ) ಅನ್ನು ಸಕ್ರಿಯಗೊಳಿಸಬೇಕು. ಸೈಟ್ ತೆರೆದಾಗ, ನಮ್ಮ ಸೇವೆಗಳು ಟ್ಯಾಬ್‌ಗೆ ಹೋಗಿ ಮತ್ತು ಅನಂತರ ಡ್ರಾಪ್-ಡೌನ್ ಮೆನು ‘ಉದ್ಯೋಗಿಗಳಿಗಾಗಿ’ ಆಯ್ಕೆ ಮಾಡಿ. ಸೇವಾ ಕಾಲಂ ಅಡಿಯಲ್ಲಿ ಸದಸ್ಯರ ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ. ಮುಂದಿನ ಪುಟದಲ್ಲಿ ಯುಎಎನ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು. ಕ್ಯಾಪ್ಚಾವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ. ಲಾಗಿನ್ ಆದ ಅನಂತರ ಸದಸ್ಯರ ಐಡಿ ಅನ್ನು ನಮೂದಿಸಿ. ಇದರ ಬಳಿಕ ಇಪಿಎಫ್ ಬ್ಯಾಲೆನ್ಸ್ ಗೋಚರಿಸುತ್ತದೆ.

ಇದನ್ನೂ ಓದಿ: PAN Card Safety: ಪಾನ್ ಕಾರ್ಡ್ ದುರ್ಬಳಕೆಯಿಂದ ಪಾರಾಗುವುದು ಹೇಗೆ?

ಮಿಸ್ಡ್ ಕಾಲ್ ಮೂಲಕ ಹೇಗೆ ಪರಿಶೀಲಿಸುವುದು?

011- 22901406ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು. ಕರೆ ಮಾಡಿದಾಗ, ಎಸ್ ಎಂಎಸ್ ಅನ್ನು ಪಡೆಯುತ್ತೀರಿ. ಅದರಲ್ಲಿ ಬ್ಯಾಲೆನ್ಸ್ ಗೋಚರಿಸುತ್ತದೆ. ಇದಕ್ಕಾಗಿ ಇಪಿಎಫ್ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಪ್ಯಾನ್ ಮತ್ತು ಆಧಾರ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆ ಸಂಖ್ಯೆಯನ್ನು ಸಹ ನಿಮ್ಮ ಯುಎಎನ್ ಗೆ ಲಿಂಕ್ ಮಾಡಬೇಕು.

ಎಸ್‌ಎಂಎಸ್ ಮೂಲಕ ಪರಿಶೀಲಿಸುವುದು ಹೇಗೆ?

ಮಿಸ್ಡ್ ಕಾಲ್ ಸೇವೆಯಂತೆಯೇ ಎಲ್ಲಾ ಪ್ರಮುಖ ದಾಖಲೆಗಳನ್ನು ಯುಎಎನ್‌ಗೆ ಲಿಂಕ್ ಮಾಡಬೇಕು. ಆಗ ಮಾತ್ರ ಈ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ. ಇದಕ್ಕಾಗಿ EPFOHO UAN ENG ಅಥವಾ ENG ಬದಲಿಗೆ ನೀವು ಸಂದೇಶವನ್ನು ಬಯಸುವ ಭಾಷೆಯ ಕೋಡ್ ಅನ್ನು ಬರೆದು 7738299899 ಗೆ SMS ಮಾಡಬೇಕಾಗುತ್ತದೆ.

Continue Reading

ಪ್ರಮುಖ ಸುದ್ದಿ

GST Council Meeting : ಪೆಟ್ರೋಲ್, ಡೀಸೆಲ್ ಜಿಎಸ್​​ಟಿ ವ್ಯಾಪ್ತಿಗೆ ಬರಲಿದೆಯೇ? ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

GST Council Meeting : 53 ನೇ ಜಿಎಸ್ಟಿ ಕೌನ್ಸಿಲ್ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಣಕಾಸು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿಗೆ ತರಲು ನಿರ್ಧರಿಸುವುದು ಮತ್ತು ಅದಕ್ಕೆ ಬೆಂಬಲಿಸುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟದ್ದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.

VISTARANEWS.COM


on

GST council meeting
Koo

ನವದೆಹಲಿ: ಜಿಎಸ್​​ಟಿ ಕೌನ್ಸಿಲ್ ಸಭೆ (GST Council Meeting) ಶನಿವಾರ ಸಂಜೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಪೆಟ್ರೋಲ್ ಬಗ್ಗೆ ಡೀಸೆಲ್​ ಜಿಎಸ್​​ಟಿ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ಕುರಿತು ಚರ್ಚೆ ನಡೆಯಬಹುದು ಎಂಬುದಾಗಿ ಹೇಳಲಾಗಿತ್ತು. ಹೀಗಾಗಿ ಸಾರ್ವಜನಿಕರು ಸಭೆಯ ಬಗ್ಗೆ ಆಸಕ್ತಿ ವಹಿಸಿದ್ದರು. ಆದರೆ, ಸಭೆಯಲ್ಲಿ ಈ ಕುರಿತು ಚರ್ಚೆಯಾಗಿಲ್ಲ ಎಂಬುದನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿಗೆ ಸೇರಿಸಬೇಕೆಂಬ ಕೇಂದ್ರ ಸರ್ಕಾರದ ಉದ್ದೇಶ ಸ್ಪಷ್ಟ ಎಂದು ಅವರು ಹೇಳಿದ್ದಾರೆ.

53 ನೇ ಜಿಎಸ್ಟಿ ಕೌನ್ಸಿಲ್ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಣಕಾಸು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿಗೆ ತರಲು ನಿರ್ಧರಿಸುವುದು ಮತ್ತು ಅದಕ್ಕೆ ಬೆಂಬಲಿಸುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟದ್ದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.

“ಸಭೆಯಲ್ಲಿ ನಾವು ಅದರ ಬಗ್ಗೆ ಚರ್ಚಿಸಲಿಲ್ಲ. ಆದರೆ ಜಿಎಸ್​ಟಿ ಮೊದಲ ಬಾರಿಗೆ ಜಾರಿಗೆ ಬಂದಾಗಲೂ ಪೆಟ್ರೋಲ್ ಮತ್ತು ಡೀಸೆಲ್ ಸೇರ್ಪಡೆ ಬಗ್ಗೆ ಚರ್ಚಿಸಿದ್ದೇವೆ. ದಿ. ಅರುಣ್ ಜೇಟ್ಲಿ ಅವರು ಈ ಬಗ್ಗೆ ಮಾತನಾಡಿದ್ದು ನನಗೆ ನೆನಪಿದೆ. ರಾಜ್ಯಗಳು ಒಪ್ಪಿದ ನಂತರ ಇದು ಜಾರಿಗೆ ಬರಲಿದೆ. ರಾಜ್ಯಗಳು ತೆರಿಗೆಯ ದರ ನಿರ್ಧರಿಸಬೇಕು. ಆ ನಿರ್ಧಾರವನ್ನು ತೆಗೆದುಕೊಂಡ ನಂತರ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: NEET UG Row : ರಾಷ್ಟ್ರೀಯ ಪರೀಕ್ಷಾ ಪ್ರಕ್ರಿಯೆ ಸುಧಾರಣೆಗೆ ಇಸ್ರೋ ಮಾಜಿ ಮುಖ್ಯಸ್ಥರು ಸೇರಿದಂತೆ 7 ಮಂದಿಯ ಸಮಿತಿ ರಚನೆ

ಜಿಎಸ್​ಟಿ ಜಾರಿಗೆ ಬಂದ ನಂತರವೂ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿಗೆ ತರಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿತ್ತು ಎಂದು ಸೀತಾರಾಮನ್ ಹೇಳಿದರು. “ನಾವು ಕಾನೂನು ಮಾಡಲು ಹೋಗಬೇಕಾಗಿಲ್ಲ. ಇದನ್ನು ಜಿಎಸ್ಟಿಗೆ ತರಬಹುದು ಎಂಬ ನಿರ್ಧಾರವನ್ನು ಈಗಾಗಲೇ ಮಾಡಲಾಗಿದೆ. ರಾಜ್ಯಗಳು ಒಪ್ಪುವ ಮತ್ತು ಅವರು ಯಾವ ದರಗಳನ್ನು ನಿರ್ಧರಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ” ಎಂದು ಅವರು ಹೇಳಿದರು.

ಸಭೆಯ ಇನ್ನಿತರ ನಿರ್ಧಾರಗಳು ಯಾವುವು?

ಎಲ್ಲಾ ಸೋಲಾರ್​ ಕುಕ್ಕರ್​ಗಳ ಮೇಲೆ 12 ಶೇಕಡಾ ಜಿಎಸ್​ಟಿ ವಿಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಕುಕ್ಕರ್​ಗಳು ಏಕ ಅಥವಾ ದ್ವಿ ಶಕ್ತಿಯ ಮೂಲದ ಮೂಲಕ ಕೆಲಸ ಮಾಡಿದರೂ ಅದೇ 12% ಜಿಎಸ್ ಟಿ ಅನ್ವಯವಾಗುತ್ತದೆ.

ಸಾಮಾನ್ಯ ಜನರಿಗೆ ಭಾರತೀಯ ರೈಲ್ವೆ ಒದಗಿಸುವ ಸೇವೆಗಳು, ಪ್ಲಾಟ್​ಫಾರ್ಮ್​ ಟಿಕೆಟ್​ಗಳ ಮಾರಾಟ, ವಿಶ್ರಾಂತಿ ಕೊಠಡಿಗಳ ಸೌಲಭ್ಯ, ಕಾಯುವಿಕೆಯ ಕೋಣೆಗಳು, ಕ್ಲಾಕ್​ರೂಮ್​ ಸೇವೆಗಳು, ಬ್ಯಾಟರಿ ಚಾಲಿತ ಕಾರಿನ ಸೇವೆಗಳನ್ನು ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗಿದೆ.

ಶಿಕ್ಷಣ ಸಂಸ್ಥೆಗಳ ಹೊರಗಿನ ವಿದ್ಯಾರ್ಥಿಗಳಿಗಾಗಿ ಇರುವ ಹಾಸ್ಟೆಲ್ ಗಳಿಗೂ ಜಿಎಸ್​ಟಿ ವಿನಾಯಿತಿ ನೀಡಲಾಗಿದೆ.

ಉಕ್ಕು, ಕಬ್ಬಿಣ, ಅಲ್ಯೂಮಿನಿಯಂ ಸೇರಿದಂತೆ ಎಲ್ಲಾ ಹಾಲಿನ ಕ್ಯಾನ್ ಗಳ ಮೇಲೆ 12% ಏಕರೂಪದ ದರವನ್ನು ನಿಗದಿಪಡಿಸಲು ಕೌನ್ಸಿಲ್ ಶಿಫಾರಸು ಮಾಡಿದೆ.

ಎಲ್ಲಾ ಕಾರ್ಟನ್ ಪೆಟ್ಟಿಗೆಗಳು ಮತ್ತು ತುಕ್ಕು ಹಿಡಿಯದ ಮತ್ತು ತುಕ್ಕು ಹಿಡಿಯದ ಕಾಗದ ಅಥವಾ ಕಾಗದದ ಬೋರ್ಡ್ ಮೇಲೂ ಏಕರೂಪದ ಜಿಎಸ್ಟಿ ದರವನ್ನು 12% ನಿಗದಿಪಡಿಸಲಾಗಿದೆ.

ಇದಕ್ಕೂ ಮುನ್ನ ನಿರ್ಮಲಾ ಸೀತಾರಾಮನ್ ಅವರು ನವದೆಹಲಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರೊಂದಿಗೆ (ಶಾಸಕಾಂಗದೊಂದಿಗೆ) ಬಜೆಟ್ ಪೂರ್ವ ಸಮಾಲೋಚನೆ ನಡೆಸಿದರು.

Continue Reading

ದೇಶ

GST Council Meet : ನಕಲಿ ಬಿಲ್​ ತಡೆಗೆ ಬಯೋಮೆಟ್ರಿಕ್​ ವ್ಯವಸ್ಥೆ; ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಹಲವು ನಿರ್ಧಾರಗಳು ಪ್ರಕಟ

GST Council Meet: 53ನೇ ಜಿಎಸ್​ಟಿ ಕೌನ್ಸಿಲ್ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಸಚಿವೆ ಸೀತಾರಾಮನ್ ಇದೂ ಸೇರಿದಂತೆ ಪ್ರಮುಖ ನಿರ್ಧಾರಗಳ ಕುರಿತು ಮಾಹಿತಿ ನೀಡಿದರು. ಅದೇ ರೀತಿ ರೈಲ್ವೆಯ ಹಲವಾರು ಸೇವೆಗಳಿಗೆ ಜಿಎಸ್​​ಟಿ ವಿನಾಯಿತಿ ನೀಡಲಾಗಿದೆ.

VISTARANEWS.COM


on

GST Council Meet
Koo

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಶನಿವಾರ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆ (GST Council Meet) ನಡೆಯಿತು. ಪ್ರಮುಖವಾಗಿ ದೇಶಾದ್ಯಂತ ನಡೆಯುತ್ತಿರುವ ನಕಲಿ ಬಿಲ್​ಗಳ ಹಾವಳಿಯನ್ನು ತಡೆಯಲು ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ ಮಾನದಂಡವನ್ನು ದೇಶಾದ್ಯಂತ ಜಾರಿಗೆ ತರುವುದಾಗಿ ಈ ಸಭೆಯಲ್ಲಿ ಘೋಷಿಸಲಾಯಿತು. 53ನೇ ಜಿಎಸ್​ಟಿ ಕೌನ್ಸಿಲ್ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಸಚಿವೆ ಸೀತಾರಾಮನ್ ಇದೂ ಸೇರಿದಂತೆ ಪ್ರಮುಖ ನಿರ್ಧಾರಗಳ ಕುರಿತು ಮಾಹಿತಿ ನೀಡಿದರು. ಅದೇ ರೀತಿ ರೈಲ್ವೆಯ ಹಲವಾರು ಸೇವೆಗಳಿಗೆ ಜಿಎಸ್​​ಟಿ ವಿನಾಯಿತಿ ನೀಡಲಾಗಿದೆ.

ಬಿಲ್​ಗಳ ನಕಲಿ ತಪ್ಪಿಸಲು ಅಖಿಲ ಭಾರತ ಮಟ್ಟದಲ್ಲಿ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣವನ್ನು ಜಾರಿ ತರಲಾಗುವುದು. ನಕಲಿ ಇನ್​ವಾಯ್ಸ್​ಗಳ ಮೂಲಕ ಮಾಡಿರುವ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್​ಗಳನ್ನು ಪತ್ತೆ ಹಚ್ಚಲು ಇದು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವರಿಸಿದರು.

ನಾವು ಗುಜರಾತ್ ಮತ್ತು ಪುದುಚೇರಿಯಲ್ಲಿ ಯೋಜನೆಯ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದೇವೆ. ಆದ್ದರಿಂದ ನಕಲಿ ಇನ್​ವಾಯ್ಸ್​ಗಳ ಮೂಲಕ ಮಾಡಿದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್​ಗಳನ್ನು ಪತ್ತೆ ಹಚ್ಚಲು ಬಯೊಮೆಟ್ರಿಕ್ ವ್ಯವಸ್ಥೆ ಸಹಾಯ ಮಾಡಿದೆ. ಅರ್ಜಿದಾರರ ಆಧಾರ್ ದೃಢೀಕರಣವನ್ನು ಪಡೆದರೆ ನಕಲಿ ಇನ್​ವಾಯ್ಸ್​ಗಳ ಮೂಲಕ ಪಡೆಯು ಕ್ಲೇಮ್​ಗಳನ್ನು ತಪ್ಪಿಸಬಹುದು. ಆದ್ದರಿಂದ ದೇಶಿಯವಾಗಿ ಅರ್ಜಿದಾರರ ನೋಂದಣಿಯ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣವನ್ನು ಹಂತ ಹಂತವಾಗಿ ಜಾರಿಗೊಳಿಸಲು ಜಿಎಸ್ಟಿ ಕೌನ್ಸಿಲ್ ಶಿಫಾರಸು ಮಾಡಿದೆ ಎಂದು ಅವರು ಹೇಳಿದ್ದಾರೆ.

53ನೇ ಜಿಎಸ್​ಟಿ ಕೌನ್ಸಿಲ್ ಸಭೆ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದೆ. ಅವುಗಳೆಲ್ಲವೂ ವ್ಯಾಪಾರಿಗಳು, ಎಂಎಸ್ಎಂಇಗಳು, ಮತ್ತು ತೆರಿಗೆದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಸೀತಾರಾಮನ್ ಹೇಳಿದರು. ತೆರಿಗೆ ತೆರಿಗೆದಾರರಿಗೆ ಪರಿಹಾರ ನೀಡುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವರು ಪುನರುಚ್ಚರಿಸಿದರು.

ಜಿಎಸ್​ಟಿ ಕೌನ್ಸಿಲ್​ ಸಭೆಯ ಕುರಿತು ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಎಲ್ಲಾ ಸೋಲಾರ್​ ಕುಕ್ಕರ್​ಗಳ ಮೇಲೆ 12 ಶೇಕಡಾ ಜಿಎಸ್​ಟಿ ವಿಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಕುಕ್ಕರ್​ಗಳು ಏಕ ಅಥವಾ ದ್ವಿ ಶಕ್ತಿಯ ಮೂಲದ ಮೂಲಕ ಕೆಲಸ ಮಾಡಿದರೂ ಅದೇ 12% ಜಿಎಸ್ ಟಿ ಅನ್ವಯವಾಗುತ್ತದೆ.

ಇದನ್ನೂ ಓದಿ: NEET UG Row : ರಾಷ್ಟ್ರೀಯ ಪರೀಕ್ಷಾ ಪ್ರಕ್ರಿಯೆ ಸುಧಾರಣೆಗೆ ಇಸ್ರೋ ಮಾಜಿ ಮುಖ್ಯಸ್ಥರು ಸೇರಿದಂತೆ 7 ಮಂದಿಯ ಸಮಿತಿ ರಚನೆ

ಸಾಮಾನ್ಯ ಜನರಿಗೆ ಭಾರತೀಯ ರೈಲ್ವೆ ಒದಗಿಸುವ ಸೇವೆಗಳು, ಪ್ಲಾಟ್​ಫಾರ್ಮ್​ ಟಿಕೆಟ್​ಗಳ ಮಾರಾಟ, ವಿಶ್ರಾಂತಿ ಕೊಠಡಿಗಳ ಸೌಲಭ್ಯ, ಕಾಯುವಿಕೆಯ ಕೋಣೆಗಳು, ಕ್ಲಾಕ್​ರೂಮ್​ ಸೇವೆಗಳು, ಬ್ಯಾಟರಿ ಚಾಲಿತ ಕಾರಿನ ಸೇವೆಗಳನ್ನು ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗಿದೆ.

ಶಿಕ್ಷಣ ಸಂಸ್ಥೆಗಳ ಹೊರಗಿನ ವಿದ್ಯಾರ್ಥಿಗಳಿಗಾಗಿ ಇರುವ ಹಾಸ್ಟೆಲ್ ಗಳಿಗೂ ಜಿಎಸ್​ಟಿ ವಿನಾಯಿತಿ ನೀಡಲಾಗಿದೆ.

ಉಕ್ಕು, ಕಬ್ಬಿಣ, ಅಲ್ಯೂಮಿನಿಯಂ ಸೇರಿದಂತೆ ಎಲ್ಲಾ ಹಾಲಿನ ಕ್ಯಾನ್ ಗಳ ಮೇಲೆ 12% ಏಕರೂಪದ ದರವನ್ನು ನಿಗದಿಪಡಿಸಲು ಕೌನ್ಸಿಲ್ ಶಿಫಾರಸು ಮಾಡಿದೆ.

ಎಲ್ಲಾ ಕಾರ್ಟನ್ ಪೆಟ್ಟಿಗೆಗಳು ಮತ್ತು ತುಕ್ಕು ಹಿಡಿಯದ ಮತ್ತು ತುಕ್ಕು ಹಿಡಿಯದ ಕಾಗದ ಅಥವಾ ಕಾಗದದ ಬೋರ್ಡ್ ಮೇಲೂ ಏಕರೂಪದ ಜಿಎಸ್ಟಿ ದರವನ್ನು 12% ನಿಗದಿಪಡಿಸಲಾಗಿದೆ.

ಇದಕ್ಕೂ ಮುನ್ನ ನಿರ್ಮಲಾ ಸೀತಾರಾಮನ್ ಅವರು ನವದೆಹಲಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರೊಂದಿಗೆ (ಶಾಸಕಾಂಗದೊಂದಿಗೆ) ಬಜೆಟ್ ಪೂರ್ವ ಸಮಾಲೋಚನೆ ನಡೆಸಿದರು.

Continue Reading
Advertisement
Empty Stomach Foods
ಆರೋಗ್ಯ13 mins ago

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

karnataka weather Forecast
ಮಳೆ43 mins ago

Karnataka Weather : ಕರಾವಳಿ, ಮಲೆನಾಡಿಗೆ ಗುಡುಗು ಸಹಿತ ಭಾರಿ ಮಳೆ; 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Menopausal Weight Gain
ಆರೋಗ್ಯ1 hour ago

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Vastu Tips
ಧಾರ್ಮಿಕ2 hours ago

Vastu Tips: ತಿಳಿದಿರಲಿ, ಕನ್ನಡಿಯೂ ನುಡಿಯುತ್ತದೆ ನಮ್ಮ ಭವಿಷ್ಯ!

Virat kohli
ಪ್ರಮುಖ ಸುದ್ದಿ2 hours ago

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ಮಡದಿಯ ಪ್ರೀತಿಗೆ ಸೋಲುವಿರಿ; ಮನೆಯಲ್ಲಿ ಸಂತೋಷದ ದಿನ

NEET UG
ಪ್ರಮುಖ ಸುದ್ದಿ7 hours ago

NEET UG : ನೀಟ್​ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ ಸರ್ಕಾರ

T20 world cup 2024
ಪ್ರಮುಖ ಸುದ್ದಿ8 hours ago

T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

Mangalya chain was stolen by pretending to be a police in Shira
ಕರ್ನಾಟಕ8 hours ago

Theft Case: ಶಿರಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯ ಮಾಂಗಲ್ಯ ಕಳವು!

Union Minister Pralhad Joshi statement
ಕರ್ನಾಟಕ8 hours ago

Pralhad Joshi: ಕೇವಲ ಶೇ.0.1 ಮತ ಗಳಿಕೆ ಹೆಚ್ವಿದ್ದಕ್ಕೇ ಕಾಂಗ್ರೆಸ್ ಗೆದ್ದ ಭ್ರಮೆಯಲ್ಲಿದೆ; ಪ್ರಲ್ಹಾದ್ ಜೋಶಿ ಗೇಲಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ7 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌