ತ್ರಯಸ್ಥ ಅಂಕಣ | ಮೋದಿಯಿಸಂನ ಉಚ್ಛ್ರಾಯ ಕಾಲದಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು? - Vistara News

ಅಂಕಣ

ತ್ರಯಸ್ಥ ಅಂಕಣ | ಮೋದಿಯಿಸಂನ ಉಚ್ಛ್ರಾಯ ಕಾಲದಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

ಮೋದಿ ದೇಶಭಕ್ತ, ಬಿಜೆಪಿ ಧರ್ಮನಿಷ್ಠ, ಸಂಘಪರಿವಾರ ಧ್ಯೇಯನಿಷ್ಠ ಅಂತ ಸಾವಿರ ಹೇಳಿದರೂ, ಇವರ ಮೂಗಿನಡಿಯಲ್ಲೇ ಆಪರೇಷನ್ ಕಮಲದಂಥಾ ಪ್ರಜಾಪ್ರಭುತ್ವ ವಿರೋಧಿ ಪ್ರಕರಣಗಳು ನಡೆಯುತ್ತಿವೆ ಎಂಬುದನ್ನು ಮರೆಯಬಾರದು.

VISTARANEWS.COM


on

trayastha column
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
nityananda column

ಮತ್ತೊಂದು ಸುತ್ತಿನ ಹೋರಾಟಕ್ಕೆ ಅಖಾಡ ಸಿದ್ಧವಾಗುತ್ತಿದೆ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎಂದು ನಿರ್ಧರಿಸುವ ಲೋಕಸಭಾ ಚುನಾವಣೆಗೆ ಇನ್ನೂ ಹಲವು ತಿಂಗಳುಗಳು ಬಾಕಿ ಉಳಿದಿದ್ದರೂ, ಅದಕ್ಕೆ ವೇದಿಕೆ ಸಿದ್ಧಪಡಿಸುವ ಕಾರ್ಯಕ್ಕೆ ಎಲ್ಲ ಪಕ್ಷಗಳೂ ಚಾಲನೆ ಕೊಟ್ಟುಬಿಟ್ಟಿವೆ. ಅತ್ತ ಕಾಂಗ್ರೆಸ್ ಮೋದಿಯನ್ನು ವಿರೋಧಿಸುವುದನ್ನೇ ಏಕೈಕ ಅಜೆಂಡಾ ಮಾಡಿಕೊಂಡು ʻಭಾರತ್‌ ಜೋಡೊʼ ಯಾತ್ರೆಯ ಹೆಸರಿನಲ್ಲಿ ಮುಂದಿನ ಚುನಾವಣೆಗೆ ಸಿದ್ಧವಾಗುತ್ತಿದ್ದರೆ, ಇತ್ತ ಬಿಜೆಪಿ ʻಅಭಿವೃದ್ಧಿ ಮತ್ತು ರಾಷ್ಟ್ರೀಯತೆಯೇ ನಮ್ಮ ಚುನಾವಣಾ ವಿಷಯʼ ಅಂತ ಬಾಯಲ್ಲಿ ಹೇಳುತ್ತಿದ್ದರೂ ತನ್ನ ಸಾಂಪ್ರದಾಯಿಕ ʻಚುನಾವಣಾ ಹಿಂದುತ್ವʼದ ಅಜೆಂಡಾದಿಂದ ಈ ಬಾರಿಯೂ ದೂರ ಸರಿಯುವಂತೆ ಕಾಣುತ್ತಿಲ್.‌ ಹೀಗಾಗಿ ಮುಂದಿನ ಚುನಾವಣೆಯ ವಿಷಯವೂ ʻಧರ್ಮ ದಂಗಲ್’ ಆಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಇತ್ತೀಚಿನ ಜ್ಞಾನವಾಪಿ ಮಸೀದಿಯ ಕುರಿತಾದ ವಾರಣಾಸಿ ಕೋರ್ಟ್‌ನ ತೀರ್ಪು ಸಹಾ ಮುಂದಿನ ಚುನಾವಣಾ ಭವಿಷ್ಯದ ಹಣೆಬರಹವನ್ನು ಅದಾಗಲೇ ನಿರ್ಧರಿಸಿರುವಂತೆ ಕಾಣುತ್ತದೆ. ಏಕೆಂದರೆ ಈ ತೀರ್ಪಿನ ಆಧಾರದ ಮೇಲೆ ಇದರ ನಂತರ ಮಥುರಾ ಸೇರಿದಂತೆ ಹಲವು ಮಂದಿರಗಳು ವಿಮೋಚನಾ ಹೋರಾಟಕ್ಕೆ ಸಾಕ್ಷಿಯಾಗಲಿವೆ.

ಭಾರತ ದೇಶವು ಬ್ರಿಟಿಷರ ವಿರುದ್ಧ ಹೋರಾಡಿ ನಲವತ್ತೇಳರಲ್ಲಿ ಸ್ವಾತಂತ್ರ್ಯ ಪಡೆದರೂ, ದೇಶ ವಿಭಜನೆಯೆಂಬ ಕರಾಳ ಘಟನೆಯು ದೇಶವಾಸಿಗಳ ಮನಸ್ಸಿನಲ್ಲಿ ಮಾಯದ ಗಾಯವನ್ನು ಸೃಷ್ಟಿಸಿತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸಲ್ಮಾನರ ಆಕ್ರಮಣಕಾರಿ ವರ್ತನೆಯಿಂದಾಗಿ ಕಾಲಕ್ರಮೇಣ ಹಿಂದೂ ನಶಿಸಿಹೋಗುವ ಹಂತಕ್ಕೆ ಬಂದರೆ, ಭಾರತದಲ್ಲಿ‌ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಮುಸಲ್ಮಾನರ ಜನಸಂಖ್ಯೆ ಬೆಳೆಯುತ್ತಲೇ ಹೋಯಿತು. ಖಿಲಾಫತ್ ಚಳುವಳಿಯ ಸಂದರ್ಭದಲ್ಲಿ ಗಾಂಧಿಯವರು ಹಾಕಿಕೊಟ್ಟ ಮಾರ್ಗದಂತೆಯೇ, ನೆಹರೂ ನೇತೃತ್ವದಲ್ಲಿ ಮತ್ತಿತರ ಹಿರಿಯ ನಾಯಕರೂ ಅಲ್ಪಸಂಖ್ಯಾತರ ತುಷ್ಟೀಕರಣದ ಪರಮಾವಧಿ ತಲುಪಿದ್ದರಿಂದ ನ್ಯಾಯಯುತವಾಗಿ ಹಿಂದುವಿಗೆ ಸಿಗಬೇಕಾಗಿದ್ದ ಗೌರವ ಘನತೆ ಈ ದೇಶದಲ್ಲಿ ಲಭಿಸಲೇ ಇಲ್ಲ. ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣದ ಕಾರಣದಿಂದ ನಡೆದ ಅಲ್ಪಸಂಖ್ಯಾತರ ಈ ರೀತಿಯ ನಿರಂತರ ಓಲೈಕೆಯು ಬಹುಸಂಖ್ಯಾತ ಹಿಂದುಗಳನ್ನು ಅಸಂತುಷ್ಟರನ್ನಾಗಿ‌ ಮಾಡಿತು. ಇದರ ಲಾಭವನ್ನು ಪಡೆದ ಬಿಜೆಪಿ ರಾಮಜನ್ಮಭೂಮಿ ರಥ ಯಾತ್ರೆಯ ಅಸ್ತ್ರವನ್ನು ಉಪಯೋಗಿಸಿ ಹಿಂದುಗಳನ್ನು ಒಗ್ಗೂಡುವಂತೆ ಮಾಡಿ ಅಧಿಕಾರದ ಗಾದಿಯನ್ನು ಏರಿತು. ಇದರ ಹಿಂದೆ ಹಿಂದೂ ರಾಷ್ಟ್ರ ಮತ್ತು ಅಖಂಡ ಭಾರತದ ಕಲ್ಪನೆಯನ್ನು ಪ್ರತಿಪಾದಿಸುವ ಸಂಘಪರಿವಾರದ ಪಾತ್ರ ಬಹಳ ಮುಖ್ಯವಾಗಿರುವುದು ಸರ್ವರಿಗೂ ತಿಳಿದ ಸಂಗತಿಯೇ‌.

ವಿಶ್ವದೆಲ್ಲೆಡೆಯ ಹಿಂದುಗಳನ್ನು ಸಂಘಟಿಸುವುದನ್ನೇ ತನ್ನ ಗುರಿಯಾಗಿಸಿಕೊಂಡಿರುವ ಬೃಹತ್ ಸರ್ಕಾರೇತರ ಸಂಘಟನೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದರ ರಾಜಕೀಯ ಆವೃತ್ತಿಯಾದ ಜನಸಂಘದಿಂದ ಮೊಟ್ಟೆಯ ರೂಪದಲ್ಲಿ ಆರಂಭವಾದ ಹಿಂದುವಿನ ರಾಜಕೀಯ ಯಾತ್ರೆಯು ತುರ್ತು ಪರಿಸ್ಥಿತಿಯ ಬಂಡಾಯದ ಕಾವಿನಲ್ಲಿ ಒಡೆದು ಮರಿಯಾಗಿ, ಮುಂದೆ ಬಿಜೆಪಿ ಎಂಬ ಹೆಸರಿನಿಂದ ರೂಪಾಂತರಗೊಂಡು, ಆಡ್ವಾಣಿಯವರ ಮೂಲಕ ರಾಮನ ಹೆಸರಿನಲ್ಲಿ ರೆಕ್ಕೆಯನ್ನು ಪಡೆದು, ನಂತರ ವಾಜಪೇಯಿಯವರ ಕಾಲದಲ್ಲಿ ಕಾರ್ಗಿಲ್ ಯುದ್ಧದ ಬಿಸಿಯಲ್ಲಿ ಹಾರಾಟದ ಅನುಭವ ಗಳಿಸಿ, ರಾಜಕೀಯದ ಖುರ್ಚಿಯಾಟದಲ್ಲಿ ಜಾಗ ಗಟ್ಟಿ ಮಾಡಿಕೊಂಡು, ಇಂದು ಮೋದಿ ಎಂಬ ಹೆಸರಿನ ಸುನಾಮಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಬೆಳೆದು‌ ನಿಂತು, ಅಧಿಕಾರದ ಗಾದಿಯಲ್ಲಿ ಹಿಂದೆಂದಿಗಿಂತಲೂ ಪ್ರಬಲವಾಗಿ ಕುಳಿತು, ಹದ್ದಿನಂತೆ ಮೋಡಗಳ ಮೇಲೆ ಹಾರುವವರೆಗೂ ಬಂದು ನಿಂತಿದೆ. ಮುಂದೆಯೂ ಅನೇಕ ವರ್ಷಗಳ ಕಾಲ ಅಧಿಕಾರದ ಗಾದಿಯಲ್ಲಿ ಕೂರುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿದೆ. ವಿಪಕ್ಷಗಳ ಒಗ್ಗಟ್ಟಿನ ಕೊರತೆ, ವಿರೋಧಿ ನಾಯಕರ ಗೊತ್ತು ಗುರಿ ಇಲ್ಲದ ಪೇಲವ ಟೀಕೆಗಳು, ಬಿಜೆಪಿ ಸಮಯ ನೋಡಿ ಬಿಡುವ ಧರ್ಮಾಸ್ತ್ರ, ಇಳಿಯದ ಮೋದಿ ನಾಮ ಬಲದ ಜನಪ್ರಿಯತೆಯು, ಮುಂದಿನ ಬಾರಿಯೂ ಮೋದಿಯೇ ಎನ್ನುವ ಸೂಚನೆಯನ್ನು ನೀಡುತ್ತಿವೆ. ಬೆಲೆ ಏರಿಕೆ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ, ಮತ್ತು ಅಲ್ಪಸಂಖ್ಯಾತರ ಧ್ರುವೀಕರಣವು ಬಿಜೆಪಿಯ ಜನಪ್ರಿಯತೆಗೆ ಲಗಾಮು ಹಾಕುತ್ತಿದ್ದರೂ, ಅದು ಕಮಲ ಪಕ್ಷದ ಚುನಾವಣೆಯ ಅಶ್ವಮೇಧದ ನಾಗಾಲೋಟಕ್ಕೆ ತಡೆ ಹಾಕುವಲ್ಲಿ ಸಫಲವಾಗುವ ಲಕ್ಷಣಗಳು ದೊಡ್ಡ ಪ್ರಮಾಣದಲ್ಲಿ ಕಾಣುತ್ತಿಲ್ಲ. ಮೋದಿ ಮತ್ತು ಬಿಜೆಪಿ ಇದರಿಂದ ನಾವೇ ಏಕಮೇವ ಅದ್ವಿತೀಯ ಎಂದು ಖುಷಿಪಡುತ್ತಿದ್ದರೂ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದರ ಪರಿಣಾಮವೇನಾಗಬಹುದು ಎಂಬುದನ್ನು ಚಿಂತನೆ ನಡೆಸುವುದು ಎರಡೂ‌ ಪಕ್ಷಗಳಿಗೆ ಸೇರದೇ, ಎಲ್ಲರಿಂದ ಸಮಾನ ಅಂತರ ಕಾಯ್ದುಕೊಂಡು ಮೂರನೆಯವರಾಗಿ ನಿಂತವರ ಆದ್ಯತೆಯಾಗುತ್ತದೆ.

Modi Varanasi

ಮೋದಿ ಮತ್ತು ಬಿಜೆಪಿ ಹಿಂದೆಂದಿಗಿಂತಲೂ ಇಂದು ಬಹಳ ಪ್ರಬಲವಾಗಿದ್ದರೂ ಭಾರತದ ಪ್ರಜಾಪ್ರಭುತ್ವದ ಇತಿಹಾಸಕ್ಕೆ ಈ ರೀತಿಯ ಸಂದರ್ಭ ಹೊಸದೇನೂ ಅಲ್ಲ. ಹಿಂದೆ ನೆಹರೂ ಮತ್ತು ಕಾಂಗ್ರೆಸ್ ಹಾಗೂ ಇಂದಿರಾ ಮತ್ತು ಕಾಂಗ್ರೆಸ್ ಇದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ದೇಶದ ಮೇಲೆ ಹಿಡಿತ ಸಾಧಿಸಿದ್ದವು. ನೆಹರೂ ಅಂತೂ “ತನ್ನ ನಂತರ ಯಾರು?” ಎಂದು ಪತ್ರಿಕೆಗಳಲ್ಲಿ ಪ್ರಶ್ನೆ ಹುಟ್ಟುವಂತೆ ನೋಡಿಕೊಂಡು, “ಯಾರೂ ಇಲ್ಲ!” ಎನ್ನುವ ಉತ್ತರ ಬರುವುದನ್ನು‌ ಕೇಳಿ ಆನಂದಿಸುತ್ತಿದ್ದರೆ, ಇಂದಿರಾ ಗಾಂಧಿಯವರು ಇನ್ನೂ‌ ಒಂದು ಹೆಜ್ಜೆ ಮುಂದೆ ಹೋಗಿ “ಇಂಡಿಯಾ ಅಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾ” ಎನ್ನುವವರೆಗೂ ವ್ಯಕ್ತಿ ಪೂಜೆಯ ಪರಮಾವಧಿಯನ್ನು ಮುಟ್ಟಿಸಿದ್ದರು. ಅದರ ಪರಿಣಾಮವಾಗಿ ಸ್ವಾತಂತ್ರ್ಯಾನಂತರ ಬೃಹತ್ ದೇಶ ಭಾರತವನ್ನು ಸಂಭಾಳಿಸಿದ ನೆಹರೂನಂತ ನೆಹರೂರವರೇ 1962ರ ಚೈನಾ ಯುದ್ಧದ ಹೀನಾಯ ಸೋಲಿಗೂ ಕಾರಣಕರ್ತರಾಗುತ್ತಾರೆ. ಬಾಂಗ್ಲಾದೇಶ ಸೃಷ್ಟಿಯ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೇಗೆ ಇಂದಿರಾಗಾಂಧಿಯವರಿಗೆ ರಾಜಕೀಯ ಶಕ್ತಿ ತಂದು ಕೊಟ್ಟಿತೋ, ಅದೇ ರೀತಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರುವ ನಿರ್ಧಾರವನ್ನೂ ಸಹಾ ಇದೇ ಶಕ್ತಿ ಅವರಿಗೆ ನೀಡಿತು. ಇಂದು ಸಹಾ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಮೋದಿಯವರು ಪ್ರತಿ ದಿನ ಅಧಿಕಾರದ ಖುರ್ಚಿಯ ಮೇಲೆ ಇನ್ನಷ್ಟು ಮತ್ತಷ್ಟು ಪ್ರಬಲವಾಗಿ ಕುಳಿತುಕೊಳ್ಳುತ್ತಿದ್ದಾರೆ. ಅವರ ಪ್ರಾಬಲ್ಯ ಇಂದಿರಾ ಮತ್ತು ನೆಹರೂರನ್ನು ಮೀರಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಇದರ ಪರಿಣಾಮವೇನಾಗಬಹುದು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಎಲ್ಲಿಯವರೆಗೂ ಎಲ್ಲವೂ ಸರಿಯಾಗಿರುತ್ತದೆಯೋ ಅಲ್ಲಿಯವರೆಗೂ ಸಮಸ್ಯೆ ಕಾಣುವುದಿಲ್ಲ. ಆದರೆ ಯಾವಾಗ ಅಧಿಕಾರ ಕಳೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತದೆಯೋ ಎನು ಬೇಕಾದರೂ ಮಾಡಿ ಯಾವ ಬೆಲೆಯನ್ನು ತೆತ್ತಾದರೂ ಸರಿ ಅಧಿಕಾರವನ್ನು ಉಳಿಸಿಕೊಳ್ಳುವ ಭಂಡತನ ಸೃಷ್ಟಿಯಾಗಿಬಿಡುತ್ತದೆ. ಮೋದಿ ದೇಶಭಕ್ತ, ಬಿಜೆಪಿ ಧರ್ಮನಿಷ್ಠ, ಸಂಘಪರಿವಾರ ಅಧಿಕಾರದ ಆಸೆಯನ್ನು ತೊರೆದಿರುವ ಧ್ಯೇಯನಿಷ್ಠ ಅಂತ ಸಾವಿರ ಹೇಳಿದರೂ, ಇದೇ ಸಂಘ, ಪಕ್ಷ ಮತ್ತು ಮೋದಿಯವರ ಮೂಗಿನಡಿಯಲ್ಲೇ ಆಪರೇಷನ್ ಕಮಲದಂಥಾ ಪ್ರಜಾಪ್ರಭುತ್ವ ವಿರೋಧಿ ಪ್ರಕರಣಗಳು ನಡೆಯುತ್ತಿವೆ ಎಂಬುದನ್ನು ಮರೆಯಬಾರದು. ಕೇವಲ‌ ಒಂದು ವೋಟಿಗಾಗಿ ಕುದುರೆ ವ್ಯಾಪಾರ ಮಾಡಲು ಬಯಸದೇ ಅಧಿಕಾರ ತ್ಯಾಗ ಮಾಡಿದ ವಾಜಪೇಯಿಯವರ ತತ್ವ ಸಿದ್ಧಾಂತಗಳು ಇಂದಿಗೂ ಬಿಜೆಪಿಯಲ್ಲಿ ಉಳಿದಿದೆ ಎಂದು ಧೈರ್ಯವಾಗಿ ಹೇಳಬಲ್ಲ ಖಂಡಿತವಾದಿಗಳು ಇಂದು ಯಾರೂ ಉಳಿದಿಲ್ಲ. ಹೀಗಾಗಿ ಸಮಕಾಲೀನ ರಾಜಕೀಯ ಪರಿಸ್ಥಿತಿಯನ್ನು ಸ್ವಲ್ಪ ಗಂಭೀರವಾಗಿ ಯೋಚಿಸಿ ವಿಶ್ಲೇಷಣೆ ಮಾಡುವ ಅವಶ್ಯಕತೆಯಿದೆ.

ಮೋದಿಯವರ ಆಡಳಿತದಲ್ಲಿ ದೇಶ ಹಿಂದೆಂದೂ ಮುಟ್ಟದ ಭವ್ಯ ಶಿಖರದೆತ್ತರಕ್ಕೆ ಮುಟ್ಟುತ್ತಿರುವುದೇನೋ ನಿಜ. ಸ್ವಾಭಿಮಾನ ಮತ್ತು ಸ್ವಾವಲಂಬನೆಯ ದೃಷ್ಟಿಯಲ್ಲಿ ಭಾರತವು ಜಗತ್ತಿನೊಂದಿಗೆ ದೊಡ್ಡ ಮಟ್ಟದ ಪೈಪೋಟಿ ನಡೆಸುತ್ತಿದೆ. ದೇಶದ ಸೇನೆಯು ಹೊಸ ಶಕ್ತಿಯನ್ನು ಗಳಿಸುತ್ತಿದೆ. ಅಂತಾರಾಷ್ಟ್ರೀಯ ಸಂಬಂಧಗಳು ಹೊಸ ಎತ್ತರಗಳನ್ನು ಮುಟ್ಟುತ್ತಿವೆ, ವಿಶ್ವ ಭೂಪಟದಲ್ಲಿ ಭಾರತ ನಾಯಕನ‌ ಸ್ಥಾನ ಪಡೆಯುತ್ತಿದೆ. ರಾಷ್ಟ್ರೀಯ ಯೋಜನೆಗಳು ಜನಸಾಮಾನ್ಯರನ್ನು ತಲುಪುತ್ತಿವೆ‌. ಸಾರಿಗೆ ಸಂಪರ್ಕ ಸುಧಾರಿಸುತ್ತಿದೆ. ಇದರ ಜೊತೆಗೆ ಜನಸಾಮಾನ್ಯರೂ ದೇಶದ ಪ್ರಗತಿಯಲ್ಲಿ ತಮ್ಮ ಪಾತ್ರವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಲ್ಲೂ ರಾಷ್ಟ್ರೀಯತೆಯ ಭಾವನೆಗಳು ಪ್ರಬಲವಾಗುತ್ತಿವೆ. ಇನ್ನೂ ಹತ್ತು ಹಲವು ಮಹತ್ವದ ಬದಲಾವಣೆಗಳು ಜರುಗುತ್ತಿವೆ. ಆದರೆ ಇದೆಲ್ಲದರ ಹೊರತಾಗಿಯೂ ಕೆಲವು ದೂರಗಾಮಿ ಅಪಾಯದ ಸಾಧ್ಯತೆಗಳು ಸದ್ದಿಲ್ಲದೇ ಬೆಳೆಯುತ್ತಿವೆ. ಅದರ ಲಕ್ಷಣಗಳೆಂದರೆ ವ್ಯಕ್ತಿ ಪೂಜೆ, ಅಧಿಕಾರ ಕೇಂದ್ರಿತ ರಾಜಕಾರಣ, ಉದ್ಯಮಿಗಳ ಓಲೈಕೆ, ಏಕಪಕ್ಷೀಯ ನಿರ್ಧಾರಗಳು, ಜನಸಾಮಾನ್ಯನ ನಿರ್ಲಕ್ಷ್ಯ, ತಗ್ಗಿದ ಮಾಧ್ಯಮಗಳ ಬಲ, ಕುಸಿದ ವಿರೋಧ ಪಕ್ಷಗಳ ಸತ್ವ, ಹಿಂದುತ್ವದ ರಾಜಕೀಯಕರಣ, ಇತ್ಯಾದಿಗಳು. ಇದರ ಬಗ್ಗೆ ಒಂದಷ್ಟು ವಿಶ್ಲೇಷಣೆಯನ್ನು ಗಮನಿಸೋಣ.

1. ವ್ಯಕ್ತಿ ಪೂಜೆ : ಮೋದಿ ಎಂಬ ಹೆಸರು ಇಂದು ಕೇವಲ ಹೆಸರಾಗಿ ಉಳಿದಿಲ್ಲ. ಹಿಂದೆ ಗಾಂಧಿ, ನೆಹರೂ, ಇಂದಿರಾರಿಗಿದ್ದಂಥಾ ಹೆಸರಿನ ವರ್ಚಸ್ಸೇ ಈಗ ಮೋದಿ ಅನ್ನುವ ಹೆಸರಿಗೂ ಬಂದು ಬಿಟ್ಟಿದೆ. ಮೋದಿ ನಾಮ ಬಲಕ್ಕೆ ಇಂದು ರಾಜ್ಯಗಳನ್ನು ಉದಿಸುವ ರಾಜ್ಯಗಳನ್ನು ಅಳಿಸುವಷ್ಟು ಶಕ್ತಿ ಬಂದಿದೆಯೆಂದರೆ ಅದು ಅತಿಶಯೋಕ್ತಿಯಲ್ಲ. ಮೋದಿಯ ಹೆಸರು ಇಂದು ಬೆಂಗಳೂರಿನ ತೇಜಸ್ವಿ ಸೂರ್ಯನಂಥಾ ಚಿಕ್ಕ ಹುಡುಗನನ್ನು ಸಂಸತ್ತಿಗೆ ಕಳುಹಿಸಿದ ಹಾಗೆಯೇ ಪಕ್ಷವನ್ನು ಕಟ್ಟಿ ಬೆಳೆಸಿದ ಬಿಜೆಪಿಯ ಭೀಷ್ಮ ಎಂದು ಕರೆಸಿಕೊಳ್ಳುವ ಅಡ್ವಾಣಿಯಂಥಾ ಹಿರಿಯರನ್ನೇ ಮನೆಗೆ ಕಳುಹಿಸುವಷ್ಟು ಪ್ರಬಲವಾಗಿ ಬೆಳೆದು ನಿಂತಿದೆ. ಕೇವಲ ನಾಮವೊಂದಕ್ಕೆ ಈ ಶಕ್ತಿ ಬರುವುದು ರಾಷ್ಟ್ರ ಹಾಗೂ ಪ್ರಜಾಪ್ರಭುತ್ವದ ದೃಷ್ಟಿಯಿಂದ ಅನುಕೂಲವೂ ಹೌದು ಅಪಾಯಕಾರಿಯೂ ಹೌದು. ಇದೊಂದು ರೀತಿ ಬ್ರಹ್ಮಾಸ್ತ್ರದಂತೆ ಬಹು ಶಕ್ತಿಶಾಲಿ. ಉಪಯೋಗಿಸುವವರು ಯಾರು ಎಂಬುದರ ಮೇಲೆ ಅದರ ಪರಿಣಾಮ ನಿರ್ಧರಿಸಲ್ಪಡುತ್ತದೆ. ಮೋದಿ ದೇವರಂಥವರು ಅನ್ನುವ ಬಿಜೆಪಿ ಕಾರ್ಯಕರ್ತರ ಭಾವನೆಯನ್ನೇ ಒಪ್ಪಿಕೊಂಡರೂ, ಗಾಂಧಿ ನಾಮ ಬಲವನ್ನು ಹೇಗೆ 75 ವರ್ಷ ಚುನಾವಣೆಯಲ್ಲಿ ಇತರರು ಹೇಗೆ ಹೇಗೆ ಬಳಸಿಕೊಂಡರು, ಇನ್ನೂ ಹೇಗೆ ಬಳಸಿಕೊಳ್ಳುತ್ತಿದ್ದಾರೆ, ಮುಂದೆಯೂ ಬಳಸಿಕೊಳ್ಳುವ ಸಾಧ್ಯತೆ ಹೇಗಿದೆ ಎಂಬುದನ್ನು ನಾವು ಕಣ್ಣಾರೆ ನೋಡಿದ್ದೇವೆ, ನೋಡುತ್ತಿದ್ದೇವೆ, ಮುಂದೆಯೂ ನೋಡಲಿದ್ದೇವೆ.

150 minutes program chart, bengaluru, BJP Karnataka, india, karnataka, kateel change, kateel mela, latest, Major projects to be launched, Mangalore programme, Modi in Mangalore, modi in mangaluru, Nalin Kumar Kateel, narendra modi, narendra Modi in Mangaluru, Narendra Modi News, prime minister, Prime minister Narendra modi

ಇದೇ ಮಾದರಿಯಲ್ಲಿ ಮೋದಿ ಹೆಸರು ಇತರರಿಂದ ದುರ್ಬಳಕೆಯಾಗುವುದಿಲ್ಲ ಎನ್ನುವುದಕ್ಕೆ ಏನಾದರೂ ಖಾತರಿ ಇದೆಯೇ? ಮೋದಿಯ ಹೆಸರಿನಲ್ಲಿ ವೋಟು ಪಡೆದ ಅನೇಕ ನಾಲಾಯಕ್ ಸಂಸದರ ಕಾರ್ಯ ನಿರ್ವಹಣೆಯೇ ಇದಕ್ಕೆ ಉತ್ತರವಾಗಿ ನಮ್ಮ ಕಣ್ಮುಂದೆ ಇದೆ. ವ್ಯಕ್ತಿ ಪೂಜೆಯು ಬಕೆಟ್ ಸಂಸ್ಕೃತಿ, ಜೀ ಹುಜೂರ್ ಸಂಸ್ಕೃತಿಯನ್ನು ಬೆಳೆಸುತ್ತದೆ. ಅಂತಹಾ ಜಾಗದಲ್ಲಿ ಪ್ರಾಮಾಣಿಕರು, ಸ್ವಾಭಿಮಾನಿಗಳು, ಆತ್ಮಗೌರವವುಳ್ಳವರು, ಖಂಡಿತವಾದಿಗಳು, ಖಂಡಿತಾ ಉಳಿಯಲಾರರು. ಇವರೆಲ್ಲಾ ಗಂಟುಮೂಟೆ ಕಟ್ಟಿದ ಮೇಲೆ ಪಕ್ಷ ಮತ್ತು ಸರ್ಕಾರದಲ್ಲಿ ಉಳಿಯುವವರ್ಯಾರು? ಹೊಗಳುಭಟರು ವಂಧಿ ಮಾಗಧರು ಮಾತ್ರ. ಇವರುಗಳನ್ನು ಇಟ್ಟುಕೊಂಡು ದೇಶ ಕಟ್ಟಲು ಮೋದಿಯೇ ಅಲ್ಲ ಸ್ವಯಂ ಭಗವಂತನ ಬಳಿಯೂ ಸಾಧ್ಯವಿರುವುದಿಲ್ಲ. ಇದಲ್ಲದೇ ವ್ಯಕ್ತಿ‌ಪೂಜೆಯ ಪರಾಕಾಷ್ಠೆಯಲ್ಲಿ ಗಾಂಧಿ ಹೆಸರಿನಲ್ಲಿ ನಡೆದ ಚಿತ್ಪಾವನ ಬ್ರಾಹ್ಮಣರ ಸಾಮೂಹಿಕ ಹತ್ಯೆ, ಇಂದಿರಾ ಹೆಸರಿನಲ್ಲಿ ನಡೆದ ಸಿಖ್ಖರ ನರಮೇಧದ ಉದಾಹರಣೆಗಳು ಕಣ್ಣಮುಂದಿವೆ. ಮುಂದೆ ಮೋದಿ ಹೆಸರಲ್ಲಿ ಈ ರೀತಿಯ ಅಪಸವ್ಯಗಳು ನಡೆಯುವುದಿಲ್ಲವೆಂಬ ಖಾತರಿ ಇದೆಯೇ? ಬಾಂಬನ್ನು ಸೃಷ್ಟಿಸಿದ ಮೇಲೆ ವಿಜ್ಞಾನಿಗೆ ಅದರ ಮೇಲೆ ಹೇಗೆ ನಿಯಂತ್ರಣ ಇರುವುದಿಲ್ಲವೋ ಹಾಗೆ ಅಂಧಭಕ್ತರ ಪಡೆ. ಹಾಗೆ ಕಟ್ಟಿದ ಪಡೆಯ ಅಭಿಮಾನವನ್ನು ತತ್ವ ಸಿದ್ಧಾಂತಗಳ ಮಟ್ಟಕ್ಕೆ, ಅದಕ್ಕೂ ಮೀರಿದ ಸರ್ವರ ಹಿತ ಬಯಸುವ ಮನೋಭೂಮಿಕೆಯ ಮಟ್ಟಕ್ಕೆ ಏರಿಸುವ ಶಕ್ತಿ ಮೋದಿಯವರಿಗಿದೆಯೇ? ಅದಕ್ಕಾಗಿ ಏನಾದರೂ ಪ್ರಯತ್ನಗಳು ಜರುಗುತ್ತಿವೆಯೇ? ಯಾರಾದರೂ ಜವಾಬ್ದಾರಿ ಹೊತ್ತವರು ಉತ್ತರಿಸಬೇಕು. ಇಂದು ಬಿಜೆಪಿ ಮತ್ತು ಮೋದಿಯವರನ್ನು ಟೀಕಿಸುವವರನ್ನು ದೇಶದ್ರೋಹಿಗಳೆಂದು ನಿರ್ದಾಕ್ಷಿಣ್ಯವಾಗಿ ಕರೆಯಲಾಗುತ್ತದೆ. ಟೀಕಿಸಿದವರ ಹಿನ್ನೆಲೆ ಏನು? ಉದ್ದೇಶವೇನು? ಎಂಬುದನ್ನೂ ವಿಮರ್ಶಿಸದೇ ಅವರ ಬಾಯಿ ಮುಚ್ಚಿಸುವ ಪ್ರಕ್ರಿಯೆ ನಿಜಕ್ಕೂ ಗಂಡಾಂತರಕಾರಿ. ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಬೌದ್ಧಿಕವಾಗಿ ಬೆಳೆಯಬೇಕಾದ ಅವಶ್ಯಕತೆಯಿದೆ. ಆದರೆ ಬಿಜೆಪಿಯ ವಾತಾವರಣ ಹೇಗಿದೆಯೆಂದರೆ, ಹಾಗೆ ಬೌದ್ಧಿಕವಾಗಿ ಬೆಳೆಯುವುದಕ್ಕಿಂತಲೂ, ಮೇಲಿನವರು ಹೇಳಿದಂತೆ ಕೇಳಿಕೊಂಡು ಹೋಗುವ ಜೀ ಹುಜೂರ್ ಸಂಸ್ಕೃತಿಯಿಂದಲೇ ಜಾಸ್ತಿ ಲಾಭ ಎಂಬುದನ್ನು ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಅರ್ಥಮಾಡಿಸುತ್ತಿದೆ. ಇಷ್ಟವಾಗದವರು ಗಂಟುಮೂಟೆ ಕಟ್ಟಬಹುದು ಮತ್ತು ಹಾಗೆ ನೀವು ಹೊರಟರೂ ನಮಗೇನೂ ನಷ್ಟವಿಲ್ಲ ಎನ್ನುವ ದಿವ್ಯನಿರ್ಲಕ್ಷ್ಯ ಹಾಗೂ ಉದಾಸೀನತೆ ಪಕ್ಷ ಹಾಗೂ ಸರ್ಕಾರದಲ್ಲಿ ಎದ್ದು ಕಾಣುತ್ತಿದೆ ಎಂಬುದನ್ನು ಅಲ್ಲಗಳೆಯುವ ಶಕ್ತಿ ಯಾರಿಗಾದರೂ ಇದೆಯೇ?

2. ಅಧಿಕಾರ ಕೇಂದ್ರಿತ ರಾಜಕಾರಣ : ಅಂದು ವಾಜಪೇಯಿ ಕುದುರೆ ವ್ಯಾಪಾರದ ಮೇಲೆ ನಂಬಿಕೆಯಿಡದೇ ಅಧಿಕಾರವನ್ನೇ ತೊರೆದರು. ಮೋದಿ ನೇತೃತ್ವದ ಅದೇ ಬಿಜೆಪಿ ಇಂದು ಅಧಿಕಾರಕ್ಕಾಗಿ ನಿರ್ಲಜ್ಜವಾಗಿ ಸರಣಿ ಆಪರೇಷನ್‌ಗಳನ್ನು ನಡೆಸುತ್ತಿದೆ. ಇದಕ್ಕೆ ಬಿಜೆಪಿಯು “ಕಾಂಗ್ರೆಸ್‌ನ ದುರಾಡಳಿತವನ್ನು ತೊಲಗಿಸಲಿಕ್ಕಾಗಿ ಹೀಗೆ ಮಾಡಬೇಕಾಗಿದೆ” ಎಂಬ ಕಾರಣ ಹೇಳಿದರೂ, ಅಂಥಾ ಕಾರಣವು ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು “ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ” ಎಂದು ಕೊಟ್ಟ ಕಾರಣದಷ್ಟೇ ಹಗುರವಾದದ್ದು. ಹೀಗಾಗಿ ಇತರ ಪಕ್ಷಗಳ ನಾಯಕರ ನಿರಂತರ ವಲಸೆಯಿಂದ ಬಿಜೆಪಿಯ ಏಕೈಕ ಗುರಿ ಅಧಿಕಾರ ಹಿಡಿಯುವುದಲ್ಲದೇ ಬೇರೆ ಇನ್ನೇನೂ ಆಗಲು ಸಾಧ್ಯವಿಲ್ಲ. ಅಥವಾ ಹಾಗೆ ವಲಸೆ ಬಂದ ಅನ್ಯ ಪಕ್ಷಗಳ ನಾಯಕರಿಗೆ ತತ್ವ ಸಿದ್ಧಾಂತಗಳನ್ನು ಗಟ್ಟಿ ಮಾಡಲು ಬಿಜೆಪಿ ಏನಾದರೂ ವಿಶೇಷ ಕಾರ್ಯಯೋಜನೆಗಳನ್ನೇನಾದರೂ ಹಮ್ಮಿಕೊಂಡಿದೆಯೇ? ಮೊದಲಿಂದ ಇರುವ ನಾಯಕರ ತತ್ವ ಸಿದ್ಧಾಂತಗಳೇ ಸಂದೇಹಕ್ಕೊಳಪಟ್ಟಿರುವಾಗ ಪಕ್ಷ ಹಾಗೂ ಅದರ ಸಿದ್ಧಾಂತಗಳ ಅರಿವೇ‌ ಇಲ್ಲದ ಮತ್ತು ಹೆಚ್ಚು ಕಡಿಮೆ ವಿರುದ್ಧ ತತ್ವ ಸಿದ್ಧಾಂತಗಳ ಬೇರೆ ಪಕ್ಷಗಳಿಂದ ಬಂದ ನಾಯಕರು ಅದು ಹೇಗೆ ಬಿಜೆಪಿ ಸಿದ್ಧಾತಗಳನ್ನು ಮೈಗೂಡಿಸಿಕೊಳ್ಳಬಲ್ಲರು? ನೂರು ಜನರೊಳಗೆ ಒಬ್ಬ ಬೆರೆತು ಬದಲಾಗಬಹುದು. ಆದರೆ ನೂರು ಜನರಲ್ಲಿ 50 ಜನ ಹೊರಗಿನವರೇ ಆದಾಗ ಒಳಗಿನವರು ಬದಲಾಗದೇ ಉಳಿಯುವುದೇ ಆಶ್ಚರ್ಯ! ಅಂತಹಾ ಸಂದರ್ಭದಲ್ಲಿ ಎಲ್ಲರ ನಡುವಿನ ಸಮಾನ ಆಸಕ್ತಿಯ ವಿಚಾರಗಳು ಅಧಿಕಾರ ಮತ್ತು ಹಣ ಮಾತ್ರ ಆಗಿರುತ್ತದೆಯೇ ಹೊರತು ಸಿದ್ಧಾಂತ ಹಾಗೂ ತತ್ವಕ್ಕೆ ಮೂರು ಪೈಸೆಯ ಬೆಲೆ ಇರುವುದಿಲ್ಲ. ಇದೇ ರೀತಿ ಆಪರೇಷನ್ ಮಾಡುತ್ತಿದ್ದರೆ ಬರಲಿರುವ ದಿನಗಳಲ್ಲಿ ಬಿಜೆಪಿ ತನ್ನ ಸ್ವಂತ ಸ್ವರೂಪವನ್ನೇ ಕಳೆದುಕೊಳ್ಳುವುದು ನಿಶ್ಚಿತ.

adani modi

3. ಉದ್ಯಮಿಗಳ ಓಲೈಕೆ : ಬಿಜೆಪಿಯ ಪ್ರಮುಖ ಶಕ್ತಿ‌ ಕೇಂದ್ರ ಮೋದಿಯೇ ಆಗಿದ್ದರೂ ಅದರ ಹಿಂದಿನ ಬೌದ್ಧಿಕ ಶಕ್ತಿ ಆರ್‌ಎಸ್‌ಸ್ ಆಗಿದೆ. ಮತ್ತು ಆರ್ಥಿಕ ಶಕ್ತಿ ಉದಾರವಾಗಿ ಚುನಾವಣಾ ನಿಧಿ ನೀಡುವ ಉದ್ಯಮಿಗಳೇ ಆಗಿದ್ದಾರೆ. ಉದ್ಯಮಿಗಳಲ್ಲಿ ಒಳ್ಳೆಯವರು ಕೆಟ್ಟವರು ಎಂದು ವಿಂಗಡಿಸುವುದು ಬಹಳ ಕಷ್ಟ. ಅವರಲ್ಲಿ ಬಹುತೇಕರ ಮೊದಲ ಆದ್ಯತೆಯ ವಿಷಯ ತಮ್ಮ ವ್ಯವಹಾರಗಳನ್ನು ಬೆಳೆಸುವುದೇ ಆಗಿರುತ್ತದೆಯೇ ಹೊರತು ಸಮಾಜಸೇವೆ ಅಥವಾ ದೇಶಭಕ್ತಿಯು ಎರಡನೇ ಆದ್ಯತೆಯಾಗಿರಬಹುದಷ್ಟೇ. ಎಲ್ಲಿಯವರೆಗೂ ಪಕ್ಷದ ಮತ್ತು ಮೋದಿಯಂಥಾ ಮುಖ್ಯ ನಾಯಕರ ಆಧ್ಯಾತ್ಮಿಕ ಬಲ ಮತ್ತು ಚಾರಿತ್ರ್ಯದ ಬಲಗಳು ಗಟ್ಟಿಯಿರುತ್ತದೆಯೋ ಅಲ್ಲಿಯವರೆಗೂ ಉದ್ಯಮಿಗಳು ರಾಜಕಾರಣಿಗಳಿಂದ ಉಪಯೋಗಿಸಿಕೊಳ್ಳಲ್ಪಡುತ್ತಾರೆ. ಅದಕ್ಕೆ ಪ್ರತಿಯಾಗಿ ಸ್ವಲ್ಪ ಪ್ರಮಾಣದ ಪ್ರಯೋಜನವನ್ನೂ ಪಡೆಯುತ್ತಾರೆ. ಆದರೆ ಯಾವತ್ತು ಈ ಸೂತ್ರ ಬದಲಾಗುತ್ತದೆಯೋ ಅಂದರೆ ನಾಯಕರ ಆದ್ಯತೆ ಆಧ್ಯಾತ್ಮಿಕತೆಯಿಂದ ಪ್ರಾಪಂಚಿಕತೆಯೆಡೆಗೆ ಬದಲಾಗುತ್ತದೆಯೋ ಆಗ ಅವರ ಶಕ್ತಿ ಕಡಿಮೆಯಾಗಿ ಉದ್ಯಮಿಗಳು ಕಿಂಗ್ ಮೇಕರ್ ಆಗಲು ಆರಂಭಿಸುತ್ತಾರೆ. ಸರ್ಕಾರ ಉದ್ಯಮಿಗಳ ತೆರೆಮರೆಯ ಆಣತಿಯಂತೆ ನಡೆಯಲಾರಂಭಿಸುತ್ತದೆ. ದೇಶದ ಮತ್ತು ಸರ್ಕಾರದ ಇಷ್ಟಾನಿಷ್ಟಗಳನ್ನು ಉದ್ಯಮಿಗಳು ಮತ್ತು ಶ್ರೀಮಂತರು ನಿರ್ಧರಿಸಲಾರಂಭಿಸುತ್ತಾರೆ. ಆಗ ಪ್ರಜಾಪ್ರಭುತ್ವದ ಮೌಲ್ಯಗಳು ಗಾಳಿಗೆ ತೂರಿಹೋಗುತ್ತವೆ. ಇಂಥಾ ಪರಿಸ್ಥಿತಿಯನ್ನು ಎದುರಿಸಲು ಬಿಜೆಪಿ ಮಾಡಿಕೊಂಡಿರುವ ಸಿದ್ಧತೆಗಳೇನು? ಉದ್ಯಮಿಗಳು ಸರ್ಕಾರದ ನೀತಿನಿಯಮಗಳಲ್ಲಿ ಮೂಗು ತೂರಿಸುತ್ತಿಲ್ಲ ಎಂದು ಎದೆಮುಟ್ಟಿ ಹೇಳಿಕೊಳ್ಳುವಷ್ಟು ಬಿಜೆಪಿ ಪಾರದರ್ಶಕವಾಗಿದೆಯೇ? ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ಮತ್ತಿತರರ ಆಸ್ತಿ – ಉದ್ದಿಮೆಗಳ ಬೆಳವಣಿಗೆ ಬಿಜೆಪಿಯ ಬೆಳವಣೆಗೆಯನ್ನೇ ಮೀರಿಸುತ್ತಿದೆ. ಇದರ ಪರಿಣಾಮಗಳೇನಾಗಬಹುದು? ಯೋಚಿಸಬೇಕಾದ ವಿಚಾರ. ಇದಲ್ಲದೇ ಭಾರತದ ಬೃಹತ್ ಜನಸಮುದಾಯಕ್ಕೆ ಉದ್ಯೋಗ ನೀಡುವುದು ಗುಡಿ ಕೈಗಾರಿಕೆಗಳು. ಕೇವಲ ವೋಕಲ್ ಫಾರ್ ಲೋಕಲ್ ಎಂದು ಘೋಷಣೆ ಮಾಡಿದರಷ್ಟೇ ಅದು ಬೆಳೆಯುವುದಿಲ್ಲವಲ್ಲ. ಇಂಥಾ ದೊಡ್ಡ ದೊಡ್ಡ ಉದ್ಯಮಿಗಳು ಚಿಕ್ಕ ಚಿಕ್ಕ ಗುಡಿ ಕೈಗಾರಿಕೆಗಳ ಜೊತೆ ಸ್ಪರ್ಧೆಗಿಳಿಯದಂತೆ ಕಾನೂನು ಜಾರಿಗೊಳಿಸಬೇಕು. ಅಂಥಾ ಇಚ್ಛಾಶಕ್ತಿ ಮೋದಿ ಸರ್ಕಾರಕ್ಕಿದೆಯೇ?

ಇದನ್ನೂ ಓದಿ | ಸವಿಸ್ತಾರ ಅಂಕಣ | ಒಂದೇ ʼಸತ್ಯʼದೆಡೆಗೆ ಚಲಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಿನ್ನ ಎಣಿಸುವುದು ಅಪರಾಧವಲ್ಲವೇ?

4. ಏಕಪಕ್ಷೀಯ ನಿರ್ಧಾರಗಳು : ಬಿಜೆಪಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ತೆಗೆದುಕೊಂಡ‌ ಅನೇಕ ನಿರ್ಧಾರಗಳು ಐತಿಹಾಸಿಕ. ನೋಟು ಅಮಾನ್ಯೀಕರಣದಿಂದ ಹಿಡಿದು ಕಾಶ್ಮೀರದ ಆರ್ಟಿಕಲ್ 371 ರದ್ದುಗೊಳಿಸಿದವರೆಗೂ ಅನೇಕ ಅಪರೂಪದ ದಿಟ್ಟ ನಿರ್ಧಾರಗಳು ದೇಶದ ಒಳಿತಿಗೆ ಅಪಾರ ಕೊಡುಗೆ ನೀಡಿವೆ. ಆದರೆ ಇದನ್ನು ತರಲು ಬಿಜೆಪಿ ಅನುಸರಿಸಿದ ಮಾರ್ಗ ಚರ್ಚಾಯೋಗ್ಯ ವಿಚಾರ. ರಾತ್ರೋರಾತ್ರಿ ತೆಗೆದುಕೊಂಡ ನಿರ್ಧಾರಗಳು, ಚರ್ಚೆಯೇ ನಡೆಯದೇ ಕೈಗೊಂಡ ತೀರ್ಮಾನಗಳು, ವಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯದೇ ಏಕಪಕ್ಷೀಯವಾಗಿ ತೆಗೆದುಕೊಂಡ ಕ್ರಮಗಳು ದೇಶದ ಹಿತದೃಷ್ಟಿಯಿಂದ ಮೇಲ್ನೋಟಕ್ಕೆ ಒಳ್ಳೆಯದೆಂದು ತೋರಿದರೂ, ಈ ರೀತಿಯ ಕ್ರಮಗಳು ಪ್ರಜಾತಂತ್ರ ವ್ಯವಸ್ಥೆಯ ಬಲವನ್ನು ಕುಗ್ಗಿಸುವುದರಲ್ಲಿ ಅನುಮಾನವಿಲ್ಲ. ದೇಶದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ನಂಥಾ ಪಕ್ಷಗಳು ಇರುತ್ತವೆ ಹೋಗುತ್ತವೆ. ನಾಯಕರು ಬರುತ್ತಾರೆ ಹೋಗುತ್ತಾರೆ. ಆದರೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಬಹುಕಾಲ ಉಳಿಬೇಕು. ಅದರ ದೂರದೃಷ್ಟಿಯಿಂದ ಕೂಡಿದ ಆಶಯಗಳು ಈಡೇರಬೇಕು. ಅದನ್ನು ತಾತ್ಕಾಲಿಕ ಲಾಭದ ದೃಷ್ಟಿಯಿಂದ ಮೀರಿಹೋದರೆ, ಉದ್ದೇಶ ಒಳ್ಳೆಯದಾಗಿದ್ದರೂ ಶಾಶ್ವತ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ವಿರೋಧ ಪಕ್ಷಗಳು ಎಷ್ಟೇ ದುರ್ಬಲವಾಗಿರಲಿ ಅಥವಾ ನಾಯಕರು ಎಷ್ಟೇ ಕೆಳಮಟ್ಟದವರಾಗಿರಲಿ ಅವರನ್ನು ತಿರಸ್ಕರಿಸಿ, ಒಂದು ಮೂಲೆಗೆ ತಳ್ಳಿ, ಉಪೇಕ್ಷಿಸಿ ಆಡಳಿತ ನಡೆಸುವುದು ಪ್ರಜಾಪ್ರಭುತ್ವವಾಗಿರುವುದಿಲ್ಲ. ಬದಲಾಗಿ ಸರ್ವಾಧಿಕಾರಿ ಧೋರಣೆಯಾಗಿರುತ್ತದೆ. ಪ್ರಜ್ಞಾವಂತ ಜನರು “ದೇಶಕ್ಕೆ ಒಳ್ಳೆಯದಾದರೆ ಸರಿ, ಮಾರ್ಗ ಯಾವುದಾದರೂ ಪರವಾಗಿಲ್ಲ” ಎಂದು ಕೆಲ ದಿನಗಳು ಸಹಿಸಿಕೊಂಡು ಸುಮ್ಮನಿರಬಹುದು. ಆದರೆ ದೀರ್ಘಕಾಲದಲ್ಲಿ ಈ ಭಾವನೆಯನ್ನು ಬೌದ್ಧಿಕವಾಗಿ ಚಿಂತನೆ ನಡೆಸಯವವರಲ್ಲಿ ಹಾಗೇ ಉಳಿಸಲು ಸಾಧ್ಯವಿಲ್ಲ. ಒಂದು ಹಂತದಲ್ಲಿ ಬಂಡಾಯ ಸ್ಫೋಟಗೊಳ್ಳುತ್ತದೆ. ಈ ಸರ್ವಾಧಿಕಾರಿ ಧೋರಣೆಯನ್ನು ಬೆಳೆಯದಂತೆ ತಡೆಯಲು ಪಕ್ಷ ಅಥವಾ ಸರ್ಕಾರ ಏನು ಕ್ರಮಗಳನ್ನು ಕೈಗೊಂಡಿದೆ? ಆತ್ಮವಿಮರ್ಶೆಯ ಅವಶ್ಯಕತೆ ಇದೆ.

5. ಜನ ಸಾಮಾನ್ಯರ ನಿರ್ಲಕ್ಷ್ಯ : ಪ್ರಪಂಚವನ್ನೇ ಬಾಧಿಸಿದ ಕೊರೋನಾ ರೋಗವು ಎಲ್ಲ ದೇಶಗಳ ಆರ್ಥಿಕ ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದೆ. ಭಾರತವೂ ಇದಕ್ಕೆ ಹೊರತಲ್ಲ. ಇದರ ಪರಿಣಾಮವಾಗಿ ಪೆಟ್ರೋಲ್ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ‌. ಶ್ರೀ ಸಾಮಾನ್ಯನ ಬದುಕು ದುರ್ಭರವಾಗುತ್ತಿರುವ ಸನ್ನಿವೇಶದಲ್ಲಿ ಅವನ ಸಹಾಯಕ್ಕೆ ನಿಲ್ಲುವುದು ಸರ್ಕಾರದ ಕರ್ತವ್ಯ. ಆದರೆ ಇದಕ್ಕೆ ವಿರುದ್ಧವಾಗಿ ಮಂಡಕ್ಕಿಯಂಥಾ ವಸ್ತುವಿನ ಮೇಲೂ ಜಿಎಸ್ ಟಿ ಹೇರಿದ ಸರ್ಕಾರದ ನಡೆ ವ್ಯಾಪಕ ಟೀಕೆಗೊಳಗಾಯಿತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಇತ್ಯಾದಿಗಳ ಬೆಲೆಯನ್ನು ಇಳಿಸುವಲ್ಲಿ ಸರ್ಕಾರ ವಿಫಲವಾಗುತ್ತಿರುವುದು ಜನಸಾಮಾನ್ಯರ ತಾಳ್ಮೆಯನ್ನು ತೀವ್ರವಾಗಿ ಪರೀಕ್ಷಿಸುತ್ತಿದೆ. ಇದಕ್ಕೆ ಉತ್ತರವಾಗಿ ಸರ್ಕಾರ ಮಾಡಬಹುದಾಗಿದ್ದ ಕೆಲಸಗಳೇನು? ಅಂಥಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರ ಎಷ್ಟು ಪ್ರಾಮಾಣಿಕವಾಗಿದೆ. ಪಕ್ಷದ ಸಂಸದರು ಈ ಕಡೆ ಎಷ್ಟು ಗಮನಹರಿಸಿದ್ದಾರೆ? ಅನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ? ಮೋದಿ ಮ್ಯಾಜಿಕ್ ಮಾಡಿಬಿಡುತ್ತಾರೆ ಎಂದು ನಂಬಿದ್ದ ಜನರಿಗೆ ಮೋದಿ‌ ಒಬ್ಬರ ಕೈಲಿ ಮ್ಯಾಜಿಕ್ ಮಾಡಲಾಗುವುದಿಲ್ಲ ಎಂದು ಅರ್ಥವಾಗಿಬಿಟ್ಟಿದೆ. ಈ ಸಂದರ್ಭದಲ್ಲಿ ಮೋದಿಯವರಂತೆ ಉಳಿದ ಜನಪ್ರತಿನಿಧಿಗಳೂ ಕೆಲಸ ಮಾಡದಿದ್ದರೆ ಜನಸಾಮಾನ್ಯ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗುವುದಂತೂ ಸತ್ಯ. ಜನಸಾಮಾನ್ಯರಿಗೆ ಉದ್ಯೋಗವೂ ದೊರೆಯುತ್ತಿಲ್ಲ, ಸರ್ಕಾರದಿಂದ ಸಹಾಯವೂ ದೊರೆಯುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಜನರು ತಮ್ಮ ಮನಸ್ಸು ಬದಲಿಸುವುದು ನಿಶ್ಚಿತ. ಇದಕ್ಕೆ ಸ್ಪಂದಿಸುವಷ್ಟು ಸರಳತೆಯನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಪಕ್ಷದ ಕಾರ್ಯಕರ್ತರು ಉಳಿಸಿಕೊಂಡಿದ್ದಾರೆಯೇ?? ಪಕ್ಷ ಹಾಗೂ ನಾಯಕರು ಪರೀಕ್ಷಿಸಿ ನೋಡಿಕೊಳ್ಳಬೇಕಿದೆ.

6. ತಗ್ಗಿದ ಮಾಧ್ಯಮಗಳ ಬಲ : ಮೋದಿ ಅಧಿಕಾರಕ್ಕೆ ಬರುವ ಮೊದಲು ಅವರನ್ನು ಹೀನಾಮಾನವಾಗಿ ಟೀಕಿಸಿದ, ಅತಿ ಎನ್ನಿಸುವಷ್ಟು ದ್ವೇಷಿಸಿದ ಮಾಧ್ಯಮಗಳು ಇಂದು ಇನ್ನಿಲ್ಲದಂತೆ ಮೌನವಾಗಿವೆ. ಅದಷ್ಟು ಮಾತ್ರವಲ್ಲದೇ ಅದಕ್ಕೆ ವಿರುದ್ಧವಾಗಿ ಮೋದಿಯ ಹಿಂದು ಹಿಂದೆಯೇ ಕ್ಯಾಮೆರಾ ಹಿಡಿದುಕೊಂಡು ಸುತ್ತುತ್ತಿವೆ. ಆರ್‌ಎಸ್‌ಎಸ್ ಅನ್ನು ವಾಚಾಮಗೋಚರವಾಗಿ ನಿಂದಿಸುತ್ತಿದ್ದ ಟಿವಿ ಆಂಕರ್‌ಗಳು ಇಂದು ಆರ್‌ಎಸ್‌ಎಸ್‌ನಲ್ಲೇ ಹುಟ್ಟಿ ಬೆಳೆದವರಂತೆ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಈ ದಿಢೀರ್ ಪರಿವರ್ತನೆಗೆ ಕಾರಣವೇನು? ಎಲ್ಲ ಮಾಧ್ಯಮ ಮಿತ್ರರಿಗೂ ಮೋದಿ ಅಧಿಕಾರಕ್ಕೆ ಬಂದೊಡನೆ ಬೋಧಿವೃಕ್ಷದ ಕೆಳಗೆ ಸಾಕ್ಷಾತ್ಕಾರವಾಗಿಬಿಟ್ಟಿತೇ? ಖಂಡಿತಾ ಇಲ್ಲ. ಮಾಧ್ಯಮಗಳು ಇಂದು ಬಿಜೆಪಿಯ ನಿಯಂತ್ರಣಕ್ಕೆ ಒಳಪಟ್ಟಿವೆ. ಹೇಗೆ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಮಾಧ್ಯಮಗಳು ಅದರ ಕಪಿಮುಷ್ಠಿಗೆ ಸಿಲುಕಿ ಮೂಕವಾಗಿದ್ದವೋ ಅದೇ ಪರಿಸ್ಥಿತಿ ಇಂದು ನಿರ್ಮಾಣಗೊಂಡಿದೆ. ಟಿಆರ್‌ಪಿಗೋ, ದುಡ್ಡಿಗೋ, ಅಸ್ತಿತ್ವ ಉಳಿಸಿಕೊಳ್ಳಲೋ ಅಥವಾ ಪ್ರವಾಹದ ಜೊತೆಗೆ ಈಜಿಕೊಂಡು ಹೋಗಲೋ ಮಾಧ್ಯಮಗಳು‌ ಇನ್ನಿಲ್ಲದಂತೆ ಬಿಜೆಪಿಯನ್ನು ಓಲೈಸುತ್ತಿವೆ. ಇದು ದೀರ್ಘಕಾಲಕ್ಕೆ ಮುಂದುವರೆದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ನಿರ್ವೀರ್ಯವಾಗಿ ಪತ್ರಿಕಾರಂಗ ಆಳುವ ಸರ್ಕಾರದ ಮುಖವಾಣಿಯಾಗುತ್ತವೆ. ಉದ್ಯಮಿಗಳು ರಾತ್ರೋ ರಾತ್ರಿ ಮಾಧ್ಯಮಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಈ ಅಪಾಯದಿಂದ ಪಾರಾಗಲು ಮಾಧ್ಯಮರಂಗ ಮಾಡಿಕೊಂಡಿರುವ ಉಪಾಯಗಳೇನು? ಈ ಪ್ರವಾಹದಲ್ಲಿ ಈಜಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಂವಿಧಾನದ ಆಶಯಗಳನ್ನು ಈಡೇರಿಸಲು ಅದಕ್ಕೆ ಸಾಧ್ಯವೇ? ಮಾಧ್ಯಮಗಳು ಉತ್ತರಿಸಬೇಕು. ಸರ್ಕಾರ ಪತ್ರಿಕಾರಂಗದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸುವ ಮನಸ್ಸು ಮಾಡಲಿದೆಯೇ? ಸರ್ಕಾರ ಹೇಳಬೇಕು.

ಇದನ್ನೂ ಓದಿ | ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್

7. ಕುಸಿದ ವಿರೋಧ ಪಕ್ಷಗಳ ನೈತಿಕತೆ ಮತ್ತು ಅಂತಃಸತ್ವ : ಬಿಜೆಪಿ ಮತ್ತು ಮೋದಿ ಮಾಡುತ್ತಿರುವ ಕೆಲವು ಎಕ್ಸ್ಟ್ರೀಮ್ ನಿರ್ಣಯಗಳೂ ಸಹಾ ನ್ಯಾಯಯುತವಾಗಿ ಕಾಣುತ್ತಿರುವುದರ ಹಿಂದೆ ಕಾಂಗ್ರೆಸ್ ಸೇರಿದಂತೆ ಉಳಿದ ವಿರೋಧ ಪಕ್ಷಗಳ ಮತ್ತು ನಾಯಕರ ನೈತಿಕ ಅಧಃಪತನದ ಕೊಡುಗೆ ಬಹಳಷ್ಟಿದೆ. ರಾಹುಲ್ ಗಾಂಧಿಯಂಥಾ ಬೌದ್ಧಿಕವಾಗಿ ತೀರಾ ಹಿಂದುಳಿದ ರಾಜಕಾರಣಿಯಬ್ಬನ ಕೈಲಿ ರಥದ ಸಾರಥ್ಯವನ್ನು ಕೊಟ್ಟು ಮೋದಿಯಂಥಾ ಬಲಿಷ್ಠ ನಾಯಕನನ್ನು ಎದುರಿಸುತ್ತಿರುವ ಕಾಂಗ್ರೆಸ್ಸಿನ ಕುಟುಂಬ ರಾಜಕಾರಣ ದೇಶದ ಪ್ರಜಾಪ್ರಭುತ್ವವನ್ನು ಆತಂಕದ ಪರಿಸ್ಥಿತಿಗೆ ನೂಕುತ್ತಿದೆ. 137 ವರ್ಷಗಳ ಇತಿಹಾಸವುಳ್ಳ ಒಂದು ಪಕ್ಷಕ್ಕೆ ರಾಹುಲ್ ಗಾಂಧಿಗಿಂತಲೂ ಸಮರ್ಥನಾದ ಒಬ್ಬ ನಾಯಕ ದೊರೆಯದಿರುವುದು ವಿರೋಧ ಪಕ್ಷವೊಂದರ ದೈನೇಸಿ ಸ್ಥಿತಿಯನ್ನು ಎತ್ತಿಹಿಡಿಯುತ್ತಿದೆ. ಸಹಜವಾಗಿ ರಾಹುಲ್ ಸುತ್ತ ಹೊಗಳುಭಟರ, ಜೀ ಹುಜೂರ್ ಮನಸ್ಥಿತಿಯ, ಹುಂಬರ ಪಡೆ ಸುತ್ತುವರೆದು, ಯೋಗ್ಯರು ಅರ್ಹರು ಪಕ್ಷ ಬಿಟ್ಟು ಬಿಜೆಪಿ ಮತ್ತಿತರ ಪಕ್ಷಗಳ ಕಡೆಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಮೇಲ್ನೋಟಕ್ಕೆ ಕಾಂಗ್ರೆಸ್‌ಗೆ ನಷ್ಟವೆಂಬಂತೆ ತೋರಿದರೂ, ಅದು ದೇಶದ ವಿಪಕ್ಷಗಳ ಜವಾಬ್ದಾರಿಗೆ ಬಿದ್ದ ಪೆಟ್ಟಾಗಿದೆ. ವಿಪಕ್ಷಗಳು ಪ್ರಜಾಪ್ರಭುತ್ವದ ಕಾವಲುನಾಯಿ. ಆದರೆ ಈ ಕಾವಲು ನಾಯಿಯ‌ ಕಣ್ಣು ಮಂಜಾಗಲು, ಕೈ ಕಾಲು ಸ್ವಾಧೀನ ಕಳೆದುಕೊಳ್ಳಲು, ಸ್ವತಃ ಕಾಂಗ್ರೆಸ್ ಕಾರಣಕರ್ತವಾಗಿದೆ. ಉಳಿದ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒಂದೋ ಬಿಜೆಪಿಯೊಡನೆ ಬೇಷರತ್ತು ಮೈತ್ರಿ ಮಾಡಿಕೊಳ್ಳುತ್ತಿವೆ. ಇಲ್ಲವೇ ಸುಖಾಸುಮ್ಮನೆ ಮೋದಿಯವರನ್ನು ತೆಗಳುತ್ತಾ ನಗೆಪಾಟಲಿಗೀಡಾಗುತ್ತಾ ಗೌರವ ಕಳೆದುಕೊಳ್ಳುತ್ತಿವೆ. ಒಟ್ಟಿನಲ್ಲಿ ಮೋದಿ ಮತ್ತು ಬಿಜೆಪಿ ಮದಿಸಿದ ಆನೆಯಂತೆ, ಅಂಕುಶವಿಲ್ಲದ ಮಾವುತನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ತನಗೆ ಬೇಕಾದ ಮಾರ್ಗವನ್ನು ನಿರ್ಧರಿಸಿಕೊಂಡು ಮುಂದೆ ಸಾಗುತ್ತಿದೆ. ಇದನ್ನು ದೇಶದ ಪ್ರಜ್ಞಾವಂತರು ಗಮನಿಸಬೇಕಿದೆ.

Rahul Gandhi

8. ಹಿಂದುತ್ವದ ರಾಜಕೀಯಕರಣ : ಧರ್ಮ ಯಾವತ್ತೂ ರಾಜಕೀಯ ಅಸ್ತ್ರವಾಗಬಾರದು‌. ಆದರೆ ಕಾಂಗ್ರೆಸ್ ಮಾಡಿದ ಅಲ್ಪಸಂಖ್ಯಾತರ ಅತಿಯಾದ ತುಷ್ಟೀಕರಣ ಭಾರತದಲ್ಲಿ ಧರ್ಮ ರಾಜಕಾರಣ ಮಹತ್ವ ಪಡೆದುಕೊಳ್ಳುವಂತೆ ಮಾಡಿತು. ಇಂದು ಭಾರತದ ಮತದಾರನ ಮನಸ್ಥಿತಿಯನ್ನು ನಿರ್ಧರಿಸುವ ಅಂಶಗಳಲ್ಲಿ ಧರ್ಮದ ಪಾತ್ರ ಬಹುದೊಡ್ಡದಾಗಿದೆ. ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಇದೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಲಿದೆ. ರಾಮಮಂದಿರ ಆಂದೋಲನವು ಸತ್ತಂತಿದ್ದ ಹಿಂದು ಅಂತಃಸತ್ವಕ್ಕೆ ಬಹುದೊಡ್ಡ ಟಾನಿಕ್ ನೀಡಿತು. ವಾಜಪೇಯಿ ಸರ್ಕಾರ ರಾಜಕೀಯವಾಗಿ ಹಿಂದುವಿಗೆ ದನಿ ತಂದುಕೊಟ್ಟಿತು. ಮೋದಿ ಸರ್ಕಾರ ಹಿಂದುತ್ವವೇ ಅಧಿಕಾರ ನಡೆಸುವಂತೆ ಮಾಡಿತು. ಆದರೆ ಹಿಂದುತ್ವ ಒಂದು ದಬ್ಬಾಳಿಕೆಯ ಅಸ್ತ್ರವಾಗಿಯೂ ಪ್ರಯೋಗವಾಗಬಹುದು ಎಂಬ ಲಕ್ಷಣಗಳನ್ನು ಯೋಗಿಯವರ ಆಕ್ರಮಣಕಾರಿ ಆಡಳಿತದ ಶೈಲಿಯಲ್ಲಿ ಗುರುತಿಸಬಹುದಾಗಿದೆ. ಆದರೆ ದುರದೃಷ್ಟವೆಂದರೆ ಅಂತಹಾ ಆಕ್ರಮಣಕಾರಿ ರಾಜಕಾರಣ ಹಿಂದುಗಳಿಗೆ ಬಹುವಾಗಿ ಪ್ರಿಯವಾಗುತ್ತಿದೆ. ಇದರ ದೂರಗಾಮಿ ಪರಿಣಾಮವೆಂದರೆ ಮಾನವೀಯತೆ ಮತ್ತು ವಿಶ್ವಪ್ರೇಮವುಳ್ಳ ಹಿಂದುವೊಬ್ಬ ನಾಯಕನಾಗದೇ ಕ್ರೂರ ಅಥವಾ ಧರ್ಮಾಂಧತೆಯುಳ್ಳ ಅಥವಾ ಧರ್ಮವನ್ನೇ ತನ್ನ ಅಧಿಕಾರದಾಸೆಗೆ ಬಳಸಿಕೊಳ್ಳುವ ಮನಸ್ಥಿತಿಯ ನಾಯಕನೇನಾದರೂ ಅಧಿಕಾರ ಹಿಡಿದರೆ ಭಾರತ ಒಂದು ಕೋಮುವಾದಿ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಶೀಘ್ರಾತಿಶೀಘ್ರ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಧರ್ಮವನ್ನು ರಾಜಕೀಯದಲ್ಲಿ ಬೆರೆಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಕೂಡಾ ತಾನು ಜಾತ್ಯಾತೀತ ಪಕ್ಷ ಎಂಬುದನ್ನು ಮರೆತು ಮುಸ್ಲಿಂ ಪಕ್ಷದಂತೆ ವರ್ತಿಸುತ್ತಿರುವುದನ್ನು ಸಾಕುಮಾಡಬೇಕು. ಇಲ್ಲದಿದ್ದರೆ ಸುಖ ಜೀವನಕ್ಕೆ ದಾರಿದೀಪವಾಗಬೇಕಿದ್ದ ಧರ್ಮವು ಮನುಷ್ಯರನ್ನು ಪರಸ್ಪರ ಶತ್ರುಗಳಂತೆ ಬೀದಿಯಲ್ಲಿ ನಿಂತು ಕಾದಾಡುವಂತೆ ಮಾಡುತ್ತದೆ. ಇದಕ್ಕೆ ಧಾರ್ಮಿಕ ಮುಖಂಡರು, ಮಠಾಧೀಶರು, ಸಾಧು ಸನ್ಯಾಸಿಗಳು ನಿಜವಾದ ಧರ್ಮವನ್ನು ರಾಜಕೀಯೇತರವಾಗಿ ಜನರಿಗೆ ಅರ್ಥ ಮಾಡಿಸಲು ಪ್ರಯತ್ನಿಸಬೇಕು. ಧರ್ಮ ಅಂದರೆ ಮೋದಿ ಮಾತ್ರ ಅಲ್ಲ, ಧರ್ಮ ಅಂದರೆ ಬಿಜೆಪಿ ಮಾತ್ರ ಅಲ್ಲ, ಧರ್ಮ ಎಂದರೆ ಆರ್ ಎಸ್ ಎಸ್ ಮಾತ್ರ ಅಲ್ಲ, ಅದು ನಮ್ಮೆಲ್ಲರಿಗೂ ಸೇರಿದ್ದು‌. ಅದರ ಜವಾಬ್ದಾರಿ ನಮ್ಮೆಲ್ಲರದ್ದು ಎಂಬ ವಾತಾವರಣವನ್ನು ಪುನರ್ಸ್ಥಾಪಿಸಬೇಕು. ಹಾಗಾದಾಗ ಧರ್ಮ ರಾಜಕೀಯ ಬಣ್ಣ ಪಡೆಯುವುದು ತಪ್ಪುತ್ತದೆ.

ಇದನ್ನೂ ಓದಿ | ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!

ಮೇಲೆ ತಿಳಿಸಿದ ಈ ಎಲ್ಲ ಅಂಶಗಳೂ ಇಂದಿಗೆ ಬೀಜರೂಪದಿಂದ ಮೊಳಕೆಯ ಹಂತದಕ್ಕೆ ಬಂದು ನಿಂತಿರಬಹುದು. ತತ್ಕಾಲಕ್ಕೆ ಅಂತಹಾ ಆಪತ್ತೇನೂ ಇಲ್ಲವೆಂದು ತೋರುತ್ತಿರಬಹುದು. ಆದರೆ ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ನೀರು ಗೊಬ್ಬರ ದೊರೆತು ಅದಕ್ಕೆ ಬೇಕಾದ ವಾತಾವರಣವೂ ದೊರೆತುಬಿಟ್ಟರೆ ದೇಶದ ರಾಜಕೀಯ ಪರಿಸ್ಥಿತಿ ತನ್ನ ದಿಕ್ಕು ಕಳೆದುಕೊಳ್ಳುವುದು ನಿಶ್ಚಿತ. ಕಾಲಚಕ್ರದಲ್ಲಿ ಇದು ಸಹಜ ಕೂಡಾ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ ಹೋಗಲೇಬೇಕು. ಆದರೆ ಆ ಕಾಲಚಕ್ರವು ತಲೆಕೆಳಕಾದಾಗ ಗೊಂದಲಕ್ಕೊಳಗಾಗುವ ಜನರನ್ನು ಎಚ್ಚರಿಸಲು ಮತ್ತು ಸರಿಯಾದ ದಾರಿ ತೋರುವ ಸಲುವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡೂ ನೆಲೆಯಲ್ಲಿ ಅಥವಾ ಇನ್ಯಾವುದೋ ರಾಜಕೀಯ ಪ್ರೇರಿತವಾದ ದೃಷ್ಟಿಕೋನದಲ್ಲಿ ಈ ಬೆಳವಣಿಗೆಗಳನ್ನು ನೋಡದೇ, ಸತ್ಯದ ದೃಷ್ಟಿಯಲ್ಲಿ ತ್ರಯಸ್ಥರಾಗಿ ನಿಂತು ನೋಡುವ ವರ್ಗವೊಂದು ಗಟ್ಟಿಕೊಳ್ಳಬೇಕಾಗಿದೆ. ಇಂತಹಾ ವರ್ಗವು ವಸ್ತುನಿಷ್ಠವಾಗಿ ಅವಲೋಕನ ಮಾಡಿ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ವಿಶ್ವಪ್ರಜ್ಞೆಯನ್ನು ವಿಶಾಲ ಧರ್ಮಪ್ರಜ್ಞೆಯೊಂದಿಗೆ ಸಮ್ಮಿಳಿಸಿ ಸಂಕುಚಿತವಲ್ಲದ ರಾಷ್ಟ್ರಿಯತೆಯ ದೀಪಕ್ಕೆ ತೈಲವೆರೆಯುವ ಗುರಿಯನ್ನು ಹೊಂದಿರಬೇಕಾಗುತ್ತದೆ. ಅಂತಹುದೊಂದು ಹೊಸ ವರ್ಗ ಈ ದೇಶದಲ್ಲಿ ಹುಟ್ಟಿ ಬೆಳೆದು ಬಿಜೆಪಿ‌ ಮತ್ತು ಕಾಂಗ್ರೆಸ್ ನ ಜೊತೆಗೆ ಇರುವ ಪಕ್ಷಗಳ‌ ಹಾಗೂ ಮುಂದೆ ಹುಟ್ಟಲಿರುವ ಪಕ್ಷಗಳ ದಾರಿಗೆ ಮಾರ್ಗದರ್ಶನ ಮಾಡುವಂತಾಗಲಿ ಮತ್ತು ದೇಶಕ್ಕೆ ದಾರಿ ದೀಪವಾಗಲೆಂದು ಆಶಿಸುತ್ತೇನೆ. ರಾಜಕೀಯವಾಗಲೀ ನೀರಾಗಲೀ ಸ್ಫಟಿಕ ಶುದ್ಧವಾಗಿರಬೇಕೆಂದರೆ ಕೆರೆಯ ಹಾಗೆ ನಿಂತಲ್ಲಿ ನಿಲ್ಲದೇ ಸದಾ ಹರಿಯುವ ನದಿಯಾಗಬೇಕಲ್ಲವೇ?

(ಲೇಖಕರು ಸ್ವತಂತ್ರ ಚಿಂತಕ, ಲೇಖಕ ಮತ್ತು ವಾಗ್ಮಿ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

ಧವಳ ಧಾರಿಣಿ ಅಂಕಣ: ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು.

VISTARANEWS.COM


on

king dasharatha dhavala dharini
Koo

ಕರ್ಮಫಲವನ್ನು ತಾನೇ ಅರಿತು ಅನುಭವಿಸಿದ ಸೂರ್ಯವಂಶದ ಮಹಾನ್ ಚಕ್ರವರ್ತಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕವೆನ್ನುವುದು ದಶರಥನಿಗೆ ಮಹಾನ್ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ಆತ ಏನೆಲ್ಲ ಕಸರತ್ತನ್ನು ಮಾಡಿದ್ದ ಎನ್ನುವುದನ್ನು ನೋಡಿದ್ದೇವೆ.

ಕೈಕೇಯಿ ಮಂಥರೆಯ ದುರ್ಬೋಧನೆಯಿಂದ ಎಷ್ಟರಮಟ್ಟಿಗೆ ಪ್ರಭಾವಿತಳಾಗಿದ್ದಳೆಂದರೆ ಅರಸನ ಯಾವ ಒದ್ದಾಟವೂ ಅವಳನ್ನು ಕರಗಿಸಲಿಲ್ಲ. ರಾಮನನ್ನು ಬಿಟ್ಟರೆ ತಾನು ಬದುಕಿರಲಾರೆ ಎನ್ನುವ ಮಾತುಗಳು ಕಾದ ಮರಳಲ್ಲಿ ಬಿದ್ದ ನೀರಿನಂತೆಯೇ ಇಂಗಿಹೋಯಿತು. ಕೈಕೇಯಿ ತಿರುಗಿ ರಾಜನಿಗೆ ಧರ್ಮೋಪದೇಶ ಮಾಡುತ್ತಾಳೆ. ಶೈಭ್ಯ, ಅಲರ್ಕ ಮೊದಲಾದ ರಾಜರ್ಷಿಗಳು ಪ್ರತಿಜ್ಞಾಬದ್ಧರಾಗಿ ತಮ್ಮ ತಮ್ಮ ಜೀವವನ್ನೇ ಒತ್ತೆಯಾಗಿರಿಸಿದ ಸಂಗತಿಯನ್ನು ಹೇಳುತ್ತಾ ಪರೋಕ್ಷವಾಗಿ ದೊರೆಯ ಸಾವಿನ ಕುರಿತು ತಾನು ಅಂಜುವವಳಲ್ಲ ಎನ್ನುತ್ತಾಳೆ. ಅವಳಿಗೆ ತನ್ನ ಮಗ ಭರತ ಪಟ್ಟಕ್ಕೇರಲೇ ಬೇಕಾಗಿದೆ. ಆಕೆ ಕೌಸಲ್ಯೆಯನ್ನು ಎಷ್ಟರಮಟ್ಟಿಗೆ ದ್ವೇಷಿಸುತ್ತಿದಳೆಂದರೆ “ರಾಮ ಪಟ್ಟಾಭಿಷೇಕವಾದೊಡನೆಯೇ ರಾಜಮಾತೆಯಾಗಿ ಸಕಲಪ್ರಜೆಗಳಿಂದ ಗೌರವವನ್ನು ಸ್ವೀಕರಿಸುವ ಕೌಸಲ್ಯೆಯನ್ನು ತಾನು ಒಂದು ದಿನವೂ ನೋಡಿಸಹಿಸಲಾರೆ ಎನ್ನುತ್ತಾಳೆ. ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಕೌಸಲ್ಯೆಯೊಂದಿಗೆ ನಿತ್ಯವೂ ರಮಿಸಲು ಇಚ್ಛಿಸುವ ನಿನ್ನ ಹುನ್ನಾರ ತನಗೆ ಗೊತ್ತು ಎಂದು ಜರಿಯುತ್ತಾಳೆ.

ದಶರಥನಿಗೆ ಮಾತು ಬಾರದಾಗಿದೆ. ಆತ ರಾಮನನ್ನು ಕಾಡಿಗೆ ಕಳುಹಿಸುವುದು ಬೇಡವೆಂದು ಬಗೆಬಗೆಯಲ್ಲಿ ಗೋಳಾಡುತ್ತಾನೆ. ಸ್ತ್ರೀಸುಖಕ್ಕೊಸ್ಕರವಾಗಿ ತನ್ನ ಪ್ರಿಯಸುತನನ್ನೇ ಅರಣ್ಯಕ್ಕೆ ಕಳುಹಿಸಿದ ತನ್ನನ್ನು ಅತಿಕಾಮಿಯೆಂದು ಪುರಜನರು ಆಡಿಕೊಳ್ಳುವರು, ಆ ಅಪವಾದ ಬರುತ್ತದೆಯೆಂದು ಗೋಗೆರೆಯುತ್ತಾನೆ. “ಹೆಂಗಸರೆಲ್ಲ ಮೋಸಗಾರರು, ಸ್ವಾರ್ಥಪರಾಯಣರು ಎಂದು ಉದ್ವೇಗದಿಂದ ಕೂಗಾಡುತ್ತಾನೆ. ಬಹುಶಃ ಆಗ ಆತನಿಗೆ ತನ್ನ ಹಿರಿಯ ಹೆಂಡತಿಯರಾದ ಕೌಸಲ್ಯೆ ಮತ್ತು ಸುಮಿತ್ರೆಯರ ನೆನಪಾಗಿರಬೇಕು. ಇಲ್ಲ, ಪ್ರಪಂಚದಲ್ಲಿ ಎಲ್ಲಾ ಹೆಂಗಸರೂ ಹಾಗಿಲ್ಲ’ ಕೇವಲ ಭರತನ ತಾಯಿಗೆ ಮಾತ್ರ ತನ್ನ ಮಾತು ಅನ್ವಯಿಸುತ್ತದೆ ಎಂದು ಕೂಗಾಡುತ್ತಾನೆ. ರಾಮನನ್ನು ಅರಣ್ಯಕ್ಕೆ ಕಳುಹಿಸುವ ಒಂದು ಮಾತನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು ಎನ್ನುವ ಮಾತುಗಳು ಕೈಕೇಯಿಯ ಮೇಲೆ ಪರಿಣಾಮ ಬೀರದಿದ್ದಾಗ ಕೊನೆಯ ಅಸ್ತ್ರವೆನ್ನುವಂತೆ ದಶರಥ ಲೋಕಮರ್ಯಾದೆಯನ್ನು ಮೀರಿ ಅನಾಥನಂತೆ ಗೋಳಾಡುತ್ತಾ ಆಕೆಯ ಕಾಲಿಗೆ ನಮಸ್ಕರಿಸಲು ಹೋಗುತ್ತಾನೆ. ಆಗ ಕೈಕೇಯಿ ತಿರಸ್ಕಾರದಿಂದ ತನ್ನ ಕಾಲನ್ನು ದೂರಕ್ಕೆ ಚಾಚಿದುದರಿಂದ ಅವೂ ಆತನಿಗೆ ಸಿಕ್ಕದೇ ರೋಗಿಯೊಬ್ಬ ತತ್ತರಿಸಿ ಬೀಳುವಂತೆ ನೆಲದಮೇಲೆ ಬೀಳುತ್ತಾನೆ. ಅವನ ಈ ಸ್ಥಿತಿಯನ್ನು ನೋಡಿದ ರಾಮಾಯಣದ ಕವಿ ವಾಲ್ಮೀಕಿಗೂ ದಶರಥನ ಮೇಲೆ ಹೇಸಿಗೆಯುಂತಾಗುತ್ತದೆ. ಚಕ್ರವರ್ತಿ ತನ್ನ ಘನತೆಯನ್ನು ಮರೆತು ಹೀಗೆ ಮಾಡಬಾರದಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ.

ಅತದರ್ಹಂ ಮಹಾರಾಜಂ ಶಯಾನಮತಥೋಚಿತಮ್.
ಯಯಾತಿಮಿವ ಪುಣ್ಯಾನ್ತೇ ದೇವಲೋಕಾತ್ಪರಿಚ್ಯುತಮ್৷৷ಅಯೋ. .13.1৷৷

ರಾಜಾಧಿರಾಜನಾದಂತಹ ದಶರಥನು ಕೈಕೇಯಿಯ ಪಾದಗಳ ಮೇಲೆ ಬೀಳಲು ಹೋಗಬಾರದಿತ್ತು(ಅತದರ್ಹಂ) ಎಂದು ಬಹಿರಂಗವಾಗಿಯೇ ಸಿಡಿಮಿಡಿಗೊಳ್ಳುತ್ತಾನೆ. ರಾಮಾಯಣದ ಈ ಸನ್ನಿವೇಶ ವಾಲ್ಮೀಕಿಯ ಕಣ್ಣಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣುತ್ತಿದೆ. ನಿರುಧ್ವಿಘ್ನವಾಗಿ ಕಥೆಯನ್ನು ಹೇಳುತ್ತಾಹೋಗಬೇಕಾದ ಕವಿ ಸೀತೆಗೆ ತೊಂದರೆಯಾದ ಉತ್ಕಟಕ್ಷಣಗಳಲ್ಲಿ ರಸಭಾವವನ್ನು ಹತ್ತಿಕ್ಕಲಾರದೇ ತಾನೇ ಕಥೆಯೊಳಗೆ ಪ್ರವೇಶಿಸುವುದುಂಟು. ಆದರೆ ಇಲ್ಲಿ ಮಾತ್ರ ಆತನಿಗೆ ದಶರಥನ ಒಟ್ಟಾರೆಯ ವ್ಯವಹಾರವೇ ರೇಜಿಗೆ ಹುಟ್ಟಿಸಿದೆ. ಕೈಕೇಯಿಯನ್ನು ಇಕ್ಷಾಕುವಂಶಕ್ಕೇ ಅನರ್ಥಕಾರಿಣಿಯೆಂದು ತಿರಸ್ಕಾರದಿಂದ ಕವಿಹೇಳುತ್ತಾನೆ. ಸೂರ್ಯವಂಶದ ಪುಣ್ಯದ ಕಾರಣದಿಂದ ದಶರಥನಿಗೆ ಕೈಕೇಯಿಯ ಪಾದಗಳು ಸಿಗಲಿಲ್ಲ. ಎನ್ನುತ್ತಾನೆ. ಈ ಭಾಗವನ್ನು ದಶರಥವಿಲಾಪವೆನ್ನುವ ಹೆಸರಿನಿಂದ ಕರೆದರೂ ಇಲ್ಲಿ ಕಾಳಿದಾಸನ ಪ್ರಸಿದ್ಧಕಾವ್ಯ ರಘುವಂಶದ ಅಜವಿಲಾಪ ನೆನಪಿಗೆ ಬರುತ್ತದೆ. ರಘುವಂಶದಲ್ಲಿ ಅಜ ಮತ್ತು ಇಂದುಮತಿ ದಂಪತಿಗಳ ಪ್ರೇಮದ ವಿಷಯ ಪ್ರಸಿದ್ಧ. ದಿವ್ಯಪುಷ್ಪಮಾಲೆಯೊಂದು ಅಜನ ಪತ್ನಿ ಇಂದುಮತಿಯಮೇಲೆ ಬಿದ್ದಾಗ ಅವಳು ಮೃತಳಾಗುತ್ತಾಳೆ. ಆಗ ಅಜ ತನ್ನ ಪತ್ನಿಗಾಗಿ ಮಾಡುವ ದುಃಖವು ಅಜವಿಲಾಪವೆಂದೇ ಪ್ರಸಿದ್ಧಿಯಾಗಿದೆ. ಪತ್ನಿಯ ವಿರಹವನ್ನು ತಾಳಲಾರದೇ ಕುಗ್ಗಿ ಕುಗ್ಗಿ ಸಾಯುವ ಅಜನೂ ಸ್ತ್ರೀ ಕಾರಣದಿಂದ ಸಾಯುತ್ತಾನಾದರೂ ಅದು ಪ್ರೇಮಕಾವ್ಯದ ಉತ್ತುಂಗಗಳಲ್ಲೊಂದೆಂದು ಪರಿಗಳಿಸಲ್ಪಟ್ಟಿದೆ. ಅದರ ವಿರುದ್ಧವಾಗಿ ಅಜನ ಮಗನಾದ ದಶರಥನ ಒದ್ದಾಟವಿದೆ. ಅವನ ವಿಲಾಪಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಯಾರೂ ಬರುವುದಿಲ್ಲ. ಅವನ ವಿಲಾಪಕ್ಕೆ ರಾತ್ರಿಯೇ ಹೆದರಿ ಓಡಿಹೋಯಿತು.

ಬೆಳಗಾದರೂ ದೊರೆ ಗೋಳಾಡುವುದನ್ನು ಬಿಟ್ಟು ರಾಮನನ್ನು ಪಟ್ಟಗಟ್ಟುವ ಯಾವ ಸೂಚನೆಯನ್ನೂ ನೀಡುವುದಿಲ್ಲ. ಎಲ್ಲಿಯಾದರೂ ಬೇರೆಯವರಿಗೆ ತಿಳಿದರೆ ತನ್ನ ಕೆಲಸ ಕೆಟ್ಟಿತೆನ್ನುವ ಚಿಂತೆ ಕೈಕೇಯಿಯಲ್ಲುಂಟಾಯಿತು. ರಾಜನನ್ನು ಧರ್ಮಪರಿಪಾಲನೆಯೆನ್ನುವ ಹಗ್ಗದಲ್ಲಿ ಕಟ್ಟಿಹಾಕಿದ್ದಳು.

ಸತ್ಯಮೇಕಪದಂ ಬ್ರಹ್ಮ ಸತೇ ಧರ್ಮಃ ಪ್ರತಿಷ್ಠಿತಃ
ಸತ್ಯಮೇವಾಕ್ಷಯಾ ವೇದಾಃ ಸತ್ಯೇನೈವಾಪ್ಯತೇ ಪರಮ್ II ಅಯೋ.14-7II

ಸತ್ಯವೆನ್ನುವುದೇ ಬ್ರಹ್ಮವಾಚಕವಾದ ಪ್ರಣವಸ್ವರೂಪವು. ಸತ್ಯದಲ್ಲಿಯೇ ಸಮಸ್ತ ಧರ್ಮಗಳೂ ಅಡಗಿರುವವು. ಕ್ಷಯವೃದ್ಧಿಗಳಿಲ್ಲದ ವೇದಗಳು ಸತ್ಯದ ಸ್ವರೂಪಗಳೇ ಆಗಿವೆ. ಪರಮೋತ್ಕ್ರಷ್ಟವಾದ ಲೋಕಗಳೂ ಸತ್ಯದ ಅವಲಂಬನೆಯಿಂದಲೇ ಲಭಿಸುತ್ತವೆ.

ಸಮಗ್ರವಾದ ಉಪನಿಷತ್ತಿನ ಸಾರವನ್ನು ಸಾರುವ ಈ ಮಾತು ಕೈಕೇಯಿಯಿಂದ ಬೇರೆ ಯಾವ ಸಂದರ್ಭದಲ್ಲಿಯಾದರೂ ಬಂದಿದ್ದರೆ ಆಕೆಯನ್ನು ಗಾರ್ಗಿ, ಲೋಪಾಮುದ್ರಾ ಮೊದಲಾದವರಸಾಲಿಗೆ ಸೇರಿಸಿಬಿಡುತ್ತಿದ್ದರೇನೋ. ಆಕೆಯ ತಂದೆ ಅಶ್ವಪತಿ ವೈಶ್ವಾನರ ವಿದ್ಯೆಯನ್ನು ಉದ್ಧಾಲಕನಿಗೆ ಕಲಿಸಿದ ಕುರಿತು “ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ”. ರಾವಣನೂ ಸಹ ಎಲ್ಲಾ ವೇದಗಳನ್ನು ಓದಿಕೊಂಡಿದ್ದ. ಮೂಲತಃ ಸ್ವಭಾವದಲ್ಲಿ ಸಾತ್ವಿಕ ಗುಣಗಳಿಲ್ಲದಿದ್ದರೆ ಅವೆಲ್ಲವೂ ವ್ಯರ್ಥವಾಗುತ್ತದೆ. ಕೈಕೇಯಿಗಾಗಿರುವುದೂ ಅದೇ. ತನಗೆ ತಿಳಿದಿರುವ ಧರ್ಮಸೂತ್ರಗಳನ್ನು ತನ್ನ ಸ್ವಾಥಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ. ಗಂಗಾನದಿಯೇ ಆದರೂ, ಬಚ್ಚಲುಮನೆಯಿಂದ ಹೊರಬಂದರೆ ಅದನ್ನು ಯಾರೂ ತೀರ್ಥವೆಂದು ಪರಿಗಣಿಸುವುದಿಲ್ಲ. ರಾಜನನ್ನು ಕರೆದೊಯ್ಯಲು ಸುಮಂತ್ರ ಕೈಕೇಯಿಯ ಅರಮನೆಗೆ ಬಂದಾಗ ಎಲ್ಲದರಲ್ಲಿಯೂ ಸೋತ ರಾಜನೇ “ರಾಮನನ್ನು ನೋಡಬೇಕೆಂದಿದ್ದೇನೆ, ಅವನನ್ನಿಲ್ಲಿಗೆ ಕರೆದುಕೊಂಡು ಬಾ” ಎನ್ನುತ್ತಾನೆ. ಆಗಲೆಂದು ಹೊರಟ ಸುಮಂತ್ರನಿಗೆ ಮನಸ್ಸಿನಲ್ಲಿ ಏನೋ ಒಂಡು ಸಂಶಯಕಾಡಿತು. ಸಭೆಗೆಬಂದವ ಅದಾಗಲೇ ಬಂದುಸೇರಿದ್ದ ಅರಸರ ವಿಷಯಗಳನ್ನು ತಿಳಿಸುವ ನೆವಮಾಡಿ ಮತ್ತೊಮ್ಮೆ ಕೈಕೇಯಿಯ ಅಂತಃಪುರಕ್ಕೆ ಬಂದ. ಕೈಕೇಯಿಗೆ ರಾಮನನ್ನು ಗುಪ್ತವಾಗಿ ಅರಣ್ಯಕ್ಕೆ ಕಳುಹಿಸಿ ಭರತನನ್ನು ಪಟ್ಟಾಭಿಷೇಕಕ್ಕೆ ಏರಿಸಬೇಕಿತ್ತು. ಚಾಣಾಕ್ಷಳಾಗಿದ್ದ ಆಕೆಗೆ ಈ ವಿಷಯ ಬಹಿರಂಗಕ್ಕೆ ಬಂದರೆ ಸಾಮಂತರೆಲ್ಲರೂ ತಿರುಗಿಬೀಳುವರು ಎನ್ನುವುದರ ಅರಿವಿತ್ತು. ಅದಕ್ಕಾಗಿಯೇ ಅವಳು ರಾಮ ತನ್ನ ಮನೆಗೇ ಬರಲಿ ಎಂದು ರಾಜನನ್ನು ಒತ್ತಾಯಿಸಿದಳು. ಎರಡನೆಯ ಸಾರಿ ಸುಮಂತ ಬಂದಾಗ ಸ್ವಲ್ಪ ಸಿಟ್ಟಿನಿಂದಲೇ ರಾಮನನ್ನು ಇಲ್ಲಿಗೆ ಕರೆತರಬೇಕು. ಇದು ತನ್ನ ಆಜ್ಞೆ ಎಂದು ಕಠೋರವಾಗಿಯೇ ಹೇಳುತ್ತಾನೆ. “ದಶರಥನ ಮಾತು ಸೋತ ಹೊತ್ತು ಅದು”. ದೊರೆ ಅಸಹಾಯಕನಾಗಿದ್ದ. ತನ್ನೆದುರೇ ತನ್ನ ಪರವಾಗಿ ಕೈಕೇಯಿ ರಾಮನಲ್ಲಿ ತನ್ನ ವರದ ಕುರಿತು ಒಡಂಬರಿಸುತ್ತಿರುವಾಗ ಮೌನವಾಗಿದ್ದ. ನಾಲಿಗೆ ಮಾತನ್ನು ಆಡುವುದು ಬುದ್ಧಿಯಬಲದಿಂದ. ದಶರಥನ ಬುದ್ಧಿಯನ್ನು ಸಂಪೂರ್ಣವಾಗಿ ಕೈಕೇಯಿ ಆಕ್ರಮಿಸಿಕೊಂಡಿದ್ದಳು. ರಾಮನ ಪ್ರಿಯಮಾತೆ ಕೈಕೇಯಿ ರಾಜನ ಪರವಾಗಿ ಆಡುವ ಮಾತಾಗಿದ್ದಳು. ಸಮಯ ಸರಿದಷ್ಟೂ ತನಗೇ ಅಪಾಯವೆಂದು ಅವಳಿಗೆ ಅರಿವಾಗತೊಡಗಿತು. ತಂದೆಯ ನೋಡಲು ಬಂದ ರಾಮ ಆತನ ಚಿಂತೆಗೆ ಕಾರಣವನ್ನು ಕೇಳೆದರೆ ಆತನಲ್ಲಿ ದೊರೆಯ ಮನಸ್ಸಿನಲ್ಲಿರುವುದು ಭರತನು ರಾಜನಾಗುವ ಮತ್ತು ರಾಮನ ಅರಣ್ಯಗಮನದ ವರಗಳನ್ನು ಹೇಳುತ್ತಾಳೆ. ಅಷ್ಟೇ ಅಲ್ಲ,’ “ಎಲ್ಲಿಯವರೆಗೆ ನೀನು ಈ ಅಯೋಧ್ಯೆಯನ್ನು ಬಿಟ್ಟು ಅರಣ್ಯಕ್ಕೆ ಹೋಗುವುದಿಲ್ಲವೋ ಅಲ್ಲಿಯವರೆಗೆ ರಾಜನು ಸ್ನಾನವನ್ನೂ ಮಾಡುವುದಿಲ್ಲ, ಊಟವನ್ನೂ ಮಾಡುವುದಿಲ್ಲ” ಎನ್ನುವ ಮಾತನ್ನು ಹೇಳಿದಾಗ ರಾಮ ಇನ್ನು ತಡಮಾಡುವುದು ಸರಿಯಲ್ಲವೆಂದು ಅರಣ್ಯಕ್ಕೆ ಹೊರಟಕಥೆ ಎಲ್ಲರಿಗೂ ಚಿರಪರಿಚಿತ.

dhavala dharini king dasharatha

ದಶರಥನಿಗೆ ರಾಮನ ಅಗಲುವಿಕೆಯ ದುಃಖಕ್ಕಿಂತ ಆತ ಸುಮಂತ್ರನ ಹತ್ತಿರ ತನ್ನ ತಂದೆ ಮತ್ತು ತಾಯಿಗೆ ಹೇಳುವ ಸಂದೇಶ ಇನ್ನಷ್ಟು ಶೋಕವನ್ನು ಕೊಡುತ್ತದೆ. ರಾಮ ತನ್ನ ತಾಯಿಗೆ ತಾಳ್ಮೆಯಿಂದ ಇರಲು ಹೇಳಿಕಳುಹಿಸುತ್ತಾನೆ. ಹದಿನಾಲ್ಕುವರ್ಷಗಳ ತನಕ ಹೇಗೋ ಭರತನ ಜೊತೆ ಹೊಂದಿಕೊಂಡು ಹೋಗು ಎಂದಿದ್ದ. ಭರತನಿಗೂ ಕೈಕೇಯಿಯಂತೇ ತನ್ನ ತಾಯಯಿಂದರನ್ನು ನೋಡಿಕೊಳ್ಳುವಂತೆ ಕಾಠಿಣ್ಯದಿಂದ ತುಂಬಿದ ಎಚ್ಚರಿಕೆಯ ಸಂದೇಶನ್ನು ಕಳಿಹಿಸುತ್ತಾನೆ. ಕೌಸಲ್ಯಯ ಕುರಿತು ಹೇಳುವಾಗ ರಾಮನ ಕಣ್ಣಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಲಕ್ಷ್ಮಣ ಕ್ರುದ್ಧನಾಗಿರುವ ವಿಷಯವನ್ನು ಹೇಳುವಾಗ ಅರಸನಿಗೆ ಕಾಮಮೋಹಿತನಾಗಿದ್ದ ತಾನೇ ಅವಸರದಿಂದ ಕೈಕೇಯಿಯನ್ನು ಓಲೈಸಲು ಹೋದೆ ಅನಿಸುತ್ತದೆ. ರಾಜ ಯಾವ ನಿರ್ಣಯಗಳನ್ನು ಕೈಗೊಳ್ಳುವಾಲೂ ಮೊದಲು ಅಮಾತ್ಯರೊಡನೆ ಸಮಾಲೋಚಿಸಿ ಅವರ ಸಲಹೆಪಡೆದು, ಅದು ಧರ್ಮಸಮ್ಮತವಾಗಿದ್ದರೆ ತನಗೆ ಯುಕ್ತವಾದ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲಿ ಅದೇನನ್ನೂ ಮಾಡದೇ ಇರುವ ಅಪರಾಧೀ ಭಾವ ಕಾಡುತ್ತದೆ. ವನವಾಸಕ್ಕೆ ಹೊರಟ ರಾಮ, ಸೀತಾ ಲಕ್ಷ್ಮಣರು ನಗುತ್ತಲೇ ಹೊರಟರು, ಗುಹನಲ್ಲಿ ಆಲದ ಹಾಲನ್ನು ತರಿಸಿ ತಪಸ್ವಿಗಳಂತೆ ಜಟಾಧಾರಿಯಾದ ವಿಷಯವನ್ನು ಕೇಳಿದ ಕೌಸಲ್ಯೆಯ ಮಾತ್ರಭಾವಕ್ಕೆ ಬಲವಾದ ನೋವನ್ನು ಕೊಡುತ್ತದೆ. ಅನೇಕವರ್ಷಗಳಕಾಲ ಧಶರಥನಿಂದ ಅಲಕ್ಷಕ್ಕೆ ಒಳಗಾದರೂ ಆಕೆ ಅದನ್ನೆಲ್ಲ ಸಹಿಸಿಕೊಂಡು ಮೌನಿಯಾಗಿದ್ದವಳು ಬಲುತೀಕ್ಷ್ಣವಾದ ಮಾತುಗಳಿಂದ ಗಂಡನನ್ನು ನಿಂದಿಸುತ್ತಾಳೆ. ಕೊನೆಯದಾಗಿ “ಮಹರಾಜಾ! ನಿನ್ನ ಈ ದುಶ್ಚರ್ಯೆಯಿಂದಾಗಿ ನಾನು ಮತ್ತು ನನ್ನ ಮಗನು ಮಾತ್ರ ವಿನಾಶ ಹೊಂದಲಿಲ್ಲ. ರಾಮನನ್ನು ಕಾಡಿಗಟ್ಟಿ ರಾಷ್ಟ್ರಸಹಿತವಾದ ರಾಜ್ಯವನ್ನು ಹಾಳುಮಾಡಿದೆ. (ಹತಂ ತ್ವಯಾ ರಾಜ್ಯಮಿದಂ ಸರಾಷ್ಟ್ರಂ ಹತಸ್ತಥಾತ್ಮಾ ಸಹ ಮಂನ್ತ್ರಿಭಿಶ್ಚ) ಮಂತ್ರಿಗಳೊಡನೇ ನೀನೂ ಹಾಳಾದೆ” ಎನ್ನುವ ಕಠೋರಮಾತುಗಳನ್ನಾಡುತ್ತಾಳೆ.

ಅದುತನಕ ಅದುಮಿಟ್ಟುಕೊಂಡ ಅವಮಾನ, ತಿರಸ್ಕಾರಗಳೆಲ್ಲವೂ ಸ್ಪೋಟಗೊಂಡಹೊತ್ತು ಅದು. ಆಕೆಯ ಮಾತುಗಳು ಎಷ್ಟು ತೀಕ್ಷ್ಣವಾಗಿತ್ತೆಂದರೆ ದಶರಥ ಅದನ್ನು ಕೇಳಿದವನೇ ಮೂರ್ಛಿತನಾದ. ಆತನನ್ನು ಉಪಚರಿಸಿದ ಕೌಸಲ್ಯೆ ತಾನು ಹಾಗೇ ಮಾತಾಡಬಾರದಾಗಿತ್ತೆಂದು ದುಃಖಪಡುತ್ತಾಳೆ. ದಶರಥನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾಳೆ. ಕೌಸಲ್ಯಾ ಮತ್ತು ಸುಮಿತ್ರಾ ಇಬ್ಬರೂ ಸೇರಿ ಗಂಡನ ಶುಶ್ರೂಷೇ ಮಾಡುತ್ತಾ ತಾವೇ ದುಃಖಿಸುತ್ತಲೂ ಇರುತ್ತಾರೆ. ದಶರಥನಿಗೆ ತಾನು ಇಷ್ಟೆಲ್ಲಾ ಒಳ್ಳೆಯ ಕಾರ್ಯವನ್ನು ಮಾಡಿದರೂ ತನಗೆ ಏಕೆ ಹೀಗೆ ಆಯಿತು ಎಂದು ಚಿಂತಿಸುತ್ತಾ ಯಾವುದೋ ಒಂದು ವಿಷಯವನ್ನು ಹೇಳಲೋ ಬೇಡವೋ ಎನ್ನುವಂತೆ ಇದ್ದ. ಆರನೆಯದಿನದ ಅರ್ಧರಾತ್ರಿಯಲ್ಲಿ ಇದ್ದಕ್ಕಿದ್ದಂತೆ ತನ್ನ ಪುತ್ರವಿಯೋಗಕ್ಕೆ ಕಾರಣವಾದ ತನ್ನ ಕರ್ಮಫಲದ ಕುರಿತು ಹೇಳಲು ನಿಶ್ಚಯಿಸಿದ. ಅದು ಎಲ್ಲರಿಗೂ ತಿಳಿದ ಕಥೆಯಾದ ಶ್ರವಣಕುಮಾರನ ಕಥೆ, ರಾಮಾಯಣದಲ್ಲಿ ಶ್ರವಣಕುಮಾರ ಎನ್ನುವ ಹೆಸರಿಲ್ಲ. ಕರಣ ಎಂದು ಆತನ ಹೆಸರು. ಆತನ ತಂದೆ ಓರ್ವ ಋಷಿಯಾಗಿದ್ದ. ಈ ಕಥೆ ಒಂದೇ ರೀತಿಯದಾದರೂ ಕಾಲಾಂತರದಲ್ಲಿ ಬೇರೆ ಬೇರೆ ರಾಮಾಯಣಗಳಲ್ಲಿ ಶ್ರವಣಕುಮಾರ ಎನ್ನುವ ಹೆಸರು ಬಂತು.

ಈ ಘಟನೆ ನಡೆಯುವಾಗ ದಶರಥನಿಗೆ ಪ್ರಾಯದ ಕಾಲ. ಆತ ಶಬ್ದವೇಧಿ ವಿದ್ಯೆಯಲ್ಲಿ ಮಹಾಚತುರ ಎನ್ನುವ ಕೀರ್ತಿ ಹಬ್ಬಿತ್ತು. ಅದನ್ನು ಪ್ರಯೋಗಿಸುವ ಹವ್ಯಾಸ ದೊರೆಗೆ. ಹಾಗಾಗಿ ಕಾಡಿಗೆ ಹೋಗಿ ಬೇಟೆಯಾಡುವ ವ್ಯಸನವನ್ನು ಹಚ್ಚಿಕೊಂಡಿದ್ದ. ಯುವರಾಜನಾಗಿದ್ದ ಆತನಿಗೆ ಆಗಿನ್ನೂ ಮದುವೆಯಾಗಿರಲಿಲ್ಲ (ದೇವ್ಯನೂಢಾ ತ್ವಮಭವೋ ಯುವರಾಜೋ ಭವಾಮ್ಯಹಮ್). ಮಳೆಗಾಲದ ಒಂದು ದಿನ ಬೇಟೆಗೆ ಹೋದಾಗ ಅನೆ ನೀರು ಕುಡಿಯುತ್ತಿರುವ ಸದ್ದು ಕೇಳಿಬಂತು. ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು. ಆತನೇ ಕುರುಡರಾದ ತನ್ನ ತಂದೆಯ ವಿಷಯವನ್ನು ಹೇಳಿ ಅವರಿಗೆ ನೀರನ್ನು ತೆಗೆದುಕೊಂಡು ಹೋಗು ಎಂದು ಕೇಳಿದ. ದಶರಥ ಯೌವನ ಮದದಿಂದ ಅಪರಾಧವನ್ನು ಮಾಡಿದರೂ ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಕುರುಡ ದಂಪತಿಗಳ ಬಳಿಗೆ ಬಂದು ಪ್ರಾಮಾಣಿಕವಾಗಿ ನಡೆದ ಸಂಗತಿಯನ್ನು ಹೇಳಿದ. ಬಾಲಕನ ಶವ ಸಂಸ್ಕಾರವನ್ನು ಅವರ ಹತ್ತಿರವೇ ಮಾಡಿಸಿದ. ಉದ್ಧೇಶಪೂರ್ವಕವಾಗಿ ತನ್ನ ಮಗನನ್ನು ಕೊಲ್ಲದ ಕಾರಣ ದೊರೆಗೆ ಬ್ರಹ್ಮಹತ್ಯಾ ಶಾಪವು ತಟ್ಟದು ಎಂದು ಹೇಳಿದರು. ಸಾಯುವ ಕಾಲದಲ್ಲಿ ತಮಗೆ ಆದ ರೀತಿಯಲ್ಲಿಯೇ ನಿನಗೂ ಪುತ್ರವಿಯೋಗವುಂಟಾಗಲಿ ಎಂದು ಶಾಪವನ್ನಿತ್ತು ಮಗನ ಚಿತೆಯನ್ನು ಏರಿ ದಿವ್ಯ ಶರೀರವನ್ನು ಧರಿಸಿ ಸ್ವರ್ಗಕ್ಕೆ ಹೋದರು.

king dasharatha kaikeyi dhavala dharini column

ರಾಜ ಕಾಲಾಂತರದಲ್ಲಿ ಅದನ್ನೆಲ್ಲ ಮರೆತಿದ್ದ. ಈಗ ರಾಮನ ಅಗಲುವಿಕೆಯೆನ್ನುವದು ಆತನಲ್ಲಿ ಅಪರಾಧೀ ಭಾವವನ್ನು ಮೂಡಿಸಿದೆ. ತನ್ನ ಕೊನೆಯ ದಿನಗಳು ಹತ್ತಿರ ಬಂತು ಎಂದು ದೊರೆಗೆ ಅನಿಸಲು ಸುರುವಾಯಿತು. ಸತ್ಯವಂತನಾದ, ಧರ್ಮಮಾರ್ಗದಲ್ಲಿ ನಡೆದ ತನಗೆ ಈ ಗತಿ ಏಕೆ ಬಂತು ಎಂದು ಚಿಂತಾಮಗ್ನನಾಗಿರುವಾಗ ಅವನಿಗೆ ತಾನೆಸಗಿದ ಈ ದುಷೃತ್ಯ ನೆನಪಿಗೆ ಬಂತು. ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಮುನಿಯ ಶಾಪ ಫಲಿಸುವ ಕಾಲ ಬಂತು ಎಂದು ಕೌಸಲ್ಯೆಗೆ ಹೇಳಿ ಇದಕ್ಕೆ ಕಾರಣ ತನ್ನ ಕರ್ಮಫಲ ಎನ್ನುತ್ತಾನೆ. ಮಾಡಿದ್ದಕ್ಕೆ ತಕ್ಕ ಕರ್ಮಫಲವನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆ ಪುನರ್ಜನ್ಮದಷ್ಟೇ ಪ್ರಾಚೀನವಾದುದು. ತಾನು ಬದುಕಬೇಕೆಮ್ದರೆ ರಾಮ ಬಂದು ತನ್ನನ್ನು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ತಾನು ಬದುಕುವೆ ರಾಘವನ ವಿಷಯದಲ್ಲಿ ಘನತೆಯಿಂದ ತಾನು ನಡೆದುಕೊಳ್ಳಲಿಲ್ಲ ವೆಂದು ನಿರಂತರವಾಗಿ ಶೋಕಿಸುತ್ತಾನೆ. ಇಷ್ಟಾದರೂ ಪಾಯಸದ ಮಹಿಮೆಯಿಂದ ಜನಿಸಿದ ಮಕ್ಕಳು ಎನ್ನುವ ವಿಷಯವೇ ಮರೆತುಹೋಗಿದೆ. ಋಷಿಮುನಿಗಳಿಗೆ ಕಂಡ ರಾಮನ ನಿಜರೂಪದ ಅರಿವು ದಶರಥನಿಗೆ ಆಗಲೇ ಇಲ್ಲ. ಅತನನ್ನು ಸಮಾಧಾನ ಮಾಡುತ್ತಾ ಕೌಸಲ್ಯೆ ಮತ್ತು ಸುಮಿತ್ರೆಯರು ತಮ್ಮ ನಡುವೆ ಮಲಗಿಸಿಕೊಂಡಿದ್ದರು ಆರುದಿನಗಳಿಂದಲೂ ಬಾರದ ನಿದ್ರೆ ಇಬ್ಬರೂ ರಾಣಿಯರಿಗೂ ತಡರಾತ್ರಿ ಬಂತು. ರಾಘವನ ನೆನಪು ಮಾಡುತ್ತಲೇ ಇದ್ದ ರಾಜನನ್ನು ಚಿರನಿದ್ರೆ ಸೆಳೆದುಬಿಟ್ಟಿತು.

ರಘುವಂಶದ ಘನತೆಯ ಚಕ್ರವರ್ತಿಯೆಂದು ಹೆಸರು ಮಾಡಿದ ಯಶೋವಂತನಾದ ದೊರೆ ತನ್ನ ಕರ್ಮ ಫಲವನ್ನು ಅನುಭವಿಸಿ ಕೊನೆಗಾಲವನ್ನು ಕಂಡ. ಯಾವಾತ ತನ್ನ ಕರ್ಮಫಲವನ್ನು ಜೀವಿತಾವಧಿಯಲ್ಲಿ ಅನುಭವಿಸುತ್ತಾನೆಯೋ, ಆ ಕಾರಣದಿಂದ ಅವರು ಪಶ್ಚಾತ್ತಾಪ ಪಡುತ್ತಾರೆಯೋ ಅಂತವರು ಸತ್ತಮೇಲೆ ನರಕದಲ್ಲಿ ಆ ಶಿಕ್ಷೆ ಅನುಭವಿಸುವುದಿಲ್ಲ. ಈ ಎಲ್ಲಾ ಅವಸ್ಥೆಯನ್ನು ಅನುಭವಿಸಿದ ಸೂರ್ಯವಂಶದ ಯಶೋವಂತ ಅರಸನೂ ಸಹ ಸ್ವರ್ಗಕ್ಕೆ ನಡೆದ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

ಸೈಬರ್‌ ಸೇಫ್ಟಿ ಅಂಕಣ: ಸಾಮಾಜಿಕ ಮಾಧ್ಯಮದೊಂದಿಗೆ ಆರೋಗ್ಯಕರ ಸಮತೋಲನವನ್ನು ಸಾಧಿಸುವುದು ಮುಖ್ಯ. ಸಂಪರ್ಕಿಸಲು, ಹಂಚಿಕೊಳ್ಳಲು ಮತ್ತು ಮಾಹಿತಿ ಪಡೆಯಲು ಸಾಮಾಜಿಕ ಮಾಧ್ಯವನ್ನು ಬಳಸಿ. ಆದರೆ ನಿಮ್ಮ ಜೀವನದಲ್ಲಿ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ನಿಮ್ಮ ಫೋನ್ ಬಳಕೆಯ ಬಗ್ಗೆ ಗಮನಹರಿಸುವ ಮೂಲಕ ಮತ್ತು ಆರೋಗ್ಯಕರ ಅಭ್ಯಾಸಗಳ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಿ.

VISTARANEWS.COM


on

esim cyber safety column
Koo

ಭಾಗ-2

cyber safety logo

ಸೈಬರ್‌ ಸೇಫ್ಟಿ ಅಂಕಣ: ಸಾಮಾಜಿಕ ಮಾಧ್ಯಮದ ವ್ಯಸನದ (Social media addiction) ಬಗ್ಗೆ ಸ್ನೇಹಿತ ನೀರಜ್‌ ಕುಮಾರ್‌ ಅವರ ವೀಡಿಯೊಗಳನ್ನು ಆಧರಿಸಿ ಬರೆದ ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ? ಲೇಖನದ ಮುಂದುವರಿದ ಭಾಗ ಈ ವಾರ. ಕಾರಣಾಂತರದಿಂದ ಎರಡು ವಾರಗಳ ಬ್ರೇಕ್‌ ಕೊಡಬೇಕಾಯಿತು.

ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯೇ ಎಂದು ಸ್ವಪರೀಕ್ಷೆ ಮಾಡಿಕೊಳ್ಳಲು ನೀರಜ್‌ 5C ಫ್ರೇಮ್‌ವರ್ಕ್‌ ಬಗ್ಗೆ ತಮ್ಮ ವೀಡಿಯೊದಲ್ಲಿ ವಿವರಿಸಿದ್ದಾರೆ. ಕಡುಬಯಕೆ (Craving), ನಿಯಂತ್ರಣ (Control), ನಿಭಾಯಿಸುವಿಕೆ (Coping), ಒತ್ತಾಯ (Compulsioin) ಮತ್ತು ಪರಿಣಾಮ (Consequence) ಎಂಬ ಈ ಐದು C ಗಳು ನಿಮ್ಮಲ್ಲಿ ಎಷ್ಟು ಪ್ರಮಾಣದಲ್ಲಿದೆ ಎಂದು ಸೊನ್ನೆಯಿಂದ ಹತ್ತರವರೆಗಿನ ಮಾಪನದಲ್ಲಿ ಅಂಕ ಕೊಟ್ಟುಕೊಳ್ಳಬಹುದು. ಅದರ ಒಟ್ಟು ಮೊತ್ತ ಶೇಕಡ 60ಕ್ಕಿಂತ ಹೆಚ್ಚು ಅಂದರೆ ಮೂವತ್ತು ಅಥವಾ ಜಾಸ್ತಿ ಇದ್ದರೆ ನಿಮ್ಮ ವ್ಯಸನ ಗಂಭೀರಮಟ್ಟದಲ್ಲಿದೆ ಎನ್ನುತ್ತಾರೆ. ಇದರಿಂದ ಹೊರಬರಲು ಮಾನಸಿಕ ತಜ್ಞರೊಂದಿಗೆ ಸಮಾಲೋಚನೆ ಮಾಡುವುದು ಒಳ್ಳೆಯದು.

ಈಗ ಈ ವ್ಯಸನದಿಂದ ಹೊರಬರುವುದು ಹೇಗೆ ನೋಡೋಣ.

ಸಾಮಾಜಿಕ ಮಾಧ್ಯಮ ವ್ಯಸನವನ್ನು ನಿವಾರಿಸುವ ಮೊದಲ ಹೆಜ್ಜೆ ನಿಮಗೆ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದು. 5C ಫ್ರೇಮ್‌ವರ್ಕ್‌ನಲ್ಲಿ ನಿಮ್ಮ ಸ್ಕೋರ್‌ಗಳನ್ನು ಪರಿಶೀಲನೆ ಮಾಡಿ, ಯಾವ ಅಂಶದಲ್ಲಿ ನಿಮ್ಮ ಸ್ಕೋರ್ ಜಾಸ್ತಿ ಇದೆ ಎನ್ನುವುದನ್ನು ಕಂಡುಕೊಳ್ಳಿ. ಅವುಗಳನ್ನು ಕಡಿಮೆ ಮಾಡುವ ಸಲಹೆಗಳನ್ನು ಅನುಸರಿಸಿ. ಜೊತೆಗೆ ನಿಯಮಿತವಾಗಿ ಮರುಮೌಲ್ಯಮಾಪನ ಮಾಡಿಕೊಂಡು, ಆರೋಗ್ಯಕರ ಸಾಮಾಜಿಕ ಮಾಧ್ಯಮ ಅಭ್ಯಾಸಗಳ ಕಡೆಗೆ ನಿಮ್ಮ ಪ್ರಗತಿಯನ್ನು ನೀವು ಟ್ರ್ಯಾಕ್ ಮಾಡಿ. ನಿಮ್ಮ ಫೋನ್ ಬಳಕೆಯ ಬಗ್ಗೆ ಮಿತಿಗಳನ್ನು ರೂಪಿಸಿಕೊಳ್ಳುವ ಪ್ರಾಮುಖ್ಯತೆಯನ್ನು ನೀರಜ್ ಕುಮಾರ್ ಒತ್ತಿಹೇಳುತ್ತಾರೆ.

ಸಾಮಾಜಿಕ ಮಾಧ್ಯಮವು ಸಂಪರ್ಕ ಮತ್ತು ಮಾಹಿತಿಗಾಗಿ ಬಳಸುವ ಅಮೂಲ್ಯವಾದ ಸಾಧನವಾಗಿದೆ. ಆದರೆ ಜೀವನದಲ್ಲಿ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಇದು ನಿರ್ಣಾಯಕವಾಗಿದೆ. ವ್ಯಸನದ ಚಿಹ್ನೆಗಳನ್ನು ಗುರುತಿಸುವ ಮೂಲಕ ಮತ್ತು ಮಿತಿಮೀರಿದ ಬಳಕೆಯನ್ನು ನಿಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನಾವು ನಮ್ಮ ಸಮಯ ಮತ್ತು ಗಮನದ ನಿಯಂತ್ರಣವನ್ನು ಪುನಃ ಪಡೆದುಕೊಳ್ಳಬಹುದು. ಸಾಮಾಜಿಕ ಮಾಧ್ಯಮವು ನಮ್ಮ ಜೀವನವನ್ನು ವರ್ಧಿಸುವಂತೆ ಅಳವಡಿಸಿಕೊಳ್ಳಬಹುದು.

ಕೆಲವು ಉಪಯುಕ್ತ ಸಲಹೆಗಳು: ‌

ಸಮಯದ ಮಿತಿಗಳನ್ನು ಹೊಂದಿಸಿ: ದಿನಕ್ಕೆ ನಿರ್ದಿಷ್ಟ ಸಮಯವನ್ನು ಸಾಮಾಜಿಕ ಮಾಧ್ಯಮಕ್ಕೆ ಮೀಸಲಿಡಿ ಮತ್ತು ಅದಕ್ಕೆ ಬದ್ಧರಾಗಿರಿ.
ಅಧಿಸೂಚನೆಗಳನ್ನು ಆಫ್ ಮಾಡಿ: ಕಂಪಲ್ಸಿವ್ ಫೋನ್ ಬಳಕೆಗೆ ನಿರಂತರ ಅಧಿಸೂಚನೆಗಳು ಪ್ರಮುಖ ಪ್ರಚೋದಕವಾಗಬಹುದು. ಹೆಚ್ಚಿನ ಅಪ್ಲಿಕೇಶನ್‌ಗಳಿಂದ ಅವುಗಳನ್ನು ಆಫ್ ಮಾಡುವುದು ಒಳ್ಳೆಯದು.
ಫೋನ್-ಮುಕ್ತ ವಲಯಗಳನ್ನು ರಚಿಸಿ: ನಿಮ್ಮ ಮನೆಯಲ್ಲಿ ನಿಮ್ಮ ಮಲಗುವ ಕೋಣೆಯಲ್ಲಿ ಅಥವಾ ಊಟ ಮಾಡುವಾಗ ಫೋನ್ ಬಳಕೆಯನ್ನು ನಿರ್ಭಂದಿಸಿ.
ಪರ್ಯಾಯ ಚಟುವಟಿಕೆಗಳನ್ನು ಹುಡುಕಿ: ಸಮಯ ವ್ಯರ್ಥವಾಗುವ ಅನುಪಯೋಗಿ ಸ್ಕ್ರೋಲಿಂಗ್ ಅನ್ನು ನೀವು ಆನಂದಿಸುವ ಚಟುವಟಿಕೆಗಳೊಂದಿಗೆ ಬದಲಾಯಿಸಿ. ಉದಾಹರಣೆಗೆ ಓದುವುದು, ಹೊರಾಂಗಣದಲ್ಲಿ ಸಮಯ ಕಳೆಯುವುದು ಅಥವಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವೈಯಕ್ತಿಕವಾಗಿ ಬೆರೆಯುವುದು. ಸಂಗೀತ, ಸಾಹಿತ್ಯ, ಚಿತ್ರಕಲೆ ಅಲ್ಲದೆ ಅಂಚೆಚೀಟಿ ಸಂಗ್ರಹಣೆ, ನಾಣ್ಯಗಳ ಸಂಗ್ರಹಣೆ ಮುಂತಾದ ಹವ್ಯಾಸಗಳೂ ನಿಮ್ಮನ್ನು ಮೊಬೈಲ್‌ ಗೀಳಿನಿಂದ ವಿಮುಖಗೊಳಿಸುತ್ತವೆ.

World Social Media Day

ಸಾಮಾಜಿಕ ಮಾಧ್ಯಮ ಡಿಟಾಕ್ಸ್: ನಿಮ್ಮ ಮನಸ್ಸಿನ ರೀಬೂಟ್

ಸಾಮಾಜಿಕ ಮಾಧ್ಯಮ ನಿರ್ವಿಶೀಕರಣವನ್ನು (ಡಿಟಾಕ್ಸಿನೇಷನ್) ಪರಿಗಣಿಸಿ! ನಿರ್ದಿಷ್ಟ ಅವಧಿಗೆ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳಿ, ನಿಮ್ಮ ಮೊಬೈಲ್‌ನ್ನು ಕೇವಲ ಸಂಪರ್ಕಕ್ಕೆ ಮಾತ್ರ ಬಳಸಿ. ಯಾವುದೇ ಸೋಷಿಯಲ್‌ ಆ್ಯಪ್‌ಗಳಿಂದ ದೂರ ಇರಿ. ಅದು ಒಂದು ದಿನ, ವಾರಾಂತ್ಯ ಅಥವಾ ಒಂದು ವಾರವೂ ಆಗಿರಲಿ. ನೈಜ-ಜಗತ್ತಿನ ಸಂಪರ್ಕ ಮತ್ತು ನೀವು ನಿರ್ಲಕ್ಷಿಸಿರುವ ಚಟುವಟಿಕೆಗಳ ಸಂತೋಷಗಳನ್ನು ಮರುಶೋಧಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನಿರಂತರ ಸಾಮಾಜಿಕ ಮಾಧ್ಯಮ ಪುಲ್ ಇಲ್ಲದೆ ನೀವು ಎಷ್ಟು ಹೆಚ್ಚು ಉತ್ಪಾದಕ ಮತ್ತು ಪ್ರಸ್ತುತವನ್ನು ಅನುಭವಿಸುತ್ತೀರಿ ಎಂದು ನಿಮಗೇ ಆಶ್ಚರ್ಯವಾಗಬಹುದು.

ನೆನಪಿಡಿ, ನೀವು ಒಬ್ಬಂಟಿಯಲ್ಲ

ಸಾಮಾಜಿಕ ಮಾಧ್ಯಮ ವ್ಯಸನವು ಬೆಳೆಯುತ್ತಿರುವ ಸಮಸ್ಯೆಯಾಗಿದೆ. ಇದರಲ್ಲಿ ನೀವು ಮಾತ್ರ ಸಿಲುಕಿದವರಲ್ಲ. ಸಾಮಾಜಿಕ ಮಾಧ್ಯಮದೊಂದಿಗೆ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಅನೇಕ ಜನರು ಹೆಣಗಾಡುತ್ತಿದ್ದಾರೆ. ನಿಮ್ಮ ಫೋನ್ ಬಳಕೆಯ ಬಗ್ಗೆ ಗಮನಹರಿಸುವ ಮೂಲಕ, 5C ಫ್ರೇಮ್‌ವರ್ಕ್ ಅನ್ನು ಬಳಸಿಕೊಳ್ಳುವ ಮೂಲಕ ಮತ್ತು ಈ ಸಲಹೆಗಳನ್ನು ಕಾರ್ಯಗತಗೊಳಿಸುವುದರ ಮೂಲಕ, ನಿಮ್ಮ ಸಾಮಾಜಿಕ ಮಾಧ್ಯಮ ಅಭ್ಯಾಸಗಳನ್ನು ನೀವು ನಿಯಂತ್ರಿಸಬಹುದು ಮತ್ತು ಅದು ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿಯಾಗಬಲ್ಲದು.

ಸಾಮಾಜಿಕ ಮಾಧ್ಯಮ ಮತ್ತು ಮಾನಸಿಕ ಆರೋಗ್ಯ: ಕಾಳಜಿಗೆ ಕಾರಣ

ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯಿಂದ ಹೆಚ್ಚಿದ ಆತಂಕ, ಖಿನ್ನತೆ ಮತ್ತು ಅಸಮರ್ಪಕತೆಯ ಭಾವನೆಗಳ ನಡುವಿನ ಪರಸ್ಪರ ಸಂಬಂಧವನ್ನು ಅಧ್ಯಯನಗಳು ತೋರಿಸಿವೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಕಾಣುವ ಜೀವನದ ಕ್ಯುರೇಟೆಡ್ ಮತ್ತು ಅವಾಸ್ತವಿಕ ಚಿತ್ರಣಗಳು ನಿಮ್ಮಲ್ಲಿ ಹೋಲಿಕೆ ಮತ್ತು ಅಸಮರ್ಪಕತೆಯ ಭಾವನೆಗಳಿಗೆ ಕಾರಣವಾಗಬಹುದು. ಸಾಮಾಜಿಕ ಮಾಧ್ಯಮ ಫೀಡ್‌ಗಳು, ಸಾಮಾನ್ಯವಾಗಿ ಎಚ್ಚರಿಕೆಯಿಂದ ರಚಿಸಲಾದ ಹೈಲೈಟ್ ರೀಲ್‌ಗಳು, ವಾಸ್ತವದ ಪ್ರಾತಿನಿಧ್ಯವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ನೈಜ ಸಂಪರ್ಕಗಳ ಮೇಲೆ ಕೇಂದ್ರೀಕರಿಸಿ ಮತ್ತು ನೀವು ಪ್ರೀತಿಸುವ ಜೀವನವನ್ನು ನಿರ್ಮಿಸಿ

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮವು ಉತ್ತಮ ಸಾಧನವಾಗಿದೆ, ಆದರೆ ಇದು ನೈಜ-ಪ್ರಪಂಚದ ಸಂವಹನವನ್ನು ಬದಲಿಸಬಾರದು. ಮುಖಾಮುಖಿ ಸಂವಹನಗಳಿಗೆ ಆದ್ಯತೆ ನೀಡಲು ಮತ್ತು ನಿಮ್ಮ ಜೀವನದಲ್ಲಿ ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಲು ಪ್ರಯತ್ನವನ್ನು ಮಾಡಿ.

ಅಂತಿಮವಾಗಿ, ಸಾಮಾಜಿಕ ಮಾಧ್ಯಮದೊಂದಿಗೆ ಆರೋಗ್ಯಕರ ಸಮತೋಲನವನ್ನು ಸಾಧಿಸುವುದು ಮುಖ್ಯ. ಸಂಪರ್ಕಿಸಲು, ಹಂಚಿಕೊಳ್ಳಲು ಮತ್ತು ಮಾಹಿತಿ ಪಡೆಯಲು ಸಾಮಾಜಿಕ ಮಾಧ್ಯವನ್ನು ಬಳಸಿ. ಆದರೆ ನಿಮ್ಮ ಜೀವನದಲ್ಲಿ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ನಿಮ್ಮ ಫೋನ್ ಬಳಕೆಯ ಬಗ್ಗೆ ಗಮನಹರಿಸುವ ಮೂಲಕ ಮತ್ತು ಆರೋಗ್ಯಕರ ಅಭ್ಯಾಸಗಳ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಸಮಯ ಮತ್ತು ಗಮನದ ನಿಯಂತ್ರಣವನ್ನು ನೀವು ಮರುಪಡೆಯಬಹುದು. ಸಾಮಾಜಿಕ ಮಾಧ್ಯಮವು ನಿಮ್ಮ ಜೀವನವನ್ನು (ಸಮಯವನ್ನು) ಕಡಿಮೆಗೊಳಿಸುವುದಕ್ಕಿಂತ ಹೆಚ್ಚಿಸುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು. ಆದ್ದರಿಂದ, ನಿಮ್ಮ ಫೋನ್ ಅನ್ನು ಕೆಳಗೆ ಇರಿಸಿ, ಪರದೆಯಿಂದ ಮೇಲಕ್ಕೆ ನೋಡಿ ಮತ್ತು ಅಲ್ಲಿಗೆ ಹೋಗಿ ಮತ್ತು ನಿಮ್ಮ ಜೀವನವನ್ನು ಜೀವಿಸಿ.
ಮೋಬೈಲ್‌ ಸ್ಕ್ರೋಲಿಂಗ್‌ ನಿಲ್ಲಿಸಿ, ಜೀವನದಲ್ಲಿ ಸ್ಟ್ರೋಲಿಂಗ್ ಮಾಡಿ. Stop scrolling, Start Strolling.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಮುದ್ರಾ ಯೋಜನೆಯ ಹೆಸರಲ್ಲಿ ರಾಷ್ಟ್ರವ್ಯಾಪಿ ಸೈಬರ್ ವಂಚನೆ

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ನನ್ನ ದೇಶ ನನ್ನ ದನಿ ಅಂಕಣ: ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ.

VISTARANEWS.COM


on

nanna desha nanna dani column
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ ಅಂಕಣ: ಅನುವಾದ ಮತ್ತು ಭಾಷಾಂತರ ಕ್ಷೇತ್ರಗಳ ಮಹತ್ತ್ವವೇ ನಮಗೆ ತಿಳಿಯದು. ಸಾಮಾನ್ಯರಿರಲಿ, ವಿಶ್ವವಿದ್ಯಾಲಯಗಳಲ್ಲಿ ವಿರಾಜಮಾನರಾಗಿರುವ ಬಹುತೇಕ ಪ್ರಭೃತಿಗಳಿಗೂ ತಿಳಿಯದು. ಭಾಷಾಂತರ ಕ್ಷೇತ್ರದ ಆಳ – ಅಗಲಗಳ ಸರಿಯಾದ ಅಂದಾಜೇ ನಮಗಿಲ್ಲ. ಕಳೆದ ಆರೇಳು ದಶಕಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಟ್ಟಹಾಸ, ಅಬ್ಬರಗಳ ಮಹಾಪೂರದಲ್ಲಿ ಭಾರತೀಯ ಭಾಷೆಗಳು ಸೊರಗುತ್ತಿವೆ, ನಿಧಾನವಾಗಿ ನೇಪಥ್ಯಕ್ಕೂ ಸೇರುತ್ತಿವೆ. ಇನ್ನೂ ಹೆಚ್ಚಿನ ದುರಂತವೆಂದರೆ, ನಮ್ಮ ಸೋ ಕಾಲ್ಡ್ ಶಿಕ್ಷಣ ತಜ್ಞರಿಗೆ ಇದರ ಅಂದಾಜೂ ಆಗುತ್ತಿಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ, ಸಂವಾದ – ಚರ್ಚೆ – ಉಪನ್ಯಾಸಮಾಲೆ – ಎಲ್ಲವೂ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಎಂಬಂತಾಗಿವೆ. ಈ ಪಿಡುಗು ಇನ್ನಷ್ಟು ಮುಂದುವರಿದು ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮೊದಲ್ಗೊಂಡು, ಶಾಲಾ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳನ್ನೂ ಇಂಗ್ಲಿಷ್ ಭಾಷೆ ಆವರಿಸಿಕೊಂಡುಬಿಟ್ಟಿದೆ. ಇನ್ನು ಇಡೀ ದೇಶದ ಬೌದ್ಧಿಕ – ಶೈಕ್ಷಣಿಕ ಕ್ಷೇತ್ರಗಳು, ಇಂಗ್ಲಿಷ್ ಭಾಷೆ – ಇಂಗ್ಲಿಷ್ ಮಾಧ್ಯಮಗಳ ಉಪೋತ್ಪನ್ನಗಳಾಗಿ ಹೋಗಿರುವುದು, ಈ ಎಲ್ಲಾ ಅಪಸವ್ಯಗಳಿಗೆ ಕಲಶವಿಟ್ಟಂತಾಗಿದೆ.

ಪ್ರಾಚೀನ ಭಾರತ, ಅಷ್ಟೇಕೆ, ಪ್ರಾಚೀನ ಜಗತ್ತಿನ ಬಹುಪಾಲು ಆಳರಸರಿಗೆ ಭಾಷಾಂತರ ಕ್ಷೇತ್ರದ ಮಹತ್ತ್ವ ತಿಳಿದಿತ್ತು. ಭಾಷೆಗಳನ್ನು ಯಾರೂ ಸಮಸ್ಯೆಯನ್ನಾಗಿ ಮಾಡಿಕೊಂಡಿರಲಿಲ್ಲ. ಹಿಂದೀ – ತಮಿಳು ಭಾಷೆಗಳನ್ನು ಮತ್ತು ಭಾಷಿಕರನ್ನು ದ್ವೇಷಿಸುವ ನಮ್ಮ ಇಂದಿನ ಯುಗಮಾನದ ಅವಿವೇಕ ಅಂದಿನವರಿಗೆ ಇರಲಿಲ್ಲ. ನಾಲ್ಕೈದು ದಶಕಗಳ ಹಿಂದೆ ಬಂಗಾಳಿ, ತಮಿಳು, ತೆಲುಗು, ಮರಾಠೀ ಮುಂತಾದ ಭಾಷೆಗಳಿಂದ ನೇರವಾಗಿ ಅನುವಾದ ಮಾಡುವವರು ನಮ್ಮಲ್ಲಿಯೇ ಇದ್ದರು. ಈಗ ವಿಚಿತ್ರವೆಂದರೆ, ಭಾರತೀಯ ಭಾಷೆಗಳ ನಡುವಣ ಕೊಡುಕೊಳ್ಳುವಿಕೆಗೂ ಇಂಗ್ಲಿಷ್ ಭಾಷೆಯು ಅನಿವಾರ್ಯ ಮಾಧ್ಯಮ ಎಂಬಂತಾಗುತ್ತಿದೆ. ಇದಕ್ಕಿಂತ ದೊಡ್ಡ ದುರಂತವಿನ್ನೇನು ಇದ್ದೀತು!

ಸಾವಿರಾರು ವರ್ಷಗಳ ನಿಜೇತಿಹಾಸಾಧ್ಯಯನ ನಮ್ಮ ದಿಗ್ಭ್ರಮೆಗೆ ಕಾರಣವಾಗುತ್ತದೆ. ನೋಡಿ, ನಮಗೆ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂ ಎನ್ ತ್ಸಾಂಗ್ ಎನ್ನಲಾಗುತ್ತಿತ್ತು) ಫಾಹಿಯಾನ್ ಮಾತ್ರ ಗೊತ್ತು. ಅವರೆಲ್ಲ ಚೀನಾ ದೇಶದಿಂದ ಇಲ್ಲಿಗೆ ಬಂದು ಜ್ಞಾನಸಂಪತ್ತನ್ನು ಅಲ್ಲಿಗೆ ಕೊಂಡೊಯ್ದವರು. ಅವರು, ಅಂತಹವರು ಭಾಷಾಂತರದಿಂದ ಅದ್ಭುತವಾದ ಸಂಪತ್ತನ್ನು ಸಂಗ್ರಹಿಸಿದರು ಮತ್ತು ಅವರ ದೇಶದಲ್ಲಿ ಕಾಪಿಟ್ಟುಕೊಂಡರು. ನಿಜೇತಿಹಾಸದ ಇನ್ನಷ್ಟು ವಿವರಗಳು ಅಕ್ಷರಶಃ ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಾಂತರ ಮಾಡಿದ ಭಾರತೀಯ ಮೂಲದ ವಿದ್ವಾಂಸರ ವಿವರಗಳು ಸಹ ದಿಕ್ಸೂಚಿಯಾಗಿವೆ.

ಸಾಮಾನ್ಯ ಯುಗದ ಮೊದಲನೆಯ ಶತಮಾನದಲ್ಲಿ (1st Century of Common Era) ಚೀನಾ ದೇಶದ ಸಮ್ರಾಟ ಮಿಂಗ್-ತಿ ಬೌದ್ಧ ಸಿದ್ಧಾಂತದ ಅಧ್ಯಯನಕ್ಕಾಗಿ 18 ಜನರ ತಂಡವನ್ನು ಭಾರತಕ್ಕೆ ಕಳುಹಿಸಿದ. ಅವರು ಇಲ್ಲಿಂದ ದೊಡ್ಡ ಸಂಖ್ಯೆಯ ಗ್ರಂಥಗಳನ್ನು ಪ್ರತಿ ಮಾಡಿಕೊಂಡು, ಅನುವಾದಿಸಿಕೊಂಡು ತೆಗೆದುಕೊಂಡುಹೋದರು ಮತ್ತು ಕಶ್ಯಪ ಮಾತಂಗ ಮತ್ತು ಧರ್ಮರತ್ನ ಎಂಬ ಬೌದ್ಧ ವಿದ್ವಾಂಸರನ್ನೂ ಕರೆದುಕೊಂಡುಹೋದರು. ಕಶ್ಯಪರು ಆಗ ಗಾಂಧಾರದಲ್ಲಿದ್ದರು (ಗಾಂಧಾರ ಎಂದರೆ ಇಂದಿನ ಆಫಘನಿಸ್ತಾನ. ಅದು ಇಸ್ಲಾಂ ಆಕ್ರಮಣಕ್ಕೆ ಮುಂಚೆ ಸಾವಿರಾರು ವರ್ಷಗಳ ಕಾಲ ಬೌದ್ಧ ಧರ್ಮಕ್ಕೆ ಹೆಸರಾಗಿತ್ತು). ಚೀನಾ ದೇಶದ ತರ್ಕೆಸ್ತಾನ್ ಪ್ರದೇಶದ ಪರ್ವತಗಳನ್ನು ಮತ್ತು ಗೋಬೀ ಮರುಭೂಮಿಯನ್ನು ದಾಟಿಹೋಗಲು ಕಶ್ಯಪರು ಪ್ರಯಾಸಪಡಬೇಕಾಯಿತು. ಆದರೆ, ಅವರ ಆ ಪರಿಶ್ರಮದ ಭೇಟಿಯ ಕಾರಣದಿಂದಲೇ ಅನಂತರದ ಅವಧಿಯಲ್ಲಿ, ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಿಂದ ನೂರಾರು ಜನ ವಿದ್ವಾಂಸರು ಚೀನಾ ದೇಶದಲ್ಲಿಯೇ ಕುಳಿತು ಭಾಷಾಂತರ ಮಾಡುವಂತಹ ವ್ಯವಸ್ಥೆ ಬೆಳೆಯಲು ಸಾಧ್ಯವಾಯಿತು. ಅಗಾಧ ಪ್ರಮಾಣದ ಸಂಸ್ಕೃತ ಗ್ರಂಥಗಳನ್ನು ಅವರೆಲ್ಲ ಪ್ರತಿ ಮಾಡಿಕೊಂಡು ಇಲ್ಲಿಂದ ತೆಗೆದುಕೊಂಡುಹೋದರು. ಹಾಗೆ ಹೋದ ವಿದ್ವಾಂಸರಲ್ಲಿ ಸಂಘವರ್ಮ, ಧರ್ಮಸತ್ಯ, ಧರ್ಮಕಾಲ, ಮಹಾಬಲ, ವಿಘ್ನ, ಧರ್ಮಫಲ, ಕಲಾಸಿವಿ, ಕಲಾರುಚಿ ಮತ್ತು ಲೋಕರುಚಿ ಅವರು ಪ್ರಮುಖರಾದವರು.

nalanda and muslim invaders

ಆಗ ಕಾಶ್ಮೀರವೂ ಪ್ರಾಚೀನ ಭಾರತದ ಬಹಳ ದೊಡ್ಡ ಬೌದ್ಧ ಅಧ್ಯಯನ ಕೇಂದ್ರವಾಗಿತ್ತು. ಕಾಶ್ಮೀರದ ರಾಜವಂಶಕ್ಕೆ ಸೇರಿದ ಗುಣವರ್ಮರು ತಮ್ಮ ಪಾಂಡಿತ್ಯಕ್ಕೇ ಹೆಸರಾಗಿದ್ದರು. ಅವರು ಮೊದಲು ಶ್ರೀಲಂಕಾ ಮತ್ತು ಜಾವಾ ದೇಶಗಳಿಗೆ ಹೋಗಿ ಖ್ಯಾತರಾದರು. ಗುಣವರ್ಮರನ್ನು ಚೀನಾ ದೇಶದ ಚಕ್ರವರ್ತಿ ಆಹ್ವಾನಿಸಿದ. ಅಷ್ಟೇ ಅಲ್ಲ, ನಾಂಕಿಂಗ್ ಎಂಬ ಪಟ್ಟಣಕ್ಕೆ ಹೋಗಿ ಸ್ವತಃ ಗುಣವರ್ಮರನ್ನು ಎದುರುಗೊಂಡ. ಅವರ ಶಿಷ್ಯನೂ ಆದ. ಅವರಿಗಾಗಿ ಒಂದು ಬೌದ್ಧ ದೇವಾಲಯವನ್ನೂ ನಿರ್ಮಿಸಿದ. ಗುಣವರ್ಮರಂತೆಯೇ ಕಾಶ್ಮೀರದಿಂದ ಚೀನಾ ದೇಶಕ್ಕೆ ಹೋದ ವಿದ್ವಾಂಸರೆಂದರೆ ಬುದ್ಧಯಶಸ್, ಧರ್ಮಯಶಸ್, ಧರ್ಮಕ್ಷೇಮ, ಬುದ್ಧಜೀವ ಮತ್ತು ಧರ್ಮಮಿತ್ರ. ಈ ವಿವರಗಳು ಅದೆಷ್ಟು ಸಂತೋಷನೀಡುತ್ತವೆ ಎಂದರೆ, ನೋಡಿ, ದಕ್ಷಿಣ ಭಾರತದಿಂದಲೂ ಹಲವಾರು ವಿದ್ವಾಂಸರು ಚೀನಾ ದೇಶಕ್ಕೆ ಹೋದರು. ಹಾಗೆ ಹೋದ ಧರ್ಮರುಚಿ ಇಪ್ಪತ್ತು ವರ್ಷಗಳ ಕಾಲ (ಸಾಮಾನ್ಯ ಯುಗದ 693ರಿಂದ 713) ಚೀನಾ ದೇಶದಲ್ಲಿದ್ದು, ದಾಖಲೆ ಪ್ರಮಾಣದ ಐವತ್ಮೂರು ಗ್ರಂಥಗಳನ್ನು ಭಾಷಾಂತರಿಸಿದರು. ಚೀನೀ ಭಾಷೆಗೆ ವ್ಯವಸ್ಥಿತವಾದ ವ್ಯಾಕರಣವಿಲ್ಲ, ಒಂದು ಪದವನ್ನು ಒಂದು ಅಕ್ಷರವೋ – ಒಂದು ಚಿಹ್ನೆಯೋ ಪ್ರತಿನಿಧಿಸಿಬಿಡುತ್ತದೆ, ಎನ್ನುವ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತವಾದ ಸಂಸ್ಕೃತ ಮತ್ತು ಇನ್ನಿತರ ಭಾರತೀಯ ಭಾಷೆಗಳಿಂದ ಅನುವಾದಿಸುವುದು ಅದೆಷ್ಟು ಶ್ರಮದಾಯಕ, ಕ್ಲಿಷ್ಟಕರ ಎಂಬುದನ್ನು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಭಾಷಾಂತರದ ಆಯಾಮವೇ ಹಾಗೆ. ಸಂಸ್ಕೃತಿಗಳ – ರೀತಿನೀತಿಗಳ ವ್ಯತ್ಯಾಸ ಮತ್ತು ಅಂತರಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಬಹಳ ಮುಖ್ಯವಾದ ಅಂಶವೊಂದನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ಜ್ಞಾನದ ಸಂಪತ್ತನ್ನು ವಿವಿಧ ಸಮುದಾಯಗಳಿಗೆ, ಅನೇಕ ದೇಶಗಳಿಗೆ ಹಂಚಲು ನೀಡಲು ಭಾಷಾಂತರದ ಇಂತಹ ಪ್ರಮುಖ ಆಯಾಮಕ್ಕೆ ರಾಜಾಶ್ರಯ ಇತ್ತು, ಇರಬೇಕು ಎನ್ನುವುದನ್ನು ಸಹ ನಾವಿಲ್ಲಿ ಗಮನಿಸಬೇಕಿದೆ. ಭಾರತ, ಚೀನಾ ಮುಂತಾದ ದೇಶಗಳಲ್ಲಿ ಅನೇಕ ರಾಜರು ಪ್ರೋತ್ಸಾಹ ನೀಡಿದುದರಿಂದಲೇ ಜ್ಞಾನ ಪರಂಪರೆ ಮುಂದುವರಿಯಲು ಮತ್ತು ಉಳಿದುಕೊಂಡು ಬರಲು ಸಾಧ್ಯವಾಯಿತು.

ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ. ಹಾಗೆಂದೇ, ಕನಿಷ್ಠ ಎಂಬತ್ತು ಪ್ರತಿಶತ ಅನುವಾದಗಳು ಕಳಪೆ ಗುಣಮಟ್ಟದವಾಗಿಬಿಟ್ಟಿವೆ. ಇನ್ನು ಪ್ರಶಸ್ತಿ, ಸ್ಥಾನಮಾನಗಳನ್ನು ಅನುವಾದಕರು ನಿರೀಕ್ಷಿಸುವಂತೆಯೇ ಇಲ್ಲ. ಒಂದೋ ಎರಡೋ ಕು-ಕವನಗಳನ್ನು ಬರೆದವರು ತಾವು ಬರೆದ ಕವನಗಳಿಗಿಂತ ಹೆಚ್ಚು ಸಂಖ್ಯೆಯ ಪ್ರಶಸ್ತಿಗಳನ್ನು ಗಳಿಸಿಬಿಡುತ್ತಾರೆ. ಕನ್ನಡದಲ್ಲಿ “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ”ವು, ಭಾಷಾಂತರಕ್ಕೆ ಒಳ್ಳೆಯ ಸಂಭಾವನೆಯನ್ನು ಕೊಡುತ್ತಿರುವುದು ಸ್ವಾಗತಾರ್ಹವೇ ಆದರೂ, ಮುಖ್ಯ ವಿಷಯ ಅದಲ್ಲ. ನಮ್ಮ ಪರಂಪರೆಯ ಹಾಗೂ ಅನೇಕ ಪ್ರಮುಖ ಗ್ರಂಥಗಳ ಸಮರ್ಥ ಮತ್ತು ಅಧಿಕೃತ ಅನುವಾದಗಳು ಆಗಬೇಕಿದೆ. ಅದು ಬರಿಯ ಸಂಭಾವನೆಯ ಸಂಗತಿಯನ್ನು ಮೀರಿದುದು. ಕೆಲವು ಗ್ರಂಥಗಳ ಅನುವಾದಕ್ಕೆ ಪ್ರತ್ಯೇಕ ಆದ್ಯತೆಯನ್ನೇ ನೀಡಬೇಕಾಗುತ್ತದೆ ಮತ್ತು ಬರಿಯ ಸಂಭಾವನೆ ಸಾಲದೆಹೋಗುತ್ತದೆ. ಈ ಕಾರ್ಯಕ್ಕೆಂದೇ ಪೂರ್ಣಾವಧಿ ಭಾಷಾಂತರಕಾರರ ನೇಮಕವಾಗಬೇಕಾಗಿದೆ.

ಹಿಂದೆ ರಾಜಾಶ್ರಯ ಇದ್ದ ಹಾಗೆ, ಈಗ ಸರ್ಕಾರೀ ಮತ್ತು ಸೇವಾ ಸಂಸ್ಥೆಗಳು ಪೂರ್ಣಾವಧಿ ಭಾಷಾಂತರಕಾರರನ್ನೇ ನೇಮಿಸಿಕೊಂಡು ಈ ಕಾರ್ಯವನ್ನು ಕೈಗೊಳ್ಳಬೇಕು. ಆಗ ಮಾತ್ರ ನಮ್ಮ ಪರಂಪರೆ ಮತ್ತು ನಿಜ-ಇತಿಹಾಸ ಗ್ರಂಥಗಳನ್ನು ಉಳಿಸಿಕೊಳ್ಳಲು ಸಾಧ್ಯ. ಹಾಗಾದಾಗ ಮಾತ್ರವೇ, ಪರೋಕ್ಷವಾಗಿ ಎಲ್ಲ ಭಾರತೀಯ ಭಾಷೆಗಳನ್ನೂ ಉಳಿಸಲು, ಉಳಿಸಿಕೊಳ್ಳಲು ಸಾಧ್ಯ.

ಅದೆಷ್ಟು ಪ್ರಮಾಣದಲ್ಲಿ ಮಹತ್ತ್ವದ ಗ್ರಂಥಗಳು ಬೇರೆ ಬೇರೆ ಭಾಷೆಗಳಲ್ಲಿ ಬರಬೇಕಾಗಿವೆ ಎಂದರೆ, ಭಾರತಾದ್ಯಂತ ಹತ್ತಾರು ಸಾವಿರ ಪೂರ್ಣಾವಧಿ ಭಾಷಾಂತರಕಾರರ ಅಗತ್ಯವಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

ವಿಚಿತ್ರ ನೋಡಿ. ಅಮೆರಿಕಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ದರೋಡೆಕಾರರಿಗೆ ನಮ್ಮ ಪ್ರಾಚೀನ ಗ್ರಂಥಗಳ ನಿಜ-ಮೌಲ್ಯ ಗೊತ್ತಿತ್ತು. ಈ ಮೂರೂ ದೇಶಗಳ ವಿದ್ವಾಂಸರು ಒಟ್ಟಾಗಿ ಕುಳಿತು, ಸಾಮಾನ್ಯ ಯುಗದ 17 – 18ನೆಯ ಶತಮಾನಗಳಲ್ಲಿ, ನಮ್ಮ “ಸೂರ್ಯ ಸಿದ್ಧಾಂತ” ಗ್ರಂಥವನ್ನು ಅನುವಾದಿಸಿಕೊಂಡು ಹೋದರು. ಖಗೋಳ ಶಾಸ್ತ್ರದ ಆ ಅಮೌಲ್ಯ ಗ್ರಂಥದ ಪ್ರಮುಖ ವೈಜ್ಞಾನಿಕ ಅಂಶಗಳನ್ನು ಅವರು ಬಳಸಿಕೊಂಡರು. ಮೆಕಾಲೆ ಹುಟ್ಟುಹಾಕಿದ ನಮ್ಮ ದೇಶದ ಇಂದಿನ ವಿಕೃತ ಶಿಕ್ಷಣ ವ್ಯವಸ್ಥೆ ಹೇಗಿದೆಯೆಂದರೆ, ಇಂದು ನಮ್ಮ ವಿಶ್ವವಿದ್ಯಾಲಯಗಳ ಮಹಾಶಯರಿಗೆ “ಸೂರ್ಯ ಸಿದ್ಧಾಂತ”ದ ಬಗೆಗೆ ಕೇಳಿದರೆ, ಅವರು “ಅದು ಬೆಕ್ಕೋ – ನಾಯಿಯೋ ಇರಬಹುದು” ಎಂದಾರು. ಕಮ್ಯೂನಿಸ್ಟರು ಅವರ ತಲೆಗೆ ತುಂಬಿರುವಂತೆ, ಪ್ರಾಚೀನ ಭಾರತವೆಂದರೆ ಅವರ ಪಾಲಿಗೆ “ಸತೀ ಸಹಗಮನ, ಅಸ್ಪೃಶ್ಯತೆ, ಜಾತೀಯತೆ, ಮೂಢ ನಂಬಿಕೆಗಳು, ಭೇದಭಾವ, ಶೋಷಣೆ, ಇತ್ಯಾದಿ” ಮಾತ್ರ!

ಅತ್ಯಂತ ನಿರುಪಯುಕ್ತವಾದ ಕೆಮಿಸ್ಟ್ರಿ (ಶಾಲಾ ಕಾಲೇಜುಗಳಲ್ಲಿ ನಾನೂ ಕೆಮಿಸ್ಟ್ರಿ ವಿದ್ಯಾರ್ಥಿಯೇ. ಅದರಿಂದ ಮೂರುಕಾಸಿನ ಪ್ರಯೋಜನವೂ ಇಲ್ಲವೆಂಬುದನ್ನು, ಕಳೆದ ಅರ್ಧ ಶತಮಾನದಲ್ಲಿ ಅರ್ಥ ಮಾಡಿಕೊಂಡಿದ್ದೇನೆ) ಮುಂತಾದವನ್ನು ಕೈಬಿಟ್ಟು, ಆಗಬೇಕಾದ ವಿಭಾಗಗಳಲ್ಲಿ ಆಗಬೇಕಾದ ಕೆಲಸಗಳಿಗೆ ಆದ್ಯತೆ ಕೊಟ್ಟರೆ, ನಮ್ಮ ವಿಶ್ವವಿದ್ಯಾಲಯಗಳೂ ಅರ್ಥಪೂರ್ಣ ಕೊಡುಗೆ ನೀಡಬಹುದು.

ಇಲ್ಲಿ ಇನ್ನೂ ಒಂದು ಪ್ರಮುಖ ಸಂಗತಿಯನ್ನು ಪ್ರಸ್ತಾಪಿಸಬಹುದು. ಮೇಲೆ ಉಲ್ಲೇಖಿಸಿದ ಉದಾಹರಣೆಗಳು, ಮತಧರ್ಮಗಳ ಶಾಸ್ತ್ರಗ್ರಂಥಗಳ ಅನುವಾದಕ್ಕೆ ಸಂಬಂಧಿಸುತ್ತವೆ, ಅದರ ಹಿಂದೆ ಧರ್ಮಶ್ರದ್ಧೆಯ ಆಯಾಮವಿದೆ ಎಂದು ಕೆಲವರು ಮೂಗು ಮುರಿಯಬಹುದು. ಚೀನಾ ದೇಶದ ಈ ಮೇಲಿನ ಯೋಜನೆಗಳಲ್ಲಿ, ಅವರಿಗೆ ಜೊತೆಜೊತೆಯಲ್ಲಿಯೇ ತರ್ಕಶಾಸ್ತ್ರ, ಔಷಧಶಾಸ್ತ್ರ, ಆಯುರ್ವೇದ ಮುಂತಾದ ಅನೇಕ ಜ್ಞಾನಶಾಖೆಗಳ ಲಾಭವೂ ಆಯಿತು. ನಮ್ಮ ಭಾರತ-ಮೂಲದ ಗಣಿತ, ಅಂಕಿಗಳು, ಕ್ಯಾಲ್ಕುಲಸ್, ಬುದ್ಧಿವಂತರ ಆಟ ಎಂದೇ ಹೆಸರಾದ ಚದುರಂಗದಾಟ (Chess) ಇತ್ಯಾದಿ ಮಹತ್ತ್ವದ ಸಂಗತಿಗಳು ಅರೇಬಿಯಾ ಮೂಲಕ ಯೂರೋಪಿಗೆ ಪರಿಚಯವಾದವು. ಪರೋಕ್ಷವಾಗಿ ಯೂರೋಪಿನಲ್ಲಿ ಆಧುನಿಕ ವಿಜ್ಞಾನದ ವಿಕಾಸ ಸಂಶೋಧನೆಗಳಿಗೆ ಇವೆಲ್ಲಾ ಸಾಧನಗಳಾದವು, ಎಂಬುದನ್ನೂ ನಾವು ಮರೆಯುವಂತಿಲ್ಲ.

ಹೌದು, ಭಾಷಾಂತರ ಕ್ಷೇತ್ರಕ್ಕೆ ಈಗಲಾದರೂ ಆದ್ಯತೆ ದೊರೆಯಬೇಕಿದೆ. ಭಾರತೀಯ ಸಮಾಜದ ಬೌದ್ಧಿಕ ಲೋಕದ ಚುಕ್ಕಾಣಿ ಹಿಡಿದವರು ಈ ನಿಟ್ಟಿನಲ್ಲಿ ತೀವ್ರ ಗಮನ ನೀಡಬೇಕಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Continue Reading

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

ರಾಜಮಾರ್ಗ ಅಂಕಣ: ಮತ ಹಾಕದವರಿಗೆ ಕಾರಣ ಕೇಳುವ ನೋಟೀಸ್ ಸರಕಾರ ಜಾರಿ ಮಾಡುವುದರಿಂದ ಹಿಡಿದು, ದಂಡ ವಿಧಿಸುವ, ಸರಕಾರದ ಸೌಲಭ್ಯಗಳನ್ನು ತಡೆಹಿಡಿಯುವ ಕಾನೂನು ಇವೆ. ಬೆಲ್ಜಿಯಂ, ಆಸ್ಟ್ರೇಲಿಯ, ಆಸ್ಟ್ರಿಯಾ, ಅರ್ಜೆಂಟೀನ, ಬೊಲಿವಿಯಾ, ಯುಕ್ರೇನ್, ಬ್ರೆಜಿಲ್, ಈಜಿಪ್ಟ್, ಗ್ರೀಸ್, ಇಟಲಿ, ಮೆಕ್ಸಿಕೊ, ಫಿಲಿಫೈನ್ಸ್, ಸಿಂಗಾಪುರ, ಥೈಲ್ಯಾಂಡ್, ಟರ್ಕಿ, ಸ್ವಿಜರ್ಲ್ಯಾಂಡ್….ಮೊದಲಾದ ರಾಷ್ಟ್ರಗಳು ಕಡ್ಡಾಯ ಮತದಾನದ ಕಾನೂನು ಹೊಂದಿವೆ.

VISTARANEWS.COM


on

Lok Sabha Election
Koo

ಮತದಾನ ಮಾಡಲು ಹೆಚ್ಚಿನ ಕಡೆ ಸುಶಿಕ್ಷಿತ ಯುವಜನತೆಯ ನಿರುತ್ಸಾಹ ಯಾಕೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಭಾರತದಲ್ಲಿ ಚುನಾವಣೆಗಳನ್ನು ʼಪ್ರಜಾಪ್ರಭುತ್ವದ ಹಬ್ಬ’ (Festivals of democracy) ಎಂದು ಕರೆಯುತ್ತೇವೆ. ದೇಶ ಅಭಿವೃದ್ಧಿ ಆಗಬೇಕಾದರೆ ಸಧೃಡ ಸರಕಾರಗಳು ಬೇಕು. ದೇಶದ ನಾಗರಿಕರು ಚುನಾವಣೆಯಲ್ಲಿ ಬಂದು ಮತ ಚಲಾವಣೆ (Voting) ಮಾಡಬೇಕಾದದ್ದು, ಬಲಿಷ್ಟ ಸರಕಾರ ರಚಿಸಬೇಕಾದದ್ದು ಅನಿವಾರ್ಯ.

ದೇಶದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಭಾರತ ಸರಕಾರದ SVEEP (Systematic Voters’ Education and Electoral Participation) ಎಂಬ ಸಮಿತಿಯು ಇದೆ. ಅದು ವಿವಿಧ ಮಾಧ್ಯಮಗಳ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತದೆ. ಮನರಂಜನಾ ಮಾಧ್ಯಮಗಳನ್ನು ಕೂಡ ಬಳಸಿಕೊಳ್ಳುತ್ತದೆ. ಆದರೂ ನಗರ ಪ್ರದೇಶಗಳ ಕೆಲವು ಕಡೆಗಳಲ್ಲಿ ಮತದಾನದ ಪ್ರಮಾಣವು ಉತ್ತೇಜಕವಾಗಿ ಇಲ್ಲ. ವಿಶೇಷವಾಗಿ ಹೆಚ್ಚಿನ ವಿದ್ಯಾವಂತ ಯುವಜನತೆಯು ಮತದಾನದಲ್ಲಿ ಉತ್ಸಾಹ ತೋರುತ್ತಿಲ್ಲ ಎನ್ನುವ ಆರೋಪಗಳು ಇವೆ. ಈ ಬಾರಿ ಕೂಡ ಹೆಚ್ಚು ಟೆಕ್ಕಿಗಳು ಇರುವ ಬೆಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲು ಆಗಿದೆ. ಯಾಕೆ ಹೀಗೆ? ಯಾರು ಗೆದ್ದರೂ ನಮಗೇನು ಲಾಭ ಎಂಬ ನಕಾರಾತ್ಮಕ ಧೋರಣೆ ಯಾಕೆ?

ಭಾರತದಲ್ಲಿ ಕಡ್ಡಾಯ ಮತದಾನ ಯಾಕೆ ಸಾಧ್ಯವಿಲ್ಲ?

ಭಾರತವು ಡೆಮಾಕ್ರಟಿಕ್ ರಾಷ್ಟ್ರ ಅನ್ನುವುದು ಈ ಪ್ರಶ್ನೆಗೆ ಉತ್ತರ. ಅದಕ್ಕೆ ಪೂರಕವಾದ ಕಾನೂನು ಇನ್ನೂ ಭಾರತದಲ್ಲಿ ರೂಪುಗೊಂಡಿಲ್ಲ. ಇಲ್ಲಿ ಯಾರಿಗೂ ಒತ್ತಡ ಹಾಕುವ ಹಾಗಿಲ್ಲ. ಮನ ಒಲಿಕೆಯ ಮೂಲಕ ಮಾತ್ರ ಯಾರನ್ನಾದರೂ ಮತ ಹಾಕಲು ಕರೆದುಕೊಂಡು ಬರಬಹದು. ನಾಗರಿಕರನ್ನು ಎಜೂಕೆಟ್ ಮಾಡುವುದು ಸುಲಭದ ಕೆಲಸ ಅಲ್ಲ.

ಸ್ವೀಪ್ ಸಮಿತಿಯು ಅವಿರತ ಪ್ರಯತ್ನಗಳು

SVEEP ಸಮಿತಿಯು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಆಕರ್ಷಕವಾದ ಮತದಾನ ಕೇಂದ್ರಗಳನ್ನು ತೆರೆದಿದೆ. ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನವನ್ನು ಮಾಡುವ ಸೌಲಭ್ಯವನ್ನು ನೀಡಿದೆ. ಮತದಾನ ಸಿಬ್ಬಂದಿಗಳಿಗೆ EDC ಮತ್ತು ಪೋಸ್ಟಲ್ ಬ್ಯಾಲೆಟ್ ಸೌಲಭ್ಯಗಳನ್ನು ನೀಡಿದೆ. BLOಗಳು ಮನೆ ಮನೆಗೆ ಹೋಗಿ ಗುರುತು ಚೀಟಿ ನೀಡಲು ಆದೇಶ ಮಾಡಿದೆ. No Voter to be Left Behind ಎಂಬ ಘೋಷಣಾ ವಾಕ್ಯದಡಿಯಲ್ಲಿ ಅವಿರತ ಜಾಗೃತಿ ಕೆಲಸಗಳು ಆಗಿವೆ. ಯಕ್ಷಗಾನ, ಬೀದಿ ನಾಟಕ ಮೊದಲಾದ ಮಾಧ್ಯಮಗಳು ಕೂಡ ಬಳಕೆ ಆಗಿವೆ. ಆದರೂ ಕೆಲವು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ ಎನ್ನುವುದು ನೋವಿನ ಸಂಗತಿ.

rajamarga column voting 1

31 ರಾಷ್ಟ್ರಗಳಲ್ಲಿ ಕಡ್ಡಾಯ ಮತದಾನ ಇದೆ!

ಈ ರಾಷ್ಟ್ರಗಳಲ್ಲಿ ಹೆಚ್ಚಿನವು ಡೆಮಾಕ್ರಟಿಕ್ ರಾಷ್ಟ್ರಗಳೇ ಆಗಿವೆ. ಆದರೆ ಅಲ್ಲಿ ಕಡ್ಡಾಯ ಮತದಾನದ ಕಾನೂನು ಜಾರಿಯಲ್ಲಿದೆ. ಮತ ಹಾಕದವರಿಗೆ ಕಾರಣ ಕೇಳುವ ನೋಟೀಸ್ ಸರಕಾರ ಜಾರಿ ಮಾಡುವುದರಿಂದ ಹಿಡಿದು, ದಂಡ ವಿಧಿಸುವ, ಸರಕಾರದ ಸೌಲಭ್ಯಗಳನ್ನು ತಡೆಹಿಡಿಯುವ ಕಾನೂನು ಇವೆ. ಬೆಲ್ಜಿಯಂ, ಆಸ್ಟ್ರೇಲಿಯ, ಆಸ್ಟ್ರಿಯಾ, ಅರ್ಜೆಂಟೀನ, ಬೊಲಿವಿಯಾ, ಯುಕ್ರೇನ್, ಬ್ರೆಜಿಲ್, ಈಜಿಪ್ಟ್, ಗ್ರೀಸ್, ಇಟಲಿ, ಮೆಕ್ಸಿಕೊ, ಫಿಲಿಫೈನ್ಸ್, ಸಿಂಗಾಪುರ, ಥೈಲ್ಯಾಂಡ್, ಟರ್ಕಿ, ಸ್ವಿಜರ್ಲ್ಯಾಂಡ್….ಮೊದಲಾದ ರಾಷ್ಟ್ರಗಳು ಕಡ್ಡಾಯ ಮತದಾನದ ಕಾನೂನು ಹೊಂದಿವೆ. ಪರಿಣಾಮವಾಗಿ ಅಲ್ಲಿ ಬಲಿಷ್ಠ ಸರಕಾರಗಳು ಆರಿಸಿ ಬರುತ್ತವೆ ಮತ್ತು ಜನರ ಜೀವನಮಟ್ಟ ತುಂಬಾ ಸುಧಾರಣೆ ಆಗಿದೆ.

ಬೆಲ್ಜಿಯಂ ಮಾದರಿ

ಅಲ್ಲಿ ಮೊದಲ ಬಾರಿಗೆ ಮತದಾನ ಮಾಡದಿದ್ದರೆ 4,000 ಯುರೋ ದಂಡ ಸರಕಾರ ವಿಧಿಸುತ್ತದೆ. ಎರಡನೇ ಬಾರಿಗೆ ಮತದಾನ ಮಾಡದಿದ್ದರೆ 10,000 ಯುರೋ ದಂಡ ಕಟ್ಟಬೇಕು. ಎಲ್ಲ ಸರಕಾರಿ ಸೌಲಭ್ಯಗಳು ಅವರಿಗೆ ಕಡಿತ ಆಗುತ್ತವೆ. 4 ಬಾರಿ ಮತದಾನಕ್ಕೆ ಬಾರದಿದ್ದರೆ ಅವರ ಹೆಸರು ಮತದಾನ ಪಟ್ಟಿಯಲ್ಲಿ ಕಡಿತ ಆಗುತ್ತದೆ.

ಬೊಲಿವಿಯಾ ಮಾದರಿ

ಈ ರಾಷ್ಟ್ರವು ಮತದಾನ ಮಾಡುವರಿಗೆ ಒಂದು ಗುರುತು ಚೀಟಿ ನೀಡುತ್ತದೆ. ಅವರಿಗೆ ಮಾತ್ರ ರೇಶನ್ ಸೌಲಭ್ಯ, ವಿದ್ಯುತ್, ವಸತಿ, ಇತರ ಸರಕಾರಿ ಸೌಲಭ್ಯಗಳು ದೊರೆಯುತ್ತವೆ. ಸರಕಾರಿ ನೌಕರರು ಮತದಾನಕ್ಕೆ ಬಾರದಿದ್ದರೆ ಅವರಿಗೆ ವೇತನ ಕಡಿತ ಆಗುತ್ತದೆ.

ಆಸ್ಟ್ರೇಲಿಯ ಮಾದರಿ

ಈ ದೇಶದಲ್ಲಿ ಶಕ್ತಿಶಾಲಿ ಡೆಮಾಕ್ರಟಿಕ್ ಸರಕಾರ ಇದೆ. ಮತದಾನ ಕಡ್ಡಾಯ ಕಾನೂನು ಇದೆ. ಮತದಾನದ ಪ್ರಮಾಣ ಅಲ್ಲಿ 96%ಕ್ಕಿಂತ ಕೆಳಗೆ ಬಂದದ್ದೇ ಇಲ್ಲ!

ಗ್ರೀಸ್ ಮಾದರಿ

ಅಲ್ಲಿ ಮತದಾನ ಮಾಡದಿದ್ದರೆ ಸರಕಾರ ನಾಗರಿಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುತ್ತದೆ. ತೃಪ್ತಿಕರವಾದ ಉತ್ತರ ಬಾರದೆ ಹೋದರೆ ಡ್ರೈವಿಂಗ್ ಲೈಸೆನ್ಸ್ ಮತ್ತು ಪಾಸ್ಪೋರ್ಟ್ ರದ್ದು ಆಗುತ್ತದೆ.

ಸಿಂಗಾಪುರ ಮಾದರಿ

ಇಲ್ಲಿ ಬಲಿಷ್ಟವಾದ ಸರಕಾರ ಇದೆ. ಮತದಾನ ಮಾಡದವರಿಗೆ ಕಾರಣ ಕೇಳಿ ನೋಟಿಸ್ ನೀಡಿದ ನಂತರ ತೃಪ್ತಿಕರ ಉತ್ತರ ಬಾರದಿದ್ದರೆ ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಲಾಗುತ್ತದೆ.

ಅಮೇರಿಕಾ ಮಾದರಿ

ಇಲ್ಲಿ ಯಾವುದೇ ಕಡ್ಡಾಯ ಕಾನೂನು ಇಲ್ಲ. ವೋಟಿಂಗ್ ದಿನ ರಜೆಯು ಕೂಡ ಇಲ್ಲ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮತದಾನ ಕೇಂದ್ರಗಳು ತೆರೆದಿರುತ್ತವೆ. ಅಲ್ಲಿ ಮತದಾನದ ಪ್ರಮಾಣವು ಉತ್ತಮವಾಗಿಯೇ ಇದೆ.

ಭಾರತದಲ್ಲಿ ಕಡ್ಡಾಯ ಮತದಾನದ ಕಾನೂನು ಜಾರಿಗೆ ಬರಲಿ ಮತ್ತು ಸುಸ್ಥಿರ ಸರಕಾರಗಳು ಆರಿಸಿಬರಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆ ಆಗಬೇಕು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್- ಆಯ್ಕೆ ಮಂಡಳಿ ನಿರ್ಧಾರ ಸರಿ ಇದೆಯೇ?

Continue Reading
Advertisement
Driving Tips
ಕ್ರೈಂ5 mins ago

Driving Tips: ವಾಹನ ಚಾಲನೆ ಮಾಡುತ್ತಿರುವಾಗ ಪ್ರಾಣಿಗಳಿಂದಾಗುವ ಅಪಘಾತ ತಪ್ಪಿಸಿಕೊಳ್ಳುವುದು ಹೇಗೆ?

Online scams
Latest12 mins ago

Online scams: ಹೆರಿಗೆ ರಜೆಯಲ್ಲಿದ್ದಾಗ ದುಡ್ಡು ಸಂಪಾದಿಸಲು ಹೋಗಿ 54 ಲಕ್ಷ ರೂ. ಕಳೆದುಕೊಂಡಳು!

Alamgir Alam
ದೇಶ25 mins ago

Alamgir Alam: ಮನೆಗೆಲಸದವನ ಮನೆಯಲ್ಲಿ 35 ಕೋಟಿ ರೂ. ಪತ್ತೆ; ಜಾರ್ಖಂಡ್‌ ಸಚಿವ ಆಲಂ ಬಂಧನ

IPL 2024
ಕ್ರೀಡೆ36 mins ago

IPL 2024: ಆರ್​ಸಿಬಿ ಪಂದ್ಯದ ವೇಳೆ ಕಳಪೆ ಆಹಾರ ವಿತರಣೆ: ಕೆಎಸ್​ಸಿಎ ವಿರುದ್ಧ ಎಫ್ಐಆರ್

Prajwal Revanna Case Prajwal Revanna loses X recognition in Obscene Video case
ರಾಜಕೀಯ36 mins ago

Prajwal Revanna Case: ಸೆಕ್ಸ್‌ ಕೇಸಲ್ಲಿ ಎಕ್ಸ್‌ ಮಾನ್ಯತೆ ಕಳೆದುಕೊಂಡ ಪ್ರಜ್ವಲ್‌ ರೇವಣ್ಣ!

SBI Rates
ವಾಣಿಜ್ಯ1 hour ago

SBI Rates: ಎಸ್‌ಬಿಐನಲ್ಲಿ ಎಫ್‌ಡಿ ಇಟ್ಟವರಿಗೆ ಬಂಪರ್‌ ನ್ಯೂಸ್;‌ ಭಾರಿ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್!

EPF Withdrawal Rule
ಮನಿ ಗೈಡ್1 hour ago

EPF Withdraw Rule: ಪಿಎಫ್‌ ಮುಂಗಡ ಹಣ ಪಡೆಯುವುದು ಈಗ ಮತ್ತಷ್ಟು ಸುಲಭ; ಹೊಸ ಬದಲಾವಣೆಯ ಸಂಪೂರ್ಣ ಮಾಹಿತಿ

IND vs AUS Test
ಕ್ರೀಡೆ2 hours ago

IND vs AUS Test: ಈ ಬಾರಿಯ ಬಾರ್ಡರ್– ಗಾವಸ್ಕರ್ ಟೆಸ್ಟ್​ ಸರಣಿಯಲ್ಲಿ ಭಾರತೀಯರಿಗೆ ಸಿಗಲಿದೆ ವಿಶೇಷ ಆಸನ ವ್ಯವಸ್ಥೆ

Karnataka Weather
ಕರ್ನಾಟಕ2 hours ago

Karnataka Weather: ಇಂದು, ನಾಳೆ ಗುಡುಗು, ಮಿಂಚು ಸಹಿತ ಭಾರಿ ಮಳೆ; ಉತ್ತರ ಒಳನಾಡಿನಲ್ಲಿ ಆರೆಂಜ್ ಅಲರ್ಟ್

Amit Shah
ದೇಶ2 hours ago

Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ13 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ15 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ1 day ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌