ತ್ರಯಸ್ಥ ಅಂಕಣ | ಮೋದಿಯಿಸಂನ ಉಚ್ಛ್ರಾಯ ಕಾಲದಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು? - Vistara News

ಅಂಕಣ

ತ್ರಯಸ್ಥ ಅಂಕಣ | ಮೋದಿಯಿಸಂನ ಉಚ್ಛ್ರಾಯ ಕಾಲದಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

ಮೋದಿ ದೇಶಭಕ್ತ, ಬಿಜೆಪಿ ಧರ್ಮನಿಷ್ಠ, ಸಂಘಪರಿವಾರ ಧ್ಯೇಯನಿಷ್ಠ ಅಂತ ಸಾವಿರ ಹೇಳಿದರೂ, ಇವರ ಮೂಗಿನಡಿಯಲ್ಲೇ ಆಪರೇಷನ್ ಕಮಲದಂಥಾ ಪ್ರಜಾಪ್ರಭುತ್ವ ವಿರೋಧಿ ಪ್ರಕರಣಗಳು ನಡೆಯುತ್ತಿವೆ ಎಂಬುದನ್ನು ಮರೆಯಬಾರದು.

VISTARANEWS.COM


on

trayastha column
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
nityananda column

ಮತ್ತೊಂದು ಸುತ್ತಿನ ಹೋರಾಟಕ್ಕೆ ಅಖಾಡ ಸಿದ್ಧವಾಗುತ್ತಿದೆ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎಂದು ನಿರ್ಧರಿಸುವ ಲೋಕಸಭಾ ಚುನಾವಣೆಗೆ ಇನ್ನೂ ಹಲವು ತಿಂಗಳುಗಳು ಬಾಕಿ ಉಳಿದಿದ್ದರೂ, ಅದಕ್ಕೆ ವೇದಿಕೆ ಸಿದ್ಧಪಡಿಸುವ ಕಾರ್ಯಕ್ಕೆ ಎಲ್ಲ ಪಕ್ಷಗಳೂ ಚಾಲನೆ ಕೊಟ್ಟುಬಿಟ್ಟಿವೆ. ಅತ್ತ ಕಾಂಗ್ರೆಸ್ ಮೋದಿಯನ್ನು ವಿರೋಧಿಸುವುದನ್ನೇ ಏಕೈಕ ಅಜೆಂಡಾ ಮಾಡಿಕೊಂಡು ʻಭಾರತ್‌ ಜೋಡೊʼ ಯಾತ್ರೆಯ ಹೆಸರಿನಲ್ಲಿ ಮುಂದಿನ ಚುನಾವಣೆಗೆ ಸಿದ್ಧವಾಗುತ್ತಿದ್ದರೆ, ಇತ್ತ ಬಿಜೆಪಿ ʻಅಭಿವೃದ್ಧಿ ಮತ್ತು ರಾಷ್ಟ್ರೀಯತೆಯೇ ನಮ್ಮ ಚುನಾವಣಾ ವಿಷಯʼ ಅಂತ ಬಾಯಲ್ಲಿ ಹೇಳುತ್ತಿದ್ದರೂ ತನ್ನ ಸಾಂಪ್ರದಾಯಿಕ ʻಚುನಾವಣಾ ಹಿಂದುತ್ವʼದ ಅಜೆಂಡಾದಿಂದ ಈ ಬಾರಿಯೂ ದೂರ ಸರಿಯುವಂತೆ ಕಾಣುತ್ತಿಲ್.‌ ಹೀಗಾಗಿ ಮುಂದಿನ ಚುನಾವಣೆಯ ವಿಷಯವೂ ʻಧರ್ಮ ದಂಗಲ್’ ಆಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಇತ್ತೀಚಿನ ಜ್ಞಾನವಾಪಿ ಮಸೀದಿಯ ಕುರಿತಾದ ವಾರಣಾಸಿ ಕೋರ್ಟ್‌ನ ತೀರ್ಪು ಸಹಾ ಮುಂದಿನ ಚುನಾವಣಾ ಭವಿಷ್ಯದ ಹಣೆಬರಹವನ್ನು ಅದಾಗಲೇ ನಿರ್ಧರಿಸಿರುವಂತೆ ಕಾಣುತ್ತದೆ. ಏಕೆಂದರೆ ಈ ತೀರ್ಪಿನ ಆಧಾರದ ಮೇಲೆ ಇದರ ನಂತರ ಮಥುರಾ ಸೇರಿದಂತೆ ಹಲವು ಮಂದಿರಗಳು ವಿಮೋಚನಾ ಹೋರಾಟಕ್ಕೆ ಸಾಕ್ಷಿಯಾಗಲಿವೆ.

ಭಾರತ ದೇಶವು ಬ್ರಿಟಿಷರ ವಿರುದ್ಧ ಹೋರಾಡಿ ನಲವತ್ತೇಳರಲ್ಲಿ ಸ್ವಾತಂತ್ರ್ಯ ಪಡೆದರೂ, ದೇಶ ವಿಭಜನೆಯೆಂಬ ಕರಾಳ ಘಟನೆಯು ದೇಶವಾಸಿಗಳ ಮನಸ್ಸಿನಲ್ಲಿ ಮಾಯದ ಗಾಯವನ್ನು ಸೃಷ್ಟಿಸಿತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸಲ್ಮಾನರ ಆಕ್ರಮಣಕಾರಿ ವರ್ತನೆಯಿಂದಾಗಿ ಕಾಲಕ್ರಮೇಣ ಹಿಂದೂ ನಶಿಸಿಹೋಗುವ ಹಂತಕ್ಕೆ ಬಂದರೆ, ಭಾರತದಲ್ಲಿ‌ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಮುಸಲ್ಮಾನರ ಜನಸಂಖ್ಯೆ ಬೆಳೆಯುತ್ತಲೇ ಹೋಯಿತು. ಖಿಲಾಫತ್ ಚಳುವಳಿಯ ಸಂದರ್ಭದಲ್ಲಿ ಗಾಂಧಿಯವರು ಹಾಕಿಕೊಟ್ಟ ಮಾರ್ಗದಂತೆಯೇ, ನೆಹರೂ ನೇತೃತ್ವದಲ್ಲಿ ಮತ್ತಿತರ ಹಿರಿಯ ನಾಯಕರೂ ಅಲ್ಪಸಂಖ್ಯಾತರ ತುಷ್ಟೀಕರಣದ ಪರಮಾವಧಿ ತಲುಪಿದ್ದರಿಂದ ನ್ಯಾಯಯುತವಾಗಿ ಹಿಂದುವಿಗೆ ಸಿಗಬೇಕಾಗಿದ್ದ ಗೌರವ ಘನತೆ ಈ ದೇಶದಲ್ಲಿ ಲಭಿಸಲೇ ಇಲ್ಲ. ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣದ ಕಾರಣದಿಂದ ನಡೆದ ಅಲ್ಪಸಂಖ್ಯಾತರ ಈ ರೀತಿಯ ನಿರಂತರ ಓಲೈಕೆಯು ಬಹುಸಂಖ್ಯಾತ ಹಿಂದುಗಳನ್ನು ಅಸಂತುಷ್ಟರನ್ನಾಗಿ‌ ಮಾಡಿತು. ಇದರ ಲಾಭವನ್ನು ಪಡೆದ ಬಿಜೆಪಿ ರಾಮಜನ್ಮಭೂಮಿ ರಥ ಯಾತ್ರೆಯ ಅಸ್ತ್ರವನ್ನು ಉಪಯೋಗಿಸಿ ಹಿಂದುಗಳನ್ನು ಒಗ್ಗೂಡುವಂತೆ ಮಾಡಿ ಅಧಿಕಾರದ ಗಾದಿಯನ್ನು ಏರಿತು. ಇದರ ಹಿಂದೆ ಹಿಂದೂ ರಾಷ್ಟ್ರ ಮತ್ತು ಅಖಂಡ ಭಾರತದ ಕಲ್ಪನೆಯನ್ನು ಪ್ರತಿಪಾದಿಸುವ ಸಂಘಪರಿವಾರದ ಪಾತ್ರ ಬಹಳ ಮುಖ್ಯವಾಗಿರುವುದು ಸರ್ವರಿಗೂ ತಿಳಿದ ಸಂಗತಿಯೇ‌.

ವಿಶ್ವದೆಲ್ಲೆಡೆಯ ಹಿಂದುಗಳನ್ನು ಸಂಘಟಿಸುವುದನ್ನೇ ತನ್ನ ಗುರಿಯಾಗಿಸಿಕೊಂಡಿರುವ ಬೃಹತ್ ಸರ್ಕಾರೇತರ ಸಂಘಟನೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದರ ರಾಜಕೀಯ ಆವೃತ್ತಿಯಾದ ಜನಸಂಘದಿಂದ ಮೊಟ್ಟೆಯ ರೂಪದಲ್ಲಿ ಆರಂಭವಾದ ಹಿಂದುವಿನ ರಾಜಕೀಯ ಯಾತ್ರೆಯು ತುರ್ತು ಪರಿಸ್ಥಿತಿಯ ಬಂಡಾಯದ ಕಾವಿನಲ್ಲಿ ಒಡೆದು ಮರಿಯಾಗಿ, ಮುಂದೆ ಬಿಜೆಪಿ ಎಂಬ ಹೆಸರಿನಿಂದ ರೂಪಾಂತರಗೊಂಡು, ಆಡ್ವಾಣಿಯವರ ಮೂಲಕ ರಾಮನ ಹೆಸರಿನಲ್ಲಿ ರೆಕ್ಕೆಯನ್ನು ಪಡೆದು, ನಂತರ ವಾಜಪೇಯಿಯವರ ಕಾಲದಲ್ಲಿ ಕಾರ್ಗಿಲ್ ಯುದ್ಧದ ಬಿಸಿಯಲ್ಲಿ ಹಾರಾಟದ ಅನುಭವ ಗಳಿಸಿ, ರಾಜಕೀಯದ ಖುರ್ಚಿಯಾಟದಲ್ಲಿ ಜಾಗ ಗಟ್ಟಿ ಮಾಡಿಕೊಂಡು, ಇಂದು ಮೋದಿ ಎಂಬ ಹೆಸರಿನ ಸುನಾಮಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಬೆಳೆದು‌ ನಿಂತು, ಅಧಿಕಾರದ ಗಾದಿಯಲ್ಲಿ ಹಿಂದೆಂದಿಗಿಂತಲೂ ಪ್ರಬಲವಾಗಿ ಕುಳಿತು, ಹದ್ದಿನಂತೆ ಮೋಡಗಳ ಮೇಲೆ ಹಾರುವವರೆಗೂ ಬಂದು ನಿಂತಿದೆ. ಮುಂದೆಯೂ ಅನೇಕ ವರ್ಷಗಳ ಕಾಲ ಅಧಿಕಾರದ ಗಾದಿಯಲ್ಲಿ ಕೂರುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿದೆ. ವಿಪಕ್ಷಗಳ ಒಗ್ಗಟ್ಟಿನ ಕೊರತೆ, ವಿರೋಧಿ ನಾಯಕರ ಗೊತ್ತು ಗುರಿ ಇಲ್ಲದ ಪೇಲವ ಟೀಕೆಗಳು, ಬಿಜೆಪಿ ಸಮಯ ನೋಡಿ ಬಿಡುವ ಧರ್ಮಾಸ್ತ್ರ, ಇಳಿಯದ ಮೋದಿ ನಾಮ ಬಲದ ಜನಪ್ರಿಯತೆಯು, ಮುಂದಿನ ಬಾರಿಯೂ ಮೋದಿಯೇ ಎನ್ನುವ ಸೂಚನೆಯನ್ನು ನೀಡುತ್ತಿವೆ. ಬೆಲೆ ಏರಿಕೆ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ, ಮತ್ತು ಅಲ್ಪಸಂಖ್ಯಾತರ ಧ್ರುವೀಕರಣವು ಬಿಜೆಪಿಯ ಜನಪ್ರಿಯತೆಗೆ ಲಗಾಮು ಹಾಕುತ್ತಿದ್ದರೂ, ಅದು ಕಮಲ ಪಕ್ಷದ ಚುನಾವಣೆಯ ಅಶ್ವಮೇಧದ ನಾಗಾಲೋಟಕ್ಕೆ ತಡೆ ಹಾಕುವಲ್ಲಿ ಸಫಲವಾಗುವ ಲಕ್ಷಣಗಳು ದೊಡ್ಡ ಪ್ರಮಾಣದಲ್ಲಿ ಕಾಣುತ್ತಿಲ್ಲ. ಮೋದಿ ಮತ್ತು ಬಿಜೆಪಿ ಇದರಿಂದ ನಾವೇ ಏಕಮೇವ ಅದ್ವಿತೀಯ ಎಂದು ಖುಷಿಪಡುತ್ತಿದ್ದರೂ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದರ ಪರಿಣಾಮವೇನಾಗಬಹುದು ಎಂಬುದನ್ನು ಚಿಂತನೆ ನಡೆಸುವುದು ಎರಡೂ‌ ಪಕ್ಷಗಳಿಗೆ ಸೇರದೇ, ಎಲ್ಲರಿಂದ ಸಮಾನ ಅಂತರ ಕಾಯ್ದುಕೊಂಡು ಮೂರನೆಯವರಾಗಿ ನಿಂತವರ ಆದ್ಯತೆಯಾಗುತ್ತದೆ.

Modi Varanasi

ಮೋದಿ ಮತ್ತು ಬಿಜೆಪಿ ಹಿಂದೆಂದಿಗಿಂತಲೂ ಇಂದು ಬಹಳ ಪ್ರಬಲವಾಗಿದ್ದರೂ ಭಾರತದ ಪ್ರಜಾಪ್ರಭುತ್ವದ ಇತಿಹಾಸಕ್ಕೆ ಈ ರೀತಿಯ ಸಂದರ್ಭ ಹೊಸದೇನೂ ಅಲ್ಲ. ಹಿಂದೆ ನೆಹರೂ ಮತ್ತು ಕಾಂಗ್ರೆಸ್ ಹಾಗೂ ಇಂದಿರಾ ಮತ್ತು ಕಾಂಗ್ರೆಸ್ ಇದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ದೇಶದ ಮೇಲೆ ಹಿಡಿತ ಸಾಧಿಸಿದ್ದವು. ನೆಹರೂ ಅಂತೂ “ತನ್ನ ನಂತರ ಯಾರು?” ಎಂದು ಪತ್ರಿಕೆಗಳಲ್ಲಿ ಪ್ರಶ್ನೆ ಹುಟ್ಟುವಂತೆ ನೋಡಿಕೊಂಡು, “ಯಾರೂ ಇಲ್ಲ!” ಎನ್ನುವ ಉತ್ತರ ಬರುವುದನ್ನು‌ ಕೇಳಿ ಆನಂದಿಸುತ್ತಿದ್ದರೆ, ಇಂದಿರಾ ಗಾಂಧಿಯವರು ಇನ್ನೂ‌ ಒಂದು ಹೆಜ್ಜೆ ಮುಂದೆ ಹೋಗಿ “ಇಂಡಿಯಾ ಅಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾ” ಎನ್ನುವವರೆಗೂ ವ್ಯಕ್ತಿ ಪೂಜೆಯ ಪರಮಾವಧಿಯನ್ನು ಮುಟ್ಟಿಸಿದ್ದರು. ಅದರ ಪರಿಣಾಮವಾಗಿ ಸ್ವಾತಂತ್ರ್ಯಾನಂತರ ಬೃಹತ್ ದೇಶ ಭಾರತವನ್ನು ಸಂಭಾಳಿಸಿದ ನೆಹರೂನಂತ ನೆಹರೂರವರೇ 1962ರ ಚೈನಾ ಯುದ್ಧದ ಹೀನಾಯ ಸೋಲಿಗೂ ಕಾರಣಕರ್ತರಾಗುತ್ತಾರೆ. ಬಾಂಗ್ಲಾದೇಶ ಸೃಷ್ಟಿಯ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೇಗೆ ಇಂದಿರಾಗಾಂಧಿಯವರಿಗೆ ರಾಜಕೀಯ ಶಕ್ತಿ ತಂದು ಕೊಟ್ಟಿತೋ, ಅದೇ ರೀತಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರುವ ನಿರ್ಧಾರವನ್ನೂ ಸಹಾ ಇದೇ ಶಕ್ತಿ ಅವರಿಗೆ ನೀಡಿತು. ಇಂದು ಸಹಾ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಮೋದಿಯವರು ಪ್ರತಿ ದಿನ ಅಧಿಕಾರದ ಖುರ್ಚಿಯ ಮೇಲೆ ಇನ್ನಷ್ಟು ಮತ್ತಷ್ಟು ಪ್ರಬಲವಾಗಿ ಕುಳಿತುಕೊಳ್ಳುತ್ತಿದ್ದಾರೆ. ಅವರ ಪ್ರಾಬಲ್ಯ ಇಂದಿರಾ ಮತ್ತು ನೆಹರೂರನ್ನು ಮೀರಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಇದರ ಪರಿಣಾಮವೇನಾಗಬಹುದು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಎಲ್ಲಿಯವರೆಗೂ ಎಲ್ಲವೂ ಸರಿಯಾಗಿರುತ್ತದೆಯೋ ಅಲ್ಲಿಯವರೆಗೂ ಸಮಸ್ಯೆ ಕಾಣುವುದಿಲ್ಲ. ಆದರೆ ಯಾವಾಗ ಅಧಿಕಾರ ಕಳೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತದೆಯೋ ಎನು ಬೇಕಾದರೂ ಮಾಡಿ ಯಾವ ಬೆಲೆಯನ್ನು ತೆತ್ತಾದರೂ ಸರಿ ಅಧಿಕಾರವನ್ನು ಉಳಿಸಿಕೊಳ್ಳುವ ಭಂಡತನ ಸೃಷ್ಟಿಯಾಗಿಬಿಡುತ್ತದೆ. ಮೋದಿ ದೇಶಭಕ್ತ, ಬಿಜೆಪಿ ಧರ್ಮನಿಷ್ಠ, ಸಂಘಪರಿವಾರ ಅಧಿಕಾರದ ಆಸೆಯನ್ನು ತೊರೆದಿರುವ ಧ್ಯೇಯನಿಷ್ಠ ಅಂತ ಸಾವಿರ ಹೇಳಿದರೂ, ಇದೇ ಸಂಘ, ಪಕ್ಷ ಮತ್ತು ಮೋದಿಯವರ ಮೂಗಿನಡಿಯಲ್ಲೇ ಆಪರೇಷನ್ ಕಮಲದಂಥಾ ಪ್ರಜಾಪ್ರಭುತ್ವ ವಿರೋಧಿ ಪ್ರಕರಣಗಳು ನಡೆಯುತ್ತಿವೆ ಎಂಬುದನ್ನು ಮರೆಯಬಾರದು. ಕೇವಲ‌ ಒಂದು ವೋಟಿಗಾಗಿ ಕುದುರೆ ವ್ಯಾಪಾರ ಮಾಡಲು ಬಯಸದೇ ಅಧಿಕಾರ ತ್ಯಾಗ ಮಾಡಿದ ವಾಜಪೇಯಿಯವರ ತತ್ವ ಸಿದ್ಧಾಂತಗಳು ಇಂದಿಗೂ ಬಿಜೆಪಿಯಲ್ಲಿ ಉಳಿದಿದೆ ಎಂದು ಧೈರ್ಯವಾಗಿ ಹೇಳಬಲ್ಲ ಖಂಡಿತವಾದಿಗಳು ಇಂದು ಯಾರೂ ಉಳಿದಿಲ್ಲ. ಹೀಗಾಗಿ ಸಮಕಾಲೀನ ರಾಜಕೀಯ ಪರಿಸ್ಥಿತಿಯನ್ನು ಸ್ವಲ್ಪ ಗಂಭೀರವಾಗಿ ಯೋಚಿಸಿ ವಿಶ್ಲೇಷಣೆ ಮಾಡುವ ಅವಶ್ಯಕತೆಯಿದೆ.

ಮೋದಿಯವರ ಆಡಳಿತದಲ್ಲಿ ದೇಶ ಹಿಂದೆಂದೂ ಮುಟ್ಟದ ಭವ್ಯ ಶಿಖರದೆತ್ತರಕ್ಕೆ ಮುಟ್ಟುತ್ತಿರುವುದೇನೋ ನಿಜ. ಸ್ವಾಭಿಮಾನ ಮತ್ತು ಸ್ವಾವಲಂಬನೆಯ ದೃಷ್ಟಿಯಲ್ಲಿ ಭಾರತವು ಜಗತ್ತಿನೊಂದಿಗೆ ದೊಡ್ಡ ಮಟ್ಟದ ಪೈಪೋಟಿ ನಡೆಸುತ್ತಿದೆ. ದೇಶದ ಸೇನೆಯು ಹೊಸ ಶಕ್ತಿಯನ್ನು ಗಳಿಸುತ್ತಿದೆ. ಅಂತಾರಾಷ್ಟ್ರೀಯ ಸಂಬಂಧಗಳು ಹೊಸ ಎತ್ತರಗಳನ್ನು ಮುಟ್ಟುತ್ತಿವೆ, ವಿಶ್ವ ಭೂಪಟದಲ್ಲಿ ಭಾರತ ನಾಯಕನ‌ ಸ್ಥಾನ ಪಡೆಯುತ್ತಿದೆ. ರಾಷ್ಟ್ರೀಯ ಯೋಜನೆಗಳು ಜನಸಾಮಾನ್ಯರನ್ನು ತಲುಪುತ್ತಿವೆ‌. ಸಾರಿಗೆ ಸಂಪರ್ಕ ಸುಧಾರಿಸುತ್ತಿದೆ. ಇದರ ಜೊತೆಗೆ ಜನಸಾಮಾನ್ಯರೂ ದೇಶದ ಪ್ರಗತಿಯಲ್ಲಿ ತಮ್ಮ ಪಾತ್ರವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಲ್ಲೂ ರಾಷ್ಟ್ರೀಯತೆಯ ಭಾವನೆಗಳು ಪ್ರಬಲವಾಗುತ್ತಿವೆ. ಇನ್ನೂ ಹತ್ತು ಹಲವು ಮಹತ್ವದ ಬದಲಾವಣೆಗಳು ಜರುಗುತ್ತಿವೆ. ಆದರೆ ಇದೆಲ್ಲದರ ಹೊರತಾಗಿಯೂ ಕೆಲವು ದೂರಗಾಮಿ ಅಪಾಯದ ಸಾಧ್ಯತೆಗಳು ಸದ್ದಿಲ್ಲದೇ ಬೆಳೆಯುತ್ತಿವೆ. ಅದರ ಲಕ್ಷಣಗಳೆಂದರೆ ವ್ಯಕ್ತಿ ಪೂಜೆ, ಅಧಿಕಾರ ಕೇಂದ್ರಿತ ರಾಜಕಾರಣ, ಉದ್ಯಮಿಗಳ ಓಲೈಕೆ, ಏಕಪಕ್ಷೀಯ ನಿರ್ಧಾರಗಳು, ಜನಸಾಮಾನ್ಯನ ನಿರ್ಲಕ್ಷ್ಯ, ತಗ್ಗಿದ ಮಾಧ್ಯಮಗಳ ಬಲ, ಕುಸಿದ ವಿರೋಧ ಪಕ್ಷಗಳ ಸತ್ವ, ಹಿಂದುತ್ವದ ರಾಜಕೀಯಕರಣ, ಇತ್ಯಾದಿಗಳು. ಇದರ ಬಗ್ಗೆ ಒಂದಷ್ಟು ವಿಶ್ಲೇಷಣೆಯನ್ನು ಗಮನಿಸೋಣ.

1. ವ್ಯಕ್ತಿ ಪೂಜೆ : ಮೋದಿ ಎಂಬ ಹೆಸರು ಇಂದು ಕೇವಲ ಹೆಸರಾಗಿ ಉಳಿದಿಲ್ಲ. ಹಿಂದೆ ಗಾಂಧಿ, ನೆಹರೂ, ಇಂದಿರಾರಿಗಿದ್ದಂಥಾ ಹೆಸರಿನ ವರ್ಚಸ್ಸೇ ಈಗ ಮೋದಿ ಅನ್ನುವ ಹೆಸರಿಗೂ ಬಂದು ಬಿಟ್ಟಿದೆ. ಮೋದಿ ನಾಮ ಬಲಕ್ಕೆ ಇಂದು ರಾಜ್ಯಗಳನ್ನು ಉದಿಸುವ ರಾಜ್ಯಗಳನ್ನು ಅಳಿಸುವಷ್ಟು ಶಕ್ತಿ ಬಂದಿದೆಯೆಂದರೆ ಅದು ಅತಿಶಯೋಕ್ತಿಯಲ್ಲ. ಮೋದಿಯ ಹೆಸರು ಇಂದು ಬೆಂಗಳೂರಿನ ತೇಜಸ್ವಿ ಸೂರ್ಯನಂಥಾ ಚಿಕ್ಕ ಹುಡುಗನನ್ನು ಸಂಸತ್ತಿಗೆ ಕಳುಹಿಸಿದ ಹಾಗೆಯೇ ಪಕ್ಷವನ್ನು ಕಟ್ಟಿ ಬೆಳೆಸಿದ ಬಿಜೆಪಿಯ ಭೀಷ್ಮ ಎಂದು ಕರೆಸಿಕೊಳ್ಳುವ ಅಡ್ವಾಣಿಯಂಥಾ ಹಿರಿಯರನ್ನೇ ಮನೆಗೆ ಕಳುಹಿಸುವಷ್ಟು ಪ್ರಬಲವಾಗಿ ಬೆಳೆದು ನಿಂತಿದೆ. ಕೇವಲ ನಾಮವೊಂದಕ್ಕೆ ಈ ಶಕ್ತಿ ಬರುವುದು ರಾಷ್ಟ್ರ ಹಾಗೂ ಪ್ರಜಾಪ್ರಭುತ್ವದ ದೃಷ್ಟಿಯಿಂದ ಅನುಕೂಲವೂ ಹೌದು ಅಪಾಯಕಾರಿಯೂ ಹೌದು. ಇದೊಂದು ರೀತಿ ಬ್ರಹ್ಮಾಸ್ತ್ರದಂತೆ ಬಹು ಶಕ್ತಿಶಾಲಿ. ಉಪಯೋಗಿಸುವವರು ಯಾರು ಎಂಬುದರ ಮೇಲೆ ಅದರ ಪರಿಣಾಮ ನಿರ್ಧರಿಸಲ್ಪಡುತ್ತದೆ. ಮೋದಿ ದೇವರಂಥವರು ಅನ್ನುವ ಬಿಜೆಪಿ ಕಾರ್ಯಕರ್ತರ ಭಾವನೆಯನ್ನೇ ಒಪ್ಪಿಕೊಂಡರೂ, ಗಾಂಧಿ ನಾಮ ಬಲವನ್ನು ಹೇಗೆ 75 ವರ್ಷ ಚುನಾವಣೆಯಲ್ಲಿ ಇತರರು ಹೇಗೆ ಹೇಗೆ ಬಳಸಿಕೊಂಡರು, ಇನ್ನೂ ಹೇಗೆ ಬಳಸಿಕೊಳ್ಳುತ್ತಿದ್ದಾರೆ, ಮುಂದೆಯೂ ಬಳಸಿಕೊಳ್ಳುವ ಸಾಧ್ಯತೆ ಹೇಗಿದೆ ಎಂಬುದನ್ನು ನಾವು ಕಣ್ಣಾರೆ ನೋಡಿದ್ದೇವೆ, ನೋಡುತ್ತಿದ್ದೇವೆ, ಮುಂದೆಯೂ ನೋಡಲಿದ್ದೇವೆ.

150 minutes program chart, bengaluru, BJP Karnataka, india, karnataka, kateel change, kateel mela, latest, Major projects to be launched, Mangalore programme, Modi in Mangalore, modi in mangaluru, Nalin Kumar Kateel, narendra modi, narendra Modi in Mangaluru, Narendra Modi News, prime minister, Prime minister Narendra modi

ಇದೇ ಮಾದರಿಯಲ್ಲಿ ಮೋದಿ ಹೆಸರು ಇತರರಿಂದ ದುರ್ಬಳಕೆಯಾಗುವುದಿಲ್ಲ ಎನ್ನುವುದಕ್ಕೆ ಏನಾದರೂ ಖಾತರಿ ಇದೆಯೇ? ಮೋದಿಯ ಹೆಸರಿನಲ್ಲಿ ವೋಟು ಪಡೆದ ಅನೇಕ ನಾಲಾಯಕ್ ಸಂಸದರ ಕಾರ್ಯ ನಿರ್ವಹಣೆಯೇ ಇದಕ್ಕೆ ಉತ್ತರವಾಗಿ ನಮ್ಮ ಕಣ್ಮುಂದೆ ಇದೆ. ವ್ಯಕ್ತಿ ಪೂಜೆಯು ಬಕೆಟ್ ಸಂಸ್ಕೃತಿ, ಜೀ ಹುಜೂರ್ ಸಂಸ್ಕೃತಿಯನ್ನು ಬೆಳೆಸುತ್ತದೆ. ಅಂತಹಾ ಜಾಗದಲ್ಲಿ ಪ್ರಾಮಾಣಿಕರು, ಸ್ವಾಭಿಮಾನಿಗಳು, ಆತ್ಮಗೌರವವುಳ್ಳವರು, ಖಂಡಿತವಾದಿಗಳು, ಖಂಡಿತಾ ಉಳಿಯಲಾರರು. ಇವರೆಲ್ಲಾ ಗಂಟುಮೂಟೆ ಕಟ್ಟಿದ ಮೇಲೆ ಪಕ್ಷ ಮತ್ತು ಸರ್ಕಾರದಲ್ಲಿ ಉಳಿಯುವವರ್ಯಾರು? ಹೊಗಳುಭಟರು ವಂಧಿ ಮಾಗಧರು ಮಾತ್ರ. ಇವರುಗಳನ್ನು ಇಟ್ಟುಕೊಂಡು ದೇಶ ಕಟ್ಟಲು ಮೋದಿಯೇ ಅಲ್ಲ ಸ್ವಯಂ ಭಗವಂತನ ಬಳಿಯೂ ಸಾಧ್ಯವಿರುವುದಿಲ್ಲ. ಇದಲ್ಲದೇ ವ್ಯಕ್ತಿ‌ಪೂಜೆಯ ಪರಾಕಾಷ್ಠೆಯಲ್ಲಿ ಗಾಂಧಿ ಹೆಸರಿನಲ್ಲಿ ನಡೆದ ಚಿತ್ಪಾವನ ಬ್ರಾಹ್ಮಣರ ಸಾಮೂಹಿಕ ಹತ್ಯೆ, ಇಂದಿರಾ ಹೆಸರಿನಲ್ಲಿ ನಡೆದ ಸಿಖ್ಖರ ನರಮೇಧದ ಉದಾಹರಣೆಗಳು ಕಣ್ಣಮುಂದಿವೆ. ಮುಂದೆ ಮೋದಿ ಹೆಸರಲ್ಲಿ ಈ ರೀತಿಯ ಅಪಸವ್ಯಗಳು ನಡೆಯುವುದಿಲ್ಲವೆಂಬ ಖಾತರಿ ಇದೆಯೇ? ಬಾಂಬನ್ನು ಸೃಷ್ಟಿಸಿದ ಮೇಲೆ ವಿಜ್ಞಾನಿಗೆ ಅದರ ಮೇಲೆ ಹೇಗೆ ನಿಯಂತ್ರಣ ಇರುವುದಿಲ್ಲವೋ ಹಾಗೆ ಅಂಧಭಕ್ತರ ಪಡೆ. ಹಾಗೆ ಕಟ್ಟಿದ ಪಡೆಯ ಅಭಿಮಾನವನ್ನು ತತ್ವ ಸಿದ್ಧಾಂತಗಳ ಮಟ್ಟಕ್ಕೆ, ಅದಕ್ಕೂ ಮೀರಿದ ಸರ್ವರ ಹಿತ ಬಯಸುವ ಮನೋಭೂಮಿಕೆಯ ಮಟ್ಟಕ್ಕೆ ಏರಿಸುವ ಶಕ್ತಿ ಮೋದಿಯವರಿಗಿದೆಯೇ? ಅದಕ್ಕಾಗಿ ಏನಾದರೂ ಪ್ರಯತ್ನಗಳು ಜರುಗುತ್ತಿವೆಯೇ? ಯಾರಾದರೂ ಜವಾಬ್ದಾರಿ ಹೊತ್ತವರು ಉತ್ತರಿಸಬೇಕು. ಇಂದು ಬಿಜೆಪಿ ಮತ್ತು ಮೋದಿಯವರನ್ನು ಟೀಕಿಸುವವರನ್ನು ದೇಶದ್ರೋಹಿಗಳೆಂದು ನಿರ್ದಾಕ್ಷಿಣ್ಯವಾಗಿ ಕರೆಯಲಾಗುತ್ತದೆ. ಟೀಕಿಸಿದವರ ಹಿನ್ನೆಲೆ ಏನು? ಉದ್ದೇಶವೇನು? ಎಂಬುದನ್ನೂ ವಿಮರ್ಶಿಸದೇ ಅವರ ಬಾಯಿ ಮುಚ್ಚಿಸುವ ಪ್ರಕ್ರಿಯೆ ನಿಜಕ್ಕೂ ಗಂಡಾಂತರಕಾರಿ. ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಬೌದ್ಧಿಕವಾಗಿ ಬೆಳೆಯಬೇಕಾದ ಅವಶ್ಯಕತೆಯಿದೆ. ಆದರೆ ಬಿಜೆಪಿಯ ವಾತಾವರಣ ಹೇಗಿದೆಯೆಂದರೆ, ಹಾಗೆ ಬೌದ್ಧಿಕವಾಗಿ ಬೆಳೆಯುವುದಕ್ಕಿಂತಲೂ, ಮೇಲಿನವರು ಹೇಳಿದಂತೆ ಕೇಳಿಕೊಂಡು ಹೋಗುವ ಜೀ ಹುಜೂರ್ ಸಂಸ್ಕೃತಿಯಿಂದಲೇ ಜಾಸ್ತಿ ಲಾಭ ಎಂಬುದನ್ನು ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಅರ್ಥಮಾಡಿಸುತ್ತಿದೆ. ಇಷ್ಟವಾಗದವರು ಗಂಟುಮೂಟೆ ಕಟ್ಟಬಹುದು ಮತ್ತು ಹಾಗೆ ನೀವು ಹೊರಟರೂ ನಮಗೇನೂ ನಷ್ಟವಿಲ್ಲ ಎನ್ನುವ ದಿವ್ಯನಿರ್ಲಕ್ಷ್ಯ ಹಾಗೂ ಉದಾಸೀನತೆ ಪಕ್ಷ ಹಾಗೂ ಸರ್ಕಾರದಲ್ಲಿ ಎದ್ದು ಕಾಣುತ್ತಿದೆ ಎಂಬುದನ್ನು ಅಲ್ಲಗಳೆಯುವ ಶಕ್ತಿ ಯಾರಿಗಾದರೂ ಇದೆಯೇ?

2. ಅಧಿಕಾರ ಕೇಂದ್ರಿತ ರಾಜಕಾರಣ : ಅಂದು ವಾಜಪೇಯಿ ಕುದುರೆ ವ್ಯಾಪಾರದ ಮೇಲೆ ನಂಬಿಕೆಯಿಡದೇ ಅಧಿಕಾರವನ್ನೇ ತೊರೆದರು. ಮೋದಿ ನೇತೃತ್ವದ ಅದೇ ಬಿಜೆಪಿ ಇಂದು ಅಧಿಕಾರಕ್ಕಾಗಿ ನಿರ್ಲಜ್ಜವಾಗಿ ಸರಣಿ ಆಪರೇಷನ್‌ಗಳನ್ನು ನಡೆಸುತ್ತಿದೆ. ಇದಕ್ಕೆ ಬಿಜೆಪಿಯು “ಕಾಂಗ್ರೆಸ್‌ನ ದುರಾಡಳಿತವನ್ನು ತೊಲಗಿಸಲಿಕ್ಕಾಗಿ ಹೀಗೆ ಮಾಡಬೇಕಾಗಿದೆ” ಎಂಬ ಕಾರಣ ಹೇಳಿದರೂ, ಅಂಥಾ ಕಾರಣವು ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು “ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ” ಎಂದು ಕೊಟ್ಟ ಕಾರಣದಷ್ಟೇ ಹಗುರವಾದದ್ದು. ಹೀಗಾಗಿ ಇತರ ಪಕ್ಷಗಳ ನಾಯಕರ ನಿರಂತರ ವಲಸೆಯಿಂದ ಬಿಜೆಪಿಯ ಏಕೈಕ ಗುರಿ ಅಧಿಕಾರ ಹಿಡಿಯುವುದಲ್ಲದೇ ಬೇರೆ ಇನ್ನೇನೂ ಆಗಲು ಸಾಧ್ಯವಿಲ್ಲ. ಅಥವಾ ಹಾಗೆ ವಲಸೆ ಬಂದ ಅನ್ಯ ಪಕ್ಷಗಳ ನಾಯಕರಿಗೆ ತತ್ವ ಸಿದ್ಧಾಂತಗಳನ್ನು ಗಟ್ಟಿ ಮಾಡಲು ಬಿಜೆಪಿ ಏನಾದರೂ ವಿಶೇಷ ಕಾರ್ಯಯೋಜನೆಗಳನ್ನೇನಾದರೂ ಹಮ್ಮಿಕೊಂಡಿದೆಯೇ? ಮೊದಲಿಂದ ಇರುವ ನಾಯಕರ ತತ್ವ ಸಿದ್ಧಾಂತಗಳೇ ಸಂದೇಹಕ್ಕೊಳಪಟ್ಟಿರುವಾಗ ಪಕ್ಷ ಹಾಗೂ ಅದರ ಸಿದ್ಧಾಂತಗಳ ಅರಿವೇ‌ ಇಲ್ಲದ ಮತ್ತು ಹೆಚ್ಚು ಕಡಿಮೆ ವಿರುದ್ಧ ತತ್ವ ಸಿದ್ಧಾಂತಗಳ ಬೇರೆ ಪಕ್ಷಗಳಿಂದ ಬಂದ ನಾಯಕರು ಅದು ಹೇಗೆ ಬಿಜೆಪಿ ಸಿದ್ಧಾತಗಳನ್ನು ಮೈಗೂಡಿಸಿಕೊಳ್ಳಬಲ್ಲರು? ನೂರು ಜನರೊಳಗೆ ಒಬ್ಬ ಬೆರೆತು ಬದಲಾಗಬಹುದು. ಆದರೆ ನೂರು ಜನರಲ್ಲಿ 50 ಜನ ಹೊರಗಿನವರೇ ಆದಾಗ ಒಳಗಿನವರು ಬದಲಾಗದೇ ಉಳಿಯುವುದೇ ಆಶ್ಚರ್ಯ! ಅಂತಹಾ ಸಂದರ್ಭದಲ್ಲಿ ಎಲ್ಲರ ನಡುವಿನ ಸಮಾನ ಆಸಕ್ತಿಯ ವಿಚಾರಗಳು ಅಧಿಕಾರ ಮತ್ತು ಹಣ ಮಾತ್ರ ಆಗಿರುತ್ತದೆಯೇ ಹೊರತು ಸಿದ್ಧಾಂತ ಹಾಗೂ ತತ್ವಕ್ಕೆ ಮೂರು ಪೈಸೆಯ ಬೆಲೆ ಇರುವುದಿಲ್ಲ. ಇದೇ ರೀತಿ ಆಪರೇಷನ್ ಮಾಡುತ್ತಿದ್ದರೆ ಬರಲಿರುವ ದಿನಗಳಲ್ಲಿ ಬಿಜೆಪಿ ತನ್ನ ಸ್ವಂತ ಸ್ವರೂಪವನ್ನೇ ಕಳೆದುಕೊಳ್ಳುವುದು ನಿಶ್ಚಿತ.

adani modi

3. ಉದ್ಯಮಿಗಳ ಓಲೈಕೆ : ಬಿಜೆಪಿಯ ಪ್ರಮುಖ ಶಕ್ತಿ‌ ಕೇಂದ್ರ ಮೋದಿಯೇ ಆಗಿದ್ದರೂ ಅದರ ಹಿಂದಿನ ಬೌದ್ಧಿಕ ಶಕ್ತಿ ಆರ್‌ಎಸ್‌ಸ್ ಆಗಿದೆ. ಮತ್ತು ಆರ್ಥಿಕ ಶಕ್ತಿ ಉದಾರವಾಗಿ ಚುನಾವಣಾ ನಿಧಿ ನೀಡುವ ಉದ್ಯಮಿಗಳೇ ಆಗಿದ್ದಾರೆ. ಉದ್ಯಮಿಗಳಲ್ಲಿ ಒಳ್ಳೆಯವರು ಕೆಟ್ಟವರು ಎಂದು ವಿಂಗಡಿಸುವುದು ಬಹಳ ಕಷ್ಟ. ಅವರಲ್ಲಿ ಬಹುತೇಕರ ಮೊದಲ ಆದ್ಯತೆಯ ವಿಷಯ ತಮ್ಮ ವ್ಯವಹಾರಗಳನ್ನು ಬೆಳೆಸುವುದೇ ಆಗಿರುತ್ತದೆಯೇ ಹೊರತು ಸಮಾಜಸೇವೆ ಅಥವಾ ದೇಶಭಕ್ತಿಯು ಎರಡನೇ ಆದ್ಯತೆಯಾಗಿರಬಹುದಷ್ಟೇ. ಎಲ್ಲಿಯವರೆಗೂ ಪಕ್ಷದ ಮತ್ತು ಮೋದಿಯಂಥಾ ಮುಖ್ಯ ನಾಯಕರ ಆಧ್ಯಾತ್ಮಿಕ ಬಲ ಮತ್ತು ಚಾರಿತ್ರ್ಯದ ಬಲಗಳು ಗಟ್ಟಿಯಿರುತ್ತದೆಯೋ ಅಲ್ಲಿಯವರೆಗೂ ಉದ್ಯಮಿಗಳು ರಾಜಕಾರಣಿಗಳಿಂದ ಉಪಯೋಗಿಸಿಕೊಳ್ಳಲ್ಪಡುತ್ತಾರೆ. ಅದಕ್ಕೆ ಪ್ರತಿಯಾಗಿ ಸ್ವಲ್ಪ ಪ್ರಮಾಣದ ಪ್ರಯೋಜನವನ್ನೂ ಪಡೆಯುತ್ತಾರೆ. ಆದರೆ ಯಾವತ್ತು ಈ ಸೂತ್ರ ಬದಲಾಗುತ್ತದೆಯೋ ಅಂದರೆ ನಾಯಕರ ಆದ್ಯತೆ ಆಧ್ಯಾತ್ಮಿಕತೆಯಿಂದ ಪ್ರಾಪಂಚಿಕತೆಯೆಡೆಗೆ ಬದಲಾಗುತ್ತದೆಯೋ ಆಗ ಅವರ ಶಕ್ತಿ ಕಡಿಮೆಯಾಗಿ ಉದ್ಯಮಿಗಳು ಕಿಂಗ್ ಮೇಕರ್ ಆಗಲು ಆರಂಭಿಸುತ್ತಾರೆ. ಸರ್ಕಾರ ಉದ್ಯಮಿಗಳ ತೆರೆಮರೆಯ ಆಣತಿಯಂತೆ ನಡೆಯಲಾರಂಭಿಸುತ್ತದೆ. ದೇಶದ ಮತ್ತು ಸರ್ಕಾರದ ಇಷ್ಟಾನಿಷ್ಟಗಳನ್ನು ಉದ್ಯಮಿಗಳು ಮತ್ತು ಶ್ರೀಮಂತರು ನಿರ್ಧರಿಸಲಾರಂಭಿಸುತ್ತಾರೆ. ಆಗ ಪ್ರಜಾಪ್ರಭುತ್ವದ ಮೌಲ್ಯಗಳು ಗಾಳಿಗೆ ತೂರಿಹೋಗುತ್ತವೆ. ಇಂಥಾ ಪರಿಸ್ಥಿತಿಯನ್ನು ಎದುರಿಸಲು ಬಿಜೆಪಿ ಮಾಡಿಕೊಂಡಿರುವ ಸಿದ್ಧತೆಗಳೇನು? ಉದ್ಯಮಿಗಳು ಸರ್ಕಾರದ ನೀತಿನಿಯಮಗಳಲ್ಲಿ ಮೂಗು ತೂರಿಸುತ್ತಿಲ್ಲ ಎಂದು ಎದೆಮುಟ್ಟಿ ಹೇಳಿಕೊಳ್ಳುವಷ್ಟು ಬಿಜೆಪಿ ಪಾರದರ್ಶಕವಾಗಿದೆಯೇ? ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ಮತ್ತಿತರರ ಆಸ್ತಿ – ಉದ್ದಿಮೆಗಳ ಬೆಳವಣಿಗೆ ಬಿಜೆಪಿಯ ಬೆಳವಣೆಗೆಯನ್ನೇ ಮೀರಿಸುತ್ತಿದೆ. ಇದರ ಪರಿಣಾಮಗಳೇನಾಗಬಹುದು? ಯೋಚಿಸಬೇಕಾದ ವಿಚಾರ. ಇದಲ್ಲದೇ ಭಾರತದ ಬೃಹತ್ ಜನಸಮುದಾಯಕ್ಕೆ ಉದ್ಯೋಗ ನೀಡುವುದು ಗುಡಿ ಕೈಗಾರಿಕೆಗಳು. ಕೇವಲ ವೋಕಲ್ ಫಾರ್ ಲೋಕಲ್ ಎಂದು ಘೋಷಣೆ ಮಾಡಿದರಷ್ಟೇ ಅದು ಬೆಳೆಯುವುದಿಲ್ಲವಲ್ಲ. ಇಂಥಾ ದೊಡ್ಡ ದೊಡ್ಡ ಉದ್ಯಮಿಗಳು ಚಿಕ್ಕ ಚಿಕ್ಕ ಗುಡಿ ಕೈಗಾರಿಕೆಗಳ ಜೊತೆ ಸ್ಪರ್ಧೆಗಿಳಿಯದಂತೆ ಕಾನೂನು ಜಾರಿಗೊಳಿಸಬೇಕು. ಅಂಥಾ ಇಚ್ಛಾಶಕ್ತಿ ಮೋದಿ ಸರ್ಕಾರಕ್ಕಿದೆಯೇ?

ಇದನ್ನೂ ಓದಿ | ಸವಿಸ್ತಾರ ಅಂಕಣ | ಒಂದೇ ʼಸತ್ಯʼದೆಡೆಗೆ ಚಲಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಿನ್ನ ಎಣಿಸುವುದು ಅಪರಾಧವಲ್ಲವೇ?

4. ಏಕಪಕ್ಷೀಯ ನಿರ್ಧಾರಗಳು : ಬಿಜೆಪಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ತೆಗೆದುಕೊಂಡ‌ ಅನೇಕ ನಿರ್ಧಾರಗಳು ಐತಿಹಾಸಿಕ. ನೋಟು ಅಮಾನ್ಯೀಕರಣದಿಂದ ಹಿಡಿದು ಕಾಶ್ಮೀರದ ಆರ್ಟಿಕಲ್ 371 ರದ್ದುಗೊಳಿಸಿದವರೆಗೂ ಅನೇಕ ಅಪರೂಪದ ದಿಟ್ಟ ನಿರ್ಧಾರಗಳು ದೇಶದ ಒಳಿತಿಗೆ ಅಪಾರ ಕೊಡುಗೆ ನೀಡಿವೆ. ಆದರೆ ಇದನ್ನು ತರಲು ಬಿಜೆಪಿ ಅನುಸರಿಸಿದ ಮಾರ್ಗ ಚರ್ಚಾಯೋಗ್ಯ ವಿಚಾರ. ರಾತ್ರೋರಾತ್ರಿ ತೆಗೆದುಕೊಂಡ ನಿರ್ಧಾರಗಳು, ಚರ್ಚೆಯೇ ನಡೆಯದೇ ಕೈಗೊಂಡ ತೀರ್ಮಾನಗಳು, ವಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯದೇ ಏಕಪಕ್ಷೀಯವಾಗಿ ತೆಗೆದುಕೊಂಡ ಕ್ರಮಗಳು ದೇಶದ ಹಿತದೃಷ್ಟಿಯಿಂದ ಮೇಲ್ನೋಟಕ್ಕೆ ಒಳ್ಳೆಯದೆಂದು ತೋರಿದರೂ, ಈ ರೀತಿಯ ಕ್ರಮಗಳು ಪ್ರಜಾತಂತ್ರ ವ್ಯವಸ್ಥೆಯ ಬಲವನ್ನು ಕುಗ್ಗಿಸುವುದರಲ್ಲಿ ಅನುಮಾನವಿಲ್ಲ. ದೇಶದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ನಂಥಾ ಪಕ್ಷಗಳು ಇರುತ್ತವೆ ಹೋಗುತ್ತವೆ. ನಾಯಕರು ಬರುತ್ತಾರೆ ಹೋಗುತ್ತಾರೆ. ಆದರೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಬಹುಕಾಲ ಉಳಿಬೇಕು. ಅದರ ದೂರದೃಷ್ಟಿಯಿಂದ ಕೂಡಿದ ಆಶಯಗಳು ಈಡೇರಬೇಕು. ಅದನ್ನು ತಾತ್ಕಾಲಿಕ ಲಾಭದ ದೃಷ್ಟಿಯಿಂದ ಮೀರಿಹೋದರೆ, ಉದ್ದೇಶ ಒಳ್ಳೆಯದಾಗಿದ್ದರೂ ಶಾಶ್ವತ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ವಿರೋಧ ಪಕ್ಷಗಳು ಎಷ್ಟೇ ದುರ್ಬಲವಾಗಿರಲಿ ಅಥವಾ ನಾಯಕರು ಎಷ್ಟೇ ಕೆಳಮಟ್ಟದವರಾಗಿರಲಿ ಅವರನ್ನು ತಿರಸ್ಕರಿಸಿ, ಒಂದು ಮೂಲೆಗೆ ತಳ್ಳಿ, ಉಪೇಕ್ಷಿಸಿ ಆಡಳಿತ ನಡೆಸುವುದು ಪ್ರಜಾಪ್ರಭುತ್ವವಾಗಿರುವುದಿಲ್ಲ. ಬದಲಾಗಿ ಸರ್ವಾಧಿಕಾರಿ ಧೋರಣೆಯಾಗಿರುತ್ತದೆ. ಪ್ರಜ್ಞಾವಂತ ಜನರು “ದೇಶಕ್ಕೆ ಒಳ್ಳೆಯದಾದರೆ ಸರಿ, ಮಾರ್ಗ ಯಾವುದಾದರೂ ಪರವಾಗಿಲ್ಲ” ಎಂದು ಕೆಲ ದಿನಗಳು ಸಹಿಸಿಕೊಂಡು ಸುಮ್ಮನಿರಬಹುದು. ಆದರೆ ದೀರ್ಘಕಾಲದಲ್ಲಿ ಈ ಭಾವನೆಯನ್ನು ಬೌದ್ಧಿಕವಾಗಿ ಚಿಂತನೆ ನಡೆಸಯವವರಲ್ಲಿ ಹಾಗೇ ಉಳಿಸಲು ಸಾಧ್ಯವಿಲ್ಲ. ಒಂದು ಹಂತದಲ್ಲಿ ಬಂಡಾಯ ಸ್ಫೋಟಗೊಳ್ಳುತ್ತದೆ. ಈ ಸರ್ವಾಧಿಕಾರಿ ಧೋರಣೆಯನ್ನು ಬೆಳೆಯದಂತೆ ತಡೆಯಲು ಪಕ್ಷ ಅಥವಾ ಸರ್ಕಾರ ಏನು ಕ್ರಮಗಳನ್ನು ಕೈಗೊಂಡಿದೆ? ಆತ್ಮವಿಮರ್ಶೆಯ ಅವಶ್ಯಕತೆ ಇದೆ.

5. ಜನ ಸಾಮಾನ್ಯರ ನಿರ್ಲಕ್ಷ್ಯ : ಪ್ರಪಂಚವನ್ನೇ ಬಾಧಿಸಿದ ಕೊರೋನಾ ರೋಗವು ಎಲ್ಲ ದೇಶಗಳ ಆರ್ಥಿಕ ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದೆ. ಭಾರತವೂ ಇದಕ್ಕೆ ಹೊರತಲ್ಲ. ಇದರ ಪರಿಣಾಮವಾಗಿ ಪೆಟ್ರೋಲ್ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ‌. ಶ್ರೀ ಸಾಮಾನ್ಯನ ಬದುಕು ದುರ್ಭರವಾಗುತ್ತಿರುವ ಸನ್ನಿವೇಶದಲ್ಲಿ ಅವನ ಸಹಾಯಕ್ಕೆ ನಿಲ್ಲುವುದು ಸರ್ಕಾರದ ಕರ್ತವ್ಯ. ಆದರೆ ಇದಕ್ಕೆ ವಿರುದ್ಧವಾಗಿ ಮಂಡಕ್ಕಿಯಂಥಾ ವಸ್ತುವಿನ ಮೇಲೂ ಜಿಎಸ್ ಟಿ ಹೇರಿದ ಸರ್ಕಾರದ ನಡೆ ವ್ಯಾಪಕ ಟೀಕೆಗೊಳಗಾಯಿತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಇತ್ಯಾದಿಗಳ ಬೆಲೆಯನ್ನು ಇಳಿಸುವಲ್ಲಿ ಸರ್ಕಾರ ವಿಫಲವಾಗುತ್ತಿರುವುದು ಜನಸಾಮಾನ್ಯರ ತಾಳ್ಮೆಯನ್ನು ತೀವ್ರವಾಗಿ ಪರೀಕ್ಷಿಸುತ್ತಿದೆ. ಇದಕ್ಕೆ ಉತ್ತರವಾಗಿ ಸರ್ಕಾರ ಮಾಡಬಹುದಾಗಿದ್ದ ಕೆಲಸಗಳೇನು? ಅಂಥಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರ ಎಷ್ಟು ಪ್ರಾಮಾಣಿಕವಾಗಿದೆ. ಪಕ್ಷದ ಸಂಸದರು ಈ ಕಡೆ ಎಷ್ಟು ಗಮನಹರಿಸಿದ್ದಾರೆ? ಅನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ? ಮೋದಿ ಮ್ಯಾಜಿಕ್ ಮಾಡಿಬಿಡುತ್ತಾರೆ ಎಂದು ನಂಬಿದ್ದ ಜನರಿಗೆ ಮೋದಿ‌ ಒಬ್ಬರ ಕೈಲಿ ಮ್ಯಾಜಿಕ್ ಮಾಡಲಾಗುವುದಿಲ್ಲ ಎಂದು ಅರ್ಥವಾಗಿಬಿಟ್ಟಿದೆ. ಈ ಸಂದರ್ಭದಲ್ಲಿ ಮೋದಿಯವರಂತೆ ಉಳಿದ ಜನಪ್ರತಿನಿಧಿಗಳೂ ಕೆಲಸ ಮಾಡದಿದ್ದರೆ ಜನಸಾಮಾನ್ಯ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗುವುದಂತೂ ಸತ್ಯ. ಜನಸಾಮಾನ್ಯರಿಗೆ ಉದ್ಯೋಗವೂ ದೊರೆಯುತ್ತಿಲ್ಲ, ಸರ್ಕಾರದಿಂದ ಸಹಾಯವೂ ದೊರೆಯುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಜನರು ತಮ್ಮ ಮನಸ್ಸು ಬದಲಿಸುವುದು ನಿಶ್ಚಿತ. ಇದಕ್ಕೆ ಸ್ಪಂದಿಸುವಷ್ಟು ಸರಳತೆಯನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಪಕ್ಷದ ಕಾರ್ಯಕರ್ತರು ಉಳಿಸಿಕೊಂಡಿದ್ದಾರೆಯೇ?? ಪಕ್ಷ ಹಾಗೂ ನಾಯಕರು ಪರೀಕ್ಷಿಸಿ ನೋಡಿಕೊಳ್ಳಬೇಕಿದೆ.

6. ತಗ್ಗಿದ ಮಾಧ್ಯಮಗಳ ಬಲ : ಮೋದಿ ಅಧಿಕಾರಕ್ಕೆ ಬರುವ ಮೊದಲು ಅವರನ್ನು ಹೀನಾಮಾನವಾಗಿ ಟೀಕಿಸಿದ, ಅತಿ ಎನ್ನಿಸುವಷ್ಟು ದ್ವೇಷಿಸಿದ ಮಾಧ್ಯಮಗಳು ಇಂದು ಇನ್ನಿಲ್ಲದಂತೆ ಮೌನವಾಗಿವೆ. ಅದಷ್ಟು ಮಾತ್ರವಲ್ಲದೇ ಅದಕ್ಕೆ ವಿರುದ್ಧವಾಗಿ ಮೋದಿಯ ಹಿಂದು ಹಿಂದೆಯೇ ಕ್ಯಾಮೆರಾ ಹಿಡಿದುಕೊಂಡು ಸುತ್ತುತ್ತಿವೆ. ಆರ್‌ಎಸ್‌ಎಸ್ ಅನ್ನು ವಾಚಾಮಗೋಚರವಾಗಿ ನಿಂದಿಸುತ್ತಿದ್ದ ಟಿವಿ ಆಂಕರ್‌ಗಳು ಇಂದು ಆರ್‌ಎಸ್‌ಎಸ್‌ನಲ್ಲೇ ಹುಟ್ಟಿ ಬೆಳೆದವರಂತೆ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಈ ದಿಢೀರ್ ಪರಿವರ್ತನೆಗೆ ಕಾರಣವೇನು? ಎಲ್ಲ ಮಾಧ್ಯಮ ಮಿತ್ರರಿಗೂ ಮೋದಿ ಅಧಿಕಾರಕ್ಕೆ ಬಂದೊಡನೆ ಬೋಧಿವೃಕ್ಷದ ಕೆಳಗೆ ಸಾಕ್ಷಾತ್ಕಾರವಾಗಿಬಿಟ್ಟಿತೇ? ಖಂಡಿತಾ ಇಲ್ಲ. ಮಾಧ್ಯಮಗಳು ಇಂದು ಬಿಜೆಪಿಯ ನಿಯಂತ್ರಣಕ್ಕೆ ಒಳಪಟ್ಟಿವೆ. ಹೇಗೆ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಮಾಧ್ಯಮಗಳು ಅದರ ಕಪಿಮುಷ್ಠಿಗೆ ಸಿಲುಕಿ ಮೂಕವಾಗಿದ್ದವೋ ಅದೇ ಪರಿಸ್ಥಿತಿ ಇಂದು ನಿರ್ಮಾಣಗೊಂಡಿದೆ. ಟಿಆರ್‌ಪಿಗೋ, ದುಡ್ಡಿಗೋ, ಅಸ್ತಿತ್ವ ಉಳಿಸಿಕೊಳ್ಳಲೋ ಅಥವಾ ಪ್ರವಾಹದ ಜೊತೆಗೆ ಈಜಿಕೊಂಡು ಹೋಗಲೋ ಮಾಧ್ಯಮಗಳು‌ ಇನ್ನಿಲ್ಲದಂತೆ ಬಿಜೆಪಿಯನ್ನು ಓಲೈಸುತ್ತಿವೆ. ಇದು ದೀರ್ಘಕಾಲಕ್ಕೆ ಮುಂದುವರೆದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ನಿರ್ವೀರ್ಯವಾಗಿ ಪತ್ರಿಕಾರಂಗ ಆಳುವ ಸರ್ಕಾರದ ಮುಖವಾಣಿಯಾಗುತ್ತವೆ. ಉದ್ಯಮಿಗಳು ರಾತ್ರೋ ರಾತ್ರಿ ಮಾಧ್ಯಮಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಈ ಅಪಾಯದಿಂದ ಪಾರಾಗಲು ಮಾಧ್ಯಮರಂಗ ಮಾಡಿಕೊಂಡಿರುವ ಉಪಾಯಗಳೇನು? ಈ ಪ್ರವಾಹದಲ್ಲಿ ಈಜಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಂವಿಧಾನದ ಆಶಯಗಳನ್ನು ಈಡೇರಿಸಲು ಅದಕ್ಕೆ ಸಾಧ್ಯವೇ? ಮಾಧ್ಯಮಗಳು ಉತ್ತರಿಸಬೇಕು. ಸರ್ಕಾರ ಪತ್ರಿಕಾರಂಗದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸುವ ಮನಸ್ಸು ಮಾಡಲಿದೆಯೇ? ಸರ್ಕಾರ ಹೇಳಬೇಕು.

ಇದನ್ನೂ ಓದಿ | ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್

7. ಕುಸಿದ ವಿರೋಧ ಪಕ್ಷಗಳ ನೈತಿಕತೆ ಮತ್ತು ಅಂತಃಸತ್ವ : ಬಿಜೆಪಿ ಮತ್ತು ಮೋದಿ ಮಾಡುತ್ತಿರುವ ಕೆಲವು ಎಕ್ಸ್ಟ್ರೀಮ್ ನಿರ್ಣಯಗಳೂ ಸಹಾ ನ್ಯಾಯಯುತವಾಗಿ ಕಾಣುತ್ತಿರುವುದರ ಹಿಂದೆ ಕಾಂಗ್ರೆಸ್ ಸೇರಿದಂತೆ ಉಳಿದ ವಿರೋಧ ಪಕ್ಷಗಳ ಮತ್ತು ನಾಯಕರ ನೈತಿಕ ಅಧಃಪತನದ ಕೊಡುಗೆ ಬಹಳಷ್ಟಿದೆ. ರಾಹುಲ್ ಗಾಂಧಿಯಂಥಾ ಬೌದ್ಧಿಕವಾಗಿ ತೀರಾ ಹಿಂದುಳಿದ ರಾಜಕಾರಣಿಯಬ್ಬನ ಕೈಲಿ ರಥದ ಸಾರಥ್ಯವನ್ನು ಕೊಟ್ಟು ಮೋದಿಯಂಥಾ ಬಲಿಷ್ಠ ನಾಯಕನನ್ನು ಎದುರಿಸುತ್ತಿರುವ ಕಾಂಗ್ರೆಸ್ಸಿನ ಕುಟುಂಬ ರಾಜಕಾರಣ ದೇಶದ ಪ್ರಜಾಪ್ರಭುತ್ವವನ್ನು ಆತಂಕದ ಪರಿಸ್ಥಿತಿಗೆ ನೂಕುತ್ತಿದೆ. 137 ವರ್ಷಗಳ ಇತಿಹಾಸವುಳ್ಳ ಒಂದು ಪಕ್ಷಕ್ಕೆ ರಾಹುಲ್ ಗಾಂಧಿಗಿಂತಲೂ ಸಮರ್ಥನಾದ ಒಬ್ಬ ನಾಯಕ ದೊರೆಯದಿರುವುದು ವಿರೋಧ ಪಕ್ಷವೊಂದರ ದೈನೇಸಿ ಸ್ಥಿತಿಯನ್ನು ಎತ್ತಿಹಿಡಿಯುತ್ತಿದೆ. ಸಹಜವಾಗಿ ರಾಹುಲ್ ಸುತ್ತ ಹೊಗಳುಭಟರ, ಜೀ ಹುಜೂರ್ ಮನಸ್ಥಿತಿಯ, ಹುಂಬರ ಪಡೆ ಸುತ್ತುವರೆದು, ಯೋಗ್ಯರು ಅರ್ಹರು ಪಕ್ಷ ಬಿಟ್ಟು ಬಿಜೆಪಿ ಮತ್ತಿತರ ಪಕ್ಷಗಳ ಕಡೆಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಮೇಲ್ನೋಟಕ್ಕೆ ಕಾಂಗ್ರೆಸ್‌ಗೆ ನಷ್ಟವೆಂಬಂತೆ ತೋರಿದರೂ, ಅದು ದೇಶದ ವಿಪಕ್ಷಗಳ ಜವಾಬ್ದಾರಿಗೆ ಬಿದ್ದ ಪೆಟ್ಟಾಗಿದೆ. ವಿಪಕ್ಷಗಳು ಪ್ರಜಾಪ್ರಭುತ್ವದ ಕಾವಲುನಾಯಿ. ಆದರೆ ಈ ಕಾವಲು ನಾಯಿಯ‌ ಕಣ್ಣು ಮಂಜಾಗಲು, ಕೈ ಕಾಲು ಸ್ವಾಧೀನ ಕಳೆದುಕೊಳ್ಳಲು, ಸ್ವತಃ ಕಾಂಗ್ರೆಸ್ ಕಾರಣಕರ್ತವಾಗಿದೆ. ಉಳಿದ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒಂದೋ ಬಿಜೆಪಿಯೊಡನೆ ಬೇಷರತ್ತು ಮೈತ್ರಿ ಮಾಡಿಕೊಳ್ಳುತ್ತಿವೆ. ಇಲ್ಲವೇ ಸುಖಾಸುಮ್ಮನೆ ಮೋದಿಯವರನ್ನು ತೆಗಳುತ್ತಾ ನಗೆಪಾಟಲಿಗೀಡಾಗುತ್ತಾ ಗೌರವ ಕಳೆದುಕೊಳ್ಳುತ್ತಿವೆ. ಒಟ್ಟಿನಲ್ಲಿ ಮೋದಿ ಮತ್ತು ಬಿಜೆಪಿ ಮದಿಸಿದ ಆನೆಯಂತೆ, ಅಂಕುಶವಿಲ್ಲದ ಮಾವುತನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ತನಗೆ ಬೇಕಾದ ಮಾರ್ಗವನ್ನು ನಿರ್ಧರಿಸಿಕೊಂಡು ಮುಂದೆ ಸಾಗುತ್ತಿದೆ. ಇದನ್ನು ದೇಶದ ಪ್ರಜ್ಞಾವಂತರು ಗಮನಿಸಬೇಕಿದೆ.

Rahul Gandhi

8. ಹಿಂದುತ್ವದ ರಾಜಕೀಯಕರಣ : ಧರ್ಮ ಯಾವತ್ತೂ ರಾಜಕೀಯ ಅಸ್ತ್ರವಾಗಬಾರದು‌. ಆದರೆ ಕಾಂಗ್ರೆಸ್ ಮಾಡಿದ ಅಲ್ಪಸಂಖ್ಯಾತರ ಅತಿಯಾದ ತುಷ್ಟೀಕರಣ ಭಾರತದಲ್ಲಿ ಧರ್ಮ ರಾಜಕಾರಣ ಮಹತ್ವ ಪಡೆದುಕೊಳ್ಳುವಂತೆ ಮಾಡಿತು. ಇಂದು ಭಾರತದ ಮತದಾರನ ಮನಸ್ಥಿತಿಯನ್ನು ನಿರ್ಧರಿಸುವ ಅಂಶಗಳಲ್ಲಿ ಧರ್ಮದ ಪಾತ್ರ ಬಹುದೊಡ್ಡದಾಗಿದೆ. ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಇದೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಲಿದೆ. ರಾಮಮಂದಿರ ಆಂದೋಲನವು ಸತ್ತಂತಿದ್ದ ಹಿಂದು ಅಂತಃಸತ್ವಕ್ಕೆ ಬಹುದೊಡ್ಡ ಟಾನಿಕ್ ನೀಡಿತು. ವಾಜಪೇಯಿ ಸರ್ಕಾರ ರಾಜಕೀಯವಾಗಿ ಹಿಂದುವಿಗೆ ದನಿ ತಂದುಕೊಟ್ಟಿತು. ಮೋದಿ ಸರ್ಕಾರ ಹಿಂದುತ್ವವೇ ಅಧಿಕಾರ ನಡೆಸುವಂತೆ ಮಾಡಿತು. ಆದರೆ ಹಿಂದುತ್ವ ಒಂದು ದಬ್ಬಾಳಿಕೆಯ ಅಸ್ತ್ರವಾಗಿಯೂ ಪ್ರಯೋಗವಾಗಬಹುದು ಎಂಬ ಲಕ್ಷಣಗಳನ್ನು ಯೋಗಿಯವರ ಆಕ್ರಮಣಕಾರಿ ಆಡಳಿತದ ಶೈಲಿಯಲ್ಲಿ ಗುರುತಿಸಬಹುದಾಗಿದೆ. ಆದರೆ ದುರದೃಷ್ಟವೆಂದರೆ ಅಂತಹಾ ಆಕ್ರಮಣಕಾರಿ ರಾಜಕಾರಣ ಹಿಂದುಗಳಿಗೆ ಬಹುವಾಗಿ ಪ್ರಿಯವಾಗುತ್ತಿದೆ. ಇದರ ದೂರಗಾಮಿ ಪರಿಣಾಮವೆಂದರೆ ಮಾನವೀಯತೆ ಮತ್ತು ವಿಶ್ವಪ್ರೇಮವುಳ್ಳ ಹಿಂದುವೊಬ್ಬ ನಾಯಕನಾಗದೇ ಕ್ರೂರ ಅಥವಾ ಧರ್ಮಾಂಧತೆಯುಳ್ಳ ಅಥವಾ ಧರ್ಮವನ್ನೇ ತನ್ನ ಅಧಿಕಾರದಾಸೆಗೆ ಬಳಸಿಕೊಳ್ಳುವ ಮನಸ್ಥಿತಿಯ ನಾಯಕನೇನಾದರೂ ಅಧಿಕಾರ ಹಿಡಿದರೆ ಭಾರತ ಒಂದು ಕೋಮುವಾದಿ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಶೀಘ್ರಾತಿಶೀಘ್ರ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಧರ್ಮವನ್ನು ರಾಜಕೀಯದಲ್ಲಿ ಬೆರೆಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಕೂಡಾ ತಾನು ಜಾತ್ಯಾತೀತ ಪಕ್ಷ ಎಂಬುದನ್ನು ಮರೆತು ಮುಸ್ಲಿಂ ಪಕ್ಷದಂತೆ ವರ್ತಿಸುತ್ತಿರುವುದನ್ನು ಸಾಕುಮಾಡಬೇಕು. ಇಲ್ಲದಿದ್ದರೆ ಸುಖ ಜೀವನಕ್ಕೆ ದಾರಿದೀಪವಾಗಬೇಕಿದ್ದ ಧರ್ಮವು ಮನುಷ್ಯರನ್ನು ಪರಸ್ಪರ ಶತ್ರುಗಳಂತೆ ಬೀದಿಯಲ್ಲಿ ನಿಂತು ಕಾದಾಡುವಂತೆ ಮಾಡುತ್ತದೆ. ಇದಕ್ಕೆ ಧಾರ್ಮಿಕ ಮುಖಂಡರು, ಮಠಾಧೀಶರು, ಸಾಧು ಸನ್ಯಾಸಿಗಳು ನಿಜವಾದ ಧರ್ಮವನ್ನು ರಾಜಕೀಯೇತರವಾಗಿ ಜನರಿಗೆ ಅರ್ಥ ಮಾಡಿಸಲು ಪ್ರಯತ್ನಿಸಬೇಕು. ಧರ್ಮ ಅಂದರೆ ಮೋದಿ ಮಾತ್ರ ಅಲ್ಲ, ಧರ್ಮ ಅಂದರೆ ಬಿಜೆಪಿ ಮಾತ್ರ ಅಲ್ಲ, ಧರ್ಮ ಎಂದರೆ ಆರ್ ಎಸ್ ಎಸ್ ಮಾತ್ರ ಅಲ್ಲ, ಅದು ನಮ್ಮೆಲ್ಲರಿಗೂ ಸೇರಿದ್ದು‌. ಅದರ ಜವಾಬ್ದಾರಿ ನಮ್ಮೆಲ್ಲರದ್ದು ಎಂಬ ವಾತಾವರಣವನ್ನು ಪುನರ್ಸ್ಥಾಪಿಸಬೇಕು. ಹಾಗಾದಾಗ ಧರ್ಮ ರಾಜಕೀಯ ಬಣ್ಣ ಪಡೆಯುವುದು ತಪ್ಪುತ್ತದೆ.

ಇದನ್ನೂ ಓದಿ | ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!

ಮೇಲೆ ತಿಳಿಸಿದ ಈ ಎಲ್ಲ ಅಂಶಗಳೂ ಇಂದಿಗೆ ಬೀಜರೂಪದಿಂದ ಮೊಳಕೆಯ ಹಂತದಕ್ಕೆ ಬಂದು ನಿಂತಿರಬಹುದು. ತತ್ಕಾಲಕ್ಕೆ ಅಂತಹಾ ಆಪತ್ತೇನೂ ಇಲ್ಲವೆಂದು ತೋರುತ್ತಿರಬಹುದು. ಆದರೆ ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ನೀರು ಗೊಬ್ಬರ ದೊರೆತು ಅದಕ್ಕೆ ಬೇಕಾದ ವಾತಾವರಣವೂ ದೊರೆತುಬಿಟ್ಟರೆ ದೇಶದ ರಾಜಕೀಯ ಪರಿಸ್ಥಿತಿ ತನ್ನ ದಿಕ್ಕು ಕಳೆದುಕೊಳ್ಳುವುದು ನಿಶ್ಚಿತ. ಕಾಲಚಕ್ರದಲ್ಲಿ ಇದು ಸಹಜ ಕೂಡಾ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ ಹೋಗಲೇಬೇಕು. ಆದರೆ ಆ ಕಾಲಚಕ್ರವು ತಲೆಕೆಳಕಾದಾಗ ಗೊಂದಲಕ್ಕೊಳಗಾಗುವ ಜನರನ್ನು ಎಚ್ಚರಿಸಲು ಮತ್ತು ಸರಿಯಾದ ದಾರಿ ತೋರುವ ಸಲುವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡೂ ನೆಲೆಯಲ್ಲಿ ಅಥವಾ ಇನ್ಯಾವುದೋ ರಾಜಕೀಯ ಪ್ರೇರಿತವಾದ ದೃಷ್ಟಿಕೋನದಲ್ಲಿ ಈ ಬೆಳವಣಿಗೆಗಳನ್ನು ನೋಡದೇ, ಸತ್ಯದ ದೃಷ್ಟಿಯಲ್ಲಿ ತ್ರಯಸ್ಥರಾಗಿ ನಿಂತು ನೋಡುವ ವರ್ಗವೊಂದು ಗಟ್ಟಿಕೊಳ್ಳಬೇಕಾಗಿದೆ. ಇಂತಹಾ ವರ್ಗವು ವಸ್ತುನಿಷ್ಠವಾಗಿ ಅವಲೋಕನ ಮಾಡಿ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ವಿಶ್ವಪ್ರಜ್ಞೆಯನ್ನು ವಿಶಾಲ ಧರ್ಮಪ್ರಜ್ಞೆಯೊಂದಿಗೆ ಸಮ್ಮಿಳಿಸಿ ಸಂಕುಚಿತವಲ್ಲದ ರಾಷ್ಟ್ರಿಯತೆಯ ದೀಪಕ್ಕೆ ತೈಲವೆರೆಯುವ ಗುರಿಯನ್ನು ಹೊಂದಿರಬೇಕಾಗುತ್ತದೆ. ಅಂತಹುದೊಂದು ಹೊಸ ವರ್ಗ ಈ ದೇಶದಲ್ಲಿ ಹುಟ್ಟಿ ಬೆಳೆದು ಬಿಜೆಪಿ‌ ಮತ್ತು ಕಾಂಗ್ರೆಸ್ ನ ಜೊತೆಗೆ ಇರುವ ಪಕ್ಷಗಳ‌ ಹಾಗೂ ಮುಂದೆ ಹುಟ್ಟಲಿರುವ ಪಕ್ಷಗಳ ದಾರಿಗೆ ಮಾರ್ಗದರ್ಶನ ಮಾಡುವಂತಾಗಲಿ ಮತ್ತು ದೇಶಕ್ಕೆ ದಾರಿ ದೀಪವಾಗಲೆಂದು ಆಶಿಸುತ್ತೇನೆ. ರಾಜಕೀಯವಾಗಲೀ ನೀರಾಗಲೀ ಸ್ಫಟಿಕ ಶುದ್ಧವಾಗಿರಬೇಕೆಂದರೆ ಕೆರೆಯ ಹಾಗೆ ನಿಂತಲ್ಲಿ ನಿಲ್ಲದೇ ಸದಾ ಹರಿಯುವ ನದಿಯಾಗಬೇಕಲ್ಲವೇ?

(ಲೇಖಕರು ಸ್ವತಂತ್ರ ಚಿಂತಕ, ಲೇಖಕ ಮತ್ತು ವಾಗ್ಮಿ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ರಾಜಮಾರ್ಗ ಅಂಕಣ: ಆಕ್ರಮಣಕಾರಿ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ. ಆದರೆ ಈಗ, ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

VISTARANEWS.COM


on

Rishabh Pant
Koo

ಹೋರಾಟಗಾರ ಕ್ರಿಕೆಟರ್ ಕ್ರಿಟಿಕಲ್ ಇಂಜುರಿ ಗೆದ್ದು ಬಂದ ಕಥೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 2022 ಡಿಸೆಂಬರ್ 30ರ ಮಧ್ಯರಾತ್ರಿ ರೂರ್ಕಿ ಎಂಬಲ್ಲಿ ಆ ಕ್ರಿಕೆಟರ್ ಕಾರು ಅಪಘಾತಕ್ಕೆ ಒಳಗಾಗಿತ್ತು. ಆ ಅಪಘಾತದ ತೀವ್ರತೆಯನ್ನು ನೋಡಿದವರು ಆತ ಬದುಕಿದ್ದೇ ಗ್ರೇಟ್ ಅಂದಿದ್ದರು. ಬಲಗಾಲಿನ ಮಂಡಿ ಚಿಪ್ಪು ಸಮೇತ 90 ಡಿಗ್ರೀಯಷ್ಟು ತಿರುಗಿ ನಿಂತಿತ್ತು! ಮೈಯೆಲ್ಲಾ ಗಾಯಗಳು ಮತ್ತು ಎಲುಬು ಮುರಿತಗಳು! ಡೆಹ್ರಾಡೂನ್ ಆಸ್ಪತ್ರೆಯ ವೈದ್ಯರು ಆತನ ದೇಹದಲ್ಲಾದ ಗಾಯ ಮತ್ತು ಮೂಳೆ ಮುರಿತಗಳನ್ನು ನೋಡಿದಾಗ ‘ನೀನಿನ್ನು ಕ್ರಿಕೆಟ್ ಆಡೋದು ಕಷ್ಟ’ ಅಂದಿದ್ದರು. ಒಬ್ಬರಂತೂ ‘ನೀನು ನಿನ್ನ ಕಾಲುಗಳ ಮೇಲೆ ನಿಂತರೆ ಅದೇ ದೊಡ್ಡ ಸಾಧನೆ’ ಅಂದಿದ್ದರು!

ಅಮ್ಮಾ ನನಗೆ ಸಹಾಯ ಮಾಡು, ನಾನು ವಿಶ್ವಕಪ್ ಆಡಬೇಕು!

ಆ ಕ್ರಿಕೆಟಿಗ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಚೀರಿ ಚೀರಿ ಹಾಗೆ ಹೇಳುತ್ತಿದ್ದರೆ ನರ್ಸ್ ಮತ್ತು ವೈದ್ಯರು ಕಣ್ಣೀರು ಸುರಿಸುತ್ತಿದ್ದರು! ಕ್ರಿಕೆಟ್ ವಿಶ್ವಕಪ್ ಆರಂಭವಾಗಲು ಕೇವಲ ಒಂದೂವರೆ ವರ್ಷ ಬಾಕಿ ಇತ್ತು. ವೈದ್ಯರು ‘ಅನಿವಾರ್ಯ ಆದರೆ ಆತನ ಒಂದು ಕಾಲು ತುಂಡು ಮಾಡಬೇಕಾಗಬಹುದು!’ ಎಂದು ಅವನ ಅಮ್ಮನ ಕಿವಿಯಲ್ಲಿ ಪಿಸುಗುಟ್ಟಿದ್ದು, ಆತನ ಅಮ್ಮ ಬಾತ್ ರೂಮ್ ಒಳಗೆ ಹೋಗಿ ಕಣ್ಣೀರು ಸುರಿಸಿದ್ದು ಎಲ್ಲವೂ ನಡೆದು ಹೋಗಿತ್ತು!

ಆತ ರಿಶಭ್ ಪಂತ್ – ಆಕ್ರಮಣಕ್ಕೆ ಇನ್ನೊಂದು ಹೆಸರು!

ಅಪಘಾತ ಆಗುವ ಮೊದಲು ಆತ ಭಾರತೀಯ ಕ್ರಿಕೆಟ್ ತಂಡದ ಮೂರೂ ಫಾರ್ಮಾಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದ! ಆಕ್ರಮಣಕ್ಕೆ ಹೆಸರಾಗಿದ್ದ. ಸಲೀಸಾಗಿ ಒಂದೇ ಅವಧಿಯಲ್ಲಿ ಡಬಲ್ ಸೆಂಚುರಿ ಹೊಡೆಯುತ್ತಿದ್ದ. ವಿಕೆಟ್ ಹಿಂದೆ ಪಾದರಸದ ಚುರುಕು ಇತ್ತು. ಆತನ ಆಟವನ್ನು ನೋಡಿದವರು ʻಈತ ಧೋನಿಯ ಉತ್ತರಾಧಿಕಾರಿ ಆಗುವುದು ಖಂಡಿತ’ ಅನ್ನುತ್ತಿದ್ದರು!

ಅಂತಹ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ.

ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ

ಮರಳಿ ಕ್ರಿಕೆಟ್ ಮೈದಾನಕ್ಕೆ ಇಳಿಯಬೇಕು ಎಂದು ನಿದ್ದೆಯಲ್ಲಿಯೂ ಕನವರಿಸುತ್ತಿದ್ದ ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ. ಅವರೆಲ್ಲರೂ ಆತನ ಕ್ರಿಕೆಟ್ ದೈತ್ಯ ಪ್ರತಿಭೆಯನ್ನು ಕಂಡವರು. ಒಬ್ಬರು ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದ ಮುಂಬಯಿಯ ಅಂಬಾನಿ ಆಸ್ಪತ್ರೆಯ ಖ್ಯಾತ ಸರ್ಜನ್ ದಿನ್ ಶಾ ಪಾದ್ರಿವಾಲ. ಇನ್ನೊಬ್ಬರು ಉತ್ತರಾಖಂಡದ ಶಾಸಕ ಉಮೇಶ್ ಕುಮಾರ್. ಇನ್ನೊಬ್ಬರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಕೋಚ್ ಆದ ಧನಂಜಯ್ ಕೌಶಿಕ್. ನಾಲ್ಕನೆಯರು ರಿಷಭನ ತಾಯಿ! ಆಕೆ ನಿಜಕ್ಕೂ ಗಾಡ್ಸ್ ಗ್ರೇಸ್ ಅನ್ನಬಹುದು. ಅವರೆಲ್ಲರಿಗೂ ಆತ ಭಾರತಕ್ಕೆ ಎಷ್ಟು ಅಮೂಲ್ಯ ಆಟಗಾರ ಎಂದು ಗೊತ್ತಿತ್ತು! ಆಸ್ಪತ್ರೆಯ ಹಾಸಿಗೆಗೆ ಒರಗಿ ಆತ ಪಟ್ಟ ಮಾನಸಿಕ ಮತ್ತು ದೈಹಿಕ ನೋವು, ಹೊರಹಾಕಿದ ನಿಟ್ಟುಸಿರು ಎಲ್ಲವೂ ಆ ನಾಲ್ಕು ಮಂದಿಗೆ ಗೊತ್ತಿತ್ತು.

ಆ ಹದಿನೈದು ತಿಂಗಳು…!

Rishabh Panth

ಆ ಅವಧಿಯಲ್ಲಿ ಏಷಿಯಾ ಕಪ್, ವಿಶ್ವ ಟೆಸ್ಟ್ ಚಾಂಪಿಯನಶಿಪ್, ವಿಶ್ವ ಕಪ್ ಎಲ್ಲವೂ ನಡೆದುಹೋಯಿತು! ಭಾರತ ಹಲವು ವಿಕೆಟ್ ಕೀಪರಗಳ ಪ್ರಯೋಗ ಮಾಡಿತು. ಭಾರತ ಒಂದೂ ಕಪ್ ಗೆಲ್ಲಲಿಲ್ಲ. ಭಾರತಕ್ಕೆ ಶಾಶ್ವತವಾದ ವಿಕೆಟ್ ಕೀಪರ್ ಸಿಗಲಿಲ್ಲ! ರಿಷಭ್ ಈ ಎಲ್ಲ ಪಂದ್ಯಗಳನ್ನು ನೋಡುತ್ತಿದ್ದ. ವಿಕೆಟ್ ಹಿಂದೆ ಅವನಿಗೆ ಅವನೇ ಕಾಣುತ್ತಿದ್ದ!

ಹಾಸಿಗೆಯಿಂದ ಎದ್ದು ಕ್ರಚಸ್ ಹಿಡಿದು ನಡೆದದ್ದು, ನಂತರ ಕ್ರಚಸ್ ಬದಿಗೆ ಇಟ್ಟು ಗೋಡೆ ಹಿಡಿದು ನಡೆದದ್ದು, ನಂತರ ಎಲ್ಲವನ್ನೂ ಬಿಟ್ಟು ನಿಧಾನವಾಗಿ ತನ್ನ ಕಾಲ ಮೇಲೆ ಗಟ್ಟಿಯಾಗಿ ನಿಂತದ್ದು, ಜಾಗಿಂಗ್ ಮಾಡಿದ್ದು, ಓಡಿದ್ದು, ಕಾಲುಗಳಿಗೆ ಫಿಸಿಯೋ ಥೆರಪಿ ಆದದ್ದು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಕೌನ್ಸೆಲಿಂಗ್ ನೆರವು ಪಡೆದದ್ದು….ಇವೆಲ್ಲವೂ ಕನಸಿನಂತೆ ಗೋಚರ ಆಗುತ್ತಿದೆ. ಮುಂದೆ ನಿರಂತರ ಕ್ರಿಕೆಟ್ ಕೋಚಿಂಗ್, ಮೈದಾನದಲ್ಲಿ ಬೆವರು ಹರಿಸಿದ್ದು, ಅಪಘಾತವಾದ ಕಾಲು ಬಗ್ಗಿಸಲು ತುಂಬ ಕಷ್ಟಪಟ್ಟದ್ದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಅನ್ನಿಸುತ್ತಿದೆ.

2024 ಮಾರ್ಚ್ 12….

ಒಬ್ಬ ಕ್ರಿಕೆಟರ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಬಿಸಿಸಿಐ ಫಿಟ್ನೆಸ್ ಸರ್ಟಿಫಿಕೇಟ್ ಕೊಡಬೇಕು. ಅದು ಸುಲಭದ ಕೆಲಸ ಅಲ್ಲ. ಅಲ್ಲಿ ಕೂಡ ರಿಶಭ್ ಇಚ್ಛಾಶಕ್ತಿ ಗೆದ್ದಿತ್ತು. ಮಾರ್ಚ್ 12ರಂದು ಆತನು ಕ್ರಿಕೆಟ್ ಆಡಲು ಸಂಪೂರ್ಣ ಫಿಟ್ ಎಂದು ಬಿಸಿಸಿಐ ಘೋಷಣೆ ಮಾಡಿದಾಗ ಆತ ಮೈದಾನದ ಮಧ್ಯೆ ಕೂತು ಜೋರಾಗಿ ಕಣ್ಣೀರು ಹಾಕಿದ್ದನು! ಎರಡೇ ದಿನದಲ್ಲಿ ಡೆಲ್ಲಿ ಐಪಿಎಲ್ ತಂಡವು ಆತನನ್ನು ತೆರೆದ ತೋಳುಗಳಿಂದ ಸ್ವಾಗತ ಮಾಡಿ ನಾಯಕತ್ವವನ್ನು ಕೂಡ ಆತನಿಗೆ ನೀಡಿತ್ತು! ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

ಮುಂದಿನ T20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಒಬ್ಬ ಅದ್ಭುತ ಬ್ಯಾಟರ್ ಮತ್ತು ವಿಕೆಟ್ ಕೀಪರ್ ದೊರಕಿದ್ದನ್ನು ನಾವು ಸಂಭ್ರಮಿಸಲು ಯಾವ ಅಡ್ಡಿ ಕೂಡ ಇಲ್ಲ ಎನ್ನಬಹುದು. ಆತನಿಗೆ ಶುಭವಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

JEE Main 2024 Result: ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ರೈತನ ಮಗ! ಈತನ ಯಶಸ್ಸು ಸ್ಫೂರ್ತಿದಾಯಕ

JEE Main 2024 Result: ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು.

VISTARANEWS.COM


on

Nilkrishna Gajare JEE main 2024 result AIR 1
Koo

ಹೊಸದಿಲ್ಲಿ: ಮಹಾರಾಷ್ಟ್ರದ ವಾಶಿಮ್‌ನ ರೈತರ ಮಗ (farmer’s son) ನೀಲಕೃಷ್ಣ ಗಜರೆ (Nilkrishna Gajare) ಅವರು ಜೆಇಇ ಮೇನ್ 2024 ಪರೀಕ್ಷೆಯಲ್ಲಿ (JEE Main 2024 Result) ದೇಶಕ್ಕೇ ಅಗ್ರಸ್ಥಾನ (AIR 1, First Rank) ಪಡೆದಿದ್ದಾರೆ. ಪರೀಕ್ಷೆಯಲ್ಲಿ ಪರಿಪೂರ್ಣ ಅಂಕಗಳನ್ನು (100) ಗಳಿಸಿದ್ದಾರೆ. ದಕ್ಷೇಶ್ ಸಂಜಯ್ ಮಿಶ್ರಾ ಮತ್ತು ಆರವ್ ಭಟ್ ಕ್ರಮವಾಗಿ AIR 2 ಮತ್ತು 3 ಪಡೆದಿದ್ದಾರೆ. ದೇಶದ ವಿವಿಧ ರಾಜ್ಯಗಳ ಒಟ್ಟು 56 ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿದ್ದಾರೆ.

ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು. “ಪರೀಕ್ಷೆಯನ್ನು ತೆಗೆದುಕೊಂಡ ನಂತರ, ನಾನು ಪ್ರಶ್ನೆ ಪತ್ರಿಕೆಯನ್ನು ವಿಶ್ಲೇಷಿಸಿದೆ. ನಾನು ದುರ್ಬಲ ವಿಷಯಗಳ ಮೇಲೆ ವಿಶೇಷ ಗಮನವನ್ನು ನೀಡುತ್ತಿದ್ದೇನೆ. JEEಯಂತಹ ಪರೀಕ್ಷೆಯನ್ನು ಉತ್ತರಿಸಲು ಸ್ಪಷ್ಟ ಪರಿಕಲ್ಪನೆಗಳನ್ನು ಹೊಂದಿರುವುದು ಬಹಳ ಮುಖ್ಯ. ಇದಲ್ಲದೆ ನಾನು ಒಂದಕ್ಕಿಂತ ಹೆಚ್ಚು ಬಾರಿ ಪ್ರಶ್ನೆಗಳನ್ನು ಅಭ್ಯಾಸ ಮಾಡುತ್ತೇನೆ” ಎಂದು ಗಜರೆ ಹೇಳಿದ್ದಾರೆ.

IIT- JEEಗೆ ತಯಾರಾಗಲು ಗಜರೆ 11ನೇ ತರಗತಿಯಲ್ಲಿ ALLEN ವೃತ್ತಿ ಸಂಸ್ಥೆಗೆ ಸೇರಿದರು. ಅವರು ತಮ್ಮ ಪ್ರಯಾಣದ ಅಡೆತಡೆಗಳನ್ನು ಹೇಗೆ ನಿವಾರಿಸಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.

“ನನ್ನ ಜೆಇಇ ಪ್ರಯಾಣ 11ನೇ ತರಗತಿಯಲ್ಲಿ ಪ್ರಾರಂಭವಾದ ಮೊದಲ ಒಂದು ಅಥವಾ ಎರಡು ತಿಂಗಳುಗಳಲ್ಲಿ ನಾನು ಸ್ವಲ್ಪ ತೊಂದರೆಗಳನ್ನು ಎದುರಿಸಿದೆ. ಅಂದರೆ, 10ನೇ ತರಗತಿಗೆ ಹೋಲಿಸಿದರೆ 11 ಮತ್ತು 12ನೇ ತರಗತಿಗಳ ಪಠ್ಯಕ್ರಮವು ಸಾಕಷ್ಟು ವಿಸ್ತಾರವಾಗಿದೆ. ಆದ್ದರಿಂದ ನಾನು ಆರಂಭದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದೆ. ಆದರೆ ನಾನು ಕೈಬಿಡಲಿಲ್ಲ. ನನ್ನ ಅಧ್ಯಯನವನ್ನು ನಿರಂತರವಾಗಿ ಮುಂದುವರಿಸಿದೆ. ನಾನು ವಿದ್ಯಾರ್ಥಿಗಳಿಗೆ ನೀಡಲು ಬಯಸುವ ಸಂದೇಶ ಏನೆಂದರೆ, ನೀವು ಅಂತಹ ತೊಂದರೆಗಳನ್ನು ಎದುರಿಸಿದರೆ ಅಥವಾ ನನ್ನಿಂದ ಸಾಧ್ಯವೇ ಇಲ್ಲ ಎಂದು ಭಾವಿಸಿದರೆ, ಕೈಬಿಡಬೇಡಿ. ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮುಂದುವರಿಸಿ. ಒಳ್ಳೆಯ ಫಲಿತಾಂಶ ದಕ್ಕುತ್ತದೆ” ಎಂದು ಅವರು ಇನ್‌ಸ್ಟಿಟ್ಯೂಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೇಳೆ ಹೇಳಿದರು.

“ಜೆಇಇ ಅಡ್ವಾನ್ಸ್ಡ್‌ನಲ್ಲಿ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ ಸೀಟು ಪಡೆಯುವುದು ನನ್ನ ಗುರಿ. ಪ್ರಸ್ತುತ ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ” ಎಂದು ಗಜರೆ ಹೇಳಿದ್ದಾರೆ. ಐಐಟಿ-ಜೆಇಇ ಆಕಾಂಕ್ಷಿಗಳಿಗೆ ಗಜರೆ ಸಲಹೆಯನ್ನೂ ಹಂಚಿಕೊಂಡಿದ್ದಾರೆ. “ನಿಮ್ಮ ಗುರಿಯನ್ನು ಖಚಿತಪಡಿಸಿ. ಅದರ ಪ್ರಕಾರ ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮಾಡಿ. ವಿಷಯಗಳನ್ನು ನಿಜವಾದ ಆಸಕ್ತಿಯಿಂದ ಅಧ್ಯಯನ ಮಾಡಿ. ಇದರಿಂದ ಅವು ಹೊರೆಯಾಗುವುದಿಲ್ಲ. ನಿಮ್ಮ ಸಿದ್ಧತೆಯನ್ನು ಸ್ಥಿರವಾಗಿ ಮತ್ತು ನಿರಂತರವಾಗಿ ಮಾಡಿ.”

56 ಅಭ್ಯರ್ಥಿಗಳಿಗೆ ಶೇ.100 ಅಂಕ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಜೆಇಇ ಮುಖ್ಯ 2024 ಸೆಷನ್ 2 ಪರೀಕ್ಷಾ ಫಲಿತಾಂಶ (JEE Main 2024 Result session 2) ಪ್ರಕಟವಾಗಿದೆ. ಒಟ್ಟು 56 ಅಭ್ಯರ್ಥಿಗಳು (Students) ಶೇ.100 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿಗಿಂತ 13 ಹೆಚ್ಚು ವಿದ್ಯಾರ್ಥಿಗಳು ಇದನ್ನು ಪಡೆದಿದ್ದಾರೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ಕಟ್‌ಆಫ್‌ (Cut off marks) ಅಂಕಗಳನ್ನು ಕೂಡ 2.45%ರಷ್ಟು ಹೆಚ್ಚಿಸಲಾಗಿದೆ.

ಸಂಸ್ಥೆಯು ಇಂದು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ 2024 ಫಲಿತಾಂಶವನ್ನು ಬಿಡುಗಡೆ ಮಾಡಿದೆ. 2024ರ ಪರೀಕ್ಷೆಗಳಲ್ಲಿ ಒಟ್ಟು 9.24 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8.2 ಲಕ್ಷ ಜನರು ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದ JEE ಮುಖ್ಯ 2023 ಪರೀಕ್ಷೆಗಳಿಗೆ ಹಾಜರಾಗಿದ್ದರು. ಜೆಇಇ ಮುಖ್ಯ ಏಪ್ರಿಲ್ ಸೆಷನ್‌ಗೆ ಹಾಜರಾದವರು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು: jeemain.nta.ac.in.

ಇದನ್ನೂ ಓದಿ: JEE Main 2024 Result: ಜೆಇಇ ಮೇನ್‌ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಅಂಕ, ಕಟ್‌ಆಫ್‌ 2.45% ಹೆಚ್ಚಳ

Continue Reading

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading
Advertisement
PM Narendra modi in Bagalakote and talk about DeepFake Video
Lok Sabha Election 202442 seconds ago

PM Narendra Modi: ಡೀಪ್‌ ಫೇಕ್‌ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು? ವಿಡಿಯೊ ಕಂಡರೆ ನೀವೇನು ಮಾಡಬೇಕು?

Virat kohli
ಪ್ರಮುಖ ಸುದ್ದಿ1 min ago

Virat kohli : ಕಾಮೆಂಟ್ರಿ ಬಾಕ್ಸ್​​ನಲ್ಲಿ ಕುಳಿತ ವಿಮರ್ಶೆ ಮಾಡುವುದು ಸುಲಭ; ಕೊಹ್ಲಿ ತಿರುಗೇಟು ಕೊಟ್ಟಿದ್ದು ಯಾರಿಗೆ?

kanhaiya kumar
ದೇಶ4 mins ago

Lok Sabha Election 2024: ಎಲೆಕ್ಷನ್‌ ಹೊತ್ತಲ್ಲೇ ಕಾಂಗ್ರೆಸ್‌ಗೆ ಬಿಗ್‌ ಶಾಕ್! ಕನ್ಹಯ್ಯ ಕುಮಾರ್‌ಗೆ ಸ್ವಪಕ್ಷದಲ್ಲೇ ವಿರೋಧ

Hasan Pen Drive case Prajwal Revanna expelled from JDS
ರಾಜಕೀಯ14 mins ago

Hassan Pen Drive Case: ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ ಉಚ್ಚಾಟನೆ? ಎಚ್‌.ಡಿ. ದೇವೇಗೌಡರ ನಿರ್ಧಾರ ಏನು?

Ballari Lok Sabha Constituency Congress Candidate E Tukaram Election Campaign in Daroji
ಬಳ್ಳಾರಿ30 mins ago

Lok Sabha Election 2024: ದರೋಜಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಬಿರುಸಿನ ಪ್ರಚಾರ

Lok Sabha Election
ಪ್ರಮುಖ ಸುದ್ದಿ37 mins ago

Lok Sabha Election: ಇಂದೋರ್​ ಕಾಂಗ್ರೆಸ್​ ಅಭ್ಯರ್ಥಿ ಕಣದಿಂದ ಹಿಂದಕ್ಕೆ; ಚುನಾವಣೆಗೆ ಮೊದಲೇ ಬಿಜೆಪಿಗೆ ಮತ್ತೊಂದು ಸೀಟು!

PM Narendra modi in Bagalakote and Attack on Congress
Lok Sabha Election 202443 mins ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

Family Drama Trailer Out
ಸಿನಿಮಾ52 mins ago

Family Drama Trailer: ʻಡೇರ್ ಡೆವಿಲ್ ಮುಸ್ತಾಫ’ ತಂಡದಿಂದ ವಿಭಿನ್ನ ಸಿನಿಮಾ!

gold rate today rakul
ಚಿನ್ನದ ದರ56 mins ago

Gold Rate Today: ಚಿನ್ನದ ಬೆಲೆಯಲ್ಲಿ ₹330 ಇಳಿಕೆ; ಇಂದಿನ ಬಂಗಾರ- ಬೆಳ್ಳಿ ದರಗಳು ಇಲ್ಲಿವೆ

Narenda Modi Sonia gandhi
ದೇಶ1 hour ago

Narendra Modi: ರಾಜಕೀಯ ದ್ವೇಷ ಮರೆತು ಸೋನಿಯಾ, ರಾಹುಲ್‌ಗೆ ಸಹಾಯ; ಹೀಗ್ಯಾಕಂದ್ರು ಪ್ರಧಾನಿ ಮೋದಿ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 202443 mins ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ9 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202421 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202423 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌