AB De Villiers | ಐಪಿಎಲ್​ 2023 ಸಿದ್ಧತೆಗೆ ಉದ್ಯಾನ ನಗರಿ ಬೆಂಗಳೂರು ತಲುಪಿದ ಎಬಿ ಡಿ ವಿಲಿಯರ್ಸ್‌ - Vistara News

Latest

AB De Villiers | ಐಪಿಎಲ್​ 2023 ಸಿದ್ಧತೆಗೆ ಉದ್ಯಾನ ನಗರಿ ಬೆಂಗಳೂರು ತಲುಪಿದ ಎಬಿ ಡಿ ವಿಲಿಯರ್ಸ್‌

ಐಪಿಎಲ್​ 2023 ಸಿದ್ಧತೆಗೆ ಬೆಂಗಳೂರು ತಲುಪಿದ ಮಿಸ್ಟರ್‌ 360 ಖ್ಯಾತಿಯ ಬ್ಯಾಟರ್‌ ಎಬಿ ಡಿ’ವಿಲಿಯರ್ಸ್‌.

VISTARANEWS.COM


on

abd
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಆಟಗಾರ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್‌(AB De Villiers) ಗುರುವಾರ (ನವೆಂಬರ್‌ 3) ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ವಿಚಾರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಅವರು ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಸೀಸನ್​ಗೆ ತಂಡದ ಬಗ್ಗೆ ಮಹತ್ವದ ಚರ್ಚೆ ನಡೆಸಲು ಮತ್ತು ಆಟಗಾರರ ಜತೆ ಮಾತನಾಡಲು ಬಂದಿದ್ದೇನೆ ಎಂದು ಹೇಳಿದ್ದಾರೆ. ಕಳೆದ ವರ್ಷ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮಿಸ್ಟರ್‌ 360 ಖ್ಯಾತಿಯ ಬ್ಯಾಟರ್‌ ಇದೀಗ ಮರಳಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬಳಗ ಸೇರಿಕೊಂಡಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ.

“ಬೆಂಗಳೂರಿಗೆ ಮತ್ತೆ ಬಂದಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಹಲವು ವರ್ಷಗಳ ಬಳಿಕ ಇಲ್ಲಿನ ಐಟಿಸಿ ಗಾರ್ಡೇನಿಯಾ ಹೋಟೆಲ್‌ಗೆ ಬಂದು ಉಳಿದುಕೊಂಡಿದ್ದೇನೆ. ಇಲ್ಲಿ ಹಲವು ಅದ್ಭುತ ನೆನಪುಗಳಿವೆ” ಎಂದು ಟ್ವಿಟರ್​ನಲ್ಲಿ ವಿಡಿಯೊ ಮೂಲಕ ಎಬಿಡಿ ತಿಳಿಸಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಕೂಡ ಎಬಿಡಿ ಬೆಂಗಳೂರಿಗೆ ಬಂದಿರುವ ಸುದ್ದಿಯನ್ನು ತನ್ನ ಸಾಮಾಜಿಕ ಜಾಲತಾಣವಾದ ಟ್ವಿಟರ್​, ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದೆ. ಅದರಂತೆ ಎಬಿ ಡಿ ವಿಲಿಯರ್ಸ್‌ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಬಂದು ಮಾತನಾಡಿರುವ ವಿಡಿಯೊವನ್ನು ಟ್ವಿಟರ್​ ಮೂಲಕ ಹಂಚಿಕೊಂಡಿದೆ.

ಮಾರ್ಗದರ್ಶನ ನೀಡುವ ಸಾಧ್ಯತೆ

ಎಬಿಡಿ ತಮ್ಮ ಅಚ್ಚುಮೆಚ್ಚಿನ ಆರ್‌ಸಿಬಿ ತಂಡಕ್ಕೆ ಹಿಂದಿರುಗಿದ ವಿಚಾರ ತಿಳಿಯುತ್ತಿದ್ದಂತೆ ಇದೀಗ ಹಲವಾರು ಸುದ್ದಿಗಳು ಹರಿದಾಡಿದೆ. ಅದರಂತೆ ಎಬಿಡಿ ಅವರು ಆರ್​ಸಿಬಿ ತಂಡಕ್ಕೆ ಮಾರ್ಗದರ್ಶನ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಜತೆಗೆ ಡಿಸೆಂಬರ್‌ನಲ್ಲಿ ಐಪಿಎಲ್‌ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಈ ಸಲುವಾಗಿ ನವೆಂಬರ್‌ ಕೊನೇ ವಾರದ ಒಳಗೆ ಎಲ್ಲ ತಂಡಗಳು ತಾವು ಕಾಯ್ದಿರಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಬೇಕಾಗುತ್ತದೆ. ಇದಕ್ಕೆ ನೆರವಾಗುವ ಸಲುವಾಗಿ ಎಬಿಡಿ ಆರ್‌ಸಿಬಿ ಬಳಗ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | PAK VS SA | ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್​ಗೆ 33 ರನ್​ ಗೆಲುವು; ಸೆಮಿಫೈನಲ್​ ಆಸೆ ಜೀವಂತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Yuzvendra Chahal: ಚಹಲ್ ಈಗಾಗಲೇ ರಾಯಲ್ಸ್ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿದ್ದಾರೆ. ವಾರ್ನ್ ಐಪಿಎಲ್​​ನಲ್ಲಿ ಆರ್ಆರ್ ಪರ 57 ವಿಕೆಟ್​ಗಳನ್ನು ಪಡೆದಿದ್ದರು. ಆರ್​ಆರ್​​ ಸ್ಪಿನ್ನರ್ ಚಹಲ್​, 4 ಓವರ್​ಗಳಲ್ಲಿ 43 ರನ್​ಗಳಿಗೆ 1 ಅಂಕಿಅಂಶಗಳೊಂದಿಗೆ ತಮ್ಮ ಸ್ಪೆಲ್ ಅನ್ನು ಕೊನೆಗೊಳಿಸಿದರು.

VISTARANEWS.COM


on

IPL 2024
Koo

ಬೆಂಗಳೂರು: ಮೇ 22 ರಂದು ಆರ್​ಸಿಬಿ ವಿರುದ್ಧ ನಡೆದ ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ಯಜ್ವೇಂದ್ರ ಚಹಲ್ (Yuzvendra Chahal) ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅಹ್ಮದಾಬಾದ್​ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಚಹಲ್ ರಾಯಲ್ಸ್ ಪರ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದ ಹಾಗೆ ಚಹಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಕೊಹ್ಲಿಯನ್ನು ಔಟ್ ಮಾಡಿದ್ದು ಇದೇ ಮೊದಲು.

ಪವರ್ಪ್ಲೇ ಮುಗಿದ ನಂತರ ಚಹಲ್ ಬೌಲಿಂಗ್ ಮಾಡಲು ಬಂದರು. ಕೊಹ್ಲಿ ಆಕ್ರಮಣಕಾರಿಯಾಗಿ 24 ಎಸೆತಗಳಲ್ಲಿ 33 ರನ್ ಗಳಿಸಿದ್ದರು. ಅಂತೆಯೇ ಆರ್​ಸಿಬಿ ಸ್ಟಾರ್ ಚಹಲ್ ಅವರನ್ನು ಎದುರಿಸಲು ಮುಂದಾಗಿ ಸ್ಲಾಗ್ ಸ್ವೀಪ್​ ಮಾಡಿದರು. ಈ ಪ್ರಯತ್ನ ಅವರಿಗೆ ಹಾಲಿ ಋತುವಿನಲ್ಲಿ ಸಾಕಷ್ಟು ಯಶಸ್ಸನ್ನು ತಂದುಕೊಟ್ಟಿತು. ಆದಾಗ್ಯೂ, ಡೊನೊವನ್ ಫೆರೇರಾ ಅವರನ್ನು ಬೌಂಡರಿ ಕ್ಯಾಚ್ ಹಿಡಿದರು. ಇದರೊಂದಿಗೆ ಐಪಿಎಲ್​​ನಲ್ಲಿ ರಾಜಸ್ಥಾನ್​ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಿದ್ಧಾರ್ಥ್ ತ್ರಿವೇದಿ ಅವರನ್ನು ಚಹಲ್ ಹಿಂದಿಕ್ಕಿದರು.

ಚಹಲ್ ಈಗಾಗಲೇ ರಾಯಲ್ಸ್ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿದ್ದಾರೆ. ವಾರ್ನ್ ಐಪಿಎಲ್​​ನಲ್ಲಿ ಆರ್ಆರ್ ಪರ 57 ವಿಕೆಟ್​ಗಳನ್ನು ಪಡೆದಿದ್ದರು. ಆರ್​ಆರ್​​ ಸ್ಪಿನ್ನರ್ ಚಹಲ್​, 4 ಓವರ್​ಗಳಲ್ಲಿ 43 ರನ್​ಗಳಿಗೆ 1 ಅಂಕಿಅಂಶಗಳೊಂದಿಗೆ ತಮ್ಮ ಸ್ಪೆಲ್ ಅನ್ನು ಕೊನೆಗೊಳಿಸಿದರು.

ಐಪಿಎಲ್​ನಲ್ಲಿ ಆರ್​ಆರ್​ ಪರ ಅತಿ ಹೆಚ್ಚು ವಿಕೆಟ್ ಪಡೆದವರು


  • 66 – ಯಜುವೇಂದ್ರ ಚಹಲ್
  • 65 – ಸಿದ್ಧಾರ್ಥ್ ತ್ರಿವೇದಿ
  • 61 – ಶೇನ್ ವ್ಯಾಟ್ಸನ್
  • 57 – ಶೇನ್ ವಾರ್ನ್
  • 47 – ಜೇಮ್ಸ್ ಫಾಲ್ಕನರ್

ಕಾಕತಾಳೀಯವೆಂಬಂತೆ, ಚಹಲ್ ಅವರು ಆರ್​ಸಿಬಿ ಪರ ಆಡಿದ ಸಮಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿ ಪಡೆದಿದ್ದರು. 2014ರಿಂದ 2021ರವರೆಗೆ ಬೆಂಗಳೂರು ಪರ ಆಡಿರುವ ಚಹಲ್ 113 ಪಂದ್ಯಗಳಲ್ಲಿ 139 ವಿಕೆಟ್ ಕಬಳಿಸಿದ್ದಾರೆ.

ಐಪಿಎಲ್ 2024ರಲ್ಲಿ ಚಹಲ್ ಪ್ರದರ್ಶನ ಹೇಗಿದೆ?

ಚಹಲ್ ಈ ಋತುವಿನಲ್ಲಿ ಆರ್​ಅರ್​​ ಪರ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಸ್ಪಿನ್ನರ್ ಪ್ರಸ್ತುತ ಈ ಋತುವಿನಲ್ಲಿ ರಾಯಲ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಚಹಲ್ 14 ಪಂದ್ಯಗಳಿಂದ 26.88ರ ಸರಾಸರಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚಾಹಲ್ ಐಪಿಎಲ್​​ನಲ್ಲಿ 200 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಐಪಿಎಲ್ನಲ್ಲಿ ಅವರ ಪ್ರದರ್ಶನವು ಅವರನ್ನು 2024 ರ ಟಿ 20 ವಿಶ್ವಕಪ್ಗಾಗಿ ಭಾರತೀಯ ತಂಡಕ್ಕೆ ಮರಳಿ ಪಡೆಯುತ್ತದೆ.

Continue Reading

ದೇಶ

Lok Sabha Election : ಬಿಜೆಪಿ 305 ಸೀಟ್ ಗೆಲ್ಲೋದು ಗ್ಯಾರಂಟಿ; ಅಮೆರಿಕದ ರಾಜಕೀಯ ಪಂಡಿತನ ಭವಿಷ್ಯ

Lok Sabha Election: ಜಾಗತಿಕವಾಗಿ ಅಗಾಧ ಪ್ರಮಾಣದ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗಿದೆ. ಜಾಗತೀಕರಣದ ಭವಿಷ್ಯವು ಕಂಪನಿಗಳು ಬಯಸಿದ ರೀತಿಯಲ್ಲಿ ಹೋಗುತ್ತಿಲ್ಲ. ರಾಜಕೀಯವು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮೂಗು ತೂರಿಸುತ್ತಿದೆ. ಯುದ್ಧಗಳು, ಯುಎಸ್-ಚೀನಾ ಸಂಬಂಧಗಳು ಮತ್ತು ಯುಎಸ್ ಚುನಾವಣೆ ಎಲ್ಲವೂ ಅದರ ದೊಡ್ಡ ಭಾಗವಾಗಿದೆ ಎಂದು ಇಯಾನ್ ಬ್ರೆಮ್ಮರ್​ ಹೇಳಿದರು.

VISTARANEWS.COM


on

lok sabha election
Koo

ನವದೆಹಲಿ: 2024 ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ 305 ಸ್ಥಾನಗಳನ್ನು (ಹೆಚ್ಚು ಕಡಿಮೆ) ಗೆಲ್ಲಲಿದೆ ಎಂದು ಅಮೆರಿಕದ ರಾಜಕೀಯ ಪಂಡಿತ ಇಯಾನ್ ಬ್ರೆಮ್ಮರ್ ಮಂಗಳವಾರ ಭವಿಷ್ಯ ನುಡಿದಿದ್ದಾರೆ. ಎನ್​ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಕುರಿತು ಮಾತನಾಡುತ್ತಾ ಬಿಜೆಪಿಗೆ ಮತ್ತೆ ಬಹುಮತ ಖಾತರಿ ಎಂದು ಹೇಳಿದ್ದಾರೆ. ಸಂಶೋಧನಾ ಸಲಹಾ ಸಂಸ್ಥೆಯಾದ ಯುರೇಷಿಯಾ ಗ್ರೂಪ್ನ ಸ್ಥಾಪಕರಾಗಿರುವ ಬ್ರೆಮ್ಮರ್, ಜಾಗತಿಕ ರಾಜಕೀಯ ದೃಷ್ಟಿಕೋನದಿಂದ ಭಾರತೀಯ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಸ್ಥಿರವಾಗಿದೆ. ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕದ ಚುನಾವಣೆಗಿಂತಲೂ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕವಾಗಿ ಅಗಾಧ ಪ್ರಮಾಣದ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗಿದೆ. ಜಾಗತೀಕರಣದ ಭವಿಷ್ಯವು ಕಂಪನಿಗಳು ಬಯಸಿದ ರೀತಿಯಲ್ಲಿ ಹೋಗುತ್ತಿಲ್ಲ. ರಾಜಕೀಯವು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮೂಗು ತೂರಿಸುತ್ತಿದೆ. ಯುದ್ಧಗಳು, ಯುಎಸ್-ಚೀನಾ ಸಂಬಂಧಗಳು ಮತ್ತು ಯುಎಸ್ ಚುನಾವಣೆ ಎಲ್ಲವೂ ಅದರ ದೊಡ್ಡ ಭಾಗವಾಗಿದೆ. ಎಲ್ಲವನ್ನೂ ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ ಮತ್ತು ಹೆಚ್ಚು ನಕಾರಾತ್ಮಕವಾಗಿವೆ. ಜಗತ್ತಿನಲ್ಲಿ ರಾಜಕೀಯವಾಗಿ ಸ್ಥಿರವಾಗಿ ಕಾಣುವ ಏಕೈಕ ವಿಷಯವೆಂದರೆ ಭಾರತದ ಚುನಾವಣೆ. ಉಳಿದೆಲ್ಲವೂ ಸಮಸ್ಯಾತ್ಮಕ ಕಾಣುತ್ತದೆ ಎಂದು ಬ್ರೆಮ್ಮರ್​ ಹೇಳಿದ್ದಾರೆ.

ಏಪ್ರಿಲ್ 19 ರಂದು ಪ್ರಾರಂಭವಾದ ಏಳು ಹಂತಗಳಲ್ಲಿ ಭಾರತೀಯ ಚುನಾವಣೆಯ ಬಗ್ಗೆ ಅವರ ಭವಿಷ್ಯವಾಣಿಯ ಬಗ್ಗೆ ಕೇಳಿದಾಗ, ಯುರೇಷಿಯಾ ಗ್ರೂಪ್ ಸಂಶೋಧನೆಯ ಪ್ರಕಾರ ಬಿಜೆಪಿ 295ರಿಂದ 315 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2014 ರ ಚುನಾವಣೆಯಲ್ಲಿ 282 ಸ್ಥಾನಗಳೊಂದಿಗೆ (ಅದರ ಎನ್ಡಿಎ ಪಾಲುದಾರರೊಂದಿಗೆ ಸೇರಿಕೊಂಟ್ಟು ಒಟ್ಟು 336 ಸ್ಥಾನ ) ಮತ್ತು 2019 ರಲ್ಲಿ 303 (ಎನ್​ಡಿ ಮಿತ್ರಪಕ್ಷಗಳೊಂದಿಗೆ 353) ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಈ ಬಾರಿ ಹ್ಯಾಟ್ರಿಕ್ ಸಾಧನೆ ಮಾಡುವ ನಿರೀಕ್ಷೆಯಿದೆ.

ಭಾರತದಲ್ಲಿ ರಾಜಕೀಯ ಅನಿಶ್ಚಿತತೆ ಇಲ್ಲ

ವಿಶ್ವದ ಎಲ್ಲಾ ಚುನಾವಣೆಗಳಲ್ಲಿ (ಯುರೋಪಿಯನ್ ಒಕ್ಕೂಟದ ಚುನಾವಣೆಗಳು ಮತ್ತು ಬಹುಶಃ, ಯುನೈಟೆಡ್ ಕಿಂಗ್ಡಮ್​ನ ರಾಷ್ಟ್ರೀಯ ಚುನಾವಣೆ ಸೇರಿದಂತೆ) ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತವು ಸುಗಮ ಚುನಾಣೆಯನ್ನು ಹೊಂದಿದೆ. ಭಾರತೀಯ ರಾಜಕೀಯ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಅನಿಶ್ಚಿತತೆ ಇಲ್ಲ” ಎಂದು ಇಯಾನ್ ಬ್ರೆಮ್ಮರ್​ ಹೇಳಿದರು.

ಇದನ್ನೂ ಓದಿ: Other Backward Classes: 2011ರ ನಂತರ ನೀಡಿದ್ದ ಒಬಿಸಿ ಪ್ರಮಾಣಪತ್ರಗಳನ್ನು ರದ್ದು ಮಾಡಿದ ಕೋಲ್ಕೊತಾ ಹೈಕೋರ್ಟ್​​

ಬ್ರೆಮ್ಮರ್ ಅವರು “ಮುಕ್ತ ಮತ್ತು ನ್ಯಾಯಸಮ್ಮತ ಮತ್ತು ಪಾರದರ್ಶಕ” ಭಾರತೀಯ ಚುನಾವಣಾ ಪ್ರಕ್ರಿಯೆಯನ್ನು ಶ್ಲಾಘಿಸಿದರು. “ಬಲವಾದ ಆರ್ಥಿಕ ಕಾರ್ಯಕ್ಷಮತೆ ಮತ್ತು ಸ್ಥಿರ ಸುಧಾರಣೆಯ ಹಿನ್ನೆಲೆಯಲ್ಲಿ ಮೋದಿ ಮೂರನೇ ಅವಧಿಗೆ ಗೆಲ್ಲುವುದು ಬಹುತೇಕ ಖಚಿತ ಎಂದು ಅವರು ಹೇಳಿದರು.

ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ಮಾತನಾಡಿದ ಬ್ರೆಮ್ಮರ್, “ಭಾರತವು ದಶಕಗಳಿಂದ ಕಳಪೆ ಸಾಧನೆ ಮಾಡಿರುವುದನ್ನು ಜಗತ್ತು ನೋಡಿದೆ. ಭಾರತವು ನಂಬಲಾಗದ ಮಾನವ ಸಂಪನ್ಮೂಲ ಮತ್ತು ಬಲವಾದ ಬೌದ್ಧಿಕ ಬಂಡವಾಳ ಹೊಂದಿದೆ. ಅಮೆರಿಕದ ಅನೇಕ ಸಿಇಒಗಳು ಭಾರತದಿಂದ ಬರುತ್ತಾರೆ. ಆದರೂ ಭಾರತವು ಆರ್ಥಿಕತೆಯಾಗಿ ಕಳಪೆ ಸಾಧನೆ ಮಾಡಿದೆ ಎಂಬುದಾಗಿ ವಿಶ್ಲೇಷಣೆ ಮಾಡಿದರು.

ಈಗ ನಾವು ಬೆಳವಣಿಗೆಯನ್ನು ನೋಡುತ್ತಿದ್ದೇವೆ. ಭಾರತವು ಮುಂದಿನ ವರ್ಷ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಬಹುಶಃ 2028 ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ನಾವು ನಂಬಿದ್ದೇವೆ. ಆದರೆ ವಿಶ್ವದ ಇತರ ಭಾಗಗಳೊಂದಿಗಿನ ಸ್ನೇಹವನ್ನು ವ್ಯಾಖ್ಯಾನಿಸುವ ವಿಷಯದಲ್ಲಿ ಭಾರತವು ಹೆಚ್ಚು ಶಕ್ತಿಶಾಲಿಯಾಗುತ್ತಿರುವುದನ್ನು ನಾವು ನೋಡುತ್ತೇವೆ ಎಂದು ಅವರು ಹೇಳಿದರು.

Continue Reading

ಕ್ರೀಡೆ

Virat kohli : ಐಪಿಎಲ್​ನಲ್ಲಿ 8000 ರನ್ ಬಾರಿಸಿ ದಾಖಲೆ ಬರೆದ ಕೊಹ್ಲಿ

Virat Kohli: ಅನುಭವಿ ಬ್ಯಾಟರ್​​ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ 252 ಪಂದ್ಯಗಳಲ್ಲಿ ಆಡಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ ಆರಂಭದಿಂದ ಒಂದೇ ತಂಡದಲ್ಲಿ ಆಡುತ್ತಿರುವ ಅವರು ಈ ಅವಧಿಯಲ್ಲಿ ಬೃಹತ್​ ಸಾಧನೆ ಮಾಡಿದ್ದಾರೆ. ಅವರು 38.69 ರ ಪ್ರಭಾವಶಾಲಿ ಸರಾಸರಿ ಮತ್ತು 131.94 ಸ್ಟ್ರೈಕ್ ರೇಟ್​​ನಲ್ಲಿ ರನ್​ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 55 ಅರ್ಧಶತಕಗಳು ಸೇರಿವೆ.

VISTARANEWS.COM


on

Virat kohli
Koo

ಅಹಮದಾಬಾದ್​: ಆಧುನಿಕ ಕ್ರಿಕೆಟ್​​ನ ಅತ್ಯಂತ ಶ್ರೇಷ್ಠ ಬ್ಯಾಟರ್​ ವಿರಾಟ್​ ಕೊಹ್ಲಿ (Virat Khli) ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಅವರು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿರುವ ಐಪಿಎಲ್​ನಲ್ಲಿ ಒಟ್ಟು 8000 ರನ್​ಗಳನ್ನು ಬಾರಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್​ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 29 ರನ್​ ಬಾರಿಸಿದ ತಕ್ಷಣ ಅವರು ಈ ಮೈಲುಗಲ್ಲು ಸ್ಥಾಪಿಸಿದರು. ಪಂದ್ಯದಕ್ಕೆ ಮೊದಲು ಅವರು ಒಟ್ಟು 7971 ರನ್ ಹೊಂದಿದ್ದರು. ಪ್ರಮುಖ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಲು ಆರಂಭಿಸಿರುವ ಟೂರ್ನಿಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು.

ಅನುಭವಿ ಬ್ಯಾಟರ್​​ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ 252 ಪಂದ್ಯಗಳಲ್ಲಿ ಆಡಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ ಆರಂಭದಿಂದ ಒಂದೇ ತಂಡದಲ್ಲಿ ಆಡುತ್ತಿರುವ ಅವರು ಈ ಅವಧಿಯಲ್ಲಿ ಬೃಹತ್​ ಸಾಧನೆ ಮಾಡಿದ್ದಾರೆ. ಅವರು 38.69 ರ ಪ್ರಭಾವಶಾಲಿ ಸರಾಸರಿ ಮತ್ತು 131.94 ಸ್ಟ್ರೈಕ್ ರೇಟ್​​ನಲ್ಲಿ ರನ್​ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 55 ಅರ್ಧಶತಕಗಳು ಸೇರಿವೆ.

ಇದನ್ನೂ ಓದಿ: Virat kohli : ಕೊಹ್ಲಿಗೆ ಭಯೋತ್ಪಾದಕರ ಬೆದರಿಕೆ ಸುದ್ದಿ; ಸ್ಪಷ್ಟನೆ ನೀಡಿದ ಗುಜರಾತ್​ ಕ್ರಿಕೆಟ್​​ ಸಂಸ್ಥೆ

222 ಪಂದ್ಯಗಳಲ್ಲಿ 35.25ರ ಸರಾಸರಿಯಲ್ಲಿ 6769 ರನ್ ಗಳಿಸಿರುವ ಶಿಖರ್ ಧವನ್ ಎರಡನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಸುರೇಶ್ ರೈನಾ ನಂತರದ ಸ್ಥಾನದಲ್ಲಿದ್ದಾರೆ. ಈ ಬ್ಯಾಟ್ಸ್ಮನ್ಗಳು ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ದಾಖಲೆ ಮುರಿಯುವ ಸಾಧ್ಯತೆಯಿಲ್ಲ.

ವಿರಾಟ್ ಕೊಹ್ಲಿ ಮೂರು ಬಾರಿ (2009, 2011 ಮತ್ತು 2016 ರಲ್ಲಿ) ಐಪಿಎಲ್ ಫೈನಲ್ ತಲುಪಿದ್ದಾರೆ. 2016ರಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81ರ ಸರಾಸರಿಯಲ್ಲಿ 973 ರನ್ ಗಳಿಸಿದ್ದರು. 113 ಅವರ ಅತ್ಯುತ್ತಮ ಸ್ಕೋರ್ ನೊಂದಿಗೆ ನಾಲ್ಕು ಶತಕಗಳು ಮತ್ತು ಏಳು ಅರ್ಧಶತಕಗಳನ್ನು ಬಾರಿಸಿದ್ದರು.

ಐಪಿಎಲ್​​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಮ್ಮದೇ ದಾಖಲೆಯನ್ನು ಮುರಿಯಲು ಏಸ್ ಬ್ಯಾಟರ್​ಗೆ ಇನ್ನೂ 266 ರನ್​ಗಳ ಅಗತ್ಯಿವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫೈನಲ್​ ತಲುಪಿದರೆ ಒಟ್ಟು ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಫೈನಲ್ ತಲುಪಿದರೆ ಈ ಮೈಲಿಗಲ್ಲನ್ನು ತಲುಪುವ ಅವಕಾಶವಿದೆ.

ಆರ್​ಸಿಬಿ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಹ್ಲಿ

ಸತತ ಆರು ಸೋಲುಗಳ ನಂತರ ಬೆಂಗಳೂರು ಮೂಲದ ತಂಡದ ಚೇತರಿಕೆಯಲ್ಲಿ 35 ವರ್ಷದ ಬ್ಯಾಟ್ಸ್ಮನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಸತತ ಆರು ಗೆಲುವುಗಳನ್ನು ಗಳಿಸಿ ಐಪಿಎಲ್ 2024 ರ ಪ್ಲೇಆಫ್ ಹಂತವನ್ನು ತಲುಪಿದೆ. ಬೆಂಗಳೂರು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು +0.459 ನೆಟ್ ರನ್ ರೇಟ್ (ಎನ್ಆರ್ಆರ್) ಹೊಂದಿದೆ.

ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಆರ್​ಸಿಬಿ ತನ್ನ ಗೆಲುವಿನ ಹಾದಿಯನ್ನು ವಿಸ್ತರಿಸಲು ಮತ್ತು ಕ್ವಾಲಿಫೈಯರ್ 2 ಅನ್ನು ತಲುಪಲು ಯೋಜನೆ ರೂಪಿಸಿದೆ. ಸ್ಯಾಮ್ಸನ್ ನೇತೃತ್ವದ ತಂಡವು ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಸೋಲುಗಳನ್ನು ಅನುಭವಿಸಿದೆ ಮತ್ತು ಒಂದು ಮಳೆಯಿಂದಾಗಿ ರದ್ದಾಗಿದೆ.

Continue Reading

ಪ್ರಮುಖ ಸುದ್ದಿ

Virat kohli : ಕೊಹ್ಲಿಗೆ ಭಯೋತ್ಪಾದಕರ ಬೆದರಿಕೆ ಸುದ್ದಿ; ಸ್ಪಷ್ಟನೆ ನೀಡಿದ ಗುಜರಾತ್​ ಕ್ರಿಕೆಟ್​​ ಸಂಸ್ಥೆ

Virat kohli :ಯಾವುದೇ ಭಯೋತ್ಪಾದಕ ಬೆದರಿಕೆ ಇರಲಿಲ್ಲ. ರಾಜಸ್ಥಾನ್ ರಾಯಲ್ಸ್ ಮತ್ತು ಆರ್​ಸಿಬಿ ತಂಡಗಳಿಗೆ ಗುಜರಾತ್ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಲು ನಾವು ಅವಕಾಶ ಕಲ್ಪಿಸಿದ್ದೆವು. ಅಹಮದಾಬಾದ್​ನಲ್ಲಿ ಬೇಸಿಗೆಯಲ್ಲಿ ಸಂಜೆ 6.30 ರವರೆಗೆ ಬೆಳಕು ಉತ್ತಮವಾಗಿರುತ್ತದೆ ಹೀಗಾಗಿ ಆರ್​ಸಿಬಿ ಮಧ್ಯಾಹ್ನ 2 ರಿಂದ 5 ರವರೆಗೆ ಅಭ್ಯಾಸ ಮಾಡಲು ಯೋಜಿಸಿತ್ತು. ಬಿಸಿಲಿನ ಕಾರಣಕ್ಕೆ ಅದನ್ನು ಮಧ್ಯಾಹ್ನ 3ರಿಂದ 6 ಕ್ಕೆ ಬದಲಾಯಿಸಲಾಯಿತು

VISTARANEWS.COM


on

Virat Kohli
Koo

ಬೆಂಗಳೂರು: ಆರ್​ಸಿಬಿ ಮತ್ತು ರಾಜಸ್ಥಾನ್​ ರಾಯಲ್ಸ್​ ತಂಡಗಳ ನಡುವಿನ ಐಪಿಎಲ್ 2024 ಎಲಿಮಿನೇಟರ್ ಪಂದ್ಯಕ್ಕೆ ಮೊದಲು ಅಹಮದಾಬಾದ್​ನಿಂದ ಆಘಾತಕಾರಿ ಸುದ್ದಿ ಬಂದಿತ್ತು. ಭದ್ರತಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಕೌಟ್ ಪಂದ್ಯ ಪ್ರಾರಂಭವಾಗುವ ಮೊದಲು ತನ್ನ ಏಕೈಕ ಅಭ್ಯಾಸವನ್ನು ರದ್ದುಗೊಳಿಸಬೇಕಾಯಿತು ಎಂದು ಹೇಳಲಾಯಿತು. ಮುಖ್ಯವಾಗಿ ವಿರಾಟ್ ಕೊಹ್ಲಿ (Virat kohli ) ಅವರಿಗೆ ಭಯೋತ್ಪಾದಕರಿಂದ ಬೆದರಿಕೆಗಳು ಬಂದಿದ್ದು ಆರ್​ಸಿಬಿ ಅಭ್ಯಾಸ ಹಾಗೂ ಪತ್ರಿಕಾಗೋಷ್ಠಿ ನಡೆಸಲಿಲ್ಲ ಎಂದು ವರದಿಗಳು ಬಂದವು. ಆದರೆ, ಎಲ್ಲ ಊಹಾಪೋಹಗಳಿಗೆ ಕೊನೆ ಎಳೆಯಲಾಗಿದ್ದು ಬೆದರಿಕೆ ಇರಲಿಲ್ಲ ಹಾಗೂ ಅದಕ್ಕಾಗಿ ಅಭ್ಯಾಸ ಮೊಟಕುಗೊಳಿಸಿಲ್ಲ ಎಂದು ಹೇಳಲಾಗಿದೆ.

ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಆರ್​ಸಿಬಿ ಬಳಗ ಮಂಗಳವಾರ ಅಹಮದಾಬಾದ್​ ಗುಜರಾತ್ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಬೇಕಿತ್ತು. ಅದು ಸಮಯಕ್ಕೆ ಸರಿಯಾಗಿ ನಡೆದಿರಲಿಲ್ಲ. ಆದರೆ ಅಭ್ಯಾಸ ಅವಧಿ ಮತ್ತು ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸುವ ಹಿಂದಿನ ಪ್ರಾಥಮಿಕ ಕಾರಣ ವಿರಾಟ್ ಅವರ ಭದ್ರತೆ ಎಂದು ಗುಜರಾತ್ ಪೊಲೀಸರು ಸುಳಿವು ನೀಡಿದ್ದಾರೆ ಎಂಬುದಾಗಿ ಕೆಲವು ಪತ್ರಿಕೆಗಳು ವರದಿ ಮಾಡಿದವು. ಭಯೋತ್ಪಾದಕ ಚಟುವಟಿಕೆಯ ಶಂಕೆಯ ಮೇಲೆ ಅಹಮದಾಬಾದ್ ನಿಂದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಬಂಧನ ಮತ್ತು ನಂತರದ ಘಟನೆಗಳಿಗೆ ಆರ್​ಸಿಬಿ ಅಭ್ಯಾಸ ನಡೆಸದಿರುವುದಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಲಾಗಿದೆ.

ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಉನ್ನತ ಅಧಿಕಾರಿಯೊಬ್ಬರು ನಡೆದ ಘಟನೆಗಳ ಕುರಿತು ಮಾಹಿತಿ ನೀಡಿದ್ದು ಬೆದರಿಕೆಯಂಥ ಘಟನೆಗಳು ನಡೆದಿಲ್ಲ ಎಂದು ಹೇಳಿದ್ದಾರೆ.

ಯಾವುದೇ ಭಯೋತ್ಪಾದಕ ಬೆದರಿಕೆ ಇರಲಿಲ್ಲ. ರಾಜಸ್ಥಾನ್ ರಾಯಲ್ಸ್ ಮತ್ತು ಆರ್​ಸಿಬಿ ತಂಡಗಳಿಗೆ ಗುಜರಾತ್ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಲು ನಾವು ಅವಕಾಶ ಕಲ್ಪಿಸಿದ್ದೆವು. ಅಹಮದಾಬಾದ್​ನಲ್ಲಿ ಬೇಸಿಗೆಯಲ್ಲಿ ಸಂಜೆ 6.30 ರವರೆಗೆ ಬೆಳಕು ಉತ್ತಮವಾಗಿರುತ್ತದೆ ಹೀಗಾಗಿ ಆರ್​ಸಿಬಿ ಮಧ್ಯಾಹ್ನ 2 ರಿಂದ 5 ರವರೆಗೆ ಅಭ್ಯಾಸ ಮಾಡಲು ಯೋಜಿಸಿತ್ತು. ಬಿಸಿಲಿನ ಕಾರಣಕ್ಕೆ ಅದನ್ನು ಮಧ್ಯಾಹ್ನ 3ರಿಂದ 6 ಕ್ಕೆ ಬದಲಾಯಿಸಲಾಯಿತು. ಆದಾಗ್ಯೂ, ರಾಜಸ್ಥಾನ್ ರಾಯಲ್ಸ್ ತಮ್ಮ ಪೂರ್ಣ ತಂಡದೊಂದಿಗೆ ಗುಜರಾತ್ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 3.30 ರಿಂದ 6.30 ರವರೆಗೆ ಅಭ್ಯಾಸ ನಡೆಸಿತು ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಅನಿಲ್ ಪಟೇಲ್ ಹೇಳಿದ್ದಾರೆ.

ಬಿಸಿಲಿನ ಹೊಡೆತದ ಭಯ

ನಗರದಲ್ಲಿ ಸದ್ಯ ಇರುವ ಬಿಸಿಲಿನ ತಾಪಮಾನದಿಂದಾಗಿ ಆರ್​ಸಿಬಿ ತನ್ನ ಅಭ್ಯಾಸವನ್ನು ತಪ್ಪಿಸಿಕೊಂಡಿದೆ. ಅವರು ಅಲ್ಲಿ ಒಳಾಂಗಣ ಅಭ್ಯಾಸ ಸೌಲಭ್ಯವನ್ನು ಬಳಸಬಹುದಾಗಿತ್ತು. ನರೇಂದ್ರ ಮೋದಿ ಕ್ರೀಡಾಂಗಣದ ಒಳಾಂಗಣ ಸೌಲಭ್ಯದಲ್ಲಿ ಆಡಬಹುದು ಎಂದು ಆರ್​ಸಿಬಿಗೆ ತಿಳಿಸಿದ್ದೆವು. ಆದಾಗ್ಯೂ, ಬಿಸಿಗಾಳಿಯ ಕಾರಣಕ್ಕೆ ಆರ್​ಸಿಬಿ ಅಭ್ಯಾಸ ಮಾಡಲು ಬಯಸಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Shah Rukh Khan : ಶಾರುಖ್​ ಖಾನ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಕಾಲೇಜು ಮೈದಾನವು ಅವರ ನಿಯಂತ್ರಣಕ್ಕೆ ಬರುವುದರಿಂದ ನಾವು ಜಿಲ್ಲಾಧಿಕಾರಿ ಕಚೇರಿಯಿಂದ (ಕಾಲೇಜು ಮೈದಾನದಲ್ಲಿ ಟ್ರಾಮ್ ಗಳ ಮೂಲಕ ಅಭ್ಯಾಸ ಮಾಡಲು) ವಿಶೇಷ ಅನುಮತಿಯನ್ನು ಪಡೆದಿದ್ದೇವೆ. ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಲು ಎರಡೂ ತಂಡಗಳಿಗೆ ಜಿಲ್ಲಾಧಿಕಾರಿ ವಿಶೇಷ ಅನುಮತಿ ನೀಡಿದ್ದರು. ಆದಾಗ್ಯೂ, ನಾನು ಮೊದಲೇ ಹೇಳಿದಂತೆ, ಬಿಸಿಗಾಳಿಯಿಂದಾಗಿ ಆರ್​ಸಿಬಿ ಅಭ್ಯಾಸ ಅವಧಿ ತಪ್ಪಿಸಿತು, “ಎಂದು ಪಟೇಲ್ ಹೇಳಿದರು.

ಪಂದ್ಯದ ಮೊದಲು ಯಾವುದೇ ಪತ್ರಿಕಾಗೋಷ್ಠಿ ಇರಲಿಲ್ಲ ಮತ್ತು ಅದು ಊಹಾಪೋಹಗಳನ್ನು ಹೆಚ್ಚಿಸಿತು. “ಈ ಪಂದ್ಯಕ್ಕೆ ಮೊದಲು ಪತ್ರಿಕಾಗೋಷ್ಠಿಯನ್ನು ನಿಗದಿಪಡಿಸಲಾಗಿಲ್ಲ, ಏಕೆಂದರೆ ಈಗಾಗಲೇ ಮೊದಲ ಕ್ವಾಲಿಫೈಯರ್ ಪಂದ್ಯ (ಕೋಲ್ಕತಾ ನೈಟ್ ರೈಡರ್ಸ್ ಮತ್ತು ಹೈದರಾಬಾದ್ ಸನ್​ರೈಸರ್ಸ್​ ನಡುವೆ) ನಡೆದಿದೆ. ಈ ಸಂದರ್ಭದಲ್ಲಿ ಅವಧಿಗಳನ್ನು ಹೊಂದಿಲ್ಲದಿರುವುದು ಹೊಸದೇನಲ್ಲ. ಆಟಗಾರರು ದೀರ್ಘ ಅಭಿಯಾನದ ನಂತರ ಪಂದ್ಯಕ್ಕೆ ತಾಜಾವಾಗಿರಲು ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದ್ದಾರೆ.

Continue Reading
Advertisement
young womans lover was stabbed in the neck by an ex lover
ಉತ್ತರ ಕನ್ನಡ8 mins ago

Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

IPL 2024
ಪ್ರಮುಖ ಸುದ್ದಿ17 mins ago

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Pune porsche car crash
ದೇಶ48 mins ago

Pune porsche car crash : ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಜಾಮೀನು ವಜಾ

Kalki 2898 AD
ಪ್ರಮುಖ ಸುದ್ದಿ52 mins ago

Kalki 2898 AD: ಕಲ್ಕಿ ಚಿತ್ರದ ʼಬುಜ್ಜಿʼ ಪಾತ್ರ ರಿವೀಲ್; ಅದ್ಧೂರಿ ಕಾರ್ಯಕ್ರಮದ LIVE ವಿಡಿಯೊ ಇಲ್ಲಿದೆ

Congress leader actress Vidya murder case Accused husband arrested
ಕರ್ನಾಟಕ1 hour ago

Murder Case: ನಟಿ, ಕಾಂಗ್ರೆಸ್ ನಾಯಕಿ ವಿದ್ಯಾ ಹತ್ಯೆ ಆರೋಪಿ ಪತಿಯ ಬಂಧನ

CM City Rounds CM Siddaramaiah lashes out at flyover slowdown and Notice to cancel the tender
ಬೆಂಗಳೂರು1 hour ago

CM City Rounds: ಫ್ಲೈ ಓವರ್‌ ನಿಧಾನಗತಿಗೆ ಸಿಎಂ ಕೆಂಡಾಮಂಡಲ; ಟೆಂಡರ್‌ ರದ್ದು ಮಾಡಿ ಬೇರೆಯವರಿಗೆ ಗುತ್ತಿಗೆ ಕೊಡಲು ಸೂಚನೆ

lok sabha election
ದೇಶ1 hour ago

Lok Sabha Election : ಬಿಜೆಪಿ 305 ಸೀಟ್ ಗೆಲ್ಲೋದು ಗ್ಯಾರಂಟಿ; ಅಮೆರಿಕದ ರಾಜಕೀಯ ಪಂಡಿತನ ಭವಿಷ್ಯ

Prajwal Revanna Case SIT summons Bhavani Revanna car driver in KR Nagar victim kidnapped case
ಕರ್ನಾಟಕ2 hours ago

Prajwal Revanna Case: ಕೆ ಆರ್‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌; ಭವಾನಿ ರೇವಣ್ಣ ಕಾರು ಚಾಲಕನಿಗೆ‌ SIT ಸಮನ್ಸ್

Rain News
ಕರ್ನಾಟಕ2 hours ago

Rain News: ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ; ಹಾರಿದ 10ಕ್ಕೂ ಹೆಚ್ಚು ಮನೆಗಳ ಮೇಲಿನ ಶೀಟ್, ಇಬ್ಬರಿಗೆ ಗಾಯ

Virat kohli
ಕ್ರೀಡೆ2 hours ago

Virat kohli : ಐಪಿಎಲ್​ನಲ್ಲಿ 8000 ರನ್ ಬಾರಿಸಿ ದಾಖಲೆ ಬರೆದ ಕೊಹ್ಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ16 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌