2024 Election | ಬಿಜೆಪಿಗೆ ಗೆಲ್ಲಲು ಕಷ್ಟವಾಗಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆ 144ರಿಂದ 160ಕ್ಕೆ ಏರಿಕೆ! ಏನು ಕಾರಣ? - Vistara News

ದೇಶ

2024 Election | ಬಿಜೆಪಿಗೆ ಗೆಲ್ಲಲು ಕಷ್ಟವಾಗಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆ 144ರಿಂದ 160ಕ್ಕೆ ಏರಿಕೆ! ಏನು ಕಾರಣ?

2024ರ ಸಾರ್ವತ್ರಿಕ ಚುನಾವಣೆಗೆ (2024 Election) ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಬಿಜೆಪಿಯು ಗೆಲ್ಲಲು ಕಷ್ಟವಾಗಿರುವ ಕ್ಷೇತ್ರಗಳ ಮೇಲೆ ಹೆಚ್ಚು ತನ್ನ ಗಮನವನ್ನು ಕೇಂದ್ರೀಕರಿಸಲು ನಿರ್ಧರಿಸಿದೆ.

VISTARANEWS.COM


on

J P Nadad @ BJP President
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸಾರ್ವತ್ರಿಕ ಲೋಕಸಭೆ ಚುನಾವಣೆಗೆ (2024 Election) ಆಲ್ಮೋಸ್ಟ್ ಇನ್ನೂ ಎರಡು ವರ್ಷ ಬಾಕಿ ಇದೆ. ಆದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಈಗಿನಿಂದಲೇ ಚುನಾವಣೆ ತಯಾರಿ ನಡೆಸುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕಠಿಣವಾಗಿರುವ ಕ್ಷೇತ್ರಗಳ ಸಂಖ್ಯೆಯನ್ನು 144 ಕ್ಷೇತ್ರಗಳಿಂದ 160ಕ್ಕೆ ಹೆಚ್ಚಿಸಿದೆ! ಈ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನವನ್ನು ಕೇದ್ರೀಕರಿಸಲು ನಿರ್ಧರಿಸಿದೆ.

ಬಿಹಾರದಲ್ಲಿ ಬಿಜೆಪಿಯು ನಿತೀಶ್ ಕುಮಾರ್ ಅವರ ನೇತೃತ್ವದ ಜೆಡಿಯುನಿಂದ ಸ್ನೇಹ ಕಡಿದುಕೊಂಡಿದ್ದರಿಂದ ಬಹುತೇಕ ಕಡೆ ಅದು ಏಕಾಂಗಿಯಾಗಿ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಗೆಲ್ಲಲು ಕಠಿಣವಾಗಿರುವ ಕ್ಷೇತ್ರಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ನಿರ್ದಿಷ್ಟ ಕ್ಷೇತ್ರಗಳ ನಾಯಕರಿಗೆ ಸೂಚಿಸಲಾಗಿದೆ. ಆಯಾ ರಾಜ್ಯಗಳ ಸಂಘಟನೆ ಹೊಣೆ ಹೊತ್ತಿರುವ ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿ, ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಯು ತೆಲಂಗಾಣ ಮತ್ತು ಬಿಹಾರದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುವ ಸನ್ನಾಹದಲ್ಲಿದೆ. ಈ ಹಿನ್ನೆಲೆಯಲ್ಲಿ ಪಟನಾ ಮತ್ತು ಹೈದ್ರಾಬಾದ್‌ನಲ್ಲಿ ಎರಡು ದಿನಗಳ ಕಾಲ ವಿಸ್ತಾರಕ ಸಭೆಗಳನ್ನು ನಡೆಸುತ್ತಿದೆ. ಪಟನಾದಲ್ಲಿ ಡಿಸೆಂಬರ್ 21 ಮತ್ತು 22ರಂದು ಸಭೆ ನಡೆದರೆ, ಹೈದ್ರಾಬಾದ್‌ನಲ್ಲಿ 29 ಮತ್ತು 29 ಈ ಸಭೆಯನ್ನು ಆಯೋಜಿಸಲಾಗುತ್ತಿದೆ. ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಈ ಎರಡೂ ಸಭೆಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.

ಇದನ್ನೂ ಓದಿ | Rahul Gandhi | ʼಇದು ನೆಹರು ಕಾಲದ ಭಾರತವಲ್ಲʼ, ಚೀನಾ, ಸೇನೆ ಬಗ್ಗೆ ರಾಹುಲ್‌ ಹೇಳಿಕೆಗೆ ಬಿಜೆಪಿ ನಾಯಕರ ತಿರುಗೇಟು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Nagarjuna Sagar: ನಾಗಾರ್ಜುನಸಾಗರದ ಈ ಸ್ಥಳಗಳು ವಾರಾಂತ್ಯ ಪ್ರವಾಸಕ್ಕೆ ಸೂಕ್ತ

ವಾರಾಂತ್ಯ ಬಂದಾಗ ಎಲ್ಲಾದರೂ ಹೋಗಬೇಕು ಅಂದುಕೊಳ್ಳುವವರಿಗೆ ನಾಗಾರ್ಜುನಸಾಗರ (Nagarjuna Sagar) ಹೇಳಿ ಮಾಡಿಸಿದ ಸ್ಥಳ. ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಎಲ್ಲಾ ಜಂಜಡಗಳನ್ನು ನೀವು ಮರೆತು ಹೊಸ ಉತ್ಸಾಹವನ್ನು ತುಂಬಿಕೊಳ್ಳಬಹುದು. ನಾಗಾರ್ಜುನ ಸಾಗರದ ಸುತ್ತಮುತ್ತಲಿನ ಈ ಸ್ಥಳಗಳು ರಮಣೀಯವಾಗಿವೆ. ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾಗಿದೆ. ಈ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

Nagarjuna Sagar
Koo

ಬೆಂಗಳೂರು: ಪ್ರತಿದಿನ ದಿನ ಒತ್ತಡದ ಬದುಕು, ಕೆಲಸದಲ್ಲಿ ಮುಳುಗಿರುವ ಜನರು ವಾರಾಂತ್ಯದ (Nagarjuna Sagar)ವೇಳೆ ತಮ್ಮ ಕುಟುಂಬದ ಜೊತೆ ಮೋಜು ಮಸ್ತಿ ಮಾಡಲು ಬಯಸುತ್ತಾರೆ. ಅದಕ್ಕಾಗಿ ಟೂರ್, ಹೋಟೆಲ್ ಮುಂತಾದಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಅಂತವರು ವಾರಾಂತ್ಯದ ವೇಳೆಗೆ ಆಂಧ್ರಪ್ರದೇಶದಲ್ಲಿರುವ ನಾಗಾರ್ಜುನಸಾಗರದ ಈ ಸ್ಥಳಗಳಿಗೆ ಭೇಟಿ ನೀಡಿ. ನಾಗಾರ್ಜುನಸಾಗರ ಗದ್ದಲಗಳಿಂದ ಮುಕ್ತವಾದ ಪ್ರದೇಶವಾಗಿದೆ. ಇಲ್ಲಿ ಪ್ರಶಾಂತವಾದ ವಾತಾವರಣ ಹಾಗೂ ಅನೇಕ ಆಕರ್ಷಕ ಸ್ಥಳಗಳನ್ನು ಹೊಂದಿವೆ. ವಾರಾಂತ್ಯದ ಪ್ರವಾಸಕ್ಕೆ ಇದು ಸೂಕ್ತವಾದ ಸ್ಥಳ. ಪ್ರಕೃತಿ ಪ್ರೇಮಿಗಳಿಗೆ, ಇತಿಹಾಸಗಾರರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಹಾಗಾಗಿ ನಾಗಾರ್ಜುನಸಾಗರಕ್ಕೆ ಬಂದಾಗ ಇಲ್ಲಿನ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ.

Nagarjuna Sagar

ನಾಗಾರ್ಜುನಸಾಗರ ಅಣೆಕಟ್ಟು

ಇದು ವಿಶ್ವದ ಅತಿದೊಡ್ಡ ಕಲ್ಲಿನ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದನ್ನು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇಲ್ಲಿ ಅದ್ಭುತವಾದ ಪರಿಸರವಿದೆ. ಪ್ರವಾಸಿಗರು ಇಲ್ಲಿ ಖುಷಿಯಾಗಿ ವಾಕಿಂಗ್ ಮಾಡಬಹುದು. ಹಾಗೇ ಜಲಾಶಯದ ಮೇಲಿನ ಪ್ರಶಾಂತವಾದ ನೀರಿನಲ್ಲಿ ದೋಣಿ ವಿಹಾರ ಮಾಡುತ್ತಾ ಸುತ್ತಲಿನ ಬೆಟ್ಟ ಹಾಗೂ ಕಾಡುಗಳ ನೋಟವನ್ನು ಸವಿಯಬಹುದಾಗಿದೆ.

Weekend Getaway

ಎತ್ತಿಪೋತಲ ಜಲಪಾತ

ನಲ್ಲಮಲ ಬೆಟ್ಟದ ಹಸಿರಿನ ನಡುವೆ ನೆಲೆಸಿರುವ ಎತ್ತಿಪೋತಲ ಜಲಪಾತ ಪ್ರಕೃತಿ ಪ್ರಿಯರಿಗೆ ಇಷ್ಟವಾದ ಸ್ಥಳವಾಗಿದೆ. ಇಲ್ಲಿನ ಹಸಿರಾದ ಪರಿಸರದ ನಡುವೆ 70 ಅಡಿ ಎತ್ತರದಿಂದ ಧುಮುಕುವ ಜಲಪಾತ ಅದ್ಭುತ ನೋಟವನ್ನು ನೀಡುತ್ತದೆ. ಜಲಪಾತದ ಕೆಳಗಿರುವ ನೀರಿನಲ್ಲಿ ಪ್ರವಾಸಿಗರು ಸ್ನಾನ ಮಾಡಬಹುದಾಗಿದೆ. ಇಲ್ಲಿ ದಟ್ಟವಾದ ಕಾಡಿನ ನಡುವೆ ಚಾರಣ ಮಾಡಬಹುದು. ಇಲ್ಲಿ ಅನೇಕ ರೀತಿಯ ಪ್ರಾಣಿಗಳು ಮತ್ತು ಸಸ್ಯಗಳು ಕಂಡುಬರುತ್ತವೆ.

Weekend Getaway

ನಾಗಾರ್ಜುನಕೊಂಡ ದ್ವೀಪ

ಇಲ್ಲಿ ಕ್ರಿ.ಪೂ 3ನೇ ಶತಮಾನಕ್ಕೆ ಸೇರಿದ ಪ್ರಾಚೀನ ಬೌದ್ಧ ಅವಶೇಷಗಳನ್ನು ಅನ್ವೇಷಿಸಬಹುದಂತೆ. 3 ನೇ ಶತಮಾನದಲ್ಲಿ ಈ ದ್ವೀಪ ಬೌದ್ಧ ಧರ್ಮ ಮತ್ತು ಸಂಸ್ಕೃತಿಯನ್ನು ಕಲಿಯುವ ವಿದ್ಯೆ ಕೇಂದ್ರವಾಗಿತ್ತಂತೆ. ಹಾಗಾಗಿ ನಾವು ಇಲ್ಲಿ ಮಠಗಳು, ಸ್ತೂಪಗಳು ಮತ್ತು ಶಿಲ್ಪಗಳು ಇತ್ಯಾದಿಗಳ ಅವಶೇಷಗಳನ್ನು ಕಾಣಬಹುದಂತೆ. ಇದಲ್ಲದೇ ಇಲ್ಲಿಗೆ ಹೋಗಲು ದೋಣಿ ಸವಾರಿಯನ್ನು ಮಾಡಬೇಕಾಗುತ್ತದೆಯಂತೆ. ಇದು ಬಹಳ ಸಾಹಸಮಯವಾಗಿದೆಯಂತೆ.

Weekend Getaway

ಶ್ರೀಶೈಲಂ ವನ್ಯಜೀವಿ ಅಭಯಾರಣ್ಯ

ನಾಗಾರ್ಜುನ ಸಾಗರದಲ್ಲಿರುವ ಶ್ರೀಶೈಲಂ ವನ್ಯಜೀವಿ ಅಭಯಾರಣ್ಯ ಪ್ರಕೃತಿ ಹಾಗೂ ವನ್ಯಜೀವಿ ಪ್ರಿಯರಿಗೆ ಉತ್ತಮವಾದ ಸ್ಥಳವಾಗಿದೆ. ಇದು ನಲ್ಲಮಲ ಬೆಟ್ಟಗಳ ಭೂಪ್ರದೇಶದಲ್ಲಿ ಹರಡಿದೆ. ಇಲ್ಲಿ ಅನೇಕ ರೀತಿಯ ಪಕ್ಷಿಗಳು, ಹುಲಿಗಳು, ಚಿರತೆಗಳು ಮತ್ತು ಕರಡಿಯಂತಹ ಅನೇಕ ವಿಭಿನ್ನ ಪ್ರಾಣಿ ಪ್ರಭೇದಗಳು ಕಂಡುಬರುತ್ತದೆಯಂತೆ. ಹಾಗೇ ಇಲ್ಲಿ ವನ್ಯಜೀವಿಗಳನ್ನು ನೋಡಲು ಸಫಾರಿ ನಡಿಗೆಗಳನ್ನು ಆಯೋಜಿಸಲಾಗಿದೆಯಂತೆ.

Weekend Getaway

ನಾಗಾರ್ಜುನಸಾಗರ ವನ್ಯಜೀವಿ ಅಭಯಾರಣ್ಯ

ಇದು ಪ್ರಕೃತಿ ಹಾಗೂ ವನ್ಯಜೀವಿ ಪ್ರಿಯರಿಗೆ ಖುಷಿ ನೀಡುವ ಮತ್ತೊಂದು ಅದ್ಭುತವಾದ ಸ್ಥಳವಾಗಿದೆ. ಇಲ್ಲಿ ವಿವಿಧ ಸಸ್ಯ ಮತ್ತು ಪ್ರಾಣಿಗಳು ಕಂಡುಬರುತ್ತವೆಯಂತೆ. ಈ ಅಭಯಾರಣ್ಯ ಪೂರ್ವ ಘಟ್ಟಗಳ ಒರಟು ಭೂಪ್ರದೇಶದಲ್ಲಿ ಇದೆ. ಇಲ್ಲಿ ಹುಲಿಗಳು, ಚಿರತೆಗಳು, ಭಾರತೀಯ ಕಾಡೆಮ್ಮೆ ಮುಂತಾದ ಹಲವಾರು ಪ್ರಾಣಿಗಳ ಜೊತೆಗೆ ಸಸ್ಯಗಳನ್ನು ನೊಡಬಹುದಂತೆ. ಅಲ್ಲದೇ ಇಲ್ಲಿ ಸಂದರ್ಶಕರಿಗೆ ಸಫಾರಿ ನಡಿಗೆ ಅಥವಾ ಪಕ್ಷಿ ವೀಕ್ಷಣೆಯ ಮೂಲಕ ಈ ಪ್ರದೇಶವನ್ನು ಅನ್ವೇಷಣೆ ಮಾಡಲು ಅವಕಾಶವಿದೆಯಂತೆ.

ಇದನ್ನೂ ಓದಿ: Delhi Tour: ದೆಹಲಿಗೆ ಪ್ರವಾಸಕ್ಕೆ ಹೋದಾಗ ಮಿಸ್ ಮಾಡದೇ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ!

ಒಟ್ಟಾರೆ ನಾಗಾರ್ಜುನಸಾಗರ ವನ್ಯಜೀವಿ ಪ್ರಿಯರಿಗೆ, ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಹಾಗಾಗಿ ವಾರಾಂತ್ಯದಲ್ಲಿ ಇಲ್ಲಿಗೆ ಬರುವುದನ್ನು ಮರೆಯಬೇಡಿ.

Continue Reading

ಉದ್ಯೋಗ

Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Job Alert: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಲ್ಲಿ ಖಾಲಿ ಇರುವ 116 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಟೆಕ್ನಿಶಿಯನ್ ಹುದ್ದೆ ಇದಾಗಿದ್ದು, ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್‌ 20.

VISTARANEWS.COM


on

Job Alert
Koo

ಬೆಂಗಳೂರು: ಒಂದೊಳ್ಳೆ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (Hindustan Aeronautics Limited)ನಲ್ಲಿ ಖಾಲಿ ಇರುವ 116 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (HAL Recruitment 2024). ಟೆಕ್ನಿಶಿಯನ್ ಹುದ್ದೆ ಇದಾಗಿದ್ದು, ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್‌ 20 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಮೆಕ್ಯಾನಿಕಲ್ 64 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಮೆಕ್ಯಾನಿಕಲ್‌ / ಪ್ರೊಡಕ್ಷನ್‌.
ಎಲೆಕ್ಟ್ರಿಕಲ್ 44 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಎಲೆಕ್ಟ್ರಿಕಲ್‌ / ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌.
ಎಲೆಕ್ಟ್ರಾನಿಕ್ಸ್‌ 8 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಎಲೆಕ್ಟ್ರಾನಿಕ್ಸ್‌ / ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌ / ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌ / ಎಲೆಕ್ಟ್ರಾನಿಕ್ಸ್‌ & ಟೆಲಿಕಮ್ಯುನಿಕೇಷನ್‌.

ವಯೋಮಿತಿ

ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ-ಎನ್‌ಸಿಎಸ್‌ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಜುಲೈ 7ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಆಯ್ಕೆಯಾದವರಿಗೆ ಬೆಂಗಳೂರು (ಕರ್ನಾಟಕ), ಜೋಧಪುರ (ರಾಜಸ್ಥಾನ), ನಾಗತಲಾವ್ (ರಾಜಸ್ಥಾನ), ಭುವನೇಶ್ವರ್ (ಒಡಿಸ್ಸಾ), ಪೋರ್‌ಬಂದರ್‌ (ಗುಜರಾತ್), ರತ್ನಗಿರಿ (ಮಹಾರಾಷ್ಟ್ರ), ಶಿಕ್ರಾ-ಮುಂಬೈ (ಮಹಾರಾಷ್ಟ್ರ), ಕೊಚ್ಚಿ (ಕೇರಳ), ಪುದುಚೇರಿ, ಪರುಂಡು-ರಾಮೇಶ್ವರಂ, ಚೆನ್ನೈ, ಸೂಲೂರು (ತಮಿಳುನಾಡು), ದೇಗಾ ವೈಜಾಗ್, ತೇಜ್ಪುರ್ (ಅಸ್ಸಾಂ), ಮಿಸ್ಸಮರಿ (ಅಸ್ಸಾಂ), ದಿಂಜನ್ (ಅಸ್ಸಾಂ), ಲಿಕಾಬಲಿ (ಅಸ್ಸಾಂ), ಉಧಂಪುರ (ಜಮ್ಮು ಮತ್ತು ಕಾಶ್ಮೀರ), ಲೇಹ್, ಭಟಿಂಡಾ (ಪಂಜಾಬ್), ಮಾಮುನ್ (ಪಂಜಾಬ್), ಹಲ್ದ್ವಾನಿ (ಉತ್ತರಖಂಡ), ಟಿಬ್ರಿ (ಪಂಜಾಬ್) ಪೈಕಿ ಒಂದು ಕಡೆ ಪೋಸ್ಟಿಂಗ್‌ ನೀಡಲಾಗುತ್ತದೆ.

HAL Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (halmro.formflix.com).
  • ಅಗತ್ಯ ಮಾಹಿತಿ ತುಂಬಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಕ್ಯಾಪ್ಚಾ ನಮೂದಿಸಿ.
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂನ ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಇದನ್ನು ಗಮನಿಸಿ

  • ಭಾರತೀಯ ನಾಗರಿಕರು ಮಾತ್ರ ಅಪ್ಲೈ ಮಾಡಬಹುದು
  • ಒಬ್ಬರು ಒಂದು ಪೋಸ್ಟ್‌ಗೆ ಮಾತ್ರ ಅರ್ಜಿ ಸಲ್ಲಿಸಬೇಕು.
  • ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಮತ್ತೆ ತಿದ್ದಲು ಅವಕಾಶವಿಲ್ಲ.
  • ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು.
  • ಇವು ಖಾಯಂ ಹುದ್ದೆಗಳಲ್ಲ. ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Job Alert: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading

ಕ್ರೈಂ

Fraud Case: 300 ರೂ. ಬೆಲೆಯ ನಕಲಿ ಆಭರಣವನ್ನು ವಿದೇಶಿ ಮಹಿಳೆಗೆ 6 ಕೋಟಿ ರೂ.ಗೆ ಮಾರಿದರು!

Fraud Case: ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್ ನಲ್ಲಿರುವ ಅಂಗಡಿಯೊಂದರಲ್ಲಿ ಅಮೇರಿಕಾದ ಮಹಿಳೆ ಚೆರಿಶ್ ಅವರು ಚಿನ್ನ ಖರೀದಿಸಿದ್ದಾರೆ. ಆಗ ಅಂಗಡಿಯ ಮಾಲೀಕ ಚಿನ್ನದ ಪಾಲಿಶ್ ಇರುವ 300 ರೂ ಬೆಲೆಯ ಬೆಳ್ಳಿ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆ ಹೇಳಿ ಮಾರಾಟ ಮಾಡಿದ್ದಾನೆ. ಆ ಮಹಿಳೆ ಅಮೆರಿಕಕ್ಕೆ ಮರಳಿದಾಗ ಈ ಮೋಸ ಬಯಲಾಗಿದೆ.

VISTARANEWS.COM


on

Fraud Case
Koo

ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಚಿನ್ನದ ಮೌಲ್ಯ ಹೆಚ್ಚಾಗಿ ಜನರು ಕಂಡಕಂಡಲ್ಲಿ ಚಿನ್ನದ ವಿಚಾರದಲ್ಲಿ ಮೋಸ, ವಂಚನೆ ಮಾಡುತ್ತಿದ್ದಾರೆ. ಚಿನ್ನಕ್ಕಾಗಿ ಜನರ ಪ್ರಾಣವನ್ನು ತೆಗೆಯುತ್ತಿದ್ದಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಕಳ್ಳತನ ಪ್ರಕರಣ ಹೆಚ್ಚಾಗಿದೆ ಇದರ ಜೊತಗೆ ಚಿನ್ನವೆಂದು ನಂಬಿಸಿ ವಂಚನೆ ಮಾಡುವ ಪ್ರಕರಣ (Fraud Case) ಹೆಚ್ಚಾಗಿದ್ದಾರೆ. ಇಂತಹದೊಂದು ಘಟನೆ ಜೈಪುರದಲ್ಲಿ ನಡೆದಿದೆ.

ರಾಜಸ್ಥಾನದ ಅಂಗಡಿ ಮಾಲೀಕನೊಬ್ಬ 300 ರೂ. ಮೌಲ್ಯದ ಕೃತಕ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆಗೆ ಅಮೇರಿಕಾದ ಮಹಿಳೆಗೆ ಮಾರಾಟ ಮಾಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಚಿನ್ನದ ಪಾಲಿಶ್‌ ಇರುವ ಬೆಳ್ಳಿ ಆಭರಣ ಮಾರಾಟ

ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್ ನಲ್ಲಿರುವ ಅಂಗಡಿಯೊಂದರಲ್ಲಿ ಅಮೇರಿಕಾದ ಮಹಿಳೆ ಚೆರಿಶ್ ಅವರು ಚಿನ್ನ ಖರೀದಿಸಿದ್ದಾರೆ. ಆಗ ಅಂಗಡಿಯ ಮಾಲೀಕ ಚಿನ್ನದ ಪಾಲಿಶ್ ಇರುವ 300ರೂ ಬೆಲೆಯ ಬೆಳ್ಳಿ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆ ಹೇಳಿ ಮಾರಾಟ ಮಾಡಿದ್ದಾನೆ. ಮಹಿಳೆ ಈ ವರ್ಷ ಏಪ್ರಿಲ್ ನಲ್ಲಿ ಅಮೇರಿಕಾದಲ್ಲಿ ನಡೆದ ಪ್ರದರ್ಶನದಲ್ಲಿ ತಾನು ಜೈಪುರದಲ್ಲಿ ಖರೀದಿಸಿದ ಆಭರಣವನ್ನು ಪ್ರದರ್ಶಿಸಿದಾಗ ಅದು ನಕಲಿ ಎಂಬುದಾಗಿ ತಿಳಿದುಬಂದಿದೆ. ಆಗ ಮಹಿಳೆ ಭಾರತಕ್ಕೆ ಬಂದು ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ಅಂಗಡಿ ಮಾಲೀಕ ಗೌರವ್ ಸೋನಿ ಎಂಬುದಾಗಿ ತಿಳಿದುಬಂದಿದೆ. ಈತ ತನ್ನ ಕೃತ್ಯವನ್ನು ಒಪ್ಪಿಕೊಳ್ಳದ ಕಾರಣ ಮಹಿಳೆ ಜೈಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿಗಳು ಮಹಿಳೆಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಮಹಿಳೆ ಯುಎಸ್ ನ ರಾಯಭಾರ ಕಚೇರಿಯಿಂದ ಸಹಾಯ ಕೋರಿದ್ದಾಳೆ. ಅವರು ಈ ಬಗ್ಗೆ ತನಿಖೆ ನಡೆಸುವಂತೆ ಜೈಪುರ ಪೊಲೀಸರಿಗೆ ಒತ್ತಾಯಿಸಿದ್ದಾರೆ.

2022ರಲ್ಲಿ ಇನ್ ಸ್ಟಾಗ್ರಾಂನಲ್ಲಿ ಗೌರವ್ ಸೋನಿಯನ್ನು ಸಂಪರ್ಕಿಸಿದ ಮಹಿಳೆ ಕಳೆದ 2 ವರ್ಷಗಳಲ್ಲಿ ಈ ಕೃತಕ ಆಭರಣಗಳಿಗಾಗಿ 6 ಕೋಟಿ ರೂಪಾಯಿಗಳನ್ನು ಪಾವತಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಗೌರವ್ ಮತ್ತು ಆತನ ತಂದೆ ರಾಜೇಂದ್ರ ಸೋನಿ ಇಬ್ಬರು ಪರಾರಿಯಾಗಿದ್ದಾರೆ. ಹಾಗಾಗಿ ಪೊಲೀಸರು ಅವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅದಕ್ಕಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ. ಹಾಗೇ ಆಭರಣಕ್ಕೆ ನಕಲಿ ಪ್ರಮಾಣಪತ್ರ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:Anupam Kher-Rajinikanth: ಮೋದಿ ಪ್ರಮಾಣವಚನ ವೇಳೆ ರಜನಿಕಾಂತ್‌ಗೆ ಅನುಪಮ್ ಖೇರ್ ಹೇಳಿದ್ದೇನು? ವಿಡಿಯೊ ನೋಡಿ!

ಅಲ್ಲದೇ ಅಂಗಡಿ ಮಾಲೀಕರು ಇತ್ತೀಚೆಗೆ 3 ಕೋಟಿ ರೂ. ಮೌಲ್ಯದ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಟ್ಟಾರೆ ಈ ಪ್ರಕರಣದಿಂದ ವಿದೇಶದವರ ಮುಂದೆ ಭಾರತದ ಮರ್ಯಾದೆ ತೆಗೆದ ಹಾಗಾಗಿದೆ. ವಿದೇಶಿ ಮಹಿಳೆಗೆ ನಮ್ಮ ದೇಶದಲ್ಲಿ ಈ ರೀತಿ ವಂಚಿಸಿದ್ದು, ಘೋರ ಕೃತ್ಯವೇ ಸರಿ. ಹಾಗಾಗಿ ಈ ಪ್ರಕರಣವನ್ನು ಪೊಲೀಸರು ಬೇಗನೆ ತನಿಖೆ ನಡೆಸಿ ಅದರ ಸತ್ಯವನ್ನು ಕಂಡುಹಿಡಿಯುವುದು ಬಹಳ ಮುಖ್ಯವಾಗುತ್ತದೆ. ಇಲ್ಲವಾದರೆ ವಿದೇಶದಲ್ಲಿ ಭಾರತೀಯರ ಮರ್ಯಾದೆ ಹರಾಜಾಗುವುದಂತು ಖಂಡಿತ.

Continue Reading

ಕರ್ನಾಟಕ

Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

Tata Motors: ಟಾಟಾ ಮೋಟಾರ್ಸ್ ಇಂದು ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿ ವರ್ಷನ್ ಆಗಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡಿದೆ. 1.2 ಲೀ ಟರ್ಬೊ ಪೆಟ್ರೋಲ್ ಎಂಜಿನ್‌ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಕಾರ್ಯಕ್ಷಮತೆಯನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. 360 ಡಿಗ್ರಿ ಕ್ಯಾಮೆರಾ, 26.03 ಸೆಂ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳು ಹೀಗೆ ಹಲವಾರು ಫೀಚರ್‌ಗಳನ್ನು ಹೊಂದಿವೆ.

VISTARANEWS.COM


on

Altroz Racer launched by Tata Motors
Koo

ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ (Tata Motors) ಇಂದು ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿ ವರ್ಷನ್ ಆಗಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡಿದೆ. 1.2 ಲೀ ಟರ್ಬೊ ಪೆಟ್ರೋಲ್ ಎಂಜಿನ್‌ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಕಾರ್ಯಕ್ಷಮತೆಯನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. ರೇಸ್ ಕಾರ್‌ಗಳಿಂದ ಸ್ಫೂರ್ತಿ ಪಡೆದು ರಚಿಸಿದ ಹೊರಾಂಗಣ ಮತ್ತು ಒಳಾಂಗಣ ಲುಕ್ ಅನ್ನು ಹೊಂದಿದೆ.

5500 ಆರ್‌ಪಿಎಂನಲ್ಲಿ 120 ಪಿಎಸ್ ಉತ್ಪಾದಿಸುವ, 1750ರಿಂದ 4000 ಆರ್‌ಪಿಎಂನಲ್ಲಿ 170 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಡ್ರೈವಿಂಗ್ ಅನುಭವವನ್ನು ಒದಗಿಸಲಿದೆ. 360 ಡಿಗ್ರಿ ಕ್ಯಾಮೆರಾ, 26.03 ಸೆಂ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳು (ರೇಸರ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತವೆ) ಹೀಗೆ ಹಲವಾರು ಫೀಚರ್‌ಗಳನ್ನು ಹೊಂದಿರುವ ರೇಸರ್ ಆವೃತ್ತಿಯು ಆಲ್ಟ್ರೊಜ್‌ ಕಾರು ಆವೃತ್ತಿಗಳಲ್ಲಿಯೇ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್​

ಇದು 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದ್ದು, ನಗರದ ಟ್ರಾಫಿಕ್ ಮತ್ತು ಹೆದ್ದಾರಿಗಳಲ್ಲಿ ಅತ್ಯುತ್ತಮ ಚಾಲನಾ ಅನುಭವವನ್ನು ಒದಗಿಸುತ್ತದೆ. ಸುಧಾರಿತ ತಂತ್ರಜ್ಞಾನ, ವೈಶಿಷ್ಟ್ಯಗಳು ಮತ್ತು ಹ್ಯಾಚ್‌ಬ್ಯಾಕ್‌ನಲ್ಲಿ ಕ್ಲಾಸ್-ಲೀಡಿಂಗ್ ಸುರಕ್ಷತೆಯನ್ನು ಹೊಂದಿರುವ ಆಲ್ಟ್ರೋಜ್ ರೇಸರ್ 3 ವೇರಿಯಂಟ್‌ಗಳಲ್ಲಿ (ಆರ್1, ಆರ್2 ಮತ್ತು ಆರ್3) ಲಭ್ಯವಿರುತ್ತದೆ. ಮೂರು ಬಣ್ಣಗಳ (ಪ್ಯೂರ್ ಗ್ರೇ, ಅಟಾಮಿಕ್ ಆರೆಂಜ್ ಮತ್ತು ಅವೆನ್ಯೂ ವೈಟ್) ಆಯ್ಕೆ ಗ್ರಾಹಕರಿಗೆ ಸಿಗುತ್ತದೆ.

ಇದರ ಜತೆಗೆ ಅಲ್ಟ್ರೋಜ್ ಶ್ರೇಣಿಯನ್ನು ವಿಸ್ತರಿಸುತ್ತಾ ಟಾಟಾ ಮೋಟಾರ್ಸ್ ಎರಡು ಹೊಸ ವೇರಿಯಟ್‌ಗಳನ್ನು (ಎಕ್ಸ್‌ ಝಡ್‌ ಎಲ್‌ಯುಎಕ್ಸ್‌ ಮತ್ತು ಎಕ್ಸ್‌ ಝಡ್‌+ಎಸ್‌ ಎಲ್‌ಯುಎಕ್ಸ್‌) ಪರಿಚಯಿಸಿದೆ ಮತ್ತು ಅಲ್ಟ್ರೋಜ್ ಶ್ರೇಣಿಯ ಒಂದು ವೇರಿಯಂಟ್ ಅನ್ನು (ಎಕ್ಸ್‌ ಝಡ್‌+ಓಎಸ್) ನವೀಕರಿಸಿದೆ. ಈ ಎರಡು ಹೊಸ ಹೆಚ್ಚುವರಿ ವೇರಿಯಂಟ್‌ಗಳು ಪೆಟ್ರೋಲ್ ಮ್ಯಾನ್ಯುವಲ್, ಪೆಟ್ರೋಲ್ ಡಿಸಿಎ, ಡೀಸೆಲ್ ಮತ್ತು ಸಿ ಎನ್ ಜಿ ವಿಭಾಗಗಳ ಆಯ್ಕೆಯಲ್ಲಿ ಲಭ್ಯವಿರುತ್ತವೆ.

ದರ ಪಟ್ಟಿ

ರೇಸರ್ ವೇರಿಯಂಟ್‌ಗಳು ಪರಿಚಯಾತ್ಮಕ ಬೆಲೆ (ಪೆಟ್ರೋಲ್ ಎಂಟಿ), ಭಾರತೀಯ ರೂಪಾಯಿಗಳಲ್ಲಿ, ಎಕ್ಸ್ ಶೋರೂಂ, ದೆಹಲಿ ಆರ್1 -9,49,000, ಆರ್2- 10,49,000, ಆರ್3- 10,99,000 ಆಗಿವೆ.

ವೇರಿಯಂಟ್‌ಗಳು ಪರಿಚಯಾತ್ಮಕ ಬೆಲೆ (ಪೆಟ್ರೋಲ್ ಎನ್ಎ ಎಂಟಿ), ಭಾರತೀಯ ರೂಪಾಯಿಗಳಲ್ಲಿ, ಎಕ್ಸ್ ಶೋರೂಂ, ದೆಹಲಿ ಎಕ್ಸ್‌ ಝಡ್‌ ಎಲ್‌ಯುಎಕ್ಸ್ (ಹೊಸತು) – 8,99,900, ಎಕ್ಸ್‌ ಝಡ್‌+ಎಸ್ ಎಲ್‌ಯುಎಕ್ಸ್ – (ಹೊಸತು) -9,64,990, ಎಕ್ಸ್‌ ಝಡ್‌+ಓಎಸ್ (ಅಪ್ ಗ್ರೇಡೆಡ್) -9,98,900 ರಷ್ಟಿದೆ.

ಇದನ್ನೂ ಓದಿ: EPF Account Rules: ಕ್ಲೈಮ್ ಇತ್ಯರ್ಥ ಇನ್ನು ಸುಲಭ; ಇಪಿಎಫ್‌ಒ ಮಾಡಿದೆ ಹಲವು ಹೊಸ ಬದಲಾವಣೆ

ಟಾಟಾ ಆಲ್ಟ್ರೊಜ್ ರೇಸರ್ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಮಾತನಾಡಿ, ಪ್ರತಿ ದಿನ ವಾಹನ ಚಾಲನೆ ಮಾಡುವವರಿಗೆ ಉತ್ಕೃಷ್ಟ ಅನುಭವ ಒದಗಿಸಲೆಂದೇ ವಿನ್ಯಾಸಗೊಂಡಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡವ ಮೂಲಕ ಆಲ್ಟ್ರೋಜ್ ಶ್ರೇಣಿಯನ್ನು ಬಲಪಡಿಸಲು ಹೆಮ್ಮೆ ಪಡುತ್ತೇವೆ. ವಿಭಾಗ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ತಂತ್ರಜ್ಞಾನ ಆಧರಿತವಾಗಿ ರೂಪುಗೊಂಡಿರುವ, ಅತ್ಯುನ್ನತ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ರೇಸರ್, ವಿಭಿನ್ನ ಕಾರನ್ನು ಡ್ರೈವ್ ಮಾಡಲು ಬಯಸುವ, ಕನೆಕ್ಟೆಡ್ ಆಗಿರುವ ಮತ್ತು ಫ್ಯಾಷನ್ ಆಸಕ್ತಿಯನ್ನು ಹೊಂದಿರುವ ಹೊಸ ಪೀಳಿಗೆಯ ಗ್ರಾಹಕರನ್ನು ಹೆಚ್ಚು ಆಕರ್ಷಿಸಬಹುದಾಗಿದೆ.

ಅದ್ಭುತ ಕಾರ್ಯಕ್ಷಮತೆಯ ಡಿಎನ್ಎ ಹೊಂದಿರುವ ಮತ್ತು ರೇಸ್ ಕಾರ್‌ನಿಂದ ಸ್ಫೂರ್ತಿ ಪಡೆದಿರುವ ಲುಕ್ ಹೊಂದಿರುವ ರೇಸರ್ ನಿಮ್ಮನ್ನು #RacePastTheRoutine ಎಂಬ ಭಾವನೆ ಉಂಟು ಮಾಡುವ ಪರಿಪೂರ್ಣ ಒಡನಾಡಿಯಾಗುವ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

2.5 ಲಕ್ಷ ಗ್ರಾಹಕರನ್ನು ಹೊಂದಿರುವ ಅಲ್ಟ್ರೋಜ್ ಅದರ ಸೊಗಸಾದ ವಿನ್ಯಾಸ, ಅಪೂರ್ವ ವೈಶಿಷ್ಟ್ಯಗಳು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಸುರಕ್ಷತೆಯ ಮೂಲಕ ಭಾರತದಲ್ಲಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಲ್ಲಿಯೇ ಉನ್ನತ ಮಾನದಂಡವನ್ನು ಸ್ಥಾಪಿಸಿದೆ. ಈ ಕಾರು ಅನೇಕ ವಿಭಾಗಗಳಲ್ಲಿ ಪ್ರವರ್ತಕ ಫೀಚರ್ ಗಳನ್ನು ಹೊಂದಿದೆ. ಗ್ಲೋಬಲ್ ಎಸಿಎಪಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದ ಭಾರತದ ಮೊದಲ ಹ್ಯಾಚ್‌ಬ್ಯಾಕ್ ಎಂಬ ಹೆಗ್ಗಳಿಗೆ ಗಳಿಸಿದೆ. ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಒಳಗೊಂಡಿರುವ ದೇಶದ ಮೊದಲ ಸಿಎನ್‌ಜಿ ಕಾರ್ ಮತ್ತು ಗ್ರಾಹಕರಿಗೆ ಆಯ್ಕೆ ಮಾಡಲು ಪವರ್‌ಟ್ರೇನ್ ಆಯ್ಕೆಗಳನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದೆ.

Continue Reading
Advertisement
Nagarjuna Sagar
ಪ್ರವಾಸ19 mins ago

Nagarjuna Sagar: ನಾಗಾರ್ಜುನಸಾಗರದ ಈ ಸ್ಥಳಗಳು ವಾರಾಂತ್ಯ ಪ್ರವಾಸಕ್ಕೆ ಸೂಕ್ತ

Actor Darshan
ಪ್ರಮುಖ ಸುದ್ದಿ23 mins ago

ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

Job Alert
ಉದ್ಯೋಗ38 mins ago

Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Actor Darshan political leaders appeal to the CM and Home Minister not to twist case
ಸ್ಯಾಂಡಲ್ ವುಡ್40 mins ago

Actor Darshan : ದರ್ಶನ್‌ ಪರ ವಹಿಸಿ ಸಿಎಂ, ಗೃಹ ಸಚಿವರಿಗೆ ಮನವಿ ಮಾಡಿದ್ರಾ ರಾಜಕೀಯ ನಾಯಕರು?

Actor Darshan Renukaswamy Send His Photos To Pavitra Gowda
ಸ್ಯಾಂಡಲ್ ವುಡ್43 mins ago

Actor Darshan: ಪವಿತ್ರಾಗೆ ಮರ್ಮಾಂಗದ ಫೋಟೊ ಕಳುಹಿಸಿದ್ರಾ ರೇಣುಕಾಸ್ವಾಮಿ? ದರ್ಶನ್​ಗೆ ತಿಳಿದಿದ್ದು ಹೇಗೆ?

Fraud Case
ಕ್ರೈಂ48 mins ago

Fraud Case: 300 ರೂ. ಬೆಲೆಯ ನಕಲಿ ಆಭರಣವನ್ನು ವಿದೇಶಿ ಮಹಿಳೆಗೆ 6 ಕೋಟಿ ರೂ.ಗೆ ಮಾರಿದರು!

Vastu Tips
ಧಾರ್ಮಿಕ1 hour ago

Vastu Tips: ಈ ನಕಾರಾತ್ಮಕ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ!

Altroz Racer launched by Tata Motors
ಕರ್ನಾಟಕ1 hour ago

Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

Pawan Kalyan
ದೇಶ1 hour ago

Pawan Kalyan: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪವನ್‌ ಕಲ್ಯಾಣ್‌ ಆಯ್ಕೆ; ಇಂದು ಪ್ರಮಾಣ ವಚನ ಸ್ವೀಕಾರ

Minister Dinesh Gundurao drives 10 days Yogotsava programme in Bengaluru
ಕರ್ನಾಟಕ1 hour ago

Bengaluru News: 10 ದಿನಗಳ ‘ಯೋಗೋತ್ಸವ’ಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ17 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ18 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ19 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ20 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ23 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌