Valentine’s Week List 2023: ಫೆ.7ರಿಂದಲೇ ಆರಂಭ ಪ್ರೇಮಿಗಳ ವಾರ; ಈ 8 ದಿನಗಳ ವಿಶೇಷತೆ ಏನು ಗೊತ್ತಾ? - Vistara News

Latest

Valentine’s Week List 2023: ಫೆ.7ರಿಂದಲೇ ಆರಂಭ ಪ್ರೇಮಿಗಳ ವಾರ; ಈ 8 ದಿನಗಳ ವಿಶೇಷತೆ ಏನು ಗೊತ್ತಾ?

Valentine’s Week List 2023: ಪ್ರೇಮಿಗಳ ವಾರವು ಮಂಗಳವಾರದಿಂದ ಆರಂಭವಾಗುತ್ತದೆ. ಫೆ.14ರಂದು ಮಾತ್ರವಲ್ಲ, ಇಡೀ ವಾರ ಪ್ರೇಮಿಗಳು ವಿಶೇಷ ದಿನ ಆಚರಿಸಬಹುದು. ಹಾಗಾಗಿ, ಈ ದಿನಗಳ ವಿಶೇಷತೆ ವಿವರ ಇಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇದು ಪ್ರೇಮಿಗಳ ತಿಂಗಳು. ಪ್ರೀತಿ ಪಾತ್ರರಿಗೆ ಪ್ರೀತಿ ಹಂಚಿಕೊಳ್ಳುವ ಮಾಸ. ಫೆ.14ರ ಪ್ರೇಮಿಗಳ ದಿನಕ್ಕೆ ಪೂರ್ತಿ ಜಗತ್ತೇ ಪ್ರೀತಿಯಿಂದ ಕಂಗೊಳಿಸುತ್ತದೆ. ಮಂಗಳವಾರದಿಂದಲೇ ಆರಂಭವಾಗುವ ಈ ಪ್ರೇಮಿಗಳ ವಾರದ (Valentine’s Week List 2023:) ವಿಶೇಷತೆ ಏನು? ಹೇಗಿರುತ್ತದೆ ಆಚರಣೆ ಎನ್ನುವುದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿ: Viral news: ಹಳೆಪ್ರೇಮಿಯ ಮೇಲೆ ಸಿಟ್ಟಾ? ಹಾಗಿದ್ದರೆ ಕೆನಡಾದ ಜಿರಳೆಗೆ ಪ್ರೇಮಿಯ ಹೆಸರಿಡಿ!

ಫೆಬ್ರವರಿ 7, ರೋಸ್‌ ಡೇ

Rose Day 2023 Date February 7


ಪ್ರೇಮಿಗಳ ವಾರದ ಆಚರಣೆಯು ಫೆಬ್ರವರಿ 7ರಂದು ರೋಸ್‌ ಡೇ ಇಂದ ಪ್ರಾರಂಭವಾಗುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ, ಕ್ರಷ್‌ಗಳಿಗೆ ಅಥವಾ ಅರ್ಧಾಂಗಿಗೆ ತಮ್ಮ ಪ್ರೀತಿಯನ್ನು ಗುಲಾಬಿ ಹೂವನ್ನು ಕೊಡುತ್ತಾರೆ. ಇಲ್ಲಿ ಗುಲಾಬಿ ಹೂವಿನ ಬಣ್ಣವೂ ಪ್ರಾಮುಖ್ಯತೆಯನ್ನು ಹೊಂದಿದೆ. ಕೆಂಪು ಗುಲಾಬಿಯು ಪ್ರೀತಿಯನ್ನು ಸೂಚಿಸಿದರೆ, ಹಳದಿ ಸ್ನೇಹವನ್ನು, ಗುಲಾಬಿ ಬಣ್ಣದ ಹೂವು ಮೆಚ್ಚುಗೆಯನ್ನು ಮತ್ತು ಕೆಂಪು ಸುಳಿಯೊಂದಿಗಿರುವ ಹಳದಿ ಬಣ್ಣದ ಗುಲಾಬಿಯು ಸ್ನೇಹದ ಭಾವನೆಗಳು ಪ್ರೀತಿಯಾಗಿ ರೂಪಾಂತರಗೊಂಡಿದೆ ಎಂದು ಸೂಚಿಸುತ್ತದೆ.

ಫೆಬ್ರವರಿ 8, ಪ್ರಪೋಸ್‌ ಡೇ

ರೋಸ್ ಡೇ ನಂತರ ಫೆಬ್ರುವರಿ 8ರಂದು ಪ್ರಪೋಸ್ ಡೇ ಆಚರಿಸಲಾಗುತ್ತದೆ. ಹೆಸರೇ ಸೂಚಿಸುವಂತೆ, ಪ್ರಪೋಸ್ ಡೇಯಂದು, ಜನರು ತಮ್ಮ ಪ್ರೀತಿಯ ಭಾವನೆಗಳನ್ನು ತಮ್ಮ ಸಂಗಾತಿ ಅಥವಾ ಕ್ರಶ್ ಎದುರು ಹಂಚಿಕೊಳ್ಳುತ್ತಾರೆ. ತಮ್ಮ ಪ್ರೀತಿಯನ್ನು ಒಪ್ಪಿಕೊಂಡು, ಜೀವನಪೂರ್ತಿ ಜೊತೆಯಾಗಿರು ಎಂದು ಪ್ರೇಮ ನಿವೇದನೆಯನ್ನೂ ಮಾಡಿಕೊಳ್ಳುತ್ತಾರೆ.

ಫೆಬ್ರವರಿ 9, ಚಾಕೊಲೇಟ್ ಡೇ

Chocolate Day 2023 Date february 9


ಪ್ರೇಮಿಗಳ ವಾರದ ಮೂರನೇ ದಿನ ಚಾಕೊಲೇಟ್ ಡೇ. ತಮ್ಮ ಸಂಬಂಧಗಳಲ್ಲಿನ ಎಲ್ಲಾ ಕಹಿ ಭಾವನೆಗಳನ್ನು ಮರೆತು ಜೀವನ ನಡೆಸೋಣ ಎನ್ನುವ ಕಾರಣಕ್ಕೆ ಜನರು ತಮ್ಮ ಕ್ರಷ್‌, ಪ್ರೇಮಿ ಅಥವಾ ಅರ್ಧಾಂಗಿಯೊಂದಿಗೆ ಚಾಕೊಲೇಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಫೆಬ್ರವರಿ 10, ಟೆಡ್ಡಿ ಡೇ

ಪ್ರೇಮಿಗಳ ವಾರದ ನಾಲ್ಕನೇ ದಿನ ಟೆಡ್ಡಿ ಡೇ. ಟೆಡ್ಡಿಗಳನ್ನು ನೋಡಿದಾಕ್ಷಣ ಮನಸ್ಸಿನ ಒತ್ತಡ ಕಡಿಮೆಯಾಗಿ ಮುಖದಲ್ಲಿ ನಗು ಮೂಡುತ್ತದೆ. ಅದೇ ರೀತಿಯಲ್ಲಿ ಸಂಗಾತಿ, ಪ್ರೇಮಿಯ ಮನಸ್ಸಿನ ಒತ್ತಡವನ್ನು ತಿಳಿಗೊಳಿಸಿಕೊಂಡು, ನಗುತ್ತಿರಲಿ ಎನ್ನುವ ಉದ್ದೇಶದಿಂದ ಟೆಡ್ಡಿಗಳನ್ನು ಕೊಡಲಾಗುವುದು.

ಫೆಬ್ರವರಿ 11, ಪ್ರಾಮಿಸ್ ಡೇ

Promise Day 2023 Date
#image_title


ಪ್ರೇಮಿಗಳ ದಿನದ ಐದನೇ ದಿನವು ಪ್ರಾಮಿಸ್ ಡೇ. ಪ್ರೇಮಿಗಳು ಜೀವನದ ಏರು ಇಳಿತಗಳಲ್ಲೂ ಒಟ್ಟಾಗಿ ಇರಲು, ತಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಲು ಮತ್ತು ಪರಸ್ಪರ ಬೆಂಬಲಿಸಲು ಪ್ರಮಾಣ ಮಾಡುವುದಕ್ಕೆಂದು ಈ ದಿನ ಆಚರಿಸಲಾಗುತ್ತದೆ.

ಫೆಬ್ರವರಿ 12, ಹಗ್‌ ಡೇ

ಪ್ರೇಮಿಗಳ ವಾರದ ಆರನೇ ದಿನ ಹಗ್‌ ಡೇ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಸಾಂತ್ವನ ನೀಡುತ್ತಾರೆ. ಯಾರಿಗಾದರೂ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳು ವಿಫಲವಾದಾಗ, ದೈಹಿಕ ಸ್ಪರ್ಶದ ಭಾಷೆ ಅದ್ಭುತಗಳನ್ನು ಮಾಡುತ್ತದೆ. ಅದೇ ರೀತಿ ಅಪ್ಪುಗೆಯು ನಿಮ್ಮ ಪ್ರೀತಿಪಾತ್ರರಿಗೆ ನೀವು ಅವರಿಗಾಗಿ ಇದ್ದೀರಿ ಎಂದು ತಿಳಿ ಹೇಳುತ್ತದೆ. ಅದೇ ಕಾರಣಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಫೆಬ್ರವರಿ 13, ಕಿಸ್ ಡೇ

Kiss Day 2023 Date february 13
#image_title


ಪ್ರೇಮಿಗಳ ವಾರದ ಏಳನೇ ದಿನವನ್ನು, ಅಂದರೆ ಫೆ.13ರಂದು ಕಿಸ್ ದಿನವನ್ನು ಆಚರಿಸಲಾಗುತ್ತದೆ. ಪ್ರೀತಿಯಲ್ಲಿರುವ ಜನರು ಈ ದಿನದಂದು ತಮ್ಮ ಪ್ರೀತಿ ಪಾತ್ರರಿಗೆ ಚುಂಬಿಸಿ, ಪ್ರೀತಿ ಹಂಚಿಕೊಳ್ಳುತ್ತಾರೆ.

ಫೆಬ್ರವರಿ 14, ಪ್ರೇಮಿಗಳ ದಿನ

ಅಂತಿಮವಾಗಿ, ಫೆಬ್ರವರಿ 14ರಂದು ಜಗತ್ತಿನಾದ್ಯಂತ ಪ್ರೇಮಿಗಳು ಪ್ರೀತಿಯ ದಿನವನ್ನಾಗಿ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಪ್ರವಾಸ, ಡೇಟ್‌, ಒಟ್ಟಿಗೆ ಊಟ ಮಾಡಿ ಅಥವಾ ಅವರ ಮೆಚ್ಚಿನ ಉಡುಗೊರೆಗಳನ್ನು ನೀಡಿ ಈ ದಿನವನ್ನು ಆಚರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Hampi Utsav 2023: ಹಂಪಿ ಉತ್ಸವದಲ್ಲಿ 2ನೇ ದಿನ ಗಮನ ಸೆಳೆದ ಕುಸ್ತಿ ಕಾಳಗ; 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Harbhajan Singh : ಭಾರತ ತಂಡದ ಕೋಚ್ ಆಗಲು ಉತ್ಸಾಹ ತೋರಿದ ಹರ್ಭಜನ್​ ಸಿಂಗ್​

Harbhajan Singh: ಇತ್ತೀಚೆಗೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರ ಹೆಸರು ಉನ್ನತ ಹುದ್ದೆಗೆ ಕೇಳಿ ಬಂದಿತ್ತು. ಗಂಭೀರ್ ಈ ಸ್ಥಾನಕ್ಕೆ ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಪೂರೈಸದಿದ್ದರ, ಐಪಿಎಲ್ 2024 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪ್ರಗತಿಯಲ್ಲಿ ಅವರ ಮಾರ್ಗದರ್ಶನವು ಪ್ರಮುಖ ಪಾತ್ರ ವಹಿಸಿದೆ. ಇದೀಗ ಹರ್ಭಜನ್ ಅವರು ಆಟಗಾರರಿಗೆ ಆಟದ ತಾಂತ್ರಿಕತೆಗಳನ್ನು ಕಲಿಸುವುದಕ್ಕಿಂತ ಹೆಚ್ಚಾಗಿ ಕೆಲಸವು ಕೌಶಲ್ಯ ನಿರ್ವಹಣೆ ಅಗತ್ಯ ಎಂದು ಒತ್ತಿ ಹೇಳಿದ್ದರು.

VISTARANEWS.COM


on

Harbhajan Singh
Koo

ಬೆಂಗಳೂರು: ಟಿ20 ವಿಶ್ವ ಕಪ್​ (T20 world cup 2024) ಬಳಿಕ ನಡೆಯಲಿರುವ ಭಾರತ ಕ್ರಿಕೆಟ್ ತಂಡದ ಮುಂದಿನ ಮುಖ್ಯ ಕೋಚ್ ಆಯ್ಕೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು, ಊಹಾಪೋಹಗಳು ನಡೆಯುತ್ತಿವೆ. ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರಾವಧಿ 2024ರ ಟಿ20 ವಿಶ್ವಕಪ್ ಬಳಿಕ ಕೊನೆಗೊಳ್ಳಲಿದೆ. ದ್ರಾವಿಡ್ ಈ ಸ್ಥಾನಕ್ಕೆ ಮರು ಅರ್ಜಿ ಸಲ್ಲಿಸುವಲ್ಲಿ ಕನಿಷ್ಠ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಹೊಸಬರ ನೇಮಕ ಅನಿವಾರ್ಯ. ಏತನ್ಮಧ್ಯೆ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರ ಹೆಸರು ಉನ್ನತ ಹುದ್ದೆಗೆ ಕೇಳಿ ಬಂದಿತ್ತು. ಗಂಭೀರ್ ಈ ಸ್ಥಾನಕ್ಕೆ ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಪೂರೈಸದಿದ್ದರ, ಐಪಿಎಲ್ 2024 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪ್ರಗತಿಯಲ್ಲಿ ಅವರ ಮಾರ್ಗದರ್ಶನವು ಪ್ರಮುಖ ಪಾತ್ರ ವಹಿಸಿದೆ. ಇದೀಗ ಹರ್ಭಜನ್ ಅವರು ಆಟಗಾರರಿಗೆ ಆಟದ ತಾಂತ್ರಿಕತೆಗಳನ್ನು ಕಲಿಸುವುದಕ್ಕಿಂತ ಹೆಚ್ಚಾಗಿ ಕೆಲಸವು ಕೌಶಲ್ಯ ನಿರ್ವಹಣೆ ಅಗತ್ಯ ಎಂದು ಒತ್ತಿ ಹೇಳಿದ್ದರು.

“ನಾನು ಅರ್ಜಿ ಸಲ್ಲಿಸುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ. ಕೋಚಿಂಗ್ ವಿಭಾಗದ ಇಂಡಿಯಾ ಮ್ಯಾನ್ ಮ್ಯಾನೇಜ್ಮೆಂಟ್​ಗೆ ಸಂಬಂಧಿಸಿದೆ, ಆಟಗಾರರಿಗೆ ಹೇಗೆ ಆಡಬೇಕು ಮತ್ತು ಗೆಲುವಿನ ರಥವನ್ನು ಹೇಗೆ ಎಳೆಯಬೇಕೆಂದು ಕಲಿಸುವ ಕೆಲಸ ಅದಲ್ಲ. ಎಲ್ಲರಿಗೂ ಅದು ಚೆನ್ನಾಗಿ ತಿಳಿದಿದೆ. ಅವರಿಗೆ ಕೆಲವು ಮಾರ್ಗದರ್ಶನ ನೀಡಬೇಕಾಗುತ್ತದೆ. ಕ್ರಿಕೆಟ್ ನನಗೆ ತುಂಬಾ ನೀಡಿದೆ ಮತ್ತು ಅದನ್ನು ಹಿಂತಿರುಗಿಸಲು ನನಗೆ ಅವಕಾಶ ಸಿಕ್ಕರೆ, ನಾನು ಹೆಚ್ಚು ಸಂತೋಷಪಡುತ್ತೇನೆಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಇದೊಂದು ಅದ್ಭುತ ಅವಕಾಶ: ಜಸ್ಟಿನ್ ಲ್ಯಾಂಗರ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಹಾಗೂ ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ಹೆಸರುಗಳು ಕೇಳಿ ಬರುತ್ತಿವೆ. ಲ್ಯಾಂಗರ್ ವಿಶೇಷವಾಗಿ ಭಾರತೀಯ ತಂಡದೊಂದಿಗೆ ಕೆಲಸ ಮಾಡಲು ತಮ್ಮ ಮುಕ್ತತೆಯ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾ ಕೋಚ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಭಾರತವು ಕ್ರಿಕೆಟ್ ಪ್ರೇಮಿ ರಾಷ್ಟ್ರವಾಗಿರುವುದರಿಂದ ಆ ಕೆಲಸದಲ್ಲಿ ಉಂಟಾಗುವ ಅಪಾರ ಒತ್ತಡವನ್ನು ಎತ್ತಿ ತೋರಿಸಿದರು.

ಇದನ್ನೂ ಓದಿ: IPL 2024 : ಕೊಹ್ಲಿಯನ್ನು ಗಂಭೀರ್ ಅಪ್ಪಿಕೊಂಡಿದ್ದು ಫೇರ್​ಪ್ಲೇ ಅವಾರ್ಡ್​ಗಾಗಿಯಾ? ಅವರ ಮಾತಲ್ಲೇ ಕೇಳಿ

“ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನಾಗಿರುವುದು ಕ್ರಿಕೆಟ್​ನಲ್ಲಿ ಬಹುತೇಕ ದೊಡ್ಡ ಕೆಲಸವಾಗಿದೆ. ಒಂದು, ಕ್ರಿಕೆಟ್​​ನ ದೊಡ್ಡ ಕೆಲಸದಿಂದಾಗಿ ಭಾರಿ ನಿರೀಕ್ಷೆ ಇರುತ್ತದೆ. ಇದು ಒಂದು ದೊಡ್ಡ ಸವಾಲಾಗಿದೆ. ಇದು ತುಂಬಾ ಮೋಜಿನ ಸಂಗತಿಯಾಗಿದೆ ಮತ್ತು ಐಸಿಸಿ ಪ್ರಶಸ್ತಿಗಳನ್ನು ಗೆಲ್ಲಲು ಇದು ಅದ್ಭುತ ಅವಕಾಶವಾಗಿದೆ”ಎಂದು ಲ್ಯಾಂಗರ್ ಹೇಳಿದ್ದಾರೆ.

Continue Reading

ಕ್ರೀಡೆ

IPL 2024 : ಕೊಹ್ಲಿಯನ್ನೂ ಟೀಕಿಸುವುದರ ನಡುವೆಯೂ ಆರ್​​ಸಿಬಿ ಕಪ್​ ಗೆಲ್ಲುತ್ತದೆ ಎಂದ ಗವಾಸ್ಕರ್​

IPL 2024: ಕೋಲ್ಕತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್ಗೆ ಅರ್ಹತೆ ಪಡೆದಿವೆ. ಅಂಕಪಟ್ಟಿಯಲ್ಲಿ ಕೆಕೆಆರ್ ಅಗ್ರಸ್ಥಾನದಲ್ಲಿದ್ದರೆ, ಎಸ್ಆರ್​ಎಚ್, ಆರ್​ಆರ್​ ಮತ್ತು ಆರ್​ಸಿಬಿ ನಂತರದ ಸ್ಥಾನಗಳಲ್ಲಿವೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ (ಮೇ 21) ನಡೆಯಲಿರುವ ಕ್ವಾಲಿಫೈಯರ್ 1ರಲ್ಲಿ ಕೆಕೆಆರ್ ಮತ್ತು ಎಸ್ಆರ್​ಎಚ್​ ಮುಖಾಮುಖಿಯಾಗಲಿದೆ.

VISTARANEWS.COM


on

IPL 2024
Koo

ನವದೆಹಲಿ: ಭಾರತದ ಮಾಜಿ ನಾಯಕ ಹಾಗೂ ಕ್ರಿಕೆಟ್​ ದಂತಕತೆ ಸುನಿಲ್ ಗವಾಸ್ಕರ್ (Sunil Gavaskar) ಅವರು ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (IPL 2024) ಗೆಲ್ಲುವ ನೆಚ್ಚಿನ ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಪಂದ್ಯಾವಳಿಯ 17 ನೇ ಆವೃತ್ತಿಯು ಅಂತಿಮ ಹಂತದಲ್ಲಿದ್ದು ಪ್ಲೇಆಫ್​ ಪಂದ್ಯಗಳು ಆಂಭಗೊಂಡಿವೆ. ಅಂತೆಯೇ ಪ್ರಶಸ್ತಿ ಯಾರು ಗೆಲ್ಲುತ್ತಾರೆ ಎಂಬ ನಿರ್ಧಾರವು ಮುಂಬರುವ ಭಾನುವಾರ (ಮೇ 26) ಆಗಲಿದೆ. ಏತನ್ಮಧ್ಯೆ ಗವಾಸ್ಕರ್​ ಆರ್​ಸಿಬಿಯನ್ನು ಕಪ್ ಗೆಲ್ಲುವ ತಂಡ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಯಾಕೆಂದರೆ ಸದಾ ಕೊಹ್ಲಿಯನ್ನು ಬೈಯುವ ಅವರು ಈ ಬಾರಿ ಅವರ ತಂಡ್ಕೆ ಅದೃಷ್ಟ ಕಾದಿದೆ ಎಂದಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್ಗೆ ಅರ್ಹತೆ ಪಡೆದಿವೆ. ಅಂಕಪಟ್ಟಿಯಲ್ಲಿ ಕೆಕೆಆರ್ ಅಗ್ರಸ್ಥಾನದಲ್ಲಿದ್ದರೆ, ಎಸ್ಆರ್​ಎಚ್, ಆರ್​ಆರ್​ ಮತ್ತು ಆರ್​ಸಿಬಿ ನಂತರದ ಸ್ಥಾನಗಳಲ್ಲಿವೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ (ಮೇ 21) ನಡೆಯಲಿರುವ ಕ್ವಾಲಿಫೈಯರ್ 1ರಲ್ಲಿ ಕೆಕೆಆರ್ ಮತ್ತು ಎಸ್ಆರ್​ಎಚ್​ ಮುಖಾಮುಖಿಯಾಗಲಿದೆ. ಎಲಿಮಿನೇಟರ್​ನಲ್ಲಿ ಆರ್​ಆರ್​​ ಮತ್ತು ಆರ್​ಸಿಬಿ ಪರಸ್ಪರ ಮುಖಾಮುಖಿಯಾಗಲಿವೆ.

ಮೊದಲ ಕ್ವಾಲಿಫೈಯರ್ನಲ್ಲಿ ಗೆದ್ದವರು ಫೈನಲ್​ಗೆ ಅರ್ಹತೆ ಪಡೆಯುತ್ತಾರೆ ಮತ್ತು ಸೋತವರು ಫೈನಲ್​ಗೇರಲು ಮತ್ತೊಂದು ಅವಕಾಶ ಪಡೆಯುತ್ತಾರೆ. ಮತ್ತೊಂದೆಡೆ, ಎಲಿಮಿನೇಟರ್​ನಲ್ಲಿ ಸೋತವರು ಪಂದ್ಯಾವಳಿಯಿಂದ ಹೊರಗುಳಿಯುತ್ತಾರೆ. ವಿಜೇತರು ಫೈನಲ್​ಗಾಗಿ ಸ್ಥಾನಕ್ಕಾಗಿ ಮೊದಲ ಕ್ವಾಲಿಫೈಯರ್ನಲ್ಲಿ ಸೋತವರನ್ನು ಎದುರಿಸುತ್ತಾರೆ.

ಇದನ್ನೂ ಓದಿ: Dwayne Bravo : ಅಫಘಾನಿಸ್ತಾನ ತಂಡದಲ್ಲಿ ದೊಡ್ಡ ಜವಾಬ್ದಾರಿ ವಹಿಸಿಕೊಂಡ ಡ್ವೇನ್ ಬ್ರಾವೊ

ಈ ವರ್ಷ ಯಾವ ತಂಡ ಗೆಲ್ಲುತ್ತದೆ ಎಂಬುದನ್ನು ಮಾತ್ರ ಹೇಳುವಾಗ, ಸುನಿಲ್ ಗವಾಸ್ಕರ್ ಆರ್​ಸಿಬಿಯನ್ನು ಬೆಂಬಲಿಸಿದ್ದಾರೆ. ಮೊದಲ ಕ್ವಾಲಿಫೈಯರ್​ಗೆ ಮುಂಚಿತವಾಗಿ ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಮಾತನಾಡಿದ ಲೆಜೆಂಡರಿ ಬ್ಯಾಟ್ಸ್ಮನ್, ಬೆಂಗಳೂರು ಮೂಲದ ತಂಡವು ಈ ಋತುವಿನಲ್ಲಿ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಜ್ಜಾಗಿದೆ ಎಂದು ಹೇಳಿದರು.

ಐಪಿಎಲ್ 2024 ರಲ್ಲಿ ಆರ್​ಸಿಬಿ ಅದ್ಭುತ ಚೇತರಿಕೆ

ಆರ್​ಸಿಬಿ ತಂಡ ಈ ಋತುವಿನಲ್ಲಿ ಪ್ಲೇಆಫ್ಗೆ ಅರ್ಹತೆ ಪಡೆಯಲು ಎಲ್ಲಾ ಅಡೆತಡೆಗಳನ್ನು ಮೀರಿದೆ. ತಮ್ಮ ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತ ನಂತರ ಪ್ಲೇಆಫ್​​ಗೆ ಪ್ರವೇಶಿಸುವ ಸಾಧ್ಯತೆಗಳು ಬಹುತೇಕ ಶೂನ್ಯವಾಗಿದ್ದವು. ಪಂದ್ಯಾವಳಿಯ ಅರ್ಧದಷ್ಟು ಹಂತದವರೆಗೆ ಏನೂ ನಡೆಯದ ಕಾರಣ, ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದು ಬಿಡಿ, ಸ್ಪರ್ಧೆಯನ್ನು ಉತ್ತಮವಾಗಿ ಮುಗಿಸುವುದು ಸಾಧ್ಯವಿರಲಿಲ್ಲ.

ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಗಮನಾರ್ಹ ತಿರುವು ಪಡೆದುಕೊಂಡಿತು. ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್​ಗೆ ಪ್ರವೇಶಿಸಿತು. ಆರು ಪಂದ್ಯಗಳ ಗೆಲುವಿನ ಓಟದಲ್ಲಿ ಅವರು ತಮ್ಮ ಎದುರಾಳಿಗಳ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದ್ದರು. ಈ ಋತುವಿನಲ್ಲಿ ಎಲ್ಲಾ ರೀತಿಯಲ್ಲೂ ಮುಂದುವರಿಯುವ ಅವಕಾಶಗಳನ್ನು ಕಲ್ಪಿಸಿಕೊಳ್ಳುತ್ತಿದ್ದರು. ಆವೇಗ ಮತ್ತು ಫಾರ್ಮ್ ಆರ್​ಸಿಬಿಯೊಂದಿಗೆ ಇದೆ. ಹೀಗಾಗಿ ಕಪ್ ಗೆಲ್ಲಬಹುದು ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

2024 Bajaj Pulsar F250 : ಬೆಲೆ ಏರಿಕೆ ಮಾಡದೇ ಹೊಸ ಪಲ್ಸರ್​ 250 ರಸ್ತೆಗಿಳಿಸಲಿದೆ ಬಜಾಜ್​​

2024 Bajaj Pulsar F250: ಹಲವಾರು ಅಪ್​ಡೇಟ್​ಗಳೊಂದಿಗೆ ಎಫ್​250 ಪಲ್ಸರ್​ ರಸ್ತೆಗೆ ಇಳಿದಿದೆ. ಸ್ಟ್ರೀಟ್ ನೇಕೆಡ್ ಎನ್​ 250ಯಷ್ಟು ಅಪ್​ಡೇಟ್ ಪಡೆದಿಲ್ಲವಾದರೂ ಪಲ್ಸರ್ ಎಫ್ 250 ಬೈಕಿನಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ. ಎಲ್ಲಾ ಪಲ್ಸರ್ ಗಳಲ್ಲಿ ಕಂಡುಬರುವ ಹೊಸ ಸಂಪೂರ್ಣ ಡಿಜಿಟಲ್ ಇನ್​ಸ್ಟ್ರುಮೆಂಟ್​ ಕ್ಲಸ್ಟರ್ ದೊಡ್ಡ ಬದಲಾವಣೆಯಾಗಿದೆ.

VISTARANEWS.COM


on

2024 Bajaj Pulsar F250
Koo

ಬೆಂಗಳೂರು: ಭಾರತದ ಜನಪ್ರಿಯ ಹಾಗೂ ಜನಸ್ನೇಹಿ ಕಂಪನಿಯಾಗಿರುವ ಬಜಾಜ್ ಆಟೋ ತನ್ನ ಸಂಪೂರ್ಣ ಪಲ್ಸರ್ ವೇರಿಯೆಂಟ್​ಗಳನ್ನು ಅಪ್​ಗ್ರೇಡ್​ ಮಾಡುವ ಪ್ರಕ್ರಿಯೆಯಲ್ಲಿದೆ. ಈ ತಿಂಗಳ ಆರಂಭದಲ್ಲಿ ಕಂಪನಿಯು ತನ್ನ ಅತಿದೊಡ್ಡ ಪಲ್ಸರ್ ಬೈಕ್​​ ಎನ್ ಎಸ್ 400 ಝಡ್ ಅನ್ನು ಬಿಡುಗಡೆ ಮಾಡಿತ್ತು. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.85 ಲಕ್ಷಗಳಾಗಿತ್ತು. ಅದಕ್ಕಿಂತ ಹಿಂದಿನ ತಿಂಗಳು ಅಪ್​ಡೇಟೆಡ್​​ ಪಲ್ಸರ್ ಎನ್ 250 ಬೈಕ್ ಅನಾವರಣ ಮಾಡಿತ್ತು. ಇದೀಗ ಅದರ ಜತೆಗಾರ ಎಫ್​ 250 ಬೈಕ್​ (2024 Bajaj Pulsar F250) ಅನ್ನು ಬಜಾಜ್ ಕಂಪನಿಗೆ ಮಾರುಕಟ್ಟೆಗೆ ಇಳಿಸಿದೆ.

ಈ ಮೂಲಕ ಬಜಾಜ್​​ ಕಂಪನಿಯು ಪಲ್ಸರ್​ ಬೈಕ್​ಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಎಂಬ ವ್ಯಾಖ್ಯಾನ ಸುಳ್ಳು ಎಂದು ಹೇಳಿದೆ. ಪಲ್ಸರ್​ನ ನಾನಾ ವೇರಿಯೆಂಟ್​ಗಳ ಉತ್ಪಾದನೆಯು ಸೀಮಿತ ರೂಪದಲ್ಲಿ ಮುಂದುವರಿಯುತ್ತದೆ ಎಂದು ಬಜಾಜ್ ಹೇಳಿಕೊಂಡಿದೆ. ಅಂತೆಯೇ ಹಲವಾರು ಅಪ್​ಡೇಟ್​ಗಳೊಂದಿಗೆ ಎಫ್​250 ಪಲ್ಸರ್​ ರಸ್ತೆಗೆ ಇಳಿದಿದೆ. ಸ್ಟ್ರೀಟ್ ನೇಕೆಡ್ ಎನ್​ 250ಯಷ್ಟು ಅಪ್​ಡೇಟ್ ಪಡೆದಿಲ್ಲವಾದರೂ ಪಲ್ಸರ್ ಎಫ್ 250 ಬೈಕಿನಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ. ಎಲ್ಲಾ ಪಲ್ಸರ್ ಗಳಲ್ಲಿ ಕಂಡುಬರುವ ಹೊಸ ಸಂಪೂರ್ಣ ಡಿಜಿಟಲ್ ಇನ್​ಸ್ಟ್ರುಮೆಂಟ್​ ಕ್ಲಸ್ಟರ್ ದೊಡ್ಡ ಬದಲಾವಣೆಯಾಗಿದೆ.

ಈ ಯೂನಿಟ್​​ ಫೋನ್​ ಕಾಲ್​​ ಮತ್ತು ಟೆಕ್ಟ್​​ ಅಲರ್ಟ್​ಗಳಿಗಾಗಿ ಬ್ಲೂಟೂತ್ ಸಂಪರ್ಕ ಮತ್ತು ಬಜಾಜ್ ರೈಡ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ನೊಂದಿಗೆ ಬರುತ್ತದೆ. ಕನ್ಸೋಲ್ ಮೆನುವಿನ ಮೂಲಕ ಟಾಗಲ್ ಮಾಡಲು ಇದು ಪರಿಷ್ಕೃತ ಸ್ವಿಚ್ ಗೇರ್ ಅನ್ನೂ ನೀಡಲಾಗಿದೆ. ಇದು ರೇನ್, ರೋಡ್ ಮತ್ತು ಸ್ಪೋರ್ಟ್ ಎಂಬ ಮೂರು ಎಬಿಎಸ್ ಮೋಡ್ ಗಳನ್ನು ಪಡೆದುಕೊಂಡಿದೆ.

ಹಾರ್ಡ್​ವೇರ್ ಬದಲಾವಣೆ ಏನು?

ಪಲ್ಸರ್ ಎಫ್ 250 ಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಪೆಟಲ್ ಡಿಸ್ಕ್ ಬ್ರೇಕ್ ಗಳ ರೂಪದಲ್ಲಿ ಕೆಲವು ಹಾರ್ಡ್ ವೇರ್ ಬದಲಾವಣೆಗಳನ್ನು ಮಾಡಲಾಗಿದೆ. ಆದರೂ ಡಿಸ್ಕ್ ಗಳ ಗಾತ್ರಗಳು ಕ್ರಮವಾಗಿ 300 ಎಂಎಂ ಮತ್ತು 230 ಎಂಎಂ ನಷ್ಟೇ ಇದೆ. ಎನ್ 250 ನಂತೆಯೇ, ನವೀಕರಿಸಿದ ಪಲ್ಸರ್ ಎಫ್ 250 110-ಸೆಕ್ಷನ್ ಮುಂಭಾಗ ಮತ್ತು 140-ಸೆಕ್ಷನ್ ಹಿಂಭಾಗದ ಟೈರ್ ಸೆಟಪ್ ಅನ್ನು ಪಡೆದಿದೆ. ಹಿಂದಿನ ಮಾದರಿಯ 110-ಸೆಕ್ಷನ್ ಮುಂಭಾಗ ಮತ್ತು 130-ಸೆಕ್ಷನ್ ಹಿಂಭಾಗದ ಸೆಟಪ್ ಹೊಂದಿತ್ತು. ಇಲ್ಲಿ ಸಣ್ಣ ಬದಲಾವಣೆಯಾಗಿದೆ.

2024ರ ಬಜಾಜ್ ಪಲ್ಸರ್ ಎಫ್250 ಬೈಕ್​ನಲ್ಲಿ ಏನಿಲ್ಲ?

ಮೂಲ ವಿನ್ಯಾಸವು ಅದರ ಹಿಂದಿನ ಬೈಕ್​ನಂತೆಯೇ ಉಳಿದಿದೆ, ಅರೆ-ಫೇರ್ಡ್ ಸ್ಟೈಲಿಂಗ್, ಆಕ್ರಮಣಕಾರಿ ವಿ-ಆಕಾರದ ಎಲ್ಇಡಿ ಹೆಡ್ ಲ್ಯಾಂಪ್ ಕ್ಲಸ್ಟರ್, ಸ್ಪ್ಲಿಟ್-ಸೀಟ್ ಗಳು, ಸ್ಟೂಬಿ ಟ್ವಿನ್-ಬ್ಯಾರೆಲ್ ಎಕ್ಸಾಸ್ಟ್ ಮಫ್ಲರ್ ಮತ್ತು ಕ್ಲಿಪ್-ಆನ್ ಹ್ಯಾಂಡಲ್ ಬಾರ್ ನೀಡಲಾಘಿದೆ ಬಜಾಜ್ ಪಲ್ಸರ್ ಎಫ್ 250 ಬೈಕಿನೊಂದಿಗೆ ಕೆಂಪು ಮತ್ತು ಕಪ್ಪು ಎಂಬ ಎರಡು ಬಣ್ಣಗಳ ಆಯ್ಕೆಗಳನ್ನು ನೀಡುವ ನಿರಿಕ್ಷೆಯಿದೆ.

ಪಲ್ಸರ್ ಎನ್ 250 ರೀತಿ , ಎಫ್ 250 ಚಿನ್ನದ ಬಣ್ಣದ ತಲೆಕೆಳಗಾಗಿರುವ ಮುಂಭಾಗದ ಫೋರ್ಕ್ ಗಳನ್ನು ಪಡೆದಿಲ್ಲ. ಹಿಂಭಾಗದ ಸಸ್ಪೆಂಷನ್ ಮೊನೊ-ಶಾಕ್ ಆಗಿದೆ ಎರಡೂ ತುದಿಗಳಲ್ಲಿ 17-ಇಂಚಿನ ವ್ಹೀಲ್ ಸೆಟಪ್ ಮತ್ತು ಅದರ ವಿನ್ಯಾಸವು ಒಂದೇ ಆಗಿದೆ. ನವೀಕರಿಸಿದ ಪಲ್ಸರ್ ಎನ್ 250 ನಲ್ಲಿ ಕಂಡುಬರುವಂತೆ ಇದು ‘250’ ಬಾಡಿ ಗ್ರಾಫಿಕ್ಸ್ ಹೊಂದಿಲ್ಲ.

ಇದನ್ನೂ ಓದಿ: Used Car Sale : ನಿಮ್ಮ ಕಾರನ್ನು ಜಾಸ್ತಿ ಬೆಲೆಗೆ ಮಾರಬೇಕೇ? ಈ ಕೆಲವು ತಂತ್ರಗಳನ್ನು ಅನುಸರಿಸಿ

ಎಂಜಿನ್ ಪವರ್​ ಏನು?

ಪಲ್ಸರ್ ಎಫ್250 ಬೈಕ್ 249.07 ಸಿಸಿ ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 8,750 ಆರ್ ಪಿಎಂನಲ್ಲಿ 24.1 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 21.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

2024 ಬಜಾಜ್ ಪಲ್ಸರ್ ಎಫ್250 ಬೆಲೆ ಎಷ್ಟು?

ನವೀಕರಿಸಿದ ಪಲ್ಸರ್ ಎಫ್ 250 ಬಿಡುಗಡೆಯನ್ನು ಬಜಾಜ್ ಅಧಿಕೃತವಾಗಿ ಘೋಷಿಸಿಲ್ಲ. ಹೀಗಾಗಿ ಬೆಲೆ ಬಗ್ಗೆ ಮಾಹಿತಿ ಇಲ್ಲ. ಬಜಾಜ್ ವೆಬ್ಸೈಟ್ನಲ್ಲಿ ಅಧಿಕೃತ ಬೆಲೆಯನ್ನು ಇನ್ನೂ ಉಲ್ಲೇಖಿಸಲಾಗಿಲ್ಲ. ಆದರೆ, ಬಜಾಜ್​ ಕಂಪನಿಯ ಮೂಲಗಳ ಪ್ರಕಾರ ರೂ.1.51 ಲಕ್ಷ (ಎಕ್ಸ್ ಶೋರೂಂ) ರೂಪಾಯಿಗೆ ಸಿಗುತ್ತದೆ. ಹೀಗಾಗಿ ಬೆಲೆಯಲ್ಲಿ ಹಿಂದಿನ ಆವೃತ್ತಿಗಿಂತ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ.

Continue Reading

ಪ್ರಮುಖ ಸುದ್ದಿ

Used Car Sale : ನಿಮ್ಮ ಕಾರನ್ನು ಜಾಸ್ತಿ ಬೆಲೆಗೆ ಮಾರಬೇಕೇ? ಈ ಕೆಲವು ತಂತ್ರಗಳನ್ನು ಅನುಸರಿಸಿ

Used Car Sale : ಕಾರು ಡೀಲರ್​ಗಳು ಅಥವಾ ಬ್ರೋಕರ್​ಗಳು ಬೇಡ ಎಂದು ಅಂದು ತಕ್ಷಣ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕಾರಿಗೆ ಹೆಚ್ಚು ಬೆಲೆ ಸಿಗುತ್ತದೆ ಹಾಗೂ ಹೆಚ್ಚು ಲಾಭ ನಿಮ್ಮದಾಗುತ್ತದೆ. ಹೀಗಾಗಿ ಮಾರುವ ಮೊದಲು ಕೆಲವೊಂದು ಯೋಜನೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

VISTARANEWS.COM


on

Used Car Sale
Koo

ಬೆಂಗಳೂರು: ಕಷ್ಟಕಾಲಕ್ಕೊ ಅಥವಾ ಹೊಸ ಕಾರನ್ನು ತೆಗೆದುಕೊಳ್ಳುವುದಕ್ಕೊ ಹಳೆ ಕಾರನ್ನು (Used Car Sale) ಮಾರಬೇಕಾಗುತ್ತದೆ. ಮೊದಲ ನೋಟಕ್ಕೆ ಅದು ಸುಲಭ ಎನಿಸಬಹುದು. ‘ಮಾರಿದ್ರೆ ಆಯ್ತು’ ಎಂದು ಹೇಳಬಹುದು. ಆದರೆ ಅದು ಅಷ್ಟೊಂದು ಸುಲಭವಲ್ಲ. ನೀವು ಮಾರಲು ನಿರ್ಧರಿಸಿದ ತಕ್ಷಣ ಅಂದುಕೊಳ್ಳುವಷ್ಟು ಬೆಲೆಯು ಸಿಗುವುದೇ ಇಲ್ಲ. ಕಾರು ಕೊಡಲು ಮುಂದಾದಾಗ ಕಡಿಮೆ ಬೆಲೆಗೆ ಕೇಳುವವರೇ ಹೆಚ್ಚು. ಹೀಗಾಗಿ ಸಾಕಷ್ಟು ಲಾಸ್ ಆಗಬಹುದು. ಅದೂ ಅಲ್ಲದಿದ್ದರೆ ಸೆಕೆಂಡ್ ಹ್ಯಾಂಡ್ ಕಾರು ಡೀಲರ್​ಗಳ ಬಳಿಗೆ ಹೋಗಬೇಕು. ಅವರು ಕೂಡ ತಮ್ಮ ಲಾಭಾಂಶವನನ್ನು ಇಟ್ಟುಕೊಂಡೇ ಖರೀದಿ ಮಾಡುತ್ತದೆ. ಆ ರೀತಿ ಆಗಬಾರದು ಎಂದಾರೆ ಸ್ವಲ್ಪ ಯೋಚನೆ ಮಾಡಿಕೊಂಡು ಕಾರನ್ನು ಮಾರಲು ಮುಂದಾಗಬೇಕು. ಅದಕ್ಕೆ ಬೇಕಾಗಿರುವ ಕೆಲವೊಂದು ತಂತ್ರಗಳನ್ನು ಇಲ್ಲಿ ನೀಡಲಾಗಿದೆ.

ಏನು ಮಾಡಬೇಕು

ಕಾರು ಡೀಲರ್​ಗಳು ಅಥವಾ ಬ್ರೋಕರ್​ಗಳು ಬೇಡ ಎಂದು ಅಂದು ತಕ್ಷಣ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕಾರಿಗೆ ಹೆಚ್ಚು ಬೆಲೆ ಸಿಗುತ್ತದೆ ಹಾಗೂ ಹೆಚ್ಚು ಲಾಭ ನಿಮ್ಮದಾಗುತ್ತದೆ. ಹೀಗಾಗಿ ಮಾರುವ ಮೊದಲು ಕೆಲವೊಂದು ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಮೊದಲಾಗಿ ಮಾನಸಿಕವಾಗಿ ಸಂಪೂರ್ಣವಾಗಿ ಸಿದ್ಧಗೊಳ್ಳಬೇಕು. ಇಂತಿಷ್ಟು ಬೆಲೆ ಸಿಕ್ಕರೆ ಮಾರುವುದು ಖಚಿತ. ಇಲ್ಲವಾದರೆ ಇಲ್ಲ. ಇಂಥವರಿಗಷ್ಟೇ ಮಾರುವೆ. ಒಂದು ಬಾರಿಗೆ ಹಣ ಕೊಟ್ಟರಷ್ಟೇ ಮಾರುವೆ ಎಂಬೆಲ್ಲ ಯೋಜನೆಗಳನ್ನು ಹಾಕಿಕೊಂಡಿಬೇಕು.

ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ಅರಿತುಕೊಳ್ಳಬೇಕು.

ಇಂಟರ್ನೆಟ್ ನಿಮಗೆ ಲಭ್ಯವಿದ್ದರೆ ನಿಮ್ಮಲ್ಲಿರುವ ಕಾರಿನ ಪ್ರಸ್ತುತ ಅನ್​​ರೋಡ್​ ಪ್ರೈಸ್​ ತಿಳಿದುಕೊಳ್ಳಬೇಕು. ಹೀಗಾಗಿ ಕೆಲವೊಂದು ವರ್ಷಗಳು ಹಳೆಯದಾಗಿರುವ ನಿಮ್ಮ ಕಾರಿಗೆ ಎಷ್ಟು ಬೆಲೆ ಪಡೆಯಬಹುದು ಎಂದು ಅಂದಾಜಿಸಿ. ಕಾರಿನ ಬೆಲೆಯ ಅಂದಾಜು ಮಾಡಲು ಯೂಸ್ಡ್​ ಕಾರು ಮಾರಾಟ ವೆಬ್​ಸೈಟ್​ ಹೋಗಿ ಎಲ್ಲ ಮಾಹಿತಿ ನಮೂದಿಸಿ. ಖರೀದಿ ಮಾಡಿದ ವರ್ಷ, ಓಡಿರುವ ಕಿಲೋಮೀಟರ್​ಗಳು, ಯಾವ ವೇರಿಯೆಂಟ್​ ಎಂಬುದನ್ನೆಲ್ಲ ಹಾಕಿ. ಅಲ್ಲಿ ಕಾಣುವ ಬೆಲೆಗಿಂತ ಸ್ವಲ್ಪ ಜಾಸ್ತಿ ಹೇಳಿ. ಕನಿಷ್ಠ ಬೆಲೆಯ ಮೇಲೆ ಬಫರ್ ದರ ಇಟ್ಟುಕೊಳ್ಳಿ. ಆದರೆ ನೆನಪಿಡಿ, ಜಾಸ್ತಿ ಹೇಳಬೇಡಿ. ಖರೀದಿದಾರನ ಬಳಿಯೂ ಇಂಟರ್ನೆಟ್​ ಇರುತ್ತದೆ. ಚೌಕಾಸಿಯಲ್ಲೇ ಟೈಮ್​ ವೇಸ್ಟ್​ ಮಾಡಬೇಕಾಗುತ್ತದೆ. ಬಳಿಕ ಕಾರಿನ ಮಾಹಿತಿಯೊಂದಿಗೆ ಸೆಕೆಂಡ್​ ಹ್ಯಾಂಡ್​ ಕಾರು ಮಾರಾಟದ ವೆಬ್​ಸೈಟ್​, ಸೋಶಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಮಾಡಿ. ಕಾರಿನ ಎಲ್ಲ ಮಾಹಿತಿ ಕೊಟ್ಟು ಹ್ಯಾಕರ್​ಗಳ ಮೋಸಗಾರರ ಕೈಗೆ ಸಿಕ್ಕಿ ಹಾಕಿಕೊಳ್ಳಬೇಡಿ. ಅಗತ್ಯ ಮಾಹಿತಿ ಮಾತ್ರ ಕೊಡಿ. ಹೆಚ್ಚು ಪ್ರತಿಕ್ರಿಯೆಗಳನ್ನು ಬಯಸದಿದ್ದರೆ ಅಥವಾ ಸಿಂಗಲ್​ ಡಿಲ್​ ಎಂದಾದರೆ “ಅತ್ಯುತ್ತಮ ಕೊಡುಗೆ”, “ಅಂತಿಮ ಬೆಲೆ”, “ಮಾತುಕತೆ ಇಲ್ಲ ” ಎಂಬುದನ್ನು ಸ್ಪಷ್ಟಪಡಿಸಿ.

ಎಲ್ಲ ದಾಖಲೆಗಳೂ ಜತೆಗಿರಲಿ

ನಿಮ್ಮ ಕಾರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒಟ್ಟಿಗೆ ಇಟ್ಟುಕೊಳ್ಳಿ. “ಎಲ್ಲವೂ” ಎಂದರೆ ಎಲ್ಲವೂ ಇರಬೇಕು. ಮೆಂಟೇನೆನ್ಸ್ ಬಿಲ್, ಸರ್ವಿಸ್​ ದಾಖಲೆಗಳು, ಟೈರ್ ಗಳು, ಬ್ಯಾಟರಿಗಳಿಗೆ ವಾರಂಟಿ ರಸೀದಿಗಳನ್ನು ಜತೆಗೆ ಇಟ್ಟುಕೊಳ್ಳಿ. ಈ ರೀತಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ದಾಖಲೆಗಳಿಂದಾಗಿ ಹೆಚ್ಚು ಬೆಲೆ ಸಿಗುತ್ತದೆ. ಅಂದರೆ ನಿಮ್ಮ ಕಾರಿನ ಬಗ್ಗೆ ನೀವು ಕಾಳಜಿ ವಹಿಸುತ್ತೀರಿ ಎಂದು ಅರ್ಥ.

ಆನ್​ಲೈನ್​ ಜಾಹೀರಾತು

ನಿಮಗೆ ಅತ್ಯುತ್ತಮ ಡೀಲ್ ಬೇಕಾದರೆ ಆನ್ ಲೈನ್ ಜಾಹೀರಾತು ನೀಡಿ. ಎಷ್ಟು ವೆಬ್​ಸೈಟ್​ಗಳನ್ನು ಎಷ್ಟು ಜನ ನೀಡುತ್ತಾರೆ ಎಂಬ ಮಾಹಿತಿ ಪಡೆಯಿತು. ಅವರಲ್ಲಿ ಕಾರಿನ ಬಗ್ಗೆ ಆಸಕ್ತಿ ಹೊಂದಿರುವವರು ಎಷ್ಟೆಂದು ತಿಳಿದುಕೊಳ್ಳಿ. ಅದರ ಪ್ರಕಾರ ಜಾಹೀರಾತು ನೀಡಿ. ನಿಮ್ಮ ಕಾರು ಮಾರಾಟವಾಗುವವರೆಗೂ ವೆಬ್​ಸೈಟ್​ನಲ್ಲಿ ಅಗತ್ಯ ಮಾಹಿತಿ ಇರಲಿ,

ಕೆಲವು ಸಲಹೆಗಳು ಇಲ್ಲಿವೆ

ಉತ್ತಮ ಫೋಟೋಗಳನ್ನು ಅಪ್ ಲೋಡ್ ಮಾಡಿ. ಚಿತ್ರಗಳನ್ನು ಕ್ಲಿಕ್ ಮಾಡಲು ನಿಮ್ಮ ಮೊಬೈಲ್ ಕ್ಯಾಮೆರಾವನ್ನು ನೀವು ಬಳಸಬಹುದು. ನಿಮ್ಮ ಕಾರಿನ ಫೋಟೊವನ್ನು ಹಗಲು ಹೊತ್ತಿನಲ್ಲಿಯೇ ತೆಗೆಯಿರಿ. ಆದ್ಯತೆಯ ಮೇರೆಗೆ ಮುಂಜಾನೆ ಅಥವಾ ಸಂಜೆ ಫೋಟೋ ತೆಗೆಯುವುದು ಒಳ್ಳೆಯದು.

ಇದನ್ನೂ ಓದಿ: Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

ನಿಮ್ಮ ಕಾರಿನ ಬಗ್ಗೆ ಸಾಧ್ಯವಾದಷ್ಟು ವಿವರಗಳನ್ನು ನೀಡಿ. ಇದು ಸೂಕ್ತ ಖರೀದಿದಾರರನ್ನು ಆಕರ್ಷಿಸುತ್ತದೆ ಮತ್ತು ವೇಗವಾಗಿ ಮಾರಾಟ ಮಾಡಲು ಸಹಾಯ ಮಾಡುತ್ತದೆ.

ಅಲಾಯ್ ಚಕ್ರಗಳು, ಲೆದರ್ ಅಪ್ಹೋಲ್ಸ್ಟರಿ, ಸಿಡಿ-ಚೇಂಜರ್, ಮ್ಯೂಸಿಕ್ ಸಿಸ್ಟಮ್, ಹೊಸ ಟೈರ್​ಗಳು, ಲಭ್ಯವಿರುವ ಸರ್ವಿಸ್​ಗಳು, ವಾರಂಟಿಗಳು ಮುಂತಾದ ಹೆಚ್ಚುವರಿ ಮಾಹಿತಿಯನ್ನು ನಿರ್ದಿಷ್ಟಪಡಿಸಿ.

ವಿಚಾರಣೆಗಳನ್ನು ಸೂಕ್ತ ಕಾಲಕ್ಕೆ ಸ್ವೀಕರಿಸಿ

ಒಮ್ಮೆ ನೀವು ನಿಮ್ಮ ಜಾಹೀರಾತು ಹಾಕಿದ ನಂತರ ನೀವು ಅದರಲ್ಲಿ ನಮೂದಿಸಿದ ಎಲ್ಲ ದಾಖಲೆಯೊಂದಿಗೆ ಸಿದ್ಧರಾಗಿರಿ. ನೀವು ಉಲ್ಲೇಖಿಸಿದ ಎಲ್ಲಾ ಅಂಕಿಅಂಶಗಳು ನೆನಪಿಲ್ಲದಿದ್ದರೆ ಅವುಗಳನ್ನು ಒಂದು ಕಾಗದದ ತುಣುಕಿನ ಮೇಲೆ ಬರೆದಿದೆ. ಖರೀದಿದಾರರು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ, ಆದ್ದರಿಂದ ಪ್ರತಿ ಪ್ರಶ್ನೆಗೆ ಪ್ರಾಮಾಣಿಕವಾಗಿ ಮತ್ತು ಬಹಿರಂಗವಾಗಿ ಉತ್ತರಿಸಲು ಪ್ರಯತ್ನಿಸಿ.

ಅನಗತ್ಯ ಅಪಾಯಿಂಟ್​ಮೆಂಟ್ ಕೊಡಬೇಡಿ. ನಿಮ್ಮ ಸಮಯವನ್ನು ಉಳಿಸಬೇಕಾದರೆ ಫೋನ್ ಮೂಲಕ ಖರೀದಿದಾರರಿಗೆ ಆರಂಭಿಕ ಸ್ಕ್ರೀನಿಂಗ್ ಮಾಡಿ. ನಂತರ ಅಪಾಯಿಂಟ್​ಮೆಂಟ್​ ನಿಗದಿ ಮಾಡಿ. ಖರೀದಿದಾರರನ್ನು ನಿರ್ದಿಷ್ಟ ಸಮಯಕ್ಕೆ ಭೇಟಿಯನ್ನು ಮಾಡಿ. ಇದು ನಿಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ನಿಮ್ಮ ಮನೆಗೆ ಬರುವುದು ಬೇಡ ಎಂದಾರೆ ಹೊರಗಡೆ ಅಪಾಯಿಂಟ್​ಮೆಂಟ್ ಫಿಕ್ಸ್​ ಮಾಡಿ.

ಟೆಸ್ಟ್ ಡ್ರೈವ್​ಗೆ ನೇರ ಕೊಡಬೇಡಿ

ಆಸಕ್ತ ಖರೀದಿದಾರರಿಗೆ ನಿಮ್ಮ ಕಾರನ್ನು ತೋರಿಸಿ. ನೀವು ಜತೆಗೆ ಇಲ್ಲದೆ ನಿಮ್ಮ ಕಾರನ್ನು ಟೆಸ್ಟ್ ಡ್ರೈವ್ ಗೆ ತೆಗೆದುಕೊಳ್ಳಲು ಬಿಡಬೇಡಿ. ಖರೀದಿದಾರರ ಚಾಲನಾ ಪರವಾನಗಿ ಪರಿಶೀಲಿಸಿ. ಆತನಿಗೆ ಚಾಲನೆ ಮಾಡಲು ಬಿಡಿ, ಆದರೆ ನೀವು ನ್ಯಾವಿಗೇಟ್ ಮಾಡುತ್ತಿರಬೇಕು. ಖರೀದಿದಾರನು ನೀವು ಕಾರನ್ನು ಕಾಯ್ದಿರಿಸಲು ಬಯಸಿದರೆ ಅಡ್ವಾನ್ಸ್​ ಡೆಪಾಸಿಟ್​ ಕೇಳಿ. ಆತನ ಅಡ್ವಾನ್ಸ್​ ಮುಕ್ತಾಯಗೊಳ್ಳುವ ಸಮಯ ನಿರ್ದಿಷ್ಟಪಡಿಸಿ. ಬೆಲೆಯ ಬಗ್ಗೆ ಮಾತುಕತೆ ನಡೆಸಿ. ಹೆಚ್ಚು ಚೌಕಾಸಿಗೆ ಅವಕಾಶ ನೀಡಬೇಡಿ.

ಮಾರಾಟ ಪ್ರಕ್ರಿಯೆಗಳು

ನೀವು ನಿಮ್ಮ ವಾಹನವನ್ನು ಮಾರಾಟ ಮಾಡಬೇಕಾದರೆ ಕೆಲವು ಕಾಗದಪತ್ರಗಳನ್ನು ಮಾಡಬೇಕಾಗುತ್ತದೆ. ಪಾವತಿಯನ್ನು ನಗದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಸ್ವೀಕರಿಸಿ. ಚೆಕ್ ಪಾವತಿಯ ಸಂದರ್ಭದಲ್ಲಿ, ಚೆಕ್ ಕ್ಲಿಯರ್ ಆಗುವ ತನಕ ದಾಖಲೆಗಳನ್ನು ವರ್ಗಾಯಿಸಬಾರದು. ಖರೀದಿದಾರ ಸಾಲವನ್ನು ವ್ಯವಸ್ಥೆ ಮಾಡುತ್ತಿದ್ದರೆ, ಫೈನಾನ್ಸ್ ಕಂಪನಿಯ ಡಿಎಸ್ಎ ಸಹಾಯ ಪಡೆಯಿರು. ಅವರು ಎಲ್ಲಾ ಕಾಗದಪತ್ರಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅದರಿಂದ ಕಾಗದ ಪತ್ರಗಳ ವರ್ಗಾವಣೆಗೆ ಅನುಕೂಲವಾಗುತ್ತದೆ.

Continue Reading
Advertisement
Harbhajan Singh
ಕ್ರೀಡೆ48 seconds ago

Harbhajan Singh : ಭಾರತ ತಂಡದ ಕೋಚ್ ಆಗಲು ಉತ್ಸಾಹ ತೋರಿದ ಹರ್ಭಜನ್​ ಸಿಂಗ್​

Tamil Nadu Officers
ದೇಶ16 mins ago

ಐಎಎಸ್‌ ಆಫೀಸರ್‌ ಆಗಿರುವ ಮಾಜಿ ಪತ್ನಿಯಿಂದ ನನ್ನ ಮನೆಗೆ ವಿದ್ಯುತ್‌ ಕಟ್; ಇದು ಐಪಿಎಸ್‌ ಆಫೀಸರ್‌ ಅಳಲು!

Rameshwaram Cafe Blast
ಕರ್ನಾಟಕ33 mins ago

Rameshwaram Cafe Blast: ಹುಬ್ಬಳ್ಳಿ ಸೇರಿ 4 ರಾಜ್ಯಗಳ ಹಲವೆಡೆ ಎನ್‌ಐಎ ದಾಳಿ; 11 ಶಂಕಿತ ಉಗ್ರರು ವಶಕ್ಕೆ

Virat kohli
ಪ್ರಮುಖ ಸುದ್ದಿ40 mins ago

IPL 2024 : ಕೊಹ್ಲಿಯನ್ನು ಗಂಭೀರ್ ಅಪ್ಪಿಕೊಂಡಿದ್ದು ಫೇರ್​ಪ್ಲೇ ಅವಾರ್ಡ್​ಗಾಗಿಯಾ? ಅವರ ಮಾತಲ್ಲೇ ಕೇಳಿ

Phone tapping case and R Ashok demands for CBI investigation
ರಾಜಕೀಯ59 mins ago

Phone tapping: ಸಿಬಿಐಗೆ ಫೋನ್‌ ಕದ್ದಾಲಿಕೆ ಪ್ರಕರಣ ವಹಿಸಲಿ: ಸರ್ಕಾರಕ್ಕೆ ಅಶೋಕ್‌ ಸವಾಲು ಏನು?

Porsche Crash
ದೇಶ1 hour ago

Porsche Crash: 2 ಕಾರು, 4 ನಗರ, 1 ಸಿಮ್‌ ಕಾರ್ಡ್;‌ ಮಗ ಕಾರು ಗುದ್ದಿದ ಬಳಿಕ ಅಪ್ಪನ ಪ್ಲಾನ್‌ ಏನು? ಇಲ್ಲಿದೆ ಭೀಕರ ಮಾಹಿತಿ

IPL 2024
ಕ್ರೀಡೆ1 hour ago

IPL 2024 : ಕೊಹ್ಲಿಯನ್ನೂ ಟೀಕಿಸುವುದರ ನಡುವೆಯೂ ಆರ್​​ಸಿಬಿ ಕಪ್​ ಗೆಲ್ಲುತ್ತದೆ ಎಂದ ಗವಾಸ್ಕರ್​

Road Accident
ಶಿವಮೊಗ್ಗ1 hour ago

Road Accident: ಮರಕ್ಕೆ ಬಸ್‌ ಡಿಕ್ಕಿಯಾಗಿ ಹಲವರಿಗೆ ಗಾಯ; ಆಟೋ ಪಲ್ಟಿಯಾಗಿ ಚಾಲಕ ಸಾವು

Dwayne Bravo
ಪ್ರಮುಖ ಸುದ್ದಿ2 hours ago

Dwayne Bravo : ಅಫಘಾನಿಸ್ತಾನ ತಂಡದಲ್ಲಿ ದೊಡ್ಡ ಜವಾಬ್ದಾರಿ ವಹಿಸಿಕೊಂಡ ಡ್ವೇನ್ ಬ್ರಾವೊ

Narendra Modi
ಪ್ರಮುಖ ಸುದ್ದಿ2 hours ago

Narendra Modi: ಅಂಬೇಡ್ಕರ್‌ ಇರದಿದ್ದರೆ ಮೀಸಲಾತಿ ಜಾರಿಗೆ ನೆಹರು ಬಿಡುತ್ತಿರಲಿಲ್ಲ ಎಂದ ಮೋದಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು8 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು9 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌