Oscars 2023: ‘ನಾನಿನ್ನೂ ನಡುಗುತ್ತಿದ್ದೇನೆ‘; ಆಸ್ಕರ್​ ಗೆದ್ದ ಬಳಿಕದ ಉದ್ವೇಗ ವ್ಯಕ್ತಪಡಿಸಿದ ದಿ ಎಲಿಫೆಂಟ್​ ವಿಸ್ಪರರ್ಸ್ ನಿರ್ಮಾಪಕಿ - Vistara News

Oscars 2023

Oscars 2023: ‘ನಾನಿನ್ನೂ ನಡುಗುತ್ತಿದ್ದೇನೆ‘; ಆಸ್ಕರ್​ ಗೆದ್ದ ಬಳಿಕದ ಉದ್ವೇಗ ವ್ಯಕ್ತಪಡಿಸಿದ ದಿ ಎಲಿಫೆಂಟ್​ ವಿಸ್ಪರರ್ಸ್ ನಿರ್ಮಾಪಕಿ

ಪ್ರತಿಷ್ಠಿತ ಆಸ್ಕರ್​ ಗೆಲ್ಲುತ್ತಿದ್ದಂತೆ ‘ದಿ ಎಲಿಫೆಂಟ್​ ವಿಸ್ಪರರ್ಸ್​​’ ಡಾಕ್ಯುಮೆಂಟರಿಯ ಸಹ ನಿರ್ಮಾಪಕಿ ಗುನೀತ್​ ಮೋಂಗಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಸಾಧನೆ ನನ್ನಲ್ಲಿ ನಿಜಕ್ಕೂ ಹರ್ಷ ತಂದಿದೆ. ಇಬ್ಬರು ಮಹಿಳೆಯರು ಇದನ್ನು ಸಾಧಿಸಿದ್ದೇವೆ ಎಂದಿದ್ದಾರೆ

VISTARANEWS.COM


on

I am still shivering Says Guneet Monga After Won Oscars for Her Elephant Whisperers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಾಸ್​ ಏಂಜಲೀಸ್​, ಅಮೆರಿಕ: ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಆಸ್ಕರ್​ 2023 (Oscars 2023)ನಿಜಕ್ಕೂ ವಿಶೇಷ ಕ್ಷಣವಾಗಿದೆ. ಕಾರ್ತಿಕಿ ಗೊನ್ಸಾಲ್ವೆಸ್​ ನಿರ್ದೇಶನದ ‘ದಿ ಎಲಿಫೆಂಟ್​ ವಿಸ್ಪರರ್ಸ್​’ (Elephant Whisperers) ಡಾಕ್ಯುಮೆಂಟರಿ ‘ಆಸ್ಕರ್​​ನ ಅತ್ಯುತ್ತಮ ಕಿರುಚಿತ್ರ’ವಾಗಿ ಹೊರಹೊಮ್ಮಿದ್ದರೆ, ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸಿನಿಮಾದ ಹಾಡು ‘ನಾಟು..ನಾಟು..’ ಬೆಸ್ಟ್ ಒರಿಜಿನಲ್​ ಕೆಟೆಗರಿಯಲ್ಲಿ ಆಸ್ಕರ್​​ ಮುಡಿಗೇರಿಸಿಕೊಂಡಿದೆ. ಭಾರತದ ಸಿನಿಪ್ರಿಯರಲ್ಲಿ ಇದು ದೊಡ್ಡಮಟ್ಟಿಗಿನ ಸಂಭ್ರಮಕ್ಕೆ ಕಾರಣವಾಗಿದೆ.

ಹೀಗೆ ಪ್ರತಿಷ್ಠಿತ ಆಸ್ಕರ್​ ಗೆಲ್ಲುತ್ತಿದ್ದಂತೆ ‘ದಿ ಎಲಿಫೆಂಟ್​ ವಿಸ್ಪರರ್ಸ್​​’ ಡಾಕ್ಯುಮೆಂಟರಿಯ ಸಹ ನಿರ್ಮಾಪಕಿ ಗುನೀತ್​ ಮೋಂಗಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ‘ಈ ಸಾಧನೆ ನನ್ನಲ್ಲಿ ನಿಜಕ್ಕೂ ಹರ್ಷ ತಂದಿದೆ. ನಾನಿನ್ನೂ ನಡುಗುತ್ತಿದ್ದೇನೆ’ ಎಂದು ತಮ್ಮಲ್ಲಾಗುತ್ತಿರುವ ಉದ್ವೇಗವನ್ನು ಅವರು ಹೊರಹಾಕಿದ್ದಾರೆ. ‘ನಾವು ನಮ್ಮ ಮೊದಲ ಆಸ್ಕರ್​ ಗೆದ್ದಿದ್ದೇವೆ. ಇಬ್ಬರು ಮಹಿಳೆಯರು ಅದನ್ನು ಸಾಧಿಸಿದ್ದಾರೆ. ನಾನಿನ್ನೂ ನಡುಗುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಹಾಗೇ, ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡ ನಿರ್ಮಾಪಕಿ ಗುನೀತ್ ಮೋಂಗಾ, ‘ಆಸ್ಕರ್​ ಗೆದ್ದ ಭಾರತದ ಮೊದಲ ಕಿರುಚಿತ್ರ ಎಂಬ ಐತಿಹಾಸಿಕ ಕ್ಷಣಕ್ಕೆ ಈ ರಾತ್ರಿ ಸಾಕ್ಷಿಯಾಯಿತು. ಈ ಕೀರ್ತಿಯನ್ನು ತಂದಿದ್ದು ಭಾರತದ ಇಬ್ಬರು ಮಹಿಳೆಯರು’ ಎಂದು ಹೇಳಿದರು. ಹಾಗೇ, ತಮ್ಮ ತಾಯಿ-ತಂದೆಗೆ, ಅವರ ಸಹ ನಿರ್ಮಾಪಕರಾದ ಅಚಿನ್ ಜೈನ್​​ರಿಗೆ, ಪತಿಗೆ ಮತ್ತು ಇಡೀ ತಂಡ, ನೆಟ್​ಫ್ಲಿಕ್ಸ್​​ಗೆ ಕೃತಜ್ಞತೆ ಸಲ್ಲಿಸಿದರು. ಹಾಗೇ, ಕಥೆಯನ್ನು ಹೆಣೆದು, ಅದಕ್ಕೊಂದು ರೂಪಕೊಟ್ಟ ನಿರ್ದೇಶಕಿ ಕಾರ್ತೀಕಿ ಅವರಿಗೆ, ಕಿರುಚಿತ್ರ ನೋಡಿದ, ನೋಡುತ್ತಿರುವ ಎಲ್ಲ ಮಹಿಳೆಯರಿಗೆ ವಿಶೇಷ ಧನ್ಯವಾದ ಎಂದೂ ಬರೆದುಕೊಂಡಿದ್ದಾರೆ. ಕೊನೇದಾಗಿ ಜೈ ಹಿಂದ್​ ಎಂದೂ ಬರೆದಿದ್ದಾರೆ.

ಅಂದಹಾಗೇ, ದಿ ಎಲಿಫೆಂಟ್​ ವಿಸ್ಪರರ್ಸ್ 41 ನಿಮಿಷಗಳ ಕಿರುಚಿತ್ರವಾಗಿದ್ದು, ನೆಟ್​ಫ್ಲಿಕ್ಸ್​​ನಲ್ಲಿ ಲಭ್ಯವಿದೆ. ಒಂದು ಅನಾಥ ಆನೆಮರಿಯನ್ನು, ದಂಪತಿ ಆರೈಕೆ ಮಾಡಿ, ಅದನ್ನು ಕಾಳಜಿ ಮಾಡುವ ಕಥೆಯನ್ನು ಇದು ಒಳಗೊಂಡಿದೆ. ಅದರಲ್ಲಿ ದಂಪತಿ ಮತ್ತು ಅನಾಥ ಆನೆ ನಡುವಿನ ಬಾಂಧವ್ಯ ನೋಡುಗರ ಹೃದಯಸ್ಪರ್ಶಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Oscars 2023

ಜಪಾನ್‌ನಲ್ಲಿ 80 ಕೋಟಿ ರೂ. ಗಳಿಸಿದ RRR Movie; ದಾಖಲೆಗಳ ಮೇಲೆ ದಾಖಲೆಗಳ ಸೃಷ್ಟಿ

ಆರ್‌ಆರ್‌ಆರ್‌ ಸಿನಿಮಾ (RRR Movie) ಜಪಾನ್‌ನಲ್ಲಿ 20ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿದೆ. ಜಪಾನ್‌ ದೇಶವೊಂದರಲ್ಲೇ ಬರೋಬ್ಬರಿ 80 ಕೋಟಿ ರೂ. ಗಳಿಕೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

VISTARANEWS.COM


on

Koo

ಹೈದರಾಬಾದ್:‌ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ (RRR Movie) ಜಪಾನ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ 21ರಂದು ಬಿಡುಗಡೆಯಾಗಿತ್ತು. ಇದೀಗ 20ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿರುವ ಸಿನಿಮಾ ಜಪಾನ್‌ನಲ್ಲಿ ಬರೋಬ್ಬರಿ 80 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಮೊನ್ನೆಯಷ್ಟೇ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡ ಬಂದಿದೆ.

ಇದನ್ನೂ ಓದಿ: MM Keeravani : ಆಸ್ಕರ್‌ ಗೆದ್ದ ಕೀರವಾಣಿಗೆ ಶುಭ ಹಾರೈಸಿದ ಖ್ಯಾತ ಪಿಯಾನಿಸ್ಟ್ ಕಾರ್ಪೆಂಟರ್; ಕಣ್ಣೀರಿಟ್ಟ ಸಂಗೀತ ನಿರ್ದೇಶಕ
ಆರ್‌ಆರ್‌ಆರ್‌ ಸಿನಿಮಾ ಜಪಾನ್‌ನ 44 ನಗರಗಳ 209 ಸಿನಿಮಾ ಮಂದಿರಗಳಲ್ಲಿ, 31 ಐಮ್ಯಾಕ್ಸ್‌ ತೆರೆಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ 80 ಕೋಟಿಗೂ ಅಧಿಕ ರೂ. ಸಂಪಾದನೆ ಮಾಡಿದ್ದು, ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಮೊದಲ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿದೆ.


ಈ ಬಗ್ಗೆ ಟ್ವಿಟರ್‌ನಲ್ಲಿ ಸಿನಿಮಾದ ಅಧಿಕೃತ ಖಾತೆಯಾದ ʼಆರ್‌ಆರ್‌ಆರ್‌ʼನಿಂದ ಟ್ವೀಟ್‌ ಮಾಡಿ ಮಾಹಿತಿ ನೀಡಲಾಗಿದೆ. “ಆರ್‌ಆರ್‌ಆರ್‌ ಸಿನಿಮಾ ಕ್ರಮೇಣವಾಗಿ ಜಪಾನ್‌ನ ಬೇರುಗಳಲ್ಲಿ ತೂರಿಕೊಳ್ಳುತ್ತಿದೆ. ಚಿತ್ರವು ಅಸಾಧಾರಣ ಹೆಜ್ಜೆಗಳನ್ನು ಇಡುತ್ತಿದೆ. 20ನೇ ವಾರಕ್ಕೆ ಕಾಲಿಟ್ಟಿರುವ ಸಿನಿಮಾ 202 ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡುತ್ತಿದೆ” ಎಂದು ಸಿನಿತಂಡ ಹೇಳಿದೆ.

ಇದನ್ನೂ ಓದಿ: Oscars 2023: ದಿ ಎಲಿಫೆಂಟ್​ ವಿಸ್ಪರರ್ಸ್, ಆರ್‌ಆರ್‌ಆರ್‌ ತಂಡವನ್ನು ಶ್ಲಾಘಿಸಿದ ಪ್ರಿಯಾಂಕ ಚೋಪ್ರಾ
ಜಪಾನ್‌ನಲ್ಲಿ ಈಗಾಗಲೇ 80 ಕೋಟಿ ರೂ. ಗಳಿಸಿಕೊಂಡಿರುವ ಆರ್‌ಆರ್‌ಆರ್‌ ಸಿನಿಮಾ ಶೀಘ್ರವೇ 100 ಕೋಟಿ ರೂ. ಗಳಿಕೆ ದಾಟುವ ಸಾಧ್ಯತೆಯಿದೆ. ವಿಶ್ವಾದ್ಯಂತ ಸಿನಿಮಾ ಸಾವಿರ ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿಕೊಂಡಿದೆ.

Continue Reading

Oscars 2023

Actor Jr NTR: ಆಸ್ಕರ್‌ ಕಾರ್ಯಕ್ರಮಕ್ಕೆ ದುಬಾರಿ ವಾಚ್ ತೊಟ್ಟಿದ್ದ ಜೂ. ಎನ್‌ಟಿಆರ್‌! ಆ ವಾಚ್ ಬೆಲೆ ಎಷ್ಟು?

ಟಾಲಿವುಡ್‌ ಹೀರೋ ಜೂ. ಎನ್‌ಟಿಆರ್‌ ಅವರು ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದುಬಾರಿ ಬೆಲೆಯ ವಾಚ್‌ ಧರಿಸಿದ್ದರು. ಅದರ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ.

VISTARANEWS.COM


on

Koo

ಹೈದರಾಬಾದ್:‌ ರಾಜಮೌಳಿ ಅವರ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಿನಿಮಾ ರಂಗದ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಸಂತಸದಲ್ಲಿ ಚಿತ್ರತಂಡವಿದೆ. ಅಂದ ಹಾಗೆ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಜೂನಿಯರ್‌ ಎನ್‌ಟಿಆರ್‌ ಅವರು ತೊಟ್ಟಿದ್ದ ವಾಚ್‌ ಇದೀಗ ಭಾರೀ ಸುದ್ದಿಯಲ್ಲಿದೆ.

ಇದನ್ನೂ ಓದಿ: Jr NTR: ಆಸ್ಕರ್‌ನಿಂದ ಹಿಂತಿರುಗಿದ ಬಳಿಕ ಜ್ಯೂ. ಎನ್‌ಟಿಆರ್‌ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ
ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತೆರಳಿದ್ದ ಜೂ .ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ಅವರು ಸೆಮಿ ವೆಸ್ಟರ್ನ್‌ ಶೈಲಿಯ ಸೂಟ್‌ಗಳನ್ನು ಧರಿಸಿದ್ದರು. ಹಾಗೆಯೇ ಸಿನಿಮಾದ ನಿರ್ದೇಶಕ ರಾಜಮೌಳಿ ಅವರು ಕುರ್ತಾ ಹಾಗೂ ಲೇಯರ್ಡ್‌ ಪ್ಯಾಂಟ್‌ ಧರಿಸಿ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದರು. ವಿಶೇಷವಾಗಿ ಜೂ. ಎನ್‌ಟಿಆರ್‌ ಅವರು ಪಟೇಕ್‌ ಫಿಲ್ಲಿಪೆ ನೌಟಿಲಸ್‌ ಟ್ರಾವೆಲ್‌ ಟೈಮ್‌ ಕಂಪನಿಯ ವಾಚ್‌ ಅನ್ನು ತೊಟ್ಟಿದ್ದರು. ಈ ವಾಚ್‌ನ ಬೆಲೆ ಬರೋಬ್ಬರಿ 1,90,000 ಡಾಲರ್‌ ಅಂದರೆ 1.56 ಕೋಟಿ ರೂಪಾಯಿ!‌

ಜೂ. ಎನ್‌ಟಿಆರ್‌ ಅವರು ತೊಟ್ಟಿದ್ದ ಈ ವಾಚ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಅಂದ ಹಾಗೆ ಜೂ. ಎನ್‌ಟಿಆರ್‌ ಅವರು ಬ್ರಾಂಡೆಡ್‌ ವಾಚ್‌ಗಳನ್ನು ಇಷ್ಟಪಡುವ ವ್ಯಕ್ತಿ. ಈ ಹಿಂದೆಯೂ ಕೂಡ ಅನೇಕ ಕಾರ್ಯಕ್ರಮಗಳಿಗೆ ಅವರು ಭಾರೀ ಬೆಲೆ ಬಾಳುವ ವಾಚ್‌ಗಳನ್ನು ತೊಟ್ಟು ಬಂದಿದ್ದರು. ಅವರ ವಾಚ್‌ ಕಲೆಕ್ಷನ್‌ ಬಗ್ಗೆಯೂ ಹಲವು ಬಾರಿ ಚರ್ಚೆಗಳು ನಡೆದಿವೆ.

Continue Reading

Oscars 2023

Oscars 2023: ಎಲ್ಲೇ ಹೋದರೂ ಸಣ್ಣ ದೇವಾಲಯ ಸ್ಥಾಪಿಸುವ ರಾಮ್ ಮತ್ತು ಪತ್ನಿ ಉಪಾಸನಾ!

Oscars 2023: ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್‌ ಗೆದ್ದ ಆರ್‌ಆರ್‌ಆರ್‌ (RRR Movie)ಚಿತ್ರದ ನಟ ರಾಮ್ ಚರಣ್ (Ram Charan) ಹಾಗೂ ಅವರ ಪತ್ನಿ ಉಪಾಸನಾ ಅವರ ಧಾರ್ಮಿಕ ಮನೋಭಾವನೆಗೆ ಮತ್ತೊಂದು ಸಾಕ್ಷ್ಯ ದೊರೆತಿದೆ.

VISTARANEWS.COM


on

Oscars 2023: Ram and his wife set up a small temple Whenever the go
Koo

ನವದೆಹಲಿ: ಸೋಮವಾರ ಆಸ್ಕರ್ ಘೋಷಣೆಯಾಗುವ ಸ್ಥಳಕ್ಕೆ ಹೋಗುವ ಮುನ್ನ ರಾಮ್ ಚರಣ್ (Ram Charan) ಮತ್ತು ಅವರ ಪತ್ನಿ ಉಪಾಸನಾ ಅವರು ತಮ್ಮ ಮನೆಯಲ್ಲಿರುವ ಚಿಕ್ಕ ದೇಗುಲದಲ್ಲಿ ಪ್ರಾರ್ಥನೆ ಮಾಡಿ ಬಂದಿದ್ದರಂತೆ. ಈ ಜೋಡಿ ಎಲ್ಲೇ ಹೋದರೂ, ತಾವಿರುವಲ್ಲೇ ಚಿಕ್ಕ ದೇವಾಲಯವನ್ನು ರೆಡಿ ಮಾಡಿ, ಪೂಜಿಸುತ್ತಾರಂತೆ. ಇದು ಅವರಿಗೆ ಭಾರತದ ಜತೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದಂತೆ. ಈ ಮಾಹಿತಿಯನ್ನು ರಾಮ್ ಚರಣ್ ಅವರು ಹಂಚಿಕೊಂಡಿದ್ದು, ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಮನೆಯಲ್ಲಿ ರೂಪಿಸಿದ ಚಿಕ್ಕ ದೇಗುಲದ ಫೋಟೋ ತೆಗೆಯಲು ಮಾಧ್ಯಮದವರಿಗೆ ಅವಕಾಶ ಮಾಡಿಕೊಟ್ಟರೆನ್ನಲಾಗಿದೆ(Oscars 2023:).

ಆಸ್ಕರ್‌ಗಾಗಿ ಡಾಲ್ಬಿ ಥಿಯೇಟರ್‌ಗೆ ಹೊರಡುವ ಮೊದಲು ದಂಪತಿಗಳು ಹೇಗೆ ತಯಾರಿ ನಡೆಸಿದ್ದಾರೆ ಎಂಬುದನ್ನು ನೋಡಲು ವ್ಯಾನಿಟಿ ಫೇರ್ ಮ್ಯಾಗ್‌ಜಿನ್ ತಂಡವು ರಾಮ್ ಅವರ ಇರುವ ಮನೆಗೆ ಆಗಮಿಸಿತ್ತು. ಈ ತಂಡವನ್ನು ರಾಮ್ ಅವರು ಸ್ವಾಗತಿಸಿದರು. ಕ್ಯಾಮೆರಾಗಳಿಗೆ ತಮ್ಮ ಬಟ್ಟೆಗಳನ್ನು ತೋರಿಸುವುದರ ಜೊತೆಗೆ, ಅವರು ಪ್ರಪಂಚದ ಎಲ್ಲೇ ಇದ್ದರೂ ಅವರು ಅನುಸರಿಸುವ ಆಚರಣೆಯ ಮಾಹಿತಿಯನ್ನು ರಾಮ್ ಅವರು ಹಂಚಿಕೊಂಡರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಆಸ್ಕರ್‌ ಗೆಲುವು ಆರೋಗ್ಯಕರ ಸ್ಪರ್ಧೆಗೆ ನಾಂದಿಯಾಗಲಿ

ಈ ವೇಳೆ ವ್ಯಾನಿಟಿ ಫೇರ್ ಮ್ಯಾಗ್‌ಜಿನ್ ಜತೆ ಮಾತನಾಡಿದ ರಾಮ್ ಚರಣ್ ಅವರು, ನಾನು ಎಲ್ಲಿಗೆ ಹೋದರೂ, ನನ್ನ ಹೆಂಡತಿ ಮತ್ತು ನಾನು ಈ ಸಣ್ಣ ದೇವಾಲಯವನ್ನು ಸ್ಥಾಪಿಸುತ್ತೇವೆ. ಈ ಆಚರಣೆಯು ನಮ್ಮ ಶಕ್ತಿಗಳು ಮತ್ತು ಭಾರತದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಇಲ್ಲಿರಲು ನಮಗೆ ಸಹಾಯ ಮಾಡಿದ ಎಲ್ಲದಕ್ಕೂ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಕೃತಜ್ಞತೆ ಸಲ್ಲಿಸುವುದು ಮುಖ್ಯ ಎಂದು ಹೇಳಿದರು. ರಾಮ್ ಮತ್ತು ಉಪಾಸನಾ ಸಮಾರಂಭಕ್ಕೆ ಹೊರಡುವ ಮೊದಲು ಒಂದು ಸಣ್ಣ ಪ್ರಾರ್ಥನೆಯನ್ನು ಮಾಡಿದರು ಎಂದು ವರದಿಯಾಗಿದೆ.

Continue Reading

Oscars 2023

Budget Session 2023: ಮೋದಿ, ಆರ್‌ಆರ್‌ಆರ್ ಆಸ್ಕರ್ ಗೆದ್ದಿರುವ ಕ್ರೆಡಿಟ್ ತೆಗೆದುಕೊಳ್ಳಬೇಡಿ! ಖರ್ಗೆ ವ್ಯಂಗ್ಯ

Budget Session 2023: ಪ್ರಧಾನಿ ನರೇಂದ್ರ ಮೋದಿ ಅವರೇ, ಆರ್ ಆರ್ ಆರ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದ್ದಿದ್ದು, ಅವುಗಳ ಕ್ರೆಡಿಟ್ ತೆಗೆದುಕೊಳ್ಳಲು ಹೋಗಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.

VISTARANEWS.COM


on

Don't take credit oscar winning films, Kharge requested to Modi at Budget Session 2023
Koo

ನವದೆಹಲಿ: ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್ ಸಿನಿಮಾ ಮತ್ತು ಡ್ಯಾಕುಮೆಂಟರಿ ಶಾರ್ಟ್ ಫಿಲ್ಮ್ ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದಿದ್ದು, ಅದರ ಕ್ರೆಡಿಟ್ ಅನ್ನು ನರೇಂದ್ರ ಮೋದಿ ಅವರು ತೆಗೆದುಕೊಳ್ಳಬಾರದು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯ ಮಾಡಿದ್ದಾರೆ(Budget Session 2023).

ಆರ್‌ಆರ್‌ಆರ್ ಸಿನಿಮಾ ತೆಲುಗು ಸಿನಿಮಾವಾದ್ರೆ, ಎಲಿಫೆಂಟ್ ವಿಸ್ಪರರ್ಸ್ ತಮಿಳು ಸಾಕ್ಷ್ಯ ಚಿತ್ರವಾಗಿದ್ದು, ಎರಡೂ ದೇಶದ ಸಿನಿಮಾ ಕ್ಷೇತ್ರಕ್ಕೆ ಕಾಣಿಕೆ ನೀಡಿವೆ ಎಂದು ಖರ್ಗೆ ಅವರು ಹೇಳಿದರು. ನಾವು (ಬಿಜೆಪಿ) ನಿರ್ದೇಶನ ಮಾಡಿದ್ದೇವೆ, ನಾವು (ಬಿಜೆಪಿ) ಹಾಡು ಬರೆದಿದ್ದೇವೆ ಎಂದೋ ಅಥವಾ ಮೋದಿಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಆಡಳಿತ ಪಕ್ಷವು ಕ್ರೆಡಿಟ್ ತೆಗೆದುಕೊಳ್ಳಬಾರದು. ಇದು ನನ್ನ ವಿನಂತಿ ಮಾತ್ರ. ಇವು ದೇಶದ ಕೊಡುಗೆಯಾಗಿದೆ ಎಂದು ಖರ್ಗೆ ಸಂಸತ್ತಿನಲ್ಲಿ ಹೇಳಿದರು.

ಇದನ್ನೂ ಓದಿ: Oscars 2023 : ಆರ್‌ಆರ್‌ಆರ್, ದಿ ಎಲಿಫೆಂಟ್ ವಿಸ್ಪರರ್ಸ್ ತಂಡಗಳಿಗೆ ಪಿಎಂ ಮೋದಿ, ರಾಹುಲ್ ಶುಭಾಶಯ

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಆರ್ ಆರ್ ಆರ್ ಚಿತ್ರದ ಕತೆ ಬರೆದವರು ವಿ ವಿಜಯೇಂದ್ರ ಪ್ರಸಾದರು. ಅವರನ್ನು ಮೋದಿ ನೇತೃತ್ವದ ಸರ್ಕಾರವೇ ಸಂಸತ್ತಿಗೆ ನಾಮನಿರ್ದೇಶನ ಮಾಡಿದೆ ಎಂಬುದು ವಾಸ್ತವಾಂಶ ಎಂದರು. ಗೋಯಲ್ ಅವರು ಈ ಮಾತಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರೆಲ್ಲರೂ ಆಸ್ಕರ್ ವಿಜೇತ ಆರ್ ಆರ್ ಆರ್ ಹಾಗೂ ಸಾಕ್ಷ್ಯ ಚಿತ್ರ ದಿ ಎಲೆಫೆಂಟ್ ವಿಸ್ಪರರ್ಸ್ ಚಿತ್ರ ತಂಡಗಳಿಗೆ ಶಭಾಶಯ ಕೋರಿದ್ದಾರೆ.

Continue Reading
Advertisement
T20 Rankings
ಕ್ರೀಡೆ20 seconds ago

T20 Rankings: ಅಗ್ರಸ್ಥಾನದಲ್ಲೇ ಮುಂದುವರಿದ ಸೂರ್ಯ; ಒಂದು ಸ್ಥಾನ ಏರಿಕೆ ಕಂಡ ಬಾಬರ್​

Pakistan Teen
ದೇಶ19 mins ago

ಪಾಕ್‌ ಯುವತಿಗೆ ಭಾರತದ ಹಿಂದು ವ್ಯಕ್ತಿ ಹೃದಯದ ಕಸಿ; ತಕರಾರು ತೆಗೆದ ನೆರೆ ರಾಷ್ಟ್ರದ ಇಸ್ಲಾಂ ಧರ್ಮಗುರು!

Prajwal Revanna Case
ಕರ್ನಾಟಕ32 mins ago

Prajwal Revanna Case: ವಿಡಿಯೊ ಬಿಟ್ಟ ಕಾರ್ತಿಕ್‌ ಎಲ್ಲಿ? ಆತನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು?: ಎಚ್‌ಡಿಕೆ ಕಿಡಿ

KL Rahul
ಕ್ರಿಕೆಟ್1 hour ago

KL Rahul: ಟಿ20 ವಿಶ್ವಕಪ್​ನಲ್ಲಿ ರಾಹುಲ್​ಗೆ ಅವಕಾಶ ಸಿಗದಿರಲು ಕಾರಣ ತಿಳಿಸಿದ ಮಾಜಿ ಆಟಗಾರ

Rahul Gandhi
ದೇಶ1 hour ago

Rahul Gandhi: ರಾಹುಲ್‌ ಗಾಂಧಿಯನ್ನು ಹೊಗಳಿದ ಪಾಕ್‌ ಮಾಜಿ ಸಚಿವ; ತಿರುಗೇಟು ಕೊಟ್ಟ ಬಿಜೆಪಿ

BJP State Spokesperson Hariprakash konemane and leaders Election Campaign for BJP Candidate Vishweshwar Hegde Kageri in Yallapura
ಉತ್ತರ ಕನ್ನಡ2 hours ago

Lok Sabha Election 2024: ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಬಿಜೆಪಿಗೆ ಅಧಿಕ ಬಹುಮತ ನಿಶ್ಚಿತ: ಹರಿಪ್ರಕಾಶ್‌ ಕೋಣೆಮನೆ

MLA G Janardan Reddy latest statement in Gangavathi
ಕರ್ನಾಟಕ2 hours ago

Lok Sabha Election 2024: ಕಳೆದ ಚುನಾವಣೆಯಲ್ಲಿ ನನ್ನ ಜತೆ ಸ್ವತಃ ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದರು: ರೆಡ್ಡಿ ಸ್ಫೋಟಕ ಹೇಳಿಕೆ

Prajwal Revanna Case
ಕರ್ನಾಟಕ2 hours ago

Prajwal Revanna Case: ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಜ್ವಲ್‌ ರೇವಣ್ಣ ಕೇಸ್‌ ಸದ್ದು!

Prajwal Revanna Case BJP will not be with those who do injustice to women says Amit Shah
ರಾಜಕೀಯ2 hours ago

Prajwal Revanna Case: ಮಹಿಳೆಗೆ ಅನ್ಯಾಯ ಮಾಡಿದ್ರೆ ಅಂಥವರ ಜತೆ ಬಿಜೆಪಿ ಇರಲ್ಲ; ಪ್ರಜ್ವಲ್‌ನನ್ನು ಬಿಟ್ಟಿದ್ದು ಕಾಂಗ್ರೆಸ್‌ ತಪ್ಪು ಎಂದ ಶಾ

Adhir Ranjan
ದೇಶ2 hours ago

Adhir Ranjan: ಟಿಎಂಸಿ ಬದಲು ಬಿಜೆಪಿಗೆ ಮತ ಹಾಕೋದೇ ಬೆಸ್ಟ್‌ ಎಂದ ಕಾಂಗ್ರೆಸ್‌ ನಾಯಕ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌