ಇವನೆಂಥಾ ಚಾಲಾಕಿ!; ಪೊಲೀಸರು ದಂಡ ವಿಧಿಸುವುದನ್ನು ತಪ್ಪಿಸಿಕೊಳ್ಳಲು ತನ್ನ ಬೈಕ್​ ತಾನೇ ಕದ್ದು, ಸಿಕ್ಕಿಬಿದ್ದ - Vistara News

ದೇಶ

ಇವನೆಂಥಾ ಚಾಲಾಕಿ!; ಪೊಲೀಸರು ದಂಡ ವಿಧಿಸುವುದನ್ನು ತಪ್ಪಿಸಿಕೊಳ್ಳಲು ತನ್ನ ಬೈಕ್​ ತಾನೇ ಕದ್ದು, ಸಿಕ್ಕಿಬಿದ್ದ

ತಾರಿಕ್ ಅಹ್ಮದ್ ಮಕ್ಸೂದ್ ಖಾನ್ ತುಂಬ ಚಾಲಾಕಿತನದಿಂದ ಕೆಲಸ ಮಾಡಿದ. ಆದರೆ ಸಿಸಿಟಿವಿ ಇರುವುದನ್ನು ಮರೆತೇಬಿಟ್ಟಿದ್ದ. ಸಿಸಿಟಿವಿ ಫೂಟೇಜ್​ ನೋಡಿ ಪೊಲೀಸರು ಅವನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ.

VISTARANEWS.COM


on

man steals his own bike to avoid fine in Mumbai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಈ ಭೂಮಿ ಮೇಲೆ ಎಂತೆಂಥಾ ಚಾಲಾಕಿಗಳು ಇರ್ತಾರೆ ಅಂತ ನೋಡಿ. ಇಲ್ಲೊಬ್ಬ ಪೊಲೀಸರಿಂದ ಪಾರಾಗಲು, ತನ್ನ ಬೈಕ್​​ನ್ನು ತಾನೇ ಕದ್ದು ಸುದ್ದಿ ಮಾಡಿದ್ದಾನೆ. ಪೊಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ವಿಧಿಸುತ್ತಾರೆ. ಸುಮ್ಮನೆ ಹಿಡಿದುಕೊಂಡು ವಿಚಾರಣೆ ಮಾಡುತ್ತಾರೆ. ಆ ರಗಳೆಗಳೇ ಬೇಡವೆಂದು ಖತರ್ನಾಕ್​ ಐಡಿಯಾ ಮಾಡಿದ್ದಾನೆ.

ಮುಂಬಯಿಯ ಗೋವಂಡಿಯಲ್ಲಿರುವ ಬೈಗನವಾಡಿ ನಿವಾಸಿ, 24ವರ್ಷದ ತಾರಿಕ್ ಅಹ್ಮದ್ ಮಕ್ಸೂದ್ ಖಾನ್ ಎಂಬಾತ ಆಜಾದ್​ ಮೈದಾನ್​ ಟ್ರಾಫಿಕ್​ ಚೌಕಿ ಬಳಿ, ಪೊಲೀಸರ ಪಾರ್ಕಿಂಗ್​​ ಸ್ಥಳದಲ್ಲಿ ತನ್ನ ಬೈಕ್ ನಿಲ್ಲಿಸಿ ಅಲ್ಲೆ ಎಲ್ಲಿಗೋ ಹೋಗಿದ್ದ. ಆದರೆ ವಾಪಸ್​ ಬರುವಷ್ಟರಲ್ಲಿ ಬೈಕ್​ ಇರಲಿಲ್ಲ. ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕೆ, ಪೊಲೀಸರು ಅವನ ಬೈಕ್​​ನ್ನು ಟೋಯಿಂಗ್​ ಮಾಡಿ, ಆಜಾದ್ ಮೈದಾನ್​ ಠಾಣೆಗೆ ತೆಗೆದುಕೊಂಡುಬಂದಿಟ್ಟಿದ್ದರು.

ಇದನ್ನೂ ಓದಿ: BMW Bike : ಬಿಎಮ್​​ಡಬ್ಲ್ಯು ಕಂಪನಿಯ ಈ ಬೈಕ್​ಗೆ 35 ಲಕ್ಷ ರೂಪಾಯಿ; ಯಾಕೆ ಅಷ್ಟು ಬೆಲೆ?

ಅದು ಗೊತ್ತಾದ ತಾರಿಕ್​ ಒಂದು ಐಡಿಯಾ ಮಾಡಿದ. ಈ ಹಿಂದೆಯೂ ಹಲವು ದಂಡಗಳು ಬಾಕಿ ಇದ್ದವು. ಈಗ ಸಿಕ್ಕಿಕೊಂಡರೆ ಹಿಂದಿನ ದಂಡದ ಮೊತ್ತ, ಈಗಿನದೆಲ್ಲ ಪಾವತಿ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ರಾತ್ರಿ ಪೊಲೀಸರು ತನ್ನ ಬೈಕ್​ ಇಟ್ಟಿದ್ದ ಜಾಗಕ್ಕೆ ಹೋಗಿ ಕದ್ದುಕೊಂಡು ಬಂದಿದ್ದಾನೆ. ಬೈಕ್​​ನ್ನು ಪೊಲೀಸರು ಸರಪಳಿಯಿಂದ ಕಟ್ಟಿಟ್ಟಿದ್ದರು. ಅದನ್ನು ಕಟ್​ ಮಾಡಿಕೊಂಡು ತೆಗೆದುಕೊಂಡು ಬಂದಿದ್ದಾನೆ. ಮರುದಿನ ಪೊಲೀಸರು ಅಲ್ಲಿ ಚೆಕ್​ ಮಾಡಿದಾಗ, ಆ ಚೈನ್​ ಕಟ್ ಆಗಿ ಬಿದ್ದಿದ್ದಿತ್ತು. ಕೂಡಲೇ ಸಿಸಿಟಿವಿ ಫೂಟೇಜ್​ ಪರಿಶೀಲನೆ ಮಾಡಿದ ಪೊಲೀಸರಿಗೆ ಇದು ತಾರಿಕ್ ಅಹ್ಮದ್ ಮಕ್ಸೂದ್ ಖಾನ್​​ನದೇ ಕೆಲಸ ಎಂದು ಗೊತ್ತಾಗಿ, ಅವನನ್ನು ಹಿಡಿದು ವಿಚಾರಣೆ ಮಾಡಿದ್ದಾರೆ. ಆಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೆ, ದಂಡ ತುಂಬುವುದನ್ನು ತಪ್ಪಿಸಿಕೊಳ್ಳಲು ಹೀಗೆ ಮಾಡಿದೆ ಎಂದಿದ್ದಾನೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Jagan Mohan Reddy: ಸರ್ಕಾರದ 500 ಕೋಟಿ ರೂ.ನಲ್ಲಿ ಜಗನ್‌ ಅರಮನೆ ನಿರ್ಮಾಣ? ಟಿಡಿಪಿ ಸ್ಫೋಟಕ ಆರೋಪ

Jagan Mohan Reddy: ಋಷಿಕೊಂಡ ಹಿಲ್ಸ್‌ ಪ್ರವಾಸಿ ತಾಣವಾಗಿತ್ತು. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, 9.88 ಎಕರೆ ಜಾಗದಲ್ಲಿ ಜಗನ್‌ ಮೋಹನ್‌ ರೆಡ್ಡಿ ಅವರು ಬಂಗಲೆ ನಿರ್ಮಿಸಿದ್ದಾರೆ. ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಬಾತ್‌ ಟಬ್‌ ನಿರ್ಮಿಸಿದ್ದಾರೆ. ಇಂತಹ ಹತ್ತಾರು ಐಷಾರಾಮಿ ಕೋಣೆಗಳು, ಸೌಕರ್ಯಗಳು ಬಂಗಲೆಯಲ್ಲಿವೆ.

VISTARANEWS.COM


on

Jagan Mohan Reddy
Koo

ಅಮರಾವತಿ: ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ (Andhra Pradesh Assembly Election 2024) ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ (Jagan Mohan Reddy) ಅವರ ವೈಎಸ್‌ಆರ್‌ಸಿಪಿ ಪಕ್ಷವು ಸೋಲನುಭವಿಸಿದ್ದು, ಜಗನ್‌ ಮೋಹನ್‌ ರೆಡ್ಡಿ ಅವರು ಮುಖಭಂಗ ಅನುಭವಿಸಿದ್ದಾರೆ. ಎನ್‌.ಚಂದ್ರಬಾಬು ನಾಯ್ಡು (N Chandra Babu Naidu) ಅವರ ಟಿಡಿಪಿಯು ಆಂಧ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಇದರ ಬೆನ್ನಲ್ಲೇ, “ಜಗನ್‌ ಮೋಹನ್‌ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದ 500 ಕೋಟಿ ರೂ. ವೆಚ್ಚದಲ್ಲಿ ವಿಶಾಖಪಟ್ಟಣಂನಲ್ಲಿ ಅರಮನೆಯಂತಹ ಐಷಾರಾಮಿ ಬಂಗಲೆ ಕಟ್ಟಿಸಿಕೊಂಡಿದ್ದಾರೆ” ಎಂಬುದಾಗಿ ಟಿಡಿಪಿ ಗಂಭೀರ ಆರೋಪ ಮಾಡಿದೆ.

ವಿಶಾಖಪಟ್ಟಣಂನಲ್ಲಿರುವ ಋಷಿಕೊಂಡ ಬೆಟ್ಟದಲ್ಲಿ ನಿರ್ಮಿಸಲಾಗಿರುವ ಟಿಡಿಪಿ ಶಾಸಕ ಗಂಟಾ ಶ್ರೀನಿವಾಸ್‌ ರಾವ್‌ ನೇತೃತ್ವದ ಎನ್‌ಡಿಎ ನಿಯೋಗವು ಭೇಟಿ ನೀಡಿದ್ದು, ಇದಾದ ಬಳಿಕ ಟಿಡಿಪಿಯು ಗಂಭೀರ ಆರೋಪ ಮಾಡಿದೆ. “ಜಗನ್‌ ಮೋಹನ್‌ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ 500 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಬಂಗಲೆಯನ್ನು ಕಟ್ಟಿಸಿಕೊಂಡಿದ್ದಾರೆ. ಇನ್ನೂ 10 ವರ್ಷ ಆಡಳಿತದಲ್ಲಿರುತ್ತೇನೆ ಎಂದು ಭಾವಿಸಿ, ವೈಯಕ್ತಿಕ ಕಾರಣಗಳಿಗಾಗಿ ಇದನ್ನು ಬಳಸುವುದು ಅವರ ಉದ್ದೇಶವಾಗಿತ್ತು” ಎಂದು ಟಿಡಿಪಿ ಆರೋಪಿಸಿದೆ.

ವಿಶಾಖಪಟ್ಟಣಂ ಅಥವಾ ವೈಜಾಗ್‌ಅನ್ನೇ ಇದಕ್ಕೂ ಮೊದಲು ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಲಾಗಿತ್ತು. ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಅವರು ಇದಕ್ಕೂ ಮೊದಲು ಮೂರು ನಗರಗಳನ್ನು ರಾಜಧಾನಿ ಎಂಬುದಾಗಿ ಘೋಷಿಸಲಾಗಿತ್ತು. ವಿಶಾಖಪಟ್ಟಣಂಅನ್ನು ಕೂಡ ರಾಜಧಾನಿ ಎಂಬುದಾಗಿ ಘೋಷಿಸಲಾಗಿತ್ತು. ಹಾಗಾಗಿ, ಇಲ್ಲಿಯೇ ಐಷಾರಾಮಿ ಮನೆಯನ್ನು ಕಟ್ಟಿಸಿದ್ದಾರೆ. ಪತ್ನಿಯ ಆಸೆಯಂತೆಯೇ ಜಗನ್‌ ಮೋಹನ್‌ ರೆಡ್ಡಿ ಅವರು ಐಷಾರಾಮಿ ಬಂಗಲೆ ಕಟ್ಟಿಸಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.

ಋಷಿಕೊಂಡ ಹಿಲ್ಸ್‌ ಪ್ರವಾಸಿ ತಾಣವಾಗಿತ್ತು. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, 9.88 ಎಕರೆ ಜಾಗದಲ್ಲಿ ಜಗನ್‌ ಮೋಹನ್‌ ರೆಡ್ಡಿ ಅವರು ಬಂಗಲೆ ನಿರ್ಮಿಸಿದ್ದಾರೆ. ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಬಾತ್‌ ಟಬ್‌ ನಿರ್ಮಿಸಿದ್ದಾರೆ. ಇಂತಹ ಹತ್ತಾರು ಐಷಾರಾಮಿ ಕೋಣೆಗಳು, ಸೌಕರ್ಯಗಳು ಬಂಗಲೆಯಲ್ಲಿವೆ. ಇದನ್ನೇ ಪಾರ್ಟಿ ಕಚೇರಿ ಮಾಡುವುದು ಜಗನ್‌ ಮೋಹನ್‌ ರೆಡ್ಡಿ ಅವರ ಉದ್ದೇಶವಾಗಿತ್ತು ಎಂದು ಆರೋಪಿಸಲಾಗಿದೆ. ಆಂಧ್ರ ಪ್ರದೇಶ ವಿಧಾನ ಸಭೆಯ 175 ಸೀಟುಗಳ ಪೈಕಿ ಎನ್‌ಡಿಎ 164 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಪೈಕಿ ಟಿಡಿಪಿ 135, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 8 ಕಡೆ ಗೆದ್ದಿದೆ. ವೈಎಸ್‌ಆರ್‌ಸಿಪಿಯು ಕೇವಲ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ಅವರಿಗೆ ಮುಖಭಂಗ ತಂದಿದೆ.

ಇದನ್ನೂ ಓದಿ: Jagan Reddy : ಚುನಾವಣಾ ರ್ಯಾಲಿಯಲ್ಲಿ ಆಂಧ್ರ ಸಿಎಂ ಜಗನ್​​ ತಲೆಗೆ ಕಲ್ಲೆಸೆತ

Continue Reading

ದೇಶ

IPS Officer: ಕ್ಯಾನ್ಸರ್‌ನಿಂದ ಪತ್ನಿ ಸಾವಿನ ಸುದ್ದಿ ತಿಳಿದ ಕೆಲವೇ ನಿಮಿಷದಲ್ಲಿ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ!

IPS Officer: ಹಿರಿಯ ಐಪಿಎಸ್‌ ಅಧಿಕಾರಿಯಾಗಿದ್ದ, ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶೀಲಾದಿತ್ಯ ಚೇಟಿಯಾ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿಯು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

IPS Officer
Koo

ದಿಸ್ಪುರ: ಮನುಷ್ಯ ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ಎಷ್ಟೇ ಖಡಕ್‌ ಆಗಿರಲಿ, ಧೈರ್ಯವಂತನಾಗಿರಲಿ, ತನ್ನವರನ್ನು ಕಳೆದುಕೊಂಡಾಗ, ತಾನು ಪ್ರೀತಿಸುತ್ತಿದ್ದವರು ಕಣ್ಣೆದುರೇ ನಿಧನರಾದಾಗ ಅಧೀರನಾಗುತ್ತಾನೆ. ಇನ್ನೇಕೆ ಬದುಕಬೇಕು ಎಂದು ಹತಾಶನಾಗುತ್ತಾನೆ. ಇದೇ ಆತನನ್ನು ಆತ್ಮಹತ್ಯೆಗೆ ದಾರಿಮಾಡಿಕೊಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಅಸ್ಸಾಂನಲ್ಲಿ (Assam) ಐಪಿಎಸ್‌ ಅಧಿಕಾರಿಯೊಬ್ಬರು (IPS Officer) ಪತ್ನಿ ಕ್ಯಾನ್ಸರ್‌ನಿಂದ ನಿಧನರಾದ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.

ಹಿರಿಯ ಐಪಿಎಸ್‌ ಅಧಿಕಾರಿಯಾಗಿದ್ದ, ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶೀಲಾದಿತ್ಯ ಚೇಟಿಯಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತ್ನಿ ಅಗೋಮೊನಿ ಬರ್ಬರುವಾ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಗುವಾಹಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಜೂನ್‌ 18) ಆಸ್ಪತ್ರೆಯಲ್ಲಿಯೇ ನಿಧನರಾದರು. ಶೀಲಾದಿತ್ಯ ಚೇಟಿಯಾ ಅವರು ಆಸ್ಪತ್ರೆಗೆ ತೆರಳುವ ಮೊದಲೇ ಅವರ ಪತ್ನಿ ನಿಧನರಾಗಿದ್ದರು ಎಂದು ತಿಳಿದುಬಂದಿದೆ.

ಅಗೋಮೊನಿ ಬರ್ಬರುವಾ ಅವರು ಅಗಲಿದ್ದಾರೆ ಎಂಬ ಸುದ್ದಿಯು ಶೀಲಾದಿತ್ಯ ಚೇಟಿಯಾ ಅವರಿಗೆ ಬರಸಿಡಿಲು ಬಡಿದಂತೆ ಭಾಸವಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಅವರು ತಮ್ಮ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಡಿಐಜಿ ರ‍್ಯಾಂಕ್‌ ಆಫೀಸರ್‌ ಆಗಿದ್ದ ಶೀಲಾದಿತ್ಯ ಚೇಟಿಯಾ ಅವರು ಪತ್ನಿಯ ಅನಾರೋಗ್ಯದಿಂದಾಗಿ ಕಳೆದ ನಾಲ್ಕು ತಿಂಗಳಿಂದ ಸುದೀರ್ಘ ರಜೆಯಲ್ಲಿದ್ದರು ಎಂದು ತಿಳಿದುಬಂದಿದೆ.

‌”2009ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಶೀಲಾದಿತ್ಯ ಚೇಟಿಯಾ ಅವರು ನಿಧನರಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ. ಶೀಲಾದಿತ್ಯ ಚೇಟಿಯಾ ಪತ್ನಿ ನಿಧನರಾದ ಕೆಲವೇ ನಿಮಿಷಗಳಲ್ಲಿ ಅಧಿಕಾರಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅಸ್ಸಾಂ ಪೊಲೀಸ್‌ ಇಲಾಖೆಗೆ ಶಾಕಿಂಗ್‌ ವಿಚಾರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ” ಎಂದು ಅಸ್ಸಾಂ ಪೊಲೀಸ್‌ ಮಹಾನಿರ್ದೇಶಕ ಜಿ.ಪಿ. ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Self Harming: ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಇನ್ಫೋಸಿಸ್‌ ಉದ್ಯೋಗಿ ಆತ್ಮಹತ್ಯೆ; ರೈಲಿಗೆ ತಲೆಕೊಟ್ಟ ಫ್ಲಿಪ್‌ಕಾರ್ಟ್‌ ಉದ್ಯೋಗಿ

Continue Reading

ದೇಶ

Union Budget 2024: ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಏರಿಕೆ? ಇಲ್ಲಿದೆ ಮಹತ್ವದ ಅಪ್‌ಡೇಟ್

Union Budget 2024: ಜುಲೈ 15ರಿಂದ 22ರ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಬಡವರು, ಮಧ್ಯಮ ವರ್ಗದವರ ನಿರೀಕ್ಷೆಗಳು ಹೆಚ್ಚಾಗಿವೆ. ಅದರಲ್ಲೂ, ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Union Budget 2024
Koo

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಬಂದಿದ್ದು, ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹಾಗಾಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ ಮಂಡಿಸಲು (Union Budget 2024) ಸಿದ್ಧತೆ ನಡೆಸಿದ್ದಾರೆ. ಇನ್ನು, ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಆದಾಯ ತೆರಿಗೆ ಮಿತಿಯನ್ನು 3 ಲಕ್ಷ ರೂಪಾಯಿಯಿಂದ (ಹೊಸ ತೆರಿಗೆ ಪದ್ಧತಿ) 5 ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ದೇಶದಲ್ಲಿ ಈಗ ಹಳೆಯ ತೆರಿಗೆ ಪದ್ಧತಿ ಹಾಗೂ ಹೊಸ ತೆರಿಗೆ ಪದ್ಧತಿ ಚಾಲ್ತಿಯಲ್ಲಿವೆ. ಆದಾಯ ತೆರಿಗೆ ಪಾವತಿದಾರರು ಯಾವ ತೆರಿಗೆ ಪದ್ಧತಿಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ 2.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಇದೆ. ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡವರಿಗೆ 3 ಲಕ್ಷ ರೂ.ವರೆಗೆ ವಿನಾಯಿತಿ ಇದೆ. ಈಗ ಇದನ್ನು 5 ಲಕ್ಷ ರೂ.ಗೆ ಏರಿಕೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಆದರೆ, ಗರಿಷ್ಠ ತೆರಿಗೆ ಪ್ರಮಾಣವನ್ನು ಶೇ.30ರಿಂದ ಶೇ.25ಕ್ಕೆ ಇಳಿಸಬೇಕು ಎಂಬ ಒತ್ತಾಯವಿದ್ದು, ಇದನ್ನು ಈಡೇರಿಸುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಜುಲೈ 15ರಿಂದ 22ರ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ ಎಂದು ಹೇಳಲಾಗತ್ತಿದೆ.

ಹೊಸ ತೆರಿಗೆಯ ಸ್ಲ್ಯಾ ಬ್‌ ಹೀಗಿದೆ

ಆದಾಯವಿಧಿಸುವ ತೆರಿಗೆ
0-3 ಲಕ್ಷ ರೂ.ತೆರಿಗೆ ಇರಲ್ಲ
3-6 ಲಕ್ಷ ರೂ.5%
6-9 ಲಕ್ಷ ರೂ.10%
9-12 ಲಕ್ಷ ರೂ.15%
12-15 ಲಕ್ಷ ರೂ.20%
15 ಲಕ್ಷ ರೂ.ಗಿಂತ ಹೆಚ್ಚು30%

ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್‌ ಮಂಡಿಸಿದ್ದರು. ಇದು ಮಧ್ಯಂತರ ಬಜೆಟ್‌ ಆದ ಕಾರಣ ಮಹತ್ವದ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ನೂತನ ಸರ್ಕಾರ ರಚನೆಯಾಗಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೊಡುಗೆ, ತೆರಿಗೆ ಹೊರೆ ಇಳಿಸುವುದು ಸೇರಿ ಹಲವು ಅಂಶಗಳು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದು ತಿಳಿದುಬಂದಿದೆ.

Union Budget 2024

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಜುಲೈನಲ್ಲಿ ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ಇದನ್ನೂ ಓದಿ: Kisan Samman Nidhi: 9 ಕೋಟಿ ರೈತರ ಖಾತೆಗಳಿಗೆ 20 ಸಾವಿರ ಕೋಟಿ ರೂ. ಜಮೆ ಮಾಡಿದ ಮೋದಿ; ಹೀಗೆ ಚೆಕ್‌ ಮಾಡಿ

Continue Reading

ದೇಶ

Bakrid: ಬಕ್ರೀದ್ ವೇಳೆ ಜೈನರು ಮುಸ್ಲಿಮರ ವೇಷ ಧರಿಸಿ 124 ಮೇಕೆ ಖರೀದಿಸಿದರು! ಉದ್ದೇಶ ಹೃದಯಸ್ಪರ್ಶಿ

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ದೆಹಲಿಯಲ್ಲಿ ಜೈನ ಸಮುದಾಯದ ಸುಮಾರು 25 ಸದಸ್ಯರು ಮುಸ್ಲಿಮರಂತೆ ವೇಷಭೂಷಣ ಧರಿಸಿ ಸುಮಾರು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ 124 ಮೇಕೆಗಳನ್ನು ಖರೀದಿ (Saved Goats) ಮಾಡಿ ರಕ್ಷಿಸಿದ್ದಾರೆ. ಇದರಿಂದ ಚಾಂದಿನಿ ಚೌಕ್‌ನ ಜೈನ ಮಂದಿರದ ಅಂಗಳ ಈಗ ನೂರಾರು ಮೇಕೆಗಳಿಂದ ತುಂಬುಕೊಂಡಿದೆ.

VISTARANEWS.COM


on

By

Saved Goats
Koo

ನವದೆಹಲಿ: ಜೈನ ಸಮುದಾಯದ (jain  community) ಸುಮಾರು 25 ಸದಸ್ಯರು ದೆಹಲಿಯಲ್ಲಿ (delhi) ಬಕ್ರೀದ್ (Bakrid) ಸಂದರ್ಭದಲ್ಲಿ ಮುಸ್ಲಿಮರಂತೆ (muslim) ವೇಷಭೂಷಣ ಧರಿಸಿ 124 ಮೇಕೆಗಳನ್ನು (Saved Goats) ಖರೀದಿಸಿದರು. ಈ ಮೂಲಕ ಆ ಮೇಕೆಗಳ ಜೀವ ರಕ್ಷಿಸಿದರು.

ಸಿಎ ವಿವೇಕ್ ಜೈನ್ ಎಂಬುವರ ನೇತೃತ್ವದಲ್ಲಿ ಸಂಗ್ರಹಿಸಿದ ಸುಮಾರು 15 ಲಕ್ಷ ರೂ. ಅನ್ನು ಖರ್ಚು ಮಾಡಿ ಮೇಕೆಗಳನ್ನು ಖರೀದಿಸಿ ಅವುಗಳನ್ನು ದೇವಾಲಯದಲ್ಲಿ ಸಾಕುತ್ತಿದ್ದಾರೆ. ಅಂಗಡಿಯವರೊಂದಿಗೆ ಚೌಕಾಸಿ ಮಾಡಿ ತಲಾ 10,000 ರೂ. ಗಳನ್ನು ನೀಡಿ ಮೇಕೆಗಳನ್ನು ಅವರು ಖರೀದಿ ಮಾಡಿದರು.

ದೆಹಲಿಯ ಜಾಮಾ ಮಸೀದಿಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಚಾಂದಿನಿ ಚೌಕ್‌ನ ದೇವಸ್ಥಾನದ ಅಂಗಳದಲ್ಲಿ ನೂರಾರು ಮೇಕೆಗಳು ಈಗ ಸಿಎ ವಿವೇಕ್ ಜೈನ್ ಅವರನ್ನು ಸುತ್ತುವರೆದಿವೆ. ಅವುಗಳನ್ನು ಶಾಂತಗೊಳಿಸಲು ಅವರು ಸ್ಪೀಕರ್‌ನಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುವ ಪ್ರಬಲ ಜೈನ ಮಂತ್ರವನ್ನು ಉಚ್ಚರಿಸುತ್ತಿದ್ದರು. ಈ ಮೇಕೆಗಳನ್ನು ನೋಡಿದರೆ ಪಾಪ ಅನಿಸುತ್ತಿತ್ತು. ಅವುಗಳನ್ನು ವಧೆಗಾಗಿ ಕೂಡಿ ಹಾಕಲಾಗಿತ್ತು. ನಾವು ಅವರಿಗೆ ಹೊಸ ಜೀವನವನ್ನು ನೀಡಿದ್ದೇವೆ. ಈ ಯಾವ ಸಂಗತಿಗಳೂ ಪಾಪ ಆ ಕುರಿಗಳಿಗೆ ತಿಳಿದಿರುವುದಿಲ್ಲ. ಅವುಗಳ ಜೀವ ಉಳಿಸಿದ ತೃಪ್ತಿ ನಮಗಿದೆ ಎನ್ನುತ್ತಾರೆ ವಿವೇಕ್.

ಈದ್‌ಗೆ ಮುನ್ನ ಸಿದ್ದಗೊಳ್ಳುವ ಮೇಕೆ ಮಾರುಕಟ್ಟೆಗಳಂತೆಯೇ ಈಗ ಧರಂಪುರ ಪ್ರದೇಶದ ನಯಾ ಜೈನ ಮಂದಿರ ಕಾಣುತ್ತಿದೆ. ಚಾಂದಿನಿ ಚೌಕ್‌ನಲ್ಲಿ ವಾಸಿಸುವ ಜೈನರಿಗೆ ಈಗ ಮೇಕೆ ದರ್ಶನವಾಗುತ್ತಿದೆ. ಮೇಕೆಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಕೆಲವರು ಅವುಗಳ ಮೇವಿಗಾಗಿ ಹಣವನ್ನು ದಾನ ಮಾಡಿದರು, ಇನ್ನು ಕೆಲವರು ಹೆಮ್ಮೆಯಿಂದ ಮುದ್ದಿಸಿದರು, ಮತ್ತು ಕೆಲವರು ತಮ್ಮ ಧರ್ಮದ ಸದ್ಗುಣಗಳ ಬಗ್ಗೆ ಹೆಮ್ಮೆಪಟ್ಟರು.

ಪ್ರತಿ ವರ್ಷ ಮುಸ್ಲಿಂ ಹಬ್ಬಗಳ ಸಂದರ್ಭದಲ್ಲಿ ಭುಗಿಲೇಳುವ ಮೇಕೆ ಬಲಿಯ ಕುರಿತಾದ ಚರ್ಚೆಯ ಮಧ್ಯೆ ದೆಹಲಿಯ ಜೈನ ಸಮುದಾಯವು ಈಗ ಎಲ್ಲರ ಗಮನ ಸೆಳೆದಿದೆ ಮಾತ್ರವಲ್ಲ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿದೆ. ಎಕ್ಸ್ ನಲ್ಲಿ ಈ ಕುರಿತ ಪೋಸ್ಟ್ 21,000 ಕ್ಕೂ ಹೆಚ್ಚು ಮಂದಿ ಹಂಚಿಕೊಂಡಿದ್ದು, “ಜೈನ್” ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಅನ್ನು ಉಂಟು ಮಾಡಿದೆ. ದೇಶದಾದ್ಯಂತ ಇರುವ ನಮ್ಮ ಸಮುದಾಯದವರ ಕೊಡುಗೆ ಇದನ್ನು ಸಾಧ್ಯವಾಗಿಸಿದೆ. ನಾವು ಅದನ್ನು ಸಮಾಜ ಕಲ್ಯಾಣ ಎಂದು ಕರೆಯುತ್ತೇವೆ. ನಮ್ಮ ಧರ್ಮವು ನಮಗೆ ಕಲಿಸುವುದು ಇದನ್ನೇ. ಚಾಂದಿನಿ ಚೌಕ್‌ನ ಜೈನ ಸಮುದಾಯಕ್ಕೆ ಇದೊಂದು ‘ಐತಿಹಾಸಿಕ ಕ್ಷಣ’. ಇದು ನಮ್ಮ ಮೊದಲ ಹೆಜ್ಜೆ. ಇದನ್ನು ಮುಂದುವರಿಸುವುದಾಗಿ ವಿವೇಕ್ ಹೇಳಿದ್ದಾರೆ.


ಯಾವಾಗ ಈ ಯೋಚನೆ ಹುಟ್ಟಿಕೊಂಡಿತು?

ಗುರು ಸಂಜೀವ್ ಅವರು ಕರೆ ಮಾಡಿದ್ದಾಗ ಈದ್ ಹಬ್ಬದಂದು ಮೇಕೆಗಳನ್ನು ಕಡಿಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಏನಾದರೂ ಮಾಡಬೇಕೆಂದು ಬಯಸಿದ್ದರು. ಎಲ್ಲಾ ಮೇಕೆಗಳನ್ನು ಉಳಿಸಲು ಸಾಧ್ಯವಾಗದಿದ್ದರೂ ನಾವು ಎಷ್ಟು ಸಾಧ್ಯವೋ ಅಷ್ಟು ರಕ್ಷಿಸಬೇಕು ಎಂದು ನಿರ್ಧರಿಸಲಾಯಿತು ಎಂದು ಚಿರಾಗ್ ತಿಳಿಸಿದರು.

ಹೇಗಿತ್ತು ಕಾರ್ಯಾಚರಣೆ?

ಶೀಘ್ರದಲ್ಲೇ ಒಂದು ಯೋಜನೆ ಹಾಕಿಕೊಂಡು ಜೂನ್ 15ರ ಸಂಜೆ ಜೈನ ಸಮುದಾಯದ 25 ಜನರ ತಂಡವನ್ನು ರಚಿಸಲಾಯಿತು. ಹಣದ ಕೊಡುಗೆಯನ್ನು ಕೋರಿ ವಾಟ್ಸಾಪ್ ಸಂದೇಶವನ್ನು ಪ್ರಸಾರ ಮಾಡಲಾಗಿತ್ತು. ಅನಂತರ ತಂಡವು ಮೇಕೆಗಳನ್ನು ಮಾರಾಟ ಮಾಡುವ ಪ್ರದೇಶಗಳ ಸಮೀಕ್ಷೆ ನಡೆಸಿತು.

ನಾವು ಮುಸ್ಲಿಂ ಸಮುದಾಯದ ಸದಸ್ಯರಂತೆ ವೇಷಭೂಷಣ ತೊಟ್ಟು ಮೇಕೆಗಳನ್ನು ಮಾರಾಟ ಮಾಡುವ ಬೆಲೆಯ ಬಗ್ಗೆ ಕೇಳಿ ತಿಳಿದುಕೊಂಡರು. ಜೂನ್ 16ರಂದು ತಂಡವು ರಹಸ್ಯವಾಗಿ ಹಳೆ ದೆಹಲಿಯ ಜಾಮಾ ಮಸೀದಿ, ಮೀನಾ ಬಜಾರ್, ಮತೀಯ ಮಹಲ್ ಮತ್ತು ಚಿಟ್ಲಿ ಕಬರ್‌ಗಳಂತಹ ವಿವಿಧ ಮೇಕೆ ಮಾರುಕಟ್ಟೆಗಳಿಗೆ ಹೋಗಿ ಮೇಕೆಗಳನ್ನು ಖರೀದಿಸುವಾಗ ಯಾವುದೇ ತೊಂದರೆಯಾಗದಂತೆ ಧಿರಿಸು ಧರಿಸಿ ಇತರರೊಂದಿಗೆ ಬೆರೆಯಲು ಅನುವು ಮಾಡಿಕೊಡುವ ರೀತಿಯಲ್ಲಿ ಮಾತನಾಡಲು ಸೂಚಿಸಲಾಯಿತು.

ನಾವು ಯಾರೂ ಭಯಪಡಲಿಲ್ಲ. ನಾವು ಯಾರ ಭಾವನೆಗಳಿಗೂ ಧಕ್ಕೆ ತರಲು ಬಯಸುವುದಿಲ್ಲ. ನಾವು ಮುಸ್ಲಿಮೇತರರು ಎಂದು ಅವರಿಗೆ ತಿಳಿದಿದ್ದರೆ ಅವರು ಮೇಕೆಗಳನ್ನು ಹೆಚ್ಚಿನ ಬೆಲೆಗೆ ನಮಗೆ ಮಾರಾಟ ಮಾಡುತ್ತಿದ್ದರು ಮತ್ತು ಸಾಧ್ಯವಾದಷ್ಟು ಹೆಚ್ಚು ಮೇಕೆಗಳನ್ನು ರಕ್ಷಿಸಲು ನಮ್ಮಿಂದ ಸಾಧ್ಯವಾಗದೇ ಇರುತ್ತಿತ್ತು. ಹೀಗಾಗಿ ನಾವು ಅವರ ವೇಷಭೂಷಣ ಧರಿಸಿ ಹೋಗಿದ್ದೆವು ಎನ್ನುತ್ತಾರೆ ವಿವೇಕ್.

ಖರೀದಿ ಪ್ರಕ್ರಿಯೆಯು ಅನೇಕ ಸುತ್ತಿನ ಕಠಿಣ ಚೌಕಾಶಿಗಳನ್ನು ಒಳಗೊಂಡಿತ್ತು. ಆದರೆ ಅಂತಿಮವಾಗಿ ಆಡುಗಳನ್ನು ಪ್ರತಿಯೊಂದಕ್ಕೆ ಸರಾಸರಿ 10,000 ರೂ. ಗೆ ಖರೀದಿಸಲಾಯಿತು. ಆದರೆ ಹಳೆ ದೆಹಲಿಯ ಮಂಡಿಗಳಲ್ಲಿ ಈ ಮೇಕೆಗಳನ್ನು ಮಾರಾಟ ಮಾಡುತ್ತಿದ್ದ ರೀತಿ ವಿವೇಕ್ ಅವರನ್ನು ದಿಗ್ಭ್ರಮೆಗೊಳಿಸಿತು.

ಬೀದಿ ಬದಿಯ ವ್ಯಾಪಾರಿಯಿಂದ ಬಟ್ಟೆಗಳನ್ನು ಖರೀದಿಸುತ್ತಿರುವಂತೆ ಭಾಸವಾಯಿತು. ಮೇಕೆಗಳನ್ನು ಒಟ್ಟಿಗೆ ಕೂಡಿಹಾಕಲಾಯಿತು ಮತ್ತು ಕಳಪೆಯಾಗಿ ನಿರ್ವಹಿಸಲಾಯಿತು. ಜೀವಂತವಾಗಿರುವ ಈ ಪ್ರಾಣಿಗಳ ಬಗ್ಗೆ ಯಾವುದೇ ಮಾನವೀಯತೆ ಅಲ್ಲಿ ಇರಲಿಲ್ಲ. ಅಂತಿಮವಾಗಿ 124 ಮೇಕೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅದೊಂದು ಸಂಭ್ರಮದ ಕ್ಷಣವಾಯಿತು ಎಂದರು ವಿವೇಕ್.


ಹಣ ಸಂಗ್ರಹ

ಇದಕ್ಕಾಗಿ ಗುಜರಾತ್, ಹೈದರಾಬಾದ್, ಕೇರಳ, ಪಂಜಾಬ್ ಮತ್ತು ಮಹಾರಾಷ್ಟ್ರದ ಜೈನ ಸಮುದಾಯದ ಸದಸ್ಯರಿಂದ 15 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ. ಉಳಿದ ಹಣವನ್ನು ಅವುಗಳ ಮೇವನ್ನು ಖರೀದಿಸಲು ಬಳಸಿರುವುದಾಗಿ ವಿವೇಕ್ ತಿಳಿಸಿದರು.

ಮೇಕೆಗಳ ಆಶ್ರಯದಾತ

ಮೊದಲಿಗೆ ನಾಲ್ಕು ಮೇಕೆಗಳನ್ನಾದರೂ ಖರೀದಿ ಮಾಡುವುದು ಸಾಧ್ಯವೋ ಎಂಬ ಅನುಮಾನವಿತ್ತು. ಆದರೆ ನಮ್ಮ ಮನವಿಗೆ ಸ್ಪಂದಿಸಿ ಅನೇಕರು ದೇಣಿಗೆಗಳನ್ನು ನೀಡಿದ್ದು, ಇದರಿಂದ 15 ಲಕ್ಷ ರೂ. ಸಂಗ್ರಹವಾಯಿತು. ಬಳಿಕ 124 ರಕ್ಷಕ ಆಡುಗಳನ್ನು ಎಲ್ಲಿ ಇಡುವುದು ಎನ್ನುವ ಪ್ರಶ್ನೆ ಕಾಡಿತ್ತು. ಬಳಿಕ ಬಾಗ್‌ಪತ್‌ನ ಅಮಿನಗರ ಸರಾಯ್‌ನಲ್ಲಿರುವ ಮನೋಜ್ ಜೈನ್ ಅವರು ಮೇಕೆಗಳಿಗೆ ನಿರ್ಮಿಸಿರುವ ವಸತಿ ಶಾಲೆಯಲ್ಲಿ ಅವುಗಳಿಗೆ ಆಶ್ರಯ ನೀಡಿದರು. ಅವರ ಆಶ್ರಯದಲ್ಲಿ ಪ್ರಸ್ತುತ 615 ಆಡುಗಳಿವೆ. ಇವೆಲ್ಲವನ್ನೂ ಭಾರತದಾದ್ಯಂತ ಈದ್ ಆಚರಣೆ ವೇಳೆ ರಕ್ಷಿಸಿರುವುದು.
ರಕ್ಷಿಸಲ್ಪಟ್ಟ ಎಲ್ಲವೂ ಗಂಡು ಆಡುಗಳು. ಬಕ್ರೀದ್ ಹಬ್ಬದಲ್ಲಿ ಗಂಡು ಮೇಕೆಗಳನ್ನು ಕಡಿಯಲಾಗುತ್ತದೆ.

ಇದನ್ನೂ ಓದಿ: Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

ಕೊನೆಯವರೆಗೂ ಈ ಮೇಕೆಗಳ ಆರೈಕೆಯ ಜವಾಬ್ದಾರಿಯನ್ನು ನಮ್ಮ ಆಶ್ರಯ ವಹಿಸಿಕೊಂಡಿದೆ. ಇದಕ್ಕಾಗಿ ಭಾರತದಾದ್ಯಂತ ಇರುವ ಜೈನ ಸಮುದಾಯದ ಸದಸ್ಯರು ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಮನೋಜ್ ಜೈನ್ ತಿಳಿಸಿದ್ದಾರೆ. ಮೇಕೆಗಳನ್ನು ಸಾಕಿರುವ ಜೈನ ದೇವಾಲಯದ ಬಳಿ ಬಂದ ಇಮ್ರಾನ್ ಮತ್ತು ಮುಷ್ತಾಕ್ ಎಂಬ ಹಿರಿಯ ಮುಸ್ಲಿಮರು, ಇದು ಮೇಕೆಗಳನ್ನು ಸಾಕಿರುವ ದೇವಾಲಯವಾಗಿದೆ. ಇವರು ಮೇಕೆಗಳನ್ನು ತೆಗೆದುಕೊಂಡು ಹೋಗಿರುವುದು ಗೊತ್ತು. ನಮ್ಮ ಧರ್ಮವು ಬಕ್ರೀದ್‌ನಂದು ಆಡುಗಳನ್ನು ಬಲಿಕೊಡಬೇಕೆಂದು ಕೇಳುತ್ತದೆ. ಅದನ್ನು ನಾವು ದೇವರ ಮೇಲಿನ ಭಕ್ತಿಯಿಂದ ಮಾಡುತ್ತೇವೆ. ಆದರೆ ನಾವು ಅದನ್ನು ಒತ್ತಾಯಿಸುವುದಿಲ್ಲ ಅಥವಾ ಪ್ರಚಾರ ಮಾಡುವುದಿಲ್ಲ ಎಂದು ಅವರು ತಿಳಿಸಿದರು.

ಮುಷ್ತಾಕ್ ಅವರು ಮಾತನಾಡಿ, ಇದು ಅವರ ಧರ್ಮ. ಪ್ರಾಣಿಗಳನ್ನು ಉಳಿಸುವುದು ಅದರ ಭಾಗವಾಗಿದ್ದರೆ ಪರವಾಗಿಲ್ಲ. ಪ್ರತಿಯೊಬ್ಬರೂ ಶಾಂತಿಯನ್ನು ತರುವ ಅಭ್ಯಾಸ ಮಾಡಲಿ ಎಂದು ಹೇಳಿದರು.

Continue Reading
Advertisement
Drowned in Water boy who went swimming drowned and died
ಬೀದರ್‌14 mins ago

Drowned in Water: ಡ್ಯಾಮ್ ನೀರಿನಲ್ಲಿ ಈಜಲು ಹೋದ ಬಾಲಕ ಮುಳುಗಿ ಸಾವು!

Jagan Mohan Reddy
ದೇಶ16 mins ago

Jagan Mohan Reddy: ಸರ್ಕಾರದ 500 ಕೋಟಿ ರೂ.ನಲ್ಲಿ ಜಗನ್‌ ಅರಮನೆ ನಿರ್ಮಾಣ? ಟಿಡಿಪಿ ಸ್ಫೋಟಕ ಆರೋಪ

PM Surya Ghar Yojana Comprehensive Review Meeting by Union Minister Pralhad Joshi
ಕರ್ನಾಟಕ16 mins ago

Pralhad Joshi: ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರದ ಪ್ರತೀಕ ಸೂರ್ಯ ಘರ್: ಜೋಶಿ

Sonakshi Sinha
ಬಾಲಿವುಡ್1 hour ago

Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Construction of International Cricket Stadium at Shira MLA T B Jayachandra KSCA team inspection
ಕರ್ನಾಟಕ2 hours ago

Shira News: ಶಿರಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ; ಶಾಸಕ ಜಯಚಂದ್ರ ಪರಿಶೀಲನೆ

Malayali actress Honey Rose starring Rachel movie Teaser release
ಕರ್ನಾಟಕ2 hours ago

Rachel Movie: ಮಲಯಾಳಿ ನಟಿ ಹನಿ ರೋಸ್ ನಾಯಕಿಯಾಗಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್‌

IPS Officer
ದೇಶ2 hours ago

IPS Officer: ಕ್ಯಾನ್ಸರ್‌ನಿಂದ ಪತ್ನಿ ಸಾವಿನ ಸುದ್ದಿ ತಿಳಿದ ಕೆಲವೇ ನಿಮಿಷದಲ್ಲಿ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ!

Sambhavami Yuge Yuge movie release on June 21
ಕರ್ನಾಟಕ2 hours ago

Kannada New Movie: ಜೂ.21ಕ್ಕೆ ‘ಸಂಭವಾಮಿ ಯುಗೇ ಯುಗೇ’ ಚಿತ್ರ ರಿಲೀಸ್‌

Kodi Mutt Swamiji
ಪ್ರಮುಖ ಸುದ್ದಿ2 hours ago

Kodi Mutt Swamiji: ದೇಶದಲ್ಲಿ ಶುಭಕ್ಕಿಂತ ಅಶುಭಗಳೇ ಹೆಚ್ಚು, ರಾಜ್ಯದಲ್ಲಿ ಅತಿವೃಷ್ಟಿ: ಕೋಡಿಮಠ ಶ್ರೀ ಭವಿಷ್ಯ!

Vijayapura News
ಕರ್ನಾಟಕ3 hours ago

Vijayapura News: ಗುಂಡಿಗೆ ಬಿದ್ದು ಮೂವರ ಸಾವು; ಬಾಲಕಿಯನ್ನು ರಕ್ಷಿಸಲು ಹೋದವರೂ ನೀರುಪಾಲು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌