weekly horoscope ; check astrological predictions for all zodiac signs for april fourth week Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಏಪ್ರಿಲ್‌ 23 ರಿಂದ ಏಪ್ರಿಲ್‌ 29 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೇಷ : ಕೃಷಿಕರಿಗೆ ಶನೈಶ್ವರನಿಂದ ಲಾಭ

Weekly Horoscope

ಶನೈಶ್ವರನಿಂದ ದೃಷ್ಟಿ ಘಾತಕ್ಕೆ ಒಳಗಾಗಿರುವ ಗುರು, ಬುಧ, ರಾಹು ಮತ್ತು ಸೂರ್ಯರು ವಾಸ್ತವದಲ್ಲಿ ಅನೇಕ ಸಂಪನ್ನತೆಯನ್ನು ಒದಗಿಸಲು ವಿಫಲರಾಗುತ್ತಾರೆ. ಬೌದ್ಧಿಕ ಬಲದಿಂದ ಗೆಲ್ಲುತ್ತೇನೆ ಎಂಬ ನಿಮ್ಮ ಮನೋ ದಾರ್ಢ್ಯತೆಯನ್ನು ಕುಗ್ಗಿಸುತ್ತಾರೆ. ಅಪಾರವಾದ ನಿಮ್ಮ ವಿದ್ವತ್ತಿಗೆ ಬೆಲೆಯೇ ಇರದಂತೆ ಆಗುತ್ತದೆ. ಕೃಷಿಕರಿಗೆ ಶನೈಶ್ವರ ಲಾಭ ಒದಗಿಸುವ ಅವಕಾಶ ಜಾಸ್ತಿಯಾಗಿದೆ. ಚುನಾವಣಾ ಸ್ಪರ್ಧೆಯಲ್ಲಿ ಹೆಜ್ಜೆ ಇರಿಸಿದವರು ವೈರಿಗಳಿಂದ ಮೋಸ ಹೋಗುವ ಸಾಧ್ಯತೆ ಅಧಿಕ. ಎಚ್ಚರ ಇರಲಿ. ದುರ್ಗಾ ಮಾತೆಯನ್ನು ಸ್ತುತಿಸಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ

ವೃಷಭ: ಅತಿಯಾದ ಆತ್ಮವಿಶ್ವಾಸ ಬೇಡ

Weekly Horoscope

ಗುರುಬಲ ಕಳಕೊಂಡಿದ್ದೀರಿ. ಮಾತುಗಳು ನಿಷ್ಠುರವಾಗುವ ಮೂಲಕ ಅಪಾಯ ಜಾಸ್ತಿ. ಹಿರಿಯರ ಮೂಲಕ ಒಳಿತುಗಳ ಬಗೆಗೆ ನಿರ್ಧರಿಸಿ ಹೆಜ್ಜೆ ಇಡಿ. ನಿಮ್ಮ ಅಪಾರವಾದ ಬುದ್ಧಿ ಶಕ್ತಿಯು ಒಳ್ಳೆ ವಿಚಾರವೇ. ಆದರೆ ಅತಿಯಾದ ಆತ್ಮವಿಶ್ವಾಸ ಬೇಡ. ಬಾಳ ಸಂಗಾತಿಯ ಕಾರಣದಿಂದಾಗಿ ಹಣ ಕಾಸಿನ ವಿಚಾರದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಈ ರೀತಿಯ ಸೂಕ್ಷ್ಮ ವಿಚಾರಗಳ ಬಗೆಗೆ ಜಾಣ್ಮೆಯಿಂದಲೇ ನಿಯಂತ್ರಣ ಸಾಧಿಸಿ. ನಿಮ್ಮನ್ನು ಕೆಲ ಮಟ್ಟಿಗೆ ವಿರೋಧಿಗಳೇ ಒಳಿತಿನ ದಾರಿಗೆ ಅವಕಾಶ ಮಾಡಿಕೊಡಬಹುದು. ಗಣೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ದಕ್ಷಿಣ

ಮಿಥುನ: ಧೂರ್ತರ ಬಗ್ಗೆ ಎಚ್ಚರಿಕೆ ಇರಲಿ

Weekly Horoscope

ಅಯ್ಯೋ ದುಡುಕಿದೆ ಎಂಬ ಪಶ್ಚಾತ್ತಾಪದ ಧ್ವನಿ ಎದ್ದು ಬಾರದಂತೆ ಹೆಜ್ಜೆ ಇಡಿ. ಶನೈಶ್ವರನಿಂದಾಗಿ ಒಳಿತಿನ ಅವಕಾಶಗಳೆಲ್ಲ ಹೇರಳ. ನಿಮ್ಮ ಅನುಭವಗಳ ಒಟ್ಟು ಮೊತ್ತ ಪರದಾಟಗಳನ್ನು ನಿಶ್ಚಿತವಾಗಿ ನಿಗ್ರಹಿಸುವ ಶಕ್ತಿ ತೆಳೆದಿದೆ. ಜ್ಞಾನಿಗಳು, ಬುದ್ಧಿವಂತರು ಆದ ನೀವು ಚಾಟಿ ಮಾತುಗಳನ್ನು ತಂದು ಹೇಳುವ ಧೂರ್ತರ ಬಗ್ಗೆ ಎಚ್ಚರಿಕೆ ಇಟ್ಟುಕೊಳ್ಳಿ. ಕಲಾ ತಾಂತ್ರಿಕತೆ, ಕಟ್ಟಡ ವಿನ್ಯಾಸಕಾರರು, ಎಂಜಿನಿಯರುಗಳಿಗೆ ಒಳಿತಿನ ಸಂಬಂಧವಾದ ವರ್ತಮಾನ ಇದಾಗಿದೆ. ನರಸಿಂಹನನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪೂರ್ವ

ಕಟಕ: ವಿರೋಧಿಗಳ ಕಾಟದ ಬಗ್ಗೆ ಎಚ್ಚರ ಇರಲಿ

Weekly Horoscope

ಆರ್ಥಿಕ ವಿಚಾರಗಳಿಗೆ ಬಾಧೆ ಬರಲು ಸಾಧ್ಯತೆಗಳು ಜಾಸ್ತಿಯಾದ ಕಾಲಘಟ್ಟ ಇದು. ವಿರೋಧಿಗಳು ಕಾಟ ಕೊಡುತ್ತಾರೆ ಎಚ್ಚರ ಇರಲಿ. ಮಂಗಳಕಾರಕಳಾದ ಶ್ರೀ ತ್ರಿಪುರ ಸುಂದರಿಯ ಅನುಗ್ರಹ ದೊರೆತಲ್ಲಿ ಅನೇಕ ರೀತಿಯ ಪ್ರಾಪ್ತಿಗಳಿಗೆ ಅವಕಾಶಗಳೂ ಇವೆ. ಸಹನೆಯಿಂದಲೇ ನಿಮ್ಮ ಪ್ರಯತ್ನ ನಡೆಸಿ. ಧೈರ್ಯವೂ ಇರಲಿ. ಆದರೆ ಧೈರ್ಯದ ವಿಚಾರದಲ್ಲಿ ಅವಸರವಿರದ ಜಾಣ್ಮೆ ಇರಲಿ. ಕೆಂಡಗಳ ಮೇಲೆ ನಿಂತಿದ್ದೀರಿ ಎಂಬುದು ನೆನಪಿರಲಿ. ಆದರೂ ಶ್ರೀ ರಾಮ ರಕ್ಷೆಯಿಂದ ಕಾಲು ಸುಡದಿರಲಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ವಾಯವ್ಯ

ಸಿಂಹ: ಗುರು ಬಲದಿಂದ ಹೆಚ್ಚಿನ ಭಾಗ್ಯಕ್ಕೆ ಅವಕಾಶ

Weekly Horoscope

ನಿಜವಾದ ಶೂರತ್ವಕ್ಕೆ ಪ್ರದರ್ಶನದ ಕಾಲವಾಗಬೇಕು ಸದ್ಯದ ವರ್ತಮಾನ ಎಂಬುದೆಲ್ಲಾ ವಾಸ್ತವವೇ ಸರಿ. ಆಗಮಿಸಿದ ಗುರು ಬಲ ಹೆಚ್ಚಿನ ಭಾಗ್ಯಕ್ಕೆ ಅವಕಾಶ ತೆರೆದಿಡಬೇಕಿತ್ತು. ಆದರೆ ವಿಪರ್ಯಾಸವೋ ಎಂಬಂತೆ ರಾಹು ವಿಷಮಯನಾಗಿದ್ದಾನೆ. ರಾಜಕಾರಣಿಗಳ ದಾರಿಯಲ್ಲಿ ಹಲವು ಎಡರುತೊಡರು ತಂದಿಡಬಲ್ಲ ದುಷ್ಟತನ ರಾಹುವಿನಿಂದ ಆಗುವ ಕಿತಾಪತಿಯಾಗಿದೆ. ಬಲಸಂವರ್ಧನೆಗಾಗಿ ಸರ್ವ ವಿಘ್ನ ಉಪಶಮನಕಾರಕ ಶಕ್ತಿ ಕೇಸರಿ ಸೂತ್ರ ಧರಿಸಿ. ನರಸಿಂಹನನ್ನು ಆರಾಧಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ

ಕನ್ಯಾ: ವಿದೇಶ ಪ್ರವಾಸ, ಉನ್ನತ ವ್ಯಾಸಂಗಕ್ಕೆ ಸೂಕ್ತ ಕಾಲ

Weekly Horoscope

ಗುರುಬಲ ಕಳಕೊಂಡಿದ್ದೀರಿ. ಉಪದ್ರವ ಕೊಡುವ ಕೇತು ಮಾತನ್ನು ವಿಷವಾಗಿಸುತ್ತಾನೆ. ಇರುವ ಹಣಕಾಸುನ್ನು ಕರಗಿಸುತ್ತಾನೆ. ಬಂಧು ಜನರಿಂದ ಸಹಾಯವಿರುತ್ತದೆ. ವಿವೇಕದಿಂದ ವರ್ತಿಸಿ. ನಿಮ್ಮನ್ನು ಆದರಿಸುವ ಜನರನ್ನು ಕಾಪಾಡಿಕೊಳ್ಳಿ. ವಿದೇಶ ಪ್ರವಾಸ, ಉನ್ನತ ವ್ಯಾಸಂಗ, ಸಿನಿಮಾರಂಗದಲ್ಲಿನ ಅನಿರೀಕ್ಷಿತ ಯಶಸ್ಸು, ಮಾಡೆಲಿಂಗ್‌ ಕ್ಷೇತ್ರದಲ್ಲಿಯೂ ಯಶಸ್ಸು ಇತ್ಯಾದಿ ಒಳಿತುಗಳಿಗೆ ದಾರಿ ಗಟ್ಟಿ ಇದೆ. ಬಾಳ ಸಂಗಾತಿಯೊಡನೆ ಎಚ್ಚರದಿಂದಿರಿ. ಹೊಂದಿಕೊಂಡು ಸಾಗಿ, ಗೆಲ್ಲಿ. ಶ್ರೀ ಗುರು ದತ್ತಾತ್ರಯನನ್ನು ಸ್ತುತಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಆಗ್ನೇಯ

ತುಲಾ: ಬಾಳ ಸಂಗಾತಿಯ ಸಲಹೆ ಪಡೆಯಲು ಮರೆಯದಿರಿ!

Weekly Horoscope

ನ್ಯಾಯದ ತಕ್ಕಡಿಯಲ್ಲಿ ನ್ಯಾಯವನ್ನು ಹುಡುಕಿ ಬೆಂಡಾಗುತ್ತಿರುವ ಸಮಯವಿದು. ಆದರೆ ಒದಗಿ ಬಂದಿರುವ ಗುರು ಬಲದಿಂದ ಸಮಾಧಾನಕರವಾದ ವಿಷಯವನ್ನು ನಿರೀಕ್ಷಿಸಲು ಸದ್ಯ ಒಳ್ಳೆಯ ಕಾಲ ಘಟ್ಟವೇ. ಇದರ ಅರ್ಥ ಪ್ರತಿಯೊಂದು ಸಮರ್ಪಕವಾಗಿ ನಿಂತು ಬದುಕಿನ ಸಂದರ್ಭ ಗೆದ್ದು ನಿಲ್ಲಲು ಸಕಾಲ ಎಂಬ ಭ್ರಮೆ ಬೇಡ. ಶಿಸ್ತಿನಿಂದ ದುಡಿದಾಗ ಒಂದಿಷ್ಟು ಪ್ರತಿಫಲ ಸಿಗಲು ಕಾಲವು ಪಕ್ವತೆ ಪಡೆದಿದೆ. ಬಾಳ ಸಂಗಾತಿಯ ಸಲಹೆ ಪಡೆಯಲು ಮರೆಯದಿರಿ. ಶ್ರೀ ರಾಮ ರಕ್ಷಾ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ವೃಶ್ಚಿಕ: ಶ್ರಮವಹಿಸಿ ದುಡಿದರೆ ಧನಲಾಭ ಖಚಿತ

Weekly Horoscope

ನಿಶ್ಚಿತವಾದ, ಸಮತೋಲನದ ಹೆಜ್ಜೆಗಳು ಪರಿಣಾಮಕಾರಿಯಾದ ಮನಃ ಸಮಾಧಾನ ಹಾಗೂ ಸುಖವನ್ನು ತರಬಹುದಾಗಿದೆ. ಬಾಳ ಸಂಗಾತಿಯಿಂದ ಬೆಂಬಲ ನೈತಿಕ ಶಕ್ತಿ ಮತ್ತು ಸಹಕಾರಗಳು ಅಯಾಚಿತವಾಗಿ ಒದಗಿ ಬರಲು ಸುಸಂರ್ಭವಾಗಿದೆ ಇದು. ಕೆಲಸದ ಸ್ಥಳದಲ್ಲಿ ಪ್ರಮೋಷನ್‌ ನಿರೀಕ್ಷಿಸಬಹುದಾಗಿದೆ. ಗುರು ಬಲವು ದೂರವಾಗಿದೆ ಎಂಬುದು ಮಾತ್ರ ಮನದಲ್ಲಿಯೇ ಅರಿತಿರಿ. ಆದರೂ ಶ್ರಮವಹಿಸಿ ಮಾಡುವ ಕೆಲಸಗಳು ಕಿರಿಕಿರಿಯ ನಡುವೆಯೂ ಧನಲಾಭ ತರಲಿದೆ. ಶ್ರೀ ಗುರು ರಾಘವೇಂದ್ರರನ್ನು ಆರಾಧಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಆಗ್ನೇಯ

ಧನಸ್ಸು: ಜನ ಬೆಂಬಲದಿಂದ ಜನ ಪ್ರತಿನಿಧಿಯಾಗಬಹುದು!

Weekly Horoscope

ಒದಗಿ ಬಂದ ಗುರು ಬಲದಿಂದಾಗಿ ಅನೇಕ ರೀತಿಯ ಗುರಿಗಳನ್ನು, ಕನಸುಗಳನ್ನು ತಲುಪಿ, ಗೆದ್ದು ಸಂಭ್ರಮ ಪಡುವ ಕಾಲ ಇದಾಗಿದೆ. ಗಣೇಶನ ಆರಾಧನೆಯಿಂದ ಹಣಕಾಸಿನ ಸ್ಥಿತಿಗೆ ಸಿದ್ಧಿ ಲಭ್ಯ. ಜತೆಗೆ ಧೈರ್ಯದಿಂದ ಇಡುವ ಜಾಣ್ಮೆಯ ಹೆಜ್ಜೆಗಳಿಗೆ ಶನೈಶ್ವರನಿಂದ ಅಗಾಧವಾದ ಆನೆಬಲ, ಬೆಂಬಲ ನಿಮಗೆ ಸಿಗಲಿದೆ. ನಿಮ್ಮ ವರ್ಚಸ್ಸನ್ನು ಜನರ ನಡುವೆ ಸಂವರ್ಧಿಸಿಕೊಳ್ಳಲು, ಜನ ಬೆಂಬಲ ಪಡೆದು ಜನ ಪ್ರತಿನಿಧಿಯಾಗಲೂ ಕಾಲ ಸೂಕ್ತವಾದುದಾಗಿದೆ. ಸಹೋದ್ಯೋಗಿಗಳು ಬೆಂಬಲಿಸುತ್ತಾರೆ. ಷಣ್ಮುಖನನ್ನು ಆರಾಧಿಸಿ, ಒಳಿತಿದೆ.
ಶುಭ ಸಂಖ್ಯೆ : 1 ಶುಭ ದಿಕ್ಕು: ನೈಋತ್ಯ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಮಕ್ಕಳಿಂದ ಆನಂದದ ಕ್ಷಣ ಲಭ್ಯ

Weekly Horoscope

ಮಕ್ಕಳು ಸಮಾಧಾನ, ನೈತಿಕ ಬೆಂಬಲದಿಂದ ಉತ್ಸಾಹಕ್ಕಾಗಿನ ಸುಹಾಸಕರತೆಯನ್ನು ನಿರ್ಮಿಸಬಲ್ಲರು. ಗುರು ಬಲ ಬರಲೂ ಇಲ್ಲ. ಹೋಗಲೂ ಇಲ್ಲ. ಮುಂದುವರಿದ ಸಾಡೇಸಾತಿಯ ಶನಿಕಾಟದ ದಿನಗಳು. ಯಾಕಾದರೂ ಮಿಥ್ಯಾರೋಪಗಳು, ಅಸೂಯೆ ಪಡುತ್ತ ವಿಘ್ನ ತಂದಿಡುವ ಬಂಧುಗಳು, ಸ್ನೇಹಿತರು ಯಾಕೆ ಈ ರೀತಿಯಾಗಿ ಬಾಧೆ ತರುತ್ತಿದ್ದಾರೆ ಎಂಬ ನೋವು ಸದಾ ನಿಮ್ಮನ್ನು ಮುಕ್ಕಿ ತಿನ್ನುತ್ತಿರುತ್ತದೆ. ನಿಮ್ಮ ಸಣ್ಣ ತಪ್ಪನ್ನೂ ಭೂತಗನ್ನಡಿಯಲ್ಲಿ ಹಿಡಿದು ತೋರಿಸಿ, ಮೂಗು ಮುರಿಯುತ್ತಾರೆ. ಶ್ರೀ ದಶರಥ ಮಹಾರಾಜ ವಿರಚಿತ ಶನಿ ಸ್ತ್ರೋತ್ರ ಓದಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಈಶಾನ್ಯ

ಕುಂಭ: ಸಾಲ ಮಾಡಲೂ ಬೇಡಿ, ಕೊಡಲೂ ಬೇಡಿ

Weekly Horoscope

ವರ್ಚಸ್ಸಿಗೆ ಧಕ್ಕೆಯ ದಿನಗಳು. ಬಡ್ಡಿಗೆ ಸಾಲ ತರಲು ಹೋಗಬೇಡಿ. ಬ್ಯಾಂಕ್‌ ಸಾಲದಿಂದ ಹೆಜ್ಜೆ ಇರಿಸಿ. ವಹಿವಾಟು ನಡೆಸಲು ಯಾವ ಉದ್ದೇಶಕ್ಕಾಗಿ ಹಣ ತಂದಿರೋ ಅದೇ ಉದ್ದೇಶಕ್ಕಾಗಿ ಹಣವನ್ನು ತೊಡಗಿಸಿ. ಆದಾಯ ತಾರದಿರುವ ಕಾರಣಗಳಿಗಾಗಿ ಸಾಲ ಮಾಡಲೇಬೇಡಿ. ಸಾಲ ಕೊಡಲೂ ಬೇಡಿ. ಹಣ ಕೈ ಜಾರಿದರೆ ಹೋಯ್ತು ಎಂದೇ ಅರ್ಥ. ಶೇರು ವಹಿವಾಟಿನ ವಿಚಾರದಲ್ಲಿ ದುರಾಸೆ ಬೇಡ. ಅರಿತು ಹೆಜ್ಜೆ ಇಡಿ. ಯಾರಿಗೂ ಸಾಲ ಕೊಡಬೇಡಿ. ತುಂಬಾ ತೊಂದರೆ ಎದ್ದೇಳಬಹುದು ಎಚ್ಚರ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ದಕ್ಷಿಣ

ಮೀನ: ಗುರು ಬಲ ಬಂದರೂ ಗುರುವಿಗಿದೆ ರಾಹು ಬಾಧೆ

Weekly Horoscope

ಸಾಡೇಸಾತಿ ಶನಿಕಾಟದ ನಡುವೆ ಗುರುಬಲ ಒದಗಿ ಬಂದುದು ಹೌದಾದರೂ ಗುರುವಿಗೇ ಇದೆ ಈಗ ರಾಹುವಿನ ಬಾಧೆ. ಗುರು ಬಲ ಇದ್ದರೂ ಇರದಂತಿರುವ ಇರುಳಿನ ಕತ್ತಲು ಯಾತನಾಮಯವಾಗಿರುವ ಕಾಲ ಘಟ್ಟ ಇದು. ದ್ರವ್ಯ ನಾಶ. ಆರ್ಥಿಕ ವಿಷಯಗಳಲ್ಲಿ ಬಾಧೆ. ಧೈರ್ಯವೇ ಬರುತ್ತಿಲ್ಲ ಎಂಬ ಅರ್ತನಾದ ದೇಹದ ಕಣಕಣದಲ್ಲಿಯೂ ಇರುವ ಸದ್ಯದ ದಾರುಣತೆ. ಮಕ್ಕಳೂ ಕಿರಿಕಿರಿ ತರುವ ಕಾಲವಾಗಿದೆ ಇದು. ಕುಲದೈವವನ್ನು ಪ್ರಾರ್ಥಿಸಿ. ಹನುಮಾನ್‌ ಚಾಲೀಸಾ ಓದಿ. ಸುಡುವ ನೆಲದಲ್ಲೂ ತಂಪು ರಕ್ಷಣೆ ಸಿಗಲು ಇದು ದಾರಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಪೂರ್ವ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

IPL 2024: ವಿಶೇಷ ಎಂದರೆ ಎಲಿಮಿನೇಟರ್​​ನಲ್ಲಿ ಲಕ್ನೋವನ್ನು ಸೋಲಿಸಿದ ನಂತರ ಆರ್​ಸಿಬಿ ತಂಡವು 2022 ರ ಋತುವಿನಲ್ಲಿ ಕ್ವಾಲಿಫೈಯರ್ 2 ಹಂತದಲ್ಲಿ ರಾಲ್ಸ್​​ನಿಂದಲೇ ಹೊಡೆತ ತಿಂದು ಹೊರಕ್ಕೆ ಬಿದ್ದಿತ್ತು. 2020 ಮತ್ತು 2021ರಲ್ಲಿಯೂ ಆರ್​ಸಿಬಿ ಎಲಿಮಿನೇಟರ್​ನಲ್ಲಿ ಸೋಲು ಕಂಡಿತ್ತು. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​​ಸಿಬಿ ಕೊನೆಯ ಬಾರಿ ಫೈನಲ್ ತಲುಪಿತ್ತು.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಆರ್​ಸಿಬಿಯ (RCB) ಭರವಸೆಗಳು ಮೇ 22 ರ ಬುಧವಾರ ಕೊನೆಗೊಂಡವು. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ವಿರುದ್ಧ ಸೋತ ನಂತರ ಐಪಿಎಲ್ 2024 ರ (IPL 2024) ಎಲಿಮಿನೇಟರ್​ ಹಂತದಲ್ಲಿಯೇ ರೆಡ್​ಆರ್ಮಿ ಹೊರಕ್ಕೆ ಬಿತ್ತು. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಪಂದ್ಯಾವಳಿಯ ನಾಕೌಟ್ ಹಂತದಲ್ಲಿ ತನ್ನ ಆವೇಗ ಉಳಿಸಿಕೊಳ್ಳಲಿಲ್ಲ. ಆರು ಪಂದ್ಯಗಳ ಗೆಲುವಿನ ನಂಬಲಾಗದ ಓಟವನ್ನು ಮುಂದುವರಿಸಲಿಲ್ಲ. ಮತ್ತದೇ ಹಳೆ ರಾಗವೆಂಬಂತೆ ಸೋಲಿನ ಸುಳಿಗೆ ಸಿಲುಕಿ ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.

ನಾಕೌಟ್ ಹಂತದಲ್ಲಿ ಒತ್ತಡಕ್ಕೆ ಒಳಗಾಗುವ ಆರ್​​ಸಿಬಿ ಚಾಳಿ ಇಲ್ಲಿಯೂ ಮುಂದುವರಿಯಿತು. ಆರ್​ಆರ್​ ತಂಡದ ಹಿಂದೆ ಈ ಹಿಂದೆ ನಾಕೌಟ್​ ಹಂತದಲ್ಲಿ ಸೋತಂತೆ ಇಂದೂ ಸೋತಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಇಬ್ಬನಿ ಪರಿಣಾಮ ಸೇರಿದಂತೆ ರನ್​ ಚೇಸ್ ಮಾಡುವ ತಂಡಕ್ಕೆ ಅನುಕೂಲವಾಗಿದ್ದ ಪರಿಸ್ಥಿತಿಯಲ್ಲಿ ಕಡಿಮೆ ಸ್ಕೋರ್ ಆಗಿತ್ತು. ಹೀಗಾಗಿ ಸೋಲು ಸಹಜವಾಗಿಯೇ ಬಂದಿದೆ. ಇದೇ 17 ಆವೃತ್ತಿಗಳು ಮುಗಿದರೂ ಆರ್​ಸಿಬಿಯ ಕಪ್​ ಬರ ನೀಗಲಿಲ್ಲ. ಕಪ್​ಗಾಗಿ ಕಾಯುವ ದಿನಗಳು ಮತ್ತಷ್ಟು ಮುಂದೂಡಿಕೆಯಾದವು.

ವಿಶೇಷ ಎಂದರೆ ಎಲಿಮಿನೇಟರ್​​ನಲ್ಲಿ ಲಕ್ನೋವನ್ನು ಸೋಲಿಸಿದ ನಂತರ ಆರ್​ಸಿಬಿ ತಂಡವು 2022 ರ ಋತುವಿನಲ್ಲಿ ಕ್ವಾಲಿಫೈಯರ್ 2 ಹಂತದಲ್ಲಿ ರಾಲ್ಸ್​​ನಿಂದಲೇ ಹೊಡೆತ ತಿಂದು ಹೊರಕ್ಕೆ ಬಿದ್ದಿತ್ತು. 2020 ಮತ್ತು 2021ರಲ್ಲಿಯೂ ಆರ್​ಸಿಬಿ ಎಲಿಮಿನೇಟರ್​ನಲ್ಲಿ ಸೋಲು ಕಂಡಿತ್ತು. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​​ಸಿಬಿ ಕೊನೆಯ ಬಾರಿ ಫೈನಲ್ ತಲುಪಿತ್ತು.

ಪಂದ್ಯದಲ್ಲಿ ಏನಾಯಿತು?

ಬೌಲರ್​ಗಳ ಸಂಘಟಿತ ಹೋರಾಟ ಹಾಗೂ ಯಶಸ್ವಿ ಜೈಸ್ವಾಲ್ (45 ರನ್​) ಹಾಗೂ ರಿಯಾನ್ ಪರಾಗ್​ (36 ರನ್​) ಬ್ಯಾಟಿಂಗ್ ಬಲದಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಸತತ ನಾಲ್ಕು ಸೋಲು ಹಾಗೂ ಮಳೆಯಿಂದಾಗಿ ಒಂದು ಪಂದ್ಯ ರದ್ದುಗೊಂಡ ಕಾರಣ ಬೇಸರಕ್ಕೆ ಒಳಗಾಗಿದ್ದ ರಾಜಸ್ಥಾನ್ ಬಳಗ ಈ ಗೆಲುವಿನೊಂದಿಗೆ ಖುಷಿ ಕಂಡು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಅಲ್ಲಿ ಸಂಜು ಬಳಗ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

ಈ ಸೋಲಿನೊಂದಿಗೆ ಆರ್​ಸಿಬಿ ತಂಡದ 2024ರ ಐಪಿಎಲ್​ ಅಭಿಯಾನ ಮುಕ್ತಾಯಗೊಂಡಿತು. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್​ ಆರ್ಮಿಯ ದೊಡ್ಡ ಸಾಧನೆ ಎನಿಸಿಕೊಂಡಿತು. ಜತೆಗೆ ಆರ್​​ಸಿಬಿಯ ಅಪಾರ ಅಭಿಮಾನಿಗಳ ಹೃದಯ ಛಿದ್ರಗೊಂಡಿತು. ಈ ಬಾರಿಯಾದರೂ ಕಪ್​ ಗೆಲ್ಲಬೇಕೆಂಬ ಆಸೆ ಕಮರಿತು. ಕಷ್ಟದಲ್ಲಿ ಪ್ಲೇಆಫ್​ ಹಂತಕ್ಕೇರಿದ ಹೊರತಾಗಿಯೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಚೆನ್ನೈ ವಿರುದ್ಧದ ಲೀಗ್ ಪಂದ್ಯದಲ್ಲಿ ಹೆಚ್ಚು ನಿಖರವಾಗಿ ಆಡಿದ್ದ ಆರ್​ಸಿಬಿ ಈ ಪಂದ್ಯದಲ್ಲಿ ನಿರ್ಲಕ್ಷ್ಯ ತೋರಿತು. ಬ್ಯಾಟಿಂಗ್​ನಲ್ಲಿ ಅನಗತ್ಯವಾಗಿ ವಿಕೆಟ್​ ಒಪ್ಪಿಸಿದರೆ ಬೌಲಿಂಗ್ ವೇಳೆಯೂ ಕ್ಯಾಚ್​ ಕೈಚೆಲ್ಲಿ, ಕಳಪೆ ಫೀಲ್ಡಿಂಗ್ ಮಾಡಿ, ರನ್​ಔಟ್​ ಚಾನ್ಸ್​ ಕಳೆದುಕೊಂಡಿತು. ಇದು ಸೋಲಿಗೆ ಕಾರಣವಾಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

ಚಿಲ್ಲರೆ ಕಾಸಿಗೆ ಕೈಚಾಚುವ ಖದೀಮರು, ಬೀದಿ ಬದಿ ವ್ಯಾಪಾರಿಗಳಿಂದ ಸುಲಿಗೆ ಮಾಡುವವರು, ಅಂಗಡಿಯವರನ್ನು ಬೆದರಿಸಿ ಕಾಸು ಕೀಳುವವರು, ನ್ಯಾಯಕ್ಕಾಗಿ ಠಾಣೆಗೆ ಬಂದಾಗ ಹಣ ತೆಗೆದುಕೊಂಡು ರಾಜಿ ಕಬೂಲಿ ಮಾಡಿ ಕಳಿಸುವವರು, ಸ್ಥಳೀಯ ಪುಢಾರಿಗಳನ್ನು ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡು ಆಯಕಟ್ಟಿನ ಜಾಗಗಳಲ್ಲಿ ಸದಾ ಇರುವವರು, ಆಡಳಿತಗಾರರ ಮರ್ಜಿಗೆ ಸದಾ ಕಾಯುತ್ತ ಎಂಜಲು ಕಾಸಿಗೆ ಜೊಲ್ಲು ಸುರಿಸುವವರು- ಇಂಥವರಿಂದಾಗಿ ಪೊಲೀಸ್‌ ಇಲಾಖೆಗೆ ಅಪಖ್ಯಾತಿ ಬಂದಿದೆ.

VISTARANEWS.COM


on

Karnataka police
Koo

ರಾಜಧಾನಿಯ ರಾಜಗೋಪಾಲನಗರದ ಪೊಲೀಸ್‌ ಸಿಬ್ಬಂದಿಗಳಿಬ್ಬರನ್ನು ಹಫ್ತಾ ವಸೂಲಿ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಈ ಸಿಬ್ಬಂದಿಯನ್ನು ಸಾರ್ವಜನಿಕರು ಅಟ್ಟಿಸಿಕೊಂಡು ಹೋದ ದೃಶ್ಯವೊಂದು ವೈರಲ್‌ ಆಗಿತ್ತು. ಹೊಯ್ಸಳ ಸಿಬ್ಬಂದಿಯಾಗಿದ್ದ ಇವರು ವಾಹನ ನಿಲ್ಲಿಸಿ ಹೋಟೆಲ್‌ನಿಂದ ಊಟ ಹಾಗೂ ನೀರಿನ ಬಾಟಲ್ ಪಡೆದಿದ್ದರು. ಅದಲ್ಲದೇ ಅಂಗಡಿಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಆರೋಪದ ಮೇಲೆ ಸಾರ್ವಜನಿಕರು ವಿಡಿಯೋ ಮಾಡಿದ್ದು, ಇದನ್ನು ಕಂಡ ಪೊಲೀಸರು ಹೊಯ್ಸಳ ವಾಹನ ಹತ್ತಿ ವೇಗವಾಗಿ ಕಳ್ಳರಂತೆ ಆ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಹಿಂಬದಿಯಿಂದ ಜನರು ʼಪೊಲೀಸ್ ಕಳ್ಳ ಪೊಲೀಸ್ ಕಳ್ಳʼ ಎಂದು ಕೂಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದಲ್ಲದೆ, ಪೊಲೀಸ್‌ ಇಲಾಖೆಗೆ (Karnataka Police) ಮುಜುಗರಕ್ಕೆ ಕಾರಣವಾಗಿತ್ತು. ಸದ್ಯ ಇಬ್ಬರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿರುವ ಉತ್ತರ ವಿಭಾಗ ಡಿಸಿಪಿ, ಭ್ರಷ್ಟ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇಲಾಖಾ ತನಿಖೆ ನಡೆಯುತ್ತಿದೆ.

ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎಂಬುದು ಹೊಸ ವಿಚಾರವೇನಲ್ಲ. ಇದು ಪೊಲೀಸ್‌ ಪರೀಕ್ಷೆಯಿಂದ ಹಿಡಿದು, ದೊಡ್ಡ ಅಧಿಕಾರಿಗಳ ವರ್ಗಾವಣೆಯವರೆಗೆ ವ್ಯಾಪಿಸಿದೆ. ಕಾನ್‌ಸ್ಟೇಬಲ್‌ಗಳಿಂದ ಹಿಡಿದು ಐಪಿಎಸ್‌ ಮಟ್ಟದ ಅಧಿಕಾರಿಗಳವರೆಗೂ ಇದರ ಬೇರು ಕೊಂಬೆಗಳು ವ್ಯಾಪಿಸಿವೆ. ಪೊಲೀಸ್‌ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ವ್ಯಾಪಕ ಅವ್ಯವಹಾರ ನಡೆದುದರ ಬಗ್ಗೆ ನಾವು ಓದಿಯೇ ಇದ್ದೇವೆ. ಇನ್ನು ಹೀಗೆ ಪರೀಕ್ಷೆ ಬರೆಯುವಾಗಲೇ ಅವ್ಯವಹಾರ ನಡೆಸಿದವರು ಪೋಸ್ಟಿಂಗ್‌ ಆದ ಬಳಿಕ ಭ್ರಷ್ಟಾಚಾರ ನಡೆಸದೇ ಬಿಟ್ಟಾರೆಯೇ? ಅನುಕೂಲಕರ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವುದಕ್ಕಾಗಿ ಐಪಿಎಸ್‌ ಅಧಿಕಾರಿಗಳಿಂದ ಹಿಡಿದು ಕಾನ್‌ಸ್ಟೇಬಲ್‌ಗಳವರೆಗೆ ಶಾಸಕಾಂಗದ ಆಯಕಟ್ಟಿನ ಸ್ಥಾನಗಳಲ್ಲಿರುವವರಿಗೆ ದೊಡ್ಡ ಮೊತ್ತದ ಕಾಣಿಕೆ ಸಲ್ಲಿಸುತ್ತಾರೆ ಎಂಬುದು ಬರಿಯ ಅರೋಪ ಇರಲಾರದು. ಹೀಗೆ ಹಣ ಚೆಲ್ಲಿದವರು ಆ ಹಣಕಾಸನ್ನು ವಸೂಲಿ ಮಾಡದೇ ಬಿಟ್ಟಾರೆಯೇ? ಹೀಗೆ ವಸೂಲಿಗೆ ಇಳಿಯುವವರಿಗೆ ಸಿಗುವವರೇ ಜನಸಾಮಾನ್ಯರು. ಪೊಲೀಸರ ಭಯದಿಂದಲೇ ಸುಲಿಗೆಗೊಳಗಾಗುವವರು ತುಟಿ ಪಿಟಕ್ಕೆನ್ನದೆ ಸುಮ್ಮನಿರುವುದು ಸಾಮಾನ್ಯ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

ಹೀಗೆಂದು ಪೊಲೀಸ್‌ ಇಲಾಖೆಯಲ್ಲಿರುವ ಎಲ್ಲರೂ ಹೀಗೆ ಎಂದು ಅರ್ಥೈಸಬೇಕಿಲ್ಲ. ಶಿಸ್ತು, ಗಾಂಭಿರ್ಯ, ಪ್ರಾಮಾಣಿಕತೆ, ದಕ್ಷತೆಗೆ ಹೆಸರಾದವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಚಿಲ್ಲರೆ ಕಾಸಿಗೆ ಕೈಚಾಚುವ ಖದೀಮರು, ಬೀದಿ ಬದಿ ವ್ಯಾಪಾರಿಗಳಿಂದ ಸುಲಿಗೆ ಮಾಡುವವರು, ಅಂಗಡಿಯವರನ್ನು ಬೆದರಿಸಿ ಕಾಸು ಕೀಳುವವರು, ನ್ಯಾಯಕ್ಕಾಗಿ ಠಾಣೆಗೆ ಬಂದಾಗ ಹಣ ತೆಗೆದುಕೊಂಡು ರಾಜಿ ಕಬೂಲಿ ಮಾಡಿ ಕಳಿಸುವವರು, ಸ್ಥಳೀಯ ಪುಢಾರಿಗಳನ್ನು ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡು ಆಯಕಟ್ಟಿನ ಜಾಗಗಳಲ್ಲಿ ಸದಾ ಇರುವವರು, ಆಡಳಿತಗಾರರ ಮರ್ಜಿಗೆ ಸದಾ ಕಾಯುತ್ತ ಎಂಜಲು ಕಾಸಿಗೆ ಜೊಲ್ಲು ಸುರಿಸುವವರು- ಇಂಥವರಿಂದಾಗಿ ಪೊಲೀಸ್‌ ಇಲಾಖೆಗೆ ಅಪಖ್ಯಾತಿ ಬಂದಿದೆ. ಸದ್ಯ ಹೀಗೆ ಚಿಲ್ಲರೆ ಕಾಸಿಗಾಗಿ ಆಸೆಪಟ್ಟ ಇಬ್ಬರು ಸಿಕ್ಕಿಬಿದ್ದಿರಬಹುದು. ಆದರೆ ಇದರಿಂದ ಇಲಾಖೆಯ ಬೇರುಬೇರುಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಮೇಲೆ ಏನೂ ಪರಿಣಾಮವಾಗದು.

ಇದೆಲ್ಲ ಸರಿಹೋಗಲು ಪೊಲೀಸ್‌ ಇಲಾಖೆಯ ಆಮೂಲಾಗ್ರ ಸುಧಾರಣೆ ಅಗತ್ಯ. ಮೇಲಿನಿಂದ ಸುಧಾರಣೆಯಾಗದೇ ಕೆಳಗಿನ ಹಂತದಲ್ಲಿ ಏನೂ ಮಾಡಲಾಗದು. ಈ ಸುಧಾರಣೆಗೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳೂ, ಅದರ ಮೇಲೆ ಹಿಡಿತ ಸಾಧಿಸಿರುವ ರಾಜಕಾರಣಿಗಳೂ ಮನಸ್ಸು ಮಾಡಬೇಕು. ಒಂದೆಡೆ ಸರಣಿ ಕೊಲೆಗಳು ನಡೆಯುತ್ತಿವೆ, ಇನ್ನೊಂದೆಡೆ ಪೊಲೀಸರು ಬೀದಿ‌ ಸುಲಿಗೆಯಲ್ಲಿ ತೊಡಗಿದ್ದಾರೆ. ಇದು ರಾಜ್ಯ ಪೊಲೀಸ್ ಇಲಾಖೆಯ ಘನತೆಯನ್ನು ಕುಗ್ಗಿಸಿದೆ.

Continue Reading

ಕ್ರೀಡೆ

IPL 2024 : ಐಪಿಎಲ್​ 17ನೇ ಆವೃತ್ತಿಯಲ್ಲಿ ಆರ್​ಸಿಬಿ ಅಭಿಯಾನ ಅಂತ್ಯ; ರಾಜಸ್ಥಾನ್​ 2ನೇ ಕ್ವಾಲಿಫೈಯರ್​ಗೆ

IPL 2024: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

VISTARANEWS.COM


on

IPL 2024
Koo

ಅಹಮದಾಬಾದ್​​​: ಬೌಲರ್​ಗಳ ಸಂಘಟಿತ ಹೋರಾಟ ಹಾಗೂ ಯಶಸ್ವಿ ಜೈಸ್ವಾಲ್ (45 ರನ್​) ಹಾಗೂ ರಿಯಾನ್ ಪರಾಗ್​ (36 ರನ್​) ಬ್ಯಾಟಿಂಗ್ ಬಲದಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಸತತ ನಾಲ್ಕು ಸೋಲು ಹಾಗೂ ಮಳೆಯಿಂದಾಗಿ ಒಂದು ಪಂದ್ಯ ರದ್ದುಗೊಂಡ ಕಾರಣ ಬೇಸರಕ್ಕೆ ಒಳಗಾಗಿದ್ದ ರಾಜಸ್ಥಾನ್ ಬಳಗ ಈ ಗೆಲುವಿನೊಂದಿಗೆ ಖುಷಿ ಕಂಡು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಅಲ್ಲಿ ಸಂಜು ಬಳಗ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ.

ಈ ಸೋಲಿನೊಂದಿಗೆ ಆರ್​ಸಿಬಿ ತಂಡದ 2024ರ ಐಪಿಎಲ್​ ಅಭಿಯಾನ ಮುಕ್ತಾಯಗೊಂಡಿತು. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್​ ಆರ್ಮಿಯ ದೊಡ್ಡ ಸಾಧನೆ ಎನಿಸಿಕೊಂಡಿತು. ಜತೆಗೆ ಆರ್​​ಸಿಬಿಯ ಅಪಾರ ಅಭಿಮಾನಿಗಳ ಹೃದಯ ಛಿದ್ರಗೊಂಡಿತು. ಈ ಬಾರಿಯಾದರೂ ಕಪ್​ ಗೆಲ್ಲಬೇಕೆಂಬ ಆಸೆ ಕಮರಿತು. ಕಷ್ಟದಲ್ಲಿ ಪ್ಲೇಆಫ್​ ಹಂತಕ್ಕೇರಿದ ಹೊರತಾಗಿಯೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಚೆನ್ನೈ ವಿರುದ್ಧದ ಲೀಗ್ ಪಂದ್ಯದಲ್ಲಿ ಹೆಚ್ಚು ನಿಖರವಾಗಿ ಆಡಿದ್ದ ಆರ್​ಸಿಬಿ ಈ ಪಂದ್ಯದಲ್ಲಿ ನಿರ್ಲಕ್ಷ್ಯ ತೋರಿತು. ಬ್ಯಾಟಿಂಗ್​ನಲ್ಲಿ ಅನಗತ್ಯವಾಗಿ ವಿಕೆಟ್​ ಒಪ್ಪಿಸಿದರೆ ಬೌಲಿಂಗ್ ವೇಳೆಯೂ ಕ್ಯಾಚ್​ ಕೈಚೆಲ್ಲಿ, ಕಳಪೆ ಫೀಲ್ಡಿಂಗ್ ಮಾಡಿ, ರನ್​ಔಟ್​ ಚಾನ್ಸ್​ ಕಳೆದುಕೊಂಡಿತು. ಇದು ಸೋಲಿಗೆ ಕಾರಣವಾಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಹೊರಟ ರಾಜಸ್ಥಾನ್ ತಂಡಕ್ಕೆ ಆರಂಭದಲ್ಲಿ ರನ್​ ಗಳಿಸಲು ಕಷ್ಟವಾಯಿತು. ಆದರೆ ಆ ಬಳಿಕ ಯಶಸ್ವಿ ಜೈಸ್ವಾಲ್​ ಸ್ಕೋರ್​ ಹೆಚ್ಚಿಸುವ ಮಾರ್ಗ ಕಂಡುಕೊಂಡರು. ಅವರು 30 ಎಸೆತಕ್ಕೆ 45 ರನ್​ ಬಾರಿಸಿ ಅಗತ್ಯ ಆರಂಭ ಕೊಟ್ಟರು. ಟಾಮ್​ ಕ್ಯಾಡ್​ಮೋರ್​ 20 ರನ್​ ಗೆಔಟಾದರೆ ಸಂಜು ಸ್ಯಾಮ್ಸನ್​ 17 ರನ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರಿಸ್​ಗೆ ಬಂದ ರಿಯಾನ್ ಪರಾಗ್ (36 ರನ್​) ಮತ್ತೊಂದು ಉಪಯುಕ್ತ ಇನಿಂಗ್ಸ್​ನೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. ಹೆಟ್ಮಾಯರ್​ 26 ರನ್ ಕೊಡುಗೆ ಕೊಟ್ಟಿತು.

ಈ ಬಾರಿ ಮಿಂಚದ ಬ್ಯಾಟರ್​ಗಳು

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡದ ಆರಂಭ ನಿರೀಕ್ಷಿತವಾಗಿರಲಿಲ್ಲ. ಕೊಹ್ಲಿ ಸ್ವಲ್ಪ ಚೈತನ್ಯ ತೋರಿದರೂ ಫಾಫ್​ ಡು ಪ್ಲೆಸಿಸ್​ ತಿಣುಕಾಡಲು ಶುರು ಮಾಡಿದ್ದರು. ಆದಾಗ್ಯೂ ಆರಂಭಿಕರು ಮೊದಲ ವಿಕೆಟ್​ಗೆ 37 ಬೇರ್ಪಟ್ಟರು. ಬೌಲ್ಟ್​ ಎಸೆತಕ್ಕೆ ದೊಡ್ ಹೊಡೆದ ಬಾರಿಸಲು ಮುಂದಾದ ಫಾಫ್​ ಡು ಪ್ಲೆಸಿಸ್​ ರೋವ್ಮನ್ ಪೊವೆಲ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಅದಕ್ಕಿಂತ ಮೊದಲು ಅವರು 17 ರನ್ ಬಾರಿಸಿದರು. ನಂತರ ಆಡಲು ಬಂದ ಕ್ಯಾಮೆರಾನ್ ಗ್ರೀನ್​ 21 ಎಸೆತಕ್ಕೆ 27 ರನ್ ಬಾರಿಸಿದರು. ಅವರು ಔಟಾಗುವ ಮೊದಲು ಕೊಹ್ಲಿಯ ವಿಕೆಟ್​ ಪತನಗೊಂಡಿತು. 24 ಎಸೆತಕ್ಕೆ 33 ರನ್ ಬಾರಿಸಿದ್ದ ಕೊಹ್ಲಿ ಚಹಲ್ ಎಸೆತಕ್ಕೆ ಔಟಾದರು.

ಬಳಿಕ ಬಂದ ರಜತ್ ಪಾಟೀದಾರ್ ಉತ್ತಮ ಮೊತ್ತ ಪೇರಿಸುವ ಲಕ್ಷಣ ತೋರಿದರೂ 34 ರನ್​ಗೆ ಸೀಮಿತಗೊಂಡರು. ಆರ್​ಆರ್​ ಬೌಲರ್​ಗಳು ಆ ಬಳಿಕ ಮೇಲುಗೈ ಸಾಧಿಸಿದರು. ಗ್ಲೆನ್ ಮ್ಯಾಕ್ಸ್​ ಮತ್ತೊಂದು ಬಾರಿ ಬೇಜವಾಬ್ದಾರಿ ಆಟವಾಡಿ ಶೂನ್ಯಕ್ಕೆ ಔಟಾದರು. ಬಳಿಕ ಮಹಿಪಾಲ್ ಲಾಮ್ರೋರ್​ 32 ರನ್​ ಗಳಿಸಿ ಸ್ಪರ್ಧಾತ್ಮಕ ಮೊತ್ತಕ್ಕೆ ನೆರವಾದರು. ದಿನೇಶ್​ ಕಾರ್ತಿಕ್​ ಕಡೆಯಿಂದ ಹೆಚ್ಚು ರನ್ ಮೂಡಿ ಬರಲಿಲ್ಲ. ಅವರು 11 ರನ್​ಗೆ ಸೀಮಿತಗೊಂಡರು.

Continue Reading

ಪ್ರಮುಖ ಸುದ್ದಿ

IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

IPL 2024 : ಆನ್-ಫೀಲ್ಡ್ ಅಂಪೈರ್​ ನೀಡಿದ ಎಲ್ಬಿಡಬ್ಲ್ಯು ಕರೆಯನ್ನು ಪರಿಶೀಲಿಸಲು ಪಾಲುದಾರ ಮಹಿಪಾಲ್ ಲೊಮ್ರೊರ್ ಮನವೊಲಿಸಬೇಕಾಗಿ ಬಂದಿತ್ತು. ಹೀಗಾಗಿ ದಿನೇಶ್ ಕಾರ್ತಿಕ್​ಗೆ ತಾವು ಔಟ್ ಆಗಿರುವುದು ಮನವರಿಕೆಯಾಯಿತು. ಹಿಂದಿನ ಎಸೆತದಲ್ಲಿ ರಜತ್ ಪಾಟಿದಾರ್ ವಿಕೆಟ್ ಪಡೆದ ನಂತರ ಹೆಚ್ಚಿನ ಆತ್ಮವಿಶ್ವಾಸದಲ್ಲಿದ್ದ ಅವೇಶ್ ಖಾನ್ ಖುಷಿಯಲ್ಲಿದ್ದರು.

VISTARANEWS.COM


on

IPL 2024
Koo

ಅಹಮದಾಬಾದ್ : ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ (ಮೇ 22) ನಡೆದ ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್​ ನಡುವಿನ ಐಪಿಎಲ್ 2024 ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಎಲ್​ಬಿಡಬ್ಲ್ಯು ಡಿಆರ್​ಎಷ್​ ಪರಿಶೀಲೆನ ವಿವಾದಕ್ಕೆ ಕಾರಣವಾಯಿತು. ಆರ್​ಸಿಬಿ ಇನ್ನಿಂಗ್ಸ್​ನ 15 ನೇ ಓವರ್​ನಲ್ಲಿ ಕಾರ್ತಿಕ್ ಎದುರಿಸಿದ ಮೊದಲ ಎಸೆತದಲ್ಲೇ ಎಲ್​ಬಿಡಬ್ಲ್ಯು ಔಟ್​ ನೀಡಲಾಯಿತು. ಪರಿಶೀಲನೆಯ ನಂತರ ಮೂರನೇ ಅಂಪೈರ್ ನಿರ್ಧಾರವನ್ನು ಬದಲಿಸುವಂತೆ ಫೀಲ್ಡ್​ ಅಂಪೈರ್​ಗೆ ಸೂಚಿಸಿದರು. ಅವೇಶ್ ಖಾನ್​ಗೆ ಮತ್ತೊಂದು ವಿಕೆಟ್ ನೀಡಲು ನಿರಾಕರಿಸಿದರು. ಥರ್ಡ್ ಅಂಪೈರ್ ಅನಿಲ್ ಚೌಧರಿ ಅವರ ನಿರ್ಧಾರವು ವೀಕ್ಷಕ ವಿವರಣೆಗಾರರಾದ ಸುನಿಲ್ ಗವಾಸ್ಕರ್ ಮತ್ತು ರವಿ ಶಾಸ್ತ್ರಿ ಸೇರಿದಂತೆ ಹಲವರಿಗೆ ಆಶ್ಚರ್ಯ ಮತ್ತು ಆಘಾತವನ್ನುಂಟು ಮಾಡಿತು.

ಆನ್-ಫೀಲ್ಡ್ ಅಂಪೈರ್​ ನೀಡಿದ ಎಲ್ಬಿಡಬ್ಲ್ಯು ಕರೆಯನ್ನು ಪರಿಶೀಲಿಸಲು ಪಾಲುದಾರ ಮಹಿಪಾಲ್ ಲೊಮ್ರೊರ್ ಮನವೊಲಿಸಬೇಕಾಗಿ ಬಂದಿತ್ತು. ಹೀಗಾಗಿ ದಿನೇಶ್ ಕಾರ್ತಿಕ್​ಗೆ ತಾವು ಔಟ್ ಆಗಿರುವುದು ಮನವರಿಕೆಯಾಯಿತು. ಹಿಂದಿನ ಎಸೆತದಲ್ಲಿ ರಜತ್ ಪಾಟಿದಾರ್ ವಿಕೆಟ್ ಪಡೆದ ನಂತರ ಹೆಚ್ಚಿನ ಆತ್ಮವಿಶ್ವಾಸದಲ್ಲಿದ್ದ ಅವೇಶ್ ಖಾನ್ ಖುಷಿಯಲ್ಲಿದ್ದರು.

ದಿನೇಶ್ ಕಾರ್ತಿಕ್ ವಿಮರ್ಶೆ ತೆಗೆದುಕೊಂಡ ನಂತರ, ಮೂರನೇ ಅಂಪೈರ್ ಎಸೆತದ ರಿಪ್ಲೇ ನೋಡಿದರು. ಈ ನಿರ್ಧಾರವು ಬರಿಗಣ್ಣಿಗೆ ಪ್ಲಮ್ ಆಗಿ ಕಂಡರೂ, ಅಲ್ಟ್ರಾ-ಎಡ್ಜ್ ತಂತ್ರಜ್ಞಾನವು ಚೆಂಡು ಬ್ಯಾಟ್ ಅನ್ನು ದಾಟುವಾಗ ಸ್ಪೈಕ್ ಅನ್ನು ತೋರಿಸಿರು. ಅದೇ ಸಮಯದಲ್ಲಿ, ಬ್ಯಾಟ್ ಕೂಡ ಪ್ಯಾಡ್​ಗೆ ಬಡಿದಿತ್ತು. ಆದಾಗ್ಯೂ, ಮೂರನೇ ಅಂಪೈರ್ ಹೆಚ್ಚಿನ ರಿಪ್ಲೇಗಳನ್ನು ನೋಡದೆ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡರು.

ಇದನ್ನೂ ಓದಿ: Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

ಮೂರನೇ ಅಂಪೈರ್ ಅವರು ಅಲ್ಟ್ರಾ-ಎಡ್ಜ್ ಮೂಲಕ ಚೆಂಡು ಹೊಡೆದಿದೆ ಎಂದು ಹೇಳಿದ್ದರು. ಒಂದು ವೇಳೆ ಬ್ಯಾಟ್​​ ಪ್ಯಾಡ್​ಗೆ ಬಡಿಯುವಾಗ ಸದ್ದು ಬಂದಿರಬಹುದು ಎಂಬುದು ಕೆಲವರ ವಾದವಾಗಿತ್ತು. ಅದರಿಂದ ಸ್ಪೈಕ್ ಸಾಧ್ಯತೆಯನ್ನು ಅನಿಲ್ ಚೌಧರಿ ಏಕೆ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಭಿಪ್ರಾಯವೇನು?

ಅನಿಲ್ ಚೌಧರಿ ಅವರ ನಿರ್ಧಾರವನ್ನು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಆಘಾತಕಾರಿ ಎಂದರು. “ಇದಕ್ಕೆ ಒಂದು ಪದವಿದ್ದರೆ ಅದು ಸಂಪೂರ್ಣ ಆಘಾತಕಾರಿ” ಎಂದು ಶಾಸ್ತ್ರಿ ವೀಕ್ಷಕವಿವರಣೆಯ ಸಮಯದಲ್ಲಿ ಹೇಳಿದ್ದಾರೆ.

ಬ್ಯಾಟ್ ಪ್ಯಾಡ್ಗೆ ಹೊಡೆಯುವುದನ್ನು ಸ್ಪಷ್ಟವಾಗಿ ನೋಡಿದ್ದೇನೆ ಮತ್ತು ಚೆಂಡಿನೊಂದಿಗೆ ಬ್ಯಾಟ್​ಗೆ ಯಾವುದೇ ಸಂಪರ್ಕ ಆಗಿಲ್ಲ ಎಂದು ಲೆಜೆಂಡರಿ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅನಿಲ್ ಚೌಧರಿ ಅವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ವಾಸ್ತವವಾಗಿ, ರಾಜಸ್ಥಾನದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ನಿರ್ಧಾರದಿಂದ ನಿರಾಶೆಗೊಂಡಿದ್ದರು. ನಿರ್ಧಾರ ತೆಗೆದುಕೊಂಡ ನಂತರ ಅವರು ಸ್ಥಳದಲ್ಲಿ ಪಂದ್ಯದ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂತು.

Continue Reading
Advertisement
IPL 2024
ಕ್ರೀಡೆ2 hours ago

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

Karnataka police
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

Harish Poonja
ಕರ್ನಾಟಕ3 hours ago

Harish Poonja: ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ಶಾಸಕ ಹರೀಶ್‌ ಪೂಂಜಾ

IPL 2024
ಕ್ರೀಡೆ3 hours ago

IPL 2024 : ಐಪಿಎಲ್​ 17ನೇ ಆವೃತ್ತಿಯಲ್ಲಿ ಆರ್​ಸಿಬಿ ಅಭಿಯಾನ ಅಂತ್ಯ; ರಾಜಸ್ಥಾನ್​ 2ನೇ ಕ್ವಾಲಿಫೈಯರ್​ಗೆ

IPL 2024
ಪ್ರಮುಖ ಸುದ್ದಿ4 hours ago

IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

Mother Dies
ಕರ್ನಾಟಕ4 hours ago

Mother Dies: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು; 35 ಲಕ್ಷ ಬಿಲ್‌ ಕಟ್ಟಿ ಮೃತದೇಹ ತೆಗೆದುಕೊಳ್ಳಿ ಎಂದ ಆಸ್ಪತ್ರೆ!

young womans lover was stabbed in the neck by an ex lover
ಉತ್ತರ ಕನ್ನಡ4 hours ago

Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

IPL 2024
ಪ್ರಮುಖ ಸುದ್ದಿ4 hours ago

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Pune porsche car crash
ದೇಶ5 hours ago

Pune porsche car crash : ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಜಾಮೀನು ವಜಾ

Kalki 2898 AD
ಪ್ರಮುಖ ಸುದ್ದಿ5 hours ago

Kalki 2898 AD: ಕಲ್ಕಿ ಚಿತ್ರದ ʼಬುಜ್ಜಿʼ ಪಾತ್ರ ರಿವೀಲ್; ಅದ್ಧೂರಿ ಕಾರ್ಯಕ್ರಮದ LIVE ವಿಡಿಯೊ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ20 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌