ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು

ಇಂಟರ್‌ಸೆಕ್ಸ್ ಮಕ್ಕಳು ಹುಟ್ಟಿದ ಮೇಲೆ ಏನು ಮಾಡುವುದಾದರೂ ಅವರ ಅಭಿಪ್ರಾಯ ಪರಿಗಣನೆಗೆ ತೆಗೆದುಕೊಳ್ಳಬೇಕಾ ಬೇಡವಾ? ನಮಗೆ ತೋಚಿದ್ದನ್ನು ನಾವು ಮಾಡಿದೆವು. ಮಕ್ಕಳು ಮುಂದೆ ‘ವಿ ಆರ್ ನಾಟ್ ಜಸ್ಟ್ ಯುವರ್‌ ಪಪೆಟ್ಸ್!’ ಎಂದು ಕಣ್ಣೀರು ಹಾಕಿದರೆ…. ಓದಿ, ವಿಸ್ತಾರ ಯುಗಾದಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪುರಸ್ಕೃತ, ದಾದಾಪೀರ್‌ ಜೈಮನ್‌ ಅವರ ಸಣ್ಣಕಥೆ.

VISTARANEWS.COM


on

short story dadapeer jyman
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
dadapeer jyman
ದಾದಾಪೀರ್‌ ಜೈಮನ್

:: ದಾದಾಪೀರ್‌ ಜೈಮನ್

ಕನಸಿನಲ್ಲೊಬ್ಬ ಹುಡುಗ ಬರುತ್ತಾನೆ. ಉದ್ದಗೆ ಬೆಳೆದ ಕೂದಲಿದೆ. ಬರಿಮೈ ಹಾಗೂ ಅನಾಥ ಪಾದಗಳ ಅವನ ಕೈಯಲ್ಲೊಂದು ಕಟ್ಟಿಗೆಯ ಕೋಲಿದೆ. ಅದನ್ನು ಚಮತ್ಕಾರದ ಮಂತ್ರದಂಡದಂತೆ ಹಿಡಿದು ಗಾಳಿಯಲ್ಲಿ ಬೀಸುತ್ತಾ ಬರುತ್ತಾನೆ. ಚಿತ್ರವಿಚಿತ್ರಗಳನ್ನು ಸೃಷ್ಟಿಸುತ್ತಾ ನಡೆಯುತ್ತಿದ್ದಾನೆ. ಮೊದಲು ಊರಿನ ದಿಡ್ಡಿಬಾಗಿಲು ಪ್ರವೇಶಿಸುತ್ತಾನೆ. ಊರ ಗಲ್ಲಿಗಳ ತುಂಬಾ ಅಡ್ಡಾಡುತ್ತಾನೆ. ಕುಣಿಯುತ್ತಾನೆ. ಓಡುತ್ತಾನೆ. ಮಾಂತ್ರಿಕನ ಹಾಗೆ ನಡೆಯುತ್ತಾನೆ. ಒಮ್ಮೊಮ್ಮೆ ತೆವಳುತ್ತಾನೆ… ಮೆಲ್ಲಗೆ ಮನೆಯೊಳಗೆ ಲಗ್ಗೆ ಇಡುತ್ತಾನೆ. ಕಿಟಕಿಯ ಪೊಳಕುಗಳಿಂದ ಕೋಣೆಗಳಲ್ಲೂ ಇಣುಕುತ್ತಾನೆ. ಕೈಯಲ್ಲಿ ಗಾಳಿಗುದ್ದಾಟ ನಡೆಸುತ್ತಲೇ ಇದ್ದಾನೆ. ಅವನು ಮಾತನಾಡುತ್ತಿಲ್ಲ. ಬಹುಷಃ ಅವನಿಗೆ ಭಾಷೆಯಿಲ್ಲ. ಅಥವಾ ಅವನಿಗೆ ಇಡೀ ಪ್ರಪಂಚದ  ಭಾಷೆಯೆಲ್ಲಾ ಒಂದೇ ಎನಿಸುತ್ತಿರಬಹುದು…  ಅದೆಷ್ಟೋ ಹೊತ್ತು ಕನ್ನಡಿಯ ಮುಂದೆ ಕುಳಿತುಕೊಳ್ಳುತ್ತಾನೆ. ಮಹಾಮೌನದದಲ್ಲಿ ತನ್ನ ಪ್ರತಿಬಿಂಬವನ್ನೇ ನೋಡುತ್ತಾ ಕೈಗೋಲನ್ನು ಮತ್ತೆ ಆಡಿಸುವಾಗ ಅದು ಎರಡಾಗುವ ಚಮತ್ಕಾರವನ್ನು ಕಂಡು ಜೋರಾಗಿ ನಗುತ್ತಾನೆ. ಅದೇ ಹೊತ್ತಿಗೆ ನಾನವನನ್ನು ನೋಡಿಬಿಡುತ್ತೇನೆ. ಅವನೂ ನನ್ನನ್ನು ನೋಡಿ ಮುಗುಳ್ನಕ್ಕು ನನ್ನ ಮುಂದೆ ಅವನ ಕೈಗೋಲನ್ನು ವೃತ್ತಾಕಾರವಾಗಿ ತಿರುಗಿಸುತ್ತಾನೆ. ಅವನನ್ನು ಕರೆಯಲು ನನಗೆ ಮಾತು ಬರುವುದಿಲ್ಲ. ನಾಲಗೆಯ ತುದಿವರೆಗೂ ಬಂದದ್ದು ಮಾತಾಗುವುದಿಲ್ಲ. ಇನ್ನೇನು ಮಾತಾಯಿತು ಎನ್ನುವಲ್ಲಿಗೆ ಮುಗಿಲುsss ಎಂದು ಜೋರಾಗಿ ಕೂಗಿ ಎಚ್ಚರಾಗುತ್ತೇನೆ. ಕಣ್ಣು ಬಿಟ್ಟಾಗ ಏದುಸಿರು ಬಿಡುತ್ತಿರುತ್ತೇನೆ. ಹಣೆಯ ಮೇಲೆ ಬೆವರಿನ ಹನಿಗಳು ಕಿತ್ತು ಬರುತ್ತವೆ. ಇವರು ಪ್ರತಿದಿನ ಅದೇ ಸಮಾಧಾನದಿಂದ ಎದ್ದು ನನ್ನ ಬೆನ್ನದಡವಿ ನೀರು ಕೊಟ್ಟು ಸ್ವಲ್ಪ ಹೊತ್ತು ದಿಂಬಿಗಾನಿಸಿ ಕೂರಿಸಿ ದೊಡ್ಡ ದೀಪ ಹತ್ತಿಸಿ ಫ್ಯಾನನ್ನು ಚೂರು ಜೋರು ಮಾಡಿ ಬೆನ್ನದಡವುತ್ತಾ ನಿದ್ದೆ ಹೋಗುತ್ತಾರೆ. ನಾನು ಅದೆಷ್ಟೋ ಹೊತ್ತು ಕೂತೆ ಇರುತ್ತೇನೆ.

*** 

ನನಗಿದನ್ನೆಲ್ಲಾ ಖಂಡಿತಾ ಬರೆಯಬೇಕಿರಲಿಲ್ಲ. ಏಕೆಂದರೆ ನನಗೆ ಇತ್ತೀಚಿಗೆ ನನ್ನ ಗಂಡನ ಹಾಗೆ ಈ ಜಗತ್ತನ್ನು ಉದ್ಧರಿಸಬೇಕೆನ್ನುವ ಯಾವ ಹಕೀಕತ್ತೂ ಇಲ್ಲ. ಅವರ ಹಾಗೆ ನಾನೀಗ ಪೊಲಿಟಿಕಲ್ ಜೀವಿಯೂ ಅಲ್ಲ. ಜಗತ್ತು ಕರೆಯುವ ಹಾಗೆ ಆಂದೋಲನ ಜೀವಿಯೂ ಅಲ್ಲ. ನಾನೊಬ್ಬಳು ತಾಯಿ. ಕೇವಲ ತಾಯಿ. ಅದರ ಬಗ್ಗೆಯೂ ನನಗೆ ಗೊಂದಲವಿದೆ. ನನ್ನನ್ನು ಇದನ್ನೆಲ್ಲಾ ಬರೆಯಹಚ್ಚಿರುವುದು ನನ್ನ ಥೆರಪಿಸ್ಟ್ ಸುಮಾ. ಮತ್ತೆ ಮತ್ತೆ ಕನಸಿನಲ್ಲಿ ಸುಳಿಯುವ ಆ ಹುಡುಗನ ಚಿತ್ರ. ನಿದ್ದೆ ಇಲ್ಲದ ರಾತ್ರಿಗಳು. ಭಯ. ಇವೆಲ್ಲದರಿಂದ ಹೊರಬರಲು ಬರೆವುದೊಂದೇ ದಾರಿ ಅಂದಳು ಸುಮಾ!  ಚಳುವಳಿಗಳ ಕರಪತ್ರಗಳ ಕಂಟೆಂಟನ್ನು ಸಲೀಸಾಗಿ ಬರೆಯುತ್ತಿದ್ದ ನಾನು ನನ್ನ ಡೈರಿಯನ್ನು ದಿನನಿತ್ಯ ಬರೆಯಲೇ ಇಲ್ಲ. ‘ಭೂಮಿ ಪ್ರಕಾಶನ’ ಸಂಸ್ಥೆಯ ಒಡತಿಯಾದ ಮೇಲೂ ಅದೆಷ್ಟೇ ಪುಸ್ತಕಗಳನ್ನು ಓದಿದರೂ, ನಮ್ಮ ಪ್ರಕಾಶನ ಸಂಸ್ಥೆಯಿಂದ ಬೆಳಕಿಗೆ ಬಂದ ಪುಸ್ತಕಗಳಿಗೆ ಪ್ರಕಾಶಕಿಯ ಮಾತುಗಳನ್ನು ಬರೆಯುವಾಗಲೂ ಅದು ನನ್ನ ಖಾಸಗಿ ಬದುಕಿನ ವಿಮರ್ಶೆಯ ಹತ್ತಿರಕ್ಕೂ ಸುಳಿಯಲಿಲ್ಲ. ಅಥವಾ ಅದರಿಂದ ದೂರವಿರುವ ಪುಸ್ತಕಗಳನ್ನು ಮಾತ್ರ ನಾನು ಪ್ರಕಾಶಿಸಿದೆನೆ? ಜಗತ್ತಿನಲ್ಲಿ ಎರಡೇ ಇರುವುದು ಒಂದು ಪಂಜರ ಮತ್ತೊಂದು ಅದರಿಂದ ತಪ್ಪಿಸಿಕೊಳ್ಳುವುದು. ಟ್ರ್ಯಾಪ್ ಅಂಡ್ ಎಸ್ಕೇಪ್. ಮತ್ತದಕ್ಕೆ ನಾವು ಕೊಟ್ಟುಕೊಳ್ಳುವ ಕಾರಣಗಳು. ನಾನು ನನ್ನಿಂದ ಬರಿ ತಪ್ಪಿಸಿಕೊಂಡು ಬಂದೆನೆ? ಹೊರಗಡೆಯಿಂದ ನೋಡಿದಾಗ ಎಲ್ಲಾ ಸರಿಯಾಗಿಯೇ ಇದೆ ಅನಿಸುತ್ತದಲ್ಲ! ಈಗ ಮಕ್ಕಳಿಬ್ಬರು ಬೆಳೆದು ದೊಡ್ಡವರಾಗಿ ಕೇಳುವ ಪ್ರಶ್ನೆಗಳು ನನ್ನ ಇಡೀ ಜೀವನವನ್ನು ಅಣಕಿಸುವ ಸಂದರ್ಭ ಬಂದಿದೆಯಾದ್ದರಿಂದ ಈಗ ಬರೆಯದೆ ವಿಧಿಯಿಲ್ಲವೆನಿಸುತ್ತಿದೆಯೇ?  ನನ್ನ ಅಸ್ತಿತ್ವವನ್ನು ಮರು ಕಟ್ಟಿಕೊಳ್ಳುವುದು ಎಂದರೆ ಬರೆಯುವುದು ಎಂದರ್ಥವೇ? ಈಗ ಎಲ್ಲದಕ್ಕೂ ಕಾರಣಗಳನ್ನು ಹೆಕ್ಕಿಕೊಳ್ಳಬೇಕೇ? ಅದಕ್ಕಿದು ತಕ್ಕನಾದ ವಯಸ್ಸೇ? ಹೀಗೆ ಯೋಚಿಸುವಾಗ ಸುಮಾ ಹೇಳಿದ್ದು ನೆನಪಾಗುತ್ತದೆ ‘ಯು ಜಸ್ಟ್ ರೈಟ್ ಭಾಗೀರಥಿ. ಜಸ್ಟ್ ರೈಟ್ ಫಾರ್ ಯುವರ್ ಸೆಲ್ಫ್’. ಅಥವಾ ಕನಸಿನಲ್ಲಿ ಬರುವ ಆ ಹುಡುಗ ಬರೆಯಲೇ ಬೇಕೆಂದು ಹಠ ಹಿಡಿದಿದ್ದಾನೆಯೇ? ನಾನು ಯಾವುದಕ್ಕಾಗಿ ಬರೆಯುತ್ತೇನೆ? 

*** 

ನಾನು ಭಾಗೀರಥಿ. ಗಂಡನ ಹೆಸರು ಪ್ರಸಾದ್. ನಮಗಿಬ್ಬರು ಮಕ್ಕಳು ಭೂಮಿ ಮತ್ತು ಮುಗಿಲು. ಮನೆಯಲ್ಲಿ ವಸು ಚಿಕ್ಕಿ ಕೂಡ ಇದ್ದಾರೆ. ನಾನೊಂದು ಪ್ರಕಾಶನ ಸಂಸ್ಥೆ ನಡೆಸುತ್ತೇನೆ. ಭೂಮಿ ಪ್ರಕಾಶನ. ಅದು ಮೊದಲ ಮಗಳ ಮುದ್ದಿನ ಕಾರಣಕ್ಕೆ ಇಟ್ಟ ಹೆಸರು. ಮುಗಿಲು ನನ್ನ ಮಗ. ಮದುವೆಯ ವಯಸ್ಸಾಗಿದೆ. ಪ್ರಸಾದ್ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಆರ್. ಟಿ. ನಗರದ ಮುಖ್ಯಮಂತ್ರಿಗಳ ಖಾಸಗಿ ಮನೆಯಿಂದ ಒಂದು ಮುನ್ನೂರು ಮೀಟರ್ ದಾಟಿದರೆ ನಮ್ಮ ಮನೆ. ಸ್ವಿಮ್ಮಿಂಗ್ ಪೂಲ್ ಇರುವ ಮನೆ. ಮುಗಿಲು ಹುಟ್ಟಿದ ಮೇಲೆ ಈ ಮನೆಗೆ ಬಂದದ್ದು! ಪ್ರಸಾದ್ ಮತ್ತೆ ನಾನು ವಿಶ್ವವಿದ್ಯಾಲಯದಿಂದ ಸ್ನೇಹಿತರು. ಆಗಿನಿಂದಲೇ ನಾವು ಜನಪರ ಚಳುವಳಿಗಳಲ್ಲಿ, ವಿದ್ಯಾರ್ಥಿ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದೆವು. ವಿದ್ಯಾರ್ಥಿ ಸಂಘಟನೆಗಳ, ಸಾಂಸ್ಕೃತಿಕ ಸಂಘಗಳ ನಾಯಕರಾಗಿದ್ದ ನಾವು ಪ್ರೇಮಿಗಳೂ ಆದೆವು. ಕ್ರಾಂತಿಯ ಕಿಚ್ಚು ಪ್ರೇಮದ ಕಿಚ್ಚು ಒಳಗೊಳಗೇ ಇಬ್ಬರನ್ನೂ ಭಸ್ಮ ಮಾಡುತ್ತಿತ್ತು. ವಾರಕ್ಕೊಮ್ಮೆ ಹೋಟೆಲ್ ರೂಮುಗಳಲ್ಲಿ ಒಬ್ಬರ ತೆಕ್ಕೆಯಲ್ಲಿ ಮತ್ತೊಬ್ಬರು ಒಂದಾಗುವಾಗ ನಾವೇ ಶಿವ ಶಿವೆಯರೆಂದರೆನಿಸಿಹೋಗುತ್ತಿತ್ತು. ಇಬ್ಬರಿಗೂ ಮದುವೆ ಎನ್ನುವ ವಿಷಯದಲ್ಲಿ ನಂಬಿಕೆಯಿರಲಿಲ್ಲ. ಹೇಗೂ ಒಟ್ಟಿಗೆ ಇರುವುದೇ ನಿಜವೆಂದ ಮೇಲೆ ಮದುವೆಯಾಗುವುದರಲ್ಲಿ ತಪ್ಪೇನು ಅಂದುಕೊಳ್ಳುವಾಗಲೇ ಮದುವೆಯೂ ಆಯಿತು. ನನ್ನ ಮತ್ತು ಅವನ ನಡುವೆ ಮೊದಲ ಬಾರಿಗೆ ಮನಸ್ತಾಪ ಬಂದಿದ್ದು ಮಗುವಿನ ವಿಷಯದಲ್ಲಿ. ನನಗೆ ಮಕ್ಕಳೆಂದರೆ ಆಗುತ್ತಿರಲಿಲ್ಲ. ನನ್ನ ದೇಹದಿಂದ ಏನೋ ಒಂದು ಹೊರಗಡೆ ಬರುತ್ತದೆ ಎನ್ನುವ ಕಲ್ಪನೆಯೇ ನನ್ನ ದೇಹದಲ್ಲಿ ಮುಳ್ಳು ಮೂಡಿಸುತ್ತಿತ್ತು. ಆದರೆ ಪ್ರಸಾದನಿಗೆ ಮಕ್ಕಳೆಂದರೆ ಪಂಚಪ್ರಾಣ. ಇಂತಹ ಕೆಟ್ಟ ಪ್ರಪಂಚದಲ್ಲಿ ಮಕ್ಕಳನ್ನು ಹುಟ್ಟಿಸುವ ಐಡಿಯಾಕ್ಕೇನೆ ಹೆದರುತ್ತಿದ್ದನಾದರೂ ಒಳಗೊಳಗೇ ಮಗು ಇದ್ದರೆ ಚೆನ್ನ ಎನಿಸುವ ಇರಾದೆಯೂ ಇತ್ತು. ಕೊನೆಗೂ ಈ ದ್ವಂದ್ವವನ್ನು ದಾಟಿ ನಮಗೆ ಮಕ್ಕಳಾಯಿತು. ಇಷ್ಟು ಬರೆದು ಕನ್ನಡಿಯನ್ನು ನೋಡಿದೆ. ಆ ಕೈಗೋಲಿನ ಹುಡುಗ ಕನ್ನಡಿ ನೋಡುತ್ತಾ ಮುಗುಳ್ನಗುತ್ತಿದ್ದ. 

*** 

ಮೊನ್ನೆ ಇವರು ಫೋನಿನಲ್ಲಿ ಜೋರಾಗಿ ಕೂಗುತ್ತಿದ್ದರು. ‘ಏನ್ರೋ ಇವತ್ತು ಫುಲ್ ಐಟಿ ಸೆಲ್ ನನ್ನ ಟಾರ್ಗೆಟ್ ಮಾಡ್ತಿದೆ. ಏನ್ ಸಮಾಚಾರ? ನಾನು ಮೊನ್ನೆ ಹಾಕಿದ ಪೋಸ್ಟ್ ಇಂದ ಫುಲ್ ಉರಿದು ಹೋಗಿದ್ಯಾ? ಇರ್ಲಾ! ನಾನೂ ನೋಡಿಕೊಳ್ತೀನಿ.’ ಎಂದು ಜೋರಾಗಿ ವದರಿ ಫೋನಿಟ್ಟರು. ಇಡೀ ಸೋಶಿಯಲ್ ನೆಟ್ವರ್ಕಿಂಗ್ ಸೈಟ್ ತುಂಬಾ ಇವರ ವೈಯಕ್ತಿಕ ಜೀವನದ ಬಗ್ಗೆ ಹೊಲಸು ಬರೆದಿದ್ದರು. ಇವರು ಬೈ ಸೆಕ್ಷುಯಲ್ ಎನ್ನುವ ವಿಷಯ ಹೇಗೋ ತಿಳಿದು ಇವರ ಗೇ ಬಾಯ್ ಫ್ರೆಂಡ್ ಜೊತೆ ಇದ್ದ ಫೋಟೋಗಳನ್ನು ಸೆರೆ ಹಿಡಿದು ಅವೆಲ್ಲ ಕಡೆ ಹರಿದಾಡುತ್ತಿದ್ದವು. ಇವೆಲ್ಲದರಲ್ಲಿ ಪಾಪ ಆ ಹುಡುಗ ಸಿಕ್ಕಿಹಾಕಿಕೊಂಡಿದ್ದ. ಆಗ ಆ ಹುಡುಗನ ಖಾಸಗಿತನದ ಬಗ್ಗೆ ಯಾರೂ ಕಿಂಚಿತ್ ಯೋಚನೆಯನ್ನೂ ಮಾಡಿರಲಿಲ್ಲ. ನನ್ನ ಮೇಲೆ ಕಾಳಜಿ ತೋರಿ ಒಂದಿಷ್ಟು ಪೋಸ್ಟುಗಳೂ ಕೂಡ ಬಂದಿದ್ದವು. ನನಗೇ ಇಲ್ಲದ ಸಮಸ್ಯೆ ಇವರಿಗೆ ಅದು ಹೇಗೋ ಹುಟ್ಟಿಕೊಂಡಿತ್ತು?! ಇಲ್ಲ ಇಲ್ಲ, ನನಗೆ ಆಗಾಗ ಹೊಟ್ಟೆಕಿಚ್ಚಾಗುತ್ತಿತ್ತು. ಒಬ್ಬರನ್ನು ಹಂಚಿಕೊಳ್ಳುವುದು ತುಂಬಾ ಕಷ್ಟ. ಅದು ನಮ್ಮ ಪ್ರೀತಿ ಪಾತ್ರರನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳುವುದು ಆಗುವುದೇ ಇಲ್ಲ. ಆಮೇಲೆ ಈ ಹೊಟ್ಟೆಕಿಚ್ಚನ್ನು ನಿಯಂತ್ರಿಸೋದು ಎಷ್ಟು ಕಷ್ಟ?! ಗೋಡೆಗೆ ತಟ್ಟಿದ ಸಗಣಿ ಬೆರಣಿಯ ಹಾಗೆ ಮುಖದ ಮೇಲೆ ಕಾಣುತ್ತದೆ. (ಇದಿಷ್ಟು ನಿಜವನ್ನು ಒಪ್ಪಿಕೊಳ್ಳದೆ ಇದ್ದರೆ ನನಗಷ್ಟೇ ಕಾಣುವ ಹುಡುಗನಿಗೆ ಕೋಪ ಬರುತ್ತಿತ್ತು. ಅವನಾಗ ನನ್ನತ್ತ ತಿರುಗಿ ತನ್ನ ಮಂತ್ರದಂಡವನ್ನು ಪ್ರಯೋಗ ಮಾಡಿದ್ದರೆ?! ಭಯ!!! )  ಹಾಗಂತ ಇವರೇನೂ ಸಾಚಾ ಅಂತೇನೂ ನಾನು ಹೇಳುತ್ತಿಲ್ಲ. ಮತ್ತೊಮ್ಮೆ ಯಾರೋ ಇವರ ಫ್ರೆಂಡ್ ಮನೆಗೆ ಬಂದಾಗ ‘ಆ ರಾಜಕಾರಣಿದು ಬಹಳ ಆಗಿದೆ ಮಾರ್ರೆ. ಆ ಮನುಷ್ಯ ಹೆಣ್ಣುಮಕ್ಕಳ ವಿಷ್ಯದಲ್ಲಿ ತುಂಬಾ ವೀಕಂತೆ! ಚೂರು ವಿಚಾರಿಸಿ ಹೇಳಿ. ಹನಿ ಟ್ರ್ಯಾಪ್ ವ್ಯವಸ್ಥೆ ಮಾಡುವ!’ ಎಂದು ಹೇಳಿದ್ದನ್ನ ನಾನೇ ಕೇಳಿಸಿಕೊಂಡಿದ್ದೇನೆ. ನನಗೀಗ ಭಯ. ಎಲ್ಲಿ ಏನಾಗಿಬಿಡುತ್ತದೋ ಎನ್ನುವ ಭಯ. ನಾನು ಮೊದಮೊದಲಿಗೆ ತುಂಬಾ ಧೈರ್ಯವಂತೆಯಾಗಿದ್ದೆ. ಮಕ್ಕಳು ಹುಟ್ಟಿದ ಮೇಲೆ ನಾನಿಷ್ಟು ಮೆತ್ತಗಾದೆನೆ? ತಾಯಿಯಾಗುವುದೆಂದರೆ ಅಳ್ಳಕವಾಗುವುದೇ? ನನ್ನ ಮತ್ತು ಪ್ರಸಾದ್ ನಡುವೆ ಹೇಳತೀರದ ಒಂದು ಪವರ್ ಡೈನಾಮಿಕ್ಸ್ ಯಾಕೆ ಮೂಡುತ್ತಿದೆ? ಅದಕ್ಕೆ ನಾನೇ ಅವಕಾಶ ಮಾಡಿಕೊಡುತ್ತಿರುವೆನೆ? ತಾಯಿಯಾದಾಗಿನಿಂದಲೇ ಇದೆಲ್ಲ ಶುರುವಾಯಿತೇ? ಅಥವಾ ಇದು ಪ್ರಸಾದನ ಹುನ್ನಾರ ಮಾತ್ರವಲ್ಲ ಅಲ್ಲವೇ?!! ತಾಯಿಯಾದರೂ ನಾನು ನಿಜವಾದ ತಾಯಿಯಾದೆನೆ?  

ಹುಡುಗ ಅದ್ಯಾಕೋ ಚೂರು ಹೊತ್ತು ಆ ಕಡ್ಡಿ ಆಡಿಸುವುದನ್ನು ನಿಲ್ಲಿಸಿ ಕನ್ನಡಿಯ ಶೂನ್ಯದೊಳಗೆ ದಿಟ್ಟಿಸಿದ. 

***

ಪ್ರಸಾದನ ರಾಜಕೀಯ ಜೀವನ ಉನ್ನತ ಮಟ್ಟಕ್ಕೆ ಹೋಗುವುದಿತ್ತು. ಇದರ ನಡುವೆ ಅವನ ಖಾಸಗಿ ಜೀವನದ ದೃಶ್ಯಗಳು ಹೊರಬಂದಿದ್ದವು. ರಾಜಕಾರಣದಲ್ಲಿ ಒಳಗೊಳಗೆ ಏನಾದರೂ ಮಾಡಿಕೋ ಆದರೆ ಹೊರಗಡೆ ಬಂದರೆ ಅದನ್ನು ವೋಟ್ ಬ್ಯಾಂಕಿಗೆ ಪೂರಕವಾಗಿ ಬಳಸುವ ಅವಕಾಶ ಅದಕ್ಕಿರಬೇಕು. ಪಕ್ಷಕ್ಕೆ ಅದು ಮುಜುಗರ ತರಿಸುವ ವಿಷಯವಾಗಿರಬಾರದು ಎನ್ನುವುದು ತೀರಾ ಕಾಮನ್ ಸೆನ್ಸ್ ಮಟ್ಟಿಗಿನ ವಿಷಯವೇ! ಇವರ ದೃಶ್ಯಗಳು ಹೊರಗಡೆ ಬಂದಾಗ ಇವರು ತುಂಬಾ ಒದ್ದಾಡಿ ಹೋಗಿದ್ದರು. ನಾನೇ ‘ ‘ನಿಮ್ಮ ಓರಿಯಂಟೇಷನ್ ಬಗ್ಗೆ ಮೊದಲೇ ಗೊತ್ತಿತ್ತು. ಲೆಟ್ಸ್ ಗೆಟೌಟ್ ಆಫ್ ಬೈಫೋಬಿಯಾ! ಬೈಫೋಬಿಯಾ ಈಸ್ ನಾಟ್ ಅ ಫೇಸ್. ಇಟ್ಸ್ ಅ ಚಾಯ್ಸ್ ಅಂತ ನಾನು ಟ್ವಿಟರಿನಲ್ಲಿ ಹಾಕಬಲ್ಲೆ. ಅದು ನನ್ನ ಪಬ್ಲಿಷಿಂಗ್ ಜೀವನಕ್ಕೆ ಯಾವುದೇ ತೊಂದರೆ ಮಾಡಲ್ಲ. ಅದಕ್ಕಿಂತ ಹೆಚ್ಚಿಗೆ ನನಗೆ ಮಾಡಕ್ಕಾಗಲ್ಲ.’ ಎಂದೆ. ಹಾಗೆ ಮಾಡಿದೆ ಕೂಡ. ಅದಾದ ಮೇಲೆ ಅವರಿಗೇ ಸಮಸ್ಯೆ ಇಲ್ಲವೆಂದ ಮೇಲೆ ನಮಗೇನು ಎಂದು ಸುಮ್ಮನೆ ಬಿಟ್ಟಿತ್ತಾದರೂ ಇವರನ್ನು ಸಂಶಯಾಸ್ಪದ ದೃಷ್ಟಿಯಿಂದ ನೋಡುವುದು ಇದ್ದೇ ಇತ್ತು. ಕಡೆಗೆ ಅವರ ಪಕ್ಷ ಪ್ರಸಾದನ ಲೈಂಗಿಕ ಅಸ್ಮಿತೆಯನ್ನೂ ಒಂದು ರಾಜಕಾರಣದ ದಾಳವಾಗಿ ಬಳಸಿತ್ತು. ‘ದಿ ಫಸ್ಟ್ ಕ್ವೀರ್ ಪರ್ಸನ್ ಟು ಗೆಟ್ ಟಿಕೆಟ್.’ ಎಂದು ಘೋಷಿಸಿತ್ತು. ಇವೆಲ್ಲವೂ ರಾಜಕೀಯ ಜೀವನವನ್ನು ಸಲೀಸು ಮಾಡಿತ್ತು. ಈ ನಡುವೆ ಭೂಮಿ ಮತ್ತು ಮುಗಿಲು ವಿಷಯ ಕೂಡ ಮೀಡಿಯಾದಿಂದ ಹೊರಗಡೆ ಬಂದರೆ ಅದನ್ನು ಎದುರಿಸುವುದು ಹೇಗೆ ಎನ್ನವುದು ಪ್ರಸಾದನ ಹೊಸ ತಲೆನೋವಾಗಿತ್ತು. ಅದಕ್ಕೆ ಸರಿಯಾಗಿ ಮುಗಿಲು ನಮ್ಮ ಮನೆ ಬಿಟ್ಟು ಹೊರಟು ಹೋಗಿದ್ದ. 

ಹುಡುಗ ಈಗ ತನ್ನ ಕೈಗೋಲಿನ ಮೇಲೆ ಬಿದ್ದ ಧೂಳನ್ನು ಬಾಯಿಯಿಂದ ಊದಿ ತೆಗೆಯುತ್ತಿದ್ದ. 

***

ನನಗೆ ಮೊದಲ ಹೆರಿಗೆಯಾದ ದಿನ ಅಷ್ಟೊಂದು ಸಂತಸ ಇಡೀ ಆಸ್ಪತ್ರೆಯಲ್ಲಿ ಇರಲಿಲ್ಲ. ನರ್ಸ್ ಮೆತ್ತಗೆ ಬಂದು ಅವಳ ಲೋಕಲ್ ಭಾಷೆಯಲ್ಲಿ ‘ಈ ಮಗುಗೆ ಏನಿದೆ ಅಂತಾನೆ ಗೊತ್ತಾಗ್ತಾ ಇಲ್ಲ, ಪಾಪ!’ ಎಂದು ಬೇಜಾರಿನಲ್ಲೊ, ಹೇವರಿಕೆಯಲ್ಲೊ, ಕೊಂಕಿನಲ್ಲೊ, ಹಾಸ್ಯದಲ್ಲೊ ಮತ್ತೇನೋ ಭಾವದಲ್ಲಿ ಹೇಳಿದ್ದಳು. ಅವಳ ಮುಖಭಾವ ಏನಾಗಿತ್ತು ಎಂಬುದು ನನಗೆ ಇವತ್ತಿಗೂ ಅರ್ಥವಾಗಿಲ್ಲ. ನಾನಾಗ ‘ನನ್ನ ಕೂಸೆಲ್ಲಿ?’ ಎಂದು ಕೇಳಿದೆ. ಮೆಲ್ಲಗೆ ಅದಕ್ಕೆ ಸುತ್ತಿದ್ದ ಬಟ್ಟೆ ತೆಗೆದು ನೋಡಿದರೆ ಜನನಾಂಗ ಪೂರ್ತಿ ಬೆಳೆದಿರಲಿಲ್ಲ. ಅದು ಹುಡುಗನ ಶಿಶ್ನದಂತೆ ಕಾಣುತ್ತಿದ್ದರೂ ಅದು ಯೋನಿಯೊ ಶಿಶ್ನವೋ ತಿಳಿಯುತ್ತಿರಲಿಲ್ಲ. ನನ್ನ ಕಣ್ಣುಗಳಲ್ಲಿ ಧಾರಾಕಾರ ನೀರು. ಮೊದಲ ಬಾರಿಗೆ ‘ಅಯ್ಯೋ ಶಿವನೇ!’ ಎನ್ನುವ ಉದ್ಘಾರ ನನ್ನಿಂದ ಹೊರಬಿದ್ದಿತ್ತು. ಆ ಅಯ್ಯೋ ಶಿವನೇ ಎಂದದ್ದು ಮಗುವಿನ ಮೇಲಿನ ಕನಿಕರದಿಂದಲಾ ಅಥವಾ ನನ್ನನ್ನು ಯಾಕೆ ಇಂಥ ಘೋರವಾದ ಪರಿಸ್ಥಿತಿಯ ಪಾಲುದಾರಳನ್ನಾಗಿ ಮಾಡಿದೆ ಎನ್ನುವ ಕಾರಣದಿಂದಲಾ? ನಾನೊಬ್ಬ ವಿಚಿತ್ರವಾದ ಕೂಸನ್ನು ಹೆತ್ತೆ ಎನ್ನುವ ಭಾವದಿಂದಲಾ? ಏನೇ ಆಗಲಿ ನನ್ನ ಈ ಕೂಸನ್ನು ಬೆಳೆಸಬೇಕು ಎನ್ನುವ ಜಿದ್ದಿನಿಂದಲಾ? ಯಾಕೆ ನಾನು ಅಯ್ಯೋ ಶಿವನೇ ಎಂದಿದ್ದೆ? ನನ್ನ ಮೇಲೆ ಅಗಾಧ ಪ್ರೀತಿ ಇದೆ ಎಂದುಕೊಂಡಿದ್ದ ನನ್ನ ಶಿವ ಅದೆಷ್ಟೋ ಹೊತ್ತು ನನ್ನ ಹತ್ತಿರ ಸುಳಿಯಲೇ ಇಲ್ಲ. ನಮ್ಮ ನಡುವಿನ ಮೊದಲ ಮೌನದ ಬಿರುಕು ಅಲ್ಲಿಂದಲೇ ಆರಂಭವಾಗಿತ್ತು. ಅದರಾಚೆಗೆ ನನ್ನೊಳಗೊಬ್ಬ ತಾಯಿ ಹುಟ್ಟಿದ್ದಳು. ಅಥವಾ ನನ್ನೊಳಗಿನ ಜಿದ್ದಿಗೆ ತಾಯಿ ಎನ್ನುವ ಭಾವ ಅಂಟಿಸಿಕೊಂಡೆನಾ? ಡಾಕ್ಟರ್ ಬಂದು ಯು ಹ್ಯಾವ್ ಆನ್ ಇಂಟೆರ್ ಸೆಕ್ಸ್ ಕಿಡ್.  ಪ್ರತಿ ಐವತ್ತು ಸಾವಿರದಲ್ಲಿ ಒಂದು ಮಗು ಹೀಗಾಗುತ್ತದೆ. ತುಂಬಾ ಸುಲಭದ ಆಯ್ಕೆಯೆಂದರೆ ಶಿಶ್ನವನ್ನು ಸರ್ಜರಿಯ ಮೂಲಕ ತೆಗೆದು ಯೋನಿ ಆಗಿಸುವುದು. ಚಿಕ್ಕ ವಯಸ್ಸಾದ್ದರಿಂದ ಬೇಗನೆ ಗುಣವಾಗುತ್ತದೆ ಎಂದರು. ಪ್ರಸಾದನಿಗೆ ನನ್ನ ಮೇಲೆ ಹೇಳಲಾಗದ ಹೇವರಿಕೆಯೋ ಏನೋ ಕಡೆಗೂ ಒಪ್ಪಿದ. ಅಸಾಧ್ಯ ಮೌನಗಳ ನಡುವೆ ಮಗುವಿಗೆ ಸರ್ಜರಿ ಆಯಿತು. ಅದಕ್ಕೆ ಭೂಮಿ ಎಂದು ಹೆಸರಿಟ್ಟೆವು. ನನಗೆ ಭೂಮಿ ಮೇಲೆ ಇನ್ನಿಲ್ಲದ ಮುದ್ದು. ಅಥವಾ ಪ್ರಸಾದ್ ಗೆ ಭೂಮಿಯ ಮೇಲೆ ಅಸಡ್ಡೆಯಿದ್ದದ್ದರಿಂದ ನಾನು ಮುದ್ದುವನ್ನು ನನ್ನ ಮೇಲೆ ಹೇರಿಕೊಂಡೆನೇ? ಯೋಚಿಸಿದರೆ ಕಾರಣಗಳು ಗೋಜಲು ಗೋಜಲು. 

ಹುಡುಗ ಕನ್ನಡಿಯನ್ನು ಕ್ಯಾನ್ವಾಸ್ ಆಗಿಸಿ ಕೈಗೋಲನ್ನು ಬ್ರಷ್ ಮಾಡಿಕೊಂಡು ಅದರ ಮೇಲೆ ಚಿತ್ರ ಬಿಡಿಸುತ್ತಿದ್ದ. ಅದರ ಮೇಲೆ ಯಾವ ಬಣ್ಣವೂ ಮೂಡುತ್ತಿರಲಿಲ್ಲ. ಅಥವಾ ನನಗದು ಕಾಣುತ್ತಿರಲಿಲ್ಲ. 

*** 

ಒಂದಿಷ್ಟು ಕಾಲ ನನ್ನ ಮತ್ತು ಪ್ರಸಾದ್ ನಡುವೆ ಈಗೀಗ ಸಹಿಸಲಸಾಧ್ಯವಾದ ಮೌನ ತುಂಬಿಹೋಗಿತ್ತು.  ಒಂದು ಇಂಟೆರ್ ಸೆಕ್ಸ್ ಚೈಲ್ಡ್ ಎಂದಾಗ ಹಾರ್ಡ್ ಕೋರ್ ಪ್ರೊಗ್ರೆಸ್ಸಿವ್ ಆಗಿದ್ದ ಪ್ರಸಾದ್, ತಾನೊಬ್ಬ ಬೈ ಸೆಕ್ಷುಯಲ್ ಎನ್ನುವ ವಿಚಾರವೇ ಅವನ ರಾಜಕಾರಣದ ಪ್ರಯಾಣಕ್ಕೆ ವರ ಮಾಡಿಕೊಂಡ ಮನುಷ್ಯ ಈ ಹೊತ್ತಿನಲ್ಲಿ ಇಲ್ಲವಾಗಿದ್ದ. ಅಥವಾ ಅವನೊಳಗೂ ಒಂದು ಅಂತರ್ಯುದ್ಧ ನಡೆಯುತ್ತಿದ್ದಿರಬಹುದೇ? ಮಾತುಗಳು ನಿಂತಾಗ ಮೌನದೊಳಗೆ ಅಡಗಿ ಕುಳಿತ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನಾನು ಭೂಮಿಯನ್ನು ನಿರ್ವಹಿಸುತ್ತಲೇ ಭೂಮಿ ಪ್ರಕಾಶನವನ್ನೂ ಕಟ್ಟಿದೆ. ಅದ್ಯಾಕೋ ಭೂಮಿ ಹುಡುಗರ ಡ್ರೆಸ್ಸನ್ನ ಹಾಕಿಕೊಳ್ಳುವುದನ್ನೇ ಇಷ್ಟ ಪಡುತ್ತಿದ್ದಳು. ಪ್ರಸಾದನನ್ನ ಕೇಳಿದರೆ ನಮಗೆ ‘ಅವಳಿಗೆ ಹೇಗೆ ಬೇಕೋ ಹಾಗಿರಲಿ ಭಾಗಿ. ಒತ್ತಾಯ ಮಾಡ್ಬೇಡ.’ ಎಂದನಾದರೂ ಅವನ ಹಿಂದಿನ ಮಾತಿನ ಅರ್ಥ ನನಗೆ ಈ ಅಂತರ್ಲಿಂಗಿ ಮಗುವಿನ ಬಗ್ಗೆ ಹೇಳದೆ ಇದ್ದರೇನೇ ಒಳ್ಳೇದು ಅನ್ನುವ ಅರ್ಥವಿತ್ತೇ?! ನನಗೆ ಈ ನಡುವೆ ಮಗು, ಇವರ ರಾಜಕಾರಣ, ಪ್ರಕಾಶನ ಸಂಸ್ಥೆ, ಮನೆಗೆಲಸ ಎಲ್ಲವೂ ಒಂದು ರೀತಿ ಮಗ್ಗುಲು ಮಾಡುತ್ತಿದ್ದವು. ಮನೆಯಲ್ಲಿ ಸಹಾಯಕ್ಕೆಂದು ವಸು ಚಿಕ್ಕಿ ಇದ್ದರೂ ಅದು ನನಗೆ ಒಮ್ಮೊಮ್ಮೆ ಅವರ ಇರುವೆ ಇರಿಟೇಟ್ ಮಾಡುತ್ತಿತ್ತು. 

**

ಪ್ರಸಾದ್ ಕೆಲಸ ಮಾಡುತ್ತಿದ್ದ ಪಕ್ಷದಲ್ಲಿ ಒಬ್ಬ ಹೆಣ್ಣುಮಗಳಿದ್ದಳು. ಧಾರಾವಾಹಿ ಕ್ಷೇತ್ರದಿಂದ ಬಂದ ಆ ಹೆಣ್ಣುಮಗಳು ಇದ್ದಕ್ಕಿದ್ದಂತೆ ತಮ್ಮ ಸೆಕ್ಯೂಲರ್ ಪಕ್ಷ ತೊರೆದು ಮಹಾ ನಾಸ್ತಿಕಳಂತಿದ್ದ ಹೆಣ್ಣುಮಗಳು ಆಸ್ತಿಕ ಪಕ್ಷಕ್ಕೆ ಸೇರಿ ಮಠ ಮಾನ್ಯ ತಿರುಗಿ ಮಹಾ ದೈವಭಕ್ತೆಯಾಗಿ ಕೈಲಾಸ ಪೀಠ ಕಟ್ಟುತ್ತೇನೆ ಎಂದು ಕುಳಿತ ನಿತ್ಯಕಾಮ ಪ್ರಭುಗಳ ಪಟ್ಟಾ ಶಿಷ್ಯೆಯಾಗಿ ಹೋದದ್ದು ನಮ್ಮ ಹೈ ಪೊಲಿಟಿಕಲ್ ಪಾರ್ಟಿಗಳಲ್ಲಿ ಆಡಿಕೊಳ್ಳುವ ವಿಷಯವಾಗಿತ್ತಾದರೂ ಅದಕ್ಕೆಲ್ಲಾ ಅವಳ ವಿಕಲಚೇತನ ಮಗು ಅದಕ್ಕೆ ಕಾರಣ ಎಂದು ಗೊತ್ತಾದಾಗ ನಡುಗಿಹೋಗಿದ್ದೆ. ಅದನ್ನೊಮ್ಮೆ ದೆಹಲಿಯಲ್ಲೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿ ವಾಪಾಸಾಗುವಾಗ ಪ್ರಸಾದ್ ಮೆತ್ತಗೆ ನನಗೆ ಹರ್ಟ್ ಆಗದೆ ಇರುವ ರೀತಿಯಲ್ಲಿ ಹೇಳಿದ್ದರು. ವಸು ಚಿಕ್ಕಿ ಒಬ್ಬ ತಾಯಿ ತನ್ನ ಮಗುವಿಗಾಗಿ ಅದೆಂತಹ ತ್ಯಾಗಕ್ಕಾಗಿಯಾದರೂ ತಯಾರಾಗ್ತಾಳೆ ಭಾಗಿ…’  ಎನ್ನುವ ಮಾತು ಹೇಳಿದ್ದರು. ಅದಕ್ಕೆ ನಾನಾಗ ‘ಚಿಕ್ಕಿ ಪ್ಲೀಸ್. ನಿಮಗೆ ಮದುವೆಯೇ ಆಗಿಲ್ಲ. ಸುಮ್ಮನೆ ಆರು ಮಕ್ಕಳು ಹಡೆದವರ ಹಾಗೆ ಆಡ್ಬೇಡಿ.’ ಎನ್ನುವ ಕಠೋರ ಹುಂಬ ಮಾತುಗಳನ್ನು ಆಡಿದ್ದೆ. ಚಿಕ್ಕಿ ಎಂದಿನಂತೆ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಮುಸಿ ಮುಸಿ ಅಳತೊಡಗಿದರು. ಡ್ರೈವ್ ಮಾಡುತ್ತಿದ್ದ ಪ್ರಸಾದ್ ಹಿಂತಿರುಗಿ ನನ್ನನ್ನು ಕೆಂಡದ ಕಣ್ಣುಗಳಲ್ಲಿ ನೋಡಿದರು. ಪಕ್ಕದಲ್ಲಿಯೇ ಕೂತಿದ್ದ ಭೂಮಿ, ಚಿಕ್ಕಿ ಅಳುವುದನ್ನು ನೋಡಿ ಇವಳೂ ಜೋರಾಗಿ ದುಃಖಿಸಿ ಅಳಲು ಶುರು ಮಾಡಿದಳು. ನಾನೊಂದು ಛಟೀರ್ ಎಂದು ಭೂಮಿಯ ಕೆನ್ನೆಗೆ ಬಿಗಿದೆ. ಮತ್ತೆ ತಾರುಮಾರು ಒಂದಾಗುವಂತೆ ಚೀರತೊಡಗಿದಳು. ಕೂಸು ಹುಟ್ಟಿದಾಗ ಕ್ಯಾರೇ ಎನ್ನದವರು ಗಾಡಿಯನ್ನು ಪಕ್ಕಕ್ಕೆ ಹಾಕಿ ಮಗುವನ್ನು ರಮಿಸಲು ಕರೆದೊಯ್ದರು. ನಾನು ಮುಖ ಊದಿಸಿಕೊಂಡು ಕೂತಿದ್ದೆ. ನಾನು ಯಾಕೆ ಹಾಗೆ ಹೇಳಿದೆ? ಭೂಮಿ ನನ್ನ ಬಿಟ್ಟು ವಸು ಚಿಕ್ಕಿಯ ಜೊತೆಗೆ ಹತ್ತಿರವಾಗುತ್ತಿದ್ದದ್ದು ನನಗೆ ಸಹಿಸಲು ಆಗುತ್ತಿರಲಿಲ್ಲ… ಆ ಉರಿ ನನ್ನಿಂದ ಆ ಮಾತುಗಳನ್ನು ಆಡಿಸಿದ್ದವು. 

ಕನಸಿನ ಹುಡುಗ ಕೋಣೆಯ ತುಂಬಾ ಶತಪಥ ತಿರುಗುತ್ತಿದ್ದ. 

***  

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

ಊರಿನಲ್ಲಿಯೂ ಅಮ್ಮನಿಗೆ ವಸು ಚಿಕ್ಕಿಯ ಕಂಡರೆ ಆಗುತ್ತಿರಲಿಲ್ಲ. ಮದುವೆಯೇ ಆಗದೆ ಹಾಗೆ ಉಳಿದುಬಿಟ್ಟ ವಸು ಚಿಕ್ಕಿಯನ್ನು ಅಮ್ಮ ಗೋಳು ಹೊಯ್ದುಕೊಳ್ಳುತ್ತಿದ್ದಳು. ಅಪ್ಪನಿಲ್ಲದೆ ಇರುವಾಗ ‘ಇವಳೊಂದು ಗೊಡ್ಡೆಮ್ಮೆ’ ಎಂದು ಆಡಿಕೊಳ್ಳುತ್ತಿದ್ದುದನ್ನು ಕೇಳಿದ್ದ ನಾನು ಅಪ್ಪನಿದ್ದಾಗ ‘ಚಿಕ್ಕಿ ಗೊಡ್ಡೆಮ್ಮೆ, ಗೊಡ್ಡೆಮ್ಮೆ ಚಿಕ್ಕಿ’ ಎಂದು ಅವಳನ್ನು ಅಣಕಿಸುವಾಗ ಹಿಂದೆ ನಿಂತಿದ್ದ ಅಪ್ಪ ಮೊದಲಬಾರಿಗೆ ನನ್ನ ಕೆನ್ನೆಗೆ ಬಿಗಿದಿದ್ದರು. ಅವರು ಬಿಗಿದ ಏಟಿಗೆ ನನಗೆ ತಲೆಸುತ್ತು ಬರುವುದೊಂದು ಬಾಕಿ. ಅಪ್ಪನ ಎರಡನೇ ಸಂಬಂಧದ ಸಲುವಾಗಿ ರಸಿಕಸಿ ಮಾಡುತ್ತಿದ್ದ ಅಮ್ಮ ಅಂದು ನನ್ನ ಸಹಾಯಕ್ಕೆ ಬಂದಿರಲಿಲ್ಲ… 

ಅದೇ ಅಮ್ಮ ಅಂದು ರಾತ್ರಿ ವಸು ಚಿಕ್ಕಮ್ಮನ್ನ ಉಸ್ ಅನಿಸಬೇಡವೇ ಆ ಕನ್ಯೆಯ ಶಾಪ ನಮ್ಮ ಮನೆಗೆ ಒಳ್ಳೇದು ಮಾಡೋದಿಲ್ಲ. ಕಡೆಗೆ ಅಮ್ಮ ಅಪ್ಪ ಸತ್ತು ವಸು ಚಿಕ್ಕಮ್ಮ ನಮ್ಮ ಜೊತೆಗೆ ಇದ್ದುಬಿಟ್ಟರು ನನಗೆ ಅವಳ ಮೇಲೆ ಅಂತ ಅಕ್ಕರೆಯೇನು ಇರಲಿಲ್ಲ.  ತಾಯಿಯ ಸೆಡವು, ತಾಯಿಯ ಹೊಟ್ಟೆಕಿಚ್ಚು ಕಲ್ಲನ್ನು ಭಸ್ಮ ಮಾಡಿಬಿಡುತ್ತದೆನೋ…ವಸುಧ ಚಿಕ್ಕಿ ನನ್ನ ಅಜ್ಜನಿಗೆ ಅನಾಥಾಲಯದಲ್ಲಿ ಸಿಕ್ಕ ಮಗು. ಅವಳನ್ನು ಮನೆಗೆ ತಂದು ಮನೆಗೆಲಸಾಕ್ಕಾಗಿ ಉಳಿಸಿಕೊಂಡುಬಿಟ್ಟದ್ದಕ್ಕೆ ಅವಳಿಗೆ ಬೇಸರ ಇಲ್ಲವಾದರೂ ಅನಾಥಾಲಯದಲ್ಲಿದ್ದರೆ ಇಲ್ಲಿಂದಕ್ಕಿಂತ ಜೋರು ಜೀವನ ಸಿಗುತ್ತಿತ್ತೇನೋ ಎನ್ನುವ ಕನಸು ಅವಳ ಕಡೆಯಿಂದ ಮುಳ್ಳಿನ ಮಾತಾಡಿಸುತ್ತವೆ. ವಸು ಚಿಕ್ಕಿ ಓಡಿಹೋಗಬಹುದಿತ್ತು. ಆದರೆ ವಸು ಚಿಕ್ಕಿ ಹೋಗಲಿಲ್ಲ. ಮನೆಯಲ್ಲೇ ಚಾಕರಿ ಮಾಡಿಕೊಂಡು ಅಮ್ಮನ ಸಹಾಯಕಿಯಾಗಿಯೇ ಉಳಿದು ನಮ್ಮ ಮನೆಗೂ ಬಂದು ನನ್ನ ಮಕ್ಕಳಿಗೂ ಹತ್ತಿರವಾಗಿಬಿಟ್ಟಳು! ಅಮ್ಮನಿಗೆ ವಸು ಚಿಕ್ಕಿ ಮತ್ತು ನನ್ನಪ್ಪನಿಗೆ ಸಂಬಂಧವಿದೆ ಎನ್ನುವ ಸಂಶಯವಿದ್ದದ್ದರಿಂದ ಅವಳು ಒಂದಷ್ಟು ಕಾಲ ಚಿಕ್ಕಿಯನ್ನು ಸೊಸೆಯ ತರ ನಡೆಸಿಕೊಂಡಳು. ಕಡೆಗೆ ಅಪ್ಪ ಸತ್ತು ಅಮ್ಮ ಹಾಸಿಗೆ ಹಿಡಿದಾಗ ಚಿಕ್ಕಿಯೇ ಅಮ್ಮನನ್ನು ತೊಳೆದು ಬಳಿದು ಮಾಡಿದ್ದಳು. ಅಮ್ಮ ಸಾಯುವ ಮುಂಚೆ ‘ಏನೇ ಆಗಿರಲೇ ಭಾಗಿ. ಇದೊಂದು ಜೀವ ಎಲ್ಲರ ಚಾಕರಿ ಮಾಡಿದೆ. ಇವಳನ್ನು ಕೈಬಿಡಬೇಡವೇ! ಇವಳನ್ನು ಉಸ್ ಅನಿಸಬೇಡ.’ ಎಂದು ನನ್ನ ಕೈಹಿಡಿಯುವಾಗ, ಕಣ್ಣೀರು ಕಪಾಳಕ್ಕೆ ಸುರಿಯುವಾಗ ಚಿಕ್ಕಿಯ ಕಣ್ಣಲ್ಲೂ ನೀರು ತುಂಬಿಕೊಂಡು ಅಮ್ಮನ ಹಣೆಯನ್ನು ನೇವರಿಸುತ್ತಿದ್ದಳು. ಚಿಕ್ಕಿಯ ಕಣ್ಣುಗಳಲ್ಲಿ ಅದ್ಯಾವ ಭಾವವಿತ್ತು. ತಾನು ಅನಾಥಳಾಗಿಬಿಡುತ್ತೇನೆ ಅನ್ನುವ ಭಾವವಿತ್ತೆ? ಮುಂದಿನ ದಿನಗಳ ಅನಿಶ್ಚಿತತೆ ಇತ್ತೇ? 

*** 

ಚಿಕ್ಕಿಗೆ ಅದೇನೋ ಪುರಾಣದ ಕಥೆಗಳ ಮೇಲೆ ಇನ್ನಿಲ್ಲದ ಮೋಹ. ನಮ್ಮ ಹೊಸ ಮನೆಗೆ ಬಂದ ಮೇಲೆ ಅವಳ ಒತ್ತಾಯದಿಂದಲೇ ಕೃಷ್ಣ ಅರ್ಜುನನ ಸಾರಥಿಯಾಗಿ ಯುದ್ಧ ಮುನ್ನಡೆಸುವ ಚಿತ್ರವನ್ನು ಬಾಗಿಲ ಮೇಲೆ ಕೆತ್ತಿಸಿದ್ದೆವು. ಪ್ರತಿ ಬಾರಿ ಹೊರಗಿನಿಂದ ಮನೆಯೊಳಗಡೆ ಪ್ರವೇಶಿಸುವಾಗ ಮತ್ತು ಹೊರಗಡೆ ಹೋಗುವಾಗ ಅದಕ್ಕೊಂದು ನಮಸ್ಕಾರ ಹಾಕುತ್ತಿದ್ದಳು. ಭೂಮಿಯ ಕಾರಣಕ್ಕೆ ನಾವೆಲ್ಲೆ ಹೋದರೂ ಚಿಕ್ಕಿಯ ಉಪಸ್ಥಿತಿ ಬೇಕೇಬೇಕಾಗುತ್ತಿದ್ದರಿಂದ ಒಮ್ಮೆ ಬೆಂಗಳೂರಿನ 1 ಶಾಂತಿ ರೋಡ್ ನಲ್ಲಿನ ಆರ್ಟ್ ಗ್ಯಾಲರಿಗೆ ಚಿತ್ರಕಲಾಪ್ರದರ್ಶನಕ್ಕೆ ಎಂದು ಕರೆದುಕೊಂಡು ಹೋಗಿದ್ದಾಗ ಮಹಾಭಾರತದ ಭೀಷ್ಮ ಪ್ರತಿಜ್ಞೆ ಮಾಡುತ್ತಿರುವ ಅಮೂರ್ತವಾದ ಪೇಂಟಿಂಗ್ ಒಂದನ್ನು ಐವತ್ತು ಸಾವಿರ ಕೊಟ್ಟು ಮನೆಗೆ ತರಬೇಕಾಯಿತು. ಚಿಕ್ಕಿ ಮತ್ತವಳ ನಿರುಪದ್ರವಿ ಬೇಡಿಕೆಗಳು ನನಗೆ ಒಮ್ಮೊಮ್ಮೆ ಮುದ್ದು ಮುದ್ದೆನಿಸುತ್ತಿದ್ದವಾದರೂ ಸೆಕ್ಯೂಲರ್ ಗಳ ಮನೆಯ ತುಂಬಾ ಇಂತ ಪೇಂಟಿಂಗ್ ಇರುವುದು ಅದೇಕೋ ಇರುಸುಮುರುಸಾಗಿ ಕಡೆಗೆ ಭೂಮಿಯ ಕೋಣೆಯ ಮೇಲೆ ಪ್ರತಿಷ್ಠಪಿತವಾಗಿತ್ತು…

***

ಇದೆ ನಡುವೆ ನನ್ನ ಮತ್ತು ಪ್ರಸಾದನ ನಡುವೆ ಮೌನ ಕಡಿಮೆಯಾಗಿ ಮತ್ತೊಂದು ಚಿಗುರು ಕುಡಿಯೊಡೆದಿತ್ತು. ಆದರೆ ನನ್ನ ಪಾಲಿನ ಬದುಕು ನನ್ನ ಜೀವನದಲ್ಲಿ ಮತ್ತೊಂದು ಸಿಡಿಲನ್ನು ಎಸೆದಿತ್ತು. ಎರಡನೇ ಮಗುವಿನದು ಅದೇ ಸ್ಥಿತಿ ಇತ್ತು. ಇಂಟೆರ್ ಸೆಕ್ಸ್ ಕಿಡ್. ಇದಕ್ಕೂ ಅದರ ಜೆನಿಟಿಲಿಯ ಸರಿಯಾಗಿ ಬೆಳೆದಿರಲಿಲ್ಲ. ಡಾಕ್ಟರ್ ಯಥಾವತ್ತಾಗಿ ಹುಡುಗಿ ಮಾಡುವುದೇ ಸುಲಭ ಎಂದರು. ಪ್ರಸಾದ್ ‘ಬೇಡ ಬೇಡ. ನಮಗೆ ಗಂಡು ಮಗು ಬೇಕು. ಶಿಶ್ನವನ್ನೇ ಉಳಿಸೋ ಹಾಗೆ ಸರ್ಜರಿ ಮಾಡಿ ಎಂದ.’. ಡಾಕ್ಟರ್ ಫಾರಮ್ಮಿಗೆ ಸಹಿ ಹಾಕಿಸಿಕೊಂಡು ಆರು ತಿಂಗಳಾದ ಮೇಲೆ ಸರ್ಜರಿ ಮಾಡಿದರು. ಹಾಗೆ ನಮಗೆ ಮಗ ಹುಟ್ಟಿದ. ಮುಗಿಲು ಎಂದು ಹೆಸರಿಟ್ಟೆವು. ನಮ್ಮ ಪಾಲಿನ ಭಾಗ್ಯವೂ ಬದಲಾಯಿತು. ಮನೆ ಕಟ್ಟಿದೆವು. ಮುಗಿಲು ಭೂಮಿಯ ಕೋಣೆಯ ಪೇಂಟಿಂಗನ್ನು ತನ್ನ ಕೋಣೆಗೆ ವರ್ಗಾಯಿಸಿಕೊಂಡ…

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು

ಮುಗಿಲು ಬೆಳೆಯುವುದಕ್ಕೆ ಅಷ್ಟೇನೂ ತೊಂದರೆಯಾಗಲಿಲ್ಲ. ಆದರೆ ಅವನೊಂದು ದಿನ ಬಂದು ‘ಐ ಡೋಂಟ್ ವಾಂಟ್ ಟು ಗೆಟ್ ಮ್ಯಾರೀಡ್’ ಎಂದು ಘೋಷಿಸಿದ. ಪ್ರಸಾದ್ ನನ್ನ ಕಡೆ ನೋಡಿದ್ದರು. ಎಲ್ಲದಕ್ಕೂ ನನ್ನ ಕಡೆ ನೋಡಿದರೆ ನಾನೇನು ಮಾಡಲಿ? ಭೂಮಿಯನ್ನು ಕೇಳಿನೋಡಿದೆ. ಅವಳಿಂದಲೂ ಏನೂ ಉತ್ತರ ಬರಲಿಲ್ಲ. ಕಡೆಗೆ ಇವನ ಇನ್ಸ್ಟಾ ಬಯೋದಲ್ಲಿ ‘ರೈನ್ಬೋ ರಾಗ’ ಎಂದು ಬರೆದು ಅದರ ಪಕ್ಕ ಮಳೆಬಿಲ್ಲಿನ ಎಮೋಜಿ ಹಾಕಿಕೊಂಡಿದ್ದ. ಸಾಯ್ಲಿ, ನಮ್ಮ ಮನೇಲಿ ಇದೂ ಒಂದು ಬೇಕಿತ್ತು ಎಂದು ಕಿರಿಕಿರಿಯಾಗಿತ್ತು. ಹೀಗಂದುಕೊಳ್ಳುವಾಗಲೇ ಕೋಣೆಯಲ್ಲಿ ತಿರುಗುತ್ತಿದ್ದ ಕೂಸು ಎಡವಿಬಿತ್ತು. ನಾನು ಓಡಿ ಹೋಗಿ ಎತ್ತುವಲ್ಲಿ ಅಲ್ಲಿಂದ ಅದು ಮಾಯವಾಗಿತ್ತು. 

***

ಮುಗಿಲಿನ ಮದುವೆ ತಯಾರಿ ಮಾಡೋಣ ಎಂದಾಗ ಅವನು ಒಲ್ಲೆನೆಂದ. ಭೂಮಿಯ ಬರ್ತ್ಡೇ ಪಾರ್ಟಿ ಇಟ್ಟುಕೊಂಡಿದ್ದೆವು. ನಮ್ಮ ಆಪ್ತೆಷ್ಟರನ್ನಷ್ಟೇ ಕರೆದಿದ್ದವು. ಮುಗಿಲು ಮನೆಬಿಟ್ಟು ಹೋಗಿ ಒಂದು ವಾರವಾಗಿತ್ತು. ನಮ್ಮ ಫೋನಿಗೆ ಸಿಗುತ್ತಿರಲಿಲ್ಲ. ಪ್ರಸಾದ್ ನ ಒಂದು ಪೊಲಿಟಿಕಲ್ ಮೂವ್ ಗೆ ಮನೆಗೆ ಅತಿಥಿಗಳನ್ನು ಕರೆಯುವುದಕ್ಕೆ ಒಂದು ನೆಪ ಬೇಕಿತ್ತು. ಭೂಮಿಯ ಬರ್ತ್ಡೇ ಸಹಾಯಕ್ಕೆ ಬಂದಿತ್ತು.ಅದಕ್ಕೆ ಇಬ್ಬರೂ ಮಕ್ಕಳಿಗೆ ಸರ್ಜರಿ ಮಾಡಿದ್ದ ಡಾಕ್ಟರ್ ಕೂಡ ಪ್ರೀತಿಯಿಂದ ಬಂದಿದ್ದರು. ಭೂಮಿ ಎಂದಿನಂತೆ ಅವಳ ಟಾಮ್ ಬಾಯ್ ದಿರಿಸನಲ್ಲೆ ಕೇಕ್ ಕಟ್ ಮಾಡಿದ್ದಳು. ಡಾಕ್ಟರ್ ಸುಮ್ಮನೆ ಇರಲಾರದೆ ‘ನಿಮ್ಮ ತಮ್ಮ ಅಂತೂ ಮದ್ವೆ ಬೇಡ ಅಂತಿದಾನೆ. ನಿಮ್ಮಪ್ಪ ತುಂಬಾ ಟೆನ್ಶನ್ ಮಾಡಿಕೊಂಡಿದ್ದಾರೆ. ನೀನಾದ್ರೂ ಮದ್ವೆ ಗಿದ್ವೆ ಮಾಡಿಕೊಳ್ತೀಯಾ ಹೇಗೆ?!’ ಎಂದು ಕೇಳಿದ್ದೆ ತಡ ಅವರನ್ನು ಕೂರಿಸಿಕೊಂಡು, ನನ್ನನ್ನೂ ಕರೆದು ‘ನನ್ನ ತಮ್ಮನನ್ನು ಹುಡುಗನಾಗಿ ಮಾಡಿದಿರಿ. ನನ್ಯಾಕೆ ಹುಡುಗಿ ಮಾಡಿದ್ರಿ? ಐ ಫೀಲ್ ಅಯಾಮ್ ಅ ಬಾಯ್…’ ಎಂದು ಅಳುತ್ತಾ ಕೇಳಿದ್ದಳು. ಅದಕ್ಕೆ ನಮ್ಮ ಬಳಿ ಉತ್ತರ ಇರಲಿಲ್ಲ. ಮುಗಿಲು ನಡೆದಿದ್ದ. ಈಗ ಇವಳು ಈ ರೀತಿ ಹೇಳುತ್ತಿದ್ದಾಳೆ. ನನಗೊಂದು ರೀತಿಯ ಭಯ. ಪ್ರಸಾದ್ ಗೆ ಒಂದು ರೀತಿಯ ಭಯ…

ಇಂಟೆರ್ ಸೆಕ್ಸ್ ಮಕ್ಕಳನ್ನು ಹುಟ್ಟಿದ ಮೇಲೆ ಅವರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾ ಬೇಡವಾ ಎನ್ನುವ ಚರ್ಚೆಗಳು ವೈದ್ಯಕೀಯ ವಲಯದಲ್ಲಿ ನಡೆಯುತ್ತಿರಬೇಕಾದರೆ ನಮಗೆ ತೋಚಿದ್ದನ್ನು ಮಾಡಿದ್ದೇವೆ. ಈಗ ಮಕ್ಕಳು ಇದಕ್ಕೆ ಪೂರ್ತಿ ಹೊಣೆಗಾರರನ್ನಾಗಿ ಮಾಡಿ ‘ವಿ ಹೇಟ್ ಯೂ… ವಿ ಆರ್ ನಾಟ್ ಜಸ್ಟ್ ಪಪೆಟ್ಸ್!’ ಎಂದು ಕಣ್ಣೀರು ಹಾಕುತ್ತಾ ಕುಳಿತರೆ ಏನು ಮಾಡುವುದು? ಯಾರ ಕಣ್ಣೀರಿಗೆ ಇಲ್ಲಿ ಹೆಚ್ಚು ಬೆಲೆಯಿದೆ? ಎಲ್ಲರೂ ಏನನ್ನು ಹುಡುಕುತ್ತಿದ್ದೇವೆ? 

ನಾವೆಷ್ಟೇ ನಿಭಾಯಿಸಿದ್ದೇವೆ ಎನಿಸಿದರೂ ನೋಡಿಲ್ಲಿ ನೀನು ಇದನ್ನ ಹೇಗೆ ನಿಭಾಯಿಸುತ್ತಿ ಎಂದು ಹೊಸ ಪ್ರಶ್ನೆಪತ್ರಿಕೆಯನ್ನು ನಮ್ಮೆಡೆಗೆ ಎಸೆದರೆ?! ನನಗೆ ಮತ್ತೆ ಭಯ… ನಿದ್ದೆಯಿಲ್ಲದ ರಾತ್ರಿಗಳು. ಕನವರಿಕೆಗಳು. ಮಕ್ಕಳದೇ ಚಿಂತೆ.. 

ಪ್ರತಿದಿನ ಸಂಜೆ ತಾರಸಿಯ ಮೇಲೆ ಬಸವಳಿದು ನಿಂತಾಗ ಎಡಕ್ಕೆ ನಿಂತ ತೆಂಗಿನ ಗರಿಗಳ ಮಿಸುಕಾಟ ಆತ್ಮಸಂಗಾತಿಯ ಪಿಸುಗುಡುವಿಕೆಯಂತೆ ಕೇಳಿಸುತ್ತದೆ. ತಲೆಯೆತ್ತಿ ನೋಡಿದರೆ ಮುಗಿಲು ಚೂರು ಕೆಳಗಿಳಿದು ತನ್ನ ಕೈಬೆರಳುಗಳಿಂದ ಮಾಂತ್ರಿಕವಾಗಿ ಸ್ಪರ್ಶಿಸಿದ ಹಾಗೆ ಭಾಸವಾಗುತ್ತದೆ. ಸುತ್ತ ಸುಳಿವ ಗಾಳಿಯು ಅದೆಷ್ಟೇ ದೀರ್ಘ ಉಸಿರಾದರೂ ಬೇಸರಿಸಿಕೊಳ್ಳದೆ ಒಳಗಿಳಿದು ಊಟ ಮಾಡಿಸಿ ಡಬ್ಬಿಗೂ ತುಂಬುವ ತಾಯಿಯಂತೆ ತಂಗಾಳಿಯೊಂದು ಬೆಚ್ಚಗೆ ಮೈಸವರುತ್ತದೆ. ತಾರಸಿಯ ಹೊದಿಕೆಯ ಮೇಲೆ ಗುಟುರು ಹಾಕುವ ಪಾರಿವಾಳಗಳು ಚಿಕ್ಕಪುಟ್ಟ ಹೆಜ್ಜೆ ಹಾಕುತ್ತಾ ಹತ್ತಿರ ಬಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿ ರೆಕ್ಕೆ ಬಿಚ್ಚಿ ಹಾರಿ ಹೋಗುತ್ತವೆ. ಅದೆಲ್ಲಿಂದಲೋ ಹುಡುಕಿಕೊಂಡು ಓಡಿ ಬರುವ ಬೆಕ್ಕು ಕಾಲು ಸವರುತ್ತಾ ತಲೆಯೆತ್ತಿ ಮಿಯಾವ್ ಎಂದು ಗೋಗರೆಯುತ್ತದೆ. ಒಂದಿಷ್ಟು ಅರೆಘಳಿಗೆ ಇವೆಲ್ಲದರಲಿ ಕಳೆದು ಹೋದಾಗ ಉರಿವ ಸೂರ್ಯ ಅಸ್ತoಗತನಾಗಿ ಚಂದ್ರ ಹುಟ್ಟುತ್ತಾನೆ. ಜೀವದುಸಿರಿನ ಲಯ ವಿಶ್ವಶಕ್ತಿಯ ಲಯದ ಜೊತೆ ಮಾತಿಗೆ ಕೂತ ಹೊತ್ತು… ಒಳಗೆ ದಿವ್ಯ ಪ್ರಭೆಯೊಂದು ಹುಟ್ಟುತ್ತದೆ. ಕಾಯುತ್ತದೆ. ನಾಳೆ ಹೊಸ ಹಾದಿ. ನಾಳೆ ಹೊಸ ಹಾಡು. ಕನಸು ಕಟ್ಟುತ್ತದೆ ಜೀವ. ನಾನು ಒಳ್ಳೆಯ ತಾಯಿಯಾಗುತ್ತೇನೆಯೇ? ಕನಸು ಕಟ್ಟುತ್ತದೆ ಜೀವ. ಹಾಗಾಗುವುದಕ್ಕೆ ಏನು ಮಾಡಬೇಕು? ಇದೆಲ್ಲಾ ಕನಸಿನಲ್ಲಿ ಬರುವ ಹುಡುಗ ಸೃಷ್ಟಿಸುವ ಗಾಳಿ ಚಿತ್ರ ಮಾತ್ರವೇ? ಮಕ್ಕಳ ಪರವಾಗಿ ನಿಂತರೆ ನಾನು ಒಳ್ಳೆಯ ತಾಯಿಯಾಗುತ್ತೇನೆಯೇ?! 

ರಾತ್ರಿಯ ಹೊತ್ತು ಕಣ್ಣಾಲಿಗಳನ್ನು ತುಂಬಿಕೊಂಡು ಮಗನ ಓದುವ ಟೇಬಲ್ಲಿನಲ್ಲಿ ಕೂತು ಅವನದೇ ಡೈರಿಯನ್ನು ತಡಕಿದೆ.

 ‘ನೀವು ಡಾಕ್ಟರ್ ಸೇರಿಕೊಂಡು ನನ್ನ ಪರವಾಗಿ ನಾನೇನಾಗಬೇಕೆನ್ನುವ ನಿರ್ಧಾರ ತೆಗೆದುಕೊಂಡಿರಿ. ಈ ನಡುವೆ ನಮ್ಮ ಒಂದು ಮಾತನ್ನೂ ಕೇಳಲಿಲ್ಲ. ಯಾಕಮ್ಮ? ನಮಗೇನಾಗಬೇಕು ಎಂದು ನಾನು ನಿರ್ಧರಿಸುವುದು ನಮಗೆ ಹಕ್ಕಿಲ್ಲವಾ? ನನ್ನ ಜೆನಿಟಿಲಿಯಾದ ಒಂದೇ ಕಾರಣಕ್ಕೆ ನೀನು ನನ್ನ ಗಂಡಾಗಿ ಸರ್ಜರಿ ಮಾಡಿಸಿದ್ದಿ? ಅಯಾಮ್ ನಾಟ್ ಯುವರ್ ಪೊಲಿಟಿಕಲ್ ಪಪೆಟ್. ಐ ಹೇಟ್ ಯು!’  ಎಂದು ಬರೆದಿತ್ತು. ಕೂಗಿ ಹೇಳಿದ್ದರೆ ಸ್ವಲ್ಪ ಹೊತ್ತು ಗಾಳಿಯಲ್ಲಿ ತೇಲಿ ದಿನಕಳೆದಂತೆ ಮರೆತುಹೋಗಬಹುದು… ಹೀಗೆ ಬರೆದಿಟ್ಟು ಹೋದರೆ ಗಾಯವೆಂತು ಮಾಯುವುದು?!  ದೊಡ್ಡ ಮನೆ. ಅಗಾಧ ಮೌನ. ನಮ್ಮ ಮಾತು, ಉಚ್ವಾಸ ನಿಶ್ವಾಸಗಳು ಮಾರ್ದನಿಸುತ್ತವೆ. ಒಬ್ಬ ತಾಯಿಗೆ ‘ಐ ಹೇಟ್ ಯು.’ ಎಂದು ತನ್ನದೇ ಕೂಸಿನಿಂದ ಕೇಳಿಸಿಕೊಳ್ಳುವುದು ಅದೆಷ್ಟು ಹಿಂಸೆ ಎನ್ನುವುದು ತಾಯಂದಿರಿಗಷ್ಟೇ ಅರ್ಥವಾಗುವ ವಿಷಯ… 

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

ತಡಕಿ ಅಲ್ಲಿಯೇ ಸ್ಟ್ಯಾಂಡಿನಲ್ಲಿದ್ದ ಪೆನ್ನನ್ನು ಕೈಗೆತ್ತಿಕೊಂಡು ಕೊನೆಯ ಪುಟದಲ್ಲಿ ನಾನು ಬರೆಯತೊಡಗಿದೆ. 

‘ನನ್ನ ಹೆಸರೂ ಭಾಗೀರಥಿಯೇ.. ನನಗೆ ಒಬ್ಬನೇ ಮಗ ಭಾಗೀರಥಿ. ನಿನ್ನಂತೆ ನಿನ್ನ ತಟದಲ್ಲಿ ಪ್ರಮಾಣಗೈಯುವ ಪ್ರತಿಯೊಬ್ಬರನ್ನೂ ಮಕ್ಕಳೆಂದು ತಿಳಿಯಲಾರೆ. ಅದಕ್ಕೆ ನನ್ನ ಮಗ ನಾನು ಮದುವೆಯನ್ನೇ ಆಗುವುದಿಲ್ಲ ಎಂದಾಗ ತಡೆಯದೇ ಇರಲಾಗಲಿಲ್ಲ.’ 

ಇಷ್ಟು ಬರೆದು ಕಣ್ಣೆತ್ತಿ ನೋಡಿದೆ. ಅಲ್ಲೇ ಗೋಡೆಯಲ್ಲಿದ್ದ ಚಿತ್ರ ಕಲಾಕೃತಿಯಲ್ಲಿ ಭೀಷ್ಮ ಪ್ರತಿಜ್ಞೆಗೈಯುತ್ತಿದ್ದ. ಭಾಗೀರಥಿ ತಣ್ಣಗೆ ಹರಿಯುತ್ತಿದ್ದಳು. ಕಣ್ಣೀರು ನಾನು ಬರೆದ ಆ ಸಾಲುಗಳ ಮೇಲೆ ಬಿತ್ತು… ನನ್ನ ಭುಜದ ಮೇಲೆ ಮೆತ್ತಗೆ ಅಮುಕಿದ ಬಿಸುಪನ್ನು ಅನುಭವಿಸಿ ಹಿಂತಿರಿಗೆ ನೋಡಿದೆ. ಚಿಕ್ಕಿ ನಿಂತಿದ್ದಳು. ಅವಳ ಕಣ್ಣಲ್ಲೂ ನೀರಿದ್ದವು… ಅವಳ ಕೈಗಳು ನನ್ನ ಕಣ್ಣೀರನ್ನು ಒರೆಸಿದವು. ಪಕ್ಕಕ್ಕೆ ಚೇರ್ ಎಳೆದು ಕುಳಿತು ಬೆನ್ನ ನೇವರಿಸಿದವು. ‘ಯಾಕಳ್ತಿಯೇ ಭಾಗಿ… ಅಂದವರು ನಮ್ಮ ಮಕ್ಕಳಲ್ಲವೇನೇ?! ಎಲ್ಲಾ ಸರಿ ಹೋಗತ್ತೆ. ನೀನಳಬೇಡ.’ ಎಂದು ಸಮಾಧಾನಿಸಿದಳು. ನಾನು ನನ್ನ ಥೆರಪಿಸ್ಟ್ ಸುಮಾಗೆ ಕರೆ ಮಾಡಿ ಸ್ಪೀಕರಿನಲ್ಲಿ ಹಾಕಿಟ್ಟು ಅವಳು ಕರೆ ಎತ್ತುವುದನ್ನೇ ಕಾಯುತ್ತಾ ಕುಳಿತೆ. ಕೋಣೆಯ ಬಾಗಿಲನ್ನು ಮೆಲ್ಲಗೆ ತಳ್ಳಿ ಸೀದಾ ಕನ್ನಡಿಯ ಮುಂದೆ ಹೋಗಿ ಕನಸಿನಲ್ಲಿ ಕಾಣಿಸಿದ ಹುಡುಗ ತನ್ನ ಕೈಗೋಲನ್ನು ಹಿಡಿದು ಚಿತ್ರ ಸೃಷ್ಟಿಸುತ್ತಾ ಕುಳಿತ. ಹಾಗೆ ಕುಳಿತವನೇ ಮೊದಲ ಬಾರಿಗೆ ನನ್ನತ್ತ ತಿರುಗಿ ಕೋಪದಿಂದ ಕೆಂಡಗಣ್ಣುಗಳನ್ನು ಮಾಡಿಕೊಂಡು ಜೋರಾಗಿ ಬಾಯಿತೆರೆಯಲು ಶುರುಮಾಡಿದ. ಅದೆಷ್ಟು ದೊಡ್ಡ ಬಾಯಿಯೆಂದರೆ ನನ್ನನ್ನೇ ನುಂಗಿಬಿಡುವಷ್ಟು… ನನಗೆ ಭಯ. ಇದೆಲ್ಲಿ ನನ್ನನ್ನು ಆಪೋಶನ ತೆಗೆದುಕೊಂಡುಬಿಡುವುದೋ ಎಂದು! ನಾನೇನು ಹೇಳುವುದನ್ನು ಮಿಸ್ ಮಾಡಿಕೊಂಡೆ?! ನನಗಾಗ ದೈತ್ಯಾಕಾರದಲ್ಲಿ ಬಾಯಿ ತೆರೆದ ಆ ಪುಟ್ಟ ಹುಡುಗ ಬ್ರಹ್ಮಾoಡವನ್ನೇ ತೋರಿಸಿದ ಕೃಷ್ಣನ ಹಾಗೆ ಕಾಣಿಸಿದ. ಅವನನ್ನು ಕರೆಯಲು ಒಳಗಿನಿಂದ ಒಂದು ಧ್ವನಿ ಕಿತ್ತು ಬರುತ್ತಿತ್ತು. ಸುಮಾ ಕರೆ ಎತ್ತಿದಳು.. ‘ಮಿಸಸ್ ಭಾಗೀರಥಿ. ಏನಾಯ್ತು?’ ಎಂದು ಕೂಗುತ್ತಿದ್ದಾಳೆ. ವಸು ಚಿಕ್ಕಿ ‘ಉಸಿರು ತಗೋ ಭಾಗಿ.’ ಎಂದು ಗಾಳಿ ಹಾಕುತ್ತಿದ್ದಾಳೆ. ಇನ್ನೇನು ಅವನು ನುಂಗಬೇಕು ಎನ್ನುವಲ್ಲಿ ನಾನು ಅಳುತ್ತಾ ಕೈಮುಗಿದು ‘ಮುಗಿಲುsss’ ಎಂದು ಕೂಗಿದೆ. ಕತ್ತಲು ಆವರಿಸಿತು. ಅದಷ್ಟೇ ನೆನಪು… 

ಇದಾದ ಮೇಲೆ ಆಸ್ಪತ್ರೆಯಲ್ಲಿ ಒಂದು ವಾರವಿದ್ದೆ. ಮನೆಗೆ ಬಂದ ಮೇಲೆ ನಾನೇನನ್ನೋ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನಿಸುತ್ತಿರುತ್ತದೆ. ಮತ್ತೆ ಎಂದಾದರೂ ಆ ಹುಡುಗ ನನ್ನ ಕನಸಿನಲ್ಲಿ ಸುಳಿದು ಅಲ್ಲಿಂದ ಮತ್ತೆ ಎದ್ದು ಬಂದು ಕನ್ನಡಿಯ ಮುಂದೆ ಕೂರುತ್ತದೇನೋ ಎಂಬ ಭಯಮಿಶ್ರಿತ ನಿಗೂಢ ಆಸೆ ಹುಟ್ಟಿ ಮಾಯವಾಗುತ್ತದೆ. 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಧವಳ ಧಾರಿಣಿ ಅಂಕಣ: ಕಾಮವೆನ್ನುವುದು ಎಂತಹವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುತ್ತಾನೆ.

VISTARANEWS.COM


on

king dasharatha kaikeyi dhavala dharini column
Koo

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ದಕ್ಷಿಣ ಕನ್ನಡ

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Gangadhar Puttur : ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ (Yakshagana Artist) ಗಂಗಾಧರ ಪುತ್ತೂರು ಇಹಲೋಕ ತ್ಯಜಿಸಿದ್ದಾರೆ. ಮುಖದ ಬಣ್ಣವನ್ನು ಅಳಿಸುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

VISTARANEWS.COM


on

By

Yakshagana Artist No more
Koo

ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ (Heart attack) ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ (Yakshagana Artist) ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ.

ನಿನ್ನೆ ಬುಧವಾರ (ಮೇ 1) ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.

ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.

ಇದನ್ನೂ ಓದಿ: Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) (Srinivas Prasad) ಅವರು ತೀವ್ರ ಹೃದಯಾಘಾತದಿಂದ (Heart Aattack) ವಿಧಿವಶರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1:20ಕ್ಕೆ (Manipal Hospital ) ಅವರು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಇನ್ನು ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾಹಿತಿ ನೀಡಿದ್ದು, ಶ್ರೀನಿವಾಸ್ ಪ್ರಸಾದ್ ಅವರು ರಾತ್ರಿ 1:20ರ ಸುಮಾರಿಗೆ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಅವರ ಈ ಅಗಲಿಕೆ ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಂತವರು. ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡೋದಕ್ಕೆ ಬಿಟ್ಟು ಹೋಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟದ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದರು. ನನ್ನನ್ನು ಅವರು ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದ್ದಾರೆ ಯಾವುದೆ ವಿಚಾರ ಆಗಿದ್ದರೂ ಅವರ ಜೊತೆ ಚರ್ಚೆ ಮಾಡಿಯೇ ನಿರ್ಧಾರಕ್ಕೆ ಬರುತ್ತಿದೆ. ಈಗ ಯಾರ ಬಳಿ ಹೋಗಿ ಕೇಳಲಿ ಎಂದು ಅನಿಸಿ ಬಿಟ್ಟಿದೆ ಎಂದು ಭಾವುಕರಾಗಿ ಮಾತನಾಡಿದರು.

ಇದನ್ನೂ ಓದಿ:Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading
Advertisement
Prajwal Revanna Case
ಕರ್ನಾಟಕ15 mins ago

Prajwal Revanna Case: ನನ್ನ ಸಾಯಿಸ್ತಾರೆ; ಪ್ರಜ್ವಲ್‌ ವಿದೇಶದಲ್ಲಿದ್ದರೂ ಸಂತ್ರಸ್ತೆಗೆ ಭಯ, ಪೊಲೀಸರಿಗೂ ಮಾಹಿತಿ ನೀಡಲು ಹಿಂಜರಿಕೆ!

Bangalore To Belagavi Train
ಕರ್ನಾಟಕ19 mins ago

Bangalore To Belagavi Train: ಮೇ 6ರಂದು ಬೆಂಗಳೂರು-ಬೆಳಗಾವಿ ವಿಶೇಷ ರೈಲು ಸಂಚಾರ

IPL 2024
Latest23 mins ago

IPL 2024 : ಪುತ್ರ ಅಕಾಯ್​ ಹುಟ್ಟಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

Jai Shri Ram Slogan
ಕರ್ನಾಟಕ1 hour ago

Jai Shri Ram Slogan: ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ಬೂಟುಗಾಲಲ್ಲಿ ಒದೆಯಿರಿ ಎಂದಿದ್ದ ಕೈ ಮುಖಂಡ ಅಮಾನತು

Paytm
ಪ್ರಮುಖ ಸುದ್ದಿ1 hour ago

Paytm : ಪೇಟಿಎಂ ಸಿಒಒ ಭವೇಶ್ ಗುಪ್ತಾ ಏಕಾಏಕಿ ರಾಜೀನಾಮೆ

Ballari DC Prashanth kumar Mishra pressmeet about MLC election
ಬಳ್ಳಾರಿ1 hour ago

MLC Election: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ; ಮೇ 9ಕ್ಕೆ ಅಧಿಸೂಚನೆ ಪ್ರಕಟ

HD Revanna
ಕರ್ನಾಟಕ2 hours ago

HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!

IPL 2024
Latest2 hours ago

IPL 2024 : ಭಾರೀ ಭದ್ರತಾ ಲೋಪ; ಎಸ್​ಆರ್​​ಎಚ್​ ವಿದೇಶಿ ಆಟಗಾರನ ಮೇಲೆ ಮುಗಿಬಿದ್ದ ಸಾರ್ವಜನಿಕರು!

Ballari DC Prashanth kumar Mishra pressmeet about lok sabha election
ಬಳ್ಳಾರಿ2 hours ago

Lok Sabha Election 2024: ಪಾರದರ್ಶಕ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತ ಸಜ್ಜು

Shivamogga BJP
ಶಿವಮೊಗ್ಗ2 hours ago

Lok Sabha Election 2024: ಶಿವಮೊಗ್ಗದಲ್ಲಿ ಪ್ರಚಾರದ ವೇಳೆ ಕಿರಿಕ್; ಬಿಜೆಪಿ ವಾಹನ ಹಿಮ್ಮೆಟ್ಟಿಸಿದ ಈಶ್ವರಪ್ಪ ಅಭಿಮಾನಿಗಳು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ18 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌