ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು

ಇಂಟರ್‌ಸೆಕ್ಸ್ ಮಕ್ಕಳು ಹುಟ್ಟಿದ ಮೇಲೆ ಏನು ಮಾಡುವುದಾದರೂ ಅವರ ಅಭಿಪ್ರಾಯ ಪರಿಗಣನೆಗೆ ತೆಗೆದುಕೊಳ್ಳಬೇಕಾ ಬೇಡವಾ? ನಮಗೆ ತೋಚಿದ್ದನ್ನು ನಾವು ಮಾಡಿದೆವು. ಮಕ್ಕಳು ಮುಂದೆ ‘ವಿ ಆರ್ ನಾಟ್ ಜಸ್ಟ್ ಯುವರ್‌ ಪಪೆಟ್ಸ್!’ ಎಂದು ಕಣ್ಣೀರು ಹಾಕಿದರೆ…. ಓದಿ, ವಿಸ್ತಾರ ಯುಗಾದಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪುರಸ್ಕೃತ, ದಾದಾಪೀರ್‌ ಜೈಮನ್‌ ಅವರ ಸಣ್ಣಕಥೆ.

VISTARANEWS.COM


on

short story dadapeer jyman
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
dadapeer jyman
ದಾದಾಪೀರ್‌ ಜೈಮನ್

:: ದಾದಾಪೀರ್‌ ಜೈಮನ್

ಕನಸಿನಲ್ಲೊಬ್ಬ ಹುಡುಗ ಬರುತ್ತಾನೆ. ಉದ್ದಗೆ ಬೆಳೆದ ಕೂದಲಿದೆ. ಬರಿಮೈ ಹಾಗೂ ಅನಾಥ ಪಾದಗಳ ಅವನ ಕೈಯಲ್ಲೊಂದು ಕಟ್ಟಿಗೆಯ ಕೋಲಿದೆ. ಅದನ್ನು ಚಮತ್ಕಾರದ ಮಂತ್ರದಂಡದಂತೆ ಹಿಡಿದು ಗಾಳಿಯಲ್ಲಿ ಬೀಸುತ್ತಾ ಬರುತ್ತಾನೆ. ಚಿತ್ರವಿಚಿತ್ರಗಳನ್ನು ಸೃಷ್ಟಿಸುತ್ತಾ ನಡೆಯುತ್ತಿದ್ದಾನೆ. ಮೊದಲು ಊರಿನ ದಿಡ್ಡಿಬಾಗಿಲು ಪ್ರವೇಶಿಸುತ್ತಾನೆ. ಊರ ಗಲ್ಲಿಗಳ ತುಂಬಾ ಅಡ್ಡಾಡುತ್ತಾನೆ. ಕುಣಿಯುತ್ತಾನೆ. ಓಡುತ್ತಾನೆ. ಮಾಂತ್ರಿಕನ ಹಾಗೆ ನಡೆಯುತ್ತಾನೆ. ಒಮ್ಮೊಮ್ಮೆ ತೆವಳುತ್ತಾನೆ… ಮೆಲ್ಲಗೆ ಮನೆಯೊಳಗೆ ಲಗ್ಗೆ ಇಡುತ್ತಾನೆ. ಕಿಟಕಿಯ ಪೊಳಕುಗಳಿಂದ ಕೋಣೆಗಳಲ್ಲೂ ಇಣುಕುತ್ತಾನೆ. ಕೈಯಲ್ಲಿ ಗಾಳಿಗುದ್ದಾಟ ನಡೆಸುತ್ತಲೇ ಇದ್ದಾನೆ. ಅವನು ಮಾತನಾಡುತ್ತಿಲ್ಲ. ಬಹುಷಃ ಅವನಿಗೆ ಭಾಷೆಯಿಲ್ಲ. ಅಥವಾ ಅವನಿಗೆ ಇಡೀ ಪ್ರಪಂಚದ  ಭಾಷೆಯೆಲ್ಲಾ ಒಂದೇ ಎನಿಸುತ್ತಿರಬಹುದು…  ಅದೆಷ್ಟೋ ಹೊತ್ತು ಕನ್ನಡಿಯ ಮುಂದೆ ಕುಳಿತುಕೊಳ್ಳುತ್ತಾನೆ. ಮಹಾಮೌನದದಲ್ಲಿ ತನ್ನ ಪ್ರತಿಬಿಂಬವನ್ನೇ ನೋಡುತ್ತಾ ಕೈಗೋಲನ್ನು ಮತ್ತೆ ಆಡಿಸುವಾಗ ಅದು ಎರಡಾಗುವ ಚಮತ್ಕಾರವನ್ನು ಕಂಡು ಜೋರಾಗಿ ನಗುತ್ತಾನೆ. ಅದೇ ಹೊತ್ತಿಗೆ ನಾನವನನ್ನು ನೋಡಿಬಿಡುತ್ತೇನೆ. ಅವನೂ ನನ್ನನ್ನು ನೋಡಿ ಮುಗುಳ್ನಕ್ಕು ನನ್ನ ಮುಂದೆ ಅವನ ಕೈಗೋಲನ್ನು ವೃತ್ತಾಕಾರವಾಗಿ ತಿರುಗಿಸುತ್ತಾನೆ. ಅವನನ್ನು ಕರೆಯಲು ನನಗೆ ಮಾತು ಬರುವುದಿಲ್ಲ. ನಾಲಗೆಯ ತುದಿವರೆಗೂ ಬಂದದ್ದು ಮಾತಾಗುವುದಿಲ್ಲ. ಇನ್ನೇನು ಮಾತಾಯಿತು ಎನ್ನುವಲ್ಲಿಗೆ ಮುಗಿಲುsss ಎಂದು ಜೋರಾಗಿ ಕೂಗಿ ಎಚ್ಚರಾಗುತ್ತೇನೆ. ಕಣ್ಣು ಬಿಟ್ಟಾಗ ಏದುಸಿರು ಬಿಡುತ್ತಿರುತ್ತೇನೆ. ಹಣೆಯ ಮೇಲೆ ಬೆವರಿನ ಹನಿಗಳು ಕಿತ್ತು ಬರುತ್ತವೆ. ಇವರು ಪ್ರತಿದಿನ ಅದೇ ಸಮಾಧಾನದಿಂದ ಎದ್ದು ನನ್ನ ಬೆನ್ನದಡವಿ ನೀರು ಕೊಟ್ಟು ಸ್ವಲ್ಪ ಹೊತ್ತು ದಿಂಬಿಗಾನಿಸಿ ಕೂರಿಸಿ ದೊಡ್ಡ ದೀಪ ಹತ್ತಿಸಿ ಫ್ಯಾನನ್ನು ಚೂರು ಜೋರು ಮಾಡಿ ಬೆನ್ನದಡವುತ್ತಾ ನಿದ್ದೆ ಹೋಗುತ್ತಾರೆ. ನಾನು ಅದೆಷ್ಟೋ ಹೊತ್ತು ಕೂತೆ ಇರುತ್ತೇನೆ.

*** 

ನನಗಿದನ್ನೆಲ್ಲಾ ಖಂಡಿತಾ ಬರೆಯಬೇಕಿರಲಿಲ್ಲ. ಏಕೆಂದರೆ ನನಗೆ ಇತ್ತೀಚಿಗೆ ನನ್ನ ಗಂಡನ ಹಾಗೆ ಈ ಜಗತ್ತನ್ನು ಉದ್ಧರಿಸಬೇಕೆನ್ನುವ ಯಾವ ಹಕೀಕತ್ತೂ ಇಲ್ಲ. ಅವರ ಹಾಗೆ ನಾನೀಗ ಪೊಲಿಟಿಕಲ್ ಜೀವಿಯೂ ಅಲ್ಲ. ಜಗತ್ತು ಕರೆಯುವ ಹಾಗೆ ಆಂದೋಲನ ಜೀವಿಯೂ ಅಲ್ಲ. ನಾನೊಬ್ಬಳು ತಾಯಿ. ಕೇವಲ ತಾಯಿ. ಅದರ ಬಗ್ಗೆಯೂ ನನಗೆ ಗೊಂದಲವಿದೆ. ನನ್ನನ್ನು ಇದನ್ನೆಲ್ಲಾ ಬರೆಯಹಚ್ಚಿರುವುದು ನನ್ನ ಥೆರಪಿಸ್ಟ್ ಸುಮಾ. ಮತ್ತೆ ಮತ್ತೆ ಕನಸಿನಲ್ಲಿ ಸುಳಿಯುವ ಆ ಹುಡುಗನ ಚಿತ್ರ. ನಿದ್ದೆ ಇಲ್ಲದ ರಾತ್ರಿಗಳು. ಭಯ. ಇವೆಲ್ಲದರಿಂದ ಹೊರಬರಲು ಬರೆವುದೊಂದೇ ದಾರಿ ಅಂದಳು ಸುಮಾ!  ಚಳುವಳಿಗಳ ಕರಪತ್ರಗಳ ಕಂಟೆಂಟನ್ನು ಸಲೀಸಾಗಿ ಬರೆಯುತ್ತಿದ್ದ ನಾನು ನನ್ನ ಡೈರಿಯನ್ನು ದಿನನಿತ್ಯ ಬರೆಯಲೇ ಇಲ್ಲ. ‘ಭೂಮಿ ಪ್ರಕಾಶನ’ ಸಂಸ್ಥೆಯ ಒಡತಿಯಾದ ಮೇಲೂ ಅದೆಷ್ಟೇ ಪುಸ್ತಕಗಳನ್ನು ಓದಿದರೂ, ನಮ್ಮ ಪ್ರಕಾಶನ ಸಂಸ್ಥೆಯಿಂದ ಬೆಳಕಿಗೆ ಬಂದ ಪುಸ್ತಕಗಳಿಗೆ ಪ್ರಕಾಶಕಿಯ ಮಾತುಗಳನ್ನು ಬರೆಯುವಾಗಲೂ ಅದು ನನ್ನ ಖಾಸಗಿ ಬದುಕಿನ ವಿಮರ್ಶೆಯ ಹತ್ತಿರಕ್ಕೂ ಸುಳಿಯಲಿಲ್ಲ. ಅಥವಾ ಅದರಿಂದ ದೂರವಿರುವ ಪುಸ್ತಕಗಳನ್ನು ಮಾತ್ರ ನಾನು ಪ್ರಕಾಶಿಸಿದೆನೆ? ಜಗತ್ತಿನಲ್ಲಿ ಎರಡೇ ಇರುವುದು ಒಂದು ಪಂಜರ ಮತ್ತೊಂದು ಅದರಿಂದ ತಪ್ಪಿಸಿಕೊಳ್ಳುವುದು. ಟ್ರ್ಯಾಪ್ ಅಂಡ್ ಎಸ್ಕೇಪ್. ಮತ್ತದಕ್ಕೆ ನಾವು ಕೊಟ್ಟುಕೊಳ್ಳುವ ಕಾರಣಗಳು. ನಾನು ನನ್ನಿಂದ ಬರಿ ತಪ್ಪಿಸಿಕೊಂಡು ಬಂದೆನೆ? ಹೊರಗಡೆಯಿಂದ ನೋಡಿದಾಗ ಎಲ್ಲಾ ಸರಿಯಾಗಿಯೇ ಇದೆ ಅನಿಸುತ್ತದಲ್ಲ! ಈಗ ಮಕ್ಕಳಿಬ್ಬರು ಬೆಳೆದು ದೊಡ್ಡವರಾಗಿ ಕೇಳುವ ಪ್ರಶ್ನೆಗಳು ನನ್ನ ಇಡೀ ಜೀವನವನ್ನು ಅಣಕಿಸುವ ಸಂದರ್ಭ ಬಂದಿದೆಯಾದ್ದರಿಂದ ಈಗ ಬರೆಯದೆ ವಿಧಿಯಿಲ್ಲವೆನಿಸುತ್ತಿದೆಯೇ?  ನನ್ನ ಅಸ್ತಿತ್ವವನ್ನು ಮರು ಕಟ್ಟಿಕೊಳ್ಳುವುದು ಎಂದರೆ ಬರೆಯುವುದು ಎಂದರ್ಥವೇ? ಈಗ ಎಲ್ಲದಕ್ಕೂ ಕಾರಣಗಳನ್ನು ಹೆಕ್ಕಿಕೊಳ್ಳಬೇಕೇ? ಅದಕ್ಕಿದು ತಕ್ಕನಾದ ವಯಸ್ಸೇ? ಹೀಗೆ ಯೋಚಿಸುವಾಗ ಸುಮಾ ಹೇಳಿದ್ದು ನೆನಪಾಗುತ್ತದೆ ‘ಯು ಜಸ್ಟ್ ರೈಟ್ ಭಾಗೀರಥಿ. ಜಸ್ಟ್ ರೈಟ್ ಫಾರ್ ಯುವರ್ ಸೆಲ್ಫ್’. ಅಥವಾ ಕನಸಿನಲ್ಲಿ ಬರುವ ಆ ಹುಡುಗ ಬರೆಯಲೇ ಬೇಕೆಂದು ಹಠ ಹಿಡಿದಿದ್ದಾನೆಯೇ? ನಾನು ಯಾವುದಕ್ಕಾಗಿ ಬರೆಯುತ್ತೇನೆ? 

*** 

ನಾನು ಭಾಗೀರಥಿ. ಗಂಡನ ಹೆಸರು ಪ್ರಸಾದ್. ನಮಗಿಬ್ಬರು ಮಕ್ಕಳು ಭೂಮಿ ಮತ್ತು ಮುಗಿಲು. ಮನೆಯಲ್ಲಿ ವಸು ಚಿಕ್ಕಿ ಕೂಡ ಇದ್ದಾರೆ. ನಾನೊಂದು ಪ್ರಕಾಶನ ಸಂಸ್ಥೆ ನಡೆಸುತ್ತೇನೆ. ಭೂಮಿ ಪ್ರಕಾಶನ. ಅದು ಮೊದಲ ಮಗಳ ಮುದ್ದಿನ ಕಾರಣಕ್ಕೆ ಇಟ್ಟ ಹೆಸರು. ಮುಗಿಲು ನನ್ನ ಮಗ. ಮದುವೆಯ ವಯಸ್ಸಾಗಿದೆ. ಪ್ರಸಾದ್ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಆರ್. ಟಿ. ನಗರದ ಮುಖ್ಯಮಂತ್ರಿಗಳ ಖಾಸಗಿ ಮನೆಯಿಂದ ಒಂದು ಮುನ್ನೂರು ಮೀಟರ್ ದಾಟಿದರೆ ನಮ್ಮ ಮನೆ. ಸ್ವಿಮ್ಮಿಂಗ್ ಪೂಲ್ ಇರುವ ಮನೆ. ಮುಗಿಲು ಹುಟ್ಟಿದ ಮೇಲೆ ಈ ಮನೆಗೆ ಬಂದದ್ದು! ಪ್ರಸಾದ್ ಮತ್ತೆ ನಾನು ವಿಶ್ವವಿದ್ಯಾಲಯದಿಂದ ಸ್ನೇಹಿತರು. ಆಗಿನಿಂದಲೇ ನಾವು ಜನಪರ ಚಳುವಳಿಗಳಲ್ಲಿ, ವಿದ್ಯಾರ್ಥಿ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದೆವು. ವಿದ್ಯಾರ್ಥಿ ಸಂಘಟನೆಗಳ, ಸಾಂಸ್ಕೃತಿಕ ಸಂಘಗಳ ನಾಯಕರಾಗಿದ್ದ ನಾವು ಪ್ರೇಮಿಗಳೂ ಆದೆವು. ಕ್ರಾಂತಿಯ ಕಿಚ್ಚು ಪ್ರೇಮದ ಕಿಚ್ಚು ಒಳಗೊಳಗೇ ಇಬ್ಬರನ್ನೂ ಭಸ್ಮ ಮಾಡುತ್ತಿತ್ತು. ವಾರಕ್ಕೊಮ್ಮೆ ಹೋಟೆಲ್ ರೂಮುಗಳಲ್ಲಿ ಒಬ್ಬರ ತೆಕ್ಕೆಯಲ್ಲಿ ಮತ್ತೊಬ್ಬರು ಒಂದಾಗುವಾಗ ನಾವೇ ಶಿವ ಶಿವೆಯರೆಂದರೆನಿಸಿಹೋಗುತ್ತಿತ್ತು. ಇಬ್ಬರಿಗೂ ಮದುವೆ ಎನ್ನುವ ವಿಷಯದಲ್ಲಿ ನಂಬಿಕೆಯಿರಲಿಲ್ಲ. ಹೇಗೂ ಒಟ್ಟಿಗೆ ಇರುವುದೇ ನಿಜವೆಂದ ಮೇಲೆ ಮದುವೆಯಾಗುವುದರಲ್ಲಿ ತಪ್ಪೇನು ಅಂದುಕೊಳ್ಳುವಾಗಲೇ ಮದುವೆಯೂ ಆಯಿತು. ನನ್ನ ಮತ್ತು ಅವನ ನಡುವೆ ಮೊದಲ ಬಾರಿಗೆ ಮನಸ್ತಾಪ ಬಂದಿದ್ದು ಮಗುವಿನ ವಿಷಯದಲ್ಲಿ. ನನಗೆ ಮಕ್ಕಳೆಂದರೆ ಆಗುತ್ತಿರಲಿಲ್ಲ. ನನ್ನ ದೇಹದಿಂದ ಏನೋ ಒಂದು ಹೊರಗಡೆ ಬರುತ್ತದೆ ಎನ್ನುವ ಕಲ್ಪನೆಯೇ ನನ್ನ ದೇಹದಲ್ಲಿ ಮುಳ್ಳು ಮೂಡಿಸುತ್ತಿತ್ತು. ಆದರೆ ಪ್ರಸಾದನಿಗೆ ಮಕ್ಕಳೆಂದರೆ ಪಂಚಪ್ರಾಣ. ಇಂತಹ ಕೆಟ್ಟ ಪ್ರಪಂಚದಲ್ಲಿ ಮಕ್ಕಳನ್ನು ಹುಟ್ಟಿಸುವ ಐಡಿಯಾಕ್ಕೇನೆ ಹೆದರುತ್ತಿದ್ದನಾದರೂ ಒಳಗೊಳಗೇ ಮಗು ಇದ್ದರೆ ಚೆನ್ನ ಎನಿಸುವ ಇರಾದೆಯೂ ಇತ್ತು. ಕೊನೆಗೂ ಈ ದ್ವಂದ್ವವನ್ನು ದಾಟಿ ನಮಗೆ ಮಕ್ಕಳಾಯಿತು. ಇಷ್ಟು ಬರೆದು ಕನ್ನಡಿಯನ್ನು ನೋಡಿದೆ. ಆ ಕೈಗೋಲಿನ ಹುಡುಗ ಕನ್ನಡಿ ನೋಡುತ್ತಾ ಮುಗುಳ್ನಗುತ್ತಿದ್ದ. 

*** 

ಮೊನ್ನೆ ಇವರು ಫೋನಿನಲ್ಲಿ ಜೋರಾಗಿ ಕೂಗುತ್ತಿದ್ದರು. ‘ಏನ್ರೋ ಇವತ್ತು ಫುಲ್ ಐಟಿ ಸೆಲ್ ನನ್ನ ಟಾರ್ಗೆಟ್ ಮಾಡ್ತಿದೆ. ಏನ್ ಸಮಾಚಾರ? ನಾನು ಮೊನ್ನೆ ಹಾಕಿದ ಪೋಸ್ಟ್ ಇಂದ ಫುಲ್ ಉರಿದು ಹೋಗಿದ್ಯಾ? ಇರ್ಲಾ! ನಾನೂ ನೋಡಿಕೊಳ್ತೀನಿ.’ ಎಂದು ಜೋರಾಗಿ ವದರಿ ಫೋನಿಟ್ಟರು. ಇಡೀ ಸೋಶಿಯಲ್ ನೆಟ್ವರ್ಕಿಂಗ್ ಸೈಟ್ ತುಂಬಾ ಇವರ ವೈಯಕ್ತಿಕ ಜೀವನದ ಬಗ್ಗೆ ಹೊಲಸು ಬರೆದಿದ್ದರು. ಇವರು ಬೈ ಸೆಕ್ಷುಯಲ್ ಎನ್ನುವ ವಿಷಯ ಹೇಗೋ ತಿಳಿದು ಇವರ ಗೇ ಬಾಯ್ ಫ್ರೆಂಡ್ ಜೊತೆ ಇದ್ದ ಫೋಟೋಗಳನ್ನು ಸೆರೆ ಹಿಡಿದು ಅವೆಲ್ಲ ಕಡೆ ಹರಿದಾಡುತ್ತಿದ್ದವು. ಇವೆಲ್ಲದರಲ್ಲಿ ಪಾಪ ಆ ಹುಡುಗ ಸಿಕ್ಕಿಹಾಕಿಕೊಂಡಿದ್ದ. ಆಗ ಆ ಹುಡುಗನ ಖಾಸಗಿತನದ ಬಗ್ಗೆ ಯಾರೂ ಕಿಂಚಿತ್ ಯೋಚನೆಯನ್ನೂ ಮಾಡಿರಲಿಲ್ಲ. ನನ್ನ ಮೇಲೆ ಕಾಳಜಿ ತೋರಿ ಒಂದಿಷ್ಟು ಪೋಸ್ಟುಗಳೂ ಕೂಡ ಬಂದಿದ್ದವು. ನನಗೇ ಇಲ್ಲದ ಸಮಸ್ಯೆ ಇವರಿಗೆ ಅದು ಹೇಗೋ ಹುಟ್ಟಿಕೊಂಡಿತ್ತು?! ಇಲ್ಲ ಇಲ್ಲ, ನನಗೆ ಆಗಾಗ ಹೊಟ್ಟೆಕಿಚ್ಚಾಗುತ್ತಿತ್ತು. ಒಬ್ಬರನ್ನು ಹಂಚಿಕೊಳ್ಳುವುದು ತುಂಬಾ ಕಷ್ಟ. ಅದು ನಮ್ಮ ಪ್ರೀತಿ ಪಾತ್ರರನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳುವುದು ಆಗುವುದೇ ಇಲ್ಲ. ಆಮೇಲೆ ಈ ಹೊಟ್ಟೆಕಿಚ್ಚನ್ನು ನಿಯಂತ್ರಿಸೋದು ಎಷ್ಟು ಕಷ್ಟ?! ಗೋಡೆಗೆ ತಟ್ಟಿದ ಸಗಣಿ ಬೆರಣಿಯ ಹಾಗೆ ಮುಖದ ಮೇಲೆ ಕಾಣುತ್ತದೆ. (ಇದಿಷ್ಟು ನಿಜವನ್ನು ಒಪ್ಪಿಕೊಳ್ಳದೆ ಇದ್ದರೆ ನನಗಷ್ಟೇ ಕಾಣುವ ಹುಡುಗನಿಗೆ ಕೋಪ ಬರುತ್ತಿತ್ತು. ಅವನಾಗ ನನ್ನತ್ತ ತಿರುಗಿ ತನ್ನ ಮಂತ್ರದಂಡವನ್ನು ಪ್ರಯೋಗ ಮಾಡಿದ್ದರೆ?! ಭಯ!!! )  ಹಾಗಂತ ಇವರೇನೂ ಸಾಚಾ ಅಂತೇನೂ ನಾನು ಹೇಳುತ್ತಿಲ್ಲ. ಮತ್ತೊಮ್ಮೆ ಯಾರೋ ಇವರ ಫ್ರೆಂಡ್ ಮನೆಗೆ ಬಂದಾಗ ‘ಆ ರಾಜಕಾರಣಿದು ಬಹಳ ಆಗಿದೆ ಮಾರ್ರೆ. ಆ ಮನುಷ್ಯ ಹೆಣ್ಣುಮಕ್ಕಳ ವಿಷ್ಯದಲ್ಲಿ ತುಂಬಾ ವೀಕಂತೆ! ಚೂರು ವಿಚಾರಿಸಿ ಹೇಳಿ. ಹನಿ ಟ್ರ್ಯಾಪ್ ವ್ಯವಸ್ಥೆ ಮಾಡುವ!’ ಎಂದು ಹೇಳಿದ್ದನ್ನ ನಾನೇ ಕೇಳಿಸಿಕೊಂಡಿದ್ದೇನೆ. ನನಗೀಗ ಭಯ. ಎಲ್ಲಿ ಏನಾಗಿಬಿಡುತ್ತದೋ ಎನ್ನುವ ಭಯ. ನಾನು ಮೊದಮೊದಲಿಗೆ ತುಂಬಾ ಧೈರ್ಯವಂತೆಯಾಗಿದ್ದೆ. ಮಕ್ಕಳು ಹುಟ್ಟಿದ ಮೇಲೆ ನಾನಿಷ್ಟು ಮೆತ್ತಗಾದೆನೆ? ತಾಯಿಯಾಗುವುದೆಂದರೆ ಅಳ್ಳಕವಾಗುವುದೇ? ನನ್ನ ಮತ್ತು ಪ್ರಸಾದ್ ನಡುವೆ ಹೇಳತೀರದ ಒಂದು ಪವರ್ ಡೈನಾಮಿಕ್ಸ್ ಯಾಕೆ ಮೂಡುತ್ತಿದೆ? ಅದಕ್ಕೆ ನಾನೇ ಅವಕಾಶ ಮಾಡಿಕೊಡುತ್ತಿರುವೆನೆ? ತಾಯಿಯಾದಾಗಿನಿಂದಲೇ ಇದೆಲ್ಲ ಶುರುವಾಯಿತೇ? ಅಥವಾ ಇದು ಪ್ರಸಾದನ ಹುನ್ನಾರ ಮಾತ್ರವಲ್ಲ ಅಲ್ಲವೇ?!! ತಾಯಿಯಾದರೂ ನಾನು ನಿಜವಾದ ತಾಯಿಯಾದೆನೆ?  

ಹುಡುಗ ಅದ್ಯಾಕೋ ಚೂರು ಹೊತ್ತು ಆ ಕಡ್ಡಿ ಆಡಿಸುವುದನ್ನು ನಿಲ್ಲಿಸಿ ಕನ್ನಡಿಯ ಶೂನ್ಯದೊಳಗೆ ದಿಟ್ಟಿಸಿದ. 

***

ಪ್ರಸಾದನ ರಾಜಕೀಯ ಜೀವನ ಉನ್ನತ ಮಟ್ಟಕ್ಕೆ ಹೋಗುವುದಿತ್ತು. ಇದರ ನಡುವೆ ಅವನ ಖಾಸಗಿ ಜೀವನದ ದೃಶ್ಯಗಳು ಹೊರಬಂದಿದ್ದವು. ರಾಜಕಾರಣದಲ್ಲಿ ಒಳಗೊಳಗೆ ಏನಾದರೂ ಮಾಡಿಕೋ ಆದರೆ ಹೊರಗಡೆ ಬಂದರೆ ಅದನ್ನು ವೋಟ್ ಬ್ಯಾಂಕಿಗೆ ಪೂರಕವಾಗಿ ಬಳಸುವ ಅವಕಾಶ ಅದಕ್ಕಿರಬೇಕು. ಪಕ್ಷಕ್ಕೆ ಅದು ಮುಜುಗರ ತರಿಸುವ ವಿಷಯವಾಗಿರಬಾರದು ಎನ್ನುವುದು ತೀರಾ ಕಾಮನ್ ಸೆನ್ಸ್ ಮಟ್ಟಿಗಿನ ವಿಷಯವೇ! ಇವರ ದೃಶ್ಯಗಳು ಹೊರಗಡೆ ಬಂದಾಗ ಇವರು ತುಂಬಾ ಒದ್ದಾಡಿ ಹೋಗಿದ್ದರು. ನಾನೇ ‘ ‘ನಿಮ್ಮ ಓರಿಯಂಟೇಷನ್ ಬಗ್ಗೆ ಮೊದಲೇ ಗೊತ್ತಿತ್ತು. ಲೆಟ್ಸ್ ಗೆಟೌಟ್ ಆಫ್ ಬೈಫೋಬಿಯಾ! ಬೈಫೋಬಿಯಾ ಈಸ್ ನಾಟ್ ಅ ಫೇಸ್. ಇಟ್ಸ್ ಅ ಚಾಯ್ಸ್ ಅಂತ ನಾನು ಟ್ವಿಟರಿನಲ್ಲಿ ಹಾಕಬಲ್ಲೆ. ಅದು ನನ್ನ ಪಬ್ಲಿಷಿಂಗ್ ಜೀವನಕ್ಕೆ ಯಾವುದೇ ತೊಂದರೆ ಮಾಡಲ್ಲ. ಅದಕ್ಕಿಂತ ಹೆಚ್ಚಿಗೆ ನನಗೆ ಮಾಡಕ್ಕಾಗಲ್ಲ.’ ಎಂದೆ. ಹಾಗೆ ಮಾಡಿದೆ ಕೂಡ. ಅದಾದ ಮೇಲೆ ಅವರಿಗೇ ಸಮಸ್ಯೆ ಇಲ್ಲವೆಂದ ಮೇಲೆ ನಮಗೇನು ಎಂದು ಸುಮ್ಮನೆ ಬಿಟ್ಟಿತ್ತಾದರೂ ಇವರನ್ನು ಸಂಶಯಾಸ್ಪದ ದೃಷ್ಟಿಯಿಂದ ನೋಡುವುದು ಇದ್ದೇ ಇತ್ತು. ಕಡೆಗೆ ಅವರ ಪಕ್ಷ ಪ್ರಸಾದನ ಲೈಂಗಿಕ ಅಸ್ಮಿತೆಯನ್ನೂ ಒಂದು ರಾಜಕಾರಣದ ದಾಳವಾಗಿ ಬಳಸಿತ್ತು. ‘ದಿ ಫಸ್ಟ್ ಕ್ವೀರ್ ಪರ್ಸನ್ ಟು ಗೆಟ್ ಟಿಕೆಟ್.’ ಎಂದು ಘೋಷಿಸಿತ್ತು. ಇವೆಲ್ಲವೂ ರಾಜಕೀಯ ಜೀವನವನ್ನು ಸಲೀಸು ಮಾಡಿತ್ತು. ಈ ನಡುವೆ ಭೂಮಿ ಮತ್ತು ಮುಗಿಲು ವಿಷಯ ಕೂಡ ಮೀಡಿಯಾದಿಂದ ಹೊರಗಡೆ ಬಂದರೆ ಅದನ್ನು ಎದುರಿಸುವುದು ಹೇಗೆ ಎನ್ನವುದು ಪ್ರಸಾದನ ಹೊಸ ತಲೆನೋವಾಗಿತ್ತು. ಅದಕ್ಕೆ ಸರಿಯಾಗಿ ಮುಗಿಲು ನಮ್ಮ ಮನೆ ಬಿಟ್ಟು ಹೊರಟು ಹೋಗಿದ್ದ. 

ಹುಡುಗ ಈಗ ತನ್ನ ಕೈಗೋಲಿನ ಮೇಲೆ ಬಿದ್ದ ಧೂಳನ್ನು ಬಾಯಿಯಿಂದ ಊದಿ ತೆಗೆಯುತ್ತಿದ್ದ. 

***

ನನಗೆ ಮೊದಲ ಹೆರಿಗೆಯಾದ ದಿನ ಅಷ್ಟೊಂದು ಸಂತಸ ಇಡೀ ಆಸ್ಪತ್ರೆಯಲ್ಲಿ ಇರಲಿಲ್ಲ. ನರ್ಸ್ ಮೆತ್ತಗೆ ಬಂದು ಅವಳ ಲೋಕಲ್ ಭಾಷೆಯಲ್ಲಿ ‘ಈ ಮಗುಗೆ ಏನಿದೆ ಅಂತಾನೆ ಗೊತ್ತಾಗ್ತಾ ಇಲ್ಲ, ಪಾಪ!’ ಎಂದು ಬೇಜಾರಿನಲ್ಲೊ, ಹೇವರಿಕೆಯಲ್ಲೊ, ಕೊಂಕಿನಲ್ಲೊ, ಹಾಸ್ಯದಲ್ಲೊ ಮತ್ತೇನೋ ಭಾವದಲ್ಲಿ ಹೇಳಿದ್ದಳು. ಅವಳ ಮುಖಭಾವ ಏನಾಗಿತ್ತು ಎಂಬುದು ನನಗೆ ಇವತ್ತಿಗೂ ಅರ್ಥವಾಗಿಲ್ಲ. ನಾನಾಗ ‘ನನ್ನ ಕೂಸೆಲ್ಲಿ?’ ಎಂದು ಕೇಳಿದೆ. ಮೆಲ್ಲಗೆ ಅದಕ್ಕೆ ಸುತ್ತಿದ್ದ ಬಟ್ಟೆ ತೆಗೆದು ನೋಡಿದರೆ ಜನನಾಂಗ ಪೂರ್ತಿ ಬೆಳೆದಿರಲಿಲ್ಲ. ಅದು ಹುಡುಗನ ಶಿಶ್ನದಂತೆ ಕಾಣುತ್ತಿದ್ದರೂ ಅದು ಯೋನಿಯೊ ಶಿಶ್ನವೋ ತಿಳಿಯುತ್ತಿರಲಿಲ್ಲ. ನನ್ನ ಕಣ್ಣುಗಳಲ್ಲಿ ಧಾರಾಕಾರ ನೀರು. ಮೊದಲ ಬಾರಿಗೆ ‘ಅಯ್ಯೋ ಶಿವನೇ!’ ಎನ್ನುವ ಉದ್ಘಾರ ನನ್ನಿಂದ ಹೊರಬಿದ್ದಿತ್ತು. ಆ ಅಯ್ಯೋ ಶಿವನೇ ಎಂದದ್ದು ಮಗುವಿನ ಮೇಲಿನ ಕನಿಕರದಿಂದಲಾ ಅಥವಾ ನನ್ನನ್ನು ಯಾಕೆ ಇಂಥ ಘೋರವಾದ ಪರಿಸ್ಥಿತಿಯ ಪಾಲುದಾರಳನ್ನಾಗಿ ಮಾಡಿದೆ ಎನ್ನುವ ಕಾರಣದಿಂದಲಾ? ನಾನೊಬ್ಬ ವಿಚಿತ್ರವಾದ ಕೂಸನ್ನು ಹೆತ್ತೆ ಎನ್ನುವ ಭಾವದಿಂದಲಾ? ಏನೇ ಆಗಲಿ ನನ್ನ ಈ ಕೂಸನ್ನು ಬೆಳೆಸಬೇಕು ಎನ್ನುವ ಜಿದ್ದಿನಿಂದಲಾ? ಯಾಕೆ ನಾನು ಅಯ್ಯೋ ಶಿವನೇ ಎಂದಿದ್ದೆ? ನನ್ನ ಮೇಲೆ ಅಗಾಧ ಪ್ರೀತಿ ಇದೆ ಎಂದುಕೊಂಡಿದ್ದ ನನ್ನ ಶಿವ ಅದೆಷ್ಟೋ ಹೊತ್ತು ನನ್ನ ಹತ್ತಿರ ಸುಳಿಯಲೇ ಇಲ್ಲ. ನಮ್ಮ ನಡುವಿನ ಮೊದಲ ಮೌನದ ಬಿರುಕು ಅಲ್ಲಿಂದಲೇ ಆರಂಭವಾಗಿತ್ತು. ಅದರಾಚೆಗೆ ನನ್ನೊಳಗೊಬ್ಬ ತಾಯಿ ಹುಟ್ಟಿದ್ದಳು. ಅಥವಾ ನನ್ನೊಳಗಿನ ಜಿದ್ದಿಗೆ ತಾಯಿ ಎನ್ನುವ ಭಾವ ಅಂಟಿಸಿಕೊಂಡೆನಾ? ಡಾಕ್ಟರ್ ಬಂದು ಯು ಹ್ಯಾವ್ ಆನ್ ಇಂಟೆರ್ ಸೆಕ್ಸ್ ಕಿಡ್.  ಪ್ರತಿ ಐವತ್ತು ಸಾವಿರದಲ್ಲಿ ಒಂದು ಮಗು ಹೀಗಾಗುತ್ತದೆ. ತುಂಬಾ ಸುಲಭದ ಆಯ್ಕೆಯೆಂದರೆ ಶಿಶ್ನವನ್ನು ಸರ್ಜರಿಯ ಮೂಲಕ ತೆಗೆದು ಯೋನಿ ಆಗಿಸುವುದು. ಚಿಕ್ಕ ವಯಸ್ಸಾದ್ದರಿಂದ ಬೇಗನೆ ಗುಣವಾಗುತ್ತದೆ ಎಂದರು. ಪ್ರಸಾದನಿಗೆ ನನ್ನ ಮೇಲೆ ಹೇಳಲಾಗದ ಹೇವರಿಕೆಯೋ ಏನೋ ಕಡೆಗೂ ಒಪ್ಪಿದ. ಅಸಾಧ್ಯ ಮೌನಗಳ ನಡುವೆ ಮಗುವಿಗೆ ಸರ್ಜರಿ ಆಯಿತು. ಅದಕ್ಕೆ ಭೂಮಿ ಎಂದು ಹೆಸರಿಟ್ಟೆವು. ನನಗೆ ಭೂಮಿ ಮೇಲೆ ಇನ್ನಿಲ್ಲದ ಮುದ್ದು. ಅಥವಾ ಪ್ರಸಾದ್ ಗೆ ಭೂಮಿಯ ಮೇಲೆ ಅಸಡ್ಡೆಯಿದ್ದದ್ದರಿಂದ ನಾನು ಮುದ್ದುವನ್ನು ನನ್ನ ಮೇಲೆ ಹೇರಿಕೊಂಡೆನೇ? ಯೋಚಿಸಿದರೆ ಕಾರಣಗಳು ಗೋಜಲು ಗೋಜಲು. 

ಹುಡುಗ ಕನ್ನಡಿಯನ್ನು ಕ್ಯಾನ್ವಾಸ್ ಆಗಿಸಿ ಕೈಗೋಲನ್ನು ಬ್ರಷ್ ಮಾಡಿಕೊಂಡು ಅದರ ಮೇಲೆ ಚಿತ್ರ ಬಿಡಿಸುತ್ತಿದ್ದ. ಅದರ ಮೇಲೆ ಯಾವ ಬಣ್ಣವೂ ಮೂಡುತ್ತಿರಲಿಲ್ಲ. ಅಥವಾ ನನಗದು ಕಾಣುತ್ತಿರಲಿಲ್ಲ. 

*** 

ಒಂದಿಷ್ಟು ಕಾಲ ನನ್ನ ಮತ್ತು ಪ್ರಸಾದ್ ನಡುವೆ ಈಗೀಗ ಸಹಿಸಲಸಾಧ್ಯವಾದ ಮೌನ ತುಂಬಿಹೋಗಿತ್ತು.  ಒಂದು ಇಂಟೆರ್ ಸೆಕ್ಸ್ ಚೈಲ್ಡ್ ಎಂದಾಗ ಹಾರ್ಡ್ ಕೋರ್ ಪ್ರೊಗ್ರೆಸ್ಸಿವ್ ಆಗಿದ್ದ ಪ್ರಸಾದ್, ತಾನೊಬ್ಬ ಬೈ ಸೆಕ್ಷುಯಲ್ ಎನ್ನುವ ವಿಚಾರವೇ ಅವನ ರಾಜಕಾರಣದ ಪ್ರಯಾಣಕ್ಕೆ ವರ ಮಾಡಿಕೊಂಡ ಮನುಷ್ಯ ಈ ಹೊತ್ತಿನಲ್ಲಿ ಇಲ್ಲವಾಗಿದ್ದ. ಅಥವಾ ಅವನೊಳಗೂ ಒಂದು ಅಂತರ್ಯುದ್ಧ ನಡೆಯುತ್ತಿದ್ದಿರಬಹುದೇ? ಮಾತುಗಳು ನಿಂತಾಗ ಮೌನದೊಳಗೆ ಅಡಗಿ ಕುಳಿತ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನಾನು ಭೂಮಿಯನ್ನು ನಿರ್ವಹಿಸುತ್ತಲೇ ಭೂಮಿ ಪ್ರಕಾಶನವನ್ನೂ ಕಟ್ಟಿದೆ. ಅದ್ಯಾಕೋ ಭೂಮಿ ಹುಡುಗರ ಡ್ರೆಸ್ಸನ್ನ ಹಾಕಿಕೊಳ್ಳುವುದನ್ನೇ ಇಷ್ಟ ಪಡುತ್ತಿದ್ದಳು. ಪ್ರಸಾದನನ್ನ ಕೇಳಿದರೆ ನಮಗೆ ‘ಅವಳಿಗೆ ಹೇಗೆ ಬೇಕೋ ಹಾಗಿರಲಿ ಭಾಗಿ. ಒತ್ತಾಯ ಮಾಡ್ಬೇಡ.’ ಎಂದನಾದರೂ ಅವನ ಹಿಂದಿನ ಮಾತಿನ ಅರ್ಥ ನನಗೆ ಈ ಅಂತರ್ಲಿಂಗಿ ಮಗುವಿನ ಬಗ್ಗೆ ಹೇಳದೆ ಇದ್ದರೇನೇ ಒಳ್ಳೇದು ಅನ್ನುವ ಅರ್ಥವಿತ್ತೇ?! ನನಗೆ ಈ ನಡುವೆ ಮಗು, ಇವರ ರಾಜಕಾರಣ, ಪ್ರಕಾಶನ ಸಂಸ್ಥೆ, ಮನೆಗೆಲಸ ಎಲ್ಲವೂ ಒಂದು ರೀತಿ ಮಗ್ಗುಲು ಮಾಡುತ್ತಿದ್ದವು. ಮನೆಯಲ್ಲಿ ಸಹಾಯಕ್ಕೆಂದು ವಸು ಚಿಕ್ಕಿ ಇದ್ದರೂ ಅದು ನನಗೆ ಒಮ್ಮೊಮ್ಮೆ ಅವರ ಇರುವೆ ಇರಿಟೇಟ್ ಮಾಡುತ್ತಿತ್ತು. 

**

ಪ್ರಸಾದ್ ಕೆಲಸ ಮಾಡುತ್ತಿದ್ದ ಪಕ್ಷದಲ್ಲಿ ಒಬ್ಬ ಹೆಣ್ಣುಮಗಳಿದ್ದಳು. ಧಾರಾವಾಹಿ ಕ್ಷೇತ್ರದಿಂದ ಬಂದ ಆ ಹೆಣ್ಣುಮಗಳು ಇದ್ದಕ್ಕಿದ್ದಂತೆ ತಮ್ಮ ಸೆಕ್ಯೂಲರ್ ಪಕ್ಷ ತೊರೆದು ಮಹಾ ನಾಸ್ತಿಕಳಂತಿದ್ದ ಹೆಣ್ಣುಮಗಳು ಆಸ್ತಿಕ ಪಕ್ಷಕ್ಕೆ ಸೇರಿ ಮಠ ಮಾನ್ಯ ತಿರುಗಿ ಮಹಾ ದೈವಭಕ್ತೆಯಾಗಿ ಕೈಲಾಸ ಪೀಠ ಕಟ್ಟುತ್ತೇನೆ ಎಂದು ಕುಳಿತ ನಿತ್ಯಕಾಮ ಪ್ರಭುಗಳ ಪಟ್ಟಾ ಶಿಷ್ಯೆಯಾಗಿ ಹೋದದ್ದು ನಮ್ಮ ಹೈ ಪೊಲಿಟಿಕಲ್ ಪಾರ್ಟಿಗಳಲ್ಲಿ ಆಡಿಕೊಳ್ಳುವ ವಿಷಯವಾಗಿತ್ತಾದರೂ ಅದಕ್ಕೆಲ್ಲಾ ಅವಳ ವಿಕಲಚೇತನ ಮಗು ಅದಕ್ಕೆ ಕಾರಣ ಎಂದು ಗೊತ್ತಾದಾಗ ನಡುಗಿಹೋಗಿದ್ದೆ. ಅದನ್ನೊಮ್ಮೆ ದೆಹಲಿಯಲ್ಲೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿ ವಾಪಾಸಾಗುವಾಗ ಪ್ರಸಾದ್ ಮೆತ್ತಗೆ ನನಗೆ ಹರ್ಟ್ ಆಗದೆ ಇರುವ ರೀತಿಯಲ್ಲಿ ಹೇಳಿದ್ದರು. ವಸು ಚಿಕ್ಕಿ ಒಬ್ಬ ತಾಯಿ ತನ್ನ ಮಗುವಿಗಾಗಿ ಅದೆಂತಹ ತ್ಯಾಗಕ್ಕಾಗಿಯಾದರೂ ತಯಾರಾಗ್ತಾಳೆ ಭಾಗಿ…’  ಎನ್ನುವ ಮಾತು ಹೇಳಿದ್ದರು. ಅದಕ್ಕೆ ನಾನಾಗ ‘ಚಿಕ್ಕಿ ಪ್ಲೀಸ್. ನಿಮಗೆ ಮದುವೆಯೇ ಆಗಿಲ್ಲ. ಸುಮ್ಮನೆ ಆರು ಮಕ್ಕಳು ಹಡೆದವರ ಹಾಗೆ ಆಡ್ಬೇಡಿ.’ ಎನ್ನುವ ಕಠೋರ ಹುಂಬ ಮಾತುಗಳನ್ನು ಆಡಿದ್ದೆ. ಚಿಕ್ಕಿ ಎಂದಿನಂತೆ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಮುಸಿ ಮುಸಿ ಅಳತೊಡಗಿದರು. ಡ್ರೈವ್ ಮಾಡುತ್ತಿದ್ದ ಪ್ರಸಾದ್ ಹಿಂತಿರುಗಿ ನನ್ನನ್ನು ಕೆಂಡದ ಕಣ್ಣುಗಳಲ್ಲಿ ನೋಡಿದರು. ಪಕ್ಕದಲ್ಲಿಯೇ ಕೂತಿದ್ದ ಭೂಮಿ, ಚಿಕ್ಕಿ ಅಳುವುದನ್ನು ನೋಡಿ ಇವಳೂ ಜೋರಾಗಿ ದುಃಖಿಸಿ ಅಳಲು ಶುರು ಮಾಡಿದಳು. ನಾನೊಂದು ಛಟೀರ್ ಎಂದು ಭೂಮಿಯ ಕೆನ್ನೆಗೆ ಬಿಗಿದೆ. ಮತ್ತೆ ತಾರುಮಾರು ಒಂದಾಗುವಂತೆ ಚೀರತೊಡಗಿದಳು. ಕೂಸು ಹುಟ್ಟಿದಾಗ ಕ್ಯಾರೇ ಎನ್ನದವರು ಗಾಡಿಯನ್ನು ಪಕ್ಕಕ್ಕೆ ಹಾಕಿ ಮಗುವನ್ನು ರಮಿಸಲು ಕರೆದೊಯ್ದರು. ನಾನು ಮುಖ ಊದಿಸಿಕೊಂಡು ಕೂತಿದ್ದೆ. ನಾನು ಯಾಕೆ ಹಾಗೆ ಹೇಳಿದೆ? ಭೂಮಿ ನನ್ನ ಬಿಟ್ಟು ವಸು ಚಿಕ್ಕಿಯ ಜೊತೆಗೆ ಹತ್ತಿರವಾಗುತ್ತಿದ್ದದ್ದು ನನಗೆ ಸಹಿಸಲು ಆಗುತ್ತಿರಲಿಲ್ಲ… ಆ ಉರಿ ನನ್ನಿಂದ ಆ ಮಾತುಗಳನ್ನು ಆಡಿಸಿದ್ದವು. 

ಕನಸಿನ ಹುಡುಗ ಕೋಣೆಯ ತುಂಬಾ ಶತಪಥ ತಿರುಗುತ್ತಿದ್ದ. 

***  

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

ಊರಿನಲ್ಲಿಯೂ ಅಮ್ಮನಿಗೆ ವಸು ಚಿಕ್ಕಿಯ ಕಂಡರೆ ಆಗುತ್ತಿರಲಿಲ್ಲ. ಮದುವೆಯೇ ಆಗದೆ ಹಾಗೆ ಉಳಿದುಬಿಟ್ಟ ವಸು ಚಿಕ್ಕಿಯನ್ನು ಅಮ್ಮ ಗೋಳು ಹೊಯ್ದುಕೊಳ್ಳುತ್ತಿದ್ದಳು. ಅಪ್ಪನಿಲ್ಲದೆ ಇರುವಾಗ ‘ಇವಳೊಂದು ಗೊಡ್ಡೆಮ್ಮೆ’ ಎಂದು ಆಡಿಕೊಳ್ಳುತ್ತಿದ್ದುದನ್ನು ಕೇಳಿದ್ದ ನಾನು ಅಪ್ಪನಿದ್ದಾಗ ‘ಚಿಕ್ಕಿ ಗೊಡ್ಡೆಮ್ಮೆ, ಗೊಡ್ಡೆಮ್ಮೆ ಚಿಕ್ಕಿ’ ಎಂದು ಅವಳನ್ನು ಅಣಕಿಸುವಾಗ ಹಿಂದೆ ನಿಂತಿದ್ದ ಅಪ್ಪ ಮೊದಲಬಾರಿಗೆ ನನ್ನ ಕೆನ್ನೆಗೆ ಬಿಗಿದಿದ್ದರು. ಅವರು ಬಿಗಿದ ಏಟಿಗೆ ನನಗೆ ತಲೆಸುತ್ತು ಬರುವುದೊಂದು ಬಾಕಿ. ಅಪ್ಪನ ಎರಡನೇ ಸಂಬಂಧದ ಸಲುವಾಗಿ ರಸಿಕಸಿ ಮಾಡುತ್ತಿದ್ದ ಅಮ್ಮ ಅಂದು ನನ್ನ ಸಹಾಯಕ್ಕೆ ಬಂದಿರಲಿಲ್ಲ… 

ಅದೇ ಅಮ್ಮ ಅಂದು ರಾತ್ರಿ ವಸು ಚಿಕ್ಕಮ್ಮನ್ನ ಉಸ್ ಅನಿಸಬೇಡವೇ ಆ ಕನ್ಯೆಯ ಶಾಪ ನಮ್ಮ ಮನೆಗೆ ಒಳ್ಳೇದು ಮಾಡೋದಿಲ್ಲ. ಕಡೆಗೆ ಅಮ್ಮ ಅಪ್ಪ ಸತ್ತು ವಸು ಚಿಕ್ಕಮ್ಮ ನಮ್ಮ ಜೊತೆಗೆ ಇದ್ದುಬಿಟ್ಟರು ನನಗೆ ಅವಳ ಮೇಲೆ ಅಂತ ಅಕ್ಕರೆಯೇನು ಇರಲಿಲ್ಲ.  ತಾಯಿಯ ಸೆಡವು, ತಾಯಿಯ ಹೊಟ್ಟೆಕಿಚ್ಚು ಕಲ್ಲನ್ನು ಭಸ್ಮ ಮಾಡಿಬಿಡುತ್ತದೆನೋ…ವಸುಧ ಚಿಕ್ಕಿ ನನ್ನ ಅಜ್ಜನಿಗೆ ಅನಾಥಾಲಯದಲ್ಲಿ ಸಿಕ್ಕ ಮಗು. ಅವಳನ್ನು ಮನೆಗೆ ತಂದು ಮನೆಗೆಲಸಾಕ್ಕಾಗಿ ಉಳಿಸಿಕೊಂಡುಬಿಟ್ಟದ್ದಕ್ಕೆ ಅವಳಿಗೆ ಬೇಸರ ಇಲ್ಲವಾದರೂ ಅನಾಥಾಲಯದಲ್ಲಿದ್ದರೆ ಇಲ್ಲಿಂದಕ್ಕಿಂತ ಜೋರು ಜೀವನ ಸಿಗುತ್ತಿತ್ತೇನೋ ಎನ್ನುವ ಕನಸು ಅವಳ ಕಡೆಯಿಂದ ಮುಳ್ಳಿನ ಮಾತಾಡಿಸುತ್ತವೆ. ವಸು ಚಿಕ್ಕಿ ಓಡಿಹೋಗಬಹುದಿತ್ತು. ಆದರೆ ವಸು ಚಿಕ್ಕಿ ಹೋಗಲಿಲ್ಲ. ಮನೆಯಲ್ಲೇ ಚಾಕರಿ ಮಾಡಿಕೊಂಡು ಅಮ್ಮನ ಸಹಾಯಕಿಯಾಗಿಯೇ ಉಳಿದು ನಮ್ಮ ಮನೆಗೂ ಬಂದು ನನ್ನ ಮಕ್ಕಳಿಗೂ ಹತ್ತಿರವಾಗಿಬಿಟ್ಟಳು! ಅಮ್ಮನಿಗೆ ವಸು ಚಿಕ್ಕಿ ಮತ್ತು ನನ್ನಪ್ಪನಿಗೆ ಸಂಬಂಧವಿದೆ ಎನ್ನುವ ಸಂಶಯವಿದ್ದದ್ದರಿಂದ ಅವಳು ಒಂದಷ್ಟು ಕಾಲ ಚಿಕ್ಕಿಯನ್ನು ಸೊಸೆಯ ತರ ನಡೆಸಿಕೊಂಡಳು. ಕಡೆಗೆ ಅಪ್ಪ ಸತ್ತು ಅಮ್ಮ ಹಾಸಿಗೆ ಹಿಡಿದಾಗ ಚಿಕ್ಕಿಯೇ ಅಮ್ಮನನ್ನು ತೊಳೆದು ಬಳಿದು ಮಾಡಿದ್ದಳು. ಅಮ್ಮ ಸಾಯುವ ಮುಂಚೆ ‘ಏನೇ ಆಗಿರಲೇ ಭಾಗಿ. ಇದೊಂದು ಜೀವ ಎಲ್ಲರ ಚಾಕರಿ ಮಾಡಿದೆ. ಇವಳನ್ನು ಕೈಬಿಡಬೇಡವೇ! ಇವಳನ್ನು ಉಸ್ ಅನಿಸಬೇಡ.’ ಎಂದು ನನ್ನ ಕೈಹಿಡಿಯುವಾಗ, ಕಣ್ಣೀರು ಕಪಾಳಕ್ಕೆ ಸುರಿಯುವಾಗ ಚಿಕ್ಕಿಯ ಕಣ್ಣಲ್ಲೂ ನೀರು ತುಂಬಿಕೊಂಡು ಅಮ್ಮನ ಹಣೆಯನ್ನು ನೇವರಿಸುತ್ತಿದ್ದಳು. ಚಿಕ್ಕಿಯ ಕಣ್ಣುಗಳಲ್ಲಿ ಅದ್ಯಾವ ಭಾವವಿತ್ತು. ತಾನು ಅನಾಥಳಾಗಿಬಿಡುತ್ತೇನೆ ಅನ್ನುವ ಭಾವವಿತ್ತೆ? ಮುಂದಿನ ದಿನಗಳ ಅನಿಶ್ಚಿತತೆ ಇತ್ತೇ? 

*** 

ಚಿಕ್ಕಿಗೆ ಅದೇನೋ ಪುರಾಣದ ಕಥೆಗಳ ಮೇಲೆ ಇನ್ನಿಲ್ಲದ ಮೋಹ. ನಮ್ಮ ಹೊಸ ಮನೆಗೆ ಬಂದ ಮೇಲೆ ಅವಳ ಒತ್ತಾಯದಿಂದಲೇ ಕೃಷ್ಣ ಅರ್ಜುನನ ಸಾರಥಿಯಾಗಿ ಯುದ್ಧ ಮುನ್ನಡೆಸುವ ಚಿತ್ರವನ್ನು ಬಾಗಿಲ ಮೇಲೆ ಕೆತ್ತಿಸಿದ್ದೆವು. ಪ್ರತಿ ಬಾರಿ ಹೊರಗಿನಿಂದ ಮನೆಯೊಳಗಡೆ ಪ್ರವೇಶಿಸುವಾಗ ಮತ್ತು ಹೊರಗಡೆ ಹೋಗುವಾಗ ಅದಕ್ಕೊಂದು ನಮಸ್ಕಾರ ಹಾಕುತ್ತಿದ್ದಳು. ಭೂಮಿಯ ಕಾರಣಕ್ಕೆ ನಾವೆಲ್ಲೆ ಹೋದರೂ ಚಿಕ್ಕಿಯ ಉಪಸ್ಥಿತಿ ಬೇಕೇಬೇಕಾಗುತ್ತಿದ್ದರಿಂದ ಒಮ್ಮೆ ಬೆಂಗಳೂರಿನ 1 ಶಾಂತಿ ರೋಡ್ ನಲ್ಲಿನ ಆರ್ಟ್ ಗ್ಯಾಲರಿಗೆ ಚಿತ್ರಕಲಾಪ್ರದರ್ಶನಕ್ಕೆ ಎಂದು ಕರೆದುಕೊಂಡು ಹೋಗಿದ್ದಾಗ ಮಹಾಭಾರತದ ಭೀಷ್ಮ ಪ್ರತಿಜ್ಞೆ ಮಾಡುತ್ತಿರುವ ಅಮೂರ್ತವಾದ ಪೇಂಟಿಂಗ್ ಒಂದನ್ನು ಐವತ್ತು ಸಾವಿರ ಕೊಟ್ಟು ಮನೆಗೆ ತರಬೇಕಾಯಿತು. ಚಿಕ್ಕಿ ಮತ್ತವಳ ನಿರುಪದ್ರವಿ ಬೇಡಿಕೆಗಳು ನನಗೆ ಒಮ್ಮೊಮ್ಮೆ ಮುದ್ದು ಮುದ್ದೆನಿಸುತ್ತಿದ್ದವಾದರೂ ಸೆಕ್ಯೂಲರ್ ಗಳ ಮನೆಯ ತುಂಬಾ ಇಂತ ಪೇಂಟಿಂಗ್ ಇರುವುದು ಅದೇಕೋ ಇರುಸುಮುರುಸಾಗಿ ಕಡೆಗೆ ಭೂಮಿಯ ಕೋಣೆಯ ಮೇಲೆ ಪ್ರತಿಷ್ಠಪಿತವಾಗಿತ್ತು…

***

ಇದೆ ನಡುವೆ ನನ್ನ ಮತ್ತು ಪ್ರಸಾದನ ನಡುವೆ ಮೌನ ಕಡಿಮೆಯಾಗಿ ಮತ್ತೊಂದು ಚಿಗುರು ಕುಡಿಯೊಡೆದಿತ್ತು. ಆದರೆ ನನ್ನ ಪಾಲಿನ ಬದುಕು ನನ್ನ ಜೀವನದಲ್ಲಿ ಮತ್ತೊಂದು ಸಿಡಿಲನ್ನು ಎಸೆದಿತ್ತು. ಎರಡನೇ ಮಗುವಿನದು ಅದೇ ಸ್ಥಿತಿ ಇತ್ತು. ಇಂಟೆರ್ ಸೆಕ್ಸ್ ಕಿಡ್. ಇದಕ್ಕೂ ಅದರ ಜೆನಿಟಿಲಿಯ ಸರಿಯಾಗಿ ಬೆಳೆದಿರಲಿಲ್ಲ. ಡಾಕ್ಟರ್ ಯಥಾವತ್ತಾಗಿ ಹುಡುಗಿ ಮಾಡುವುದೇ ಸುಲಭ ಎಂದರು. ಪ್ರಸಾದ್ ‘ಬೇಡ ಬೇಡ. ನಮಗೆ ಗಂಡು ಮಗು ಬೇಕು. ಶಿಶ್ನವನ್ನೇ ಉಳಿಸೋ ಹಾಗೆ ಸರ್ಜರಿ ಮಾಡಿ ಎಂದ.’. ಡಾಕ್ಟರ್ ಫಾರಮ್ಮಿಗೆ ಸಹಿ ಹಾಕಿಸಿಕೊಂಡು ಆರು ತಿಂಗಳಾದ ಮೇಲೆ ಸರ್ಜರಿ ಮಾಡಿದರು. ಹಾಗೆ ನಮಗೆ ಮಗ ಹುಟ್ಟಿದ. ಮುಗಿಲು ಎಂದು ಹೆಸರಿಟ್ಟೆವು. ನಮ್ಮ ಪಾಲಿನ ಭಾಗ್ಯವೂ ಬದಲಾಯಿತು. ಮನೆ ಕಟ್ಟಿದೆವು. ಮುಗಿಲು ಭೂಮಿಯ ಕೋಣೆಯ ಪೇಂಟಿಂಗನ್ನು ತನ್ನ ಕೋಣೆಗೆ ವರ್ಗಾಯಿಸಿಕೊಂಡ…

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು

ಮುಗಿಲು ಬೆಳೆಯುವುದಕ್ಕೆ ಅಷ್ಟೇನೂ ತೊಂದರೆಯಾಗಲಿಲ್ಲ. ಆದರೆ ಅವನೊಂದು ದಿನ ಬಂದು ‘ಐ ಡೋಂಟ್ ವಾಂಟ್ ಟು ಗೆಟ್ ಮ್ಯಾರೀಡ್’ ಎಂದು ಘೋಷಿಸಿದ. ಪ್ರಸಾದ್ ನನ್ನ ಕಡೆ ನೋಡಿದ್ದರು. ಎಲ್ಲದಕ್ಕೂ ನನ್ನ ಕಡೆ ನೋಡಿದರೆ ನಾನೇನು ಮಾಡಲಿ? ಭೂಮಿಯನ್ನು ಕೇಳಿನೋಡಿದೆ. ಅವಳಿಂದಲೂ ಏನೂ ಉತ್ತರ ಬರಲಿಲ್ಲ. ಕಡೆಗೆ ಇವನ ಇನ್ಸ್ಟಾ ಬಯೋದಲ್ಲಿ ‘ರೈನ್ಬೋ ರಾಗ’ ಎಂದು ಬರೆದು ಅದರ ಪಕ್ಕ ಮಳೆಬಿಲ್ಲಿನ ಎಮೋಜಿ ಹಾಕಿಕೊಂಡಿದ್ದ. ಸಾಯ್ಲಿ, ನಮ್ಮ ಮನೇಲಿ ಇದೂ ಒಂದು ಬೇಕಿತ್ತು ಎಂದು ಕಿರಿಕಿರಿಯಾಗಿತ್ತು. ಹೀಗಂದುಕೊಳ್ಳುವಾಗಲೇ ಕೋಣೆಯಲ್ಲಿ ತಿರುಗುತ್ತಿದ್ದ ಕೂಸು ಎಡವಿಬಿತ್ತು. ನಾನು ಓಡಿ ಹೋಗಿ ಎತ್ತುವಲ್ಲಿ ಅಲ್ಲಿಂದ ಅದು ಮಾಯವಾಗಿತ್ತು. 

***

ಮುಗಿಲಿನ ಮದುವೆ ತಯಾರಿ ಮಾಡೋಣ ಎಂದಾಗ ಅವನು ಒಲ್ಲೆನೆಂದ. ಭೂಮಿಯ ಬರ್ತ್ಡೇ ಪಾರ್ಟಿ ಇಟ್ಟುಕೊಂಡಿದ್ದೆವು. ನಮ್ಮ ಆಪ್ತೆಷ್ಟರನ್ನಷ್ಟೇ ಕರೆದಿದ್ದವು. ಮುಗಿಲು ಮನೆಬಿಟ್ಟು ಹೋಗಿ ಒಂದು ವಾರವಾಗಿತ್ತು. ನಮ್ಮ ಫೋನಿಗೆ ಸಿಗುತ್ತಿರಲಿಲ್ಲ. ಪ್ರಸಾದ್ ನ ಒಂದು ಪೊಲಿಟಿಕಲ್ ಮೂವ್ ಗೆ ಮನೆಗೆ ಅತಿಥಿಗಳನ್ನು ಕರೆಯುವುದಕ್ಕೆ ಒಂದು ನೆಪ ಬೇಕಿತ್ತು. ಭೂಮಿಯ ಬರ್ತ್ಡೇ ಸಹಾಯಕ್ಕೆ ಬಂದಿತ್ತು.ಅದಕ್ಕೆ ಇಬ್ಬರೂ ಮಕ್ಕಳಿಗೆ ಸರ್ಜರಿ ಮಾಡಿದ್ದ ಡಾಕ್ಟರ್ ಕೂಡ ಪ್ರೀತಿಯಿಂದ ಬಂದಿದ್ದರು. ಭೂಮಿ ಎಂದಿನಂತೆ ಅವಳ ಟಾಮ್ ಬಾಯ್ ದಿರಿಸನಲ್ಲೆ ಕೇಕ್ ಕಟ್ ಮಾಡಿದ್ದಳು. ಡಾಕ್ಟರ್ ಸುಮ್ಮನೆ ಇರಲಾರದೆ ‘ನಿಮ್ಮ ತಮ್ಮ ಅಂತೂ ಮದ್ವೆ ಬೇಡ ಅಂತಿದಾನೆ. ನಿಮ್ಮಪ್ಪ ತುಂಬಾ ಟೆನ್ಶನ್ ಮಾಡಿಕೊಂಡಿದ್ದಾರೆ. ನೀನಾದ್ರೂ ಮದ್ವೆ ಗಿದ್ವೆ ಮಾಡಿಕೊಳ್ತೀಯಾ ಹೇಗೆ?!’ ಎಂದು ಕೇಳಿದ್ದೆ ತಡ ಅವರನ್ನು ಕೂರಿಸಿಕೊಂಡು, ನನ್ನನ್ನೂ ಕರೆದು ‘ನನ್ನ ತಮ್ಮನನ್ನು ಹುಡುಗನಾಗಿ ಮಾಡಿದಿರಿ. ನನ್ಯಾಕೆ ಹುಡುಗಿ ಮಾಡಿದ್ರಿ? ಐ ಫೀಲ್ ಅಯಾಮ್ ಅ ಬಾಯ್…’ ಎಂದು ಅಳುತ್ತಾ ಕೇಳಿದ್ದಳು. ಅದಕ್ಕೆ ನಮ್ಮ ಬಳಿ ಉತ್ತರ ಇರಲಿಲ್ಲ. ಮುಗಿಲು ನಡೆದಿದ್ದ. ಈಗ ಇವಳು ಈ ರೀತಿ ಹೇಳುತ್ತಿದ್ದಾಳೆ. ನನಗೊಂದು ರೀತಿಯ ಭಯ. ಪ್ರಸಾದ್ ಗೆ ಒಂದು ರೀತಿಯ ಭಯ…

ಇಂಟೆರ್ ಸೆಕ್ಸ್ ಮಕ್ಕಳನ್ನು ಹುಟ್ಟಿದ ಮೇಲೆ ಅವರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾ ಬೇಡವಾ ಎನ್ನುವ ಚರ್ಚೆಗಳು ವೈದ್ಯಕೀಯ ವಲಯದಲ್ಲಿ ನಡೆಯುತ್ತಿರಬೇಕಾದರೆ ನಮಗೆ ತೋಚಿದ್ದನ್ನು ಮಾಡಿದ್ದೇವೆ. ಈಗ ಮಕ್ಕಳು ಇದಕ್ಕೆ ಪೂರ್ತಿ ಹೊಣೆಗಾರರನ್ನಾಗಿ ಮಾಡಿ ‘ವಿ ಹೇಟ್ ಯೂ… ವಿ ಆರ್ ನಾಟ್ ಜಸ್ಟ್ ಪಪೆಟ್ಸ್!’ ಎಂದು ಕಣ್ಣೀರು ಹಾಕುತ್ತಾ ಕುಳಿತರೆ ಏನು ಮಾಡುವುದು? ಯಾರ ಕಣ್ಣೀರಿಗೆ ಇಲ್ಲಿ ಹೆಚ್ಚು ಬೆಲೆಯಿದೆ? ಎಲ್ಲರೂ ಏನನ್ನು ಹುಡುಕುತ್ತಿದ್ದೇವೆ? 

ನಾವೆಷ್ಟೇ ನಿಭಾಯಿಸಿದ್ದೇವೆ ಎನಿಸಿದರೂ ನೋಡಿಲ್ಲಿ ನೀನು ಇದನ್ನ ಹೇಗೆ ನಿಭಾಯಿಸುತ್ತಿ ಎಂದು ಹೊಸ ಪ್ರಶ್ನೆಪತ್ರಿಕೆಯನ್ನು ನಮ್ಮೆಡೆಗೆ ಎಸೆದರೆ?! ನನಗೆ ಮತ್ತೆ ಭಯ… ನಿದ್ದೆಯಿಲ್ಲದ ರಾತ್ರಿಗಳು. ಕನವರಿಕೆಗಳು. ಮಕ್ಕಳದೇ ಚಿಂತೆ.. 

ಪ್ರತಿದಿನ ಸಂಜೆ ತಾರಸಿಯ ಮೇಲೆ ಬಸವಳಿದು ನಿಂತಾಗ ಎಡಕ್ಕೆ ನಿಂತ ತೆಂಗಿನ ಗರಿಗಳ ಮಿಸುಕಾಟ ಆತ್ಮಸಂಗಾತಿಯ ಪಿಸುಗುಡುವಿಕೆಯಂತೆ ಕೇಳಿಸುತ್ತದೆ. ತಲೆಯೆತ್ತಿ ನೋಡಿದರೆ ಮುಗಿಲು ಚೂರು ಕೆಳಗಿಳಿದು ತನ್ನ ಕೈಬೆರಳುಗಳಿಂದ ಮಾಂತ್ರಿಕವಾಗಿ ಸ್ಪರ್ಶಿಸಿದ ಹಾಗೆ ಭಾಸವಾಗುತ್ತದೆ. ಸುತ್ತ ಸುಳಿವ ಗಾಳಿಯು ಅದೆಷ್ಟೇ ದೀರ್ಘ ಉಸಿರಾದರೂ ಬೇಸರಿಸಿಕೊಳ್ಳದೆ ಒಳಗಿಳಿದು ಊಟ ಮಾಡಿಸಿ ಡಬ್ಬಿಗೂ ತುಂಬುವ ತಾಯಿಯಂತೆ ತಂಗಾಳಿಯೊಂದು ಬೆಚ್ಚಗೆ ಮೈಸವರುತ್ತದೆ. ತಾರಸಿಯ ಹೊದಿಕೆಯ ಮೇಲೆ ಗುಟುರು ಹಾಕುವ ಪಾರಿವಾಳಗಳು ಚಿಕ್ಕಪುಟ್ಟ ಹೆಜ್ಜೆ ಹಾಕುತ್ತಾ ಹತ್ತಿರ ಬಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿ ರೆಕ್ಕೆ ಬಿಚ್ಚಿ ಹಾರಿ ಹೋಗುತ್ತವೆ. ಅದೆಲ್ಲಿಂದಲೋ ಹುಡುಕಿಕೊಂಡು ಓಡಿ ಬರುವ ಬೆಕ್ಕು ಕಾಲು ಸವರುತ್ತಾ ತಲೆಯೆತ್ತಿ ಮಿಯಾವ್ ಎಂದು ಗೋಗರೆಯುತ್ತದೆ. ಒಂದಿಷ್ಟು ಅರೆಘಳಿಗೆ ಇವೆಲ್ಲದರಲಿ ಕಳೆದು ಹೋದಾಗ ಉರಿವ ಸೂರ್ಯ ಅಸ್ತoಗತನಾಗಿ ಚಂದ್ರ ಹುಟ್ಟುತ್ತಾನೆ. ಜೀವದುಸಿರಿನ ಲಯ ವಿಶ್ವಶಕ್ತಿಯ ಲಯದ ಜೊತೆ ಮಾತಿಗೆ ಕೂತ ಹೊತ್ತು… ಒಳಗೆ ದಿವ್ಯ ಪ್ರಭೆಯೊಂದು ಹುಟ್ಟುತ್ತದೆ. ಕಾಯುತ್ತದೆ. ನಾಳೆ ಹೊಸ ಹಾದಿ. ನಾಳೆ ಹೊಸ ಹಾಡು. ಕನಸು ಕಟ್ಟುತ್ತದೆ ಜೀವ. ನಾನು ಒಳ್ಳೆಯ ತಾಯಿಯಾಗುತ್ತೇನೆಯೇ? ಕನಸು ಕಟ್ಟುತ್ತದೆ ಜೀವ. ಹಾಗಾಗುವುದಕ್ಕೆ ಏನು ಮಾಡಬೇಕು? ಇದೆಲ್ಲಾ ಕನಸಿನಲ್ಲಿ ಬರುವ ಹುಡುಗ ಸೃಷ್ಟಿಸುವ ಗಾಳಿ ಚಿತ್ರ ಮಾತ್ರವೇ? ಮಕ್ಕಳ ಪರವಾಗಿ ನಿಂತರೆ ನಾನು ಒಳ್ಳೆಯ ತಾಯಿಯಾಗುತ್ತೇನೆಯೇ?! 

ರಾತ್ರಿಯ ಹೊತ್ತು ಕಣ್ಣಾಲಿಗಳನ್ನು ತುಂಬಿಕೊಂಡು ಮಗನ ಓದುವ ಟೇಬಲ್ಲಿನಲ್ಲಿ ಕೂತು ಅವನದೇ ಡೈರಿಯನ್ನು ತಡಕಿದೆ.

 ‘ನೀವು ಡಾಕ್ಟರ್ ಸೇರಿಕೊಂಡು ನನ್ನ ಪರವಾಗಿ ನಾನೇನಾಗಬೇಕೆನ್ನುವ ನಿರ್ಧಾರ ತೆಗೆದುಕೊಂಡಿರಿ. ಈ ನಡುವೆ ನಮ್ಮ ಒಂದು ಮಾತನ್ನೂ ಕೇಳಲಿಲ್ಲ. ಯಾಕಮ್ಮ? ನಮಗೇನಾಗಬೇಕು ಎಂದು ನಾನು ನಿರ್ಧರಿಸುವುದು ನಮಗೆ ಹಕ್ಕಿಲ್ಲವಾ? ನನ್ನ ಜೆನಿಟಿಲಿಯಾದ ಒಂದೇ ಕಾರಣಕ್ಕೆ ನೀನು ನನ್ನ ಗಂಡಾಗಿ ಸರ್ಜರಿ ಮಾಡಿಸಿದ್ದಿ? ಅಯಾಮ್ ನಾಟ್ ಯುವರ್ ಪೊಲಿಟಿಕಲ್ ಪಪೆಟ್. ಐ ಹೇಟ್ ಯು!’  ಎಂದು ಬರೆದಿತ್ತು. ಕೂಗಿ ಹೇಳಿದ್ದರೆ ಸ್ವಲ್ಪ ಹೊತ್ತು ಗಾಳಿಯಲ್ಲಿ ತೇಲಿ ದಿನಕಳೆದಂತೆ ಮರೆತುಹೋಗಬಹುದು… ಹೀಗೆ ಬರೆದಿಟ್ಟು ಹೋದರೆ ಗಾಯವೆಂತು ಮಾಯುವುದು?!  ದೊಡ್ಡ ಮನೆ. ಅಗಾಧ ಮೌನ. ನಮ್ಮ ಮಾತು, ಉಚ್ವಾಸ ನಿಶ್ವಾಸಗಳು ಮಾರ್ದನಿಸುತ್ತವೆ. ಒಬ್ಬ ತಾಯಿಗೆ ‘ಐ ಹೇಟ್ ಯು.’ ಎಂದು ತನ್ನದೇ ಕೂಸಿನಿಂದ ಕೇಳಿಸಿಕೊಳ್ಳುವುದು ಅದೆಷ್ಟು ಹಿಂಸೆ ಎನ್ನುವುದು ತಾಯಂದಿರಿಗಷ್ಟೇ ಅರ್ಥವಾಗುವ ವಿಷಯ… 

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

ತಡಕಿ ಅಲ್ಲಿಯೇ ಸ್ಟ್ಯಾಂಡಿನಲ್ಲಿದ್ದ ಪೆನ್ನನ್ನು ಕೈಗೆತ್ತಿಕೊಂಡು ಕೊನೆಯ ಪುಟದಲ್ಲಿ ನಾನು ಬರೆಯತೊಡಗಿದೆ. 

‘ನನ್ನ ಹೆಸರೂ ಭಾಗೀರಥಿಯೇ.. ನನಗೆ ಒಬ್ಬನೇ ಮಗ ಭಾಗೀರಥಿ. ನಿನ್ನಂತೆ ನಿನ್ನ ತಟದಲ್ಲಿ ಪ್ರಮಾಣಗೈಯುವ ಪ್ರತಿಯೊಬ್ಬರನ್ನೂ ಮಕ್ಕಳೆಂದು ತಿಳಿಯಲಾರೆ. ಅದಕ್ಕೆ ನನ್ನ ಮಗ ನಾನು ಮದುವೆಯನ್ನೇ ಆಗುವುದಿಲ್ಲ ಎಂದಾಗ ತಡೆಯದೇ ಇರಲಾಗಲಿಲ್ಲ.’ 

ಇಷ್ಟು ಬರೆದು ಕಣ್ಣೆತ್ತಿ ನೋಡಿದೆ. ಅಲ್ಲೇ ಗೋಡೆಯಲ್ಲಿದ್ದ ಚಿತ್ರ ಕಲಾಕೃತಿಯಲ್ಲಿ ಭೀಷ್ಮ ಪ್ರತಿಜ್ಞೆಗೈಯುತ್ತಿದ್ದ. ಭಾಗೀರಥಿ ತಣ್ಣಗೆ ಹರಿಯುತ್ತಿದ್ದಳು. ಕಣ್ಣೀರು ನಾನು ಬರೆದ ಆ ಸಾಲುಗಳ ಮೇಲೆ ಬಿತ್ತು… ನನ್ನ ಭುಜದ ಮೇಲೆ ಮೆತ್ತಗೆ ಅಮುಕಿದ ಬಿಸುಪನ್ನು ಅನುಭವಿಸಿ ಹಿಂತಿರಿಗೆ ನೋಡಿದೆ. ಚಿಕ್ಕಿ ನಿಂತಿದ್ದಳು. ಅವಳ ಕಣ್ಣಲ್ಲೂ ನೀರಿದ್ದವು… ಅವಳ ಕೈಗಳು ನನ್ನ ಕಣ್ಣೀರನ್ನು ಒರೆಸಿದವು. ಪಕ್ಕಕ್ಕೆ ಚೇರ್ ಎಳೆದು ಕುಳಿತು ಬೆನ್ನ ನೇವರಿಸಿದವು. ‘ಯಾಕಳ್ತಿಯೇ ಭಾಗಿ… ಅಂದವರು ನಮ್ಮ ಮಕ್ಕಳಲ್ಲವೇನೇ?! ಎಲ್ಲಾ ಸರಿ ಹೋಗತ್ತೆ. ನೀನಳಬೇಡ.’ ಎಂದು ಸಮಾಧಾನಿಸಿದಳು. ನಾನು ನನ್ನ ಥೆರಪಿಸ್ಟ್ ಸುಮಾಗೆ ಕರೆ ಮಾಡಿ ಸ್ಪೀಕರಿನಲ್ಲಿ ಹಾಕಿಟ್ಟು ಅವಳು ಕರೆ ಎತ್ತುವುದನ್ನೇ ಕಾಯುತ್ತಾ ಕುಳಿತೆ. ಕೋಣೆಯ ಬಾಗಿಲನ್ನು ಮೆಲ್ಲಗೆ ತಳ್ಳಿ ಸೀದಾ ಕನ್ನಡಿಯ ಮುಂದೆ ಹೋಗಿ ಕನಸಿನಲ್ಲಿ ಕಾಣಿಸಿದ ಹುಡುಗ ತನ್ನ ಕೈಗೋಲನ್ನು ಹಿಡಿದು ಚಿತ್ರ ಸೃಷ್ಟಿಸುತ್ತಾ ಕುಳಿತ. ಹಾಗೆ ಕುಳಿತವನೇ ಮೊದಲ ಬಾರಿಗೆ ನನ್ನತ್ತ ತಿರುಗಿ ಕೋಪದಿಂದ ಕೆಂಡಗಣ್ಣುಗಳನ್ನು ಮಾಡಿಕೊಂಡು ಜೋರಾಗಿ ಬಾಯಿತೆರೆಯಲು ಶುರುಮಾಡಿದ. ಅದೆಷ್ಟು ದೊಡ್ಡ ಬಾಯಿಯೆಂದರೆ ನನ್ನನ್ನೇ ನುಂಗಿಬಿಡುವಷ್ಟು… ನನಗೆ ಭಯ. ಇದೆಲ್ಲಿ ನನ್ನನ್ನು ಆಪೋಶನ ತೆಗೆದುಕೊಂಡುಬಿಡುವುದೋ ಎಂದು! ನಾನೇನು ಹೇಳುವುದನ್ನು ಮಿಸ್ ಮಾಡಿಕೊಂಡೆ?! ನನಗಾಗ ದೈತ್ಯಾಕಾರದಲ್ಲಿ ಬಾಯಿ ತೆರೆದ ಆ ಪುಟ್ಟ ಹುಡುಗ ಬ್ರಹ್ಮಾoಡವನ್ನೇ ತೋರಿಸಿದ ಕೃಷ್ಣನ ಹಾಗೆ ಕಾಣಿಸಿದ. ಅವನನ್ನು ಕರೆಯಲು ಒಳಗಿನಿಂದ ಒಂದು ಧ್ವನಿ ಕಿತ್ತು ಬರುತ್ತಿತ್ತು. ಸುಮಾ ಕರೆ ಎತ್ತಿದಳು.. ‘ಮಿಸಸ್ ಭಾಗೀರಥಿ. ಏನಾಯ್ತು?’ ಎಂದು ಕೂಗುತ್ತಿದ್ದಾಳೆ. ವಸು ಚಿಕ್ಕಿ ‘ಉಸಿರು ತಗೋ ಭಾಗಿ.’ ಎಂದು ಗಾಳಿ ಹಾಕುತ್ತಿದ್ದಾಳೆ. ಇನ್ನೇನು ಅವನು ನುಂಗಬೇಕು ಎನ್ನುವಲ್ಲಿ ನಾನು ಅಳುತ್ತಾ ಕೈಮುಗಿದು ‘ಮುಗಿಲುsss’ ಎಂದು ಕೂಗಿದೆ. ಕತ್ತಲು ಆವರಿಸಿತು. ಅದಷ್ಟೇ ನೆನಪು… 

ಇದಾದ ಮೇಲೆ ಆಸ್ಪತ್ರೆಯಲ್ಲಿ ಒಂದು ವಾರವಿದ್ದೆ. ಮನೆಗೆ ಬಂದ ಮೇಲೆ ನಾನೇನನ್ನೋ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನಿಸುತ್ತಿರುತ್ತದೆ. ಮತ್ತೆ ಎಂದಾದರೂ ಆ ಹುಡುಗ ನನ್ನ ಕನಸಿನಲ್ಲಿ ಸುಳಿದು ಅಲ್ಲಿಂದ ಮತ್ತೆ ಎದ್ದು ಬಂದು ಕನ್ನಡಿಯ ಮುಂದೆ ಕೂರುತ್ತದೇನೋ ಎಂಬ ಭಯಮಿಶ್ರಿತ ನಿಗೂಢ ಆಸೆ ಹುಟ್ಟಿ ಮಾಯವಾಗುತ್ತದೆ. 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading

ಪ್ರಮುಖ ಸುದ್ದಿ

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

ವರನಟ, ಗಾನಗಂಧರ್ವ ಡಾ.ರಾಜ್‌ಕುಮಾರ್‌ ಅವರು ಕನ್ನಡಿಗರಿಗೆ ಸದಾ ಕಾಲ ಸ್ಫೂರ್ತಿ ನೀಡುವಂಥ ನೂರಾರು ಹಾಡುಗಳನ್ನು ಕೊಟ್ಟು ಹೋಗಿದ್ದಾರೆ. ಅವುಗಳಲ್ಲಿ ಬೆಸ್ಟ್‌ ಅನಿಸುವ 7 ಹಾಡುಗಳು ಇಲ್ಲಿವೆ. ಇದು ಡಾ.ರಾಜ್‌ ಬರ್ತ್‌ಡೇ ವಿಶೇಷ.

VISTARANEWS.COM


on

Koo

1. ಯಾರೇ ಕೂಗಾಡಲಿ ಊರೇ ಹೋರಾಡಲಿ

ʼಸಂಪತ್ತಿಗೆ ಸವಾಲ್‌ʼ ಚಿತ್ರದಲ್ಲಿ ಅಣ್ಣಾವ್ರು ಎಮ್ಮೆಯ ಮೇಲೆ ಕುಳಿತು ಹಾಡುತ್ತಾ ಸಾಗುವ ಈ ದೃಶ್ಯ ಕನ್ನಡ ಚಲನಚಿತ್ರ ರಂಗದ ಐಕಾನಿಕ್‌ ಅನಿಸುವ ಹಾಡು. ʼಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆʼ ಎಂದು ಎಮ್ಮೆಯ ನೆಮ್ಮದಿಯ ಸೂತ್ರವನ್ನು ಮನುಷ್ಯನಿಗೆ ಅನ್ವಯಿಸಿ, ಪ್ರಾಣಿಗಳ ಗುಣಗಳಿಂದ ಮನುಷ್ಯರು ಕಲಿಯಬೇಕಾದ್ದನ್ನು ಉದಾಹರಿಸಿ ಹಾಡಿದ್ದಾರೆ.

2. ನಗುತನಗುತ ಬಾಳು ನೀನು ನೂರು ವರುಷ
ʼಪರಶುರಾಮ್‌ʼ ಫಿಲಂನ ʼನಗುತಾ ನಗುತಾ ಬಾಳು ನೀನು ನೂರು ವರುಷʼ ಹಾಡು ಕನ್ನಡದ ಎರಡು ಬೆಲೆಬಾಳುವ ಮುತ್ತುಗಳನ್ನು ಒಳಗೊಂಡ ಮಾಣಿಕ್ಯ. ಇದರಲ್ಲಿ ವರನಟ ರಾಜ್‌ ಅವರು ಮುದ್ದು ಬಾಲನಟ ಪುನೀತ್‌ ರಾಜ್‌ಕುಮಾರ್‌ಗೆ ಬರ್ತ್‌ಡೇ ಕೇಕ್‌ ತಿನ್ನಿಸುತ್ತಾ ಹಾಡುತ್ತಾರೆ. ʼದೇವರು ತಂದ ಸೃಷ್ಟಿಯ ಅಂದ ಎಲ್ಲರು ನಗಲೆಂದೇʼ ಎಂಬಂಥ ಅರ್ಥಪೂರ್ಣವಾದ ಸಾಲುಗಳನ್ನು ಇದು ಒಳಗೊಂಡಿದೆ.

3. ಬಾನಿಗೊಂದು ಎಲ್ಲೆ ಎಲ್ಲಿದೆ
ʼಬೆಳದಿಂಗಳಾಗಿ ಬಾʼ ಚಲನಚಿತ್ರದಲ್ಲಿ ನಾಯಕಿ ಆರತಿ ಅವರಿಗೆ ಡಾ.ರಾಜ್‌ ಬುದ್ಧಿವಾದ ಹೇಳುವ ಹಾಡು ಇದು. ಚಿಕ್ಕಮಗಳೂರಿನ ಹಸಿರು ಸಿರಿಯ ನಡುವೆ ಕಾರು ಚಲಾಯಿಸುತ್ತಾ ʼಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆʼ ʼಹೂವೂ ಮುಳ್ಳೂ ಎರಡೂ ಉಂಟು ನಮ್ಮ ಬಾಳಲಿʼ ಎಂದು ಹಾಡುತ್ತಾ ಸಾಗುವ ಈ ದೃಶ್ಯ ಮನಮೋಹಕವಾಗಿದೆ.

4. ಬಾಳುವಂಥ ಹೂವೆ ಬಾಡುವಾಸೆ ಏಕೆ?
ʼಆಕಸ್ಮಿಕʼ ಚಲನಚಿತ್ರದಲ್ಲಿ ಅಣ್ಣಾವ್ರು ನಾಯಕಿ ಮಾಧವಿಗೆ ಬುದ್ಧಿ ಹೇಳುವ ಹಾಡು ʼಬಾಳುವಂಥ ಹೂವೆ ಬಾಡುವಾಸೆ ಏಕೆ?ʼ ʼಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು, ವ್ಯರ್ಥವ್ಯಸನದಿಂದ ಸಿಹಿಯು ಕೂಡ ಬೇವುʼ ʼಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯʼ ʼಸಣ್ಣ ಬಿರುಕು ಸಾಲದೇ ತುಂಬು ದೋಣಿ ತಳ ಸೇರಲು?ʼ ಎಂಬಂಥ ಸಾರ್ವಕಾಲಿಕವಾದ ನೀತಿಮುತ್ತುಗಳನ್ನು ಹೇಳುತ್ತಾರೆ.

5. ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ
ಶಿವರಾಜ್‌ ಕುಮಾರ್‌ ಅವರು ನಟಿಸಿರುವ ʼರಣರಂಗʼ ಚಿತ್ರಕ್ಕೆ ಡಾ.ರಾಜ್‌ ಅವರು ಹಾಡಿರುವ ಹಾಡು ಇದು. ಇದರ ಬೀಟ್‌ ಹಾಗೂ ಒಕ್ಕಣೆಗಳು ಎಂಥವನನ್ನೂ ಹೋರಾಡಲು ಪ್ರಚೋದಿಸುವಂತಿವೆ. ಹಿಡಿಯೋ ಆತ್ಮಬಲದಸ್ತ್ರ, ಅದುವೇ ಜಯದ ಮಹಾ ಮಂತ್ರ, ನಿನ್ನ ದಾರಿಯಲ್ಲಿ ಎಲ್ಲೂ ಸೋಲೇ ಇಲ್ಲ, ಬಾಳ ಯುದ್ಧದಲ್ಲಿ ನಿನ್ನ ಗೆಲ್ಲೋರಿಲ್ಲ, ಛಲವೇ ಬಲವು ಮುಂದೆ ನುಗ್ಗಿ ನುಗ್ಗಿ ಬಾʼ ಎಂದು ಧೈರ್ಯ ತುಂಬುತ್ತಾರೆ ಇದರಲ್ಲಿ.

6. ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
ಕನ್ನಡ ನಾಡಿನ ಮೊದಲ ಸಾಮ್ರಾಟ ಕದಂಬರ ಮಯೂರವರ್ಮನಾಗಿ ʼಮಯೂರʼ ಫಿಲಂನಲ್ಲಿ ನಟಿಸಿದ ರಾಜ್‌, ʼನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ, ಬಾಳುವಿರೆಲ್ಲ ಹಾಯಾಗಿʼ, “ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾʼʼ ಎಂದು ಧೈರ್ಯ ಹೇಳಿದ್ದು ಒಂದು ಕಾಲದ ನಾಡಿನ ಜನತೆಯಲ್ಲಿ ಧೈರ್ಯವನ್ನು ತುಂಬುವ ನಾಯಕ ಗುಣವನ್ನು ಸ್ಪಷ್ಟವಾಗಿ ಚಿತ್ರಿಸಿತು.

7. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ʼಜೀವನಚೈತ್ರʼ ಚಿತ್ರದಲ್ಲಿ ಹಳದಿ ಪೇಟ ಕಟ್ಟಿಕೊಂಡು ಜಟಕಾ ಬಂಡಿಯನ್ನು ಹೊಡೆಯುತ್ತಾ ಅಣ್ಣಾವ್ರು ಸಾಗುವ ಈ ಹಾಡು ಐತಿಹಾಸಿಕ, ಕನ್ನಡ ಹೋರಾಟಕ್ಕೆ ಸದಾ ಸ್ಫೂರ್ತಿ ತುಂಬುವ ಒಂದು ಹಾಡು. ʼʼಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ, ಕಸ್ತೂರಿ ಕನ್ನಡʼ ಎಂದು ಅವರು ಸಾರಿದ್ದು ಇಂದೂ ಮುಂದೂ ಕನ್ನಡ ನಾಡಿನ ಆತ್ಮಗೀತೆಯಂತೆ ಇದ್ದೇ ಇರುತ್ತದೆ, ನಮಗೆ ಸ್ಫೂರ್ತಿ ತುಂಬುವಂತಿದೆ.

ಇದನ್ನೂ ಓದಿ: Dr.Rajkumar Memory: ಪ್ಯಾನ್‌ ಇಂಡಿಯಾ ಫಿಲಂಗಳ ಕಾಲದಲ್ಲಿ ಅಣ್ಣಾವ್ರ ಚಿತ್ರ ನೋಡೋಕೆ 8 ಕಾರಣಗಳು

Continue Reading

ಅಂಕಣ

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ದಶಮುಖ ಅಂಕಣ: ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ?

VISTARANEWS.COM


on

dashamukha column madness
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ʻಹುಚ್ಚುʼ (madness) ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ನೆನಪಾಗುವ ಚಿತ್ರಗಳ ಬಗ್ಗೆ ಹೆಚ್ಚು ಹೇಳುವುದು ಬೇಡವಲ್ಲ. ಯಾವುದೇ ದೇಶ, ಭಾಷೆ, ಸಂಸ್ಕೃತಿಗಳಲ್ಲಿ ನೋಡಿದರೂ ʻಹುಚ್ಚಿಗೆʼ ಹೆಚ್ಚಿಗೆ ಅರ್ಥಗಳಿಲ್ಲ… ಅದೊಂದೇ ಅರ್ಥ! ಹಾಗಾಗಿಯೇ ʻಅದೊಂಥರಾ ಹುಚ್ಚು, ಅವನಿಗೊಂದು ಹುಚ್ಚುʼ ಎಂಬಿತ್ಯಾದಿ ಮಾತುಗಳ ಬೆನ್ನಿಗೇ ʻಅಲ್ಲೇನೋ ಒಂದು ಅತಿರೇಕವಿದೆʼ ಎಂಬ ಭಾವ ಬಂದುಬಿಡುತ್ತದೆ. ಅದಕ್ಕಾಗಿಯೇ ʻಹುಚ್ಚು ಸಾಹಸ, ಹುಚ್ಚು ಪ್ರೀತಿʼ ಮುಂತಾದ ಪ್ರಯೋಗಗಳನ್ನು ಮಾಡುತ್ತಾ, ಬೈಯ್ಯುವುದಕ್ಕೆ, ವ್ಯಂಗ್ಯಕ್ಕೆ, ಕುಹಕಕ್ಕೆ, ಟೀಕೆಗೆ, ತಮಾಷೆಗೆ… ಅಥವಾ ಇಂಥದ್ದೇ ಋಣಾತ್ಮಕ ಎನ್ನಬಹುದಾದ ಛಾಯೆಗಳಲ್ಲಿ ಈ ಶಬ್ದವನ್ನು ಬಳಸುತ್ತೇವೆ. ನಿಜಕ್ಕೂ ಈ ಶಬ್ದವನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಬದುಕಿನಲ್ಲಿ ಪ್ರೀತಿ, ಸೌಖ್ಯ, ಖುಷಿಯನ್ನು ಅರಸುವವರಿಗೂ ಇದನ್ನು ಬಳಸಬಹುದೇ? ಸಾಹಿತ್ಯ-ಸಿನೆಮಾಗಳಲ್ಲಿ ಕಾಣುವ ಪ್ರೀತಿ, ಪ್ರೇಮಗಳಿಗೆ ಹುಚ್ಚನ್ನು ಪರ್ಯಾಯವಾಗಿ ಬಳಸುವುದು ಹೊಸದೇನಲ್ಲ. ಆದರೆ ಇಲ್ಲೀಗ ಅಂಥ ಹರೆಯದ ಪ್ರೀತಿಯ ಬಗ್ಗೆಯಲ್ಲ ಹೇಳುತ್ತಿರುವುದು. ಇತರರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವವರಿಗೂ ಈ ಶಬ್ದ ಸಲ್ಲುತ್ತದೆಯೇ?

ಇತ್ತೀಚೆಗೆ ಭೇಟಿ ಮಾಡಿದ ಒಂದಿಬ್ಬರು ವ್ಯಕ್ತಿಗಳು ಇಂಥದ್ದೊಂದು ಮಂಥನವನ್ನು ಹುಟ್ಟು ಹಾಕಿದ್ದು ಹೌದು. ಎಲ್ಲರಿಗಿಂತ ಭಿನ್ನವಾದ ಬದುಕನ್ನು ಆಯ್ದುಕೊಳ್ಳುವವರು, ತಮ್ಮ ಜೀವನದ ರೀತಿ-ನೀತಿಗಳನ್ನು ಅಥವಾ ಧ್ಯೇಯ-ಆದರ್ಶಗಳನ್ನು ʻಹುಚ್ಚುʼ ಎನ್ನುವಷ್ಟು ಪ್ರೀತಿಸದಿದ್ದರೆ, ಖುಷಿಯಿಂದ ಬದುಕುವುದು ಸಾಧ್ಯವೇ? ಎಷ್ಟೇ ಸುಭಿಕ್ಷವಾದ ಬದುಕನ್ನೂ ಹಳಿಯುತ್ತಲೇ ಬದುಕುವ ಇಂದಿನ ದಿನಗಳಲ್ಲಿ, ಇರುವ ಬದುಕಲ್ಲಿ ಸುಭಿಕ್ಷವನ್ನು ಸೃಷ್ಟಿಸುವ ಅವರನ್ನು ಹುಚ್ಚರೆಂದರೆ ಅತಿರೇಕವಾದೀತೇ? ಬದುಕನ್ನು ಕೊರಗಿನಲ್ಲೇ ಕಳೆಯುವುದು ಹುಚ್ಚೋ ಅಥವಾ ಇತರರ ಕೊರಗನ್ನು ಕಳೆಯುವುದು ಹುಚ್ಚೋ?

ಹೀಗೆನ್ನುವಾಗ ಅನಂತ್‌ ಸರ್‌ ನೆನಪಾಗುತ್ತಾರೆ. ಬದುಕಲ್ಲಿ ವಿದ್ಯೆ ದೊರೆಯದ ಮಕ್ಕಳನ್ನು ಶಿಕ್ಷಣದ ಹಾದಿಗೆ ಹಚ್ಚಿ, ನೆಲೆ ಕಾಣಿಸುವ ಅವರ ಸಾಹಸವನ್ನು ವರ್ಣಿಸುವುದಕ್ಕೆ ಬೇರೆ ಪದಗಳಿಗೆ ಸಾಧ್ಯವಿಲ್ಲ. ಮನೆ ಇದ್ದೂ ಇಲ್ಲದಂತಾದವರು, ಮನೆಯೇ ಇಲ್ಲದವರು, ಪಾಲಕರು ಇಲ್ಲದವರು, ಪಾಲಕರು ಯಾಕಾದರೂ ಇದ್ದಾರೋ ಎನ್ನುವಂಥ ಹಲವು ನಮೂನೆಯ ವಾತಾವರಣದಿಂದ ಬಂದ ಮಕ್ಕಳಿಗೆ ಊಟ, ವಸತಿಯ ಜೊತೆಗೆ ವಿದ್ಯೆ ನೀಡುವುದನ್ನೇ ಧ್ಯೇಯವಾಗಿಸಿಕೊಂಡವರು. ಹತ್ತು-ಹನ್ನೆರಡು ವರ್ಷಗಳವರೆಗೆ ಶಾಲೆಯ ಮುಖವನ್ನೂ ಕಾಣದವರು, ಎಂದೊ ಶಾಲೆಗೆ ಹೋಗಿ ನಡುವಲ್ಲೇ ಕಳೆದುಹೋದವರು- ಇಂಥ ನೂರಾರು ಮುಖಗಳಲ್ಲಿ ನಗು ಅರಳಿಸುವುದಕ್ಕೆ ಇರಬೇಕಾದ ಅದಮ್ಯ ಪ್ರೀತಿಯೂ ಒಂದು ಬಗೆಯ ಹುಚ್ಚೇ ತಾನೇ? ಹಾಗಿಲ್ಲದಿದ್ದರೆ, ಇಂಥ ಸಾಹಸಿಗಳು ಲೋಕದಲ್ಲಿ ನಮಗೆ ವಿರಳವಾಗಿ ಕಾಣುವುದೇಕೆ?

ಆರೇಳು ವರ್ಷದವರನ್ನು ಒಂದನೇ ಕ್ಲಾಸಿಗೆ ಕೂರಿಸುವಲ್ಲಿ ಅಷ್ಟೇನು ಸಮಸ್ಯೆಯಾಗಲಿಕ್ಕಿಲ್ಲ. ವರ್ಷದ ಆಧಾರದ ಮೇಲೆಯೇ ತಾನೆ ನಮ್ಮ ಶಿಕ್ಷಣ ವ್ಯವಸ್ಥೆ ರೂಪುಗೊಂಡಿರುವುದು. ಆದರೆ ಹದಿಹರೆಯಕ್ಕೆ ಕಾಲಿಟ್ಟವರು ಇನ್ನೂ ಶಾಲೆಯ ಮೆಟ್ಟಿಲನ್ನೇ ಹತ್ತದಿರುವಾಗ ಅವರನ್ನೂ ಒಂದನೇ ಕ್ಲಾಸಿಗೆ ಕೂರಿಸುವುದು ಹೇಗೆ? ʻಹಾಗಾಗಿಯೇ ದೈಹಿಕ ವಯಸ್ಸಿನ ಆಧಾರದ ಮೇಲಲ್ಲದೆ, ಮಕ್ಕಳ ಬೌದ್ಧಿಕ ವಯಸ್ಸಿಗೆ ಅನುಗುಣವಾಗಿ ಕಲಿಯುವ ಗುಂಪುಗಳನ್ನಾಗಿ ವಿಂಗಡಿಸಿಕೊಳ್ಳುತ್ತೇವೆ. ಹಾಗೆಯೇ ಅವರ ಕಲಿಕೆ ಮುಂದುವರಿಯುತ್ತದೆʼ ಎನ್ನುವುದು ಅನಂತ್‌ ಸರ್‌ ಹೇಳುವ ಮಾತು. ದೂರದ ಅಸ್ಸಾಂ, ಬಿಹಾರಗಳಿಂದ ಬಂದ ಮಕ್ಕಳಿಗೆ ಶಾಲೆಯ ಕಲ್ಪನೆಯೂ ಇಲ್ಲದಿರುವಾದ, ಇವರ ಭಾಷೆ ಅವರಿಗೆ-ಅವರ ಭಾಷೆ ಇವರಿಗೆ ತಿಳಿಯದಿರುವಾಗ, ವಿದ್ಯೆಯ ಶ್ರೀಕಾರ ಆಗುವುದು ಹೇಗೆ? ʻಇದೊಂಥರಾ ಹುಚ್ಚು. ಇದೂ ಆಗತ್ತೆʼ ಎನ್ನುವಾಗಿನ ಇವರ ಮುಖದ ನಗುವನ್ನು ಏನೆಂದು ಅರ್ಥ ಮಾಡಿಕೊಳ್ಳುವುದು?

ಈ ಚೌಕಟ್ಟಿನಾಚೆಯ ಮನೆಯಲ್ಲಿ ಕಲಿತು ಹೊರಬಿದ್ದು, ದುಡಿದು ಸಂಪಾದಿಸಿ ಬದುಕುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳುವಾಗ ಅವರ ಮುಖದ ನಗುವಿಗಿರುವ ಅರ್ಥದ ಅರಿವಾಗುತ್ತದೆ ನಮಗೆ. ಹುಚ್ಚಿಗೂ ಎಷ್ಟೊಂದು ಸುಂದರ, ಸಲ್ಲಕ್ಷಣಗಳಿವೆ ಎಂಬುದನ್ನು ತಿಳಿಯುವುದಕ್ಕೆ ಅದೊಂದು ನಗು ಸಾಕು. ಕೊರಗಿ ಕಳೆಯುವುದಕ್ಕಿಂತ, ಹೀಗೆ ಕೊರಗು ಕಳೆಯುವ ಹುಚ್ಚು ಒಳ್ಳೆಯದಲ್ಲವೇ? ನಮಗಿರುವ ಹುಚ್ಚು ಯಾವುದು ಎಂದು ಎಂದಾದರೂ ಯೋಚಿಸಿದ್ದೇವೆಯೇ?

ಈ ಎಲ್ಲ ಮಾತಿನ ನಡುವೆ ಪ್ರದೀಪ ಎನ್ನುವ ಆ ವ್ಯಕ್ತಿ ನೆನಪಾಗುತ್ತಾನೆ. ಕಪ್ಪು ಬಣ್ಣದ ಸಾಧಾರಣ ಮೈಕಟ್ಟಿನ ಆತ ಪುಟ್ಟ ದ್ವೀಪ ರಾಷ್ಟ್ರವೊಂದರ ನಿವಾಸಿ. ಅರಳಿದಂತಿರುವ ಕನ್ನಡಿಗಣ್ಣು, ಅವನದ್ದೇ ಆದ ವಿಶಿಷ್ಟ ಲಯದ ಇಂಗ್ಲಿಷ್‌ ಭಾಷೆಯ ಆತ ನಮಗೆ ಪರಿಚಯವಾಗಿದ್ದು ಪ್ರವಾಸವೊಂದರ ಭಾಗವಾಗಿ. ಅಲೆಯುವ ಹುಚ್ಚಿರುವ ಜನ ಲೋಕದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ ಜೊತೆಗೆ ತಿರುಗಾಡುವವರ ಸೌಖ್ಯವೇ ತನಗೆ ಪ್ರೀತಿ ಎನ್ನುವವರೂ ಇದ್ದಾರೆಂಬುದು ತಿಳಿದಿದ್ದು ಆಗಲೇ. ಈತ ವೃತ್ತಿಯಲ್ಲಿ ಪ್ರವಾಸಿ ಗೈಡ್‌. ನಮ್ಮ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೆ ಅಲ್ಲಿ ʻಗೈಡ್‌ ಬೇಕೆ?ʼ ಎಂದು ಮುತ್ತಿಗೆ ಹಾಕುವ ಗುಂಪಿನಲ್ಲಿ ಆತನೂ ಇರಬಹುದಾಗಿದ್ದವ. ಆದರೆ ತಮಗೆ ತಿಳಿದಷ್ಟನ್ನು ತೋಚಿದಂತೆ ಒದರಿ, ಬಂದವರಿಂದ ದುಡ್ಡು ಕಿತ್ತು ಕಳಿಸುವ ಗೈಡ್‌ಗಳ ಸಾಲಿನಿಂದ ಗಾವುದಗಟ್ಟಲೆ ದೂರದಲ್ಲಿ ಇರುವವ ಈತ.

ʻತಿರುಗಾಡಿದಷ್ಟೇ, ತಿರುಗಾಡಿಸುವುದೂ ನನಗಿಷ್ಟʼ ಎನ್ನುವ ಈತ, ತನ್ನ ಕಾರು ಓಡುವ ಪ್ರತಿಯೊಂದು ರಸ್ತೆಯ ಪರಿಚಯವನ್ನೂ ಮಾಡಿಕೊಡಬಲ್ಲ. ಯಾವ ಊರಿನ ಮಳೆ-ಬೆಳೆ ಹೇಗೆ ಎಂಬುದರಿಂದ ಹಿಡಿದು ಅಲ್ಲಿನ ಡೆಮಗ್ರಾಫಿಕ್‌ ವಿಶ್ಲೇಷಣೆಯನ್ನೂ ನೀಡಬಲ್ಲ. ʻಈ ಭಾಗದಲ್ಲಿ ತುಂಬಾ ಎಮ್ಮೆ ಸಾಕುತ್ತಾರೆ. ಮಣ್ಣಿನ ಗಡಿಗೆಯಲ್ಲಿ ಹಾಲು ಹೆಪ್ಪಾಕಿ, ಮೊಸರು ಮಾರುತ್ತಾರೆ. ಅದನ್ನೊಮ್ಮೆ ತಿನ್ನದಿದ್ದರೆ ಈ ರಸ್ತೆಯಲ್ಲಿ ಪ್ರಯಾಣ ಮಾಡಿದ್ದೇ ವ್ಯರ್ಥʼ ಎಂದು ಸರಕ್ಕನೆ ಗಾಡಿ ನಿಲ್ಲಿಸಿ, ಎರಡು ಪುಟ್ಟ ಗಡಿಗೆಗಳನ್ನು ಹಿಡಿದು ತರುತ್ತಾನೆ. ʻಇಷ್ಟು ದೂರ ಬಂದವರು ಈ ಸಿಹಿ ತಿನ್ನದಿದ್ದರೆ, ನಿಮ್ಮ ತಿರುಗಾಟವೇ ಅಪೂರ್ಣʼ ಎನ್ನುತ್ತಾ ಯಾವುದೋ ಸಿಹಿ ಎದುರಿಗಿಡುತ್ತಾನೆ. ʻಇಲ್ಲಿ ಭರಪೂರ ತರಕಾರಿ ಬೆಳೆಯುತ್ತಾರೆ. ಇದರಲ್ಲೊಂದು ಸಲಾಡ್‌ ಮಾಡುತ್ತೇನೆ ನೋಡಿ, ತಿನ್ನುವುದಕ್ಕೆ ಪುಣ್ಯ ಬೇಕುʼ ಎಂದು ಉಪಚಾರ ಮಾಡುತ್ತಾನೆ. ಇಂಥ ಯಾವುದನ್ನೂ ಮಾಡಬೇಕಾದ ಅಗತ್ಯ ಆತನಿಗಿಲ್ಲ. ನಮ್ಮ ಜಾಗಕ್ಕೆ ಕರೆದೊಯ್ದರೆ ಅವನ ಕೆಲಸ ಮುಗಿಯಿತು; ಅವನ ದುಡ್ಡು ಅವನ ಕೈ ಸೇರುತ್ತದೆ. ʻತಿರುಗಾಡುವುದು, ತಿರುಗಾಡಿಸುವುದು ನಂಗೊಂಥರಾ ಹುಚ್ಚು. ಹೊಸ ಜನರೊಂದಿಗೆ ನಂಟು ಬೆಸೆಯುವುದು, ಅವರನ್ನು ಖುಷಿಯಾಗಿಡುವುದು ನಂಗಿಷ್ಟʼ ಎನ್ನುತ್ತಾ ಹಿಂದಿ ನಟ ದೇವಾನಂದ್‌ ರೀತಿಯಲ್ಲಿ ನಗೆ ಬೀರುತ್ತಾನೆ.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಗುರಿ ತಲುಪುವುದಕ್ಕಿಂತ ಖುಷಿ ನೀಡುವುದು ಗಮ್ಯದೆಡೆಗಿನ ದಾರಿಗಳಲ್ಲವೇ? ಯಾವುದೇ ದಾರಿಯಲ್ಲಿ ಎದುರಾಗುವ ಊರೊಂದರ ಹೆಸರಿನ ಹಿಂದಿನ ಗಮ್ಮತ್ತು ತಿಳಿಸುವುದು, ಯಾವುದೋ ದೇಶದಿಂದ ಬರುವ ಚಿತ್ರವಿಚಿತ್ರ ಅಲೆಮಾರಿಗಳ ಜಾಯಮಾನ ವಿಸ್ತರಿಸುವುದು- ಇವೆಲ್ಲ ತನ್ನ ಪ್ರಯಾಣಿಕರ ದಾರಿಯನ್ನು ಬೋರಾಗದಂತೆ ಕಳೆಯುವ ಮತ್ತು ಅವರೊಂದಿಗೆ ನಂಟು ಬೆಸೆಯುವ ಆತನ ಉದ್ದೇಶಕ್ಕೆ ಒದಗುವಂಥವು. ವಿಹಾರಕ್ಕೆ, ವಿರಾಮಕ್ಕೆ, ಅಧ್ಯಯನಕ್ಕೆ ಮುಂತಾದ ಹಲವು ಕಾರಣಗಳನ್ನು ಹೊತ್ತು ಬರುವ ಜನರ ಕಥೆಗಳು ಆತನ ಸಂಚಿಯಲ್ಲಿವೆ. ಎಲ್ಲರಿಗೂ ಅವರವರ ಉದ್ದೇಶ ಈಡೇರುವಂತೆ ಶ್ರಮಿಸುವುದು ತನಗೆ ಪ್ರಿಯವಾದ ಸಂಗತಿ ಎನ್ನುವ ಇಂಥವರು ಜೊತೆಗಿದ್ದರೆ, ಅಲ್ಲಾವುದ್ದೀನನ ಮಾಂತ್ರಿಕ ಚಾಪೆಯ ಮೇಲೆ ತೇಲಿದಂತೆ ದಾರಿ ಸಾಗುತ್ತದೆ. ಇಂಥವರನ್ನು ನೋಡಿದಾಗ, ಇನ್ನೊಬ್ಬರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವ ಸ್ವಭಾವದ ಬಗ್ಗೆ ಬೇರೆ ಶಬ್ದಗಳು ನೆನಪಾಗುತ್ತಿಲ್ಲ.

ಹಣ, ಸಂಪತ್ತು, ಖ್ಯಾತಿ, ಅಧಿಕಾರಗಳ ಹುಚ್ಚು ಅಂಟಿಸಿಕೊಂಡವರು ನಮ್ಮೆದುರಿಗೆ ಮೆರವಣಿಗೆ ಹೊರಟಿದ್ದಾರೆ ಈಗ. ಚುನಾವಣೆಯ ಕಣದಲ್ಲಿಳಿದು ಅಧಿಕಾರ ದಕ್ಕಿಸಿಕೊಳ್ಳಲು, ದಕ್ಕದಿದ್ದರೆ ಯಾವ ಮಟ್ಟಕ್ಕೂ ಇಳಿಯುವಷ್ಟು ಹುಚ್ಚರಾಗಿದ್ದಾರೆ ಇಂದು. ಯಾರಿಗಾಗಿ ತಾವು ಆಯ್ಕೆಯಾಗುತ್ತಿದ್ದೇವೆಯೋ ಅವರ ಸೌಖ್ಯವನ್ನು ಗಮನಿಸುವುದೇ ಮರುಳು ಎನಿಸುತ್ತಿದೆ ಅಭ್ಯರ್ಥಿಗಳಿಗೆ. ಇಂಥವುಗಳನ್ನು ನೋಡಿದಾಗ ಮತ್ತದೇ ಪ್ರಶ್ನೆಗಳು ಮೂಡುತ್ತವೆ. ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ? ಹುಚ್ಚಿಗೆ ಹೆಚ್ಚಿಗೆ ಅರ್ಥಗಳಿಲ್ಲವೆಂದು ಈಗಲೂ ಹೇಳಬಹುದೇ?

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading

ಅಂಕಣ

ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ರಾಜಮಾರ್ಗ ಅಂಕಣ: ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ.

VISTARANEWS.COM


on

reading rajamarga column
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಏಪ್ರಿಲ್ 23 – ಇಂದು ವಿಶ್ವ ಪುಸ್ತಕ ದಿನ (World book day). ಓದುವ (Reading) ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗೆಯೇ ಇಂದು ಖ್ಯಾತ ನಾಟಕಕಾರ ಶೇಕ್ಸ್‌ಪಿಯರ್ (Shakespeare) ಹುಟ್ಟಿದ ದಿನ ಕೂಡ. ಹಾಗೆಯೇ ಆತ ಮೃತಪಟ್ಟ ದಿನ ಕೂಡ ಇದೇ ಏಪ್ರಿಲ್ 23!

ಓದುವ ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ?

ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ. ಹಾಗೆಯೇ ಅವರು ರಷ್ಯನ್ ಲೇಖನ ಲಿಯೋ ಟಾಲ್ಸ್ಟಾಯ್ ಅವರ ಪುಸ್ತಕಗಳನ್ನು ಓದಿ ಪ್ರಭಾವಿತರಾದರು.

ಭಗತ್ ಸಿಂಗ್ ಅವರು ಲೆನಿನ್ ಬರೆದ ‘ಸ್ಟೇಟ್ ಆಂಡ್ ರಿವೊಲ್ಯುಶನ್’ ಪುಸ್ತಕವನ್ನು ಓದಿ ಸ್ಫೂರ್ತಿ ಪಡೆದೆ ಎಂದು ಹೇಳಿದ್ದಾರೆ. ಹೀಗೆ ಮಹಾಪುರುಷರು ಒಂದಲ್ಲ ಒಂದು ಪುಸ್ತಕಗಳಿಂದ ಪ್ರಭಾವಿತರಾದವರು .ಯಾವುದೇ ವ್ಯಕ್ತಿಯ ಬದುಕಿನ ಗತಿಯಲ್ಲಿ ಪ್ರಮುಖವಾದ ತಿರುವನ್ನು ತರುವ ಶಕ್ತಿಯು ಪುಸ್ತಕಗಳಿಗೆ ಇವೆ ಎಂದು ನೂರಾರು ಬಾರಿ ಸಾಬೀತು ಆಗಿದೆ.

ನನ್ನ ಬಾಲ್ಯದ ವಿಳಾಸ ಹೀಗೆ ಇತ್ತು – c/o ಲೈಬ್ರೆರಿ!

ನನಗೆ ಬಾಲ್ಯದಿಂದಲೂ ಓದುವ ಅನಿವಾರ್ಯ ವ್ಯಸನವನ್ನು ಅಂಟಿಸಿದವರು ನನ್ನ ಕನ್ನಡ ಶಾಲೆಯ ಅಧ್ಯಾಪಕರು. ಅವರು ತರಗತಿಯಲ್ಲಿ ಪಾಠವನ್ನು ಮಾಡುವಾಗ ಒಂದಲ್ಲ ಒಂದು ಪುಸ್ತಕದ ರೆಫರೆನ್ಸ್ ಕೊಡುತ್ತಿದ್ದರು. ಮತ್ತು ಸ್ಟಾಫ್ ರೂಮಿಗೆ ನಾವು ಹೋದಾಗ ಅದೇ ಪುಸ್ತಕವು ಅವರ ಟೇಬಲ್ ಮೇಲೆ ಸಿಂಗಾರಗೊಂಡು ಕೂತಿರುತಿತ್ತು. ನಾವು ಕೈಗೆ ಎತ್ತಿಕೊಂಡರೆ ‘ ಓದಿ ಹಿಂದೆ ಕೊಡು ಪುಟ್ಟ ‘ಎಂಬ ಮಾತು ತುಂಬ ಖುಷಿ ಕೊಡುತ್ತಿತ್ತು. ಹಾಗೆ ನಮ್ಮ ಕನ್ನಡ ಶಾಲೆಯ ಅಧ್ಯಾಪಕರಿಂದ ಆರಂಭವಾದ ನನ್ನ ಓದಿನ ವ್ಯಸನ ಇಂದಿನವರೆಗೂ ಮುಂದುವರೆದಿದೆ! ಈವರೆಗೆ ಸಾವಿರಾರು ಪುಸ್ತಕಗಳನ್ನು ಓದಿ ಮುಗಿಸಿದ್ದೇನೆ ಎನ್ನುವುದು ಅಭಿಮಾನದ ಮಾತು. ಈ ಓದು ನನ್ನ ಭಾಷೆ ಮತ್ತು ಚಿಂತನೆಯನ್ನು ಶ್ರೀಮಂತವಾಗಿ ಮಾಡಿತು.

ನನ್ನ ಬಾಲ್ಯ ಮತ್ತು ಯೌವ್ವನದ ಎಲ್ಲ ರಜೆಗಳು, ಸಂಜೆಗಳು ಕಳೆದದ್ದು ಕಾರ್ಕಳದ ವಿಸ್ತಾರವಾದ ಗ್ರಂಥಾಲಯದಲ್ಲಿ. ಹಾಗೆ ನನ್ನ ಗೆಳೆಯರು ನನ್ನನ್ನು C/O ಲೈಬ್ರೆರಿ ಎಂದು ತಮಾಷೆ ಮಾಡುತ್ತಿದ್ದರು.

ವಯಸ್ಸಿಗೆ ಸರಿಯಾದ ಪುಸ್ತಕಗಳ ಆಯ್ಕೆ

ನಮ್ಮ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬಾಲ್ಯದಲ್ಲಿ ಮೂಡಿಸುವುದು ಹೆತ್ತವರ ಮತ್ತು ಶಿಕ್ಷಕರ ಹೊಣೆ. ನಮ್ಮ ಕೈಯ್ಯಲ್ಲಿ ಪುಸ್ತಕಗಳು ಇದ್ದರೆ ಮಕ್ಕಳಿಗೆ ಓದು ಓದು ಎಂದು ಹೇಳುವ ಅಗತ್ಯ ಬೀಳುವುದಿಲ್ಲ. ಆದರೆ ಮಕ್ಕಳ ವಯಸ್ಸಿಗೆ ಅನುಗುಣವಾದ ಪುಸ್ತಕಗಳನ್ನು ನೀಡಿ ಓದಿಸುವುದು ಅಗತ್ಯ. ಅದರ ಬಗ್ಗೆ ಒಂದಿಷ್ಟು ಸೂತ್ರಗಳು ಇಲ್ಲಿವೆ.

Book Reading Habit in Children

ಬಾಲ್ಯದ 5-8 ವರ್ಷ – ಕಲ್ಪನಾ ಲೋಕ

ಈ ವಯಸ್ಸು ಮಕ್ಕಳಲ್ಲಿ ರಚನಾತ್ಮಕ ಯೋಚನೆಗಳು ಮತ್ತು ಕಲ್ಪನೆಗಳು ಮೂಡುವ ಅವಧಿ. ಆ ವಯಸ್ಸಿನ ಮಕ್ಕಳಿಗೆ ಕಾಲ್ಪನಿಕವಾದ ಪ್ರಾಣಿ, ಪಕ್ಷಿಗಳ ಕಥೆ ಹೊಂದಿರುವ ಚಿತ್ರ ಪುಸ್ತಕಗಳು ( ಕಾಮಿಕ್ಸ್) ಹೆಚ್ಚು ಉಪಯುಕ್ತ. ಪಂಚತಂತ್ರದ ಕಥೆಗಳು, ಕಾಕೋಲುಕೀಯ, ಈಸೋಪನ ಕಥೆಗಳು ಈ ವಯಸ್ಸಿನ ಮಕ್ಕಳಿಗೆ ಸೂಕ್ತ. ರಾಷ್ಟ್ರೋತ್ಥಾನ ಪರಿಷತ್ ಹೊರತಂದಿರುವ ‘ಭಾರತ ಭಾರತೀ ‘ ಸರಣಿಯ ಸಾವಿರಾರು ಕಿರು ಪುಸ್ತಕಗಳು ಈ ವಯಸ್ಸಿನ ಮಕ್ಕಳಿಗೆ ಓದಲು ಚಂದ.

ಬಾಲ್ಯದ 9-12 ವರ್ಷ – ಕುತೂಹಲದ ಪರ್ವಕಾಲ

ಈ ವಯಸ್ಸಿನ ವಿದ್ಯಾರ್ಥಿಗಳು ಸೃಜನಶೀಲವಾಗಿ ಯೋಚನೆ ಮಾಡುತ್ತಾರೆ ಮತ್ತು ನೈತಿಕ ಮೌಲ್ಯಗಳನ್ನು ನಿಧಾನವಾಗಿ ಜೀರ್ಣ ಮಾಡಿಕೊಳ್ಳುತ್ತಾರೆ. ಅವರಿಗೆ ವಿಜ್ಞಾನಿಗಳ ಕಥೆಗಳು, ಸಿಂದಬಾದನ ಸಾಹಸದ ಕಥೆಗಳು, ರಾಮಾಯಣ, ಮಹಾಭಾರತದ ಕಿರು ಪುಸ್ತಕಗಳು ಹೆಚ್ಚು ಇಷ್ಟವಾಗುತ್ತವೆ. ಆ ಪುಸ್ತಕಗಳಲ್ಲಿ ಹೆಚ್ಚು ಚಿತ್ರಗಳು ಇದ್ದರೆ ಮಕ್ಕಳು ಖುಷಿಪಟ್ಟು ಓದುತ್ತಾರೆ.

ಹದಿಹರೆಯದ 12-15 ವರ್ಷ – ಸಣ್ಣ ಸಣ್ಣ ಕನಸು ಮೊಳೆಯುವ ವಯಸ್ಸು

ಸಣ್ಣ ಕತೆಗಳು ಹೆಚ್ಚು ಇಷ್ಟ ಆಗುವ ವಯಸ್ಸದು. ಸ್ಫೂರ್ತಿ ನೀಡುವ ವಿಕಸನದ ಲೇಖನಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಎಡಿಸನ್ ತನ್ನ ಬಾಲ್ಯದ ಸಮಸ್ಯೆಗಳನ್ನು ಹೇಗೆ ಗೆದ್ದನು? ಅಬ್ರಹಾಂ ಲಿಂಕನ್ ಕಡುಬಡತನವನ್ನು ಮೆಟ್ಟಿ ಅಮೇರಿಕಾದ ಅಧ್ಯಕ್ಷ ಆದದ್ದು ಹೇಗೆ? ಮೊದಲಾದ ಸ್ಫೂರ್ತಿ ಆಧಾರಿತ ಕಥೆಗಳನ್ನು ಆ ವಯಸ್ಸಿನ ವಿದ್ಯಾರ್ಥಿಗಳು ಖುಶಿ ಪಟ್ಟು ಓದುತ್ತಾರೆ. ಹಾಗೆಯೇ ರಾಷ್ಟ್ರ ಪ್ರೇಮದ ಪುಸ್ತಕಗಳನ್ನು ಓದಲು ಆರಂಭ ಮಾಡಬೇಕಾದ ವಯಸ್ಸು ಇದು. ನಾನು ಒಂಬತ್ತನೇ ತರಗತಿಯಲ್ಲಿ ಓದಿದ ಬಾಬು ಕೃಷ್ಣಮೂರ್ತಿ ಅವರ ‘ ಅಜೇಯ ‘ ಪುಸ್ತಕವು ನನ್ನ ಬದುಕಿನಲ್ಲಿ ಭಾರೀ ಬದಲಾವಣೆ ತಂದಿತ್ತು. ಅದು ಖ್ಯಾತ ಕ್ರಾಂತಿಕಾರಿ ಚಂದ್ರಶೇಖರ್ ಆಝಾದ್ ಅವರ ಬದುಕಿನ ಪುಸ್ತಕ ಆಗಿದೆ.

15-18 ವಯಸ್ಸು – ಹುಚ್ಚು ಖೋಡಿ ಮನಸ್ಸು

ಈ ವಯಸ್ಸಿನ ವಿದ್ಯಾರ್ಥಿಗಳು ಸ್ವಲ್ಪ ಕುತೂಹಲ ಮತ್ತು ಹೆಚ್ಚು ಉಡಾಫೆ ಹೊಂದಿರುತ್ತಾರೆ. ಈ ವಯಸ್ಸಿನವರಿಗೆ ಹೆಚ್ಚು ಆಪ್ತವಾಗುವುದು ವಿಕಸನದ ಸ್ಫೂರ್ತಿ ನೀಡುವ ಲೇಖನಗಳೇ ಆಗಿವೆ. ಸಾಹಸ, ಪ್ರವಾಸ, ಸಂಶೋಧನೆ, ಸ್ವಲ್ಪ ರೋಮಾನ್ಸ್ ಇರುವ ಕತೆಗಳನ್ನು ಹೊಂದಿರುವ ಪುಸ್ತಕಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕತೆಗಳು, ಪೂರ್ಣಚಂದ್ರ ತೇಜಸ್ವಿ ಅವರ ರಂಜನೆ ಕಡಿಮೆ ಇರುವ ಕಥೆಗಳ ಪುಸ್ತಕಗಳನ್ನು ಅವರಿಗೆ ಕೊಟ್ಟು ನೋಡಿ. ಡುಂಡಿರಾಜರ ಹನಿಗವನಗಳು ಈ ವಯಸ್ಸಿನ ಓದುಗರಿಗೆ ತುಂಬ ಇಷ್ಟ ಆಗುತ್ತವೆ.

20-24 ವಯಸ್ಸು – ಯೌವ್ವನದ ಕಚಗುಳಿ

ಕಾಲೇಜು ಹಂತದ ವಿದ್ಯಾರ್ಥಿಗಳು ಭ್ರಮೆಯಿಂದ ಹೊರಬಂದು ವಾಸ್ತವದ ನೆಲೆಗಟ್ಟಿನ ಚಿಂತನೆಗಳನ್ನು ಹೊಂದಿರುತ್ತಾರೆ. ಕುವೆಂಪು, ಕಾರಂತ, ಭೈರಪ್ಪ, ರವೀ ಬೆಳಗೆರೆ…….ಮೊದಲಾದವರ ಗಂಭೀರ ಚಿಂತನೆ ಹೊಂದಿರುವ ಮತ್ತು ವಾಸ್ತವದ ನೆಲೆಗಟ್ಟಿನ ಕಾದಂಬರಿಗಳನ್ನು ಈ ವಯಸ್ಸಿನಲ್ಲಿ ಓದಲು ಆರಂಭ ಮಾಡಬೇಕು. ಹಾಗೆಯೇ ಆತ್ಮಚರಿತ್ರೆಯ ಪುಸ್ತಕಗಳನ್ನು ಓದಲು ಆರಂಭಿಸಬೇಕಾದ ವಯಸ್ಸು ಇದು. ಅಬ್ದುಲ್ ಕಲಾಂ ಅವರ ಅಗ್ನಿಯ ರೆಕ್ಕೆಗಳು ಮತ್ತು ಪ್ರಜ್ವಲಿಸುವ ಮನಸುಗಳು ಇವೆರಡು ಪುಸ್ತಕಗಳನ್ನು ಈ ವಯಸ್ಸಿನ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ಕೊಟ್ಟರೆ ಅವರು ತುಂಬಾ ಖುಷಿ ಪಡುತ್ತಾರೆ. ಷಡಕ್ಷರಿ ಅವರ ‘ ಕ್ಷಣ ಹೊತ್ತು ಆಣಿ ಮುತ್ತು ‘ ಅಂಕಣಗಳು ಮತ್ತು ಪ್ರತಾಪ ಸಿಂಹ ಅವರ ‘ಬೆತ್ತಲೆ ಜಗತ್ತು ‘ ಅಂಕಣಗಳು ಹೆಚ್ಚು ಖುಷಿ ಕೊಡುವ ವಯಸ್ಸು ಅದು.

25-28 ವಯಸ್ಸು – ಬದುಕಿನ ಸೌಂದರ್ಯದ ವಸಂತ ಕಾಲ

ಮನಸ್ಸು ಮಾಗಿ ಪ್ರಬುದ್ಧತೆಯು ಮೂಡುವ ಈ ವಯಸ್ಸಲ್ಲಿ ಬದುಕಿನ ಸೌಂದರ್ಯದ ಅನುಭೂತಿ ಮೂಡಿಸುವ ತ್ರಿವೇಣಿ, ಸಾಯಿಸುತೆ, ಅನಕೃ, ದೇವುಡು, ತರಾಸು, ನಾ ಡಿಸೋಜಾ ಅವರ ಕಾದಂಬರಿಗಳು ಹೆಚ್ಚು ಆಪ್ತವಾಗುತ್ತವೆ. ಭಾವಗೀತೆಗಳ ಓದು ಖುಷಿ ಕೊಡುತ್ತದೆ. ಸೋತವರ ಕಥೆಗಳು ಹೆಚ್ಚು ಆಪ್ತವಾಗುತ್ತವೆ. ಕಾದಂಬರಿಯ ಓದು ಹೆಚ್ಚು ತಾಳ್ಮೆಯನ್ನು ಬೇಡುತ್ತದೆ. ಆದರೂ ಒಮ್ಮೆ ಅವರು ಓದುವ ಅಭಿರುಚಿ ರೂಢಿಸಿಕೊಂಡರೆ ಅವರು ಅಂತಹ ಪುಸ್ತಕಗಳನ್ನು ಪ್ರೀತಿ ಮಾಡಲು ತೊಡಗುತ್ತಾರೆ.

ಭರತ ವಾಕ್ಯ

ನನ್ನಂತಹ ಭಾಷಣಕಾರ ಮತ್ತು ತರಬೇತಿದಾರನನ್ನು ಜೀವಂತ ಆಗಿಡುವುದೇ ಪುಸ್ತಕಗಳು ಮತ್ತು ಪುಸ್ತಕಗಳು! ಸಾಮಾಜಿಕ ಜಾಲತಾಣಗಳ ಕಾರಣಕ್ಕೆ ಓದುಗರ ಸಂಖ್ಯೆ ಕಡಿಮೆ ಆಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದು ಪೂರ್ತಿ ನಿಜವಲ್ಲ.

ವಿಶ್ವ ಪುಸ್ತಕ ದಿನವಾದ ಇಂದು ನೀವು ನಿಮ್ಮ ಮಕ್ಕಳಲ್ಲಿ ಓದುವ ಸಂಕಲ್ಪ ಹುಟ್ಟಿಸಿದಿರಿ ಅಂತಾದರೆ ಅದು ಸಾರ್ಥಕ ಹೆಜ್ಜೆ ಆಗುತ್ತದೆ. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

Continue Reading
Advertisement
murder case bengaluru karaga
ಕ್ರೈಂ20 mins ago

Murder Case: ಕರಗ ಉತ್ಸವದ ವೇಳೆ ಅಣ್ಣಮ್ಮ ದೇವಾಲಯದ ಮುಂದೆ ಹಲ್ಲೆ, ಯುವಕ ಸಾವು

arijit singh rajamarga column 2
ಅಂಕಣ46 mins ago

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Karnataka Weather
ಕರ್ನಾಟಕ1 hour ago

Karnataka Weather: ಇಂದು ಮೈಸೂರು, ಕೊಡಗು ಸೇರಿ ವಿವಿಧೆಡೆ ಮಳೆ; ಮುಂದಿನ 5 ದಿನ ತಾಪಮಾನದಲ್ಲಿ ಭಾರಿ ಏರಿಕೆ!

Modi
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ರೈಲ್ವೇ ಇಲಾಖೆಯ ಸುಧಾರಣೆ ಕ್ರಮಗಳು ಪ್ರಶಂಸಾರ್ಹ

Baking Soda
ಆರೋಗ್ಯ2 hours ago

Baking Soda: ಅಡುಗೆ ಸೋಡಾ ನಿಜಕ್ಕೂ ಆರೋಗ್ಯಕ್ಕೆ ಕೆಟ್ಟದ್ದಾ?

World Malaria Day
ಆರೋಗ್ಯ3 hours ago

World Malaria Day: ಭಾರತದಲ್ಲಿ ಮಲೇರಿಯಾಗೆ ಪ್ರತಿವರ್ಷ 20 ಸಾವಿರ ಬಲಿ; ಸೊಳ್ಳೆಗಳು ಭಾರಿ ಡೇಂಜರ್‌!

dina bhavishya read your daily horoscope predictions for April 25 2024
ಭವಿಷ್ಯ7 hours ago

Dina Bhavishya : ಇಂದು ಈ ನಾಲ್ಕು ರಾಶಿಯವರಿಗೆ 4 ಲಕ್ಕಿ ನಂಬರ್!

PM
ದೇಶ8 hours ago

ಪ್ರಧಾನಿ ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

Union Minister Pralhad Joshi Statement in Unakal
ಹುಬ್ಬಳ್ಳಿ8 hours ago

Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ

DC vs GT
ಕ್ರೀಡೆ8 hours ago

DC vS GT: ಗುಜರಾತ್​ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು ; ಪ್ಲೇ ಆಫ್​ ರೇಸ್ ಜೀವಂತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌