ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಶ್ರಾವಣಾ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಶ್ರಾವಣಾ

ಊರತುಂಬ ಪುಕ್ಸಟ್ಟೆ ಪ್ರಚಾರಗೊಂಡ ನಿಜಗುಣಿ ಮಳೆಗೆ ಕೂಡ್ರುವ ಮಾತು ತಾಸಿಗೊಂದು ರೂಪ ತಳೆಯುತಿತ್ತು. ಕಳ್ಳನಿದ್ದ ನಿಜಗುಣಿ ಕಾಳಿದಾಸನಾದ ಪರಿ ಹೇಗೆ..? ಅಂತಲೂ ಚರ್ಚಿತಗೊಂಡಿದ್ದ.

VISTARANEWS.COM


on

shravana short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
basavanneppa kambara story writer

:: ಬಸವಣ್ಣೆಪ್ಪ ಕಂಬಾರ

ಕಡಲಿಗೆ ಬಂತು ಶ್ರಾವಣ | ಕುಣಿದ್ಹಾಂಗ ರಾವಣಾ | ಕುಣಿದಾಗ ಗಾಳಿ | ಭೈರವನ ರೂಪತಾಳಿ ||
– ದ.ರಾ.ಬೇಂದ್ರೆ

ಈ ಸಲಾನು ಬರಗಾಲ ತಪ್ಪಲಿಲ್ಲ.
ಗುರ್ಚಿ ತಿರಗಲು ಬಂದ ಧಾಮನಿ ಚಿನ್ನವ್ವ ಮನೆ ಮನೆ ತಿರುಗಿ “ ಗುರ್ಚಿಗೆ ನೀರ ಹಾಕ್ರವಾ.. ಎಂದು ಕೂಗಿ “ ನಿಜಗುಣಿ ಮಳಿಗಿ ಕುಂದರತಾನಂತಪಾ” ಅಂತ ಸುದ್ದಿ ಮುಟ್ಟಿಸಿ ಮುಂದಿನ ಮನಿಗಿ ಹೆಜ್ಜೆಯಿಟ್ಟಳು. ಶಿವಾಪೂರಿನ ಸಮಸ್ತ ಹೆಣ್ಣು ಗಂಡೆಲ್ಲ ಈ ಸುದ್ದಿ ಕೇಳಿ ಕ್ಷಣ ದಿಗಿಲುಗೊಂಡರು. ತುಡುಗ ನಿಜಗುಣಿಯ ಚಿತ್ರಣವನ್ನು ಕಣ್ಣಲ್ಲಿ ಕ್ಲಿಕ್ಕಿಸಿಕೊಂಡು ಅವನ ರಂಪಾಟಗಳ ನೆನಸಿಕೊಂಡರು. ಗ್ರಾಮದ ಹಿರಿಯ ಕಳ್ಳನು ಹಾಗು ಮಹಾ ಕುಡುಕನು ಆಗಿದ್ದ ನಿಜಗುಣಿ ಮಳಿಗಿ ಕೂಡ್ರುವ ಸುದ್ದಿ ಕೇಳಿ ಕೆಲವರು ಪೆಕರು ಪೆಕರಾಗಿ ಹಲ್ಲುಕಿರಿದರು. ಇನ್ನ ಕೆಲವರು ರವ ರವ ಸಿಟ್ಟಿನಿಂದ ನಿಡುಸುಯ್ದರು. “ಕುಡುಕರೆಲ್ಲ ಕಲ್ಯಾಣದ ಬಸವಣ್ಣರಾಗಾತಾರ ಚಾಂಗ ಬಲೋ… ಅಂತ ಸಿಡುಕಿದರು. ಇನ್ನ ಕೆಲವರಿಗೆ ಅವನ ದುಸ್ಸಾಹಸಗಳ ಪರಿಚಯವಿದ್ದವರು “ಕುಡ್ಯಾಕ ಇದೊಂದ ಹೊಸಾ ಆಟಾ ಹೂಡಿದಾನ ತಗೋ ಮಕಾಟ್ಯಾ ಅಂತ ಉಡಾಫೆ ಮಾತಾಡಿದರು. ಸ್ವಲ್ಪ ಜನ ತುಟಿಯೊಳಗ ನಕ್ಕು ಮನಸ್ಸಿನೊಳಗ ಕೊಂದ ಹಾಕ ಬೇಕ ಇಂತಾ ಅಡ್ನಾಡಿ ಸೂ..ಮಕ್ಳನ್ನ ಅಂತ ಒಳಗೊಳಗ ಅವುಡಗಚ್ಚಿದರು. ನಿತ್ಯ ತಮ್ಮ ಜೊತೆಗೆ ಬಿದ್ದುಕೊಂಡಿದ್ದು, ಅರ್ಧಾ ಸಿನ್ನರ ಬೀಡಿಗೆ ಲಾಟರಿ ಹೊಡೆಯುವ ನಿಜಗುಣಿ ಹಾಗೂ ಆತನ ಐದಾರು ಜನ ಥರ್ಡಕ್ಲಾಸ ಲೋಫರಗಳಾದ ನಾಯಿ ರಾಣ್ಯಾ, ಗದಿಗ್ಯಾ, ನಾಗ್ಯಾ, ಸಿಂಬಿ ಮಣಿ ಇವರಿಗೆಲ್ಲ ನಿಜಗುಣಿ ಮಳಿಗಿ ಕುಂದರತಾನ ಅನ್ನೋದ ಕೇಳಿ ಮುಗಿಲನ್ನೊಮ್ಮಿ ಅವರವರ ಮುಖಗಳನ್ನೊಮ್ಮಿ ನೋಡಿಕೊಂಡರು. ಖದೀಮರ ನಾಯಕನಾಗಿದ್ದ ನಿಜಗುಣಿ ಹೋದವಾರ ಗುಡ್ಡದ ನಿರ್ವಾಣೆಪ್ಪಗ ಹೋಗಿ ಬಂದ ಸುದ್ದಿ ಸ್ನೇಹಿತರ ಮುಂದೆ ಹೇಳಿಕೊಂಡಿದ್ದ. ಅದನ್ನು ಕೇಳಿ ಅವರಿಗೆ ಅತ್ಯಂತ ಸೋಜಿಗವೆನಿಸಿದ ಸಂಗತಿಯೆಂದರೆ ಕಳುವು ಮಾಡಲು ಅಲ್ಲಿ ಇರೊದಾದರು ಎನು..? ವ್ಯರ್ಥ ಪ್ರಯತ್ನವೆಂದು ಪೆಚ್ಚುಮೋರೆ ಹಾಕಿದ್ದರು. ಕುಡಿದ ಮತ್ತಿನಲ್ಲಿ ಒಬ್ಬರಿಗೊಬ್ಬರು ಟವಳಿ ಮಾಡುತ “ಮಳೆ ಬಂದರೆ ನಾನು ಹುಣ್ಸಿ ಗಿಡಾ ಹಚ್ತಿನಿ,.. ನಾ .ಬೇಯಿನ ಗಿಡಾ ಹಚ್ತಿನಿ… ಮತ್ತೋಬ್ಬ. ನಾ ನಾಲ್ಕ ಎಕರೇ ಗೊಂಜಾಳ ಬಿತ್ತತೀನಿ..ಊರೇಲ್ಲ ಹಬ್ಬಾ ಮಾಡೋಣ್ರೋ.. ಅಂತ ಹೇಳಿ ಜೋರಾಗಿ ನಕ್ಕಿದ್ದರು. ಇನ್ನಿಬ್ಬರು ಮುಂದೆ ಬಂದು “ ಬಾ..ಬಾ ಮಳೆಯೆ ಅಂಗಳ ತೊಳೆಯೆ” “ಹಸಿರ ಅಂಗಿ, ಕೊಡಿಸು ನಿಂಗಿ” ಅಂತ ಕೈ ಕೈ ಹಿಡಿದು ಸುತ್ತುವರೆದು ಹಾಡುತ ಕುಣಿದರು ನಿಜಗುಣಿ ಮಳಿಗಿ ಕೂಡ್ರತಾನ ಅನ್ನುವ ಸುದ್ದಿ ಕೇಳಿ ಬೇಜಾರು, ಅಸಮಾಧಾನಕ್ಕಿಂತ ಒಂತರಾ ಖುಷಿ ಚಿಗುರೊಡೆದಿತ್ತು.
ಮುಂದಿನ ತಿಂಗಳು 12ರಿಂದ ಶ್ರೀ ಪ್ಲವನಾಮ ಸಂವಂತ್ಸರ ಆಷಾಡ ಶ್ರಾವಣ ಮಾಸದ ಮೊದಲ ಸನ್ ಸ್ವಾಮಾರ ಶುರುವಾಯಿತೆಂದು ಪಂಚಾಂಗ ನೋಡಿ ಗ್ರಾಮದ ಬೆರಳೆನಿಕೆಯಲ್ಲಿರುವ ಯಾವ ಧರ್ಮಾಧಿಕಾರಿಗಳು, ಲೆಕ್ಕದೈ, ಅಥವಾ ಶಾಸ್ತ್ರೀಗಳು ಅವನಿಗೆ ಹೇಳಿದರೊ ಗೊತ್ತಿಲ್ಲ ಹಿಂದಿನ ಸ್ವಾಮಾರ ಗುಡ್ಡದ ನಿರ್ವಾಣೆಪ್ಪಗ ಹೋಗಿ ಹಣಿ ತುಂಬ ವಿಭೂತಿ ಹಚಗೊಂಡು ಸನ್ ಮಾಡಿ ಶಿವಭಕ್ತನಾಗಿದ್ದ.

ಬೆಳಗಿನ ಪೂಜೆಗೆ ಹೂ ಪತ್ರಿ. ಅಭಿಷೇಕದ ಸಾಮಾನಗಳನ್ನೆಲ್ಲ ಹೊತ್ತು ಬರುತ್ತಿದ್ದ ಹೆಂಗಸರು, ಗಂಡಸರು ಅಂದಾನಪ್ಪ ಸ್ವ್ವಾಮಿಗಳು ಪರಕನಟ್ಟಿ, ಗುಡಿಕ್ಷೇತ್ರ, ಶಿಂಧಿಹಟ್ಟಿ ಭಕ್ತರು ನಿಜಗುಣಿ ನೋಡಿ ಕೆಲವರು ಬೆರಗಾದರೆ, ಇನ್ನ ಕೆಲವರು ಹಲ್ಲ ಕಡಿದರು.. “ಈ ತುಡುಗ ಹಡ್ಸಿಮಗಗ ದೇವರು ದೇವಸ್ಥಾನನು ಸಾಲತಿಲ್ಲ. ಜಗತ್ತಿನಾಗ ಹುಳಾ ಮುಟ್ಟಿ, ಹಾರ್ಟ ಆಗಿ, ಎಡವಿ ಬಿದ್ದ ಎಂತೆಂತ ಪುಣ್ಯವಂತರೆಲ್ಲ ಸಾಯತಾರ ಈ ಮಕ್ಳ ಭವಿಷ್ಯ ಅದ್ಹೇಂಗ ಗಟ್ಟಿಕಟಿಗೊಂಡ ಬಂದಾರತಾರೋ ಎನೋ..? ಅಂತ ಹುಬ್ಬೇರಿಸಿದರು. ಇನ್ನ ಕೆಲವರು ಅತೀಯಾದ ಬೇಸರದಿಂದ “ದೇವರು ಎನ ಶಾಣ್ಯಾ ಅಲ್ಲ ಬಿಡೋ ಮಾರಾಯಾ.. ಇದನ್ನೆಲ್ಲ ನೋಡಿದರ ಅಂತ ಹತಾಶೆಯಿಂದ ನುಡಿದರು ಹಾಡಹಗಲೇ ಕಳ್ಳನೊಬ್ಬ ದೇವಸ್ಥಾನದ ಕದಿಯಲು ಸಮಸ್ತ ಭಕ್ತರ ಸಮ್ಮುಖದಲ್ಲಿ ಭಕ್ತನ ರೂಪದಲ್ಲಿ ಬಂದದ್ದು ನೋಡಿ ತಲಿಗಿ ರಾಡಿನಿಂದ ಹೊಡೆದಂಗಾಯ್ತು ಅಂದಾನಪ್ಪನಿಗೆ “ನಿಜಗುಣ್ಯಾ ಊರ ಸಾಲಲಿಲ್ಲಂತ ಊರ ದೇವಸ್ಥಾನ ಲೂಟಿ ಮಾಡಾಕ ಬಂದಿ..?ಶೆರೆ ಕುಡ್ಯಾಕ ನಿಮಗು ಏನು ಸಾಲವಲ್ದಲ್ಲ ಬಾರೋ ನನ್ನ ಶೆರೆ ಅಂಗಡ್ಯಾಗ ಒತ್ತೇಇಟ್ಟು ಕುಡದಿಯಂತ.. ನಡೀಲೆ..ಬೋಸಡಿಕೆ…? ಅಂತ ಕೈಯಲ್ಲಿನ ಧೂಪಾರ್ತಿಯ ಕೆಳಗ ಕುಕ್ಕರಿಸಿ ಕೈಯಾಗಿನ ಗಂಟೆಯನ್ನು ಅವನತ್ತ ಬೀಸಿ ಒಗೆದ. ನಿಜಗುಣಿ ಕತ್ತು ವಾಲಿಸಿ ತಪ್ಪಿಸಿಕೊಂಡು ಅಲ್ಲಿಂದ ಹೊರ ನಡೆದ. ಗುಡ್ಡ ಇಳಿಯತೊಡಗಿದ. ಗುಡ್ಡಕ ಬರುವ ಹೋಗುವವರೆಲ್ಲ ದಿಟ್ಟಿಸಿ ನೋಡುತ್ತಿದ್ದರು ಯಾರೋ ಅಪ್ಪಿ ತಪ್ಪಿ ಮಾತಾಡಿಸಿದರು ಕ್ಯಾರೆ ಅನದೆ ಕೆಳಗಿಳಿದು ಬಂದುಬಿಟ್ಟ.

000000000000

ಈ ಸಲದ ಶ್ರಾವಣ ಮುಗಿಯೋವರೆಗು ಶಂಕರಯ್ಯ ಸ್ವಾಮಿಗಳಿಗೆ ಬಿಡುವಿಲದಷ್ಟು ಕೆಲಸ. ಲಕ್ಷ ದೀಪೋತ್ಸವ, ತಿಂಗಳ ಕಾಲ ಪ್ರವಚನ, ದೇವಸ್ಥಾನದ ಅಲಂಕಾರ,, ಹೋಗುವ ಬರುವವವರ ಆತಿಥ್ಯ. ಭಕ್ತರ ಮನೆಗಳಿಗೆ ವಾರ್ಷಿಕ ಪೂಜೆಗೆ ಹೋಗುವುದು, ಬೇರೆ ಬೇರೆ ಊರುಗಳಿಂದ ಶ್ರೀಗಳನ್ನು ಕರೆಸಿ ಪ್ರವಚನ ನಡೆಸುವುದು, ಆಹ್ವಾನ ಪತ್ರಿಕೆ ಪ್ರಕಟಣೆ ಹಾಗು ವಿತರಣೆ, ಪತ್ರಿಕಾ ಪ್ರಕಟಣೆ ನೀಡುವುದು ಹೀಗೆ ಊರೆಲ್ಲ ದೇಣಿಗೆ ಧಾನ್ಯ ಸಂಗ್ರಹಿಸುವುದು ಇದಕ್ಕಾಗಿ ಊರಿಂದೂರಿಗೆ ಬಿಡುವಿಲ್ಲದಂತೆ ಸುತ್ತಾಟ. ಇದಾದ ಮೇಲೆ ದೀಪಾವಳಿ ಹೊತ್ತಿಗೆ ಮಗನನ್ನು ಉತ್ತರಾಧಿಕಾರಿ ಮಾಡುವ ವಿಚಾರ ಊರ ಪ್ರಮುಖರೊಂದಿಗೆ ಈ ಹಿಂದೆ ಚರ್ಚೆ ಮಾಡಿದ್ದು ಋಣಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಈ ಎಲ್ಲ ಕೆಲಸಗಳಿಗೆ ಆನೆಬಲ ತಂದಿತ್ತು. ಅಷ್ಟೇ ಏಕೆ ತನ್ನ ಕಾಯಕದ ನಿಷ್ಠೆಯಿಂದಲೆ ಪ್ರಸಿದ್ದಿಯಾಗಿದ್ದ ಶಂಕರಯ್ಯನವರು ತಮ್ಮ ಮಗನು ತಮ್ಮಂತೆ ಮುಂದಿನ ಶ್ರಾವಣಕ್ಕೆ ಪೀಠಾಧಿಪತಿಯಾಗುವ ಕನಸನ್ನು ಹೊತ್ತು ತಿರುಗುತ್ತಿದ್ದರು. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಅನ್ನುವಂತೆ ಅಂದಾನಪ್ಪನವರು ಶಂಕರಯ್ಯನವರಿಗೆ ನಿನ್ನೆ ಸಂಜೆನೆ ಹೊಲೇರ ನಿಜಗುಣಿ ಗುಡ್ಡದ ಮ್ಯಾಲಿನ ಪಂಚಲಿಂಗೇಶ್ವರ ದೇವಸ್ಥಾನದಾಗ ಮಳೆಗೆ ಕೂಡ್ರತಾನ ಅನ್ನುವ ಸುದ್ದಿ ಮುಟ್ಟಿಸಲು ಹವಣಿಸುತ್ತಿದ್ದ ಆಗಿರಲಿಲ್ಲ. ಕೊನೆಗೆ ಅಟ್ಟದ ಮೇಲೆ ಒಬ್ಬರೇ ಜಪಕ್ಕೆ ಕುಳಿತಾಗ “ ತುಡಗ ನಿಜಗುಣ್ಯಾ ಗುಡ್ಡದ ಮ್ಯಾಲ ಮಳಿಗಿ ಕುಂದ್ರತಾನಂತ “ ಸುದ್ದಿ ಒದರಿದ.

“ ಮಳಿಗಿ ಕುಂದರತಾನು..? ನೀರಾಗಿದ್ದ ಕಲ್ಲ ಎಂದರ ಮೆತ್ತಗಾದಿತಾ..? ಅಂತಂದು ಕಣ್ಣ ಬಿಟ್ಟರು.. ಮನಸ್ಸು ವಿಕೇಂದ್ರಿಕರಣಗೊಂಡು ರೆಪ್ಪೆಗಳು ಮತ್ತೆ ಒಂದುಗೂಡಲಿಲ್ಲ. ರುದ್ರಾಕ್ಷಿ ಮಣಿಗಳು ಮುಂದಕ್ಕ ಹೋಗಲಿಲ್ಲ.
“ ನೀ ನಮ್ಮ ಹುಡುಗರಿಗೆಲ್ಲ ತಿಳಿಸು ಇನ್ನು ಶ್ರಾವಣ ಶುರುವಾತು ಲಕ್ಷ ದೀಪೋತ್ಸವ ನಡೀತದ. ಅತ್ತ ಇತ್ತ ಯಾರಿಗೂ ತಿರಿಗ್ಯಾಡಾಕ ಬಿಡಬ್ಯಾಡ ಅಂತ ಶಂಕರಯ್ಯ ಎಚ್ಚರಿಸಿದ. ನಾನು ಛೇರ್ಮನ ಶಿವಪ್ಪನ ಜೋಡ ಮಾತಾಡಿ ಗುಡ್ಡ ಹತ್ತಬಾರದಂಗ ಮಾಡಿಸ್ತಿನಿ. ಸಮಾಧಾನವಾಗಿ ಹೇಳಿದರು ವಿಷಯ ಅಷ್ಟು ನೆಮ್ಮದಿದಾಯಕವಾಗಿಲ್ಲ ಅನ್ನೋದು ಎಲ್ಲರಿಗು ಹಂತ ಹಂತವಾಗಿ ಅರಿವಾಗುತಿತ್ತು. ಎಂದೂ ಇಲ್ಲದ ಇಂತ ಅವಗಡ ನಾಂದಿ ಹೆಂಗಾಯ್ತು..? ಇದರ ಹಿಂದಿರುವ ಷಡ್ಯಂತ್ರವೇನು..? ಎಂಬುದರ ಬಗ್ಗೆ ಮನಸ್ಸು ಬೆಳಕ ಹುಡುಕುತಿತ್ತು. ಮರುದಿನ ಗವಯಗೊಳ ಸಿದ್ದಪ್ಪ. ಪರಪ್ಪ. ಗಂಗಾಧರ ಎಡ್ರಾಮಿ ಬಾಳು ಇವರ ಜೊತಿಗಿ ದೇವಸ್ಥಾನ ಕಮಿಟಿ ಸದಸ್ಯರು ಸೇರಿ ಶಂಕರಯ್ಯನವರ ಬಳಿ ಬಂದರು.

“ಶಂಕರಯ್ಯನವರೇ ಎನೀದು. ಅನಾಚಾರ…? ನೀವ ಬದುಕಿರುವಗಲೇ ಇಂತಹಾ ಅಪಚಾರಗಳು..? ಗಾಬರಿಯಿಂದ ಕೇಳಿದ ಪ್ರಶ್ನೆಗೆ ಅಖಂಡವಾಗಿ ಯೋಚಿಸುತ್ತಿದ್ದ ಅವರ ಕಣ್ಣುಗಳ ದುರ್ಬಲತೆಯೆ ಹೇಳುತಿತ್ತು.. ನಾನು ಕೂಡ ಸುಮ್ನೆ ಕುಳಿತಿಲವೆಂದು..

“ ಹೆದರಬ್ಯಾಡ್ರಿ.. ಏನ ಆಗೊದದ ಅದು ಚಲೋಕ ಆಗತದ. ಅಂದರು ಶಂಕರಯ್ಯ.

“ಎನ ಚಲೋಕ ಆಕೈತ್ರಿ..? ಮಠದ ಸ್ವಾಮಗೋಳ ನೀವ ಹಿಂಗ ವಿಚಾರ ಮಾಡಿದ್ರ ಹೆಂಗಂತಿನಿ.. ಕುಡುಕ ಕಳ್ಳ ಹುಚ್ಚ ಸೂಳೆ ಮಗಾ ಒಬ್ಬ ಅಗಡಿ ದಿಗಡಿ ಮಾತಾಡಿ ಊರಾಗಿನ ಕಿಮ್ಮತ್ತ ಕೆಡಿಸಿದಾನ ಅವ ಬಂದ ಮಳಿಗಿ ಕುಂದರೋದ ಅಂದರೇನು..? ನವ್ವದಟಕ್ಕೆ ಒಂದ ಜಾತಿ ಮಂದಿ ನಾವ, ಹೂಂ ಅನ್ನಾಕಾಗತದ ಎನ್ರೀ..? ಅವಗ ರೀತಿ ರಿವಾಜ ಇಲ್ಲ ಬಿಡ್ರಿ ಆದರ ಅದನ್ನ ನಂಬಿ ಬದುಕ ಮಾಡಕೊಂತ ಬಂದ ನಮಗ ಇಲ್ಲೇನ್ರಿ..? ಎಡ್ರಾಮಿ ಬಾಳು ತುಸು ಕೋಪದಿಂದಲೆ ಕೇಳಿದ.

“ ಇದರ ಹಿಂದ ಏನರ ಮಸಲತ್ತ ನಡದಿರತದ ನೋಡ, ದೇವರ ದಿಂಡರಾ ಅದರ ಗಂಧ ಗಾಳಿ ಗೊತ್ತಿಲದ ಒಬ್ಬ ಕುಡುಕ ಹಾಗು ಮಹಾ ಕಳ್ಳನಾಗಿರುವಂತವನು ನಾ ಸನ್ಯಾಸಿಗತೇಕ ಮಳಿಗಿ ಕುಂದರತಿನಿ ಅಂತಾನಂದ್ರ ಸೂಕ್ಮ ವಿವರಿಸಿದ ಪರಪ್ಪ.

“ ಒಂದ ಕೆಲಸ ಮಾಡ್ರಿ ನಿಜಗುಣ್ಯಾನ ಹಿಡದ ಕೇಳ್ರಿ ಎಂದು ಇಲ್ಲದ ಭಕ್ತಿ ಇಂದ ಹೆಂಗ ಬಂತ ನಿನಗ..? ಯಾರರ ಕಲಿಸಿಕೊಟ್ಟಾರ..? ಅಂತ. ಶಂಕರಯ್ಯನವರು ಗ್ವಾಡಿಗಿ ಆಧಾರವಾಗಿ ಕುಳಿತುಕೊಳ್ಳುತ “ಮಳಿಗಿ ಕುಂದರೋದು ಅಂದ್ರ ಊಟಕ ಕುಂತಂಗ ಅನಕೊಂಡಿರೇನು..? ನಿಶೇದಾಗ ಅಂದಿರಬಹುದು ನೋಡ್ರಿ. ಅಂತ ಹಾಸ್ಯವಾಗಿ ಮಾತು ತೇಲಿಸಿದರು.

“ಇದನ ಹಗರ ತಿಳಿಬ್ಯಾಡ್ರಿ ಶಂಕರಯ್ಯನವರ.. ಸುತ್ತಿನ ಹಳ್ಳಿಗಿ ಸುದ್ದಿ ಮುಟ್ಟಿದರ ಜನರು ಊಟ ಕಟಗೊಂಡ ಬಂದು ನೋಡಿ ನಕ್ಕು ಹೋಗ್ತಾರ. ಅಣಕಿಸವರ ಮುಂದ ಹೂಂಸ ಬಿಟ್ಟಂಗ ಆಗತದ ನಮ್ಮ ಮಾನ. ಈ ಸುದ್ದಿ ಊರ ಹೊರಗ ಹೋಗಬಾರದು ಅಂದ್ರ ಹೆಚ್ಚಾಗಿ ಹೆಂಗಸರ ಬಾಯಿಗಿ ಬೀಳಬಾರದು, ಎರಡನೇದು ನಿಜಗುಣಿ ಜೊಡ್ಯಾವರನ್ನೆಲ್ಲ ಗಪ್ ಚುಪ್ ಮಾಡಬೇಕು ಈ ವರ್ಷದ ಲಕ್ಷ ದೀಪೋತ್ಸವ, ತೆಪ್ಪೋತ್ಸವ, ಪ್ರವಚನ, ಶ್ರಾವಣ ತಿಂಗಳ ಮುಗಿಯುವರೆಗು ಯಾವದ ಅಡ್ಡಿ ಆತಂಕ ಇಲ್ಲದ ನಡಿತೈತಿ ಅಂತ ಗುಡ್ಡದ ಮ್ಯಾಲಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆಯಿಂದಲೆ ಕೆಲಸಗಳು ಶುರುವಾಗಬೇಕು. ಇನ್ನೊಂದು ಯಾರರ ನಿಜಗುಣಿ ಮಳಿಗಿ ಕುಂದರತಾನಂತ ಈ ಗುಡ್ಡದ ಮ್ಯಾಲ ಖರೇ ಏನ್ರೀ..?ಅಂತ ಕೇಳಿದರ ಅದೆಲ್ಲ ಬುರ್ರ ಬುಷ್ ಸುಳ್ಳು, ಸುಳ್ಳ ಸುದ್ದಿ ನಂಬಬಾರದು ಅಂತ ತಿಳಿಸಿ ಹೇಳರಿ.ಜನರನ್ನು ನಂಬಿಸಿರಿ ಈ ಮುಂದಿನ ಪಟ್ಟಾಧಿಕಾರಿ ಕಾರ್ಯಕ್ರಮ ನಡೆಯೊವರೆಗು ಈ ಊರಿನ ಜನ ಶಾÁಂತರಾಗಿರಬೇಕು. ಅಂತ ಶಂಕರಯ್ಯನವರು ಮೈಯೆಲ್ಲ ಕಣ್ಣಾಗಿ ಪ್ರತಿಕ್ಷಣವು ಜಾಗೃತರಾಗಿ ತನ್ನ ಸುತ್ತಲಿನವರನ್ನೆಲ್ಲ ಅಲರ್ಟ ಆಗಿರುವಂತೆ ಪ್ರಚೋದಿಸಿದರು.

000000000000

ಊರತುಂಬ ಪುಕ್ಸಟ್ಟೆ ಪ್ರಚಾರಗೊಂಡ ನಿಜಗುಣಿ ಮಳೆಗೆ ಕೂಡ್ರುವ ಮಾತು ತಾಸಿಗೊಂದು ರೂಪ ತಳೆಯುತಿತ್ತು. ಅಂದಾನಪ್ಪನವರು ದೇವಸ್ಥಾನದ ಕಮೀಟಿ ಇಬ್ಬರು ಸದಸ್ಯರೊಂದಿಗೆ ಸಂಜೆ ನಿಜಗುಣಿಯ ಮನೆಗೆ ಬಂದರು. ಹೊರಗಡೆ ಕಟ್ಟಿಮ್ಯಾಲ ಕುಳಿತು ಮೌನ ಎಣಿಸುತ್ತಿದ್ದ ನಿಜಗುಣಿಗೆ ಬಾಹ್ಯಕಣ್ಣಿಗೆ ಬಂದವರು ಒಳಗಡೆ ಇದ್ದವರ್ಯಾರು ಕಾಣುತ್ತಿರಲಿಲ್ಲ.

“ನಿಜಗುಣರ.. ಪಾರಮಾರ್ಥಕ ಹೋಗಿದಿರೇನ್ರಪಾ…? ವಾಸ್ತವಕ ಬರ್ರೇಪಾ ಸಂಸಾರಿಗಳು ನಿಮ್ಮನ್ನ ನೋಡಾಕ ಬಂದೇವಿ ಅಂತ ಅಂದಾನಪ್ಪ ನಾಟಕದ ಮಾತಿನಂತೆ ಕೇಳಿದ. ಮಾಸಿದ ಅರಿವಿ, ಅಡ್ಡಾದಿಡ್ಡಿ ಬೆಳೆದ ಕೂದಲು, ಗಡ್ಡ, ಕೊರಳಾಗ ರುದ್ರಾಕ್ಷಿ ಇಲ್ಲ, ಲಿಂಗವಿಲ್ಲ ಹಣಿಮ್ಯಾಲ ವಿಭೂತಿಯಂತು ಮೊದಲ ಇಲ್ಲ ಎಂದ ಜಳಕಾ ಮಾಡಿದಾನೊ ಪುಣ್ಯಾತ್ಮ. ಒಬ್ಬ ಅವನ ಕಿಂವಿ ಹಿಡಿದು ಹಿಂಡಿದ. “ಅಯ್ಯೋ…ಹೋ.. ಅಂತ ಅರಿವಿಗಿ ಬಂದು ನೋವಿನಿಂದ ಕಣಲಿದ. ಅಂದಾನಪ್ಪ ಸ್ವಾಮಿಗಳು, ದೇವಸ್ಥಾನ ಕಮೀಟಿ ಸದಸ್ಯರಲ್ಲ ಒಟ್ಟಗೂಡ ಮನೀ ಬಾಗಿಲಿಗಿ ಬಂದುದ ನೋಡಿ ತಲಿ ದಿಮಿರ ಬಿಟ್ಟಿತು. ಏನ ಮಾತಾಡಬೇಕು ಅಂತ ಗೊತ್ತಾಗದ ಒದ್ದಾಡಿದ. ಇವರ ಕೈಯಾಗ ಒಳೇ ಸಿಕ್ಕಿದನಲ್ಲಪಾ..? ಅಂತ ಚಡಪಡಿಸಿದ. “ ನ..ನಮಸ್ಕಾರ್ರೀ… ಅಂತ ತೊದಲಿದ. ಈ ನಮಸ್ಕಾರ ಯಾರಿಗೆ ಅನ್ನೋದು ಬಂದವರಿಗೆ ಗೊಂದಲಾತು. ಈ ಸುದ್ದಿಯನ್ನು ಊರಿನ ದಲಿತ ಸಂಘರ್ಷ ಸಮಿತಿಯ ಕೆಲ ಹುಡುಗರು ತಮ್ಮ ತಮ್ಮ ವಾಟ್ಸಪ್, ಫೇಸಬುಕ್ ಇನ್ಸಟಾಗ್ರಾಮಗಳಲ್ಲಿ ಹಾಕಿ ಪ್ರಚಾರಗೈಯುತ್ತಿದ್ದರು. ಕಳ್ಳನಿದ್ದ ನಿಜಗುಣಿ ಕಾಳಿದಾಸನಾದ ಪರಿ ಹೇಗೆ..? ಅಂತ ಚರ್ಚಿತಗೊಂಡಿದ್ದ. ನಿಜಗುಣಿ ಮಳಿಗಿ ಕೂಡ್ರುವ ಕುರಿತು ನಡೆಯಬಹುದಾದ ವಿರೋಧದ ಬಗೆಗೂ ಎಚ್ಚರವಿದ್ದ ಸಮಿತಿಯವರು ಇನ್ನುಳಿದ ಊರುಗಳಲ್ಲಿನ ಸಂಘಗಳಿಗೆ ಮಾಹಿತಿ ನೀಡಿ ಎಲ್ಲರೂ ಸಪೋರ್ಟ ಮಾಡಲು ಒಂದು ವಾಟ್ಸಪ್ ಮೆಸೆಜ್ ರವಾನೆಯಾದದ್ದು ಕಳೆದ ಆರು ದಿನಗಳ ಹಿಂದೆಯಷ್ಟೆ. ಅಲ್ದೆ ಎಲ್ಲರೂ ದೇವಸ್ಥಾನಕ್ಕೆ ಬರುವ ಸುದ್ದಿಯ ಕೂಡ ಹಬ್ಬಿತ್ತು.

000000000000

ಸ್ವಾಮಾರ ಬೆಳಿಗ್ಗೆ ಎಂದಿನಂತೆ ಪಂಚಲಿಂಗೇಶ್ವರ ದೇವಸ್ಥಾನದ ಪಾದಗಟ್ಟಿಗಿ ತೆಂಗಿನ ಗರಿ, ಐದುಗಳ ಕಬ್ಬು, ಮಾವಿನ ತೋರಣ ಕಟ್ಟಿ ಸಿಂಗಾರ ಮಾಡುತ್ತಿದ್ದರು. ಅಂದಾನಪ್ಪ. ಬಸಯ್ಯ, ಲಿಂಗೇಶ, ಮುರಗೇಶ,ಒಂದಿಬ್ಬರು ಗೌಡರ ಕಟ್ಟಾಳುಗಳು ಸೇರಿದ್ದರು. ಅಲ್ಲಿದ್ದ ಪ್ರಾಂಗಣವನ್ನು ಗುದ್ದಲಿ ಹಿಡಿದು ಸಮಮಾಡುತ್ತಿದ್ದರು. ನಿಜಗುಣಿ ಗುಡ್ಡ ಹತ್ತಬಾರದೆಂಬಂತೆ ತಡೆಯಲು ಸಕಲ ಸಿದ್ದತೆಗಳು ಎರ್ಪಟ್ಟಿದ್ದವು. ನಿಜಗುಣಿಯಾಗಲಿ ಅವನ ಕಳ್ಳ ಸ್ನೇಹಿತರಾಗಲಿ ಶ್ರಾವಣ ಮಾಸ ಮುಗಿಯೋವರೆಗು ಪಾದಗಟ್ಟಿತನಕವು ಕೂಡ ಬಿಟ್ಟುಕೊಡಬಾರದು ಯಾಕೆಂದರೆ ತಿಂಗಳಕಾಲ ಸಮಸ್ತ ಗ್ರಾಮದ ಜನರು , ಸುತ್ತ ಹಳ್ಳಿಯ ಹೆಣ್ಣು ಗಂಡೆಲ್ಲ ಹಣ ಆಭರಣ, ತೊಟ್ಟು ಮಕ್ಕಳು ಮರಿಯೊಂದಿಗೆ ದೇವಸ್ಥಾನಕ್ಕೆ ಬರ್ತಾರೆ ಇಂತಹದರಲ್ಲಿ ಕಳ್ಳರ ಹಾವಳಿಯನ್ನು ತಡೆಯುವುದು ಪ್ರಮುಖವಾಗಿತ್ತು. ಈ ಕುರಿತು ಪಕ್ಕದ ಪೋಲಿಷ ಸ್ಟೇಷನನಲ್ಲಿ ಒಂದು ಅರ್ಜಿಯನ್ನು ಕೂಡ ಕೊಡಲಾಗಿತ್ತು.

ಬೆಳಂಬೆಳಿಗ್ಗೆ ಅನಂತ ಚಿಂತೆಗಳನ್ನು ಹೊತ್ತು ದೇವಸ್ಥಾನಕ್ಕೆ ಹೊರಡಲು ಅನುವಾಗಿದ್ದ ಅಂದಾನಪ್ಪ ದೇಣಿಗಿ ಕೌಂಟರನಲ್ಲಿ ಸದಾಶಿವಯ್ಯನ ಮಗನಿಗೆ ನಿನ್ನೆ ದಿನ ಕರೆದುಕೂಡ್ರುವಂತೆ ವಿಷಯ ತಿಳಿಸಿದರು ಇವತ್ತು ಇನ್ನೂ ಬಂದಿರಲಿಲ್ಲ. ಧಾರವಾಡದಿಂದ ಲಾರಿಯೊಂದರಲ್ಲಿ ಅಕ್ಕಿ, ಬೇಳೆ ದಿನಸಿಯನ್ನೆಲ್ಲ ಭಕ್ತರೊಬ್ಬರು ಕಳುಹಿಸಿದ್ದರು ಅದನ್ನು ಉಗ್ರಾಣದಲ್ಲಿ ಇಡುವ ವ್ಯವಸ್ಥೆ ಛೇರ್ನನ ಶಿವಪ್ಪನವರಿಗೆ ಹೇಳಿತ್ತು ಅವರು ಇಲ್ಲ, ಅವರ ಆಳ ಕಾಳು ಬಂದಿರಲಿಲ್ಲ್ಲ. ಪರ ಊರಿಗೆÀ ವರ್ಷದ ಭಿಕ್ಷೇಗೆ ಹಾಗು ಪಾದಪೂಜೆಗಂತ ಶಂಕ್ರಯ್ಯ ಸ್ವಾಮಿಗಳು ನವಲಗುಂದ ಹೋಗಿದ್ದರು. ಅಂದಾನಪ್ಪ ಸ್ವಾಮಿಗಳು ಒಬ್ಬರೇ ಎಲ್ಲವನ್ನು ಸಂಬಾಳಿಸೋದ ಹಗುರದ ಮಾತೇನಾಗಿರಲಿಲ್ಲ ಕಷ್ಟವಿತ್ತು. ಅಷ್ಟರಲ್ಲಿ, ಹುಲಿಗೆವ್ವಗೊಳ ಗುರುಪಾದ ಓಡೋಡಕೊಂತ ಛೇರ್ಮನ ಶಿವಪ್ಪನ ಮನಿಗಿ ಬಂದ. ಅವರು ಪಡಸಾಲ್ಯಾಗ ನಿಂತು ಉಗುರ ತೆಕ್ಕೊಳಕತ್ತವರು ಗುರಸಿದ್ದನ ನೋಡಿ ಗಾಬರಿಯಿಂದ “ಯಾಕೋ ಗುರಸಿದ್ದ್ಯಾ ನಿಜಗುಣ್ಯಾ ಮಳಿಗಿ ಗುಡ್ಡಾ ಏರಿ ಕುಂತ ಬಿಟ್ಟನೇನು ಮತ್ತ…? ನಮ್ ಮಂದಿಯೆಲ್ಲ ಎನ ಮಾಡಾಕತ್ತಿದ್ದರಿ ಹುಚ್ಚ ಸೂಳೆಮಕ್ಳಾ..ನೀವ ಬರೀ ಖೂಳಿಗೆ ಹೆಸರಾಗೇರಿ ಒಬ್ಬನ ತಡಿಯಾಕ ಆಗಲಿಲ್ಲ ನಿಮಗ..ಥೋ…ನಡೀ ಆಕಡೀಗಿ..ಭರಮ್ಯಾ ನನ್ನ ಬಂದೂಕ ತಗೋ ಗಾಡಿ ಚಾಲು ಮಾಡು ಗುಡ್ಡಕ ಹೊಡಿ ಗಾಡಿ ಆಂತ ಒಂದ ಸ್ವರದಾಗ ಕೋಗಿ ಬಾಗಲದೊಳಗಿನ ಕಾಲ್ಮರೀ ಮೆಟಗೊಂಡ ಹೊರಡಲು ಗಡಿಬಿಡಿ ಮಾಡಕತ್ತದ ನೋಡಿ ಗುರಸಿದ್ದನ ಜೀಂವ ಒಮ್ಮಿ ಹೋಗಿ ಬಂದಂಗಾತು.. ಊಸರ ಕೆಳಗ ಮ್ಯಾಲ ಆಗಕತ್ತಿದ್ದರೂ ತಡ ಹಿಡಕೊಂಡು ಗೌಡರ ತಡೆದ.

“ ಛೇರ್ಮನರೇ ಅದಲ್ಲರೀ..ಸುದ್ದಿ.. ಅಂತಂದು ಮತ್ತಷ್ಟು ಸುಧಾರಿಸಿಕೊಳ್ಳತೊಡಗಿದ. ದೂರದಿಂದ ಭರಾಟಿ ಓಡಿ ಬಂದುದರಿಂದ ತೇಕ ಇನ್ನೂ ಆರಿರಲಿಲ್ಲ. ಅದಲ್ಲ ಸುದ್ದಿ ಅಂತ ಕೇಳಿ ಗೌಡನ ಮಾರಿಮ್ಯಾಲ ಮೂರಿಪತ್ತರ ಹತ್ತ ಗೆರಿಗೋಳ ಒಮ್ಮಿಗೆ ಮೂಡಿದವು. ಅಲೀ ಇವನೌವ್ವನ ಈ ಹಡ್ಸಿ ಮಗಾ ಓಡಿಬಂದುದ ನೊಡಿ ನಾ ಗಾಬರಿಯಾಗಿ ನಿಜಗುಣ್ಯಾನÀ ಇಂದ ಕೊಂದ ಬಿಡಬೇಕ ಅನಕೊಂಡಿದ್ನಲ್ಲೋ ಸರಿ ಮೊದಲ ದಾಪ ಆರಿಸಕೊಳ್ಳಲಿ ತಡಿ ಅಂತಂದು ಕುರ್ಚಿಮ್ಯಾಲ ಕುಂತರು. ಅಷ್ಟರೊಳಗ ಭರಮ್ಯಾ ಬುಲೆಟ ಗಾಡಿ ಕೀ ಹಿಡಕೊಂಡ ಮುಂದ ಬಂದ ನಿಂತ. ಗುರಸಿದ್ದ ಇನ್ನು ತಡಾ ಮಾಡಿದರ ಕೆಲಸ ಕೆಡತದ ಅಂತಂದು ಅವರ ಕಾಲ ಕೆಳಗ ಕೂಡ್ರುತ “ ಯಪ್ಪಾ..ಗುಡ್ಡಕ ಹುಲಿ ಬಂದ ಹೊಕ್ಕೈತ್ರಿ…ಅಂದ ಚೇರ್ನನ ಶಿವಪ್ಪಗ ಈ ಮಾತ ಕೇಳಿ ದಿಮರ ಬಿಟ್ಟಿತು “ಎನ ಹುಲಿ ಬಂದೈತಾ..? ಯಾಂವ ಹೇಳಿದನಲೇ..? ಹುಚ್ಚ ಸೂಳಿ ಮಕ್ಳಾ ಕಾಡ ಬೆಕ್ಕಾ ನೋಡಿ ಹುಲಿ ಅನಕೊಂಡ ಊರಾಗ ಇನ್ನೊಂದು ಸುದ್ದಿ ಎಬ್ಬಿಸಿರೇನ ಮತ್ತ, ಇತರಾಗ ಆ ಕಳ್ಳ ಸೂ.ಮಕ್ಳ ಕೈವಾಡ ಇದ್ದರ ಇರಬೇಕ..ಈ ಊರಿಗಿ ಮಳಿ ಬರಾಕ ಹೆದರತೈತಿ ಹುಲಿ ಹೆಂಗ ಬರತದ..ಯಾಂವ ನೊಡಿದಂತ..? ಯಾವಾಗ..ನೋಡಿದಂತ..? ಕೇಳಿದರು. ಅಷ್ಟರಲ್ಲಿ ಸ್ವಲ್ಪ ಸುದಾರಿಸಿಕೊಂಡಿದ್ದ ಗುರಸಿದ್ದ,

“ ಹೌದ್ರಿ ಯಪ್ಪಾ..ಊರ ಮಂದಿಯೆಲ್ಲ ಕಳ್ಳ ನಿಜಗುಣ್ಯಾ ಅವನ ಗೆಣಮೈತ್ರೆಲ್ಲ ಸೇರಿ ಸುದ್ದಿ ಹಬ್ಬಿಸಿರತಾರ ಅಂತ ಅನಕೊಂಡಿದ್ವಿ ಅದೆಲ್ಲ ಸುಳ್ಳರೀ ಅವರ್ಯಾರು ಗುಡ್ಡ ಹತ್ತೇ ಇಲ್ಲ ಆಯಿ ಬಾಳು ಬೆಳಿಗ್ಗಿ ಗುಡ್ಡಕ ಬಾಳಿ ಗಿಡಾ, ಹತ್ತ ಗಳಾ ಕಬ್ಬ ತೊಲಬಾಗಿಲಿಗಿ ಕಟ್ಟಾಕ ಕೊಡಬೇಕಂತ ತಗೊಂಡ ಹೋಗಿದ್ದನಂತ, ಹುಲಿ ಗುಡಿ ಹೊಸ್ತಿಲ ಮ್ಯಾಲ ಕುಂತಿತ್ತಂತ, ಜೀವ ಜಲ್ಲೆಂದು ಕಬ್ಬ ಬಾಳಿ ಗಿಡ ಒಗೆದ ದಿಕ್ಕಾಪಾಲಾಗಿ ಓಡಿ ಬಂದಾನ. ಅವನ ಜೋಡ ಹೊಗಿದ್ದ ಪರಕನಟ್ಟಿ, ಬಳೂಬಾಳ, ಸಿಂಧಿಹಟ್ಟಿ ಮಂದಿ ಗಂಡಸರು ಹೆಂಗಸರು ಕಣ್ಣಾರ ನೋಡಿ ಎದ್ನೋ ಬಿದ್ನೋ ಅಂತ ಓಡಿ ಬಂದಾರ್ರೀ.. ಅಂದ. ಈಗ ಛೇರ್ಮನಗ ಹೌಹಾರುವ ಸರದಿ ಬಂತು..ಅಲೀ ಇತರ..ಖರೇನೊ ಸುಳ್ಳೋ ನೋಡ್ರೋ…ಅಂತಂದು ತಲಿ ಕೆರೆದುಕೊಂಡÀ ಕುಳಿತ. ಎಲ್ಲೋ ಎಣಿಕಿ ತಪ್ಪಾಗೇತಿ.. ಶಂಕ್ರಯ್ಯ ಸ್ವಾಮಗೋಳು ಊರಾಗಿಲ್ಲ. ಹೋಗ್ಲಿ ಅಂದಾನಪ್ಪನವರು ಎಲ್ಲೇದಾರ…ಗುಡ್ಡಕ ಹೋಗ್ಯಾರೇನ ಮತ್ತ..? ಕೇಳಿದ.

“ಇಲ್ಲರಿ ಇನ್ನಮ್ಯಾಲ ಹೋಗವರಿದ್ದರ.. ಅವರಿಗ್ಯಾರೊ ಸುದ್ದಿ ಮುಟ್ಟಿಸಿದರಂತ ಮೊದಲ ನಿಮಗ ತಿಳಿಸಿ ಬರಾಕ ನನ್ನ ಕಳಿಸ್ಯಾರ ನೀವ ತಾಬಡ ತೋಬಡ ಅವರ ಮನಿ ಕಡಿಗ ಬರಬೇಕಂತ ಹೇಳ್ಯಾರಿ ಅಂದ. ಛೇರ್ಮನಗ ಜಂಗಾಬಲನ ಅಡುಗಿತು. ಮಂದಿ ಆದರ ಅಂಜಿಸಬಹುದು, ದನಾ ಆದರ ಹೆದರಿಸಬಹುದು ಹುಲಿ ಹೆಂಗ ಹೆದರಿಸೋದು..? ಎದುರಿಗಿ ಹೋಗುವ ಧೈರ್ಯಾರ ಯಾರಿಗಿ ಅದ..? “ಭರಮ್ಯಾ ಗಾಡಿ ತೆಗಿ ಅಂದಾನಪ್ಪನವರ ಮನೀಗಿ ನಡಿ..ಅಂತದಂದು ಮೆಟ್ಟ ಕಾಲಿಗೇರಿಸಿಕೊಂಡು ಹೊರಟೆ ಬಿಟ್ಟರು. ಗುರಸಿದ್ದ ಅಲ್ಲಿಂದ ನೆಟ್ಟಗ ಅವರನ್ನ ಬೆನ್ನಟ್ಟಿದ. ಅಂದಾನಪ್ಪ ಸ್ವಾಮಗೋಳ ಮನಿಮುಂದ ಊರೇಲ್ಲ ಸೇರಿತ್ತು ಎಲ್ಲರ ಮಾರಿಮ್ಯಾಲ ಭಯದ ಚಿನ್ಹೆ ಎದ್ದ ಕಾಣಾತಿತ್ತು. ಯಾರ್ಯಾರ ಆ ಗುಡ್ಡ ಹೊಲದ ಕಡೀಗಿ ಹೋಗಿದಾರ. ಆಕಡೀಗಿ ಯಾರಿಗೂ ಹೋಗಬ್ಯಾಡ್ರಿ ಅಂತ ಆಳ ಕಾಳಗಳಿಂದ ಊರ ಜನರಿಂದ ಸಾಧ್ಯವಾದಷ್ಟು ಜನರಿಗೆ ಹೇಳಿಕಳಿಸುವ ಕೆಲಸ ಮಾಡಕತ್ತಿದ್ದರು. ಛೇರ್ಮನ ಶಿವಪ್ಪ ಬಂದುದು ಅವರಿಗೆ ತುಸು ಬಲ ಬಂದಂಗಾಯ್ತು. ಮೊದಲ ಹುಕ್ಕೇರಿ ಪೋಲಿಷ ಸ್ಟೇಷನಿಗಿ ಪೋನ ಮಾಡಿದರು. ಅಲ್ಲಿಂದ ಅರಣ್ಯ ಇಲಾಖೆಗೆ ಪೋನ ಮಾಡಿ ಊರಾಗ ಹುಲಿ ಬಂದೈತಿ ಅಂತ ಸುದ್ದಿ ಮುಟ್ಟಿಸಿದರು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮೈ ಲೈಫ್ ಮೈ ಪ್ರಾಬ್ಲಮ್

ಕಾಳಿ ಸಿಂಗ್ಯಾನ ಕರೆದು ಊರೇಲ್ಲ ಟುಮಕಿ ಹೊಡಿಯೊಕ ಹೇಳಿ “ಯಾರು ಮನಿ ಬಿಟ್ಟ ಹೊಲಕ, ನೀರಿಗಿ ಅಂತ ಹೊರಗ ಬರಬ್ಯಾಡ್ರಿ ಊರಾಗ ಹುಲಿ ಬಂದೈತಿ. ಹೆದರಬ್ಯಾಡ್ರಿ ಪೋಲಿಷನವರ ಬರತಾರ ಹೆಣ್ಣ, ಗಂಡ, ಮಕ್ಕಳ, ಮರಿ ಹಿಡಕೊಂಡ ಯಾರು ಅಂಗಳಕ ಬಂದೇರಿ ಹೇಳಲಿಲ್ಲ ಅಂದಿರಿ ಅಂತ ಖಡಕ್ಕಾಗಿ ಟುಮುಕಿ ಹೊಡಿಲೆ ಅಂತ ಗದರಿಸಿ ಕಳಿಸಿದರು. ಕಾಳಿ ಸಿಂಗ್ಯಾ ಹುರುಪಿನಿಂದ “ಹೂನ್ರಿ ಯಪ್ಪ್ಲಾಂತಂದು ಹೊರಟ. ತುಸು ಮುಂದ ಹೋದವ ಹಿಂತಿರುಗಿ ನೋಡಿದ. ಶಿವಪ್ಪ ಅವನ ಕಡೀಗಿ ನೋಡಿ “ಮತ್ತೇನಾತೋ…? ಹಿಂಬಾಲ ಟುಮುಕಿ ಹಿಡಕೊಳಾಕ ಯಾರ್ನರ ಕಳಿಸಬೇಕೆನ..? ಹೋಗಲೆ ಮಗನ ಅಂತ ದಬಾಯಿಸಿದ. ಸಿಂಗ್ಯಾ ಹಿಂದ ಮುಂದ ನೋಡುತ “ಯಪ್ಪಾ ಊರ ಅಗಸಿಗಿ ಹೋಗೊದ್ಕ ಹುಲಿ ಬಂದ್ರ ಏನ ಮಾಡ್ಲಿರೀ..? ಅಂದ ಹೆದರುತ ಅವನ ಮಾತಿನೊಳಗು ಸತ್ಯಾ ಇದೆ ಅನಿಸಿ ಹೌದಲ್ಲಾ ಊರಿಗೆಲ್ಲಾ ಹೊರಗ ಅಂಗಳಕ ಬರಬ್ಯಾಡ್ರಿ ಅಂತ ಹೇಳಾವರು ಅವಗ ಊರೇಲ್ಲ ಹರಗ್ಯಾಡು ಅಂದ್ರ ಹೆಂಗಾದೀತು..? ಎನೋ ವಿಚಾರ ಮಾಡಕತ್ತವರು ತಲಿ ಜಾಡಿಸಿ “ ಊರಾಗಿನ ಪ್ರಮುಖ ಪ್ರಮುಖ ಓಣ್ಯಾಗ ಅಷ್ಟ ಟುಮಕಿ ಹೊಡಿ ಆಮ್ಯಾಲ ಅದ ಊರೆಲ್ಲ ಸುದ್ದಿ ಆಕೈತಿ ..? ಅಂತಂದ ಕಳಿಸಿದ. ಅನಮನಿಸ್ಕೋಂತ ಸಿಂಗ್ಯಾ ಹೋದ. ಯಾರಿಗೆ ಎನ ಮಾಡಬೇಕು ತಿಳಿಯದೆ ಒದ್ದಾಡುತ್ತಿರುವಾಗ ಹೊತ್ತು ಒಂದ ನಮನಿ ಹದಾ ಹಿಡಿದು ಸರಿಯುತಿತ್ತು.

000000000000

ಶಿವಾಪೂರ ತುಂಬ ಸ್ಮಶಾನ ಮೌನ. ಊರಿನ ಎಲ್ಲ ಬೀದಿಗಳು ಬೀಕೊ ಎನ್ನುತ್ತಿವೆ, ಬೀದಿ ನಾಯಿಗಳು ಯಾರನ್ನ ಕಂಡು ಒದರುತ್ತಿವೆ ಗೊತ್ತಿಲ್ಲ ಬಾಗಿಲ ಹಾಕಿಕೊಂಡು ಒಳಗಡೆ ಕುತ್ತುಸಿರ ಬಿಡುತ್ತಿರುವ ಜನರಿಗೆ ನಾಯಿ ಬೊಗಳುವಿಕೆ ಒಂತರಾ ಭಯ ತರಿಸಿತ್ತು ಎಲ್ಲಿ ಹುಲಿ ಈ ಕಡೆಗೆ ಬಂದಿದೆಯೊ ಅಂತ. ಕಿಟಕಿ ಇದ್ದವರು ಬಾಗಿಲ ತೆರೆದು ಅಂಗಳ, ಇಡೀ ಓಣಿಯನ್ನು ಕಂಡಷ್ಟು ನೋಡಿ ಸುಮ್ಮನಾದರು. ಈ ಸುದ್ದಿ ಎಷ್ಟರ ಮಟ್ಟಿಗೆ ಖರೇನೊ ಸುಳ್ಳು ಎನ್ನುವುದು ಯಾರಿಗು ಗೊತ್ತಿಲ್ಲ ಅಷ್ಟರಲ್ಲಿ ಪೋಲಿಷ ಜೀಪೊಂದು ಓಣಿಯಲ್ಲಿ ಸದ್ದು ಮಾಡುತ ಬಂದ ಒಂದು ಮೂಲೆಗೆ ನಿಂತು. “ಸಾರ್ವಜನಿಕರಲ್ಲಿ ವಿನಂತಿ. ಶಿವಾಪೂರದೊಳಗ ಹುಲಿಯೊಂದು ಬಂದಿದೆ ದಯವಿಟ್ಟು ಅದನ್ನು ಬೇಟೆಯಾಡುª ಬೇಟೆಗಾರರು ಬಂದಿದ್ದಾರೆ ದಯವಿಟ್ಟು ನಾವು ಹೇಳುವವರೆಗು ಯಾರು ಮನೆಯಿಂದ ಹೊರ ಬರಬೇಡಿ. ಅದು ಎಲ್ಲೆಲ್ಲೆ ತಿರುಗಾಡುತಿದೆಯೋ..ಎಲ್ಲಿ ಅಡಗಿ ಕುಳತಿದೆಯೋ..ಅಥವಾ ಯಾರ ಮನೇಯ ದನಗಳನ್ನೋ ನಾಯಿ, ಕುರಿ ಕೋಳಿಗಳನ್ನು ಹಿಡಿದು ತಿನ್ನುತಿದೆಯೆಂದು ಬಂಡ ಧೈರ್ಯ ಮಾಡಿ ಹುಲಿ ಓಡಿಸಲು ದಯವಿಟ್ಟು ಅಂಗಳಕ ಬರಬೇಡಿ ಅದರ ಹಿಂದೆ ಬೇಟೆಯಾಡಲು ನಮ್ಮ ಅರಣ್ಯ ಇಲಾಖೆಯ ಪೋಲಿಷನವರು ಬಲೆ ಹಿಡಿದು ಹಾಗೂ ಗೋಕಾವಿಯ ಬೇಟೆಗಾರರು ಬಂದೂಕ ಹಿಡಿದು ಬೆನ್ನತಿದ್ದಾರೆ ಹುಲಿ ಸಿಕ್ಕ ತಕ್ಷಣ ನಾವ ನಿಮಗ ಮಹಿತಿ ಕೊಡ್ತಿವಿ.ದಯವಿಟ್ಟು ಕೇಳಿರಿ ಕೇಳಿರಿ.ಅಂತ ಮೈಕನಲ್ಲಿ ಕೂಗುತ್ತ ಪೋಲಿಷ ಜೀಪು ಊರಿನ ಕೇರಿಗಳನ್ನೆಲ್ಲ ತಿರುಗುತ್ತ ಓಡಾಡಿ ಮಾಯವಾಯ್ತು. ಜನರಿಗೆ ಬರಗಾಲದ ಸಂಕಟದೊಂದಿಗೆ ಈ ಸಂಕಟ ಜೀವವನ್ನು ಅಟ್ಟಾಡಿಸಿ ಬಿಟ್ಟಿತು. ಹೊರಗಡೆ ಬೈಲ ಕಡೆಗೆಂದು ಹೊಗಕ್ಕು ಆಗದೆ, ಮನೇಯಲ್ಲಿ ಮಲ ಮೂತ್ರ ಮಾಡಲು ಆಗದೆ ಅಲ್ಲೇ ಕುಳಿತು ಉಣ್ಣಲು ಆಗದೆ ಮಕ್ಕಳು ಮರಿಗಳಿಗೆ ಗಾಳಿಯಾಡದೆ ಒದ್ದಾಡಿ ಒದರುತ್ತ್ ರಂಪ ಮಾಡುತ ತಲೆ ಚಿಟ್ ಹಿಡಿಸಿದವು. ಇದನ್ನು ಯಾರಿಗೆ ಹೇಳಬೇಕು..ಹೇಗೆ ಹೇಳಬೇಕು..? ಯಾವ ಜನ್ಮದ ಕರ್ಮವೋ ಅಂತ ತಮ್ಮಷ್ಟಕ್ಕೆ ತಾವೇ ಶಪಿಸಿಕೊಳ್ಳತೊಡಗಿದರು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಪ್ರೀತಿ ಇಲ್ಲದ ಮೇಲೆ…

ಛೇರ್ಮನ ಶಿವಪ್ಪನ ಪೋನಿಗೆ ಈಗಷ್ಟೇ ಶಂಕ್ರಯ್ಯ ಸ್ವಾಮಿಗಳು ಪೋನ ಮಾಡಿದ್ದರಂತೆ ತಾವು ಊರಿಗೆ ಈಗೀಂದ ಈಗ್ಲೇ ಬರತಿದಿನಿ..ತಡೀರಿ ಅಂತ ಹೇಳಿ ಪೊನ ಕಟ್ ಮಾಡಿದ್ದರು. ಇದನ್ನು ಶಿವಪ್ಪ ಅಂದಾನಪ್ಪನವರಿಗೆ ಹೇಳಿ ಸುಮ್ಮನಾದ. ಛೇರ್ಮನ ಶಿವಪ್ಪ ತನ್ನ ಬುಲೆಟ ಗಾಡಿಯೊಂದಿಗೆ ಊರಲ್ಲಿ ಧೈರ್ಯದಿಂದ ಬಂದೂಕ ಹಿಡಿದು ತಿರುಗಾಡುತ್ತಿದ್ದ. ಹುಲಿ ಎದುರಿಗೆ ಬಂದರೆ ಸುಟ್ಟ ಬಿಡಬೇಕು ಅಂತ. ಆದರೆ ಇವನಿಗಿದ್ದ ಧೈರ್ಯ ಭರಮ್ಯಾನಿಗೆ ಇರಲಿಲ್ಲ. ಅನಂತ ಆತಂಕಗಳ ಮಧ್ಯ ಇಳಿಹೊತ್ತಿನ ತನಕ ಜನ ಮನೆಯಲ್ಲಿಯೆ ನರಕಯಾತನೆ ಅನುಭವಿಸಿದರು.

000000000000

ಸಂಜೆ ಹುಲಿ ಸಿಕ್ಕಿತು. ಅದನ್ನು ಬಲೆ ಹಾಕಿ ಊರ ಅಗಸಿಯ ಮುಂದೆ ತಂದು ಹಾಕಿದ್ದರು ಪೋಲಿಷರು. ಇಡೀ ಉರಿನ ಜನವೆಲ್ಲ ಕಿತ್ತೇದ್ದು ನೋಡಲು ಅಗಸಿಗೆ ಜಮಾಯಿಸದರು. ಊರ ಗೌಡರು, ಛೇರ್ಮನ್ನರು, ಹಳಬ, ಶಂಕ್ರಯ್ಯಸ್ವಾಮಿಗಳು, ಅಂದಾನಪ್ಪ. ಹುಲಿಗೆವ್ವಗೊಳ ಸಾಂತಪ್ಪ. ಮಿಲ್ಟ್ರಿ ಮಹಾದೇವ ಸರ್ವ ಪಂಚಗಣ ಅಗಸಿ ಕಟ್ಟಿಮ್ಯಾಲ ಕುಳಿತು ಬಂದಂತ ಅರಣ್ಯ ಇಲಾಖೆಯವರು, ಪೋಲಿಷರು, ಗೋಕಾವಿಯ ಬೇಡರು ಹೀಗೆ ಇಡೀ ಊರು ಜನರಿಂದ ತುಂಬಿ ತುಳುಕುತಿತ್ತು. ಎಲ್ಲರಿಗು ಚಹಾ ಪರಾಳ ಮಾಡಿಸಿದ್ದರು ಛೇರ್ಮನರು. ಅವರಿಗೆ ಕುಶಾಲಿ ಕೊಡಬೇಕಾಗಿತ್ತು. ಬಗಲ ಕಿಸೆಯೊಳಗಿನಿಂದ ಮೂರ್ನಾಕ ಸಾವಿರ ಛೇರ್ಮನ ಶಿವಪ್ಪ, ಗೌಡರು ನಾಕ ಸಾವಿರ, ಹಳಬ ಎರಡ ಸಾವಿರ ರೂಪಾಯಿ ಮಿಲ್ಟ್ರೀ ಮಹಾದೇವ ಮೂರ ಸಾವಿರ ರೂಪಾಯಿ ಹಿಂಗ ಅಷ್ಟುರೆಲ್ಲ ದುಡ್ಡ ಗ್ವಾಳೆ ಮಾಡಿ ಪೋಲಿಷ ಇನ್ಸಪೆಕ್ಟರ ಕೈಗಿ ಇಟ್ಟು ಕೈ ಮುಗಿದರು. ಸೇರಿದ ಊರಿನ ಜನಗಳನ್ನು ಉದ್ದೇಶಿಸಿ ಛೇರ್ಮನ್ನರು ಎದ್ದು ನಿಂತು “ ಮಹಾಜನಗಳೇ ಯಾರು ಅಂಜಬ್ಯಾಡ್ರಿ.. ಹುಲಿ ಸಿಕ್ಕದ ನಾವೇಲ್ಲ ಪುರ್ನಜನ್ಮ ಪಡೆದಿವಿ..ನಾವು ನೀವೇಲ್ಲ ಪುಣ್ಯವಂತರು. ನಾವು ಮಾಡುವ ಕೆಲಸದಿಂದ ನಮ ಪುಣ್ಯ ಹೆಚ್ಚೇದ ಅದಕ ಕಾರಣ ಊರಾಗಿನ ದೇವರಂತ ಶಂಕ್ರಯ್ಯ ಸ್ವಾಮಿಗಳು, ಅಂದಾನಪ್ಪಗಳು ಗ್ರಾಮದೇವರು ಆಶೀರ್ವಾದ ಮತ್ತ ನಾವ ಮಾಡುವ ಪೂಜಿ ಪುನಸ್ಕಾರ, ದಾನ ಧರ್ಮ ಇವ ನಮ್ಮ ಊರಿನ ಜನರ ಪ್ರಾಣ ಕಾದಿದಾವ. ಈ ಹುಲಿ ಹಿಡಿಯುವ ತಾಕತ್ತು ನಮ್ಮ ಊರಾಗ ಯಾರಿಗಾದರು ಇತ್ತಾ..? ಇತ್ತಾ..? ಹೇಳ್ರಿ..? ಇಲ್ಲ ಬಾಗಲ ಹಾಕೊಂಡ ಸುಮ್ನ ಕುಳಿತ್ವಿ. ಅದನ ಹಿಡದವರು ಪೊಲಿಷರು, ಅವರಿಗೆ ಸಹಾಯ ಮಾಡಿದವರು ಅರಣ್ಯ ಇಲಾಖೆಯವರು, ಬೇಟೆಗಾರರು. ಅದಕ ಯಾರು ಯಾವ ಕೆಲಸ ಮಾಡಬೇಕೊ ಅದನ ಅವರೇ ಮಾಡಿದರ ಚಂದ ಇರತದ. ಅದಕೊಂದ ರಿವಾಜ ಇರತೈತಿ ಹೌದಿಲ್ಲ..? ತುಡುಗರು, ಲಫಂಗರು, ಮೋಸಗಾರರೆಲ್ಲ ಸಾಧುಗಳಾಗ್ತಿವಿ ಅಂತಾರ ಆಗ್ತಾರೇನು..? ಈ ಸಲದ ಶ್ರಾವಣ ಕಾರ್ಯಕ್ರಮಕ ಹಿಡಕೊಂಡಿದ್ದ ಗ್ರಹಣ ಬಿಟ್ತು. ಇನ್ನಮುಂದ ಇಂತ ಅಂದಾದುಂದಿ ಆಗುದುಲ್ಲ. ಊರು ಗೌಡರ ಹಿಡಿತದಾಗ ಅದ. ಈ ಸಲದ ಜಾತ್ರಿ ಜೋರ ಮಾಡೋಣ ಅಂತ ಹೇಳುತ ಪೋಲಿಷರೆಡೆಗೆ ತಿರಿಗಿ “ಸಾಹೇಬರ ನೀವು ಈ ಸಲದ ಜಾತ್ರಿಗಿ ಬರಬೇಕ್ರಿ..ʼʼ ಅಂತ ಕೇಳಿಕೊಂಡ.

ಖುಷಿಯಲ್ಲಿದ್ದ ಪೊಲಿಷ ಮುಗುಳ ನಗುತ ಒಪ್ಪಿಗೆ ಕೊಟ್ಟರು. ಸಭೆ ಮುಗಿದ ಮ್ಯಾಲ ಹುಲಿಯನ್ನು ಒಂದು ವ್ಯಾನಿನೊಳಗಡೆ ಹಾಕಲಾಯಿತು. ಗೌಡರ ಆಳುಗಳು, ಛೇರ್ಮನರ ಆಳು ಭರಿಮ್ಯಾ ಎಲ್ಲರು ಸೇರಿ ನಿಜಗುಣಿಯನ್ನು ಹಿಡಿದು ತಂದು ಪೊಲಿಷರಿಗೆ ಒಪ್ಪಿಸಿದರು. ಹುಲಿಯಿದ್ದ ವ್ಯಾನಿನೊಳಗ ನಿಜಗುಣಿಯನ್ನು ಕೂಡ್ರಿಸಿಕೊಂಡು ಪೊಲಿಷ ವ್ಯಾನಗಳು ಊರ ಹೊರಗಡೆ ಭರಾಟೆ ಓಟಕಿತ್ತವು. ಹೊತ್ತು ಪೂರ್ತಿ ಮುಳುಗಿತು. ಮೊಡ ಮುಸುಕಿದ್ದು ಕಾಣಲಿಲ್ಲ ಅಚಾನಕ್ ಆಗಿ ಸಣ್ಣಗೆ ಮಳೆ ಹುಯ್ಯಲಾರಂಭಿಸಿತು.. ಹುಲಿ ಬಂದಿದ್ದ ಪಂಚಲಿಂಗೆಶ್ವರ ಬೆಟ್ಟವನ್ನು ಆ ರಾತ್ರಿ ಮಳೆಯಲ್ಲಿ ಟಾರ್ಚ ಹಿಡಿದು ಛೇರ್ಮರು ದೃಷ್ಠಿ ಹಾಯಿಸಿ ನೊಡಿದರು ಎನೂ ಕಾಣಲಿಲ್ಲ…. ಮಳೆ ಜೋರಾಗಿಯೆ ಹಿಡಿತು.. ಹೊರಗಡೆ ಕತ್ತಲು ಇನ್ನು ಹೆಚ್ಚುತಲೆ ಇತ್ತು…ಅಷ್ಟೇ….

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಆತ್ಮದ ಗಿಡುಗ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Award Ceremony: 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ಡಾ. ಬಿ. ಎಸ್. ಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

VISTARANEWS.COM


on

Award Ceremony
Koo

ಬೆಂಗಳೂರು: ಅ. ನ. ಕೃ. ಪ್ರತಿಷ್ಠಾನ ವತಿಯಿಂದ ಕಾದಂಬರಿ ಸಾರ್ವಭೌಮ ಅ. ನ. ಕೃ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 19ರಂದು ಬೆಳಗ್ಗೆ 10ಗಂಟೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್. ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ಡಾ. ಬಿ. ಎಸ್. ಸ್ವಾಮಿ ಅವರಿಗೆ ಪ್ರದಾನ (Award Ceremony) ಮಾಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರು ರಾಷ್ಟೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾಗಿದ್ದು, ಡಾ. ಬಿ. ಎಸ್. ಸ್ವಾಮಿ ಅವರು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ.

ಪ್ರಜಾವಾಣಿ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಲೇಖಕ, ಉಪನ್ಯಾಸಕ ಡಾ. ಬಂಡ್ಲಹಳ್ಳಿ ವಿಜಯಕುಮಾ‌ರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಇದನ್ನೂ ಓದಿ | ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ಡಾ. ಕೆ.ಆರ್. ಸಂಧ್ಯಾರೆಡ್ಡಿ, ಶಾ.ಮಂ. ಕೃಷ್ಣರಾವ್, ಎಂ. ವೆಂಕಟೇಶ್ ಅವರು ಉಪಸ್ಥಿತರಿರಲಿದ್ದು, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅ. ನ. ಕೃ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಗೌತಮ್ ಅ. ನ. ಕೃ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರಲಿದ್ದಾರೆ.

2022ರ ಪ್ರಶಸ್ತಿ ಪುರಸ್ಕೃತರು: ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ

ಆರೂವರೆ ದಶಕಗಳ ಕಾಲ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಎಸ್. ಆರ್. ರಾಮಸ್ವಾಮಿ ಅವರು (ಜನನ: 29-10-1937) ಕಳೆದ 45 ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆ ಮತ್ತು ‘ರಾಷ್ಟ್ರೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ.

ಸುಭಾಷ್‌ಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ ‘ಕೋಲ್ಮಿಂಚು’ ಜಯಪ್ರಕಾಶ್ ನಾರಾಯಣ್ ವಲ್ಲಭಭಾಯಿ ಪಟೇಲ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಭಗಿನಿ ನಿವೇದಿತಾ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಜೀವನಚರಿತ್ರೆಗಳೂ ಸೇರಿ ಸುಮಾರು 60 ಗ್ರಂಥಗಳನ್ನು ಬರೆದಿದ್ದಾರೆ. ‘ಭಾರತದಲ್ಲಿ ಸಮಾಜಕಾರ್ಯ’, ‘ಸ್ವಾತಂತ್ರ್ಯೋದಯದ ಮೈಲಿಗಲ್ಲುಗಳು’ ಮೊದಲಾದ ಹಲವಾರು ಪ್ರತಿಷ್ಠಿತ ಕೃತಿಗಳಿಗೆ ವಿಸ್ತತ ಸ್ವತಂತ್ರ ಅವಲೋಕನ ಪ್ರಬಂಧಗಳನ್ನು ಬರೆದು ಸಂಪಾದನ ಮಾಡಿದ್ದಾರೆ.

ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮ ಮಾಡಿರುವ ಇವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಅರ್ಥಶಾಸ್ತ್ರ ಕ್ಷೇತ್ರದ ಒಂದು ಉನ್ನತ ಕೃತಿಯೆಂದು ಪರಿಗಣಿತವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಅರ್ಥಿಕ ಯೋಜನೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿರುವ ರಾಮಸ್ವಾಮಿಯವರ ‘ಶತಮಾನದ ತಿರುವಿನಲ್ಲಿ ಭಾರತ’ ಸಮಾಜವಿಜ್ಞಾನ ಕ್ಷೇತ್ರದ ಆ ವರ್ಷದ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಬ್ರಿಟಿಷ್-ಪೂರ್ವ ಭಾರತದ ಉನ್ನತ ಸ್ಥಿತಿ ಕುರಿತ ಖ್ಯಾತ ಸಂಶೋಧಕ ಧರ್ಮಪಾಲ್ ಅವರ ಕೃತಿಗಳನ್ನು ಇವರು ಕನ್ನಡಕ್ಕೆ ಪರಿಚಯಿಸಿದ್ದಾರೆ. ಸ್ವದೇಶೀ ಚಿಂತನೆಯ ಪ್ರತಿಪಾದಕಗಳಾದ ಇವರ ಹಲವಾರು ಕೃತಿಗಳು ಪಥದರ್ಶಕವೆನಿಸಿವೆ.

ಅನೇಕ ಹಿರಿಯ ಸಾಹಿತಿಗಳ ಒಡನಾಟದಲ್ಲಿದ್ದ ರಾಮಸ್ವಾಮಿಯವರು, ಡಿ.ವಿ.ಗುಂಡಪ್ಪ, ಸೀತಾರಾಮಯ್ಯ, ರಾಕ್ಲಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರಿ, ತಿ. ತಾ. ಶರ್ಮ, ಪಿ. ಕೋದಂಡರಾವ್, ತೋಟಗಾರಿಕೆ ಋಷಿ ಎಂ. ಎಚ್. ಮರಿಗೌಡ ಮೊದಲಾದ ಧೀಮಂತರನ್ನು ಕುರಿತು ಬರೆದ ‘ದೀವಟಿಗೆಗಳು’, ‘ದೀಪ್ತಿಮಂತರು’ ಮತ್ತು ‘ದೀಪ್ತಶೃಂಗಗಳು’ – ಇವು ಅನುಪಮ ವ್ಯಕ್ತಿಚಿತ್ರಮಾಲಿಕೆಗಳಾಗಿವೆ. ಈಗಿನ ಜಗದ್‌ವ್ಯಾಪಿ ತುಮುಲಗಳ ಬೇರುಗಳಿರುವುದು ಎರಡು ಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಅವರ ‘ನಾಗರಿಕತೆಗಳ ಸಂಘರ್ಷ’ ಕೃತಿ ಪ್ರತಿಪಾದಿಸಿದೆ. ಅವರ ‘ಕೆಲವು ಇತಿಹಾಸ-ಪರ್ವಗಳು’ ಮತ್ತು ‘ಮರೆಯಬಾರದ ಇತಿಹಾಸಾಧ್ಯಾಯಗಳು’ ಮೈಲಿಗಲ್ಲುಗಳೆಂದು ಅಂಕಿತಗೊಂಡಿರುವ ಕೆಲವು ಇತಿಹಾಸ ಘಟನಾಸರಣಿಗಳ ಪರಾಮರ್ಶನೆಯಾಗಿವೆ. ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ರಾಜಾ ರಾಮಮೋಹನರಾಯ್ ಅವರಿಂದ ಜಯಪ್ರಕಾಶ ನಾರಾಯಣ್ ವರೆಗಿನ ಹತ್ತಾರು ಮಹನೀಯರ ಜೀವಿತಕಥನಗಳು `ನವೋತ್ಥಾನದ ಅಧ್ವರ್ಯುಗಳು’ ಮತ್ತು ‘ಹಲವರು ರಾಷ್ಟ್ರಾರಾಧಕರು’. ರಾಮಸ್ವಾಮಿಯವರ ‘ಕವಳಿಗೆ’ ಮತ್ತು ‘ಸಾಹಿತ್ಯ ಸಾನ್ನಿಹಿತ್ಯ ಉನ್ನತಮಟ್ಟದ ಸಾಹಿತ್ಯ ಪರಾಮರ್ಶಕ ಕೃತಿಗಳಾಗಿವೆ. ರಾಮಸ್ವಾಮಿಯವರು ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ 2000ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದಿದ್ದಾರೆ.

ಪತ್ರಿಕೋದ್ಯಮ ಸೇವೆಗಾಗಿ 2006ರಲ್ಲಿ ಇವರಿಗೆ ‘ಆರ್ಯಭಟ ಪ್ರಶಸ್ತಿ’ ದೊರೆತಿದೆ. ಸಾಹಿತ್ಯಸೇವೆಗಾಗಿ 2008ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಇವರಿಗೆ ದೊರೆತಿದೆ. 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇವರ ಸುದೀರ್ಘ ಸಾಹಿತ್ಯಸೇವೆಗಾಗಿ ಗೌರವಾರ್ಥ ಡಾಕ್ಟರೇಟ್ ನೀಡಿದೆ. ದೀರ್ಘ ಪತ್ರಿಕೋದ್ಯಮ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ‘ವರ್ಷದ ಶ್ರೇಷ್ಠ ವ್ಯಕ್ತಿ’ ಸಮ್ಮಾನ ದೊರೆತಿದೆ (2012). ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳ ಜೀವಮಾನ ಸಾಧನೆಗಾಗಿ 2015ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪದವಿಯನ್ನು ಇವರಿಗೆ ನೀಡಲಾಗಿದೆ. ಕರ್ನಾಟಕ ಸರಕಾರವು 2022-23ರ ‘ಪಂಪಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

2023ರ ಪ್ರಶಸ್ತಿ ಪುರಸ್ಕೃತರು : ಡಾ. ಬಿ. ಎಸ್. ಸ್ವಾಮಿ

ಬಿ. ಸಿದ್ಧಲಿಂಗ ಸ್ವಾಮಿಯವರು ಮೂಲತಃ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯವರು. ವಿ. ಬಸವಲಿಂಗಪ್ಪ – ಶಿವನಾಗಮ್ಮ ದಂಪತಿಯ ಸುಪುತ್ರರಾದ ಇವರು ಎಂ. ಎ., ಪಿಎಚ್. ಡಿ. ಪದವೀಧರರು. ಐದು ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿ ಅನಂತರ ಗುಲ್ಬರ್ಗ, ಬೆಂಗಳೂರು, ಮಂಗಳೂರು ಬಾನುಲಿಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಹದಿನಾಲ್ಕು ವರ್ಷ ದುಡಿದು ನಿವೃತ್ತರಾದರು.

ಬಾನುಲಿಯ ಸುದೀರ್ಘ ಸೇವೆಯಲ್ಲಿ ಇವರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಪ್ರತಿಭಾವಂತರನ್ನು ಹುಡುಕಿ ಅವರನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿ ಜನಾನುರಾಗಿಯಾದರು.
1967ರಲ್ಲಿ ಇವರ ಮೊದಲ ಕವನಸಂಗ್ರಹ ‘ಅಮೃತ’ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಆರು ದಶಕ ಲೇಖನಿಯನ್ನು ಕೆಳಗಿಡದೆ ಒಂದೇ ಸಮನೆ ಬರೆಯುತ್ತ ಸುಮಾರು ನಾಲ್ಕುನೂರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ‘ಕಲಿ ಭಾರತ’, ‘ಅಲ್ಲಮಪ್ರಭು’, ‘ಅಕ್ಕಮಹಾದೇವಿ’, ‘ಬಸವಣ್ಣ’ ಮಹಾಕಾವ್ಯಗಳೂ, ‘ಬೆಂಕಿಯಲ್ಲಿ ಅರಳಿದ ಹೂವು’ ನಂತಹ ಆತ್ಮಕಥನವೂ ಸೇರಿದೆ.

ಇವರ ಸಾಹಿತ್ಯಸೃಷ್ಟಿಗೆ ಯಾವ ಸರಹದ್ದುಗಳೂ ಇಲ್ಲ. ಕಥೆ, ಕಾದಂಬರಿ, ಕವನ, ನಾಟಕ, ರೂಪಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಸಂಪಾದನೆ, ವೈಚಾಲಕ, ಹಾಸ್ಯ, ಜಾನಪದ, ಪ್ರವಾಸಕಥನ, ಜೀವನ ಚರಿತ್ರೆ, ವಚನಸಾಹಿತ್ಯ, ದಾಸಸಾಹಿತ್ಯ, ಮಕ್ಕಳ ಸಾಹಿತ್ಯ, ಬಿಡಿ ಬರೆಹಗಳು – ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಅನೇಕ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳನ್ನು ಬರೆದ ಕೈಗಳಿಂದಲೇ ಜಾನಪದ ಸಾಹಿತ್ಯಚರಿತ್ರೆಯ ಹದಿನೈದು ಸಂಪುಟಗಳು, ಮಲೆ ಮಾದೇಶ್ವರ ಕಾವ್ಯ ಸಂಪಾದನೆ ಮಾಡಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕ್ಷೇತ್ರಕಾರ್ಯ, ಸಂಪಾದನೆ, ವಿಶ್ಲೇಷಣ, ಸಂಗ್ರಹ ಮಾಡಿದ್ದಾರೆ. ಶಿಷ್ಟಸಾಹಿತ್ಯದಲ್ಲಿ ಡಾ. ಸ್ವಾಮಿಯವರ ಕೊಡುಗೆ ಸಣ್ಣದಲ್ಲ. ಕಾಳಿದಾಸನ ಸಾಹಿತ್ಯದ ಕುರಿತು ಬರೆಯಬಲ್ಲ ಡಾ. ಸ್ವಾಮಿಯವರು ಸೂರದಾಸನ ಸಾಹಿತ್ಯದ ಬಗೆಗೂ ಬರೆಯಬಲ್ಲರು. ಹರಿದಾಸ ಪರಂಪರೆಯ ಕುರಿತು ಹಲವು ವರ್ಷ ಸಂಶೋಧನೆ ಮಾಡಿ ಒಂದು ಬೃಹತ್ ಗ್ರಂಥ ಪ್ರಕಟಿಸಿದ್ದಾರೆ. ಅದಕ್ಕಾಗಿ ಅವರು ಊರೂರು ಅಲೆದು ಹಲಕಥಾಕಾರರನ್ನು ಸಂದರ್ಶಿಸಿ, ವಾಚನಾಲಯಗಳಲ್ಲಿ ತಿಂಗಳುಗಟ್ಟಲೆ ಕುಳಿತು ಸಂಶೋಧನೆ ಮಾಡಿದ್ದಾರೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ಇವರ ಸಾಹಿತ್ಯಸೇವೆಯನ್ನು ಗಮನಿಸಿ ಕನ್ನಡಿಗರು ಅವರಿಗೆ ‘ಮಧುವೃತ’ ಎಂಬ ಗೌರವಗ್ರಂಥ ಅರ್ಪಿಸಿದ್ದಾರೆ.
ಇವರ ‘ಕವಿಚಕ್ರೇಶ್ವರ’ ಕಾದಂಬರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ(1974), ‘ಜಾನಪದ ಕಥಾಸಂಗಮ’ಕ್ಕೆ ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಬಹುಮಾನ(1987), ‘ಮಹಾಜ್ಯೋತಿ ಮಾದೇಶ್ವರ’ ಕೃತಿಗೆ ಮುದ್ದಣ- ರತ್ನಾಕರವರ್ಣಿ ಪ್ರಶಸ್ತಿ, ‘ಜಾನಪದ ಸೌರಭ’, ಅಕ್ಕಮ್ಮ ಗಿರಿಗೌಡ ರುದ್ರಪ್ಪ ಪ್ರಶಸ್ತಿ (1996), ‘ತುಳುನಾಡ ಐಸಿರಿ’ಗೆ ಗೊರೂರು ಪ್ರತಿಷ್ಠಾನದ ಪ್ರಶಸ್ತಿ (1997), ಕದಂಬೋತ್ಸವದಲ್ಲಿ ಅಭಿನಂದನೆ(1998), ‘ಸಮಗ್ರ ನಾಟಕಗಳು’ಗೆ ಆರ್ಯಭಟ ಪ್ರಶಸ್ತಿ, ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ(2002), ‘ನಾಟಕ ರೂಪಕ’ ಕೃತಿಗೆ ಅತ್ತಿಮಬ್ಬೆ ಸಾಹಿತ್ಯಪ್ರತಿಷ್ಠಾನದ ಪ್ರಶಸ್ತಿ, ‘ಜಾನಪದಶ್ರೀ’ಗೆ ಕರ್ನಾಟಕ ಜಾನಪದ ಅಕಾಡೆಮಿ ಬಹುಮಾನ, ಇಂಥ ಅನೇಕ ಸಂಘಸಂಸ್ಥೆಗಳ ಬಹುಮಾನಗಳು, ಪ್ರಶಸ್ತಿಗಳು ಇವರಿಗೆ ಸಂದಿವೆ.

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ನನ್ನ ದೇಶ ನನ್ನ ದನಿ ಅಂಕಣ: ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ.

VISTARANEWS.COM


on

nanna desha nanna dani column
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ ಅಂಕಣ: ಅನುವಾದ ಮತ್ತು ಭಾಷಾಂತರ ಕ್ಷೇತ್ರಗಳ ಮಹತ್ತ್ವವೇ ನಮಗೆ ತಿಳಿಯದು. ಸಾಮಾನ್ಯರಿರಲಿ, ವಿಶ್ವವಿದ್ಯಾಲಯಗಳಲ್ಲಿ ವಿರಾಜಮಾನರಾಗಿರುವ ಬಹುತೇಕ ಪ್ರಭೃತಿಗಳಿಗೂ ತಿಳಿಯದು. ಭಾಷಾಂತರ ಕ್ಷೇತ್ರದ ಆಳ – ಅಗಲಗಳ ಸರಿಯಾದ ಅಂದಾಜೇ ನಮಗಿಲ್ಲ. ಕಳೆದ ಆರೇಳು ದಶಕಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಟ್ಟಹಾಸ, ಅಬ್ಬರಗಳ ಮಹಾಪೂರದಲ್ಲಿ ಭಾರತೀಯ ಭಾಷೆಗಳು ಸೊರಗುತ್ತಿವೆ, ನಿಧಾನವಾಗಿ ನೇಪಥ್ಯಕ್ಕೂ ಸೇರುತ್ತಿವೆ. ಇನ್ನೂ ಹೆಚ್ಚಿನ ದುರಂತವೆಂದರೆ, ನಮ್ಮ ಸೋ ಕಾಲ್ಡ್ ಶಿಕ್ಷಣ ತಜ್ಞರಿಗೆ ಇದರ ಅಂದಾಜೂ ಆಗುತ್ತಿಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ, ಸಂವಾದ – ಚರ್ಚೆ – ಉಪನ್ಯಾಸಮಾಲೆ – ಎಲ್ಲವೂ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಎಂಬಂತಾಗಿವೆ. ಈ ಪಿಡುಗು ಇನ್ನಷ್ಟು ಮುಂದುವರಿದು ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮೊದಲ್ಗೊಂಡು, ಶಾಲಾ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳನ್ನೂ ಇಂಗ್ಲಿಷ್ ಭಾಷೆ ಆವರಿಸಿಕೊಂಡುಬಿಟ್ಟಿದೆ. ಇನ್ನು ಇಡೀ ದೇಶದ ಬೌದ್ಧಿಕ – ಶೈಕ್ಷಣಿಕ ಕ್ಷೇತ್ರಗಳು, ಇಂಗ್ಲಿಷ್ ಭಾಷೆ – ಇಂಗ್ಲಿಷ್ ಮಾಧ್ಯಮಗಳ ಉಪೋತ್ಪನ್ನಗಳಾಗಿ ಹೋಗಿರುವುದು, ಈ ಎಲ್ಲಾ ಅಪಸವ್ಯಗಳಿಗೆ ಕಲಶವಿಟ್ಟಂತಾಗಿದೆ.

ಪ್ರಾಚೀನ ಭಾರತ, ಅಷ್ಟೇಕೆ, ಪ್ರಾಚೀನ ಜಗತ್ತಿನ ಬಹುಪಾಲು ಆಳರಸರಿಗೆ ಭಾಷಾಂತರ ಕ್ಷೇತ್ರದ ಮಹತ್ತ್ವ ತಿಳಿದಿತ್ತು. ಭಾಷೆಗಳನ್ನು ಯಾರೂ ಸಮಸ್ಯೆಯನ್ನಾಗಿ ಮಾಡಿಕೊಂಡಿರಲಿಲ್ಲ. ಹಿಂದೀ – ತಮಿಳು ಭಾಷೆಗಳನ್ನು ಮತ್ತು ಭಾಷಿಕರನ್ನು ದ್ವೇಷಿಸುವ ನಮ್ಮ ಇಂದಿನ ಯುಗಮಾನದ ಅವಿವೇಕ ಅಂದಿನವರಿಗೆ ಇರಲಿಲ್ಲ. ನಾಲ್ಕೈದು ದಶಕಗಳ ಹಿಂದೆ ಬಂಗಾಳಿ, ತಮಿಳು, ತೆಲುಗು, ಮರಾಠೀ ಮುಂತಾದ ಭಾಷೆಗಳಿಂದ ನೇರವಾಗಿ ಅನುವಾದ ಮಾಡುವವರು ನಮ್ಮಲ್ಲಿಯೇ ಇದ್ದರು. ಈಗ ವಿಚಿತ್ರವೆಂದರೆ, ಭಾರತೀಯ ಭಾಷೆಗಳ ನಡುವಣ ಕೊಡುಕೊಳ್ಳುವಿಕೆಗೂ ಇಂಗ್ಲಿಷ್ ಭಾಷೆಯು ಅನಿವಾರ್ಯ ಮಾಧ್ಯಮ ಎಂಬಂತಾಗುತ್ತಿದೆ. ಇದಕ್ಕಿಂತ ದೊಡ್ಡ ದುರಂತವಿನ್ನೇನು ಇದ್ದೀತು!

ಸಾವಿರಾರು ವರ್ಷಗಳ ನಿಜೇತಿಹಾಸಾಧ್ಯಯನ ನಮ್ಮ ದಿಗ್ಭ್ರಮೆಗೆ ಕಾರಣವಾಗುತ್ತದೆ. ನೋಡಿ, ನಮಗೆ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂ ಎನ್ ತ್ಸಾಂಗ್ ಎನ್ನಲಾಗುತ್ತಿತ್ತು) ಫಾಹಿಯಾನ್ ಮಾತ್ರ ಗೊತ್ತು. ಅವರೆಲ್ಲ ಚೀನಾ ದೇಶದಿಂದ ಇಲ್ಲಿಗೆ ಬಂದು ಜ್ಞಾನಸಂಪತ್ತನ್ನು ಅಲ್ಲಿಗೆ ಕೊಂಡೊಯ್ದವರು. ಅವರು, ಅಂತಹವರು ಭಾಷಾಂತರದಿಂದ ಅದ್ಭುತವಾದ ಸಂಪತ್ತನ್ನು ಸಂಗ್ರಹಿಸಿದರು ಮತ್ತು ಅವರ ದೇಶದಲ್ಲಿ ಕಾಪಿಟ್ಟುಕೊಂಡರು. ನಿಜೇತಿಹಾಸದ ಇನ್ನಷ್ಟು ವಿವರಗಳು ಅಕ್ಷರಶಃ ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಾಂತರ ಮಾಡಿದ ಭಾರತೀಯ ಮೂಲದ ವಿದ್ವಾಂಸರ ವಿವರಗಳು ಸಹ ದಿಕ್ಸೂಚಿಯಾಗಿವೆ.

ಸಾಮಾನ್ಯ ಯುಗದ ಮೊದಲನೆಯ ಶತಮಾನದಲ್ಲಿ (1st Century of Common Era) ಚೀನಾ ದೇಶದ ಸಮ್ರಾಟ ಮಿಂಗ್-ತಿ ಬೌದ್ಧ ಸಿದ್ಧಾಂತದ ಅಧ್ಯಯನಕ್ಕಾಗಿ 18 ಜನರ ತಂಡವನ್ನು ಭಾರತಕ್ಕೆ ಕಳುಹಿಸಿದ. ಅವರು ಇಲ್ಲಿಂದ ದೊಡ್ಡ ಸಂಖ್ಯೆಯ ಗ್ರಂಥಗಳನ್ನು ಪ್ರತಿ ಮಾಡಿಕೊಂಡು, ಅನುವಾದಿಸಿಕೊಂಡು ತೆಗೆದುಕೊಂಡುಹೋದರು ಮತ್ತು ಕಶ್ಯಪ ಮಾತಂಗ ಮತ್ತು ಧರ್ಮರತ್ನ ಎಂಬ ಬೌದ್ಧ ವಿದ್ವಾಂಸರನ್ನೂ ಕರೆದುಕೊಂಡುಹೋದರು. ಕಶ್ಯಪರು ಆಗ ಗಾಂಧಾರದಲ್ಲಿದ್ದರು (ಗಾಂಧಾರ ಎಂದರೆ ಇಂದಿನ ಆಫಘನಿಸ್ತಾನ. ಅದು ಇಸ್ಲಾಂ ಆಕ್ರಮಣಕ್ಕೆ ಮುಂಚೆ ಸಾವಿರಾರು ವರ್ಷಗಳ ಕಾಲ ಬೌದ್ಧ ಧರ್ಮಕ್ಕೆ ಹೆಸರಾಗಿತ್ತು). ಚೀನಾ ದೇಶದ ತರ್ಕೆಸ್ತಾನ್ ಪ್ರದೇಶದ ಪರ್ವತಗಳನ್ನು ಮತ್ತು ಗೋಬೀ ಮರುಭೂಮಿಯನ್ನು ದಾಟಿಹೋಗಲು ಕಶ್ಯಪರು ಪ್ರಯಾಸಪಡಬೇಕಾಯಿತು. ಆದರೆ, ಅವರ ಆ ಪರಿಶ್ರಮದ ಭೇಟಿಯ ಕಾರಣದಿಂದಲೇ ಅನಂತರದ ಅವಧಿಯಲ್ಲಿ, ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಿಂದ ನೂರಾರು ಜನ ವಿದ್ವಾಂಸರು ಚೀನಾ ದೇಶದಲ್ಲಿಯೇ ಕುಳಿತು ಭಾಷಾಂತರ ಮಾಡುವಂತಹ ವ್ಯವಸ್ಥೆ ಬೆಳೆಯಲು ಸಾಧ್ಯವಾಯಿತು. ಅಗಾಧ ಪ್ರಮಾಣದ ಸಂಸ್ಕೃತ ಗ್ರಂಥಗಳನ್ನು ಅವರೆಲ್ಲ ಪ್ರತಿ ಮಾಡಿಕೊಂಡು ಇಲ್ಲಿಂದ ತೆಗೆದುಕೊಂಡುಹೋದರು. ಹಾಗೆ ಹೋದ ವಿದ್ವಾಂಸರಲ್ಲಿ ಸಂಘವರ್ಮ, ಧರ್ಮಸತ್ಯ, ಧರ್ಮಕಾಲ, ಮಹಾಬಲ, ವಿಘ್ನ, ಧರ್ಮಫಲ, ಕಲಾಸಿವಿ, ಕಲಾರುಚಿ ಮತ್ತು ಲೋಕರುಚಿ ಅವರು ಪ್ರಮುಖರಾದವರು.

nalanda and muslim invaders

ಆಗ ಕಾಶ್ಮೀರವೂ ಪ್ರಾಚೀನ ಭಾರತದ ಬಹಳ ದೊಡ್ಡ ಬೌದ್ಧ ಅಧ್ಯಯನ ಕೇಂದ್ರವಾಗಿತ್ತು. ಕಾಶ್ಮೀರದ ರಾಜವಂಶಕ್ಕೆ ಸೇರಿದ ಗುಣವರ್ಮರು ತಮ್ಮ ಪಾಂಡಿತ್ಯಕ್ಕೇ ಹೆಸರಾಗಿದ್ದರು. ಅವರು ಮೊದಲು ಶ್ರೀಲಂಕಾ ಮತ್ತು ಜಾವಾ ದೇಶಗಳಿಗೆ ಹೋಗಿ ಖ್ಯಾತರಾದರು. ಗುಣವರ್ಮರನ್ನು ಚೀನಾ ದೇಶದ ಚಕ್ರವರ್ತಿ ಆಹ್ವಾನಿಸಿದ. ಅಷ್ಟೇ ಅಲ್ಲ, ನಾಂಕಿಂಗ್ ಎಂಬ ಪಟ್ಟಣಕ್ಕೆ ಹೋಗಿ ಸ್ವತಃ ಗುಣವರ್ಮರನ್ನು ಎದುರುಗೊಂಡ. ಅವರ ಶಿಷ್ಯನೂ ಆದ. ಅವರಿಗಾಗಿ ಒಂದು ಬೌದ್ಧ ದೇವಾಲಯವನ್ನೂ ನಿರ್ಮಿಸಿದ. ಗುಣವರ್ಮರಂತೆಯೇ ಕಾಶ್ಮೀರದಿಂದ ಚೀನಾ ದೇಶಕ್ಕೆ ಹೋದ ವಿದ್ವಾಂಸರೆಂದರೆ ಬುದ್ಧಯಶಸ್, ಧರ್ಮಯಶಸ್, ಧರ್ಮಕ್ಷೇಮ, ಬುದ್ಧಜೀವ ಮತ್ತು ಧರ್ಮಮಿತ್ರ. ಈ ವಿವರಗಳು ಅದೆಷ್ಟು ಸಂತೋಷನೀಡುತ್ತವೆ ಎಂದರೆ, ನೋಡಿ, ದಕ್ಷಿಣ ಭಾರತದಿಂದಲೂ ಹಲವಾರು ವಿದ್ವಾಂಸರು ಚೀನಾ ದೇಶಕ್ಕೆ ಹೋದರು. ಹಾಗೆ ಹೋದ ಧರ್ಮರುಚಿ ಇಪ್ಪತ್ತು ವರ್ಷಗಳ ಕಾಲ (ಸಾಮಾನ್ಯ ಯುಗದ 693ರಿಂದ 713) ಚೀನಾ ದೇಶದಲ್ಲಿದ್ದು, ದಾಖಲೆ ಪ್ರಮಾಣದ ಐವತ್ಮೂರು ಗ್ರಂಥಗಳನ್ನು ಭಾಷಾಂತರಿಸಿದರು. ಚೀನೀ ಭಾಷೆಗೆ ವ್ಯವಸ್ಥಿತವಾದ ವ್ಯಾಕರಣವಿಲ್ಲ, ಒಂದು ಪದವನ್ನು ಒಂದು ಅಕ್ಷರವೋ – ಒಂದು ಚಿಹ್ನೆಯೋ ಪ್ರತಿನಿಧಿಸಿಬಿಡುತ್ತದೆ, ಎನ್ನುವ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತವಾದ ಸಂಸ್ಕೃತ ಮತ್ತು ಇನ್ನಿತರ ಭಾರತೀಯ ಭಾಷೆಗಳಿಂದ ಅನುವಾದಿಸುವುದು ಅದೆಷ್ಟು ಶ್ರಮದಾಯಕ, ಕ್ಲಿಷ್ಟಕರ ಎಂಬುದನ್ನು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಭಾಷಾಂತರದ ಆಯಾಮವೇ ಹಾಗೆ. ಸಂಸ್ಕೃತಿಗಳ – ರೀತಿನೀತಿಗಳ ವ್ಯತ್ಯಾಸ ಮತ್ತು ಅಂತರಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಬಹಳ ಮುಖ್ಯವಾದ ಅಂಶವೊಂದನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ಜ್ಞಾನದ ಸಂಪತ್ತನ್ನು ವಿವಿಧ ಸಮುದಾಯಗಳಿಗೆ, ಅನೇಕ ದೇಶಗಳಿಗೆ ಹಂಚಲು ನೀಡಲು ಭಾಷಾಂತರದ ಇಂತಹ ಪ್ರಮುಖ ಆಯಾಮಕ್ಕೆ ರಾಜಾಶ್ರಯ ಇತ್ತು, ಇರಬೇಕು ಎನ್ನುವುದನ್ನು ಸಹ ನಾವಿಲ್ಲಿ ಗಮನಿಸಬೇಕಿದೆ. ಭಾರತ, ಚೀನಾ ಮುಂತಾದ ದೇಶಗಳಲ್ಲಿ ಅನೇಕ ರಾಜರು ಪ್ರೋತ್ಸಾಹ ನೀಡಿದುದರಿಂದಲೇ ಜ್ಞಾನ ಪರಂಪರೆ ಮುಂದುವರಿಯಲು ಮತ್ತು ಉಳಿದುಕೊಂಡು ಬರಲು ಸಾಧ್ಯವಾಯಿತು.

ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ. ಹಾಗೆಂದೇ, ಕನಿಷ್ಠ ಎಂಬತ್ತು ಪ್ರತಿಶತ ಅನುವಾದಗಳು ಕಳಪೆ ಗುಣಮಟ್ಟದವಾಗಿಬಿಟ್ಟಿವೆ. ಇನ್ನು ಪ್ರಶಸ್ತಿ, ಸ್ಥಾನಮಾನಗಳನ್ನು ಅನುವಾದಕರು ನಿರೀಕ್ಷಿಸುವಂತೆಯೇ ಇಲ್ಲ. ಒಂದೋ ಎರಡೋ ಕು-ಕವನಗಳನ್ನು ಬರೆದವರು ತಾವು ಬರೆದ ಕವನಗಳಿಗಿಂತ ಹೆಚ್ಚು ಸಂಖ್ಯೆಯ ಪ್ರಶಸ್ತಿಗಳನ್ನು ಗಳಿಸಿಬಿಡುತ್ತಾರೆ. ಕನ್ನಡದಲ್ಲಿ “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ”ವು, ಭಾಷಾಂತರಕ್ಕೆ ಒಳ್ಳೆಯ ಸಂಭಾವನೆಯನ್ನು ಕೊಡುತ್ತಿರುವುದು ಸ್ವಾಗತಾರ್ಹವೇ ಆದರೂ, ಮುಖ್ಯ ವಿಷಯ ಅದಲ್ಲ. ನಮ್ಮ ಪರಂಪರೆಯ ಹಾಗೂ ಅನೇಕ ಪ್ರಮುಖ ಗ್ರಂಥಗಳ ಸಮರ್ಥ ಮತ್ತು ಅಧಿಕೃತ ಅನುವಾದಗಳು ಆಗಬೇಕಿದೆ. ಅದು ಬರಿಯ ಸಂಭಾವನೆಯ ಸಂಗತಿಯನ್ನು ಮೀರಿದುದು. ಕೆಲವು ಗ್ರಂಥಗಳ ಅನುವಾದಕ್ಕೆ ಪ್ರತ್ಯೇಕ ಆದ್ಯತೆಯನ್ನೇ ನೀಡಬೇಕಾಗುತ್ತದೆ ಮತ್ತು ಬರಿಯ ಸಂಭಾವನೆ ಸಾಲದೆಹೋಗುತ್ತದೆ. ಈ ಕಾರ್ಯಕ್ಕೆಂದೇ ಪೂರ್ಣಾವಧಿ ಭಾಷಾಂತರಕಾರರ ನೇಮಕವಾಗಬೇಕಾಗಿದೆ.

ಹಿಂದೆ ರಾಜಾಶ್ರಯ ಇದ್ದ ಹಾಗೆ, ಈಗ ಸರ್ಕಾರೀ ಮತ್ತು ಸೇವಾ ಸಂಸ್ಥೆಗಳು ಪೂರ್ಣಾವಧಿ ಭಾಷಾಂತರಕಾರರನ್ನೇ ನೇಮಿಸಿಕೊಂಡು ಈ ಕಾರ್ಯವನ್ನು ಕೈಗೊಳ್ಳಬೇಕು. ಆಗ ಮಾತ್ರ ನಮ್ಮ ಪರಂಪರೆ ಮತ್ತು ನಿಜ-ಇತಿಹಾಸ ಗ್ರಂಥಗಳನ್ನು ಉಳಿಸಿಕೊಳ್ಳಲು ಸಾಧ್ಯ. ಹಾಗಾದಾಗ ಮಾತ್ರವೇ, ಪರೋಕ್ಷವಾಗಿ ಎಲ್ಲ ಭಾರತೀಯ ಭಾಷೆಗಳನ್ನೂ ಉಳಿಸಲು, ಉಳಿಸಿಕೊಳ್ಳಲು ಸಾಧ್ಯ.

ಅದೆಷ್ಟು ಪ್ರಮಾಣದಲ್ಲಿ ಮಹತ್ತ್ವದ ಗ್ರಂಥಗಳು ಬೇರೆ ಬೇರೆ ಭಾಷೆಗಳಲ್ಲಿ ಬರಬೇಕಾಗಿವೆ ಎಂದರೆ, ಭಾರತಾದ್ಯಂತ ಹತ್ತಾರು ಸಾವಿರ ಪೂರ್ಣಾವಧಿ ಭಾಷಾಂತರಕಾರರ ಅಗತ್ಯವಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

ವಿಚಿತ್ರ ನೋಡಿ. ಅಮೆರಿಕಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ದರೋಡೆಕಾರರಿಗೆ ನಮ್ಮ ಪ್ರಾಚೀನ ಗ್ರಂಥಗಳ ನಿಜ-ಮೌಲ್ಯ ಗೊತ್ತಿತ್ತು. ಈ ಮೂರೂ ದೇಶಗಳ ವಿದ್ವಾಂಸರು ಒಟ್ಟಾಗಿ ಕುಳಿತು, ಸಾಮಾನ್ಯ ಯುಗದ 17 – 18ನೆಯ ಶತಮಾನಗಳಲ್ಲಿ, ನಮ್ಮ “ಸೂರ್ಯ ಸಿದ್ಧಾಂತ” ಗ್ರಂಥವನ್ನು ಅನುವಾದಿಸಿಕೊಂಡು ಹೋದರು. ಖಗೋಳ ಶಾಸ್ತ್ರದ ಆ ಅಮೌಲ್ಯ ಗ್ರಂಥದ ಪ್ರಮುಖ ವೈಜ್ಞಾನಿಕ ಅಂಶಗಳನ್ನು ಅವರು ಬಳಸಿಕೊಂಡರು. ಮೆಕಾಲೆ ಹುಟ್ಟುಹಾಕಿದ ನಮ್ಮ ದೇಶದ ಇಂದಿನ ವಿಕೃತ ಶಿಕ್ಷಣ ವ್ಯವಸ್ಥೆ ಹೇಗಿದೆಯೆಂದರೆ, ಇಂದು ನಮ್ಮ ವಿಶ್ವವಿದ್ಯಾಲಯಗಳ ಮಹಾಶಯರಿಗೆ “ಸೂರ್ಯ ಸಿದ್ಧಾಂತ”ದ ಬಗೆಗೆ ಕೇಳಿದರೆ, ಅವರು “ಅದು ಬೆಕ್ಕೋ – ನಾಯಿಯೋ ಇರಬಹುದು” ಎಂದಾರು. ಕಮ್ಯೂನಿಸ್ಟರು ಅವರ ತಲೆಗೆ ತುಂಬಿರುವಂತೆ, ಪ್ರಾಚೀನ ಭಾರತವೆಂದರೆ ಅವರ ಪಾಲಿಗೆ “ಸತೀ ಸಹಗಮನ, ಅಸ್ಪೃಶ್ಯತೆ, ಜಾತೀಯತೆ, ಮೂಢ ನಂಬಿಕೆಗಳು, ಭೇದಭಾವ, ಶೋಷಣೆ, ಇತ್ಯಾದಿ” ಮಾತ್ರ!

ಅತ್ಯಂತ ನಿರುಪಯುಕ್ತವಾದ ಕೆಮಿಸ್ಟ್ರಿ (ಶಾಲಾ ಕಾಲೇಜುಗಳಲ್ಲಿ ನಾನೂ ಕೆಮಿಸ್ಟ್ರಿ ವಿದ್ಯಾರ್ಥಿಯೇ. ಅದರಿಂದ ಮೂರುಕಾಸಿನ ಪ್ರಯೋಜನವೂ ಇಲ್ಲವೆಂಬುದನ್ನು, ಕಳೆದ ಅರ್ಧ ಶತಮಾನದಲ್ಲಿ ಅರ್ಥ ಮಾಡಿಕೊಂಡಿದ್ದೇನೆ) ಮುಂತಾದವನ್ನು ಕೈಬಿಟ್ಟು, ಆಗಬೇಕಾದ ವಿಭಾಗಗಳಲ್ಲಿ ಆಗಬೇಕಾದ ಕೆಲಸಗಳಿಗೆ ಆದ್ಯತೆ ಕೊಟ್ಟರೆ, ನಮ್ಮ ವಿಶ್ವವಿದ್ಯಾಲಯಗಳೂ ಅರ್ಥಪೂರ್ಣ ಕೊಡುಗೆ ನೀಡಬಹುದು.

ಇಲ್ಲಿ ಇನ್ನೂ ಒಂದು ಪ್ರಮುಖ ಸಂಗತಿಯನ್ನು ಪ್ರಸ್ತಾಪಿಸಬಹುದು. ಮೇಲೆ ಉಲ್ಲೇಖಿಸಿದ ಉದಾಹರಣೆಗಳು, ಮತಧರ್ಮಗಳ ಶಾಸ್ತ್ರಗ್ರಂಥಗಳ ಅನುವಾದಕ್ಕೆ ಸಂಬಂಧಿಸುತ್ತವೆ, ಅದರ ಹಿಂದೆ ಧರ್ಮಶ್ರದ್ಧೆಯ ಆಯಾಮವಿದೆ ಎಂದು ಕೆಲವರು ಮೂಗು ಮುರಿಯಬಹುದು. ಚೀನಾ ದೇಶದ ಈ ಮೇಲಿನ ಯೋಜನೆಗಳಲ್ಲಿ, ಅವರಿಗೆ ಜೊತೆಜೊತೆಯಲ್ಲಿಯೇ ತರ್ಕಶಾಸ್ತ್ರ, ಔಷಧಶಾಸ್ತ್ರ, ಆಯುರ್ವೇದ ಮುಂತಾದ ಅನೇಕ ಜ್ಞಾನಶಾಖೆಗಳ ಲಾಭವೂ ಆಯಿತು. ನಮ್ಮ ಭಾರತ-ಮೂಲದ ಗಣಿತ, ಅಂಕಿಗಳು, ಕ್ಯಾಲ್ಕುಲಸ್, ಬುದ್ಧಿವಂತರ ಆಟ ಎಂದೇ ಹೆಸರಾದ ಚದುರಂಗದಾಟ (Chess) ಇತ್ಯಾದಿ ಮಹತ್ತ್ವದ ಸಂಗತಿಗಳು ಅರೇಬಿಯಾ ಮೂಲಕ ಯೂರೋಪಿಗೆ ಪರಿಚಯವಾದವು. ಪರೋಕ್ಷವಾಗಿ ಯೂರೋಪಿನಲ್ಲಿ ಆಧುನಿಕ ವಿಜ್ಞಾನದ ವಿಕಾಸ ಸಂಶೋಧನೆಗಳಿಗೆ ಇವೆಲ್ಲಾ ಸಾಧನಗಳಾದವು, ಎಂಬುದನ್ನೂ ನಾವು ಮರೆಯುವಂತಿಲ್ಲ.

ಹೌದು, ಭಾಷಾಂತರ ಕ್ಷೇತ್ರಕ್ಕೆ ಈಗಲಾದರೂ ಆದ್ಯತೆ ದೊರೆಯಬೇಕಿದೆ. ಭಾರತೀಯ ಸಮಾಜದ ಬೌದ್ಧಿಕ ಲೋಕದ ಚುಕ್ಕಾಣಿ ಹಿಡಿದವರು ಈ ನಿಟ್ಟಿನಲ್ಲಿ ತೀವ್ರ ಗಮನ ನೀಡಬೇಕಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Continue Reading

ಬೆಂಗಳೂರು

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Music Festival: ಬೆಂಗಳೂರಿನ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Music Festival
Koo

ಬೆಂಗಳೂರು: ಸಪ್ತಕ ಸಂಸ್ಥೆಯ 19ನೇ ವಾರ್ಷಿಕ ಸಂಗೀತ ಉತ್ಸವದ ನಿಮಿತ್ತ ಮೇ 12ರಂದು ಸಂಜೆ 5.30ಕ್ಕೆ ಸಂಗೀತ ಸಂಭ್ರಮ 552ನೇ ಕಾರ್ಯಕ್ರಮವನ್ನು (Music Festival) ನಗರದ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಕ ಸಂಚಾಲಕರಾದ ಜಿ.ಎಸ್‌.ಹೆಗಡೆ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಕಾಡೆಮಿ ಆಫ್‌ ಮ್ಯೂಸಿಕ್‌ ಪ್ರಾಯೋಕತ್ವದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಕೆ ಧರಿಣಿದೇವಿ ಮಾಲಗತ್ತಿ ಭಾಗವಹಿಸಲಿದ್ದಾರೆ.

ಕೋಲ್ಕೊತಾ ಗಾಯಕಿ ವಿದುಷಿ ರುಚಿರಾ ಪಾಂಡಾ, ಬೆಂಗಳೂರಿನ ತಬಲಾ ವಾದಕ ಪಂ. ರಾಜೇಂದ್ರ ನಾಕೋಡ, ಹಾರ್ಮೋನಿಯಂ ವಾದಕ ಪಂ. ವ್ಯಾಸಮೂರ್ತಿ ಕಟ್ಟಿ, ಮುಂಬಯಿಯ ತಬಲಾ ಸೋಲೋ ಕಲಾವಿದ ಪಂ. ಯೋಗೀಶ ಸಂಸಿ, ಪುಣೆಯ ಹಾರ್ಮೋನಿಯಮ್ ಲೆಹರಾ ಕಲಾವಿದರಾದ ತನ್ಮಯ ದೇವಚಕೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Continue Reading

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading
Advertisement
IPL 2024
ಪ್ರಮುಖ ಸುದ್ದಿ2 hours ago

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

Prajwal Revanna Case
ಕರ್ನಾಟಕ3 hours ago

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Hoarding
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

Sushil Kumar Modi
ಪ್ರಮುಖ ಸುದ್ದಿ3 hours ago

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

Tejasvi Surya
ದೇಶ3 hours ago

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

IPL 2024
ಪ್ರಮುಖ ಸುದ್ದಿ3 hours ago

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

Vidyarthi Vidyarthiniyare Movie
ಕರ್ನಾಟಕ3 hours ago

Vidyarthi Vidyarthiniyare Movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಔಟ್; ಧುಮ್ಮಿಕ್ಕಿದ ಹರೆಯದ ತೊರೆ!

Road Accident Head on collision between bikes One person died on the spot
ಉತ್ತರ ಕನ್ನಡ3 hours ago

Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Lok Sabha Election
ದೇಶ5 hours ago

Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Award Ceremony
ಬೆಂಗಳೂರು5 hours ago

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail Revanna will not leave the country condition imposed by the court
ಕ್ರೈಂ8 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ8 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ8 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ9 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ9 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ15 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ20 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ22 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌