prerane morning spiritual thoughts in kannada about moha or InfatuationPrerane : ಮೋಹ ಮುಕ್ತರಾಗುವುದು ಹೇಗೆ? ಇರುವ ದಾರಿಗಳಾದರೂ ಯಾವುವು? - Vistara News

ಧಾರ್ಮಿಕ

Prerane : ಮೋಹ ಮುಕ್ತರಾಗುವುದು ಹೇಗೆ? ಇರುವ ದಾರಿಗಳಾದರೂ ಯಾವುವು?

ನೀವು ಪರಿವರ್ತನೆಯಾಗುವುದೊಂದೇ ಮೋಹದಿಂದ ಮುಕ್ತರಾಗುವ ಒಂದು ರೀತಿಯ ಉಪಾಯ. ಮನಸ್ಸಿಗೆ ಬಹಳ ನೋವಾಗುತ್ತದೆ. ಆದರೆ ಈ ನೋವು ಸಹಿಸಲೇಬೇಕು. ಇದೇ ತಪಸ್ಸು ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.

VISTARANEWS.COM


on

moha mukti and spirituality
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
sri kaivalyananda swamiji

ಶ್ರೀ ಕೈವಲ್ಯಾನಂದ ಸರಸ್ವತೀ
ಮನುಷ್ಯ ಹುಟ್ಟಿನಿಂದ ಸಾವಿನ ತನಕಾ ಆನಂದ ಪ್ರಾಪ್ತಿಗಾಗಿ ಶ್ರಮಿಸುತ್ತಾನೆ. ಆದಾಗ್ಯೂ ಆನಂದ ಕಾಣದು. ದುಃಖದಲ್ಲೇ ಜೀವಿಸುತ್ತಾನೆ. ದುಃಖಕ್ಕೆ ಕಾರಣವನ್ನು ಹುಡುಕುತ್ತಾನೆ – ಸಾಕಷ್ಟು ದುಡ್ಡು ಇಲ್ಲದ್ದೇ ಕಾರಣ; ಈ ಹೆಂಡತಿ ಸರಿಯಿಲ್ಲ, ಈ ಮಕ್ಕಳು ಸರಿಯಿಲ್ಲ. ಇನ್ನೂ ಯಶಸ್ವಿ ಪತಿ ಇದ್ದಲ್ಲಿ ಆನಂದ – ಇತ್ಯಾದಿಯಾಗಿ
ಕಾರಣಗಳನ್ನು ಹುಡುಕುತ್ತಾನೆ.

ಪ್ರಪಂಚವನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನದಾಗಿಸಿಕೊಂಡ ಪ್ರಪಂಚವನ್ನು ಅಭಿವೃದ್ಧಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನನ್ನು ಬಿಟ್ಟು ಹೋಗದೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾನೆ. ಏನೆಲ್ಲಾ ಮಾಡಿದರೂ ದುಃಖವು ಅಂತ್ಯವಾಗುವುದಿಲ್ಲ. ಆನಂದ ಪ್ರಾಪ್ತಿ ಎಂಬುದೊಂದು ಬಿಸಿಲು ಕುದುರೆಯಾಗುತ್ತಿದೆ. ಇದು ಎಲ್ಲರ ಅನುಭವವೂ ಆಗಿದೆ.

ಏಕೆ ಹೀಗಾಗುತ್ತಿದೆ? ಎಂದರೆ ʻʻಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರುʼʼ ಎಂಬಂತಿದೆ ಮನುಷ್ಯನ ಪ್ರಯತ್ನ. ದುಃಖಕ್ಕೆ ತಾನೇ ಮೂಲ ಕಾರಣವಾಗಿದ್ದಾನೆ. ಮತ್ತೆಲ್ಲೋ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಾನೆ. ತನ್ನ ಎಲ್ಲ ದುಃಖಕ್ಕೂ ಅವನ ಮೋಹವೇ ಕಾರಣ.

ಮೋಹವೆಂದರೆ ತನ್ನ ಜೀವನ, ಆನಂದ ಮತ್ತೊಬ್ಬರಿಂದ, ಮತ್ತೊಂದು ವಸ್ತುವಿನಿಂದ, ಇತರರಿಲ್ಲದೆ ತಾನಿರಲಾರ, ಇತರ ವಸ್ತುಗಳಿಲ್ಲದಿರೆ ತಾನಿರಲಾರ. ತನ್ನ ಆನಂದ ಇತರರಿಂದ, ಇತರ ವಸ್ತುಗಳಿಂದ ಎಂದು ಮೋಹಗೊಳ್ಳುತ್ತಿದ್ದಾನೆ.

ʻʻರಾಜನ ಪ್ರಾಣ ಗಿಳಿಯಲ್ಲಿದೆ. ರಾಜ ಏನು ಮಾಡಿದರೂ ಸಾಯುವುದಿಲ್ಲ. ರಾಜನನ್ನು ಸಾಯಿಸಲು ಗಿಳಿಯ ಕುತ್ತಿಗೆ ಹಿಸುಕಬೇಕು’’ ಎಂಬ ಕಥೆಯನ್ನು ಕೇಳಿರಬಹುದು. ಈ ಕಥೆ ಬಹಳ ಅರ್ಥ ಗರ್ಭಿತ. ಮಕ್ಕಳಿಗೆ ಹೇಳುವ ಈ ಕಥೆಯಲ್ಲಿ ವೃದ್ಧರೂ ಅರ್ಥ ಮಾಡಿಕೊಳ್ಳುವುದು ಸಾಕಷ್ಟಿದೆ. ರಾಜನ ಪ್ರಾಣಗಿಳಿಯಲ್ಲಿ ಇರುವಂತೆ, ಮನುಷ್ಯರ ಪ್ರಾಣ ಒಬ್ಬೊಬ್ಬರದು, ಒಂದೊಂದರಲ್ಲಿ ಇದೆ. ಕೆಲವರ ಪ್ರಾಣ ಕಬ್ಬಿಣದ ಪೆಟ್ಟಿಗೆಯಲ್ಲಿ. ನೀವು ಅವರ ಕುತ್ತಿಗೆ ಹಿಸುಕಿದರೂ ಸಾಯರು. ಕಬ್ಬಿಣದ ಪೆಟ್ಟಿಗೆ ಯಾರಾದರೂ ಖಾಲಿ ಮಾಡಿದರೆ ಅವರು ಸತ್ತಂತೆ. ಅವನ ಪ್ರಾಣ ಆ ಪೆಟ್ಟಿಗೆಯಲ್ಲಿದೆ. ಮೋಹದ ಅರ್ಥ ನಿಮ್ಮ ಪ್ರಾಣ, ನಿಮ್ಮಲ್ಲಿಲ್ಲ. ನಿಮ್ಮ ಆನಂದ ನಿಮ್ಮಲಿಲ್ಲ. ನಿಮ್ಮ ಪ್ರಾಣ, ನಿಮ್ಮ ಆನಂದ ಮತ್ತೆಲ್ಲೋ ಇದೆ. ಮಗನ ಮೇಲಿರಬಹುದು. ಹಣದ ಮೇಲಿರಬಹುದು. ಹೆಂಡತಿಯ ಮೇಲಿರಬಹುದು. ಪದವಿ ಪ್ರತಿಷ್ಠೆಗಳಲ್ಲಿರಬಹುದು. ಪ್ರಾಣವನ್ನು ಬಾಹ್ಯದಲ್ಲಿರಿಸಿರುವಿರಿ. ಅದು ಎಲ್ಲಿರಬೇಕೋ ಅಲ್ಲಿಲ್ಲ. ಅದು ನಿಮ್ಮಲ್ಲಿ ಸ್ಪಂದಿಸುತ್ತಿಲ್ಲ. ಮತ್ತೆಲ್ಲೋ ಸ್ಪಂದಿಸುತ್ತಿದೆ. ಹೀಗಾದಾಗ ನೀವು ತೊಂದರೆ ಗೀಡಾಗುತ್ತೀರ. ದುಃಖದಲ್ಲಿ ಜೀವಿಸುತ್ತೀರ.

ಮೋಹವೇ ಸಂಸಾರ

ನೀವು ಎಲ್ಲಿ, ಯಾರಲ್ಲಿ, ಯಾವುದರಲ್ಲಿ ಮೋಹಗೊಳ್ಳುವಿರೋ, ಅದಕ್ಕೆ (ಅವರಿಗೆ) ನೀವು ಗುಲಾಮರು. ರಾಜನ ಪ್ರಾಣ ಗಿಳಿಯಲ್ಲಿ. ಗಿಳಿ ಸತ್ತರೆ, ರಾಜ ಸಾಯುತ್ತಾನೆ. ಆದ ಕಾರಣ ಎಲ್ಲವನ್ನೂ ಬಿಟ್ಟು ಗಿಳಿಯನ್ನು ನೋಡಿಕೊಳ್ಳಬೇಕು. ತನ್ನನ್ನು ನೋಡಿಕೊಳ್ಳದಿದ್ದರೂ ಯಾವ ನಷ್ಟವೂ ಇಲ್ಲ. ಗಿಳಿಯನ್ನೂ ನೋಡಿಕೊಳ್ಳಬೇಕು. ನೀವು ನಿಮ್ಮ ಜೀವನವನ್ನು ಎಲ್ಲಿ ಇಟ್ಟಿರುವಿರೋ, ಅದಕ್ಕಾಗಿಯೇ ಹಗಲೂ ರಾತ್ರಿ ಕೆಲಸ ಮಾಡುವಿರಿ. ನಿಮ್ಮ ಜೀವನವೆಲ್ಲ ನಿಮ್ಮ ಮೋಹದ ವಸ್ತುವಿಗಾಗಿಯೇ.

ಮೋಹದ ಆವರಣವೆಂದರೆ ನಿಮ್ಮ ಆತ್ಮ ನಿಮ್ಮಲ್ಲಿ ಇಲ್ಲ. ಮತ್ತೆಲ್ಲಿಯೋ ಇನ್ನೊಂದು ಕಡೆ, ಇನ್ನೊಂದು ವಸ್ತುವಿನಲ್ಲಿ, ಇನ್ನೊಬ್ಬರಲ್ಲಿ ಅದು ಅವಿತುಕೊಂಡಿದೆ. ಅದು ನಿಮ್ಮಲ್ಲಿಲ್ಲ – ಇದೇ ಪ್ರಾಮುಖ್ಯ. ಇನ್ನೊಂದರ ಮೇಲೆ, ಇನ್ನೊಬ್ಬರ ಮೇಲೆ, ನಿಮ್ಮ ಅಸ್ಥಿತ್ವ ಅವಲಂಭಿತವಾಗಿದೆ. ಈ ಅವಲಂಭನೆಯ ಪರಿಣಾಮ ದುಃಖ, ಕ್ಲೇಶ, ತಪ್ಪಿಸಿಕೊಳ್ಳಲಾಗದು. ಮೋಹದ ವಸ್ತು ಎಲ್ಲಿ ಕೈಜಾರಿ ಹೋಗುವುದೋ, ಮೋಹದ ವ್ಯಕ್ತಿ ಎಲ್ಲಿ ಕೈ ಬಿಟ್ಟು ಹೋಗುವನೋ ಎಂಬ ಆತಂಕ, ಆತನಿಲ್ಲದೆ/ಆಕೆಯಿಲ್ಲದೆ ನಾ ಇರಲಾರೆ ಎಂಬ ವ್ಯಸನ ತುಂಬಿರುವುದು. ಯಾವ ವಸ್ತು ನೀವು ರೋಧಿಸುವುದಕ್ಕೆ ಕಾರಣವೋ ಅದೇ ಮೋಹದ ವಸ್ತು.

ಯಾರು ದೂರವಾದಲ್ಲಿ ನಾನು ಒಂಟಿ ಎಂಬ ಭಾವನೆ ಬರುವುದೋ ಅವರೇ ಮೋಹದ ವ್ಯಕ್ತಿ. ಯಾವ ವಸ್ತು ನಾಶವಾದರೆ ನಿಮ್ಮಲ್ಲಿ ಆ ಭಾವ ಮನೆ ಮಾಡಿಕೊಳ್ಳುವುದೋ ಅದೇ ನಿಮ್ಮ ಮೋಹದ ವಸ್ತು. ಯಾವ ವಸ್ತು ಜಾರಿ ಹೋದಲ್ಲಿ, ನೀವು ಧೈನ್ಯತೆಯನ್ನು ಹೊಂದುವಿರೋ ಅದೇ ಮೋಹದ ವಸ್ತು. ಎಲ್ಲ ದುಃಖಕ್ಕೂ ಈ ಮೋಹವೇ ಕಾರಣ. ಮೋಹಕ್ಕೆ ಎದುರಿನಲ್ಲಿರುವ ವಸ್ತು, ವ್ಯಕ್ತಿ, ಪ್ರಸಂಗ ಕಾರಣವಲ್ಲ. ನೀವೇ ಕಾರಣ. ನಿಮ್ಮ ಮೋಹವೇ ಕಾರಣ. ಮೋಹವೇ ಸಮಸ್ಯೆಯ, ದುಃಖ ಜೀವನದ ಅಡಿಗಲ್ಲು. ಈ ಅಡಿಗಲ್ಲನ್ನೂ ಕಿತ್ತೊಗೆಯುವುದಲ್ಲದೆ ಅನ್ಯ ಮಾರ್ಗವಿಲ್ಲ.

ಈಗ ಒಂದು ಪ್ರಶ್ನೆ ಎದ್ದುಕೊಳ್ಳುತ್ತದೆ. ʻʻಮೋಹದಿಂದ ಮುಕ್ತಿ ಹೇಗೆ?’’ ಈ ಪ್ರಶ್ನೆಗೆ ಸಮಾಧಾನವಾಗಿ ಕೆಲವರು ಹೇಳುವುದೇನೆಂದರೆ? ಯಾರಲ್ಲಿ ಮೋಹವಿದೆಯೋ, ಯಾವ ವಸ್ತುವಿನಲ್ಲಿ ಮೋಹವಿದೆಯೋ – ಅವರಿಂದ ದೂರ ಹೋಗಬೇಕು. ಆಗ ಮೋಹ ಕಳಚಿ ಹೋಗುತ್ತದೆ ಎನ್ನುತ್ತಾರೆ. ಇಲ್ಲಿ ಮೋಹದ ವಿಷಯ ಬದಲಾಯಿಸುತ್ತಿದೆ. ಮೋಹವುಳ್ಳ ವ್ಯಕ್ತಿ ಬದಲಾವಣೆಯಾಗಲಿಲ್ಲ. ಮೋಹವು ಹೋಗಲಿಲ್ಲ. ಮನೆಯನ್ನು ದೂರಮಾಡಿದಲ್ಲಿ, ಆಶ್ರಮ ಇಲ್ಲವೇ ಮಠದ ಮೋಹ ಹತ್ತಿಕೊಳ್ಳುವುದು. ಮನೆಗೆ ಅಂಟುಕೊಂಡಂತೆ ಆಶ್ರಮಕ್ಕೆ ಅಂಟುಕೊಳ್ಳಲಾಗುವುದು.

ಹೆಂಡತಿ, ಮಕ್ಕಳನ್ನು ಬಿಟ್ಟು ಹೋದಲ್ಲಿ ಅವರ ಸ್ಥಾನದಲ್ಲಿ ಗುರು, ಶಿಷ್ಯರು ಬರುವರು. ಕುಟುಂಬದ ಸದಸ್ಯರಿಗೆ ಅಂಟುಕೊಂಡ ರೀತಿಯಲ್ಲಿ, ಇವರಿಗೆ ಅಂಟುಕೊಳ್ಳಲಾಗುವುದು. ರಾಜಗೃಹವನ್ನು ಬಿಟ್ಟು, ಗುಡಿಸಲನ್ನು ಸೇರಬಹುದು. ಆದರೆ, ಈಗ ಗುಡಿಸಲಿನ ಮೇಲೆ ಮೋಹ. ಜಿಂಕೆಯ ಚರ್ಮ ಕಟ್ಟಿಕೊಂಡು ತಿರುಗಬಹುದು ಅಥವಾ ನಗ್ನವಾಗಿ ತಿರುಗಬಹುದು. ಜಿಂಕೆಯ ಚರ್ಮದ ಮೇಲೆ ಮೋಹ, ನಗ್ನತ್ವದ ಮೇಲೆ ಮೋಹ. ಮೋಹದಿಂದ ಮುಕ್ತನಾಗಲು ಪಲಾಯನ ಪರಿಹಾರವಾಗಲಾರದು.

spirituality Moha

ಮೋಹದಿಂದ ಮುಕ್ತಿ ಹೇಗೆ?

ಮತ್ತಾವುದು ಪರಿಹಾರ? ಯಾರಲ್ಲಿ, ಯಾವುದರಲ್ಲಿ ಮೋಹವಿದೆಯೋ ಅನ್ವೇಷಣೆ ಮಾಡಿ ನೋಡಿಕೊಳ್ಳಿ. ಯಾರು ದೂರವಾದರೆ ಯಾವ ವಸ್ತುವು ಕಳೆದು ಹೋದರೆ ನೀವು ವಿಕಾರ ಕೈಗೊಳ್ಳುವಿರೋ ಪರೀಕ್ಷಿಸಿಕೊಳ್ಳಿ. ಆ ವ್ಯಕ್ತಿ, ಆ ವಸ್ತು ದೂರವಾಗುವುದಕ್ಕೆ ಮುನ್ನ ನೀವು ಜಾಗೃತರಾಗಿ, ನಿಮ್ಮ ಮೋಹವನ್ನು ಕೊಡವಿಕೊಳ್ಳಿ. ಹೇಗೆ ಸಾಧ್ಯ? ಎನ್ನುವಿರಾ? ಪ್ರಪಂಚದಲ್ಲಿ ಯಾವುದೊಂದು ಸ್ಥಿರವಲ್ಲ. ಸ್ನೇಹವಾಗಲಿ, ಪ್ರೇಮವಾಗಲಿ, ಸಂಬಂಧವಾಗಲಿ ಯಾವುದು ಸ್ಥಿರವಲ್ಲ. ಪ್ರತಿಕ್ಷಣ, ಪ್ರಪಂಚದ ಪ್ರತಿವಸ್ತುವೂ ಪರಿವರ್ತನೆಯಾಗುತ್ತಿದೆ. ಪರಿವರ್ತನೆಯೊಂದೆ ಇಲ್ಲಿ ಸ್ಥಿರವಾದದ್ದು. ʻʻಸಂಯೋಗ ವಿಪ್ರಯೋಗಾಂತಃ’’ – ಒಟ್ಟಿಗೆ ಸೇರುವುದು, ಬಿಟ್ಟು ಹೋಗಲಿಕ್ಕಾಗಿಯೇ – ಇದೊಂದು ಬದಲಾಯಿಸಲಾಗದ ಪ್ರಪಂಚದ ನಿಯಮ.

ಬದಲಾಗಬೇಕಾದದ್ದು ನೀವು ಹಾಗೂ ನಿಮ್ಮ ನಿಲುವು. ನದಿ ಪ್ರವಾಹದಂತೆ ಎಲ್ಲವೂ ಪರಿವರ್ತನೆಯ ಪ್ರವಾಹ. ಒಂದು ಕಡೆ ನಿಲ್ಲದು. ಕಟ್ಟೆಕಟ್ಟಿ ನಿಲ್ಲಿಸುವ ನೀವು ಸಾಕಷ್ಟು ಪ್ರಯತ್ನ ಮಾಡಿರುತ್ತೀರಿ, ಶ್ರಮವಹಿಸಿರುತ್ತೀರಿ. ಬೆವರು ಸುರಿಸಿರುತ್ತೀರಿ. ಆದರೆ ಶ್ರಮ, ಆಯಾಸವೇ ಪ್ರಯೋಜನವಾಗಿದೆ. ಪರಿವರ್ತನೆಯೇ ಸಂಸಾರ. ಈ ಸಂಸಾರದಲ್ಲಿ ಸ್ಥಿರವಾದದ್ದನ್ನು ಹುಡುಕುವುದು, ಬಯಸುವುದು ವ್ಯರ್ಥ.

ನೀವು ಆಸೆ ಪಟ್ಟದ್ದು ಕೈ ಜಾರಿ ಹೋಗುವುದು. ʻʻಪರಿವರ್ತನೆಯೇ ಸಂಸಾರ’’ – ಪರಿವರ್ತನೆ ಮಾಡಲಾಗದ ಸ್ವಭಾವ ಈ ಸಂಸಾರದ್ದು, ಪರಿವರ್ತನೆಯಾಗಬೇಕಾದದ್ದು ʻʻನೀವೇ’ ಎಂಬುದನ್ನು ಅರ್ಥಮಾಡಿಕೊಂಡು, ನಿಮ್ಮ ಮೋಹವನ್ನು ಮುರಿದು ಹಾಕಿ. ಮೋಹವನ್ನು ವರೆಸಿ ಹಾಕಿ. ನೀವು ಪರಿವರ್ತನೆಯಾಗುವುದೊಂದೇ ಮೋಹದಿಂದ ಮುಕ್ತರಾಗುವ ಒಂದು ರೀತಿಯ ಉಪಾಯ. ಮನಸ್ಸಿಗೆ ಬಹಳ ನೋವಾಗುತ್ತದೆ. ಆದರೆ ಈ ನೋವು ಸಹಿಸಲೇಬೇಕು. ಇದೇ ತಪಸ್ಸು. ಇದಕ್ಕಾಗಿ ಸಂಸಾರವನ್ನು ಬಿಟ್ಟು, ದೂರದ ಹಿಮಾಲಯಕ್ಕೆ ಹೋಗಬೇಕಾದದ್ದಿಲ್ಲ. ನೀವು ಎಲ್ಲಿರುವಿರೋ ಅಲ್ಲಿಯೇ ಇರಿ. ಆದರೆ ಹಣ, ಹೆಂಡತಿ (ಗಂಡ) ಇತ್ಯಾದಿಗಳ ಮೇಲಿನ ನಿಮ್ಮ ಅವಲಂಬನೆ ಬಿಡಿ. ಮೋಹದ ವಸ್ತುವಿನಿಂದ ಮಾನಸಿಕವಾಗಿ ದೂರವಿದ್ದು ಜೀವಿಸಲು ನಿಮ್ಮ ಅಂತರಂಗದಲ್ಲೇ ಪ್ರಯತ್ನಮಾಡಿ. ಆ ಪ್ರಯತ್ನದಲ್ಲಿಯೇ ಮುಂದುವರಿಯುತ್ತಾ, ಕೊನೆಯಲ್ಲಿ ಯಾವ ವಸ್ತು ಯಾವ ವ್ಯಕ್ತಿಯೂ ಇಲ್ಲದಿದ್ದರೂ ನಿಮ್ಮಲ್ಲಿ ಯಾವ ಅಂಜಿಕೆ, ನಡುಕ ಇಲ್ಲದಿರಲಿ.

ಅಂತಹ ಒಂದು ಸ್ಥಿತಿಯನ್ನು ಪಡೆಯಿರಿ. ಆಗ ನೀವು ಮೋಹವನ್ನು ಜಯಸಿದಂತೆ. ಇದು ಅಸಾಧ್ಯವಲ್ಲ. ಸಾಧ್ಯ. ಒಬ್ಬರಿಗೆ ಸಾಧ್ಯವಾಗಿದ್ದಲ್ಲಿ, ಎಲ್ಲರಿಗೂ ಸಾಧ್ಯ. ಇದು ಸಾಧ್ಯವಾದ ಆ ಶುಭ ಘಳಿಗೆಯಲ್ಲಿಯೇ ಆತ್ಮ ಜ್ಞಾನ – ಸಹಜ ವಿದ್ಯಾ – ಪ್ರಾಪ್ತಿಯಾಗುವುದು.

ಎಲ್ಲಿಗೆ ಹೋದರೂ ʻಇತರೆ’ ಎಂಬುದು ಇದ್ದೇ ಇದೆ. ‘ಇತರೆ’ ಎಂಬುದು ಸರ್ವತ್ರ ಇದೆ. ಈ ಪ್ರಪಂಚದಲ್ಲಿ ನಿನಗಿಂತಲೂ ಭಿನ್ನವಾದದ್ದರಿಂದ ಓಡಿಹೋಗಲು ಸಾಧ್ಯವಿಲ್ಲ. ಏಕೆಂದರೆ ಪ್ರಪಂಚವೇ ಭಿನ್ನವಾದದ್ದು ಮತ್ತು ಎಲ್ಲಿ ಹೋದರೂ ಪ್ರಪಂಚವಿದೆ. ಪ್ರಪಂಚದಿಂದ ಆಚೆಗೆ ಹೋಗಲಾಗದು. ಎಲ್ಲಿ ಹೋದರು ಭಿನ್ನವಾದ ವಸ್ತು ಅಲ್ಲಿ ಇರುವುದು. ಆದ್ದರಿಂದ ಇತರ ವಸ್ತುಗಳಿಂದ, ಬೇರೆಯವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇತರ ವಸ್ತುಗಳಿಂದ, ಇತರ ವ್ಯಕ್ತಿಗಳಿಂದ ಓಡಿ ಹೋಗಲಾಗದು. ಎಲ್ಲಿ ಹೋದರೂ ಪ್ರಪಂಚವಿದೆ. ಇದೇ ಸತ್ಯದ ಇನ್ನೊಂದು ಮುಖವೇನೆಂದರೆ, ಅಹಂಕಾರ ರೂಪದಲ್ಲಿ ನೀವಿರುವವರೆಗೂ, ನಿಮಗಿಂತಲೂ ಬೇರೆಯಾದ ವಸ್ತುಗಳು ವ್ಯಕ್ತಿಗಳು ತಪ್ಪದೇ ಇರುತ್ತಾರೆ. ಕಣ್ಣು ಮುಚ್ಚಿಕೊಂಡರೂ, ಪ್ರಪಂಚದ ದೃಶ್ಯಗಳು ಅದೃಶ್ಯವಾದರೂ ʻʻಇತರೆ’’ ಎಂಬುದು ಅದೃಶ್ಯವಾಗದು. ಮುಚ್ಚಿರುವ ಕಣ್ಣುಗಳ ಹಿಂಭಾಗದಲ್ಲಿ ಇರುವುದು. ನಿಮ್ಮ ಆಸೆಗಳಲ್ಲಿ, ಆತುರತೆಯ ಹಂಬಲದಲ್ಲಿ ನಿಮ್ಮ ಕನಸಿನಲ್ಲಿ, ನಿಮ್ಮ ಹಗಲುಗನಸಿನಲ್ಲಿ ʻಇತರೆ’ ಎಂಬುದು ಇರುತ್ತದೆ. ಅಹಂಕಾರವಿರುವವರೆಗೂ ಬೇರೆಯವರನ್ನು, ಬೇರೆ ವಸ್ತುಗಳನ್ನು ತಪ್ಪಿಸಿಕೊಳ್ಳಲಾಗದು.

ಎಲ್ಲಿ ಹೋದರೂ ಪ್ರಪಂಚವಿದೆ, ಅಹಂಕಾರವಿದೆ ಅಥವಾ ಎಲ್ಲಿ ಹೋದರೂ ಅಹಂಕಾರವಿದೆ. ಅಹಂಕಾರದ ಮುಖಾಂತರ ನಾನು ನೋಡಿದ್ದೇ ಪ್ರಪಂಚ. ಅಹಂಕಾರವಿದೆ, ಪ್ರಪಂಚವಿದೆ. ಇವೆರಡರೂ ಇರುವಲ್ಲಿ ಸಂಬಂಧವಿದೆ. ಸಂಬಂಧವಿದ್ದಲ್ಲಿ ಮೋಹವಿದೆ. ಆದ ಕಾರಣ ಮೋಹದಿಂದ ತಪ್ಪಿಸಿಕೊಳ್ಳಲಾಗದು. ತಪ್ಪಿಸಿಕೊಳ್ಳಲು ಎಲ್ಲಿ ಪ್ರಪಂಚವಿಲ್ಲವೋ, ಎಲ್ಲಿ ಅಹಂಕಾರವಿಲ್ಲವೋ, ಎಲ್ಲಿ ಸಂಬಂಧಕ್ಕೆ ಅವಕಾಶವೇ ಇಲ್ಲವೋ, ಅಲ್ಲಿಗೆ ಹೋಗಿ ಸೇರಿಕೊಳ್ಳಬೇಕು.

ಅಂತಹ ಸ್ಥಳವು ಯಾವುದೆಂದರೆ ನಮ್ಮುಗಳ ಅಸ್ಥಿತ್ವವೇ, ನಮ್ಮ ಅಸ್ಥಿತ್ವದ ಅಂತರ್ ಕೇಂದ್ರವೇ. ಆದಕಾರಣ ನಮ್ಮ ಅಸ್ಥಿತ್ವದ ಕೇಂದ್ರದ ಕಡೆ ಯಾತ್ರೆ ಮಾಡಬೇಕು. ಅತ್ಯಂತ ಆಳದಲ್ಲಿರುವ ನಮ್ಮ ಅಸ್ಥಿತ್ವದ ಅಂತರ್ ಭಾಗವನ್ನು ಪ್ರವೇಶಿಸಬೇಕು. ಏಕಾಂತವಾದ, ನರ‍್ಮಾನುಷ್ಯವಾದ, ನಿರ್ವಸ್ತುಕವಾದ ಆ ಮಂದಿರಕ್ಕೆ ಪ್ರವೇಶಿಸಬೇಕು. ಅಲ್ಲಿ ಯಾರು ಇರುವುದಿಲ್ಲ. ಯಾವ ವಸ್ತುವೂ ಇರುವುದಿಲ್ಲ. ನಾವು ಸಹ – ಅಂದರೆ ಅಹಂಕಾರವೂ ಇರುವುದಿಲ್ಲ. ಆದಕಾರಣ ಅಲ್ಲಿ ಸಂಬಂಧವಿಲ್ಲ. ಮೋಹವಿಲ್ಲ. ಅದು ಸಂಪೂರ್ಣವಾದ ಮೌನ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಅಹಂಕಾರವು ಎಲ್ಲಿ ಇಲ್ಲವಾಗುವುದೋ ಅದೇ ನಮ್ಮ ಸ್ವರೂಪ. ಅಹಂಕಾರಕ್ಕೂ ಸ್ವರೂಪಕ್ಕೂ ಯಾವ ಸಂಬಂಧವೂ ಇಲ್ಲ. ಅಹಂಕಾರ ಇರುವಾಗಲೂ, ಅಹಂಕಾರವು ಇಲ್ಲದಿರುವಾಗಲೂ ಯಾವುದಿರುವುದೋ ಅದೇ ನಮ್ಮ ಸ್ವರೂಪ. ಒಮ್ಮೆ ನಿದ್ರಾನುಭವವನ್ನು ನೋಡಿಕೊಳ್ಳಿ. ನಿದ್ದೆಯ ಬಗ್ಗೆ ಜಾಗ್ರತ್ ಅವಸ್ಥೆಯ ಬುದ್ಧಿ ಹೇಳುವುದನ್ನು ಕೇಳಬೇಡಿ. ಯಾವರೀತಿ ಅನುಭವಿಸುತ್ತೀರೋ ಆ ರೀತಿ ನೋಡಿಕೊಳ್ಳಿ. ನೋಡಿಕೊಂಡಾಗ, ಪ್ರಪಂಚವಿಲ್ಲ, ಅಹಂಕಾರವಿಲ್ಲ, ಸಂಬಂಧವಿಲ್ಲ, ಮೋಹವಿಲ್ಲ, ಆದರೂ ನೀವಿದ್ದೀರ, ನೀವಿದ್ದೀರ ಎಂದಾಗ ಈ ವ್ಯಕ್ತಿತ್ವದ ಛಾಯೆ ಕಾಣುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದಲ್ಲಿ ಪ್ರಪಂಚವಿಲ್ಲದೆ, ಅಹಂಕಾರವಿಲ್ಲದೆ, ಸಂಬಂಧಕ್ಕೆ ಅವಕಾಶವಿಲ್ಲದೆ, ಮೋಹವಿಲ್ಲದೆ, ಯಾವುದೋ ಒಂದು ಉಳಿದಿದೆ. ಅದೇ ನಮ್ಮುಗಳ ಅಸ್ಥಿತ್ವ. ಎಚ್ಚರ. ಕನಸುಗಳಲ್ಲಿ ಅಹಂಕಾರ ವ್ಯವಹಾರ ನಡೆಯುತ್ತಿರುವಾಗಲೂ ನೀವು ಅದೇ ಸ್ವರೂಪ. ಅಹಂಕಾರ, ಅಹಂಕಾರದ ವ್ಯವಹಾರ ನಿಮಗೆ ಅಂಟಿಲ್ಲ. ಮೋಹ ಮುಕ್ತರು. ಜಾಗ್ರತ್ತು, ಕನಸು, ನಿದ್ದೆಗಳಲ್ಲೂ ನೀವು ಮೋಹ ಮುಕ್ತರು. ನೀವೇ ಮೋಹ ಮುಕ್ತ ಮಂದಿರ, ಮೋಹ ಮುಕ್ತ ದೇವರು.

ಸ್ವರೂಪತಃ ನಿಮಗೆ ಯಾವುದೂ ಅಂಟಿಲ್ಲ. ಯಾರೂ ಅಂಟಿಲ್ಲ. ಆದಕಾರಣ ನೀವು ನಿತ್ಯ ಮುಕ್ತರು. ಈ ವಸ್ತುಸ್ಥಿತಿಯನ್ನು ಗುರ್ತಿಸದೆ, ಜೀವನ ಎಷ್ಟು ವರ್ಷ ಮಾಡಿದರೇನು! – ವ್ಯರ್ಥ. ಗುರ್ತಿಸಲು ಇರುವ ಏಕೈಕ ಮಾರ್ಗ, ಗುರುಮುಖೇನ ಉಪನಿಷತ್ ತತ್ವವನು ಗುರ್ತಿಸಬೇಕು.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನೂ ಓದಿ : Prerane : ಶ್ರೇಯಸ್ಸೆಂದರೆ ಎಲ್ಲರಿಗೂ ಗೊತ್ತು; ಪ್ರೇಯಸ್‌ ಎಂದರೆ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಳಗಾವಿ

Belagavi News: ಬೆಳಗಾವಿಯಲ್ಲಿ ಮೇ 29ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವ

Belagavi News: ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11 ನೇ ವಾರ್ಷಿಕ ಮಹೋತ್ಸವವು ಇದೇ ಮೇ 29 ರಿಂದ ಮೇ 31 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

VISTARANEWS.COM


on

11th Annual Mahotsav of Sri Annapurneswari Temple in Belagavi from 29th May
Koo

ಬೆಳಗಾವಿ: ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವವು ಇದೇ ಮೇ 29 ರಿಂದ ಮೇ 31 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ (Belagavi News) ತಿಳಿಸಿದ್ದಾರೆ.

ಇದನ್ನೂ ಓದಿ: Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಮೇ 29 ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ಸಹಿತ ಪರಿವಾರ ದೇವರಿಗೆ ಕಲಶಾಭಿಷೇಕ, 8 ಕ್ಕೆ ನಾಗದೇವರ ಬಿಂಬ ಪ್ರತಿಷ್ಠಾಪನೆ, ಕಲಶಾಭಿಷೇಕ ಮಹಾಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸನ್ನ ಪೂಜೆ, ಪ್ರಸಾದ, ಸಂಜೆ 5 ರಿಂದ ರಂಗ ಪೂಜೆ ಶ್ರೀ ದೇವಿಯ ಪಲ್ಲಕ್ಕಿ- ಮೆರವಣಿಗೆ, ದೀಪೋತ್ಸವ ನಡೆಯಲಿದೆ.

ಮೇ 30 ರಂದು ಬೆಳಗ್ಗೆ 7 ಕ್ಕೆ ಸಂಪ್ರೋಕ್ಷಣೆ, ಅನ್ನಪೂರ್ಣೇಶ್ವರಿ ಯಾಗ, ಸುಬ್ರಮಣ್ಯ ದೇವರಿಗೆ ಆಶ್ಲೇಷ ಬಲಿ, 8.30 ಕ್ಕೆ ಮಹಾ ಚಂಡಿಕಾ ಯಾಗ, ಸಂಜೆ 6 ಕ್ಕೆ ಕೀರ್ತನಾಕಾರರಿಂದ ಕೀರ್ತನೆ, ವ್ಯಾಖ್ಯಾನ ನಡೆಯಲಿದೆ.

ಇದನ್ನೂ ಓದಿ: New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

ಮೇ 31 ರಂದು ಬೆಳಗ್ಗೆ 9 ಕ್ಕೆ ದೇವಿಗೆ ವಿಶೇಷ ಅಲಂಕಾರ, ಪೂಜಾರಾಧನೆ, 10 ಕ್ಕೆ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ 1 ರಿಂದ 3 ಗಂಟೆವರೆಗೆ ಮಹಾಪ್ರಸಾದ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಬೆಂಗಳೂರು

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Basavanagudi News : ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿರುವ (Dodda Ganapathi Temple) ಮಳಿಗೆಗಳಲ್ಲಿ ಪೂಜಾ ಸಾಮಗ್ರಿಗಳನ್ನು ಒನ್‌ ಟು ಡಬಲ್‌ ರೇಟ್‌ಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಭಕ್ತಾಧಿಗಳು ಹಾಗೂ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

VISTARANEWS.COM


on

By

Basavanagudi News
Koo

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ (Basavanagudi News) ಭಕ್ತಾದಿಗಳು ಹಾಗೂ ಮಳಿಗೆ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದೆ. ದೇವಸ್ಥಾನದಲ್ಲಿರುವ (Dodda Ganapathi Temple) ಮಳಿಗೆಯಲ್ಲಿ ಪೂಜಾ ಸಾಮಗ್ರಿಗಳು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಕೆಲವು ತಿಂಗಳಿಂದ ಪೂಜಾ ಸಾಮಗ್ರಿಗಳ ಬೆಲೆ ಕೇಳಿ ಭಕ್ತಾದಿಗಳು ಶಾಕ್ ಆಗಿದ್ದರು. ಮನಸೋ ಇಚ್ಛೆ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಕೂಡ ಕೇಳಿಬಂದಿತ್ತು. ಹೂವು, ಹಣ್ಣು, ಕಡ್ಡಿ, ಕರ್ಪೂರ ಸೇರಿದ 70-80 ರೂಪಾಯಿಯ ಒಂದು ಸಣ್ಣ ಕಿಟ್ ಅನ್ನು ಬರೋಬ್ಬರಿ 150 ರೂಪಾಯಿಗೆ ಸೇಲ್ ಮಾಡಲಾಗುತ್ತಿದೆ. ಇದೊಂಥರಾ ಹಗಲು ದರೋಡೆ ಅಂದರೆ ತಪ್ಪಾಗಲ್ಲ.

ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಕ್ತಾಧಿಗಳು ಇದನ್ನೂ ಪ್ರಶ್ನಸಿದ್ದಾರೆ. ಈ ವೇಳೆ ಭಕ್ತರು ಹಾಗೂ ಮಳಿಗೆ ವ್ಯಾಪಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದಿದೆ. ಟೆಂಟರ್‌ಗೆ ಹೆಚ್ಚು ಹಣವನ್ನು ಕೊಟ್ಟಿದ್ದೀವಿ, ಹೀಗಾಗಿ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿವಿ. ಮಾರುಕಟ್ಟೆಯಲ್ಲಿ ಹೂ-ತೆಂಗಿನಕಾಯಿ ದಿನಕ್ಕೊಂದು ದರ ಇರುತ್ತದೆ, ನಾವೇನು ಮಾಡೋಣ ಎಂದು ಮಳಿಗೆ ವ್ಯಾಪಾರಿಗಳು ವಾದವಾಗಿದೆ.

ಇತ್ತ 2 ಬಾಳೆಹಣ್ಣು, ತೆಂಗಿನಕಾಯಿ, ಅಗರಬತ್ತಿ, ಹೂವಿ ಇರುವು ಪೂಜಾ ಸಾಮಗ್ರಿಗೆ ಬರೋಬ್ಬರಿ 150-300 ರೂ. ವ್ಯಾಪಾರಿಗಳು ಭಕ್ತರಿಂದ ಪಡೆಯುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಭಕ್ತರು, ವ್ಯಾಪಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದನ್ನು ಕೇಳಬೇಕಿದ್ದ ಮುಜರಾಯಿ ಕಣ್ಮುಚ್ಚಿ ಕುಳಿತಿದೆ. ಇದರ ಪರಿಣಾಮ ಭಕ್ತರ ಜೇಬು ಖಾಲಿ ಆಗುತ್ತಿದ್ದು, ವಿಧಿಯಿಲ್ಲದೆ ದುಬಾರಿ ಹಣ ತೆರಬೇಕಾಗುತ್ತಿದೆ.

ಇದನ್ನೂ ಓದಿ: Raichur News : ಸಾಲದ ಸುಳಿಗೆ ಸಿಲುಕಿದ ಸ್ನೇಹಿತೆಗೆ ಕೊಟ್ಟಳು 10 ತೊಲೆ ಬಂಗಾರ! ‘ಕಳ್ಳತನ’ ನಾಟಕವಾಡಿದ ಗೆಳತಿಯರು ಲಾಕ್‌

Theft Case : ಚಿನ್ನ ಕದಿಯಲು ಬಂದು ಮದುವೆ ಮನೆಯವರಿಂದ ಧರ್ಮದೇಟು ತಿಂದ ಕಳ್ಳ

ಚಿಕ್ಕಬಳ್ಳಾಪುರ: ಮದುವೆ ಮನೆಗೆ ಬಂದ ಕಳ್ಳನಿಗೆ (Theft Case ) ವರ ಹಾಗೂ ವಧುವಿನ ಕಡೆಯವರು ಭರಪೂರ ಉಡುಗೊರೆ ಕೊಟ್ಟಿದ್ದಾರೆ. ಮದುವೆ ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಮಹಿಳೆ ಬಳಿ ಚಿನ್ನದ ಸರ ಕದಿಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಕಳ್ಳನನ್ನು ಹಿಡಿದ ಮದುವೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಸಾಯಿಕೃಷ್ಣ ಫಂಕ್ಷನ್ ಹಾಲ್‌ನಲ್ಲಿ ಘಟನೆ ನಡೆದಿದೆ.

ಸರ ಕದ್ದ ಆರೋಪಿಯನ್ನು ಆಂದ್ರಪ್ರದೇಶದ ಮುಲ್ಲಮೋತುಕಪಲ್ಲಿ ಗ್ರಾಮದ ಪಿ. ನರೇಶ್ ಎಂದು ತಿಳಿದು ಬಂದಿದೆ. ಮದುವೆ ಮನೆಯಲ್ಲಿ ಮಹಿಳೆ ಬಟ್ಟೆ ಬದಲಿಸುವ ವೇಳೆ ನರೇಶ್ ಚಿನ್ನದ ಸರ ಕದಿಯಲು ಯತ್ನಿಸಿದ್ದ. ಆದರೆ ಇದನ್ನೂ ಗಮನಿಸಿದ ಮಹಿಳೆ ಕೂಡಲೇ ಕಿರುಚಾಡಿದ್ದು, ತಪ್ಪಿಸಿಕೊಂಡು ಓಡಾಡುತ್ತಿದ್ದ ನರೇಶ್‌ನನ್ನು ಹಿಡಿದು ಥಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೌರಿಬಿದನೂರು ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

ಬೆಂಗಳೂರು: ಸಾರಾಯಿಪಾಳ್ಯದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಖರ್ತನಾಕ್‌ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ರಿಯಾಝ್ ಖಾನ್ ಹಾಗು ವಸೀಂ ಫಿರೋಝ್ ಬಂಧಿತ ಆರೋಪಿಗಳು.

ಬೆಳಗಿನಿಂದ ಸಂಜೆ ತನಕ ಕೋಳಿ ಅಂಗಡಿಯಲ್ಲಿ ಕೋಳಿ ಕುಯ್ಯುವ ಕೆಲಸ ಮಾಡಿದರೆ, ರಾತ್ರಿಯಾದರೆ ಸಾಕು ಸುಲಿಗೆಗೆ ಇಳಿಯುತ್ತಿದ್ದರು. ಇತ್ತೀಚಿಗೆ ಸ್ಕೂಟರ್‌ನಲ್ಲಿ ಬಂದಿದ್ದ ಇವರಿಬ್ಬರು, ಅಮ್ಮೇಜಾನ್ ಎಂಬುವವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಅಮ್ಮೇಜಾನ್‌ ಅವರು ದೂರು ದಾಖಲಿಸಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿರುವ ಬಾಣಸವಾಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Siddaramaiah: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಆಗಮನ ಹಿನ್ನೆಲೆಯಲ್ಲಿ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅರ್ಧ ಗಂಟೆಯಿಂದ ನಿರ್ಬಂಧವನ್ನು ವಿಧಿಸಲಾಗಿತ್ತು. ಮೊದಲೇ ಸಾಲುಗಟ್ಟಿ ನಿಂತಿದ್ದ ಭಕ್ತರಿಗೆ ಮತ್ತೆ ಕಾಯುವುದು ಶಿಕ್ಷೆಯಾಗಿ ಪರಿಣಮಿಸಿತು. ಸಿಎಂ, ಡಿಸಿಎಂ ಬರಲು ಸಾಕಷ್ಟು ಸಮಯ ಇದ್ದರೂ ಅವಧಿಗೆ ಮುನ್ನವೇ ಭಕ್ತರನ್ನು ತಡೆಯಲಾಗಿತ್ತು. ಕಾದು ಕಾದು ಸುಸ್ತಾಗಿದ್ದ ಭಕ್ತರ ಸಿಟ್ಟು ನೆತ್ತಿಗೇರಿತ್ತು. ರಾಜಕಾರಣಿಗಳ ಕಾರಣದಿಂದಾಗಿ ದೇವರ ದರ್ಶನಕ್ಕೂ ಇಷ್ಟು ಕಾಯಬೇಕಲ್ಲ ಎಂದು ಹಿಡಿಶಾಪ ಹಾಕಿದ್ದು ಕೂಡ ಕಂಡುಬಂತು.

VISTARANEWS.COM


on

Siddaramaiah
Koo

ಮಂಗಳೂರು: ಲೋಕಸಭೆ ಚುನಾವಣೆ ಪ್ರಚಾರದ ಭರಾಟೆ ಮುಗಿದು, ತುಸು ನಿರಾಳರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಶನಿವಾರ (ಮೇ 25) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ (Dharmasthala) ತೆರಳಿ, ದೇವರ ಆಶೀರ್ವಾದ ಪಡೆದರು. ಅಲ್ಲದೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿಯಾದರು. ಇದೇ ವೇಳೆ, ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ನೀಡುವ ತೀರ್ಮಾನದ ಕುರಿತು ಸಿದ್ದರಾಮಯ್ಯ ಅವರಿಗೆ ಹಲವು ಹೆಣ್ಣುಮಕ್ಕಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕುರಿತು ಸಿದ್ದರಾಮಯ್ಯ ಅವರೇ ಪೋಸ್ಟ್‌ ಮಾಡಿದ್ದಾರೆ.

ಧರ್ಮಸ್ಥಳ ಭೇಟಿ, ಮಹಿಳೆಯರ ಮೆಚ್ಚುಗೆ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರು ಫೋಟೊಗಳ ಸಮೇತ ಪೋಸ್ಟ್‌ ಮಾಡಿದ್ದಾರೆ. “ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಕೆಲವು ಮಹಿಳೆಯರು ನಗುಮೊಗದಲ್ಲಿ ನನ್ನ ಬಳಿ ಬಂದು ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿಯಿಂದ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ, ನೀವು ಶಕ್ತಿ ಯೋಜನೆ ಜಾರಿ ಮಾಡಿದ್ದರಿಂದ ಇಂದು ನಾವು ದೂರದ ಊರಿನಿಂದ ದೇವರ ದರ್ಶನಕ್ಕೆ ಬರಲು ಅನುಕೂಲ ಆಗಿದೆ, ನಿಮಗೆ ಮಂಜುನಾಥ ಸ್ವಾಮಿ ದೀರ್ಘ ಆಯಸ್ಸು, ಆರೋಗ್ಯ ನೀಡಲಿ, ಬಡವರಿಗೆ ಇನ್ನಷ್ಟು ಅನುಕೂಲ ಆಗುವಂತಹ ಕಾರ್ಯಕ್ರಮಗಳು ನಿಮ್ಮಿಂದ ಜಾರಿಯಾಗಲಿ ಎಂದು ಆಶೀರ್ವದಿಸಿದರು. ಈ ದಿನ ದೇವರ ದರ್ಶನ ಭಾಗ್ಯದ ಜೊತೆಗೆ ಹತ್ತಾರು ತಾಯಂದಿರ ಆಶೀರ್ವಾದ ಪಡೆದ ಧನ್ಯತಾಭಾವ ನನ್ನದು” ಎಂಬುದಾಗಿ ಅವರು ಪೋಸ್ಟ್‌ ಮಾಡಿದ್ದಾರೆ.

ಸಿಎಂಗೆ ಪೂರ್ಣಕುಂಭ ಸ್ವಾಗತ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಧರ್ಮಸ್ಥಳದ ಕ್ಷೇತ್ರದ ವತಿಯಿಂದ ಪೂರ್ಣಕುಂಭ ಸ್ವಾಗತವನ್ನು ಮಾಡಲಾಯಿತು. ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಭವ್ಯ ಸ್ವಾಗತ ಸಿಕ್ಕಿತು. ವಾದ್ಯ ಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಪರವಾಗಿ ಧರ್ಮಸ್ಥಳ ಧರ್ಮದರ್ಶಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಸ್ವಾಗತಿಸಿದರು.

ವಿಶೇಷ ಪೂಜೆ, ಡಾ. ವೀರೇಂದ್ರ ಹೆಗ್ಗಡೆ ಭೇಟಿ

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಕೆಲ ಹೊತ್ತು ಚರ್ಚೆ ನಡೆಸಿದರು.

ಧರ್ಮಸ್ಥಳ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, “ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ ಎಂದು ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು ಸಂತೋಷ ಹಂಚಿಕೊಂಡರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. “ನಾನು ಹಾಗೂ ಮುಖ್ಯಮಂತ್ರಿಗಳು ಮಂಜುನಾಥನ, ಅಣ್ಣಪ್ಪ ಸ್ವಾಮಿ ಹಾಗೂ ಅಮ್ಮನವರ ದರ್ಶನ ಮಾಡಿದ್ದೇವೆ. ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಉತ್ತಮ ಮಳೆ, ಬೆಳೆಯಾಗಿ ರಾಜ್ಯದ ಜನರು ಶಾಂತಿ, ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥಿಸಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: CM Siddaramaiah: ಸಿದ್ದು, ಡಿಕೆಶಿ ಧರ್ಮಸ್ಥಳ ದೇವಸ್ಥಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಜೈಶ್ರೀರಾಮ್‌, ಮೋದಿ ಕೀ ಜೈ ಘೋಷಣೆ!

Continue Reading

ಶಿವಮೊಗ್ಗ

Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

Shivamogga News: ಸೊರಬ ತಾಲೂಕಿನ ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಆಗೀ ಹುಣ್ಣಿಮೆಯ ಪ್ರಯುಕ್ತ ಗುರುವಾರ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು.

VISTARANEWS.COM


on

Agee hunnime Thousands of devotees have darshan of Shri Renukamba Devi of Chandragutti
Koo

ಸೊರಬ: ತಾಲೂಕಿನ ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ (Chandragutti Shri Renukamba Devi temple) ಆಗೀ ಹುಣ್ಣಿಮೆಯ ಪ್ರಯುಕ್ತ ಗುರುವಾರ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ (Shivamogga News) ಸಲ್ಲಿಸಿದರು.

ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಹರಿಹರ, ಶಿಕಾರಿಪುರ, ಹಾನಗಲ್, ವಿಜಯಪುರ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ರೇಣುಕಾದೇವಿಯ ದರ್ಶನ ಪಡೆದು ಉಧೋ ಉಧೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

ಹುಣ್ಣಿಮೆ ಹಿನ್ನೆಲೆ ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಿಯ ಹೆಸರಿನಲ್ಲಿ ಭಕ್ತರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿದರು. ಧಾರ್ಮಿಕ ಸೇವೆ, ಹರಕೆ ಸಲ್ಲಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರು ಕುಟುಂಬ ಸಮೇತರಾಗಿ ಸಹ ಭೋಜನ ಮಾಡುವ ದೃಶ್ಯವೂ ಕಂಡುಬಂದಿತು.

ಇದನ್ನೂ ಓದಿ: Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

ಪ್ರತಿ ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಶೀ ರೇಣುಕಾಂಬ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಆದರೆ ರಸ್ತೆ ಕಿರಿದಾದ ಕಾರಣ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸುಮಾರು 1 ಗಂಟೆ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಸ್ಥಳೀಯ ಜನಪ್ರತಿನಿಧಿಗಳು ಚಂದ್ರಗುತ್ತಿ ಮುಖ್ಯ ರಸ್ತೆಯನ್ನು ಅಗಲಿಕರಿಸಿ ವ್ಯವಸ್ಥಿತವಾದ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Continue Reading
Advertisement
WhatsApp Update
ತಂತ್ರಜ್ಞಾನ12 mins ago

WhatsApp Update: ವಾಯ್ಸ್ ನೋಟ್ ಅವಧಿ ಹೆಚ್ಚಿಸಲಿದೆ ವಾಟ್ಸ್ಆ್ಯಪ್; ವಿಸ್ತರಣೆ ಅವಧಿ ಎಷ್ಟು ಗೊತ್ತೇ?

Mango For Diabetes
ಆರೋಗ್ಯ18 mins ago

Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

T20 World Cup 2024
ಕ್ರೀಡೆ22 mins ago

T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರು?

Love Case
ವಿಜಯಪುರ32 mins ago

Love Case : ಪ್ರೀತಿಸಿದವಳೇ ಬೇಕೆಂದ ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ರಾ ಯುವತಿ ಕುಟುಂಬಸ್ಥರು!

Bengaluru Traffic
ಬೆಂಗಳೂರು34 mins ago

Bengaluru Traffic: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಹೊಸ ತಂತ್ರಜ್ಞಾನ; ಸಂಚಾರ ಇಲಾಖೆಯ ಪ್ಲಾನ್

car care tips
ಆಟೋಮೊಬೈಲ್52 mins ago

Car Care Tips : ಕಾಸು ಉಳಿಸಿ ಎಂಜಿನ್ ಬೆಳಗಿಸಿ, ಕಾರಿನ ಎಂಜಿನ್ ನೀವೇ ​ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್​​​

Viral Video
ವೈರಲ್ ನ್ಯೂಸ್1 hour ago

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case
ಕರ್ನಾಟಕ1 hour ago

Prajwal Revanna Case: ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

assault case
ದಕ್ಷಿಣ ಕನ್ನಡ1 hour ago

Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ

T20 World Cup 2024
ಕ್ರೀಡೆ2 hours ago

T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

tumkur murder
ತುಮಕೂರು6 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ24 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

ಟ್ರೆಂಡಿಂಗ್‌