prerane morning spiritual thoughts in kannada about moha or InfatuationPrerane : ಮೋಹ ಮುಕ್ತರಾಗುವುದು ಹೇಗೆ? ಇರುವ ದಾರಿಗಳಾದರೂ ಯಾವುವು? Vistara News

ಧಾರ್ಮಿಕ

Prerane : ಮೋಹ ಮುಕ್ತರಾಗುವುದು ಹೇಗೆ? ಇರುವ ದಾರಿಗಳಾದರೂ ಯಾವುವು?

ನೀವು ಪರಿವರ್ತನೆಯಾಗುವುದೊಂದೇ ಮೋಹದಿಂದ ಮುಕ್ತರಾಗುವ ಒಂದು ರೀತಿಯ ಉಪಾಯ. ಮನಸ್ಸಿಗೆ ಬಹಳ ನೋವಾಗುತ್ತದೆ. ಆದರೆ ಈ ನೋವು ಸಹಿಸಲೇಬೇಕು. ಇದೇ ತಪಸ್ಸು ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.

VISTARANEWS.COM


on

moha mukti and spirituality
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
sri kaivalyananda swamiji

ಶ್ರೀ ಕೈವಲ್ಯಾನಂದ ಸರಸ್ವತೀ
ಮನುಷ್ಯ ಹುಟ್ಟಿನಿಂದ ಸಾವಿನ ತನಕಾ ಆನಂದ ಪ್ರಾಪ್ತಿಗಾಗಿ ಶ್ರಮಿಸುತ್ತಾನೆ. ಆದಾಗ್ಯೂ ಆನಂದ ಕಾಣದು. ದುಃಖದಲ್ಲೇ ಜೀವಿಸುತ್ತಾನೆ. ದುಃಖಕ್ಕೆ ಕಾರಣವನ್ನು ಹುಡುಕುತ್ತಾನೆ – ಸಾಕಷ್ಟು ದುಡ್ಡು ಇಲ್ಲದ್ದೇ ಕಾರಣ; ಈ ಹೆಂಡತಿ ಸರಿಯಿಲ್ಲ, ಈ ಮಕ್ಕಳು ಸರಿಯಿಲ್ಲ. ಇನ್ನೂ ಯಶಸ್ವಿ ಪತಿ ಇದ್ದಲ್ಲಿ ಆನಂದ – ಇತ್ಯಾದಿಯಾಗಿ
ಕಾರಣಗಳನ್ನು ಹುಡುಕುತ್ತಾನೆ.

ಪ್ರಪಂಚವನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನದಾಗಿಸಿಕೊಂಡ ಪ್ರಪಂಚವನ್ನು ಅಭಿವೃದ್ಧಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನನ್ನು ಬಿಟ್ಟು ಹೋಗದೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾನೆ. ಏನೆಲ್ಲಾ ಮಾಡಿದರೂ ದುಃಖವು ಅಂತ್ಯವಾಗುವುದಿಲ್ಲ. ಆನಂದ ಪ್ರಾಪ್ತಿ ಎಂಬುದೊಂದು ಬಿಸಿಲು ಕುದುರೆಯಾಗುತ್ತಿದೆ. ಇದು ಎಲ್ಲರ ಅನುಭವವೂ ಆಗಿದೆ.

ಏಕೆ ಹೀಗಾಗುತ್ತಿದೆ? ಎಂದರೆ ʻʻಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರುʼʼ ಎಂಬಂತಿದೆ ಮನುಷ್ಯನ ಪ್ರಯತ್ನ. ದುಃಖಕ್ಕೆ ತಾನೇ ಮೂಲ ಕಾರಣವಾಗಿದ್ದಾನೆ. ಮತ್ತೆಲ್ಲೋ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಾನೆ. ತನ್ನ ಎಲ್ಲ ದುಃಖಕ್ಕೂ ಅವನ ಮೋಹವೇ ಕಾರಣ.

ಮೋಹವೆಂದರೆ ತನ್ನ ಜೀವನ, ಆನಂದ ಮತ್ತೊಬ್ಬರಿಂದ, ಮತ್ತೊಂದು ವಸ್ತುವಿನಿಂದ, ಇತರರಿಲ್ಲದೆ ತಾನಿರಲಾರ, ಇತರ ವಸ್ತುಗಳಿಲ್ಲದಿರೆ ತಾನಿರಲಾರ. ತನ್ನ ಆನಂದ ಇತರರಿಂದ, ಇತರ ವಸ್ತುಗಳಿಂದ ಎಂದು ಮೋಹಗೊಳ್ಳುತ್ತಿದ್ದಾನೆ.

ʻʻರಾಜನ ಪ್ರಾಣ ಗಿಳಿಯಲ್ಲಿದೆ. ರಾಜ ಏನು ಮಾಡಿದರೂ ಸಾಯುವುದಿಲ್ಲ. ರಾಜನನ್ನು ಸಾಯಿಸಲು ಗಿಳಿಯ ಕುತ್ತಿಗೆ ಹಿಸುಕಬೇಕು’’ ಎಂಬ ಕಥೆಯನ್ನು ಕೇಳಿರಬಹುದು. ಈ ಕಥೆ ಬಹಳ ಅರ್ಥ ಗರ್ಭಿತ. ಮಕ್ಕಳಿಗೆ ಹೇಳುವ ಈ ಕಥೆಯಲ್ಲಿ ವೃದ್ಧರೂ ಅರ್ಥ ಮಾಡಿಕೊಳ್ಳುವುದು ಸಾಕಷ್ಟಿದೆ. ರಾಜನ ಪ್ರಾಣಗಿಳಿಯಲ್ಲಿ ಇರುವಂತೆ, ಮನುಷ್ಯರ ಪ್ರಾಣ ಒಬ್ಬೊಬ್ಬರದು, ಒಂದೊಂದರಲ್ಲಿ ಇದೆ. ಕೆಲವರ ಪ್ರಾಣ ಕಬ್ಬಿಣದ ಪೆಟ್ಟಿಗೆಯಲ್ಲಿ. ನೀವು ಅವರ ಕುತ್ತಿಗೆ ಹಿಸುಕಿದರೂ ಸಾಯರು. ಕಬ್ಬಿಣದ ಪೆಟ್ಟಿಗೆ ಯಾರಾದರೂ ಖಾಲಿ ಮಾಡಿದರೆ ಅವರು ಸತ್ತಂತೆ. ಅವನ ಪ್ರಾಣ ಆ ಪೆಟ್ಟಿಗೆಯಲ್ಲಿದೆ. ಮೋಹದ ಅರ್ಥ ನಿಮ್ಮ ಪ್ರಾಣ, ನಿಮ್ಮಲ್ಲಿಲ್ಲ. ನಿಮ್ಮ ಆನಂದ ನಿಮ್ಮಲಿಲ್ಲ. ನಿಮ್ಮ ಪ್ರಾಣ, ನಿಮ್ಮ ಆನಂದ ಮತ್ತೆಲ್ಲೋ ಇದೆ. ಮಗನ ಮೇಲಿರಬಹುದು. ಹಣದ ಮೇಲಿರಬಹುದು. ಹೆಂಡತಿಯ ಮೇಲಿರಬಹುದು. ಪದವಿ ಪ್ರತಿಷ್ಠೆಗಳಲ್ಲಿರಬಹುದು. ಪ್ರಾಣವನ್ನು ಬಾಹ್ಯದಲ್ಲಿರಿಸಿರುವಿರಿ. ಅದು ಎಲ್ಲಿರಬೇಕೋ ಅಲ್ಲಿಲ್ಲ. ಅದು ನಿಮ್ಮಲ್ಲಿ ಸ್ಪಂದಿಸುತ್ತಿಲ್ಲ. ಮತ್ತೆಲ್ಲೋ ಸ್ಪಂದಿಸುತ್ತಿದೆ. ಹೀಗಾದಾಗ ನೀವು ತೊಂದರೆ ಗೀಡಾಗುತ್ತೀರ. ದುಃಖದಲ್ಲಿ ಜೀವಿಸುತ್ತೀರ.

ಮೋಹವೇ ಸಂಸಾರ

ನೀವು ಎಲ್ಲಿ, ಯಾರಲ್ಲಿ, ಯಾವುದರಲ್ಲಿ ಮೋಹಗೊಳ್ಳುವಿರೋ, ಅದಕ್ಕೆ (ಅವರಿಗೆ) ನೀವು ಗುಲಾಮರು. ರಾಜನ ಪ್ರಾಣ ಗಿಳಿಯಲ್ಲಿ. ಗಿಳಿ ಸತ್ತರೆ, ರಾಜ ಸಾಯುತ್ತಾನೆ. ಆದ ಕಾರಣ ಎಲ್ಲವನ್ನೂ ಬಿಟ್ಟು ಗಿಳಿಯನ್ನು ನೋಡಿಕೊಳ್ಳಬೇಕು. ತನ್ನನ್ನು ನೋಡಿಕೊಳ್ಳದಿದ್ದರೂ ಯಾವ ನಷ್ಟವೂ ಇಲ್ಲ. ಗಿಳಿಯನ್ನೂ ನೋಡಿಕೊಳ್ಳಬೇಕು. ನೀವು ನಿಮ್ಮ ಜೀವನವನ್ನು ಎಲ್ಲಿ ಇಟ್ಟಿರುವಿರೋ, ಅದಕ್ಕಾಗಿಯೇ ಹಗಲೂ ರಾತ್ರಿ ಕೆಲಸ ಮಾಡುವಿರಿ. ನಿಮ್ಮ ಜೀವನವೆಲ್ಲ ನಿಮ್ಮ ಮೋಹದ ವಸ್ತುವಿಗಾಗಿಯೇ.

ಮೋಹದ ಆವರಣವೆಂದರೆ ನಿಮ್ಮ ಆತ್ಮ ನಿಮ್ಮಲ್ಲಿ ಇಲ್ಲ. ಮತ್ತೆಲ್ಲಿಯೋ ಇನ್ನೊಂದು ಕಡೆ, ಇನ್ನೊಂದು ವಸ್ತುವಿನಲ್ಲಿ, ಇನ್ನೊಬ್ಬರಲ್ಲಿ ಅದು ಅವಿತುಕೊಂಡಿದೆ. ಅದು ನಿಮ್ಮಲ್ಲಿಲ್ಲ – ಇದೇ ಪ್ರಾಮುಖ್ಯ. ಇನ್ನೊಂದರ ಮೇಲೆ, ಇನ್ನೊಬ್ಬರ ಮೇಲೆ, ನಿಮ್ಮ ಅಸ್ಥಿತ್ವ ಅವಲಂಭಿತವಾಗಿದೆ. ಈ ಅವಲಂಭನೆಯ ಪರಿಣಾಮ ದುಃಖ, ಕ್ಲೇಶ, ತಪ್ಪಿಸಿಕೊಳ್ಳಲಾಗದು. ಮೋಹದ ವಸ್ತು ಎಲ್ಲಿ ಕೈಜಾರಿ ಹೋಗುವುದೋ, ಮೋಹದ ವ್ಯಕ್ತಿ ಎಲ್ಲಿ ಕೈ ಬಿಟ್ಟು ಹೋಗುವನೋ ಎಂಬ ಆತಂಕ, ಆತನಿಲ್ಲದೆ/ಆಕೆಯಿಲ್ಲದೆ ನಾ ಇರಲಾರೆ ಎಂಬ ವ್ಯಸನ ತುಂಬಿರುವುದು. ಯಾವ ವಸ್ತು ನೀವು ರೋಧಿಸುವುದಕ್ಕೆ ಕಾರಣವೋ ಅದೇ ಮೋಹದ ವಸ್ತು.

ಯಾರು ದೂರವಾದಲ್ಲಿ ನಾನು ಒಂಟಿ ಎಂಬ ಭಾವನೆ ಬರುವುದೋ ಅವರೇ ಮೋಹದ ವ್ಯಕ್ತಿ. ಯಾವ ವಸ್ತು ನಾಶವಾದರೆ ನಿಮ್ಮಲ್ಲಿ ಆ ಭಾವ ಮನೆ ಮಾಡಿಕೊಳ್ಳುವುದೋ ಅದೇ ನಿಮ್ಮ ಮೋಹದ ವಸ್ತು. ಯಾವ ವಸ್ತು ಜಾರಿ ಹೋದಲ್ಲಿ, ನೀವು ಧೈನ್ಯತೆಯನ್ನು ಹೊಂದುವಿರೋ ಅದೇ ಮೋಹದ ವಸ್ತು. ಎಲ್ಲ ದುಃಖಕ್ಕೂ ಈ ಮೋಹವೇ ಕಾರಣ. ಮೋಹಕ್ಕೆ ಎದುರಿನಲ್ಲಿರುವ ವಸ್ತು, ವ್ಯಕ್ತಿ, ಪ್ರಸಂಗ ಕಾರಣವಲ್ಲ. ನೀವೇ ಕಾರಣ. ನಿಮ್ಮ ಮೋಹವೇ ಕಾರಣ. ಮೋಹವೇ ಸಮಸ್ಯೆಯ, ದುಃಖ ಜೀವನದ ಅಡಿಗಲ್ಲು. ಈ ಅಡಿಗಲ್ಲನ್ನೂ ಕಿತ್ತೊಗೆಯುವುದಲ್ಲದೆ ಅನ್ಯ ಮಾರ್ಗವಿಲ್ಲ.

ಈಗ ಒಂದು ಪ್ರಶ್ನೆ ಎದ್ದುಕೊಳ್ಳುತ್ತದೆ. ʻʻಮೋಹದಿಂದ ಮುಕ್ತಿ ಹೇಗೆ?’’ ಈ ಪ್ರಶ್ನೆಗೆ ಸಮಾಧಾನವಾಗಿ ಕೆಲವರು ಹೇಳುವುದೇನೆಂದರೆ? ಯಾರಲ್ಲಿ ಮೋಹವಿದೆಯೋ, ಯಾವ ವಸ್ತುವಿನಲ್ಲಿ ಮೋಹವಿದೆಯೋ – ಅವರಿಂದ ದೂರ ಹೋಗಬೇಕು. ಆಗ ಮೋಹ ಕಳಚಿ ಹೋಗುತ್ತದೆ ಎನ್ನುತ್ತಾರೆ. ಇಲ್ಲಿ ಮೋಹದ ವಿಷಯ ಬದಲಾಯಿಸುತ್ತಿದೆ. ಮೋಹವುಳ್ಳ ವ್ಯಕ್ತಿ ಬದಲಾವಣೆಯಾಗಲಿಲ್ಲ. ಮೋಹವು ಹೋಗಲಿಲ್ಲ. ಮನೆಯನ್ನು ದೂರಮಾಡಿದಲ್ಲಿ, ಆಶ್ರಮ ಇಲ್ಲವೇ ಮಠದ ಮೋಹ ಹತ್ತಿಕೊಳ್ಳುವುದು. ಮನೆಗೆ ಅಂಟುಕೊಂಡಂತೆ ಆಶ್ರಮಕ್ಕೆ ಅಂಟುಕೊಳ್ಳಲಾಗುವುದು.

ಹೆಂಡತಿ, ಮಕ್ಕಳನ್ನು ಬಿಟ್ಟು ಹೋದಲ್ಲಿ ಅವರ ಸ್ಥಾನದಲ್ಲಿ ಗುರು, ಶಿಷ್ಯರು ಬರುವರು. ಕುಟುಂಬದ ಸದಸ್ಯರಿಗೆ ಅಂಟುಕೊಂಡ ರೀತಿಯಲ್ಲಿ, ಇವರಿಗೆ ಅಂಟುಕೊಳ್ಳಲಾಗುವುದು. ರಾಜಗೃಹವನ್ನು ಬಿಟ್ಟು, ಗುಡಿಸಲನ್ನು ಸೇರಬಹುದು. ಆದರೆ, ಈಗ ಗುಡಿಸಲಿನ ಮೇಲೆ ಮೋಹ. ಜಿಂಕೆಯ ಚರ್ಮ ಕಟ್ಟಿಕೊಂಡು ತಿರುಗಬಹುದು ಅಥವಾ ನಗ್ನವಾಗಿ ತಿರುಗಬಹುದು. ಜಿಂಕೆಯ ಚರ್ಮದ ಮೇಲೆ ಮೋಹ, ನಗ್ನತ್ವದ ಮೇಲೆ ಮೋಹ. ಮೋಹದಿಂದ ಮುಕ್ತನಾಗಲು ಪಲಾಯನ ಪರಿಹಾರವಾಗಲಾರದು.

spirituality Moha

ಮೋಹದಿಂದ ಮುಕ್ತಿ ಹೇಗೆ?

ಮತ್ತಾವುದು ಪರಿಹಾರ? ಯಾರಲ್ಲಿ, ಯಾವುದರಲ್ಲಿ ಮೋಹವಿದೆಯೋ ಅನ್ವೇಷಣೆ ಮಾಡಿ ನೋಡಿಕೊಳ್ಳಿ. ಯಾರು ದೂರವಾದರೆ ಯಾವ ವಸ್ತುವು ಕಳೆದು ಹೋದರೆ ನೀವು ವಿಕಾರ ಕೈಗೊಳ್ಳುವಿರೋ ಪರೀಕ್ಷಿಸಿಕೊಳ್ಳಿ. ಆ ವ್ಯಕ್ತಿ, ಆ ವಸ್ತು ದೂರವಾಗುವುದಕ್ಕೆ ಮುನ್ನ ನೀವು ಜಾಗೃತರಾಗಿ, ನಿಮ್ಮ ಮೋಹವನ್ನು ಕೊಡವಿಕೊಳ್ಳಿ. ಹೇಗೆ ಸಾಧ್ಯ? ಎನ್ನುವಿರಾ? ಪ್ರಪಂಚದಲ್ಲಿ ಯಾವುದೊಂದು ಸ್ಥಿರವಲ್ಲ. ಸ್ನೇಹವಾಗಲಿ, ಪ್ರೇಮವಾಗಲಿ, ಸಂಬಂಧವಾಗಲಿ ಯಾವುದು ಸ್ಥಿರವಲ್ಲ. ಪ್ರತಿಕ್ಷಣ, ಪ್ರಪಂಚದ ಪ್ರತಿವಸ್ತುವೂ ಪರಿವರ್ತನೆಯಾಗುತ್ತಿದೆ. ಪರಿವರ್ತನೆಯೊಂದೆ ಇಲ್ಲಿ ಸ್ಥಿರವಾದದ್ದು. ʻʻಸಂಯೋಗ ವಿಪ್ರಯೋಗಾಂತಃ’’ – ಒಟ್ಟಿಗೆ ಸೇರುವುದು, ಬಿಟ್ಟು ಹೋಗಲಿಕ್ಕಾಗಿಯೇ – ಇದೊಂದು ಬದಲಾಯಿಸಲಾಗದ ಪ್ರಪಂಚದ ನಿಯಮ.

ಬದಲಾಗಬೇಕಾದದ್ದು ನೀವು ಹಾಗೂ ನಿಮ್ಮ ನಿಲುವು. ನದಿ ಪ್ರವಾಹದಂತೆ ಎಲ್ಲವೂ ಪರಿವರ್ತನೆಯ ಪ್ರವಾಹ. ಒಂದು ಕಡೆ ನಿಲ್ಲದು. ಕಟ್ಟೆಕಟ್ಟಿ ನಿಲ್ಲಿಸುವ ನೀವು ಸಾಕಷ್ಟು ಪ್ರಯತ್ನ ಮಾಡಿರುತ್ತೀರಿ, ಶ್ರಮವಹಿಸಿರುತ್ತೀರಿ. ಬೆವರು ಸುರಿಸಿರುತ್ತೀರಿ. ಆದರೆ ಶ್ರಮ, ಆಯಾಸವೇ ಪ್ರಯೋಜನವಾಗಿದೆ. ಪರಿವರ್ತನೆಯೇ ಸಂಸಾರ. ಈ ಸಂಸಾರದಲ್ಲಿ ಸ್ಥಿರವಾದದ್ದನ್ನು ಹುಡುಕುವುದು, ಬಯಸುವುದು ವ್ಯರ್ಥ.

ನೀವು ಆಸೆ ಪಟ್ಟದ್ದು ಕೈ ಜಾರಿ ಹೋಗುವುದು. ʻʻಪರಿವರ್ತನೆಯೇ ಸಂಸಾರ’’ – ಪರಿವರ್ತನೆ ಮಾಡಲಾಗದ ಸ್ವಭಾವ ಈ ಸಂಸಾರದ್ದು, ಪರಿವರ್ತನೆಯಾಗಬೇಕಾದದ್ದು ʻʻನೀವೇ’ ಎಂಬುದನ್ನು ಅರ್ಥಮಾಡಿಕೊಂಡು, ನಿಮ್ಮ ಮೋಹವನ್ನು ಮುರಿದು ಹಾಕಿ. ಮೋಹವನ್ನು ವರೆಸಿ ಹಾಕಿ. ನೀವು ಪರಿವರ್ತನೆಯಾಗುವುದೊಂದೇ ಮೋಹದಿಂದ ಮುಕ್ತರಾಗುವ ಒಂದು ರೀತಿಯ ಉಪಾಯ. ಮನಸ್ಸಿಗೆ ಬಹಳ ನೋವಾಗುತ್ತದೆ. ಆದರೆ ಈ ನೋವು ಸಹಿಸಲೇಬೇಕು. ಇದೇ ತಪಸ್ಸು. ಇದಕ್ಕಾಗಿ ಸಂಸಾರವನ್ನು ಬಿಟ್ಟು, ದೂರದ ಹಿಮಾಲಯಕ್ಕೆ ಹೋಗಬೇಕಾದದ್ದಿಲ್ಲ. ನೀವು ಎಲ್ಲಿರುವಿರೋ ಅಲ್ಲಿಯೇ ಇರಿ. ಆದರೆ ಹಣ, ಹೆಂಡತಿ (ಗಂಡ) ಇತ್ಯಾದಿಗಳ ಮೇಲಿನ ನಿಮ್ಮ ಅವಲಂಬನೆ ಬಿಡಿ. ಮೋಹದ ವಸ್ತುವಿನಿಂದ ಮಾನಸಿಕವಾಗಿ ದೂರವಿದ್ದು ಜೀವಿಸಲು ನಿಮ್ಮ ಅಂತರಂಗದಲ್ಲೇ ಪ್ರಯತ್ನಮಾಡಿ. ಆ ಪ್ರಯತ್ನದಲ್ಲಿಯೇ ಮುಂದುವರಿಯುತ್ತಾ, ಕೊನೆಯಲ್ಲಿ ಯಾವ ವಸ್ತು ಯಾವ ವ್ಯಕ್ತಿಯೂ ಇಲ್ಲದಿದ್ದರೂ ನಿಮ್ಮಲ್ಲಿ ಯಾವ ಅಂಜಿಕೆ, ನಡುಕ ಇಲ್ಲದಿರಲಿ.

ಅಂತಹ ಒಂದು ಸ್ಥಿತಿಯನ್ನು ಪಡೆಯಿರಿ. ಆಗ ನೀವು ಮೋಹವನ್ನು ಜಯಸಿದಂತೆ. ಇದು ಅಸಾಧ್ಯವಲ್ಲ. ಸಾಧ್ಯ. ಒಬ್ಬರಿಗೆ ಸಾಧ್ಯವಾಗಿದ್ದಲ್ಲಿ, ಎಲ್ಲರಿಗೂ ಸಾಧ್ಯ. ಇದು ಸಾಧ್ಯವಾದ ಆ ಶುಭ ಘಳಿಗೆಯಲ್ಲಿಯೇ ಆತ್ಮ ಜ್ಞಾನ – ಸಹಜ ವಿದ್ಯಾ – ಪ್ರಾಪ್ತಿಯಾಗುವುದು.

ಎಲ್ಲಿಗೆ ಹೋದರೂ ʻಇತರೆ’ ಎಂಬುದು ಇದ್ದೇ ಇದೆ. ‘ಇತರೆ’ ಎಂಬುದು ಸರ್ವತ್ರ ಇದೆ. ಈ ಪ್ರಪಂಚದಲ್ಲಿ ನಿನಗಿಂತಲೂ ಭಿನ್ನವಾದದ್ದರಿಂದ ಓಡಿಹೋಗಲು ಸಾಧ್ಯವಿಲ್ಲ. ಏಕೆಂದರೆ ಪ್ರಪಂಚವೇ ಭಿನ್ನವಾದದ್ದು ಮತ್ತು ಎಲ್ಲಿ ಹೋದರೂ ಪ್ರಪಂಚವಿದೆ. ಪ್ರಪಂಚದಿಂದ ಆಚೆಗೆ ಹೋಗಲಾಗದು. ಎಲ್ಲಿ ಹೋದರು ಭಿನ್ನವಾದ ವಸ್ತು ಅಲ್ಲಿ ಇರುವುದು. ಆದ್ದರಿಂದ ಇತರ ವಸ್ತುಗಳಿಂದ, ಬೇರೆಯವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇತರ ವಸ್ತುಗಳಿಂದ, ಇತರ ವ್ಯಕ್ತಿಗಳಿಂದ ಓಡಿ ಹೋಗಲಾಗದು. ಎಲ್ಲಿ ಹೋದರೂ ಪ್ರಪಂಚವಿದೆ. ಇದೇ ಸತ್ಯದ ಇನ್ನೊಂದು ಮುಖವೇನೆಂದರೆ, ಅಹಂಕಾರ ರೂಪದಲ್ಲಿ ನೀವಿರುವವರೆಗೂ, ನಿಮಗಿಂತಲೂ ಬೇರೆಯಾದ ವಸ್ತುಗಳು ವ್ಯಕ್ತಿಗಳು ತಪ್ಪದೇ ಇರುತ್ತಾರೆ. ಕಣ್ಣು ಮುಚ್ಚಿಕೊಂಡರೂ, ಪ್ರಪಂಚದ ದೃಶ್ಯಗಳು ಅದೃಶ್ಯವಾದರೂ ʻʻಇತರೆ’’ ಎಂಬುದು ಅದೃಶ್ಯವಾಗದು. ಮುಚ್ಚಿರುವ ಕಣ್ಣುಗಳ ಹಿಂಭಾಗದಲ್ಲಿ ಇರುವುದು. ನಿಮ್ಮ ಆಸೆಗಳಲ್ಲಿ, ಆತುರತೆಯ ಹಂಬಲದಲ್ಲಿ ನಿಮ್ಮ ಕನಸಿನಲ್ಲಿ, ನಿಮ್ಮ ಹಗಲುಗನಸಿನಲ್ಲಿ ʻಇತರೆ’ ಎಂಬುದು ಇರುತ್ತದೆ. ಅಹಂಕಾರವಿರುವವರೆಗೂ ಬೇರೆಯವರನ್ನು, ಬೇರೆ ವಸ್ತುಗಳನ್ನು ತಪ್ಪಿಸಿಕೊಳ್ಳಲಾಗದು.

ಎಲ್ಲಿ ಹೋದರೂ ಪ್ರಪಂಚವಿದೆ, ಅಹಂಕಾರವಿದೆ ಅಥವಾ ಎಲ್ಲಿ ಹೋದರೂ ಅಹಂಕಾರವಿದೆ. ಅಹಂಕಾರದ ಮುಖಾಂತರ ನಾನು ನೋಡಿದ್ದೇ ಪ್ರಪಂಚ. ಅಹಂಕಾರವಿದೆ, ಪ್ರಪಂಚವಿದೆ. ಇವೆರಡರೂ ಇರುವಲ್ಲಿ ಸಂಬಂಧವಿದೆ. ಸಂಬಂಧವಿದ್ದಲ್ಲಿ ಮೋಹವಿದೆ. ಆದ ಕಾರಣ ಮೋಹದಿಂದ ತಪ್ಪಿಸಿಕೊಳ್ಳಲಾಗದು. ತಪ್ಪಿಸಿಕೊಳ್ಳಲು ಎಲ್ಲಿ ಪ್ರಪಂಚವಿಲ್ಲವೋ, ಎಲ್ಲಿ ಅಹಂಕಾರವಿಲ್ಲವೋ, ಎಲ್ಲಿ ಸಂಬಂಧಕ್ಕೆ ಅವಕಾಶವೇ ಇಲ್ಲವೋ, ಅಲ್ಲಿಗೆ ಹೋಗಿ ಸೇರಿಕೊಳ್ಳಬೇಕು.

ಅಂತಹ ಸ್ಥಳವು ಯಾವುದೆಂದರೆ ನಮ್ಮುಗಳ ಅಸ್ಥಿತ್ವವೇ, ನಮ್ಮ ಅಸ್ಥಿತ್ವದ ಅಂತರ್ ಕೇಂದ್ರವೇ. ಆದಕಾರಣ ನಮ್ಮ ಅಸ್ಥಿತ್ವದ ಕೇಂದ್ರದ ಕಡೆ ಯಾತ್ರೆ ಮಾಡಬೇಕು. ಅತ್ಯಂತ ಆಳದಲ್ಲಿರುವ ನಮ್ಮ ಅಸ್ಥಿತ್ವದ ಅಂತರ್ ಭಾಗವನ್ನು ಪ್ರವೇಶಿಸಬೇಕು. ಏಕಾಂತವಾದ, ನರ‍್ಮಾನುಷ್ಯವಾದ, ನಿರ್ವಸ್ತುಕವಾದ ಆ ಮಂದಿರಕ್ಕೆ ಪ್ರವೇಶಿಸಬೇಕು. ಅಲ್ಲಿ ಯಾರು ಇರುವುದಿಲ್ಲ. ಯಾವ ವಸ್ತುವೂ ಇರುವುದಿಲ್ಲ. ನಾವು ಸಹ – ಅಂದರೆ ಅಹಂಕಾರವೂ ಇರುವುದಿಲ್ಲ. ಆದಕಾರಣ ಅಲ್ಲಿ ಸಂಬಂಧವಿಲ್ಲ. ಮೋಹವಿಲ್ಲ. ಅದು ಸಂಪೂರ್ಣವಾದ ಮೌನ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಅಹಂಕಾರವು ಎಲ್ಲಿ ಇಲ್ಲವಾಗುವುದೋ ಅದೇ ನಮ್ಮ ಸ್ವರೂಪ. ಅಹಂಕಾರಕ್ಕೂ ಸ್ವರೂಪಕ್ಕೂ ಯಾವ ಸಂಬಂಧವೂ ಇಲ್ಲ. ಅಹಂಕಾರ ಇರುವಾಗಲೂ, ಅಹಂಕಾರವು ಇಲ್ಲದಿರುವಾಗಲೂ ಯಾವುದಿರುವುದೋ ಅದೇ ನಮ್ಮ ಸ್ವರೂಪ. ಒಮ್ಮೆ ನಿದ್ರಾನುಭವವನ್ನು ನೋಡಿಕೊಳ್ಳಿ. ನಿದ್ದೆಯ ಬಗ್ಗೆ ಜಾಗ್ರತ್ ಅವಸ್ಥೆಯ ಬುದ್ಧಿ ಹೇಳುವುದನ್ನು ಕೇಳಬೇಡಿ. ಯಾವರೀತಿ ಅನುಭವಿಸುತ್ತೀರೋ ಆ ರೀತಿ ನೋಡಿಕೊಳ್ಳಿ. ನೋಡಿಕೊಂಡಾಗ, ಪ್ರಪಂಚವಿಲ್ಲ, ಅಹಂಕಾರವಿಲ್ಲ, ಸಂಬಂಧವಿಲ್ಲ, ಮೋಹವಿಲ್ಲ, ಆದರೂ ನೀವಿದ್ದೀರ, ನೀವಿದ್ದೀರ ಎಂದಾಗ ಈ ವ್ಯಕ್ತಿತ್ವದ ಛಾಯೆ ಕಾಣುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದಲ್ಲಿ ಪ್ರಪಂಚವಿಲ್ಲದೆ, ಅಹಂಕಾರವಿಲ್ಲದೆ, ಸಂಬಂಧಕ್ಕೆ ಅವಕಾಶವಿಲ್ಲದೆ, ಮೋಹವಿಲ್ಲದೆ, ಯಾವುದೋ ಒಂದು ಉಳಿದಿದೆ. ಅದೇ ನಮ್ಮುಗಳ ಅಸ್ಥಿತ್ವ. ಎಚ್ಚರ. ಕನಸುಗಳಲ್ಲಿ ಅಹಂಕಾರ ವ್ಯವಹಾರ ನಡೆಯುತ್ತಿರುವಾಗಲೂ ನೀವು ಅದೇ ಸ್ವರೂಪ. ಅಹಂಕಾರ, ಅಹಂಕಾರದ ವ್ಯವಹಾರ ನಿಮಗೆ ಅಂಟಿಲ್ಲ. ಮೋಹ ಮುಕ್ತರು. ಜಾಗ್ರತ್ತು, ಕನಸು, ನಿದ್ದೆಗಳಲ್ಲೂ ನೀವು ಮೋಹ ಮುಕ್ತರು. ನೀವೇ ಮೋಹ ಮುಕ್ತ ಮಂದಿರ, ಮೋಹ ಮುಕ್ತ ದೇವರು.

ಸ್ವರೂಪತಃ ನಿಮಗೆ ಯಾವುದೂ ಅಂಟಿಲ್ಲ. ಯಾರೂ ಅಂಟಿಲ್ಲ. ಆದಕಾರಣ ನೀವು ನಿತ್ಯ ಮುಕ್ತರು. ಈ ವಸ್ತುಸ್ಥಿತಿಯನ್ನು ಗುರ್ತಿಸದೆ, ಜೀವನ ಎಷ್ಟು ವರ್ಷ ಮಾಡಿದರೇನು! – ವ್ಯರ್ಥ. ಗುರ್ತಿಸಲು ಇರುವ ಏಕೈಕ ಮಾರ್ಗ, ಗುರುಮುಖೇನ ಉಪನಿಷತ್ ತತ್ವವನು ಗುರ್ತಿಸಬೇಕು.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನೂ ಓದಿ : Prerane : ಶ್ರೇಯಸ್ಸೆಂದರೆ ಎಲ್ಲರಿಗೂ ಗೊತ್ತು; ಪ್ರೇಯಸ್‌ ಎಂದರೆ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಅದ್ಭುತ ಕಲಾಕೃತಿಗಳು!

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

VISTARANEWS.COM


on

Shri Ram Janmabhoomi Mandir carvings are wonderful
Koo

ಅಯೋಧ್ಯೆ: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರ (Ayodhya Ram Mandir) ಬಹುತೇಕ ಸಿದ್ಧವಾಗಿದೆ. ಜನವರಿ 22ರಂದು ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ನಡುವೆ ರಾಮ ಮಂದಿರ ಗರ್ಭಗಡಿ (Sanctum Sanctorum) ಹಾಗೂ ದೇವಾಲಯ ಒಳಗಿರುವ ಅದ್ಭುತ, ಮನಮೋಹಕ ಕಲಾಕೃತಿಗಳ (carvings) ಫೋಟೋಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಿಲೀಸ್ ಮಾಡಿದೆ.

ಅದ್ಭುತ ಕೆತ್ತನೆಗಳನ್ನು ಹೊಂದಿರುವ ಮಂದಿರ ಒಳಾಂಗಣ ಫೋಟೋಗಳು ಭಾರೀ ವೈರಲ್ ಆಗಿವೆ. ಸುಂದರ ಕಲಾಕೃತಿಗಳನ್ನು ಮಂದಿರದೊಳಗೆ ಕಾಣಬಹುದಾಗಿದೆ. ನಿನ್ನೆಯಷ್ಟೇ ರಾಮ ಮಂದಿರದ ಗರ್ಭಗಡಿಯು ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಮಂತ್ರಣ ನೀಡಲಾಗಿದೆ. ಸುಮಾರು 10 ಸಾವಿರದಿಂದ 15 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮನಮೋಹಕ ರಾಮ ಮಂದಿರ ಗರ್ಭ ಗುಡಿ

ಶ್ರೀ ರಾಮ (Lord Ram Idol) ದೇವರ ಮೂರ್ತಿ ಪ್ರತಿಷ್ಠಾಪನೆಯಾಗಲಿರುವ ಗರ್ಭ ಗುಡಿಯ (Sanctum Sanctorum) ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ರಾಮನನ್ನು ಪ್ರತಿಷ್ಠಾಪಿಸುವ ಪೀಠ ಮತ್ತು ಗರ್ಭಗುಡಿಯನ್ನು ಫೋಟೋದಲ್ಲಿಕಾಣಬಹುದು.

ಭಗವಾನ್ ಶ್ರೀ ರಾಮ ಅವರ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್-ಫಿಟ್ಟಿಂಗ್ ಕೆಲಸವೂ ಪೂರ್ಣಗೊಂಡಿದೆ. ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ದೇವಾಲಯದ ನಿರ್ಮಾಣವು ಪ್ರಗತಿಯಲ್ಲಿದ್ದು, ಇದು ದೇವಾಲಯದೊಳಗಿನ ಸಂಕೀರ್ಣ ಕೆತ್ತನೆಗಳ ಚಿತ್ರಗಳನ್ನು ಕಾಣಬಹುದು. ಇದಕ್ಕೂ ಮೊದಲು ಚಂಪತ್ ರಾಯ್ ಅವರು ಶ್ರೀ ರಾಮ ದೇವರ ಮೂರ್ತಿ ಕೆತ್ತನೆ ಶೇ.90ರಷ್ಟು ಮುಗಿದಿದೆ ಎಂದು ಹೇಳಿದ್ದರು.

ರಾಮ ಜನ್ಮಭೂಮಿ ದೇವಸ್ಥಾನದಲ್ಲಿ, ಅಯೋಧ್ಯೆಯ ಮೂರು ಸ್ಥಳಗಳಲ್ಲಿ ಭಗವಾನ್ ರಾಮನ ಐದು ವರ್ಷದ ಮಗುವಿನ ರೂಪವನ್ನು ಚಿತ್ರಿಸುವ 4’3″ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಮೂವರು ಕುಶಲಕರ್ಮಿಗಳು ಮೂರು ವಿಭಿನ್ನ ಶಿಲೆಗಳಯಲ್ಲಿ ವಿಗ್ರಹವನ್ನು ನಿರ್ಮಿಸುತ್ತಿದ್ದಾರೆ. ಈ ವಿಗ್ರಹಗಳು 90 ಪ್ರತಿಶತದಷ್ಟು ಸಿದ್ಧವಾಗಿವೆ ಮತ್ತು ಅಂತಿಮ ಕಾರ್ಯವು ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಅವರು ಈ ಹಿಂದೆ ಹೇಳಿದ್ದರು.

ಪ್ರಾಣ-ಪ್ರತಿಷ್ಠಾ ಸಮಾರಂಭದ ವೈದಿಕ ವಿಧಿವಿಧಾನಗಳು ಜನವರಿ 16 ರಂದು ಮುಖ್ಯ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಲಕ್ಷ್ಮೀಕಾಂತ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 10ರಿಂದ 15 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ: ಮನಮೋಹಕ ರಾಮ ಮಂದಿರ ಗರ್ಭ ಗುಡಿ! ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರು

Continue Reading

ದೇಶ

Kashi Vishwanath Temple : ಭಕ್ತರ ಭೇಟಿಯಲ್ಲಿ ದಾಖಲೆ ನಿರ್ಮಿಸಿದ ಕಾಶಿ ವಿಶ್ವನಾಥ ಮಂದಿರ

Kashi Vishwanath Temple :2021ರ ಡಿಸೆಂಬರ್​ 13ರಂದು ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ದರು.

VISTARANEWS.COM


on

Kashi Temple
Koo

ವಾರಾಣಸಿ: ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾ ಸ್ಥಳವಾಗಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯಕ್ಕೆ (Kashi Vishwanath Temple) ಎರಡು ವರ್ಷಗಳಲ್ಲಿ ದಾಖಲೆಯ 12.92 ಕೋಟಿ ಭಕ್ತರು ಭೇಟಿ ನೀಡಿದ್ದಾರೆ. ಈ ಮೂಲಕ ಮಂದಿರವು ಭಕ್ತರ ಭೇಟಿಯಲ್ಲಿ ಹೊಸ ದಾಖಲೆ ಬರೆದಿದೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುವ ಮೂಲಕ ಭಾರತದ ಪ್ರಮುಖ ಯಾತ್ರಾ ಸ್ಥಳ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್​ನಲ್ಲಿ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಅನ್ನು ಉದ್ಘಾಟಿಸಿದ್ದರು. ಅಂದಿನಿಂದ ವಿಶ್ವನಾಥನ ಭೇಟಿಗೆ ಬರುತ್ತಿರುವ ಭಕ್ತರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ದೇವಾಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಗುಲದ ಆವರಣ ದೊಡ್ಡದಾಗಿರುವುದು ಹಾಗೂ ಭಕ್ತರಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಯಾತ್ರೆಯನ್ನು ಹೆಚ್ಚು ಸರಳ ಹಾಗೂ ಪಾವನಗೊಳಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೋದಿ ಕಾರಿಡಾರ್​ ಉದ್ಘಾಟಿಸಿದ ಬಳಿಕ ಹೆಚ್ಚಿನ ಭಕ್ತರು

ಶ್ರೀ ಕಾಶಿ ವಿಶ್ವನಾಥ ಧಾಮವನ್ನು 2021 ರ ಡಿಸೆಂಬರ್ 13 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಅಂದಿನಿಂದ 2023 ರ ಡಿಸೆಂಬರ್ 6 ರವರೆಗೆ, 12 ಕೋಟಿ 92 ಲಕ್ಷ 24 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಅವರ ದರ್ಶನ ಪಡೆದಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ಸಂಖ್ಯೆ 13 ಕೋಟಿ ದಾಟುವ ನಿರೀಕ್ಷೆಯಿದೆ ಎಂದು ದೇವಾಲಯದ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್ ವರ್ಮಾ ಹೇಳಿದ್ದಾರೆ.

ಶ್ರಾವಣ ತಿಂಗಳೊಂದರಲ್ಲೇ 1.6 ಕೋಟಿಗೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಜುಲೈನಲ್ಲಿ 72 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರೆ, ಆಗಸ್ಟ್​​ನಲ್ಲಿ ಈ ಸಂಖ್ಯೆ 95.6 ಲಕ್ಷದಷ್ಟಿತ್ತು. ಜನವರಿ 2023ರಿಂದ ಡಿಸೆಂಬರ್ ವರೆಗೆ ದೇವಾಲಯದಲ್ಲಿ 5.3 ಕೋಟಿ ಜನರು ಭೇಟಿ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ, ಕಾಶಿ ವಿಶ್ವನಾಥ ಟ್ರಸ್ಟ್ ಪ್ರವಾಸಿಗರು ಮತ್ತು ಭಕ್ತರಿಗೆ ನೀಡುವ ಸೌಲಭ್ಯಗಳನ್ನು ಹೆಚ್ಚಿಸಿದೆ. ಅಂತಹ ಬದಲಾವಣೆಗಳು ಭಕ್ತರ ಭೇಟಿಯನ್ನು ಸರಳಗೊಳಿಸುತ್ತಿದೆ ಎಂದು ಸಿಇಒ ಮಾಹಿತಿ ನೀಡಿದ್ದಾರೆ.

ವ್ಯಾಪ್ತಿ ವಿಸ್ತರಣೆಯಿಂದ ಅನುಕೂಲ

ಈ ಮೊದಲು ದೇವಾಲಯದ ವಿಸ್ತೀರ್ಣ ಕೇವಲ 3000 ಚದರ ಅಡಿಗಳಷ್ಟಿತ್ತು. 2021 ರಲ್ಲಿ, ಇದನ್ನು ಸುಮಾರು 5 ಲಕ್ಷ ಚದರ ಅಡಿಗೆ ವಿಸ್ತರಿಸಲಾಯಿತು. ಇದು ದೇವಾಲಯದ ಆವರಣದಲ್ಲಿ ಏಕಕಾಲಕ್ಕೆ 50,000 ರಿಂದ 75,000 ಭಕ್ತರಿಗೆ ಪ್ರವೇಶ ಪಡೆಯಲು ಅವಕಾಶ ನೀಡಿದೆ. ಬೇಸಿಗೆಯಲ್ಲಿ ಸುಡುವ ಬಿಸಿಲು, ಚಳಿ ಮತ್ತು ಮಳೆಯಿಂದ ರಕ್ಷಿಸಲು ಜರ್ಮನ್ ಹ್ಯಾಂಗರ್ ಗಳು, ಚಾಪೆಗಳು, ಕೂಲರ್ ಗಳು, ಕುಡಿಯುವ ನೀರು, ಗಾಲಿಕುರ್ಚಿಗಳು, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಇತರ ವ್ಯವಸ್ಥೆಗಳಲ್ಲಿ ಭಕ್ತರಿಗೆ ವ್ಯವಸ್ಥೆ ಮಾಡಲಾದ ಇತರ ಸೌಲಭ್ಯಗಳಲ್ಲಿ ಸೇರಿವೆ.

Continue Reading

ಅಂಕಣ

ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

ಮಾನವ ಜನ್ಮವು ಪರಮಾತ್ಮನ ಕೃಪೆ. ಪರಮಾತ್ಮನ ಕೃಪೆಯಿಂದ ದೊರಕಿರುವ ಈ ಮಾನವ ಜನ್ಮವನ್ನು ವ್ಯರ್ಥವಾಗಿ ಕಳೆದುಕೊಳ್ಳಬಾರದೆಂಬ ಕಳಕಳಿಯಿಂದ ಗುರುವರ್ಯರಾದ ತಾತಯ್ಯನವರು ಈ ಭಕ್ತಿತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ.

VISTARANEWS.COM


on

kaivara tatayya
Koo
jayaram-column

ಕೈವಾರದ ತಾತಯ್ಯನವರು ಮಾನವ ಜನ್ಮದ ಶ್ರೇಷ್ಠತೆಯನ್ನು ಹಲವಾರು ಬೋಧನೆಗಳಲ್ಲಿ ಎತ್ತಿಹಿಡಿದಿದ್ದಾರೆ. ನರಜನ್ಮದಲ್ಲಿ ಮಾತ್ರ ಮೋಕ್ಷವನ್ನು ಕಂಡುಕೊಳ್ಳಲು ಸಾಧ್ಯವಿದೆ. ನಿನ್ನನ್ನು ನೀನು ತಿಳಿದು ಆತ್ಮಜ್ಞಾನಿಯಾಗು. ಮತಿಹೀನನಾಗಿ ವರ್ತಿಸುತ್ತಾ, ಇಂದ್ರಿಯಗಳನ್ನು ನಿಗ್ರಹಿಸದಿದ್ದರೆ ಅಧ್ಯಾತ್ಮವಿದ್ಯೆ ಅಂಟುವುದಿಲ್ಲ. ಹೀಗೆ ಹಲವಾರು ಮಹತ್ವದ ವಿಷಯಗಳನ್ನು ತಾತಯ್ಯನವರು ಸರಳವಾದ ಮಾತುಗಳಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬೋಧಿಸಿದ್ದಾರೆ.

ಮಾನವ ಜನ್ಮವು ಪರಮಾತ್ಮನ ಕೃಪೆ. ಪರಮಾತ್ಮನ ಕೃಪೆಯಿಂದ ದೊರಕಿರುವ ಈ ಮಾನವ ಜನ್ಮವನ್ನು ವ್ಯರ್ಥವಾಗಿ ಕಳೆದುಕೊಳ್ಳಬಾರದೆಂಬ ಕಳಕಳಿಯಿಂದ ಗುರುವರ್ಯರಾದ ತಾತಯ್ಯನವರು ಈ ಭಕ್ತಿತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ. ಪ್ರತಿಯೊಂದು ಜೀವಿಗೂ ಮರಣವಿದೆ. ಇದು ಸತ್ಯ. ಮರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮರಣದ ನಂತರ ಹುಟ್ಟುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿದೆ. ಈ ಚಿಂತನೆಯನ್ನು ತಾತಯ್ಯನವರು ಮುಂದಿಡುತ್ತಿದ್ದಾರೆ.

ಯೆಂತ ಕಾಲಮೈನ ಯೆರುಕ ಲೇಕನು ಜೀವಿ
ಚಚ್ಚಿ ಪುಟ್ಟುಚುನುಂಡು ಸಹಜಮಿದಿಯು

ತಾತಯ್ಯನವರು ಈ ಪದ್ಯದಲ್ಲಿ ಮಾನವರಿಗೆ ನೇರವಾಗಿ ತತ್ವಬೋಧೆಯನ್ನು ಮಾಡಿದ್ದಾರೆ. ಎಷ್ಟೇ ಕಾಲ ಕಳೆದರೂ ಅಜ್ಞಾನದಿಂದ ಕೂಡಿರುವ ಜೀವಿಯು ಮತ್ತೆ ಮತ್ತೆ ಸತ್ತು ಹುಟ್ಟುತ್ತಿರುತ್ತಾನೆ. ಇದು ಸಹಜವಾದ ಪ್ರಕ್ರಿಯೆ. ಕಾರಣವೆಂದರೇ ಅಜ್ಞಾನ. ಯಾರಿಗಾದರೇ ಕೇವಲ ಪ್ರಾಪಂಚಿಕವಾದ ವ್ಯವಹಾರದಲ್ಲಿ ಮಾತ್ರ ಆಸಕ್ತಿ ಇರುತ್ತದೋ ಅವರು ಅಜ್ಞಾನಿಗಳು. ಮಾನವಜನ್ಮದಲ್ಲಿ ಹುಟ್ಟಿದ ಮೇಲೆ ಪರಲೋಕದ ಚಿಂತನೆಯನ್ನು ಮಾಡುತ್ತಿರಬೇಕು. ಅಜ್ಞಾನಿಯಾಗದೇ ಆತ್ಮಜ್ಞಾನಿಯಾಗಿ ಈ ಸಹಜಸ್ಥಿತಿಯಿಂದ ತಪ್ಪಿಸಿಕೊಂಡು ಪಾರಾಗು ಎನ್ನುತ್ತಿದ್ದಾರೆ ತಾತಯ್ಯನವರು.

ಜನನ ಮರಣಮುಲೆನ್ನೋ..

ಮಾನವನಾಗಿ ಹುಟ್ಟುವುದಕ್ಕೆ ಮೊದಲು ಏನಾಗಿದ್ದೇವೋ? ಯಾರಿಗೂ ಗೊತ್ತಿಲ್ಲ. ಮಾನವ ಜನ್ಮದಲ್ಲಿರುವ ಆತ್ಮ ಹಿಂದೆ ಯಾವ ಯಾವ ಜೀವರಾಶಿಗಳಲ್ಲಿ ಸೇರಿಕೊಂಡು ಜೀವಿಸಿತ್ತೋ? ಯಾರಿಗೂ ಗೊತ್ತಿಲ್ಲ. ಇದರ ಮನವರಿಕೆಯನ್ನು ತಾತಯ್ಯನವರು ಮಾಡಿಕೊಡುತ್ತಿದ್ದಾರೆ.

ಜನನಮರಣಮುಲೆನ್ನೊ ಜಾತುಲೆನ್ನಾಯೆನೋ
ತಲಿದಂಡ್ರುಲೆಂದರೋ ತನುವುಲೆನ್ನೋ
ಇಪ್ಪುಡು ಧರಲೋನ ಯಿಟುವಂಟಿ ಮಾನವ
ದೇಹಂಬು ನಿರ್ಮಿಂಚೆ ಮಾಧವುಂಡು||

ಈವರೆಗೆ ಅದೆಷ್ಟು ಸಲ ಜನನ ಮರಣಗಳಾದವೋ, ಅದೆಷ್ಟು ಜಾತಿಗಳಾದವೋ, ಅದೆಷ್ಟು ಮಂದಿ ತಾಯಿತಂದೆಗಳನ್ನು ಪಡೆದದ್ದಾಯಿತೋ, ಅದಕ್ಕೆ ಲೆಕ್ಕವೇ ಇಲ್ಲ. ಎಷ್ಟೆಷ್ಟು ಶರೀರಗಳನ್ನು ಪಡೆದು ಮಣ್ಣುಗೂಡಿಸಿದ್ದಾಯಿತೋ, ಲೆಕ್ಕವಿಲ್ಲ. ಹಿಂದಿನ ಜನ್ಮಗಳು ಏನೇ ಇರಲಿ, ಕಳೆದು ಹೋಯಿತು. ಚಿಂತೆ ಮಾಡಬೇಡ. ಈಗಲಾದರೂ, ಜ್ಞಾನ ಸಂಪಾದನೆಗೆ ಅವಕಾಶವಿರುವ ವಿವೇಕದಿಂದ ಕೂಡಿರುವ ಮಾನವಜನ್ಮ ಬಂದಿದೆ. ಲೋಕೇಶ್ವರನಾದ ಮಾಧವನು ಇಂತಹ ಶ್ರೇಷ್ಠವಾದ ಮಾನವದೇಹವನ್ನು ಕೊಟ್ಟಿದ್ದಾನೆ, ಹಾಳುಮಾಡಿಕೊಳ್ಳಬೇಡ ಎಂದು ಎಚ್ಚರಿಸುತ್ತಿದ್ದಾರೆ ತಾತಯ್ಯನವರು.

ಭೂಮಿಯಲ್ಲಿ ಇಂತಹ ಮಾನವದೇಹವನ್ನು ಪಡೆದ ಮೇಲೆ ಮಾಡಬೇಕಾದ ಕರ್ತವ್ಯವೇನು? ಅದರ ಫಲಶ್ರುತಿಯೇನು? ಪದ್ಯದ ಕೊನೆಯಲ್ಲಿ ಈ ರೀತಿಯಾಗಿ ಬೋಧಿಸುತ್ತಿದ್ದಾರೆ ತಾತಯ್ಯನವರು.
ಹಿಂದೆ ಮಾಡಿದ ತಪ್ಪನ್ನು ಮಾಡದಿರು..

ನಮ್ಮ ಕಣ್ಣ ಮುಂದೆಯೇ ಮಾನವ ದೇಹವಿಲ್ಲದ ಅದೆಷ್ಟೋ ಜಂತುಗಳಿವೆ. ಆದರೆ ಈ ಜಂತುಗಳಿಗೆ ಮಾನವನಿಗಿರುವಷ್ಟು ಜ್ಞಾನವಿಲ್ಲ, ಅನುಕೂಲಗಳಿಲ್ಲ. ಆ ಜಂತುಗಳು ಪರಮಾತ್ಮನಾದ ಜಗದೀಶ್ವರನ ಸ್ಮರಣೆ ಮಾಡುವುದಿಲ್ಲ. ಮಾನವನಾಗಿ ಹುಟ್ಟಿದ ಮೇಲೆ ನೀನು ಪರಮಾತ್ಮನ ಸ್ಮರಣೆಯನ್ನು ಮಾಡದಿದ್ದರೆ ಏನು ಪ್ರಯೋಜನ? ಮಾನವಜನ್ಮದ ಸಾರ್ಥಕವೇನು? ಆ ಜಂತುವಿಗೂ ಮಾನವರಿಗೂ ಇರುವ ವ್ಯತ್ಯಾಸವೇನು? ತಾತಯ್ಯನವರು ಹೀಗೆ ಬೋಧಿಸಿದ್ದಾರೆ.

ಮುನುಪಟಿ ವಿಧಂಬುನ ಮೂರ್ಖುಡೈ ಪೋವಲದು
ಜಗದೀಶ್ವರುನಿ ಜಪಮು ಚೇಸಿ ನೀವು
ಪಟ್ಟು ವದಲಕ ಪರಮಂದೆ ದೃಷ್ಟಿವುಂಚಿ
ಚಾವು-ಪುಟ್ಟು ಲೇನಿ ಸೌಖ್ಯಸಂಪದಲನುಂಡು||

kaivara tatayya2

ಹಿಂದಿನ ಜನ್ಮಗಳಲ್ಲಿ ಮಾಡಿದದಂತೆ ಈ ಸಲವೂ ಮೂರ್ಖನಾಗಿ ಹೊರಡುವವನಾಗಬೇಡ. ಮಾನವಜನ್ಮವನ್ನು ಎಷ್ಟೋ ಪೂರ್ವಜನ್ಮಗಳ ಪುಣ್ಯದಿಂದ ಪಡೆದಿದ್ದೀಯ. ಈ ಸದಾವಕಾಶವನ್ನು ಕಳೆದುಕೊಳ್ಳಬೇಡ. ಪರಮಾತ್ಮನಾದ ಜಗದೀಶ್ವರನ ಜಪಸ್ಮರಣೆಯನ್ನು ಮಾಡು. ಪಟ್ಟು ಬಿಡದೆ ಪರಮಲಕ್ಷ್ಯವಾಗಿರುವ ಮೋಕ್ಷದಲ್ಲೇ ದೃಷ್ಟಿಯನ್ನಿಟ್ಟು, ಸಾವು-ಹುಟ್ಟುಗಳಿಲ್ಲದ ಸೌಖ್ಯ ಸಂಪತ್ತುಗಳನ್ನು ಅನುಭವಿಸು ಎನ್ನುತ್ತಿದ್ದಾರೆ ತಾತಯ್ಯನವರು.

“ಪಟ್ಟು ವದಲಕ ಮರಮಂದೆ ದೃಷ್ಠಿವುಂಚಿ” ತಾತಯ್ಯನವರು ಮಾನವರಿಗೆ ನೀಡುತ್ತಿರುವ ಎಚ್ಚರಿಕೆ ಇದು. ಪರಮಾತ್ಮನ ಸ್ಮರಣೆ ಮಾಡು, ಇದು ತಾತಯ್ಯನವರು ಬೋಧಿಸುತ್ತಿರುವ ಉಪದೇಶ. ದೃಢ ಸಂಕಲ್ಪದಿಂದ, ಹಿಡಿದ ಪಟ್ಟು ಬಿಡದೆ ಪರಮಾತ್ಮನ ಸ್ಮರಣೆಯನ್ನು ಮಾಡಬೇಕು ಎನ್ನುತ್ತಿದ್ದಾರೆ. ಉದಾಸೀನದ ಸ್ಮರಣೆಯಿಂದ ಪ್ರಯೋಜನವಿಲ್ಲ. ಆದುದರಿಂದ ಜಪಸ್ಮರಣೆಯಲ್ಲಿ ಸಡಿಲವಾಗದೆ ಬಿಗಿಯಾದ, ದೃಢವಾದ ಹಿಡಿತವಿರಬೇಕು.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ನವರಾತ್ರಿ ವಿಶೇಷ: ಅಖಿಲಾಂಡೇಶ್ವರಿಯ ವರ್ಣನೆ

ಪರದಲ್ಲಿ ದೃಷ್ಠಿ ಇರಿಸಬೇಕೆಂದು ಹೇಳಿದ್ದಾರೆ. ಇದು ಬಹಳ ಮುಖ್ಯವಾದುದು. ಲೌಕಿಕ ಭೋಗಗಳನ್ನು ಬಯಸಿ ಮಾಡುವ ಅನೇಕ ಜಪಗಳು ಶಾಶ್ವತವಾದ ಸುಖಗಳನ್ನು ನೀಡುವುದಿಲ್ಲ. ಅಜ್ಞಾನಿ ಜನರು ಧನಕನಕ ಭೋಗಗಳೆಂಬ ಅಲ್ಪಲಾಭಕ್ಕೆ ಮರುಳಾಗಿ ಅದನ್ನೇ ಸುಖವೆಂದು ಭ್ರಮಿಸುತ್ತಾರೆ. ಆದರೆ ಸ್ವಲ್ಪವೇ ಕಾಲದ ನಂತರ ಭೋಗವು ರೋಗವಾಗಿ ಪರಿಣಮಿಸುತ್ತದೆ. ಕೊನೆಗೆ ತಮ್ಮ ತಪ್ಪಿನ ಅರಿವಾಗುತ್ತದೆ. ನೀನು ಹಾಗಾಗಬೇಡ, ಜ್ಞಾನಿಯಾಗಿ ಹುಟ್ಟುಸಾವುಗಳಿಲ್ಲದ ಭಗವಂತನ ಸಾನ್ನಿಧ್ಯವನ್ನು ಸೌಖ್ಯ ಸಂಪದವೆಂದು ಅರಿತುಕೋ. ಲೋಕದ ಇನ್ನಿತರ ಅಲ್ಪವಸ್ತುಗಳಿಗೆ ಆಸೆಪಡದೆ ಮೋಕ್ಷತತ್ವದಲ್ಲಿ ಮನಸ್ಸಿಟ್ಟು ಸ್ಮರಿಸು, ಆಗ ಜಗದೀಶ್ವರನು ನಿನ್ನನ್ನು ತನ್ನ ಲೋಕಕ್ಕೆ ಕರೆದುಕೊಂಡು ತನ್ನ ಬಳಿ ಇರಿಸಿಕೊಳ್ಳುತ್ತಾನೆ. ಇದು ಮೋಕ್ಷಪದವಿ. ಇಲ್ಲಿಗೆ ಹೋದಮೇಲೆ ಪುನ: ಈ ಲೋಕಕ್ಕೆ ಹಿಂತಿರುಗಿ ಬರಬೇಕಾಗಿಲ್ಲ. ಹುಟ್ಟುಸಾವುಗಳ ತಂಟೆ ಇರುವುದಿಲ್ಲ. ಇದೇ ನಿಜವಾದ ಆನಂದ. ಭಗವಂತನ ನಾಮಜಪದ ಸ್ಮರಣೆಯಿಂದ ಈ ಮೋಕ್ಷಸಾಧನೆಯನ್ನು ಮಾಡು, ಹಿಂದಿನ ಜನ್ಮಗಳಲ್ಲಿ ಮೂರ್ಖತನದಿಂದ ಮಾಡಿದ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೋ ಎನ್ನುತ್ತಿದ್ದಾರೆ ತಾತಯ್ಯನವರು.

ಹುಟ್ಟು ಸಾವುಗಳಿಲ್ಲದ ಮೋಕ್ಷ ಪಡೆಯಲು ಈ ಮಾನವದೇಹದಲ್ಲಿಯೇ ಸಾಧನೆ ಮಾಡಬೇಕು. ಈ ಸಾಧನೆಗೆ ಪರಮಾತ್ಮನ ನಿರಂತರ ಸ್ಮರಣೆಯೇ ಉತ್ತಮವಾದ ಸಾಧನ ವಿಧಾನವಾಗಿದೆ. ಮಾನವಜನ್ಮ ಲಭಿಸಿರುವ ಈ ಸಮಯದಲ್ಲೂ ಮೋಕ್ಷ ಸಾಧನೆಗಾಗಿ ಭಗವಂತನ ಸ್ಮರಣೆಮಾಡದೆ, ಇಹಭೋಗಗಳಿಗೆ ಆಸೆಪಟ್ಟರೇ ಯಮಪಾಶಕ್ಕೆ ತುತ್ತಾಗಬೇಕಾಗುತ್ತದೆ. ಭಕ್ತನಾಗು, ಭಜನೆ ಮಾಡು, ಹುಟ್ಟುಸಾವುಗಳಿಲ್ಲದ ಸೌಖ್ಯಸಂಪತ್ತನ್ನು ಅನುಭವಿಸು ಎಂದು ತಾತಯ್ಯನವರು ಮಾನವರನ್ನು ಈ ಬೋಧನೆಯ ಮೂಲಕ ಜಾಗೃತಗೊಳಿಸಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಮೂಢಭಕ್ತಿಯಿಂದ ಶೀಘ್ರಮುಕ್ತಿ

Continue Reading

ದೇಶ

ಮನಮೋಹಕ ರಾಮ ಮಂದಿರ ಗರ್ಭ ಗುಡಿ! ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರು

Ayodhya Ram Mandir: ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

beautiful Ayodhya ram mandir Temple's Sanctum Sanctorum
Koo

ನವದೆಹಲಿ: ಮುಂದಿನ ತಿಂಗಳು ಲೋಕಾರ್ಪಣೆಯಾಗಲಿರುವ ಅಯೋಧ್ಯೆ ರಾಮ ಮಂದಿರ (Ayodhya Ram Mandir) ಬಹುತೇಕ ಸಿದ್ಧವಾಗಿದೆ. ಶ್ರೀ ರಾಮ (Lord Ram Idol) ದೇವರ ಮೂರ್ತಿ ಪ್ರತಿಷ್ಠಾಪನೆಯಾಗಲಿರುವ ಗರ್ಭ ಗುಡಿಯ (Sanctum Sanctorum) ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ರಾಮನನ್ನು ಪ್ರತಿಷ್ಠಾಪಿಸುವ ಪೀಠ ಮತ್ತು ಗರ್ಭಗುಡಿಯನ್ನು ಫೋಟೋದಲ್ಲಿಕಾಣಬಹುದು.

ಭಗವಾನ್ ಶ್ರೀ ರಾಮ ಅವರ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್-ಫಿಟ್ಟಿಂಗ್ ಕೆಲಸವೂ ಪೂರ್ಣಗೊಂಡಿದೆ. ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ದೇವಾಲಯದ ನಿರ್ಮಾಣವು ಪ್ರಗತಿಯಲ್ಲಿದ್ದು, ಇದು ದೇವಾಲಯದೊಳಗಿನ ಸಂಕೀರ್ಣ ಕೆತ್ತನೆಗಳ ಚಿತ್ರಗಳನ್ನು ಕಾಣಬಹುದು. ಇದಕ್ಕೂ ಮೊದಲು ಚಂಪತ್ ರಾಯ್ ಅವರು ಶ್ರೀ ರಾಮ ದೇವರ ಮೂರ್ತಿ ಕೆತ್ತನೆ ಶೇ.90ರಷ್ಟು ಮುಗಿದಿದೆ ಎಂದು ಹೇಳಿದ್ದರು.

ರಾಮ ಜನ್ಮಭೂಮಿ ದೇವಸ್ಥಾನದಲ್ಲಿ, ಅಯೋಧ್ಯೆಯ ಮೂರು ಸ್ಥಳಗಳಲ್ಲಿ ಭಗವಾನ್ ರಾಮನ ಐದು ವರ್ಷದ ಮಗುವಿನ ರೂಪವನ್ನು ಚಿತ್ರಿಸುವ 4’3″ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಮೂವರು ಕುಶಲಕರ್ಮಿಗಳು ಮೂರು ವಿಭಿನ್ನ ಶಿಲೆಗಳಯಲ್ಲಿ ವಿಗ್ರಹವನ್ನು ನಿರ್ಮಿಸುತ್ತಿದ್ದಾರೆ. ಈ ವಿಗ್ರಹಗಳು 90 ಪ್ರತಿಶತದಷ್ಟು ಸಿದ್ಧವಾಗಿವೆ ಮತ್ತು ಅಂತಿಮ ಕಾರ್ಯವು ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಅವರು ಈ ಹಿಂದೆ ಹೇಳಿದ್ದರು.

ವಿಗ್ರಹವನ್ನು ನೆಲ ಮಹಡಿಯಲ್ಲಿರುವ ‘ಗ್ರಹಗೃಹ’ದಲ್ಲಿ ಪ್ರತಿಷ್ಠಾಪಿಸಲಾಗುವುದು. ದೇವಾಲಯದ ನೆಲ ಮಹಡಿ ಬಹುತೇಕ ಸಿದ್ಧವಾಗಿದೆ. ಹಾಗಾಗಿ ‘ಪ್ರಾಣ-ಪ್ರತಿಷ್ಠಾ’ (ಪ್ರತಿಷ್ಠಾಪನಾ ಸಮಾರಂಭ)ಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಚಂಪತ್ ರಾಯ್ ಅವರು ತಿಳಿಸಿದ್ದಾರೆ. ಮುಂದಿನ ತಿಂಗಳು ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ.

ಪ್ರಾಣ-ಪ್ರತಿಷ್ಠಾ ಸಮಾರಂಭದ ವೈದಿಕ ವಿಧಿವಿಧಾನಗಳು ಜನವರಿ 16 ರಂದು ಮುಖ್ಯ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಲಕ್ಷ್ಮೀಕಾಂತ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 10ರಿಂದ 15 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ: Ram Mandir: ಜನವರಿ 22ಕ್ಕೆ ರಾಮ ಮಂದಿರ ಉದ್ಫಾಟನೆ, ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

Continue Reading
Advertisement
Congress Mp old tweet resurfaces about black money
ದೇಶ13 mins ago

ಇಷ್ಟೊಂದು ಕಪ್ಪು ಹಣ ಎಲ್ಲಿಡುತ್ತಾರೋ ಎಂದು ಕೇಳಿದ್ದ ಕೈ ಸಂಸದನ ಬಳಿ 300 ಕೋಟಿ ರೂ. ಬ್ಲ್ಯಾಕ್ ಮನಿ!

pro kabaddi
ಕ್ರೀಡೆ18 mins ago

Pro Kabaddi: ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಾಲ್​, ಹರ್ಯಾಣಗೆ ಒಲಿದ ಗೆಲುವು

Nagamurthy Swamy
ಕರ್ನಾಟಕ40 mins ago

Ayodhya Ram Mandir: ರಾಮಮಂದಿರ ನಿರ್ಮಾಣಕ್ಕೆ ತೆರಳಿದ ಗದಗದ ಯುವ ಶಿಲ್ಪಿ

Saika Ishaque ran through the England middle order
ಕ್ರಿಕೆಟ್53 mins ago

ENGW vs INDW; ಅಂತಿಮ ಪಂದ್ಯದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟ ಭಾರತ ಮಹಿಳಾ ಕ್ರಿಕೆಟ್​ ತಂಡ

CLAT Result 2024 announced
ದೇಶ55 mins ago

CLAT Result 2024: ಕಾನೂನು ಪ್ರವೇಶ ಪರೀಕ್ಷೆ ಸಿಎಲ್ಎಟಿ ರಿಸಲ್ಟ್ ಪ್ರಕಟ

girl students fall ill
ಕರ್ನಾಟಕ1 hour ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್2 hours ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್2 hours ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ2 hours ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ3 hours ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ8 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ11 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ19 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌