prerane morning spiritual thoughts in kannada about moha or InfatuationPrerane : ಮೋಹ ಮುಕ್ತರಾಗುವುದು ಹೇಗೆ? ಇರುವ ದಾರಿಗಳಾದರೂ ಯಾವುವು? - Vistara News

ಧಾರ್ಮಿಕ

Prerane : ಮೋಹ ಮುಕ್ತರಾಗುವುದು ಹೇಗೆ? ಇರುವ ದಾರಿಗಳಾದರೂ ಯಾವುವು?

ನೀವು ಪರಿವರ್ತನೆಯಾಗುವುದೊಂದೇ ಮೋಹದಿಂದ ಮುಕ್ತರಾಗುವ ಒಂದು ರೀತಿಯ ಉಪಾಯ. ಮನಸ್ಸಿಗೆ ಬಹಳ ನೋವಾಗುತ್ತದೆ. ಆದರೆ ಈ ನೋವು ಸಹಿಸಲೇಬೇಕು. ಇದೇ ತಪಸ್ಸು ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.

VISTARANEWS.COM


on

moha mukti and spirituality
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
sri kaivalyananda swamiji

ಶ್ರೀ ಕೈವಲ್ಯಾನಂದ ಸರಸ್ವತೀ
ಮನುಷ್ಯ ಹುಟ್ಟಿನಿಂದ ಸಾವಿನ ತನಕಾ ಆನಂದ ಪ್ರಾಪ್ತಿಗಾಗಿ ಶ್ರಮಿಸುತ್ತಾನೆ. ಆದಾಗ್ಯೂ ಆನಂದ ಕಾಣದು. ದುಃಖದಲ್ಲೇ ಜೀವಿಸುತ್ತಾನೆ. ದುಃಖಕ್ಕೆ ಕಾರಣವನ್ನು ಹುಡುಕುತ್ತಾನೆ – ಸಾಕಷ್ಟು ದುಡ್ಡು ಇಲ್ಲದ್ದೇ ಕಾರಣ; ಈ ಹೆಂಡತಿ ಸರಿಯಿಲ್ಲ, ಈ ಮಕ್ಕಳು ಸರಿಯಿಲ್ಲ. ಇನ್ನೂ ಯಶಸ್ವಿ ಪತಿ ಇದ್ದಲ್ಲಿ ಆನಂದ – ಇತ್ಯಾದಿಯಾಗಿ
ಕಾರಣಗಳನ್ನು ಹುಡುಕುತ್ತಾನೆ.

ಪ್ರಪಂಚವನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನದಾಗಿಸಿಕೊಂಡ ಪ್ರಪಂಚವನ್ನು ಅಭಿವೃದ್ಧಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನನ್ನು ಬಿಟ್ಟು ಹೋಗದೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾನೆ. ಏನೆಲ್ಲಾ ಮಾಡಿದರೂ ದುಃಖವು ಅಂತ್ಯವಾಗುವುದಿಲ್ಲ. ಆನಂದ ಪ್ರಾಪ್ತಿ ಎಂಬುದೊಂದು ಬಿಸಿಲು ಕುದುರೆಯಾಗುತ್ತಿದೆ. ಇದು ಎಲ್ಲರ ಅನುಭವವೂ ಆಗಿದೆ.

ಏಕೆ ಹೀಗಾಗುತ್ತಿದೆ? ಎಂದರೆ ʻʻಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರುʼʼ ಎಂಬಂತಿದೆ ಮನುಷ್ಯನ ಪ್ರಯತ್ನ. ದುಃಖಕ್ಕೆ ತಾನೇ ಮೂಲ ಕಾರಣವಾಗಿದ್ದಾನೆ. ಮತ್ತೆಲ್ಲೋ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಾನೆ. ತನ್ನ ಎಲ್ಲ ದುಃಖಕ್ಕೂ ಅವನ ಮೋಹವೇ ಕಾರಣ.

ಮೋಹವೆಂದರೆ ತನ್ನ ಜೀವನ, ಆನಂದ ಮತ್ತೊಬ್ಬರಿಂದ, ಮತ್ತೊಂದು ವಸ್ತುವಿನಿಂದ, ಇತರರಿಲ್ಲದೆ ತಾನಿರಲಾರ, ಇತರ ವಸ್ತುಗಳಿಲ್ಲದಿರೆ ತಾನಿರಲಾರ. ತನ್ನ ಆನಂದ ಇತರರಿಂದ, ಇತರ ವಸ್ತುಗಳಿಂದ ಎಂದು ಮೋಹಗೊಳ್ಳುತ್ತಿದ್ದಾನೆ.

ʻʻರಾಜನ ಪ್ರಾಣ ಗಿಳಿಯಲ್ಲಿದೆ. ರಾಜ ಏನು ಮಾಡಿದರೂ ಸಾಯುವುದಿಲ್ಲ. ರಾಜನನ್ನು ಸಾಯಿಸಲು ಗಿಳಿಯ ಕುತ್ತಿಗೆ ಹಿಸುಕಬೇಕು’’ ಎಂಬ ಕಥೆಯನ್ನು ಕೇಳಿರಬಹುದು. ಈ ಕಥೆ ಬಹಳ ಅರ್ಥ ಗರ್ಭಿತ. ಮಕ್ಕಳಿಗೆ ಹೇಳುವ ಈ ಕಥೆಯಲ್ಲಿ ವೃದ್ಧರೂ ಅರ್ಥ ಮಾಡಿಕೊಳ್ಳುವುದು ಸಾಕಷ್ಟಿದೆ. ರಾಜನ ಪ್ರಾಣಗಿಳಿಯಲ್ಲಿ ಇರುವಂತೆ, ಮನುಷ್ಯರ ಪ್ರಾಣ ಒಬ್ಬೊಬ್ಬರದು, ಒಂದೊಂದರಲ್ಲಿ ಇದೆ. ಕೆಲವರ ಪ್ರಾಣ ಕಬ್ಬಿಣದ ಪೆಟ್ಟಿಗೆಯಲ್ಲಿ. ನೀವು ಅವರ ಕುತ್ತಿಗೆ ಹಿಸುಕಿದರೂ ಸಾಯರು. ಕಬ್ಬಿಣದ ಪೆಟ್ಟಿಗೆ ಯಾರಾದರೂ ಖಾಲಿ ಮಾಡಿದರೆ ಅವರು ಸತ್ತಂತೆ. ಅವನ ಪ್ರಾಣ ಆ ಪೆಟ್ಟಿಗೆಯಲ್ಲಿದೆ. ಮೋಹದ ಅರ್ಥ ನಿಮ್ಮ ಪ್ರಾಣ, ನಿಮ್ಮಲ್ಲಿಲ್ಲ. ನಿಮ್ಮ ಆನಂದ ನಿಮ್ಮಲಿಲ್ಲ. ನಿಮ್ಮ ಪ್ರಾಣ, ನಿಮ್ಮ ಆನಂದ ಮತ್ತೆಲ್ಲೋ ಇದೆ. ಮಗನ ಮೇಲಿರಬಹುದು. ಹಣದ ಮೇಲಿರಬಹುದು. ಹೆಂಡತಿಯ ಮೇಲಿರಬಹುದು. ಪದವಿ ಪ್ರತಿಷ್ಠೆಗಳಲ್ಲಿರಬಹುದು. ಪ್ರಾಣವನ್ನು ಬಾಹ್ಯದಲ್ಲಿರಿಸಿರುವಿರಿ. ಅದು ಎಲ್ಲಿರಬೇಕೋ ಅಲ್ಲಿಲ್ಲ. ಅದು ನಿಮ್ಮಲ್ಲಿ ಸ್ಪಂದಿಸುತ್ತಿಲ್ಲ. ಮತ್ತೆಲ್ಲೋ ಸ್ಪಂದಿಸುತ್ತಿದೆ. ಹೀಗಾದಾಗ ನೀವು ತೊಂದರೆ ಗೀಡಾಗುತ್ತೀರ. ದುಃಖದಲ್ಲಿ ಜೀವಿಸುತ್ತೀರ.

ಮೋಹವೇ ಸಂಸಾರ

ನೀವು ಎಲ್ಲಿ, ಯಾರಲ್ಲಿ, ಯಾವುದರಲ್ಲಿ ಮೋಹಗೊಳ್ಳುವಿರೋ, ಅದಕ್ಕೆ (ಅವರಿಗೆ) ನೀವು ಗುಲಾಮರು. ರಾಜನ ಪ್ರಾಣ ಗಿಳಿಯಲ್ಲಿ. ಗಿಳಿ ಸತ್ತರೆ, ರಾಜ ಸಾಯುತ್ತಾನೆ. ಆದ ಕಾರಣ ಎಲ್ಲವನ್ನೂ ಬಿಟ್ಟು ಗಿಳಿಯನ್ನು ನೋಡಿಕೊಳ್ಳಬೇಕು. ತನ್ನನ್ನು ನೋಡಿಕೊಳ್ಳದಿದ್ದರೂ ಯಾವ ನಷ್ಟವೂ ಇಲ್ಲ. ಗಿಳಿಯನ್ನೂ ನೋಡಿಕೊಳ್ಳಬೇಕು. ನೀವು ನಿಮ್ಮ ಜೀವನವನ್ನು ಎಲ್ಲಿ ಇಟ್ಟಿರುವಿರೋ, ಅದಕ್ಕಾಗಿಯೇ ಹಗಲೂ ರಾತ್ರಿ ಕೆಲಸ ಮಾಡುವಿರಿ. ನಿಮ್ಮ ಜೀವನವೆಲ್ಲ ನಿಮ್ಮ ಮೋಹದ ವಸ್ತುವಿಗಾಗಿಯೇ.

ಮೋಹದ ಆವರಣವೆಂದರೆ ನಿಮ್ಮ ಆತ್ಮ ನಿಮ್ಮಲ್ಲಿ ಇಲ್ಲ. ಮತ್ತೆಲ್ಲಿಯೋ ಇನ್ನೊಂದು ಕಡೆ, ಇನ್ನೊಂದು ವಸ್ತುವಿನಲ್ಲಿ, ಇನ್ನೊಬ್ಬರಲ್ಲಿ ಅದು ಅವಿತುಕೊಂಡಿದೆ. ಅದು ನಿಮ್ಮಲ್ಲಿಲ್ಲ – ಇದೇ ಪ್ರಾಮುಖ್ಯ. ಇನ್ನೊಂದರ ಮೇಲೆ, ಇನ್ನೊಬ್ಬರ ಮೇಲೆ, ನಿಮ್ಮ ಅಸ್ಥಿತ್ವ ಅವಲಂಭಿತವಾಗಿದೆ. ಈ ಅವಲಂಭನೆಯ ಪರಿಣಾಮ ದುಃಖ, ಕ್ಲೇಶ, ತಪ್ಪಿಸಿಕೊಳ್ಳಲಾಗದು. ಮೋಹದ ವಸ್ತು ಎಲ್ಲಿ ಕೈಜಾರಿ ಹೋಗುವುದೋ, ಮೋಹದ ವ್ಯಕ್ತಿ ಎಲ್ಲಿ ಕೈ ಬಿಟ್ಟು ಹೋಗುವನೋ ಎಂಬ ಆತಂಕ, ಆತನಿಲ್ಲದೆ/ಆಕೆಯಿಲ್ಲದೆ ನಾ ಇರಲಾರೆ ಎಂಬ ವ್ಯಸನ ತುಂಬಿರುವುದು. ಯಾವ ವಸ್ತು ನೀವು ರೋಧಿಸುವುದಕ್ಕೆ ಕಾರಣವೋ ಅದೇ ಮೋಹದ ವಸ್ತು.

ಯಾರು ದೂರವಾದಲ್ಲಿ ನಾನು ಒಂಟಿ ಎಂಬ ಭಾವನೆ ಬರುವುದೋ ಅವರೇ ಮೋಹದ ವ್ಯಕ್ತಿ. ಯಾವ ವಸ್ತು ನಾಶವಾದರೆ ನಿಮ್ಮಲ್ಲಿ ಆ ಭಾವ ಮನೆ ಮಾಡಿಕೊಳ್ಳುವುದೋ ಅದೇ ನಿಮ್ಮ ಮೋಹದ ವಸ್ತು. ಯಾವ ವಸ್ತು ಜಾರಿ ಹೋದಲ್ಲಿ, ನೀವು ಧೈನ್ಯತೆಯನ್ನು ಹೊಂದುವಿರೋ ಅದೇ ಮೋಹದ ವಸ್ತು. ಎಲ್ಲ ದುಃಖಕ್ಕೂ ಈ ಮೋಹವೇ ಕಾರಣ. ಮೋಹಕ್ಕೆ ಎದುರಿನಲ್ಲಿರುವ ವಸ್ತು, ವ್ಯಕ್ತಿ, ಪ್ರಸಂಗ ಕಾರಣವಲ್ಲ. ನೀವೇ ಕಾರಣ. ನಿಮ್ಮ ಮೋಹವೇ ಕಾರಣ. ಮೋಹವೇ ಸಮಸ್ಯೆಯ, ದುಃಖ ಜೀವನದ ಅಡಿಗಲ್ಲು. ಈ ಅಡಿಗಲ್ಲನ್ನೂ ಕಿತ್ತೊಗೆಯುವುದಲ್ಲದೆ ಅನ್ಯ ಮಾರ್ಗವಿಲ್ಲ.

ಈಗ ಒಂದು ಪ್ರಶ್ನೆ ಎದ್ದುಕೊಳ್ಳುತ್ತದೆ. ʻʻಮೋಹದಿಂದ ಮುಕ್ತಿ ಹೇಗೆ?’’ ಈ ಪ್ರಶ್ನೆಗೆ ಸಮಾಧಾನವಾಗಿ ಕೆಲವರು ಹೇಳುವುದೇನೆಂದರೆ? ಯಾರಲ್ಲಿ ಮೋಹವಿದೆಯೋ, ಯಾವ ವಸ್ತುವಿನಲ್ಲಿ ಮೋಹವಿದೆಯೋ – ಅವರಿಂದ ದೂರ ಹೋಗಬೇಕು. ಆಗ ಮೋಹ ಕಳಚಿ ಹೋಗುತ್ತದೆ ಎನ್ನುತ್ತಾರೆ. ಇಲ್ಲಿ ಮೋಹದ ವಿಷಯ ಬದಲಾಯಿಸುತ್ತಿದೆ. ಮೋಹವುಳ್ಳ ವ್ಯಕ್ತಿ ಬದಲಾವಣೆಯಾಗಲಿಲ್ಲ. ಮೋಹವು ಹೋಗಲಿಲ್ಲ. ಮನೆಯನ್ನು ದೂರಮಾಡಿದಲ್ಲಿ, ಆಶ್ರಮ ಇಲ್ಲವೇ ಮಠದ ಮೋಹ ಹತ್ತಿಕೊಳ್ಳುವುದು. ಮನೆಗೆ ಅಂಟುಕೊಂಡಂತೆ ಆಶ್ರಮಕ್ಕೆ ಅಂಟುಕೊಳ್ಳಲಾಗುವುದು.

ಹೆಂಡತಿ, ಮಕ್ಕಳನ್ನು ಬಿಟ್ಟು ಹೋದಲ್ಲಿ ಅವರ ಸ್ಥಾನದಲ್ಲಿ ಗುರು, ಶಿಷ್ಯರು ಬರುವರು. ಕುಟುಂಬದ ಸದಸ್ಯರಿಗೆ ಅಂಟುಕೊಂಡ ರೀತಿಯಲ್ಲಿ, ಇವರಿಗೆ ಅಂಟುಕೊಳ್ಳಲಾಗುವುದು. ರಾಜಗೃಹವನ್ನು ಬಿಟ್ಟು, ಗುಡಿಸಲನ್ನು ಸೇರಬಹುದು. ಆದರೆ, ಈಗ ಗುಡಿಸಲಿನ ಮೇಲೆ ಮೋಹ. ಜಿಂಕೆಯ ಚರ್ಮ ಕಟ್ಟಿಕೊಂಡು ತಿರುಗಬಹುದು ಅಥವಾ ನಗ್ನವಾಗಿ ತಿರುಗಬಹುದು. ಜಿಂಕೆಯ ಚರ್ಮದ ಮೇಲೆ ಮೋಹ, ನಗ್ನತ್ವದ ಮೇಲೆ ಮೋಹ. ಮೋಹದಿಂದ ಮುಕ್ತನಾಗಲು ಪಲಾಯನ ಪರಿಹಾರವಾಗಲಾರದು.

spirituality Moha

ಮೋಹದಿಂದ ಮುಕ್ತಿ ಹೇಗೆ?

ಮತ್ತಾವುದು ಪರಿಹಾರ? ಯಾರಲ್ಲಿ, ಯಾವುದರಲ್ಲಿ ಮೋಹವಿದೆಯೋ ಅನ್ವೇಷಣೆ ಮಾಡಿ ನೋಡಿಕೊಳ್ಳಿ. ಯಾರು ದೂರವಾದರೆ ಯಾವ ವಸ್ತುವು ಕಳೆದು ಹೋದರೆ ನೀವು ವಿಕಾರ ಕೈಗೊಳ್ಳುವಿರೋ ಪರೀಕ್ಷಿಸಿಕೊಳ್ಳಿ. ಆ ವ್ಯಕ್ತಿ, ಆ ವಸ್ತು ದೂರವಾಗುವುದಕ್ಕೆ ಮುನ್ನ ನೀವು ಜಾಗೃತರಾಗಿ, ನಿಮ್ಮ ಮೋಹವನ್ನು ಕೊಡವಿಕೊಳ್ಳಿ. ಹೇಗೆ ಸಾಧ್ಯ? ಎನ್ನುವಿರಾ? ಪ್ರಪಂಚದಲ್ಲಿ ಯಾವುದೊಂದು ಸ್ಥಿರವಲ್ಲ. ಸ್ನೇಹವಾಗಲಿ, ಪ್ರೇಮವಾಗಲಿ, ಸಂಬಂಧವಾಗಲಿ ಯಾವುದು ಸ್ಥಿರವಲ್ಲ. ಪ್ರತಿಕ್ಷಣ, ಪ್ರಪಂಚದ ಪ್ರತಿವಸ್ತುವೂ ಪರಿವರ್ತನೆಯಾಗುತ್ತಿದೆ. ಪರಿವರ್ತನೆಯೊಂದೆ ಇಲ್ಲಿ ಸ್ಥಿರವಾದದ್ದು. ʻʻಸಂಯೋಗ ವಿಪ್ರಯೋಗಾಂತಃ’’ – ಒಟ್ಟಿಗೆ ಸೇರುವುದು, ಬಿಟ್ಟು ಹೋಗಲಿಕ್ಕಾಗಿಯೇ – ಇದೊಂದು ಬದಲಾಯಿಸಲಾಗದ ಪ್ರಪಂಚದ ನಿಯಮ.

ಬದಲಾಗಬೇಕಾದದ್ದು ನೀವು ಹಾಗೂ ನಿಮ್ಮ ನಿಲುವು. ನದಿ ಪ್ರವಾಹದಂತೆ ಎಲ್ಲವೂ ಪರಿವರ್ತನೆಯ ಪ್ರವಾಹ. ಒಂದು ಕಡೆ ನಿಲ್ಲದು. ಕಟ್ಟೆಕಟ್ಟಿ ನಿಲ್ಲಿಸುವ ನೀವು ಸಾಕಷ್ಟು ಪ್ರಯತ್ನ ಮಾಡಿರುತ್ತೀರಿ, ಶ್ರಮವಹಿಸಿರುತ್ತೀರಿ. ಬೆವರು ಸುರಿಸಿರುತ್ತೀರಿ. ಆದರೆ ಶ್ರಮ, ಆಯಾಸವೇ ಪ್ರಯೋಜನವಾಗಿದೆ. ಪರಿವರ್ತನೆಯೇ ಸಂಸಾರ. ಈ ಸಂಸಾರದಲ್ಲಿ ಸ್ಥಿರವಾದದ್ದನ್ನು ಹುಡುಕುವುದು, ಬಯಸುವುದು ವ್ಯರ್ಥ.

ನೀವು ಆಸೆ ಪಟ್ಟದ್ದು ಕೈ ಜಾರಿ ಹೋಗುವುದು. ʻʻಪರಿವರ್ತನೆಯೇ ಸಂಸಾರ’’ – ಪರಿವರ್ತನೆ ಮಾಡಲಾಗದ ಸ್ವಭಾವ ಈ ಸಂಸಾರದ್ದು, ಪರಿವರ್ತನೆಯಾಗಬೇಕಾದದ್ದು ʻʻನೀವೇ’ ಎಂಬುದನ್ನು ಅರ್ಥಮಾಡಿಕೊಂಡು, ನಿಮ್ಮ ಮೋಹವನ್ನು ಮುರಿದು ಹಾಕಿ. ಮೋಹವನ್ನು ವರೆಸಿ ಹಾಕಿ. ನೀವು ಪರಿವರ್ತನೆಯಾಗುವುದೊಂದೇ ಮೋಹದಿಂದ ಮುಕ್ತರಾಗುವ ಒಂದು ರೀತಿಯ ಉಪಾಯ. ಮನಸ್ಸಿಗೆ ಬಹಳ ನೋವಾಗುತ್ತದೆ. ಆದರೆ ಈ ನೋವು ಸಹಿಸಲೇಬೇಕು. ಇದೇ ತಪಸ್ಸು. ಇದಕ್ಕಾಗಿ ಸಂಸಾರವನ್ನು ಬಿಟ್ಟು, ದೂರದ ಹಿಮಾಲಯಕ್ಕೆ ಹೋಗಬೇಕಾದದ್ದಿಲ್ಲ. ನೀವು ಎಲ್ಲಿರುವಿರೋ ಅಲ್ಲಿಯೇ ಇರಿ. ಆದರೆ ಹಣ, ಹೆಂಡತಿ (ಗಂಡ) ಇತ್ಯಾದಿಗಳ ಮೇಲಿನ ನಿಮ್ಮ ಅವಲಂಬನೆ ಬಿಡಿ. ಮೋಹದ ವಸ್ತುವಿನಿಂದ ಮಾನಸಿಕವಾಗಿ ದೂರವಿದ್ದು ಜೀವಿಸಲು ನಿಮ್ಮ ಅಂತರಂಗದಲ್ಲೇ ಪ್ರಯತ್ನಮಾಡಿ. ಆ ಪ್ರಯತ್ನದಲ್ಲಿಯೇ ಮುಂದುವರಿಯುತ್ತಾ, ಕೊನೆಯಲ್ಲಿ ಯಾವ ವಸ್ತು ಯಾವ ವ್ಯಕ್ತಿಯೂ ಇಲ್ಲದಿದ್ದರೂ ನಿಮ್ಮಲ್ಲಿ ಯಾವ ಅಂಜಿಕೆ, ನಡುಕ ಇಲ್ಲದಿರಲಿ.

ಅಂತಹ ಒಂದು ಸ್ಥಿತಿಯನ್ನು ಪಡೆಯಿರಿ. ಆಗ ನೀವು ಮೋಹವನ್ನು ಜಯಸಿದಂತೆ. ಇದು ಅಸಾಧ್ಯವಲ್ಲ. ಸಾಧ್ಯ. ಒಬ್ಬರಿಗೆ ಸಾಧ್ಯವಾಗಿದ್ದಲ್ಲಿ, ಎಲ್ಲರಿಗೂ ಸಾಧ್ಯ. ಇದು ಸಾಧ್ಯವಾದ ಆ ಶುಭ ಘಳಿಗೆಯಲ್ಲಿಯೇ ಆತ್ಮ ಜ್ಞಾನ – ಸಹಜ ವಿದ್ಯಾ – ಪ್ರಾಪ್ತಿಯಾಗುವುದು.

ಎಲ್ಲಿಗೆ ಹೋದರೂ ʻಇತರೆ’ ಎಂಬುದು ಇದ್ದೇ ಇದೆ. ‘ಇತರೆ’ ಎಂಬುದು ಸರ್ವತ್ರ ಇದೆ. ಈ ಪ್ರಪಂಚದಲ್ಲಿ ನಿನಗಿಂತಲೂ ಭಿನ್ನವಾದದ್ದರಿಂದ ಓಡಿಹೋಗಲು ಸಾಧ್ಯವಿಲ್ಲ. ಏಕೆಂದರೆ ಪ್ರಪಂಚವೇ ಭಿನ್ನವಾದದ್ದು ಮತ್ತು ಎಲ್ಲಿ ಹೋದರೂ ಪ್ರಪಂಚವಿದೆ. ಪ್ರಪಂಚದಿಂದ ಆಚೆಗೆ ಹೋಗಲಾಗದು. ಎಲ್ಲಿ ಹೋದರು ಭಿನ್ನವಾದ ವಸ್ತು ಅಲ್ಲಿ ಇರುವುದು. ಆದ್ದರಿಂದ ಇತರ ವಸ್ತುಗಳಿಂದ, ಬೇರೆಯವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇತರ ವಸ್ತುಗಳಿಂದ, ಇತರ ವ್ಯಕ್ತಿಗಳಿಂದ ಓಡಿ ಹೋಗಲಾಗದು. ಎಲ್ಲಿ ಹೋದರೂ ಪ್ರಪಂಚವಿದೆ. ಇದೇ ಸತ್ಯದ ಇನ್ನೊಂದು ಮುಖವೇನೆಂದರೆ, ಅಹಂಕಾರ ರೂಪದಲ್ಲಿ ನೀವಿರುವವರೆಗೂ, ನಿಮಗಿಂತಲೂ ಬೇರೆಯಾದ ವಸ್ತುಗಳು ವ್ಯಕ್ತಿಗಳು ತಪ್ಪದೇ ಇರುತ್ತಾರೆ. ಕಣ್ಣು ಮುಚ್ಚಿಕೊಂಡರೂ, ಪ್ರಪಂಚದ ದೃಶ್ಯಗಳು ಅದೃಶ್ಯವಾದರೂ ʻʻಇತರೆ’’ ಎಂಬುದು ಅದೃಶ್ಯವಾಗದು. ಮುಚ್ಚಿರುವ ಕಣ್ಣುಗಳ ಹಿಂಭಾಗದಲ್ಲಿ ಇರುವುದು. ನಿಮ್ಮ ಆಸೆಗಳಲ್ಲಿ, ಆತುರತೆಯ ಹಂಬಲದಲ್ಲಿ ನಿಮ್ಮ ಕನಸಿನಲ್ಲಿ, ನಿಮ್ಮ ಹಗಲುಗನಸಿನಲ್ಲಿ ʻಇತರೆ’ ಎಂಬುದು ಇರುತ್ತದೆ. ಅಹಂಕಾರವಿರುವವರೆಗೂ ಬೇರೆಯವರನ್ನು, ಬೇರೆ ವಸ್ತುಗಳನ್ನು ತಪ್ಪಿಸಿಕೊಳ್ಳಲಾಗದು.

ಎಲ್ಲಿ ಹೋದರೂ ಪ್ರಪಂಚವಿದೆ, ಅಹಂಕಾರವಿದೆ ಅಥವಾ ಎಲ್ಲಿ ಹೋದರೂ ಅಹಂಕಾರವಿದೆ. ಅಹಂಕಾರದ ಮುಖಾಂತರ ನಾನು ನೋಡಿದ್ದೇ ಪ್ರಪಂಚ. ಅಹಂಕಾರವಿದೆ, ಪ್ರಪಂಚವಿದೆ. ಇವೆರಡರೂ ಇರುವಲ್ಲಿ ಸಂಬಂಧವಿದೆ. ಸಂಬಂಧವಿದ್ದಲ್ಲಿ ಮೋಹವಿದೆ. ಆದ ಕಾರಣ ಮೋಹದಿಂದ ತಪ್ಪಿಸಿಕೊಳ್ಳಲಾಗದು. ತಪ್ಪಿಸಿಕೊಳ್ಳಲು ಎಲ್ಲಿ ಪ್ರಪಂಚವಿಲ್ಲವೋ, ಎಲ್ಲಿ ಅಹಂಕಾರವಿಲ್ಲವೋ, ಎಲ್ಲಿ ಸಂಬಂಧಕ್ಕೆ ಅವಕಾಶವೇ ಇಲ್ಲವೋ, ಅಲ್ಲಿಗೆ ಹೋಗಿ ಸೇರಿಕೊಳ್ಳಬೇಕು.

ಅಂತಹ ಸ್ಥಳವು ಯಾವುದೆಂದರೆ ನಮ್ಮುಗಳ ಅಸ್ಥಿತ್ವವೇ, ನಮ್ಮ ಅಸ್ಥಿತ್ವದ ಅಂತರ್ ಕೇಂದ್ರವೇ. ಆದಕಾರಣ ನಮ್ಮ ಅಸ್ಥಿತ್ವದ ಕೇಂದ್ರದ ಕಡೆ ಯಾತ್ರೆ ಮಾಡಬೇಕು. ಅತ್ಯಂತ ಆಳದಲ್ಲಿರುವ ನಮ್ಮ ಅಸ್ಥಿತ್ವದ ಅಂತರ್ ಭಾಗವನ್ನು ಪ್ರವೇಶಿಸಬೇಕು. ಏಕಾಂತವಾದ, ನರ‍್ಮಾನುಷ್ಯವಾದ, ನಿರ್ವಸ್ತುಕವಾದ ಆ ಮಂದಿರಕ್ಕೆ ಪ್ರವೇಶಿಸಬೇಕು. ಅಲ್ಲಿ ಯಾರು ಇರುವುದಿಲ್ಲ. ಯಾವ ವಸ್ತುವೂ ಇರುವುದಿಲ್ಲ. ನಾವು ಸಹ – ಅಂದರೆ ಅಹಂಕಾರವೂ ಇರುವುದಿಲ್ಲ. ಆದಕಾರಣ ಅಲ್ಲಿ ಸಂಬಂಧವಿಲ್ಲ. ಮೋಹವಿಲ್ಲ. ಅದು ಸಂಪೂರ್ಣವಾದ ಮೌನ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಅಹಂಕಾರವು ಎಲ್ಲಿ ಇಲ್ಲವಾಗುವುದೋ ಅದೇ ನಮ್ಮ ಸ್ವರೂಪ. ಅಹಂಕಾರಕ್ಕೂ ಸ್ವರೂಪಕ್ಕೂ ಯಾವ ಸಂಬಂಧವೂ ಇಲ್ಲ. ಅಹಂಕಾರ ಇರುವಾಗಲೂ, ಅಹಂಕಾರವು ಇಲ್ಲದಿರುವಾಗಲೂ ಯಾವುದಿರುವುದೋ ಅದೇ ನಮ್ಮ ಸ್ವರೂಪ. ಒಮ್ಮೆ ನಿದ್ರಾನುಭವವನ್ನು ನೋಡಿಕೊಳ್ಳಿ. ನಿದ್ದೆಯ ಬಗ್ಗೆ ಜಾಗ್ರತ್ ಅವಸ್ಥೆಯ ಬುದ್ಧಿ ಹೇಳುವುದನ್ನು ಕೇಳಬೇಡಿ. ಯಾವರೀತಿ ಅನುಭವಿಸುತ್ತೀರೋ ಆ ರೀತಿ ನೋಡಿಕೊಳ್ಳಿ. ನೋಡಿಕೊಂಡಾಗ, ಪ್ರಪಂಚವಿಲ್ಲ, ಅಹಂಕಾರವಿಲ್ಲ, ಸಂಬಂಧವಿಲ್ಲ, ಮೋಹವಿಲ್ಲ, ಆದರೂ ನೀವಿದ್ದೀರ, ನೀವಿದ್ದೀರ ಎಂದಾಗ ಈ ವ್ಯಕ್ತಿತ್ವದ ಛಾಯೆ ಕಾಣುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದಲ್ಲಿ ಪ್ರಪಂಚವಿಲ್ಲದೆ, ಅಹಂಕಾರವಿಲ್ಲದೆ, ಸಂಬಂಧಕ್ಕೆ ಅವಕಾಶವಿಲ್ಲದೆ, ಮೋಹವಿಲ್ಲದೆ, ಯಾವುದೋ ಒಂದು ಉಳಿದಿದೆ. ಅದೇ ನಮ್ಮುಗಳ ಅಸ್ಥಿತ್ವ. ಎಚ್ಚರ. ಕನಸುಗಳಲ್ಲಿ ಅಹಂಕಾರ ವ್ಯವಹಾರ ನಡೆಯುತ್ತಿರುವಾಗಲೂ ನೀವು ಅದೇ ಸ್ವರೂಪ. ಅಹಂಕಾರ, ಅಹಂಕಾರದ ವ್ಯವಹಾರ ನಿಮಗೆ ಅಂಟಿಲ್ಲ. ಮೋಹ ಮುಕ್ತರು. ಜಾಗ್ರತ್ತು, ಕನಸು, ನಿದ್ದೆಗಳಲ್ಲೂ ನೀವು ಮೋಹ ಮುಕ್ತರು. ನೀವೇ ಮೋಹ ಮುಕ್ತ ಮಂದಿರ, ಮೋಹ ಮುಕ್ತ ದೇವರು.

ಸ್ವರೂಪತಃ ನಿಮಗೆ ಯಾವುದೂ ಅಂಟಿಲ್ಲ. ಯಾರೂ ಅಂಟಿಲ್ಲ. ಆದಕಾರಣ ನೀವು ನಿತ್ಯ ಮುಕ್ತರು. ಈ ವಸ್ತುಸ್ಥಿತಿಯನ್ನು ಗುರ್ತಿಸದೆ, ಜೀವನ ಎಷ್ಟು ವರ್ಷ ಮಾಡಿದರೇನು! – ವ್ಯರ್ಥ. ಗುರ್ತಿಸಲು ಇರುವ ಏಕೈಕ ಮಾರ್ಗ, ಗುರುಮುಖೇನ ಉಪನಿಷತ್ ತತ್ವವನು ಗುರ್ತಿಸಬೇಕು.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನೂ ಓದಿ : Prerane : ಶ್ರೇಯಸ್ಸೆಂದರೆ ಎಲ್ಲರಿಗೂ ಗೊತ್ತು; ಪ್ರೇಯಸ್‌ ಎಂದರೆ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿವಮೊಗ್ಗ

Shivamogga News: ವಿಜೃಂಭಣೆಯ ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ರಥೋತ್ಸವ

Shivamogga News: ರಿಪ್ಪನ್‌ಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Siddhivinayaka Swami SrimanMaharathotsava in Ripponpet
Koo

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಆಭಿನವ ಚನ್ನಬಸವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ, ಈ ವರ್ಷ ನಾಡಿಗೆ ಸಮೃದ್ಧ ಮಳೆ-ಬೆಳೆಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ, ನೆಮ್ಮದಿಯನ್ನು ಕರುಣಿಸುವಂತಾಗಲಿ ಎಂದು ಸಿದ್ಧಿವಿನಾಯಕ ದೇವರಲ್ಲಿ ಶ್ರೀಗಳು ಪ್ರಾರ್ಥಿಸಿದರು.

ಇದನ್ನೂ ಓದಿ: IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

ಮನ್ಮಹಾರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶಿವಮೊಗ್ಗದ ವಸಂತ ಭಟ್ ಮತ್ತು ಚಂದ್ರಶೇಖರ ಭಟ್ ಹಾಗೂ ಗುರುರಾಜ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಭಕ್ತರಿಗೆ ಉಚಿತವಾಗಿ ಕಬ್ಬಿನ ಹಾಲು ಮತ್ತು ಐಸ್‌ಕ್ರೀಮ್, ಕುಡಿಯುವ ನೀರಿನ ವ್ಯವಸ್ಥೆಯನ್ನು ವಿವಿಧ ಸಂಘಟನೆಗಳಿಂದ ಆಯೋಜಿಸಲಾಗಿತ್ತು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ; ಕೋಲಾರದಲ್ಲಿ ಮೊದಲ ಮಳೆಯ ಸಿಂಚನ

ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಶಟ್ಟಿ, ಎನ್. ಸತೀಶ್, ಗಣೇಶ್ ಎನ್. ಕಾಮತ್, ಎಂ.ಡಿ. ಇಂದ್ರಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತುಳೋಜಿರಾವ್, ಸ್ವಾಮಿ ದೊಡ್ಡಿನಕೊಪ್ಪ, ವೈ.ಜೆ. ಕೃಷ್ಣ, ಉಮೇಶ್ ಆರ್., ಮಂಜನಾಯ್ಕ್, ಎಂ.ಬಿ. ಮಂಜುನಾಥ, ಎಂ. ಸುರೇಶ್‌ ಸಿಂಗ್, ಸುಧೀರ್ ಪಿ., ರವೀಂದ್ರ ಕೆರೆಹಳ್ಳಿ, ನಾಗರತ್ನ ದೇವರಾಜ್, ಎಸ್.ಎನ್. ಬಾಲಚಂದ್ರ, ಕುಸುಮಾ ಬಾಲಚಂದ್ರ, ಪದ್ಮಾ ಸುರೇಶ್, ನಿವೃತ್ತ ಶಿಕ್ಷಕ ರಾಧಾಕೃಷ್ಣ, ಜಯಲಕ್ಷ್ಮಿ ಮೋಹನ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

Continue Reading

ಧಾರ್ಮಿಕ

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Ballari News: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ ಜರುಗಿತು. ಹರಕೆ ತೀರಿಸುವ ಭಕ್ತರ ಆಚರಣೆಗಳು ಗಮನ ಸೆಳೆದವು.

VISTARANEWS.COM


on

Kalamma Devi Pooja Mahotsava in Kampli
Koo

ಕಂಪ್ಲಿ: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ (Ballari News) ಜರುಗಿತು.

ಸೋಮವಾರ ಸಂಜೆ ಗಂಗೆಸ್ಥಳ ಮತ್ತು ಅಗ್ನಿ ಕುಂಭೋತ್ಸವ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಮೆರವಣಿಗೆಯಲ್ಲಿ ಮೂವರು ಭಕ್ತಾದಿಗಳು ಬಾಯಿಗೆ 12 ಅಡಿ ಉದ್ದದ ತ್ರಿಶೂಲ ಅಸ್ತ್ರವನ್ನು ಹಾಕಿಸಿಕೊಂಡು ಕಲ್ಲುಗುಂಡು, ಇಬ್ಬರು ಭಕ್ತಾದಿಗಳು ಆಟೋರಿಕ್ಷಾ, ಇಬ್ಬರು ಭಕ್ತರು ಕಾರುಗಳನ್ನು ತಮ್ಮ ಬೆನ್ನುಗಳಿಗೆ ಹಾಕಿದ್ದ ಕಬ್ಬಿಣದ ಕೊಕ್ಕೆಗಳಿಂದ ಎಳೆದು ತಮ್ಮ ಹರಕೆ ತೀರಿಸಿದರು. ಟ್ರ್ಯಾಕ್ಟರ್‌ಗೆ ಹಾಕಲಾಗಿದ್ದ ಬೊಂಬುಗಳಿಗೆ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ಜೋತು ಬೀಳುವ ಮೂಲಕ ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

ಮೆರವಣಿಗೆಯು ಶ್ರೀ ಕಾಳಮ್ಮ ದೇವಸ್ಥಾನದಿಂದ ಶ್ರೀ ಸುಂಕಲಮ್ಮ ದೇವಸ್ಥಾನದ ವರೆಗೂ ಜರುಗಿತು. ಭಕ್ತಾದಿಗಳು ರಸ್ತೆಯುದ್ದಕ್ಕೂ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ತಮ್ಮ ಹರಕೆಯಂತೆ ಸುಡು ಬಿಸಿಲ ಮಧ್ಯೆಯು ಗುಂಡು, ಆಟೋ, ಕಾರುಗಳನ್ನು ಎಳೆದೊಯ್ದು ಭಕ್ತಿ ಸಮರ್ಪಿಸಿದರು.

ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದಂತಹ ಭಕ್ತರು ವಿಶೇಷ ಆಚರಣೆಯನ್ನು ನೋಡಿ ಕಣ್ ತುಂಬಿಕೊಳ್ಳುವ ಮೂಲಕ ಆಶ್ಚರ್ಯ ಚಕಿತರಾದರು. ಕಾರ್ಯಕ್ರಮದ ಪೌರೋಹಿತ್ಯವನ್ನು ಮಾರೆಪ್ಪ ಪೂಜಾರಿ ವಹಿಸಿದ್ದರು.

ಇದನ್ನೂ ಓದಿ: Koppala News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಲು ಜಿ.ಪಂ ಸಿಇಒ ಸೂಚನೆ

ಈ ಸಂದರ್ಭದಲ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಚೆನ್ನರಾಜು, ಉಪಾಧ್ಯಕ್ಷ ಷಣ್ಮುಖಪ್ಪ, ಮುಖಂಡರಾದ ಮಾರೆಪ್ಪ ಪೂಜಾರಿ, ಸ್ವಾಮಿ ದೊರೆ, ಎ. ಗಣೇಶ್, ಎಸ್.ಜಿ.ಪೂಜಾರಿ, ಗುರುಮೂರ್ತಿ, ಪಣಿಯಪ್ಪ, ಆರ್. ಕೃಷ್ಣ ಪೂಜಾರಿ, ಎಸ್.ಆರ್. ಸುರೇಶ್ ಸೇರಿದಂತೆ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

Continue Reading

ಬೆಂಗಳೂರು

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Sadhguru Jaggi Vasudev: ಕಾಂಬೋಡಿಯಾದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕತೆಯ ಅನ್ವೇಷಣೆಗಾಗಿ ಸದ್ಗುರು ಜಗ್ಗಿ ವಾಸುದೇವ್‌ ಅವರು ತೆರಳಿದ್ದಾರೆ. ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸದ್ಗುರುಗಳ ಮೊದಲ ಪ್ರಯಾಣವಾಗಿದೆ.

VISTARANEWS.COM


on

Sadhguru Jaggi Vasudev
Koo

ಸೀಮ್‌ ರೀಪ್‌(ಕಾಂಬೋಡಿಯಾ): ಮೆದುಳಿನ ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಆಳದ ಅನ್ವೇಷಣೆಗಾಗಿ ಆಧ್ಯಾತ್ಮಿಕ ಗುರು ಹಾಗೂ ಈಶ ಫೌಂಡೇಶನ್‌ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ಅವರು ಕಾಂಬೋಡಿಯಾಗೆ ತೆರಳಿದ್ದಾರೆ. ಕಾಂಬೋಡಿಯಾ ಪ್ರವಾಸೋದ್ಯಮ ಸಚಿವ ಎಚ್.ಇ. ಎಸ್ಒಕೆ ಸೋಕೆನ್ ಅವರು ಸೀಮ್ ರೀಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸದ್ಗುರುಗಳನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.

ಗಮನಾರ್ಹ ಆತಿಥ್ಯದ ಜತೆಗೆ ಸಚಿವರು, ಕಾಂಬೋಡಿಯಾದ ಪ್ರಧಾನ ಮಂತ್ರಿಯವರ ವೈಯಕ್ತಿಕ ಪತ್ರವನ್ನು ಸದ್ಗುರುಗಳಿಗೆ ಪ್ರಸ್ತುತಪಡಿಸಿದರು. ಸಚಿವರೊಂದಿಗೆ ಅವರ ಪತ್ನಿ, ಕಾಂಬೋಡಿಯಾದ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ಕಾನ್ಸುಲೇಟ್ ಜನರಲ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ತಮ್ಮ ಚಟುವಟಿಕೆಗಳಿಗೆ ಮರಳಿರುವ ಸದ್ಗುರುಗಳ ಮೊದಲ ಪ್ರಯಾಣ. ಅಲ್ಲಿ ಅವರು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯಗಳ ಹಿಂದಿನ ವಿಜ್ಞಾನವನ್ನು ಅನ್ವೇಷಿಸಲಿದ್ದಾರೆ. ಅವರ ಕಾರ್ಯಕ್ರಮವು ಏಪ್ರಿಲ್ 30 ರವರೆಗೆ ಜರುಗಲಿದ್ದು, ಈ ಸಮಯದಲ್ಲಿ ಅಲ್ಲಿನ ಸ್ಥಳೀಯ ಸಂಸ್ಕೃತಿಯಲ್ಲಿ ಮಿಂದೇಳುವುದರ ಜತೆಗೆ, ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿರುವ ಬೇಯಾನ್ ಮತ್ತು ಅಂಕೋರ್ ವಾಟ್ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಯಾವುದೇ ಬೋಧನೆ, ತತ್ವಶಾಸ್ತ್ರ, ಮತಧರ್ಮ ಅಥವಾ ನಂಬಿಕೆಯ ವ್ಯವಸ್ಥೆಗಳಿಗೆ ಒಳಗಾಗದ ಸದ್ಗುರುಗಳು, ತಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪ್ರಯತ್ನಗಳು, ಪರಿಸರ ಕಾರ್ಯಗಳು, ಗ್ರಾಮೀಣ ಶಿಕ್ಷಣ ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ತಲುಪಿದ್ದಾರೆ. ಪ್ರಪಂಚದಾದ್ಯಂತ ಮೂವತ್ತು ಲಕ್ಷ ಜನರು ಅವರ ಪ್ರಮುಖ ಕಾರ್ಯಕ್ರಮವಾದ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ಆ ಮೂಲಕ ಜನರು ತಮ್ಮ ಜೀವನದ ಗ್ರಹಿಕೆಯಲ್ಲಿ ಹೆಚ್ಚಿನ ಸಮತೋಲನ ಮತ್ತು ಗಮನಾರ್ಹ ಸ್ಪಷ್ಟತೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!

2023 ರಲ್ಲಿ ಸದ್ಗುರುಗಳ ಸಾಮಾಜಿಕ ಮಾಧ್ಯಮವು 4.37 ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಬೋಡಿಯಾದ ಅವರ ಅನ್ವೇಷಣೆಯು, ಆ ದೇಶದ ಬಗೆಗಿನ ಅವರ ಒಳನೋಟಗಳಿಂದ ಪ್ರಯೋಜನ ಪಡೆಯಲು ಜಗತ್ತಿಗೆ ಒಂದು ವಿಶಿಷ್ಟ ಅವಕಾಶವನ್ನು ಒದಗಿಸಲಿದೆ.

Continue Reading

ಬೆಂಗಳೂರು

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

Bengaluru Karaga: ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು.

VISTARANEWS.COM


on

bengaluru karaga in darga
Koo

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru karaga Festival) ಮಂಗಳವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು. ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ (Dharmaraya swamy) ರಥೋತ್ಸವ ಬಳಿಕ ರಾತ್ರಿ 2 ಗಂಟೆಗೆ ಕರಗ ಶಕ್ತ್ಸೋತ್ಸವಕ್ಕೆ (Bangalore Karaga) ಚಾಲನೆ ನೀಡಲಾಯಿತು. ಮುಂಜಾನೆ ಹಾಜಿ ಮಸ್ತಾನ್‌ ಸಾಬ್‌ ದರ್ಗಾಗೂ (Haji Mastan Saab Darga) ಭೇಟಿ ಕೊಟ್ಟು 5.45ರ ವೇಳೆಗೆ ಧರ್ಮರಾಯ ಸ್ವಾಮಿ ದೇವಸ್ಥಾನದೊಳಗೆ ಕರಗ ಸೇರಿಕೊಂಡಿತು. ವೈಭವದ ಕರಗ ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು.

ನಿನ್ನೆ ರಾತ್ರಿ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹ್ಯಾರಿಸ್‌, ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಮುಂತಾದವರು ಭೇಟಿ ನೀಡಿದರು. ಬೆಳಗ್ಗೆಯಿಂದಲೇ ತಾಯಿಗೆ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ರಾತ್ರಿ 10.30ಕ್ಕೆ ಕಲ್ಯಾಣಿಗೆ ಹೋಗಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ವಾಪಸ್ ಬಂದು ಧರ್ಮರಾಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ರಥೋತ್ಸವದ ಬಳಿಕ ಭಕ್ತರ ಗೋವಿಂದ… ಗೋವಿಂದ… ಎಂಬ ಘೋಷಣೆಗಳ ನಡುವೆ ಅರ್ಚಕ ಜ್ಞಾನೇಂದ್ರ ಅವರು ಕರಗ ಹೊತ್ತು ಸಾಗಿದರು.

ಮುಖ್ಯ ರಥ ಧರ್ಮರಾಯಸ್ವಾಮಿ ರಥದಲ್ಲಿ ಅರ್ಜುನ‌ ಮತ್ತು ದ್ರೌಪದಿ ದೇವಿ ವಿರಾಜಮಾನರಾಗಿದ್ದರು. ಚಿಕ್ಕ ರಥದಲ್ಲಿ ಗ್ರಾಮದೇವಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪಾಂಡವರ ಮೂರ್ತಿಗಳು ಸೇರಿ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಗಳು ಮುಂದೆ ಸಾಗುತ್ತಿದ್ದಂತೆ ದೇಗುಲದಿಂದ ದ್ರೌಪದಿ ದೇವಿ ಕರಗ ಹೊರಬಂದಿತು.

ಕರಗ ಸಾಗುವ ರಾಜಬೀದಿಗಳೆಲ್ಲಾ ಬಣ್ಣ ಬಣ್ಣದ ಲೈಟಿಂಗ್‌ ಹಾಗೂ ಜನರಿಂದ ಕಂಗೊಳಿಸಿದವು. ಸಾಂಪ್ರದಾಯಿಕವಾಗಿ ಎ. ಜ್ಞಾನೇಂದ್ರ 14ನೇ ಬಾರಿ ಕರಗ ಹೊತ್ತರು. ಒಂದು ರಥದಲ್ಲಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು, ಪಾಂಡವರ ಮೂರ್ತಿಗಳು ಸೇರಿದಂತೆ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಂದಿತು. ಪೂಜೆ ನಂತರ ಮತ್ತೊಂದು ರಥದಲ್ಲಿ ದ್ರೌಪದಿ ಮತ್ತು ಅರ್ಜುನ ಮೂರ್ತಿ ಪ್ರತಿಷ್ಠಾಪನೆಯಾಯಿತು. ನಂತರ ರಥಗಳ ಮೆರವಣಿಗೆ ಆರಂಭವಾಯಿತು. ಖಡ್ಗಗಳನ್ನು ಹಿಡಿದು ನೂರಾರು ವೀರಕುಮಾರರು ಮೆರವಣಿಗೆಯಲ್ಲಿ ತೆರಳಿದರು. ರಥಗಳು ಮುಂದೆ ಸಾಗುತ್ತಿದ್ದಂತೆ ದ್ರೌಪದಿ ದೇವಿ ಕರಗ ದೇಗುಲದಿಂದ ಹೊರ ಬಂದಿದ್ದು, ಅದನ್ನು ಕಂಡು ಭಕ್ತರು ಹರ್ಷೋದ್ಗಾರ ಮಾಡಿದರು.

ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು. ಒಟ್ಟು 11-12 ಕಿಲೋಮೀಟರ್ ಕರಗದ ಮೆರವಣಿಗೆ ಸಾಗಿದೆ.

ಕರಗ ಮೆರವಣಿಗೆ ಮಾರ್ಗ

ರಥೋತ್ಸವದ ನಂತರ ಮಧ್ಯರಾತ್ರಿ 1 ಗಂಟೆಯಿಂದ ಕರಗ ಮಹೋತ್ಸವದ ಮೆರವಣಿಗೆ ಸಾಗಿತು. ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಿ ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಿ ನಂತರ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ತೆರಳಿತು. ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಯಿತು. ಬೆಳಗ್ಗೆ 5.45 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಿತು. ಬೆಳಗ್ಗೆ 8 ಗಂಟೆಗೆ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕರಗಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ | Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

Continue Reading
Advertisement
Bengaluru Rain
ಕರ್ನಾಟಕ2 hours ago

Bengaluru Rain: ಸಿಲಿಕಾನ್‌ ಸಿಟಿಯಲ್ಲಿ ವರುಣನ ಆರ್ಭಟ; ಜಲಾವೃತವಾದ ರಸ್ತೆಗಳು, ನೆಲಕ್ಕುರುಳಿದ 16 ಮರ

Rohit Sharma
ಪ್ರಮುಖ ಸುದ್ದಿ2 hours ago

Rohit Sharma : 4 ರನ್​ಗೆ ಔಟಾಗಿ ಕಣ್ಣೀರು ಸುರಿಸಿದ ರೋಹಿತ್​ ಶರ್ಮಾ; ಇಲ್ಲಿದೆ ವಿಡಿಯೊ

PM Narendra Modi
ದೇಶ2 hours ago

ತಮ್ಮ ಬಗ್ಗೆ ಟ್ರೋಲ್‌ ಮಾಡಿದ್ದನ್ನೂ ಮೆಚ್ಚಿದ ಮೋದಿ; ಮಮತಾ ಬ್ಯಾನರ್ಜಿ ನೋಟಿಸ್; ಯಾರು ಸರ್ವಾಧಿಕಾರಿ?

School Children
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

IPL 2024
ಕ್ರೀಡೆ2 hours ago

IPL 2024 : ಸೂರ್ಯನ ಪ್ರತಾಪಕ್ಕೆ ಮಂಕಾದ ಸನ್​; ಮುಂಬೈಗೆ 7 ವಿಕೆಟ್​ ಭರ್ಜರಿ ಗೆಲುವು

Narendra Modi
ದೇಶ3 hours ago

Maldives: ಭಾರತೀಯರೇ, ದಯಮಾಡಿ ಬನ್ನಿ ಎಂದ ಮಾಲ್ಡೀವ್ಸ್‌ ಸಚಿವ; ಬಾಯ್ಕಾಟ್‌ ಪೆಟ್ಟಿಗೆ ಥಂಡಾ!

DK Shivakumar
ಕರ್ನಾಟಕ3 hours ago

Prajwal Revanna Case: ದೇವರಾಜೇಗೌಡ ನನ್ನ ವಿರುದ್ಧ ಸುಳ್ಳು ಅಪಾದನೆ ಮಾಡಿದ್ದಾರೆ ಎಂದ ಡಿಕೆಶಿ

T20 World Cup 2024
ಕ್ರೀಡೆ3 hours ago

T20 World Cup 2024 : ಕೇಸರಿಯ ರಂಗು; ಟೀಮ್​ ಇಂಡಿಯಾದ ಟಿ20 ವಿಶ್ವ ಕಪ್​​ ಜೆರ್ಸಿ ಬಿಡುಗಡೆ

108 Ambulance
ಕರ್ನಾಟಕ3 hours ago

108 Ambulance: 108 ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

IPL 2024
ಪ್ರಮುಖ ಸುದ್ದಿ3 hours ago

IPL 2024 : ಮುಂಬೈ ಚಾ ರಾಜಾ ರೋಹಿತ್​ ಶರ್ಮಾ ಎಂದು ಕೂಗಿದ ಹೇಡನ್​ ಪುತ್ರಿ ಗ್ರೇಸ್​​; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ7 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ8 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ8 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ21 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 day ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌