ವಿಸ್ತಾರ ಸಂಪಾದಕೀಯ: ಮೌಢ್ಯಕ್ಕೆ ಮಗು ಬಲಿ, ಗೊಲ್ಲರಹಟ್ಟಿಯ ಮಹಿಳೆಯರ ಸಂಕಟ ಇಲ್ಲಿಗೇ ಕೊನೆಯಾಗಲಿ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮೌಢ್ಯಕ್ಕೆ ಮಗು ಬಲಿ, ಗೊಲ್ಲರಹಟ್ಟಿಯ ಮಹಿಳೆಯರ ಸಂಕಟ ಇಲ್ಲಿಗೇ ಕೊನೆಯಾಗಲಿ

ಇಂದು ನಾವು ಚಂದ್ರನಲ್ಲಿಗೇ ನೌಕೆ ಕಳಿಸುವಷ್ಟು, ಮಂಗಳನತ್ತ ದೃಷ್ಟಿ ನೆಡುವಷ್ಟು ಮುಂದುವರಿದಿದ್ದೇವೆ. ಆದರೆ ನಮ್ಮ‌ ನೆಲದಲ್ಲೇ ಇಂಥ ಮೌಢ್ಯಗಳನ್ನು ಗೆಲ್ಲಲಾಗುವುದಿಲ್ಲ ಎಂದರೆ ನಾವು ಏನೆಲ್ಲ ಸಾಧಿಸಿಯೂ ವ್ಯರ್ಥ.

VISTARANEWS.COM


on

kadugollara Tradition in tumkur
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರಿನ‌‌ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಹಾಗೂ ಮಗುವನ್ನು ಊರಿನ ಹೊರಗಿಟ್ಟ ಪರಿಣಾಮ‌ ವಿಪರೀತ ಶೀತದಿಂದ ಬಳಲಿ ಮಗು ಸಾವಿಗೀಡಾದ ಘಟನೆ ನಡೆದಿತ್ತು. ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಗು ಸಾವನ್ನಪ್ಪಿದೆ. ಇಷ್ಟೇ ಆಗಿದ್ದರೆ ಇದೊಂದು ದುರಂತವಾಗಿ ಉಳಿಯುತ್ತಿತ್ತು ಅಷ್ಟೇ. ಆದರೆ ಮುಂದಿನ ಬೆಳವಣಿಗೆ ಆಶಾದಾಯಕವಾಗಿದೆ. ನಿನ್ನೆ ಬಾಣಂತಿ ಇರುವ  ಸಿದ್ದೇಶ್ ಕುಟುಂಬದವರನ್ನು ಭೇಟಿಯಾದ  ಆರೋಗ್ಯ ಇಲಾಖಾ ಅಧಿಕಾರಿಗಳು, ಬಾಣಂತಿಯನ್ನು ಹೊರಗಿಡದಂತೆ ಅವರ ಮನವೊಲಿಸಿದ್ದರು. ಗೊಲ್ಲ ಸಂಪ್ರದಾಯದಂತೆ ಇನ್ನೂ ಒಂದು ತಿಂಗಳು ಬಾಣಂತಿ ಊರ ಹೊರಗೆ ಇರಬೇಕಿತ್ತು. ಆದರೆ ಮನವೊಲಿಕೆ ಬಳಿಕ ಗುರುವಾರ ಬೆಳಗ್ಗೆ ಬಾಣಂತಿ ವಸಂತಾಗೆ ಊರಿನ ಒಳಗೆ ಇರುವ ಮನೆಯೊಳಗೆ ಕುಟುಂಬ ಪ್ರವೇಶ ಕಲ್ಪಿಸಿದೆ. ಸುಧಾರಣೆಯ ಉಪಕ್ರಮಗಳು ಹೇಗೆ ನಡೆಯಬೇಕು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಗೊಲ್ಲರ ಸಮುದಾಯದಲ್ಲಿ ಇದೊಂದು ಆಚರಣೆ ಬೆಳೆದುಬಂದಿದೆ. ತಮ್ಮ ದೇವರಿಗೆ ಸೂತಕ ಆಗಬಾರದು ಎಂದು ಹೆರಿಗೆ ಆದ ಬಳಿಕ ಬಾಣಂತಿ, ಮಗುವನ್ನು  ಕುಟುಂಬಸ್ಥರು ಊರಿನ ಹೊರಗಿರುವ ಜೋಪಡಿಯಲ್ಲಿ‌ ಬಿಡಲಾಗುತ್ತದೆ. ಬಾಣಂತಿ ಅಲ್ಲಿ ತನ್ನ ಹಾಗೂ ಮಗುವಿನ ಆರೈಕೆ ಮತ್ತು ಆರೋಗ್ಯಗಳನ್ನು ತಾನೇ ನೋಡಿಕೊಳ್ಳಬೇಕಾಗುತ್ತದೆ. ಆರೋಗ್ಯ ಬಿಗಡಾಯಿಸಿದರೂ ಯಾರೂ ಬರುವುದಿಲ್ಲ. ಅಡುಗೆಯನ್ನೂ ತಾನೇ ಮಾಡಿಕೊಳ್ಳಬೇಕಾಗುತ್ತದೆ.  ಹಿಂದೆಂದೋ ಆರಂಭವಾದ ಸೂತಕದ ಈ ಆಚರಣೆ ಇಂದೂ ಹಲವು ಕಡೆ ಗಟ್ಟಿಯಾಗಿ ಬೇರೂರಿದೆ. ಇದರಿಂದಾಗಿ ಗೊಲ್ಲರಲ್ಲಿ ಶಿಶು ಮರಣ, ಬಾಣಂತಿ ಮರಣದ ಪ್ರಮಾಣ ಹೆಚ್ಚೇ ಇದೆ. ಪ್ರಸ್ತುತ ಪ್ರಕರಣದಲ್ಲಿ ಮಳೆ, ಗಾಳಿಯಿದ್ದರೂ ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ತಾಯಿ, ಮಗುವನ್ನು ಬಿಡಲಾಗಿತ್ತು. ಹೀಗಾಗಿ ಮಗುವಿಗೆ ಶೀತ ಕಾಣಿಸಿಕೊಂಡಿತ್ತು. ಬಾಣಂತಿ ಹಾಗೂ ಮಗುವಿಗೆ ಕುಟುಂಬದ ಗರಿಷ್ಠ ಗಮನ, ಆರೈಕೆ ಬೇಕಾಗಿರುತ್ತದೆ. ಇಬ್ಬರಿಗೂ ಸೋಂಕುಗಳು ಉಂಟಾಗುವ ಸಾಧ್ಯತೆ ಹೆಚ್ಚು. ಇದು ಸಾಮಾನ್ಯ ಜ್ಞಾನಕ್ಕೇ ಹೊಳೆಯಬೇಕಾದ ವಿಷಯ. ಆದರೂ ಸಾಮಾನ್ಯ ಜ್ಞಾನವನ್ನೂ ಮೂಢನಂಬಿಕೆ ಮೀರಿಸಿದೆ.

ಆದ್ದರಿಂದ ಬಾಣಂತಿಯನ್ನು‌ ಮರಳಿ‌ ಮನೆ ಸೇರಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಕ್ರಮ ಶ್ಲಾಘನೀಯ. ಮೌಢ್ಯದಲ್ಲಿ ಮುಳುಗಿದವರ ಮನಸ್ಸನ್ನು ತಿದ್ದುವ, ಶಿಕ್ಷಣ ನೀಡುವ ಪ್ರಯತ್ನಗಳು ನಡೆದುಬಂದಿವೆ. ಇನ್ನಷ್ಟು ನಡೆಯಬೇಕಿವೆ. ಬಾಣಂತಿಯರ ಸಾವಿನ ಪ್ರಮಾಣ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಹೆಚ್ಚಿನ ಪ್ರಮಾಣದಲ್ಲಿದೆ. ಹಿಂದುಳಿದ ಪ್ರದೇಶವಾಗಿರುವ ಹೈದರಾಬಾದ್‌ ಕರ್ನಾಟಕದಲ್ಲಿ ಇದು ಇನ್ನೂ ಹೆಚ್ಚು. ರಕ್ತಹೀನತೆ, ರಕ್ತದ ಅತಿ ಒತ್ತಡ, ಪ್ರಸವ ನಂತರ ತೀವ್ರ ರಕ್ತಸ್ರಾವ, ಸೋಂಕುಗಳು ಇದಕ್ಕೆ ಕಾರಣ. ಹೆರಿಗೆ ಸಂದರ್ಭ ಮತ್ತು ನಂತರದ ಕೆಲ ದಿನಗಳ ಅವಧಿ ತಾಯಿ ಮಗುವಿನ ಅಳಿವು ಉಳಿವಿಗೆ ನಿರ್ಣಾಯಕ. ಪ್ರಸವ ನಂತರದ ಸೋಂಕುಗಳಿಗೆ ತಾಯಿ ಸುಲಭವಾಗಿ ತುತ್ತಾಗಲು ರಕ್ತಹೀನತೆ ಪ್ರಮುಖ ಕಾರಣವಾದರೆ, ಕಾಮಾಲೆ ಮತ್ತು ಅಪೌಷ್ಟಿಕತೆ ನವಜಾತ ಶಿಶುಗಳ ಜೀವ ತೆಗೆಯುತ್ತವೆ. ಪ್ರಸೂತಿ ಆರೈಕೆ, ಮಡಿಲು, ತಾಯಿಭಾಗ್ಯ, ಜನನಿ ಸುರಕ್ಷಾ, ತಾಯಂದಿರ ಆರೋಗ್ಯ ತರಬೇತಿ… ಹೀಗೆ ತಾಯಿ ಮಗುವಿನ ಆರೈಕೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಇದನ್ನು ಫಲಾನುಭವಿಗಳಿಗೆ ತಲುಪಿಸುವುದರೊಂದಿಗೆ ನಾವು ಮೌಢ್ಯದೊಂದಿಗೂ ಹೊಡೆದಾಡಬೇಕಿದೆ. ಇಂದು ನಾವು ಚಂದ್ರನಲ್ಲಿಗೇ ನೌಕೆ ಕಳಿಸುವಷ್ಟು, ಮಂಗಳನತ್ತ ದೃಷ್ಟಿ ನೆಡುವಷ್ಟು ಮುಂದುವರಿದಿದ್ದೇವೆ. ಆದರೆ ನಮ್ಮ‌ ನೆಲದಲ್ಲೇ ಇಂಥ ಮೌಢ್ಯಗಳನ್ನು ಗೆಲ್ಲಲಾಗುವುದಿಲ್ಲ ಎಂದರೆ ನಾವು ಏನೆಲ್ಲ ಸಾಧಿಸಿಯೂ ವ್ಯರ್ಥ. ಹೀಗಾಗಿ‌ ಬಾಣಂತಿ – ಮಗು ಊರಿಂದ ಹೊರಗಿಡುವ ಆಚರಣೆಯನ್ನು ಸಮುದಾಯದ ಮನವೊಲಿಕೆ, ಶಿಕ್ಷಣ ಮುಂತಾದವುಗಳ ಮೂಲಕ ಸಂಪೂರ್ಣ ನಾಶ ಮಾಡಲು ಎಲ್ಲರೂ ದುಡಿಯಬೇಕಿದೆ. ಆ ನಿಟ್ಟಿನಲ್ಲಿ ಇದೊಂದು ಶ್ಲಾಘ್ಯ ಪ್ರಯತ್ನ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಭಯೋತ್ಪಾದಕನಿಗೆ ಶ್ರದ್ಧಾಂಜಲಿ; ಕೆನಡಾ ಸಂಸತ್ ನ ಮೂರ್ಖತನ

ಖಲಿಸ್ತಾನಿ ಉಗ್ರರಿಗೆ ಕೆನಡಾ ಹುಲುಸಾದ ನೆಲ. ಇಲ್ಲಿರುವ ಭಾರಿ ಪ್ರಮಾಣದ ಸಿಕ್ಖ್‌ ವಲಸಿಗರಲ್ಲಿ ಹಲವು ಪ್ರತ್ಯೇಕತಾವಾದಿಗಳು ಇದರ ಪೋಷಕರು. ಈ ಶ್ರೀಮಂತರ ಹಣಕ್ಕೆ ಆಸೆಪಡುತ್ತಿರುವ ಕೆನಡಾದ ಆಡಳಿತಗಾರರು ಈ ಖಲಿಸ್ತಾನಿ ಚಳವಳಿಯ ಪೋಷಕರೂ ಆಗಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಕೆನಡಾ ಸಂಸತ್ ನಲ್ಲಿ ಖಲಿಸ್ತಾನಿ ಉಗ್ರನಿಗೆ ಶ್ರದ್ಧಾಂಜಲಿ ಅರ್ಪಿಸಿರುವುದು ಖಂಡನೀಯ.

VISTARANEWS.COM


on

Canada
Koo

ಕೆನಡಾದಲ್ಲಿದ್ದ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ, ಖಲಿಸ್ತಾನಿ ಪರ ಹೋರಾಟಗಾರ (Khalistani Terrorist) ಹರ್ದೀಪ್‌ ಸಿಂಗ್‌ ನಿಜ್ಜಾರ್‌ (Nijjar Killing Case)ನ ಹತ್ಯೆಗೈದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಮಂಗಳವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ಒಂದು ನಿಮಿಷ ಮೌನ ಆಚರಿಸಿ ಆತನಿಗೆ ಗೌರವ ಸಲ್ಲಿಸಿದೆ. ಕಳೆದ ವರ್ಷ ಜೂನ್‌ 18ರಂದು ಕೆನಡಾದ ಸುರ‍್ರೆ ನಗರದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ. ಈ ಘಟನೆ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಎದ್ದು ನಿಂತು, ಮೌನ ಆಚರಿಸಿತು. ಇದೊಂದು ವಿಚಿತ್ರ ಬೆಳವಣಿಗೆ. ಹಾಗೆಯೇ ಕೆನಡಾದ ಉದ್ಧಟತನಕ್ಕೆ ಇದು ಸಾಕ್ಷಿ ಕೂಡ. ಭಯೋತ್ಪಾದನೆ ಎಂದರೇನು ಎಂದು ಗೊತ್ತಿಲ್ಲದ, ಖಲಿಸ್ತಾನಿ ಉಗ್ರವಾದದ ರುಚಿ ಕಂಡಿಲ್ಲದ ಕೆನಡಾದಂಥ ದೇಶದ ಮೂರ್ಖ ಆಡಳಿತಗಾರರು ಮಾತ್ರ ಮಾಡಬಹುದಾದ ಸಂಗತಿ ಇದು.

ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆಯನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನನ್ನು ಕೆನಡಾದ ಸುರ‍್ರೆ ನಗರದಲ್ಲಿ ಕೊಲೆ ಮಾಡಲಾಗಿತ್ತು. ಪಂಜಾಬಿಗಳೇ ಹೆಚ್ಚಿರುವ ಸುರ‍್ರೆ ನಗರದ ಗುರುನಾನಕ್‌ ಸಿಖ್‌ ಗುರುದ್ವಾರದ ಬಳಿಕ ಖಲಿಸ್ತಾನಿ ಉಗ್ರನ ಹತ್ಯೆ ನಡೆದಿತ್ತು. ಪಂಜಾಬ್‌ನಲ್ಲಿ ಅರ್ಚಕರೊಬ್ಬರ ಕೊಲೆಗೆ ಪಿತೂರಿ ನಡೆಸಿರುವುದು, ಮೂಲಭೂತವಾದದ ಪ್ರಸರಣ ಸೇರಿ ನಾಲ್ಕು ಪ್ರಕರಣಗಳಲ್ಲಿ ಎನ್‌ಐಎ ಈತನ ವಿರುದ್ಧ ತನಿಖೆ ನಡೆಸುತ್ತಿದೆ. ಖಲಿಸ್ತಾನ್‌ ಟೈಗರ್‌ ಫೋರ್ಸ್‌ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್‌ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿತ್ತು. ಇಂಥ ಉಗ್ರನ ಹತ್ಯೆಯಾದರೆ ಕೆನಡಾಕ್ಕೆ ಯಾಕೆ ಹೊಟ್ಟೆನೋವು?

ಖಲಿಸ್ತಾನಿ ಉಗ್ರರಿಗೆ ಕೆನಡಾ ಹುಲುಸಾದ ನೆಲ. ಇಲ್ಲಿರುವ ಭಾರಿ ಪ್ರಮಾಣದ ಸಿಕ್ಖ್‌ ವಲಸಿಗರಲ್ಲಿ ಹಲವು ಪ್ರತ್ಯೇಕತಾವಾದಿಗಳು ಇದರ ಪೋಷಕರು. ಈ ಶ್ರೀಮಂತರ ಹಣಕ್ಕೆ ಆಸೆಪಡುತ್ತಿರುವ ಕೆನಡಾದ ಆಡಳಿತಗಾರರು ಈ ಖಲಿಸ್ತಾನಿ ಚಳವಳಿಯ ಪೋಷಕರೂ ಆಗಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ನಿಜ್ಜಾರ್‌ ಹತ್ಯೆಗೂ ಮೊದಲು ಖಲಿಸ್ತಾನಿ ಉಗ್ರ, ಬಂಧಿತ ಅಮೃತ್‌ಪಾಲ್‌ ಸಿಂಗ್‌ನ ಆಪ್ತ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರ ರೂವಾರಿ ಅವತಾರ್‌ ಸಿಂಗ್‌ ಖಂಡಾ ಲಂಡನ್‌ನಲ್ಲಿ ಮೃತಪಟ್ಟಿದ್ದ. ಅಮೃತ್‌ಪಾಲ್‌ ಸಿಂಗ್‌ ಬಂಧನದ ಬಳಿಕ ಕೆನಡಾದಲ್ಲಿರುವ ಖಲಿಸ್ತಾನಿಗಳು ಇನ್ನಷ್ಟು ತೀವ್ರವಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವುದು, ಭಾರತೀಯ ರಾಯಭಾರಿಗಳನ್ನು ಬೆದರಿಸುವುದು ಇವರ ಮುಖ್ಯ ಉದ್ಯೋಗ.

ಭಾರತದಲ್ಲಿ ದಶಕಗಳ ಹಿಂದೆ ಉಲ್ಬಣಗೊಂಡು ಇದೀಗ ಉಪಶಮನಗೊಂಡಿರುವ ಹುಣ್ಣನ್ನು ಕೆರೆದು ಮತ್ತೆ ಉಲ್ಬಣಗೊಳಿಸುವ ಕೆಲಸವನ್ನು ಕೆನಡಾ ಮಾಡುತ್ತಿದೆ. ಒಂದು ಕಾಲದಲ್ಲಿ ಅಮೃತಸರದ ಸ್ವರ್ಣಮಂದಿರವನ್ನು ಅಪವಿತ್ರಗೊಳಿಸಿದ, ಖಲಿಸ್ತಾನ್‌ ಚಳವಳಿಯ ಹೆಸರಲ್ಲಿ ಪಂಜಾಬ್‌ನ ಯುವಜನತೆಯ ಮನಸ್ಸುಗಳನ್ನು ಕೆಡಿಸಿ ಸರ್ವನಾಶ ಮಾಡಿದ ಭಿಂದ್ರಾನ್‌ವಾಲೆಯ ಸಂತಾನಗಳು ಇಂದಿಗೂ ಕೆನಡಾದ ನೆಲದಲ್ಲಿ ಆಶ್ರಯ ಪಡೆದಿವೆ. ಇಂಥ ಡಜನ್‌ಗೂ ಹೆಚ್ಚು ಉಗ್ರರ ಹೆಸರನ್ನು ಭಾರತ ಸರ್ಕಾರ ಕೆನಡಾಗೆ ನೀಡಿದ್ದು, ಅವರನ್ನು ತಮಗೊಪ್ಪಿಸುವಂತೆ ಹೇಳಿದೆ. ಆದರೆ ಅವರು ಕೆನಡಾದ ಪ್ರಜೆಗಳೆಂದೂ, ಅವರ ಪ್ರತಿಭಟನೆಯ ಸ್ವಾತಂತ್ರ್ಯಕ್ಕೆ ತಾನು ಧಕ್ಕೆ ತರುವುದಿಲ್ಲವೆಂದೂ ಕೆನಡಾ ಗಳುಹುತ್ತಲೇ ಇದೆ. ʼಭಾರತ ತನ್ನ ಸಾರ್ವಭೌಮತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆʼ ಎಂದು ಪ್ರಲಾಪಿಸುತ್ತಿರುವ ಈ ದೇಶದ ಭಂಡ ನಾಯಕತ್ವದ ವೈಫಲ್ಯದಿಂದಾಗಿ, ಕಳೆದ ವರ್ಷ ಉಭಯ ದೇಶಗಳ ರಾಜತಾಂತ್ರಿಕ ಬಾಂಧವ್ಯವೂ ಹಳಸಿತ್ತು. ಪರಸ್ಪರರ ಹೈಕಮಿಶನರ್‌ಗಳನ್ನು ಹೊರಗೆ ಕಳಿಸುವವರೆಗೆ ಅದು ಹೋಗಿತ್ತು. ಇಲ್ಲೂ ಕೆನಡಾದ್ದೇ ಉಪದ್ವ್ಯಾಪ.

ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ಮತ್ತು ಇತರ ಆಡಳಿತಗಾರರು ಅರ್ಥ ಮಾಡಿಕೊಳ್ಳಬೇಕಾದ್ದು ಏನೆಂದರೆ, ಖಲಿಸ್ತಾನಿ ಹಿಂಸಾವಾದಿಗಳನ್ನು ಮುಂದಿಟ್ಟುಕೊಂಡು ಹೊರಟರೆ ಆ ದೇಶವೇ ಹಿಂಸೆಯ ಫಲವನ್ನು ಉಣ್ಣಬೇಕಾದೀತು. ಭಯೋತ್ಪಾದಕ ಹರ್‌ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಭಾರತ ಈಗಾಗಲೇ ಪ್ರತಿಪಾದಿಸಿದೆ. ಭಯೋತ್ಪಾದಕನಿಗೆ ಗೌರವ ಸಲ್ಲಿಸುವ ಮೂಲಕ ಕೆನಡಾ ಯಾವ ಸಂದೇಶ ನೀಡಹೊರಟಿದೆ? ಆ ದೇಶವೇ ಹೇಳಬೇಕು. ಉಭಯ ದೇಶಗಳ ನಡುವೆ ಶಾಂತಿ- ಸೌಹಾರ್ದ ಸ್ಥಾಪಿಸಬಯಸುವವರು ಮಾಡುವ ಕೆಲಸವಂತೂ ಇದಲ್ಲ.

ಇದನ್ನೂ ಓದಿ: Hardeep Singh Nijjar: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯಾಗಿ ಒಂದು ವರ್ಷ; ಮೌನ ಆಚರಿಸಿ ಗೌರವ ಸಲ್ಲಿಸಿದ ಕೆನಡಾ ಸಂಸತ್ತು

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಬೆಲೆ ಏರಿಕೆ ಮಾಡುವುದೇ ರಾಜ್ಯ ಸರ್ಕಾರದ 6ನೇ ‘ಗ್ಯಾರಂಟಿ’ ಆಗದಿರಲಿ!

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೆಲೆಯೇರಿಕೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದ, ಬೆಲೆಯೇರಿಕೆ ವಿರುದ್ಧ ಆಕ್ರೋಶ, ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್‌ ಈಗ ರಾಜ್ಯ ಸರ್ಕಾರದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ. ಮೊದಲೇ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಬಳಲುತ್ತಿರುವ ರಾಜ್ಯದ ಜನರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವು ಗಾಯದ ಮೇಲೆ ಬರೆ ಎಳೆದಂತಾಗಿದೆ.

VISTARANEWS.COM


on

Siddaramaiah
Koo

ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಟಿಕೆಟ್‌, ಮನೆಗಳಲ್ಲಿ 200 ಯೂನಿಟ್‌ಗಳವರೆಗೆ ವಿದ್ಯುತ್‌ ಫ್ರೀ, ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ಸೇರಿ ಐದು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಸರ್ಕಾರವು (Karnataka Government), ಅವುಗಳನ್ನು ಯಶಸ್ವಿಯಾಗಿಯೂ ಜಾರಿಗೆ ತಂದಿದೆ. ಯಶಸ್ವಿ ಜಾರಿಯಿಂದ ದೇಶಾದ್ಯಂತ ಖ್ಯಾತಿಯನ್ನೂ ಗಳಿಸಿದೆ. ಆದರೆ, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ನೇರವಾಗಿ ಜನರ ಜೇಬಿಗೆ ಕೈ ಹಾಕಿದೆ. ಒಂದು ಲೀಟರ್‌ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ (Petrol, Diesel Price Hike) ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಈಗ ತೀವ್ರ ಚರ್ಚೆ, ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.

ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ, ಅವುಗಳನ್ನು ಸಮರ್ಪಕವಾಗಿ ಜಾರಿಗೂ ತಂದ, ಬಡವರಿಗೆ ಅನುಕೂಲ ಮಾಡಿಕೊಟ್ಟ ಸಿದ್ದರಾಮಯ್ಯ ಅವರ ಸರ್ಕಾರವು ಮೊದಲಿಗೆ ಮದ್ಯದ ಬೆಲೆಯನ್ನು ಏರಿಕೆ ಮಾಡಿತು. ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಿ ಸಂಪನ್ಮೂಲವನ್ನು ಕ್ರೋಡೀಕರಣ ಮಾಡಿತು. ಒಂದೇ ವರ್ಷದಲ್ಲಿ ಎರಡೆರಡು ಬಾರಿ ಮದ್ಯದ ಬೆಲೆಯೇರಿಕೆ ಮಾಡಿತು. ಅಷ್ಟೇ ಅಲ್ಲ, ರಾಜ್ಯ ಸರ್ಕಾರವು ಈಗಾಗಲೇ ಮುದ್ರಾಂಕ ಶುಲ್ಕಗಳನ್ನು ಏರಿಸಿದೆ. ದತ್ತು ಸ್ವೀಕಾರ ಪ್ರಮಾಣಪತ್ರ, ಅಫಿಡವಿಟ್‌, ಆಸ್ತಿ ಪರಭಾರೆ, ಪವರ್‌ ಆಫ್‌ ಅಟಾರ್ನಿ ಸೇರಿ ಯಾವುದೇ ದಾಖಲೆಯನ್ನು ಪಡೆಯಲು ನಿಗದಿಪಡಿಸಿದ್ದ ಶುಲ್ಕವನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ಪಟ್ಟು ಹೆಚ್ಚಿಸಲಾಗಿದೆ. ಇದು ಕೂಡ ಸಂಪನ್ಮೂಲ ಕ್ರೋಡೀಕರಣದ ಭಾಗವೇ ಆಗಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಅದರ ಬೆಲೆ ಹೆಚ್ಚಿಸಿದರೂ ತೊಂದರೆ ಇಲ್ಲ ಎಂದು ಜನ ಸುಮ್ಮನಾದರು. ಮುದ್ರಾಂಕ ಶುಲ್ಕವು ದಿನನಿತ್ಯದ ಖರ್ಚು-ವೆಚ್ಚ ಅಲ್ಲದ ಕಾರಣ, ಅದರ ಬೆಲೆಯೇರಿಕೆಯನ್ನೂ ಜನ ಮನ್ನಿಸಿದರು. ಆದರೆ, ಈಗ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿರುವುದು ಅಕ್ಷಮ್ಯವಾಗಿದೆ.

ಪೆಟ್ರೋಲ್‌ ಬೆಲೆಯನ್ನು ಒಂದು ಲೀಟರ್‌ಗೆ 3 ರೂ. ಹಾಗೂ ಡೀಸೆಲ್‌ ಬೆಲೆಯನ್ನು ಲೀಟರ್‌ಗೆ 3.5 ರೂ. ಏರಿಕೆ ಮಾಡಿರುವುದು ಜನರ ಮೇಲೆ ನೇರವಾಗಿ, ನಿತ್ಯವೂ ಪರಿಣಾಮ ಬೀರುತ್ತದೆ. ಈಗಾಗಲೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇ ಜಾಸ್ತಿಯೇ ಇದ್ದ ಕಾರಣ ಮತ್ತೆ ಏರಿಕೆ ಮಾಡಿರುವುದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯಿಂದ ಸಾಗಣೆ ವೆಚ್ಚ ಜಾಸ್ತಿಯಾಗುತ್ತದೆ. ಇದು ಅಗತ್ಯವಸ್ತುಗಳ ಬೆಲೆಯೇರಿಕೆಗೂ ಕಾರಣವಾಗುತ್ತದೆ. ಸಕಲ ರೀತಿಯಲ್ಲೂ ಜನರ ಜೇಬಿಗೆ ಭಾರವಾಗುತ್ತದೆ. ಪ್ರತಿದಿನವೂ ಬಡವರ ಹಣಕ್ಕೆ ಕತ್ತರಿ ಬೀಳುತ್ತದೆ. ಅಲ್ಲಿಗೆ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಿಂದ ಪಡೆದುಕೊಂಡಂತೆ ಆಗುತ್ತದೆ. ಆಗ ಗ್ಯಾರಂಟಿಗಳ ಆಶಯವೇ ಮಣ್ಣುಪಾಲಾದಂತಾಗುತ್ತದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದಾಗ, ಅಡುಗೆ ಅನಿಲ ಸಿಲಿಂಡರ್‌ ಬೆಲೆಯೂ ಜಾಸ್ತಿ ಮಾಡಿದಾಗ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಬೆಲೆಯೇರಿಕೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಚುನಾವಣೆ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ‘ಬೆಲೆಯೇರಿಕೆ’ ಅಸ್ತ್ರವನ್ನೇ ಬಳಸಿದೆ. ಹೀಗಿರುವಾಗ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರವೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದರೆ ಹೇಗೆ? “ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕಲ್ಲ, ಅದಕ್ಕಾಗಿ ಬೆಲೆಯೇರಿಕೆ ಮಾಡಿದ್ದೇವೆ” ಎಂದು ಸಚಿವ ಎಂ.ಬಿ.ಪಾಟೀಲ್‌ ಅವರು ಹೇಳಿರುವುದು ಯಾವ ರೀತಿಯಲ್ಲಿ ಸಮಂಜಸ? ಸಿದ್ದರಾಮಯ್ಯನವರೇ, ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ. ಇದರಿಂದ ನಿಮ್ಮ ಸರ್ಕಾರಕ್ಕೆ ಹೆಸರೂ ಬಂದಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ, ಕರ್ನಾಟಕದಲ್ಲಿ ನೀವು ನಿರೀಕ್ಷಿಸಿದಷ್ಟು ಸೀಟುಗಳು ಕಾಂಗ್ರೆಸ್‌ಗೆ ಬರದಿರುವ ಹೊತ್ತಿನಲ್ಲಿ ರಾಜ್ಯದ ಜನರ ಮೇಲೆ ಬೆಲೆಯೇರಿಕೆ ಅಸ್ತ್ರವನ್ನು ಬಳಸುತ್ತಿರುವುದು, ‘ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ’ ಎಂಬಂತಹ ವರ್ತನೆಯೇ? ಖಂಡಿತವಾಗಿಯೂ ಇದು ಜನ ವಿರೋಧಿ ಕ್ರಮ.

ಇದನ್ನೂ ಓದಿ: Pralhad Joshi: ತೈಲ ಬೆಲೆ ಏರಿಸಿ ಕರ್ನಾಟಕದವರ ಕೈಗೆ ಗ್ಯಾರಂಟಿ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: 3ನೇ ಬಾರಿಯ ‘ವಿಸ್ತೃತ’ ಸರ್ಕಾರವು ‘ವಿಕಸಿತ ಭಾರತ’ಕ್ಕೆ ಶ್ರಮಿಸಲಿ

ಲೋಕಸಭೆ ಚುನಾವಣೆ ಫಲಿತಾಂಶವು ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ಬಿಜೆಪಿಗೆ ಇದ್ದ ಬಹುಮತ ಈಗ ಇಲ್ಲದ ಕಾರಣ ಮೈತ್ರಿಪಕ್ಷಗಳ ಮರ್ಜಿಗೆ ಕಾಯಬೇಕಿದೆ. ಅತ್ತ, ಕಾಂಗ್ರೆಸ್‌ ಮುಂದಾಳತ್ವದ ಇಂಡಿಯಾ ಒಕ್ಕೂಟವೂ ಬಲಿಷ್ಠವಾಗಿದೆ. ಹಾಗಾಗಿ, 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ನರೇಂದ್ರ ಮೋದಿ ಅವರು ಮೈತ್ರಿಪಕ್ಷಗಳ ಜತೆ ಸಮನ್ವಯ ಸಾಧಿಸುವ ಜತೆಗೆ ಪ್ರತಿಪಕ್ಷಗಳನ್ನೂ ಎದುರಿಸಬೇಕಿದೆ. ಇದರ ಮಧ್ಯೆ, ವಿಕಸಿತ ಭಾರತದ ಕನಸು ಸಾಕಾರಗೊಳ್ಳಲು ಕೂಡ ನೂತನ ಸರ್ಕಾರ ಹೆಚ್ಚು ಶ್ರಮ ವಹಿಸಬೇಕಿದೆ.

VISTARANEWS.COM


on

pm narendra Modi Cabinet
Koo

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಬಹುಮತ ಸಾಧಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರ ಜತೆಗೆ ಅನುಭವಿಗಳು, ಮೈತ್ರಿ ಪಕ್ಷಗಳ ಸಂಸದರು, ಯುವ ಸಂಸದರು ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಆಯ್ಕೆ ಮಾಡಿದ 72 ಸಂಸದರು ಸಚಿವರಾಗಿ (Modi 3.0 Cabinet) ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಸುಮಾರು 80 ದಿನಗಳಿಗೂ ಅಧಿಕ ಅವಧಿವರೆಗೆ 7 ಹಂತಗಳಲ್ಲಿ ಮತದಾನ ನಡೆದು, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ, ಈಗ ನರೇಂದ್ರ ಮೋದಿ ಅವರ ನೇತೃತ್ವದಲ್ಲಿಯೇ ಸತತ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಹಾಗಾಗಿ, ಚುನಾವಣೆ ಸಮಯದ ರಾಜಕೀಯ ಮೇಲಾಟ, ಆರೋಪ, ಪ್ರತ್ಯಾರೋಪ, ಟೀಕೆ, ವ್ಯಂಗ್ಯ, ತಿರುಗೇಟುಗಳನ್ನು ಬಿಟ್ಟು, ಆಡಳಿತ ಪಕ್ಷದವರು ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ನಿರ್ಮಾಣದ ಕನಸನ್ನು ನನಸಾಗಿಸಲು ಶ್ರಮಿಸಬೇಕಿದೆ. ಚುನಾವಣೆ ನೀತಿ ಸಂಹಿತೆ, ಫಲಿತಾಂಶದ ಹಿನ್ನೆಲೆಯಲ್ಲಿ ನಿಂತ ನೀರಾಗಿದ್ದ ಆಡಳಿತ ಯಂತ್ರಕ್ಕೆ ಈಗ ವೇಗ ನೀಡಬೇಕಿದೆ.

ಹಾಗೆ ನೋಡಿದರೆ, ವಿಕಸಿತ ಭಾರತದ ಕಲ್ಪನೆ ಸಾಕಾರಗೊಳಿಸಲು ದೇಶದಲ್ಲಿ ಸಕಾರಾತ್ಮಕ ವಾತಾವರಣವೇ ಇದೆ. ದೇಶದ ಜಿಡಿಪಿ ಬೆಳವಣಿಗೆಯ ಕುರಿತು ಅಂದಾಜಿಸಲಾಗಿದೆ. ಹಣದುಬ್ಬರವೂ ನಿಯಂತ್ರಣಕ್ಕೆ ಬರುತ್ತಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮೂಲ ಸೌಕರ್ಯ ಯೋಜನೆಗಳಿಗೆ ಒತ್ತು ನೀಡಿರುವುದು, ರೈಲು, ರೈಲು ನಿಲ್ದಾಣಗಳ ಆಧುನೀಕರಣ, ದಾಖಲೆ ವೇಗದಲ್ಲಿ ರಸ್ತೆ ನಿರ್ಮಾಣ, ಅತ್ಯಾಧುನಿಕ ವಿಮಾನ ನಿಲ್ದಾಣಗಳು ತಲೆ ಎತ್ತಿರುವುದು, ಇಸ್ರೋ ಬಾಹ್ಯಾಕಾಶ ಯೋಜನೆಗಳಿಗೆ ಉತ್ತೇಜನ ನೀಡಿರುವುದು ಸೇರಿ ಹಲವು ಕಾರ್ಯಕ್ರಮಗಳು ದೇಶದ ಅಭಿವೃದ್ದಿ ಮಾನದಂಡವನ್ನು ದುಪ್ಪಟ್ಟುಗೊಳಿಸಿವೆ. ಇದರಿಂದಾಗಿ ಸರ್ಕಾರದ ಸಚಿವರು, ಸಂಸದರು ವಿಕಸಿತ ಭಾರತದ ಕಲ್ಪನೆಯ ಸಾಕಾರಗೊಳಿಸಲು ಹೆಚ್ಚಿನ ಶ್ರಮ ವಹಿಸಬೇಕು. ಹೊಸ ಹೊಸ ಯೋಜನೆಗಳು, ಯೋಜನೆಗಳ ಸಮರ್ಪಕ ಜಾರಿ ಮೂಲಕ ದೇಶದ ಏಳಿಗೆಗೆ ಇನ್ನಷ್ಟು ಕೊಡುಗೆ ನೀಡಬೇಕು.

ಕೇಂದ್ರದಲ್ಲಿ 10 ವರ್ಷಗಳಿಂದ ಇದ್ದ ಬಹುಮತದ ಸರ್ಕಾರ ಈಗಿಲ್ಲ. ಬಿಜೆಪಿಯು 240 ಸೀಟುಗಳಿಗೆ ಸೀಮಿತವಾಗಿದ್ದು, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗಾಗಿ, ಮೋದಿ ಸರ್ಕಾರವು ಸುಸ್ಥಿರ ಆಡಳಿತ ನೀಡಬೇಕು ಎಂದರೆ ಮೈತ್ರಿಕೂಟದಲ್ಲಿ ಸ್ಥಿರತೆ ಕಾಪಾಡಬೇಕು, ಸಮನ್ವಯತೆ ಸಾಧಿಸಬೇಕು. ಪ್ರಾದೇಶಿಕ ಪಕ್ಷಗಳಿಗೆ, ಪ್ರಾದೇಶಿಕ ಪಕ್ಷಗಳ ರಾಜ್ಯಗಳಿಗೆ ಹೆಚ್ಚಿನ ಮನ್ನಣೆ ನೀಡಬೇಕು. ಧರ್ಮ, ಜಾತಿಯ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ, ಎಲ್ಲ ಮೈತ್ರಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಮುನ್ನಡೆಸಬೇಕು. ಮೋದಿ ಸರ್ಕಾರವು ಉದ್ಯಮಿಗಳ ಪರವಾದ ಸರ್ಕಾರ ಎಂಬ ಕುಖ್ಯಾತಿ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗಿದೆ. ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್‌ ಸೇರಿ ಅಗತ್ಯ ವಸ್ತುಗಳ ಬೆಲೆಯೇರಿಕೆಯು ಬಡ ಹಾಗೂ ಮಧ್ಯಮ ವರ್ಗದವರನ್ನು ಹೈರಾಣಾಗಿಸಿದೆ. ಇಂತಹ ವಿಷಯಗಳ ಕುರಿತು ಮೋದಿ ಹಾಗೂ ಟೀಮ್‌ ಗಮನ ಹರಿಸಬೇಕು. ಬಜೆಟ್‌ನಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ನೇರವಾಗಿ ಅನುಕೂಲವಾಗುವ (ಕಿಸಾನ್‌ ಸಮ್ಮಾನ್‌, ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಸಬ್ಸಿಡಿ ಹೆಚ್ಚಳ ಇತ್ಯಾದಿ) ಯೋಜನೆಗಳನ್ನು ಘೋಷಿಸಬೇಕು.

ಕಳೆದ 10 ವರ್ಷಗಳಲ್ಲಿ ಲೋಕಸಭೆಯಲ್ಲಿ ಬಲಿಷ್ಠ ಪ್ರತಿಪಕ್ಷವೇ ಇರಲಿಲ್ಲ. ಕಾಂಗ್ರೆಸ್‌ ಸೇರಿ ಯಾವೊಂದು ಪಕ್ಷವೂ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯುವಷ್ಟು ಸಮರ್ಥವಾಗಿರಲಿಲ್ಲ. ಇದು ಕೂಡ ಮೋದಿ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ, ಫಲಿತಾಂಶದ ಬಳಿಕ ಚಿತ್ರಣ ಬದಲಾಗಿದೆ. ಕಾಂಗ್ರೆಸ್‌ 52 ಕ್ಷೇತ್ರಗಳಿಂದ 99 ಕ್ಷೇತ್ರಗಳಿಗೆ ತನ್ನ ಸದಸ್ಯ ಬಲವನ್ನು ಹೆಚ್ಚಿಸಿಕೊಂಡಿದೆ. ಇಂಡಿಯಾ ಒಕ್ಕೂಟವು ಒಗ್ಗಟ್ಟಾಗಿ 232 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಗಾಗಿ, ಸಮ್ಮಿಶ್ರ ಸರ್ಕಾರಕ್ಕೆ ಆಡಳಿತ ನಡೆಸುವುದು ಹಗ್ಗದ ಮೇಲಿನ ನಡಿಗೆಯೇ ಆಗಿದೆ. ಇನ್ನು, ಕಳೆದ 10 ವರ್ಷಗಳಿಂದ ಬಲಿಷ್ಠವಾಗಿ, ಸಮರ್ಥವಾಗಿ ಕಾರ್ಯನಿರ್ವಹಿಸದ ಪ್ರತಿಪಕ್ಷಗಳು ಇನ್ನಾದರೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಬೇಕು. ಸರ್ಕಾರ ಲಯ ತಪ್ಪಿದಾಗ ಸರಿದಾರಿಗೆ ತರಬೇಕು. ಸರ್ಕಾರಕ್ಕೆ ಆಗಾಗ ಎಚ್ಚರಿಕೆ ನೀಡುವ ಜತೆಗೆ ಚಾಟಿ ಬೀಸಬೇಕು. ಒಟ್ಟಿನಲ್ಲಿ, ಸಬಲ ಸಮ್ಮಿಶ್ರ ಸರ್ಕಾರ ಹಾಗೂ ಪ್ರಬಲ ಪ್ರತಿಪಕ್ಷಗಳು ಕೂಡಿ ದೇಶದ ಏಳಿಗೆಗೆ, ವಿಕಸಿತ ಭಾರತ ಕಲ್ಪನೆಯ ಸಾಕಾರಕ್ಕೆ ಶ್ರಮಿಸಬೇಕು ಎಂಬುದೇ ಎಲ್ಲರ ಆಶಯವಾಗಿದೆ.

ಇದನ್ನೂ ಓದಿ: Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮೋದಿ ಮೂರನೇ ಅವಧಿ, ಆಗಲಿ ಇನ್ನಷ್ಟು ವಿಕಾಸದ ಬುನಾದಿ

ಮೋದಿಯವರಿಂದ ನಾವು ಸುಸ್ಥಿರ ಸರಕಾರವನ್ನು ನಿರೀಕ್ಷಿಸಬಹುದು. ಮೋದಿಯವರಲ್ಲಿ ಈ ವಯಸ್ಸಿನಲ್ಲೂ ದೇಶವನ್ನು ಮುನ್ನಡೆಸಬಲ್ಲ ಛಲ, ಒಳನೋಟ, ಮುತ್ಸದ್ಧಿತನ, ಜಾಣ್ಮೆ ಎಲ್ಲ ಇವೆ. ಆಂತರಿಕ ಹಾಗೂ ಬಾಹ್ಯ ನಾಯಕರ ಗೆಳೆತನವೂ ಇದೆ. ಆಧುನಿಕತೆಯನ್ನು ಬರಮಾಡಿಕೊಳ್ಳುವ ನಾಯಕತ್ವವೂ ಇದೆ. ಒಬ್ಬ ನಾಯಕನಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬೇಕಿಲ್ಲ. ಮೋದಿ ಸರಕಾರ ಭಾನುವಾರದ ಪ್ರಮಾಣ ವಚನದ ದಿನದಿಂದಲೇ ತನ್ನ ʼವಿಕಸಿತ ಭಾರತʼದ ಗುರಿಯತ್ತ ಮುನ್ನುಗ್ಗಲಿ.

VISTARANEWS.COM


on

Narendra Modi
Koo

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿ ಆಗಲಿದ್ದಾರೆ. ಇಂದು ಬಹುಮತ ಪಡೆದಿರುವ ಎನ್‌ಡಿಎ ಮೈತ್ರಿಕೂಟದ ಸಭೆ ನಡೆದು, ಅಲ್ಲಿ ಮೋದಿಯವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಜೂನ್‌ 9ರಂದು ಕೆಲವು ಸಚಿವರೊಂದಿಗೆ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೈತ್ರಿಕೂಟದ ಎಲ್ಲ ಸದಸ್ಯರ ಬೆಂಬಲ ಇರುವುದರಿಂದ, ನೂತನ ಸರಕಾರ ರಚನೆ ಕಷ್ಟವಾಗಲಾರದು. ಹತ್ತು ವರ್ಷಗಳ ಅನುಭವವೂ ಮೋದಿಯವರ ಬೆನ್ನಿಗೆ ಇದೆ. ಆದ್ದರಿಂದ ಕೇಂದ್ರ ಸರಕಾರ ರಚನೆಯ ಬಗ್ಗೆ ಅವರಿಗೆ ಯಾರೂ ಕಿವಿಮಾತು ಹೇಳುವುದು ಬೇಕಿಲ್ಲ. ಆದರೆ ಮೈತ್ರಿಧರ್ಮದ ಪಾಲನೆ ಮಾಡಿಕೊಂಡು ಈ ಬಾರಿ ಸರಕಾರ ಮುನ್ನಡೆಸುವುದು ಬಿಜೆಪಿಗೆ ಹಗ್ಗದ ಮೇಲಿನ ನಡಿಗೆಯೇ ಆಗಲಿದೆ.

ಎನ್‌ಡಿಎ ಸಭೆಯಲ್ಲಿ ಮೋದಿಯವರು ಭವಿಷ್ಯದ ಹಲವು ಮುನ್ನೋಟದ ನುಡಿಗಳನ್ನು ಆಡಿದ್ದಾರೆ. ದೇಶದ ಜಿಡಿಪಿಯನ್ನು ಇನ್ನಷ್ಟು ಹೆಚ್ಚಿಸುವುದು, ಯುವಜನತೆಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು, ಮಹಿಳೆಯರ ಸಬಲೀಕರಣ, ಹಳ್ಳಿಗಳಿಗೆ ಆರೋಗ್ಯಸೇವೆ ಮತ್ತು ಡಿಜಿಟಲ್‌ ಇಂಡಿಯಾದ ವಿಸ್ತರಣೆ, ಫಲಾನುಭವಿ ಯೋಜನೆಗಳ ವಿಸ್ತರಣೆಯ ಮೂಲಕ ವಿಕಸಿತ ಭಾರತದ ಸಾಕ್ಷಾತ್ಕಾರ, ರೈತರ ಸಬಲೀಕರಣ- ಇತ್ಯಾದಿಗಳು ಈ ಭಾಷಣದಲ್ಲಿ ಸ್ಥಾನ ಪಡೆದಿದ್ದವು. ಮೂಲಸೌಕರ್ಯದಂಥ ವಿಚಾರಗಳಲ್ಲಿ ಮೋದಿ ಸರಕಾರ ದೇಶದ ಬಹಳಷ್ಟು ಹಳ್ಳಿಗಳನ್ನೂ ನಗರಗಳನ್ನೂ ತಲುಪಿದೆ. ವಂದೇಮಾತರಂ ರೈಲುಗಳೂ ಎಕ್ಸ್‌ಪ್ರೆಸ್‌ವೇಗಳೂ ಗ್ರಾಮಸಡಕ್‌ ಯೋಜನೆಗಳೂ ಇದಕ್ಕೆ ಉದಾಹರಣೆ. ಜೈಶಂಕರ್‌, ನಿತಿನ್‌ ಗಡ್ಕರಿ ಮೊದಲಾದ ಮೋದಿ ಎರಡನೇ ಅವಧಿಯ ಸಚಿವರು ಅದ್ಭುತ ಅನ್ನಿಸುವಂಥ ಕಾರ್ಯವೈಖರಿಯನ್ನೇ ಮೆರೆದಿದ್ದಾರೆ. ಇಂಥ ಕರ್ತವ್ಯನಿಷ್ಠರನ್ನು ಮುಂದಿನ ಅವಧಿಗೂ ಮುಂದುವರಿಸಬೇಕಿದೆ. ಆಗ ಮಾತ್ರ ಅವರು ಕೈಗೊಂಡ ಕೆಲಸಗಳು ತಾರ್ಕಿಕ ಅಂತ್ಯ ಕಾಣಬಹುದು.

ಜಾಗತಿಕವಾಗಿ ಎರಡು ಯುದ್ಧಗಳು ನಡೆಯುತ್ತಿರುವ ಈ ಪ್ರಕ್ಷುಬ್ಧ ಅವಧಿಯಲ್ಲಿ ಮೂರನೇ ಬಾರಿಗೆ ಒಂದು ಸರಕಾರ ಆಯ್ಕೆಯಾಗುವುದು ಅಸಾಧಾರಣ ಸಾಧನೆ. ಜಾಗತಿಕ ಅನಿಶ್ಚಿತತೆ ಇರುವ ಸಮಯದಲ್ಲಿ ನಮ್ಮ ದೇಶದ ಜನತೆ ನಿರಂತರತೆ, ಸ್ಥಿರತೆ ಬಯಸಿದ್ದಾರೆ. ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಪುನರಾಗಮನವನ್ನು ವಿಶ್ವ ನಾಯಕರು ಸ್ವಾಗತಿಸಿದ್ದಾರೆ. 121ಕ್ಕೂ ಹೆಚ್ಚು ವಿಶ್ವ ನಾಯಕರು ಅವರನ್ನು ಅಭಿನಂದಿಸಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡೆನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಂತಹ ವಿಶ್ವ ನಾಯಕರು ಮೋದಿಯವರ ಪುನರಾಗಮನವನ್ನು ಸ್ವಾಗತಿಸಿದ್ದು, ಇವರೊಂದಿಗೆ ಮೋದಿ ವೈಯಕ್ತಿಕ ಸಂಬಂಧವನ್ನೂ ಆತ್ಮೀಯವಾಗಿ ಕಾಪಾಡಿಕೊಂಡಿರುವುದು ಉಲ್ಲೇಖನೀಯ.

ಇನ್ನು ಮೈತ್ರಿಕೂಟದಲ್ಲಿರುವ ಇಬ್ಬರು ಬಲಿಷ್ಠ ಪ್ರಾದೇಶಿಕ ನಾಯಕರಾದ ನಿತೀಶ್‌ ಕುಮಾರ್‌ ಹಾಗೂ ಚಂದ್ರಬಾಬು ನಾಯ್ಡು ಅವರೊಂದಿಗಿನ ಸಂಬಂಧ. ಇದು ಎನ್‌ಡಿಎಗೆ ಈ ಅವಧಿಯಲ್ಲಿ ಮುಖ್ಯವಾದುದು. ಇಬ್ಬರಿಗೂ ಬಹುತೇಕ ಮೋದಿಯವರಷ್ಟೇ ವಯಸ್ಸು ಆಗಿದೆ. ಇಬ್ಬರೂ ಮಾಗಿದ ರಾಜಕಾರಣಿಗಳು; ಅನವಶ್ಯಕ ರಿಸ್ಕ್‌ ತೆಗೆದುಕೊಳ್ಳುವವರಲ್ಲ. ಈ ಸಲದ ಫಲಿತಾಂಶ ಅವರಿಗೂ ಹಲವು ಪಾಠ ಕಲಿಸಿದೆ. ಬಿಹಾರ ಹಾಗೂ ಆಂಧ್ರಪ್ರದೇಶಗಳಲ್ಲೂ ಬಿಜೆಪಿ ಸಾಕಷ್ಟು ವಿಸ್ತರಿಸಿದೆ; ಈ ಪಕ್ಷಗಳಿಗೆ ಸಮಾನವಾಗಿಯೇ ಸ್ಥಾನಬಲ ಹೆಚ್ಚಿಸಿಕೊಂಡಿದೆ. ಈ ನಾಯಕರಿಗೆ ತಮ್ಮ ರಾಜ್ಯದ ಸಂಬಂಧವನ್ನು ಕೇಂದ್ರದೊಡನೆ ಕಾಪಾಡಿಕೊಂಡು, ರಾಜ್ಯದಲ್ಲೂ ಬೆಲೆ ಭದ್ರಪಡಿಸಿಕೊಂಡು ಉಳಿಯುವ ಹಂಬಲವಿದೆ. ಇಬ್ಬರೂ ಕೇಂದ್ರದಲ್ಲೂ ಸಾಕಷ್ಟು ಅಧಿಕಾರ ಅನುಭವಿಸಿದವರೇ. ಹೀಗಾಗಿ ಒಂದೆರಡು ಸಚಿವ ಸ್ಥಾನಗಳಿಗಾಗಿ ಚೌಕಾಸಿ ಮಾಡಿದರೂ, ಸಂಬಂಧ ಹರಿದುಕೊಳ್ಳುವಷ್ಟರ ಮಟ್ಟಿಗೆ ಯಾರೂ ಹೋಗುವವರಲ್ಲ. ಕರ್ನಾಟಕದ ಜೆಡಿಎಸ್‌ ಕೂಡ ಎರಡು ಸ್ಥಾನಗಳನ್ನು ಹೊಂದಿದ್ದು, ಒಂದು ಸಚಿವ ಸ್ಥಾನವನ್ನಂತೂ ಪಡೆಯುವುದು ಶಕ್ಯವಿದೆ.

ಹೀಗಾಗಿ, ಈ ಬಾರಿಯೂ ಮೋದಿಯವರಿಂದ ನಾವು ಸುಸ್ಥಿರ ಸರಕಾರವನ್ನು ನಿರೀಕ್ಷಿಸಬಹುದು ಎನ್ನಬಹುದು. ಮೋದಿಯವರಲ್ಲಿ ಈ ವಯಸ್ಸಿನಲ್ಲೂ ದೇಶವನ್ನು ಮುನ್ನಡೆಸಬಲ್ಲ ಛಲ, ಒಳನೋಟ, ಮುತ್ಸದ್ಧಿತನ, ಜಾಣ್ಮೆ ಎಲ್ಲ ಇವೆ. ಆಂತರಿಕ ಹಾಗೂ ಬಾಹ್ಯ ನಾಯಕರ ಗೆಳೆತನವೂ ಇದೆ. ಆಧುನಿಕತೆಯನ್ನು ಬರಮಾಡಿಕೊಳ್ಳುವ ನಾಯಕತ್ವವೂ ಇದೆ. ಒಬ್ಬ ನಾಯಕನಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬೇಕಿಲ್ಲ. ಮೋದಿ ಸರಕಾರ ಭಾನುವಾರದ ಪ್ರಮಾಣ ವಚನದ ದಿನದಿಂದಲೇ ತನ್ನ ʼವಿಕಸಿತ ಭಾರತʼದ ಗುರಿಯತ್ತ ಮುನ್ನುಗ್ಗಲಿ.

ಇದನ್ನೂ ಓದಿ: Narendra Modi: ಭಾನುವಾರ ಸಂಜೆ 7.15ಕ್ಕೆ ಮೋದಿ ಪ್ರಮಾಣವಚನ‌; ಹಲವು ಸಂಸದರಿಗೂ ಮಂತ್ರಿ ಭಾಗ್ಯ!

Continue Reading
Advertisement
Women's Asia Cup
ಪ್ರಮುಖ ಸುದ್ದಿ5 hours ago

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

minister mb patil visit japan and discuss about investment in Karnataka
ಕರ್ನಾಟಕ5 hours ago

Foreign Investment: 100 ಕೋಟಿ ರೂ. ವೆಚ್ಚದ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದ

Arvind Kejriwal
ಪ್ರಮುಖ ಸುದ್ದಿ6 hours ago

Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Kodagu News
ಕೊಡಗು6 hours ago

Kodagu News: ಕಳೆದುಕೊಂಡಿದ್ದ ಚಿನ್ನದ ನಾಣ್ಯ ವಾರಸುದಾರನ ಕೈ ಸೇರುವಂತೆ ಮಾಡಿದ ಪೊಲೀಸರು!

Lok Sabha Speaker
ಪ್ರಮುಖ ಸುದ್ದಿ6 hours ago

Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

Rahul Gandhi
ಪ್ರಮುಖ ಸುದ್ದಿ7 hours ago

Rahul Gandhi : ಲೋಕ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ

Ayodhya Ram Mandir
ಪ್ರಮುಖ ಸುದ್ದಿ7 hours ago

Ayodhya Ram Mandir : ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ‘ಟೆಂಪಲ್ ಮ್ಯೂಸಿಯಮ್​’; ಯೋಗಿ ಸಂಪುಟದ ಸಮ್ಮತಿ

Milk Price
ಪ್ರಮುಖ ಸುದ್ದಿ8 hours ago

Milk Price: ನಂದಿನಿ ಹಾಲಿನ ಹೊಸ ದರ ಹೇಗಿದೆ; ಯಾವುದಕ್ಕೆ ಎಷ್ಟು ಹೆಚ್ಚಳ?

Ayodhya Ram Mandir:
ಪ್ರಮುಖ ಸುದ್ದಿ8 hours ago

Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

Bengaluru Power Cut power outage in many parts of Bengaluru On June 27
ಬೆಂಗಳೂರು8 hours ago

Bengaluru Power Cut: ಜೂ.27ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌