Travel Tips: ದ್ವೀಪಗಳೆಂಬ ಮೋಹಕ ತಾಣಗಳು! ಈ ಮಳೆಗಾಲದಲ್ಲಿ ಇವು ನಿಮ್ಮ ಮೋಹ ಅರಳಿಸಲಿ - Vistara News

ಪ್ರವಾಸ

Travel Tips: ದ್ವೀಪಗಳೆಂಬ ಮೋಹಕ ತಾಣಗಳು! ಈ ಮಳೆಗಾಲದಲ್ಲಿ ಇವು ನಿಮ್ಮ ಮೋಹ ಅರಳಿಸಲಿ

ಒಮ್ಮೆಯಾದರೂ ದ್ವೀಪಗಳಿಗೊಮ್ಮೆ ಹೋಗಬೇಕು (Travel guide) ಅನಿಸಿದರೆ, ಈ ಕೆಳಗಿನ ದ್ವೀಪಗಳನ್ನು ನೀವು ನಿಮ್ಮ ಪಟ್ಟಿಯಿಂದ ತಳ್ಳಿ ಹಾಕಲಾರಿರಿ. ಬನ್ನಿ, ಯಾವೆಲ್ಲ ದ್ವೀಪಗಳು (island tourism) ಸೌಂದರ್ಯದ ಖನಿ ಎಂಬುದನ್ನು ನೋಡೋಣ.

VISTARANEWS.COM


on

neil island andaman
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದ್ವೀಪಗಳೆಂದರೆ ಯಾರಿಗೆ ತಾನೇ ಮೋಹ ಉಕ್ಕಲಿಕ್ಕಿಲ್ಲ ಹೇಳಿ. ಸಮುದ್ರದ ಮಧ್ಯದಲ್ಲೋ, ನದಿಯ ಮಧ್ಯದಲ್ಲೋ ಎದ್ದು ನಿಂತಿರುವ ನಡುಗಡ್ಡೆಗಳೂ ಯಾವತ್ತಿಗೂ ಕೈಬೀಸಿ ಕರೆಯುವ ತಾಣಗಳೇ. ನಮ್ಮ ದೇಶದಲ್ಲೂ ದ್ವೀಪಗಳಿಗೇನೂ ಕೊರತೆಯಿಲ್ಲ. ಪ್ರಸಿದ್ಧವಾದ ದ್ವೀಪಗಳಂತೆ, ಅಷ್ಟಾಗಿ ತಿಳಿದಿಲ್ಲದ ದ್ವೀಪಗಳೂ ಬಹಳಷ್ಟಿವೆ. ಒಮ್ಮೆಯಾದರೂ ದ್ವೀಪಗಳಿಗೊಮ್ಮೆ ಹೋಗಬೇಕು (Travel guide) ಅನಿಸಿದರೆ, ಈ ಕೆಳಗಿನ ದ್ವೀಪಗಳನ್ನು ನೀವು ನಿಮ್ಮ ಪಟ್ಟಿಯಿಂದ ತಳ್ಳಿ ಹಾಕಲಾರಿರಿ. ಬನ್ನಿ, ಯಾವೆಲ್ಲ ದ್ವೀಪಗಳು (island tourism) ಸೌಂದರ್ಯದ ಖನಿ ಎಂಬುದನ್ನು ನೋಡೋಣ.

೧. ದಿಯು, ಗುಜರಾತ್:‌ ಅಷ್ಟಾಗಿ ಯಾರೂ ಹೋಗದ ಚೆಂದನೆಯ ದ್ವೀಪವಿದು. ಪ್ರವಾಸಿ ತಾಣವಾಗಿ ಹೆಚ್ಚು ಪ್ರಸಿದ್ಧಿ ಪಡೆದಿಲ್ಲವಾದರೂ, ಭಾಋತದ ಸುಂದರ ದ್ವೀಪಗಳ ಪೈಕಿ ಇದೂ ಒಂದು. ಇಂದಿಗೂ ಪೋರ್ಚುಗೀಸರ ಆಲ್ವಿಕೆಯ ಪ್ರಭಾವಗಳು ಇಲ್ಲಿ ಕಾಣಬಹುದಾಗಿದ್ದು, ಬೇರೆಯದೇ ಆದ ಸಂಸ್ಕೃತಿ, ಭಿನ್ನ ವಾಸ್ತುಶಿಲ್ಪ ಹಾಗೂ ಪ್ರಕೃತಿಯ ರಮಣೀಯತೆಯನ್ನು ಇಲ್ಲಿ ನೋಡಬಹುದಾಗಿದೆ. ಮಳೆಗಾಲದಲ್ಲಿ ಈ ದ್ವೀಪ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಿಂದ ಪ್ರಕೃತಿಯೊಂದಿಗೆ ಕಾಲ ಕಳೆಯಲು, ಶಾಂತಿ ಅನುಭವಿಸಲು ಇಲ್ಲಿಗೆ ಮಳೆಗಾಲದಲ್ಲೊಮ್ಮೆ ಭೇಟಿ ಕೊಡಿ.

diu island

೨. ನೀಲ್‌ ದ್ವೀಪ (ಶಹೀದ್‌ ದ್ವೀಪ), ಅಂಡಮಾನ್: ಹೆಸರಿಗೆ ತಕ್ಕಂತೆ ನೀಲಿ ದ್ವೀಪವೇ ಆಗಿರುವ ಈ ದ್ವೀಪ ಅಂಡಮಾನಿನ ಅತ್ಯಂತ ಸುಂದರ ದ್ವೀಪಗಳ ಪೈಕಿ ಒಂದಾಗಿದೆ. ಸ್ವರ್ಗದ ತುಣುಕೊಂದು ತಪ್ಪಿ ಎಲ್ಲಿ ಭುವಿಗೆ ಬಿದ್ದಿದೆಯೋ ಅನಿಸಬೇಕು, ಹಾಗಿದೆ ಇಲ್ಲಿನಪ್ರಾಕೃತಿಕ ಸೌಂದರ್ಯ. ಜೀವನದಲ್ಲೊಮ್ಮೆ ದ್ವೀಪದ ನಿಜವಾದ ಸೌಂದರ್ಯ ನಮ್ಮ ಕೈಯಳತೆಯಲ್ಲೇ ಕಾಣಬಹುದು ಎಂದರೆ ಅದು ನಮ್ಮದೇ ಭಾರತದಲ್ಲಿರುವ ಅಂಡಮಾನಿನ ಈ ನೀಲ್‌ ದ್ವೀಪ! ಇನ್ನು ಈಗಷ್ಟೇ ಮದುವೆಯಾದ ನವ ಜೋಡಿಗಳ ಪಾಲಿಗಂತೂ ಈ ದ್ವೀಪ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎನ್ನದೆ ವಿಧಿಯಿಲ್ಲ.

೩. ಅಗತ್ತಿ ದ್ವೀಪಗಳು, ಲಕ್ಷದ್ವೀಪ: ನಮ್ಮ ದೇಶದ ಮಾತ್ರವಲ್ಲ, ವಿಶ್ವದ ಅತ್ಯಂತ ಸುಂದರ ದ್ವೀಪಗಳ ಪೈಕಿ ಲಕ್ಷದ್ವೀಪಗಳೂ ಒಂದು. ಸುಂದರ ನೀಲಿ ಹಸಿರು ಸಮುದ್ರ ತೀರಗಳು, ಹವಳ ನಿಕ್ಷೇಪಗಳು, ಬೆಳ್ಳನೆಯ ಮರಳು ಹೀಗೆ ಒಂದೇ ಎರಡೇ, ದ್ವೀಪವೆಂದರೆ ಹೀಗಿರಬೇಕು ಅನಿಸುವಷ್ಟು ಸೌಂದರ್ಯದ ರಾಶಿ, ಇಲ್ಲಿಯೇ ಇದೆ ಎನಿಸಿದರೆ ತಪ್ಪಾಗಲಾರದು. ಹನಿಮೂನಿಗೂ ಪ್ರೇಮಿಗಳ ಪಾಲಿಗೆ ಸ್ವರ್ಗವಿದು.

೪.ಹಾವ್‌ಲಾಕ್‌ ದ್ವೀಪ (ಸ್ವರಾಜ್‌ ದ್ವೀಪ): ಅಂಡಮಾನಿಗೆ ಹೋದಾಗ ಹ್ಯಾವ್ಲಾಕ್‌ ದ್ವೀಪಕ್ಕೆ ಹೋಗದಿದ್ದರೆ ಹೇಗೆ ಹೇಳಿ! ಅಂಡಮಾನ್‌ ದ್ವೀಪ ಸಮೂಹದ ಅತೀ ದೊಡ್ಡ ದ್ವೀಪ ಎಂದರೆ ಹ್ಯಾವ್‌ಲಾಕ್.‌ ಅತ್ಯಂತ ಸುಂದರ ದ್ವೀಪವೂ ಹೌದು. ಇದರ ಶಾಂತ ಸುಂದರ ಬೀಚುಗಳು ಪ್ರಕೃತಿ ಪ್ರಿಯರ ಪಾಲಿಗೆ ಹಬ್ಬ.

೫. ಮಜುಲಿ ದ್ವೀಪ, ಅಸ್ಸಾಂ: ಬ್ರಹ್ಮಪುತ್ರದಂತಹ ಅತ್ಯಂದ ಅಗಲವಾದ ನದಿಯ ನಡುವೆ ಒಂದು ದೊಡ್ಡ ಪ್ರಪಂಚವೇ ಇದೆ ಎಂದರೆ ನೀವು ನಂಬಲೇಬೇಕು. ಅದು ಮಜುಲಿ. ಇದು ವಿಶ್ವದ ಅತ್ಯಂತ ದೊಡ್ಡ ನದೀ ದ್ವೀಪಗಳ ಪೈಕಿ ಪ್ರಮುಖವಾದದ್ದು. ಚಂದದ, ತನ್ನದೇ ವಿಶೇಷ ಸಂಸ್ಕೃತಿಯಿರುವ ವಿಶಿಷ್ಟ ಭೂಭಾಗವಿದು.

majuli island

ಇದನ್ನೂ ಓದಿ: Travel Tips: ಈ ಹೆದ್ದಾರಿಯ ಮೂಲಕ ಕೋಲ್ಕತಾದಿಂದ ಬ್ಯಾಂಕಾಕ್‌ಗೆ ರೋಡ್‌ಟ್ರಿಪ್ ಮಾಡಿ!

೬. ದೀವಾರ್‌ ದ್ವೀಪ, ಗೋವಾ: ಗೋವಾದಲ್ಲಿ ಕೇವಲ ಸಮುದ್ರ ತೀರಕ್ಕಷ್ಟೇ ಹೋಗಿ ಬರುವುದು ಎಂದು ಅಂದುಕೊಂಡರೆ ನಿಮ್ಮ ಎಣಿಕೆ ತಪ್ಪಾದೀತು. ಇಲ್ಲಿ ಚಂದನೆಯ ದ್ವೀಪಗಳೂ ಇವೆ. ಗೋವಾದ ಪಣಜಿಂನಿಂದ ೧೦ ಕಿಮೀ ದೂರದಲ್ಲಿರುವ ದೀವಾರ್‌ ದ್ವೀಪ ಅಷ್ಟಾಗಿ ಯಾರೂ ಹೋಗದ ಚಂದನೆಯ ದ್ವೀಪ.

೭. ಗ್ರೇಟ್‌ ನಿಕೋಬಾರ್ ದ್ವೀಪ: ಒಮ್ಮೆ ನಮ್ಮ ಜೀವಿತಾವಧಿಯಲ್ಲಿ ನೋಡಲೇಬೇಕಾದ ದ್ವೀಪವಿದು. ಗ್ರೇಟ್‌ ನಿಕೋಬಾರ್‌ ಬಾರತದ ಅತ್ಯಂತ ದೊಡ್ಡ ದ್ವೀಪ. ಸ್ಪಟಿಕ ಶುದ್ಧ ಸಮುದ್ರ ತೀರಗಳು, ನೀಲಿ ಹಸಿರು ಸಮುದ್ರ ಎಂಥ ಕಲ್ಲು ಹೃದಯಿಯನ್ನೂ ಕರಗಿಸಬಲ್ಲುದು.

ಇದನ್ನೂ ಓದಿ: Travel Tips: ಇವು ಬೇರೆ ಗ್ರಹದ ಜಾಗಗಳಲ್ಲ, ನಮ್ಮದೇ ದೇಶದ ಅದ್ಭುತ ತಾಣಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪರಿಸರ

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ (wildlife sanctuaries) ಅನುಭವಗಳನ್ನು ನೀಡುತ್ತವೆ

VISTARANEWS.COM


on

Wildlife Sanctuaries
Koo

ಮಳೆಗಾಲ ಮತ್ತು ಕಾಡು! ಪ್ರಕೃತಿ ಪ್ರಿಯರ ಅತ್ಯಂತ ಇಷ್ಟದ ಕಾಂಬಿನೇಷನ್‌ ಇದು. ಮಳೆಗಾಲದಲ್ಲೊಮ್ಮೆ ಕಾಡಿಗೆ ಕರೆದರೆ ಯಾವ ಪ್ರಕೃತಿಪ್ರೇಮಿ ಬೇಡ ಅನ್ನಲಾರ ಹೇಳಿ? ವನ್ಯಜೀವಿ ಪ್ರಿಯರ, ಪ್ರಕೃತಿಪ್ರಿಯರ ಈ ಆಸೆಗೆ ತಣ್ಣೀರೆರಚುವಂತೆ ಮಳೆಗಾಲ ಬಂದ ತಕ್ಷಣ ರಾಷ್ಟ್ರೀಯ ಉದ್ಯಾನ/ವನ್ಯಜೀವಿಧಾಮಗಳೆಲ್ಲ ಬಾಗಿಲು ಮುಚ್ಚುತ್ತವೆ. ಕಾಡಿನ ಮದ್ಯದಲ್ಲಿ ಸಫಾರಿ ಹೋಗಲು, ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ ಅನುಭವಗಳನ್ನು ನೀಡುತ್ತವೆ. ಬನ್ನಿ, ಯಾವೆಲ್ಲ ರಾಷ್ಟ್ರೀಯ ಉದ್ಯಾನಗಳನ್ನು ಮಳೆಗಾಲಕ್ಕೆ ಸ್ವಲ್ಪವೇ ಮುನ್ನ ನೀವು ನೋಡುವುದೇ ಒಂದು ಅನುಭವ (wildlife sanctuaries) ಎಂಬುದನ್ನು ತಿಳಿಯೋಣ ಬನ್ನಿ.

Jim Corbett National Park, Uttarakhand

ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ, ಉತ್ತರಾಖಂಡ

ಉತ್ತರಾಖಂಡದ ಬಹು ಪ್ರಸಿದ್ಧ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಹಳೆಯ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳನ್ನು ಕಾಣಲು ಇದು ಪ್ರಶಸ್ತ ಜಾಗ. ಜೂನ್‌ ಮದ್ಯದಲ್ಲಿ ಇದು ಮುಚ್ಚಿದರೆ ಮತ್ತೆ ತೆರೆಯುವುದು ಅಕ್ಟೋಬರ್‌ನಲ್ಲಿಯೇ. ಆದರೆ, ಜೂನ್‌ ಆರಂಭದಲ್ಲಿ ಈ ಕಾಡು ನೋಡುವುದು ಬಲು ಸೊಗಸು.

Ranthambore National Park, Rajasthan

ರಣಥಂಬೋರ್‌ ರಾಷ್ಟ್ರೀಯ ಉದ್ಯಾನ, ರಾಜಸ್ಥಾನ

ಭಾರತದ ದೊಡ್ಡ ರಾಷ್ಟ್ರೀಯ ಉದ್ಯಾನಗಳ ಪೈಕಿ ಇದೂ ಒಂದು. ಹುಲಿಗಳನ್ನು ನೋಡಬೇಕೆಂದು ಬಯಸುವ ಪ್ರತಿ ವನ್ಯಜೀವಿ ಪ್ರೇಮಿ ಹಾಗೂ ವನ್ಯಜೀವಿ ಛಾಯಾಗ್ರಾಹಕರು ಈ ರಾಷ್ಟ್ರೀಯ ಉದ್ಯಾನಕ್ಕೆ ಬೇಟಿ ಕೊಡಲು ಬಯಸುವುದು ಸಾಮಾನ್ಯ. ಇದು ಜೂನ್‌ 30ರ ವೇಳೆಗೆ ಮುಚ್ಚುವ ಕಾರಣ ಅದಕ್ಕೂ ಮೊದಲು ಬೇಟಿ ಕೊಟ್ಟರೆ ಅಪರೂಪದ ಅನುಭವಗಳು ನಿಮ್ಮದಾಗಬಹುದು.

Bandhavgarh National Park, Madhya Pradesh

ಬಾಂಧವಗಢ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಹುಲಿಯನ್ನು ನೋಡಲು ಬಯಸುವ ಪ್ರತಿಯೊಬ್ಬ ವನ್ಯಜೀವಿ ಪ್ರಿಯರಿಗೂ ತಿಳಿದ ವನ್ಯಜೀವಿಧಾಮ ಇದು. ಇಲ್ಲಿ ಹುಲಿ ದರ್ಶನದ ಸಾಧ್ಯತೆ ಹೆಚ್ಚು. ಈಗಷ್ಟೇ ಮಳೆಬಿದ್ದ ಕಾಡು ಹಸಿರಾಗಿ ಕಂಗೊಳಿಸುವ ಸಂದರ್ಭ ಮಧ್ಯದಲ್ಲಿ ಆಕಳಿಸುತ್ತಾ ಕುಳಿತ ಹುಲಿಯನ್ನೊಮ್ಮೆ ಕಲ್ಪಿಸಿ ನೋಡಿ. ರೋಮಾಂಚಿತಗೊಳ್ಳುವುದಿಲ್ಲವೇ ಹೇಳಿ! ಜುಲೈನಿಂದ ಅಕ್ಟೋಬರ್‌ವರೆಗೆ ಈದು ಮುಚ್ಚಿರುವ ಕಾರಣ ಜೂನ್‌ನಲ್ಲಿ ಭೇಟಿಕೊಡಲು ಸುಸಮಯ.

Kanha National Park, Madhya Pradesh

ಕನ್ಹಾ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಇದೂ ಕೂಡಾ ಹುಲಿಗಳಿಗೆ ಬಲುಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನ. ಮಳೆಗಾಲ ಆರಂಭವಾದ ತಕ್ಷಣ ಕಾಣಲು ಇದು ಬಲು ಚಂದ. ಜೂನ್‌ 30ರಿಂದ ಅಕ್ಟೋಬರ್‌ 15ರವರೆಗೆ ಇದು ಮುಚ್ಚಿರುತ್ತದೆ.

Pench National Park, Madhya Pradesh and Maharashtra

ಪೆಂಚ್‌ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಈ ರಾಷ್ಟ್ರೀಯ ಉದ್ಯಾನ ಅತ್ಯಂತ ಸುಂದರವಾದ ಕಾಡುಗಳಲ್ಲಿ ಒಂದು. ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ದಿ ಜಂಗಲ್‌ ಬುಕ್‌ ಇದೇ ಕಾಡಿನಿಂದ ಸ್ಪೂರ್ತಿಗೊಂಡು ರಚಿತವಾದ ಕತೆ. ಹೆಚ್ಚು ಹುಲಿಗಳಿರುವ ಈ ಕಾಡು ಜೂನ್‌ 16ರಿಂದ ಸೆಪ್ಟೆಂಬರ್‌ವರೆಗೆ ಪ್ರವಾಸಿಗರಿಗೆ ಮುಚ್ಚಿರುತ್ತದೆ.

Nagarhole National Park, Karnataka

ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಕರ್ನಾಟಕ

ನಮ್ಮ ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಸುಂದರವಾದ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳ ಜೊತೆಗೆ ಆನೆ, ಚಿರತೆ, ಜಿಂಕೆ, ಕಾಡಮ್ಮೆಗಳೂ ಸೇರಿದಂತೆ ಅನೇಕ ಪ್ರಾಣಿಗಳ ಸಂತಿತಿ ಇಲ್ಲಿ ವಿಪುಲವಾಗಿದೆ. ಮಳೆ ಈಗಷ್ಟೇ ಬರಲು ಆರಂಭವಾಗುವ ಸಂದರ್ಭ ಇದು ರಮ್ಯವಾಗಿ ಕಾಣುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇದು ಮುಚ್ಚಿರುತ್ತದೆ. ಅಕ್ಟೋಬರ್‌ ತಿಂಗಳಲ್ಲೂ ಇದು ಅದ್ಭುತವಾಗಿ ಕಾಣುತ್ತದೆ.

Continue Reading

ದೇಶ

Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

ಪ್ರಕೃತಿಯ ನಡುವೆ ವಿಶ್ರಾಂತಿ ಬಯಸುವವರಿಗೆ ಮುನ್ನಾರ್ (Munnar Tour) ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ವಾರಾಂತ್ಯದ ವಿಹಾರದ ಆಯ್ಕೆಗಳನ್ನು ನೀಡುತ್ತವೆ. ಮುನ್ನಾರ್ ಪ್ರದೇಶದಲ್ಲಿ (Munnar Tour) ಕೆಲವು ಗುಪ್ತ ನಿಧಿಗಳಿದ್ದು ಅವುಗಳನ್ನು ಹುಡುಕಿಕೊಂಡು ಹೊರಟರೆ ಬದುಕಿನಲ್ಲಿ ಮತ್ತೊಮ್ಮೆ ಚೈತನ್ಯವನ್ನು ತುಂಬಿಕೊಂಡು ಮರಳಬಹುದು. ಮುನ್ನಾರ್ ಕುರಿತ ವಿಸ್ತೃತ ಪರಿಚಯ ಇಲ್ಲಿದೆ.

VISTARANEWS.COM


on

By

Munnar Tour
Koo

ಪ್ರಕೃತಿಯ ನಡುವೆ ಕಾಲ ಕಳೆಯುವುದು ಯಾರಿಗೆ ಇಷ್ಟವಿಲ್ಲ? ಕಚೇರಿ ಕೆಲಸದ ಜಂಜಾಟವನ್ನು ಬಿಟ್ಟು, ನಿತ್ಯದ ಓಡಾಟಕ್ಕೆ ಬ್ರೇಕ್ ಹಾಕಿ ಕೊಂಚ ಹೊತ್ತು ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಕಳೆಯಬೇಕು ಎಂದರೆ ಭಾರತದ (india) ದಕ್ಷಿಣದ (south) ಕೇರಳ (kerala) ರಾಜ್ಯದಲ್ಲಿ ನೆಲೆಗೊಂಡಿರುವ ಪಶ್ಚಿಮ ಘಟ್ಟಗಳ (Western Ghats) ಕಾಡುಗಳಲ್ಲಿ ಅಡಗಿರುವ ಮುನ್ನಾರ್ ಗೆ (Munnar Tour) ಭೇಟಿ ನೀಡಬಹುದು.

ಚಹಾ ತೋಟಗಳಿಗೆ ಪ್ರಸಿದ್ಧವಾಗಿರುವ ಬೆಟ್ಟ, ಮಂಜು ಮತ್ತು ತಂಪಾದ ವಾತಾವರಣದಿಂದ ಮುಚ್ಚಲ್ಪಟ್ಟಿರುವ ಮುನ್ನಾರ್ ನಗರದಿಂದ ದೂರವಾಗಿ ಮನಸ್ಸಿನ ಶಾಂತಿಯನ್ನು ಹುಡುಕುವವರಿಗೆ ಆಕರ್ಷಕ ತಾಣವಾಗಿದೆ.
ಮುನ್ನಾರ್‌ಗೆ ಭೇಟಿ ನೀಡಿದರೆ ನಿಮ್ಮೊಳಗಿನ ಚೈತನ್ಯವು ಪುನರುಜ್ಜೀವನಗೊಳ್ಳುವುದು ಎಂಬುದರಲ್ಲಿ ಸಂದೇಹವಿಲ್ಲ. ಮುನ್ನಾರ್ ಸುತ್ತಮುತ್ತ ಅನೇಕ ತಾಣಗಳಿವೆ. ವಾರಾಂತ್ಯದ ಪ್ರವಾಸದ ವೇಳೆ ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.


ಮರಯೂರು

ಮುನ್ನಾರ್‌ನಿಂದ ಕೆಲವು ಕಿಲೋ ಮೀಟರ್‌ಗಳಷ್ಟು ದೂರದಲ್ಲಿರುವ ಮರಯೂರ್ ಕಬ್ಬಿನ ಎಸ್ಟೇಟ್‌ಗಳು, ಶ್ರೀಗಂಧದ ಕಾಡುಗಳು ಮತ್ತು ಇತಿಹಾಸಪೂರ್ವ ಡಾಲ್ಮೆನ್‌ಗಳಿಗೆ ಹೆಸರುವಾಸಿಯಾದ ಸಣ್ಣ ಪಟ್ಟಣವಾಗಿದೆ. ನೈಸರ್ಗಿಕ ಅದ್ಭುತಗಳನ್ನು ಒಳಗೊಂಡಿರುವ ಮರಯೂರಿನಲ್ಲಿ ಸಂದರ್ಶಕರು ಬಿಡುವಿನ ವೇಳೆಯಲ್ಲಿ ಕಬ್ಬಿನ ಗದ್ದೆಗಳ ಉದ್ದಕ್ಕೂ ನಡೆಯಬಹುದು. ಶಿಲಾಯುಗದ ಪ್ರಾಚೀನ ಡಾಲ್ಮೆನ್‌ಗಳನ್ನು ಅನ್ವೇಷಿಸಲು ಅಥವಾ ಹತ್ತಿರದಲ್ಲಿರುವ ತೂವನಂ ಜಲಪಾತಗಳಿಗೆ ಭೇಟಿ ನೀಡಬಹುದು. ಅವುಗಳು ತಮ್ಮ ಸುತ್ತಲೂ ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಲ್ಲ ಮಾಡುವುದು ಮರಯೂರಿನ ವಿಶೇಷತೆಗಳಲ್ಲಿ ಒಂದಾಗಿದೆ.


ದೇವಿಕುಲಂ

ಮುನ್ನಾರ್‌ನಿಂದ 7 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ದೇವಿಕುಲಂ ಒಂದು ಸುಂದರವಾದ ರೆಸಾರ್ಟ್ . ಇಲ್ಲಿ ಪ್ರಕೃತಿಯು ತನ್ನ ಎಲ್ಲಾ ಸೌಂದರ್ಯವನ್ನು ಹಚ್ಚ ಹಸಿರಿನ ಕಣಿವೆಗಳು ಮತ್ತು ಮೌನವಾದ ಸರೋವರಗಳೊಂದಿಗೆ ಬಾಚಿ ಕೊಟ್ಟಿದೆ. ದೇವಿಕುಲಂ ಸರೋವರದಲ್ಲಿ ಶಾಂತವಾದ ದೋಣಿ ವಿಹಾರವನ್ನು ಆನಂದಿಸಬಹುದು. ಚಹಾ ತೋಟಗಳೊಂದಿಗೆ ರೋಲಿಂಗ್ ಬೆಟ್ಟಗಳಿಂದ ಆವೃತವಾಗಿದೆ.

ಸೀತಾದೇವಿ ಸರೋವರವು ಹೆಚ್ಚು ದೂರದಲ್ಲಿಲ್ಲ. ಇದು ಸಮೃದ್ಧ ಖನಿಜಾಂಶದ ಕಾರಣದಿಂದಾಗಿ ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಸಾಹಸಿ ಪ್ರವಾಸಿಗರು ಹೇರಳವಾದ ವನ್ಯಜೀವಿಗಳಿಂದ ತುಂಬಿರುವ ಕಾಡುಗಳ ಮೂಲಕ ಟ್ರೆಕ್ಕಿಂಗ್ ಹೋಗಬಹುದು. ಜೊತೆಗೆ ರಾಕ್ ಕ್ಲೈಂಬಿಂಗ್ ಚಟುವಟಿಕೆಗಳಲ್ಲಿ ತೊಡಗಬಹುದು.


ಚಿನ್ನಕನಲ್

ಮುನ್ನಾರ್‌ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಚಿನ್ನಕನಲ್ ಮಂಜಿನ ಬೆಟ್ಟಗಳ ನಡುವೆ ಇರುವ ಸುಂದರವಾದ ಹಳ್ಳಿಯಾಗಿದೆ. ಧುಮ್ಮಿಕ್ಕುವ ಜಲಪಾತಗಳು, ಸಾಂಬಾರ ತೋಟಗಳು ಮತ್ತು ಪಶ್ಚಿಮ ಘಟ್ಟಗಳ ರಮಣೀಯ ನೋಟವು ಚಿನ್ನಕನಾಲ್ ಅನ್ನು ಶಾಂತಿಯನ್ನು ಬಯಸುವವರಿಗೆ ಸ್ವರ್ಗವನ್ನಾಗಿ ಮಾಡುತ್ತದೆ. ಈ ಸ್ಥಳದ ಒಂದು ಆಕರ್ಷಣೆಯೆಂದರೆ ಅಟ್ಟುಕಲ್ ಜಲಪಾತಗಳು. ಇದು ಪ್ರಕೃತಿಯೊಂದಿಗೆ ಭವ್ಯವಾಗಿ ಬೆರೆತುಹೋಗಿದೆ. ವಿಶಾಲವಾಗಿ ಹರಡಿರುವ ಟೀ ಎಸ್ಟೇಟ್‌ಗಳು ಮತ್ತು ಮಸಾಲೆ ತೋಟಗಳು ಇಲ್ಲಿನ ಆಕರ್ಷಣೆಯಾಗಿದೆ.


ಆನಮುಡಿ ಶಿಖರ

ರೋಮಾಂಚನವನ್ನು ಬಯಸುವ ಸಾಹಸಪ್ರಿಯರಿಗೆ ಆನಮುಡಿ ಶಿಖರವನ್ನು ಹತ್ತುವುದು ಮುನ್ನಾರ್‌ನಲ್ಲಿನ ನಡೆಸಬಹುದಾದ ಚಟುವಟಿಕೆಗಳ ಪಟ್ಟಿಯ ಮೇಲ್ಭಾಗದಲ್ಲಿರಬೇಕು. ಆನಮುಡಿಯು ದಕ್ಷಿಣ ಭಾರತದ ಅತ್ಯುನ್ನತ ಶಿಖರವೆಂಬ ಬಿರುದನ್ನು ಪಡೆದ ಕಾರಣ, ಅದರ ಎತ್ತರದ ಮೇಲ್ಭಾಗದ ನೋಟವು ಅದರ ಸುತ್ತಲಿನ ವಿವಿಧ ಕಣಿವೆಗಳು, ಕಾಡುಗಳು ಮತ್ತು ತೊರೆಗಳನ್ನು ಬಹಿರಂಗಪಡಿಸುತ್ತದೆ. ಅಲ್ಲಿಗೆ ಚಾರಣ ಮಾಡುವುದು ದುರ್ಬಲ ಹೃದಯದ ಜನರಿಗೆ ಸಾಧ್ಯವಿಲ್ಲ. ಪರ್ವತಾರೋಹಿಗಳು ಇಲ್ಲಿ ಮಾತ್ರ ಕಂಡುಬರುವ ಸ್ಥಳೀಯ ಪ್ರಭೇದಗಳಾದ ನೀಲಗಿರಿ ತಾಹ್ರ್ ಸೇರಿದಂತೆ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ಕಾಣಬಹುದು.


ಟಾಪ್ ಸ್ಟೇಷನ್

ಟಾಪ್ ಸ್ಟೇಷನ್ ಮುನ್ನಾರ್ ನಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಒಂದು ಸುಂದರವಾದ ವ್ಯೂ ಪಾಯಿಂಟ್. ಸಮುದ್ರ ಮಟ್ಟದಿಂದ ಸರಿಸುಮಾರು 1,700 ಮೀಟರ್ ಎತ್ತರದಲ್ಲಿದೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಈ ಸ್ಥಳವು ನಿಸರ್ಗ ಮತ್ತು ಛಾಯಾಗ್ರಹಣವನ್ನು ಇಷ್ಟಪಡುವ ಜನರಿಗೆ ಬಹಳ ಪ್ರಿಯವಾಗುವುದು. ಇಲ್ಲಿಂದ ಪಶ್ಚಿಮ ಘಟ್ಟಗಳ ವಿಹಂಗಮ ನೋಟಗಳನ್ನು ಆನಂದಿಸಬಹುದು. ಅವುಗಳ ವಿಶಾಲತೆ ಮತ್ತು ತಮಿಳುನಾಡಿನ ಬಯಲು ಪ್ರದೇಶಗಳನ್ನು ಕಾಣಬಹುದು. ಈ ವ್ಯೂಪಾಯಿಂಟ್‌ನ ಹೆಸರು ಹಳೆಯ ರೋಪ್‌ವೇ ನಿಲ್ದಾಣದಿಂದ ಹುಟ್ಟಿಕೊಂಡಿದೆ. ಇದನ್ನು ಮುನ್ನಾರ್‌ನಿಂದ ಕೆಳಗಿನ ತಗ್ಗು ಪ್ರದೇಶಗಳಿಗೆ ಚಹಾವನ್ನು ಸಾಗಿಸಲು ಬಳಸಲಾಗುತ್ತಿತ್ತು. ಹತ್ತಿರದ ಅಂಗಡಿಗಳಿಂದ ಬಿಸಿ ಬಿಸಿ ಚಹಾದ ಸವಿಯನ್ನು ಸವಿಯಬಹುದು.

Continue Reading

ಪ್ರವಾಸ

Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

ರಜಾ ದಿನಗಳಲ್ಲಿ ಪ್ರವಾಸ ಮಾಡಲು ಕೋನಾರ್ಕ್ ಸೂಕ್ತ ಸ್ಥಳ. ಒಡಿಶಾ ರಾಜ್ಯದ ಪುರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾದ ಕೋನಾರ್ಕ್ ನಲ್ಲಿ ನಿಮಗೆ ನೋಡಲು ಹಲವು ಸ್ಥಳಗಳಿವೆ. ಅಲ್ಲಿ ನೀವು ನೋಡಲೇ ಬೇಕಾದ ಆಕರ್ಷಕ ಸ್ಥಳಗಳು ಯಾವವು? ಪ್ರಮುಖ ಸ್ಥಳಗಳ ಪಟ್ಟಿ ಮತ್ತು ಅವುಗಳ ಕಿರು (Konark tourist destination) ಪರಿಚಯ ಇಲ್ಲಿದೆ.

VISTARANEWS.COM


on

Konark Tourist Destination
Koo

ರಜಾ ದಿನಗಳಲ್ಲಿ ಪ್ರವಾಸ ಮಾಡಲು ಕೋನಾರ್ಕ್ ಸೂಕ್ತ ಸ್ಥಳ. ಒಡಿಶಾ ರಾಜ್ಯದ ಪುರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾದ ಕೋನಾರ್ಕ್ ನಲ್ಲಿ ನಿಮಗೆ ನೋಡಲು ಹಲವು ಸ್ಥಳಗಳಿವೆ. ಅಲ್ಲಿ ನೀವು ನೋಡಲೇ ಬೇಕಾದ ಆಕರ್ಷಕ ಸ್ಥಳಗಳ (Konark tourist destination) ಪಟ್ಟಿ ಇಲ್ಲಿದೆ.

Konark Sun Temple

ಕೋನಾರ್ಕ್ ಸೂರ್ಯ ದೇವಾಲಯ

ಇದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇದನ್ನು 13ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಈ ದೇವಾಲಯವನ್ನು ಕುದುರೆಗಳಿಂದ ಎಳೆಯಲ್ಪಟ್ಟ ದೈತ್ಯ ರಥದ ರೂಪದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಗಂಗಾ ರಾಜವಂಶದ ವಾಸ್ತುಶಿಲ್ಪ ಕಲೆಯು ಕಲ್ಲಿನ ಪ್ರತಿ ಇಂಚಿನಲ್ಲೂ ಕಂಡುಬರುತ್ತದೆ. ರಾಶಿಚಕ್ರಗಳ ಮೂಲಕ ಸೂರ್ಯನ ಚಲನೆಯನ್ನು ಸಂಕೇತಿಸುವ ದೈತ್ಯ ಚಕ್ರಗಳ ಜೋಡಿಗಳನ್ನು ಕೆತ್ತಲಾಗಿದೆ. ಇಲ್ಲಿ ಎತ್ತರದ ಕಲ್ಲಿನ ಕಂಬಗಳು ಮತ್ತು ಭವ್ಯವಾದ ವೇದಿಕೆಯ ವ್ಯವಸ್ಥೆ ಇದೆ. ಇಲ್ಲಿ ಕಾಸ್ಮಿಕ ಆಚರಣೆಗಳನ್ನು ನಡೆಸಲಾಗುತ್ತಿತ್ತು. ಇದು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Konark Beach

ಕೋನಾರ್ಕ್ ಬೀಚ್

ಬಂಗಾಳ ಕೊಲ್ಲಿಯ ಸಮುದ್ರ ಮತ್ತು ಕೋನಾರ್ಕ್ ದೇವಾಲಯದ ಆವರಣದ ಸುತ್ತಲೂ ಆವರಿಸಿರುವ ಸುಂದರ ರಮಣೀಯವಾದ ಬೀಚ್ ಇದಾಗಿದೆ. ಇದರ ಶಾಂತವಾದ ನೀಲಿ ಬಣ್ಣದ ನೀರು ಮತ್ತು ದಡದಲ್ಲಿರುವ ಕ್ಯಾಸುರಿನಾಸ್ ಮರಗಳಿಂದ ಕೂಡಿದ ಚಿನ್ನದಂತೆ ಹೊಳೆಯುವ ಮರಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಗರ ಜೀವನದಿಂದ ಬೇಸತ್ತ ಜನರು ನಿಮ್ಮ ಮನಸ್ಸಿನ ಬೇಸರ ಕಳೆಯಲು ಇಲ್ಲಿಗೆ ಬರಬಹುದು.

Konark Dance Festival

ಕೋನಾರ್ಕ್ ನೃತ್ಯ ಉತ್ಸವ

ಕೋನಾರ್ಕ್ ನ ಭವ್ಯವಾದ ಸೂರ್ಯ ದೇವಾಲಯದ ಎದುರು ಇರುವಂತಹ ತೆರೆದ ಸಭಾಂಗಣಗಳಲ್ಲಿ ಶಾಸ್ತ್ರೀಯ ನೃತ್ಯ ಉತ್ಸವವನ್ನು ನಡೆಸಲಾಗುತ್ತದೆ. ಇದನ್ನು ಒಡಿಶಾ ಪ್ರವಾಸೋದ್ಯಮವು ಪ್ರತಿವರ್ಷ ಡಿಸೆಂಬರ್ ನ ಆರಂಭದಲ್ಲಿ ಆಯೋಜಿಸುತ್ತದೆ. ದೇಶದ ವೈವಿಧ್ಯಮಯ ಪ್ರದರ್ಶನ ಕಲೆಗಳ ಪರಂಪರೆಯನ್ನು ತಿಳಿಸುವ ಪ್ರಖ್ಯಾತ ವ್ಯಕ್ತಿಗಳಿಂದ ಅಸಾಧಾರಣ ಪ್ರದರ್ಶನಗಳನ್ನು ಇಲ್ಲಿ ಪ್ರದರ್ಶಿಸಿಲಾಗುತ್ತದೆ.

Ramachandi Temple Konark

ರಾಮಚಂಡಿ ದೇವಸ್ಥಾನ

ಇದು ದಂತಕಥೆಗಳನ್ನು ಸಾರುವ ಕುಶ ಭದ್ರಾ ನದಿಯ ಸೊಂಪಾದ ದಡದಲ್ಲಿ ನೆಲೆಸಿರುವ ಪುರಾತನ ದೇವಾಯವಾಗಿದೆ.ಪುರಾಣಗಳ ಪ್ರಕಾರಣ ಇಲ್ಲಿನ ದೇವತೆ ರಾಮಚಂಡಿ ಭೂಮಿಯಲ್ಲಿ ದುಷ್ಟತನದಿಂದ ಮರೆದ ರಾಕ್ಷಸರನ್ನು ಸಂಹರಿಸಿ ಇಲ್ಲಿ ನೆಲೆಸಿದಳು ಎಂಬ ನಂಬಿಕೆ ಇದೆ. ದೇವಾಲಯ ಮುಂಭಾಗದಲ್ಲಿ ಸುಂದರವಾದ ಕೆಂಪು ಮತ್ತು ಬಿಳಿ ಸ್ತಂಭಗಳಿದ್ದು, ಇದನ್ನು ಶತಮಾನಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ. ಇಲ್ಲಿ ಪ್ರತಿದಿನ ಭಕ್ತರು ಮಣ್ಣಿನ ದೀಪಗಳನ್ನು ಬೆಳಗಿಸುತ್ತಾರಂತೆ.

Chandrabhaga Beach Konark

ಚಂದ್ರಭಾಗ ಬೀಚ್

ಪುರಿ ಕೋನಾರ್ಕ್ ಮೆರೈನ್ ಡ್ರೈವ್ ರಸ್ತೆಯಲ್ಲಿರುವ ಕೋನಾರ್ಕ್ ಸೂರ್ಯದೇವಾಲಯದಿಂದ ಕೇವಲ 3 ಕಿಮೀ ದೂರದಲ್ಲಿರುವ ಚಂದ್ರಭಾಗ ಬೀಚ್ ನಿಮ್ಮ ರಜಾದಿನಗಳನ್ನು ಕಳೆಯಲು ಹೆಚ್ಚು ಪ್ರಶಸ್ತವಾದ ಸ್ಥಳವಾಗಿದೆ. ಇಲ್ಲಿ ಮಾಘ ಸಪ್ತಮಿ ಆಚರಣೆಗಳು, ಅದ್ಭುತವಾದ ಸೂರ್ಯೋದಯವನ್ನು ವೀಕ್ಷಿಸಬಹುದು.

Archaeological Museum Konark

ಆರ್ಕಿಯಾಲಾಜಿಕಲ್ ಮ್ಯೂಸಿಯಂ ಕೋನಾರ್ಕ್

ಸೂರ್ಯದೇವಾಲಯದಿಂದ 2 ಕಿಮೀ ದೂರದಲ್ಲಿರುವ ಈ ಪುಟ್ಟ ಮ್ಯೂಸಿಯಂ ನಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಕುತೂಹಲಕಾರಿ ವಸ್ತುಗಳಿವೆ. ಇಲ್ಲಿ ಪ್ರಾಚೀನ ಕಲ್ಲಿನ ಕಲಾಕೃತಿಗಳು , ದೇವಾಲಯದ ತುಣುಕುಗಳು ಮತ್ತು ಸುತ್ತಮುತ್ತಲಿನ ಸ್ಥಳಗಳಿಂದ ದೊರೆತ ವಸ್ತುಗಳಿಂದ ತಯಾರಿಸಿದ ಪ್ರತಿಮೆಗಳು ಕಂಡುಬರುತ್ತದೆ.

Kuruma Village Konark

ಕುರುಮಾ ಗ್ರಾಮ

ಚೌರಾಸಿ ದೇವಸ್ಥಾನದಿಂದ ಕೋನಾರ್ಕ್ ನ ಪಶ್ಚಿಮಕ್ಕೆ ಕೇವಲ 3 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಹಸಿರು ಭತ್ತದ ಗದ್ದೆಗಳು ಮತ್ತು ಗ್ರಾಮೀಣ ಪರಿಸರ ಕಂಡುಬರುತ್ತದೆ. ಇಲ್ಲಿ ಬೆನಿಗ್ನ್ ಭೌಮಕರ ಆಳ್ವಿಕೆಯಲ್ಲಿ ನಿರ್ಮಿಸಲಾದ 8ನೇ ಶತಮಾನದ ಪ್ರಾಚೀನ ಬೌದ್ಧ ಸಾಂಸ್ಕೃತಿಕ ಕೇಂದ್ರದ ಅವಶೇಷಗಳು ಕಂಡುಬರುತ್ತದೆ. ಈ ಅವಶೇಷಗಳ ಮೂಲಕ ಇಟ್ಟಿಗೆ ಸ್ತೂಪಗಳು, ನಿವಾಸಿ ವಿಹಾರಗಳು ಮತ್ತು ಅಲಂಕಾರಿಕ ಬಾಗಿಲು ಜಾಮ್ ಗಳಂತಹ ರಚನೆಗಳನ್ನು ಒಳಗೊಂಡಿರುವುದು ತಿಳಿಯುತ್ತದೆ.

ಕೋನಾರ್ಕ್ ಖಗೋಳ ವೀಕ್ಷಣಾಲಯ

ಇದು ಪುರಾತನ ಗ್ರಂಥಗಳು, ಕೋನಾರ್ಕ್ ದೇವಾಲಯದ ನಿರ್ಮಾತೃಗಳು ಕ್ರಿಯಾ ವಿಧಿಗಳನ್ನು ಯೋಜಿಸಲು, ಪ್ರಗತಿಯನ್ನು ನ್ಯಾವಿಗೆಟ್ ಮಾಡಲು ರಚಿಸಿರುವ ವಿಸ್ತಾರವಾದ ಖಗೋಳ ವಿದ್ಯಮಾನಗಳನ್ನು ದಾಖಲಿಸುತ್ತದೆ. ಇಲ್ಲಿ ಇಂದಿಗೂ ಖಗೋಳಶಾಸ್ತ್ರಜ್ಞರನ್ನು ಆಕರ್ಷಿಸುವಂತಹ ಕಾಸ್ಮಿಕ್ ಮಾರ್ಗಗಳು ಮತ್ತು ಗ್ರಹಗಳ ಸ್ಥಾನಗಳನ್ನು ಅರ್ಥೈಸಲು ಪುರೋಹಿತರು ಬಳಸುವ ಸನ್ಡಿಯಲ್ ಗಳು, ಸಮಭಾಜಕ ಉಂಗುರುಗಳು ಮತ್ತು ಕಮಾನಿನ ಮೆರಿಡಿಯನ್ ಗಳಂತಹ ಕಲ್ಲಿನ ಉಪಹರಣಗಳಿವೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಮೆರೈನ್ ಡ್ರೈವ್ ಇಕೋ ರಿಟ್ರೀಟ್ ಕೋನಾರ್ಕ್

ಕೋನಾರ್ಕ್ ಮೆರೈನ್ ಡ್ರೈವ್ ಉದ್ದಕ್ಕೂ ಬೀಚ್ ವಿಲೇಜ್ ಪ್ರಕೃತಿ ರೆಸಾರ್ಟ್ ಅನ್ನು ಪರಿಶೀಲಿಸುವ ಮೂಲಕ ಬಂಗಾಳಕೊಲ್ಲಿಯ ನೀಲಿ ನೀರು ಮತ್ತು ಕ್ಯಾಸುರಿನಾ ಮರಗಳೊಳಗೆ ಸುಸ್ಥಿರ ಐಷರಾಮಿಗಳನ್ನು ನೀವು ಆರಿಸಬಹುದು. ಪರಿಸರ ಸ್ನೇಹಿ ಕುಟೀರಗಳು, ಬಿದಿರಿನ ಗುಡಿಸಲುಗಳು ಅಥವಾ ಟೆಂಟ್ ಹೌಸ್ ಗಳಲ್ಲಿ ನೀವು ಪಕ್ಷಿ ವೀಕ್ಷಣೆಯನ್ನು ಮಾಡಬಹುದು.

Continue Reading

ಪ್ರವಾಸ

Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಆಧ್ಯಾತ್ಮದಲ್ಲಿ ಆಸಕ್ತಿ ಇರುವ, ದೇವಸ್ಥಾನಗಳ ಭೇಟಿಯಿಂದ ಶಾಂತಿ ನೆಮ್ಮದಿ ಕಂಡುಕೊಳ್ಳುವ ಯಾರೇ ಆದರೂ, ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ಬೃಹತ್‌ ದೇವಸ್ಥಾನಗಳು, ಪುರಾತನ ಐತಿಹಾಸಿಕ ದೇವಸ್ಥಾನಗಳ ದರ್ಶನ ಮಾಡಿಕೊಂಡು ಪುನೀತರಾಗುವ ಇಚ್ಛೆ ಇರುವ ಮಂದಿ ತಮಿಳುನಾಡಿನ ಈ ಪ್ರಮುಖ ದೇವಸ್ಥಾನಗಳಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ (Best Tourist Places In Tamilnadu) ಹೋಗಿ ಬರಬೇಕು.

VISTARANEWS.COM


on

Best Tourist Places In Tamilnadu
Koo

ತಮಿಳುನಾಡು ಎಂದ ತಕ್ಷಣ ನೆನಪಾಗುವುದು ಸುಂದರ ದೇವಸ್ಥಾನಗಳು, ಈ ದೇವಸ್ಥಾನಗಳಲ್ಲಿ ಸಿಗುವ ರುಚಿಯಾದ ಪ್ರಸಾದ, ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಹೊಟ್ಟೆ ತುಂಬಿಸುವ ಸೊಗಸಾದ ಊಟ. ಆಧ್ಯಾತ್ಮದಲ್ಲಿ ಆಸಕ್ತಿ ಇರುವ, ದೇವಸ್ಥಾನಗಳ ಭೇಟಿಯಿಂದ ಶಾಂತಿ ನೆಮ್ಮದಿ ಕಂಡುಕೊಳ್ಳುವ ಯಾರೇ ಆದರೂ, ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ಬೃಹತ್‌ ದೇವಸ್ಥಾನಗಳು, ಪುರಾತನ ಐತಿಹಾಸಿಕ ದೇವಸ್ಥಾನಗಳ ದರ್ಶನ ಮಾಡಿಕೊಂಡು ಪುನೀತರಾಗುವ ಇಚ್ಛೆ ಇರುವ ಮಂದಿ ತಮಿಳುನಾಡಿನ ಈ ಪ್ರಮುಖ ದೇವಸ್ಥಾನಗಳಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ (Best Tourist Places In Tamilnadu) ಹೋಗಿ ಬರಬೇಕು.

Meenakshi Temple, Madurai

ಮೀನಾಕ್ಷಿ ದೇವಸ್ಥಾನ, ಮಧುರೈ

ತಮಿಳುನಾಡಿನ ಅತ್ಯಂತ ಪ್ರಸಿದ್ಧವಾದ ದೇವಸ್ಥಾನಗಳ ಪೈಕಿ ಮಧುರೈನ ಮೀನಾಕ್ಷಿ ದೇವಾಲಯ ಪ್ರಮುಖವಾದುದು. ಇಲ್ಲಿ ಶಿವನನ್ನು ಸುಂದರೇಶ್ವರನ ಹೆಸರಿನಲ್ಲೂ, ಪಾರ್ವತಿಯನ್ನು ಮೀನಾಕ್ಷಿಯ ಹೆಸರಿನಲ್ಲೂ ಪೂಜಿಸಲಾಗುತ್ತದೆ. ಬೃಹತ್‌ ದೇವಾಲಯ ಸಮುಚ್ಛಯವಾಗಿರುವ ಇದಕ್ಕೆ ಒಮ್ಮೆ ಒಳಗೆ ಹೊಕ್ಕರೆ, ಹೊರಬರಲು ಕೆಲವು ಗಂಟೆಗಳು ಬೇಕು. ಸುಮಾರು 16ನೇ ಶತಮಾನದ್ದೆಂದು ಹೇಳಲಾಗುವ ಈ ದೇವಾಲಯಕ್ಕೆ ನಿತ್ಯವೂ ಲಕ್ಷಗಟ್ಟಲೆ ಭಕ್ತರು ದೂರದೂರುಗಳಿಂದ ಬಂದು ದರ್ಶನ ಪಡೆಯುತ್ತಾರೆ. ಮಧುರೈಗೆ ಹೋದರೆ, ಇಲ್ಲಿನ ಸಾಂಪ್ರದಾಯಿಕ ಊಟ, ಜಿಗರ್‌ಥಂಡಾ, ದೋಸೆ, ಇಡ್ಲಿಗಳ ರುಚಿಯನ್ನು ಸವಿಯಲು ಮರೆಯಬೇಡಿ.

Kumari Amman Kovil, Kanyakumari

ಕುಮಾರಿ ಅಮ್ಮನ್‌ ಕೋಯಿಲ್‌, ಕನ್ಯಾಕುಮಾರಿ

51 ಶಕ್ತಿ ಪೀಠಗಳಲ್ಲಿ ಒಂದಾದ ಈ ದೇವಸ್ಥಾನದಲ್ಲಿ ದೇವಿಯು ಬಾಣಾಸುರನ ವಧೆಗಾಗಿ ಅವತರಿಸಿದ ಪುಟ್ಟ ಹುಡುಗಿಯ ರೂಪವನ್ನೇ ಇಲ್ಲಿ ಪೂಜಿಸಲಾಗುತ್ತದೆ. ಬಹಳ ಪ್ರಸಿದ್ಧವಾದ ಈ ದೇವಾಲಯವನ್ನು ನೋಡಲು ಹೋದರೆ, ಭಾರತದ ಕೆಳತುದಿಯಾದ ಕನ್ಯಾಕುಮಾರಿಯ ಹಲವು ಜಾಗಗಳಲ್ಲಿ ಸುತ್ತಾಡಿ ಬರಬಹುದು.

Nataraja Temple, Chidambaram

ನಟರಾಜ ದೇವಾಲಯ, ಚಿದಂಬರಂ

ಚಿದಂಬರಂನ ನಟರಾಜ ದೇವಸ್ಥಾನ ಕೂಡಾ ತಮಿಳುನಾಡಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಇಲ್ಲಿ ಗೋವಿಂದರಾಜ ಪೆರುಮಾಳ್‌ ಹಾಗೂ ನಟರಾಜನಾದ ಶಿವ ಇಬ್ಬರನ್ನೂ ಪ್ರಮುಖವಾಗಿ ಪೂಜಿಸಲಾಗುತ್ತದೆ. ಹಾಗಾಗಿ, ಶೈವ ಪಂಥ ಹಾಗೂ ವೈಷ್ಣವ ಪಂಥವನ್ನು ಅನುಸರಿಸುವ ಮಂದಿ ಇಲ್ಲಿಗೆ ದರ್ಶನ ನೀಡುತ್ತಾರೆ. ಹಾಗಾಗಿ ಎರಡೂ ಪಂಥದ ಮಂದಿಯನ್ನು ಸೆಳೆಯುವ ಅಪರೂಪದ ದೇವಸ್ಥಾನವಿದು.

Arunachaleshwar Temple, Thiruvannamalai

ಅರುಣಾಚಲೇಶ್ವರ ದೇವಸ್ಥಾನ, ತಿರುವಣ್ಣಾಮಲೈ

ಒಂಭತ್ತನೇ ಶತಮಾನದಲ್ಲಿ ಚೋಳರು ಕಟ್ಟಿಸಿದರೆನ್ನಲಾಗುವ ಈ ದೇವಸ್ಥಾನ ಅತ್ಯಂತ ಪ್ರಸಿದ್ಧವಾದ ಶಿವ ದೇವಸ್ಥಾನ. ಅಣ್ಣಾಮಲೈ ಬೆಟ್ಟದ ಬುಡದಲ್ಲಿರುವ ಈ ದೇವಾಲಯದ ಪ್ರಸಿದ್ಧ ಆಚರಣೆಗಳ ಪೈಕಿ ಗಿರಿವಲಂ ಕೂಡಾ ಒಂದು. ಸಾವಿರಾರು ಭಕ್ತರು ಪ್ರತಿ ಹುಣ್ಣಿಮೆಯ ದಿನ ಅಣ್ಣಾಮಲೈ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ರಾತ್ರಿಯಿಡೀ ಪ್ರದಕ್ಷಿಣೆ ಬಂದು ಅರುಣಾಚಲನ ದರ್ಶನ ಮಾಡುತ್ತಾರೆ.

ರಾಮನಾಥಸ್ವಾಮಿ ದೇವಸ್ಥಾನ, ರಾಮೇಶ್ವರಂ

ರಾಮೇಶ್ವರಂನಲ್ಲಿರುವ ಈ ಶಿವನ ದೇವಾಲಯ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಸಮುದ್ರ ತೀರದಲ್ಲಿರುವ ಈ ದೇವಸ್ಥಾನದ ಲಿಂಗವನ್ನು ಸ್ವತಃ ಶ್ರೀರಾಮನೇ ಸೀತೆಯ ಹುಡುಕಾಟದಲ್ಲಿ ಇಲ್ಲಿಗೆ ಬಂದಾಗ ಪ್ರತಿಷ್ಠಾತಿಸಿ ಪೂಜಿಸಿದ ಎಂಬ ಸ್ಥಳಪುರಾಣವಿದೆ. 12ನೇ ಶತಮಾನದಲ್ಲಿ ಪಾಂಡ್ಯರಾಜರು ಈ ದೇವಾಲಯವನ್ನು ವಿಸ್ತರಿಸಿ ಪುನರುಜ್ಜೀವನಗೊಳಿಸಿದರು ಎಂದು ಇತಿಹಾಸ ಹೇಳುತ್ತದೆ.

Sri Ranganathaswamy Temple, Srirangam, Tiruchirappalli

ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಂ, ತಿರುಚಿರಾಪಳ್ಳಿ

ತ್ರಿಚಿ ಅಥವಾ ತಿರುಚಿರಾಪಳ್ಳಿಯ ರಂಗನಾಥ ಸ್ವಾಮಿ ದೇವಾಲಯ ಈಗಲೂ ಪೂಜೆ ನಡೆಯುವ ದೇವಸ್ಥಾನಗಳ ಪೈಕಿ ಅತ್ಯಂತ ವಿಸ್ತಾರವಾದ ದೇವಾಲಯ. ವೈಷ್ಣವ ಪಂಥದ ಮಂದಿಯ ಪ್ರಮುಖ ದೇವಾಲಯವಾದ ಇಲ್ಲಿ ಶ್ರೀಹರಿಯು ಗರ್ಭಗುಡಿಯಲ್ಲಿ ಶೇಷಶಯನದ ರೀತಿಯಲ್ಲಿ ಪವಡಿಸಿರುವುದು ವಿಶೇಷ.

Brihadeeswara Temple, Thanjavur

ಬೃಹದೀಶ್ವರ ದೇವಸ್ಥಾನ, ತಂಜಾವೂರು

11ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ಕಟ್ಟಲಾದ ಈ ದೇವಸ್ಥಾನ ಭಾರತದ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು. ನಿತ್ಯವೂ ಸಾವಿರಾರು ಭಕ್ತರು ಭೇಟಿಕೊಡುವ ಈ ದೇವಸ್ಥಾನ. ಇದು ತನ್ನ ಅತ್ಯಪೂರ್ವ ವಾಸ್ತುಶಿಲ್ಪ, ಕೆತ್ತನೆಗಳಿಂದಷ್ಟೇ ಅಲ್ಲ, ತನ್ನ ಹಲವು ವಿಸ್ಮಯಗಳಿಂದಲೂ ಬಲು ಪ್ರಸಿದ್ಧಿ. ಅದಕ್ಕಾಗಿಯೇ ನಿತ್ಯವೂ ಇಲ್ಲಿ ಭಕ್ತರಷ್ಟೇ ಅಲ್ಲ, ದೇಶವಿದೇಶಗಳಿಂದ ಪ್ರವಾಸಿಗರೂ ಅಚ್ಚರಿಯಿಂದ ಭೇಟಿ ನೀಡುತ್ತಾರೆ

Kapaleeswara Temple, Mylapore, Chennai

ಕಪಾಲೀಶ್ವರ ದೇವಸ್ಥಾನ, ಮೈಲಾಪುರ, ಚೆನ್ನೈ

ಪಲ್ಲವರ ಕಾಲದಲ್ಲಿ ಏಳನೇ ಶತಮಾನದಲ್ಲಿ ಕಟ್ಟಲಾದ ಈ ದೇವಸ್ಥಾನ, ಚೆನ್ನೈನ ಪ್ರಸಿದ್ಧ ದೇವಸ್ಥಾನಗಳ ಪೈಕಿ ಒಂದು. ಶಿವನನ್ನು ಇಲ್ಲಿ ಕಪಾಲೀಶ್ವರನ ಹೆಸರಿನಲ್ಲಿ ಪೂಜಿಸುತ್ತಾರೆ. ಚೆನ್ನೈಯಲ್ಲೇ ಇರುವ ಇದಕ್ಕೆ ನಿತ್ಯವೂ ಸಾವಿರಾರು ಭಕ್ತರು ನೆರೆಯುತ್ತಾರೆ.

ಇದನ್ನೂ ಓದಿ: South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

Continue Reading
Advertisement
prajwal revanna case mattress
ಪ್ರಮುಖ ಸುದ್ದಿ2 mins ago

Prajwal Revanna Case: ಪ್ರಜ್ವಲ್‌ ಮನೆಯಿಂದ ಹಾಸಿಗೆ, ಹೊದಿಕೆ ಕೊಂಡೊಯ್ದ ಎಸ್‌ಐಟಿ; ಏನ್‌ ಸಿಗ್ತು?

AC Side Effects
ಆರೋಗ್ಯ45 mins ago

AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

karnataka weather forecast
ಮಳೆ1 hour ago

Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Rishab Pant
ಪ್ರಮುಖ ಸುದ್ದಿ2 hours ago

Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

Wildlife Sanctuaries
ಪರಿಸರ2 hours ago

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

T20 World Cup
ಕ್ರೀಡೆ2 hours ago

T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

namaz on road
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ನಡುರಸ್ತೆಯಲ್ಲೇಕೆ ನಮಾಜ್‌ ಮಾಡಬೇಕು?

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಜಂಟಿ ಹೂಡಿಕೆ ವ್ಯವಹಾರದಿಂದ ದೂರವಿರಿ

Prajwal Revanna Case
ಪ್ರಮುಖ ಸುದ್ದಿ9 hours ago

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

chakravarthy sulibele
ಕರ್ನಾಟಕ9 hours ago

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ13 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು21 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌