ಭಾರತದ ಈ 7 ಸಂಗತಿ ಕಂಡರೆ ಪ್ರವಾಸಿಗರಿಗೆ ಮೆಚ್ಚು - Vistara News

ಪ್ರವಾಸ

ಭಾರತದ ಈ 7 ಸಂಗತಿ ಕಂಡರೆ ಪ್ರವಾಸಿಗರಿಗೆ ಮೆಚ್ಚು

ಭಾರತದಲ್ಲಿ ಅವರು ಇಷ್ಟಪಡುವುದು ಏನು? ಯಾಕೆ ಅವರಿಗೆ ಭಾರತದ ಬಗ್ಗೆ ಅಭಿಮಾನ? ಅವರು ಭಾರತಕ್ಕೆ ಪ್ರವಾಸ ಮಾಡಿದಾಗ ಅವರಿಗೆ ಸಮಾಧಾನ ನೀಡುವ ಸಂಗತಿಗಳಾವವು? ತಿಳಿಯಲು ಇದನ್ನು ಓದಿ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿದೇಶಿಗರು ಭಾರತಕ್ಕೆ ಆಗಾಗ ಪ್ರವಾಸಕ್ಕೆ ಬರುತ್ತಾರೆ. ಕೆಲವರು ತಿಂಗಳುಗಟ್ಟಲೇ ಭಾರತದಲ್ಲಿಯೇ ಉಳಿಯುತ್ತಾರೆ. ಅಂತಹ ಅನೇಕ ವಿದೇಶಿಗರಿಗೆ ಭಾರತದ ಬಗ್ಗೆ ವಿಶೇಷ ಅಭಿಮಾನವಿದೆ. ಅವರು ಭಾರತದಲ್ಲಿ ಏನು ಇಷ್ಟಪಡುತ್ತಾರೆ? ಯಾಕೆ ಅವರಿಗೆ ಭಾರತದ ಬಗ್ಗೆ ಅಭಿಮಾನ? ಅವರು ಭಾರತಕ್ಕೆ ಪ್ರವಾಸ ಮಾಡಿದಾಗ ಅವರಿಗೆ ಸಮಾಧಾನ ನೀಡುವ ಸಂಗತಿಗಳಾವುವು?

ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ:

ಭಾರತದಲ್ಲಿ ಅನೇಕ ಪ್ರವಾಸ ತಾಣಗಳಿವೆ. ವಿಶ್ವದಾದ್ಯಂತ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಶಕ್ತಿ ಈ ದೇಶಕ್ಕಿದೆ. ಇಲ್ಲಿನ ಶ್ರೀಮಂತ ಪರಂಪರೆ, ವೈವಿಧ್ಯ ಸಂಸ್ಕೃತಿ ಹಾಗೂ ಅವಿಸ್ಮರಣೀಯ ಕಟ್ಟಡಗಳು ವೀದೆಶಿಗರನ್ನು ಆಕರ್ಷಿಸುತ್ತದೆ. ಭಾರತವನ್ನು ʼಸೋನೆ ಕಿ ಚಿಡಿಯಾʼ ಎಂದು ಹೇಳಲಾಗುತ್ತದೆ. ಅಂದರೆ ಭಾರತವು ʼಬಂಗಾರದ ಪಕ್ಷಿʼ ಎಂದು. ಇಲ್ಲಿರುವ ಸಾಂಪ್ರದಾಯಿಕ ಶ್ರೀಮಂತಿಕೆಯೇ ಅದಕ್ಕೆ ಕಾರಣ.

ವಿದೇಶಿಗರು ಭಾರತದಲ್ಲಿ ಏನು ಪಡೆಯುತ್ತಾರೆ?

1. ಅಚ್ಚರಿ ಮೂಡಿಸುವ ವೈವಿಧ್ಯ

ಭಾರತದಲ್ಲಿ ವೈವಿಧ್ಯಮಯವಾದ ಸಂಸ್ಕೃತಿ, ಸಂಪ್ರದಾಯಗಳಿವೆ. ಅದು ಇಲ್ಲಿಯ ವಿಶೇಷತೆಗಳಲ್ಲಿ ಒಂದು. ವಿದೇಶಿ ಪ್ರವಾಸಿಗರು ಇಲ್ಲಿಗೆ ಬಂದಾಗ ವಿವಿಧ ಜನಾಂಗದ ಸಂಸ್ಕೃತಿ, ಸಂಪ್ರದಾಯಗಳನ್ನು ನೋಡಿ ಬೆರಗಾಗುತ್ತಾರೆ. ಬುಡಕಟ್ಟು ಜನಾಂಗ ಪ್ರಕೃತಿಯನ್ನು ಪೂಜಿಸುವ ಬಗೆ, ವಿಶೇಷ ಆಚರಣೆಗಳನ್ನು ನೋಡಿ ಆನಂದಿಸುತ್ತಾರೆ. ಭಾರತವು ಒಂದು ದೊಡ್ಡ ದೇಶ. ಅಳೆತಯಲ್ಲೂ ಹೌದು ಹಾಗೂ ಇಲ್ಲಿನ ಸಂಸಕೃತಿಯಲ್ಲೂ ಹೌದು. ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಆಚರಣೆಗಳಿವೆ, ವಿಶಿಷ್ಟ ಪದ್ಧತಿಗಳಿವೆ. ಎಲ್ಲವನ್ನೂ ಒಂದೇ ಟ್ರಿಪ್‌ನಲ್ಲಿ ಪೂರ್ಣವಾಗಿ ಅನುಭವಿಸಲು ಕಷ್ಟ. ಹಾಗಾಗಿ ವಿದೇಶಿ ಪ್ರವಾಸಿಗರು ಮತ್ತೆ ಮತ್ತೆ ಭಾರತಕ್ಕೆ ಭೇಟಿ ನೀಡುತ್ತಾರೆ.

2. ಯೋಗ ಹಾಗೂ ಅಧ್ಯಾತ್ಮ ವಿಚಾರಗಳ ಜನ್ಮಸ್ಥಾನ

ಭಾರತದ ಪ್ರಕೃತಿ ಸೌಂದರ್ಯ ಕಣ್ಣಿಗೆ ಎಷ್ಟು ಹಿತವನ್ನು ನೀಡುತ್ತದೆ! ಕೆಲವರು ಇಲ್ಲಿಯ ಅವಿಸ್ಮರಣೀಯ ಸೌಂದರ್ಯವನ್ನು ಕಂಡು ಮನತುಂಬಿಕೊಳ್ಳಲು ಬರುತ್ತಾರೆ. ಹಾಗೂ ಅನೇಕರು ಭಾರತದಲ್ಲಿ ಶಾಂತಿ, ನೆಮ್ಮದಿಯನ್ನು ಹುಡುಕಿಕೊಂಡು ಬರುತ್ತಾರೆ. ಅದಕ್ಕೆ ಮುಖ್ಯ ಕಾರಣ; ಭಾರತದ ಮಣ್ಣಿನಲ್ಲಿರುವ ಆಧ್ಯಾತ್ಮಿಕ ಗುಣಗಳು. ಯೋಗ, ಅಧ್ಯಾತ್ಮ ಹಾಗೂ ಹಲವು ವೈಚಾರಿಕ ತತ್ವಗಳಿಗೆ ಜನ್ಮಸ್ಥಾನ ಆಗಿರುವ ದೇಶದಲ್ಲಿ ನೆಮ್ಮದಿ ಸಿಗುತ್ತದೆ ಎಂದು ಪ್ರವಾಸಿಗರು ನಂಬಿದ್ದಾರೆ. ಉತ್ತರಾಖಂಡದ ರಿಷಿಕೇಶ ವಿಶ್ವದಲ್ಲಿ ʼಯೋಗದ ರಾಜಧಾನಿʼ ಎಂದೇ ಹೆಸರಾಗಿದೆ. ಭಾರತದ ಆಧ್ಯಾತ್ಮಿಕ ಗುರುಗಳು ಮಾಡುವ ಬೊಧನೆಗಳನ್ನು ಕೇಳುವುದಕ್ಕಾಗಿ ಅನೇಕರು ಬರುತ್ತಾರೆ. ಗಂಗಾತೀರದಲ್ಲಿ ಧ್ಯಾನಿಸಿ ಮನಃಶಾಂತಿ ಪಡೆಯಲು ಬರುತ್ತಾರೆ.

3. ಮನಸೆಳೆಯುವ ವಾಸ್ತುಶಿಲ್ಪ

ಭಾರತದಲ್ಲಿ ಸುಮಾರು 40ಕ್ಕೂ ಅಧಿಕ ಸ್ಥಳಗಳನ್ನು ವಿಶ್ವ ಪಾರಂಪರಿಕ ತಾಣವಾಗಿ UNESCO ಪರಿಗಣಿಸಿದೆ. ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್‌, ಶ್ರೀಮಂತಿಕೆಯಿಂದ ಮೆರೆದ ಕುರುಹುಗಳಿರುವ ಹಂಪಿ, ಎಲ್ಲವೂ ಅಚ್ಚರಿ ಮೂಡಿಸುವಂತಹ ವಾಸ್ತಶಿಲ್ಪವನ್ನು ಹೊಂದಿದೆ. ಎಲ್ಲಿ ದೃಷ್ಟಿ ಹಾಯಿಸಿದರೂ ಅಲ್ಲೋಂದು ದೊಡ್ಡ ಕೋಟೆ, ವಿಶೇಷ ದೇವಸ್ಥಾನಗಳು, ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಕಥೆಗಳನ್ನು ಹೇಳುವ ಕಟ್ಟಡಗಳು ಕಾಣುತ್ತವೆ. ಇವೆಲ್ಲವೂ ಭಾರತದ ಪುರಾತನ ವಾಸ್ತುಶಿಲ್ಪದ ಮಹತ್ವವನ್ನು ಸಾರುತ್ತದೆ.

4. ಮೈ-ಮನ ತಲ್ಲಣಗೊಳಿಸುವ ಪ್ರಕೃತಿ

ಭಾರತದಲ್ಲಿ ಪ್ರಕೃತಿಯ ಸೊಬಗು ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತದೆ. ಚಾರಣಕ್ಕೆ ಹೋಗಲು ಹಿಮಾಲಯದಂತಹ ಪರ್ವತ, ಸೂರ್ಯಾಸ್ತವನ್ನು ನೋಡುತ್ತಾ ಸಮಯ ಕಳೆಯಲು ಸಮುದ್ರತೀರ, ನದಿ, ಜಲಪಾತ, ಕಾಡು ಎಲ್ಲವೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರಿಗೆ ತಮ್ಮಿಷ್ಟದ ತಾಣಕ್ಕೆ ಹೋಗಲು ಅನೇಕ ಅವಕಾಶಗಳು ಇಲ್ಲಿ ತೆರೆದಿದೆ.

5. ಪ್ರೀತಿಯಿಂದ ಸ್ವಾಗತಿಸುವ ಜನರು

ಭಾರತದ ಜನರು ವಿಶಾಲ ಹೃದಯದವಂತರು. ಮನೆಗೆ ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿ ಉಪಚರಿಸುವ ಗುಣವನ್ನು ಹೊಂದಿರುವವರು. ಅದೇ ರೀತಿ, ಹೊರದೇಶದಿಂದ ಆಗಮಿಸಿದವರನ್ನೂ ಆದರದಿಂದ ಸ್ವಾಗತಿಸಿ, ಗೌರವದಿಂದ ಉಪಚರಿಸುತ್ತಾರೆ. ದೇಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹಗಳು ಕಾಣಬಹುದು ಆದರೆ ಸ್ಥಳೀಯರನ್ನು ಮಾತನಾಡಿಸಿ ಅವರ ಜೀವನಶೈಲಿಯನ್ನು ಗಮನಿಸಿದಾಗ ಸತ್ಯ ಅರಿವಾಗುತ್ತದೆ. ಭಾರತೀಯರ ಈ ಸ್ವಭಾವ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಆಕರ್ಷಿಸುತ್ತದೆ.

6. ಅತ್ಯಂತ ಅನನ್ಯ ವನ್ಯಜೀವಿಗಳ ತಾಣ

ಭಾರತ ದೇಶ ವಿಸ್ತಾರವಾದ ಹವಾಮಾನ ಪರಿಸ್ಥಿತಿ ಹೊಂದಿದೆ. ಹಿಮಾಲಯದಂತಹ ಶೀಥಲ ಶಿಖರ ಒಂದು ಕಡೆ ನಿಂತಿದೆ. ಮತ್ತೊಂದು ಕಡೆ ಸಮೃದ್ಧವಾದ ಕಾನನಗಳನ್ನು ಹೊಂದಿರುವ ಪಶ್ಚಿಮ ಘಟ್ಟ. ಹಾಗು ಇವುಗಳ ಜತೆಗೆ ಕರಾವಳಿಯ ಸುಂದರ ಸಮುದ್ರ. ಇಲ್ಲೆಲ್ಲಾ ಬಗೆಬಗೆಯ ವನ್ಯಜೀವಗಳನ್ನು ಕಾಣಬಹುದು. ಕೆಲವೊಂದು ವನ್ಯಜೀವಿಗಳು ವಿಶೇಷವಾಗಿ ಭಾರತದಲ್ಲಿ ಮಾತ್ರ ಕಾಣಬಹುದು. ವನ್ಯಜೀವಿಗಳನ್ನು ನೋಡಿ, ಅವಗಳ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಆಸಕ್ತರಿಗೆ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ.

ರುಚಿರುಚಿಯಾದ ಆಹಾರ
ಈ ದೇಶದ ಒಂದೊಂದು ರಾಜ್ಯದಲ್ಲಿ ವಿಭಿನ್ನ ಬಗೆಯ ಆಹರ ಸೀಗುತ್ತದೆ. ಪ್ರತಿಯೊಂದು ಪ್ರದೇಶದಲ್ಲೂ ಅಲ್ಲಿಯ ವಿಶೇಷ ಬಗೆಯ ಆಹಾರ ಸಿಗುತ್ತದೆ. ಎಲ್ಲವೂ ರುಚಿರುಚಿಯಾಗಿರುತ್ತದೆ. ಉತ್ತರ ಭಾರತದ ಪರೋಟ, ದಕ್ಷಿಣ ಭಾರತದ ದೋಸೆ ಎಲ್ಲವೂ ನೆನಪಿನಲ್ಲಿ ಉಳಿಯುವಂತಹ ರುಚಿ.

ಈ ಪ್ರಮುಖ ಕಾರಣಗಳಿಂದ ಭಾರತವು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅವರ ಜೀವನವನ್ನು ಉತ್ತಮ ಸ್ಥಿತಿಯಲ್ಲಿ ಬದಲಾಯಿಸುವಂತಹ ಅನುಭವ ಭಾರತದಲ್ಲಿ ಸಿಗುತ್ತದೆ ಎನ್ನುತ್ತಾರೆ ಪ್ರವಾಸಿಗರು.

ಇದನ್ನೂ ಓದಿ: ಸದ್ಗುರು Save Soil ಅಭಿಯಾನ: ಸರ್ಬಿಯಾದಿಂದ ಸಂದೇಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Delhi Tour: ದೆಹಲಿಗೆ ಪ್ರವಾಸಕ್ಕೆ ಹೋದಾಗ ಮಿಸ್ ಮಾಡದೇ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ!

Delhi Tour: ಮನಸ್ಸು ಕೂಡ ಆಗಾಗಾ ಬದಲಾವಣೆ ಕೇಳುತ್ತೆ. ಆಗ ತಡಮಾಡದೇ ನಿಮ್ಮದೊಂದು ಬ್ಯಾಗ್ ಗೆ ನಾಲ್ಕು ಜೊತೆ ಬಟ್ಟೆ ಹಾಕಿಕೊಂಡು ತಿರುಗಾಡಿ ಬಂದುಬಿಡಿ. ಅದರಿಂದ ಸಿಗುವ ಜೀವನೋತ್ಸವವನ್ನು ವರ್ಣಿಸಲು ಪದಗಳೇ ಸಿಗದು! ಇಲ್ಲಿ ದೆಹಲಿಯ ಕಡೆ ನೀವು ಪ್ರವಾಸಕ್ಕೆ ಹೋದಾಗ ನೋಡಬಹುದಾದಂಥ ಸ್ಥಳಗಳ ಕುರಿತು ಮಾಹಿತಿ ಇದೆ. ಇದು ನಿಮಗೆ ದೆಹಲಿಯ ಬಗ್ಗೆ ತಿಳಿಯಲು ಸಾಧ್ಯವಾಗಬಹುದು.

VISTARANEWS.COM


on

Delhi Tour
Koo

ದೆಹಲಿ: ಪ್ರವಾಸವೆಂದರೆ ಯಾರಿಗೆ ಇಷ್ಟವಿರಲ್ಲ! ಕೆಲಸದ ಒತ್ತಡ, ಮನಸ್ಸಿಗೆ ಕಿರಿಕಿರಿ ಆದಾಗ ಒಂದೊಳ್ಳೇ ಪ್ರವಾಸ (Tour) ಮಾಡಿದರೆ ಅದರಿಂದ ಸಿಗುವ ಖುಷಿನೇ ಬೇರೆ. ಪ್ರವಾಸವೆಂದಾಕ್ಷಣ ವಿದೇಶಕ್ಕೆ ಹೋಗಬೇಕೆಂದೇನಿಲ್ಲ. ನಮ್ಮ ದೇಶದ ರಾಜಧಾನಿಯಾದ (Captial) ದೆಹಲಿಗೆ ಪ್ರವಾಸ (Delhi Tour) ನೀಡಿದರೆ ಅದ್ಭುತವಾದ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಕಿಕ್ಕಿರಿದ ಜನಸಂದಣಿ, ಜನರ ಜಂಜಾಟದ ಜೀವನವನ್ನು ನೋಡಿದರೆ ದೆಹಲಿಗೆ ಹೋಗುವುದೇ ಬೇಡ ಎಂದೆನಿಸುತ್ತದೆ. ಆದರೆ  ದೆಹಲಿ ಕೇವಲ ಗದ್ದಲದ ನಗರ ಮಾತ್ರವಲ್ಲ ಇಲ್ಲಿ ನೋಡಲು ಪ್ರಮುಖ ಐತಿಹಾಸಿಕ ಸ್ಥಳಗಳು, ಶಾಂತಿಯುತವಾದ ಗಿರಿಧಾಮಗಳಿವೆ.

ದೆಹಲಿಯ ಸುತ್ತಮುತ್ತ ನೀವು ನೋಡಬಹುದಾದಂತಹ ಬಹಳ ಅದ್ಭುತವಾದ ಸ್ಥಳಗಳಿವೆ. ಹಾಗಾಗಿ ಪ್ರವಾಸಕ್ಕೆ ಪ್ಲ್ಯಾನ್ ಮಾಡುತ್ತಿರುವವರು ಒಮ್ಮೆ ದೆಹಲಿಯ ಈ ಸ್ಥಳಗಳಿವೆ ಭೇಟಿ ನೀಡಿ. ಇದರಿಂದ  ನಿಮ್ಮ ಪ್ರವಾಸ ಅವಿಸ್ಮರಣೀಯವಾಗಿರುತ್ತದೆ.

Delhi Tour

ಆಗ್ರಾ

ದೆಹಲಿಯಿಂದ ಸ್ವಲ್ಪ ದೂರದಲ್ಲಿರುವ ಆಗ್ರಾದಲ್ಲಿ ಪ್ರೀತಿಯ ಸಾರಾವನ್ನೇ ಎತ್ತಿ ಹಿಡಿದಿರುವ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಇದೆ. ಈ ನಗರ ಮೊಘಲರ ವೈಭವಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಇದರ ಹೊರತಾಗಿ ಇಲ್ಲಿ ಆಗ್ರಾ ಕೋಟೆ, ಫತೇಪುರ್ ಸಿಕ್ರಿ ಮತ್ತು ಇತ್ಮಾದ್-ಉದ್-ದೌಲಾ ಸಮಾಧಿ ಮುಂತಾದ ನೀವು ಭೇಟಿ ನೀಡಬಹುದಾದ ಸ್ಥಳಗಳಿವೆ.

Delhi Tour

ಜೈಪುರ

ರಾಜಸ್ಥಾನ ರಾಜ್ಯದ ರಾಜಧಾನಿಯಾಗಿರುವ ಜೈಪುರವನ್ನು  ಪಿಂಕ್ ಸಿಟಿ ಎಂದು ಕರೆಯುತ್ತಾರೆ. ದೆಹಲಿಯಿಂದ ಇಲ್ಲಿಗೆ ಐದೂವರೆ ಗಂಟೆಗಳ ಪ್ರಯಾಣ. ರಾಜಮನೆತನಗಳು ಆಡಳಿತ ನಡೆಸಿರುವ ಈ ಸ್ಥಳದಲ್ಲಿ ಭವ್ಯವಾದ ಕೋಟೆಗಳು, ಅರಮನೆಗಳು ಮತ್ತು ವರ್ಣರಂಜಿತವಾದ ಮಾರುಕಟ್ಟೆಗಳಿವೆ. ಅಲ್ಲದೇ ಇಲ್ಲಿರುವ ಅಮೇರ್ ಕೋಟೆ, ಸಿಟಿ ಪ್ಯಾಲೇಸ್, ಹವಾ ಮಹಲ್, ಜಂತರ್  ಮಂತರ್ ಇತ್ಯಾದಿಗಳು ಈ ಸ್ಥಳಕ್ಕೆ ಸಂಬಂಧಿಸಿದ ಸುವರ್ಣ ಗತಕಾಲದ ಕಥೆಗಳನ್ನು ತಿಳಿಸುತ್ತದೆ.

Delhi Tour

ಹೃಷಿಕೇಶ

ಹಿಮಾಲಯದ ಹೆಬ್ಬಾಗಿಲು ಎಂದು ಕರೆಯುವ ಹೃಷಿಕೇಶ ಪ್ರಕೃತಿ ಪ್ರಿಯರಿಗೆ ಹಾಗೂ ಆಧ್ಯಾತ್ಮಕ ಚಿಂತಕರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಗಂಗಾ ನದಿ ಹರಿಯುವುದರಿಂದ ಈ ಸ್ಥಳ ಪೂಜ್ಯನೀಯ ಸ್ಥಳ ಎಂದೆನಿಸಿಕೊಂಡಿದೆ. ಇಲ್ಲಿ ಧ್ಯಾನಕ್ಕಾಗಿ ಬೀಟಲ್ಸ್ ಆಶ್ರಮಕ್ಕೆ ಭೇಟಿ ನೀಡಬಹುದು. ಹಾಗೇ ಅದ್ಭುತವಾದ ಅನುಭವವನ್ನು ಪಡೆಯಲು ಲಕ್ಷ್ಮಣ ಜುಲಾಗೆ ಭೇಟಿ ನೀಡಬಹುದು. ಹಾಗೇ ಸಂಜೆಯ ವೇಳೆ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಬಹುದು.

Delhi Tour

ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್

ಇದು ಒಂದು ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ಉತ್ತರಾಖಂಡ್ ರಾಜ್ಯದಲ್ಲಿದೆ. ದಿಲ್ಲಿಯಿಂದ ಇಲ್ಲಿಗೆ ಐದು ಗಂಟೆಗಳ ಪ್ರಯಾಣ. ಹಾಗಾಗಿ ವನ್ಯಜೀವಿ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಲೇಬಾರದು. ಇಲ್ಲಿ ಬಂಗಾಳ ಹುಲಿಗಳು ಸೇರಿದಂತೆ ವಿವಿಧ ಜಾತಿಯ ಪ್ರಾಣಿ ಹಾಗೂ ಪಕ್ಷಿಗಳನ್ನು ನೋಡಬಹುದು. ಇಲ್ಲಿ ರೋಮಾಂಚನಕಾರಿಯಾದ ಸಫಾರಿ ಮಾಡಬಹುದು.

Delhi Tour

ನೀಮ್ರಾನಾ ಕೋಟೆ

ನೀಮ್ರಾನಾ ಕೋಟೆ ಒಂದು ಆಕರ್ಷಕ ಸ್ಥಳವಾಗಿದೆ. ಇದು ದಿಲ್ಲಿ-ಜೈಪುರ ಹೆದ್ದಾರಿಯಲ್ಲಿದೆ. 15ನೇ ಶತಮಾನದ ಹಿಂದಿನ ಈ ಕೋಟೆಯನ್ನು ಪಾರಂಪರಿಕ  ಹೋಟೆಲ್ ಆಗಿ ಪುನರ್ ಸ್ಥಾಪಿಸಲಾಗಿದೆ. ಇದು ಪ್ರವಾಸಿಗರಿಗೆ ರಾಜಮನೆತನದವರ ಗತಕಾಲದ ಅನುಭವವನ್ನು ನೀಡುತ್ತದೆ. ಬಹಳ ವಿಸ್ತಾರವಾದ ಕೋಟೆಯ ಸಂಕೀರ್ಣ, ರಾಜನಿಗೆ ಭಕ್ಷ್ಯಗಳ ನೀಡುವಂತಹ ಡೈನಿಂಗ್ ಟೇಬಲ್ ಗಳನ್ನು ಇಲ್ಲಿ ನೋಡಬಹುದು.

Delhi Tour

ಮಥುರಾ ಮತ್ತು ವೃಂದಾವನ

ಭಗವಂತ ಕೃಷ್ಣನು ಇಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಇದನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಉತ್ತರ ಪ್ರದೇಶದಲ್ಲಿರುವ ಈ ಅವಳಿ ಸ್ಥಳಗಳು ಪುರಾಣ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಸಾರುತ್ತದೆ. ಮಥುರಾದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಬಹುದು ಮತ್ತು ವೃಂದಾವನದಲ್ಲಿ ರೋಮಾಂಚಕ ಸ್ಥಳಗಳು ಮತ್ತು ದೇವಾಲಯದ ಬೀದಿಗಳಲ್ಲಿ ಸುತ್ತಾಡಬಹುದು. ಹೋಳಿ ಸಮಯದಲ್ಲಿ ಇಲ್ಲಿ ಹೆಚ್ಚಿನ ಆಚರಣೆಗಳನ್ನು ನೋಡಬಹುದು.

ಇದನ್ನೂ ಓದಿ:Monsoon Tour: ಮಳೆಗಾಲದ ಪ್ರವಾಸಕ್ಕೆ ಸೂಕ್ತ ಬೆಂಗಳೂರು ಸಮೀಪದ ಈ 8 ಅದ್ಭುತ ಸ್ಥಳಗಳು

Delhi Tour

ಲ್ಯಾನ್ಸ್ ಡೌನ್

ಇದು ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿರುವ ಗಿರಿಧಾಮವಾಗಿದೆ. ಈ ಸ್ಥಳ ದಟ್ಟವಾದ ಓಕ್ ಕಾಡುಗಳಿಂದ ಸುತ್ತುವರಿದಿದೆ. ಇಲ್ಲಿ ಶಾಂತಿಯುತವಾದ ವಾತಾವರಣವನ್ನು ಕಾಣಬಹುದು. ಇಲ್ಲಿ ಐತಿಹಾಸಿಕ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಬಹುದು, ಹಿಮಾಲಯ ಶಿಖರಗಳ ವಿಹಂಗಮ ನೋಟವನ್ನು ಸವಿಯಬಹುದು. ಪ್ರಕೃತಿ ಪ್ರಿಯರು, ಸಾಹಸಮಯಿಗಳು ಹಾಗೂ ಏಕಾಂತವನ್ನು ಬಯಸುವವರು ಇಲ್ಲಿಗೆ ಭೇಟಿ ನೀಡಬಹುದು.

Continue Reading

ದೇಶ

Monsoon Tour: ಮಳೆಗಾಲದ ಪ್ರವಾಸಕ್ಕೆ ಸೂಕ್ತ ಬೆಂಗಳೂರು ಸಮೀಪದ ಈ 8 ಅದ್ಭುತ ಸ್ಥಳಗಳು

ಮಳೆಯ ಸೌಂದರ್ಯವನ್ನು ಅನುಭವಿಸಲು ಮಲೆನಾಡಿಗೆ ಹೋಗಬೇಕಿಲ್ಲ. ಯಾಕೆಂದರೆ ಬೆಂಗಳೂರಿನ ಸುತ್ತಮುತ್ತಲಿರುವ ಕೆಲವು ತಾಣಗಳು ಮಳೆಗಾಲದ ಅದ್ಭುತ ನೋಟವನ್ನು ತೆರೆದಿಡುತ್ತದೆ. ಈ ಬಾರಿ ಮಳೆಗಾಲದಲ್ಲಿ ಮನೆಯಲ್ಲೇ ಸುಮ್ಮನೆ ಹೊದಿಕೆ ಹೊದ್ದು ಮಲಗುವ ಬದಲು ಬೆಂಗಳೂರು ಸುತ್ತಮುತ್ತಲೂ ಇರುವ ಸುಂದರ ತಾಣಗಳಿಗೆ (Monsoon Tour) ಭೇಟಿ ನೀಡೋಣ. ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳೋಣ.

VISTARANEWS.COM


on

By

Monsoon Tour
Koo

ಸುರಿಯುತ್ತಿರುವ ಮಳೆಯ ನಡುವೆ ಹೊರಗೆ ಹೋಗುವುದು ಬೇಜಾರು. ಆದರೆ ಪ್ರಕೃತಿಯ ಸೌಂದರ್ಯ ಎದ್ದು ಕಾಣುವುದೇ ಮಳೆಗಾಲದಲ್ಲಿ (Monsoon Tour). ಈ ಸಂದರ್ಭದಲ್ಲಿ ದೂರ ಹೋಗುವುದು ಅಸಾಧ್ಯವಾದರೂ ಹತ್ತಿರ ಇರುವ ಕೆಲವು ತಾಣಗಳಲ್ಲಿ (tourist place) ಸುತ್ತಾಡಬಹುದು. ಮಳೆಯ ನಡುವೆ ಸುತ್ತಮುತ್ತಲಿನ ಪರಿಸರದಲ್ಲಿ (nature) ಕಾಣುವ ಹೊಸತನದ ಚಿಗುರನ್ನು ನೋಡಿ ಆನಂದಿಸಬಹುದು.

ಮಳೆಯ ಸೌಂದರ್ಯವನ್ನು ಅನುಭವಿಸಲು ಮಲೆನಾಡಿಗೆ (malenadu) ಹೋಗಬೇಕಿಲ್ಲ. ಯಾಕೆಂದರೆ ಬೆಂಗಳೂರಿನ (bengaluru) ಸುತ್ತಮುತ್ತಲಿರುವ ಕೆಲವು ತಾಣಗಳು ಮಳೆಗಾಲದ ಅದ್ಭುತ ನೋಟವನ್ನು ತೆರೆದಿಡುತ್ತದೆ. ಪ್ರಾಚೀನ ಭಾರತೀಯ ದೇವಾಲಯಗಳು ದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಪರಂಪರೆಯನ್ನು ಪ್ರದರ್ಶಿಸುತ್ತವೆ. ಈ ಪವಿತ್ರ ತಾಣಗಳು ಕೇವಲ ಪೂಜಾ ಸ್ಥಳಗಳಲ್ಲ. ಇತಿಹಾಸ, ಕಲೆ ಮತ್ತು ಆಧ್ಯಾತ್ಮಿಕತೆಯ ಭಂಡಾರಗಳಾಗಿವೆ. ಇವುಗಳಲ್ಲಿ ಹಲವು ದೇವಾಲಯ ನಮ್ಮ ಬೆಂಗಳೂರಿನ ಸುತ್ತಮುತ್ತಲಿದೆ. ಈ ಬಾರಿ ಮಳೆಗಾಲದಲ್ಲಿ ಈ ಎಂಟು ದೇವಾಲಯಗಳಲ್ಲಿ ಹೆಜ್ಜೆ ಹಾಕಿ ಮಳೆಗಾಲದ ನೆನಪನ್ನು ಬೆಚ್ಚಗೆ ಮನದಲ್ಲಿ ತುಂಬಿ ಇಡೋಣ.


1. ಚೆನ್ನಕೇಶವ ದೇವಸ್ಥಾನ

ಹಾಸನ ಜಿಲ್ಲೆಯಲ್ಲಿರುವ 12ನೇ ಶತಮಾನದ ಬೇಲೂರಿನ ಚೆನ್ನಕೇಶವ ದೇವಾಲಯವು ತನ್ನ ಸಂಕೀರ್ಣವಾದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ. ಇದು ನಕ್ಷತ್ರಾಕಾರದ ದೇವಾಲಯವಾಗಿದ್ದು, ಹಿಂದೂ ದೇವರಾದ ವಿಷ್ಣುವಿಗೆ ಸಮರ್ಪಿತವಾಗಿದೆ.


2. ಕೋಟಿಲಿಂಗೇಶ್ವರ ದೇವಸ್ಥಾನ

ಬೃಹತ್ ಶಿವಲಿಂಗಕ್ಕೆ ಹೆಸರುವಾಸಿಯಾಗಿರುವ ಈ ದೇವಾಲಯವು ವಿಶ್ವದ ಅತಿದೊಡ್ಡ ಲಿಂಗಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಕೋಟಿಲಿಂಗೇಶ್ವರ ದೇವಸ್ಥಾನ ಕೋಲಾರದಲ್ಲಿದೆ.


3. ಹೊಯ್ಸಳೇಶ್ವರ ದೇವಸ್ಥಾನ

12ನೇ ಶತಮಾನದ ಈ ದೇವಾಲಯವು ಹಾಸನ ಜಿಲ್ಲೆಯಲ್ಲಿದೆ ಮತ್ತು ಇದು ಶಿವನಿಗೆ ಸಮರ್ಪಿತವಾಗಿದೆ. ಹೊಯ್ಸಳ ವಾಸ್ತುಶೈಲಿಗೆ ಹೆಸರುವಾಸಿಯಾದ. ಇದು ಹಳೇಬೀಡುನಲ್ಲಿರುವ ಅತಿ ದೊಡ್ಡ ದೇವಾಲಯವಾಗಿದೆ.

Monsoon Tour


4. ಶ್ರೀ ರಂಗನಾಥಸ್ವಾಮಿ ದೇವಸ್ಥಾನ

ಮೈಸೂರಿನ ಸಮೀಪ ಶ್ರೀರಂಗಪಟ್ಟಣದಲ್ಲಿರುವ ಈ ದೇವಾಲಯವು ಕರ್ನಾಟಕದಲ್ಲಿಯೇ ಅತಿ ದೊಡ್ಡದಾಗಿದೆ ಮತ್ತು ವಿಷ್ಣುವಿನ ರೂಪವಾದ ರಂಗನಾಥನಿಗೆ ಸಮರ್ಪಿತವಾಗಿದೆ. ವೈಷ್ಣವ ಸಂಪ್ರದಾಯದ 108 ಅಭಿಮಾನ ಕ್ಷೇತ್ರಗಳಲ್ಲಿ ಒಂದಾಗಿ ಇದು ವಿಶೇಷ ಸ್ಥಾನವನ್ನು ಹೊಂದಿದೆ.


5. ಲೇಪಾಕ್ಷಿ ದೇವಸ್ಥಾನ

ಬೆಂಗಳೂರಿನಿಂದ ಇದು ತುಂಬ ದೂರ ಏನಿಲ್ಲ. ಆಂಧ್ರಪ್ರದೇಶದ ಅನಂತಪುರದಲ್ಲಿದೆ ಲೇಪಾಕ್ಷಿ ದೇವಾಲಯ. ಇಲ್ಲಿನ ಅದ್ಭುತ ವಿಜಯನಗರ ವಾಸ್ತುಶಿಲ್ಪ ಮತ್ತು ಪ್ರಸಿದ್ಧ ನೇತಾಡುವ ಸ್ತಂಭಗಳು ಪ್ರವಾಸಿಗರಲ್ಲಿ ಬೆರಗು ಮೂಡಿಸುತ್ತದೆ. 16 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯದ ಸಂಕೀರ್ಣ ಕೆತ್ತನೆಗಳು ಮತ್ತು ವರ್ಣಚಿತ್ರಗಳು ನಯನ ಮನೋಹರವಾಗಿದೆ.


6. ಭೋಗ ನಂದೀಶ್ವರ ದೇವಸ್ಥಾನ

ನಂದಿ ಬೆಟ್ಟದ ತಪ್ಪಲಿನಲ್ಲಿರುವ ಈ ದೇವಾಲಯದ ಸಂಕೀರ್ಣವು ಶಿವನಿಗೆ ಸಮರ್ಪಿತವಾಗಿದೆ ಮತ್ತು ದ್ರಾವಿಡ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ನಿಖರವಾದ ಮೂಲಗಳು ತಿಳಿದಿಲ್ಲವಾದರೂ ವಾಸ್ತುಶಿಲ್ಪವು 9ನೇ – 10ನೇ ಶತಮಾನದ ಹಿಂದಿನದು ಎಂದು ನಂಬಲಾಗಿದೆ.


7. ಶ್ರೀ ಚಾಮುಂಡೇಶ್ವರಿ ದೇವಸ್ಥಾನ

ಮೈಸೂರಿನಲ್ಲಿರುವ ವಿಶ್ವಪ್ರಸಿದ್ಧ ಈ ದೇವಾಲಯವು ಚಾಮುಂಡಿ ಬೆಟ್ಟದ ಮೇಲಿದೆ ಮತ್ತು ದುರ್ಗದ ರೂಪವಾದ ಚಾಮುಂಡೇಶ್ವರಿ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ.

ಇದನ್ನೂ ಓದಿ: Sri Lanka Tour: ಕಡಿಮೆ ವೆಚ್ಚದಲ್ಲಿ ಶ್ರೀಲಂಕಾ ಪ್ರವಾಸ; ಐಆರ್‌ಸಿಟಿಸಿ ಸ್ಪೆಷಲ್‌ ಪ್ಯಾಕೇಜ್‌


8. ತಲಕಾಡು ಪಂಚಲಿಂಗ ದೇವಾಲಯಗಳು

ತಲಕಾಡು ಶಿವನಿಗೆ ಅರ್ಪಿತವಾದ ಪಂಚಲಿಂಗ ದೇವಾಲಯಗಳು ಸೇರಿದಂತೆ ಹಲವಾರು ಪುರಾತನ ದೇವಾಲಯಗಳಿಗೆ ನೆಲೆಯಾಗಿದೆ. ಪಂಚ ಲಿಂಗ ದರ್ಶನವು ಸಾಮಾನ್ಯವಾಗಿ ಪ್ರತಿ ಹನ್ನೆರಡು, ಏಳು, ಐದು ಅಥವಾ ಮೂರು ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಕಾರ್ಯಕ್ರಮವಾಗಿದ್ದು, ಆಶೀರ್ವಾದ ಪಡೆಯಲು ಭಕ್ತರು ಐದು ದೇವಾಲಯಗಳಿಗೆ ಭೇಟಿ ನೀಡುತ್ತಾರೆ.

Continue Reading

ದೇಶ

Akasa Air: ಗೋರಖ್​ಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಆಕಾಶ ಏರ್ ನೇರ ವಿಮಾನ

Akasa Air: ಗೋರಖಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಪ್ರತಿನಿತ್ಯ ಹಾರಾಟ ಮಾಡುವಂತಹ ವಿಮಾನ ಸಂಪರ್ಕವನ್ನು ಕಲ್ಪಿಸಿದ ಆಕಾಶ ಏರ್ ಪ್ರಯಾಣಿಕರಿಗೆ ಅನೇಕ ಗುಣಮಟ್ಟದ ಉತ್ಪನ್ನಗಳು ಹಾಗೂ ವಿಭಿನ್ನ ಸೇವೆಗಳನ್ನು ಪರಿಚಯಿಸಿದೆ. ಪ್ರಯಾಣಿಕರಿಗೆ ಕೈಗೆಟಕುವ ದರಗಳಲ್ಲಿ ಎಲ್ಲವನ್ನು ಒಳಗೊಂಡ ಮತ್ತು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದಂತಹ ರಜಾ ಪ್ಯಾಕೇಜ್ ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

VISTARANEWS.COM


on

Akasa Air
Koo

ದೆಹಲಿ: ಭಾರತದ ಪ್ರಸಿದ್ಧ ವಿಮಾನಸಂಸ್ಥೆಯಾದ ಆಕಾಶ ಏರ್ (Akasa Air) ಗೋರಖ್​ಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಪ್ರತಿನಿತ್ಯ ವಿಮಾನ ಸಂಪರ್ಕವನ್ನು ಕಲ್ಪಿಸಿದೆ. 2024 ಮೇ 29 ರಂದು ಸೇವೆ ಆರಂಭಗೊಂಡಿದ್ದು  ಮೊದಲ ವಿಮಾನ ಹಾರಾಟವು ಮಹಾಯೋಗಿ ಗೋರಖ್​ನಾಥ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2:45 ಗಂಟೆಗೆ ಹೊರಟು, ಸಂಜೆ 4 ಗಂಟೆಗೆ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ.

ಇದು  ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನರ ಬೇಡಿಕೆಯನ್ನು ಪೂರೈಸುವ ಮೂಲಕ ಆಕಾಶ ಏರ್ ತನ್ನ  ಖ್ಯಾತಿಯನ್ನು ಹೆಚ್ಚಿಸಿಕೊಂಡಿದೆ. ಅಲ್ಲದೇ ಗೋರಖಪುರ ಹಾಗೂ ಬೆಂಗಳೂರ ನಡುವೆ ನೇರ ವಿಮಾನ ಸಂಪರ್ಕವನ್ನು ಕಲ್ಪಸಿದ ಏಕೈಕ ಸಂಸ್ಥೆ ಆಕಾಶ ಏರ್ ಎನಿಸಿಕೊಂಡಿದೆ. ದೇಶದಾದ್ಯಂತ ಮೆಟ್ರೋ ಹಾಗೂ ಮೆಟ್ರೋ ಇಲ್ಲದ ನಗರಗಳಿಗೆ ತಡೆರಹಿತ ಸಂಪರ್ಕ ಒದಗಿಸಬೇಕೆನ್ನುವ ವಿಮಾನ ಸಂಸ್ಥೆಯ ಧೋರಣೆಯನ್ನು ಎತ್ತಿ ಹಿಡಿದಿದೆ.

ಇತಿಹಾಸ ಮತ್ತು ಸಂಸ್ಕೃತಿಯ ಭಂಡಾರವಾದ ಗೋರಖಪುರ ನಗರ ಅತಿ ಶೀಘ್ರದಲ್ಲಿಯೇ ಆರ್ಥಿಕ ಕೇಂದ್ರವಾಗಿ ಪರಿವರ್ತನೆಗೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗೇ ಈ ನಗರ ತಮ್ಮ ಮೂಲ ಸೌಕರ್ಯಗಳ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮೆಟ್ರೋ ನಗರಗಳಾದ ಬೆಂಗಳೂರು ಮತ್ತು ದೆಹಲಿಯಲ್ಲಿ ಪ್ರತಿನಿತ್ಯದ ವಿಮಾನ ಹಾರಾಟ ಮತ್ತು ವಿಮಾನ ಪ್ರಯಾಣದಲ್ಲಿ ಕೈಗೆಟಕ್ಕುವ ಆಯ್ಕೆಗಳನ್ನು ಒದಗಿಸಿ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಇದು ಕಾರಣವಾಗಿದೆ.

ಈ ಸಂಸ್ಥೆಯ ವತಿಯಿಂದ ವಿಮಾನ ಹಾರಾಟ ಪ್ರಾರಂಭವಾದಾಗಿನಿಂದಲೂ ಉತ್ತರ ಪ್ರದೇಶದಲ್ಲಿ ಪ್ರಗತಿ ಹೆಚ್ಚುತ್ತಿದೆ. ಮತ್ತು  ಈ ಪ್ರದೇಶದಲ್ಲಿ ಇದು ತನ್ನ ಅಸ್ತಿತ್ವವನ್ನು ಬಲವಾಗಿ ನೆಲೆಯೂರಲಿದೆ ಎನ್ನಲಾಗಿದೆ. ಈಗ ಈ ರಾಜ್ಯದಲ್ಲಿ ಲಕ್ನೌ, ವಾರಣಾಸಿ, ಅಯೋಧ್ಯ, ಪ್ರಯಾಗ ಹಾಗೂ ಗೋರಖಪುರ ಸೇರಿದಂತೆ 5 ಮೆಟ್ರೋ ನಗರಗಳನ್ನು ದೇಶದಾದ್ಯಂತ ಇರುವ ಇತರ ಮೆಟ್ರೋಗಳೊಂದಿಗೆ ತಡೆರಹಿತವಾಗಿ ಸಂಪರ್ಕಿಸುತ್ತಿದೆ.

ಪ್ರಯಾಣಿಕರು ಆರಾಮದಾಯಕವಾದ ಪ್ರಯಾಣದ ಅನುಭವವನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಆಕಾಶ ಏರ್ ಅನೇಕ ಗುಣಮಟ್ಟದ ಉತ್ಪನ್ನಗಳು ಹಾಗೂ ವಿಭಿನ್ನ ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಕಾಲನ್ನು ಆರಾಮದಾಯಕವಾಗಿ ಇರಿಸಿಕೊಳ್ಳುವಂತೆ ಹೆಚ್ಚು ಸ್ಥಳಾವಕಾಶವಿರುವ ಸೀಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೇ ಇದರಲ್ಲಿ ಯುಎಸ್ ಬಿ ಪೋರ್ಟ್ಸ್ ಅಳವಡಿಸಿದ್ದು, ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುವಾಗಲೇ ತಮ್ಮ ಮೊಬೈಲ್ , ಇತರ ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ. ಇಲ್ಲಿ ‘café akasa’ ದ ಮೂಲಕ ಆಹಾರ ಸೇವೆಯನ್ನು ಒದಗಿಸಲಾಗುತ್ತದೆ. ಇದರಲ್ಲಿ ಹಬ್ಬದ ಮೆನುಗಳು, ಹಾಗೂ ಕೊಂಬುಚಾದಂತಹ ಆಯ್ಕೆಗಳಿವೆ. ಒಟ್ಟಾರೆ ಇಲ್ಲಿ ಆರೋಗ್ಯಕರವಾದ ಸ್ವಾದಿಷ್ಟ ಭೋಜನವನ್ನು ಪ್ರಯಾಣಿಕರಿಗೆ ಒದಗಿಸುತ್ತದೆ. ಹಾಗೇ ಪ್ರಯಾಣಿಕರು ತಮ್ಮ ಜೊತೆ ತಮ್ಮ ಸಾಕು ಪ್ರಾಣಿಗಳನ್ನು ಅವುಗಳ ತೂಕದ ಆಧಾರದ ಮೇಲೆ ಕ್ಯಾಬಿನ್ ಒಳಗೆ ಅಥವಾ ಕಾರ್ಗೋದಲ್ಲಿ ಕರೆದೊಯ್ಯಲು ಅವಕಾಶವಿದೆ. ಹಾಗೇಆಕಾಶಏರ್ ದೃಷ್ಟಿಮಾಂದ್ಯತೆಯಿರುವವರಿಗಾಗಿ ಬ್ರೇಲ್ ನಲ್ಲಿ ತನ್ನ ಸುರಕ್ಷತಾ ಸೂಚನಾಕಾರ್ಡ್ ಮತ್ತು ಆನ್ ಬೋರ್ಡ್ ಮೆನು ಕಾರ್ಡ್ ಪರಿಚಯಿಸಿದೆ. ಪ್ರಯಾಣಿಕರಿಗೆ ಕೈಗೆಟಕುವ ದರಗಳಲ್ಲಿ ಎಲ್ಲವನ್ನು ಒಳಗೊಂಡ ಮತ್ತು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದಂತಹ ರಜಾ ಪ್ಯಾಕೇಜ್ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Air India Flight: ಏರ್ ಇಂಡಿಯಾ ವಿಮಾನ 20 ಗಂಟೆ ವಿಳಂಬ; ಎಸಿ ಇಲ್ಲದೆ ಪ್ರಜ್ಞೆ ತಪ್ಪಿ ಬಿದ್ದ ಪ್ರಯಾಣಿಕರು

ಆಕಾಶ ಏರ್ ನ ನಿರಂತರವಾದ ಕಾರ್ಯ ಚರಣೆ ಸಾಮರ್ಥ್ಯಗಳು ಹಾಗೂ ಪ್ರಯಾಣಿಕರ ಮೆಚ್ಚುಗೆಯ ಮೂಲಕ ಅದು ಭಾರತದ ನಂಬರ್ ಒನ್ ಆಗಿದೆ ಮತ್ತು  ಕಳೆದ 12 ತಿಂಗಳುಗಳಿಂದ 85%ಗಿಂತ ಹೆಚ್ಚಿನ ಸರಾಸರಿ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.

Continue Reading

ಪ್ರವಾಸ

Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

ಉತ್ತರ ಧ್ರುವದ ಸಾಮೀಪ್ಯದಿಂದಾಗಿ ಭೂಮಿಯ ಮೇಲಿನ ಕೊನೆಯ ದೇಶ ಎಂದು ಕರೆಯಲ್ಪಡುವ ನಾರ್ವೆಯಲ್ಲಿ (Norway Tour) ಮಧ್ಯರಾತ್ರಿ ಸೂರ್ಯ ಕಾಣಿಸಿಕೊಳ್ಳುತ್ತಾನೆ. ಆರು ತಿಂಗಳ ನಿರಂತರ ಹಗಲು ಅಥವಾ ಕತ್ತಲೆಯಂತಹ ವಿಶಿಷ್ಟ ವಿದ್ಯಮಾನಗಳನ್ನು ಇಲ್ಲಿ ಅನುಭವಿಸಬಹುದು. ಇಲ್ಲಿನ ಇ-69 ಹೆದ್ದಾರಿಯು ಜಗತ್ತಿನ ಕೊನೆಯನ್ನು ಸೂಚಿಸುತ್ತದೆ. ಆದರೆ ಈ ರಸ್ತೆಯಲ್ಲಿ ಏಕವ್ಯಕ್ತಿ ಪ್ರಯಾಣವನ್ನು ನಿಷೇಧಿಸಲಾಗಿದೆ.

VISTARANEWS.COM


on

By

Norway Tour
Koo

ಭೂಮಿಯು (earth) ದುಂಡಗಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಭೂಮಿಯ ಮೂಲೆ ಮೂಲೆಯಲ್ಲಿ ಒಂದಲ್ಲ ಒಂದು ದೇಶವಿದೆ (country). ಪ್ರತಿಯೊಂದು ದೇಶವು ಅದರ ನೈಸರ್ಗಿಕ ಸೌಂದರ್ಯದಿಂದಾಗಿ (natural beauty) ಸುಂದರವಾಗಿರುತ್ತದೆ. ಕೆಲವು ದೇಶಗಳು ತಮ್ಮ ಐತಿಹಾಸಿಕ ಕಟ್ಟಡಗಳಿಗೆ (historical buildings) ಪ್ರಸಿದ್ಧವಾಗಿವೆ, ಇತರವುಗಳು ತಮ್ಮ ನೈಸರ್ಗಿಕ ದೃಶ್ಯಾವಳಿಗಳಿಂದ. ವಿಶ್ವದ ಅತಿದೊಡ್ಡ ಮತ್ತು ಶ್ರೀಮಂತ ದೇಶಗಳ ಬಗ್ಗೆ ಎಲ್ಲರೂ ಕೇಳಿರಬಹುದು, ಆದರೆ ಭೂಮಿಯ ಮೇಲಿನ ಕೊನೆಯ ದೇಶ ಯಾವುದು ಗೊತ್ತೇ ಅಲ್ಲಿನ ವಿಶೇಷತೆ ಏನು ಗೊತ್ತೇ ?

ವಿಶ್ವದ ಕೊನೆಯ ದೇಶ ನಾರ್ವೆ (Norway Tour). ಇಲ್ಲಿ ಭೂಮಿ ಕೊನೆಗೊಳ್ಳುತ್ತದೆ. ಈ ದೇಶವು ಉತ್ತರ ಧ್ರುವದ ಬಳಿ ಇದೆ. ಅಲ್ಲಿ ಭೂಮಿಯು ತನ್ನ ಅಕ್ಷದ ಮೇಲೆ ತಿರುಗುತ್ತದೆ. ಆದ್ದರಿಂದ, ನಾರ್ವೆ ಹೇಗಿದೆ ಎಂದು ಊಹಿಸಿಕೊಳ್ಳಬಹುದು.
ಬಹಳ ಸುಂದರವಾಗಿರುವ ಈ ದೇಶದಲ್ಲಿ ರಾತ್ರಿ ಬಹಳ ಕಡಿಮೆ. ರಾತ್ರಿಯೇ ಇರುವುದಿಲ್ಲ ಎಂದು ತಿಳಿದರೆ ಆಶ್ಚರ್ಯವಾಗಬಹುದು.

ಉತ್ತರ ನಾರ್ವೆಯ ಹ್ಯಾವರ್‌ಫೆಸ್ಟ್ ನಗರದಲ್ಲಿ, ಸೂರ್ಯ ಕೇವಲ 40 ನಿಮಿಷಗಳ ಕಾಲ ಅಸ್ತಮಿಸುತ್ತಾನೆ. ಆದ್ದರಿಂದ, ಇದನ್ನು ಮಧ್ಯರಾತ್ರಿ ಸೂರ್ಯನ ದೇಶ ಎಂದೂ ಕರೆಯುತ್ತಾರೆ. ಇಲ್ಲಿ ಕೇವಲ 40 ನಿಮಿಷ ಮಾತ್ರ ಕತ್ತಲು, ಉಳಿದ 23 ಗಂಟೆ 20 ನಿಮಿಷಗಳ ಕಾಲ ಈ ನಗರವು ಬೆಳಕಿನಿಂದ ತುಂಬಿರುತ್ತದೆ.


ಬೇಸಿಗೆಯಲ್ಲಿ ಹಿಮ

ಬೇಸಿಗೆಯಲ್ಲಿ ಇಲ್ಲಿ ಹಿಮ ಹೆಪ್ಪುಗಟ್ಟುತ್ತದೆ. ಈ ದೇಶವು ಅತ್ಯಂತ ತಂಪಾದ ವಾತಾವರಣವನ್ನು ಹೊಂದಿದೆ. ಪ್ರಪಂಚದ ಕೆಲವು ದೇಶಗಳಲ್ಲಿ ಬೇಸಿಗೆಯಲ್ಲಿ ತಾಪಮಾನವು 45 ರಿಂದ 50 ಡಿಗ್ರಿಗಳ ನಡುವೆ ಇದ್ದರೆ ಈ ದೇಶದಲ್ಲಿ ಬೇಸಿಗೆಯಲ್ಲಿ ಹಿಮ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ತಾಪಮಾನ ಶೂನ್ಯ ಡಿಗ್ರಿ. ತೀವ್ರವಾದ ಚಳಿಗಾಲದಲ್ಲಿ ಇಲ್ಲಿ ತಾಪಮಾನವು ಮೈನಸ್ 45 ಡಿಗ್ರಿಗಳಿಗೆ ಇಳಿಯುತ್ತದೆ. ಇಲ್ಲಿನ ಸೌಂದರ್ಯವೇ ಬೇರೆಯದೇ ಪ್ರಪಂಚವನ್ನು ಸೃಷ್ಟಿಸುತ್ತದೆ.

ರಾತ್ರಿಯೇ ಇರುವುದಿಲ್ಲ

ಬೇಸಿಗೆಯಲ್ಲಿ ಇಲ್ಲಿ ರಾತ್ರಿ ಇರುವುದಿಲ್ಲ. ಉತ್ತರ ಧ್ರುವದ ಸಾಮೀಪ್ಯದಿಂದಾಗಿ ಇತರ ದೇಶಗಳಂತೆ ಪ್ರತಿದಿನ ಹಗಲು ಅಥವಾ ರಾತ್ರಿ ಇರುವುದಿಲ್ಲ. ಬದಲಾಗಿ ಇದು ಆರು ತಿಂಗಳು ಹಗಲು ಮತ್ತು ಆರು ತಿಂಗಳು ರಾತ್ರಿಯನ್ನು ಹೊಂದಿದೆ. ಚಳಿಗಾಲದಲ್ಲಿ ಇಲ್ಲಿ ಸೂರ್ಯನು ಕಾಣಿಸುವುದಿಲ್ಲ, ಆದರೆ ಬೇಸಿಗೆಯಲ್ಲಿ ಇಲ್ಲಿ ಸೂರ್ಯ ಮುಳುಗುವುದಿಲ್ಲ. ತುಂಬಾ ಆಸಕ್ತಿದಾಯಕವಾಗಿರುವ ಈ ದೇಶವನ್ನು ನೋಡಲು ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ.


ಜಗತ್ತಿನ ಕೊನೆ

ಇಷ್ಟೆಲ್ಲಾ ಗೊತ್ತಾದ ಮೇಲೆ ನಾವು ನಾರ್ವೆಗೆ ಹೋಗಬೇಕು ಎನಿಸುವುದರಲ್ಲಿ ಸಂದೇಹವಿಲ್ಲ. ಆದರೆ ಈ ದೇಶದ ಇ-69 ಹೆದ್ದಾರಿಯಲ್ಲಿ ಏಕಾಂಗಿಯಾಗಿ ಹೋಗುವುದನ್ನು ನಿಷೇಧಿಸಲಾಗಿದೆ. ಯಾಕೆಂದರೆ ಈ ಹೆದ್ದಾರಿಯು ಭೂಮಿಯ ತುದಿಗಳನ್ನು ನಾರ್ವೆಗೆ ಸಂಪರ್ಕಿಸುತ್ತದೆ. ಮುಂದೆ ಹೋದಂತೆ ಇಲ್ಲಿಯೇ ರಸ್ತೆ ಕೊನೆಗೊಳ್ಳುತ್ತದೆ. ಅಲ್ಲಿಗೆ ತಲುಪಿದಾಗ ಎಲ್ಲಿಗೆ ಹೋಗಬೇಕೆಂದು ತಿಳಿಯುವುದಿಲ್ಲ. ಯಾಕೆಂದರೆ ಇಲ್ಲಿ ಜಗತ್ತು ಕೊನೆಗೊಳ್ಳುತ್ತದೆ.


ಏಕವ್ಯಕ್ತಿ ಪ್ರಯಾಣ ನಿಷೇಧ

ಈ ಹೆದ್ದಾರಿಯಲ್ಲಿ ಹೋಗಬೇಕೆಂದರೂ ಒಬ್ಬರೇ ಹೋಗುವುದು ನಿಷಿದ್ಧ. ಒಂದು ದೊಡ್ಡ ಗುಂಪಿಗೆ ಮಾತ್ರ ಹೋಗಲು ಅನುಮತಿಸಲಾಗುತ್ತದೆ. ಈ ರಸ್ತೆಯಲ್ಲಿ ಯಾವುದೇ ವ್ಯಕ್ತಿ ಏಕಾಂಗಿಯಾಗಿ ಹೋಗಲು ಅಥವಾ ಏಕಾಂಗಿಯಾಗಿ ವಾಹನ ಚಲಾಯಿಸಲು ಅವಕಾಶವಿಲ್ಲ. ಇಲ್ಲಿ ಎಲ್ಲೆಂದರಲ್ಲಿ ಹಿಮವಿದ್ದು, ಏಕಾಂಗಿಯಾಗಿ ಪ್ರಯಾಣಿಸಿ ದಾರಿ ತಪ್ಪುವ ಸಾಧ್ಯತೆ ಇರುವುದರಿಂದ ಏಕಾಂಗಿ ಪ್ರಯಾಣವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

ಈ ದೇಶದಲ್ಲಿ ಪೋಲಾರ್ ಲೈಟ್‌ಗಳನ್ನು ನೋಡಿ ಆನಂದಿಸಬಹುದು. ಇಲ್ಲಿ ಸೂರ್ಯಾಸ್ತ ಮತ್ತು ಧ್ರುವ ದೀಪಗಳನ್ನು ವೀಕ್ಷಿಸುವುದು ವಿನೋದಮಯವಾಗಿದೆ. ವರ್ಷಗಳ ಹಿಂದೆ ಇಲ್ಲಿ ಮೀನು ವ್ಯಾಪಾರ ನಡೆಯುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಕ್ರಮೇಣ ದೇಶವು ಅಭಿವೃದ್ಧಿ ಹೊಂದಿತು ಮತ್ತು ಪ್ರವಾಸಿಗರು ಇಲ್ಲಿಗೆ ಬರಲು ಪ್ರಾರಂಭಿಸಿದರು. ಈಗ ಪ್ರವಾಸಿಗರು ಇಲ್ಲಿ ಉಳಿದುಕೊಳ್ಳಲು ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಸೌಲಭ್ಯವನ್ನೂ ಪಡೆಯುತ್ತಾರೆ.

Continue Reading
Advertisement
Actor Darshan Arrested
ಪ್ರಮುಖ ಸುದ್ದಿ2 mins ago

Actor Darshan Arrested : ದರ್ಶನ್​ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ; ಚಿಕ್ಕಪೇಟೆ ಬಿರಿಯಾನಿ, ಡೋಲೊ 650!

Dina Bhavishya
ಭವಿಷ್ಯ2 mins ago

Dina Bhavishya : ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ; ಪ್ರಭಾವಿ ವ್ಯಕ್ತಿಗಳ ಬೆಂಬಲ

Health Benefits Of Jaggery
ಆರೋಗ್ಯ2 mins ago

Health Benefits Of Jaggery: ಬೆಲ್ಲ ಉಳಿದ ಆಹಾರದಂಥಲ್ಲ; ಇದರ ಲಾಭಗಳು ಏನೇನು ತಿಳಿದುಕೊಂಡಿರಿ

T20 World Cup
ಪ್ರಮುಖ ಸುದ್ದಿ5 hours ago

T20 World Cup : ಕೊನೆಗೂ ದುರ್ಬಲ ಕೆನಾಡ ತಂಡದ ವಿರುದ್ಧ ಜಯ ಗಳಿಸಿದ ಪಾಕಿಸ್ತಾನ

Lt. General Upendra Dwivedi
ಪ್ರಮುಖ ಸುದ್ದಿ6 hours ago

Lt. General Upendra Dwivedi : ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕ

Terrorist Killed
ಪ್ರಮುಖ ಸುದ್ದಿ6 hours ago

Terrorist Killed : ಜಮ್ಮು ಕಾಶ್ಮೀರದಲ್ಲಿ ಉಗ್ರನೊಬ್ಬನ್ನು ಹೊಡೆದುರುಳಿಸಿದ ಭದ್ರತಾ ಪಡೆ

Joe Biden
ಪ್ರಮುಖ ಸುದ್ದಿ7 hours ago

Joe Biden : ಬಂದೂಕು ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಪುತ್ರ ತಪ್ಪಿತಸ್ಥ; ಕಾದಿದೆ 25 ವರ್ಷ ಜೈಲು ಶಿಕ್ಷೆ

Pavithra Gowda
ಕರ್ನಾಟಕ7 hours ago

Pavithra Gowda: ಬಂಧನದ ಭಯವಿಲ್ಲದೇ ನಗುತ್ತಾ ಸಾಂತ್ವನ ಕೇಂದ್ರಕ್ಕೆ ಹೋದ ಪವಿತ್ರಾ ಗೌಡ!

Priyanka Gandhi:
ಪ್ರಮುಖ ಸುದ್ದಿ8 hours ago

Priyanka Gandhi : ವಾರಾಣಸಿಯಲ್ಲಿ ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್​ ಗಾಂಧಿ

CM Siddaramaiah
ಕರ್ನಾಟಕ8 hours ago

CM Siddaramaiah: ಗಣಿಗಳ ಹರಾಜು ಪ್ರಕ್ರಿಯೆ ಕೂಡಲೇ ಕೈಗೆತ್ತಿಕೊಳ್ಳಲು ಸಿಎಂ ಸೂಚನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ12 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ13 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ14 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ16 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ18 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌