Navaratri Red Colour Fashion Tips: ನವರಾತ್ರಿ 3ನೇ ದಿನದ ಕೆಂಪು ಬಣ್ಣದಲ್ಲಿ ನಿಮ್ಮದಾಗಲಿ ಆಕರ್ಷಕ ಸ್ಟೈಲಿಂಗ್‌ - Vistara News

ಫ್ಯಾಷನ್

Navaratri Red Colour Fashion Tips: ನವರಾತ್ರಿ 3ನೇ ದಿನದ ಕೆಂಪು ಬಣ್ಣದಲ್ಲಿ ನಿಮ್ಮದಾಗಲಿ ಆಕರ್ಷಕ ಸ್ಟೈಲಿಂಗ್‌

ಈ ಬಾರಿಯ ನವರಾತ್ರಿಯ 3 ನೇ ದಿನದ ಬಣ್ಣ ಕೆಂಪು (Navaratri Red Colour Fashion Tips). ಪವರ್‌ಫುಲ್‌ ವರ್ಣವಾದ ಈ ಶೇಡ್‌ನ ಎಥ್ನಿಕ್‌ವೇರ್‌ಗಳು ಕಂಪ್ಲೀಟ್‌ ಟ್ರೆಡಿಷನಲ್‌ ಲುಕ್‌ ನೀಡುತ್ತವೆ. ಹೇಗೆಲ್ಲಾ ಈ ಬಣ್ಣದ ಸೀರೆ ಅಥವಾ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Navaratri Red Colour Fashion Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿಯ 3 ನೇ ದಿನದ ಬಣ್ಣ ಕೆಂಪು (Navaratri Red Colour Fashion Tips). ಪವರ್‌ಫುಲ್‌ ವರ್ಣವಾದ ಈ ಶೇಡ್‌ನ ಎಥ್ನಿಕ್‌ವೇರ್‌ಗಳು ಕಂಪ್ಲೀಟ್‌ ಟ್ರೆಡಿಷನಲ್‌ ಲುಕ್‌ ನೀಡುತ್ತವೆ. ಜೊತೆಗೆ ಗ್ರ್ಯಾಂಡ್‌ ಲುಕ್‌ ಕಲ್ಪಿಸುತ್ತವೆ. ಈ ಬಣ್ಣ ದೇವಿಯ ಧೈರ್ಯ ಹಾಗೂ ಶಕ್ತಿ-ಸೌಂದರ್ಯದ ಪ್ರತೀಕ. ಧರಿಸಿದಾಗ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ತಂತಾನೇ ಹಬ್ಬದ ಕಳೆ ಎಲ್ಲರಲ್ಲೂ ಮನೆ ಮಾಡುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

A symbol of courage-beauty

ಧೈರ್ಯ-ಸೌಂದರ್ಯದ ದ್ಯೋತಕ

ಅಂದಹಾಗೆ, ಕೆಂಪು ಬಣ್ಣ ಧೈರ್ಯ ಹಾಗೂ ಸೌಂದರ್ಯದ ಧ್ಯೋತಕ. ಅಷ್ಟೆಕೆ! ವ್ಯಾಲೆಂಟೇನ್ಸ್‌ ಡೇಯಂದು ಎಲ್ಲೆಡೆ ರಂಗೇರುವ ಕಲರ್‌ ಇದು. ಈ ಕಲರ್‌ಗೆ ಇತಿಹಾಸ ಕೂಡ ಇದೆ. ಶಕ್ತಿ ದೇವಿ ದುರ್ಗೆ ಈ ಬಣ್ಣದ ಸೀರೆಯಲ್ಲಿ ಹುಲಿಯ ಮೇಲೆ ಆಸೀನಳಾಗಿರುತ್ತಾಳೆ. ಕೆಲವೆಡೆ ಕೆಂಪು ಬಣ್ಣದ ಚುನರಿಯನ್ನು ಈ ನವರಾತ್ರಿ ಸಂದರ್ಭದಲ್ಲಿ ದೇವಿಗೆ ಹೊದಿಸಲಾಗುತ್ತದೆ. ನವರಾತ್ರಿಯ ಮೂರನೇ ದಿನ ಈ ಬಣ್ಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಇನ್ನು ಸಮೀಕ್ಷೆಯೊಂದರ ಪ್ರಕಾರ, ಅತಿ ಹೆಚ್ಚು ಶೇಡ್‌ನ ಕೆಂಪು ವರ್ಣದ ಔಟ್‌ಫಿಟ್‌ಗಳನ್ನು ನಮ್ಮ ಭಾರತದ ನಾರಿಯರನ್ನು ಧರಿಸುತ್ತಾರಂತೆ. ಇದಕ್ಕೆ ಪೂರಕ ಎಂಬಂತೆ ಪುರಾಣಗಳಲ್ಲೂ ಶಕ್ತಿ ದೇವತೆಗಳು ಕೆಂಪು ಸೀರೆಯನ್ನು ಧರಿಸುವುದನ್ನು ಕಾಣಬಹುದು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Wear various red shade sarees like this

ನಾನಾ ಕೆಂಪು ಶೇಡ್‌ ಸೀರೆಗಳನ್ನುಹೀಗೆ ಧರಿಸಿ

ಕೆಂಪು ಅಂದಾಕ್ಷಣ ಒಂದೇ ಶೇಡ್‌ ಅಲ್ಲ, ಗಾಢ, ತಿಳಿಗೆಂಪು, ರಕ್ತ ಕೆಂಪು ಹೀಗೆ ಲೆಕ್ಕವಿಲ್ಲದಷ್ಟು ಬಗೆಯವು ಇದೆ. ಆಯಾ ವರ್ಣದ ಸೀರೆಗಳು ಒಂದೊಂದು ಬಗೆಯ ಲುಕ್‌ ನೀಡುತ್ತವೆ. ಕೆಂಪು ಬಣ್ಣದ ಬಾರ್ಡರ್‌ ರೇಷ್ಮೆ ಸೀರೆಯಾದಲ್ಲಿ ಗ್ರ್ಯಾಂಡ್‌ ಫೆಸ್ಟಿವ್‌ ಲುಕ್‌ ನೀಡುತ್ತದೆ. ಇನ್ನು ಸಾದಾ ಅಥವಾ ಗೋಲ್ಡನ್‌ ಪ್ರಿಂಟ್ಸ್‌ ಇಲ್ಲವೇ ಬೂಟಾ ಪ್ರಿಂಟ್ಸ್‌ ಇರುವ ಶಿಫಾನ್‌, ಜಾರ್ಜೆಟ್‌ ಡಿಸೈನರ್‌ ಸೀರೆಗಳಾದಲ್ಲಿ ಮನಮೋಹಕವಾಗಿ ಕಾಣುತ್ತವೆ. ಸೀರೆಗಳಿಗೆ ಬಂಗಾರದ ಜ್ಯುವೆಲರಿಗಳು ಚೆನ್ನಾಗಿ ಒಪ್ಪುತ್ತವೆ. ಟ್ರೆಡಿಷನಲ್‌ ಮೇಕಪ್‌ ಇರಲಿ. ಹಣೆಗೊಂದು ಅಗಲವಾದ ಬಿಂದಿ ಇರಲಿ. ದೇಸಿ ಹೇರ್‌ಸ್ಟೈಲ್‌ ಮ್ಯಾಚ್‌ ಆಗುತ್ತದೆ.

The red lehenga is magic

ಕೆಂಪು ಲೆಹೆಂಗಾ ಜಾದೂ

ಕೆಂಪು ಬಣ್ಣದ ಲೆಹೆಂಗಾಗಳು ನವರಾತ್ರಿಯ ಸೀಸನ್‌ನಲ್ಲಿ ಇದೀಗ ಟ್ರೆಂಡಿಯಾಗಿವೆ. ಸೀರೆ ಬೇಡ, ಲೆಹೆಂಗಾ ಓಕೆ ಎನ್ನುವವರು ಲೆಹೆಂಗಾದಲ್ಲಿ ಹೆಚ್ಚು ಸಮಯವಿಲ್ಲದೇ ರೆಡಿಯಾಗಬಹುದು. ಮಾನೋಕ್ರೋಮ್‌ ಸೇಮ್‌ ಶೇಡ್‌ನ ಲೆಹೆಂಗಾಗಳು ಬೆಸ್ಟ್‌, ಕಾಂಟ್ರಾಸ್ಟ್‌ ಈ ದಿನಕ್ಕೆ ಮ್ಯಾಚ್‌ ಆಗದು. ಹೇರ್‌ಸ್ಟೈಲ್‌ನಲ್ಲಿ ಕೆಂಪು ಗುಲಾಬಿ ಸೇರಿಸಿಕೊಂಡಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಬಹುದು.

ಕೆಂಪು ಬಣ್ಣದ ಚೂಡಿದಾರ್‌ ಕುರ್ತಾ

ಇನ್ನು ಸಿಂಪಲ್‌ ಆಗಿ ಆಕರ್ಷಕವಾಗಿ ಕಾಣಲು ಚೂಡಿದಾರ್‌ ಕುರ್ತಾ ಆಯ್ಕೆ ಮಾಡಿ ಧರಿಸಬಹುದು. ಇದಕ್ಕಾಗಿ ಹೆಚ್ಚೆನೂ ತಯಾರಿ ಬೇಕಾಗಿಲ್ಲ. ಮ್ಯಾಚಿಂಗ್‌ ಸ್ಟೇಟ್‌ಮೆಂಟ್‌ ಜ್ಯುವೆಲರಿ ಧರಿಸಬಹುದು. ಬೇಕಾದ ಹೇರ್‌ ಸ್ಟೈಲ್‌ ಮಾಡಬಹುದು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Navaratri white colour styling : ನವರಾತ್ರಿಯ 2ನೇ ದಿನಕ್ಕೆ ಶ್ವೇತ ವರ್ಣದ ಸ್ಟೈಲಿಂಗ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಫ್ಯಾಷನ್

Velevet Saree Fashion: ವೆಲ್ವೆಟ್‌ ಸೀರೆಯಲ್ಲಿ ನಟಿ ಮೇಘಾ ಶೆಟ್ಟಿಯಂತೆ ಕಾಣಿಸಲು ಇಲ್ಲಿದೆ 5 ಐಡಿಯಾ!

Velevet Saree Fashion: ಸ್ಯಾಂಡಲ್‌‌‌ವುಡ್‌ ನಟಿ ಮೇಘಾ ಶೆಟ್ಟಿಯಂತೆ ವೆಲ್ವೆಟ್‌ ಸೀರೆಯಲ್ಲಿ ನೀವೂ ಕೂಡ ಆಕರ್ಷಕವಾಗಿ ಕಾಣಿಸಬಹುದು. ಅದಕ್ಕಾಗಿ ಈ 5 ಸಿಂಪಲ್‌ ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Velevet Saree Fashion
ಚಿತ್ರಗಳು: ಮೇಘಾ ಶೆಟ್ಟಿ, ಸ್ಯಾಂಡಲ್‌ ವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಲ್ವೆಟ್‌ ಸೀರೆ (Velevet Saree Fashion) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಇನ್ನು, ಇದಕ್ಕೆ ಪೂರಕ ಎಂಬಂತೆ ಬಾಲಿವುಡ್‌ ಸೆಲೆಬ್ರೆಟಿಗಳಿಂದಿಡಿದು ಸ್ಯಾಂಡಲ್‌ವುಡ್‌ ತಾರೆಯರು ಕೂಡ ಈ ಸೀರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಇದೀಗ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ ನಟಿ ಮೇಘಾ ಶೆಟ್ಟಿ ಕೂಡ ಇವೆಂಟ್‌ವೊಂದರಲ್ಲಿ ಟೀಲ್‌ ಬ್ಲ್ಯೂ ಶೇಡ್‌ನ ವೆಲ್ವೆಟ್‌ ಸೀರೆಯಲ್ಲಿ ಅಂದವಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆದಿದ್ದಾರೆ.

Velevet Saree Fashion

ಆಕರ್ಷಕವಾಗಿ ಕಾಣಿಸುವ ವೆಲ್ವೆಟ್‌ ಸೀರೆಗಳು

ನೋಡಲು ಸಿಂಪಲ್‌ ಹಾಗೂ ಎಲಿಗೆಂಟ್‌ ಲುಕ್‌ ನೀಡುವ ಈ ವೆಲ್ವೆಟ್‌ ಸೀರೆಗಳು, ಸೀಸನ್‌ನಲ್ಲಿ ಬೆಚ್ಚಗಿಡುವುದು ಮಾತ್ರವಲ್ಲ, ಸಿಂಪಲ್‌ ಲುಕ್‌ನಲ್ಲೆ ಆಕರ್ಷಕವಾಗಿ ಬಿಂಬಿಸುತ್ತವೆ. ಸದ್ಯ ಮೇಘಾ ಶೆಟ್ಟಿ ಉಟ್ಟಿರುವ ಈ ವೆಲ್ವೆಟ್‌ ಸೀರೆ, ಯುವತಿಯರನ್ನು ಸೆಳೆದಿದ್ದು, ಈ ಸೀರೆಯನ್ನು ಡಿಸೈನ್‌ ಹಾಗೂ ಸ್ಟೈಲಿಂಗ್‌ ಮಾಡಿರುವ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರು, ಈ ಲುಕ್‌ ಬಯಸುವ ಯುವತಿಯರಿಗೆ 5 ಸಿಂಪಲ್‌ ಐಡಿಯಾ ನೀಡಿದ್ದಾರೆ.

Velevet Saree Fashion

ರಾಯಲ್‌ ಲುಕ್‌ಗಾಗಿ ವೆಲ್ವೆಟ್‌ ಸೀರೆ

ರಾಯಲ್‌ ಲುಕ್‌ಗಾಗಿ ವೆಲ್ವೆಟ್‌ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಸಮಾರಂಭಗಳಲ್ಲೂ ಇತರರಿಗಿಂತ ವಿಭಿನ್ನವಾಗಿ ಕಾಣಿಸಲು ಕೂಡ ವೆಲ್ವೆಟ್‌ ಸೀರೆ ಉಡಬಹುದು.

Velevet Saree Fashion

ಸ್ಕಿನ್‌ ಟೋನ್‌ಗೆ ತಕ್ಕಂತೆ ಕಲರ್‌ ಚಾಯ್ಸ್

ನಿಮ್ಮ ಸ್ಕಿನ್‌ ಟೋನ್‌ಗೆ ತಕ್ಕಂತೆ ವೆಲ್ವೆಟ್‌ ಸೀರೆ ಆಯ್ಕೆ ಮಾಡಿ. ಪಾರ್ಟಿಗಳಿಗಾದಲ್ಲಿ ಡಾರ್ಕ್‌ ಶೇಡ್‌, ಡೇ ಟೈಮ್‌ ಸಮಾರಂಭಗಳಿಗಾದಲ್ಲಿ ಲೈಟ್‌ ಶೇಡ್ಸ್ ಹೀಗೆ ನಿಮ್ಮ ಸ್ಕಿನ್‌ ಟೋನ್‌ ಹಾಗೂ ಕಾರ್ಯಕ್ರಮಕ್ಕೆ ತಕ್ಕಂತೆ ಆಯ್ಕೆ ಮಾಡಬಹುದು.

Velevet Saree Fashion

ಸೆಲೆಬ್ರೆಟಿ ಲುಕ್‌ಗಾಗಿ ಸ್ಟೈಲಿಂಗ್‌

ವೆಲ್ವೆಟ್‌ ಸೀರೆಯಲ್ಲಿ ಸೆಲೆಬ್ರೆಟಿ ಲುಕ್‌ ಪಡೆಯಲು ಆದಷ್ಟೂ ಸ್ಟೈಲಿಂಗ್‌ಗೆ ಪ್ರಾಮುಖ್ಯತೆ ನೀಡಬೇಕು. ಮಿನಿಮಲ್‌ ಹಾಗೂ ಅಗತ್ಯವಿರುವಷ್ಟು ಆಕ್ಸೆಸರೀಸ್‌ ಧರಿಸಬೇಕು. ಹಾಗಾಗಿ ಧರಿಸುವ ಆಕ್ಸೆಸರೀಸ್‌ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು.

ವೆಲ್ವೆಟ್‌ ಸೀರೆ ಲೈಟ್‌ವೈಟಾಗಿರಲಿ

ಉಡುವ ವೆಲ್ವೆಟ್‌ ಸೀರೆಯ ಫ್ಯಾಬ್ರಿಕ್‌ ಆದಷ್ಟೂ ಲೈಟ್‌ವೈಟ್‌ ಆಗಿರಲಿ. ಆಗ ಧರಿಸಿದಾಗ ನೋಡಲು ಚೆನ್ನಾಗಿ ಕಾಣಿಸುವುದಲ್ಲದೇ, ಉಟ್ಟವರಿಗೂ ಕಂಫರ್ಟಬಲ್‌ ಫೀಲ್‌ ಆಗುತ್ತದೆ.

ಇದನ್ನೂ ಓದಿ: Shalini Rajaneesh: ಸೀರೆ, ಹಣೆಗೆ ಅಗಲವಾದ ರೆಡ್ ಬಿಂದಿ ಎಂದಿಗೂ ಬದಲಾಗದ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್ಮೆಂಟ್!

ವೆಲ್ವೆಟ್‌ ಸೀರೆಗೆ ತಕ್ಕಂತೆ ಮೇಕಪ್‌-ಹೇರ್‌ಸ್ಟೈಲ್‌

ವೆಲ್ವೆಟ್‌ ಸೀರೆ ಉಟ್ಟಾಗ ಆ ಸೀರೆಗೆ ತಕ್ಕಂತೆ ಮೇಕಪ್‌ ಕೂಡ ಮಾಡಬೇಕು. ಹೇರ್‌ಸ್ಟೈಲ್‌ ಕೂಡ ಹೊಂದಬೇಕು. ಅತಿಯಾದ ಮೇಕಪ್‌ ಬೇಡ. ನೋಡಲು ಎಲಿಗೆಂಟ್‌ ಲುಕ್‌ ನೀಡುವ ಮೇಕಪ್‌ಗೆ ಸೈ ಎನ್ನಿ. ಇನ್ನು ಸೀರೆಯ ಶೇಡ್‌ಗೆ ತಕ್ಕಂತೆ ಲಿಪ್‌ಸ್ಟಿಕ್ ಹಾಗೂ ಐ ಮೇಕಪ್‌ ಮಾಡಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Spectrum Dress Fashion: ಮಳೆಗಾಲದ ಫ್ಯಾಷನ್‌ಗೆ ಕಾಲಿಟ್ಟಿವೆ ಗ್ಲಾಮರಸ್‌ ಸಿಕ್ವೀನ್ಸ್ ರೆಟ್ರೊ ಸ್ಪೆಕ್ಟ್ರಮ್‌ ಡ್ರೆಸ್

Spectrum Dress Fashion: ಈ ಬಾರಿಯ ಮಾನ್ಸೂನ್‌ ಸೀಸನ್‌ನಲ್ಲಿ ಹುಡುಗಿಯರಿಗೆ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಗ್ಲಾಮರಸ್‌ ಲುಕ್‌ ನೀಡುವ ಸಿಕ್ವೀನ್ಸ್ ರೆಟ್ರೊ ಸ್ಪೆಕ್ಟ್ರಮ್‌ ಡ್ರೆಸ್‌ಗಳು ಎಂಟ್ರಿ ನೀಡಿವೆ. ಏನಿದು ಸ್ಪೆಕ್ಟ್ರಮ್‌ ಡ್ರೆಸ್? ಮೇಕೋವರ್‌ ಹೇಗೆ? ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Spectrum Dress Fashion
ಚಿತ್ರಗಳು: ಅದಾ ಖಾನ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಮಾನ್ಸೂನ್‌ ಸೀಸನ್‌ನಲ್ಲಿ ಹುಡುಗಿಯರಿಗೆ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಗ್ಲಾಮರಸ್‌ ಲುಕ್‌ ನೀಡುವಂತಹ ಸಿಕ್ವೀನ್ಸ್ ರೆಟ್ರೋ ಸ್ಪೆಕ್ಟ್ರಮ್‌ ಡ್ರೆಸ್‌ಗಳು (Spectrum Dress Fashion) ಎಂಟ್ರಿ ನೀಡಿವೆ.

Spectrum Dress Fashion

ಸೀಸನ್‌ ಗ್ಲಾಮರಸ್‌ ಫ್ಯಾಷನ್‌ನಲ್ಲಿ ಸ್ಪೆಕ್ಟ್ರಮ್‌ ಡ್ರೆಸ್

ಮಳೆಗಾಲದಲ್ಲಿ ಗ್ಲಾಮರಸ್‌ ಆಗಿ ಕಾಣಿಸುವ ಔಟ್‌ಫಿಟ್‌ಗಳು ಬಿಡುಗಡೆಗೊಳ್ಳುವುದು ತೀರಾ ಕಡಿಮೆ. ಬಿಡುಗಡೆಗೊಂಡರೂ ಅವು ಹೈ ಫ್ಯಾಷನ್‌ ಅಥವಾ ಹೈ ಸ್ಟ್ರೀಟ್‌ ಫ್ಯಾಷನ್‌ ಇಲ್ಲವೇ ಸೆಲೆಬ್ರೆಟಿ ಔಟ್‌ಫಿಟ್‌ ಕೆಟಗರಿಗೆ ಸೇರಿಕೊಂಡಿರುತ್ತವೆ. ಹಾಗಾಗಿ ಬೆಲೆಯೂ ದುಬಾರಿಯಾಗಿರುತ್ತದೆ. ಇನ್ನು, ಮಾನ್ಸೂನ್‌ನಲ್ಲಿ ಸ್ಲಿವ್‌ಲೆಸ್‌ ಫ್ಯಾಷನ್‌ ಇಲ್ಲದಿದ್ದರೂ, ಈ ಸೀಸನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣುವ ಸಲುವಾಗಿ ಈ ವಿನ್ಯಾಸಗಳು ಬಾಡಿಕಾನ್‌ ಡ್ರೆಸ್‌ನೊಳಗೆ ಸೇರಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರೀತು. ಅವರು ಹೇಳುವಂತೆ ಮಾನ್ಸೂನ್‌ನಲ್ಲಿ ಈ ಔಟ್‌ಫಿಟ್‌ಗಳು ಹುಡುಗಿಯರ ಮನಸೂರೆಗೊಂಡಿವೆ. ಹಾಗಾಗಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ.

ಏನಿದು ರೆಟ್ರೊ ಸ್ಪೆಕ್ಟ್ರಮ್‌ ಡ್ರೆಸ್‌?

ಸಾದಾ ಸಿಕ್ವೀನ್ಸ್ ಡ್ರೆಸ್‌ ಮೇಲೆ ಕಲರ್‌ಫುಲ್‌ ರೈನ್ಬೋ ಚಿತ್ತಾರದಂತೆ ವಿನ್ಯಾಸಗೊಂಡಿರುವ ಈ ಔಟ್‌ಫಿಟ್‌, ಕಾಳೇಜು ಹುಡುಗಿಯರ ಹಾಗೂ ಜೆನ್‌ ಜಿ ಗ್ಲಾಮರಸ್‌ ಯುವತಿಯರ ಫ್ಯಾಷನ್‌ ಚಾಯ್ಸ್ನಲ್ಲಿ ಸೇರಿಕೊಂಡಿವೆ. ಈ ಉಡುಪಿನಲ್ಲಿ ಅತಿಯಾದ ವಿನ್ಯಾಸದ ಹಾವಳಿ ಇರದ ಕಾರಣ, ಈ ಉಡುಗೆ , ನೋಡಲು ತೀರಾ ಸಿಂಪಲ್‌ ಡಿಸೈನ್‌ ಎಂದೆನಿಸುತ್ತದೆ. ಆದರೆ, ಲೈಟ್‌ನಲ್ಲಿ ಜಗಮಗಿಸುತ್ತದೆ. ಸಿಕ್ವೀನ್ಸ್ ಡಿಸೈನ್‌ ನಿಂದಾಗಿ ಪಾರ್ಟಿವೇರ್‌ನಂತೆಯೂ ಕಾಣಿಸುವುದು. ಇದರಿಂದಾಗಿ, ಬಹಳಷ್ಟು ಹುಡುಗಿಯರು ಈ ಡ್ರೆಸ್‌ಗಳನ್ನು ಪಾರ್ಟಿವೇರ್‌ಗಳಾಗಿಯೂ ಧರಿಸುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ. ಇನ್ನು, ರೆಟ್ರೊ ಶೈಲಿಯಲ್ಲಿ ಔಟ್‌ಫಿಟ್‌ ಕಾಣಿಸುವುದರಿಂದ ಈ ಡ್ರೆಸ್‌ಗೆ ರೆಟ್ರೊ ಸ್ಪೆಕ್ಟ್ರಮ್‌ ಡ್ರೆಸ್‌ ಎಂದೂ ಕೂಡ ಹೇಳಲಾಗುತ್ತದೆ ಎನ್ನುತ್ತಾರೆ ಡಿಸೈನರ್‌ ಶ್ರೀಜಾ.

ಇದನ್ನೂ ಓದಿ: Shalini Rajaneesh: ಸೀರೆ, ಹಣೆಗೆ ಅಗಲವಾದ ರೆಡ್ ಬಿಂದಿ ಎಂದಿಗೂ ಬದಲಾಗದ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್ಮೆಂಟ್!

ಸ್ಪೆಕ್ಟ್ರಮ್‌ ಡ್ರೆಸ್ ಆಯ್ಕೆ & ಮೇಕೋವರ್‌ ಹೇಗೆ ?

  • ಆದಷ್ಟೂ ಬಾಡಿ ಟೈಪ್‌ಗೆ ಹೊಂದುವಂತಹ ಡಿಸೈನ್‌ನವನ್ನು ಕೊಳ್ಳಿ.
  • ಡಾರ್ಕ್‌ ಕಲರ್‌ನಲ್ಲಿ ಬ್ಲ್ಯಾಕ್‌ ಶೇಡ್‌ನ ಸ್ಪೆಕ್ಟ್ರಮ್‌ ಡ್ರೆಸ್‌ಗಳು ಟ್ರೆಂಡ್‌ನಲ್ಲಿವೆ.
  • ಈ ಔಟ್‌ಫಿಟ್‌ ಮೇಲೆ ಕ್ರಾಪ್‌ ಜಾಕೆಟ್‌ ಧರಿಸಿ, ಮಾನ್ಸೂನ್‌ ಲುಕ್‌ ನೀಡಬಹುದು.
  • ಹೀಲ್ಸ್ ಫುಟ್‌ವೇರ್‌ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.
  • ಮಿನಿಮಲ್‌ ಆಕ್ಸೆಸರೀಸ್‌ ಕೂಡ ಆಕರ್ಷಕವಾಗಿ ಬಿಂಬಿಸುತ್ತದೆ.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Shalini Rajaneesh: ಸೀರೆ, ಹಣೆಗೆ ಅಗಲವಾದ ರೆಡ್ ಬಿಂದಿ ಎಂದಿಗೂ ಬದಲಾಗದ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್ಮೆಂಟ್!

Shalini Rajaneesh: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ಡಾ. ಶಾಲಿನಿ ರಜನೀಶ್ ಮೇಡಂ ಯಾರಿಗೆ ಗೊತ್ತಿಲ್ಲ! ಕಾಯಕವೇ ಕೈಲಾಸ ಎಂಬಂತೆ, ಸದಾ ಒಂದಲ್ಲ ಒಂದು ಸರಕಾರಿ ಕೆಲಸದಲ್ಲಿ ನಿರತರಾಗಿರುವ ಅವರು, ಸ್ಥಳೀಯ ಕಲೆ –ಸಂಸ್ಕೃತಿ-ಪರಂಪರೆಯನ್ನು ಉತ್ತೇಜಿಸುವ ಯೋಜನೆಗಳಿಗೆ ಮೊದಲಿನಿಂದಲೂ ಆದ್ಯತೆ ನೀಡುತ್ತಲೇ ಬಂದಿದ್ದಾರೆ. ಅವರು ವಿಸ್ತಾರ ನ್ಯೂಸ್‌‌ ಸಂದರ್ಶನದಲ್ಲಿ ಒಂದಿಷ್ಟು ವಿಷಯಗಳ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.

VISTARANEWS.COM


on

Shalini Rajaneesh
ಚಿತ್ರಗಳು: ಡಾ. ಶಾಲಿನಿ ರಜನೀಶ್, ಐಎಎಸ್, ಸರಕಾರದ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ
Koo

ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ
ಸರಕಾರದ ಮುಖ್ಯ ಕಾರ್ಯದರ್ಶಿ, ಮಹಿಳಾ ಐಎಎಸ್ ಅಧಿಕಾರಿ, ಡಾ. ಶಾಲಿನಿ ರಜನೀಶ್ (Shalini Rajaneesh) ಮೇಡಂ ಯಾರಿಗೆ ಗೊತ್ತಿಲ್ಲ! ಸದಾ ಒಂದಲ್ಲ ಒಂದು ರಾಜ್ಯ ಸರಕಾರದ ಯೋಜನಾ ಕಾರ್ಯದಲ್ಲಿ ನಿರತರಾಗಿರುವ ಅವರ ಕಲೆ- ಸಂಸ್ಕೃತಿಯನ್ನು ಬಿಂಬಿಸುವಂತಹ ಅವರ ಸೀರೆ ಇಮೇಜ್ ಕೂಡ ಅಷ್ಟೇ ಫೇಮಸ್!
ಅಂದಹಾಗೆ, ಈ ಹಿಂದೆ ಮೈಸೂರು ಉದ್ಯೋಗ್ ಸೇರಿದಂತೆ, ರಾಜ್ಯದ ಕೈಮಗ್ಗ ನೇಯ್ಗೆಗಾರರಿಗೆ ಅದರಲ್ಲೂ, ಸ್ಥಳೀಯ ಹ್ಯಾಂಡ್‌‌ಲೂಮ್ ಕ್ಷೇತ್ರಕ್ಕೆ ಸಂಬಂಧಿಸಿದ ಸಾಕಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅಲ್ಲಿನ ನೇಕಾರರನ್ನು ಬೆಳಕಿಗೆ ತರುವಲ್ಲಿ, ಶಾಲಿನಿ ರಜನೀಶ್ ಅವರು, ಪ್ರಮುಖ ಪಾತ್ರವಹಿಸಿದ್ದರು. ಉದ್ಯಾನನಗರಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರನ್ನು ವಿಸ್ತಾರ ನ್ಯೂಸ್ ಸಂದರ್ಶಿಸಿದಾಗ, ತಮ್ಮ ಲೈಫ್ಸ್ಟೈಲ್ ಹಾಗೂ ಇತರ ವಿಷಯಗಳ ಕುರಿತಂತೆ ಮಾತನಾಡಿದರು. ಅವರ ಸಂದರ್ಶನದ ಸಾರಂಶ ಇಲ್ಲಿದೆ.

ವಿಸ್ತಾರ ನ್ಯೂಸ್: ಸದಾ ಒಂದಲ್ಲ ಒಂದು ಕಾರ್ಯದಲ್ಲಿ ಬ್ಯುಸಿಯಾಗಿರುವ ನೀವು ಫಿಟ್ನೆಸ್ ಫ್ರೀಕ್ ಎಂಬುದನ್ನು ಕೇಳಿದ್ದೇವೆ. ಇದು ನಿಜವೇ!

ಶಾಲಿನಿ ರಜನೀಶ್ : ಖಂಡಿತ. ಇದು ನಿಜ. ಮುಂಜಾನೆ 4.30ಕ್ಕೆ ಆರಂಭವಾಗುವ ನನ್ನ ದಿನಚರಿಯಲ್ಲಿ ವರ್ಕೌಟ್‌‌ಗೆ ಮೊದಲ ಆದ್ಯತೆ. ಕನಿಷ್ಠವೆಂದರೂ ದಿನಕ್ಕೆ ಒಟ್ಟಾರೆ, ಸರಿ ಸುಮಾರು 3 ಗಂಟೆ ಸಮಯವನ್ನು ವ್ಯಾಯಾಮಕ್ಕೆ ಮೀಸಲಿಡಲು ಪ್ರಯತ್ನಿಸುತ್ತೇನೆ.

ವಿಸ್ತಾರ ನ್ಯೂಸ್: ನಿಮ್ಮ ಯೂನಿಕ್ ಫ್ಯಾಷನ್ ಏನು?

ಶಾಲಿನಿ ರಜನೀಶ್: ಪ್ರತಿ ಕಾರ್ಯಕ್ರಮದಲ್ಲೂ ನಮ್ಮ ಸಂಸ್ಕೃತಿ ಬಿಂಬಿಸುವ ನಮಸ್ಕಾರ ಎನ್ನುವುದರಿಂದಲೇ ಮಾತನ್ನು ಆರಂಭಿಸುತ್ತೇನೆ. ಇನ್ನು, ಎಲ್ಲರಿಗೂ ತಿಳಿದಿರುವಂತೆ ನಾನು ಆಲ್ಟೈಮ್ ಸೀರೆ ಪ್ರೇಮಿ. ಸೀರೆಯಲ್ಲಿ ಕಾಣಿಸಿಕೊಳ್ಳುವುದು , ಹಣೆಗೆ ಅಗಲವಾದ ರೆಡ್ ಬಿಂದಿ ಇಡುವುದು ಎಂದಿಗೂ ಬದಲಾಗದ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್ಮೆಂಟ್.

ವಿಸ್ತಾರ ನ್ಯೂಸ್: ನಿಮಗೆ ಪ್ರಿಯವಾದ ಸೀರೆ ಯಾವುದು?

ಶಾಲಿನಿ ರಜನೀಶ್: ಖಾದಿ ಸಿಲ್ಕ್ ನನ್ನ ಎವರ್ಗ್ರೀನ್ ಫೇವರೇಟ್ ಸೀರೆ. ಇನ್ನು, ಹಳದಿ ಅಂದರೇ, ಸನ್ ಕಲರ್ ನನ್ನ ಆಲ್ಟೈಮ್ ಇಷ್ಟವಾದ ಬಣ್ಣ.

ವಿಸ್ತಾರ ನ್ಯೂಸ್: ನಿಮ್ಮ ಬ್ಯೂಟಿ ಸಿಕ್ರೇಟ್?

ಶಾಲಿನಿ ರಜನೀಶ್ : ಎಲ್ಲವೂ ಅಮ್ಮನಿಂದ ದೊರಕಿದ ವರ.

ವಿಸ್ತಾರ ನ್ಯೂಸ್: ಮೈಸೂರ್ ಸಿಲ್ಕ್ ಸೀರೆಗಳ ಉತ್ಪಾದನೆ ಹೆಚ್ಚಿಸುವ ಚಿಂತನೆ ನಡೆದಿದೆಯಂತೆ? ಇದು ನಿಜವೇ!

ಶಾಲಿನಿ ರಜನೀಶ್: ಹೌದು. ರಾಜ್ಯದ ಕಲೆ-ಸಂಸ್ಕೃತಿಯ ಪ್ರತೀಕವಾಗಿರುವ ಕೆಎಸ್ಐಸಿ ಮೈಸೂರ್ ರೇಷ್ಮೆ ಸೀರೆಗಳಿಗೆ ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಉತ್ಪಾದನೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ.

ವಿಸ್ತಾರ ನ್ಯೂಸ್: ಈ ಹಿಂದೆ ರಾಜ್ಯ ಸರಕಾರದ ವತಿಯಿಂದ ಸ್ಥಳೀಯ ಹ್ಯಾಂಡ್ಲೂಮ್ಸ್ ಕ್ಷೇತ್ರವನ್ನು ಉತ್ತೇಜಿಸುವಂತಹ ಯೋಜನೆಗೆ ನೀವು ಪ್ರೋತ್ಸಾಹ ನೀಡಿದ್ದರಂತೆ! ಈ ಬಗ್ಗೆ ಹೇಳಿ?

ಶಾಲಿನಿ ರಜನೀಶ್: ಹೌದು. ಅಳಿವಿನ ಅಂಚಿಗೆ ಸರಿಯುತ್ತಿದ್ದ ಸ್ಥಳೀಯ ಹ್ಯಾಂಡ್ಲೂಮ್ ನೇಯ್ಗೆಗಾರರನ್ನು ಉತ್ತೇಜಿಸುವಂತಹ ನಾನಾ ಸರಕಾರಿ ಕಾರ್ಯಕ್ರಮಗಳು ಮನಸ್ಸಿಗೆ ಖುಷಿ ಕೊಟ್ಟಿದ್ದವು. ಹಾಗೆಂದು, ಕೇವಲ ಸರಕಾರ ಇಂತಹವರನ್ನು ಪ್ರೋತ್ಸಾಹಿಸಿದರೇ ಸಾಲದು, ಮಹಿಳೆಯರು ಕೂಡ ಇಂತಹವರಿಂದಲೇ ಸೀರೆಗಳನ್ನು ಕೊಳ್ಳಬೇಕು. ಆಗಲೇ ಈ ಕ್ಷೇತ್ರದ ಉಳಿವು ಸಾಧ್ಯ.

ವಿಸ್ತಾರ ನ್ಯೂಸ್: ಹೊರ ರಾಜ್ಯದವರಾದರೂ ನೀವು ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಿರಲ್ಲ! ಹೇಗೆ?

ಶಾಲಿನಿ ರಜನೀಶ್ : ಸಾಕಷ್ಟು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದೇನೆ. ಕನ್ನಡವನ್ನು ಪ್ರೀತಿಸುತ್ತೇನೆ. ಹಾಗಾಗಿ, ಕನ್ನಡ ಭಾಷೆ ನನಗೆ ಒಲಿದಿದೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

Continue Reading

ಕಿರುತೆರೆ

Namratha Gowda: ಕಪ್ಪು ಸೀರೆಯುಟ್ಟು ನೋಡುಗರ ನಿದ್ದೆಗೆಡಿಸಿದ ಕಿರುತೆರೆ ನಟಿ ನಮ್ರತಾ ಗೌಡ

Namratha Gowda: ಹಾಟ್‌ ಆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರು ನಮ್ರತಾ ಗೌಡ . ಇಲ್ಲಿವೆ ಫೋಟೊಗಳು!

VISTARANEWS.COM


on

Namratha Gowda
Koo
Namratha Gowda
ಬಿಗ್‌ಬಾಸ್‌ ಖ್ಯಾತಿಯ ನಮ್ರತಾ ಗೌಡ ಲಕ್ಷ್ಮೀ ಕೃಷ್ಣ ಡಿಸೈನ್ ಮಾಡಿರುವ ಕಪ್ಪು ಸೀರೆಯುಟ್ಟು ಗಮನ ಸೆಳೆದಿದ್ದಾರೆ.
Namratha Gowda
ಸ್ಲೀವ್ ಲೆಸ್ ಬ್ಲೌಸ್ ಜತೆ ಬ್ಲ್ಯಾಕ್‌ ಹ್ಯಾಂಡ್‌ ಗ್ಲೌಸ್‌, ಅದರ ಮೇಲೆ ಡೈಮಂಡ್‌ ರಿಂಗ್‌ ಮತ್ತು ಸಿಂಹಿಣಿಯ ಲೋಗೋ ಇರುವ ಬೆಲ್ಟ್‌ ಇದು ಬೆಡಗಿಯ ನ್ಯೂ ಲುಕ್‌ನ ವಿಷೇಶವಾಗಿದೆ.
Namratha Gowda
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕ್ಯೂಟ್‌ ಮತ್ತು ಹಾಟ್ ಫೋಟೊಗಳನ್ನು ಪೋಸ್ಟ್‌ ಮಾಡಿರುವ ನಮ್ಮು “Some wars help us bloom” ಎಂದು ಕ್ಯಾಪ್ಶನ್ ಸಹ ಹಾಕಿಕೊಂಡಿದ್ದಾರೆ.
Namratha Gowda
ಕೆಲದಿನಗಳ ಹಿಂದೆ ಪ್ಯಾರ್ ಗೆ ಆಗ್ಬಿಟ್ಟೈತೆ ನಟಿ ಪಾರುಲ್ ಯಾದವ್ ಬ್ಲ್ಯಾಕ್ ಸೀರೆ ಧರಿಸಿ ಬೋಲ್ಡ್‌ ಆಗಿ ಫೋಟೊ ಶೂಟ್ ಮಾಡಿಸಿದ್ದು ಅದು ವೈರಲ್ ಆಗಿತ್ತು. ಇದೀಗ ಅವರನ್ನು ಮೀರಿಸುವ ಹಾಗೆ ನಟಿ ನಮ್ರತಾ ಗೌಡ ಫೋಟೊಗಳನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Namratha Gowda
ಸದ್ಯಕ್ಕೆ ಜಿಮ್‌ ವರ್ಕೌಟ್‌ ಮಾಡಿ ಫಿಟ್‌ ಆಗುತ್ತಿರುವ ನಮ್ರತಾ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿ ಆಗಲಿದ್ದಾರೆ.
Continue Reading
Advertisement
Use nandini ghee compulsorily in temple prasadam Order of the Department of Religious Endowments
ಕರ್ನಾಟಕ11 ಗಂಟೆಗಳು ago

Nandini ghee: ದೇವಸ್ಥಾನಗಳ ಪ್ರಸಾದದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಿ; ಧಾರ್ಮಿಕ ದತ್ತಿ ಇಲಾಖೆ ಆದೇಶ

Temporary additional coaches to be attached to 34 trains for Dasara 2024
ಬೆಂಗಳೂರು12 ಗಂಟೆಗಳು ago

Dasara 2024: ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ

Theft case
ಬೆಂಗಳೂರು12 ಗಂಟೆಗಳು ago

Theft case : ಮಧ್ಯರಾತ್ರಿಯಲ್ಲಿ ವಕೀಲನಿಗೆ ಚಾಕು ತೋರಿಸಿ ಸುಲಿಗೆ ಮಾಡಿ ಬೆದರಿಕೆ ಹಾಕಿದ ಖದೀಮರು

Also test the prasadam of the holy places of the state Pralhad Joshi urges state government
ಬೆಂಗಳೂರು15 ಗಂಟೆಗಳು ago

Tirupati laddu Row : ತಿರುಪತಿ ಲಡ್ಡು ಬಳಿಕ ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ; ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

Road Accident
ಬೆಂಗಳೂರು16 ಗಂಟೆಗಳು ago

Road Accident : ಚಾಲಕ ಕಾರಿನೊಳಗೆ ಮಲಗಿದ್ದಾಗಲೇ ನಡುರಾತ್ರಿ ಹೊತ್ತಿ ಉರಿದ ಕಾರು! ಅಗ್ನಿ ಅವಘಡಕ್ಕೆ ಕಾರಣ ನಿಗೂಢ!

Road Accident
ಕೋಲಾರ16 ಗಂಟೆಗಳು ago

Road Accident: ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರನ ತಲೆಯೇ ಕಟ್‌! ಭೀಕರ ದೃಶ್ಯಕ್ಕೆ ಬೆಚ್ಚಿ ಬಿದ್ದ ಜನರು

Good news for the children of yellow board drivers Do this to get a scholarship under Vidyanidhi
ಬೆಂಗಳೂರು ಟೆಕ್ ಸಮ್ಮಿಟ್17 ಗಂಟೆಗಳು ago

Students Scholarship : ಯೆಲ್ಲೋ ಬೋರ್ಡ್‌ ವಾಹನ ಚಾಲಕರ ಮಕ್ಕಳಿಗೆ ಗುಡ್‌ ನ್ಯೂಸ್‌; ವಿದ್ಯಾನಿಧಿಯಡಿ ಸ್ಕಾಲರ್‌ಶಿಪ್‌ ಪಡೆಯಲು ಹೀಗೆ ಮಾಡಿ

allegations of rape honeytrap Mla Munirathna arrested again by Kaggalipura police as soon as he came out of jail
ರಾಜಕೀಯ17 ಗಂಟೆಗಳು ago

MLA Muniratna: ಅತ್ಯಾಚಾರ, ಹನಿಟ್ರ್ಯಾಪ್‌ ಆರೋಪ; ಜೈಲಿನಿಂದ ಹೊರಬರುತ್ತಿದ್ದಂತೆ ಶಾಸಕ ಮುನಿರತ್ನ ಮತ್ತೆ ಅರೆಸ್ಟ್‌

Dina Bhavishya
ಭವಿಷ್ಯ23 ಗಂಟೆಗಳು ago

Dina Bhavishya : ಈ ರಾಶಿಯವರು ಇಂದು ದೊಡ್ಡ ಯೋಜನೆಯತ್ತ ಗಮನ ಹರಿಸುವಿರಿ

MCC Seat Retention, Opportunity to Cancel KEA Seat Deadline to Cancel Seats by 11 AM on September 20
ಬೆಂಗಳೂರು1 ದಿನ ago

KEA : ಎಂಸಿಸಿ ಸೀಟು ಉಳಿಸಿಕೊಂಡು, ಕೆಇಎ ಸೀಟು ರದ್ದತಿಗೆ ಅವಕಾಶ; ಸೀಟು ರದ್ದು ಪಡಿಸಿಕೊಳ್ಳಲು ನಾಳೆವರೆಗೂ ಗಡುವು

Kannada Serials
ಕಿರುತೆರೆ11 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್3 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ವಾರಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 ತಿಂಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 ತಿಂಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 ತಿಂಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌