Steam Cooking Benefits: ಆರೋಗ್ಯದ ಹಾದಿಯಲ್ಲಿ ಹಬೆಯಲ್ಲಿ ಬೇಯಿಸುವ ವಿಧಾನವನ್ನು ಎಂದೂ ಮರೆಯಬೇಡಿ - Vistara News

ಆಹಾರ/ಅಡುಗೆ

Steam Cooking Benefits: ಆರೋಗ್ಯದ ಹಾದಿಯಲ್ಲಿ ಹಬೆಯಲ್ಲಿ ಬೇಯಿಸುವ ವಿಧಾನವನ್ನು ಎಂದೂ ಮರೆಯಬೇಡಿ

ಹಬೆಯಲ್ಲಿ ಬೇಯಿಸುವುದರಿಂದ ಆಹಾರದ ಪೋಷಕಾಂಶಗಳು ನಷ್ಟವಾಗುವುದಿಲ್ಲ. ರುಚಿಯೂ ಅಪ್ರತಿಮ. ಬನ್ನಿ, ಹಬೆಯಲ್ಲಿ ಬೇಯಿಸುವ ಅಡುಗೆಯ ಲಾಭಗಳನ್ನು (Steam Cooking Benefits) ತಿಳಿಯೋಣ.

VISTARANEWS.COM


on

steaming
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಹಳಷ್ಟು ಸಾರಿ ನಾವು ರುಚಿಕರ ಅಡುಗೆ ಮಾಡುವ ಬಗೆಬಗೆಯ ರೆಸಿಪಿಗಳನ್ನು (Food recipes) ಯುಟ್ಯೂಬ್‌ ಚಾನಲ್‌ಗಳಲ್ಲಿ ಅಥವಾ ಇತರ ಆನ್‌ಲೈನ್‌ ವೇದಿಕೆಗಳಲ್ಲಿ ಕಲಿಯುವ (kitchen tips) ಮೂಲಕ ಆರೋಗ್ಯಕರವಾದ (Healthy cooking) ಎಷ್ಟೋ ಅಡುಗೆ ವಿಧಾನಗಳನ್ನೇ ಮರೆತುಬಿಡುತ್ತೇವೆ. ಪರಂಪರಾಗತ ವಿಧಾನಗಳನ್ನು ಮೂಲೆಗೆ ತಳ್ಳಿ, ಫಟಾಪಟ್‌ ಅಡುಗೆ ಮಾಡುವ ಭರದಲ್ಲಿ ದೇಹಕ್ಕೆ ಹಿತಕರ ಹಾಗೂ ಆರೋಗ್ಯಕರವಲ್ಲದ ವಿಧಾನಗಳಿಗೆ ಜೋತುಬೀಳುತ್ತೇವೆ. ನಾಲಿಗೆಗೆ ರುಚಿಯಾಗಿ ಕಾಣುವ ದಿಢೀರ್‌ ಆಗುವ ಪ್ರತಿಯೊಂದೂ ಕೂಡಾ ನಮಗೆ ಅದ್ಭುತವೇ. ಆದರೆ, ಈ ಹಾದಿಯಲ್ಲಿ ನಾವು ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ (Unhealthy practices) ಎಂಬ ಅರಿವು ನಮಗಿದೆಯೇ? ಹಾಗಿಲ್ಲದಿದ್ದರೆ, ನಾವೇ ಮರೆತಿರುವ ಹಬೆಯಲ್ಲಿ ಬೇಯಿಸುವ (steaming) ಹಳೆಯ ವಿಧಾನಕ್ಕೊಮ್ಮೆ ಹೋಗಿ ಇಣುಕಿ ನೋಡಬೇಕು. ಆಗ ಆ ವಿಧಾನದಲ್ಲಿರುವ ಆರೋಗ್ಯ (steam cooking health benefits) ನಮ್ಮ ಅರಿವಿಗೆ ಬಂದೀತು. ಬನ್ನಿ, ಹಬೆಯಲ್ಲಿ ಆಹಾರವನ್ನು ಬೇಯಿಸುವುದರಿಂದ ಆಗುವ ಪ್ರಯೋಜನಗಳನ್ನು (steam cooking benefits) ತಿಳಿಯೋಣ.

1. ಪೋಷಕಾಂಶಗಳು ನಷ್ಟವಾಗುವುದಿಲ್ಲ: ನಾವು ಮಾಡುವ ಅಡುಗೆ ರುಚಿಯಾಗಿರಲು ನಾವು ಬೇರೆ ಬೇರೆ ರೆಸಿಪಿಗಳನ್ನು ಟ್ರೈ ಮಾಡುತ್ತೇವೆ. ಕೆಲವೊಂದು ಅಡುಗೆಗಳಲ್ಲಿ ಎಣ್ಣೆಯಲ್ಲಿ ಕರಿಯುವ ವಿಧಾನವಿರಬಹುದು, ಅಥವಾ ಕಾವಲಿಯಲ್ಲಿ ಎಣ್ಣೆ ಸುರಿದು ಕಡಿಮೆ ಎಣ್ಣೆ ಬಳಸಿ ಶಾಲೋ ಫ್ರೈ ಮಾಡುವ ವಿಧಾನವಿರಬಹುದು, ಇನ್ನೂ ಕೆಲವು ಅಡುಗೆಗಗಳಲ್ಲಿ ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸುವುದನ್ನು ಮಾಡಬಹುದು. ಹೀಗೆ ಎಲ್ಲ ಅಡುಗೆಗಳಲ್ಲೂ ಕೆಲವೊಂದು ವಿಧಾನಗಳನ್ನು ಬಳಸಿ ನಾವು ಅಡುಗೆಯನ್ನು ರುಚಿಕರವಾಗಿಸಲು ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಆದರೆ, ಇವೆಲ್ಲ ವಿಧಾನಗಳಿಂದ ಆಹಾರದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ. ದೇಹಕ್ಕೆ ನಾವು ಅಂದುಕೊಂಡಷ್ಟು ಪೋಷಕಾಂಶ ಸಿಕ್ಕಿರುವುದೇ ಇಲ್ಲ. ಅದಕ್ಕೇ, ಹಬೆಯಲ್ಲಿ ಬೇಯಿಸುವ ವಿಧಾನ ಎಲ್ಲಕ್ಕಿಂತ ಅತ್ಯುತ್ತಮ.

2. ಜೀರ್ಣಕ್ರಿಯೆಗೆ ಅತ್ಯುತ್ತಮ: ಜೀರ್ಣಾಂಗವ್ಯೂಹಕ್ಕೆ ಸರಳವಾಗಿರುವ ಆಹಾರ ಬೇಕು. ಕ್ಲಿಷ್ಟಕರ ಆಹಾರವನ್ನು ಕರಗಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಎಣ್ಣೆಯಲ್ಲಿ ಕರಿದ ಇತ್ಯಾದಿ ಆಹಾರಗಳಲ್ಲಿ ಜಿಡ್ಡಿನಂಶವೂ ಸೇರಿ ಸರಳ ಆಹಾರ ಕ್ಲಿಷ್ಟಕರವಾದ ಹಾದಿಯತ್ತ ಹೊರಳಿರುತ್ತದೆ. ಆದರೆ, ಹಬೆಯಲ್ಲಿ ಬೇಯಿಸಿದ ಆಹಾರದಲ್ಲಿ ಎಣ್ಣೆಯಂಶವಾಗಲೀ, ಅತಿಯಾದ ಮಸಾಲೆಯಾಗಲೀ ಇಲ್ಲವಾಗಿರುವುದರಿಂದ ಇವು ಸುಲಭವಾಗಿ ಜೀರ್ಣವಾಗುತ್ತದೆ.

3. ಕೊಲೆಸ್ಟೆರಾಲ್‌ ಹತೋಟಿ: ನಿಮ್ಮ ದೇಹದಲ್ಲಿರುವ ಕೊಲೆಸ್ಟೆರಾಲ್‌ ಬಗೆಗೆ ನೀವು ನಿಜಕ್ಕೂ ಚಿಂತಿತರಾಗಿದ್ದೀರಿ ಅಥವಾ ಕಾಳಜಿ ಮಾಡುತ್ತೀರಿ ಎಂದಾದಲ್ಲಿ, ನೀವು ಆಹಾರವನ್ನು ಸ್ಟೀಮ್‌ ಮಾಡುವುದು ಅಂದರೆ ಹಬೆಯಲ್ಲಿ ಬೇಯಿಸುವ ವಿಧಾನವನ್ನು ಆಯ್ಕೆ ಮಾಡುತ್ತೀರಿ. ಯಾಕೆಂದರೆ, ಇದರಲ್ಲಿ ಹೆಚ್ಚುವರಿ ಎಣ್ಣೆ, ಜಿಡ್ಡು ಇತ್ಯಾದಿಗಳ ಅಗತ್ಯ ಬೀಳುವುದಿಲ್ಲವಾದ್ದರಿಂದ ಕೊಲೆಸ್ಟೆರಾಲ್‌ ಹತೋಟಿಯಲ್ಲಿರುತ್ತದೆ. ರಕ್ತದೊತ್ತಡವೂ ಸಮತೋಲನಕ್ಕೆ ಬರುತ್ತದೆ.

4. ರುಚಿಕರವೂ ಹೌದು: ಹಬೆಯಲ್ಲಿ ಬೇಯಿಸಿದ ತಿನಿಸನ್ನು ತಿಂದು ನೋಡಿ. ಎಷ್ಟು ರುಚಿಯಾಗಿರುತ್ತದೆ ಅಲ್ಲವೇ? ಹಣ್ಣುಗಳು, ತರಕಾರಿಗಳನ್ನು ಹಬೆಯಲ್ಲಿ ಬೇಯಿಸಿದರಂತೂ ರುಚಿಯಲ್ಲಿ ಅಮೋಘವಾಗಿರುತ್ತವೆ. ಇದರಲ್ಲಿರುವ ಪೋಷಕಾಂಶಗಳೆಲ್ಲವೂ ಅದರಲ್ಲೇ ಇರುವುದಲ್ಲದೆ, ಹಬೆಯಲ್ಲಿ ಬೇಯಿಸಿದ ಇಡ್ಲಿ, ಕಡುಬು ಮತ್ತಿತರ ಬೆಳಗ್ಗಿನ ತಿನಿಸುಗಳೂ ಕೂಡಾ ಅತ್ಯಂತ ರುಚಿಕರ ಹಾಘೂ ಅರೋಗ್ಯಕರವಾಗಿರುತ್ತದೆ.

5. ತೂಕವೂ ಇಳಿಯುತ್ತದೆ: ನೀವು ತೂಕ ಇಳಿಕೆಯ (weight loss) ಬಗ್ಗೆ ಚಿಂತೆ ಮಾಡುತ್ತೀರೆಂದಾದಲ್ಲಿ, ಖಂಡಿತವಾಗಿಯೂ ನಿಮ್ಮ ಆಹಾರಕ್ರಮದ ಬಗ್ಗೆಯೂ ಯೋಚಿಸಿರಲೇಬೇಕು. ಅವುಗಳಲ್ಲಿ ಎಲ್ಲಕ್ಕಿಂತ ಒಳ್ಳೆಯದು ಎಂದರೆ ಈ ವಿದಾನ. ಹಬೆಯಲ್ಲಿ ಬೇಯಿಸಿ ಮಾಡುವ ತಿನಿಸುಗಳು ಆರೋಗ್ಯಕರ ವಿಧಾನದಲ್ಲಿ ತೂಕ ಇಳಿಕೆಗೂ ನೆರವಾಗುತ್ತದೆ.

ಹಾಗಾಗಿ, ಹಬೆಯಲ್ಲಿ ಬೇಯಿಸುವ ವಿದಾನವೇ ಒಂದು ಮ್ಯಾಜಿಕ್.‌ ಇಲ್ಲಿ, ಜೀರ್ಣಾಂಗವ್ಯೂಹಕ್ಕೆ ಹೊರೆಯಾಗದೆ, ಆರೋಗ್ಯವಾಗಿರಲು, ಪೋಷಕಾಂಶಗಳನ್ನೂ ನಮ್ಮ ಆಹಾರದಲ್ಲಿ ನಷ್ಟ ಮಾಡಿಕೊಳ್ಳದೆ, ಕೊಲೆಸ್ಟೆರಾಲ್‌ ಹಾಗೂ ರಕ್ತದೊತ್ತಡಕ್ಕೂ ಸಮಸ್ಯೆ ತಂದುಕೊಳ್ಳದೆ, ತೂಕ ಇಳಿಸಿಕೊಳ್ಳುವತ್ತಲೂ ಹೆಜ್ಜೆಯಿಡಲು ನೆರವಾಗುವ ವಿಧಾನವಿದು. ಹಾಗಾಗಿ ಆದಷ್ಟೂ ಹಬೆಯಲ್ಲಿ ಬೇಯಿಸುವ ವಿಧಾನಕ್ಕೆ ಮರಳುವ ಮೂಲಕ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.

ಇದನ್ನೂ ಓದಿ: Kitchen Tips : ಅಡುಗೆ ಮನೆಯಿಂದ ಜಿರಲೆಗಳನ್ನು ಓಡಿಸಬೇಕೆ? ಇಲ್ಲಿವೆ ಸರಳ ಉಪಾಯಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ಕಿಡ್ನಿಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡನ್ನು ಹೀಗೆ ಬಳಸಿ…

Health Tips: ತೆಂಗಿನಂತೆ ಬಾಳೆಯೂ ಕಲ್ಪವೃಕ್ಷ ಎನಿಸಿಕೊಂಡಿದೆ. ಇದರ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುತ್ತದೆ. ಅದರಲ್ಲಿಯೂ ಬಾಳೆದಿಂಡಿನಲ್ಲಿ ಅಪೂರ್ವ ಔಷಧೀಯ ಗುಣಗಳಿವೆ. ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಅದ್ಭುತ ಶಕ್ತಿ ಬಾಳೆ ದಿಂಡಿಗಿದೆ. ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗೆ ಇದು ರಾಮಬಾಣ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ.

VISTARANEWS.COM


on

Health Tips
Koo

ಕುಮಾರ ಪೆರ್ನಾಜೆ, ಪುತ್ತೂರು
ಬೆಂಗಳೂರು: ಕಲ್ಪವೃಕ್ಷ ಎಂದಾಕ್ಷಣ ತೆಂಗಿನ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಅದರ ಜತೆಗೆ ಬಾಳೆಯೂ ಕಲ್ಪವೃಕ್ಷವೇ. ತೆಂಗಿನಂತೆ ಇದರ ಎಲ್ಲ ಭಾಗಗಳು ಉಪಯುಕ್ತ. ಬಾಳೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು, ಇತ್ತೀಚೆಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಿಡ್ನಿಯ ಕಲ್ಲಿನ ಸಮಸ್ಯೆಯನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಈ ಬಗೆಗಿನ ವಿವರ ಇಲ್ಲಿದೆ (Health Tips).

ಬಾಳೆ ದಿಂಡಿನ ಪ್ರಾಮುಖ್ಯತೆ ಇದೀಗ ಪ್ರತಿಯೊಬ್ಬರ ಅರಿವಿಗೂ ಬಂದಿದೆ. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಒಂದು ಅಡಿ ಉದ್ದದ ದಿಂಡಿಗೂ ಬಹಳ ಬೇಡಿಕೆ ಸೃಷ್ಟಿಯಾಗಿದೆ. ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯ, ಪಕೋಡ, ದೋಸೆ, ಇಡ್ಲಿ, ಸಲಾಡ್, ಮೊಸರು ಗೊಜ್ಜು ಹೀಗೆ ನಾನಾ ಭಕ್ಷ್ಯ ತಯಾರಿಸಬಹುದು. ಮಾತ್ರವಲ್ಲ ಬಾಳೆ ನಾರಿನಿಂದ ವಿವಿಧ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸಬಹುದು. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ, ಬಟ್ಟೆ ತಯಾರಿ ಹೀಗೆ…ಏನೆಲ್ಲ ಮಾಡಬಹುದು ಎಂಬ ಸಂಶೋಧನೆ ಮಾಡುವ ತನಕ ಬಾಳೆ ಇಷ್ಟೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಕಿಡ್ನಿ ಕಲ್ಲು ಕರಗಿಸುವ ಬಾಳೆ ದಿಂಡು

ಮೊದಲೇ ಹೇಳಿದಂತೆ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಅದ್ಭುತ ಶಕ್ತಿ ಬಾಳೆ ದಿಂಡಿಗಿದೆ. ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗೆ ಇದು ರಾಮಬಾಣ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ. ಕಿಡ್ನಿ ಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡಿನ ನೀರನ್ನು ಕುಡಿಯುವುದು ಅತ್ಯುತ್ತಮ ಮಾರ್ಗ ಎನಿಸಿಕೊಂಡಿದೆ. ಈ ನೀರನ್ನು ಹೇಗೆ ಸಂಗ್ರಹಿಸಬಹುದು ಎನ್ನುವುದರ ವಿವರ ಇಲ್ಲಿದೆ. ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಕಾಂಡದಲ್ಲಿ ಗುಳಿಯ ಆಕಾರವನ್ನು ತೋಡಿ. ಬಳಿಕ ಕಸ, ಧೂಳು ಹಾರದಂತೆ ಅದಕ್ಕೆ ಪ್ಲಾಸ್ಟಿಕ್ ಅಥವಾ ಬಾಳೆ ಎಲೆ ಮುಚ್ಚಿ. ಮರುದಿನ ನೋಡಿದಾಗ ಗುಳಿಯಲ್ಲಿ ನೀರು ತುಂಬಿರುತ್ತದೆ.

ಈ ನೀರನ್ನು ಶುಭ್ರ ಪಾತ್ರೆಯಲ್ಲಿ ತೆಗೆದುಕೊಂಡು ನಿಯಮಿತವಾಗಿ ಸೇವಿಸಿ. ಇದರಿಂದ ಕಿಡ್ನಿ ಕಲ್ಲಿ ಕರಗುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ ಬಾಳೆ ದಿಂಡನ್ನು ಅರೆದು ಅದನ್ನು ಸೋಸಿಯೂ ಕುಡಿಯಬಹುದು. ಹೀಗೆ ಬಾಳೆದಿಂಡಿನ ರಸವನ್ನು ವರ್ಷಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರ ಹಾಕಬಹುದು.

ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ಜ್ಯೂಸ್‌ ತಯಾರಿಸಿ

ಬಾಳೆ ದಿಂಡಿನ ರಸವನ್ನು ನೇರವಾಗಿ ಸೇವಿಸಲು ಸಾಧ್ಯವಾಗದಿದ್ದರೆ ಜ್ಯೂಸ್‌ ತಯಾರಿಸಿಯೂ ಕುಡಿಯಬಹುದು. ಬಾಳೆದಿಂಡಿನ ನೀರಿಗೆ ಜೀರಿಗೆ, ಶುಂಠಿ, ನಿಂಬೆರಸ, ಗಾಂಧಾರಿ ಮೆಣಸು, ಚಿಟಿಕೆ ಉಪ್ಪು, ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು. ಇದನ್ನು ಸಮಸ್ಯೆ ಇದ್ದವರೇ ಕುಡಿಯಬೇಕೆಂದಿಲ್ಲ. ಯಾರೂ ಬೇಕಾದರೂ ಸೇವಿಸಬಹುದು. ಇತ್ತೀಚೆಗಂತೂ ಬಿಸಿಲಿನ ತಾಪ ವಿಪರೀತವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರದ ಜತೆಗೆ ಇಂತಹ ಪ್ರಾಕೃತಿಕ ಔಷಧಗಳ ಪ್ರಯೋಜನ ಪಡೆಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

Continue Reading

ವಾಣಿಜ್ಯ

Donkey milk: ಕತ್ತೆ ಹಾಲು ಲೀಟರ್‌ಗೆ 7000 ರೂ! ಈ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌?

Donkey milk: ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ. ಗುಜರಾತ್‌ನಲ್ಲಿ ಧೀರೇನ್ ಸೋಲಂಕಿ ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ಕತ್ತೆ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌? ಇದರ ಹಿನ್ನೆಲೆ ಏನು? ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

By

donkey milk
Koo

ಹಾಲು (milk) ಮಾರಾಟ ಮಾಡಿ ತಿಂಗಳಿಗೊಂದು ಎಷ್ಟು ಆದಾಯ ಗಳಿಸಬಹುದು? ಅಬ್ಬಬ್ಬಾ ಎಂದರೆ 10 ಸಾವಿರ ರೂ. ಗಡಿ ದಾಟಿದರೆ ಬಹುದೊಡ್ಡದು. ಆದರೆ ಇಲ್ಲೊಬ್ಬರು ಹಾಲು ಮಾರಾಟದಿಂದಲೇ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ ಇವರು ಮಾರುತ್ತಿರುವ ಹಾಲು ಹಸುವಿನದಲ್ಲ (cow) ಕತ್ತೆಯದ್ದು (Donkey milk).

ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ (white gold). ಗುಜರಾತ್‌ನಲ್ಲಿ (gujarat) ಧೀರೇನ್ ಸೋಲಂಕಿ ( Dhiren Solanki) ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಪಟಾನ್ ಜಿಲ್ಲೆಯಲ್ಲಿ 42 ಕತ್ತೆಗಳಿರುವ ಫಾರ್ಮ್ ಹೊಂದಿರುವ ಧೀರೇನ್ ಸೋಲಂಕಿ, ದಕ್ಷಿಣ ಪ್ರದೇಶಗಳಲ್ಲಿನ ಗ್ರಾಹಕರಿಗೆ ಬೆಲೆಬಾಳುವ ಹಾಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Tech Mahindra: ಫ್ರೆಶರ್‌ಗಳಿಗೆ ಗುಡ್‌ ನ್ಯೂಸ್;‌ 6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

ಸುಮಾರು ಎಂಟು ತಿಂಗಳ ಹಿಂದೆ ಕೇವಲ 20 ಕತ್ತೆಗಳೊಂದಿಗೆ 22 ಲಕ್ಷ ರೂ.ಗಳ ಆರಂಭಿಕ ಹೂಡಿಕೆ ಮಾಡಿರುವ ಸೋಲಂಕಿ ಈಗ ಕೋಟ್ಯಂತರ ಮೌಲ್ಯದ ಹಾಲು ವ್ಯಾಪಾರ ನಡೆಸುತ್ತಿದ್ದಾರೆ.

ಪ್ರಾರಂಭದಲ್ಲಿ ಸವಾಲು

ಗುಜರಾತ್‌ ನಲ್ಲಿ ಕತ್ತೆ ಹಾಲಿಗೆ ಹೆಚ್ಚು ಬೇಡಿಕೆ ಇಲ್ಲದ ಕಾರಣ ಪ್ರಾರಂಭಿಸಿದ ಐದು ತಿಂಗಳು ಸೋಲಂಕಿ ಅವರು ತುಂಬಾ ಕಷ್ಟ ಪಟ್ಟಿದ್ದರು. ಅದರ ಅನಂತರ ಅವರು ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿನ ಹೆಚ್ಚಿನ ಅಗತ್ಯತೆ ಇರುವಲ್ಲಿ ತಮ್ಮ ವ್ಯಾಪ್ತಿಯನ್ನು ಬೆಳೆಸುವ ನಿರ್ಧಾರವನ್ನು ಮಾಡಿದರು.

ಪ್ರಸ್ತುತ ಅವರು ಕತ್ತೆ ಹಾಲನ್ನು ಹೆಚ್ಚಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಒದಗಿಸುತ್ತಿದ್ದಾರೆ. ಅವರ ಕೆಲವು ಗ್ರಾಹಕರು ಕತ್ತೆಗಳ ಹಾಲನ್ನು ಬಳಸುವ ಸೌಂದರ್ಯವರ್ಧಕ ಸಂಸ್ಥೆಗಳಾಗಿವೆ.


ಲೀಟರ್‌ಗೆ 5ರಿಂದ 7 ಸಾವಿರ ರೂ.

ಸೋಲಂಕಿ ಪ್ರಕಾರ ಕತ್ತೆ ಹಾಲು ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ 5,000 ರಿಂದ 7,000 ರೂ. ಗೆ ಮಾರಾಟವಾಗುತ್ತಿದೆ. ಹಸುವಿನ ಹಾಲಿಗೆ ಹೋಲಿಸಿದರೆ ಲೀಟರ್‌ಗೆ 65 ರೂ. ಗೆ ಮಾರಾಟವಾಗುತ್ತದೆ. ಹಾಲಿನ ತಾಜಾತನವನ್ನು ಕಾಪಾಡಲು ರೆಫ್ರಿಜರೇಟರ್‌ಗಳಲ್ಲಿ ಇರಿಸಲಾಗುತ್ತದೆ.

ದುಬಾರಿಯಾಗಲು ಕಾರಣ

ಕತ್ತೆಯ ಹಾಲಿನ ಬಗ್ಗೆ ಜನಪ್ರಿಯತೆ ಈಗಷ್ಟೇ ಬೆಳೆಯುತ್ತಿದೆ. ಬಹುತೇಕ ಫಾರ್ಮ್‌ಗಳು ಚಿಕ್ಕದಾಗಿದ್ದು, ಐದರಿಂದ 30 ಹಾಲು ಕರೆಯುವ ಕತ್ತೆಗಳನ್ನು ಒಳಗೊಂಡಿರುತ್ತದೆ. ಪ್ರತಿ ದಿನವೂ ಸರಿಸುಮಾರು ನಾಲ್ಕು ಕಪ್ ಅಂದರೆ ಒಂದು ಲೀಟರ್ ಹಾಲನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಹೀಗಾಗಿ ಹಾಲು ಸ್ವಲ್ಪ ದುಬಾರಿಯಾಗಿದೆ ಮತ್ತು ಪಡೆಯುವುದು ಕಷ್ಟವಾಗುತ್ತದೆ.

ಕತ್ತೆ ಹಾಲಿನ ಪ್ರಯೋಜನಗಳು

ಕತ್ತೆ ಹಾಲಿನ ಬಳಕೆ ಸುಮಾರು 10 ಸಾವಿರ ವರ್ಷಗಳಿಂದಲೂ ಇದೆ. ಅದರ ಪೌಷ್ಟಿಕಾಂಶ ದಿಂದಾಗಿ ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ.

ಕತ್ತೆ ಹಾಲಿನ ಇತಿಹಾಸ

ಹಿಂದಿನ ಕಾಲದಲ್ಲಿ ಶಿಶುಗಳ ಆಹಾರಕ್ಕಾಗಿ ಕತ್ತೆ ಹಾಲನ್ನು ಬಳಸುವುದು ಸಾಮಾನ್ಯವಾಗಿತ್ತು. ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಕೂಡ ಅದನ್ನು ಇಷ್ಟಪಟ್ಟಿದ್ದಳು. ಅವಳು ತನ್ನ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು. ದಂತಕಥೆಯ ಪ್ರಕಾರ ಅವಳಿಗೆ ನಿತ್ಯ ಅಗತ್ಯವಾದ ಹಾಲು ಒದಗಿಸಲು ಸುಮಾರು 700 ಕತ್ತೆಗಳು ಬೇಕಾಗಿದ್ದವು ಎನ್ನಲಾಗುತ್ತದೆ.

ಕತ್ತೆ ಹಾಲು ಮುಖದ ಚರ್ಮದಿಂದ ಸುಕ್ಕುಗಳನ್ನು ನಿವಾರಿಸುತ್ತದೆ. ಚರ್ಮವನ್ನು ಮೃದು ಮತ್ತು ಬಿಳಿಯನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ರೋಮನ್ ಚಕ್ರವರ್ತಿ ನೀರೋನ ಹೆಂಡತಿ ಪೊಪ್ಪಿಯಾ ಸ್ನಾನಕ್ಕೂ ಸಹ ಕತ್ತೆ ಬಳಸುತ್ತಿದ್ದಳು. ಈ ಕಾರಣಕ್ಕಾಗಿ, ಅವಳು ಪ್ರಯಾಣ ಮಾಡುವಾಗ ಕತ್ತೆಗಳ ಹಿಂಡುಗಳನ್ನು ಜೊತೆಗೆ ಕೊಂಡೊಯ್ಯುತ್ತಿದ್ದಳು.

ಕತ್ತೆ ಹಾಲಿನ ವಿಶೇಷತೆ

ಕತ್ತೆ ಹಾಲು ಹಸುವಿನ ಹಾಲು ಮತ್ತು ಮಾನವ ಎದೆ ಹಾಲು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದೆ. ಪ್ರೋಟೀನ್ ಜೊತೆಗೆ ಇದು ಜೀವಸತ್ವ, ವಿಶೇಷವಾಗಿ ವಿಟಮಿನ್ ಡಿ ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಕತ್ತೆ ಹಾಲು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ಇವುಗಳಲ್ಲಿ ಹೆಚ್ಚಿನವು ಕಾರ್ಬೋಹೈಡ್ರೇಟ್‌ಗಳಿಂದ ಲ್ಯಾಕ್ಟೋಸ್ ಹಾಲಿನಲ್ಲಿರುವ ಸಕ್ಕರೆಯ ರೂಪದಲ್ಲಿರುತ್ತದೆ.

ಹಸುವಿನ ಹಾಲಿನ ಪ್ರೋಟೀನ್ ಅಲರ್ಜಿಯನ್ನು ಹೊಂದಿರುವ ಅನೇಕ ಜನರು ಕತ್ತೆ ಹಾಲನ್ನು ಅದರ ಕಡಿಮೆ ಕ್ಯಾಸೀನ್ ಮಟ್ಟದಿಂದ ಸೇವಿಸಬಹುದು. ಏಕೆಂದರೆ ಕತ್ತೆ ಹಾಲು ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ.


ಕತ್ತೆ ಹಾಲಿನಲ್ಲಿ ಲ್ಯಾಕ್ಟೋಸ್, ಕ್ಯಾಲ್ಸಿಯಂ ಅನ್ನು ಒಳಗೊಂಡಿದ್ದು, ಬಲವಾದ ಮೂಳೆಗಳಿಗೆ ಅಗತ್ಯವಾದ ಖನಿಜಾಂಶವನ್ನು ಇದು ಒಳಗೊಂಡಿದೆ.

2010ರ ಪ್ರಯೋಗಾಲಯದ ಅಧ್ಯಯನದ ಪ್ರಕಾರ ಕತ್ತೆ ಹಾಲು ಸೈಟೊಕಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೋಟೀನ್‌ಗಳಾಗಿವೆ. ಹಾಲು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲು ಜೀವಕೋಶಗಳಿಗೆ ಕಾರಣವಾಗುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ.

Continue Reading

ಆಹಾರ/ಅಡುಗೆ

Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

ಹೆಚ್ಚು ತಲೆಬಿಸಿಯಿಲ್ಲದೆ, ಬಹುಬೇಗನೆ ಉಪಾಹಾರವೆಂಬ ಕೆಲಸವನ್ನು ಮುಗಿಸಿಕೊಂಡು ಆಫೀಸ್‌ ಹೊರಡಲು, ಮಕ್ಕಳಿಗೆ ಟಿಫನ್‌ ಕಟ್ಟಿಕೊಡಲು ಬ್ರೆಡ್‌ ಸರಳವಾಗಿ ದಕ್ಕುವ ಆಹಾರಗಳಲ್ಲಿ ಒಂದು. ಬಹುತೇಕರಿಗೆ ಇದು ನಿತ್ಯಾಹಾರವೂ ಹೌದು. ಆದರೆ, ಸಂಸ್ಕರಿಸಿದ ಆಹಾರವಾದ ಬ್ರೆಡ್‌ ನಿಜಕ್ಕೂ ಆರೋಗ್ಯಕರವೇ ಎಂಬ ಪ್ರಶ್ನೆಗೆ ಇಂದು ಎಲ್ಲರಿಗೂ ಉತ್ತರ ಗೊತ್ತೇ ಇದ್ದರೂ, ಬ್ರೆಡ್‌ ತಿನ್ನದೆ ಇರಲು ಸಾಧ್ಯವಿಲ್ಲ ಎಂಬ ಉತ್ತರವೂ ಸಿದ್ಧವಾಗಿರುತ್ತದೆ. ಈ ಬಗ್ಗೆ (Eating Bread) ಇಲ್ಲಿದೆ ಮಾಹಿತಿ.

VISTARANEWS.COM


on

Eating Bread
Koo

ಪಾಶ್ಚಾತ್ಯ ಬೆಳಗಿನ ಉಪಾಹಾರದ ಶೈಲಿ ಇದಾದರೂ, ಭಾರತೀಯ ಮನೆಗಳಲ್ಲೂ ಇಂದು ಬ್ರೆಡ್‌ ಸಾಮಾನ್ಯವಾಗಿದೆ. ಗಡಿಬಿಡಿಯಲ್ಲಿ ಆಫೀಸ್‌ ಹೊರಡುವಾಗ, ಅಡುಗೆ ಮಾಡಿಕೊಳ್ಳಲು ಸಮಯವಿಲ್ಲದಿರುವಾಗ, ಹೊಟ್ಟೆಗೇನೂ ರುಚಿಸದೆ ಇದ್ದಾಗ, ಮಕ್ಕಳಿಗೆ ರುಚಿರುಚಿಯಾದ ಸ್ಯಾಂಡ್‌ವಿಚ್‌ ಮಾಡಿಕೊಡಲು, ಹೀಗೆ ಬ್ರೆಡ್‌ ತಿನ್ನಲು ನಮಗೆ ನಾನಾ ಕಾರಣಗಳು. ಹೆಚ್ಚು ತಲೆಬಿಸಿಯಿಲ್ಲದೆ, ಬಹುಬೇಗನೆ ಉಪಹಾರವೆಂಬ ಕೆಲಸವನ್ನು ಮುಗಿಸಿಕೊಂಡು ಆಫೀಸ್‌ ಹೊರಡಲು, ಮಕ್ಕಳಿಗೆ ಟಿಫನ್‌ ಕಟ್ಟಿಕೊಡಲು ಬ್ರೆಡ್‌ ಸರಳವಾಗಿ ದಕ್ಕುವ ಆಹಾರಗಳಲ್ಲಿ ಒಂದು. ಬಹುತೇಕರಿಗೆ ಇದು ನಿತ್ಯಾಹಾರವೂ ಹೌದು. ಆದರೆ, ಸಂಸ್ಕರಿಸಿದ ಆಹಾರವಾದ ಬ್ರೆಡ್‌ ನಿಜಕ್ಕೂ ಆರೋಗ್ಯಕರವೇ ಎಂಬ ಪ್ರಶ್ನೆಗೆ ಇಂದು ಎಲ್ಲರಿಗೂ ಉತ್ತರ ಗೊತ್ತೇ ಇದ್ದರೂ, ಬ್ರೆಡ್‌ ತಿನ್ನದೆ ಇರಲು ಸಾಧ್ಯವಿಲ್ಲ ಎಂಬ ಉತ್ತರವೂ ಸಿದ್ಧವಾಗಿರುತ್ತದೆ. ಹಾಗಾದರೆ, ನಾವು ನಿತ್ಯವೂ ಬಳಸುವ ಬ್ರೆಡ್‌ನ ಬಗ್ಗೆ, ಅದರಲ್ಲಿ ಬಳಸಲಾದ ವಸ್ತುಗಳ ಬಗ್ಗೆ ನಾವು ಸ್ವಲ್ಪ ಹೆಚ್ಚು ಜಾಗೃತರಾಗಿದ್ದರೆ ನಮ್ಮ ಹೊಟ್ಟೆ ಸೇರಿದ ಬ್ರೆಡ್‌ನ ಗುಣಮಟ್ಟ ನಮಗೆ ತಿಳಿಯುತ್ತದೆ. ಹಾಗಾದರೆ ಬನ್ನಿ, ನೀವು ಬ್ರೆಡ್‌ ಖರೀದಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು (Eating Bread) ಎಂಬುದನ್ನು ನೋಡೋಣ.

Bread Foods You Should Never Refrigerate

ಬ್ರೆಡ್‌ ಕೊಳ್ಳುವಾಗ ಗಮನಿಸಿ

ಬ್ರೆಡ್‌ ಮಾಡುವ ಸಂದರ್ಭ ಸಕ್ಕರೆ ಹಾಕಿಯೇ ಇರುತ್ತಾರೆ ಎಂಬ ಸತ್ಯ ಈಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ನಿಜ. ಯಾಕೆಂದರೆ ಬ್ರೆಡ್‌ಗಾಗಿ ಬಳಸುವ ಈಸ್ಟ್‌ ಅನ್ನು ಆಕ್ಟಿವೇಟ್‌ ಮಾಡಲು ಸಕ್ಕರೆ ಬೇಕೇ ಬೇಕು. ಹಾಗಾಗಿ ನೀವು ಯಾವಾಗಲೂ ಬ್ರೆಡ್‌ ಖರೀದಿಸುವ ಮೊದಲು ಕೆಲವು ಅಂಶಗಳನ್ನು ನೆನಪಿಟ್ಟುಕೊಳ್ಳಲೇಬೇಕು. ಬ್ರೆಡ್‌ನ ಹಿಂಬದಿಯಲ್ಲಿ ಬರೆದ ಪಟ್ಟಿಯಲ್ಲಿ ಸಕ್ಕರೆ ಎಷ್ಟು ಬಳಸಿದ್ದಾರೆಂದು ಪರೀಕ್ಷಿಸಿ. ಒಂದಲ್ಲ ಒಂದು ವಿಧದಲ್ಲಿ ಕೆಲವೊಮ್ಮೆ ಬೇರೆ ಮೂಲಗಳ ಮೂಲಕವೂ ಸೇರಿಸಲ್ಪಟ್ಟಿರುತ್ತದೆ. ಕೇವಲ ಸಕ್ಕರೆಯಷ್ಟೇ ಅಲ್ಲ, ಎಲ್ಲ ಮೂಲಗಳ ಮೂಲಕ ಸಕ್ಕರೆ ಎಷ್ಟು ಸೇರಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ ಫ್ಯಾಕ್ಟರಿಗಳಲ್ಲಿ ಮಾಡುವ ಬ್ರೆಡ್‌ನಲ್ಲಿ ಹೆಚ್ಚು ಸಕ್ಕರೆ ಇರುತ್ತದೆ. ಅಲ್ಲದೆ, ಕಬ್ಬಿನ ಹಾಲು, ಜೇನುತುಪ್ಪ ಅಥವಾ ಇನ್ನಾವುದೇ ಮೂಲಗಳ ಮೂಲಕವೂ ಸಕ್ಕರೆ ಸೇರಿರಬಹುದು.

ಉಪ್ಪಿನ ಪ್ರಮಾಣ ಎಷ್ಟಿದೆ ನೋಡಿ

ಬ್ರೆಡ್‌ ಮಾಡುವ ಸಂದರ್ಭ ಅದಕ್ಕಾಗಿ ಬಳಸಿದ ಸಕ್ಕರೆಯಂತೆ ಉಪ್ಪಿನ ಪ್ರಮಾಣವೂ ಗಮನದಲ್ಲಿರಲಿ. ಬ್ರೆಡ್‌ ಮಾಡಲು ಬಳಸಿದ ವಸ್ತುಗಳ ಪಟ್ಟಿಯಲ್ಲಿ ಉಪ್ಪು ಎಷ್ಟು ಸೇರಿಸಲಾಗಿದೆ ಎಂದು ಪರೀಕ್ಷಿಸಿಕೊಳ್ಳಿ. ಬಹಳಷ್ಟು ಸಾರಿ ರುಚಿಯನ್ನು ಹೆಚ್ಚಿಸಲು, ಅಗತ್ಯಕ್ಕಿಂತಲೂ ಹೆಚ್ಚು ಉಪ್ಪನ್ನು ಫ್ಯಾಕ್ಟರಿಗಳು ಬಳಸುತ್ತವೆ. ಒಂದು ಅಂದಾಜಿನ ಪ್ರಕಾರ ಸಂಶೋಧನೆಯೊಂದು ಹೇಳಿದಂತೆ ಒಂದು ಬ್ರೆಡ್‌ ಸ್ಲೈಸ್‌ನಲ್ಲಿ 100ರಿಂದ 200 ಎಂಜಿ ಸೋಡಿಯಂಗಿಂತ ಹೆಚ್ಚಿರಬಾರದು. ಹಾಗಾಗಿ ಇದನ್ನು ಪರೀಕ್ಷೆ ಮಾಡಿಕೊಂಡೇ ಖರೀದಿಸಿ.

ಯಾವ ಪದಾರ್ಥ ಬಳಸಿದ್ದಾರೆ ನೋಡಿ

ಉಪ್ಪು ಹಾಗೂ ಸಕ್ಕರೆಯಷ್ಟೇ ಅಲ್ಲ, ನೀವು ಖರೀದಿಸಿದ ಬ್ರೆಡ್‌ನಲ್ಲಿ ಯಾವೆಲ್ಲ ಪದಾರ್ಥಗಳನ್ನು ಬಳಸಲಾಗಿದೆ ಎಂದು ನೋಡಿ. ಬಿಳಿಯಾದ ಮೈದಾದ ಬ್ರೆಡ್‌ನ ಬದಲು ಗೋಧಿಯ ಬ್ರೆಡ್‌ ಬಳಸಿ. ಬಹಳಷ್ಟು ಸಾರಿ ಗೋಧಿಯ ಬ್ರೆಡ್‌ನಲ್ಲೂ ಕಡಿಮೆ ಪ್ರಮಾಣದಲ್ಲಿ ಗೋಧಿ ಬಳಕೆಯಾಗಿರುತ್ತದೆ ಎಂಬ ಸತ್ಯವೂ ನಿಮಗೆ ಗೊತ್ತಿರಲಿ. ಹೀಗಾ ಗಿ ಶೇ.100ರಷ್ಟು ಗೋಧಿ ಅಥವಾ ಹೋಲ್‌ ವೀಟ್‌ ಬ್ರೆಡ್‌ ಎಂದು ಬರೆದಿರುವ ಬ್ರೆಡ್‌ ಖರೀದಿಸಿ. ಅಥವಾ ಮಲ್ಟಿಗ್ರೈನ್‌ ಬ್ರೆಡ್‌ ಖರೀದಿಸಿ.

Image Of Bread Health Benefits

ತಯಾರಿ ದಿನ ಗಮನಿಸಿ

ಬ್ರೆಡ್‌ ಖರೀದಿಸುವಾಗ ಎಲ್ಲಕ್ಕಿಂತ ಮೊದಲು ಪರೀಕ್ಷಿಸಬೇಕಾದ್ದು ಅದನ್ನು ತಯಾರಿಸಿದ ದಿನಾಂಕ ಹಾಗೂ ಎಷ್ಟು ದಿನ ಬಳಸಬಹುದೆಂಬ ದಿನಾಂಕ. ದಿನಾಂಕ ಮುಗಿದುಹೋದ ಬ್ರೆಡ್‌ನನ್ನು ಬಳಸಲೇಬೇಡಿ. ಹಾಳಾಗಿರದಂತೆ ಕಂಡರೂ ಬಳಸಬೇಡಿ. ಆದಷ್ಟೂ ತಾಜಾ ಬ್ರೆಡ್ಡನ್ನೇ ಖರೀದಿಸಿ. ಕೆಲವೊಮ್ಮೆ ಅಂಗಡಿಗಳಲ್ಲಿ ಇಟ್ಟಿರುವ ಬ್ರೆಡ್‌ ಅನ್ನು ಇಲಿಯೋ, ಕೀಟವೋ ಕಡಿದು ಸಣ್ಣ ತೂತುಗಳೂ ಆಗಿರುತ್ತವೆ. ಗಡಿಬಿಡಿಯಲ್ಲಿ ಖರೀದಿಸುವಾಗ ಇವು ಕಾಣುವುದಿಲ್ಲ. ಹೀಗಾಗಿ, ಬ್ರೆಡ್‌ನ ಪ್ಯಾಕ್‌ಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಖರೀದಿಸುವಾಗಲೇ ಖಚಿತಪಡಿಸಿಕೊಳ್ಳಿ.

ಕೃತಕ ಪ್ರಿಸರ್ವೇಟಿವ್‌ ಗಮನಿಸಿ

ಬ್ರೆಡ್‌ನಲ್ಲಿ ಬಳಸಲಾದ ಕೃತಕ ಪ್ರಿಸರ್ವೇಟಿವ್‌ಗಳನ್ನು ಗಮನಿಸಿ. ಆದಷ್ಟೂ ತಾಜಾ ಬ್ರೆಡ್ಡನ್ನೇ ಖರೀದಿಸಿ. ಹೆಚ್ಚು ದಿನ ಉಳಿಯಬಲ್ಲ ಬ್ರೆಡ್‌ಗಳಲ್ಲಿ ಖಂಡಿತವಾಗಿಯೂ ಪ್ರಿಸರ್ವೇಟಿವ್‌ಗಳಿರುತ್ತವೆ.

Dietary Fiber Bread Health Benefits Whole grain bread is rich in dietary fiber, which aids in digestion, helps maintain bowel regularity, and can contribute to a feeling of fullness, potentially aiding in weight management.

ನಾರಿನಂಶ ಮುಖ್ಯ

ಬ್ರೆಡ್‌ನಲ್ಲಿ ಎಷ್ಟು ನಾರಿನಂಶ ಇದೆ ಎಂದು ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ ಬ್ರೆಡ್‌ ಮಾಡಿದ ಮೇಲೆ ನಾರಿನಂಶವನ್ನು ಕಳೆದುಕೊಳ್ಳುತ್ತದೆ. ನಾರಿನಂಶ ಹೆಚ್ಚಿರುವ ಬ್ರೆಡ್‌ ಯಾವಾಗಲೂ ಉತ್ತಮ ಆಯ್ಕೆ.

ಇದನ್ನೂ ಓದಿ: Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Continue Reading

ಆಹಾರ/ಅಡುಗೆ

Top 10 Puddings: ಭಾರತದ ಫಿರ್ನಿ, ಖೀರು, ಸಿಹಿ ಪೊಂಗಲ್‌ಗೆ ವಿಶ್ವದ ಟಾಪ್‌ 10 ತಿಂಡಿ ಪಟ್ಟಿಯಲ್ಲಿ ಸ್ಥಾನ!

ಭಾರತ ತನ್ನ ಸಿಹಿತಿಂಡಿಯ (Top 10 Puddings) ವಿಚಾರದಲ್ಲೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಟೇಸ್ಟ್‌ ಅಟ್ಲಾಸ್‌ ನಡೆಸುವ ಸ್ಪರ್ಧೆಯಲ್ಲಿ ವಿಶ್ವದ ಅತ್ಯಂತ ರುಚಿಕರ ಟಾಪ್‌ 10 ರೈಸ್‌ ಪುಡ್ಡಿಂಗ್‌ಗಳ ಪೈಕಿ ಭಾರತದ ಮೂರು ಬಗೆಯ ಪುಡ್ಡಿಂಗ್‌ ಸ್ಥಾನ ಪಡೆದಿರುವುದು ವಿಶೇಷ. ಆ ಮೂಲಕ ನಮ್ಮ ಸರಳವಾದ ಸಿಹಿತಿನಿಸುಗಳ ಪೈಕಿ ಒಂದಾದ ತಮಿಳುನಾಡಿನ ಸಿಹಿ ಪೊಂಗಲ್‌, ಪಂಜಾಬಿನ ಫಿರ್ನಿ ಹಾಗೂ ಒಡಿಶಾದ ಖೀರ್‌ ವಿಶ್ವಮಟ್ಟದಲ್ಲಿ ಸಿಹಿರುಚಿಯ ಮಾನ್ಯತೆ ಪಡೆದಿವೆ.

VISTARANEWS.COM


on

Top 10 Puddings
Koo

ಭಾರತ ಪಾಕಶಾಸ್ತ್ರದಲ್ಲಿ (Top 10 Puddings) ಹೆಸರು ಮಾಡಿದ ದೇಶ. ಭಾರತದ ಬಗೆಬಗೆಯ ಆಹಾರಗಳು, ತಿನಿಸುಗಳು, ವೈವಿಧ್ಯಮಯ ಸಿಹಿತಿಂಡಿಗಳು ಪ್ರಪಂಚದಾದ್ಯಂತ ಹೆಸರು ಮಾಡಿದೆ. ದೇಶವಿದೇಶಗಳಿಂದ ಇಲ್ಲಿನ ಆಹಾರ ಸವಿಯಲೆಂದೇ ಪ್ರವಾಸಿಗರು ಬರುತ್ತಾರೆ. ಸಿಹಿತಿಂಡಿ ಇಲ್ಲಿನ ಜನರ ನಿತ್ಯದ ಆಹಾರಾಭ್ಯಾಸ. ಹಬ್ಬಗಳು ಬಂದರಂತೂ ಈ ಸಿಹಿ ತಿನಿಸುಗಳ ಸಡಗರ ಇನ್ನೂ ಹೆಚ್ಚುತ್ತದೆ. ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಧರ್ಮಗಳ, ಬೇಋಎ ಬೇರೆ ಆಚರಣೆಗಳನ್ನು ಹೊಂದಿದ ಜನರ ಬಗೆಬಗೆಯ ಆಹಾರಾಭ್ಯಾಸಗಳು, ತಿನಿಸುಗಳು ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಸಾಕ್ಷಿ. ಇದೀಗ, ಭಾರತ ತನ್ನ ಸಿಹಿತಿಂಡಿಯ ವಿಚಾರದಲ್ಲೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಟೇಸ್ಟ್‌ ಅಟ್ಲಾಸ್‌ ನಡೆಸುವ ಸ್ಪರ್ಧೆಯಲ್ಲಿ ವಿಶ್ವದ ಅತ್ಯಂತ ರುಚಿಕರ ಟಾಪ್‌ 10 ರೈಸ್‌ ಪುಡ್ಡಿಂಗ್‌ಗಳ ಪೈಕಿ ಭಾರತದ ಮೂರು ಬಗೆಯ ಪುಡ್ಡಿಂಗ್‌ ಸ್ಥಾನ ಪಡೆದಿರುವುದು ವಿಶೇಷ. ಆ ಮೂಲಕ ನಮ್ಮ ಸರಳವಾದ ಸಿಹಿತಿನಿಸುಗಳ ಪೈಕಿ ಒಂದಾದ ತಮಿಳುನಾಡಿನ ಸಿಹಿ ಪೊಂಗಲ್‌, ಪಂಜಾಬಿನ ಫಿರ್ನಿ ಹಾಗೂ ಒಡಿಶಾದ ಖೀರ್‌ ವಿಶ್ವಮಟ್ಟದಲ್ಲಿ ಸಿಹಿರುಚಿಯ ಮಾನ್ಯತೆ ಪಡೆದಿವೆ. ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಅಕ್ಕಿ ಪಾಯಸ ಅಥವಾ ಖೀರ್‌ ಮಾಡುವುದು ಸಾಮಾನ್ಯ. ಈ ಅಕ್ಕಿ ಪಾಯಸಕ್ಕೆ ಐದನೇ ಸ್ಥಾನ ಸಿಕ್ಕಿದರೆ, ನಾಲ್ಕನೇ ಸ್ಥಾನದಲ್ಲಿ ಫಿರ್ನಿ ಇದೆ. ಒಂಭತ್ತನೇ ಸ್ಥಾನದಲ್ಲಿ ತಮಿಳುನಾಡಿನ ಪ್ರಸಿದ್ಧ ಸಕ್ಕರೆ ಪೊಂಗಲ್‌ ಅಥವಾ ಸಿಹಿ ಪೊಂಗಲ್‌ ಆಯ್ಕೆಯಾಗಿದೆ.
ಸಾಂಪ್ರದಾಯಿಕ ತಿನಿಸು ಫಿರ್ನಿಯನ್ನು ಸಾಮಾನ್ಯವಾಗಿ ಪುಟ್ಟ ಪುಟ್ಟ ಮಣ್ಣಿನ ಮಡಕೆಗಳಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ತಿನ್ನುವುದು ರೂಢಿ. ಬೇಸಿಗೆಯಲ್ಲಿ ಐಸ್‌ಕ್ರೀಂನಂತೆ ಹಿತವಾಗಿರುವ ಸಾಂಪ್ರದಾಯಿಕ ಶೈಲಿಯ ಸಿಹಿತಿನಿಸಿದು. ಗುಲಾಬಿ ದಳಗಳು, ಪಿಸ್ತಾ ಬಾದಾಮಿಯ ಚೂರುಗಳಿಂದ ಅಲಂಕರಿಸಿ ಕೊಡಲಾಗುತ್ತದೆ.

Sweet kheer

ಸಿಹಿಯಾದ ಖೀರು

ಅಕ್ಕಿಯನ್ನು ಬಳಸಿ ಮಾಡಲಾಗುವ ಸಿಹಿಯಾದ ಖೀರು, ಯಾವುದೇ ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ದೇವರಿಗೆ ನೈವೇದ್ಯ ಇಡಲು ಮಾಡಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಹಾಲು ಹಾಕಿ ಕೇಸರಿಯನ್ನು ಉದುರಿಸಿ ಮಾಡುವ ಸರಳವಾದ ಪಾಯಸವಿದು. ಉತ್ತರ ಭಾರತ, ದಕ್ಷಿಣ ಭಾರತವೆಂಬ ಬೇಧವಿಲ್ಲದೆ, ಈ ಸಿಹಿಯನ್ನು ಎಲ್ಲೆಡೆ ಮಾಡುತ್ತಾರೆ.

Sweet Pongal

ಸಿಹಿ ಪೊಂಗಲ್‌

ಸಿಹಿ ಪೊಂಗಲ್‌ ಅಥವಾ ಸಕ್ಕರೆ ಪೊಂಗಲ್‌ ತಮಿಳುನಾಡಿನ ಪ್ರಖ್ಯಾತ ಸಿಹಿತಿನಿಸು. ಹೆಸರು ಬೇಳೆ ಹಾಗೂ ಅಕ್ಕಿಯನ್ನು ಒಟ್ಟಿಗೆ ಬೇಯಿಸಿ ಬೆಲ್ಲ ಹಾಗೂ ತುಪ್ಪ ಹಾಕಿ ಮಾಡುವ ಘಮಘಮಿಸುವ ಸಿಹಿ ಪಾಯಸವಿದು. ಸಾಂಪ್ರದಾಯಿಕ ಹೊಸ ವರ್ಷವಾದ ಪೊಂಗಲ್‌ ಹಬ್ಬದ ಆಚರಣೆಯ ಸಂದರ್ಭ ಸಿಹಿ ಪೊಂಗಲ್‌ ಅನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಮಾಡಿ, ದೇವರಿಗೆ ಇಟ್ಟು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಬಹಳ ರುಚಿಯಾದ ಸರಳವಾದ ಪಾಯಸವಿದು.

Firin Sutlac

ಟರ್ಕಿಗೆ ಮೊದಲ ಸ್ಥಾನ

ಈ ಸ್ಪರ್ಧೆಯಲ್ಲಿ, ಮೊದಲ ಸ್ಥಾನದಲ್ಲಿ ಟರ್ಕಿಯ ಫಿರಿನ್‌ ಸುಟ್‌ಲ್ಯಾಕ್‌, ಎರಡನೇ ಸ್ಥಾನದಲ್ಲಿ ಥಾಯ್ಲೆಂಡಿನ ಖಾವೋ ನಿಯಾವೋ ಮಾಮುಅಂಗ್‌, ಮೂರನೇ ಸ್ಥಾನದಲ್ಲಿ ಶೋಲೆಹ್‌ ಝರ್ದ್‌ ಇವೆ. ನಾಲ್ಕನೇ ಸ್ಥಾನದಲ್ಲಿ ಭಾರತದ ಫಿರ್ನಿ, ಐದನೇ ಸ್ಥಾನದಲ್ಲಿ ನಮ್ಮ ಖೀರ್‌ ಇವೆ. ಇವಲ್ಲದೆ, ಡೆನ್ಮಾರ್ಕ್‌, ಟರ್ಕಿ, ಪೋರ್ಚುಗಲ್‌ನ ಸಿಹಿ ತಿನಿಸುಗಳೂ ಸ್ಥಾನ ಪಡೆದುಕೊಂಡಿವೆ.

ಇದನ್ನೂ ಓದಿ: Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!

Continue Reading
Advertisement
Rachita Taneja
ದೇಶ2 mins ago

Rachita Taneja: ಭಾರತದ ಕಾರ್ಟೂನಿಸ್ಸ್ ರಚಿತಾ ತನೇಜಾಗೆ ಕೋಫಿ ಅನ್ನಾನ್‌ ಪ್ರಶಸ್ತಿ ಗರಿ

Rahul Gandhi
ಪ್ರಮುಖ ಸುದ್ದಿ4 mins ago

Rahul Gandhi : ಮಹಾತ್ಮ ರಾಹುಲ್​, ಕುತಂತ್ರಿ ಗಾಂಧೀಜಿ; ಚರ್ಚೆಗೆ ಗ್ರಾಸವಾಯ್ತು​ ಕಾಂಗ್ರೆಸ್​ ನಾಯಕನ ಹೇಳಿಕೆ

Prajwal Revanna Case Kidnapping case filed against Revanna Anticipatory bail plea postponed
ಕ್ರೈಂ7 mins ago

Prajwal Revanna Case: ರೇವಣ್ಣ ಮೇಲೆ ಕಿಡ್ನ್ಯಾಪ್‌ ಕೇಸ್;‌ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ, ನಾಳೆ SIT ಮುಂದೆ ಹಾಜರ್‌?

Prajwal Revanna Case HD Revanna ready to leave the country SIT issues lookout notice
ಕ್ರೈಂ34 mins ago

Prajwal Revanna Case: ದೇಶ ಬಿಟ್ಟು ಹೋಗಲು ಸಜ್ಜಾದರೇ ಎಚ್.ಡಿ. ರೇವಣ್ಣ? ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ SIT!

IPL 2024
Latest39 mins ago

IPL 2024 : ಕೊಹ್ಲಿಯ ಸ್ಟ್ರೈಕ್ ರೇಟ್ ಪ್ರಶ್ನಿಸುವವರಿಗೆ ತಕ್ಕ ಪಾಠ ಹೇಳಿದ ಕೈಫ್​, ಪಠಾಣ್​​

Faisal Raza Abidi
ದೇಶ44 mins ago

2026ರಲ್ಲಿ ಭಾರತ ಪೀಸ್‌ ಪೀಸ್‌ ಆಗುತ್ತದೆ ಎಂದ ಪಾಕ್‌ ಮಾಜಿ ಸಂಸದ; ಮೋದಿ ಹಿಂದುತ್ವವೂ ಪತನ ಎಂದು ಹೇಳಿಕೆ!

Wonderla Bengaluru
ಕರ್ನಾಟಕ52 mins ago

Wonderla Bengaluru: ಬೇಸಿಗೆ ರಜೆಯನ್ನು ಇನ್ನಷ್ಟು ಮಜವಾಗಿಸಲು ವಂಡರ್‌ಲಾದಲ್ಲಿ ʼಸಮ್ಮರ್‌ಲಾ ಫಿಯೆಸ್ಟಾ-2024ʼ: ಭರಪೂರ ಆಫರ್ಸ್‌

training for election duty staff in Karwar
ಉತ್ತರ ಕನ್ನಡ55 mins ago

Lok Sabha Election 2024: ಗೊಂದಲಕ್ಕೆ ಅವಕಾಶವಿಲ್ಲದೆ ಚುನಾವಣೆ ನಡೆಸಲು ಉ.ಕ ಡಿಸಿ ಸೂಚನೆ

IPL 2024
ಕ್ರೀಡೆ1 hour ago

IPL 2024 : ರಾಜಸ್ಥಾನ್​ ಸೋಲಿನ ಬಳಿಕ ಮೊಹಮ್ಮದ್ ಕೈಫ್​ ಟ್ರೋಲ್ ಮಾಡಿದ ವಾಸಿಮ್ ಜಾಫರ್​!

Rohith Vemula
ದೇಶ2 hours ago

Rohith Vemula: ರೋಹಿತ್‌ ವೇಮುಲ ದಲಿತನೇ ಅಲ್ಲ ಎಂದ ಪೊಲೀಸರು; ಕೇಸ್‌ ಕ್ಲೋಸ್‌, ಸ್ಮೃತಿ ಇರಾನಿ ಸೇರಿ ಹಲವರಿಗೆ ಕ್ಲೀನ್‌ ಚಿಟ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ5 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ16 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌