Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು! - Vistara News

ಆಹಾರ/ಅಡುಗೆ

Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು!

ಚಳಿಗಾಲದಲ್ಲಿ ದೇಹವನ್ನು (winter food tips) ಬಿಸಿ ಮಾಡುವ ಕೆಲವು ಸಿಹಿತಿನಿಸುಗಳನ್ನು ಮಾಡಿ ತಿನ್ನಬಹುದು. ಚಳಿಗಾಲಕ್ಕೆಂದೇ ವಿಶೇಷವಾಗಿರುವ ಅವುಗಳನ್ನು ತಿನ್ನುವುದರಿಂದ ದೇಹ ಬೆಚ್ಚಗೂ ಇರುತ್ತದೆ, ನಮ್ಮ ಆಸೆಯೂ ನೆರವೇರಿ, ದೇಹ ಮನಸ್ಸಿಗೂ ಸಮಾಧಾನವಾಗುತ್ತದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Winter Food Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಳಿಗಾಲದಲ್ಲಿ (winter food tips) ಬಾಯಿಚಪಲ ಹೆಚ್ಚು. ಎಷ್ಟೇ ಕಡಿಮೆ ತಿನ್ನಬೇಕು ಎಂದುಕೊಂಡರೂ, ಮನಸ್ಸು ತಡೆಯದೆ ನಮ್ಮದೇ ವ್ರತವನ್ನು ನಾವು ಮುರಿಯುತ್ತೇವೆ. ಇಷ್ಟು ತಿನ್ನುವುದು ಒಳ್ಳೆಯದಲ್ಲ ಎಂದು ಅಂದುಕೊಂಡರೂ, ಚಳಿ ಹೆಚ್ಚು ತಿನ್ನುವಂತೆ ಮಾಡುತ್ತದೆ. ಬಿಸಿಬಿಸಿ ಬಜ್ಜಿ ಬೋಂಡಾಗಳು, ಸಿಹಿತಿನಿಸುಗಳು, ಮನೆಯಲ್ಲಿ ಗರಮಾಗರಂ ಚಹಾ, ರಸ್ತೆಬದಿಯಲ್ಲಿ ಕಂಡ ಬಿಸಿಬಿಸಿ ಜಿಲೇಬಿ, ಹೀಗೆ ಒಂದೇ ಎರಡೇ, ನಾನಾ ಆಸೆಗಳು, ಚಳಿಗಾಲದಲ್ಲಿ ಗರಿಗೆದರಿ ಬಿಡುತ್ತವೆ. ಆರೋಗ್ಯದ ದೃಷ್ಟಿಯಿಂದ ಕೆಲವು ಆಸೆಗಳನ್ನು ಬಿಡಲೇಬೇಕಾಗುತ್ತದೆ, ನಿಜ. ಆದರೆ, ನಾವು ಅಷ್ಟೂ ನಿರಾಸೆಗೊಳ್ಳಬೇಕಿಲ್ಲ. ಚಳಿಗಾಲದಲ್ಲಿ ದೇಹವನ್ನು ಬಿಸಿ ಮಾಡುವ ಕೆಲವು ಸಿಹಿತಿನಿಸುಗಳನ್ನು ಮಾಡಿ ಅಥವಾ ಕೊಂಡು ತಿನ್ನಬಹುದು. ಚಳಿಗಾಲಕ್ಕೆಂದೇ ವಿಶೇಷವಾಗಿರುವ ಅವುಗಳನ್ನು ತಿನ್ನುವುದರಿಂದ ದೇಹ ಬೆಚ್ಚಗೂ ಇರುತ್ತದೆ, ನಮ್ಮ ಆಸೆಯೂ ನೆರವೇರಿ, ದೇಹ ಮನಸ್ಸಿಗೂ ಸಮಾಧಾನವಾಗುತ್ತದೆ. ಬನ್ನಿ, ಚಳಿಗಾಲದಲ್ಲಿ ತಿನ್ನಲೇಬೇಕಾದ ದೇಹವನ್ನು ಬೆಚ್ಚಗಿಡುವ ಸಿಹಿತಿನಿಸುಗಳು ಯಾವುವು ಎಂಬುದನ್ನು ನೋಡೋಣ.

gond ke laddu
Gajjak

ಗೋಂದಿನ ಲಡ್ಡು

ಗೋಂದು, ಮರದಿಂದ ಸ್ರವಿಸಲ್ಪಡುವ ಅಂಟು. ಸಿಹಿತಿನಿಸುಗಳನ್ನು ಮಾಡಲು ಅಂಟಿಗಾಗಿ ಬಳಸುತ್ತಾರೆ. ಈ ಅಂಟಿನದೇ ಲಡ್ಡನ್ನು ಮಾಡಿ ತಿಂದರೆ ಹೇಗೆ ಹೇಳಿ. ಹೌದು, ಗೋಂದಿನ ಲಡ್ಡು ಬಲು ರುಚಿ. ದೇಹಕ್ಕೂ ಒಳ್ಳೆಯದು. ಗೋಧಿ ಹುಡಿ, ತುಪ್ಪ, ಒಣ ಬೀಜಗಳ ಜೊತೆಗೆ ಗೋಂದನ್ನೂ ಹಾಕಿ ಮಾಡುವ ಈ ಲಡ್ಡು ಚಳಿಗಾಲಕ್ಕೆ ದೇಹ ಬೆಚ್ಚಗಿಡಲು ಹೇಳಿ ಮಾಡಿಸಿದ ಲಡ್ಡು.

Dry fruits laddu

ಒಣಹಣ್ಣುಗಳ ಲಡ್ಡು

ದ್ರಾಕ್ಷಿ, ಬಾದಾಮಿ, ಗೋಡಂಬಿ, ಖರ್ಜೂರ ಸೇರಿದಂತೆ ಬಗೆಬಗೆಯ ಒಣಹಣ್ಣುಗಳು ಹಾಗೂ ಬೀಜಗಳನ್ನು ಹಾಕಿ ಮಾಡುವ ಲಡ್ಡು ಚಳಿಗಾಲಕ್ಕೆ ಬಹಳ ಒಳ್ಳೆಯದು. ಆರೋಗ್ಯಕ್ಕೂ ಹಾನಿಯಿಲ್ಲದ, ಸಕ್ಕರೆಯನ್ನೂ ಸೇರಿಸದೆ ಮಾಡಬಹುದಾದ ಈ ಲಡ್ಡನ್ನು ಯಾವ ಸಂದೇಹವೂ ಇಲ್ಲದೆ ತಿನ್ನಬಹುದು. ಇದು ದೇಹವನ್ನು ಬೆಚ್ಚಗೂ, ಗಟ್ಟಿಯಾಗಿಯೂ ಇಡುತ್ತದೆ.

Wheat halwa

ಗೋಧಿ ಹಲ್ವಾ

ಪಂಜಾಬಿಗಳ ಅತ್ಯಂತ ಪ್ರಸಿದ್ಧ ಸಿಹಿತಿನಿಸಿದು. ಗೋಧಿ ಹುಡಿಯಿಂದ ಮಾಡುವ ಈ ಹಲ್ವಾವನ್ನು ಪ್ರಸಾದವಾಗಿಯೂ ನೀಡಲಾಗುತ್ತದೆ. ಶಕ್ತಿ ನೀಡುವ, ದೇಹವನ್ನೂ ಬೆಚ್ಚಗಿಡುವ ಸಿಹಿತಿನಿಸಿದು.

Sesame laddu

ಎಳ್ಳುಂಡೆ

ಎಳ್ಳು ಉಷ್ಣಾಹಾರ. ಚಳಿಗಾಲಕ್ಕೆ ಎಳ್ಳು ತಿನ್ನಲೇಬೇಕು. ಸಾಕಷ್ಟು ಕ್ಯಾಲ್ಶಿಯಂ ಹಾಗೂ ಬಹುತೇಕ ಎಲ್ಲ ಪೋಷಕಾಂಶಗಳನ್ನೂ ಹೊಂದಿರುವ ಎಳ್ಳನ್ನು ಉಂಡೆ ಮಾಡಿ ಚಳಿಗಾಲದಲ್ಲಿ ತಿನ್ನುವುದು ಸಾಮಾನ್ಯ. ಬೆಲ್ಲದ ಪಾಕದಲ್ಲಿ ಎಳ್ಳನ್ನು ಉಂಡೆಗಟ್ಟಿ ಮಾಡುವ ಈ ಸರಳ ಸಿಹಿತಿಂಡಿ ಬಹಳ ಒಳ್ಳೆಯದು. ಪ್ರತಿಯೊಬ್ಬರೂ ಚಳಿಗಾಲದಲ್ಲಿ ಇದನ್ನು ತಿನ್ನಲೇಬೇಕು!

Carrot Halwa

ಕ್ಯಾರೆಟ್‌ ಹಲ್ವಾ

ಚಳಿಗಾಲದ ಇನ್ನೊಂದು ತಿನ್ನಲೇಬೇಕಾದ ಪ್ರಸಿದ್ಧ ಸಿಹಿತಿನಿಸು. ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಕ್ಯಾರೆಟ್ಟನ್ನು ತಿರಿದು ಹಲ್ವಾ ಮಾಡುವುದೆಂದರೆ ಅದೊಂದು ಸಂಪ್ರದಾಯ. ದೇಹವನ್ನು ಇವು ಬೆಚ್ಚಗೂ ಇಡುತ್ತವೆ. ಪೋಷಕಾಂಶಗಳಿಂದಲೂ ಸಮೃದ್ಧ.

moong dal halwa

ಹೆಸರುಬೇಳೆ ಹಲ್ವಾ

ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಮಾಡುವ ಇನ್ನೊಂದು ಹಲ್ವಾ ಹೆಸರುಬೇಳೆ ಹಲ್ವಾ. ಇದೂ ಕೂಡಾ ದೇಹವನ್ನು ಬೆಚ್ಚಗಿಡುವ ಗುಣವನ್ನು ಹೊಂದಿದೆ. ಸಾಕಷ್ಟು ಪ್ರೊಟೀನ್‌ ಹೊಂದಿರುವ ಈ ಸಿಹಿತಿನಿಸು ಚಳಿಗಾಲಕ್ಕೆ ಒಳ್ಳೆಯದು.

Date barfi

ಖರ್ಜೂರದ ಬರ್ಫಿ

ಖರ್ಜೂರದ ಯಾವುದೇ ಬಗೆಯ ಸಿಹಿತಿನಿಸನ್ನು ತಿನ್ನಲು ಚಳಿಗಾಲ ಸಕಾಲ. ಇದರಲ್ಲಿ ಹೇರಳವಾಗಿ ಕಬ್ಬಿಣಾಂಶವಿದ್ದು ಸಾಕಷ್ಟು ಉಷ್ಣ ಪ್ರಕೃತಿಯನ್ನೂ ಹೊಂದಿದೆ. ದೇಹ ಗಟ್ಟಿಮುಟ್ಟಾಗಲು ಇದು ಒಳ್ಳೆಯದು. ಚಳಿಗಾಲದಲ್ಲಿ ಖರ್ಜೂರದ ವಿವಿಧ ಸಿಹಿತಿನಿಸು ಮಾಡಿ ಅಥವಾ ಹಾಗೆಯೇ ತಿನ್ನುವುದು ಒಳ್ಲೆಯದು.

Gajjak

ಚಿಕ್ಕಿ/ಗಜ್ಜಕ್

ಚಳಿಗಾಲದಲ್ಲಿ ಸಾಮಾನ್ಯವಾಗುತ್ತರಭಾರತದಲ್ಲಿ ಬಹುತೇಕ ಎಲ್ಲರೂ ಮರೆಯದೆ ತಿನ್ನುವ ಸರಳ ಸಿಹಿತಿನಿಸು. ಬೆಲ್ಲದ ಪಾಕದಲ್ಲಿ ಹಾಕಿದ ನೆಲಗಡಲೆ, ಬೀಜಗಳು ಹಾಗೂ ಎಳ್ಳಿನಿಂದ ಈ ಸಿಹಿತಿನಿಸನ್ನು ಮಾಡುತ್ತಾರೆ. ದೇಹವನ್ನು ಬೆಚ್ಚಗಿಡುವ ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಸಿಹಿತಿನಿಸಿದು.

ಇದನ್ನೂ ಓದಿ: Winter Foods: ಚಳಿಯಲ್ಲಿ ಮೆದುಳಿನ ಆರೈಕೆಗೆ ಬೇಕು ಈ ಆಹಾರಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

Shravan 2024: ಶ್ರಾವಣ ಮಾಸದಲ್ಲಿ (Shravan Month 2024) ಹೆಚ್ಚಾಗಿ ದೇವರ ಭಕ್ತಿ, ಪ್ರಾರ್ಥನೆಯಲ್ಲಿ ತೊಡಗುವುದರಿಂದ ಆಹಾರ ನಿಯಮಗಳನ್ನು ಕಠಿಣವಾಗಿ ಅನುಸರಿಸಲಾಗುತ್ತದೆ. ಉಪವಾಸ ಇರುವವರು ಈ ಸಂದರ್ಭದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಧ್ಯಾತ್ಮಿಕ ಗಮನವನ್ನು ಕೇಂದ್ರೀಕರಿಸಬಹುದು.

VISTARANEWS.COM


on

By

Shravan Month 2024
Koo

ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ (da.ra. bendre) ಕವನದ ಸಾಲುಗಳು ಶ್ರಾವಣ ಮಾಸದ (Shravan 2024) ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು (Shravan Month) ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.

ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು

Shravan Month 2024
Shravan Month 2024


ತಾಜಾ ಹಣ್ಣುಗಳು: ಶ್ರಾವಣ ಮಾಸದಲ್ಲಿ ತಾಜಾ ಹಣ್ಣುಗಳು ಆಹಾರದ ಅತ್ಯಗತ್ಯ ಭಾಗವಾಗಿದೆ. ಅವುಗಳನ್ನು ಶುದ್ಧ ಮತ್ತು ಜೀರ್ಣಿಸಿಕೊಳ್ಳಲು ಸುಲಭವೆಂದು ಪರಿಗಣಿಸಲಾಗುತ್ತದೆ. ಅಗತ್ಯವಾದ ಪೋಷಕಾಂಶಗಳು ಮತ್ತು ಜಲಸಂಚಯನವನ್ನು ಒದಗಿಸುತ್ತದೆ.ಇದರಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ ಮತ್ತು ಕಲ್ಲಂಗಡಿಗಳು ಸೇರಿವೆ.

ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ.

ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ ವಡಾ ಶ್ರಾವಣ ಮಾಸದ ಮುಖ್ಯವಾದ ಆಹಾರವಾಗಿದೆ. ಸಾಬುದಾನವು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು ದಿನವಿಡೀ ಶಕ್ತಿಯನ್ನು ನೀಡುತ್ತದೆ.

ಹುರುಳಿಕಾಳಿನ ಹಿಟ್ಟು: ಪೂರಿ, ಚಪಾತಿ ಅಥವಾ ಪ್ಯಾನ್ ಕೇಕ್‌ಗಳನ್ನು ತಯಾರಿಸಲು ಹುರುಳಿಕಾಳಿನ ಹಿಟ್ಟನ್ನು ಬಳಸಲಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ ಮತ್ತು ಉಪವಾಸಕ್ಕೆ ಸೂಕ್ತವಾಗಿದೆ.

ಚೆಸ್ ನೆಟ್ ಹಿಟ್ಟು: ಹುರುಳಿ ಹಿಟ್ಟಿನಂತೆಯೇ ಇದು ಪೂರಿ ಮತ್ತು ಹಲ್ವಾದಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಮತ್ತೊಂದು ಉಪವಾಸ ಸ್ನೇಹಿ ಹಿಟ್ಟಾಗಿದೆ.

ಆಲೂಗಡ್ಡೆಗಳು ಮತ್ತು ಸಿಹಿ ಆಲೂಗಡ್ಡೆಗಳು: ಇದನ್ನು ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು. ಇದರಿಂದ ಉಪವಾಸದಲ್ಲಿರುವವರು ಅಗತ್ಯ ಶಕ್ತಿಯನ್ನು ತುಂಬುತ್ತಾರೆ ಮತ್ತು ಒದಗಿಸುತ್ತಾರೆ.

ಬೀಜಗಳು ಮತ್ತು ಒಣ ಹಣ್ಣುಗಳು: ಬಾದಾಮಿ, ವಾಲ್ ನಾಟ್, ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಲಘು ಆಹಾರಕ್ಕಾಗಿ ಮತ್ತು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಶಕ್ತಿಗಾಗಿ ಭಕ್ಷ್ಯಗಳಿಗೆ ಸೇರಿಸಲು ಉತ್ತಮವಾಗಿದೆ.

ತೆಂಗಿನಕಾಯಿ: ಶ್ರಾವಣ ಮಾಸದಲ್ಲಿ ತಾಜಾ ತೆಂಗಿನಕಾಯಿ, ತೆಂಗಿನ ನೀರು ಮತ್ತು ತೆಂಗಿನ ಹಾಲು ಸಾಮಾನ್ಯವಾಗಿ ಸೇವಿಸಲಾಗುತ್ತದೆ.

Shravan Month 2024
Shravan Month 2024


ಶ್ರಾವಣ ಮಾಸದಲ್ಲಿ ತಪ್ಪಿಸಬೇಕಾದ ಆಹಾರಗಳು

ಮಾಂಸಾಹಾರ: ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಶುದ್ಧತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ: ಇವುಗಳು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಅವುಗಳನ್ನು ತಪ್ಪಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಧಾನ್ಯಗಳು ಮತ್ತು ಬೇಳೆಕಾಳುಗಳು: ಗೋಧಿ, ಅಕ್ಕಿ, ಧಾನ್ಯ ಮತ್ತು ಬೇಳೆಕಾಳುಗಳನ್ನು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಳಸಲಾಗುವುದಿಲ್ಲ. ಇದರ ಬದಲು ಹುರುಳಿ ಕಾಳು, ಚೆಸ್ಟ್ ಹಿಟ್ಟನ್ನು ಬಳಸಲಾಗುತ್ತದೆ.

ಮದ್ಯ ಮತ್ತು ತಂಬಾಕು: ಶ್ರಾವಣ ಮಾಸ ಪವಿತ್ರ ತಿಂಗಳಾಗಿರುವುದರಿಂದ ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳು: ಆರೋಗ್ಯಕರ ಮತ್ತು ನೈಸರ್ಗಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಚಿಪ್ಸ್, ಪ್ಯಾಕೆಟ್ ತಿಂಡಿಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ಸೇವಿಸಲಾಗುವುದಿಲ್ಲ.

ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳು: ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ ಏಕೆಂದರೆ ಅವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಉಪವಾಸಕ್ಕೆ ತೊಂದರೆ ಉಂಟು ಮಾಡುವುದು.

Continue Reading

ಆಹಾರ/ಅಡುಗೆ

Shawarma Recipe: ಬೀದಿಬದಿಯ ಶವರ್ಮಾ ಏಕೆ? ಮನೆಯಲ್ಲೇ ರುಚಿಯಾದ ಶವರ್ಮಾವನ್ನು ಹೀಗೆ ಮಾಡಿ!

Shawarma recipe: ಗೋಬಿ ಮಂಚೂರಿ, ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಪತ್ತೆಯೂ ಆಯಿತು. ಇದೀಗ ಶವರ್ಮಾ ಸರದಿ. ಮಾಂಸಾಹಾರ ಇಷ್ಟಪಡುವ ಮಂದಿ, ಅದರಲ್ಲೂ, ಶವರ್ಮಾ ಇಷ್ಟಪಡುವ ಮಂದಿಗೆ, ಅದು ರಾಜ್ಯದಲ್ಲಿ ರದ್ದಾಗುವ ಸುದ್ದಿ ಕೇಳಿ ಆಘಾತವಾಗಿದೆ. ಬಾಯಿ ಚಪ್ಪರಿಸಿಕೊಂಡು ಶವರ್ಮಾ ತಿನ್ನುತ್ತಿದ್ದ ಮಂದಿ ಇದೀಗ ತಮ್ಮ ಮೆಚ್ಚಿನ ತಿನಿಸು ರದ್ದಾದರೆ ಬಾಯಿ ಚಪಲಕ್ಕೇನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದಾರೆ. ಬನ್ನಿ, ಸಿಂಪಲ್‌ ಆಗಿ, ಹೊಟೇಲ್‌ಗಿಂತ ಇನ್ನೂ ರುಚಿಕಟ್ಟಾಗಿ, ಅಷ್ಟೇ ಆರೋಗ್ಯಕರವಾಗಿ ಶವರ್ಮಾ ಮಾಡುವ ವಿಧಾನ ಇಲ್ಲಿದೆ.

VISTARANEWS.COM


on

Shawarma Recipe
Koo

ಇದೀಗ ಆಹಾರದ ಗುಣಮಟ್ಟವೇ ಸಮಸ್ಯೆ. ಹೊರಗೆ ತಿನ್ನುವ ಎಲ್ಲರೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ್ದೇ. ಯಾಕೆಂದರೆ ಒಂಟಿಯಾಗಿ ಬದುಕುವ, ಮನೆಯಿಂದ ದೂರವಿರುವ, ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿರುವ ಮಂದಿ ಹೊರಗಿನ ತಿಂಡಿಗಳನ್ನು ಅವಲಂಬಿಸುವುದೇ ಹೆಚ್ಚು. ಬೀದಿಬದಿಯ ತಿನಿಸುಗಳು, ಚಾಟ್‌ಗಳು, ಕಡಿಮೆ ದರದಲ್ಲಿ ಲಭ್ಯವಾಗುವ ತಿನಿಸುಗಳು ಇತ್ಯಾದಿಗಳು ಸುಲಭವಾಗಿ ಆಕರ್ಷಿಸುತ್ತವೆ ನಿಜವಾದರೂ, ಕೆಲವೊಮ್ಮೆ ಇಂತಹ ಆಹಾರಗಳೇ ಅನಾರೋಗ್ಯವನ್ನೂ ತರುತ್ತವೆ. ಮಳೆಗಾಲದಲ್ಲಿ ಈ ಸಂಭವ ಇನ್ನೂ ಹೆಚ್ಚು. ಕಲುಷಿತ ನೀರು, ಕಲುಷಿತ ಆಹಾರ, ಹೆಚ್ಚು ಕಾಲ ಶೇಖರಿಟ್ಟ ಆಹಾರಗಳಿಂದ ತಯಾರಿಸುವ ತಿಂಡಿ ತಿನಿಸುಗಳು, ವಾತಾವರಣದ ತೇವಾಂಶಕ್ಕೆ ಹಾಳಾಗಿ, ಹೊಟ್ಟೆ ಕೆಡುತ್ತದೆ. ಕೆಲವೊಮ್ಮೆ ದೊಡ್ಡ ಸಮಸ್ಯೆಯನ್ನೂ ಹುಟ್ಟುಹಾಕಿ, ಪ್ರಾಣಕ್ಕೂ ಸಂಚಕಾರ ಬರಬಹುದು. ಇತ್ತೀಚೆಗೆ, ಎಫ್‌ಎಸ್‌ಎಸ್‌ಎಐ ನಿಯಮಿತವಾಗಿ ಭಾರತದ ಹಲವು ಆಹಾರಗಳ ಪರೀಕ್ಷೆ ನಡೆಸುತ್ತಿದ್ದು, ಎಚ್ಚರಿಕೆಯನ್ನು ನೀಡುತ್ತಲೇ ಇದೆ. ಬಣ್ಣಬಣ್ಣದ ಕಾಟನ್‌ ಕ್ಯಾಂಡಿ ರದ್ದಾಯಿತು. ಗೋಬಿ ಮಂಚೂರಿ, ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಪತ್ತೆಯೂ ಆಯಿತು. ಇದೀಗ ಶವರ್ಮಾ ಸರದಿ. ಮಾಂಸಾಹಾರ ಇಷ್ಟಪಡುವ ಮಂದಿ, ಅದರಲ್ಲೂ, ಶವರ್ಮಾ ಇಷ್ಟಪಡುವ ಮಂದಿಗೆ, ಅದು ರಾಜ್ಯದಲ್ಲಿ ರದ್ದಾಗುವ ಸುದ್ದಿ ಕೇಳಿ ಆಘಾತವಾಗಿದೆ. ಬಾಯಿ ಚಪ್ಪರಿಸಿಕೊಂಡು ಶವರ್ಮಾ ತಿನ್ನುತ್ತಿದ್ದ ಮಂದಿ ಇದೀಗ ತಮ್ಮ ಮೆಚ್ಚಿನ ತಿನಿಸು ರದ್ದಾದರೆ ಬಾಯಿ ಚಪಲಕ್ಕೇನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದಾರೆ. ಬನ್ನಿ, ಸಿಂಪಲ್‌ ಆಗಿ, ಹೊಟೇಲ್‌ಗಿಂತ ಇನ್ನೂ ರುಚಿಕಟ್ಟಾಗಿ, ಅಷ್ಟೇ ಆರೋಗ್ಯಕರವಾಗಿ ಶವರ್ಮಾ ಮನೆಯಲ್ಲೇ (shawarma recipe) ನೀವು ಹೇಗೆ ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.

Shawarma

ಹೆಚ್ಚು ಕಷ್ಟವೇನಿಲ್ಲ

ಶವರ್ಮಾ ಮಾಡಲು ಹೆಚ್ಚು ಕಷ್ಟವೇನಿಲ್ಲ. ಶವರ್ಮಾದ ಮಸಾಲೆ ಮಿಕ್ಸ್‌ ನೀವೊಮ್ಮೆ ರೆಡಿ ಮಾಡಿಟ್ಟುಕೊಂಡರೆ ನಿಮ್ಮ ಕೆಲಸ ಅರ್ಧ ಆದಂತೆ. ಈ ಮಸಾಲೆಯ ಮಿಕ್ಸ್‌ ಹೇಗೆ ಮಾಡೋದು ಎಂದು ತಿಳಿಯೋಣ ಬನ್ನಿ.

ಇದನ್ನೂ ಓದಿ: How To Cook With Garlic: ಅಡುಗೆಗೆ ಬೆಳ್ಳುಳ್ಳಿ ಬಳಸುವಾಗ ಈ 5 ಟಿಪ್ಸ್‌‌ಗಳನ್ನು ಮರೆಯಲೇಬೇಡಿ!

ಶವರ್ಮಾ ಮಸಾಲೆ

ಕಾಶ್ಮೀರಿ ಕೆಂಪು ಮೆಣಸಿನಕಾಯಿಯನ್ನು ಹುರಿದಿಡಿ. ನಂತರ ಏಲಕ್ಕಿ, ಕರಿಮೆಣಸು, ಸೋಂಪು, ಜೀರಿಗೆ, ಕೊತ್ತಂಬರಿ ಇವೆಲ್ಲವನ್ನೂ ಒಂದೊಂದಾಗಿ ಹುರಿಯಿರಿ. ಇವೆಲ್ಲವೂ ತಣಿದ ಕೂಡಲೇ ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಈಗ ಶವರ್ಮಾ ಮಸಾಲೆ ರೆಡಿ. ಒಂದು ಗಾಳಿಯಾಡದ ಡಬ್ಬದಲ್ಲಿ ಈ ಮಸಾಲೆ ಪುಡಿಯನ್ನು ಕೆಲಕಾಲ ಫ್ರಿಡ್ಜ್‌ನಲ್ಲಿ ಶೇಖರಿಸಿಯೂ ಇಡಬಹುದು. ಇನ್ನು ರುಚಿಯಾದ, ಅಷ್ಟೇ ಆರೋಗ್ಯಕರವಾದ ಶವರ್ಮಾ ಮಾಡುವುದು ಹೇಗೆಂದು ತಿಳಿಯೋಣ. ಒಂದು ಬೇಕಿಂಗ್ ಪಾತ್ರೆಯಲ್ಲಿ ಕಾಲು ಕಪ್‌ ಮಾಲ್ಟ್‌ ವಿನೆಗರ್‌, ಕಾಲು ಕಪ್‌ ಮೊಸರು, ಒಂದು ಚಮಚ ಎಣ್ಣೆ, ಶವರ್ಮಾ ಮಸಾಲೆ ಪುಡಿ, ರುಚಿಗೆ ಉಪ್ಪು ಇವಿಷ್ಟನ್ನು ಮಿಕ್ಸ್‌ ಮಾಡಿ ಇದರ ಮೇಲೆ ಫ್ರೆಶ್‌ ಚಿಕನ್‌ ತೊಡೆ ಮಾಂಸವನ್ನು ಹಾಕಿ ಮಿಕ್ಸ್‌ ಮಾಡಿ ಚೆನ್ನಾಗಿ ಎಲ್ಲ ಬದಿಯೂ ಕೋಟಿಂಗ್‌ ಆಗುವಂತೆ ನೋಡಿಕೊಂಡು ಇದನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಚೆನ್ನಾಗಿ ಮಾರಿನೇಟ್‌ ಆಗುವಂತೆ ಬಿಡಿ.
ನಂತರ 350 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಅವನ್‌ ಅನ್ನು ಪ್ರಿಹೀಟ್‌ ಮಾಡಿಕೊಳ್ಳಿ. ಸಣ್ಣ ಬೌಲ್‌ನಲ್ಲಿ ತಾಹಿನಿ, ಕಾಲು ಕಪ್‌ ಮೊಸರು, ಬೆಳ್ಳುಳ್ಳಿ, ನಿಂಬೆ ರಸ, ಆಲಿವ್‌ ಆಯಿಲ್‌ ಹಾಗೂ ಪಾರ್ಸ್ಲೇ ತೆಗೆದುಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸು ಹಾಕಿ ರೆಫ್ರಿಜರೇಟ್‌ ಮಾಡಿ. ಇದನ್ನು ಚಿಕನ್‌ಗೆ ಕವರ್‌ ಮಾಡಿ. ೩೦ ನಿಮಿಷಗಳ ಕಾಲ ಅವನ್‌ನಲ್ಲಿ ಬೇಕ್‌ ಮಾಡಿ. ಒಮ್ಮೆ ನೋಡಿಕೊಂಡು ಚಿಕನ್‌ ಕಂದು ಬಣ್ಣಕ್ಕೆ ತಿರುಗದಿದ್ದರೆ ಮತ್ತೆ ೧೦ ನಿಮಿಷ ಬೇಕ್‌ ಮಾಡಿ. ಹೊರತೆಗೆದು ಆಕಾರಕ್ಕೆ ಕತ್ತರಿಸಿಕೊಳ್ಳಿ. ಟೊಮೆಟೋ, ಈರುಳ್ಳಿ, ಕ್ಯಾಬೇಜ್‌ ತುರಿಯಿಂದ ಅಲಂಕರಿಸಿ. ರೋಲ್‌ ಮಾಡಿ ತಾಹಿನಿ ಸಾಸ್‌ ಜೊತೆ ತಿನ್ನಿ. ಇಂತಹ ಪರ್ಫೆಕ್ಟ್‌ ರುಚಿಯನ್ನು ನೀವು ರೆಸ್ಟೋರೆಂಟ್‌ನಲ್ಲೂ ಅಪರೂಪಕ್ಕಷ್ಟೇ ಕಂಡಿರಬಹುದು. ಈಗ ಯಾವ ಭಯವೂ ಇಲ್ಲದೆ, ಶವರ್ಮಾ ತಿನ್ನಬಹುದು. ಮಳೆಗಾಲಕ್ಕೆ ಪರ್ಫೆಕ್ಟ್‌ ರುಚಿಯಾದ ಖಾದ್ಯವಿದು.

Continue Reading

ಆಹಾರ/ಅಡುಗೆ

How To Cook With Garlic: ಅಡುಗೆಗೆ ಬೆಳ್ಳುಳ್ಳಿ ಬಳಸುವಾಗ ಈ 5 ಟಿಪ್ಸ್‌‌ಗಳನ್ನು ಮರೆಯಲೇಬೇಡಿ!

How To Cook With Garlic: ಬೆಳ್ಳುಳ್ಳಿ ಕೇವಲ ಘಮ ಹಾಗೂ ರುಚಿಯಲ್ಲಷ್ಟೇ ಅಲ್ಲ, ಗುಣದಲ್ಲೂ ಎತ್ತಿದ ಕೈಯೇ. ಸಾಕಷ್ಟು ವೈದ್ಯಕೀಯ ಗುಣಗಳಿಂದ ಸಮೃದ್ಧವಾಗಿರುವ ಬೆಳ್ಳಿಳ್ಳಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೋಷಕ ತತ್ವಗಳನ್ನೂ ಹೊಂದಿದೆ. ಅಷ್ಟೇ ಅಲ್ಲ, ಹಲವು ಸಮಸ್ಯೆಗಳಿಗೆ ಉತ್ತರವನ್ನು ಕೊಡುವ ಶಕ್ತಿಯೂ ಇದರಲ್ಲಿದೆ. ಹೃದಯದ ಸಮಸ್ಯೆಯಿಂದ ಹಿಡಿದು, ಜೀರ್ಣಶಕ್ತಿಗೆ, ತೂಕ ಇಳಿಸಲು, ಶೀತ ನೆಗಡಿ ಕಫ ಇತ್ಯಾದಿ ಎಲ್ಲದಕ್ಕೂ ಬೆಳ್ಳುಳ್ಳಿಯಲ್ಲಿ ಉತ್ತರವಿದೆ. ಇಂತಹ ಬೆಳ್ಳುಳ್ಳಿಯನ್ನು ಅಡುಗೆ ಮನೆಯಲ್ಲಿ ನಾವು ಸರಿಯಾಗಿ ಬಳಸಿಕೊಳ್ಳಬೇಕು.

VISTARANEWS.COM


on

How To Cook With Garlic
Koo

ವಾಸನೆ ಗಾಢವೇ ಆದರೂ ಬೆಳ್ಳುಳ್ಳಿ ಕಿಚನ್‌ನ ಸೂಪರ್‌ ಸ್ಟಾರ್‌. ಅಡುಗೆಗೆ ಒಂದು ವಿಶಿಷ್ಟ ಘಮವನ್ನೂ ರುಚಿಯನ್ನು ಕೊಟ್ಟು ಯಾವುದೇ ಅಡುಗೆಯಲ್ಲಾದರೂ ತನ್ನತನವನ್ನು ಗಾಢವಾಗಿ ಎತ್ತಿ ತೋರಿಸುವ ಗುಣ ಇದಕ್ಕಿದೆ. ಗುಂಪಿನಲ್ಲಿ ಗೋವಿಂದವಾಗದೆ, ಗುಂಪಿನಲ್ಲಿದ್ದೂ ಪ್ರತ್ಯೇಕವಾಗಿ ನಿಲ್ಲುವ ಗುಣ ಇದಕ್ಕಿದೆ. ಇಂತಹ ಬೆಳ್ಳುಳ್ಳಿ ಕೇವಲ ಘಮ ಹಾಗೂ ರುಚಿಯಲ್ಲಷ್ಟೇ ಅಲ್ಲ, ಗುಣದಲ್ಲೂ ಎತ್ತಿದ ಕೈಯೇ. ಸಾಕಷ್ಟು ವೂದ್ಯಕೀಯ ಗುಣಗಳಿಂದ ಸಮೃದ್ಧವಾಗಿರುವ ಬೆಳ್ಳಿಳ್ಳಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೋಷಕ ತತ್ವಗಳನ್ನೂ ಹೊಂದಿದೆ. ಅಷ್ಟೇ ಅಲ್ಲ, ಹಲವು ಸಮಸ್ಯೆಗಳಿಗೆ ಉತ್ತರವನ್ನು ಕೊಡುವ ಶಕ್ತಿಯೂ ಇದರಲ್ಲಿದೆ. ಹೃದಯದ ಸಮಸ್ಯೆಯಿಂದ ಹಿಡಿದು, ಜೀರ್ಣಶಕ್ತಿಗೆ, ತೂಕ ಇಳಿಸಲು, ಶೀತ ನೆಗಡಿ ಕಫ ಇತ್ಯಾದಿ ಎಲ್ಲದಕ್ಕೂ ಬೆಳ್ಳುಳ್ಳಿಯಲ್ಲಿ ಉತ್ತರವಿದೆ. ಇಂತಹ ಬೆಳ್ಳುಳ್ಳಿಯನ್ನು ಅಡುಗೆ ಮನೆಯಲ್ಲಿ ನಾವು ಸರಿಯಾಗಿ ಬಳಸಿಕೊಳ್ಳಬೇಕು. ಬನ್ನಿ, ಬೆಳ್ಳುಳ್ಳಿಯನ್ನು ಬಳಸುವಾಗ ನೆನಪಿನಲ್ಲಿಡಬೇಕಾದ ಕೆಲವು ಮುಖ್ಯವಾದ (How To Cook With Garlic) ಅಂಶಗಳು ಇಲ್ಲಿವೆ.

ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವ ಮೊದಲು ತೊಳೆದುಕೊಳ್ಳಿ. ಅಡುಗೆ ಮಾಡುವ ಮೊದಲು ಯಾವುದೇ ತರಕಾರಿ, ಧಾನ್ಯ, ಬೇಳೆ ಕಾಳುಗಳೇ ಇರಲಿ ತೊಳೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ಆಹಾರ ಸ್ವಚ್ಛವಾಗಿರುವುದು ಬಹಳ ಮುಖ್ಯ. ಆದರೆ ಬೆಳ್ಳುಳ್ಳಿಯನ್ನು ತೊಳೆದು ಸಿಪ್ಪೆ ತೆಗೆದು ಕತ್ತರಿಸಲು ಇರುವ ಸುಲಭ ವಿಧಾನ ಎಂದರೆ ಅದನ್ನು ನೀರಿನಲ್ಲಿ ಅರ್ಧ ಗಂಟೆ ನೆನೆ ಹಾಕುವುದು. ಇದರಿಂದ ಸಿಪ್ಪೆ ಸುಲಭವಾಗಿ ಬಿಡಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಕತ್ತರಿಸಲು ಸುಲಭವಾಗುತ್ತದೆ.

ಕೆಲವೊಮ್ಮೆ ನಾವು ತರಕಾರಿಯನ್ನು ಹೇಗೆ ಕತ್ತರಿಸುತ್ತೇವೆ ಎಂಬುದರಲ್ಲಿಯೂ ಅದರ ರುಚಿ ಅಡಗಿದೆ. ಕೆಲವಕ್ಕೆ ಬೆಳ್ಳುಳ್ಳಿಯನ್ನು ಹಾಗೆಯೇ ಹಾಕಿದರೆ ರುಚಿಯೆನಿಸಿದರೆ, ಇನ್ನೂ ಕೆಲವಕ್ಕೆ ಕತ್ತರಿಸಿ ಹಾಕಬೇಕು. ಕೆಲವಕ್ಕೆ ಸಣ್ಣದಾಗಿ ಹೆಚ್ಚಿ ಹಾಕಬೇಕು. ಇನ್ನೂ ಕೆಲವಕ್ಕೆ ಪೇಸ್ಟ್‌ ಮಾಡಿ ಹಾಕಬೇಕು. ಯಾವುದಕ್ಕೆ ಹೇಗಿರಬೇಕೋ ಹಾಗೆಯೇ ಮಾಡಿ. ಬೆಳ್ಳುಳ್ಳಿ ವಿಚಾರದಲ್ಲಿ ಇದು ಅಕ್ಷರಶಃ ಸತ್ಯ.

Garlic

ಬೆಳ್ಳುಳ್ಳಿಯ ಘಮ ಹಾಗೂ ರುಚಿ ಸರಿಯಾಗಿ ಬರಬೇಕೆಂದರೆ ಅದನ್ನು ಯಾವಾಗ ಅಡುಗೆಗೆ ಸೇರಿಸಬೇಕು ಎಂಬುದು ನಮಗೆ ಗೊತ್ತಿರಬೇಕು. ಬಹಳಷ್ಟು ಅಡುಗೆಗಳಲ್ಲಿ ಮುಂಚಿತವಾಗಿ ಬೆಳ್ಳುಳ್ಳಿಯನ್ನು ಸೇರಿಸಿ, ಅದರ ಹಸಿ ವಾಸನೆ ಹೋಗುವವರೆಗೂ ಹುರಿದುಕೊಂಡು ಬೇರೆ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಈ ಪ್ರಕ್ರಿಯೆ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಬೆಳ್ಳುಳ್ಳಿಯ ಕೆಟ್ಟ ವಾಸನೆ ಅಡುಗೆಯಲ್ಲಿ ಮೇಳೈಸುತ್ತದೆ. ಇನ್ನೂ ಕೆಲವಕ್ಕೆ ಒಗ್ಗರಣೆಯೊಂದಿಗೆ ಹುರಿದುಕೊಂಡು ಹಾಕುತ್ತೇವೆ. ಹಾಗಾಗಿ, ಈ ಕ್ರಮವನ್ನು ಸರಿಯಾಗಿಯೇ ಪಾಲಿಸಿ.

Garlic

ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಹುರದುಕೊಳ್ಳುವಾಗ ಸದಾ ಎಚ್ಚರವಾಗಿರಬೇಕು. ಯಾಕೆಂದರೆ ಹುರಿದದ್ದು ಕಡಿಮೆಯಾಗಲೂಬಾರದು. ಹೆಚ್ಚಾಗಲೂಬಾರದು. ಕಡಿಮೆ ಹುರಿದರೆ ಹಸಿ ವಾಸನೆ ಹೋಗದು. ಹೆಚ್ಚಾದರೆ ಸುಟ್ಟು ಬಿಡುತ್ತದೆ. ಹಾಗಾಗಿ, ಬೆಳ್ಳುಳ್ಳಿಯನ್ನು ಕಪ್ಪಾಗುವವರೆಗೆ ಹುರಿಯಬೇಡಿ. ಅದರ ಪೋಷಕಾಂಶಗಳನ್ನು ಸರಿಯಾಗಿ ಬಳಸಬೇಕೆಂದರೆ ಹದವಾಗಿ ಹುರಿಯಿರಿ.

ಇದನ್ನೂ ಓದಿ: Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ!

ಇಡಿಯಾದ ಬೆಳ್ಳುಳ್ಳಿಯನ್ನು ಅಡುಗೆಗೆ ಹಾಗೆಯೇ ಬಳಸಿವುದನ್ನು ಆದಷ್ಟು ಕಡಿಮೆ ಮಾಡಿ. ಇದರಿಂದ ಬೆಳ್ಳುಳ್ಳಿಯಲ್ಲಿರುವ ಎನ್‌ಝೈಮ್‌ಗಳು ಸರಿಯಾಗಿ ಆಹಾರದೊಂದಿಗೆ ಮಿಳಿತವಾಗದು. ಇದಕ್ಕಾಗಿ, ಬೆಳ್ಳುಳ್ಳಿ ಆಹಾರದಲ್ಲಿ ಹಾಗೆಯೇ ಇರಬೇಕೆಂದು ಬಯಸಿದರೆ ಅದನ್ನು ಕತ್ತರಿಸಿ ಹುರಿದುಕೊಳ್ಳಿ. ಕತ್ತರಿಸಿದ ಬೆಳ್ಳುಳ್ಳಿಯಲ್ಲಿ ಬಹುಬೇಗನೆ ಅದರಲ್ಲಿರುವ ಅಲ್ಲಿನಾಸ್‌ ಎಂಬ ಎನ್‌ಝೈಮ್‌ ಅಲ್ಲಿನ್‌ ಆಗಿ ನಂತರ ಅಲ್ಲಿಸಿನ್‌ ಪರಿವರ್ತನೆಗೊಳ್ಳಲು ಸುಲಭವಾಗುತ್ತದೆ. ಅಲ್ಲಿಸಿನ್‌ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಹಾಗೂ ರ್ಕತದೊತ್ತಡವನ್ನು ಸಮತೋಲನಗೊಳಿಸಲು ನೆರವಾಗುತ್ತದೆ.

Continue Reading

ಆಹಾರ/ಅಡುಗೆ

Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ!

Curd Rice Recipe: ಮೊಸರನ್ನ ಹೊಟ್ಟೆಗೆ ಮನಸ್ಸಿಗೆ ಹಿತವಾಗಿರುತ್ತದೆ. ತಿಂದ ಮೇಲೆ ಸಂತೃಪ್ತಿಯ ಭಾವ. ಯಾವ ತಳಮಳವೂ ಇಲ್ಲದೆ ಹೊಟ್ಟೆ ಹಗುರಾದ ಭಾವ. ಅದಕ್ಕೇ ಮೊಸರನ್ನವೆಂದರೆ ಕೇವಲ ಆಹಾರವಲ್ಲ. ಅದೊಂದು ಭಾವನೆ. ಆದರೆ ಬಹಳ ಮಂದಿ ಅದ್ಭುತ ರುಚಿಯ ಮೊಸರನ್ನವನ್ನು ಮನೆಯಲ್ಲಿ ಮಾಡುವಲ್ಲಿ ಸೋಲುತ್ತಾರೆ. ಹೊರಗೆ ಹೊಟೇಲಿನಲ್ಲಿ ತಿಂದ ಮೊಸರನ್ನದ ರುಚಿ, ಮನೆಯಲ್ಲಿ ಕೆಲವೊಮ್ಮೆ ಬರದು. ಮೊಸರನ್ನ ರುಚಿಕರ ಮಾಡಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ.

VISTARANEWS.COM


on

Curd Rice Recipe
Koo

ದಕ್ಷಿಣ ಭಾರತೀಯರಿಗೆ ಮೊಸರನ್ನ ಎಂದರೆ ಅಮೃತದ ಹಾಗೆ. ಏನೂ ಇಲ್ಲದ ಹೊತ್ತಲ್ಲಿ, ಹೊಟ್ಟೆ ತಣ್ಣಗಿರಲು ಬಯಸುವ ಹೊತ್ತಲ್ಲಿ, ಬೇಸಿಗೆಯ ಬಿಸಿಲಿಗೆ ದಣಿದು ಬಂದಾಗ ನೆನಪಾಗುವುದು ಮೊಸರನ್ನ. ಮೊಸರನ್ನ ಹೊಟ್ಟೆಗೆ ಮನಸ್ಸಿಗೆ ಹಿತವಾಗಿರುತ್ತದೆ. ತಿಂದ ಮೇಲೆ ಸಂತೃಪ್ತಿಯ ಭಾವ. ಯಾವ ತಳಮಳವೂ ಇಲ್ಲದೆ ಹೊಟ್ಟೆ ಹಗುರಾದ ಭಾವ. ಅದಕ್ಕೇ ಮೊಸರನ್ನವೆಂದರೆ ಕೇವಲ ಆಹಾರವಲ್ಲ. ಅದೊಂದು ಭಾವನೆ. ಆದರೆ ಬಹಳ ಮಂದಿ ಅದ್ಭುತ ರುಚಿಯ ಮೊಸರನ್ನವನ್ನು ಮನೆಯಲ್ಲಿ ಮಾಡುವಲ್ಲಿ ಸೋಲುತ್ತಾರೆ. ಹೊರಗೆ ಹೊಟೇಲಿನಲ್ಲಿ ತಿಂದ ಮೊಸರನ್ನದ ರುಚಿ, ಮನೆಯಲ್ಲಿ ಕೆಲವೊಮ್ಮೆ ಬರದು. ಇಷ್ಟು ಸಿಂಪಲ್‌ ಮೊಸರನ್ನವನ್ನು ಮಾಡುವುದೂ ಕೂಡಾ ಯಾಕೆ ಬರುವುದಿಲ್ಲ ಎಂದು ಕೆಲವೊಮ್ಮೆ ಗೊಂದಲವೂ ಆಗಬಹುದು. ಆದರೆ, ಎಷ್ಟೇ ಸಿಂಪಲ್‌ ಆದರೂ ರುಚಿಯಾದ ಮೊಸರನ್ನ ಮಾಡುವುದೂ ಕೂಡಾ ಒಂದು ಕಲೆ. ಯಾಕೆಂದರೆ ರುಚಿಯಾದ ಮೊಸರನ್ನದ ಗುಟ್ಟು ಅಡಗಿರುವುದು ಅದರ ಕ್ರೀಮೀಯಾದ ಸ್ವರೂಪದಲ್ಲಿ. ಅದು ಹೆಚ್ಚು ತೆಳುವೂ ಆಗಿರಬಾರದು, ಗಟ್ಟಿಯೂ ಆಗಿರಬಾರದು. ಹದವಾದ ಕ್ರೀಮಿನಂತೆ ಬಾಯಿಗಿಟ್ಟರೆ ಐಸ್‌ಕ್ರೀಮಿನಂತೆ ಕರಗುವ, ಹೊಟ್ಟೆ ತಂಪೆನಿಸುವ ಮೊಸರನ್ನವನ್ನು ನೀವು ಮನೆಯಲ್ಲಿ ಮಾಡುವುದಿದ್ದರೆ ಈ ಸಿಂಪಲ್‌ (Curd Rice Recipe) ವಿಚಾರಗಳನ್ನು ಮರೆಯದಿರಿ.

Health Benefits Of Curd Rice

ಅನ್ನ ಒಳ್ಳೆಯ ಗುಣಮಟ್ಟದ್ದಾಗಿರಲಿ

ಯಾವುದೋ ಅನ್ನವನ್ನು ಮೊಸರನ್ನಕ್ಕೆ ಬಳಸಬೇಡಿ. ಮೊಸರನ್ನಕ್ಕೆ ಬಳಸುವ ಅನ್ನ ಒಳ್ಳೆಯ ಗುಣಮಟ್ಟದ್ದಾಗಿರಲಿ. ಯಾಕೆಂದರೆ ಇಲ್ಲಿ ಅನ್ನಕ್ಕೆ ಬಹಳ ಮುಖ್ಯ ಪಾತ್ರವಿದೆ. ಬಾಸುಮತಿ ಅಕ್ಕಿಯ ಅನ್ನವಾದರೆ ಒಳ್ಳೆಯ ಘಮ ಹಾಘೂ ರುಚಿಯೂ ಬರುತ್ತದೆ. ಅಷ್ಟೇ ಅಲ್ಲ, ಅಕ್ಕಿಗೆ ಬೇಯಲು ಸರಿಯಾದ ಸಮಯ ಕೊಡಿ. ಅತಿಯಾಗದಂತೆ, ಹಾಗೆ ಕಡಿಮೆಯೂ ಆಗದಂತೆ ಅಕ್ಕಿಯನ್ನು ಬೇಯಿಸಬೇಕು.

ತಾಜಾ ಮೊಸರನ್ನೇ ಬಳಸಿ

ಯಾವಾಗಲೂ, ಉಳಿದ ಮೊಸರನ್ನು, ಬೇಡವಾದ ಮೊಸರನ್ನು ಮೊಸರನ್ನಕ್ಕೆ ಬಳಸಬೇಡಿ. ತಾಜಾ ಮೊಸರನ್ನೇ ಬಳಸಿ. ಹುಳಿ ಬಂದ ಮೊಸರು ಇದಕ್ಕೆ ಸಲ್ಲ. ಮನೆಯಲ್ಲೇ ಮಾಡಿದ ಮೊಸರಾದರೆ ಒಳ್ಳೆಯದು. ಅನ್ನ ಬೆಂದು ತಣಿದ ಮೇಲಷ್ಟೇ ಮೊಸರನ್ನು ಅನ್ನಕ್ಕೆ ಸೇರಿಸಿ. ಇಷ್ಟು ತಾಳ್ಮೆ ನಿಮ್ಮಲ್ಲಿದ್ದರೆ ರುಚಿಯಾದ ಮೊಸರನ್ನ ಮಾಡಬಹುದು.

Curd Rice

ಕೆನೆಯನ್ನೂ ಇದಕ್ಕೆ ಹಾಕಬಹುದು

ಮೊಸರನ್ನ ರುಚಿಯಾಗಿ ಬರಬೇಕೆಂದರೆ ಹಾಲಿನ ಕೆನೆಯನ್ನೂ ಇದಕ್ಕೆ ಹಾಕಬಹುದು. ಫ್ರೆಶ್‌ ಕ್ರೀಮನ್ನು ಇದಕ್ಕೆ ಹಾಕಿದರೆ ಅಂತಹ ಟೆಕ್ಷ್ಚರ್‌ ಪಡೆಯಬಹುದು. ಇಷ್ಟವಾಗದೆ ಇದ್ದರೆ ಹಾಕದೆಯೂ ಇರಬಹುದು. ಇದು ಅವರವರ ಆಯ್ಕೆಗೆ ಬಿಟ್ಟದ್ದು. ಆದರೆ, ಕ್ರೀಂ ಹಾಕುವಾಗ ಹಾಲನ್ನೂ ಸ್ವಲ್ಪ ಸೇರಿಸಲು ಮರೆಯದಿರಿ.

ಮೊಸರಿಗೆ ಏನು ಹಾಕಬೇಕು?

ಮೊಸರನ್ನ ಎಂದರೆ ಬಹಳ ಮಂದಿ, ಮೊಸರು ಹಾಗೂ ಅನ್ನ ಎಂದಷ್ಟೇ ತಿಳಿದುಕೊಳ್ಳುವವರಿದ್ದಾರೆ. ಆದರೆ, ಮೊಸರನ್ನ ರುಚಿಯಾಗಲು ಇದು ಬಿಟ್ಟು ಬೇರೆ ಕೆಲವು ವಿಚಾರಗಳೂ ಮುಖ್ಯವಾಗುತ್ತದೆ. ಕೆಲವು ತರಕಾರಿ, ಹಣ್ಣುಗಳನ್ನು ಸೇರಿಸುವ ಮೂಲಕವೂ ಮೊಸರನ್ನ ಅಮೃತವಾಗಿ ಬದಲಾಗುತ್ತದೆ. ಮುಖ್ಯವಾಗಿ, ಕ್ಯಾರೆಟ್‌, ಸೌತೆಕಾಯಿ, ಮಾವು, ದಾಳಿಂಬೆ ಇತ್ಯಾದಿಗಳು ಮೊಸರನ್ನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಇದನ್ನೂ ಓದಿ: Hair Growth Tips: ಕೂದಲಿನ ಆರೈಕೆಯಲ್ಲಿ ಮೆಂತೆಯ ಜಾದೂ ಕಂಡಿದ್ದೀರಾ?

ಒಗ್ಗರಣೆ ಮರೆಯಬೇಡಿ

ಒಗ್ಗರಣೆ ಹಾಕುವುದರಲ್ಲಿ ಕಂಜೂಸಿತನ ತೋರಿಸಬೇಡಿ. ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ, ಗೋಡಂಬಿ, ಕರಿಬೇವನ್ನು ಧಾರಾಳವಾಗಿ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಯಿಂದ ಮೊಸರನ್ನಕ್ಕೆ ನಿಜವಾದ ಅರ್ಥ ಬರುತ್ತದೆ ಎಂಬುದನ್ನು ನೆನಪಿಡಿ. ಕರಿಬೇವು ಇಲ್ಲವಾದರೆ ಚಿಂತಿಸಬೇಡಿ. ಕೊತ್ತಂಬರಿ ಸೊಪ್ಪಾದರೂ ಸೈ. ಆದರೆ, ಒಗ್ಗರಣೆಯನ್ನು ಎಂದಿಗೂ ಮರೆಯಬೇಡಿ.

Continue Reading
Advertisement
Vaccin for Hiv
ಆರೋಗ್ಯ20 mins ago

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Physical Assault
ದೇಶ28 mins ago

Physical Assault : ಅಶ್ಲೀಲ ವಿಡಿಯೊಗಳನ್ನು ನೋಡಿ 9 ವರ್ಷದ ತಂಗಿಯನ್ನು ಅತ್ಯಾಚಾರ ಮಾಡಿ ಕೊಂದ 13 ವರ್ಷದ ಬಾಲಕ!

Paris Olympics
ಕ್ರೀಡೆ43 mins ago

Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

karnataka Rain
ಮಳೆ46 mins ago

Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು

Rahul Gandhi
ದೇಶ46 mins ago

Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Gautam Gambhir
ಕ್ರೀಡೆ55 mins ago

Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

Kannada New Movie Nava Digantha latest news
ಸಿನಿಮಾ1 hour ago

Kannada New Movie: ನೆರವೇರಿತು ’ನವ ದಿಗಂತ’ ಚಿತ್ರದ ಮುಹೂರ್ತ

DK Shivakumar
ಕರ್ನಾಟಕ1 hour ago

Brand Bengaluru: ‘ಬ್ರ್ಯಾಂಡ್‌ ಬೆಂಗಳೂರು’ ನಿರ್ಮಾಣಕ್ಕೆ ಡಿಕೆಶಿ ಮಾಸ್ಟರ್‌ಪ್ಲಾನ್;‌ ಇಲ್ಲಿದೆ ಸಭೆಯ ವಿವರ

Drone Prathap Eye surgery for an old woman with her own money
ಬಿಗ್ ಬಾಸ್2 hours ago

Drone Prathap: ನುಡಿದಂತೆ ನಡೆದ ‘ಬಿಗ್ ಬಾಸ್’ ಡ್ರೋನ್ ಪ್ರತಾಪ್; ಸ್ವಂತ ಹಣದಿಂದ ವೃದ್ಧೆಗೆ ಕಣ್ಣು ಆಪರೇಷನ್ !

ದೇಶ2 hours ago

Chandipura Virus: ಗುಜರಾತ್‌ನಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್‌ಗೆ 48 ಬಲಿ; 39 ಮಂದಿಗೆ ಚಾಂದಿಪುರ ವೈರಸ್ ದೃಢ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

ramanagara news
ರಾಮನಗರ4 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ5 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ23 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ಟ್ರೆಂಡಿಂಗ್‌