Safe investment : ಸುರಕ್ಷಿತ ಹೂಡಿಕೆಯ ಆಯ್ಕೆ ಹೇಗೆ? ಲಿಕ್ವಿಡಿಟಿ ಎಂದರೇನು? - Vistara News

ಮನಿ ಗೈಡ್

Safe investment : ಸುರಕ್ಷಿತ ಹೂಡಿಕೆಯ ಆಯ್ಕೆ ಹೇಗೆ? ಲಿಕ್ವಿಡಿಟಿ ಎಂದರೇನು?

ಹಣಕಾಸು ಹೂಡಿಕೆಯ ( Safe investment ) ವಿಚಾರಕ್ಕೆ ಬಂದಾಗ ಸೇಫ್ಟಿ ಮತ್ತು ಲಿಕ್ವಿಡಿಟಿ ಪ್ರಮುಖವಾಗುತ್ತದೆ. ಹಾಗಾದರೆ ಏನಿದು? ಇಲ್ಲಿದೆ ವಿವರ.

VISTARANEWS.COM


on

cash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿನ್ನ, ರಿಯಲ್‌ ಎಸ್ಟೇಟ್‌, ಫಿಕ್ಸೆಡ್‌ ಡಿಪಾಸಿಟ್‌, ಷೇರು, ಮ್ಯೂಚುವಲ್‌ ಫಂಡ್‌, ಬಾಂಡ್‌ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ, ಹೂಡಿಕೆಯ ಸುರಕ್ಷತೆ ಮತ್ತು ( Safe investment ) ಲಿಕ್ವಿಡಿಟಿ ನಿರ್ಣಾಯಕ ಅಂಶವಾಗಿರುತ್ತದೆ. ಸಹಜವಾಗಿ ಸರ್ಕಾರಿ ಮೂಲದ ಇನ್ವೆಸ್ಟ್‌ಮೆಂಟ್‌ ಅಸೆಟ್‌ಗಳು ಹೆಚ್ಚು ಸುರಕ್ಷಿತವಾಗಿರುತ್ತದೆ. ಉದಾಹರಣೆಗೆ ನ್ಯಾಶನಲ್‌ ಪೆನ್ಷನ್‌ ಸ್ಕೀಮ್‌, ಅಟಲ್‌ ಪೆನ್ಷನ್‌ ಸ್ಕೀಮ್‌, ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌, ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌, ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಮ್‌, ಸುಕನ್ಯಾ ಸಮೃದ್ಧಿ ಇತ್ಯಾದಿಗಳು ಸರ್ಕಾರಿ ಮೂಲದ ಯೋಜನೆಗಳಾಗಿದ್ದು ಸುರಕ್ಷಿತವಾಗಿವೆ.

ಕಾರ್ಪೊರೇಟ್‌ ವಲಯದಲ್ಲಿ ಸಾರ್ವಜನಿಕ ವಲಯದ ಕಂಪನಿಗಳ ಫಿಕ್ಸೆಡ್‌ ಡಿಪಾಸಿಟ್‌ ಸ್ಕೀಮ್‌ಗಳು ಸೇಫ್‌ ಎನ್ನಿಸಿವೆ. ಡಿಬೆಂಚರ್‌ಗಳು ನಂತರದ ಸ್ಥಾನದಲ್ಲಿ ಸುರಕ್ಷಿತ ಎನ್ನಿಸಿವೆ. ಬಳಿಕ ಹೇಳುವುದಿದ್ದರೆ ಖಾಸಗಿ ಕಂಪನಿಗಳ ಫಿಕ್ಸೆಡ್‌ ಡಿಪಾಸಿಟ್‌ಗಳನ್ನು ಪರಿಗಣಿಸಬಹುದು. ಸುರಕ್ಷತೆಯ ನಿಟ್ಟಿನಲ್ಲಿ ಷೇರು ಕೊನೆಯ ಸ್ಥಾನದಲ್ಲಿದೆ.

ಷೇರುಗಳಲ್ಲಿ ಕೂಡ ಎಲ್ಲ ಕಂಪನಿಯ ಷೇರುಗಳೂ ಭಾರಿ ರಿಸ್ಕ್‌ ಹೊಂದಿರುವುದಿಲ್ಲ. ಬ್ಲೂ ಚಿಪ್‌ ಕಂಪನಿಗಳ ಷೇರುಗಳು ಉತ್ತಮ ಬೆಳವಣಿಗೆ ಮತ್ತು ಸುರಕ್ಷತೆಗೆ ಖ್ಯಾತಿ ಗಳಿಸಿವೆ. ಅಲ್ಪಕಾಲಿಕ ಇಳಿಕೆ ದಾಖಲಿಸಿದರೂ, ಇಂಥ ಷೇರುಗಳ ದರ ಬಳಿಕ ಏರಿಕೆಯಾಗುವುದನ್ನು ಗಮನಿಸಬಹುದು. ಬ್ಲೂ ಚಿಪ್‌ ಕಂಪನಿ ಎಂದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿರುವ, ಆರ್ಥಿಕವಾಗಿ ಬಲಾಢ್ಯವಾಗಿರುವ, ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಕಂಪನಿ.

ಇದನ್ನೂ ಓದಿ: Term Insurance : 1 ಸಾವಿರಕ್ಕೆ 1 ಕೋಟಿ ಇನ್ಷೂರೆನ್ಸ್!‌ ಫುಲ್‌ ಡಿಟೇಲ್ಸ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್‌

ಹೂಡಿಕೆ ಅಥವಾ ಇನ್ವೆಸ್ಟ್‌ಮೆಂಟ್‌ ವಿಚಾರಕ್ಕೆ ಬಂದಾಗ ಲಿಕ್ವಿಡಿಟಿ ಎನ್ನುವ ಪದವನ್ನು ನೀವು ಕೇಳಿರಬಹುದು. ಏನಿದು ಲಿಕ್ವಿಡಿಟಿ? ಉತ್ತಮ ಹೂಡಿಕೆಯ ಮಾನದಂಡದಲ್ಲಿ ಇದು ಮುಖ್ಯ. ನೀವು ಎಷ್ಟು ಬೇಗ ನಿಮ್ಮ ಹೂಡಿಕೆಯನ್ನು ನಗದೀಕರಿಸಿಕೊಳ್ಳಬಹುದು ಎಂಬುದನ್ನು ಲಿಕ್ವಿಡಿಟಿ ಪರಿಗಣಿಸುತ್ತದೆ. ಲಿಕ್ವಿಡಿಟಿ ಹೆಚ್ಚು ಇದೆ ಎಂದರೆ, ನಿಮ್ಮ ಅಸೆಟ್‌ ಅನ್ನು ಬೇಗ ಕ್ಯಾಶ್‌ ಆಗಿ ಪರಿವರ್ತಿಸಬಹುದು ಎಂದರ್ಥ. ಲಿಕ್ವಿಡಿಟಿ ಕಡಿಮೆ ಎಂದರೆ ಅಂಥ ಅಸೆಟ್‌ ಅನ್ನು ಬೇಗ ಕ್ಯಾಶ್‌ ಆಗಿ ಪರಿವರ್ತಿಸಲು ಆಗೋದಿಲ್ಲ ಎಂದರ್ಥ. ಉದಾಹರಣೆಗೆ ನಿಮ್ಮ ಬಳಿ ಚಿನ್ನ ಮತ್ತು ಸೈಟ್‌ ಇದೆ ಎಂದಿಟ್ಟುಕೊಳ್ಳಿ. ಸೈಟಿಗೆ ಹೋಲಿಸಿದರೆ ಚಿನ್ನವನ್ನು ಬೇಗ ಮಾರಾಟ ಮಾಡಿ ನಗದು ಪಡೆಯಬಹುದು. ಇಲ್ಲಿ ಚಿನ್ನದ ಲಿಕ್ವಿಡಿಟಿ ಹೆಚ್ಚು. ನಿಮ್ಮ ಕೈಯಲ್ಲಿರುವ ನಗದು ಹೆಚ್ಚು ಲಿಕ್ವಿಡಿಟಿ ಹೊಂದಿರುವ ಸಾಧನ. ಬ್ಯಾಂಕ್‌ ಖಾತೆಯಲ್ಲಿರುವ ಹಣ, ಫಿಕ್ಸೆಡ್‌ ಡಿಪಾಸಿಟ್‌ ಕೂಡ ಲಿಕ್ವಿಡಿಟಿಯನ್ನು ಹೆಚ್ಚು ಹೊಂದಿರುತ್ತವೆ. ಷೇರು ಕೂಡ ಹಾಗೆಯೇ. ಚಿನ್ನ, ಬೆಳ್ಳಿ ನಂತರದ ಸ್ಥಾನದಲ್ಲಿ ಬರುತ್ತವೆ. ಆದರೆ ರಿಯಲ್‌ ಎಸ್ಟೇಟ್‌ ಪ್ರಾಪರ್ಟಿಗಳು ಲಿಕ್ವಿಡಿಟಿಯ ವಿಷಯದಲ್ಲಿ ಕೊನೆಯಲ್ಲಿರುತ್ತವೆ. ಏಕೆಂದರೆ ಇದನ್ನು ಫಟಾಫಟ್‌ ಮಾರಾಟ ಮಾಡಿ ನಗದೀಕರಿಸಲು ಆಗುವುದಿಲ್ಲ.

ಹೂಡಿಕೆಗೆ ರಿಟರ್ನ್ ಯಾವಾಗ ಸಿಗುತ್ತದೆ? ಸಾಮಾನ್ಯವಾಗಿ ಹೂಡಿಕೆಗೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಲೆಕ್ಕದಲ್ಲಿ ರಿಟರ್ನ್‌ ಸಿಗುತ್ತದೆ. ಈಕ್ವಿಟಿ ಷೇರು, ಡಿಬೆಂಚರ್‌ಗಳಲ್ಲಿ ಬಂಡವಾಳ ವೃದ್ಧಿಯ ರೂಪದಲ್ಲೂ ಸಿಗುತ್ತದೆ. ಲಾಂಗ್ ಟರ್ಮ್‌ ಕ್ಯಾಪಿಟಲ್‌ ಗೇನ್ಸ್‌ಗೆ ತೆರಿಗೆ ವಿನಾಯಿತಿಗಳೂ ಸಿಗುತ್ತದೆ. ‌

ಹೂಡಿಕೆಗೆ ಆಯ್ಕೆಗಳು ಹಲವು:

ಹಾಗಾದರೆ ಎಲ್ಲಿ ಹೂಡಿಕೆ ಮಾಡಬೇಕು? ಉತ್ತಮ ಹೂಡಿಕೆಯ ಖಾತೆ ಹೇಗಿರುತ್ತದೆ? ಲಿಕ್ವಿಡ್‌ ಅಸೆಟ್ ಗಳು, ಈಕ್ವಿಟಿ, ರಿಯಲ್‌ ಎಸ್ಟೇಟ್‌, ಚಿನ್ನದಲ್ಲಿ ಹೂಡಿಕೆ ಮಾಡಬಹುದು. ನೀವು ತಕ್ಷಣ ಸಿಗುವಂಥ ಲಿಕ್ವಿಡ್‌ ಅಸೆಟ್‌ಗಳಲ್ಲಿ ಒಂದಷ್ಟು ಹಣವನ್ನು ಇಟ್ಟಿರಬೇಕು. ಅದು ಜತೆಗೆ ಬಡ್ಡಿ ಆದಾಯವನ್ನೂ ಕೊಡುತ್ತಿರಬೇಕು. ಉದಾಹರಣೆಗೆ ಬ್ಯಾಂಕ್‌ ಡಿಪಾಸಿಟ್.‌ ದೀರ್ಘಕಾಲೀನಕ್ಕೆ ಸಾರ್ವಜನಿಕ ಭವಿಷ್ಯನಿಧಿಕೂಡ ಸೇಫ್‌ ಇನ್ವೆಸ್ಟ್‌ ಮೆಂಟ್‌ ಆಗುತ್ತದೆ. ತುರ್ತು ಸಂದರ್ಭಗಳಲ್ಲಿ ತಕ್ಷಣ ಹಣ ಬೇಕಾಗುತ್ತದೆ. ಫಿಕ್ಸೆಡ್‌ ಡಿಪಾಸಿಟ್‌ ಇದ್ದರೆ ಅದರ ಮೇಲೆ ಸುಲಭವಾಗಿ ಹಾಗೂ ಶೀಘ್ರವಾಗಿ ಸಾಲ ಪಡೆಯಬಹುದು.

ದೀರ್ಘಾವಧಿ ಹೂಡಿಕೆಯ ನಿಟ್ಟಿನಲ್ಲಿ ಈಕ್ವಿಟಿ ಪೋರ್ಟ್ ಫೋಲಿಯೊ, ರಿಯಲ್‌ ಎಸ್ಟೇಟ್‌ ಹೂಡಿಕೆ ಉತ್ತಮ ಆಯ್ಕೆಯಾಗುತ್ತದೆ. ಷೇರುಗಳಲ್ಲಿ ಹೂಡಿಕೆ ಮಾಡುವ ಮುನ್ನ ಉತ್ತಮ ಬ್ರೋಕರ್‌ ಅನ್ನು ಕಂಡುಕೊಳ್ಳಿ. ನಿಮ್ಮ ಬ್ರೋಕಿಂಗ್‌ ಕಂಪನಿಯು ನಿಮ್ಮ ಪರ ಷೇರುಗಳ ಕೊಡು-ಕೊಳ್ಳುವಿಕೆಯನ್ನು ಮಾಡುವುದಲ್ಲದೆ, ಹೂಡಿಕೆಯ ಬಗ್ಗೆ ಉತ್ತಮ ಮಾರ್ಗದರ್ಶಕವೂ ಆಗಿರಬೇಕು. ಷೇರುಗಳನ್ನು ಖರೀದಿಸುವುದರಿಂದ ನಿಮ್ಮ ಸಂಪತ್ತು ಬೆಳೆಯುವುದರ ಜತೆಗೆ ಡಿವಿಡೆಂಡ್‌ ಕೂಡ ಸಿಗುತ್ತದೆ. ಉತ್ತಮ ಉದ್ಯಮಿಯ ಕಂಪನಿಯಲ್ಲಿ ಹೂಡಿಕೆ ಮಾಡುವುದರೊಂದ ರಾಷ್ಟ್ರ ನಿರ್ಮಾಣದಲ್ಲೂ ಕೈ ಜೋಡಿಸಿದಂತೆಯೂ ಆಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌ ಮತ್ತು ಸುಕನ್ಯಾ ಸಮೃದ್ಧಿ; ಇವುಗಳ ಪ್ರಯೋಜನ ಏನೇನು?

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ನಿರ್ದಿಷ್ಟ ಉದ್ದೇಶಗಳೊಂದಿಗೆ ವಿನ್ಯಾಸಗೊಳಿಸಲಾದ (Money Guide) ಎರಡು ಪ್ರಮುಖ ಯೋಜನೆಗಳಾಗಿವೆ. ಮಹಿಳೆಯರಿಗೆ ಈ ಎರಡು ಯೋಜನೆಗಳ ಪ್ರಯೋಜನಗಳು ಏನೇನು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Money Guide
Koo

ಮಹಿಳೆಯರನ್ನು (women) ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು, ಲಿಂಗ ಸಮಾನತೆಯನ್ನು ಉತ್ತೇಜಿಸಲು ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಸಾಮಾನ್ಯವಾಗಿ ಮಹಿಳೆಯರು ಹಣಕಾಸಿನ ಸೇವೆಗಳ (Money Guide) ಸದುಪಯೋಗಪಡಿಸಲು ಮತ್ತು ಉಳಿತಾಯ ಕಾರ್ಯವಿಧಾನಗಳಲ್ಲಿ ಭಾಗವಹಿಸಲು ಅಡೆತಡೆಗಳನ್ನು ಎದುರಿಸುತ್ತಾರೆ. ವಿಶೇಷ ಉಳಿತಾಯ ಯೋಜನೆಗಳು (saving Scheme) ಅವರನ್ನು ಆರ್ಥಿಕ ಮುಖ್ಯವಾಹಿನಿಗೆ ತರುವ ಗುರಿಯನ್ನು ಹೊಂದಿದ್ದು, ಇದರಿಂದ ಅವರ ಭವಿಷ್ಯಕ್ಕಾಗಿ ಉಳಿತಾಯವನ್ನು ಮಾಡಲು ಪ್ರೋತ್ಸಾಹಿಸುತ್ತವೆ.

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Scheme) ಮತ್ತು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು (Mahila Samman Saving Certificate) ನಿರ್ದಿಷ್ಟ ಉದ್ದೇಶಗಳೊಂದಿಗೆ ವಿನ್ಯಾಸಗೊಳಿಸಲಾದ ಎರಡು ಪ್ರಮುಖ ಯೋಜನೆಗಳಾಗಿವೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇದು ಪ್ರಮುಖವಾಗಿದೆ. ಉಳಿತಾಯ ಮತ್ತು ಹೂಡಿಕೆಗೆ ಅವಕಾಶಗಳನ್ನು ಒದಗಿಸುವ ಮೂಲಕ ಈ ಯೋಜನೆಗಳು ಮಹಿಳೆಯರು ತಮ್ಮ ಹಣಕಾಸಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಮತ್ತು ಸ್ವತಂತ್ರ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.


ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಕೇಂದ್ರ ಬಜೆಟ್ 2023ರಲ್ಲಿ ಘೋಷಿಸಲಾದ ಭಾರತ ಸರ್ಕಾರದ ಒಂದು ಬಾರಿಯ ಹೊಸ ಸಣ್ಣ ಉಳಿತಾಯ ಯೋಜನೆಯಾಗಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಮಾರ್ಚ್ 2025ರವರೆಗೆ ಎರಡು ವರ್ಷಗಳವರೆಗೆ ಲಭ್ಯವಿದೆ. ಇದು 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ 2 ಲಕ್ಷದವರೆಗೆ ಠೇವಣಿ ಸೌಲಭ್ಯವನ್ನು ನೀಡುತ್ತದೆ.

ಬಡ್ಡಿ ದರ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಮಹಿಳೆಯರು ಅಥವಾ ಬಾಲಕಿಯರ ಹೆಸರಿನಲ್ಲಿ 2 ಲಕ್ಷದವರೆಗೆ ಠೇವಣಿ ಸೌಲಭ್ಯವನ್ನು 2 ವರ್ಷಗಳ ಅವಧಿಗೆ ಶೇ. 7.5ರ ಸ್ಥಿರ ಬಡ್ಡಿ ದರದಲ್ಲಿ ಭಾಗಶಃ ಹಿಂತೆಗೆದುಕೊಳ್ಳುವ ಆಯ್ಕೆಯೊಂದಿಗೆ ನೀಡುತ್ತದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಅಲ್ಪಾವಧಿಗೆ ಮಹಿಳೆಯ ಹೆಸರಿನಲ್ಲಿ ಹೂಡಿಕೆ ಮಾಡುವ ಸ್ಥಿರ ಠೇವಣಿಗಳಿಗೆ (ಎಫ್‌ಡಿ) ಸೂಕ್ತವಾದ ಪರ್ಯಾಯವಾಗಿದೆ ಎಂಬುದು ತಜ್ಞರ ಅಭಿಪ್ರಾಯ.

ಅರ್ಹತೆ

ಯಾವುದೇ ಭಾರತೀಯ ನಿವಾಸಿ ಮಹಿಳೆ ಇದನ್ನು ಪಡೆಯಬಹುದು. ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ. ಅಪ್ರಾಪ್ತ ವಯಸ್ಸಿನ ಬಾಲಕಿಯ ಸ್ವಾಭಾವಿಕ ಅಥವಾ ಕಾನೂನುಬದ್ಧ ಪೋಷಕರಿಂದ ಖಾತೆಯನ್ನು ಮಾಡಬಹುದು.

ಠೇವಣಿ ಮಿತಿಗಳು

ಕನಿಷ್ಠ ಠೇವಣಿ 1000 ರೂ.ನಿಂದ ಗರಿಷ್ಠ 2 ಲಕ್ಷ ರೂ. ಪ್ರತಿ ಠೇವಣಿದಾರರ ಖಾತೆಗಳ ಸಂಖ್ಯೆಯ ಮೇಲೆ ಯಾವುದೇ ಮಿತಿಯಿಲ್ಲ. ಈ ಯೋಜನೆಯಡಿಯಲ್ಲಿ ಎಲ್ಲಾ ಖಾತೆಗಳ ಒಟ್ಟು ಮೊತ್ತವು 2 ಲಕ್ಷ ರೂ.ಗಳನ್ನು ಮೀರುವುದಿಲ್ಲ. ಒಂದೇ ಗ್ರಾಹಕನಿಗೆ ಈ ಯೋಜನೆಯಡಿಯಲ್ಲಿ ಎರಡು ಖಾತೆಗಳನ್ನು ತೆರೆಯಬಹುದು. ಆದರೆ ಇದರ ನಡುವೆ 3 ತಿಂಗಳ ಮಧ್ಯಂತರ ಸಮಯವಿದೆ.

ಕೊನೆಯ ದಿನಾಂಕ

ಯೋಜನೆಯು ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಸದ್ಯಕ್ಕೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಎರಡು ವರ್ಷಗಳ ಯೋಜನೆಯಾಗಿದ್ದು, ಇದು ಏಪ್ರಿಲ್ 2023ರಲ್ಲಿ ಪ್ರಾರಂಭವಾಯಿತು ಮತ್ತು ಮಾರ್ಚ್ 2025ರವರೆಗೆ ಮುಂದುವರಿಯುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ದೇಶಾದ್ಯಂತ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು.

ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆ (ಯೋಜನೆ) (SSY) ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಪ್ರಕಾರ ಆಕರ್ಷಕ ಬಡ್ಡಿದರಗಳು ಮತ್ತು ತೆರಿಗೆ ಪ್ರಯೋಜನಗಳನ್ನು ಒದಗಿಸುವ ಮೂಲಕ ಹೆಣ್ಣುಮಕ್ಕಳಿಗೆ ಸಮೃದ್ಧ ಭವಿಷ್ಯವನ್ನು ಭದ್ರಪಡಿಸುವ ಗುರಿಯನ್ನು ಹೊಂದಿದೆ.


ಮಹಿಳಾ ಸಮ್ಮಾನ್ ಮತ್ತು ಸುಕನ್ಯಾ ಸಮೃದ್ಧಿ ನಡುವಿನ ವ್ಯತ್ಯಾಸ

ಸುಕನ್ಯಾ ಸಮೃದ್ಧಿ ಯೋಜನೆಯು ಭಾರತ ಸರ್ಕಾರದ ಒಂದು ಸಣ್ಣ ಠೇವಣಿ ಯೋಜನೆಯಾಗಿದ್ದು, ಇದು ಹೆಣ್ಣು ಮಗುವಿಗೆ ಮಾತ್ರ ಮೀಸಲಾಗಿದೆ. ಈ ಯೋಜನೆಯು ಹೆಣ್ಣು ಮಗುವಿನ ಶಿಕ್ಷಣ ಮತ್ತು ಮದುವೆ ವೆಚ್ಚವನ್ನು ಭರಿಸಲು ಉದ್ದೇಶಿಸಲಾಗಿದೆ.

ಸುಕನ್ಯಾ ಸಮೃದ್ಧಿ ಎಂಬುದು ಭಾರತದಲ್ಲಿನ ಸರ್ಕಾರಿ ಕಾರ್ಯಕ್ರಮವಾಗಿದ್ದು, ಕುಟುಂಬಗಳು ತಮ್ಮ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಉಳಿಸಲು ಸಹಾಯ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನದ ಭಾಗವಾಗಿ 2015 ರಲ್ಲಿ ಪ್ರಾರಂಭಿಸಲಾಯಿತು. ಇದು ವಾರ್ಷಿಕವಾಗಿ ಶೇ. 8.2 ಬಡ್ಡಿದರವನ್ನು ನೀಡುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಹೊಂದಿದೆ.

ಅರ್ಹತೆ

10 ವರ್ಷ ವಯಸ್ಸಿನ ಹೆಣ್ಣು ಮಗುವಿಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು.

ಕನಿಷ್ಠ ಮತ್ತು ಗರಿಷ್ಠ ಠೇವಣಿ

ಕನಿಷ್ಠ 250 ರೂ. ಮತ್ತು ಗರಿಷ್ಠ ರೂ. ವಾರ್ಷಿಕವಾಗಿ 1.5 ಲಕ್ಷ ರೂ. ಗಳನ್ನು ಠೇವಣಿ ಮಾಡಬಹುದು.

ಹೂಡಿಕೆಯ ಅವಧಿ

ಕನಿಷ್ಠ 15 ವರ್ಷಗಳ ಕೊಡುಗೆಗಳ ಅಗತ್ಯವಿದೆ.

ಇದನ್ನೂ ಓದಿ: Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

ಭಾಗಶಃ ಹಿಂತೆಗೆದುಕೊಳ್ಳುವಿಕೆಗಳು

ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಅನಂತರ ಉನ್ನತ ಶಿಕ್ಷಣದ ವೆಚ್ಚಗಳಿಗಾಗಿ ಭಾಗಶಃ ಹಿಂಪಡೆಯುವಿಕೆಗಳನ್ನು ಅನುಮತಿಸಲಾಗುತ್ತದೆ.

ಖಾತೆ ಮುಚ್ಚುವಿಕೆ

ಖಾತೆಯು 21 ವರ್ಷಗಳಲ್ಲಿ ಪಕ್ವವಾಗುತ್ತದೆ ಅಥವಾ 18 ವರ್ಷ ತುಂಬಿದ ನಂತರ ಹುಡುಗಿಯ ಮದುವೆಯ ಸಂದರ್ಭದಲ್ಲಿ ಅಕಾಲಿಕವಾಗಿ ಖಾತೆಯನ್ನು ಮುಚ್ಚಬಹುದು.

Continue Reading

ಮನಿ ಗೈಡ್

Labour Day 2024: ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಉಪಯುಕ್ತ ಹಣಕಾಸು ಟಿಪ್ಸ್‌ ಇಲ್ಲಿದೆ

Labour Day 2024: ಹೊಸ ಉದ್ಯೋಗ ಪ್ರಾರಂಭಿಸುವಾಗಲೇ ಉಳಿತಾಯದತ್ತ ಗಮನವಿರಬೇಕು. ಇದರಿಂದ ಆರ್ಥಿಕ ಭವಿಷ್ಯ ಸುಂದರವಾಗಿರುವುದು. ಜೀವನ ಹೆಚ್ಚು ಸುಲಭವಾಗುವುದು. ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಹಣಕಾಸು ಮತ್ತು ಉಳಿತಾಯದ ಮಾಹಿತಿ ಇಲ್ಲಿ ಕೊಡಲಾಗಿದೆ.

VISTARANEWS.COM


on

By

Labour Day 2024
Koo

ಹುಟ್ಟಿದ ಮಗುವಿನಿಂದ ಹಿಡಿದು ಬದುಕಿನ ಕೊನೆಯವರೆಗೂ (Labour Day 2024) ಸಿಗುವ ಮೊದಲ ಅನುಭವಗಳು (First experience) ಸಾಕಷ್ಟಿರುತ್ತದೆ. ಮೊದಲ ಬಾರಿಯ ಅನುಭವಗಳು ಪ್ರತಿಯೊಬ್ಬರ ಜೀವನದಲ್ಲೂ ಬರುವ ಅಮೂಲ್ಯ ಕ್ಷಣವಾಗಿರುತ್ತದೆ. ಅದನ್ನೂ ನಾವು ಸ್ಮರಣೀಯವಾಗಿಸಬೇಕು ಎಂದು ಬಯಸುತ್ತೇವೆ. ಅದೇ ರೀತಿ ಮೊದಲು ಪಡೆಯುವ ಸಂಬಳಕ್ಕೂ ಸರಿಯಾದ ಯೋಜನೆ (Money Guide) ಹಾಕಿಕೊಳ್ಳುವುದು ಬಹುಮುಖ್ಯ.

ಹೊಸದಾಗಿ ಉದ್ಯೋಗ (new job) ಆರಂಭಿಸುವುದು ಕೂಡ ಪ್ರತಿಯೊಬ್ಬರ ಜೀವನದ ಒಂದು ಸುಂದರ ಅನುಭವ. ಮೊದಲ ವೇತನದ ಚೆಕ್ (first salary) ಪಡೆದುದನ್ನು ಯಾರೂ ಮರೆಯಲಾರರು. ಆದರೆ ಆ ಕ್ಷಣದಲ್ಲಿ ನೂರಾರು ಯೋಚನೆಗಳು ಹುಟ್ಟಿಕೊಂಡಿರುತ್ತವೆ, ಆಸೆಗಳು ಚಿಗುರೊಡೆಯುತ್ತದೆ. ಆದರೆ ಅವಕ್ಕೆಲ್ಲ ನಿಯಂತ್ರಣ ಹಾಕಿ ಭವಿಷ್ಯವನ್ನು ಸುಂದರವಾಗಿಸುವ ಪಣ ತೊಡಬೇಕು.

ಹೊಸದಾಗಿ ಗಳಿಸುವ ಉದ್ಯೋಗ ಆರ್ಥಿಕ ಸ್ವಾತಂತ್ರ್ಯದ ರುಚಿಯನ್ನು ಒದಗಿಸಬಹುದು. ಆದರೂ ಯುವ ವೃತ್ತಿಪರರು ಆಟವಾಡುವ ಬದಲು ತಮ್ಮ ಮೊದಲ ಸಂಬಳವನ್ನು ಆರ್ಥಿಕ ಯೋಗಕ್ಷೇಮದ ಮೆಟ್ಟಿಲು ಎಂದು ಪರಿಗಣಿಸಬೇಕು. ಆರೋಗ್ಯಕರ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಆರ್ಥಿಕ ಯೋಜನೆಗೆ ಇದು ಸರಿಯಾದ ಸಮಯವಾಗಿರುತ್ತದೆ.

ಹೊಸ ಉದ್ಯೋಗಿಗಳಿಗೆ ಹಣಕಾಸು ಯೋಜನೆಯನ್ನು ರೂಪಿಸಲು ಸಹಾಯಕವಾಗುವ ಎಂಟು ಸಲಹೆಗಳು ಇಲ್ಲಿವೆ. ಇದನ್ನು ಪಾಲಿಸಿದರೆ ನಿಮ್ಮ ಜೇಬು ಎಂದಿಗೂ ಖಾಲಿಯಾಗಲಾರದು.

ಇದನ್ನೂ ಓದಿ: Money Guide: ಫೊರೆಕ್ಸ್‌ ಕಾರ್ಡ್‌ V/S ಕ್ರೆಡಿಟ್‌ ಕಾರ್ಡ್‌: ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ?


ಮಾಸಿಕ ಬಜೆಟ್ ರೂಪಿಸಿ

ಉತ್ತಮ ಆರ್ಥಿಕ ಆರೋಗ್ಯದ ಮೊದಲ ಹೆಜ್ಜೆ ಗಳಿಕೆ ಮತ್ತು ವೆಚ್ಚಗಳನ್ನು ಟ್ರ್ಯಾಕ್ ಮಾಡುವುದು. ಹೊಸ ಉದ್ಯೋಗಿಯಾಗಿ ನೀವು ‘ಬಯಸುವ’ ಮತ್ತು ‘ಅಗತ್ಯಗಳ’ ನಡುವೆ ವ್ಯತ್ಯಾಸವನ್ನು ಹೊಂದಿರಬೇಕು. ಮಾಸಿಕ ವೆಚ್ಚಗಳನ್ನು ಪಟ್ಟಿ ಮಾಡುವುದು, ಅವುಗಳನ್ನು ವರ್ಗೀಕರಿಸುವುದು ಮತ್ತು ಪ್ರತಿಯೊಂದಕ್ಕೂ ಹಣವನ್ನು ಮೀಸಲಿಡುವುದು ಅಧಿಕ ಖರ್ಚು ಮಾಡುವುದನ್ನು ತಡೆಯಬಹುದು. ಹೆಚ್ಚುವರಿಯಾಗಿ ನಿಮ್ಮ ಬಜೆಟ್‌ನಲ್ಲಿ ಉಳಿತಾಯಕ್ಕಾಗಿ ಮೀಸಲಾದ ಭಾಗವನ್ನು ಹೊಂದಿರುವುದು ನೀವು ಗಳಿಸಿದ ಎಲ್ಲವನ್ನೂ ನೀವು ಖರ್ಚು ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ತುರ್ತು ನಿಧಿಯನ್ನು ನಿರ್ಮಿಸಿ

ಅನಿರೀಕ್ಷಿತ ವೈದ್ಯಕೀಯ ಸಮಸ್ಯೆಯಾಗಿರಲಿ, ಹಠಾತ್ ಉದ್ಯೋಗ ನಷ್ಟವಾಗಲಿ ಅಥವಾ ತುರ್ತು ಮನೆ ದುರಸ್ತಿಯಾಗಿರಲಿ.. ಹೀಗೆ ಅನಿರೀಕ್ಷಿತ ಘಟನೆಗಳು ಆರ್ಥಿಕ ಸ್ಥಿರತೆಯನ್ನು ಕುಗ್ಗಿಸಬಹುದು. ಅಂತಹ ಸಮಯದಲ್ಲಿ ತುರ್ತು ನಿಧಿಯು ಸಹಾಯ ಮಾಡುತ್ತದೆ. ಆದ್ದರಿಂದ, ಹೊಸ ಉದ್ಯೋಗಿಗಳು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಕನಿಷ್ಠ ಮೂರರಿಂದ ಆರು ತಿಂಗಳ ಮೌಲ್ಯದ ವೆಚ್ಚವನ್ನು ಉಳಿತಾಯ ಖಾತೆಯಲ್ಲಿ ಉಳಿಸುವ ಗುರಿಯನ್ನು ಹೊಂದಿರಬೇಕು.

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಹಣವು ನಿಮಗಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಒಂದು ಮ್ಯೂಚುಯಲ್ ಫಂಡ್ ಹಲವಾರು ಹೂಡಿಕೆದಾರರಿಂದ ಹಣವನ್ನು ಪೂಲ್ ಮಾಡಿ ಸೆಕ್ಯೂರಿಟಿಗಳ ವೈವಿಧ್ಯಮಯ ಪೋರ್ಟ್ ಫೋಲಿಯೋವನ್ನು ಖರೀದಿಸುತ್ತದೆ. ಈ ವೈವಿಧ್ಯೀಕರಣವು ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಕೆಲಸದಲ್ಲಿ ಪರಿಣಿತ ನಿಧಿ ವ್ಯವಸ್ಥಾಪಕರೊಂದಿಗೆ ನಿಮ್ಮ ಹಣವು ಸಮರ್ಥ ಕೈಯಲ್ಲಿದೆ. ಮ್ಯೂಚವಲ್ ಫಂಡ್ ಖರೀದಿಗೆ ಯಾವುದೇ ನಿಯಮವಿಲ್ಲ. ಸಣ್ಣ ಮೊತ್ತದೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು. ಕಾಲಾನಂತರದಲ್ಲಿ ಈ ಮ್ಯೂಚುಯಲ್ ಫಂಡ್ ಹೂಡಿಕೆಯನ್ನು ಗಮನಾರ್ಹ ಮೊತ್ತವಾಗಿ ಪರಿವರ್ತನೆಯಾಗುತ್ತದೆ.

ನಿವೃತ್ತಿ ಯೋಜನೆ

ಉದ್ಯೋಗ ಪ್ರಾರಂಭಿಸುವಾಗ ನಿವೃತ್ತಿಯು ದೂರದಲ್ಲಿ ಇರುವಂತೆ ಕಾಣಿಸಬಹುದು. ಆದರೆ ಎಷ್ಟು ಬೇಗ ನಿವೃತ್ತಿಗಾಗಿ ಹಣ ಉಳಿಸಲು ಪ್ರಾರಂಭಿಸುತ್ತೀರೋ ಅಷ್ಟು ಉತ್ತಮ. ಹೆಚ್ಚುತ್ತಿರುವ ಜೀವಿತಾವಧಿ ಮತ್ತು ಹಣದುಬ್ಬರ ದರಗಳನ್ನು ಗಮನಿಸಿದರೆ ಗಣನೀಯ ನಿವೃತ್ತಿ ನಿಧಿಯನ್ನು ಹೊಂದಿದ್ದರೆ ಗಳಿಸುವುದನ್ನು ನಿಲ್ಲಿಸಿದ ಅನಂತರವೂ ಆರಾಮದಾಯಕ ಜೀವನ ನಡೆಸಲು ಸಹಾಯ ಮಾಡುತ್ತದೆ.

ಸಾಲದ ಬಲೆ ತಪ್ಪಿಸಿ

ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಹೊಂದಿದ್ದರೆ, ಮರುಪಾವತಿ ಯೋಜನೆಯನ್ನು ರಚಿಸಿ. ಸಾಲಗಳು, ವಿಶೇಷವಾಗಿ ಹೆಚ್ಚಿನ ಬಡ್ಡಿಯೊಂದಿಗೆ, ತ್ವರಿತವಾಗಿ ಹೊರೆಯಾಗಬಹುದು. ಸತತವಾಗಿ ಸಾಲಗಳನ್ನು ಪಾವತಿಸುವುದು ನಿಮ್ಮ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದ. ಆದರೆ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುತ್ತದೆ. ಇದು ಭವಿಷ್ಯದ ಹಣಕಾಸು ಯೋಜನೆಗಳಿಗೆ ಪ್ರಯೋಜನಕಾರಿಯಾಗಿದೆ.


ಉತ್ತಮ ಸಂಬಳದ ಮಾತುಕತೆ

ಆರಂಭಿಕ ವೇತನವು ಭವಿಷ್ಯದ ಏರಿಕೆಗಳಿಗೆ ಪೂರ್ವನಿದರ್ಶನವನ್ನು ಹೊಂದಿಸುತ್ತದೆ. ನಿಮ್ಮ ಪಾತ್ರಕ್ಕಾಗಿ ಉದ್ಯಮದ ಮಾನದಂಡಗಳನ್ನು ಸಂಶೋಧಿಸಿ ಮತ್ತು ಸಂದರ್ಶನಗಳು ಅಥವಾ ಮೌಲ್ಯಮಾಪನ ಚರ್ಚೆಗಳ ಸಮಯದಲ್ಲಿ ನಿಮ್ಮ ಮೌಲ್ಯವನ್ನು ಮಾತುಕತೆ ಮಾಡಲು ಸಿದ್ಧರಾಗಿರಿ. ಹೆಚ್ಚಿನ ಸಂಬಳವು ಹೆಚ್ಚಿನ ಉಳಿತಾಯ ಮತ್ತು ಹೂಡಿಕೆಗಳಿಗೆ ನೇರವಾಗಿ ಅನುವಾದಿಸುತ್ತದೆ.

ಗರಿಷ್ಠ ತೆರಿಗೆ ಉಳಿತಾಯ

ಆದಾಯದ ಗಮನಾರ್ಹ ಭಾಗವು ತೆರಿಗೆಗಳ ಕಡೆಗೆ ಹೋಗಬಹುದು. ಆದಾಗ್ಯೂ, ಇಎಲ್ ಎಸ್ ಎಸ್ ನಂತಹ ತೆರಿಗೆ-ಉಳಿತಾಯ ಸಾಧನಗಳಲ್ಲಿ ಸರಿಯಾದ ಯೋಜನೆ ಮತ್ತು ಹೂಡಿಕೆಯೊಂದಿಗೆ ಅಥವಾ ಕಡಿತಗಳಿಗೆ 80C ನಂತಹ ವಿಭಾಗಗಳನ್ನು ಬಳಸಿಕೊಂಡು, ನಿಮ್ಮ ತೆರಿಗೆ ಹೊರಹರಿವನ್ನು ಕಾನೂನುಬದ್ಧವಾಗಿ ಕಡಿಮೆ ಮಾಡಬಹುದು. ಇದು ಕೇವಲ ಗಳಿಸುವುದಷ್ಟೇ ಅಲ್ಲ ಆ ಗಳಿಕೆಯನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳುವುದು.

ಕಲಿಯಿರಿ ಮತ್ತು ಹೊಂದಿಕೊಳ್ಳಿ

ಹಣಕಾಸು ಪ್ರಪಂಚವು ಯಾವಾಗಲೂ ವಿಕಸನಗೊಳ್ಳುತ್ತಿರುತ್ತದೆ. ಮಾರುಕಟ್ಟೆಯಲ್ಲಿನ ಬದಲಾವಣೆಗಳು ಹೊಸ ಹೂಡಿಕೆ ಆಯ್ಕೆಗಳು ಮತ್ತು ವಿಕಸನಗೊಳ್ಳುತ್ತಿರುವ ತೆರಿಗೆ ನಿಯಮಗಳ ಬಗ್ಗೆ ನಿಯಮಿತವಾಗಿ ನವೀಕರಿಸಿಕೊಳ್ಳುವುದು ನೀವು ಯಾವಾಗಲೂ ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸುತ್ತದೆ. ಪೂರ್ವಭಾವಿಯಾಗಿರುವುದು ಮತ್ತು ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಸಂಪತ್ತಿನ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

Continue Reading

ಮನಿ ಗೈಡ್

PF Balance Check: ಬಡ್ಡಿ ಬಂದಿದೆಯೋ ಇಲ್ಲವೋ… ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

PF Balance Check: ಇನ್ನೇನು 2023 -2024ರ ಬಡ್ಡಿ ಹಣ ಇಪಿಎಫ್ ಖಾತೆಗೆ ಬೀಳಲಿದೆ. ನೌಕರರ ಭವಿಷ್ಯ ನಿಧಿ ಹೊಂದಿರುವ ಉದ್ಯೋಗಿಗಳು ತಮ್ಮ ಖಾತೆಗೆ ಇಪಿಎಫ್ ಬಡ್ಡಿ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ನೋಡಲು ನಾಲ್ಕು ದಾರಿಗಳಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

PF Balance Check
Koo

ನವದೆಹಲಿ: ನೌಕರರ ಭವಿಷ್ಯ ನಿಧಿ (EPF) ಹೊಂದಿರುವ ಉದ್ಯೋಗಿಗಳಿಗೆ ಇನ್ನು ಕೆಲವೇ ದಿನಗಳಲ್ಲಿ 2023-2024ರ ಬಡ್ಡಿ ಹಣ (interest money) ಖಾತೆಗೆ ಬೀಳಲಿದೆ. ಹೀಗಾಗಿ ಈಗಾಗಲೇ ಇಪಿಎಫ್‌ಒ ಹೊಂದಿರುವ ಸದಸ್ಯರು ತಮ್ಮ ಖಾತೆಗೆ ಬಡ್ಡಿ ಹಣ (PF Balance Check) ಬಂದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ತೊಡಗಿದ್ದಾರೆ. ಸ್ಮಾರ್ಟ್ ಫೋನ್ (smart phone) ಕೈಯಲ್ಲಿ ಇರುವುದರಿಂದ ಈಗ ಇದು ಕಷ್ಟವೇನಲ್ಲ.

ಇಪಿಎಫ್ ಬಡ್ಡಿ ಕ್ರೆಡಿಟ್ ಸ್ಥಿತಿಯನ್ನು ಪರಿಶೀಲಿಸಲು ನಾಲ್ಕು ದಾರಿಗಳಿವೆ. ಆನ್‌ಲೈನ್ ಮೂಲಕ, ಸಂದೇಶ ಕಳುಹಿಸಿ, ಮಿಸ್ಡ್ ಕಾಲ್‌ ಅಥವಾ ಉಮಂಗ್ ಅಪ್ಲಿಕೇಶನ್ ಮೂಲಕ ಇಪಿಎಫ್ ಬಡ್ಡಿ ಕ್ರೆಡಿಟ್ ಆಗಿದೆಯೇ ಇಲ್ಲವೋ ಎಂದು ನೋಡಬಹುದು.

ಆನ್ ಲೈನ್ ನಲ್ಲಿ ಪರಿಶೀಲಿಸಿ

ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು epfindia.gov.in ಗೆ ಲಾಗಿನ್ ಮಾಡಿ. ಅಲ್ಲಿ UAN ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್‌ ಅನ್ನು ಹಾಕಿ. ಬಳಿಕ ಇ-ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ. ಒಮ್ಮೆ ನೀವು ಎಲ್ಲಾ ವಿವರಗಳನ್ನು ಫೈಲ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ಸದಸ್ಯರ ಐಡಿ ತೆರೆದು ಖಾತೆಯಲ್ಲಿರುವ ಒಟ್ಟು EPF ಬ್ಯಾಲೆನ್ಸ್ ಅನ್ನು ನೋಡಬಹುದು.

ಇದನ್ನೂ ಓದಿ: Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ


ಉಮಂಗ್ ಅಪ್ಲಿಕೇಶನ್

ಉಮಂಗ್ ಅಪ್ಲಿಕೇಶನ್ ಮೂಲಕ EPF ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಲು UMANG ಅಪ್ಲಿಕೇಶನ್ ತೆರೆಯಿರಿ. EPFO ಮೇಲೆ ಕ್ಲಿಕ್ ಮಾಡಿ. ಉದ್ಯೋಗಿ ಕೇಂದ್ರಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ, ಬಳಿಕ View Passbook ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ UAN ಸಂಖ್ಯೆ ಮತ್ತು ಪಾಸ್‌ವರ್ಡ್‌ ಫೀಡ್ ಮಾಡಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಅನ್ನು ಅಲ್ಲಿ ಹಾಕಿ ಇಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.

ಎಸ್‌ಎಂಎಸ್

ಇಪಿಎಫ್ ಬ್ಯಾಲೆನ್ಸ್ ಅನ್ನು ಎಸ್ ಎಂಎಸ್ ಕಳುಹಿಸಿಯೂ ಪರಿಶೀಲಿಸಬಹುದು. ಮೊಬೈಲ್ ಸಂಖ್ಯೆಯನ್ನು ಹೊರತುಪಡಿಸಿ, ಯುಎಎನ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸದಸ್ಯರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳಿಂದ ಎಸ್ ಎಂಎಸ್ ಕಳುಹಿಸುವ ಮೂಲಕ ತಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು. ಇದಕ್ಕಾಗಿ EPFOHO UAN ಅನ್ನು 7738299899ಗೆ ಎಸ್‌ಎಂಎಸ್ ಮಾಡಬೇಕು.

ಮಿಸ್ಡ್ ಕಾಲ್

ಮಿಸ್ಡ್ ಕಾಲ್ ನೀಡಿಯೂ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಇದಕ್ಕಾಗಿ UAN ಪೋರ್ಟಲ್‌ನಲ್ಲಿ ನೋಂದಾಯಿಸಲಾದ EPFO ಚಂದಾದಾರರು UANನಲ್ಲಿ ನೋಂದಾಯಿಸಲಾದ ತಮ್ಮ ಮೊಬೈಲ್ ಸಂಖ್ಯೆಯಿಂದ 9966044425 ಈ ನಂಬರ್‌ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ತಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು. ನೆನಪಿಡಿ, ನೀವು ಕರೆ ಮಾಡುವ ಸಂಖ್ಯೆ ನಿಮ್ಮ ಪಿಎಫ್‌ ಅಕೌಂಟ್‌ನಲ್ಲಿ ದಾಖಲಾಗಿರಬೇಕು.

Continue Reading

ಮನಿ ಗೈಡ್

Money Guide: ಎಫ್‌ಡಿ ಯಾವ ಬ್ಯಾಂಕ್‌ನಲ್ಲಿಟ್ಟರೆ ಉತ್ತಮ? ಬಡ್ಡಿ ದರ ಎಲ್ಲಿ, ಎಷ್ಟಿದೆ?

Money Guide: ಸ್ಥಿರ ಠೇವಣಿಗಳು ಕಡಿಮೆ ಅಪಾಯ ಹೊಂದಿರುವುದರಿಂದ ಎಲ್ಲರೂ ಇದರಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಇದರಲ್ಲಿ ಹೂಡಿಕೆ ಮಾಡುವ ಮುನ್ನ ಯಾವ ಯಾವ ಬ್ಯಾಂಕ್ ಗಳು ಎಷ್ಟು ಬಡ್ಡಿ ದರಗಳನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಇದರಿಂದ ನಮ್ಮ ಹೂಡಿಕೆ ಮೇಲೆ ಹೆಚ್ಚು ಲಾಭ ಪಡೆಯಬಹುದು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

By

Money Guide
Koo

ಕಡಿಮೆ ಅಪಾಯ ಹೊಂದಿರುವ ಸ್ಥಿರ (fixed deposit), ನಿಗದಿತ ಅವಧಿಯ ಠೇವಣಿಯಲ್ಲಿ (term deposit) ಹೂಡಿಕೆ (investment) ಮಾಡಲು (Money Guide) ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಇದರಲ್ಲಿ ಬಡ್ಡಿ (interest rates) ಅಷ್ಟಾಗಿ ಸಿಗದೇ ಇದ್ದರೂ ನಾವು ಹೂಡಿಕೆ ಮಾಡಿರುವ ಹಣ ಮಾತ್ರ ಸುರಕ್ಷಿತವಾಗಿ ನಿಗದಿತ ಸಮಯದಲ್ಲಿ ನಮ್ಮ ಕೈ ಸೇರುತ್ತದೆ.

ತಮ್ಮಲ್ಲಿರುವ ಹಣವನ್ನು ಹೂಡಿಕೆದಾರರು ಪೂರ್ವನಿರ್ಧರಿತ ಅವಧಿಗೆ ಸುರಕ್ಷಿತವಾಗಿ ಇಡಲು ಮತ್ತು ಆಯ್ಕೆ ಮಾಡಿದ ಅವಧಿಯ ಉದ್ದಕ್ಕೂ ಅಥವಾ ಮುಕ್ತಾಯದ ಅನಂತರ ನಿಯಮಿತ ಮಧ್ಯಂತರಗಳಲ್ಲಿ ಸ್ಥಿರ ಬಡ್ಡಿ ಪಾವತಿಗಳನ್ನು ಪಡೆಯಲು ಸ್ಥಿರ ಠೇವಣಿ ಅತ್ಯುತ್ತಮ ಆಯ್ಕೆಯಾಗಿದೆ.

ಸ್ಥಿರ ಠೇವಣಿಗೆ ವಿವಿಧ ಬ್ಯಾಂಕ್‌ಗಳು ಶೇ. 3ರಿಂದ 7.50ರಷ್ಟು ಬಡ್ಡಿ ದರಗಳನ್ನು ಪಾವತಿ ಮಾಡುತ್ತದೆ. ಇದು ಹೂಡಿಕೆಯ ಅವಧಿಯನ್ನು ಅವಲಂಬಿಸಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ. 0.5ರಷ್ಟು ಬಡ್ಡಿ ದರವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ:Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವ ಮೊದಲು ವಿವಿಧ ಬ್ಯಾಂಕ್‌ಗಳು ನೀಡುವ ಸ್ಥಿರ ಠೇವಣಿ (ಎಫ್‌ಡಿ) ದರಗಳನ್ನು ಹೋಲಿಸುವುದು ಸೂಕ್ತ. ಇದಕ್ಕಾಗಿ ಎಫ್‌ಡಿಗಳನ್ನು ಒದಗಿಸುವ ನಾಲ್ಕು ಬ್ಯಾಂಕ್‌ಗಳ ಕುರಿತು ಮಾಹಿತಿ ಇಲ್ಲಿದೆ.


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ (ಎಫ್‌ಡಿ) ಎರಡು ಕೋಟಿಗಿಂತ ಕಡಿಮೆ ಠೇವಣಿ ಹೂಡಿಕೆ ಮಾಡುವ ಗ್ರಾಹಕರಿಗೆ ಶೇ. 3ರಿಂದ 7ರವರೆಗೆ ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರು ಹೆಚ್ಚುವರಿ 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಪಡೆಯುತ್ತಾರೆ. ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಎಫ್ ಡಿಗಳಿಗೆ ಬ್ಯಾಂಕ್ ಶೇ. 6.80ರಷ್ಟು ಬಡ್ಡಿದರವನ್ನು ಒದಗಿಸುತ್ತದೆ. ಇದಲ್ಲದೆ, ಎರಡು ವರ್ಷಗಳಿಂದ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯವರೆಗೆ ಠೇವಣಿ ಮಾಡುವವರಿಗೆ ಬ್ಯಾಂಕ್ ಶೇ. 7ರಷ್ಟು ಬಡ್ಡಿ ದರವನ್ನು ನೀಡುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)

2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ. 3.50ರಿಂದ 7.50ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ. ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳಿಗೆ, ಸಾಮಾನ್ಯ ಹೂಡಿಕೆದಾರರಿಗೆ ಬಡ್ಡಿ ದರವು ಶೇ. 6.75ರಷ್ಟು ಇರುತ್ತದೆ. ಆದರೆ ಹಿರಿಯ ನಾಗರಿಕರು ಒಂದು ವರ್ಷದ ಯೋಜನೆಯಲ್ಲಿ ಶೇ. 7.25ರಷ್ಟು ಬಡ್ಡಿ ದರವನ್ನು ಪಡೆಯುತ್ತಾರೆ.

ಐಸಿಐಸಿಐ ಬ್ಯಾಂಕ್ (ICICI)

5 ಕೋಟಿಗಿಂತ ಕಡಿಮೆ ಠೇವಣಿ ಮಾಡುವ ಗ್ರಾಹಕರಿಗೆ ಐಸಿಐಸಿಐ ಶೇ. 3ರಿಂದ 7.50ರಷ್ಟು ಬಡ್ಡಿ ದರಗಳನ್ನು ಒದಗಿಸುತ್ತದೆ. ಹಿರಿಯ ನಾಗರಿಕರು ಹೆಚ್ಚುವರಿಯಾಗಿ ಶೇ. 0.5ರಷ್ಟು ಬಡ್ಡಿಯನ್ನು ಪಡೆಯುತ್ತಾರೆ. ದರಗಳು 7 ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಗಳಲ್ಲಿ ಶೇ. 3.50 ರಿಂದ 7.50 ರವರೆಗೆ ಹೆಚ್ಚಳವಾಗುತ್ತದೆ. ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಶೇ. 6.70 ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್ (HDFC)

ಹೆಚ್‌ಡಿಎಫ್‌ಸಿ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತದೆ. ನಿಯಮಿತ ಹೂಡಿಕೆದಾರರು ಶೇ. 6.60 ರಷ್ಟು ಬಡ್ಡಿ ದರವನ್ನು ಪಡೆಯಬಹುದು. ಆದರೆ ಹಿರಿಯ ನಾಗರಿಕರು ಅಂತಹ ಠೇವಣಿಗಳ ಮೇಲೆ ಶೇ. 7.10 ರಷ್ಟು ಬಡ್ಡಿ ದರವನ್ನು ಪಡೆಯುತ್ತಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇ. 3ರಿಂದ 7.75 ರಷ್ಟು ಬಡ್ಡಿದರಗಳನ್ನು ಒದಗಿಸುತ್ತದೆ. ಇದು ಮುಕ್ತಾಯದ ಅವಧಿಗೆ ಅನುಗುಣವಾಗಿ ಬದಲಾಗುತ್ತದೆ.

Continue Reading
Advertisement
Arvind Kejriwal
ದೇಶ1 hour ago

Arvind Kejriwal: ಚೀನಾದಿಂದ ಭಾರತದ ನೆಲ ವಾಪಸ್‌ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

Prajwal Revanna Case: Beware of making a statement Parameshwara warns to HD Kumaraswamy
ರಾಜಕೀಯ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Road Accident
ಕ್ರೈಂ1 hour ago

Road Accident : ತಂದೆ ಜತೆಗೆ ಕಾರ್‌ ವಾಶ್‌ ಮಾಡುವಾಗ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ ಮಗು ಅಪ್ಪಚ್ಚಿ

Ram Charan get mobbed by fans during public appearances
ಸಿನಿಮಾ2 hours ago

Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

Mother's Day 2024 Duniya Vijay jaggesh Post Viral
ಸಿನಿಮಾ2 hours ago

Mother’s Day 2024: ಅಮ್ಮನ ನೆನೆದಾಗ ಮಗುವಾಗುವೆ ಎಂದ ಜಗ್ಗೇಶ್‌: ದುನಿಯಾ ವಿಜಯ್‌ ಭಾವುಕ ಪೋಸ್ಟ್‌!

Job Alert
ಉದ್ಯೋಗ2 hours ago

Job Alert: ಟೆಕ್ಸ್‌ಟೈಲ್ಸ್‌ ಕಮಿಟಿಯಿಂದ 40 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲೂ ಇದೆ ಪೋಸ್ಟಿಂಗ್‌

Dead Body Found
ಕ್ರೈಂ2 hours ago

Dead Body Found : ಡ್ಯಾಂನಲ್ಲಿ ಬಿದ್ದಿತ್ತು ವ್ಯಕ್ತಿ ಶವ; ರೈಲು ಬೋಗಿ ಒಳಗೆ ಕೊಳೆಯುತ್ತಿತ್ತು ಮಹಿಳೆಯ ಡೆಡ್‌ಬಾಡಿ

Narendra Modi
ದೇಶ2 hours ago

Narendra Modi: ಚುನಾವಣೆ ಪ್ರಚಾರದ ವೇಳೆ 5 ಗ್ಯಾರಂಟಿಗಳನ್ನು ಘೋಷಿಸಿದ ಮೋದಿ; ಏನವು?

Prajwal Revanna Case Preetham Gowda close aides arrested and Congress hits back at BJP
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ಹಂಚಿಕೆ ಕೇಸ್‌; ಪ್ರೀತಂ ಗೌಡ ಅತ್ಯಾಪ್ತರ ಸೆರೆ: ಬಿಜೆಪಿಗೆ ಚೆಕ್‌ಮೇಟ್‌?

Mother's Day
ಮಹಿಳೆ2 hours ago

Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Two people of pen drive allottees arrested
ಕ್ರೈಂ3 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ10 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ3 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

ಟ್ರೆಂಡಿಂಗ್‌