Sadguru Column : ಹಿಂದು ಒಂದು `ಇಸಂ' ಅಲ್ಲ, ಅದೊಂದು ಭೌಗೋಳಿಕ, ಸಂಸ್ಕೃತಿಯ ಐಡೆಂಟಿಟಿ - Vistara News

ಧಾರ್ಮಿಕ

Sadguru Column : ಹಿಂದು ಒಂದು `ಇಸಂ’ ಅಲ್ಲ, ಅದೊಂದು ಭೌಗೋಳಿಕ, ಸಂಸ್ಕೃತಿಯ ಐಡೆಂಟಿಟಿ

Sadguru Column : ಸದ್ಗುರು ಜಗ್ಗಿ ವಾಸುದೇವ್‌ ಅವರು ಹಿಂದುತ್ವವನ್ನು ಇಲ್ಲಿ ಪರಿಪೂರ್ಣವಾಗಿ ವಿಶ್ಲೇಷಣೆ ಮಾಡಿದ್ದಾರೆ. ಯಾಕೆ ಹಿಂದುತ್ವ ಒಂದು ಇಸಂ ಅಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳನ್ನು ನೀಡಿದ್ದಾರೆ. ಯಾಕೆ ಹಿಂದು ಧರ್ಮ ಎಲ್ಲವನ್ನೂ ಒಳಗೊಂಡಿದೆ ಎನ್ನುವುದಕ್ಕೂ ಉತ್ತರ ನೀಡಿದ್ದಾರೆ.

VISTARANEWS.COM


on

Sadguru Column hindu god
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Sadhuru Jaggi Vasudev

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ವಾಸ್ತವದಲ್ಲಿ ಹಿಂದುತ್ವ ಎಂಬುದಿಲ್ಲ (Hindutva does not exist). ಈ ಪದ ಹಾಗೂ ಕಲ್ಪನೆಯು ಇತ್ತೀಚಿನದು. ಹಿಂದು ನಾಗರಿಕತೆಯು ಸಿಂಧು ನದಿಯ ತೀರದಲ್ಲಿ ಹುಟ್ಟಿಕೊಂಡಿತು (Sadguru Column). ಇಂದು ಅದನ್ನು ಆಂಗ್ಲ ಭಾಷೆಯಲ್ಲಿ ಇಂಡಸ್ ಎಂದು ಕರೆದರು. ಪರ್ಷಿಯನ್ನರು ಬಂದಾಗ ಹಿಂದು ಎಂಬ ಪದವನ್ನು ಬಳಸಿದರು. ಸಿಂಧು ನದಿಯಾಚೆ ನೆಲೆಸಿದವರನ್ನು ಸೂಚಿಸಲು ಸಂಸ್ಕೃತ ಮೂಲದ ಸಿಂಧು ಎಂಬುದು ಹಿಂದು ಎಂದಾಯಿತು. ಮೂಲಭೂತವಾಗಿ, ಹಿಂದು ಎನ್ನುವುದು ಒಂದು ಭೌಗೋಳಿಕ ಹಾಗೂ ಸಂಸ್ಕೃತಿಯ ಗುರುತಷ್ಟೆ. ಅದನ್ನು ಪ್ರತ್ಯೇಕವಾಗಿ ಸಂಘಟಿಸುವ ಉದ್ದೇಶ ಎಂದಿಗೂ ಇರಲಿಲ್ಲ. ಮೂಲಭೂತವಾಗಿ ಈ ಪರಿಪೂರ್ಣ ಸಂಸ್ಕೃತಿಯು ವ್ಯಕ್ತಿಯ ಪೂರ್ಣ ಸಾಮರ್ಥ್ಯವನ್ನು ಅರಿಯುವ ನಿಟ್ಟಿನಲ್ಲಿ ಸ್ಥಾಪಿಸಲ್ಪಟ್ಟದ್ದು.

Sadguru Column hindu Dharma

ಹಿಂದು, ಎಂದಿಗೂ ಒಂದು “ಇಸಂ” ಆಗಿರಲಿಲ್ಲ (Hinduism). ಈ ಭೌಗೋಳಿಕ ಹಾಗೂ ಸಂಸ್ಕೃತಿಯ ಅನನ್ಯತೆಯನ್ನು ಒಂದು ಧರ್ಮವನ್ನಾಗಿ ಸಂಘಟಿಸುವ ಪ್ರಯತ್ನವು ಇದುವರೆಗೂ ಫಲಕಾರಿಯಾಗಿಲ್ಲ. ಏಕೆಂದರೆ ಸನಾತನ ಧರ್ಮವೆಂದು ಕರೆಯುವ ಹಿಂದು ಪದ್ಧತಿಯ ಜೀವನ ಅಥವಾ ಸಾರ್ವತ್ರಿಕ ನಿಯಮವು ಎಲ್ಲ ಗುಣಗಳನ್ನೂ ಒಳಗೊಂಡಿದ್ದಾಗಿದೆ ಮತ್ತು ಯಾವುದನ್ನೂ ಅದರಿಂದ ತೆಗೆದು ಹಾಕಿಲ್ಲ. ಹಿಂದು ಮಾದರಿಯ ಜೀವನವು ಒಂದು ಸಂಘಟಿತ ನಂಬಿಕೆಯ ಪದ್ಧತಿಯಲ್ಲ. ಅದೊಂದು ಮುಕ್ತಿ ಮಾರ್ಗದ ವಿಜ್ಞಾನವಾಗಿದೆ.

ಪ್ರಪಂಚದ ಘರ್ಷಣೆಗಳನ್ನು ಸದಾ ಒಳ್ಳೆಯದರ ವಿರುದ್ಧ ಕೆಟ್ಟದ್ದು ಎಂದು ಬಿಂಬಿಸಲಾಗಿದೆ. ವಾಸ್ತವದಲ್ಲಿ ಈ ಘರ್ಷಣೆಯು – ಒಬ್ಬರ ನಂಬಿಕೆಯ ವಿರುದ್ಧ ಇನ್ನೊಬ್ಬರ ನಂಬಿಕೆಯದ್ದಾಗಿದೆ. ಆದರೆ ಈ ಸಂಸ್ಕೃತಿಯಲ್ಲಿ ಪುರೋಹಿತಶಾಹಿ ದೇವಪ್ರಭುತ್ವವಾದಿ ರಾಜ್ಯಗಳಿರಲಿಲ್ಲ. ಆಳುವವನಿಗೆ ಅವನದೇ ಆದ ಮತಧರ್ಮವಿದ್ದರೆ, ಪ್ರಜೆಗಳು ತಮ್ಮ ಆಯ್ಕೆಯ ಮತಧರ್ಮವನ್ನು ಅನುಸರಿಸಬಹುದಾಗಿತ್ತು. ಅಲ್ಲಿ ಘರ್ಷಣೆಯೇ ಇರಲಿಲ್ಲ. ಜನರು ಮತಧರ್ಮವನ್ನು ಒಂದು ಸಂಘಟಿತ ಪ್ರಕ್ರಿಯೆಯಾಗಿ ನೋಡಲಿಲ್ಲ.

Sadguru Column : ಬೇರೆ ಧರ್ಮಗಳು ವಿರೋಧಿಸಿದವರನ್ನು ಮೊದಲು ಹೇಳಿದ್ದೇ ʻಸಾಯಿಸಿʼ!

ಪ್ರಪಂಚದ ಇತರ ಸಂಸ್ಕೃತಿಗಳಲ್ಲಿ, ಆ ಕಾಲದಲ್ಲಿ ಪ್ರಸ್ತುತದಲ್ಲಿದ್ದ ಯಾವುದೇ ಸಂಘಟಿತ ಮತಧರ್ಮದ ವಿರುದ್ಧ ಮಾತನಾಡಿದರೆ, ಜನರ ಮೊದಲ ಪ್ರತಿಕ್ರಿಯೆ, ಸಾಯಿಸಿ!!! ಎಂದಾಗಿತ್ತು. ಸಾಕ್ರಟೀಸ್, ಮನ್ಸೂರ್ ಅಥವಾ ಜೀಸಸ್ ರಂತಹ ಎಷ್ಟೋ ಜನ ಪ್ರಸಿದ್ಧರನ್ನು ಇದೇ ಕಾರಣಕ್ಕಾಗಿಯೇ ಕೊಲ್ಲಲಾಗಿದ್ದು. ಪ್ರಪಂಚದ ಪಾಶ್ಚಾತ್ಯ ಭಾಗಗಳಲ್ಲಿ ಸಾಧಕರು ಬುದ್ಧಿವಂತಿಕೆಯಿಂದ ಮೌನವಾಗಿದ್ದು, ಸಾಧನೆಯಲ್ಲಿ ತೊಡಗಿರುತ್ತಿದ್ದರು. ಏನಾದರು ಜೋರಾಗಿ ಧ್ವನಿ ಎತ್ತಿದರೆ ಮರಣಶಿಕ್ಷೆ. ಯೂರೋಪಿನಲ್ಲಿ ಎರಡು ಮಿಲಿಯನ್ ಸ್ತ್ರೀಯರನ್ನು ಸುಟ್ಟು ಹಾಕಲಾಯಿತು, ಏಕೆಂದರೆ ಸಂಘಟಿತ ಮತಧರ್ಮದ ವಿರುದ್ಧ ಅವರ ಪ್ರದರ್ಶನವು ಒಂದು ಬೆದರಿಕೆ ಎಂದು ಪರಿಗಣಿಸಲಾಯಿತು.

Sadguru Column Jesus Christ

ಜೀಸಸ್ ಬಂಡಾಯವಾಗುವಂತದೇನನ್ನೂ ಮಾಡಲಿಲ್ಲ. ಪೂಜಾ ಮಂದಿರಗಳನ್ನು ಕೆಡವಲು ಹೇಳಲಿಲ್ಲ, ದೇವರುಗಳನ್ನು ಸ್ಥಾನಪಲ್ಲಟಗೊಳಿಸಿರೆಂದಾಗಲಿ, ಅಥವಾ ಮತಧರ್ಮವನ್ನು ಬದಲಾಯಿಸಿ ಎಂದಾಗಲಿ ಕರೆ ನೀಡಲಿಲ್ಲ. ಅವರು ಕೇವಲ ದೇವಮಂದಿರದಾಚೆ ತಮ್ಮ ವ್ಯವಹಾರಗಳನ್ನು ಮಾಡಿರೆಂದರು. ಅದಕ್ಕಾಗಿ ಅವರಿಗೆ ಘೋರ ಶಿಕ್ಷೆ ನೀಡಲಾಯಿತು.

Sadguru Column : ಬುದ್ಧ ದೇವರಿಲ್ಲ ಎಂದಾಗಲೂ ವಿರೋಧಿಸಲಿಲ್ಲ

ಜೀಸಸ್‌ಗಿಂತಲೂ ಐನೂರು ವರ್ಷಗಳ ಹಿಂದೆ ಗೌತಮಬುದ್ಧನು, ಹಿಂದು ದೇವರುಗಳನ್ನು ಪರಿಹಾಸ್ಯ ಮಾಡಿ, ನೀವು ಸರ್ಪಗಳು, ಮರಗಳು, ಗೋವುಗಳ ಆರಾಧಕರಾಗಿದ್ದೀರಿ, ನಿಮಗೆ ದೇವರೆಂದರೆ ಏನೆಂಬುದೇ ತಿಳಿದಿಲ್ಲ ಎಂದ. ಅದಕ್ಕೆ ಉತ್ತರವಾಗಿ ಜನರು ಒಬ್ಬನೇ ದೇವನೆಂಬುದು ನಮಗೂ ತಿಳಿದಿದೆ, ಆದರೆ ನಾವು ವಿಭಿನ್ನತೆಯನ್ನು ಆನಂದಿಸುತ್ತೇವೆ ಎಂದರು. ಮುಂದುವರಿದು ಗೌತಮನು, ದೇವರೇ ಇಲ್ಲ ಎಂದನು. ಹಿಂದುಗಳು ಹಿಮ್ಮೆಟ್ಟಿದರು. ಉಪನಿಷತ್ತುಗಳ ಮೊರೆ ಹೊಕ್ಕರು, “ನೋಡಿಲ್ಲಿ, ನಮ್ಮ ಉಪನಿಷತ್ತುಗಳು ದೇವರಿಲ್ಲವೆಂದು ಹೇಳುತ್ತವೆಯಾದರೂ, ಆತ್ಮ ಎಂಬುದಿದೆ ಹಾಗೂ ಸಾರ್ವತ್ರಿಕ ಆತ್ಮವಾದ ಪರಮಾತ್ಮ ಎಂಬುದಿದೆ ಎಂದು ಸಾರುತ್ತದೆ” ಎಂದರು. ಗೌತಮಬುದ್ಧನು “ಆತ್ಮವೂ ಇಲ್ಲ, ಪರಮಾತ್ಮವೂ ಇಲ್ಲ, ನೀವು ಅನಾತ್ಮ” ಎಂದನು.

Sadguru Column buddha

ಹೀಗೆ ಆತನು ಎಲ್ಲವನ್ನೂ ವಿರೋಧಿಸಿ ಪರಿಹಾಸ್ಯ ಮಾಡಿದರೂ ಅವನಿಗೆ ಯಾರೂ ಕಲ್ಲು ಹೊಡೆಯಲಿಲ್ಲ. ವಿಷ ಉಣಿಸಲಿಲ್ಲ ಅಥವಾ ಶಿಲುಬೆಗೇರಿಸಲಿಲ್ಲ. ಬದಲಿಗೆ, ಅವನೊಡನೆ ವಾದಿಸಿದರು. ತಿಂಗಳಾನುಗಟ್ಟಲೆ ವಾದವಿವಾದ ನಡೆದು ವಾದದಲ್ಲಿ ಸೋತಾಗ ಅವನ ಶಿಷ್ಯರಾದರು! ಏಕೆಂದರೆ ಅನ್ವೇಷಣೆಯು ಸತ್ಯವಾದುದು. ಜನರು ಕುಳಿತು ‘ನಾವು ತಿಳಿದುಕೊಂಡಿರುವುದು ಸರಿಯೋ ಅಥವಾ ಅವರ ವಾದವು ಸರಿಯೋ’ ಎಂದು ಸಮಾಲೋಚಿಸುತ್ತಿದ್ದರು. ಅದೊಂದು ವಿಭಿನ್ನ ರೀತಿಯ ಪರಿಶೋಧನೆ. ಜನರು ಜ್ಞಾನಕ್ಕಾಗಿ ಅನ್ವೇಷಿಸುತ್ತಿದ್ದರು. ಅವರು ಕೇವಲ ತಮ್ಮ ನಂಬಿಕೆಯೇ ಸರಿಯೆಂದು ಸಾಧಿಸಲು ಪ್ರಯತ್ನಿಸಲಿಲ್ಲ. ಹಿಂದೂಗಳ ಜೀವನಶೈಲಿ ನಂಬಿಕೆಯದಲ್ಲ. ಕೆಲವರು ದೇವರನ್ನು ನಂಬಿದರೆ ಮತ್ತೆ ಕೆಲವರು ದೇವರಿಲ್ಲವೆಂಬ ಆಯ್ಕೆಯನ್ನೂ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆರಾಧನೆಯ ಮಾರ್ಗವಿದೆ, ಮುಕ್ತಿಯ ಮಾರ್ಗವಿದೆ. ಒಂದೇ ಕುಟುಂಬದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಇಚ್ಛೆಯ ದೇವರುಗಳನ್ನು ಪೂಜಿಸಬಹುದು, ಪೂಜಿಸದೆಯೂ ಒಳ್ಳೆಯ ಹಿಂದುವಾಗಬಹುದು.

ನಮ್ಮ ಸಂಸ್ಕೃತಿಯಲ್ಲಿ ಮನುಷ್ಯರ ಜೀವನದ ಏಕಮಾತ್ರ ಗುರಿಯೆಂದರೆ ಮುಕ್ತಿ, ಸೀಮಿತವನ್ನು ಮೀರಿ ಹೋಗುವುದು. ಈ ಸಂಸ್ಕೃತಿಯಲ್ಲಿ ದೇವರೇ ಅಂತಿಮವೆಂದು ಪರಿಗಣಿಸುವುದಿಲ್ಲ. ಜಗತ್ತಿನಲ್ಲಿ ಹಿಂದು ಜನತೆ ಮಾತ್ರ – ದೇವರಿಲ್ಲದ ಕಲ್ಪನೆಗೂ ಮಾನ್ಯತೆ ನೀಡಿದೆ. ನೀವೊಂದು ಕಲ್ಲನ್ನಾಗಲಿ, ಗೋವನ್ನಾಗಲಿ, ನಿಮ್ಮ ತಾಯಿಯನ್ನಾಗಲಿ ಪೂಜಿಸಬಹುದು – ನಿಮಗಿಷ್ಟವಾದುದನ್ನು ಪೂಜಿಸಬಹುದು. ಬೇರೆಲ್ಲ ಕಡೆ ದೇವರು ನಮ್ಮನ್ನು ಸೃಷ್ಟಿಸಿದ ಎಂದು ಜನರು ನಂಬುತ್ತಾರೆ. ಭಾರತದಲ್ಲಿ, ನಾವು ದೇವರನ್ನು ಸೃಷ್ಟಿಸಿದೆವೆಂದು’, ನಮಗೆ ತಿಳಿದಿದೆ. ಅದಕ್ಕಾಗಿಯೇ ನಮಗೆ ಯಾವ ರೀತಿಯ ದೇವರನ್ನಾದರೂ ಸೃಷ್ಟಿಸಲು ಸ್ವಾತಂತ್ರ್ಯವಿದೆ.

ಇದನ್ನೂ ಓದಿ: Sadguru Column : ಬದುಕಿನಲ್ಲಿ ಆಟವಾಡುವುದರ ಮಹತ್ವ ತುಂಬ ದೊಡ್ಡದು

ಪ್ರಾಚ್ಯ ದೇಶಗಳಲ್ಲಿ ಆಧ್ಯಾತ್ಮಿಕತೆ ಹಾಗೂ ಮತಧರ್ಮ ಇವೆರಡೂ ಎಂದಿಗೂ ಸಂಘಟಿತ ಪ್ರಕ್ರಿಯೆಯಾಗಿರಲಿಲ್ಲ – ಕೇವಲ ಸರ್ವರಿಗೂ ಆಧ್ಯಾತ್ಮಿಕತೆ ದೊರೆಯುವಂತೆ ಮಾಡುವುದಾಗಿತ್ತು. ಗೆಲುವು ಸಾಧಿಸುವುದಕ್ಕಲ್ಲ. ರೈತನು ತನ್ನ ನೇಗಿಲನ್ನು ಪೂಜಿಸಿದರೆ, ಮೀನುಗಾರನು ತನ್ನ ದೋಣಿಯನ್ನು ಪೂಜಿಸಿದನು; ಜನರು ತಮ್ಮ ಜೀವನದ ಪ್ರಮುಖ ವಿಷಯಕ್ಕೆ ಸಂಬಂಧ ಕಲ್ಪಿಸಿ ಅದನ್ನು ಪೂಜಿಸಲು ಮೊದಲಾದರು. ಅದು ಒಳ್ಳೆಯದೇ, ಮೂಲಭೂತವಾಗಿ, ಪ್ರಾಚ್ಯ ರಾಷ್ಟ್ರಗಳಲ್ಲಿ ಮತಧರ್ಮವು ನಿಮ್ಮನ್ನು ಕುರಿತದ್ದೇ ಹೊರತು ದೇವರನ್ನು ಕುರಿತದ್ದಲ್ಲ. ಮತಧರ್ಮವು ಮುಕ್ತಿಯ ಕುರಿತದ್ದಾಗಿದೆ. ದೇವರು ಕೇವಲ ಮತ್ತೊಂದು ಮುನ್ನಡೆಯ ಸೋಪಾನವಷ್ಟೇ – ಅದನ್ನು ನೀವು ಅಂತಿಮ ಮುಕ್ತಿಗೆ ಉಪಯೋಗಿಸಬಹುದು ಅಥವಾ ಬಿಡಬಹುದು. ಈ ಸಂಸ್ಕೃತಿಯಲ್ಲಿ ದೇವರ ಪ್ರಾಮುಖ್ಯತೆಗಿಂತಲೂ, ಮನುಷ್ಯನ ಯೋಗಕ್ಷೇಮ ಮತ್ತು ಸ್ವಾತಂತ್ರ್ಯಕ್ಕೆ ಹೆಚ್ಚು ಮಾನ್ಯತೆ ನೀಡಲಾಗಿದೆ.

ನಮ್ಮದೊಂದು ದೇವರಿಲ್ಲದ ಆದರೆ ಭಕ್ತಿಯುತ ದೇಶ. “ದೇವರಿಲ್ಲದ” ಎನ್ನುವುದರರ್ಥ, ಮನುಷ್ಯರು ದೇವರುಗಳ ಆಯ್ಕೆಯನ್ನು ಮಾಡಿಕೊಳ್ಳುವುದಷ್ಟೇ ಅಲ್ಲದೆ, ಅವರಿಗೆ ಸಂಬಂಧಿಸಿದ ದೇವರನ್ನು ಸೃಷ್ಟಿಸಿಕೊಳ್ಳಬಹುದಾದ ಸ್ವಾತಂತ್ರ್ಯವಿದೆ. ಆದ್ದರಿಂದ ದೇವರನ್ನು ಸೃಷ್ಟಿಸುವ ತಂತ್ರಜ್ಞಾನ, ವಿಜ್ಞಾನವನ್ನು ವಿಕಸಿತಗೊಳಿಸಿ ನಾನಾ ರೀತಿಯ ರೂಪಗಳು, ಶಕ್ತಿರೂಪಗಳು ಹಾಗೂ ಕ್ಷೇತ್ರಗಳನ್ನು ಪವಿತ್ರಗೊಳಿಸಲಾಗಿದೆ.

Sadguru Column Hindu

Sadguru Column : ವ್ಯಕ್ತಿಯಲ್ಲಿ ಪೂಜ್ಯ ಭಾವನೆ ಸೃಷ್ಟಿಸುವ ಪ್ರಕ್ರಿಯೆಯೇ ದೇವರ ಕಲ್ಪನೆ

ದೇವರು ಎಂಬ ಕಲ್ಪನೆಯ ಮೂಲೋದ್ದೇಶವೆಂದರೆ, ವ್ಯಕ್ತಿಯಲ್ಲಿ ಭಕ್ತಿ, ಪೂಜ್ಯ ಭಾವನೆಯನ್ನು ಸೃಷ್ಟಿಸುವುದು. ನೀವು ಏನನ್ನು ಆರಾಧಿಸುತ್ತೀರೆಂಬುದು ಮುಖ್ಯವಲ್ಲ. ಒಂದನ್ನು ಇಷ್ಟಪಟ್ಟು ಮತ್ತೊಂದನ್ನು ಇಷ್ಟಪಡದೇ ಇರುವುದಲ್ಲ. ನಿಮ್ಮ ಜೀವನದ ಗುಣಮಟ್ಟವನ್ನು ಭಕ್ತಿಭಾವನೆಯಿಂದ ಯೋಜಿಸಿಕೊಂಡಾಗ ನೀವು ಜೀವನಕ್ಕೆ ಹೆಚ್ಚು ಸ್ಪಂದಿಸುವಿರಿ ಅಥವಾ ಜೀವನವನ್ನು ಗ್ರಹಿಸುವಿರಿ. ನಿಮ್ಮ ಜೀವನವು ಮಹತ್ತರವಾಗಿರುತ್ತದೆ. ಒಂದು ರೀತಿಯಲ್ಲಿ ಹಿಂದು ಎಂದು ಹೇಳಲಾಗುವ ಈ ಸಮಗ್ರ ಸಂಸ್ಕೃತಿಯು ಪ್ರತಿ ವ್ಯಕ್ತಿಯು ತನ್ನ ಜೀವನದ ಮೂಲಗುರಿಯಾಗಿ ಪರಮಮುಕ್ತಿಯನ್ನು ಪಡೆಯುವತ್ತ ಶ್ರಮಿಸುವ ಒಂದು ವಿಶಿಷ್ಟ ಆಧ್ಯಾತ್ಮಿಕ ಲಕ್ಷಣವಾಗಿದೆ.

ಭಾರತದ ಅಧ್ಯಾತ್ಮವನ್ನು ಪರಿಶೋಧಿಸಿದರೆ, ಅದು ಅಚ್ಚರಿಗೊಳಿಸುವಂತಹದು. ಇದು ನಂಬಿಕೆ ಪದ್ಧತಿಯಿಂದ ಬಂದದ್ದಲ್ಲ, ಆದರೆ ಭೌತಿಕವನ್ನೂ ಮೀರಿದ ಆಯಾಮಗಳ ಪರಿಶೋಧನೆಯ ವೈಜ್ಞಾನಿಕ ಸಾಧನೆಗಳ ಮೂಲಕ ಸಂಭವಿಸಿರುವುದು.

ಭಾರತವು ಒಂದು ಸಾಧ್ಯತೆಯ ಸಂಗತಿಯಾಗಿದೆ. ಅದೊಂದು ಅನೇಕ ಸಂಸ್ಕೃತಿಗಳ, ಜನಾಂಗಗಳ, ಧರ್ಮಗಳ ಹಾಗೂ ಭಾಷೆಗಳ ಕಲಸುಮೇಲೋಗರವಾಗಿದೆ. ಇವೆಲ್ಲವನ್ನೂ ಒಂದೇ ಅನ್ವೇಷಣೆಯ ಸೂತ್ರದಿಂದ ಬಂಧಿಸಲಾಗಿದೆ. ಮಹತ್ತರವಾದ ಮುಕ್ತಿಯ ಹಂಬಲವನ್ನು ದೇಶದ ಜನರಲ್ಲಿ ಪೋಷಿಸಲಾಗಿದೆ.

ಭಾರತವನ್ನು ಅಧ್ಯಯನ ಮಾಡಲಾಗುವುದಿಲ್ಲ, ಆದರೆ ವ್ಯಕ್ತಿಯು ಅದರಲ್ಲಿ ನೆನೆಯಬೇಕು, ಹಾಗೆಯೇ ಕರಗಿ ಹೋಗಬೇಕು. ಇದೊಂದೇ ಮಾರ್ಗ. ಅದರ ಅಧ್ಯಯನ ಅಸಾಧ್ಯ. ಭಾರತವನ್ನು ಕುರಿತ ಪಾಶ್ಚಾತ್ಯ ದೇಶಗಳ ವಿಶ್ಲೇಷಣೆಯು ಇನ್ನೂ ಪ್ರಾರಂಭಾವಸ್ಥೆಯಲ್ಲಿದೆ, ಏಕೆಂದರೆ ಭಾರತದ ಲಕ್ಷಣದ ವಿಶ್ಲೇಷಣೆಯು ದೇಶವನ್ನು ಅತ್ಯಂತ ತಪ್ಪುಗ್ರಹಿಕೆಯ ತೀರ್ಮಾನದತ್ತ ಒಯ್ಯುವಂತೆ ಮಾಡುತ್ತಿದೆ. ಭಾರತದ ಸಂಸ್ಕೃತಿ ಅವ್ಯವಸ್ಥಿತವಾಗಿ ವರ್ಧಿಸುತ್ತಿದ್ದರೂ ಸಹ ಅದು ಸುಸಂಘಟಿತ ಹಾಗೂ ಸಮೃದ್ಧವಾಗಿದೆ.

ಭೂಮಿಯ ಮೇಲಣ ಈ ಪ್ರಾಚೀನ ದೇಶವು, ಇದರ ಪ್ರಖ್ಯಾತ ಪೌರರ ಆಧಾರ ತತ್ತ್ವಗಳ ಮೇಲಾಗಲಿ ಅಥವಾ ನಂಬಿಕೆಗಳ ಮೇಲಾಗಲಿ ಅಥವಾ ಅವರ ಮಹತ್ವಾಕಾಂಕ್ಷೆಗಳ ಮೇಲಾಗಲಿ ನಿರ್ಮಿತವಾಗಿಲ್ಲ. ಇದು ಅನ್ವೇಷಕರ ದೇಶವಾಗಿದೆ, ಐಶ್ವರ್ಯ ಮತ್ತು ಸುಖ ಸಂತೋಷದ ಅನ್ವೇಷಣೆಯಲ್ಲ, ಆದರೆ ವಿಮೋಚನೆಯ ಅನ್ವೇಷಣೆ – ಆರ್ಥಿಕ ಅಥವಾ ರಾಜಕೀಯದ್ದಲ್ಲ, ಆದರೆ ಉತ್ಕೃಷ್ಟ ಮುಕ್ತಿಯ ಅನ್ವೇಷಣೆ.

Sadguru Column Adiyogi

ಜ್ಞಾನೋದಯಕ್ಕೆ 112 ಮಾರ್ಗಗಳಿವೆ ಎಂದ ಆದಿಯೋಗಿ

ಆದಿಯೋಗಿಯನ್ನು ಜ್ಞಾನೋದಯಕ್ಕೆ ಎಷ್ಟು ಮಾರ್ಗಗಳಿವೆ ಎಂದು ಕೇಳಿದಾಗ, ನೀವು ನಿಮ್ಮ ಶಾರೀರಿಕ ವ್ಯವಸ್ಥೆಯ ಕ್ಷೇತ್ರದಲ್ಲಿರುವಾಗ 112 ಮಾರ್ಗಗಳಿವೆ, ಆದರೆ ನೀವು ಭೌತಿಕವನ್ನು ಮೀರಿದಾಗ ವಿಶ್ವದಲ್ಲಿನ ಪ್ರತಿಯೊಂದು ಅಣುವೂ ಸಹ ಒಂದು ಬಾಗಿಲ ದಾರಿಯಾಗುತ್ತದೆ ಎಂದನು.

ಭಾರತವು ಒಂದು ಆಧ್ಯಾತ್ಮಿಕ ಸಾಧ್ಯತೆಗಳ, ವೈವಿದ್ಯತೆಗಳ ಸಂಮಿಶ್ರಿತ ಸಂಯೋಜನೆಯಾಗಿದೆ. ನೀವು ಮಹಾಕುಂಭದಲ್ಲಿ ಭಾಗವಹಿಸಿದ್ದರೆ ಇದರ ಪ್ರದರ್ಶನವನ್ನು ಕಾಣಬಹುದು. ಮಾರ್ಕ್‌ಟ್ವೈನ್ ಹೇಳಿರುವಂತೆ, “ನನ್ನ ಅಭಿಪ್ರಾಯದಲ್ಲಿ, ಮಾನವರಿಂದಾಗಲಿ ಅಥವಾ ಪ್ರಕೃತಿಯಿಂದಾಗಲಿ ಭಾರತವನ್ನು ಹೆಚ್ಚು ಅಸಾಧಾರಣ ದೇಶವನ್ನಾಗಿ ಮಾಡಲು ಎಲ್ಲ ಕಾರ್ಯಗಳನ್ನೂ ಮಾಡಲಾಗಿದೆ. ಯಾವುದನ್ನೂ ಮರೆತಿಲ್ಲ. ಯಾವುದನ್ನೂ ಉದಾಸೀನ ಮಾಡಿಲ್ಲ”.

ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ನೆಮ್ಮದಿಯಿಂದ ನಿದ್ದೆ ಮಾಡಬೇಕೆ? ಈ ವಾಸ್ತು ನಿಯಮ ಪಾಲಿಸಿ

ಮನೆಯ ವಾಸ್ತು ಪ್ರಕಾರ (Vastu Tips) ಸರಿಯಾದ ದಿಕ್ಕು ದೇಹ, ಮನಸ್ಸಿನ ವಿಶ್ರಾಂತಿ ಮತ್ತು ನಿದ್ರೆಗೆ ಬಹುಮುಖ್ಯ ಅಂಶವಾಗಿರುತ್ತದೆ. ಇದು ದೈಹಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ತಲೆಯನ್ನು ದಕ್ಷಿಣ ಅಥವಾ ಪೂರ್ವಕ್ಕೆ ಮಲಗಲು ನೀವು ಆರಿಸಿಕೊಂಡರೂ ದೇಹದ ಸಂಕೇತಗಳನ್ನು ಆಲಿಸುವುದು ಬಹುಮುಖ್ಯವಾಗುತ್ತದೆ.

VISTARANEWS.COM


on

By

Vastu Tips
Koo

ಆಧುನಿಕ ಜೀವನಶೈಲಿಯಿಂದಾಗಿ (modern life) ಕೆಲವರಿಗೆ ಸರಿಯಾದ ನಿದ್ದೆಯನ್ನು (sleep) ಮಾಡುವುದು ಸಾಧ್ಯವಿಲ್ಲ ಎನ್ನುವಂತಾಗಿದೆ. ಇದರಿಂದ ದೇಹಾರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ (Vastu Tips) ಪ್ರಕಾರ ನಮ್ಮ ವಾಸ ಸ್ಥಳಗಳ ವಿನ್ಯಾಸ ಮತ್ತು ದೃಷ್ಟಿಕೋನವು ನಮ್ಮ ನಿದ್ರೆಯ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ.

ವಾಸ್ತು ಶಾಸ್ತ್ರವು ಪ್ರಾಚೀನ ಭಾರತೀಯ ವಿಜ್ಞಾನವಾಗಿದ್ದು ಅದು ಸಾವಿರಾರು ವರ್ಷಗಳ ಹಿಂದಿನದು. ಇದು ಸಾಮರಸ್ಯ, ಸಮತೋಲನ ಮತ್ತು ಕಾಸ್ಮಿಕ್ ಶಕ್ತಿಯ ತತ್ತ್ವಗಳನ್ನು ಆಧರಿಸಿದೆ. ವಾಸ್ತು ಪ್ರಕಾರ ಮನೆಗಳು ಸೇರಿದಂತೆ ಪ್ರತಿಯೊಂದು ಜೀವಂತ ಮತ್ತು ನಿರ್ಜೀವ ಘಟಕವು ಐದು ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಅದು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಬಾಹ್ಯಾಕಾಶ. ನಿರ್ದಿಷ್ಟ ತತ್ತ್ವಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ನಮ್ಮ ವಾಸದ ಸ್ಥಳಗಳಲ್ಲಿನ ಅಂಶಗಳನ್ನು ಜೋಡಿಸುವ ಮೂಲಕ ನಾವು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಪರಿಸರವನ್ನು ರಚಿಸಬಹುದು.

ಮನೆಯ ವಾಸ್ತುವಿನ ತತ್ತ್ವಗಳನ್ನು ಅರ್ಥಮಾಡಿಕೊಂಡು ಮಲಗುವ ಪ್ರದೇಶವನ್ನು ಸರಿಯಾದ ದಿಕ್ಕಿನಲ್ಲಿ ಜೋಡಿಸುವ ಮೂಲಕ ಮನೆಗಳಲ್ಲಿ ಶಕ್ತಿಯ ಹರಿವನ್ನು ಹೆಚ್ಚಿಸಬಹುದು. ಇದರಿಂದ ಆಳವಾದ ವಿಶ್ರಾಂತಿ ಮತ್ತು ನವ ಯೌವನ ಪಡೆಯಬಹುದು.

ನಿದ್ರೆಗೆ ಸರಿಯಾದ ದಿಕ್ಕು

ನಾವು ಮಲಗುವ ದಿಕ್ಕು ನಮ್ಮ ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ವೈಯಕ್ತಿಕ ಆದ್ಯತೆಗಳು ಮತ್ತು ಸಂದರ್ಭಗಳು ಬದಲಾಗಬಹುದಾದರೂ ಕೆಲವು ನಿರ್ದೇಶನಗಳನ್ನು ಸಾಮಾನ್ಯವಾಗಿ ಶಾಂತ ನಿದ್ರೆಗೆ ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗುತ್ತದೆ.

ದಕ್ಷಿಣ ಅಥವಾ ಪೂರ್ವದಲ್ಲಿ ತಲೆಯನ್ನು ಇಟ್ಟು ಮಲಗುವುದು ವಾಸ್ತು ಶಾಸ್ತ್ರದ ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕುಗಳು ಭೂಮಿಯ ನೈಸರ್ಗಿಕ ಕಾಂತೀಯ ಕ್ಷೇತ್ರದೊಂದಿಗೆ ಹೊಂದಿಕೆಯಾಗುತ್ತವೆ. ಆಳವಾದ ವಿಶ್ರಾಂತಿ ಮತ್ತು ಪುನರ್ಯೌವನಗೊಳಿಸುವಿಕೆಯನ್ನು ಇದು ಉತ್ತೇಜಿಸುತ್ತದೆ. ಈ ದಿಕ್ಕುಗಳಲ್ಲಿ ಮಲಗುವುದು ಮಾನಸಿಕ ಸ್ಪಷ್ಟತೆ, ಏಕಾಗ್ರತೆ ಮತ್ತು ಆಧ್ಯಾತ್ಮಿಕ ಅರಿವನ್ನು ಹೆಚ್ಚಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಉತ್ತರಕ್ಕೆ ತಲೆಯಿಟ್ಟು ಮಲಗುವುದನ್ನು ಸರಿಯಲ್ಲ. ಯಾಕೆಂದರೆ ಇದು ದೇಹದ ನೈಸರ್ಗಿಕ ಕಾಂತೀಯ ಜೋಡಣೆಯನ್ನು ಅಡ್ಡಿಪಡಿಸುತ್ತದೆ. ಇದರಿಂದ ನಿದ್ರೆ, ದುಃಸ್ವಪ್ನಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಸಿಗೆಯ ತಲೆ ಹಲಗೆಯನ್ನು ಉತ್ತರದ ಗೋಡೆಯ ವಿರುದ್ಧ ಇಡುವುದನ್ನು ಅಥವಾ ಉತ್ತರಾಭಿಮುಖ ಸ್ಥಾನದಲ್ಲಿ ಮಲಗುವುದನ್ನು ತಪ್ಪಿಸುವುದು ಸೂಕ್ತ.

ದಕ್ಷಿಣ ಮತ್ತು ಪೂರ್ವ ದಿಕ್ಕುಗಳನ್ನು ಸಾಮಾನ್ಯವಾಗಿ ವಾಸ್ತು ಶಾಸ್ತ್ರದ ಪ್ರಕಾರ ನಿದ್ರೆಗೆ ಶಿಫಾರಸು ಮಾಡಲಾಗುತ್ತದೆ. ನಿಮ್ಮ ಮಲಗುವ ಪ್ರದೇಶಕ್ಕೆ ಸರಿಯಾದ ದಿಕ್ಕನ್ನು ನಿರ್ಧರಿಸುವಾಗ ವೈಯಕ್ತಿಕ ಅಂಶಗಳು ಮತ್ತು ಆದ್ಯತೆಗಳನ್ನು ಪರಿಗಣಿಸುವುದು ಅತ್ಯಗತ್ಯ. ವಯಸ್ಸು, ಆರೋಗ್ಯ ಪರಿಸ್ಥಿತಿಗಳು ಮತ್ತು ವೈಯಕ್ತಿಕ ಶಕ್ತಿಯ ಮಾದರಿಗಳಂತಹ ಅಂಶಗಳು ಉತ್ತಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ದೇಹದ ಸಂಕೇತಗಳನ್ನು ಆಲಿಸಿ ಮತ್ತು ಆರಾಮ ಮತ್ತು ಯೋಗಕ್ಷೇಮವನ್ನು ಗರಿಷ್ಠಗೊಳಿಸಲು ಮಲಗುವ ವ್ಯವಸ್ಥೆಯನ್ನು ಸರಿಹೊಂದಿಸಿ.

ಉತ್ತಮ ನಿದ್ರೆಗಾಗಿ ಹೀಗೆ ಮಾಡಿ


ಮಲಗುವ ಕೋಣೆ ಸ್ವಚ್ಛ ಸುಂದರವಾಗಿರಲಿ

ಮಲಗುವ ಕೋಣೆಯಲ್ಲಿ ಅಸ್ತವ್ಯಸ್ತವಾಗಿದ್ದರೆ ವಿಶ್ರಾಂತಿ ಮತ್ತು ನೆಮ್ಮದಿಗೆ ಭಂಗವಾಗುವುದು. ನಿದ್ರಿಸಲು ಅನುಕೂಲಕರವಾದ ಪ್ರಶಾಂತ ಮತ್ತು ಶಾಂತಿಯುತ ಸ್ಥಳದೊಂದಿಗೆ ಸ್ವಚ್ಛ, ಸುಂದರವಾಗಿರುವುದು ಕೂಡ ಅಷ್ಟೇ ಮುಖ್ಯ. ಅನಗತ್ಯ ಹೆಚ್ಚುವರಿ ಪೀಠೋಪಕರಣಗಳು, ಬಟ್ಟೆ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಒಳಗೊಂಡಂತೆ ಮಲಗುವ ಕೋಣೆಯಲ್ಲಿರುವ ಅನಗತ್ಯ ವಸ್ತುಗಳನ್ನು ಅಲ್ಲಿಂದ ಹೊರ ತೆಗೆಯಿರಿ.

ಬಣ್ಣಗಳು

ಶಾಂತ ಮತ್ತು ವಿಶ್ರಾಂತಿಯ ಅರ್ಥವನ್ನು ಉತ್ತೇಜಿಸಲು ಮಲಗುವ ಕೋಣೆ ಅಲಂಕಾರದಲ್ಲಿ ಮೃದುವಾದ ನೀಲಿ, ಹಸಿರು ಮತ್ತು ನ್ಯೂಟ್ರಲ್‌ಗಳಂತಹ ಹಿತವಾದ ಬಣ್ಣಗಳನ್ನು ಸೇರಿಸಿ. ಉತ್ತೇಜಕ ಅಥವಾ ಅತಿಯಾದ ರೋಮಾಂಚಕ ಬಣ್ಣಗಳನ್ನು ತಪ್ಪಿಸಿ. ಯಾಕೆಂದರೆ ಇದು ನಿದ್ರೆಗೆ ಅಡ್ಡಿಯಾಗಬಹುದು. ವಿಶ್ರಾಂತಿ ಮತ್ತು ನವ ಯೌವನವನ್ನು ಉತ್ತೇಜಿಸುವ ಸೌಮ್ಯವಾದ ವರ್ಣಗಳನ್ನು ಆರಿಸಿಕೊಳ್ಳಿ.

ನೈಸರ್ಗಿಕ ಬೆಳಕಿಗೆ ಆದ್ಯತೆ ನೀಡಿ

ಹಗಲಿನಲ್ಲಿ ಸೂರ್ಯನ ಬೆಳಕು, ರಾತ್ರಿಯಲ್ಲಿ ಕೃತಕ ಬೆಳಕಿನ ಮೂಲಗಳನ್ನು ಕಡಿಮೆ ಮಾಡುವ ಮೂಲಕ ಮಲಗುವ ಕೋಣೆಯಲ್ಲಿ ನೈಸರ್ಗಿಕ ಬೆಳಕನ್ನು ಹೆಚ್ಚಿಸಿ. ನೈಸರ್ಗಿಕ ಬೆಳಕು ದೇಹದ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಆರೋಗ್ಯಕರ ನಿದ್ರೆ-ಎಚ್ಚರ ಚಕ್ರಗಳನ್ನು ಉತ್ತೇಜಿಸುತ್ತದೆ. ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಸಮತೋಲನ ಇರಲಿ

ವಾಸ್ತು ತತ್ತ್ವಗಳ ಪ್ರಕಾರ ಮಲಗುವ ಕೋಣೆಯಲ್ಲಿ ಸುಗಮ ಶಕ್ತಿಯ ಹರಿವು ಮತ್ತು ಸಮತೋಲನವನ್ನು ಸುಗಮಗೊಳಿಸಲು ಪೀಠೋಪಕರಣಗಳು ಮತ್ತು ಅಲಂಕಾರಗಳನ್ನು ಸರಿಯಾಗಿ ಜೋಡಿಸಿ. ಹಾಸಿಗೆಯ ಬಳಿ ಚೂಪಾದ ಅಥವಾ ಮೊನಚಾದ ವಸ್ತುಗಳನ್ನು ಇರಿಸುವುದನ್ನು ತಪ್ಪಿಸಿ.

ಇದನ್ನೂ ಓದಿ: Vastu Tips: ಸಣ್ಣ ವಾಸ್ತು ದೋಷವೇ ಕುಟುಂಬದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು!

ಶಾಂತ ವಾತಾವರಣ

ಮಲಗುವ ಕೋಣೆಯಲ್ಲಿ ಹಿತವಾದ ಬೆಳಕು, ಆರಾಮದಾಯಕವಾದ ಹಾಸಿಗೆ ಮತ್ತು ಶಾಂತವಾದ ಸುವಾಸನೆಯೊಂದಿಗೆ ಶಾಂತ ವಾತಾವರಣವನ್ನು ರಚಿಸುವ ಮೂಲಕ ಶಾಂತ ನಿದ್ರೆಗೆ ಸೂಕ್ತವಾಗುವಂತೆ ಹೊಂದಿಸಿ. ಭೂಮಿಯೊಂದಿಗೆ ಸಾಮರಸ್ಯ ಮತ್ತು ಸಂಪರ್ಕದ ಭಾವನೆಯನ್ನು ಉಂಟುಮಾಡಲು ಸಸ್ಯ, ನೈಸರ್ಗಿಕ ಬಟ್ಟೆ ಮತ್ತು ಸಾವಯವ ವಸ್ತುಗಳನ್ನು ಸಂಯೋಜಿಸಿ.

Continue Reading

ಧಾರ್ಮಿಕ

Vastu Tips: ಸಣ್ಣ ವಾಸ್ತು ದೋಷವೇ ಕುಟುಂಬದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು!

ಸಣ್ಣಪುಟ್ಟ ವಾಸ್ತು ದೋಷಗಳು ಮನೆ ಮಂದಿಯ ಸುಖ, ಶಾಂತಿ, ನೆಮ್ಮದಿಯನ್ನು ಮಾತ್ರವಲ್ಲ ಆರೋಗ್ಯವನ್ನು ಕೆಡಿಸುತ್ತದೆ. ಹೀಗಾಗಿ ಮನೆಯ ಒಳಾಂಗಣ, ಹೊರಾಂಗಣದ ಸಣ್ಣ ಪುಟ್ಟ ವಸ್ತುಗಳ ವಿಚಾರದಲ್ಲೂ ವಾಸ್ತು ನಿಯಮಗಳನ್ನು (Vastu Tips) ಅನುಸರಿಸಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಆ ನಿಯಮಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Vastu Tips
Koo

ವ್ಯಕ್ತಿಯ ಜೀವನದಲ್ಲಿ (life) ಅನೇಕ ಸಮಸ್ಯೆಗಳು (problems) ಸಣ್ಣಪುಟ್ಟ ವಾಸ್ತು ದೋಷಗಳಿಂದ (Vastu Tips) ಉಂಟಾಗುತ್ತವೆ. ಮನೆಯವರಲ್ಲಿ ಮನಸ್ತಾಪಗಳು, ಕುಟುಂಬ (family) ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು, ಆರೋಗ್ಯ ಸಮಸ್ಯೆಗಳು (health issues) ಕಾಡುತ್ತವೆ. ವಾಸ್ತುವಿಗೆ ಸಂಬಂಧಿಸಿದ ತಪ್ಪುಗಳನ್ನು ಮಾಡುವ ವ್ಯಕ್ತಿಗಳು ಮಾನಸಿಕ ಮತ್ತು ದೈಹಿಕ ಯಾತನೆ ಅನುಭವಿಸುತ್ತಾರೆ. ಆದ್ದರಿಂದ ಮನೆಯಲ್ಲಿ ಪ್ರತಿಯೊಂದು ವಿಚಾರದಲ್ಲೂ ವಾಸ್ತು ನಿಯಮಗಳನ್ನು ಅನುಸರಿಸುವುದು ಉತ್ತಮ.

ನಿರ್ದಿಷ್ಟ ವಿಷಯಗಳ ಬಗ್ಗೆ ಉತ್ತಮ ಕಾಳಜಿ ವಹಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನುನಡೆಸಬಹುದು. ಅಲ್ಲದೇ ಮನೆಯ ಹಲವಾರು ಸಮಸ್ಯೆಗಳನ್ನು ಸರಿಪಡಿಸಬಹುದು.

ಹಳೆಯ ವಸ್ತುಗಳು ಬೇಡ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ತುಂಬಾ ಹಳೆಯ ಮತ್ತು ನಿಷ್ಪ್ರಯೋಜಕ ವಸ್ತುಗಳನ್ನು ಸಂಗ್ರಹಿಸಬಾರದು. ಇವುಗಳನ್ನು ಮಲಗುವ ಕೋಣೆಗಳಲ್ಲಿ ಇಡಬಾರದು. ಒಂದು ವೇಳೆ ಇಟ್ಟರೆ ಇದರಿಂದ ಆರೋಗ್ಯ ಕೆಡುತ್ತದೆ.

ದೇವರ ಪ್ರತಿಮೆ

ಮಲಗುವ ಕೋಣೆಯಲ್ಲಿ ದೇವರ ಪ್ರತಿಮೆ ಅಥವಾ ಚಿತ್ರವನ್ನು ಇಡಬಾರದು. ಅದು ದುರದೃಷ್ಟಕರವೆಂದು ಪರಿಗಣಿಸಲಾಗಿದೆ.


ಅಚ್ಚುಕಟ್ಟಾಗಿರಲಿ

ಮಲಗುವ ಕೋಣೆಯನ್ನು ಅಚ್ಚುಕಟ್ಟಾಗಿ ಇರುವಂತೆ ವಿಶೇಷ ಗಮನ ನೀಡಬೇಕು. ಅಸ್ತವ್ಯಸ್ತವಾಗಿರುವ ಮಲಗುವ ಕೋಣೆಗಳಿಂದ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.

ಆಹಾರ ಸೇವನೆ

ಮನೆಯಲ್ಲಿ ಆಹಾರ ಸೇವನೆ ಮಾಡುವಾಗ ಅಥವಾ ಏನನ್ನಾದರೂ ತಿನ್ನುವಾಗ ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಂಡು ತಿನ್ನಬೇಕು.

ನಲ್ಲಿ ನೀರು

ಮನೆಯಲ್ಲಿ ಒಡೆದ ನಲ್ಲಿಯನ್ನು ಆದಷ್ಟು ಬೇಗ ಸರಿಪಡಿಸಿ. ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿರುವುದು ದುರದೃಷ್ಟಕರ ಎಂದು ಹೇಳಲಾಗುತ್ತದೆ.

ಮಲಗುವ ದಿಕ್ಕು

ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗ್ಗುತ್ತದೆ.


ಕಸ ಸಂಗ್ರಹ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮೆಟ್ಟಿಲುಗಳ ಕೆಳಗೆ ಹೆಚ್ಚಿನ ಪ್ರಮಾಣದ ಕಸವನ್ನು ಸಂಗ್ರಹಿಸಲು ಬಿಡಬಾರದು. ಇದು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಓದುವ ದಿಕ್ಕು

ಮಕ್ಕಳು ಓದುವಾಗ ಯಾವಾಗಲು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಬೇಕು. ಇದರಿಂದ ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿರುತ್ತದೆ.

ಇದನ್ನೂ ಓದಿ: Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

ಮರ, ಸಸ್ಯಗಳು

ಅತ್ಯುತ್ತಮ ಆರೋಗ್ಯಕ್ಕಾಗಿ, ಮನೆಯ ಸುತ್ತಮುತ್ತ ಮರ ಮತ್ತು ಸಸ್ಯಗಳನ್ನು ಬೆಳೆಸಿ. ಇದು ಕುಟುಂಬದ ಎಲ್ಲರನ್ನು ಸಂತೋಷವಾಗಿರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ.

ಕಿಟಕಿ, ಬಾಗಿಲು

ಮನೆಯೊಳಗೇ ಉತ್ತಮ ಶಕ್ತಿಯನ್ನು ಸ್ವಾಗತಿಸಲು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಸಮಯದವರೆಗೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ.

Continue Reading

ಧಾರ್ಮಿಕ

Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

ಗೋಡೆಗಳ ಮೇಲೆ ತೂಗು ಹಾಕುವ ಚಿತ್ರಗಳಿಗೂ ಪ್ರಮುಖ ನಿಯಮಗಳು ಮತ್ತು ಸಲಹೆಗಳನ್ನು ವಾಸ್ತು ಶಾಸ್ತ್ರದಲ್ಲಿ (Vastu Tips) ನೀಡಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಬಹುದು ಮತ್ತು ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಬಹುದು.

VISTARANEWS.COM


on

By

Vastu Tips
Koo

ಮನೆಯಲ್ಲಿ (home) ಪ್ರತಿಯೊಂದು ವಸ್ತುವನ್ನು ಇಡಲೂ ವಾಸ್ತು (Vastu Tips) ನಿಯಮವಿದೆ. ಯಾಕೆಂದರೆ ಮನೆಯೊಳಗಿರುವ ಪ್ರತಿಯೊಂದು ವಸ್ತುವಿನಲ್ಲೂ ಜೀವಕಳೆ ತುಂಬುತ್ತದೆ ಮತ್ತು ಶಕ್ತಿಯ ಕೇಂದ್ರವಾಗಿಸುತ್ತದೆ. ಗೋಡೆಯಲ್ಲಿ (wall) ತೂಗು ಹಾಕುವ ಚಿತ್ರಗಳನ್ನು (Picture) ಇಡುವಾಗಲೂ ವಾಸ್ತು ನಿಯಮವನ್ನು ಪಾಲಿಸಬೇಕು. ಯಾಕೆಂದರೆ ಗೋಡೆಗಳ ಮೇಲೆ ಇಡುವ ಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಕೇವಲ ಮನೆಯ ಸೌಂದರ್ಯವನ್ನು ಮಾತ್ರ ಹೆಚ್ಚಿಸುವುದಿಲ್ಲ ಸಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಪ್ರವಹಿಸುವಂತೆ ಮಾಡುತ್ತದೆ. ಎಲ್ಲೆಂದರಲ್ಲಿ ಅಳವಡಿಸಿದರೆ ನಕಾರಾತ್ಮಕತೆ ಹೆಚ್ಚುತ್ತದೆ.

ಮನೆಯ ಗೋಡೆಗಳ ಮೇಲೆ ತೂಗು ಹಾಕುವ ಚಿತ್ರ, ಸರಿಯಾದ ದಿಕ್ಕು ಮತ್ತು ನಿರ್ದಿಷ್ ಬಣ್ಣದದ್ದರೆ ಮಾತ್ರ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಉಳಿಯುತ್ತದೆ ಎನ್ನುತ್ತದೆ ವಾಸ್ತು.

ಉತ್ತರ ದಿಕ್ಕು

ಸಂಪತ್ತಿನ ದೇವರು ಕುಬೇರ ಈ ದಿಕ್ಕಿನಲ್ಲಿ ವಾಸಿಸುತ್ತಾನೆ. ಹಚ್ಚ ಹಸಿರಿನ ಮರಗಳು, ಸಸ್ಯವರ್ಗ ಮತ್ತು ನೀರಿನ ಮೂಲಗಳ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ಚಿತ್ರಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ.

ಪೂರ್ವ ದಿಕ್ಕು

ಈ ದಿಕ್ಕನ್ನು ಉದಯಿಸುತ್ತಿರುವ ಸೂರ್ಯನ ದಿಕ್ಕು ಎಂದು ಪರಿಗಣಿಸಲಾಗಿದೆ. ಭಗವಾನ್ ಸೂರ್ಯ, ಸಂತರು ಅಥವಾ ಸೂರ್ಯೋದಯದ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡುವುದು ಪ್ರಯೋಜನಕಾರಿ. ಈ ಚಿತ್ರಗಳು ಮನೆಯಲ್ಲಿ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತರುತ್ತವೆ.

ದಕ್ಷಿಣ ದಿಕ್ಕು

ಪೂರ್ವಜರು ಮತ್ತು ಧರ್ಮಗ್ರಂಥಗಳ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇರಿಸಬಹುದು. ದೆವ್ವ, ಆತ್ಮ ಅಥವಾ ನಕಾರಾತ್ಮಕ ಶಕ್ತಿಯ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡಬಾರದು. ಕೆಂಪು, ಚಿನ್ನದ ಅಥವಾ ಕಿತ್ತಳೆ ಬಣ್ಣದ ಚಿತ್ರಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಪಶ್ಚಿಮ ದಿಕ್ಕು

ಈ ದಿಕ್ಕು ನೀರಿನ ಅಂಶದಿಂದ ಪ್ರಭಾವಿತವಾಗಿರುತ್ತದೆ. ಈ ದಿಕ್ಕಿನಲ್ಲಿ ನೀರು, ಸಮುದ್ರ, ನದಿ ಅಥವಾ ಕಾರಂಜಿ ಚಿತ್ರಗಳನ್ನು ಹಾಕುವುದು ಮಾನಸಿಕ ಶಾಂತಿ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.


ಫೋಟೋಗಳು ಹೇಗಿರಬೇಕು?

ದೇವರು, ದೇವತೆಗಳು ಮತ್ತು ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಮನೆಯಲ್ಲಿ ಹಾಕುವುದು ಶುಭವೆಂದು ಪರಿಗಣಿಸಲಾಗಿದೆ. ಈ ಚಿತ್ರಗಳು ಕುಟುಂಬದಲ್ಲಿ ಶಾಂತಿ ಮತ್ತು ಭಕ್ತಿಯನ್ನು ಉತ್ತೇಜಿಸುತ್ತವೆ.

ಹಚ್ಚ ಹಸಿರಿನ ಮರ, ಹೂವುಗಳು, ಪರ್ವತ, ನದಿಗಳು ಮುಂತಾದ ಸುಂದರವಾದ ನೈಸರ್ಗಿಕ ದೃಶ್ಯಗಳ ಚಿತ್ರಗಳನ್ನು ಹಾಕುವುದು ಮನಸ್ಸಿನಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.

ಕುಟುಂಬ ಸದಸ್ಯರ ಗುಂಪು ಫೋಟೋಗಳನ್ನು ಅಥವಾ ಸಂತೋಷದ ಕುಟುಂಬ ಕ್ಷಣಗಳ ಚಿತ್ರಗಳನ್ನು ಹಾಕುವುದು ಕುಟುಂಬದಲ್ಲಿ ಪ್ರೀತಿ ಮತ್ತು ಏಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಏರುತ್ತಿರುವ ಸೂರ್ಯ, ಚಾಲನೆಯಲ್ಲಿರುವ ಕುದುರೆಗಳು, ಹಾರುವ ಪಕ್ಷಿಗಳು ಮುಂತಾದ ಶಕ್ತಿಯುತ ಮತ್ತು ಸ್ಪೂರ್ತಿದಾಯಕ ಚಿತ್ರಗಳನ್ನು ಇಡುವುದರಿಂದ ಮನೆಯವರಲ್ಲಿ ಶಕ್ತಿ ಮತ್ತು ಸ್ಫೂರ್ತಿ ನೀಡುತ್ತದೆ.

ಯಾವ ಎತ್ತರದಲ್ಲಿ ಇಡಬೇಕು?

ಚಿತ್ರಗಳನ್ನು ಸುಲಭವಾಗಿ ಗೋಚರಿಸುವಂತಹ ಎತ್ತರದಲ್ಲಿ ಗೋಡೆಯ ಮೇಲೆ ಇಡಬೇಕು ಮತ್ತು ಅವುಗಳನ್ನು ನೋಡುವಲ್ಲಿ ಯಾರೂ ಅನಾನುಕೂಲವಾಗಬಾರದು. ಚಿತ್ರಗಳನ್ನು ಮುಖ್ಯ ಬಾಗಿಲಿನ ಮುಂದೆ ಅಥವಾ ನೇರವಾಗಿ ಹಾಸಿಗೆಯ ಮುಂದೆ ಇಡುವುದನ್ನು ತಪ್ಪಿಸಬೇಕು. ಧಾರ್ಮಿಕ ಅಥವಾ ಕುಟುಂಬದ ಚಿತ್ರಗಳನ್ನು ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಇಡಬಾರದು.

ಇದನ್ನೂ ಓದಿ: Vastu Tips: ವೈವಾಹಿಕ ಜೀವನ ಸುಖಮಯವಾಗಿರಲು ಈ ವಾಸ್ತು ನಿಯಮ ಅನುಸರಿಸಿ

ಫೋಟೋಗಳ ಬಣ್ಣ ಏನು?

ವರ್ಣಚಿತ್ರಗಳಲ್ಲಿ ಬಳಸುವ ಬಣ್ಣಗಳಿಗೆ ಗಮನ ಕೊಡುವುದು ಸಹ ಮುಖ್ಯವಾಗಿದೆ. ನೀಲಿ, ಹಸಿರು, ಹಳದಿ ಮುಂತಾದ ಬೆಳಕು ಮತ್ತು ಹಿತವಾದ ಬಣ್ಣಗಳು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತವೆ. ಕೆಂಪು, ಕಪ್ಪು ಮತ್ತು ಕಂದು ಬಣ್ಣಗಳಂತಹ ಗಾಢ ಮತ್ತು ಹೆಚ್ಚು ಉತ್ತೇಜಕ ಬಣ್ಣಗಳನ್ನು ಮಿತವಾಗಿ ಬಳಸಬೇಕು.

ಫೋಟೋಗಳನ್ನು ಹೇಗೆ ಇರಿಸಬೇಕು?

ಚಿತ್ರಗಳನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿಡಬೇಕು. ಧೂಳು, ಕೊಳಕು ಮತ್ತು ಹಾನಿಗೊಳಗಾದ ಚಿತ್ರಗಳು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು.

Continue Reading

ಮೈಸೂರು

Mysore News: ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ; ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

Mysore News: ಮೈಸೂರಿನ ಜೆಪಿ ನಗರದ ವಿಠಲಧಾಮದ ಭವ್ಯ ವೇದಿಕೆಯಲ್ಲಿ ಶ್ರೀ ಸೋಸಲೆ ವ್ಯಾಸರಾಜ ಮಠ ಆಯೋಜನೆ ಮಾಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಶುಕ್ರವಾರದ ವಿದ್ವತ್ ಸಭೆಯಲ್ಲಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

VISTARANEWS.COM


on

All achievements in life are easy if there is Guru's grace says Sri Satyatmatirtha Swamiji
Koo

ಮೈಸೂರು: ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ (Mysore News) ತಿಳಿಸಿದರು.

ಜೆಪಿ ನಗರದ ವಿಠಲಧಾಮದ ಭವ್ಯ ವೇದಿಕೆಯಲ್ಲಿ ಶ್ರೀ ಸೋಸಲೆ ವ್ಯಾಸರಾಜ ಮಠ ಆಯೋಜನೆ ಮಾಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಶುಕ್ರವಾರದ ವಿದ್ವತ್ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ವಿದ್ಯಾರ್ಥಿಗಳು ಶ್ರಮ ವಹಿಸಿ ಅಧ್ಯಯನ ಮಾಡಿರುವುದು ಒಂದೆಡೆಯಾದರೆ ಅವರಲ್ಲಿ ಧೈರ್ಯ, ಸದಾಚಾರ, ಸಂಸ್ಕಾರ, ನೈತಿಕತೆ ಮತ್ತು ಜೀವನ ಕ್ರಮದ ಮಾರ್ಗವನ್ನು ಕಲಿಯುವುದು ಗುರುವಿನ ಅನುಸರಣೆಯಿಂದ ಮಾತ್ರ. ಈ ನಿಟ್ಟಿನಲ್ಲಿ ಇಂದು ಸುಧಾಮಂಗಳ ಮಾಡುತ್ತಿರುವ ವಿದ್ಯಾರ್ಥಿಗಳಾದ ಸೌಮಿತ್ರಿ, ಸುಘೋಷ, ಪ್ರಣವ ಮತ್ತು ಹೊನ್ನಾಳಿ ಆಯಾಚಿತ ಶ್ರೀಶ ಆಚಾರ್ಯರು ಪಂಡಿತರು ಮತ್ತು ವಿದ್ವಾಂಸರು ಮೆಚ್ಚುವಂತಹ ಮುಕ್ತ ಪರೀಕ್ಷೆ ನೀಡಿದ್ದಾರೆ. ಅವರಿಗೆ ಉನ್ನತೋನ್ನತ ಪ್ರಗತಿ ಆಗಲಿ ಎಂದು ಸತ್ಯಾತ್ಮ ಶ್ರೀಗಳು ಆಶೀರ್ವಾದ ಪೂರ್ವಕವಾಗಿ ಹೇಳಿದರು.

ಇದನ್ನೂ ಓದಿ: World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು ಮಾತನಾಡಿ, ಶ್ರೀ ವಿದ್ಯಾಶ್ರೀಶ ತೀರ್ಥರು ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಮೂಲಕ ಯುವ-ನವ ವಿದ್ವಾಂಸರನ್ನು ತರಬೇತುಗೊಳಿಸಿ ಸಮಾಜಕ್ಕೆ ಮಹತ್ವದ ಕೊಡುಗೆಯನ್ನಾಗಿ ನೀಡುತ್ತಿದ್ದಾರೆ. ಅವರ ಸೇವೆ ಮಹತ್ತರವಾಗಿದೆ. ವಿದ್ಯಾರ್ಥಿಗಳು ಪಂಡಿತರಾಗಿ ಭಾರತೀಯ ಸನಾತನ ಪರಂಪರೆಯ ಪ್ರತೀಕವೂ ಆಗಿ ದೇಶದ ಸಂಸ್ಕೃತಿಯನ್ನು ಮುನ್ನಡೆಸುವಂತಾಗಲಿ ಎಂದು ತಿಳಿಸಿದರು.

ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯರು ಮಾತನಾಡಿ, ಪೇಜಾವರ ಶ್ರೀ ವಿಶ್ವೇಶ ತೀರ್ಥರು ನಮ್ಮ ವಿದ್ಯಾಪೀಠಕ್ಕೆ ಪ್ರಪ್ರಥಮವಾಗಿ ಸ್ಪೂರ್ತಿ ಮತ್ತು ಚೈತನ್ಯ ನೀಡಿದವರು ಎಂದು ಸ್ಮರಿಸಿದರು.

ಕಳೆದ ಎಂಟು ವರ್ಷಗಳ ಹಿಂದೆ ಶ್ರೀ ವ್ಯಾಸ ತೀರ್ಥ ವಿದ್ಯಾಪೀಠ ತಿರುಮಕೂಡಲು ಕ್ಷೇತ್ರದಲ್ಲಿ ಆರಂಭವಾದಾಗ ಸ್ವತಃ ನನ್ನ ತಾಯಿಯವರೇ ಎಲ್ಲ ಮಕ್ಕಳಿಗೂ ಅಡುಗೆ ಮಾಡಿ ಕೈ ತುತ್ತು ಹಾಕಿ ಬೆಳೆಸಿದರು. ವಿದ್ಯಾರ್ಥಿಗಳ ಸಮಗ್ರ ಕ್ಷೇಮ ಪಾಲನೆಯಲ್ಲಿ ಪ್ರತಿನಿತ್ಯವೂ ನೂರಾರು ಸಮಸ್ಯೆ ಎದುರಾದರು ಅವೆಲ್ಲವೂ ಗುರುಗಳ ಪರಮ ಅನುಗ್ರಹದಿಂದ ನಿವಾರಣೆಯಾಗಿ ಇಂದು ನಾಲ್ವರು ಪಂಡಿತರಾಗುವ ಮಟ್ಟದವರೆಗೆ ಸಂಸ್ಥೆ ಬೆಳೆದಿದೆ. ಇವುಗಳ ಹಿಂದೆ ಸೋಸಲ ಶ್ರೀ ವಿದ್ಯಾಶ್ರೀಶ ತೀರ್ಥರ ಪರಿಶ್ರಮ ಅಗಾಧವಾಗಿದೆ ಎಂದರು.

ವಿದ್ಯಾಪೀಠದ ವ್ಯವಸ್ಥಾಪಕ ಟ್ರಸ್ಟಿ ಶೇಷಗಿರಿ ಆಚಾರ್ಯ ಮಾತನಾಡಿ, ಸುಧಾ ಪರೀಕ್ಷೆ ಎಂಬುದು ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ, ವಿದ್ವಾಂಸರೂ ತಮ್ಮನ್ನು ತಾವು ಸರಿಪಡಿಸಿಕೊಳ್ಳಲು, ಜ್ಞಾನದ ಶಾಖೆಯನ್ನು ಉನ್ನತೀಕರಿಸಿಕೊಳ್ಳಲು ಮಹೋನ್ನತವಾದ ವೇದಿಕೆಯಾಗಿದೆ ಎಂದರು.

ಇದನ್ನೂ ಒದಿ: Cyber Crime: ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ

ಸುಧಾ ಪರೀಕ್ಷೆ ಎದುರಿಸಿ, ವಿದ್ವಾಂಸರ ಪ್ರಶಂಸೆಗೆ ಭಾಜನರಾದ ಆಯಾಚಿತ ಶ್ರೀ ಶ ಮತ್ತು ಸುಘೋಷ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆಯಾಚಿತ ಶ್ರೀ ಶ ಮಾತನಾಡಿ, ಬಡತನದ ಬೇಗೆಯಲ್ಲಿ ನಾನು ಇದ್ದರೂ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರೂ ಸೋಸಲೆ ಶ್ರೀಗಳು ನನ್ನನ್ನು ಕೈಹಿಡಿದು ಅನ್ನ, ಆಹಾರವನ್ನು ನೀಡಿ ವಿದ್ಯಾದಾನ ಮಾಡಿದರು. ಕಳೆದ ವರ್ಷ ನನ್ನ ಸಹೋದರಿಯ ವಿವಾಹ ಸಂದರ್ಭದಲ್ಲಿಯೂ ನಮ್ಮ ಬಡತನವನ್ನು ಕಂಡು ಸಂಪೂರ್ಣ ವಿವಾಹದ ಜವಾಬ್ದಾರಿಯನ್ನು ಮಠದಿಂದಲೇ ನಿರ್ವಹಿಸಿದ್ದನ್ನು ಜೀವನದಲ್ಲಿ ಮರೆಯಲಾಗದು ಎಂದು ತಿಳಿಸಿದರು.

ಪ್ರಣವ ಆಚಾರ್ಯ ಮಾತನಾಡಿ, ನಮ್ಮ ಪರೀಕ್ಷೆ ಮತ್ತು ಯಶಸ್ವಿಗಾಗಿ ಹಗಲು ಇರುಳು ಶ್ರಮಿಸಿದ ಉಪನ್ಯಾಸಕರು ಮತ್ತು ಪಂಡಿತರನ್ನು ಸ್ಮರಿಸಿಕೊಂಡರು. ಹಿರಿಯರ ಅನುಗ್ರಹದಿಂದಲೇ ನಮ್ಮ ಉನ್ನತಿ ಸಾಧ್ಯವಾಗಿದೆ ಎಂದು ಧನ್ಯತೆ ಸಮರ್ಪಿಸಿದರು.

ಹಿರಿಯ ವಿದ್ವಾಂಸ ಎ.ವಿ. ನಾಗಸಂಪಿಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಮಠ ಆಯೋಜಿಸಿದ್ದ ವಿಶೇಷ ಪ್ರದರ್ಶಿನಿ ಗಮನ ಸೆಳೆಯಿತು. ರಾಮಾಯಣ, ಮಹಾಭಾರತ ಶ್ರೀಮನ್ ನ್ಯಾಯ ಸುಧಾ, ವ್ಯಾಸತ್ರಗಳು, ವೇದಗಳು ಮತ್ತು ಉಪನಿಷತ್ತಿನ ವರ್ಣ ಚಿತ್ರಗಳು ವೀಕ್ಷಕರ ಗಮನಸೆಳೆದವು. ಸಂಜೆ ವಿವಿಧ ಭಜನಾ ಮಂಡಳಿಗಳು ನಾದಸ್ವರ ವೇದಘೋಷದೊಂದಿಗೆ ಶೋಭಾ ಯಾತ್ರೆ ಸಂಪನ್ನಗೊಂಡಿತು.

ಶ್ರೀ ವ್ಯಾಸರಾಜರಿಗೆ ಸಾಂಪ್ರದಾಯಿಕವಾಗಿ ದರ್ಬಾರ್ ಸಮರ್ಪಿಸಲಾಯಿತು. ವಿವಿಧ ಪೀಠಾಧೀಶರು ವ್ಯಾಸರಾಜರಿಗೆ ರತ್ನದ ಅಭಿಷೇಕ ಸಮರ್ಪಣೆ ಮಾಡಿದರು.

ಇದನ್ನೂ ಓದಿ: Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಶಸ್ತಿ ಪ್ರದಾನ

ವಿವಿಧ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕೆ.ಎಸ್. ಗುರುರಾಜ, ಎಚ್.ಆರ್. ನಾಗೇಂದ್ರ ಮತ್ತು ಎ.ಆರ್. ರಘುರಾಮ ಅವರಿಗೆ ಶ್ರೀಮಠದ ರಘುನಾಥ ತೀರ್ಥ ಅನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

Continue Reading
Advertisement
IND vs PAK
ಕ್ರೀಡೆ7 mins ago

IND vs PAK : ಸೂಪರ್ ಫ್ಯಾನ್​​; ಟೀಮ್​ ಇಂಡಿಯಾ ಜೆರ್ಸಿ ಧರಿಸಿ ಭಾರತವನ್ನು ಬೆಂಬಲಿಸಿದ ಮೈಕ್ರೋಸಾಫ್ಟ್​​ ಸಿಇಒ ಸತ್ಯ ನಾದೆಳ್ಳಾ

karnataka Rain
ಬೆಳಗಾವಿ7 mins ago

Karnataka Rain : ಬೆಳಗಾವಿಯಲ್ಲಿ ಭಾರಿ ಮಳೆಗೆ ಮರ ಬಿದ್ದು ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಯುವಕ ಸಾವು

Nandamuri Balakrishna BB4 new film announced
ಟಾಲಿವುಡ್20 mins ago

Nandamuri Balakrishna: ಇಂದು ತೆಲುಗು ಸೂಪರ್‌ಸ್ಟಾರ್ ಬಾಲಯ್ಯ ಬರ್ತ್‌ಡೇ; ಹೊಸ ಸಿನಿಮಾ ಅನೌನ್ಸ್‌!

IND VS PAK
ಕ್ರೀಡೆ29 mins ago

IND vs PAK : ಪಾಕಿಸ್ತಾನವನ್ನು ಭಾರತ ಸೋಲಿಸಿದ ನಂತರ ತಮಾಷೆಯ ಪೋಸ್ಟ್​​ ಮಾಡಿದ ಡೆಲ್ಲಿ ಪೊಲೀಸರು

HSRP Number Plate
ಬೆಂಗಳೂರು33 mins ago

HSRP Number Plate: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿಗೆ ಡೆಡ್‌ಲೈನ್‌! ಇನ್ನೂ ಎರಡೇ ದಿನ ಬಾಕಿ

Narendra Modi And stock market news
ಪ್ರಮುಖ ಸುದ್ದಿ36 mins ago

Stock Market News: ಮೋದಿ ಪ್ರಮಾಣ ವಚನದ ಬಳಿಕ ಷೇರು ಮಾರುಕಟ್ಟೆ ಜಿಗಿತ; ಸೆನ್ಸೆಕ್ಸ್‌ ಹೊಸ ದಾಖಲೆ

Anirudh Jatkar again rise on voice jote joteyali serial issue
ಸ್ಯಾಂಡಲ್ ವುಡ್49 mins ago

Anirudh Jatkar: ʻಜೊತೆ ಜೊತೆಯಲಿ’ ಧಾರಾವಾಹಿಯ ವಿವಾದದ ಬಗ್ಗೆ ಬೇಸರ ಹೊರ ಹಾಕಿದ ಅನಿರುದ್ಧ್!

NEET UG
ಪ್ರೇಮಿಗಳ ದಿನಾಚರಣೆ1 hour ago

NEET UG : ನೀಟ್-ಯುಜಿ ಫಲಿತಾಂಶ ಹಿಂಪಡೆಯಲು ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ

Personality Development
ಪ್ರಮುಖ ಸುದ್ದಿ1 hour ago

Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!

reasi terror attack
ಪ್ರಮುಖ ಸುದ್ದಿ1 hour ago

Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌