Health Benefits Of Saffron: ಹಿತಮಿತ ಕೇಸರಿ ಬಳಕೆಯಿಂದ ಅಪಾರ ಪ್ರಯೋಜನ! - Vistara News

ಆರೋಗ್ಯ

Health Benefits Of Saffron: ಹಿತಮಿತ ಕೇಸರಿ ಬಳಕೆಯಿಂದ ಅಪಾರ ಪ್ರಯೋಜನ!

ವಿಶ್ವದ ದುಬಾರಿ ಮಸಾಲೆಗಳಲ್ಲಿ ಒಂದು ಎಂದು ಕರೆಯಲಾಗುವ ಕೇಸರಿಯ ಉಪಯೋಗವೇನು? ಆಹಾರದ ಬಣ್ಣ, ರುಚಿ ಮತ್ತು ಘಮವನ್ನು ಹೆಚ್ಚಿಸುವುದಕ್ಕೆ ಮಾತ್ರವೇ ಇದು (Health benefits of Saffron) ಸೀಮಿತವೇ? ಹಾಗೇನಿಲ್ಲ, ಆರೋಗ್ಯಕ್ಕೆ ಹಲವಾರು ಉಪಯೋಗಗಳು ಸಹ ಇವೆ.

VISTARANEWS.COM


on

Saffron
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಸಾಲೆಗಳಲ್ಲಿ ಅತ್ಯಂತ ದುಬಾರಿಯದ್ದು ಯಾವುದು? ಹೀಗೆನ್ನುತ್ತಿದ್ದಂತೆ ಮಾರುಕಟ್ಟೆಯ ಧಾರಣೆ ನೋಡುವುದಕ್ಕೆಂದು ಹೋಗಬೇಕಿಲ್ಲ. ಯಾವುದನ್ನು ಉತ್ಪಾದಿಸುವುದು ಸುಲಭವಲ್ಲವೋ, ಸಹಜವಾಗಿ ಅದರ ಬೆಲೆ ತುಟ್ಟಿಯಿರುವುದು ಹೌದಲ್ಲ. ಈ ಹಿನ್ನೆಲೆಯಲ್ಲಿ ಕೇಸರಿಯನ್ನು ಜಗತ್ತಿನ ದುಬಾರಿ ಮಸಾಲೆಗಳಲ್ಲಿ ಒಂದು ಎನ್ನಲಾಗುತ್ತದೆ. ಹಾಗಾಗಿಯೇ ಇದನ್ನು ʻಕೆಂಪು ಕನಕʼ ಎಂದು ಕರೆಯಲಾಗುತ್ತದೆ. ಇದನ್ನು ಮಿತ ಪ್ರಮಾಣದಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಏನವು (Health benefits of Saffron) ಎಂಬುದನ್ನು ನೋಡೋಣ.

Man changing his mood

ಮೂಡ್‌ ಸುಧಾರಣೆ

ಒಮ್ಮೆ ಸಿಟ್ಟು, ಮತ್ತೆ ಬೇಸರ, ಹಾಗೆಯೇ ಖುಷಿ, ಅಲ್ಲಿಯೇ ಕಿರಿಕಿರಿ… ನಿಮ್ಮ ಮೂಡ್‌ ಹೀಗೆಲ್ಲ ಏರಿಳಿತವಾಗುತ್ತಿದ್ದರೆ ನಿಯಮಿತವಾಗಿ ಕೇಸರಿಯಲ್ಲಿ ಅಲ್ಪ ಪ್ರಮಾಣದಲ್ಲಿ ಬಳಸುವುದು ಸೂಕ್ತ ಎನ್ನುತ್ತವೆ ಅ‍ಧ್ಯಯನಗಳು. ಇದರಿಂದ ಖಿನ್ನತೆಯಂಥ ಸಮಸ್ಯೆಗಳನ್ನು ನಿಯಂತ್ರಿಸುವುದಕ್ಕೆ ಸಹಾಯವಾಗುತ್ತದೆ. ಆಗಾಗ ಮೂಡ್‌ ಏರಿಳಿತದಿಂದ ಒದ್ದಾಡುತ್ತಿರುವವರಿಗೂ ಇದು ನೆರವಾದೀತು.

ಉತ್ಕರ್ಷಣ ನಿರೋಧಕಗಳು

ದೇಹವನ್ನು ಉರಿಯೂತದಿಂದ ಕಾಪಾಡಿಕೊಳ್ಳುವುದಕ್ಕೆ ನಮ್ಮ ಆಹಾರದಲ್ಲಿ ಉತ್ಕರ್ಷಣ ನಿರೋಧಕಗಳು ಇರುವುದು ಮುಖ್ಯ. ಮುಕ್ತ ಕಣಗಳು ದೇಹದೆಲ್ಲೆಡೆ ಓಡಾಡಿಕೊಂಡು ಅನಾಹುತಗಳನ್ನು ಮಾಡದಂತೆ ತಡೆಯುವುದಕ್ಕೂ ಇಂಥ ಉರಿಯೂತ ಶಾಮಕಗಳು ಅಗತ್ಯ. ಕೇಸರಿಯಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಮಾರಕ ರೋಗಗಳಿಂದ ರಕ್ಷಣೆಗೆ ನೆರವಾಗಬಲ್ಲವು.

ಪಿಎಂಎಸ್‌ ಶಮನ

ಮುಟ್ಟಿನ ದಿನಗಳ ಮುನ್ನ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುವುದು ಸಹಜ. ಇವುಗಳು ಕೆಲವೊಮ್ಮೆ ಇದೇ ಅತಿಯಾಗಿ ಸ್ವಾಸ್ಥ್ಯ ತಪ್ಪಿಸುವುದೂ ಹೌದು. ಇಂಥ ಮಹಿಳೆಯರಿಗೆ ಪ್ರಿ ಮೆನ್ಟ್ರುವಲ್‌ ಸಿಂಡ್ರೋಮ್‌ (ಪಿಎಂಎಸ್‌) ಎಂದು ಕರೆಯಲಾಗುವ ಈ ಲಕ್ಷಣಗಳನ್ನು ಶಮನ ಮಾಡುವಲ್ಲಿ ಕೇಸರಿಯ ಸೇವನೆ ನೆರವಾಗುತ್ತದೆ. ಮುಟ್ಟಿನ ದಿನಗಳಲ್ಲಿ ಕಾಡುವ ಅತೀವ ಹೊಟ್ಟೆನೋವು ಕಡಿಮೆ ಮಾಡಲು ಕೇಸರಿ ನೆರವಾಗುತ್ತದೆ.

ತೂಕ ಇಳಿಕೆ

ಉಳಿದೆಲ್ಲ ಆಹಾರಗಳನ್ನು ತಿಂದಂತೆಯೇ ಕೇಸರಿಯನ್ನು ಒಂದು ಮುಷ್ಟಿ ತಿನ್ನುವಂತಿಲ್ಲ. ಹಾಗಾದರೆ ಇದರಲ್ಲಿ ತೂಕ ಇಳಿಕೆ ಹೇಗೆ ಎಂಬುದು ಪ್ರಶ್ನೆ. ಹಸಿವನ್ನು ತಗ್ಗಿಸುವಂಥ ಗುಣ ಕೇಸರಿಗಿದೆ. ಹಾಗಾಗಿ ಅಲ್ಪ ಪ್ರಮಾಣದಲ್ಲಿ ತಿನ್ನುವುದೇ ಸಾಕಾದೀತು. ಕೇಸರಿಯನ್ನು ಅತಿಯಾಗಿ ತಿನ್ನುವಂತೆಯೂ ಇಲ್ಲ. ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿರುವ ತಿನಿಸುಗಳು ಬೊಜ್ಜು ಕರಗಿಸಲು ನೆರವಾಗುತ್ತವೆ ಎನ್ನುವುದು ಅ‍ಧ್ಯಯನಗಳ ಮಾತು.

Heart Health In Winter

ಹೃದಯಕ್ಕೆ ಪೂರಕ

ದೇಹದಲ್ಲಿ ಜಮೆಯಾಗಿ ಹೃದಯಕ್ಕೆ ಬರೆ ಹಾಕುವ ಕೊಲೆಸ್ಟ್ರಾಲ್‌ ಮತ್ತು ಟ್ರೈಗ್ಲಿಸರೈಡ್‌ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕೇಸರಿ ಉಪಯುಕ್ತ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇದರಿಂದ ಹೃದಯವನ್ನು ಆರೋಗ್ಯವಾಗಿ ಇರಿಸಿಕೊಳ್ಳಲು ಸಾಧ್ಯವಿದೆ.

Diabetes control

ಮಧುಮೇಹ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಉದ್ದೇಶವಿದ್ದರೆ ಕೊಂಚವೇ ಕೇಸರಿಯನ್ನು ಆಹಾರದಲ್ಲಿ ಉಪಯೋಗಿಸಬಹುದು. ದೇಹದ ಚಯಾಪಚಯಕ್ಕೂ ಪೋಷಕಾಂಶಗಳಿಗೂ ಇರುವ ನಂಟಿನ ಬಗ್ಗೆ ನಡೆಸಲಾದ ಅಧ್ಯಯನದಲ್ಲಿ, ನಿಯಮಿತವಾಗಿ ಅಲ್ಪ ಪ್ರಮಾಣದಲ್ಲಿ ಕೇಸರಿ ನೀಡಲಾದ ಮಧುಮೇಹಿಗಳಲ್ಲಿ ಸುಮಾರು ಎಂಟು ವಾರಗಳಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದ್ದಾಗಿ ವರದಿ ಹೇಳುತ್ತದೆ.

Food Beneficial For Eye Health

ದೃಷ್ಟಿ ಚುರುಕು

ಇದರಲ್ಲಿರುವ ವಿಟಮಿನ್‌ಗಳಿಂದಾಗಿ ತ್ವಚೆ ಮತ್ತು ದೃಷ್ಟಿಯ ಆರೋಗ್ಯ ಸುಧಾರಿಸುತ್ತದೆ. ಕೇಸರಿ ಸೇರಿಸಿದ ಫೇಸ್‌ಪ್ಯಾಕ್‌ಗಳ ಮೂಲಕ ತ್ವಚೆಯ ಆರೋಗ್ಯ ಸುಧಾರಿಸಬಹುದು. ಕಪ್ಪು ಕಲೆಗಳನ್ನು ಹೋಗಲಾಡಿಸಿ, ಸುಕ್ಕುಗಳನ್ನು ಕಡಿಮೆ ಮಾಡಬಹುದು. ಆಹಾರದ ಮೂಲಕ ಸೇವಿಸುವ ವಯಸ್ಕರಲ್ಲಿ ದೃಷ್ಟಿಯ ದೋಷ ಉಂಟಾಗುವುದನ್ನು ಮುಂದೂಡಬಹುದು ಎನ್ನುತ್ತಾರೆ ತಜ್ಞರು.

ಅತಿ ಬೇಡ

ಹೀಗೆನ್ನುತ್ತಿದ್ದಂತೆ ಕೇಸರಿ ಹಾಲು, ಕೇಸರಿ ಭಾತ್‌, ಹಲ್ವಾ, ಬಿರಿಯಾನಿ ಎನ್ನುತ್ತಾ ಸಿಕ್ಕಿದ್ದಕ್ಕೆಲ್ಲ ಕೇಸರಿ ಹಾಕಿಕೊಂಡು ತಿನ್ನುವಂತಿಲ್ಲ. ಮಿತ ಪ್ರಮಾಣದಲ್ಲಿ ಸೇವನೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಗರ್ಭಿಣಿಯರಿಗೂ ಇದನ್ನು ಹೆಚ್ಚು ನೀಡುವಂತಿಲ್ಲ. ನಾಲ್ಕಾರು ಎಳೆಗಳ ಲೆಕ್ಕದಲ್ಲೇ ಸಾಕಾಗುತ್ತದೆ. ಅತಿಯಾಗಿ ತಿಂದರೆ ಹೊಟ್ಟೆನೋವು, ವಾಂತಿ ಮುಂತಾದ ಅಡ್ಡ ಪರಿಣಾಮಗಳು ಆಗಬಹುದು. ಅತಿಯನ್ನೂ ಮೀರಿದರೆ ಇದೇ ದೇಹಕ್ಕೆ ಟಾಕ್ಸಿಕ್‌ ಆಗಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Dengue Fever: ಮಳೆಗಾಲ ಬರುತ್ತಿದೆ! ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!

ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಶುರುವಾಗಲಿದ್ದು, ಇದರ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಹೌದು, ಡೆಂಗ್ಯೂ ಜ್ವರ ಹೆಚ್ಚಳವೂ ಇದೇ ಋತುವಿನಲ್ಲಿ ಆಗುವುದರಿಂದ ಈಗಿನಿಂದಲೇ ಎಚ್ಚರ ವಹಿಸುವುದು ಅತಿ ಅವಶ್ಯಕ. ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಡೆಂಗ್ಯೂಗೆ (Dengue Fever) ಗುರಿಯಾಗುತ್ತಾರೆ. ಈ ಕುರಿತ ವೈದ್ಯರ ಮಾಹಿತಿ ಇಲ್ಲಿದೆ.

VISTARANEWS.COM


on

Dengue Fever
Koo

ಡಾ. ಪದ್ಮಕುಮಾರ್ ಎವಿ, ಹಿರಿಯ ನಿರ್ದೇಶಕರು, ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗ, ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ

ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಶುರುವಾಗಲಿದ್ದು, ಇದರ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಹೌದು, ಡೆಂಗ್ಯೂ ಜ್ವರ ಹೆಚ್ಚಳವೂ ಇದೇ ಋತುವಿನಲ್ಲಿ ಆಗುವುದರಿಂದ ಈಗಿನಿಂದಲೇ ಎಚ್ಚರ ವಹಿಸುವುದು ಅತಿ ಅವಶ್ಯಕ. ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಡೆಂಗ್ಯೂಗೆ (Dengue Fever) ಗುರಿಯಾಗುತ್ತಾರೆ. ಡೆಂಗ್ಯೂ ನಿರೋಧಕ ಲಸಿಕೆ ಇನ್ನಷ್ಟೇ ಪ್ರಯೋಗದ ಹಂತದಲ್ಲಿದೆ. ದೇಶದ ವಿವಿಧ ಭಾಗದಲ್ಲಿ ಸೊಳ್ಳೆಯಿಂದ ಉಂಟಾಗುವ ಡೆಂಗ್ಯೂ ಮಾರಣಾಂತಿಕ. ಕೆಲವರ ಜೀವವನ್ನು ಸಹ ಬಲಿಪಡೆದುಬಿಡುತ್ತದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಜಾಗೃತಿ ಇಲ್ಲದ ಕಾರಣ, ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿ ಡೆಂಗ್ಯೂಗೆ ಬಲಿಯಾಗುತ್ತಾರೆ. ಡೆಂಗ್ಯೂನಲ್ಲಿ ಪ್ರಮುಖವಾಗಿ ಸ್ಪೆಕ್ಟ್ರಮ್ ಡೆಂಗ್ಯೂನಿಂದ ಎಚ್ಚರಿಕೆ ವಹಿಸುವುದು ಅವಶ್ಯಕ. ಕಡಿಮೆ ತೀವ್ರತೆ, ಮಧ್ಯಮ ಹಾಗೂ ಅತಿ ಹೆಚ್ಚು ತೀವ್ರತೆಯ ಡೆಂಗ್ಯೂ ಹರಡುತ್ತದೆ. ಕಡಿಮೆ ಲಕ್ಷಣವಿರುವ ಡೆಂಗ್ಯೂ ಬಂದರೆ ಕೆಲವೇ ದಿನಗಳಲ್ಲಿ ಜ್ವರದ ಬಳಿಕ ಕಡಿಮೆಯಾಗಲಿದೆ. ಮಧ್ಯಮದ ತೀವ್ರತೆಯ ಡೆಂಗ್ಯೂ ಸಹ, ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಯಿಂದ ಗುಣವಾಗಲಿದೆ. ಆದರೆ, ಅತಿಹೆಚ್ಚು ತೀವ್ರತೆಯ ಲಕ್ಷಣ ಹೊಂದಿರುವ ಡೆಂಗ್ಯೂ ಮನುಷ್ಯನನ್ನೇ ಬಲಿ ತೆಗೆದುಕೊಳ್ಳಬಹುದು. ದೇಹದಲ್ಲಿನ ಬಿಳಿರಕ್ತಕಣವನ್ನು ಕಡಿಮೆಗೊಳಿಸಿ ಮನುಷ್ಯರನ್ನು ಅಸ್ವಸ್ಥಗೊಳಿಸುತ್ತದೆ, ಇದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೇ ಹೋದರೆ (Dengue Fever) ಬದುಕುವುದು ಕಷ್ಟ.

Dengue Fever Vaccines

ಲಸಿಕೆಗಳು

ಡೆಂಗ್ಯೂ ನಿಯಂತ್ರಣಕ್ಕೆ ಲಸಿಕೆ ತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ, ಇದನ್ನು ಪಡೆದುಕೊಳ್ಳಲು ಪರ ವಿರೊಧ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಸನೋಫಿ ಗ್ಲೋಬಲ್‌ ಹೆಲ್ತ್‌ಕೇರ್‌ ಅಭಿವೃದ್ಧಿಪಡಿಸಿ, ಪರವಾನಗಿ ಪಡೆದ “ಡೆಂಗ್‌ವಾಕ್ಸಿಯಾ” ಎಂಬ ಲಸಿಕೆಯು ಸಹ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

ಆಶಾದಾಯಕ ಬೆಳವಣಿಗೆಗಳು

ಡೆಂಗ್‌ವಾಕ್ಸಿಯಾದ ಹಿನ್ನಡೆಯ ಹೊರತಾಗಿಯೂ, ಭಾರತದಲ್ಲಿ ಡೆಂಗ್ಯೂ ಲಸಿಕೆ ಅಭಿವೃದ್ಧಿಯ ದಿಗಂತದಲ್ಲಿ ಭರವಸೆಯ ಬೆಳವಣಿಗೆಗಳಿವೆ. ಕನಿಷ್ಠ ಎರಡು ಸ್ಥಳೀಯ ಡೆಂಗ್ಯೂ ಲಸಿಕೆ ಅಭಿವೃದ್ಧಿಪಡಿಸಲು ಸಂಶೋಧನಾ ಸಂಸ್ಥೆಗಳ ನೇತೃತ್ವದಲ್ಲಿ ಸ್ಥಳೀಯ ಪ್ರಯತ್ನಗಳು ಸಕ್ರಿಯವಾಗಿ ನಡೆಯುತ್ತಿವೆ. ಹೆಚ್ಚುವರಿಯಾಗಿ, ಡೆಂಗ್ಯೂ ವಿರುದ್ಧ ಹೋರಾಡಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವನ್ನು ಕಂಡುಹಿಡಿಯುವ ಬದ್ಧತೆಯನ್ನು ಪ್ರದರ್ಶಿಸುವ ಲೈವ್-ಅಟೆನ್ಯೂಯೇಟೆಡ್ ಟೆಟ್ರಾವೆಲೆಂಟ್ ಲಸಿಕೆಯಂತಹ ಭರವಸೆಗೆ ಭಾರತವು ಅಂತರರಾಷ್ಟ್ರೀಯ ಪ್ರಯೋಗಗಳಲ್ಲಿ ಸಹಕರಿಸುತ್ತಿದೆ. ಹೀಗಾಗಿ ಭಾರತದಲ್ಲಿ ಡೆಂಗ್ಯೂ ಲಸಿಕೆ ಅಭಿವೃದ್ಧಿ ಪಡಿಸುವ ಕಾರ್ಯ ಭರದಿಂದ ಸಾಗಿದ್ದು, ಭವಿಷ್ಯದಲ್ಲಿ ಲಸಿಕೆ ಸಿಗಲಿದೆ ಎಂಬ ಭರವಸೆ ಇದೆ, ಒಂದು ವೇಳೆ ಡೆಂಗ್ಯೂ ಲಸಿಕೆ ಜನರಿಗೆ ಸಿಕ್ಕರೆ, ಸಾಕಷ್ಟು ಸಾವು ನೋವುಗಳನ್ನು ತಡೆಯಬಹುದು.

Continue Reading

ಆರೋಗ್ಯ

Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

ನೆಗಡಿಯಾದಾಗ, ಮೂಗು ಕಟ್ಟಿದಾಗ, (Mouth Sleeping) ಜೋರಾಗಿ ಓಡುವಾಗೆಲ್ಲ ಬಾಯಲ್ಲಿ ಉಸಿರಾಡುವುದು ಸಾಮಾನ್ಯ. ಆದರೆ ಅಂಥ ಯಾವುದೂ ಇಲ್ಲದಾಗಲೂ ನಿದ್ದೆ ಮಾಡುವಾಗ ಬಾಯಲ್ಲಿ ಉಸಿರಾಡುವುದು ಅನಾರೋಗ್ಯಕರ. ಈ ಬಗ್ಗೆ ಆರೋಗ್ಯ ಪರಿಣತರು ಏನೆನ್ನುತ್ತಾರೆ? ಈ ಸಮಸ್ಯೆಯ ಹಿಂದು-ಮುಂದಿನ ಮಾಹಿತಿಗಳು ಇಲ್ಲಿವೆ.

VISTARANEWS.COM


on

Mouth Sleeping
Koo

ಹೀಗೊಂದು ಸನ್ನಿವೇಶವನ್ನು (Mouth Sleeping) ಊಹಿಸಿಕೊಳ್ಳಿ- ನಿಮಗೆ ಸಖತ್‌ ನೆಗಡಿಯಾಗಿದೆ. ಮೂಗೆಲ್ಲ ಕಟ್ಟಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಮಲಗಿದಾಗ ಈ ಸಮಸ್ಯೆ ಇನ್ನೂ ಹೆಚ್ಚು ಬಾಧಿಸುತ್ತಿದೆ. ಇಂಥ ಹೊತ್ತಿನಲ್ಲಿ ಬಾಯಲ್ಲಿ ಉಸಿರಾಡುವುದೊಂದೇ ಮಾರ್ಗ. ಆದರೆ ನೆಗಡಿ ಕಡಿಮೆಯಾದ ನಂತರ ಮರಳಿ, ಮೂಗಲ್ಲೇ ಉಸಿರಾಟ ಆರಂಭಿಸುತ್ತೀರಿ. ಹಾಗಲ್ಲದೆ, ಮಲಗಿದಾಗೆಲ್ಲ ಮೂಗಿನಲ್ಲಲ್ಲದೆ, ಬಾಯಲ್ಲೇ ಉಸಿರಾಡುತ್ತೀರಾ? ನೆಗಡಿ ಇಲ್ಲದಿದ್ದರೂ ನಿಮ್ಮ ಉಸಿರಾಟ ಬಾಯಲ್ಲೇ ನಡೆಯುತ್ತದೆಯೇ? ಹಾಗಾದರೆ ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು. ಅತಿಯಾಗಿ ವ್ಯಾಯಾಮ ಮಾಡುವಾಗ, ಜೋರಾಗಿ ಓಡುವಾಗ ಅಥವಾ ನಡೆಯುವಾಗಲೂ ನಾವು ಬಾಯಲ್ಲಿ ಉಸಿರಾಡುತ್ತೇವೆ. ಇದರಿಂದ ದೇಹಕ್ಕೆ ಬೇಕಾದ ಆಮ್ಲಜನಕವನ್ನು ಬೇಗನೇ ಒದಗಿಸುವುದಕ್ಕೆ ಸಾಧ್ಯ. ಆದರೆ ಮಲಗಿದಾಗ, ನಿದ್ದೆಯಲ್ಲಿ ಬಾಯಲ್ಲಿ ಉಸಿರಾಡುವುದು ಸಮಸ್ಯೆಗೆ ಕಾರಣವಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ನಿದ್ದೆ ಮಾಡುತ್ತಿರುವವರಿಗೆ ಅವರು ಹೇಗೆ ಉಸಿರಾಡುತ್ತಿದ್ದಾರೆ ಎಂಬುದು ತಿಳಿಯುವುದಾದರೂ ಹೇಗೆ?

Sleeping Tips

ತಿಳಿಯಬಹುದು

ನಿದ್ದೆ ಮಾಡುವಾಗ ತಿಳಿಯದಿದ್ದರೂ, ನಿದ್ದೆಯಿಂದ ಎದ್ದಾಗ ತಿಳಿಯುವುದಕ್ಕೆ ದಾರಿಗಳಿವೆ. ಬೆಳಗ್ಗೆ ಎದ್ದಾಗ ಬಾಯೆಲ್ಲ ಒಣಗಿದಂತಿದ್ದರೆ, ಬಾಯಲ್ಲಿ ದುರ್ಗಂಧ ಅತಿಯಾಗಿದ್ದರೆ, ಧ್ವನಿ ಒರಟಾಗಿದ್ದರೆ, ಏಳುವಾಗ ಅತಿಯಾದ ಸುಸ್ತು ಅಥವಾ ಕಿರಿಕಿರಿ ಎನಿಸುತ್ತಿದ್ದರೆ, ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಕಾಣುತ್ತಿದ್ದರೆ, ಎದ್ದಾಗ ಬುದ್ಧಿಯಲ್ಲಿ ಸ್ಪಷ್ಟತೆಯ ಬದಲು ಗೊಂದಲ ಇದ್ದರೆ- ಮಲಗಿದಾಗ ಬಾಯಲ್ಲಿ ಉಸಿರಾಡಿರುವ ಸಾಧ್ಯತೆಗಳು ಅಧಿಕ.

ಯಾಕೆ ಹೀಗೆ?

ಮೂಗಿನಲ್ಲಿ ಸರಾಗ ಉಸಿರಾಡುವುದಕ್ಕೆ ಯಾವುದೇ ಸಮಸ್ಯೆ ಎದುರಾದರೂ, ತಕ್ಷಣಕ್ಕೆ ಬಾಯಲ್ಲಿ ಉಸಿರಾಡುವುದು ದೇಹಧರ್ಮ. ಮೂಗು ಕಟ್ಟಿದ್ದರೆ, ಕಫ ಬಿಗಿದಿದ್ದರೆ, ಟಾನ್ಸಿಲ್‌ ಸಮಸ್ಯೆಯಿದ್ದರೆ, ಶ್ವಾಸನಾಳದಲ್ಲಿ ಎಲ್ಲಾದರೂ ಪಾಲಿಪ್‌ಗಳಿದ್ದರೆ, ಅತಿಯಾದ ಸುಸ್ತು, ಒತ್ತಡದಿಂದ ಬಳಲುತ್ತಿದ್ದರೆ- ಹೀಗೆ ಮೂಗಿನ ಬದಲು ಬಾಯಲ್ಲಿ ಉಸಿರಾಡುವುದಕ್ಕೆ ಹಲವಾರು ಕಾರಣಗಳು ಇರಬಹುದು.

ಏನಾಗುತ್ತದೆ?

ನಿದ್ದೆ ಮಾಡುವಾಗ ಹೀಗೆ ಬಾಯಲ್ಲಿ ಉಸಿರಾಡಿದರೆ ಆಗುವ ಸಮಸ್ಯೆಯೇನು? ಹೇಗೋ ಒಂದು- ಉಸಿರಾಡುವುದು ಮುಖ್ಯವಲ್ಲವೇ? ಉಸಿರಾಡುವುದು ಮುಖ್ಯ ಎಂಬುದು ಹೌದಾದರೂ, ಹೇಗೋ ಒಂದು ಎಂಬುದು ಸರಿಯಲ್ಲ. ಇದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಗಳ ಸಂಖ್ಯೆ ತ್ವರಿತವಾಗಿ ದ್ವಿಗುಣಗೊಳ್ಳುತ್ತದೆ. ಜೊತೆಗೆ ಇನ್ನಷ್ಟು ಸಮಸ್ಯೆಗಳು ಗಂಟಿಕ್ಕಿಕೊಳ್ಳುತ್ತವೆ.

Sleeping Tips
  • ಹ್ಯಾಲಿಟೋಸಿಸ್‌ ಅಥವಾ ಬಾಯಿಯ ದುರ್ಗಂಧದ ಸಮಸ್ಯೆ ಎದುರಾಗುತ್ತದೆ. ಕಾರಣ, ಬಾಯಿಯಲ್ಲಿರುವ ಬ್ಯಾಕ್ಟೀರಿಯಗಳು ಅಧಿಕವಾಗುತ್ತವೆ.
  • ಹಲ್ಲಿನ ಸಮಸ್ಯೆಗಳು ಸಹ ಹೆಚ್ಚುತ್ತವೆ. ಒಸಡುಗಳಿಗೆ ಸೋಂಕು ಉಂಟಾಗಬಹುದು. ಹಲ್ಲಿನ ಹುಳುಕು ಕಾಡಬಹುದು.
    ಗಂಟಲು ಮತ್ತು ಕಿವಿಯ ಸೋಂಕು ಪದೇಪದೆ ಕಾಡಬಹುದು. ಮಕ್ಕಳಲ್ಲಿ ಈ ಸಮಸ್ಯೆ ಇದ್ದರೆ, ಅದರ ಪ್ರಮಾಣ ಹೆಚ್ಚಬಹುದು.
  • ಬಾಯಲ್ಲಿ ಉಸಿರಾಡುವುದರಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟ ಕುಸಿಯುವ ಸಂಭವವಿದೆ. ಇದರಿಂದ ಶ್ವಾಸಕೋಶಗಳ ಕ್ಷಮತೆಯೂ ಕಡಿಮೆಯಾಗಬಹುದು. ಅಲರ್ಜಿ, ಅಸ್ತಮಾದಂಥ ತೊಂದರೆಗಳಲ್ಲಿ ಇದು ಹೆಚ್ಚಿನ ಉಪಟಳ ನೀಡುತ್ತದೆ.
  • ಮಕ್ಕಳಲ್ಲಿ ಮುಖದ ಆಕಾರ ಬದಲಾಗುವುದು, ಒಸಡುಗಳ ಆಕೃತಿ ಬದಲಾಗುವುದು, ಹಲ್ಲುಗಳು ಒತ್ತೊತ್ತಾಗಿ ಮೂಡುವುದು ಮುಂತಾದ ತೊಂದರೆಗಳು ಕಾಣಬಹುದು.

ಇದನ್ನೂ ಓದಿ: Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

ಪರಿಹಾರ ಏನು?

ತಲೆಯನ್ನು ಕೊಂಚ ಎತ್ತರಿಸಿ ಮಲಗುವುದರಿಂದ ಶ್ವಾಸನಾಳಗಳು ತೆರೆದುಕೊಂಡು, ಮೂಗಲ್ಲಿ ಉಸಿರಾಡುವುದು ಸುಲಭವಾಗುತ್ತದೆ. ಮೂಗು ಕಟ್ಟಿದಾಗ ಸಲೈನ್‌ ಸ್ಪ್ರೇಗಳನ್ನು ಉಪಯೋಗಿಸುವುದರಿಂದ ಉಸಿರಾಟ ಸುಲಭವಾಗಬಹುದು. ಮನೆಯ ವಾತಾವರಣವನ್ನು ಶುಚಿಯಾಗಿ ಇರಿಸಿಕೊಳ್ಳುವುದರಿಂದ ಅಲರ್ಜಿಯನ್ನು ಮಟ್ಟ ಹಾಕಲು ಸಾಧ್ಯ. ಯೋಗ, ಪ್ರಾಣಾಯಾಮಗಳು ಶ್ವಾಸಕೋಶದ ಬಲವರ್ಧನೆ ಮಾಡಿ, ಮೂಗಿನ ಉಸಿರಾಟವನ್ನು ಸುಲಭ ಮಾಡುತ್ತವೆ.

Continue Reading

ಆರೋಗ್ಯ

Brain Tumour In Kids: ಮಕ್ಕಳ ಜೀವ ಹಿಂಡುವ ಮೆದುಳಿನ ಟ್ಯೂಮರ್‌ನ ಲಕ್ಷಣಗಳಿವು

ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಮೆದುಳಿನ ಗಡ್ಡೆಯ ಪ್ರಕರಣಗಳು ವಿಶ್ವದೆಲ್ಲೆಡೆ ಹೆಚ್ಚುತ್ತಿದ್ದು, ಆತಂಕ ಮೂಡಿಸುತ್ತಿದೆ. ಮೆದುಳಿನ ಸುತ್ತಲಿನ ಕೋಶಗಳ ಅಸಹಜ ಬೆಳವಣಿಗೆಯನ್ನು ಟ್ಯೂಮರ್‌ ಎಂದು ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟ್ಯೂಮರ್‌ ಇರುವಾಗಿನ ಕೆಲವು ಲಕ್ಷಣಗಳನ್ನು ಗುರುತಿಸಿ ಜಾಗ್ರತೆ ಮಾಡುವುದರ ಕುರಿತಾಗಿ ಒಂದಿಷ್ಟು ವಿವರಗಳು (Brain Tumour In Kids) ಇಲ್ಲಿವೆ.

VISTARANEWS.COM


on

Brain Tumour In Kids
Koo

ಮೆದುಳಿನ ಸುತ್ತಲಿನ ಕೋಶಗಳ ಅಸಹಜ ಬೆಳವಣಿಗೆಯನ್ನು ಟ್ಯೂಮರ್‌ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯನ್ನು ಎದುರಿಸುವವರು ಬಹಳಷ್ಟು ಆರೋಗ್ಯದ ಸಮಸ್ಯೆಗಳಿಗೂ ತುತ್ತಾಗುವಂತಾಗುತ್ತದೆ. ಹಲವಾರು ಪ್ರಕರಣಗಳಲ್ಲಿ ಶರೀರದ ಅಂಗಾಂಗಗಳ ಕ್ಷಮತೆಯೂ ಕುಸಿಯುವಂತಾಗುತ್ತದೆ. ಮಕ್ಕಳಲ್ಲಿ ಇಂಥ ಪ್ರಕರಣಗಳು ಎದುರಾದಾಗ, ವಯಸ್ಕರಲ್ಲಿ ಕಾಣುವ ಲಕ್ಷಣಗಳು ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೀತಿ ಭಿನ್ನವಾಗಿಯೇ ಇರುತ್ತದೆ. ಮೆದುಳಿನ ಯಾವ ಭಾಗದಲ್ಲಿ ಟ್ಯೂಮರ್‌ ಕಾಣಿಸಿಕೊಂಡಿದೆ, ಗಡ್ಡೆ ಎಷ್ಟು ದೊಡ್ಡದಿದೆ ಮುಂತಾದವುಗಳ ಮೇಲೆ ಗೋಚರಿಸುವ ಲಕ್ಷಣಗಳು ವ್ಯತ್ಯಾಸವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಮೆದುಳಿನ ಗಡ್ಡೆಯ ಪ್ರಕರಣಗಳು ವಿಶ್ವದೆಲ್ಲೆಡೆ ಹೆಚ್ಚುತ್ತಿದ್ದು, ಆತಂಕ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಟ್ಯೂಮರ್‌ ಇರುವಾಗಿನ ಕೆಲವು ಲಕ್ಷಣಗಳನ್ನು ಗುರುತಿಸಿ ಜಾಗ್ರತೆ ಮಾಡುವುದಕ್ಕೆ ಬೇಕಾಗಿ, ಒಂದಿಷ್ಟು (Brain Tumour In Kids) ವಿವರಗಳು ಇಲ್ಲಿವೆ.

child headache

ತಲೆನೋವು

ಇದರರ್ಥ ತಲೆ ನೋವು ಬಂದಾಗಲೆಲ್ಲ ಮೆದುಳಿನಲ್ಲಿ ಗಡ್ಡೆಯಿದೆ ಎಂದಲ್ಲ. ತಲೆನೋವು ತರಹೇವಾರಿ ಕಾರಣಗಳಿಗೆ ಬರಬಹುದು. ಆದರೆ ಟ್ಯೂಮರ್‌ ಇರುವಂಥ ಸಂದರ್ಭದಲ್ಲಿ ತಲೆನೋವಿಗೊಂದು ಪ್ರತ್ಯೇಕ ಸ್ವರೂಪವಿರುತ್ತದೆ. ಮೈಗ್ರೇನ್‌, ಆಸಿಡಿಟಿ ಮುಂತಾದ ಸಂದರ್ಭಗಳಲ್ಲಿ ಬರುವ ತಲೆನೋವಿಗಿಂತ ಇದು ಬೇರೆಯಾಗಿರುತ್ತದೆ. ಅಂದರೆ, ಬೆಳಗ್ಗೆ ಏಳುತ್ತಿದ್ದಂತೆ ತಲೆನೋವು ಪ್ರಾರಂಭವಾಗುವುದು, ರಾತ್ರಿ ಮಲಗಿದಾಗ ತಲೆನೋವು ಹೆಚ್ಚುವುದು- ಇಂಥ ಲಕ್ಷಣಗಳು ಗೋಚರಿಸಿದರೆ, ವೈದ್ಯರಲ್ಲಿ ಹೋಗಲೇಬೇಕು.

Close-up human eye, lens, cornea and brown iris.

ದೃಷ್ಟಿ ಮಂದವಾಗುವುದು

ಹಲವು ರೀತಿಯ ಟ್ಯೂಮರ್‌ಗಳು ದೃಷ್ಟಿಯನ್ನು ಮಂದವಾಗಿಸುತ್ತವೆ. ಗೆಜೆಟ್‌ಗಳ ಭರಾಟೆಯಲ್ಲಿ ಮಕ್ಕಳ ದೃಷ್ಟಿ ಕ್ಷೀಣಿಸುವುದು ಅಸಹಜ ಅಲ್ಲ ಎನ್ನುವುದು ಹೌದಾದರೂ, ನೇತ್ರ ತಜ್ಞರಲ್ಲಿ ಸಮಾಲೋಚನೆ ಅಗತ್ಯವಿದೆ. ಬೆಳಕಿಗೆ ಕಣ್ಣು ಬಿಡಲಾಗದಿರುವುದು, ಯಾವುದನ್ನೂ ಕೇಂದ್ರೀಕರಿಸಲು ದೃಷ್ಟಿ ಸಹಕರಿಸದಿರುವುದು- ಇವೆಲ್ಲ ಟ್ಯೂಮರ್‌ನಿಂದಾಗಿ ದೃಷ್ಟಿ ನರದ ಮೇಲೆ ಬೀಳುತ್ತಿರುವ ಒತ್ತಡದ ಲಕ್ಷಣಗಳಾಗಿರಬಹುದು.

ವಾಂತಿ, ಹೊಟ್ಟೆ ತೊಳೆಸುವುದು

ಫ್ಲೂ ಮಾದರಿಯ ಲಕ್ಷಣಗಳ ಜೊತೆಗೆ ಅತೀವ ತಲೆನೋವಿದೆ ಎಂದರೆ- ಎಚ್ಚರ ಅಗತ್ಯ. ಸಿಕ್ಕಾಪಟ್ಟೆ ಹೊಟ್ಟೆ ತೊಳೆಸುವುದು, ವಾಂತಿ ಕಂಡುಬರಬಹುದು. ಮೆದುಳಿನ ಒಂದು ನಿಗದಿತ ಜಾಗದಲ್ಲಿ ಟ್ಯೂಮರ್‌ ಬೆಳೆದು ದೊಡ್ಡದಾಗುತ್ತಿದ್ದರೆ ಇಂಥ ಲಕ್ಷಣಗಳು ಕಾಣುವುದು ಸಾಮಾನ್ಯ.

Little Boy Suffering from Ear Pain on Color Green Background

ಕಿವಿ ಕೇಳದಿರುವುದು

ಅತಿಯಾಗಿ ಇಯರ್‌ಫೋನ್‌ ಬಳಕೆಯ ಪ್ರಭಾವ ಎಂದು ಭಾವಿಸಿ, ಕಿವಿ ಕೇಳದ ಸಮಸ್ಯೆಯನ್ನು ನಿರ್ಲಕ್ಷಿಸುವ ಸಾಧ್ಯತೆ ಇಲ್ಲದಿಲ್ಲ. ಆದರೆ ಶ್ರವಣ ನರಗಳ ಮೇಲಿನ ಅತೀವ ಒತ್ತಡದಿಂದ ತೀವ್ರ ಕಿವಿನೋವು, ಕಿವಿ ಕೇಳುವುದು ಕಡಿಮೆಯಾದಂತೆ ಅನಿಸುವುದು ಸಾಮಾನ್ಯ. ಒಳಗಿವಿಯಿಂದ ಮೆದುಳಿಗೆ ಸಂದೇಶ ರವಾನಿಸುವ ಈ ನರಗಳು ಶ್ರವಣ ಸಾಮರ್ಥ್ಯ ಸರಿಯಾಗಿರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂಥ ಸಂದರ್ಭದಲ್ಲೂ ಮೆದುಳಿನ ಟ್ಯೂಮರ್‌ ಇಲ್ಲ ಎಂಬುದನ್ನು ವೈದ್ಯರಿಂದ ಖಾತ್ರಿ ಪಡಿಸಿಕೊಳ್ಳಬೇಕು.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

ಅಪಸ್ಮಾರ

ಇದು ಸಹ ಅತ್ಯಂತ ಸಾಮಾನ್ಯವಾದ ಲಕ್ಷಣ. ಮೆದುಳಿನ ಟ್ಯೂಮರ್‌ ಇರುವವರಲ್ಲಿ ಶೇ. 40ರಷ್ಟು ಜನರಿಗೆ ಒಮ್ಮೆಯಾದರೂ ಅಪಸ್ಮಾರ ಕಾಣುವುದು ಸಹಜ ಎನ್ನುತ್ತಾರೆ ನರರೋಗ ತಜ್ಞರು. ಕೆಲವೊಮ್ಮೆ ಇದನ್ನು ಟ್ಯೂಮರ್‌ನ ಪ್ರಾಥಮಿಕ ಲಕ್ಷಣವೆಂದು ಗ್ರಹಿಸಲಾಗುತ್ತದೆ. ಹಾಗಾಗಿ ಈ ಬಗ್ಗೆ ನರರೋಗ ತಜ್ಞರಲ್ಲಿ ಸಮಾಲೋಚನೆ ಅಗತ್ಯ.
ಇಂಥ ಯಾವುದೇ ಸೂಚನೆಗಳು ಕಂಡುಬಂದಲ್ಲಿ ವೈದ್ಯರಲ್ಲಿ ತುರ್ತು ಸಮಾಲೋಚನೆ ಅಗತ್ಯ. ಇದಕ್ಕೆ ಹಲವಾರು ಸುತ್ತಿನ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಸ್ಕ್ಯಾನಿಂಗ್‌ನಿಂದ ಹಿಡಿದು ಬಯಾಪ್ಸಿಯವರೆಗೂ ಪರೀಕ್ಷೆಗಳ ಅಗತ್ಯ ಬರಬಹುದು. ಆದರೆ ಆರಂಭಿಕ ಹಂತದಲ್ಲಿ ಈ ರೋಗ ಪತ್ತೆಯಾದರೆ ಶರೀರಕ್ಕೆ ಹೆಚ್ಚಿನ ಹಾನಿಯಾಗದಂತೆ ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚುತ್ತದೆ.

Continue Reading

ಆರೋಗ್ಯ

Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?

ಉತ್ಕರ್ಷಣ ನಿರೋಧಕಗಳು, ನಾರು, ಪಿಷ್ಟ, ಖನಿಜಗಳು, ವಿಟಮಿನ್‌ಗಳು ಬೆಂಡೆಕಾಯಿಯಲ್ಲಿವೆ. ಟೈಪ್‌ 2 ಮಧುಮೇಹದಿಂದ ಹಿಡಿದು, ಜೀರ್ಣಾಂಗಗಳ ತೊಂದರೆಯನ್ನು ಸುಧಾರಿಸುವವರೆಗೆ, ಹೃದಯ ರೋಗಗಳಿಂದ ಹಿಡಿದು ಕೆಲವು ಕ್ಯಾನ್ಸರ್‌ಗಳನ್ನು ದೂರ ಮಾಡುವವರೆಗೆ ಬೆಂಡೆಕಾಯಿ ಆರೋಗ್ಯಕ್ಕೆ (Health Benefits Of Okra) ಬಹೂಪಯೋಗಿ ಎನಿಸಿದೆ.

VISTARANEWS.COM


on

Health Benefits Of Okra
Koo

ಬೆಂಡೆಕಾಯಿಯನ್ನು ಇಷ್ಟಪಟ್ಟು ತಿನ್ನುವವರು ಎಷ್ಟು ಮಂದಿ ಇದ್ದಾರೋ, ಕಷ್ಟಪಟ್ಟು ತಿನ್ನುವವರೂ ಅಷ್ಟೇ ಮಂದಿ ಇದ್ದಾರೆ. ಇದನ್ನು ಬಳಸಿ ರುಚಿಕಟ್ಟಾಗಿ ಅಡುಗೆ ಮಾಡುವವರು ಇರುವಂತೆಯೇ, ಲೋಳೆಯ ಮುದ್ದೆ ಮಾಡಿಕೊಂಡು ಒದ್ದಾಡುವವರೂ ಇದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಾವಿಂದು ಹೇಳುವುದಕ್ಕೆ ಹೊರಟಿದ್ದು ಬೆಂಡೆಕಾಯಿಯೆಂಬ ಲೋಳೆ ಕೊಳವೆಯ ಆರೋಗ್ಯಕಾರಿ ಗುಣಗಳ ಬಗ್ಗೆ. ಇದರ ಪ್ರಯೋಜನಗಳನ್ನು ತಿಳಿದಾಗ, ಇಂಥದ್ದೊಂದು ತರಕಾರಿ ನಮ್ಮ ಪಾಲಿಗೆ ಇದೆಯಲ್ಲ ತಿನ್ನುವುದಕ್ಕೆ ಎಂದು ಸಂತೋಷವಾಗದಿದ್ದರೆ, ಮತ್ತೆ ಕೇಳಿ! ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಹೇರಳವಾದ ನಾರು, ಪಿಷ್ಟ, ಖನಿಜಗಳು ಮತ್ತು ವಿಟಮಿನ್‌ಗಳು ಬೆಂಡೆಕಾಯಿಯಲ್ಲಿವೆ. ಹಾಗಾಗಿಯೇ ಟೈಪ್‌ 2 ಮಧುಮೇಹದಿಂದ ಹಿಡಿದು, ಜೀರ್ಣಾಂಗಗಳ ತೊಂದರೆಯನ್ನು ಸುಧಾರಿಸುವವರೆಗೆ, ಹೃದಯ ರೋಗಗಳಿಂದ ಹಿಡಿದು ಕೆಲವು ಕ್ಯಾನ್ಸರ್‌ಗಳನ್ನು ದೂರ ಮಾಡುವವರೆಗೆ ಬೆಂಡೆಕಾಯಿ ಆರೋಗ್ಯಕ್ಕೆ ಬಹೂಪಯೋಗಿ ಎನಿಸಿದೆ. ಹಾಗಾದರೆ ಏನೆಲ್ಲ ಲಾಭಗಳಿವೆ (Health Benefits Of Okra) ಬೆಂಡೆಕಾಯಿ ತಿನ್ನುವುದರಲ್ಲಿ?

Health Tips in Kannada lady finger okra benefits

ನಾರು ಹೇರಳ

ಬೆಂಡೆಕಾಯಿಯಲ್ಲಿರುವ ಕರಗಬಲ್ಲ ನಾರುಗಳು ಎಲ್‌ಡಿಎಲ್‌ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ಅಂಶವನ್ನು ಕರಗಿಸುವಲ್ಲಿ ನೆರವಾಗುತ್ತವೆ. ಹಾಗಾಗಿ ಕೊಲೆಸ್ಟ್ರಾಲ್‌ ತೊಂದರೆಯಿಂದ ಬಳಲುತ್ತಿರುವವರು ಬೆಂಡೆಕಾಯಿಯ ಸೇವನೆಯನ್ನು ಹೆಚ್ಚಿಸಬಹುದು. ಇದರಲ್ಲಿರುವ ಕರಗದಂಥ ನಾರುಗಳು ಜೀರ್ಣಾಂಗದ ಆರೋಗ್ಯ ಏರುಪೇರಾಗದಂತೆ ನೋಡಿಕೊಳ್ಳುತ್ತವೆ. ಮಲಬದ್ಧತೆಯಿಂದ ಮುಕ್ತಿ ನೀಡುತ್ತವೆ.

ಸಕ್ಕರೆಯಂಶ ಸ್ಥಿರ

ಇದರಲ್ಲಿರುವ ನಾರಿನಂಶದಿಂದಾಗಿ ರಕ್ತದಲ್ಲಿರುವ ಸಕ್ಕರೆಯಂಶವನ್ನು ಸ್ಥಿರವಾಗಿ ಇರಿಸಲು ಅನುಕೂಲ. ಪರಂಪರಾಗತವಾಗಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿರಿಸಲು ಇದನ್ನು ಬಳಸಲಾಗುತ್ತದೆ. ಆಹಾರ ಗ್ಲೂಕೋಸ್‌ ಆಗಿ ಪರಿವರ್ತನೆಯಾಗುವುದನ್ನು ನಿಧಾನವಾಗಿಸಿ, ಸಕ್ಕರೆಯಂಶ ಏರಿಳಿತ ಆಗದಂತೆ ತಡೆಯುವ ಸಾಧ್ಯತೆ ಇದಕ್ಕಿದೆ.

Close-up human eye, lens, cornea and brown iris.

ಕಣ್ಣಿಗೆ ಕ್ಷೇಮ

ಇದಲ್ಲಿರುವ ವಿಟಮಿನ್‌ ಎ ಅಂಶವು ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಒಳ್ಳೆಯ ನೆರವು ನೀಡುತ್ತದೆ. ಕಾರ್ನಿಯ ರಕ್ಷಣೆಗೆ ಬೇಕಾದ ಅಂಶಗಳು ಬೆಂಡೆಕಾಯಿಯಲ್ಲಿವೆ. ಇದಲ್ಲದೆ, ಕಣ್ಣಿನ ಸೋಂಕುಗಳನ್ನು ದೂರ ಮಾಡುವಂಥ ಸಾಧ್ಯತೆಯೂ ಈ ತರಕಾರಿಗಿದೆ.

Young brown haired woman is touching softly owne hair Hair care Egg Benefits For Hair

ಕೇಶ, ಚರ್ಮ ಕಾಂತಿಯುತ

ಚರ್ಮದ ಕಾಂತಿ ಹೆಚ್ಚಳಕ್ಕೂ ಇದು ಕೊಡುಗೆಯನ್ನು ನೀಡುತ್ತದೆ. ಕೂದಲಿನ ಬೆಳವಣಿಗೆಗೆ ಬೇಕಾದಂಥ ಖನಿಜಗಳು ಮತ್ತು ವಿಟಮಿನ್‌ಗಳು ಇದರಲ್ಲಿ ವಿಫುಲವಾಗಿವೆ. ಜೊತೆಗೆ, ವಿಟಮಿನ್‌ ಸಿ ಅಧಿಕವಾಗಿದ್ದು, ಕೊಲಾಜಿನ್‌ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಇದರಿಂದ ಚರ್ಮದ ಸುಕ್ಕು ನಿವಾರಣೆಯಾಗಿ, ವಯಸ್ಸಾದಂತೆ ಕಾಣುವುದನ್ನು ಮುಂದೂಡಬಹುದು.

Antioxidants in it keep immunity strong Benefits Of Mandakki

ಪ್ರತಿರೋಧಕತೆ ಹೆಚ್ಚಳ

ಬೆಂಡೆಕಾಯಿಯಲ್ಲಿ ವಿಟಮಿನ್‌ ಸಿ ವಿಫುಲವಾಗಿದೆ. ಇದು ಬಿಳಿರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಈ ಬಿಳಿ ರಕ್ತ ಕಣಗಳು ವಿಫುಲವಾಗಿ ಇದ್ದಷ್ಟೂ ಸೋಂಕುಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ. ಜೊತೆಗೆ, ಬೆಂಡೆಕಾಯಿಯನ್ನು ಪ್ರಿಬಯಾಟಿಕ್‌ ಎಂದೇ ಪರಿಗಣಿಸಲಾಗಿದೆ. ಅಂದರೆ, ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಸಹಾಯವಾಗುತ್ತದೆ ಎನ್ನುತ್ತವೆ ಅಧ್ಯಯನಗಳು.

ಫೋಲೇಟ್‌

ಕೆಂಪು ರಕ್ತ ಕಣಗಳ ಹೆಚ್ಚಳಕ್ಕೆ ಅಗತ್ಯವಾದ ಅಂಶವೆಂದು ಫೋಲೇಟನ್ನು ಪರಿಗಣಿಸಲಾಗಿದೆ. ಇದರಿಂದ ರಕ್ತಹೀನತೆಯನ್ನು ನಿವಾರಿಸಬಹುದು. ಇದಲ್ಲದೆ, ಹೊಟ್ಟೆಯಲ್ಲಿರುವ ಭ್ರೂಣದ ಬೆಳವಣಿಗೆಗೆ ಫೋಲೇಟ್‌ ಅತಿ ಮುಖ್ಯ. ಈ ಅಂಶ ಬೆಂಡೆಕಾಯಿಯಲ್ಲಿ ದೊರೆಯುತ್ತದೆ.

Bone Health In Winter

ಮೂಳೆ ಗಟ್ಟಿ

ಇದರಲ್ಲಿ ವಿಟಮಿನ್‌ ಕೆ ಮತ್ತು ಕ್ಯಾಲ್ಶಿಯಂ ಅಂಶವಿದೆ. ಇದರಿಂದ ಮೂಳೆಗಳ ಬಲವರ್ಧನೆಗೆ ಅನುಕೂಲ ದೊರೆಯುತ್ತದೆ. ಜೊತೆಗೆ ಪೊಟಾಶಿಯಂ, ಮೆಗ್ನೀಶಿಯಂನಂಥ ಖನಿಜಗಳೂ ಇರುವುದರಿಂದ ಮೂಳೆಗಳು ಟೊಳ್ಳಾಗದಂತೆ, ಸಾಂದ್ರತೆ ಕಡಿಮೆಯಾಗದಂತೆ ಕಾಪಾಡುವುದು ಸುಲಭವಾಗುತ್ತದೆ.

ಇದನ್ನೂ ಓದಿ: Health Tips Kannada: ಸನ್‌ಸ್ಕ್ರೀನ್‌ ಕುರಿತು ನಿಮಗೆಷ್ಟು ಗೊತ್ತು?

ಕರುಳಿನ ಸೋಂಕು ನಿವಾರಣೆ

ಎಳೆಯ ಬೆಂಡೆಕಾಯಿಗಳಲ್ಲಿರುವ ಪಾಲಿಸ್ಯಾಕರೈಡ್‌ಗಳು ಜೀರ್ಣಾಂಗಗಳಲ್ಲಿರುವ ಸೋಂಕುಗಳ ನಿವಾರಣೆಗೆ ಉಪಯುಕ್ತ. ಕರುಳಿನ ಗೋಡೆಗೆ ಅಂಟಿಕೊಳ್ಳುವಂಥ ಹಾನಿಕಾರಕ ಬ್ಯಾಕ್ಟೀರಿಯಗಳ ಅಂಟಿನಂಶವನ್ನು ಲುಪ್ತಗೊಳಿಸುವ ಸಾಮರ್ಥ್ಯ ಇವುಗಳಿಗಿವೆ.

Continue Reading
Advertisement
Virat Kohli
ಕ್ರೀಡೆ30 seconds ago

Virat Kohli : ಕೊಹ್ಲಿಯ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​

Karnataka rain
ಮಳೆ45 mins ago

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Shivasharane Hemaraddi Mallamma Jayanti celebration in Srisailam
ಯಾದಗಿರಿ47 mins ago

Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

union minister Pralhad Joshi latest statement in bidar
ಕರ್ನಾಟಕ49 mins ago

Pralhad Joshi: ಅಮಾಯಕ ಹೆಣ್ಣುಮಕ್ಕಳ ಹತ್ಯೆಯಾದರೂ ಪೊಲೀಸರ ಮೌನ; ಪ್ರಲ್ಹಾದ ಜೋಶಿ ಆರೋಪ

Rave party 86 people including Hema and Ashi consumed drugs in the rave party Blood report positive
ಕ್ರೈಂ51 mins ago

Rave party: ರೇವ್‌ ಪಾರ್ಟಿಯಲ್ಲಿ ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

Remedies For SadeSati
ಧಾರ್ಮಿಕ54 mins ago

Remedies For SadeSati: ಶನಿಯ ವಕ್ರದೃಷ್ಟಿ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

Sharad Kelkar
ಸಿನಿಮಾ56 mins ago

Sharad Kelkar: ‘ಬಾಹುಬಲಿ’ಗೆ ಧ್ವನಿ ನೀಡಿದ್ದು ಮರೆಯಲಾಗದ ಅನುಭವ ಎಂದ ಶರದ್ ಕೇಳ್ಕರ್

Glenn Maxwell
ಪ್ರಮುಖ ಸುದ್ದಿ1 hour ago

Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

Theatre
ಸಿನಿಮಾ1 hour ago

‘ಸ್ಟಾರ್‌’ ಸಿನಿಮಾಗಳಿಲ್ಲದ ಕಾರಣ ಚಿತ್ರಮಂದಿರಗಳ ಬಂದ್‌ಗೆ ಚಿಂತನೆ;‌ ನಿರ್ಮಾಪಕರಿಂದ ಭಾರಿ ಆಕ್ರೋಶ!

Dengue Fever
ಆರೋಗ್ಯ1 hour ago

Dengue Fever: ಮಳೆಗಾಲ ಬರುತ್ತಿದೆ! ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ15 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌