Varamahalakshmi Festival | ಸಕಲ ವರವ ಕೊಡುವ ಮಹಾಲಕ್ಷ್ಮೀಯನ್ನು ಪೂಜಿಸುವ ಹಬ್ಬ - Vistara News

ಧಾರ್ಮಿಕ

Varamahalakshmi Festival | ಸಕಲ ವರವ ಕೊಡುವ ಮಹಾಲಕ್ಷ್ಮೀಯನ್ನು ಪೂಜಿಸುವ ಹಬ್ಬ

ಲಕ್ಷ್ಮೀಯೆಂದರೆ ಚೆಲುವು, ಶೋಭೆ ಹಾಗೂ ಸಂಪತ್ತು. ಆಕೆಯನ್ನು ಪೂಜಿಸುವ ಪುಣ್ಯಕಾಲ ವರಮಹಾಲಕ್ಷ್ಮೀ ಹಬ್ಬ(Varamahalakshmi Festival). ಈ ಹಬ್ಬದ ಆಚರಣೆಯ ಹಿನ್ನೆಲೆ ಏನು? ವ್ರತ ಕಥೆಯ ಮಹತ್ವವೇನು? ಪೂಜೆಯ ವಿಧಾನ ಹೇಗೆ ಎಂದು ತಿಳಿಸುವ ಲೇಖನ ಇಲ್ಲಿದೆ.

VISTARANEWS.COM


on

Varamahalakshmi Festival
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಮ್ಯಾ ಗುಹಾ ದ್ವಾರಕನಾಥ್‌/ ಡಾ. ಮೇಖಲ ದ್ವಾರಕನಾಥ್‌
ಶ್ರಾವಣ ಶುಕ್ಲ ಪೂರ್ಣಿಮೆ ದಿವಸ ಶುಕ್ರ ಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ ಅಥವಾ ಶುಕ್ಲಪೂರ್ಣಿಮೆಯ ಅತಿ ಹತ್ತಿರದ ಶುಕ್ರವಾರದಂದು ವರಮಹಾಲಕ್ಷ್ಮೀ (Varamahalakshmi Festival) ಆರಾಧನೆ ಮಾಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Varamahalakshmi Festival
ರಮ್ಯಾ ಗುಹಾ ದ್ವಾರಕನಾಥ್‌

ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಗೋಧೂಳಿ ಸಮಯದಲ್ಲಿ ಈ ವ್ರತಾಚರಣೆ ನಡೆಯುತ್ತದೆ. ಈ ಬಾರಿ ಎರಡನೇ ಶುಕ್ರವಾರವಾದ ಆಗಸ್ಟ್‌ 5 ರಂದೇ ವ್ರತಾಚರಣೆ ಕೈಗೊಳ್ಳಬೇಕೆಂದು ಜ್ಯೋತಿಷಿಗಳು, ಪಂಚಾಂಗ ಕರ್ತರು ದಿನ ನಿಗದಿ ಪಡಿಸಿದ್ದಾರೆ. ಆಗಸ್ಟ್‌ 12ರ ಶುಕ್ರವಾರದಂದು ಪೂರ್ಣಿಮೆಯ ದಿನವಾದರೂ ಬೆಳಗ್ಗೆಯ ಸಮಯ ಮಾತ್ರ ಈ ತಿಥಿ ಇರುತ್ತದೆ. ನಂತರ ಪಕ್ಷವೇ ಬದಲಾಗುವುದರಿಂದ ಇಂದೇ (ಆಗಸ್ಟ್‌ 5) ಈ ವ್ರತಾಚರಣೆ ನಡೆಯುತ್ತಿದೆ.

ಕೆಲವರು ವರಮಹಾಲಕ್ಷ್ಮೀ ಹಬ್ಬದ ಈ ದಿನ ವ್ರತಕೈಗೊಳ್ಳುತ್ತಾರೆ. ಇನ್ನು ಕೆಲವರು ಲಕ್ಷ್ಮೀಯ ವಿಗ್ರಹವಿಟ್ಟು ಕೇವಲ ಪೂಜೆ ಮಾಡುತ್ತಾರೆ. ಗೋಧೂಳಿ ಸಮಯದವರೆಗೂ ಉಪವಾಸವಿದ್ದು ಪೂಜೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ, ಈಗಿನ ಕಾಲಕ್ಕೆ ತಕ್ಕಂತೆ ಬೆಳಗ್ಗೆಯೇ ವ್ರತಾಚರಣೆ ಅಥವಾ ಪೂಜೆ ನಡೆಯುತ್ತದೆ.

Varamahalakshmi Festival
ಡಾ. ಮೇಖಲ ದ್ವಾರಕನಾಥ್‌

ಆದಿಲಕ್ಷ್ಮೀ, ಧ್ಯಾನಲಕ್ಷ್ಮೀ, ಧೈರ್ಯ ಲಕ್ಷ್ಮೀ, ಗಜಲಕ್ಷ್ಮೀ, ಸಂತಾನಲಕ್ಷ್ಮೀ, ವಿಜಯ ಲಕ್ಷ್ಮೀ, ಐಶ್ವರ್ಯಲಕ್ಷ್ಮೀ, ಧನಲಕ್ಷ್ಮೀ ಎಂಬ ಅಷ್ಟರೂಪನಾಮಗಳಿಂದ ರರಾಜಿಸುವವಳು ಶ್ರೀ ವರಮಹಾಲಕ್ಷ್ಮೀ. ಲಕ್ಷ್ಮೀಯ ಸೌಂದರ್ಯ ವರ್ಣಾತೀತ. ಲಕ್ಷ್ಮೀ ಎಂದರೆ ಚೆಲುವು, ಶೋಭೆ ಹಾಗೂ ಸಂಪತ್ತು. ಲಕ್ಷ್ಮೀ ಎಂದರೆ ಶುಭ-ಲಾಭ. ಲಕ್ಷ್ಮೀ ಎಂದರೆ ಶುಭ ಶಕುನ-ಶುಭ ಲಕ್ಷಣ. ಆಕೆಯನ್ನು ಪೂಜಿಸುವುದೇ ಪುಣ್ಯ ಕಾಲ. ವರಮಹಾಲಕ್ಷ್ಮೀಯನ್ನು ಮನೆತನದ ದಾರಿದ್ರ್ಯ ನಾಶ ಮಾಡುವುದಕ್ಕಾಗಿ, ಆಯುರಾರೋಗ್ಯ ಲಾಭಕ್ಕಾಗಿ ಪೂಜೆ ಮಾಡಲಾಗುತ್ತದೆ.

ಲಕ್ಷ್ಮೀ ಅವತಾರ ಹೇಗೆ?
ಎಲ್ಲರಿಗೂ ಸಮುದ್ರ ಮಥನ ಕಥೆ ಗೊತ್ತಿದೆ. ದೇವಾಸುರರು ಸಮುದ್ರ ಮಥನ ನೆಸುತ್ತಿದ್ದಾಗ ಕ್ಷೀರ ಸಮುದ್ರದಿಂದ 12 ವಸ್ತುಗಳು ಹುಟ್ಟಿ ಬಂದವು. ಮೊದಲಿಗೆ ಹಾಲಾಹಲ ನಂತರ ಉಚ್ಚೈಶ್ರವಸ್ಸೆಂಬ ಕುದುರೆ, ನೆನಸಿದ್ದನ್ನು ಕೊಡುವ ಕಲ್ಪವೃಕ್ಷ, ಕಾಮಧೇನು ಮೊದಲಾದ ದಿದ್ಯವಸ್ತುಗಳು ಹುಟ್ಟಿದವು. ಹಾಗೆಯೇ ಸಮುದ್ರವನ್ನು ಕಡೆಯುತ್ತಿರುವಾಗ ಅಪ್ಸರೆಯರು ಹುಟ್ಟಿದರು.

ಆನಂತರ ಒಂದು ಆಶ್ಚರ್ಯಕರವಾದ ದೃಶ್ಯವು ಕಾಣಿಸಿತು. ಕ್ಷೀರಸಾಗರದ ತೆರೆಗಳ ನಡುವೆ ದಿವ್ಯರೂಪವನ್ನು ಧರಿಸಿದ ಒಬ್ಬ ದೇವತೆ ಕಂಗೊಳಿಸಿದಳು. ಅವಳು ಅರಳಿದ ಕಮಲದ ಮೇಲೆ ನಿಂತಿದ್ದಳು. ಕೊರಳಲ್ಲಿ ಕಲಮಲದ ಮಾಲೆಯನ್ನು ಧರಿಸಿ, ಕೈಯಲ್ಲಿ ಕಮಲವನ್ನು ಹಿಡಿದಿದ್ದಳು. ಅವಳ ದಿವ್ಯ ಸ್ವರೂಪವನ್ನು ನೋಡಿ ದೇವತೆಗಳೇ ಬೆಚ್ಚಿ ಬಿದ್ದರು. ಮುಗಳ್ನಗೆ ಬೀರುತ್ತ ನಿಂತಿದ್ದ ಆಕೆ ಸಾಕ್ಷಾತ್‌ ಲಕ್ಷ್ಮೀ ದೇವಿಯಾಗಿದ್ದಳು. ಋಷಿಗಳು ಶ್ರೀ ಸೂಕ್ತವನ್ನು ಪಠಿಸತೊಡಗಿದರು. ಗಂಧರ್ವರು ಹಾಡಿದರು, ಅಪ್ಸರೆಯರು ನೃತ್ಯ ಮಾಡಿದರು. ಎಲ್ಲೆಡೆ ವಿಚಿತ್ರವಾದ ಬೆಳಕು ಹರಡಿತ್ತು. ಸಮುದ್ರ ರಾಜನು ತನ್ನ ನಿಜರೂಪವನ್ನು ಧರಿಸಿ ಬಂದು, ಲಕ್ಷ್ಮೀಯು ತನ್ನ ಮಗಳೆಂದು ಆದರಿಸಿದನು. ಅವಳಿಗೆ ಉತ್ತಮವಾದ ವಸ್ತ್ರಗಳನ್ನು, ಆಭರಣಗಳನ್ನು ನೀಡಿದನು. ಅವಳ ಕೈಗೆ ಒಂದು ಪದ್ಮಮಾಲೆಯನ್ನಿತ್ತನು. ಆಗ ಬ್ರಹ್ಮನ ಸೂಚನೆಯಂತೆ ವಿಷ್ಣುವು ಲಕ್ಷ್ಮೀಯನ್ನು ವರಿಸುತ್ತಾನೆ. ಲಕ್ಷ್ಮೀಯು ವಿಷ್ಣುವಿನ ವಕ್ಷಸ್ಥಳದಲ್ಲಿ ನೆಲೆಸುತ್ತಾಳೆ.

ವಿಷ್ಣು ಪುರಾಣ ಮೊದಲಾದ ಗ್ರಂಥಗಳಲ್ಲಿ ಲಕ್ಷ್ಮೀಯ ಮಹಿಮೆಯನ್ನು ಬಹಳ ಚೆನ್ನಾಗಿ ವರ್ಣಿಸಲಾಗಿದೆ. ವಿಷ್ಣುವಿನ ಪತ್ನಿಯಾದ ಅವಳು ವೈಷ್ಣವೀ ಶಕ್ತಿಯೆನಿಸಿದ್ದಾಳೆ. ಜಗತ್ತಿನಲ್ಲಿರುವ ಶ್ರೇಷ್ಠವಾದ ವಸ್ತುಗಳೂ, ಗುಣಗಳೂ ಲಕ್ಷ್ಮೀನಾರಾಯಣರ ನಿವಾಸಸ್ಥಾನಗಳೆಂದು ಹೇಳಿದ್ದಾರೆ.

ದೇವೇಂದ್ರನು ಅವತಾರವೆತ್ತಿದ ಲಕ್ಷ್ಮೀಯನ್ನು ಹೀಗೆ ಸ್ತುತಿಸಿದ್ದಾನೆ;
ಯಾ ದೇವೀ ಸರ್ವಭೂತೇಶು ಮಾತೃರೂಪೇಣ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಕ್ತಿರೂಪೇನ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಾಂತಿರೂಪೇನ ಸಂಸ್ಥಿತಃ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

ಇದರ ಅರ್ಥ “ಓ ದೇವಿ, ಸರ್ವಲೋಕಗಳಿಗೂ ಜನನಿಯಾದ ನಿನಗೆ ನಮಸ್ಕಾರ. ಸಕಲ ಕಾರ್ಯಗಳೂ ಸಿದ್ಧಿಸುವುದಕ್ಕೆ ನೀನು ಕಾರಣಳಾಗಿದ್ದೀಯೇ. ನೀನು ಲೋಕಪಾವನಿ. ಐಶ್ವರ್ಯ ಮತ್ತು ಬುದ್ಧಿಶಕ್ತಿ ನಿನ್ನಿಂದ ದೊರೆಯುತ್ತವೆ. ಸಕಲ ವಿದ್ಯಾಸ್ವರೂಪಿಣಿಯಾದ ಸರಸ್ವತಿಯೂ ನೀನೇ, ಮುಕ್ತಿದಾಯಿನಿಯಾದ ಆತ್ಮವಿದ್ಯೆ ನೀನು, ಹೇ ಮಹಾದೇವಿ, ಮಡದಿ, ಮಕ್ಕಳು, ಮನೆ, ಮಿತ್ರ, ಧನ, ಧಾನ್ಯಗಳೆಲ್ಲವೂ ನಿನ್ನ ನೋಟದಿಂದಲೇ ಭಕ್ತರಿಗೆ ಲಭಿಸುತ್ತವೆ ಎಂದು ಪ್ರಾರ್ಥಿಸುತ್ತಾನೆ. ಅಂತೆಯೇ ನಾವೆಲ್ಲರೂ ದೇವಿಯನ್ನು ಪ್ರಾರ್ಥಿಸಿದರೆ, ಆಕೆ ಎಲ್ಲರಿಗೂ ಎಲ್ಲವನ್ನೂ ಕರುಣಿಸುತ್ತಾಳೆ. ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಲಕ್ಷ್ಮೀಯನ್ನು ವರಮಹಾಲಕ್ಷ್ಮೀ ಎಂದೇ ಕರೆಯಲಾಗುತ್ತದೆ.

ಲಕ್ಷ್ಮೀಯ ಮಹಿಮೆ ವಿಸ್ತಾರವಾದುದು. ವಾಣಿ ಅಂದರೆ ಮಾತು, ನೀತಿ, ಬುದ್ಧಿ, ಸಂತುಷ್ಟಿ, ಸಾಮಗಾನ, ಸ್ವಾಹಾ, ಕಾಂತಿ, ಐಶ್ವರ್ಯ, ಶಕ್ತಿ, ಬಳ್ಳಿ, ನದಿ, ಗೋವು- ಇವೆಲ್ಲವೂ ಲಕ್ಷ್ಮೀಯ ಅಂಶಗಳೆಂದು ಪರಿಗಣಿಸಲಾಗಿದೆ. ಜಗತ್ತಿನಲ್ಲಿ ಇರುವ ಎಲ್ಲ ಸ್ತ್ರೀಯರೂ ಲಕ್ಷ್ಮೀ ಸ್ವರೂಪರೆಂದು ಪುರಾಣಗಳು ಹೇಳಿವೆ. ಇಂತಹ ಲಕ್ಷ್ಮೀಯನ್ನು ಹೆಂಗಳೆಯರು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮ-ಸಡಗರದಿಂದ ಪೂಜೆಸುವ ಹಬ್ಬವೇ ಈ ವರಮಹಾಲಕ್ಷ್ಮೀ ಹಬ್ಬ.

ವ್ರತಾಚರಣೆ ಏಕೆ?
ನಾವು ಯಾವುದೇ ವ್ರತವನ್ನು ಮಾಡುವುದಾದರೂ ಏಕೆ ಈ ವ್ರತ ಮಾಡಬೇಕು, ಇದರ ಹಿಂದಿರುವ ಉದ್ದೇಶಗಳೇನು, ಆಚರಣೆಯ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿ ವ್ರತ ಕಥೆ ಬಹಳ ಮುಖ್ಯ. ಈ ರೀತಿ ಸರಿಯಾಗಿ ತಿಳಿದುಕೊಂಡು ವ್ರತ ಮಾಡುವುದರಿಂದ ಭಕ್ತಿ-ಭಾವನೆಗಳು ಹೆಚ್ಚಾಗುತ್ತವೆ. ಇಲ್ಲದಿದ್ದರೆ ಯಾಂತ್ರಿಕವಾಗಿ ನಡೆಸಿದಂತಾಗುತ್ತದೆ.

Varamahalakshmi Festival

ವರಮಹಾಲಕ್ಷ್ಮೀ ವ್ರತ ಕಥೆಯ ಪ್ರಕಾರ ಕೈಲಾಸದಲ್ಲಿ ಶಿವ-ಪಾರ್ವತಿಯರು ಒಮ್ಮೆ ಹೀಗೆ ಕುಳಿತು ಮಾತನಾಡುತ್ತಿದ್ದಾಗ ಪಾರ್ವತಿ ಹೇಳುತ್ತಾಳೆ, ʼʼದಾನವರು ತಪಸ್ಸು ಮಾಡಿದರೂ ನೀನು ಅವರು ಕೇಳಿದ ವರವನ್ನು ಕೊಡುತ್ತೀಯ, ಪಾಪಾ ಜನಸಾಮಾನ್ಯರು ಸಮಯ ಸಿಕ್ಕಾಗಲೆಲ್ಲಾ ನಿನ್ನ ಸ್ಮರಣೆ ಮಾಡುತ್ತಾರೆ. ಆದರೆ ಅವರ ದಾರಿದ್ರ್ಯ ಹರಣ ಹೇಗೆ, ಅದಕ್ಕೆ ಅವರು ಯಾವ ವ್ರತ-ಪೂಜೆ ಮಾಡಬೇಕುʼʼ ಎಂದು ಕೇಳುತ್ತಾಳೆ.

ಅಲ್ಲದೆ, ಇದರ ತೀರ್ಮಾನಕ್ಕೆ ನಾನೇ ಕೈಲಾಸದಲ್ಲಿ ದೇವಾನು ದೇವತೆಗಳ ಹಾಗೂ ಋಷಿಮುನಿಗಳ ಸಭೆ ಕರೆಯುವುದಾಗಿ ಹೇಳುತ್ತಾಳೆ. ಇದಕ್ಕೆ ಶಿವನು ಒಪ್ಪಿಕೊಳ್ಳುತ್ತಾನೆ. ನಿಗದಿತ ದಿನದಂದು ಸಭೆಯು ನಡೆಯುತ್ತದೆ. ಆಗ  ಪಾರ್ವತಿ ಶಿವನ ಮುಂದೆ ತನ್ನ ಈ ಪ್ರಶ್ನೆಗೆ ಉತ್ತರ ನೀಡುವಂತೆ ಕೋರುತ್ತಾಳೆ. ಆಗ ಶಿವನು “ಶ್ರಾವಣ ಮಾಸದ ಶುಕ್ರವಾರದಂದು ವರಮಹಾಲಕ್ಷ್ಮೀಯ ವ್ರತ ಮಾಡಿದರೆ ಜನಸಾಮಾನ್ಯರ ದಾರಿದ್ರ್ಯಗಳೆಲ್ಲಾ ದೂರವಾಗುತ್ತವೆʼʼ ಎಂದು ಹೇಳುತ್ತಾನೆ.

ಆಗ ಸುಮ್ಮನಾಗದ ಪಾರ್ವತಿ ಯಾಕೆ ಈ ವ್ರತ ಮಾಡಬೇಕು, ಇದಕ್ಕಿರುವ ಮಹತ್ವವೇನು ಎಂದು ತಿಳಿಸುವಂತೆ ಶಿವನನ್ನು ಪಟ್ಟು ಹಿಡಿಯುತ್ತಾಳೆ. ಆಗ ಶಿವನು ವರಮಹಾಲಕ್ಷ್ಮೀಯ ವ್ರತ ಕಥೆಯನ್ನು ಹೇಳುತ್ತಾನೆ. ಇದರ ಸಂಕ್ಷಿಪ್ತ ರೂಪ ಹಿಂತಿದೆ;

ವಿಗರ್ಭ ದೇಶಕ್ಕೆ ರಾಜಧಾನಿಯಾದ ಕುಂಡಿನ ನಗರದಲ್ಲಿ ಚಾರುಮತಿ ಎಂಬ ವಿವಾಹಿತ ಮಹಿಳೆ ವಾಸವಾಗಿದ್ದಳು. ಈಕೆ ಬಹಳ ದಾರಿದ್ರ್ಯವನ್ನು ಅನುಭವಿಸುತ್ತಿದ್ದರೂ ಪತಿ ಸೇವೆ ಮುಖ್ಯವೆಂದು ಸದಾ ಸಂತೋಷ ಚಿತ್ತಾಳಾಗಿ ಪತಿಯ ಮನಸ್ಸನ್ನು ನೋಯಿಸದೆ ಇದ್ದಳು. ಇವಳನ್ನು ಮೆಚ್ಚಿದ ಮಹಾಲಕ್ಷ್ಮೀಯು ಒಂದು ದಿನ ಚಾರುಮತಿ ಮಲಗಿದ್ದಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಹೀಗೆ ಹೇಳುತ್ತಾಳೆ; “ಪತಿ ವ್ರತೆಯಾದ ಚಾರುಮಾತಿಯೇ ನಿನ್ನ ಗುಣಶಿಲಾಗಳಿಗೆ ಮೆಚ್ಚಿ ನಿನ್ನ ಪೂರ್ಣ ಪುಣ್ಯ ಅನುಸರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮೀ ನಾನು. ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಅದರಿಂದ ನಿನ್ನ ದಾರಿದ್ರ್ಯ ನಾಶವಾಗಿ ಅಷ್ಟ ಐಶ್ವರ್ಯವು ಪ್ರಾಪ್ತಿಯಾಗುತ್ತದೆ. ಯಾರು ನನ್ನನ್ನು ಶ್ರಾವಣ ಮಾಸದ ಎರಡೇ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಗಿ ನನ್ನನ್ನು ಪೂಜೆ ಮಾಡಿದರೆ ನಾನು ಅವರಿಗೆ ಸಕಲ ಭೊಗ ಭಾಗ್ಯಗಳನ್ನು ಕೊಡುತ್ತೇನೆ. ನೀನು ಕೂಡ ಈ ವ್ರತವನ್ನು ಮಾಡಿ ಧನ್ಯಳಾಗುʼʼ ಎಂದು ಹೇಳುತ್ತಾಳೆ.

ಆಗ ಚಾರುಮತಿ “ನಿನ್ನನ್ನು ಪೂಜಿಸುವುದು ಹೇಗೆ, ನನ್ನಲ್ಲಿ ನಿನ್ನ ಅಲಂಕಾರ ಮಾಡಲು ಆಭರಣಗಳಿಲ್ಲವಲ್ಲʼʼ ಎನ್ನುತ್ತಾಳೆ. ಆಕೆಯ ಕಷ್ಟ ಅರಿತಿದ್ದ ಲಕ್ಷ್ಮೀ “ಸಾಮಾನ್ಯ ಮಹಿಳೆಯರ ಆಭರಣವನ್ನೇ ಅಂದರೆ ಅರಿಶಿನ ಕುಂಕುಮ, ಕಣ, ಬಳೆ ಇತ್ಯಾದಿಗಳನ್ನೇ ನೀನು ಅರ್ಪಿಸಿ ಪೂಜೆ ಮಾಡಿದರೂ ಸಾಕುʼʼ ಎಂದು ಹೇಳಿ ಮಹಾಲಕ್ಷ್ಮೀಯು ಕಣ್ಮರೆಯಾಗುತ್ತಾಳೆ.

ಬೆಳಗಾದ ಮೇಲೆ ಚಾರುಮತಿಯು ಮನೆಯವರಿಗೆ ಸ್ವಪ್ನದಲ್ಲಿ ಲಕ್ಷ್ಮೀ ಬಂದಿದ್ದನ್ನು, ವ್ರತ ಮಾಡುವಂತೆ ತಿಳಿಸಿದ್ದನ್ನು ಹೇಳುತ್ತಾಳೆ. ಇದನ್ನು ತಿಳಿದ ಮನೆಯವರು ಸಹ ಆ ಮಹಾಲಕ್ಷ್ಮೀ ನಿನ್ನ ಕನಸಿನಲ್ಲಿ ಬಂದು ಈ ವಿಷಯವನ್ನು ತಿಳಿಸಿರುವಾಗ ನೀನು ಖಂಡಿತ ಈ ವ್ರತವನ್ನು ಮಾಡಲೇಬೇಕು ಎಂದು ಹೇಳಿ, ಆಕೆಯ ಕೈಯಿಂದ ಈ ವ್ರತವನ್ನು ಮಾಡಿಸುತ್ತಾರೆ.

ಚಾರುಮತಿಯು ಭಕ್ತಿಯಿಂದ ಶ್ರದ್ಧೆಯಿಂದ ನಿಯಮದಂತೆ ವ್ರತವನ್ನು ಆಚರಿಸಿದಳು. ಆಕೆಗೆ ವರಮಹಾಲಕ್ಷ್ಮೀ ಕೃಪಾ ಕಟಾಕ್ಷದಿಂದ ಅಷ್ಟ ಐಶ್ವರ್ಯ ಪ್ರಾಪ್ತಿಯಾದವು. ಈ ವ್ರತಾಚರಣೆ ಮಾಡಿದರೆ… ಚಾರುಮತಿಯ ಕಥೆ ಕೇಳಿದರೆ ಅಂತವರ ಕಷ್ಟ ಕಾರ್ಪಣ್ಯಗಳನ್ನು ಲಕ್ಷ್ಮೀಯೇ ಕಳೆಯುತ್ತಾಳೆ ಎಂದು ಈಶ್ವರ ಪಾರ್ವತಿಗೆ ಹೇಳುತ್ತಾನೆ. ಹೀಗೆ ನಾವು ಕೂಡ ಭಕ್ತಿ ಭಾವನೆಯಿಂದ ಇದ್ದಿದ್ದನ್ನೇ ದೇವರಿಗೆ ಅರ್ಪಿಸಿ, ಈ ವ್ರತ ಮಾಡಿದರೆ ನಮ್ಮ ಕಷ್ಟಕಾರ್ಪಣ್ಯಗಳು ಕೂಡ ದೂರವಾಗುತ್ತವೆ ಎಂದು ಈ ವ್ರತ ಕಥೆ ಹೇಳುತ್ತದೆ.

ವ್ರತಾಚರಣೆ ಹೇಗೆ?
ವ್ರತ ಮಾಡುವವರು ವ್ರತದ ದಿನದಂದು ಬೆಳಗ್ಗೆ ಎದ್ದು ಮಂಗಳಸ್ನಾನ (ಎಣ್ಣೆ ನೀರು) ಮಾಡಿ, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆಕಂದು, ಮಾವಿನ ಎಲೆಗಳಿಂದ ಸಿಂಗರಿಸಬೇಕು. ಅಷ್ಟದಳ ಪದ್ಮ ರಂಗೋಲಿ ಹಾಕಿ, ಅದರ ಮೇಲೆ ಅಕ್ಕಿ ತುಂಬಿದ ತಟ್ಟೆಯನ್ನು ಇಡಬೇಕು. ಅದರ ಮೇಲೆ ಒಂದು ಕಳಶವನ್ನಿಟ್ಟು, ಅದರಲ್ಲಿ ಸ್ವಲ್ಪ ನೀರು, ಆಲದ ಕಡ್ಡಿಯನ್ನಿಟ್ಟು, ಏಲಕ್ಕಿ, ಪಚ್ಚ ಕರ್ಪೂರ, ಅರಿಶಿನ ಕೊಂಬು, ನಾಣ್ಯವನ್ನು ಹಾಕಬೇಕು. ನಂತರ ಕಳಶದ ಮೇಲೆ ಅರಿಶಿನ ಹಚ್ಚಿದ ತೆಂಗಿನ ಕಾಯಿ ಇಟ್ಟು, ಕಳಶವನ್ನು ಮಾವಿನ ಎಲೆ, ಕಮಲದ ಹೂವುಗಳಿಂದ ಅಲಂಕರಿಸಿ, ಅರಿಶಿನ-ಕುಂಕುಮ ಅರ್ಪಿಸಿ, ವಿಧಿವತ್‌ ಶೋಡಶ (16) ಪೂಜಾದಿಗಳಿಂದ ಪೂಜಿಸಿ, ಗವ್ಯ ಉತ್ಪನ್ನಗಳಾದ ಹಾಲು, ಮೊಸರು, ತಪ್ಪುಗಳಿಂದ ಮತ್ತು ಬೆಲ್ಲದಿಂದ ತಯಾರಿಸಿದ ಪಂಚಭಕ್ಷ್ಯಗಳನ್ನು (ನೈವೇದ್ಯಕ್ಕೆ ಬೆಲ್ಲದಿಂದ 12 ವಿಧದ ಭಕ್ಷ್ಯ ಮಾಡಬೇಕೆಂದು ಪುರಾಣದಲ್ಲಿ ಹೇಳಲಾಗಿದೆ) ನೈವೇದ್ಯ ಮಾಡಬೇಕು.

Varamahalakshmi Festival

ಲಕ್ಷ್ಮೀ ಪೂಜೆಗೆ ಅತ್ಯಂತ ಶ್ರೇಷ್ಠ ಎಂದರೆ ಕಮಲದ ಹೂವು. ಇದನ್ನು ಪೂಜೆ ಮಾಡುವಾಗ ಅರ್ಪಿಸುವುದು ಬಹಳ ಮುಖ್ಯ. ಅಲಂಕಾರದ ಸಂದರ್ಭದಲ್ಲಿ 12 ಗಂಟುಗಳುಳ್ಳ ದೋರ (ದಾರ) ಅರಿಶಿನ ದಾರವನ್ನು ಗೆಜ್ಜೆ ವಸ್ತ್ರದೊಂದಿಗೆ ದೇವಿಗೆ ಅಲಂಕರಿಸಿ, ಪೂಜೆಯ ನಂತರ ಆ ದಾರವನ್ನು ಪ್ರಸಾದದ ರೂಪದಲ್ಲಿ ಬಲಗೈಗೆ ಕಟ್ಟಿಕೊಳ್ಳಬೇಕು. ಈ ಸಂದರ್ಭದಲ್ಲಿ ವ್ರತಕಥೆಯನ್ನು ಓದಬೇಕು. ಪೂಜೆ ಮುಗಿದ ಮೇಲೆ ದೇವಿಯ ವಿಸರ್ಜನೆ ಕೂಡ ಬಹಳ ಮುಖ್ಯ. ವಿಸರ್ಜನೆಯಾದ ನಂತರ ಕಳಶದಲ್ಲಿರುವ ನೀರನ್ನು ಹೂವಿನ ಗಿಡಗಳಿಗೆ ಅಥವಾ ಮರಗಳ ಬುಡಕ್ಕೇ ಹಾಕಬೇಕು. ಕಳಶದಲ್ಲಿಟ್ಟ ತೆಂಗಿನ ಕಾಯಿಯಿಂದ ಸಿಹಿ ತಿನಿಸು ಸಿದ್ಧಪಡಿಸಿ, ಮನೆಯವರೆಲ್ಲರೂ ತಿನ್ನಬೇಕು.

ಯಾರು ಶ್ರದ್ಧಾ ಭಕ್ತಿಗಳಿಂದ ಲಕ್ಷ್ಮೀಯನ್ನು ಹೀಗೆ ಪೂಜಿಸುತ್ತಾರೋ, ಅವರಿಗೆ ಲಕ್ಷ್ಮೀ ದೇವಿಯು ಆಯುಷ್ಯ ಆರೋಗ್ಯ, ಐಶ್ವರ್ಯ ಭಾಗ್ಯ, ಸೌಭಾಗ್ಯಗಳನ್ನು ಅನುಗ್ರಹಿಸುತ್ತಾಳೆ. ಎಲ್ಲರಿಗೂ ವರಮಹಾಲಕ್ಷ್ಮೀಯ ಕೃಪ ಕಟಾಕ್ಷ ದೊರೆಯಲಿ. ಹಬ್ಬದ ಶುಭಾಶಯಗಳು.

ಇದನ್ನೂ ಓದಿ| Varamahalakshmi Festival | ಆಗಸ್ಟ್‌ 5ರ ಶುಕ್ರವಾರದಂದೇ ವ್ರತಾಚರಣೆ; ಗೊಂದಲ ಬೇಡ ಎಂದರು ರಾಜಗುರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿವಮೊಗ್ಗ

Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

Shivamogga News: ಸೊರಬ ತಾಲೂಕಿನ ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಆಗೀ ಹುಣ್ಣಿಮೆಯ ಪ್ರಯುಕ್ತ ಗುರುವಾರ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು.

VISTARANEWS.COM


on

Agee hunnime Thousands of devotees have darshan of Shri Renukamba Devi of Chandragutti
Koo

ಸೊರಬ: ತಾಲೂಕಿನ ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ (Chandragutti Shri Renukamba Devi temple) ಆಗೀ ಹುಣ್ಣಿಮೆಯ ಪ್ರಯುಕ್ತ ಗುರುವಾರ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ (Shivamogga News) ಸಲ್ಲಿಸಿದರು.

ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಹರಿಹರ, ಶಿಕಾರಿಪುರ, ಹಾನಗಲ್, ವಿಜಯಪುರ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ರೇಣುಕಾದೇವಿಯ ದರ್ಶನ ಪಡೆದು ಉಧೋ ಉಧೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

ಹುಣ್ಣಿಮೆ ಹಿನ್ನೆಲೆ ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಿಯ ಹೆಸರಿನಲ್ಲಿ ಭಕ್ತರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿದರು. ಧಾರ್ಮಿಕ ಸೇವೆ, ಹರಕೆ ಸಲ್ಲಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರು ಕುಟುಂಬ ಸಮೇತರಾಗಿ ಸಹ ಭೋಜನ ಮಾಡುವ ದೃಶ್ಯವೂ ಕಂಡುಬಂದಿತು.

ಇದನ್ನೂ ಓದಿ: Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

ಪ್ರತಿ ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಶೀ ರೇಣುಕಾಂಬ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಆದರೆ ರಸ್ತೆ ಕಿರಿದಾದ ಕಾರಣ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸುಮಾರು 1 ಗಂಟೆ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಸ್ಥಳೀಯ ಜನಪ್ರತಿನಿಧಿಗಳು ಚಂದ್ರಗುತ್ತಿ ಮುಖ್ಯ ರಸ್ತೆಯನ್ನು ಅಗಲಿಕರಿಸಿ ವ್ಯವಸ್ಥಿತವಾದ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Continue Reading

ಯಾದಗಿರಿ

Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

Yadgiri News: ಯಾದಗಿರಿಗೆ ಸಮೀಪದ ಆಂಧ್ರಪ್ರದೇಶದ ಶ್ರೀಶೈಲಂನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ 602ನೇ ಜಯಂತಿಯನ್ನು ಶ್ರದ್ದಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

VISTARANEWS.COM


on

Shivasharane Hemaraddi Mallamma Jayanti celebration in Srisailam
Koo

ಯಾದಗಿರಿ: ಇಲ್ಲಿಗೆ ಸಮೀಪದ ಆಂಧ್ರಪ್ರದೇಶದ ಶ್ರೀಶೈಲಂನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ 602ನೇ ಜಯಂತಿಯನ್ನು ಶ್ರದ್ದಾ ಭಕ್ತಿ ಹಾಗೂ ಸಂಭ್ರಮದಿಂದ (Yadgiri News) ಆಚರಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನ ಆಡಳಿತ ಮಂಡಳಿಯ ಟ್ರಸ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿ ಪೆದ್ದುರಾಜು ಮಾತನಾಡಿ, 14ನೇ ಶತಮಾನದಲ್ಲಿ ಮಲ್ಲಮ್ಮ ತನ್ನ ಕೌಟುಂಬಿಕ ಜೀವನದ ಜತೆಗೆ ಆಧ್ಯಾತ್ಮಿಕ ಸಾಧನೆ ಮೂಲಕ ಪರಶಿವ ಮಲ್ಲಿಕಾರ್ಜುನನ ಕೃಪೆಗೆ ಪಾತ್ರಳಾಗಿ ಮನುಕುಲಕ್ಕೆ ಮಾನವೀಯ ಸಂದೇಶಗಳನ್ನು ನೀಡಿದ್ದಾಳೆ ಎಂದು ತಿಳಿಸಿದರು.

ಇದನ್ನೂ ಓದಿ: Aadhaar Card Fact Check: 10 ವರ್ಷಗಳ ಹಿಂದಿನ ಆಧಾರ್ ಕಾರ್ಡ್‌ ಜೂ. 14ರ ಬಳಿಕ ರದ್ದಾಗುತ್ತದೆಯೆ?

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಕರ್ಮಭೂಮಿಯಾದ ಶ್ರೀಶೈಲಂನಲ್ಲಿ ಕರ್ನಾಟಕದ ವೀರಶೈವ ಲಿಂಗಾಯತ ರಡ್ಡಿ ಸಮಾಜದವರು ಭವ್ಯ ಮಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡಿದ್ದಲ್ಲದೇ ಕ್ಷೇತ್ರದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿಕೊಂಡು ಬಂದಿದ್ದಾರೆ, ಅವರ ಶ್ರಮದಿಂದ ಆಂದ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಭಕ್ತರ ಮದ್ಯೆ ಸಾಮರಸ್ಯ ವಾತಾವರಣ ಮೂಡಿದೆ ಎಂದು ಅಭಿಪ್ರಾಯಪಟ್ಟರು.

ದೇವಸ್ಥಾನಕ್ಕೆ ಆಗಮಿಸುವ ಸಕಲ ಭಕ್ತಾದಿಗಳಿಗೆ ಟ್ರಸ್ಟ್ ವತಿಯಿಂದ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಮುಖ್ಯ ಅರ್ಚಕ ಗುರುಪಾದಯ್ಯಸ್ವಾಮಿ ಮಾತನಾಡಿ, ಹಲವಾರು ವರ್ಷಗಳಿಂದ ಹೇಮರಡ್ಡಿ ಮಲ್ಲಮ್ಮ ಭಕ್ತರ ಸಹಕಾರದಿಂದ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಅವರ ಸಾಧನೆಯನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ಇದಕ್ಕೂ ಮೊದಲು ದೇವಸ್ಥಾನದಲ್ಲಿ ಮಲ್ಲಮ್ಮನ ಮೂರ್ತಿಗೆ ಪಂಚಾಮೃತ ಅಭಿಷೇಕ, ಮುತೈದೆಯರಿಗೆ ಉಡಿ ತುಂಬುವ, ತೊಟ್ಟಿಲ ಉತ್ಸವ ಕಾರ್ಯಕ್ರಮ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಇದನ್ನೂ ಓದಿ: Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ 54 ಹುದ್ದೆ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಸಮಾರಂಭದಲ್ಲಿ ಉಪ ಕಾರ್ಯನಿರ್ವಾಹಕ ಅಧಿಕಾರಿ ಹರಿದಾಸರು, ಶಂಕ್ರಯ್ಯಸ್ವಾಮಿ, ಅರ್ಚಕರಾದ ಓಂಕಾರಯ್ಯಸ್ವಾಮಿ, ಮಲ್ಲಮ್ಮ ತಾಳಿಕೋಟಿ, ವೆಂಕಟರಡ್ಡಿ ಮಾಲಿ ಪಾಟೀಲ್ ಹತ್ತಿಕುಣಿ, ಗದಗ ಜಿಲ್ಲೆಯ ನ್ಯಾಯವಾದಿ ವಿರೇಂದ್ರ ಶಿರೋಳ, ಶಿವಪ್ಪಗೌಡ, ಸಿದ್ದಣ್ಣ ಸೇರಿದಂತೆ ಕನ್ನಡಿಗ ಭಕ್ತರು ಹಾಗೂ ಇತರರು ಉಪಸ್ಥಿತರಿದ್ದರು.

Continue Reading

ಧಾರ್ಮಿಕ

Remedies For SadeSati: ಶನಿಯ ವಕ್ರದೃಷ್ಟಿ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

ಶನಿಯ ವಕ್ರದೃಷ್ಟಿಯ ಪರಿಣಾಮಗಳ ಬಗ್ಗೆ ಹೆಚ್ಚಿನವರು ಕೇಳಿರುತ್ತಾರೆ, ಇನ್ನು ಕೆಲವರು ಅನುಭವಿಸಿರುತ್ತಾರೆ. ಇದರಿಂದ ಪಾರಾಗಲು ಹಲವಾರು ಪರಿಹಾರ ಮಾರ್ಗಗಳನ್ನು ಹೇಳಲಾಗಿದೆ. ಜೂನ್ 6ರಂದು ಶನಿ ಜಯಂತಿ. ಈ ದಿನ ಕೆಲವು ಅನುಷ್ಠಾನಗಳನ್ನು ಮಾಡುವುದರಿಂದ ಶನಿಯ ವಕ್ರ ದೃಷ್ಟಿಯಿಂದ ಪಾರಾಗಲು (Remedies For SadeSati) ಸಾಧ್ಯವಿದೆ .

VISTARANEWS.COM


on

By

Remedies For SadeSati
Koo

ಜೀವನದಲ್ಲಿ ಏನಾದರೂ ಕೆಟ್ಟದಾದರೆ ಶನಿಯ (shani) ವಕ್ರ ದೃಷ್ಟಿ ಅಥವಾ ಸಾಡೇ ಸಾಥ್ ಪರಿಣಾಮ (Remedies For SadeSati) ಎನ್ನುವ ಅನುಮಾನ ಕೆಲವರನ್ನು ಕಾಡುತ್ತದೆ. ನಾವು ತಿಳಿದೋ ತಿಳಿಯದೆಯೋ ಮಾಡುವ ಕರ್ಮಕ್ಕೆ ತಕ್ಕ ಪ್ರತಿಫಲ ಕೊಡುವ ಶನಿ ದೇವನ ಬಗ್ಗೆ ಭಕ್ತಿಗಿಂತ ಭಯ ಪಡುವವರೇ ಅಧಿಕ. ಆದರೆ ಶನಿ ದೇವನೂ ಶ್ರದ್ಧಾ ಭಕ್ತಿಗೆ ಮೆಚ್ಚುತ್ತಾನೆ ಹಾಗೂ ಭಕ್ತರ ಅಭೀಷ್ಟೆಗಳನ್ನು ಈಡೇರಿಸುತ್ತಾನೆ.

ಶನಿಯ ವಕ್ರ ದೃಷ್ಟಿ ನಮ್ಮ ಮೇಲೆ ಬಿದ್ದರೆ ಅದರಿಂದ ಪಾರಾಗಲು ಕೆಲವೊಂದು ಪರಿಹಾರ ಕ್ರಮಗಳನ್ನು ಪುರಾಣಗಳಲ್ಲಿ ಹೇಳಲಾಗಿದೆ. ಜೂನ್ 6ರಂದು ಶನಿ ಜಯಂತಿ (Shani Jayanti). ಈ ದಿನ ಇವುಗಳನ್ನು ಅನುಷ್ಠಾನಗೊಳಿಸಿದರೆ ಕಷ್ಟಗಳಿಂದ ಪಾರಾಗಬಹುದು.

1. ಬೆನ್ನು ನೋವು ಅಥವಾ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಶನಿ ಜಯಂತಿಯ ದಿನದಂದು ಕಪ್ಪು ಉಂಡೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ದೇವಸ್ಥಾನದ ಮೂಲೆಯಲ್ಲಿ ಇರಿಸಿ. ಶನಿದೇವನ ಮಂತ್ರವಾದ “ಓಂ ಶ್ರೀಂ ಹ್ರೀಂ ಶಾಂ ಶನೈಶ್ಚರಾಯ ನಮಃ” ಎಂಬುದಾಗಿ 21 ಬಾರಿ ಜಪಿಸಿ.

2. ಮಕ್ಕಲಾಗದೇ ಇದ್ದರೆ ದಂಪತಿ ಶನಿ ಜಯಂತಿಯ ದಿನದಂದು ಮನೆಯ ಚಾವಣಿ, ಬಾಲ್ಕನಿ ಅಥವಾ ಮನೆಯ ಹೊರಗೆ ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಇರಿಸಿ. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಆಹಾರ ಮತ್ತು ನೀರು ಪಕ್ಷಿಗಳಿಗೆ ಇಡಬೇಕೇ ಹೊರತು ಪಾರಿವಾಳಗಳಿಗೆ ಅಲ್ಲ. ಇದರೊಂದಿಗೆ 51 ಬಾರಿ ಓಂ ಶ್ರೀಂ ಹ್ರೀಂ ಶಾಂ ಶನೈಶ್ಚರಾಯ ನಮಃ ಎಂದು ಜಪಿಸಿ.

3. ಮನೆಯ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸಲು ಬಯಸಿದರೆ ಶನಿ ಜಯಂತಿಯ ದಿನದಂದು ದೇವಸ್ಥಾನದಲ್ಲಿ ಕಪ್ಪು ಬಟ್ಟೆಯನ್ನು ಅರ್ಪಿಸಿ. 11 ಬಾರಿ ಶಂ ಹ್ರೀಂ ಶಾಂ ಶನೈಶ್ಚರಾಯ ನಮಃ.ಮಂತ್ರವನ್ನು ಜಪಿಸಿ.

4. ಕುಟುಂಬದ ಸದಸ್ಯರೊಂದಿಗೆ ಸಮಸ್ಯೆಗಳಿದ್ದರೆ ಶನಿ ಜಯಂತಿಯ ದಿನದಂದು ಶನಿ ದೇವರನ್ನು ಧ್ಯಾನಿಸುವಾಗ ದೇವಸ್ಥಾನದಲ್ಲಿ ಒಂದು ಹಿಡಿ ಇಡೀ ಉಂಡೆಯನ್ನು ಅರ್ಪಿಸಿ ಮತ್ತು 21 ಬಾರಿ ಜಪಿಸಿ. ಓಂ ಶ್ರೀ ಶಾಂ ಶ್ರೀ ಶನೈಶ್ಚರಾಯ ನಮಃ ಮಂತ್ರವನ್ನು ಜಪಿಸಿ.

5. ಜೀವನದಲ್ಲಿ ಸತತವಾಗಿ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಶನಿ ಜಯಂತಿಯ ದಿನದಂದು ಕೈಯ ಉದ್ದದ 19 ಪಟ್ಟು ಕಪ್ಪು ದಾರವನ್ನು ತೆಗೆದುಕೊಂಡು ಅದನ್ನು ಮಾಲೆಯ ರೂಪದಲ್ಲಿ ಮಾಡಿ ಕುತ್ತಿಗೆಗೆ ಧರಿಸಿ. 108 ಬಾರಿ ಓಂ ಶ್ರೀಂ ಶ್ರೀಂ ಶ್ರೀಂ ಶನೈಶ್ಚರಾಯ ನಮಃ ಮಂತ್ರವನ್ನು ಜಪಿಸಿ.

6. ಯಾವುದೇ ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಅಥವಾ ಕೆಲಸದ ಸಮಯದಲ್ಲಿ ಸೋಮಾರಿತನವನ್ನು ಅನುಭವಿಸಿದರೆ ಶನಿ ಜಯಂತಿಯ ದಿನ ಶನಿದೇವನ ಈ ಹತ್ತು ನಾಮಗಳಾದ ಕೋನಸ್ತ ಪಿಂಗಲೋ ಬಭ್ರುಃ ಕೃಷ್ಣ ರೌದ್ರೋಂತಕೋ ಯಮ: ಸೌರಿಃ ಶನೈಶ್ಚರೋ ಮಂದಃ ಪಿಪ್ಪಲಾದೇನ್ ಎಂಬುದಾಗಿ 108 ಬಾರಿ ಜಪಿಸಬೇಕು.

7. ಜೀವನದಿಂದ ಶತ್ರುಗಳನ್ನು ದೂರ ಮಾಡಲು ಶನಿ ಜಯಂತಿಯ ದಿನದಂದು ಸ್ನಾನದ ಅನಂತರ ಶನಿದೇವನ ಮಂತ್ರವಾದ ಓಂ ಐಂ ಶ್ರೀಂ ಹ್ರೀಂ ಶನೈಶ್ಚರಾಯ ನಮಃ ಎಂಬುದಾಗಿ 11 ಬಾರಿ ಜಪಿಸಬೇಕು.

8. ಮನದಲ್ಲಿ ಸದಾ ಸಕಾರಾತ್ಮಕತೆ ಇರಬೇಕು ಮತ್ತು ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರುತ್ತಿರಬೇಕೆಂದು ಬಯಸಿದರೆ ಶನಿ ಜಯಂತಿಯ ದಿನದಂದು ಮನೆಯ ಮುಖ್ಯದ್ವಾರದಲ್ಲಿ ಸಾಸಿವೆ ಎಣ್ಣೆಯನ್ನು ಹಚ್ಚಿ. 21 ಬಾರಿ ಓಂ ಶಂ ಶನ್ಯೈ ನಮಃ ಮಂತ್ರವನ್ನು ಜಪಿಸಿ.

9. ಶನಿ ಜಯಂತಿಯ ದಿನ ಸಂಜೆ ಶನಿದೇವನ ಮಂತ್ರವಾದ ಶಂ ಓಂ ಶಂ ನಮಃ ಅನ್ನು ಜಪಿಸಬೇಕು. ಇದರಿಂದ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತೀರಿ ಮತ್ತು ಜೀವನದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.

10. ಕಬ್ಬಿಣದಿಂದ ಮಾಡಿದ ವಸ್ತುವನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ. ಜೊತೆಗೆ 11 ಬಾರಿ ಓಂ ಐಂ ಹ್ರೀಂ ಶ್ರೀಂ ಶನೈಶ್ಚರಾಯ ನಮಃ ಎಂದು ಜಪಿಸಿದರೆ ಖಿನ್ನತೆಯಿಂದ ಶೀಘ್ರದಲ್ಲೇ ಪರಿಹಾರವನ್ನು ಪಡೆಯುತ್ತೀರಿ ಮತ್ತು ಯಾವುದೇ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತೀರಿ.

ಇದನ್ನೂ ಓದಿ: Tumkur News: ವಿಜೃಂಭಣೆಯಿಂದ ನಡೆದ ಶ್ರೀ ಬೇವಿನಳಮ್ಮ ದೇವಿ ಜಲಧಿ ಮಹೋತ್ಸವ

21. ಸಣ್ಣಪುಟ್ಟ ವಿಚಾರಗಳಿಗೆ ಸಂಗಾತಿಯೊಂದಿಗೆ ಸದಾ ಜಗಳ ನಡೆಯುತ್ತಿದ್ದರೆ ಶನಿ ಜಯಂತಿಯ ದಿನ ಶುಚಿಯಾಗಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಶನಿದೇವನನ್ನು ಸ್ಮರಿಸಿ ನಮಸ್ಕರಿಸಿ. ಅಲ್ಲದೆ ಸಾಸಿವೆ ಎಣ್ಣೆ, ಎಳ್ಳುವನ್ನು ಶನಿ ದೇವರಿಗೆ ಅರ್ಪಿಸಿ ಮತ್ತು ಶನಿದೇವನ ಶಂ ಶನೈಶ್ಚರಾಯ ನಮಃ ಮಂತ್ರವನ್ನು 21 ಬಾರಿ ಜಪಿಸಿ.

22. ಶನಿ ಜಯಂತಿಯ ದಿನದಂದು ಮನೆಯಲ್ಲಿ ಶಿವನ ಚಿತ್ರದ ಮುಂದೆ ಆಸನವನ್ನು ಇಟ್ಟು ಶಿವನ ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪಿಸಿ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಅಖಂಡವಾಗಿ ಉಳಿಯುತ್ತದೆ.

Continue Reading

ಪ್ರವಾಸ

Jagannath Puri Temple: ಪುರಿ ಜಗನ್ನಾಥ ದೇವಸ್ಥಾನದ 7 ಅಚ್ಚರಿಯ ಸಂಗತಿಗಳಿವು!

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ಮಂದಿರವೂ ವಿಶ್ವ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ (Jagannath Puri Temple) ಒಂದಾಗಿದೆ. ಇಲ್ಲಿನ ಏಳು ವಿಚಾರಗಳು ಇವತ್ತಿಗೂ ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ. ಆ ಏಳು ಅಚ್ಚರಿಗಳೇನು ಎಂಬ ವಿವರಣೆ ಇಲ್ಲಿದೆ.

VISTARANEWS.COM


on

By

Jagannath Puri Temple
Koo

ವಿಶ್ವ ಪ್ರಸಿದ್ಧ ದೇವಾಲಯಗಳಲ್ಲಿ ಭಾರತದ (india) ಒಡಿಶಾದ (Odisha) ಪುರಿಯಲ್ಲಿರುವ ಜಗನ್ನಾಥ ಮಂದಿರವೂ (Jagannath Pur Temple) ಒಂದಾಗಿದೆ. ಭಗವಾನ್ ವಿಷ್ಣುವಿನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾಗಿರುವ ಈ ಜಗನ್ನಾಥ ದೇವಾಲಯವು ಲಕ್ಷಾಂತರ ಹಿಂದೂಗಳಿಗೆ ಪ್ರಮುಖ ಯಾತ್ರಾ (tourist place) ಸ್ಥಳವಾಗಿದೆ. ಪ್ರತಿ ವರ್ಷ ಇಲ್ಲಿ ನಡೆಯುವ ರಥಯಾತ್ರೆಯ ಉತ್ಸವವನ್ನು ಕಣ್ತುಂಬಿಕೊಳ್ಳಲು ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸುತ್ತಾರೆ.

ಅದ್ಭುತವಾದ ವಾಸ್ತು ಶಿಲ್ಪವನ್ನು ಹೊಂದಿರುವ ಈ ದೇವಾಲಯವು ಅನೇಕ ರಹಸ್ಯಗಳನ್ನು ಹೊಂದಿದೆ. ಜಗನ್ನಾಥ ಪುರಿ ದೇವಸ್ಥಾನದ ಬಗ್ಗೆ ಹೆಚ್ಚಿನವರು ತಿಳಿಯದೇ ಇರುವಂತ ಏಳು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.


1. ನೆರಳು ಬೀಳುವುದಿಲ್ಲ!

ಜಗನ್ನಾಥ ಪುರಿ ದೇವಾಲಯದ ಮೇಲೆ ಯಾವುದೇ ನೆರಳು ಬೀಳುವುದಿಲ್ಲ. ಇದು ನಿಖರವಾದ ವಾಸ್ತುಶಿಲ್ಪದ ಯೋಜನೆಯ ಪರಿಣಾಮವೇ ಅಥವಾ ಜಗನ್ನಾಥನ ಪವಾಡವೇ ಎಂಬುದನ್ನು ಈವರೆಗೆ ಪತ್ತೆ ಹಚ್ಚಲು ಯಾರಿಗೂ ಸಾಧ್ಯವಾಗಿಲ್ಲ. ಈ ದೇವಾಲಯವು ‘ನೆರಳು ರಹಿತ’ ಎಂದು ಹೇಳಲಾಗುತ್ತದೆ.


2. ಗಾಳಿಗೆ ವಿರುದ್ಧವಾಗಿ ಧ್ವಜ ಹಾರುತ್ತದೆ!

ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜವು ಗಾಳಿಗೆ ವಿರುದ್ಧವಾಗಿ ಯಾಕೆ ಹಾರುತ್ತದೆ ಎಂಬುದರ ಹಿಂದೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ದೇವಾಲಯದಲ್ಲಿ ಧಾರ್ಮಿಕ ಶಕ್ತಿಯ ಭವ್ಯವಾದ ಅದ್ಭುತವನ್ನು ಪ್ರದರ್ಶಿಸುವ ಮೂಲಕ ಪ್ರವಾಸಿಗರು ಅಚ್ಚರಿ ಪಡುವಂತೆ ಮಾಡುತ್ತದೆ.


3. ಮೇಲ್ಭಾಗದಲ್ಲಿ ಸುದರ್ಶನ ಚಕ್ರ!

ಮೇಲ್ಭಾಗದಲ್ಲಿ ಇರಿಸಲಾಗಿರುವ ಸುದರ್ಶನ ಚಕ್ರವು ಎರಡು ರಹಸ್ಯಗಳನ್ನು ಹೊಂದಿದೆ. ಮೊದಲನೆಯದಾಗಿ ನಿರ್ಮಾಣದ ಸಮಯದ ತಂತ್ರಜ್ಞಾನದ ಸ್ಥಿತಿಯನ್ನು ಗಮನಿಸಿದರೆ ವಾಸ್ತುಶಿಲ್ಪಿಗಳು ಮತ್ತು ನಿರ್ಮಾಣ ಕಾರ್ಮಿಕರು ಅಂತಹ ತೂಕದ ಚಕ್ರವನ್ನು ಹೇಗೆ ಮೇಲಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬುದು. ಇನ್ನೊಂದು ಇದು ಎಲ್ಲಾ ಕೋನಗಳಿಂದಲೂ ಒಂದೇ ರೀತಿ ಹೇಗೆ ಕಾಣುತ್ತದೆ ಎಂಬುದು. ಈ ಸುದರ್ಶನ ಚಕ್ರದ ಪರಿಪೂರ್ಣ ಗಣಿತ ಲೆಕ್ಕಾಚಾರ ಅನೇಕ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.


4. ಅಡುಗೆಮನೆ ಕುತೂಹಲ

ದೇವಾಲಯದೊಳಗಿರುವ ಆಹಾರವನ್ನು ಒಂದರ ಮೇಲೊಂದರಂತೆ ಜೋಡಿಸಲಾದ ಮಡಕೆಗಳಲ್ಲಿ ಬೇಯಿಸಲಾಗುತ್ತದೆ. ಕುತೂಹಲದ ವಿಷಯವೆಂದರೆ ಮೇಲ್ಭಾಗದಲ್ಲಿರುವ ಮಡಕೆಗಳ ಆಹಾರ ಮೊದಲು ಬೇಯುತ್ತದೆ! ಇದು ಪ್ರವಾಸಿಗರು ಮತ್ತು ಸಂಶೋಧಕರಿಗೆ ಇನ್ನೂ ಸವಾಲಾಗಿದೆ.


5. ಮರದ ದೇವತೆಗಳ ಆಚರಣೆ

ನಬಕಾಲೇಬಾರ ಎಂಬ ಆಚರಣೆಯು ಪುರಿಯ ಜಗನ್ನಾಥ ದೇವಾಲಯದಲ್ಲಿ ನಾಲ್ಕು ಹಿಂದೂ ದೇವತೆಗಳ ಮರದ ಪ್ರತಿಮೆಗಳ ಪುನರ್ ನಿರ್ಮಾಣವನ್ನು ಸಾರುವ ಅತ್ಯಂತ ಮಂಗಳಕರವಾದ ಆಚರಣೆಯಾಗಿದೆ. ಇದು ಆಕರ್ಷಣೆಯ ವಿಷಯವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತದೆ.


6. ಶಾಂತವಾಗುವ ನೀರು!

ಸಂಜೆ ಸಮಯದಲ್ಲಿ ಸಾಗರದ ನೀರು ದೇವಾಲಯ ತಲುಪಿದಾಗ ಶಾಂತವಾಗುತ್ತದೆ. ಇದು ಯಾಕೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ದೇವಾಲಯದೊಳಗಿನ ಶಬ್ದವು ಮಾಂತ್ರಿಕವಾಗಿ ನೀರನ್ನು ಹಿಂದಿರುಗುವಂತೆ ಮಾಡುತ್ತದೆ! ದೇವತೆಗಳು ದೇವಾಲಯದೊಳಗೆ ಶಾಂತಿಯನ್ನು ಬಯಸುತ್ತಾರೆ ಮತ್ತು ಆದ್ದರಿಂದ ಪ್ರಕೃತಿ ಶಾಂತವಾಗುತ್ತದೆ ಎಂದು ಸ್ಥಳೀಯ ಪುರಾಣಗಳು ಹೇಳುತ್ತವೆ.


7. ಹಿಮ್ಮುಖ ಗಾಳಿ

ದೇವಾಲಯದ ಗಾಳಿಯು ಹಗಲಿನಲ್ಲಿ ಭೂಮಿಯಿಂದ ಸಮುದ್ರದತ್ತ ಹೋಗುತ್ತದೆ ಮತ್ತು ರಾತ್ರಿಯಲ್ಲಿ ಹರಿವನ್ನು ಹಿಮ್ಮುಖಗೊಳಿಸುತ್ತದೆ. ಇದು ಇನ್ನೂ ಉತ್ತರಕ್ಕೆ ಸಿಗದ ಪ್ರಶ್ನೆಯಾಗಿದೆ. ಇಲ್ಲಿನ ಪ್ರಕೃತಿ ವಿಸ್ಮಯ ಅನೇಕರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತದೆ.

Continue Reading
Advertisement
Narendra Modi
ದೇಶ3 hours ago

PM Modi: 400 ಸೀಟು, 400 ಸೀಟು ಎಂದು ಪ್ರತಿಪಕ್ಷಗಳನ್ನು ಮಂಗ್ಯಾ ಮಾಡಿದ ಮೋದಿ; ಅವರ ಮಾತಲ್ಲೇ ಕೇಳಿ!

Rajakaluve
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಮುಂಗಾರಿಗೆ ಮುನ್ನವೇ ರಾಜಕಾಲುವೆ ಒತ್ತುವರಿ ತೆರವಾಗಲಿ

IPL 2024
ಪ್ರಮುಖ ಸುದ್ದಿ3 hours ago

IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

DCM D K Shivakumar instructed to test drinking water everywhere including Bengaluru
ಕರ್ನಾಟಕ4 hours ago

Bengaluru News: ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

Naxals
ದೇಶ4 hours ago

Naxals: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಎನ್‌ಕೌಂಟರ್

IPL 2024
ಪ್ರಮುಖ ಸುದ್ದಿ4 hours ago

IPL 2024 : ಐಪಿಎಲ್​ನಲ್ಲಿ ಕಳಪೆ ದಾಖಲೆಯೊಂದನ್ನು ಸೃಷ್ಟಿಸಿ ನಿರ್ಗಮಿಸಿದ ಆರ್​ಸಿಬಿ

arecanut price
ಕರ್ನಾಟಕ5 hours ago

Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್‌ ಕಿ ಬಾರ್ ₹60,000 ಪಾರ್ ಆಗಲಿದೆಯಾ?

Self Harming Husband commits suicide for taking his wife home
ಕರ್ನಾಟಕ5 hours ago

Self Harming: ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ!

WhatsApp AI
ತಂತ್ರಜ್ಞಾನ5 hours ago

WhatsApp AI: WhatsAppಗೂ ಬಂತು ಎಐ; ನಿಮ್ಮ ಪ್ರೊಫೈಲ್‌ ಫೋಟೊ ಇನ್ನು AI ಜನರೇಟೆಡ್!‌

T20 world cup 2024
ಕ್ರೀಡೆ5 hours ago

T20 World Cup 2024 : ಭಾರತ ತಂಡ ವಿಶ್ವ ಕಪ್​ ಗೆಲ್ಲುವುದಿಲ್ಲ; ಇಂಗ್ಲೆಂಡ್​ ಮಾಜಿ ಆಟಗಾರನ ಭವಿಷ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ22 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌