Varamahalakshmi Festival | ಸಕಲ ವರವ ಕೊಡುವ ಮಹಾಲಕ್ಷ್ಮೀಯನ್ನು ಪೂಜಿಸುವ ಹಬ್ಬ - Vistara News

ಧಾರ್ಮಿಕ

Varamahalakshmi Festival | ಸಕಲ ವರವ ಕೊಡುವ ಮಹಾಲಕ್ಷ್ಮೀಯನ್ನು ಪೂಜಿಸುವ ಹಬ್ಬ

ಲಕ್ಷ್ಮೀಯೆಂದರೆ ಚೆಲುವು, ಶೋಭೆ ಹಾಗೂ ಸಂಪತ್ತು. ಆಕೆಯನ್ನು ಪೂಜಿಸುವ ಪುಣ್ಯಕಾಲ ವರಮಹಾಲಕ್ಷ್ಮೀ ಹಬ್ಬ(Varamahalakshmi Festival). ಈ ಹಬ್ಬದ ಆಚರಣೆಯ ಹಿನ್ನೆಲೆ ಏನು? ವ್ರತ ಕಥೆಯ ಮಹತ್ವವೇನು? ಪೂಜೆಯ ವಿಧಾನ ಹೇಗೆ ಎಂದು ತಿಳಿಸುವ ಲೇಖನ ಇಲ್ಲಿದೆ.

VISTARANEWS.COM


on

Varamahalakshmi Festival
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಮ್ಯಾ ಗುಹಾ ದ್ವಾರಕನಾಥ್‌/ ಡಾ. ಮೇಖಲ ದ್ವಾರಕನಾಥ್‌
ಶ್ರಾವಣ ಶುಕ್ಲ ಪೂರ್ಣಿಮೆ ದಿವಸ ಶುಕ್ರ ಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ ಅಥವಾ ಶುಕ್ಲಪೂರ್ಣಿಮೆಯ ಅತಿ ಹತ್ತಿರದ ಶುಕ್ರವಾರದಂದು ವರಮಹಾಲಕ್ಷ್ಮೀ (Varamahalakshmi Festival) ಆರಾಧನೆ ಮಾಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Varamahalakshmi Festival
ರಮ್ಯಾ ಗುಹಾ ದ್ವಾರಕನಾಥ್‌

ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಗೋಧೂಳಿ ಸಮಯದಲ್ಲಿ ಈ ವ್ರತಾಚರಣೆ ನಡೆಯುತ್ತದೆ. ಈ ಬಾರಿ ಎರಡನೇ ಶುಕ್ರವಾರವಾದ ಆಗಸ್ಟ್‌ 5 ರಂದೇ ವ್ರತಾಚರಣೆ ಕೈಗೊಳ್ಳಬೇಕೆಂದು ಜ್ಯೋತಿಷಿಗಳು, ಪಂಚಾಂಗ ಕರ್ತರು ದಿನ ನಿಗದಿ ಪಡಿಸಿದ್ದಾರೆ. ಆಗಸ್ಟ್‌ 12ರ ಶುಕ್ರವಾರದಂದು ಪೂರ್ಣಿಮೆಯ ದಿನವಾದರೂ ಬೆಳಗ್ಗೆಯ ಸಮಯ ಮಾತ್ರ ಈ ತಿಥಿ ಇರುತ್ತದೆ. ನಂತರ ಪಕ್ಷವೇ ಬದಲಾಗುವುದರಿಂದ ಇಂದೇ (ಆಗಸ್ಟ್‌ 5) ಈ ವ್ರತಾಚರಣೆ ನಡೆಯುತ್ತಿದೆ.

ಕೆಲವರು ವರಮಹಾಲಕ್ಷ್ಮೀ ಹಬ್ಬದ ಈ ದಿನ ವ್ರತಕೈಗೊಳ್ಳುತ್ತಾರೆ. ಇನ್ನು ಕೆಲವರು ಲಕ್ಷ್ಮೀಯ ವಿಗ್ರಹವಿಟ್ಟು ಕೇವಲ ಪೂಜೆ ಮಾಡುತ್ತಾರೆ. ಗೋಧೂಳಿ ಸಮಯದವರೆಗೂ ಉಪವಾಸವಿದ್ದು ಪೂಜೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ, ಈಗಿನ ಕಾಲಕ್ಕೆ ತಕ್ಕಂತೆ ಬೆಳಗ್ಗೆಯೇ ವ್ರತಾಚರಣೆ ಅಥವಾ ಪೂಜೆ ನಡೆಯುತ್ತದೆ.

Varamahalakshmi Festival
ಡಾ. ಮೇಖಲ ದ್ವಾರಕನಾಥ್‌

ಆದಿಲಕ್ಷ್ಮೀ, ಧ್ಯಾನಲಕ್ಷ್ಮೀ, ಧೈರ್ಯ ಲಕ್ಷ್ಮೀ, ಗಜಲಕ್ಷ್ಮೀ, ಸಂತಾನಲಕ್ಷ್ಮೀ, ವಿಜಯ ಲಕ್ಷ್ಮೀ, ಐಶ್ವರ್ಯಲಕ್ಷ್ಮೀ, ಧನಲಕ್ಷ್ಮೀ ಎಂಬ ಅಷ್ಟರೂಪನಾಮಗಳಿಂದ ರರಾಜಿಸುವವಳು ಶ್ರೀ ವರಮಹಾಲಕ್ಷ್ಮೀ. ಲಕ್ಷ್ಮೀಯ ಸೌಂದರ್ಯ ವರ್ಣಾತೀತ. ಲಕ್ಷ್ಮೀ ಎಂದರೆ ಚೆಲುವು, ಶೋಭೆ ಹಾಗೂ ಸಂಪತ್ತು. ಲಕ್ಷ್ಮೀ ಎಂದರೆ ಶುಭ-ಲಾಭ. ಲಕ್ಷ್ಮೀ ಎಂದರೆ ಶುಭ ಶಕುನ-ಶುಭ ಲಕ್ಷಣ. ಆಕೆಯನ್ನು ಪೂಜಿಸುವುದೇ ಪುಣ್ಯ ಕಾಲ. ವರಮಹಾಲಕ್ಷ್ಮೀಯನ್ನು ಮನೆತನದ ದಾರಿದ್ರ್ಯ ನಾಶ ಮಾಡುವುದಕ್ಕಾಗಿ, ಆಯುರಾರೋಗ್ಯ ಲಾಭಕ್ಕಾಗಿ ಪೂಜೆ ಮಾಡಲಾಗುತ್ತದೆ.

ಲಕ್ಷ್ಮೀ ಅವತಾರ ಹೇಗೆ?
ಎಲ್ಲರಿಗೂ ಸಮುದ್ರ ಮಥನ ಕಥೆ ಗೊತ್ತಿದೆ. ದೇವಾಸುರರು ಸಮುದ್ರ ಮಥನ ನೆಸುತ್ತಿದ್ದಾಗ ಕ್ಷೀರ ಸಮುದ್ರದಿಂದ 12 ವಸ್ತುಗಳು ಹುಟ್ಟಿ ಬಂದವು. ಮೊದಲಿಗೆ ಹಾಲಾಹಲ ನಂತರ ಉಚ್ಚೈಶ್ರವಸ್ಸೆಂಬ ಕುದುರೆ, ನೆನಸಿದ್ದನ್ನು ಕೊಡುವ ಕಲ್ಪವೃಕ್ಷ, ಕಾಮಧೇನು ಮೊದಲಾದ ದಿದ್ಯವಸ್ತುಗಳು ಹುಟ್ಟಿದವು. ಹಾಗೆಯೇ ಸಮುದ್ರವನ್ನು ಕಡೆಯುತ್ತಿರುವಾಗ ಅಪ್ಸರೆಯರು ಹುಟ್ಟಿದರು.

ಆನಂತರ ಒಂದು ಆಶ್ಚರ್ಯಕರವಾದ ದೃಶ್ಯವು ಕಾಣಿಸಿತು. ಕ್ಷೀರಸಾಗರದ ತೆರೆಗಳ ನಡುವೆ ದಿವ್ಯರೂಪವನ್ನು ಧರಿಸಿದ ಒಬ್ಬ ದೇವತೆ ಕಂಗೊಳಿಸಿದಳು. ಅವಳು ಅರಳಿದ ಕಮಲದ ಮೇಲೆ ನಿಂತಿದ್ದಳು. ಕೊರಳಲ್ಲಿ ಕಲಮಲದ ಮಾಲೆಯನ್ನು ಧರಿಸಿ, ಕೈಯಲ್ಲಿ ಕಮಲವನ್ನು ಹಿಡಿದಿದ್ದಳು. ಅವಳ ದಿವ್ಯ ಸ್ವರೂಪವನ್ನು ನೋಡಿ ದೇವತೆಗಳೇ ಬೆಚ್ಚಿ ಬಿದ್ದರು. ಮುಗಳ್ನಗೆ ಬೀರುತ್ತ ನಿಂತಿದ್ದ ಆಕೆ ಸಾಕ್ಷಾತ್‌ ಲಕ್ಷ್ಮೀ ದೇವಿಯಾಗಿದ್ದಳು. ಋಷಿಗಳು ಶ್ರೀ ಸೂಕ್ತವನ್ನು ಪಠಿಸತೊಡಗಿದರು. ಗಂಧರ್ವರು ಹಾಡಿದರು, ಅಪ್ಸರೆಯರು ನೃತ್ಯ ಮಾಡಿದರು. ಎಲ್ಲೆಡೆ ವಿಚಿತ್ರವಾದ ಬೆಳಕು ಹರಡಿತ್ತು. ಸಮುದ್ರ ರಾಜನು ತನ್ನ ನಿಜರೂಪವನ್ನು ಧರಿಸಿ ಬಂದು, ಲಕ್ಷ್ಮೀಯು ತನ್ನ ಮಗಳೆಂದು ಆದರಿಸಿದನು. ಅವಳಿಗೆ ಉತ್ತಮವಾದ ವಸ್ತ್ರಗಳನ್ನು, ಆಭರಣಗಳನ್ನು ನೀಡಿದನು. ಅವಳ ಕೈಗೆ ಒಂದು ಪದ್ಮಮಾಲೆಯನ್ನಿತ್ತನು. ಆಗ ಬ್ರಹ್ಮನ ಸೂಚನೆಯಂತೆ ವಿಷ್ಣುವು ಲಕ್ಷ್ಮೀಯನ್ನು ವರಿಸುತ್ತಾನೆ. ಲಕ್ಷ್ಮೀಯು ವಿಷ್ಣುವಿನ ವಕ್ಷಸ್ಥಳದಲ್ಲಿ ನೆಲೆಸುತ್ತಾಳೆ.

ವಿಷ್ಣು ಪುರಾಣ ಮೊದಲಾದ ಗ್ರಂಥಗಳಲ್ಲಿ ಲಕ್ಷ್ಮೀಯ ಮಹಿಮೆಯನ್ನು ಬಹಳ ಚೆನ್ನಾಗಿ ವರ್ಣಿಸಲಾಗಿದೆ. ವಿಷ್ಣುವಿನ ಪತ್ನಿಯಾದ ಅವಳು ವೈಷ್ಣವೀ ಶಕ್ತಿಯೆನಿಸಿದ್ದಾಳೆ. ಜಗತ್ತಿನಲ್ಲಿರುವ ಶ್ರೇಷ್ಠವಾದ ವಸ್ತುಗಳೂ, ಗುಣಗಳೂ ಲಕ್ಷ್ಮೀನಾರಾಯಣರ ನಿವಾಸಸ್ಥಾನಗಳೆಂದು ಹೇಳಿದ್ದಾರೆ.

ದೇವೇಂದ್ರನು ಅವತಾರವೆತ್ತಿದ ಲಕ್ಷ್ಮೀಯನ್ನು ಹೀಗೆ ಸ್ತುತಿಸಿದ್ದಾನೆ;
ಯಾ ದೇವೀ ಸರ್ವಭೂತೇಶು ಮಾತೃರೂಪೇಣ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಕ್ತಿರೂಪೇನ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಾಂತಿರೂಪೇನ ಸಂಸ್ಥಿತಃ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

ಇದರ ಅರ್ಥ “ಓ ದೇವಿ, ಸರ್ವಲೋಕಗಳಿಗೂ ಜನನಿಯಾದ ನಿನಗೆ ನಮಸ್ಕಾರ. ಸಕಲ ಕಾರ್ಯಗಳೂ ಸಿದ್ಧಿಸುವುದಕ್ಕೆ ನೀನು ಕಾರಣಳಾಗಿದ್ದೀಯೇ. ನೀನು ಲೋಕಪಾವನಿ. ಐಶ್ವರ್ಯ ಮತ್ತು ಬುದ್ಧಿಶಕ್ತಿ ನಿನ್ನಿಂದ ದೊರೆಯುತ್ತವೆ. ಸಕಲ ವಿದ್ಯಾಸ್ವರೂಪಿಣಿಯಾದ ಸರಸ್ವತಿಯೂ ನೀನೇ, ಮುಕ್ತಿದಾಯಿನಿಯಾದ ಆತ್ಮವಿದ್ಯೆ ನೀನು, ಹೇ ಮಹಾದೇವಿ, ಮಡದಿ, ಮಕ್ಕಳು, ಮನೆ, ಮಿತ್ರ, ಧನ, ಧಾನ್ಯಗಳೆಲ್ಲವೂ ನಿನ್ನ ನೋಟದಿಂದಲೇ ಭಕ್ತರಿಗೆ ಲಭಿಸುತ್ತವೆ ಎಂದು ಪ್ರಾರ್ಥಿಸುತ್ತಾನೆ. ಅಂತೆಯೇ ನಾವೆಲ್ಲರೂ ದೇವಿಯನ್ನು ಪ್ರಾರ್ಥಿಸಿದರೆ, ಆಕೆ ಎಲ್ಲರಿಗೂ ಎಲ್ಲವನ್ನೂ ಕರುಣಿಸುತ್ತಾಳೆ. ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಲಕ್ಷ್ಮೀಯನ್ನು ವರಮಹಾಲಕ್ಷ್ಮೀ ಎಂದೇ ಕರೆಯಲಾಗುತ್ತದೆ.

ಲಕ್ಷ್ಮೀಯ ಮಹಿಮೆ ವಿಸ್ತಾರವಾದುದು. ವಾಣಿ ಅಂದರೆ ಮಾತು, ನೀತಿ, ಬುದ್ಧಿ, ಸಂತುಷ್ಟಿ, ಸಾಮಗಾನ, ಸ್ವಾಹಾ, ಕಾಂತಿ, ಐಶ್ವರ್ಯ, ಶಕ್ತಿ, ಬಳ್ಳಿ, ನದಿ, ಗೋವು- ಇವೆಲ್ಲವೂ ಲಕ್ಷ್ಮೀಯ ಅಂಶಗಳೆಂದು ಪರಿಗಣಿಸಲಾಗಿದೆ. ಜಗತ್ತಿನಲ್ಲಿ ಇರುವ ಎಲ್ಲ ಸ್ತ್ರೀಯರೂ ಲಕ್ಷ್ಮೀ ಸ್ವರೂಪರೆಂದು ಪುರಾಣಗಳು ಹೇಳಿವೆ. ಇಂತಹ ಲಕ್ಷ್ಮೀಯನ್ನು ಹೆಂಗಳೆಯರು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮ-ಸಡಗರದಿಂದ ಪೂಜೆಸುವ ಹಬ್ಬವೇ ಈ ವರಮಹಾಲಕ್ಷ್ಮೀ ಹಬ್ಬ.

ವ್ರತಾಚರಣೆ ಏಕೆ?
ನಾವು ಯಾವುದೇ ವ್ರತವನ್ನು ಮಾಡುವುದಾದರೂ ಏಕೆ ಈ ವ್ರತ ಮಾಡಬೇಕು, ಇದರ ಹಿಂದಿರುವ ಉದ್ದೇಶಗಳೇನು, ಆಚರಣೆಯ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿ ವ್ರತ ಕಥೆ ಬಹಳ ಮುಖ್ಯ. ಈ ರೀತಿ ಸರಿಯಾಗಿ ತಿಳಿದುಕೊಂಡು ವ್ರತ ಮಾಡುವುದರಿಂದ ಭಕ್ತಿ-ಭಾವನೆಗಳು ಹೆಚ್ಚಾಗುತ್ತವೆ. ಇಲ್ಲದಿದ್ದರೆ ಯಾಂತ್ರಿಕವಾಗಿ ನಡೆಸಿದಂತಾಗುತ್ತದೆ.

Varamahalakshmi Festival

ವರಮಹಾಲಕ್ಷ್ಮೀ ವ್ರತ ಕಥೆಯ ಪ್ರಕಾರ ಕೈಲಾಸದಲ್ಲಿ ಶಿವ-ಪಾರ್ವತಿಯರು ಒಮ್ಮೆ ಹೀಗೆ ಕುಳಿತು ಮಾತನಾಡುತ್ತಿದ್ದಾಗ ಪಾರ್ವತಿ ಹೇಳುತ್ತಾಳೆ, ʼʼದಾನವರು ತಪಸ್ಸು ಮಾಡಿದರೂ ನೀನು ಅವರು ಕೇಳಿದ ವರವನ್ನು ಕೊಡುತ್ತೀಯ, ಪಾಪಾ ಜನಸಾಮಾನ್ಯರು ಸಮಯ ಸಿಕ್ಕಾಗಲೆಲ್ಲಾ ನಿನ್ನ ಸ್ಮರಣೆ ಮಾಡುತ್ತಾರೆ. ಆದರೆ ಅವರ ದಾರಿದ್ರ್ಯ ಹರಣ ಹೇಗೆ, ಅದಕ್ಕೆ ಅವರು ಯಾವ ವ್ರತ-ಪೂಜೆ ಮಾಡಬೇಕುʼʼ ಎಂದು ಕೇಳುತ್ತಾಳೆ.

ಅಲ್ಲದೆ, ಇದರ ತೀರ್ಮಾನಕ್ಕೆ ನಾನೇ ಕೈಲಾಸದಲ್ಲಿ ದೇವಾನು ದೇವತೆಗಳ ಹಾಗೂ ಋಷಿಮುನಿಗಳ ಸಭೆ ಕರೆಯುವುದಾಗಿ ಹೇಳುತ್ತಾಳೆ. ಇದಕ್ಕೆ ಶಿವನು ಒಪ್ಪಿಕೊಳ್ಳುತ್ತಾನೆ. ನಿಗದಿತ ದಿನದಂದು ಸಭೆಯು ನಡೆಯುತ್ತದೆ. ಆಗ  ಪಾರ್ವತಿ ಶಿವನ ಮುಂದೆ ತನ್ನ ಈ ಪ್ರಶ್ನೆಗೆ ಉತ್ತರ ನೀಡುವಂತೆ ಕೋರುತ್ತಾಳೆ. ಆಗ ಶಿವನು “ಶ್ರಾವಣ ಮಾಸದ ಶುಕ್ರವಾರದಂದು ವರಮಹಾಲಕ್ಷ್ಮೀಯ ವ್ರತ ಮಾಡಿದರೆ ಜನಸಾಮಾನ್ಯರ ದಾರಿದ್ರ್ಯಗಳೆಲ್ಲಾ ದೂರವಾಗುತ್ತವೆʼʼ ಎಂದು ಹೇಳುತ್ತಾನೆ.

ಆಗ ಸುಮ್ಮನಾಗದ ಪಾರ್ವತಿ ಯಾಕೆ ಈ ವ್ರತ ಮಾಡಬೇಕು, ಇದಕ್ಕಿರುವ ಮಹತ್ವವೇನು ಎಂದು ತಿಳಿಸುವಂತೆ ಶಿವನನ್ನು ಪಟ್ಟು ಹಿಡಿಯುತ್ತಾಳೆ. ಆಗ ಶಿವನು ವರಮಹಾಲಕ್ಷ್ಮೀಯ ವ್ರತ ಕಥೆಯನ್ನು ಹೇಳುತ್ತಾನೆ. ಇದರ ಸಂಕ್ಷಿಪ್ತ ರೂಪ ಹಿಂತಿದೆ;

ವಿಗರ್ಭ ದೇಶಕ್ಕೆ ರಾಜಧಾನಿಯಾದ ಕುಂಡಿನ ನಗರದಲ್ಲಿ ಚಾರುಮತಿ ಎಂಬ ವಿವಾಹಿತ ಮಹಿಳೆ ವಾಸವಾಗಿದ್ದಳು. ಈಕೆ ಬಹಳ ದಾರಿದ್ರ್ಯವನ್ನು ಅನುಭವಿಸುತ್ತಿದ್ದರೂ ಪತಿ ಸೇವೆ ಮುಖ್ಯವೆಂದು ಸದಾ ಸಂತೋಷ ಚಿತ್ತಾಳಾಗಿ ಪತಿಯ ಮನಸ್ಸನ್ನು ನೋಯಿಸದೆ ಇದ್ದಳು. ಇವಳನ್ನು ಮೆಚ್ಚಿದ ಮಹಾಲಕ್ಷ್ಮೀಯು ಒಂದು ದಿನ ಚಾರುಮತಿ ಮಲಗಿದ್ದಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಹೀಗೆ ಹೇಳುತ್ತಾಳೆ; “ಪತಿ ವ್ರತೆಯಾದ ಚಾರುಮಾತಿಯೇ ನಿನ್ನ ಗುಣಶಿಲಾಗಳಿಗೆ ಮೆಚ್ಚಿ ನಿನ್ನ ಪೂರ್ಣ ಪುಣ್ಯ ಅನುಸರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮೀ ನಾನು. ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಅದರಿಂದ ನಿನ್ನ ದಾರಿದ್ರ್ಯ ನಾಶವಾಗಿ ಅಷ್ಟ ಐಶ್ವರ್ಯವು ಪ್ರಾಪ್ತಿಯಾಗುತ್ತದೆ. ಯಾರು ನನ್ನನ್ನು ಶ್ರಾವಣ ಮಾಸದ ಎರಡೇ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಗಿ ನನ್ನನ್ನು ಪೂಜೆ ಮಾಡಿದರೆ ನಾನು ಅವರಿಗೆ ಸಕಲ ಭೊಗ ಭಾಗ್ಯಗಳನ್ನು ಕೊಡುತ್ತೇನೆ. ನೀನು ಕೂಡ ಈ ವ್ರತವನ್ನು ಮಾಡಿ ಧನ್ಯಳಾಗುʼʼ ಎಂದು ಹೇಳುತ್ತಾಳೆ.

ಆಗ ಚಾರುಮತಿ “ನಿನ್ನನ್ನು ಪೂಜಿಸುವುದು ಹೇಗೆ, ನನ್ನಲ್ಲಿ ನಿನ್ನ ಅಲಂಕಾರ ಮಾಡಲು ಆಭರಣಗಳಿಲ್ಲವಲ್ಲʼʼ ಎನ್ನುತ್ತಾಳೆ. ಆಕೆಯ ಕಷ್ಟ ಅರಿತಿದ್ದ ಲಕ್ಷ್ಮೀ “ಸಾಮಾನ್ಯ ಮಹಿಳೆಯರ ಆಭರಣವನ್ನೇ ಅಂದರೆ ಅರಿಶಿನ ಕುಂಕುಮ, ಕಣ, ಬಳೆ ಇತ್ಯಾದಿಗಳನ್ನೇ ನೀನು ಅರ್ಪಿಸಿ ಪೂಜೆ ಮಾಡಿದರೂ ಸಾಕುʼʼ ಎಂದು ಹೇಳಿ ಮಹಾಲಕ್ಷ್ಮೀಯು ಕಣ್ಮರೆಯಾಗುತ್ತಾಳೆ.

ಬೆಳಗಾದ ಮೇಲೆ ಚಾರುಮತಿಯು ಮನೆಯವರಿಗೆ ಸ್ವಪ್ನದಲ್ಲಿ ಲಕ್ಷ್ಮೀ ಬಂದಿದ್ದನ್ನು, ವ್ರತ ಮಾಡುವಂತೆ ತಿಳಿಸಿದ್ದನ್ನು ಹೇಳುತ್ತಾಳೆ. ಇದನ್ನು ತಿಳಿದ ಮನೆಯವರು ಸಹ ಆ ಮಹಾಲಕ್ಷ್ಮೀ ನಿನ್ನ ಕನಸಿನಲ್ಲಿ ಬಂದು ಈ ವಿಷಯವನ್ನು ತಿಳಿಸಿರುವಾಗ ನೀನು ಖಂಡಿತ ಈ ವ್ರತವನ್ನು ಮಾಡಲೇಬೇಕು ಎಂದು ಹೇಳಿ, ಆಕೆಯ ಕೈಯಿಂದ ಈ ವ್ರತವನ್ನು ಮಾಡಿಸುತ್ತಾರೆ.

ಚಾರುಮತಿಯು ಭಕ್ತಿಯಿಂದ ಶ್ರದ್ಧೆಯಿಂದ ನಿಯಮದಂತೆ ವ್ರತವನ್ನು ಆಚರಿಸಿದಳು. ಆಕೆಗೆ ವರಮಹಾಲಕ್ಷ್ಮೀ ಕೃಪಾ ಕಟಾಕ್ಷದಿಂದ ಅಷ್ಟ ಐಶ್ವರ್ಯ ಪ್ರಾಪ್ತಿಯಾದವು. ಈ ವ್ರತಾಚರಣೆ ಮಾಡಿದರೆ… ಚಾರುಮತಿಯ ಕಥೆ ಕೇಳಿದರೆ ಅಂತವರ ಕಷ್ಟ ಕಾರ್ಪಣ್ಯಗಳನ್ನು ಲಕ್ಷ್ಮೀಯೇ ಕಳೆಯುತ್ತಾಳೆ ಎಂದು ಈಶ್ವರ ಪಾರ್ವತಿಗೆ ಹೇಳುತ್ತಾನೆ. ಹೀಗೆ ನಾವು ಕೂಡ ಭಕ್ತಿ ಭಾವನೆಯಿಂದ ಇದ್ದಿದ್ದನ್ನೇ ದೇವರಿಗೆ ಅರ್ಪಿಸಿ, ಈ ವ್ರತ ಮಾಡಿದರೆ ನಮ್ಮ ಕಷ್ಟಕಾರ್ಪಣ್ಯಗಳು ಕೂಡ ದೂರವಾಗುತ್ತವೆ ಎಂದು ಈ ವ್ರತ ಕಥೆ ಹೇಳುತ್ತದೆ.

ವ್ರತಾಚರಣೆ ಹೇಗೆ?
ವ್ರತ ಮಾಡುವವರು ವ್ರತದ ದಿನದಂದು ಬೆಳಗ್ಗೆ ಎದ್ದು ಮಂಗಳಸ್ನಾನ (ಎಣ್ಣೆ ನೀರು) ಮಾಡಿ, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆಕಂದು, ಮಾವಿನ ಎಲೆಗಳಿಂದ ಸಿಂಗರಿಸಬೇಕು. ಅಷ್ಟದಳ ಪದ್ಮ ರಂಗೋಲಿ ಹಾಕಿ, ಅದರ ಮೇಲೆ ಅಕ್ಕಿ ತುಂಬಿದ ತಟ್ಟೆಯನ್ನು ಇಡಬೇಕು. ಅದರ ಮೇಲೆ ಒಂದು ಕಳಶವನ್ನಿಟ್ಟು, ಅದರಲ್ಲಿ ಸ್ವಲ್ಪ ನೀರು, ಆಲದ ಕಡ್ಡಿಯನ್ನಿಟ್ಟು, ಏಲಕ್ಕಿ, ಪಚ್ಚ ಕರ್ಪೂರ, ಅರಿಶಿನ ಕೊಂಬು, ನಾಣ್ಯವನ್ನು ಹಾಕಬೇಕು. ನಂತರ ಕಳಶದ ಮೇಲೆ ಅರಿಶಿನ ಹಚ್ಚಿದ ತೆಂಗಿನ ಕಾಯಿ ಇಟ್ಟು, ಕಳಶವನ್ನು ಮಾವಿನ ಎಲೆ, ಕಮಲದ ಹೂವುಗಳಿಂದ ಅಲಂಕರಿಸಿ, ಅರಿಶಿನ-ಕುಂಕುಮ ಅರ್ಪಿಸಿ, ವಿಧಿವತ್‌ ಶೋಡಶ (16) ಪೂಜಾದಿಗಳಿಂದ ಪೂಜಿಸಿ, ಗವ್ಯ ಉತ್ಪನ್ನಗಳಾದ ಹಾಲು, ಮೊಸರು, ತಪ್ಪುಗಳಿಂದ ಮತ್ತು ಬೆಲ್ಲದಿಂದ ತಯಾರಿಸಿದ ಪಂಚಭಕ್ಷ್ಯಗಳನ್ನು (ನೈವೇದ್ಯಕ್ಕೆ ಬೆಲ್ಲದಿಂದ 12 ವಿಧದ ಭಕ್ಷ್ಯ ಮಾಡಬೇಕೆಂದು ಪುರಾಣದಲ್ಲಿ ಹೇಳಲಾಗಿದೆ) ನೈವೇದ್ಯ ಮಾಡಬೇಕು.

Varamahalakshmi Festival

ಲಕ್ಷ್ಮೀ ಪೂಜೆಗೆ ಅತ್ಯಂತ ಶ್ರೇಷ್ಠ ಎಂದರೆ ಕಮಲದ ಹೂವು. ಇದನ್ನು ಪೂಜೆ ಮಾಡುವಾಗ ಅರ್ಪಿಸುವುದು ಬಹಳ ಮುಖ್ಯ. ಅಲಂಕಾರದ ಸಂದರ್ಭದಲ್ಲಿ 12 ಗಂಟುಗಳುಳ್ಳ ದೋರ (ದಾರ) ಅರಿಶಿನ ದಾರವನ್ನು ಗೆಜ್ಜೆ ವಸ್ತ್ರದೊಂದಿಗೆ ದೇವಿಗೆ ಅಲಂಕರಿಸಿ, ಪೂಜೆಯ ನಂತರ ಆ ದಾರವನ್ನು ಪ್ರಸಾದದ ರೂಪದಲ್ಲಿ ಬಲಗೈಗೆ ಕಟ್ಟಿಕೊಳ್ಳಬೇಕು. ಈ ಸಂದರ್ಭದಲ್ಲಿ ವ್ರತಕಥೆಯನ್ನು ಓದಬೇಕು. ಪೂಜೆ ಮುಗಿದ ಮೇಲೆ ದೇವಿಯ ವಿಸರ್ಜನೆ ಕೂಡ ಬಹಳ ಮುಖ್ಯ. ವಿಸರ್ಜನೆಯಾದ ನಂತರ ಕಳಶದಲ್ಲಿರುವ ನೀರನ್ನು ಹೂವಿನ ಗಿಡಗಳಿಗೆ ಅಥವಾ ಮರಗಳ ಬುಡಕ್ಕೇ ಹಾಕಬೇಕು. ಕಳಶದಲ್ಲಿಟ್ಟ ತೆಂಗಿನ ಕಾಯಿಯಿಂದ ಸಿಹಿ ತಿನಿಸು ಸಿದ್ಧಪಡಿಸಿ, ಮನೆಯವರೆಲ್ಲರೂ ತಿನ್ನಬೇಕು.

ಯಾರು ಶ್ರದ್ಧಾ ಭಕ್ತಿಗಳಿಂದ ಲಕ್ಷ್ಮೀಯನ್ನು ಹೀಗೆ ಪೂಜಿಸುತ್ತಾರೋ, ಅವರಿಗೆ ಲಕ್ಷ್ಮೀ ದೇವಿಯು ಆಯುಷ್ಯ ಆರೋಗ್ಯ, ಐಶ್ವರ್ಯ ಭಾಗ್ಯ, ಸೌಭಾಗ್ಯಗಳನ್ನು ಅನುಗ್ರಹಿಸುತ್ತಾಳೆ. ಎಲ್ಲರಿಗೂ ವರಮಹಾಲಕ್ಷ್ಮೀಯ ಕೃಪ ಕಟಾಕ್ಷ ದೊರೆಯಲಿ. ಹಬ್ಬದ ಶುಭಾಶಯಗಳು.

ಇದನ್ನೂ ಓದಿ| Varamahalakshmi Festival | ಆಗಸ್ಟ್‌ 5ರ ಶುಕ್ರವಾರದಂದೇ ವ್ರತಾಚರಣೆ; ಗೊಂದಲ ಬೇಡ ಎಂದರು ರಾಜಗುರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿವಮೊಗ್ಗ

Shivamogga News: ವಿಜೃಂಭಣೆಯ ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ರಥೋತ್ಸವ

Shivamogga News: ರಿಪ್ಪನ್‌ಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Siddhivinayaka Swami SrimanMaharathotsava in Ripponpet
Koo

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಆಭಿನವ ಚನ್ನಬಸವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ, ಈ ವರ್ಷ ನಾಡಿಗೆ ಸಮೃದ್ಧ ಮಳೆ-ಬೆಳೆಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ, ನೆಮ್ಮದಿಯನ್ನು ಕರುಣಿಸುವಂತಾಗಲಿ ಎಂದು ಸಿದ್ಧಿವಿನಾಯಕ ದೇವರಲ್ಲಿ ಶ್ರೀಗಳು ಪ್ರಾರ್ಥಿಸಿದರು.

ಇದನ್ನೂ ಓದಿ: IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

ಮನ್ಮಹಾರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶಿವಮೊಗ್ಗದ ವಸಂತ ಭಟ್ ಮತ್ತು ಚಂದ್ರಶೇಖರ ಭಟ್ ಹಾಗೂ ಗುರುರಾಜ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಭಕ್ತರಿಗೆ ಉಚಿತವಾಗಿ ಕಬ್ಬಿನ ಹಾಲು ಮತ್ತು ಐಸ್‌ಕ್ರೀಮ್, ಕುಡಿಯುವ ನೀರಿನ ವ್ಯವಸ್ಥೆಯನ್ನು ವಿವಿಧ ಸಂಘಟನೆಗಳಿಂದ ಆಯೋಜಿಸಲಾಗಿತ್ತು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ; ಕೋಲಾರದಲ್ಲಿ ಮೊದಲ ಮಳೆಯ ಸಿಂಚನ

ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಶಟ್ಟಿ, ಎನ್. ಸತೀಶ್, ಗಣೇಶ್ ಎನ್. ಕಾಮತ್, ಎಂ.ಡಿ. ಇಂದ್ರಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತುಳೋಜಿರಾವ್, ಸ್ವಾಮಿ ದೊಡ್ಡಿನಕೊಪ್ಪ, ವೈ.ಜೆ. ಕೃಷ್ಣ, ಉಮೇಶ್ ಆರ್., ಮಂಜನಾಯ್ಕ್, ಎಂ.ಬಿ. ಮಂಜುನಾಥ, ಎಂ. ಸುರೇಶ್‌ ಸಿಂಗ್, ಸುಧೀರ್ ಪಿ., ರವೀಂದ್ರ ಕೆರೆಹಳ್ಳಿ, ನಾಗರತ್ನ ದೇವರಾಜ್, ಎಸ್.ಎನ್. ಬಾಲಚಂದ್ರ, ಕುಸುಮಾ ಬಾಲಚಂದ್ರ, ಪದ್ಮಾ ಸುರೇಶ್, ನಿವೃತ್ತ ಶಿಕ್ಷಕ ರಾಧಾಕೃಷ್ಣ, ಜಯಲಕ್ಷ್ಮಿ ಮೋಹನ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

Continue Reading

ಧಾರ್ಮಿಕ

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Ballari News: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ ಜರುಗಿತು. ಹರಕೆ ತೀರಿಸುವ ಭಕ್ತರ ಆಚರಣೆಗಳು ಗಮನ ಸೆಳೆದವು.

VISTARANEWS.COM


on

Kalamma Devi Pooja Mahotsava in Kampli
Koo

ಕಂಪ್ಲಿ: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ (Ballari News) ಜರುಗಿತು.

ಸೋಮವಾರ ಸಂಜೆ ಗಂಗೆಸ್ಥಳ ಮತ್ತು ಅಗ್ನಿ ಕುಂಭೋತ್ಸವ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಮೆರವಣಿಗೆಯಲ್ಲಿ ಮೂವರು ಭಕ್ತಾದಿಗಳು ಬಾಯಿಗೆ 12 ಅಡಿ ಉದ್ದದ ತ್ರಿಶೂಲ ಅಸ್ತ್ರವನ್ನು ಹಾಕಿಸಿಕೊಂಡು ಕಲ್ಲುಗುಂಡು, ಇಬ್ಬರು ಭಕ್ತಾದಿಗಳು ಆಟೋರಿಕ್ಷಾ, ಇಬ್ಬರು ಭಕ್ತರು ಕಾರುಗಳನ್ನು ತಮ್ಮ ಬೆನ್ನುಗಳಿಗೆ ಹಾಕಿದ್ದ ಕಬ್ಬಿಣದ ಕೊಕ್ಕೆಗಳಿಂದ ಎಳೆದು ತಮ್ಮ ಹರಕೆ ತೀರಿಸಿದರು. ಟ್ರ್ಯಾಕ್ಟರ್‌ಗೆ ಹಾಕಲಾಗಿದ್ದ ಬೊಂಬುಗಳಿಗೆ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ಜೋತು ಬೀಳುವ ಮೂಲಕ ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

ಮೆರವಣಿಗೆಯು ಶ್ರೀ ಕಾಳಮ್ಮ ದೇವಸ್ಥಾನದಿಂದ ಶ್ರೀ ಸುಂಕಲಮ್ಮ ದೇವಸ್ಥಾನದ ವರೆಗೂ ಜರುಗಿತು. ಭಕ್ತಾದಿಗಳು ರಸ್ತೆಯುದ್ದಕ್ಕೂ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ತಮ್ಮ ಹರಕೆಯಂತೆ ಸುಡು ಬಿಸಿಲ ಮಧ್ಯೆಯು ಗುಂಡು, ಆಟೋ, ಕಾರುಗಳನ್ನು ಎಳೆದೊಯ್ದು ಭಕ್ತಿ ಸಮರ್ಪಿಸಿದರು.

ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದಂತಹ ಭಕ್ತರು ವಿಶೇಷ ಆಚರಣೆಯನ್ನು ನೋಡಿ ಕಣ್ ತುಂಬಿಕೊಳ್ಳುವ ಮೂಲಕ ಆಶ್ಚರ್ಯ ಚಕಿತರಾದರು. ಕಾರ್ಯಕ್ರಮದ ಪೌರೋಹಿತ್ಯವನ್ನು ಮಾರೆಪ್ಪ ಪೂಜಾರಿ ವಹಿಸಿದ್ದರು.

ಇದನ್ನೂ ಓದಿ: Koppala News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಲು ಜಿ.ಪಂ ಸಿಇಒ ಸೂಚನೆ

ಈ ಸಂದರ್ಭದಲ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಚೆನ್ನರಾಜು, ಉಪಾಧ್ಯಕ್ಷ ಷಣ್ಮುಖಪ್ಪ, ಮುಖಂಡರಾದ ಮಾರೆಪ್ಪ ಪೂಜಾರಿ, ಸ್ವಾಮಿ ದೊರೆ, ಎ. ಗಣೇಶ್, ಎಸ್.ಜಿ.ಪೂಜಾರಿ, ಗುರುಮೂರ್ತಿ, ಪಣಿಯಪ್ಪ, ಆರ್. ಕೃಷ್ಣ ಪೂಜಾರಿ, ಎಸ್.ಆರ್. ಸುರೇಶ್ ಸೇರಿದಂತೆ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

Continue Reading

ಬೆಂಗಳೂರು

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Sadhguru Jaggi Vasudev: ಕಾಂಬೋಡಿಯಾದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕತೆಯ ಅನ್ವೇಷಣೆಗಾಗಿ ಸದ್ಗುರು ಜಗ್ಗಿ ವಾಸುದೇವ್‌ ಅವರು ತೆರಳಿದ್ದಾರೆ. ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸದ್ಗುರುಗಳ ಮೊದಲ ಪ್ರಯಾಣವಾಗಿದೆ.

VISTARANEWS.COM


on

Sadhguru Jaggi Vasudev
Koo

ಸೀಮ್‌ ರೀಪ್‌(ಕಾಂಬೋಡಿಯಾ): ಮೆದುಳಿನ ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಆಳದ ಅನ್ವೇಷಣೆಗಾಗಿ ಆಧ್ಯಾತ್ಮಿಕ ಗುರು ಹಾಗೂ ಈಶ ಫೌಂಡೇಶನ್‌ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ಅವರು ಕಾಂಬೋಡಿಯಾಗೆ ತೆರಳಿದ್ದಾರೆ. ಕಾಂಬೋಡಿಯಾ ಪ್ರವಾಸೋದ್ಯಮ ಸಚಿವ ಎಚ್.ಇ. ಎಸ್ಒಕೆ ಸೋಕೆನ್ ಅವರು ಸೀಮ್ ರೀಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸದ್ಗುರುಗಳನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.

ಗಮನಾರ್ಹ ಆತಿಥ್ಯದ ಜತೆಗೆ ಸಚಿವರು, ಕಾಂಬೋಡಿಯಾದ ಪ್ರಧಾನ ಮಂತ್ರಿಯವರ ವೈಯಕ್ತಿಕ ಪತ್ರವನ್ನು ಸದ್ಗುರುಗಳಿಗೆ ಪ್ರಸ್ತುತಪಡಿಸಿದರು. ಸಚಿವರೊಂದಿಗೆ ಅವರ ಪತ್ನಿ, ಕಾಂಬೋಡಿಯಾದ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ಕಾನ್ಸುಲೇಟ್ ಜನರಲ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ತಮ್ಮ ಚಟುವಟಿಕೆಗಳಿಗೆ ಮರಳಿರುವ ಸದ್ಗುರುಗಳ ಮೊದಲ ಪ್ರಯಾಣ. ಅಲ್ಲಿ ಅವರು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯಗಳ ಹಿಂದಿನ ವಿಜ್ಞಾನವನ್ನು ಅನ್ವೇಷಿಸಲಿದ್ದಾರೆ. ಅವರ ಕಾರ್ಯಕ್ರಮವು ಏಪ್ರಿಲ್ 30 ರವರೆಗೆ ಜರುಗಲಿದ್ದು, ಈ ಸಮಯದಲ್ಲಿ ಅಲ್ಲಿನ ಸ್ಥಳೀಯ ಸಂಸ್ಕೃತಿಯಲ್ಲಿ ಮಿಂದೇಳುವುದರ ಜತೆಗೆ, ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿರುವ ಬೇಯಾನ್ ಮತ್ತು ಅಂಕೋರ್ ವಾಟ್ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಯಾವುದೇ ಬೋಧನೆ, ತತ್ವಶಾಸ್ತ್ರ, ಮತಧರ್ಮ ಅಥವಾ ನಂಬಿಕೆಯ ವ್ಯವಸ್ಥೆಗಳಿಗೆ ಒಳಗಾಗದ ಸದ್ಗುರುಗಳು, ತಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪ್ರಯತ್ನಗಳು, ಪರಿಸರ ಕಾರ್ಯಗಳು, ಗ್ರಾಮೀಣ ಶಿಕ್ಷಣ ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ತಲುಪಿದ್ದಾರೆ. ಪ್ರಪಂಚದಾದ್ಯಂತ ಮೂವತ್ತು ಲಕ್ಷ ಜನರು ಅವರ ಪ್ರಮುಖ ಕಾರ್ಯಕ್ರಮವಾದ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ಆ ಮೂಲಕ ಜನರು ತಮ್ಮ ಜೀವನದ ಗ್ರಹಿಕೆಯಲ್ಲಿ ಹೆಚ್ಚಿನ ಸಮತೋಲನ ಮತ್ತು ಗಮನಾರ್ಹ ಸ್ಪಷ್ಟತೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!

2023 ರಲ್ಲಿ ಸದ್ಗುರುಗಳ ಸಾಮಾಜಿಕ ಮಾಧ್ಯಮವು 4.37 ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಬೋಡಿಯಾದ ಅವರ ಅನ್ವೇಷಣೆಯು, ಆ ದೇಶದ ಬಗೆಗಿನ ಅವರ ಒಳನೋಟಗಳಿಂದ ಪ್ರಯೋಜನ ಪಡೆಯಲು ಜಗತ್ತಿಗೆ ಒಂದು ವಿಶಿಷ್ಟ ಅವಕಾಶವನ್ನು ಒದಗಿಸಲಿದೆ.

Continue Reading

ಬೆಂಗಳೂರು

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

Bengaluru Karaga: ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು.

VISTARANEWS.COM


on

bengaluru karaga in darga
Koo

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru karaga Festival) ಮಂಗಳವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು. ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ (Dharmaraya swamy) ರಥೋತ್ಸವ ಬಳಿಕ ರಾತ್ರಿ 2 ಗಂಟೆಗೆ ಕರಗ ಶಕ್ತ್ಸೋತ್ಸವಕ್ಕೆ (Bangalore Karaga) ಚಾಲನೆ ನೀಡಲಾಯಿತು. ಮುಂಜಾನೆ ಹಾಜಿ ಮಸ್ತಾನ್‌ ಸಾಬ್‌ ದರ್ಗಾಗೂ (Haji Mastan Saab Darga) ಭೇಟಿ ಕೊಟ್ಟು 5.45ರ ವೇಳೆಗೆ ಧರ್ಮರಾಯ ಸ್ವಾಮಿ ದೇವಸ್ಥಾನದೊಳಗೆ ಕರಗ ಸೇರಿಕೊಂಡಿತು. ವೈಭವದ ಕರಗ ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು.

ನಿನ್ನೆ ರಾತ್ರಿ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹ್ಯಾರಿಸ್‌, ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಮುಂತಾದವರು ಭೇಟಿ ನೀಡಿದರು. ಬೆಳಗ್ಗೆಯಿಂದಲೇ ತಾಯಿಗೆ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ರಾತ್ರಿ 10.30ಕ್ಕೆ ಕಲ್ಯಾಣಿಗೆ ಹೋಗಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ವಾಪಸ್ ಬಂದು ಧರ್ಮರಾಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ರಥೋತ್ಸವದ ಬಳಿಕ ಭಕ್ತರ ಗೋವಿಂದ… ಗೋವಿಂದ… ಎಂಬ ಘೋಷಣೆಗಳ ನಡುವೆ ಅರ್ಚಕ ಜ್ಞಾನೇಂದ್ರ ಅವರು ಕರಗ ಹೊತ್ತು ಸಾಗಿದರು.

ಮುಖ್ಯ ರಥ ಧರ್ಮರಾಯಸ್ವಾಮಿ ರಥದಲ್ಲಿ ಅರ್ಜುನ‌ ಮತ್ತು ದ್ರೌಪದಿ ದೇವಿ ವಿರಾಜಮಾನರಾಗಿದ್ದರು. ಚಿಕ್ಕ ರಥದಲ್ಲಿ ಗ್ರಾಮದೇವಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪಾಂಡವರ ಮೂರ್ತಿಗಳು ಸೇರಿ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಗಳು ಮುಂದೆ ಸಾಗುತ್ತಿದ್ದಂತೆ ದೇಗುಲದಿಂದ ದ್ರೌಪದಿ ದೇವಿ ಕರಗ ಹೊರಬಂದಿತು.

ಕರಗ ಸಾಗುವ ರಾಜಬೀದಿಗಳೆಲ್ಲಾ ಬಣ್ಣ ಬಣ್ಣದ ಲೈಟಿಂಗ್‌ ಹಾಗೂ ಜನರಿಂದ ಕಂಗೊಳಿಸಿದವು. ಸಾಂಪ್ರದಾಯಿಕವಾಗಿ ಎ. ಜ್ಞಾನೇಂದ್ರ 14ನೇ ಬಾರಿ ಕರಗ ಹೊತ್ತರು. ಒಂದು ರಥದಲ್ಲಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು, ಪಾಂಡವರ ಮೂರ್ತಿಗಳು ಸೇರಿದಂತೆ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಂದಿತು. ಪೂಜೆ ನಂತರ ಮತ್ತೊಂದು ರಥದಲ್ಲಿ ದ್ರೌಪದಿ ಮತ್ತು ಅರ್ಜುನ ಮೂರ್ತಿ ಪ್ರತಿಷ್ಠಾಪನೆಯಾಯಿತು. ನಂತರ ರಥಗಳ ಮೆರವಣಿಗೆ ಆರಂಭವಾಯಿತು. ಖಡ್ಗಗಳನ್ನು ಹಿಡಿದು ನೂರಾರು ವೀರಕುಮಾರರು ಮೆರವಣಿಗೆಯಲ್ಲಿ ತೆರಳಿದರು. ರಥಗಳು ಮುಂದೆ ಸಾಗುತ್ತಿದ್ದಂತೆ ದ್ರೌಪದಿ ದೇವಿ ಕರಗ ದೇಗುಲದಿಂದ ಹೊರ ಬಂದಿದ್ದು, ಅದನ್ನು ಕಂಡು ಭಕ್ತರು ಹರ್ಷೋದ್ಗಾರ ಮಾಡಿದರು.

ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು. ಒಟ್ಟು 11-12 ಕಿಲೋಮೀಟರ್ ಕರಗದ ಮೆರವಣಿಗೆ ಸಾಗಿದೆ.

ಕರಗ ಮೆರವಣಿಗೆ ಮಾರ್ಗ

ರಥೋತ್ಸವದ ನಂತರ ಮಧ್ಯರಾತ್ರಿ 1 ಗಂಟೆಯಿಂದ ಕರಗ ಮಹೋತ್ಸವದ ಮೆರವಣಿಗೆ ಸಾಗಿತು. ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಿ ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಿ ನಂತರ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ತೆರಳಿತು. ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಯಿತು. ಬೆಳಗ್ಗೆ 5.45 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಿತು. ಬೆಳಗ್ಗೆ 8 ಗಂಟೆಗೆ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕರಗಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ | Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

Continue Reading
Advertisement
Village Administrative Officer
ಪ್ರಮುಖ ಸುದ್ದಿ6 mins ago

Village Administrative Officer: ತಾಂತ್ರಿಕ ಸಮಸ್ಯೆ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿ ಮೇ 15ರವರೆಗೆ ವಿಸ್ತರಣೆ

Lok Sabha Election
Latest26 mins ago

Lok Sabha Election : ಕಾಂಗ್ರೆಸ್​ ತೊರೆದ ಲವ್ಲಿ ಸೇರಿ ನಾಲ್ವರಿಂದ ಬಿಜೆಪಿ ಸೇರ್ಪಡೆ

Prajwal Revanna Case
ಪ್ರಮುಖ ಸುದ್ದಿ28 mins ago

Prajwal Revanna Case: ಎಚ್‌.ಡಿ.ರೇವಣ್ಣಗಿಲ್ಲ ನಿರೀಕ್ಷಣಾ ಜಾಮೀನು; ಬಂಧಿಸಲು ಸಿದ್ಧವಾದ ಎಸ್‌ಐಟಿ!

Physical abuse
ಮೈಸೂರು44 mins ago

Physical Abuse : ಮೊಬೈಲ್ ಕೊಡಿಸುವುದಾಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸೋದರ ಮಾವ

Lok Sabha Election
ಪ್ರಮುಖ ಸುದ್ದಿ44 mins ago

Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

Summer Tour
ಪ್ರವಾಸ52 mins ago

Summer Tour: ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

Prajwal Revanna Case
ಕರ್ನಾಟಕ54 mins ago

Prajwal Revanna Case: ಹೊಳೆನರಸೀಪುರ ರೇವಣ್ಣ ನಿವಾಸದಲ್ಲಿ ಎಸ್‌ಐಟಿ ಸ್ಥಳ ಮಹಜರು; ಸಂತ್ರಸ್ತೆ ಹೇಳಿಕೆ ದಾಖಲು

Lok Sabha Election
ಪ್ರಮುಖ ಸುದ್ದಿ1 hour ago

Lok Sabha Election : ರಾಹುಲ್ ಪ್ರಧಾನಿಯಾಗುವುದು ಪಾಕಿಸ್ತಾನದ ಆಸೆ ಎಂದ ಮೋದಿ, ತಿರುಗೇಟು ಕೊಟ್ಟ ಪ್ರಿಯಾಂಕಾ

Prajwal Revanna Case
ಕರ್ನಾಟಕ1 hour ago

Prajwal Revanna Case: ಪ್ರಜ್ವಲ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್;‌ ರೇವಣ್ಣ ಪಿಎ ಮನೆಯಲ್ಲಿ ಸಂತ್ರಸ್ತೆಯ ರಕ್ಷಣೆ!

Hardik Pandya
ಕ್ರಿಕೆಟ್1 hour ago

IPL 2024 : ಹಾರ್ದಿಕ್​ ಪಾಂಡ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಇರ್ಫಾನ್ ಪಠಾಣ್​​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌