Kargil Vijay Diwas 2024: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಕ್ಷಣವೂ ಯೋಚಿಸದ ಈ ವೀರ ಯೋಧರಿಗೊಂದು ಸಲಾಮ್ - Vistara News

ದೇಶ

Kargil Vijay Diwas 2024: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಕ್ಷಣವೂ ಯೋಚಿಸದ ಈ ವೀರ ಯೋಧರಿಗೊಂದು ಸಲಾಮ್

ಶೌರ್ಯ ಮತ್ತು ಧೈರ್ಯದಿಂದ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ದೇಶವೇ ಹೆಮ್ಮೆಪಡುವಂತೆ ಮಾಡಿದ ಕೆಲವು ಕಾರ್ಗಿಲ್ ವೀರರ ಕಥೆಗಳು ಇಲ್ಲಿವೆ. ದೇಶಕ್ಕಾಗಿ ಅವರ ತ್ಯಾಗ ಎಂದಿಗೂ ಮರೆಯಲಾಗದು. ಕಾರ್ಗಿಲ್ ವಿಜಯೋತ್ಸವದ (Kargil Vijay Diwas 2024) ದಿನದಂದು ಅವರ ತ್ಯಾಗವನ್ನು ಸ್ಮರಿಸಲೇಬೇಕು. ನಮ್ಮ ಮುಂದಿನ ಪೀಳಿಗೆಗೆ ತಿಳಿಸಲೇಬೇಕು.

VISTARANEWS.COM


on

Kargil Vijay Diwas 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಶದ ಗಡಿಯಲ್ಲಿ ಬಿಸಿಲು, ಮಳೆ, ಗಾಳಿ ಎನ್ನದೆ ಕಾವಲು ಕಾಯುತ್ತಿರುವ ನಮ್ಮ ಸೈನಿಕರು (Indian army). ತಮ್ಮ ಮನೆ, ಪರಿವಾರವನ್ನು ಬಿಟ್ಟು ದೇಶವೇ ತಮ್ಮ ಮನೆ ಎನ್ನುವಂತೆ ಕಾವಲು ಕಾಯುವ ಇವರು ಯುದ್ಧ (india-pakistan war) ಸನ್ನಿವೇಶದಲ್ಲಿ ಯಾವುದನ್ನೂ ಲೆಕ್ಕಿಸದೆ ಪ್ರಾಣ ತ್ಯಾಗಕ್ಕೂ ಮುಂದಾಗುತ್ತಾರೆ. ಅಂತಹ ಒಂದು ಘಟನೆ ಕಾರ್ಗಿಲ್ ಯುದ್ಧ (Kargil Vijay Diwas 2024). ಇದು ನಡೆದು 25 ವರ್ಷಗಳಾದರೂ ಅದರಲ್ಲಿ ಹೋರಾಡಿದ ಸೈನಿಕರ ತ್ಯಾಗದ ಕಥೆಗಳು ಅಜರಾಮರವಾಗಿದೆ.

ಪಾಕಿಸ್ತಾನದ ನುಸುಳಿಕೋರರನ್ನು ಹಿಮ್ಮೆಟ್ಟಿಸಲು ನಡೆದ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿದ್ದರು ಭಾರತದ ಸೈನಿಕರು. ಪ್ರಕೃತಿಯೂ ಹಲವು ಸವಾಲುಗಳನ್ನು ಒಡ್ಡಿತ್ತು. ಆದರೂ ನಮ್ಮ ಸೈನಿಕರು ಗಡಿಯಲ್ಲಿ ಶತ್ರು ಪಡೆಯ ಮೇಲೆರಗಿದರು. ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

ಮೇ ತಿಂಗಳಲ್ಲಿ ಆರಂಭವಾದ ಜುಲೈ ಅಂತ್ಯದವರೆಗೂ ನಡೆದಿತ್ತು. ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಜುಲೈ 26 ಅನ್ನು ʼಕಾರ್ಗಿಲ್‌ ವಿಜಯ್‌ ದಿವಸ್‌ʼ ಎಂದು ಆಚರಿಸಲಾಗುತ್ತದೆ. ಮಡಿದ ಯೋಧರ ಸಾಹಸಗಾಥೆಯನ್ನು, ಬದುಕಿನ ಕೊನೆಯ ಘಳಿಗೆಯಲ್ಲಿ ಅವರು ದೇಶಕ್ಕಾಗಿ ಮಾಡಿದ ತ್ಯಾಗವನ್ನು ನೆನಪಿಸಲಾಗುತ್ತದೆ. ಅವರ ಈ ಹೋರಾಟದ ಕಥೆ ಕೇವಲ ನಮಗೆ ಸ್ಫೂರ್ತಿ ನೀಡುವುದು ಮಾತ್ರವಲ್ಲ ಎಲ್ಲರ ಕಣ್ಣಂಚು ಒದ್ದೆಯಾಗುವಂತೆ ಮಾಡುವುದು. ಅಂತಹ ನಾಲ್ವರು ವೀರರ ಕುರಿತು ಮಾಹಿತಿ ಇಲ್ಲಿದೆ.

Kargil Vijay Diwas 2024
Kargil Vijay Diwas 2024


ಕ್ಯಾಪ್ಟನ್ ಎನ್ ಕೆಂಗುರುಸೆ

ಭಾರತದ ನಾಗಾಲ್ಯಾಂಡ್‌ನ ಕೊಹಿಮಾ ಜಿಲ್ಲೆಯಲ್ಲಿ ಜುಲೈ 1974ರಲ್ಲಿ ನೈಸೆಲಿ ಕೆಂಗುರುಸೆ ಮತ್ತು ಡಿನುವೊ ಕೆಂಗುರುಸೆ ದಂಪತಿಗೆ ಮಗನಾಗಿ ಜನಿಸಿದ ಕೆಂಗುರುಸೆ 1994 ರಿಂದ 1997ರವರೆಗೆ ಕೊಹಿಮಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಬಳಿಕ ಅವರು ಭಾರತೀಯ ಸೇನೆಯನ್ನು ಸೇರಿದರು.
1999ರ ಜೂನ್ 28ರಂದು ರಾತ್ರಿ ಆಪರೇಷನ್ ವಿಜಯ್ ಸಮಯದಲ್ಲಿ ಡ್ರಾಸ್ ಸೆಕ್ಟರ್‌ನಲ್ಲಿ ಏರಿಯಾ ಬ್ಲ್ಯಾಕ್ ರಾಕ್ ಮೇಲೆ ದಾಳಿ ನಡೆಸಲು ಘಾತಕ್‌ ಪ್ಲಟೂನ್ ಕಮಾಂಡರ್ ಆಗಿ ತಂಡವನ್ನು ಶೌರ್ಯದಿಂದ ಮುನ್ನಡೆಸಿದರು.


ಎತ್ತರದ ಬಂಡೆಯ ಮೇಲಿದ್ದ ಶತ್ರು ಸ್ಥಾನವನ್ನು ತಲುಪಲು ಕಮಾಂಡೋ ತಂಡವು ದಾಳಿಯ ಕುರಿತು ಯೋಜನೆ ರೂಪಿಸುತ್ತಿದ್ದಾಗಲೇ ಅವರ ಮೇಲೆ ದಾಳಿ ನಡೆದಿತ್ತು. ತೀವ್ರ ಗಾಯಗೊಂಡ ಕೆಂಗುರುಸೆ ಸ್ಥಳದಿಂದ ಹಿಮ್ಮೆಟ್ಟಲು ನಿರಾಕರಿಸಿದರು. ತಮ್ಮ ಬೂಟುಗಳನ್ನು ತೆಗೆದಿರಿಸಿ ಬಂಡೆಯನ್ನು ತೆವಳುತ್ತ ಏರಿ ಸಾಯುವ ಮೊದಲು ಶತ್ರು ಪಡೆಯ ಮೂವರನ್ನು ಕೊಂದು ಹಾಕಿದರು.

ಇದು ಬೆಟಾಲಿಯನ್ ವಿಜಯಕ್ಕೆ ಕಾರಣವಾಯಿತು. ಏಕಾಂಗಿಯಾಗಿ ಹೋರಾಡಿ ಶತ್ರುಗಳ ಸ್ಥಾನವನ್ನು ವಶಕ್ಕೆ ಪಡೆದುಕೊಂಡ ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾವೀರ ಚಕ್ರವನ್ನು ನೀಡಲಾಯಿತು.

Kargil Vijay Diwas 2024
Kargil Vijay Diwas 2024


ಲೆಫ್ಟಿನೆಂಟ್ ಕೀಶಿಂಗ್ ಕ್ಲಿಫರ್ಡ್ ನಾಂಗ್ರಮ್

ಭಾರತದ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಕೀಶಿಂಗ್ ಪೀಟರ್ ಮತ್ತು ಸೈಲಿ ನೊಂಗ್ರಮ್ ಅವರ ಮಗನಾಗಿ ಜನಿಸಿದ ಕಿಶಿಂಗ್ ಬಟಾಲಿಕ್ ಸೆಕ್ಟರ್‌ನಲ್ಲಿ ಪಾಯಿಂಟ್ 4812 ಅನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಆಗ್ನೇಯ ದಿಕ್ಕಿನಿಂದ ಆಕ್ರಮಣ ಮಾಡುವ ಜವಾಬ್ದಾರಿ ಹೊತ್ತುಕೊಂಡರು.

ಲೆಫ್ಟಿನೆಂಟ್ ಕೀಶಿಂಗ್ ಕ್ಲಿಫರ್ಡ್ ನೊಂಗ್ರಮ್ ಅವರಿದ್ದ ಪ್ರದೇಶದ ಮೇಲೆ ಶತ್ರುಗಳು ನಿರಂತರವಾಗಿ ಸ್ವಯಂಚಾಲಿತ ಮೆಷಿನ್‌ ಗನ್‌ನಿಂದ ಸುಮಾರು ಎರಡು ಗಂಟೆಗಳ ಕಾಲ ದಾಳಿ ನಡೆಸಿದರು. ಆದರೂ ತಮ್ಮ ಸುರಕ್ಷತೆಯನ್ನು ಲೆಕ್ಕಿಸದೆ ಅವರು ಶತ್ರು ಪಡೆಯತ್ತ ಗ್ರೆನೇಡ್‌ಗಳನ್ನು ಎಸೆದು ಆರು ಶತ್ರುಗಳನ್ನು ಕೊಂದರು.


ಶತ್ರುಗಳ ಮೆಷಿನ್ ಗನ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುವಾಗ ಗಾಯಗೊಂಡರೂ ಅವರು ಪಟ್ಟು ಬಿಡಲಿಲ್ಲ. ಇದರಿಂದ ಶತ್ರುಗಳು ದಿಗ್ಭ್ರಮೆಗೊಂಡರು. ಸಾಯುವವರೆಗೂ ವೀರಾವೇಶದಿಂದ ಹೋರಾಡಿದರು. ಇದರಿಂದ ಪಾಯಿಂಟ್ 4812 ಅನ್ನು ವಶ ಪಡೆಯುವುದು ಭಾರತೀಯ ಸೈನಿಕರಿಗೆ ಸಾಧ್ಯವಾಯಿತು. ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾವೀರ ಚಕ್ರವನ್ನು ನೀಡಲಾಯಿತು.

Kargil Vijay Diwas 2024
Kargil Vijay Diwas 2024


ನಾಯಕ್ ದಿಗೇಂದ್ರ ಕುಮಾರ್

ರಾಜಸ್ಥಾನದ ಜಲಾರ ಗ್ರಾಮದವರಾದ ಶಿವದನ್ ಸಿಂಗ್ ಮತ್ತು ರಾಜ್ ಗೋರ್ ದಂಪತಿಯ ಮಗನಾಗಿ ಜುಲೈ 1969 ರಲ್ಲಿ ಜನಿಸಿದ ದಿಗೇಂದ್ರ ಕುಮಾರ್, ಡ್ರಾಸ್ ಸೆಕ್ಟರ್‌ನಲ್ಲಿನ ಟೋಲೋಲಿಂಗ್ ದಾಳಿಯ ಸಮಯದಲ್ಲಿ ಅವರು ಲೈಟ್ ಮೆಷಿನ್ ಗನ್ ಗ್ರೂಪ್‌ನ ಕಮಾಂಡರ್ ಆಗಿದ್ದರು.

ಇವರ ಕಮಾಂಡೋ ತಂಡದಲ್ಲಿ ಮೇಜರ್ ವಿವೇಕ್ ಗುಪ್ತಾ, ಸುಬೇದಾರ್ ಭನ್ವರ್ ಲಾಲ್ ಭಾಕರ್, ಸುಬೇದಾರ್ ಸುರೇಂದ್ರ ಸಿಂಗ್ ರಾಥೋರ್, ಲ್ಯಾನ್ಸ್ ನಾಯಕ್ ಜಸ್ವಿರ್ ಸಿಂಗ್, ನಾಯಕ್ ಸುರೇಂದ್ರ, ನಾಯಕ್ ಚಮನ್ ಸಿಂಗ್ ತೆವಾಟಿಯಾ, ಲಾನ್ಸ್ ನಾಯಕ್ ಬಚ್ಚನ್ ಸಿಂಗ್, ಸಿಎಂಎಚ್ ಜಶ್ವಿರ್ ಸಿಂಗ್, ಮತ್ತು ಹವಾಲ್ದಾರ್ ಸುಲ್ತಾನ್ ಸಿಂಗ್ ನರ್ವಾರ್ ಇದ್ದರು. ಸುಭದ್ರವಾದ ಶತ್ರು ನೆಲೆಯನ್ನು ವಶಪಡಿಸಿಕೊಳ್ಳುವುದು ಅವರ ಮುಖ್ಯ ಗುರಿಯಾಗಿತ್ತು.

ಟೋಲೋಲಿಂಗ್ ಬೆಟ್ಟದ ಮೇಲೆ ಪಾಕಿಸ್ತಾನಿ ಸೇನೆ 11 ಬಂಕರ್‌ಗಳನ್ನು ನಿರ್ಮಿಸಿತ್ತು. ಕುಮಾರ್ ಮೊದಲ ಮತ್ತು ಕೊನೆಯ ಬಂಕರ್‌ಗಳನ್ನು ಗುರಿಯಾಗಿಸಿಕೊಂಡಿದ್ದರು. ಇತರ ಕಮಾಂಡೋಗಳು ಉಳಿದ 9 ಬಂಕರ್‌ಗಳನ್ನು ಗುರಿಯಾಗಿಸಿಕೊಂಡಿದ್ದರು.


1999ರ ಜೂನ್ 13ರಂದು ನಡೆದ ಆಕ್ರಮಣವು ಭಾರೀ ಸಾವುನೋವುಗಳಿಗೆ ಕಾರಣವಾಯಿತು. ಸುಬೇದಾರ್ ಭನ್ವರ್ ಲಾಲ್ ಭಾಕರ್, ಲ್ಯಾನ್ಸ್ ನಾಯಕ್ ಜಸ್ವಿರ್ ಸಿಂಗ್, ನಾಯಕ್ ಸುರೇಂದ್ರ ಮತ್ತು ನಾಯಕ್ ಚಮನ್ ಸಿಂಗ್ , ಮೇಜರ್ ವಿವೇಕ್ ಗುಪ್ತಾ ಸಾವನ್ನಪ್ಪಿದರು. ದಿಗೇಂದ್ರ ಅವರ ಎಡಗೈಗೆ ಗುಂಡು ತಗುಲಿದರೂ ಅವರು ಒಂದು ಕೈಯಿಂದ ಗುಂಡು ಹಾರಿಸುವುದನ್ನು ಮುಂದುವರಿಸಿದರು. 48 ಪಾಕಿಸ್ತಾನಿ ಸೈನಿಕರನ್ನು ಏಕಾಂಗಿಯಾಗಿ ಕೊಂದು ಹಾಕಿದರು.

ತೀವ್ರವಾದ ಹೋರಾಟದ ಅನಂತರ ಭಾರತೀಯ ಸೇನೆ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. 1999ರ ಸ್ವಾತಂತ್ರ್ಯ ದಿನದಂದು ಅವರು ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾ ವೀರ ಚಕ್ರವನ್ನು ಪಡೆದರು.

Kargil Vijay Diwas 2024
Kargil Vijay Diwas 2024


ಕ್ಯಾಪ್ಟನ್ ಅಮೋಲ್ ಕಾಲಿಯಾ

1974ರ ಫೆಬ್ರವರಿ 26ರಂದು ಪಂಜಾಬ್‌ನ ರೋಪರ್ ಜಿಲ್ಲೆಯ ನಂಗಲ್ ಪಟ್ಟಣದಲ್ಲಿ ಸತ್ ಪಾಲ್ ಕಾಲಿಯಾ ಮತ್ತು ಉಷಾ ಕಾಲಿಯಾ ದಂಪತಿಯ ಮಗನಾಗಿ ಜನಿಸಿದ ಕ್ಯಾಪ್ಟನ್ ಅಮೋಲ್ ಕಾಲಿಯಾ ಅವರಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಕನಸನ್ನು ಹೊಂದಿದ್ದರು. ಹೀಗಾಗಿ ಎಂಜಿನಿಯರಿಂಗ್‌ನ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಅವರು ಸೇನಾ ತರಬೇತಿ ಶಾಲೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಲು ನಿರ್ಧರಿಸಿದರು.


1999ರ ಭಾರತ ಮತ್ತು ಪಾಕಿಸ್ತಾನದ ಯುದ್ಧದ ವೇಳೆ ಪಾಕಿಸ್ತಾನಿ ಸೈನಿಕರಿಂದ ಬಹಳ ಮುಖ್ಯವಾದ ಪರ್ವತದ ತುದಿಯನ್ನು ವಶಪಡಿಸಿಕೊಳ್ಳಲು ಕ್ಯಾಪ್ಟನ್ ಕಾಲಿಯಾ ಅವರ ತಂಡವನ್ನು ಕಳುಹಿಸಲಾಯಿತು. ಇದು ಅಪಾಯಕಾರಿ ಕಾರ್ಯಾಚರಣೆಯಾಗಿತ್ತು. ಆದರೆ ಕ್ಯಾಪ್ಟನ್ ಕಾಲಿಯಾ ಮತ್ತು ಅವರ 13 ಸಹ ಸೈನಿಕರು ಪರ್ವತ ಹೋರಾಟದಲ್ಲಿ ಪರಿಣತರಾಗಿದ್ದರು. ರಾತ್ರಿಯಲ್ಲೇ ಪರ್ವತದ ತುದಿಯನ್ನು ತಲುಪಿದ ಅವರು ಶತ್ರು ಸೈನಿಕರೊಂದಿಗೆ ಹೋರಾಡಲು ಪ್ರಾರಂಭಿಸಿದರು. ಯುದ್ಧದ ಸಮಯದಲ್ಲಿ ಕ್ಯಾಪ್ಟನ್ ಕಾಲಿಯಾ ಅವರ ತಂಡದಲ್ಲಿದ್ದ ಕೆಲವು ಸೈನಿಕರು ವೀರ ಮರಣವನ್ನು ಅಪ್ಪಿದರು.

ಇದನ್ನೂ ಓದಿ: Kargil Vijay Diwas 2024: ಕಾರ್ಗಿಲ್ ಯುದ್ಧದ ಹೃದಯಸ್ಪರ್ಶಿ ಕಥೆ ಹೇಳುವ ಈ 9 ಪುಸ್ತಕಗಳನ್ನು ಓದಲೇಬೇಕು!

ಕ್ಯಾಪ್ಟನ್ ಕಾಲಿಯಾ ತೀವ್ರವಾಗಿ ಗಾಯಗೊಂಡಿದ್ದರೂ ಧೈರ್ಯದಿಂದ ಹೋರಾಟ ಮುಂದುವರಿಸಿ ಮೂವರು ಶತ್ರು ಸೈನಿಕರನ್ನು ಕೊಂದರು. ತಮ್ಮ ಕೊನೆಯ ಉಸಿರಿನವರೆಗೂ ಶತ್ರುಗಳ ಮೇಲೆ ದಾಳಿ ನಡೆಸಿದ ಕ್ಯಾಪ್ಟನ್ ಕಾಲಿಯಾ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಪರ್ವತದ ತುದಿಯ ಪ್ರದೇಶವೂ ಭಾರತದ ಪಾಲಾಯಿತು. ಈ ವೀರ ಯೋಧರ ಸಾಹಸ ಮತ್ತು ಪರಾಕ್ರಮ ಅವಿಸ್ಮರಣೀಯ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

PM Narendra Modi Live: ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ, ವೀರ ಯೋಧರಿಗೆ ಗೌರವ ನಮನ-ಲೈವ್‌ ಇಲ್ಲಿ ವೀಕ್ಷಿಸಿ

PM Narendra Modi Live:ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಲಡಾಕ್ ನಲ್ಲಿರುವ ಡ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಕಾರ್ಗಿಲ್ ಯುದ್ಧದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸಲಿದ್ದಾರೆ.

VISTARANEWS.COM


on

PM Narendra Modi Live
Koo

ಹೊಸದಿಲ್ಲಿ: ಇಂದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ಕಾರ್ಗಿಲ್‌ ವಿಜಯ್‌ ದಿವಸ್‌(Kargil Vijay Diwas 2024). ಇಂದಿಗೆ ಕೆಣಕಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತ್ಯಾಗ ಬಲಿದಾನವನ್ನು ಲೆಕ್ಕಿಸದೇ ದಿಟ್ಟ ಉತ್ತರ ಕೊಟ್ಟು 25ವರ್ಷಗಳು ಸಂದಿವೆ. ಪಾಕಿಸ್ತಾನದೊಂದಿಗಿನ (india- pakistan war) 1999ರ ಸಂಘರ್ಷದಲ್ಲಿ ಭಾರತದ ವಿಜಯದ ಸ್ಮರಣಾರ್ಥವಾಗಿ ಜುಲೈ 26ರಂದು ಆಚರಿಸಲಾಗುತ್ತದೆ. ಈ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ(PM Narendra Modi Live) ಅವರು ಲಡಾಕ್ ನಲ್ಲಿರುವ ಡ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಕಾರ್ಗಿಲ್ ಯುದ್ಧದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಭೇಟಿಯ ಲೈವ್‌ ಇಲ್ಲಿ ವೀಕ್ಷಿಸಿ.

ಇನ್ನು ಇದೇ ಸಂದರ್ಭದಲ್ಲಿ ಅವರು ವರ್ಚುವಲ್ ಮೂಲಕ ಶಿಂಕುನ್ ಲಾ ಸುರಂಗ ಯೋಜನೆಯ ಮೊದಲ ಸ್ಫೋಟಕ ನಡೆಸಿಕೊಡಲಿದ್ದಾರೆ. ಇದಕ್ಕೂ ಮುನ್ನ ಲಡಾಖ್‌ನ ನಿವೃತ್ತ ಲೆಫ್ಟಿನೆಂಟ್ ಗವರ್ನರ್ ಬ್ರಿಗ್ ಬಿ.ಡಿ. ಮಿಶ್ರಾ ಅವರು ಸೆಕ್ರೆಟರಿಯೇಟ್‌ನಲ್ಲಿ ಸಭೆ ನಡೆಸಿದ್ದಾರೆ. ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಬಿ. ಡಿ. ಮಿಶ್ರಾ ಅವರು ಲೆಫ್ಟಿನೆಂಟ್ ಗವರ್ನರ್ ಸೆಕ್ರೆಟರಿಯೇಟ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಗಿಲ್ ಯುದ್ಧ ಸ್ಮಾರಕ ಡ್ರಾಸ್‌ಗೆ ಭೇಟಿ ನೀಡುವ ಕುರಿತು ಚರ್ಚಿಸಿದ್ದಾರೆ. ಈ ಕುರಿತು ಲೆಫ್ಟಿನೆಂಟ್ ಗವರ್ನರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಎಲ್‌ಜಿ ಮಿಶ್ರಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

2022ರಲ್ಲಿ ಪ್ರಧಾನಿ ಮೋದಿ ಅವರು ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಮರ್ಪಿಸಿದ್ದರು. ಬಳಿಕ 1999ರಲ್ಲಿ ಇಲ್ಲಿ ಪ್ರಾಣ ಕಳೆದುಕೊಂಡ ಸೇನಾ ಸಿಬ್ಬಂದಿಗೆ ಗೌರವ ಸಲ್ಲಿಸಿದ್ದರು. ಭಾರತದಲ್ಲಿ ವಾರ್ಷಿಕವಾಗಿ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ. 1999ರಲ್ಲಿ ಆಪರೇಷನ್ ವಿಜಯ್ ವಿಜಯವನ್ನು ಇದು ನೆನಪಿಸುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾರ್ಗಿಲ್ ಯುದ್ಧದ ಮುಕ್ತಾಯವನ್ನು ಇದು ಸೂಚಿಸುತ್ತದೆ. ಈ ಯುದ್ಧ 1999ರ ಮೇ ತಿಂಗಳಲ್ಲಿ ಪ್ರಾರಂಭವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಭಯೋತ್ಪಾದಕರು ಒಳನುಸುಳಿದ್ದು, ಅವರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾಗಿದ್ದರು.

ಇದನ್ನೂ ಓದಿ: Kargil Vijay Diwas 2024: ಗುಂಡುಗಳು ದೇಹ ತೂರಿದ್ದರೂ ಹಿಂದೆ ಸರಿಯದೆ ಶತ್ರುಗಳನ್ನು ಹಿಮ್ಮೆಟ್ಟಿಸಿದರು!

Continue Reading

ದೇಶ

Kargil Vijay Diwas 2024: ಗುಂಡುಗಳು ದೇಹ ತೂರಿದ್ದರೂ ಹಿಂದೆ ಸರಿಯದೆ ಶತ್ರುಗಳನ್ನು ಹಿಮ್ಮೆಟ್ಟಿಸಿದರು!

ಸುಮಾರು ಎರಡು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯು ಅನೇಕ ವೀರ ಯೋಧರನ್ನು ಕಳೆದುಕೊಂಡಿತ್ತು. ಅವರಲ್ಲಿ ಕೆಲವರ ಹೋರಾಟದ ಕಥೆಗಳು ನಮಗೆ ಸ್ಫೂರ್ತಿ ನೀಡುವಂತಿದೆ ಮಾತ್ರವಲ್ಲ ಕಣ್ಣಂಚು ಒದ್ದೆಯಾಗುವಂತೆ ಮಾಡುತ್ತದೆ. ಅವರಲ್ಲಿ ಈ ಯೋಧರೂ ಸೇರಿದ್ದಾರೆ. ಇವರನ್ನೆಲ್ಲ ಗೌರವಿಸುವ ಸಲುವಾಗಿ ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas 2024) ಅನ್ನು ಆಚರಿಸಲಾಗುತ್ತದೆ. ಕೆಲವು ವೀರ ಯೋಧರ ಕತೆ ಇಲ್ಲಿದೆ.

VISTARANEWS.COM


on

By

Kargil Vijay Diwas 2024
Koo

ಭಾರತೀಯ ಸೈನಿಕರ (Indian army) ಶೌರ್ಯವನ್ನು ಗೌರವಿಸುವ ದಿನವಾದ ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas 2024) ಅನ್ನು ಪಾಕಿಸ್ತಾನದೊಂದಿಗಿನ (india- pakistan war) 1999ರ ಸಂಘರ್ಷದಲ್ಲಿ ಭಾರತದ ವಿಜಯದ ಸ್ಮರಣಾರ್ಥವಾಗಿ ಜುಲೈ 26ರಂದು ಆಚರಿಸಲಾಗುತ್ತದೆ. ಈ ಯುದ್ಧದಲ್ಲಿ ಭಾರತೀಯ ಸೇನೆಯ 527 ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು.

ಸುಮಾರು ಮೂರು ತಿಂಗಳ ಕಾಲ ನಡೆದ ಯುದ್ಧದಲ್ಲಿ 1999ರ ಜುಲೈ 26ರಂದು ಭಾರತೀಯ ಸೇನೆಯು ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆಯು ಆಕ್ರಮಿಸಿಕೊಂಡಿದ್ದ ನೆಲೆಗಳಿಂದ ಹಿಮ್ಮೆಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದು ಭಾರತದ ವಿಜಯವನ್ನು ಸೂಚಿಸುತ್ತದೆ. ಅಂದಿನಿಂದ ಪ್ರತಿ ವರ್ಷ ಕಾರ್ಗಿಲ್ ಯುದ್ಧ ದಿವಸ್ ಅನ್ನು ಆಚರಿಸಲಾಗುತ್ತದೆ. ಯುದ್ಧದ ಸಮಯದಲ್ಲಿ ಸೈನಿಕರು ಮಾಡಿದ ಅತ್ಯುನ್ನತ ತ್ಯಾಗವನ್ನು ಈ ದಿನ ಸ್ಮರಿಸಲಾಗುತ್ತದೆ.

ಭಾರತೀಯ ಸೇನೆಯು ಈ ಯುದ್ಧದಲ್ಲಿ ಅನೇಕ ವೀರ ಯೋಧರನ್ನು ಕಳೆದುಕೊಂಡಿತ್ತು. ಅವರಲ್ಲಿ ಕೆಲವರ ಹೋರಾಟದ ಕಥೆಗಳು ನಮಗೆ ಸ್ಫೂರ್ತಿ ನೀಡುವಂತಿದೆ ಮಾತ್ರವಲ್ಲ ಕಣ್ಣಂಚು ಒದ್ದೆಯಾಗುವಂತೆ ಮಾಡುತ್ತದೆ. ಅವರಲ್ಲಿ ಈ ಯೋಧರೂ ಸೇರಿದ್ದಾರೆ.

Kargil Vijay Diwas 2024
Kargil Vijay Diwas 2024


ಮೇಜರ್ ರಾಜೇಶ್ ಸಿಂಗ್ ಅಧಿಕಾರಿ

1970ರ ಡಿಸೆಂಬರ್ ನಲ್ಲಿ ಉತ್ತರಾಖಂಡದ ನೈನಿತಾಲ್ ನಲ್ಲಿ ಕೆ ಎಸ್ ಅಧಿಕಾರಿ ಮತ್ತು ಮಾಲ್ತಿ ಅಧಿಕಾರಿ ದಂಪತಿಯ ಮಗನಾಗಿ ಜನಿಸಿದ ರಾಜೇಶ್ ಸಿಂಗ್ ಭಾರತದ ಮಿಲಿಟರಿ ಅಕಾಡೆಮಿಯಾದ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿದರು. 1993ರ ಡಿಸೆಂಬರ್ 11ರಂದು ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಭಾರತೀಯ ಸೇನೆಗೆ ಅವರನ್ನು ನಿಯೋಜಿಸಲಾಯಿತು. ಭಾರತೀಯ ಸೇನೆಯ ಪದಾತಿ ದಳದಲ್ಲಿ ಇದ್ದ ಅವರನ್ನು ಕಾರ್ಗಿಲ್ ಯುದ್ಧದ ಸಮಯದಲ್ಲಿ 18 ಗ್ರೆನೇಡಿಯರ್ಸ್‌ನಲ್ಲಿ ನಿಯೋಜಿಸಲಾಗಿತ್ತು.


1999ರ ಮೇ 30ರಂದು ಟೊಲೊಲಿಂಗ್ ಅನ್ನು ವಶಪಡಿಸಿಕೊಳ್ಳಲು ತೆರಳಿದರು. ಶತ್ರುಗಳು ಬಲವಾದ ನೆಲೆ ಹೊಂದಿದ್ದ ಫಾರ್ವರ್ಡ್ ಸ್ಪರ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಆರಂಭಿಕ ನೆಲೆಯನ್ನು ಭದ್ರಪಡಿಸುವ ಕಾರ್ಯವನ್ನು ವಹಿಸಿಕೊಂಡ ಅವರ ಸೈನ್ಯವು ಸುಮಾರು 15,000 ಅಡಿ ಎತ್ತರದಲ್ಲಿದ್ದ ಶತ್ರುಗಳನ್ನು ತಮ್ಮ ಸ್ಥಾನದಿಂದ ಹಿಮ್ಮೆಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಹಿಮದಿಂದ ಆವೃತವಾದ ಕಠಿಣ ಪರ್ವತ ಭೂಪ್ರದೇಶದಲ್ಲಿ ನಡೆದ ಯುದ್ಧದಲ್ಲಿ ಇಬ್ಬರು ಶತ್ರು ಸಿಬ್ಬಂದಿಯನ್ನು ಕೊಂದರು.

ಹೋರಾಟದ ಸಮಯದಲ್ಲಿ ತೀವ್ರವಾಗಿ ಗಾಯಗೊಂಡರೂ ಅವರು ತಮ್ಮ ಉಪ ಘಟಕಗಳಿಗೆ ನಿರ್ದೇಶನ ನೀಡುವುದನ್ನು ಮುಂದುವರೆಸಿದರು. ಟೊಲೊಲಿಂಗ್‌ನಲ್ಲಿ ಎರಡನೇ ನೆಲೆಯನ್ನು ವಶಪಡಿಸಿಕೊಂಡ ಅನಂತರ ಪಾಯಿಂಟ್ 4590 ಅನ್ನು ವಶಪಡಿಸಿಕೊಂಡರು. ಆದರೆ ರಾಜೇಶ್ ಸಿಂಗ್ ಶತ್ರುಗಳ ದಾಳಿಯಿಂದ ಮೃತಪಟ್ಟರು. ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರವನ್ನು ನೀಡಲಾಯಿತು.

Kargil Vijay Diwas 2024
Kargil Vijay Diwas 2024


ರೈಫಲ್‌ಮ್ಯಾನ್ ಸಂಜಯ್ ಕುಮಾರ್

1976ರ ಮಾರ್ಚ್ ನಲ್ಲಿ ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಕಲೋಲ್ ಬಕೈನ್ ನಲ್ಲಿ ದುರ್ಗಾ ರಾಮ್ ಮತ್ತು ಭಾಗ್ ದೇವಿ ದಂಪತಿಯ ಮಗನಾಗಿ ಜನಿಸಿದ ಸಂಜಯ್ ಕುಮಾರ್ ಅವರನ್ನು 1999ರ ಜುಲೈ 4ರಂದು ಮುಷ್ಕೊಹ್ ಕಣಿವೆಯಲ್ಲಿ ಪಾಯಿಂಟ್ 4875ರ ಫ್ಲಾಟ್ ಟಾಪ್ ಪ್ರದೇಶವನ್ನು ವಶಪಡಿಸಿಕೊಳ್ಳಲು ನಿಯೋಜಿಸಲಾಯಿತು.

ಈ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ಶತ್ರುಗಳ ದಾಳಿಗೆ ತೀವ್ರ ಪ್ರತಿರೋಧವನ್ನು ತೋರಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ನಿಷ್ಕಪಟ ಧೈರ್ಯವನ್ನು ತೋರಿಸಿದ ಸಂಜಯ್ ಕುಮಾರ್ ತಮ್ಮ ಸುರಕ್ಷತೆಯನ್ನು ಸಂಪೂರ್ಣವಾಗಿ ಮರೆತು ಹೋರಾಡಿದರು. ಶತ್ರು ಪಡೆಯ ಮೂವರನ್ನು ಕೊಂದು ಹಾಕಿದರು.


ಗಂಭೀರವಾಗಿ ಗಾಯಗೊಂಡರೂ ಅವರು ಯುದ್ಧ ಭೂಮಿಯಿಂದ ಹಿಂದೆ ಸರಿಯಲಿಲ್ಲ. ಯುದ್ಧವನ್ನು ಮುನ್ನಡೆಸಿ ಶತ್ರುಗಳು ಆಶ್ಚರ್ಯಚಕಿತರಾಗುವಂತೆ ಮಾಡಿದರು. ತಮ್ಮ ಒಡನಾಡಿಗಳಿಗೆ ಯುದ್ಧದಲ್ಲಿ ಮುನ್ನಡೆಯಲು ಪ್ರೇರೇಪಿಸಿದರು. ಯುದ್ಧ ಮುಗಿದ ಬಳಿಕ ಅವರಿಗೆ ಭಾರತದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮವೀರ ಚಕ್ರವನ್ನು ನೀಡಲಾಯಿತು.

Kargil Vijay Diwas 2024
Kargil Vijay Diwas 2024


ಮೇಜರ್ ವಿವೇಕ್ ಗುಪ್ತಾ

ಉತ್ತರಾಖಂಡ್‌ನ ಡೆಹರಾಡೂನ್‌ನಲ್ಲಿ 1970ರ ಜನವರಿ 2ರಂದು ಲೆಫ್ಟಿನೆಂಟ್ ಕರ್ನಲ್ ಬಿಆರ್ ಎಸ್ ಗುಪ್ತಾ ಅವರ ಮಗನಾಗಿ ಜನಿಸಿದ ವಿವೇಕ್ ಗುಪ್ತಾ ಪದವಿಯ ಅನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರಿದರು. 1992ರ ಜೂನ್ 13ರಂದು, ಕೆಚ್ಚೆದೆಯ ಯೋಧರಿಗೆ ಹೆಸರುವಾಸಿಯಾದ ಪದಾತಿದಳದ ರೆಜಿಮೆಂಟ್ ರಜಪೂತಾನ ರೈಫಲ್ಸ್ ರೆಜಿಮೆಂಟ್‌ಗೆ ಅವರನ್ನು ನಿಯೋಜಿಸಲಾಯಿತು.

1997ರಲ್ಲಿ ಮೇಜರ್ ವಿವೇಕ್ ಅವರು ಸೇನಾ ಅಧಿಕಾರಿ ಕ್ಯಾಪ್ಟನ್ ರಾಜಶ್ರೀ ಬಿಷ್ಟ್ ಅವರನ್ನು ವಿವಾಹವಾದರು. 1999ರಲ್ಲಿ ಅವರು ಕಾರ್ಗಿಲ್ ಯುದ್ಧದಲ್ಲಿ ಅವರು ಪ್ರಮುಖ ಚಾರ್ಲಿ ಕಂಪನಿಯ ಕಮಾಂಡ್ ಆಗಿದ್ದರು. 2 ರಜಪೂತಾನ ರೈಫಲ್ಸ್ ಡ್ರಾಸ್ ಸೆಕ್ಟರ್‌ನಲ್ಲಿ ಟೋಲೋಲಿಂಗ್ ಟಾಪ್ ಮೇಲೆ ಬೆಟಾಲಿಯನ್ ದಾಳಿಯನ್ನು ಇವರ ನೇತೃತ್ವದಲ್ಲಿ ಪ್ರಾರಂಭಿಸಿತು.

ಮೇಜರ್ ವಿವೇಕ್ ಗುಪ್ತಾ ಅವರ ನಾಯಕತ್ವದಲ್ಲಿ ಶತ್ರು ಪಡೆಯ ಭಾರೀ ಫಿರಂಗಿ ಮತ್ತು ಸ್ವಯಂಚಾಲಿತ ಗುಂಡಿನ ದಾಳಿಯ ನಡುವೆಯೂ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ಸು ಸಾಧಿಸಲಾಯಿತು. ಚಾರ್ಲಿ ಕಂಪನಿಯ ಪ್ರಮುಖ ವಿಭಾಗದ ಮೂವರು ಸಿಬ್ಬಂದಿಗೆ ಬಲವಾದ ಗುಂಡೇಟು ಬಿದ್ದ ಪರಿಣಾಮ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಬಯಲು ಪ್ರದೇಶದಲ್ಲಿ ಹೀಗೆಯೇ ಮುಂದುವರಿದರೆ ಹೆಚ್ಚು ನಷ್ಟವಾಗುತ್ತದೆ ಎಂದು ತಿಳಿದ ತಕ್ಷಣವೇ ವಿವೇಕ್ ಗುಪ್ತಾ ರಾಕೆಟ್ ಲಾಂಚರ್ ಅನ್ನು ಶತ್ರುಸ್ಥಾನದತ್ತ ಹಾರಿಸಿದರು. ಆಘಾತಕ್ಕೊಳಗಾದ ಶತ್ರುಗಳು ಚೇತರಿಸಿಕೊಳ್ಳುವ ಮೊದಲು ಅವರು ಶತ್ರು ನೆಲೆಯ ಮೇಲೆ ಪ್ರಭುತ್ವ ಸ್ಥಾಪಿಸಿದರು. ಈ ವೇಳೆ ಎರಡು ಗುಂಡು ದೇಹವನ್ನು ತೂರಿ ಗಾಯಗೊಂಡರೂ ಮೂವರು ಶತ್ರು ಸೈನಿಕರನ್ನು ಕೊಲ್ಲುವಲ್ಲಿ ಯಶಸ್ವಿಯಾದರು.


ಇದನ್ನೂ ಓದಿ: Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ತತ್ತರಿಸಿದ ಪಾಕಿಗಳು; ಈ ನಾಲ್ವರು ಯೋಧರ ಸಾಹಸ ರೋಚಕ!

ಇವರಿಂದ ಸ್ಫೂರ್ತಿ ಪಡೆದ ಕಂಪೆನಿಯ ಉಳಿದವರು ಶತ್ರುಗಳ ನೆಲೆಯ ಮೇಲೆ ದಾಳಿ ನಿರಂತರ ನಡೆಸಿ ವಶಪಡಿಸಿಕೊಂಡರು. ಯುದ್ಧದ ಸಮಯದಲ್ಲಿ ಶೌರ್ಯದಿಂದ ಹೋರಾಡಿದ್ದ ಕ್ಯಾ. ವಿವೇಕ್ ಗುಪ್ತಾ ಬಲಿಯಾದರು. ಅವರ ಸ್ಫೂರ್ತಿದಾಯಕ ನಾಯಕತ್ವ ಮತ್ತು ಶೌರ್ಯವು ಅಂತಿಮವಾಗಿ ಟೋಲೋಲಿಂಗ್ ಟಾಪ್ ಅನ್ನು ವಶಪಡಿಸಿಕೊಳ್ಳಲು ಭಾರತೀಯ ಸೇನೆಗೆ ಸಾಧ್ಯವಾಯಿತು. ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾವೀರ ಚಕ್ರವನ್ನು ನೀಡಲಾಯಿತು.

Continue Reading

ದೇಶ

Union Budget 2024: ಕೇಂದ್ರ ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ ಅನುದಾನದಲ್ಲಿ ಭಾರೀ ಕಡಿತ! ನೆರೆಯ ರಾಷ್ಟ್ರಗಳಿಗೆ ಎಷ್ಟೆಷ್ಟು ನೆರವು ಘೋಷಣೆ?

Union Budget 2024: 2,068 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಭೂತಾನ್ ಭಾರತದಿಂದ ಅತಿಹೆಚ್ಚು ಅಭಿವೃದ್ಧಿ ನೆರವು ಪಡೆಯುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಹೆಚ್ಚಳವು ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಯನ್ನು ಒತ್ತಿಹೇಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಮಾಲ್ಡೀವ್ಸ್ ಹಿಂದಿನ 770 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಕೇವಲ 400 ಕೋಟಿ ರೂಪಾಯಿಗಳನ್ನು ಪಡೆಯುವುದರ ಮೂಲಕ ತೀವ್ರ ಇಳಿಕೆಗೆ ಸಾಕ್ಷಿಯಾಯಿತು. ಮಧ್ಯಂತರ ಬಜೆಟ್ ಈಗಾಗಲೇ 22% ಕಡಿತವನ್ನು ಪ್ರಸ್ತಾಪಿಸಿದೆ, ಆದರೆ ಅಂತಿಮ ಬಜೆಟ್ ಸಹಾಯವನ್ನು 48% ರಷ್ಟು ಕಡಿತಗೊಳಿಸಿತು

VISTARANEWS.COM


on

union budget 2024
Koo

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್‌(Union Budget 2024)ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Seetharaman) ಅವರು ಭಾರತದ ವಿದೇಶಿ ನೆರವು ಹಂಚಿಕೆಗಳಲ್ಲಿ ಗಣನೀಯ ಬದಲಾವಣೆಗಳನ್ನು ಘೋಷಿಸಿದ್ದಾರೆ. ಇದರದಲ್ಲಿ ನೆರೆಯ ರಾಷ್ಟ್ರಗಳಾದ ಮಾಲ್ಡೀವ್ಸ್‌ ಮತ್ತು ಭೂತಾನ್‌ಗೆ ಅನುದಾನ ಹಂಚಿಕೆಯಲ್ಲಿ ಈ ಬಾರಿ ಗಣನೀಯ ಬದಲಾವಣೆ ತರಲಾಗಿದೆ. ಮಾಲ್ಡೀವ್ಸ್‌ ಅನುದಾನದಲ್ಲಿ ಈ ಬಾರಿ ಭಾರೀ ಕಡಿತ ಮಾಡಲಾಗಿದೆ. ಹಾಗೆಯೇ ಭೂತಾನ್‌ ಅನುದಾನದಲ್ಲಿ ಏರಿಕೆ ಮಾಡಲಾಗಿದೆ.

2,068 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಭೂತಾನ್ ಭಾರತದಿಂದ ಅತಿಹೆಚ್ಚು ಅಭಿವೃದ್ಧಿ ನೆರವು ಪಡೆಯುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಹೆಚ್ಚಳವು ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಯನ್ನು ಒತ್ತಿಹೇಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಮಾಲ್ಡೀವ್ಸ್ ಹಿಂದಿನ 770 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಕೇವಲ 400 ಕೋಟಿ ರೂಪಾಯಿಗಳನ್ನು ಪಡೆಯುವುದರ ಮೂಲಕ ತೀವ್ರ ಇಳಿಕೆಗೆ ಸಾಕ್ಷಿಯಾಯಿತು. ಮಧ್ಯಂತರ ಬಜೆಟ್ ಈಗಾಗಲೇ 22% ಕಡಿತವನ್ನು ಪ್ರಸ್ತಾಪಿಸಿದೆ, ಆದರೆ ಅಂತಿಮ ಬಜೆಟ್ ಸಹಾಯವನ್ನು 48% ರಷ್ಟು ಕಡಿತಗೊಳಿಸಿತು.

ಚೀನಾ ಪರ ನಿಲುವಿಗೆ ಹೆಸರುವಾಸಿಯಾದ ಮೊಹಮದ್ ಮುಯಿಝು ಅವರು ಮಾಲ್ಡೀವ್ಸ್‌ ಅಧ್ಯಕ್ಷರಾಗಿ ಚುನಾಯಿತರಾದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಅವರ ಆಡಳಿತದ ವಿಮರ್ಶಾತ್ಮಕ ಹೇಳಿಕೆಗಳು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವ “ಮಾಲ್ಡೀವ್ಸ್ ಬಹಿಷ್ಕಾರ” ಅಭಿಯಾನವನ್ನು ಹುಟ್ಟುಹಾಕಿತು.

ಈ ಬಾರಿ ನೇಪಾಳವು 700 ಕೋಟಿ ರೂಪಾಯಿ ಅತ್ಯಧಿಕ ನೆರವನ್ನು ಪಡೆದುಕೊಂಡಿದೆ. ಇದು ನೇಪಾಳ ಮತ್ತು ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ. ಶ್ರೀಲಂಕಾವು ಕಳೆದ ವರ್ಷದ 60 ಕೋಟಿ ರೂಪಾಯಿಗಳ ನೆರವು ಪಡೆದಿತ್ತು. ಈ ಬಾರಿ 245 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದು, ನೆರವಿನಲ್ಲಿ ಗಣನೀಯ ಏರಿಕೆ ಕಂಡಿದೆ.

ಬಜೆಟ್‌ನಲ್ಲಿ ದಕ್ಷಿಣ ಏಷ್ಯಾದ ಆಚೆಗಿನ ದೇಶಗಳಿಗೂ ಮೀಸಲಿಡಲಾಗಿದೆ. ಇರಾನ್‌ನ ಚಬಹಾರ್ ಬಂದರು 100 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದು, ಅದರ ಕಾರ್ಯತಂತ್ರದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅಫ್ಘಾನಿಸ್ತಾನದ ನೆರವನ್ನು 220 ಕೋಟಿಯಿಂದ 200 ಕೋಟಿಗೆ ಸ್ವಲ್ಪ ಕಡಿಮೆ ಮಾಡಲಾಗಿದೆ. ಬಾಂಗ್ಲಾದೇಶಕ್ಕೆ 120 ಕೋಟಿ ರೂ., ಮ್ಯಾನ್ಮಾರ್‌ನ ನೆರವನ್ನು 320 ಕೋಟಿ ರೂ.ಗಳಿಂದ 250 ಕೋಟಿ ರೂ.ಗೆ ಇಳಿಸಲಾಯಿತು. ಆಫ್ರಿಕನ್ ರಾಷ್ಟ್ರಗಳು ಒಟ್ಟಾರೆಯಾಗಿ 200 ಕೋಟಿ ರೂಪಾಯಿಗಳನ್ನು ಪಡೆದಿವೆ ಮತ್ತು ಮಾರಿಷಸ್‌ಗೆ 370 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಒಟ್ಟಾರೆ ವಿದೇಶಾಂಗ ವ್ಯವಹಾರಗಳ ಬಜೆಟ್‌ ಎಷ್ಟು?

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಒಟ್ಟು ಬಜೆಟ್ ಅನ್ನು 29,121 ಕೋಟಿ ರೂಗಳಿಂದ 22,154 ಕೋಟಿಗೆ ಇಳಿಸಲಾಗಿದ್ದು, ಇದು ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಹಂಚಿಕೆಯೊಂದಿಗೆ ಹೊಂದಿಕೆಯಾಗುತ್ತದೆ. ಕೇಂದ್ರ ಬಜೆಟ್ 2024-25 ಭಾರತದ ಕ್ರಿಯಾತ್ಮಕ ವಿದೇಶಾಂಗ ನೀತಿಯನ್ನು ಪ್ರತಿಬಿಂಬಿಸುತ್ತದೆ. ಭೂತಾನ್ ಮತ್ತು ಇತರ ನೆರೆಹೊರೆಗಳಿಗೆ ಹೆಚ್ಚಿದ ಬೆಂಬಲವು ಭಾರತದ ವಿಕಸನಗೊಳ್ಳುತ್ತಿರುವ ರಾಜತಾಂತ್ರಿಕ ಆದ್ಯತೆಗಳನ್ನು ಒತ್ತಿಹೇಳುತ್ತದೆ.

ಇದನ್ನೂ ಓದಿ: Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

Continue Reading

ಅಂಕಣ

ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

ರಾಜಮಾರ್ಗ ಅಂಕಣ: ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

VISTARANEWS.COM


on

ರಾಜಮಾರ್ಗ ಅಂಕಣ Kargil Vijay Diwas 2024
Koo

ಇಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಭಾರತವು ಗೆದ್ದ ಅತ್ಯಂತ ಕಠಿಣ ಯುದ್ಧ (Kargil Vijay Diwas) ಅದು! 1999ರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ ಮಲಿಕ್ ಬರೆದಿರುವ ‘KARGIL – FROM SURPRISE TO VICTORY’ ಓದುತ್ತಾ ಹೋದಂತೆ ನಾನು ಹಲವಾರು ಬಾರಿ ಬೆಚ್ಚಿಬಿದ್ದಿದ್ದೇನೆ! ಯಾಕೆಂದರೆ ಅದು ಭಾರತವು ಎದುರಿಸಿದ ಅತ್ಯಂತ ಕಠಿಣವಾದ ಯುದ್ಧ (India0 Pakistan War) ಮತ್ತು ದೀರ್ಘಕಾಲದ ಯುದ್ಧ. ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

ಯುದ್ಧದ ಹಿನ್ನೆಲೆ – ಮುಷರಫ್ ಕುತಂತ್ರ

ಆಗಷ್ಟೇ ಭಾರತವು ಅಣುಪರೀಕ್ಷೆ ಮಾಡಿ ಜಗತ್ತಿನ ಕಣ್ಣು ಕೋರೈಸುವ ಸಾಧನೆಯನ್ನು ಮಾಡಿತ್ತು. ಪಾಕ್ ಕೂಡ ಅಮೇರಿಕಾದ ನೆರವು ಪಡೆದು ತನ್ನ ಬಳಿ ಅಣುಬಾಂಬು ಇದೆ ಎಂದು ಹೇಳಿಕೊಂಡಿತ್ತು. ಆಗ ಭಾರತದ ಪ್ರಧಾನಿ ಆಗಿದ್ದ ವಾಜಪೇಯಿ (Atal Bihari Vajpayee) ಅವರು ತುಂಬಾ ಮೃದು ನಿಲುವಿನ ನಾಯಕ ಎಂದು ಪಾಕ್ ನಂಬಿ ಕುಳಿತಿತ್ತು. ಪಾಕಿಸ್ಥಾನಕ್ಕೆ ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ (Siachin) ವಶಪಡಿಸಿಕೊಳ್ಳಬೇಕು ಎಂಬ ದುರಾಸೆ. ಅಲ್ಲಿಂದ ಮುಂದೆ ಕಾರ್ಗಿಲ್ ಮತ್ತು ಮುಂದೆ ಇಡೀ ಕಾಶ್ಮೀರವನ್ನು ಕಬಳಿಸಬೇಕು ಎನ್ನುವ ಮಾಸ್ಟರ್ ಪ್ಲಾನ್! ಆಗ ಪಾಕಿಸ್ತಾನದ ಸೇನಾ ನಾಯಕ ಪರ್ವೇಜ್ ಮುಷರಫ್ (Parvez Musharraf) ಹೊಂಚು ಹಾಕಿ ಕುಳಿತ ಕಾಲ ಅದು.

ಅದಕ್ಕೆ ಪೂರಕವಾಗಿ 1998ರ ಜೂನ್ ತಿಂಗಳಿಂದಲೇ ಪಾಕಿಸ್ಥಾನದ 5000ರಷ್ಟು ಸೈನಿಕರು ಲೈನ್ ಆಫ್ ಕಂಟ್ರೋಲ್ ದಾಟಿ ಭಾರತದ 4-10 ಕಿ.ಮೀ. ಒಳಗೆ ಬಂದು ಎತ್ತರದ ಪ್ರದೇಶದಲ್ಲಿ ಜಮಾವಣೆ ಆಗತೊಡಗಿದ್ದರು! ಅವರ ಬಳಿಗೆ ಆಧುನಿಕ ಶಸ್ತ್ರಾಸ್ತ್ರಗಳು ಬಂದು ತಲುಪಿದ್ದವು. ಆದರೆ 1999ರ ಮೇ 18ರವರೆಗೆ ಭಾರತ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಭಾರತೀಯ ಸೇನಾ ಗೂಢಚಾರ ಸಂಸ್ಥೆಯವರು ಇನ್ನೂ ಸ್ವಲ್ಪ ದಿನ ಮೈಮರೆತಿದ್ದರೆ…! ಆ ಕುರಿಗಾಹಿ ಹುಡುಗರು ಆ ನುಸುಳುಕೋರ ಸೈನಿಕರ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಕೊಡದೇ ಹೋಗಿದ್ದರೆ…! ನಾನು ಬೆಚ್ಚಿ ಬಿದ್ದದ್ದು ಆಗ.

ಭಾರತದ ಸೈನಿಕರ ಬಳಿ ಯುದ್ಧದ ಸಿದ್ಧತೆಗೆ ಸಮಯ ಇರಲಿಲ್ಲ

ಗಡಿಯ ಒಳಗೆ ಅಷ್ಟು ದೊಡ್ಡ ಸಂಖ್ಯೆಯ ಸೈನಿಕರು ನುಸುಳಿಬಂದ ವಿಷಯ ಭಾರತಕ್ಕೆ ಗೊತ್ತಾಯಿತು ಅಂದಾಗ ಮುಷರಫ್ ಅಲರ್ಟ್ ಆದರು. ಅವರು ನಮ್ಮ ಸೈನಿಕರೇ ಅಲ್ಲ, ಯಾವುದೋ ಭಯೋತ್ಪಾದಕ ಸಂಘಟನೆಯವರು ಎಂದು ಬಿಟ್ಟರು ಮುಷರಫ್! ಆದರೆ ಈಗ ಭಾರತದ ಪ್ರಧಾನಿ ವಾಜಪೇಯಿ, ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸೇನಾ ಮುಖ್ಯಸ್ಥರನ್ನು ಕರೆಸಿ ಯುದ್ಧ ಘೋಷಣೆ ಮಾಡಿಬಿಟ್ಟರು. ಆದರೆ ಭಾರತೀಯ ಸೈನ್ಯಕ್ಕೆ ಆ ಯುದ್ಧಕ್ಕೆ ಸಿದ್ಧತೆ ಮಾಡಲು ದೊರೆತದ್ದು 24 ಘಂಟೆ ಮಾತ್ರ! ಆದರೂ 1999ರ ಮೇ 3ರಂದು ಭಾರತ ಯುದ್ಧ ಘೋಷಣೆ ಮಾಡಿ ಆಗಿತ್ತು!

ಆರಂಭದಲ್ಲಿ ಭಾರತಕ್ಕೆ ಹಿನ್ನಡೆ ಆದದ್ದು ನಿಜ. ಆದರೆ ಮೇ 30 ಆಗುವಾಗ ಭಾರತದ 30,000 ಸೈನಿಕರು ಟೈಗರ್ ಹಿಲ್ ಬಳಿ ಬಂದು ಜಮಾವಣೆ ಮಾಡಿ ಆಗಿತ್ತು. ಭಾರತದ ಭೂಸೈನ್ಯ ಮತ್ತು ವಾಯು ಸೈನ್ಯಗಳು ವೀರಾವೇಶದಿಂದ ಹೋರಾಟಕ್ಕೆ ಇಳಿದಿದ್ದವು. ಎರಡೂ ಕಡೆಯ ಸೈನಿಕರು, ಬಾಂಬುಗಳು, ಮದ್ದುಗುಂಡುಗಳು, ಶೆಲ್‌ಗಳು ಸಿಡಿಯುತ್ತ ಕಾರ್ಗಿಲ್ ಯುದ್ಧಭೂಮಿಯು ರಕ್ತದಲ್ಲಿ ಒದ್ದೆಯಾಗುತ್ತಾ ಹೋಯಿತು. ಟೈಗರ್ ಹಿಲ್ ಏರಿ 10 ಪಾಕ್ ಸೈನಿಕರ ಹತ್ಯೆಯನ್ನು ನಮ್ಮ ಸೈನಿಕರು ಮಾಡಿದಾಗ ಭಾರತವು ಯುದ್ಧದಲ್ಲಿ ಸಣ್ಣ ಮೇಲುಗೈ ಸಾಧಿಸಿತು.

ಅಲ್ಲಿಂದ ಮುಂದೆ ಭಾರತದ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸ್ವತಃ ಯುದ್ಧಭೂಮಿಗೆ ಬಂದು ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ್ದು, ಪ್ರಧಾನಿ ವಾಜಪೇಯಿ ವಾರ್ ರೂಮಿನಲ್ಲಿ ಕುಳಿತು ಸೈನ್ಯಕ್ಕೆ ನಿರ್ದೇಶನವನ್ನು ಕೊಟ್ಟದ್ದು ಭಾರತವನ್ನು ಗೆಲ್ಲಿಸುತ್ತಾ ಹೋದವು. 75 ದಿನಗಳ ಘನಘೋರ ಯುದ್ಧದ ನಂತರ ಭಾರತ ಜುಲೈ 26ರಂದು ದ್ರಾಸ್ ಪರ್ವತದ ತಪ್ಪಲಲ್ಲಿ ಇದ್ದ ಕೊನೆಯ ಪಾಕ್ ಸೈನಿಕನನ್ನೂ ಹೊಸಕಿ ಹಾಕಿದಾಗ ಭಾರತ ವಿಜಯೋತ್ಸವ ಆಚರಣೆ ಮಾಡಿತು. ಕಾರ್ಗಿಲ್ ಮೈದಾನದಲ್ಲಿ ಸೈನಿಕರ ನಡುವೆ ತ್ರಿವರ್ಣಧ್ವಜ ಹಾರಿಸಿದ ಕ್ಷಣವೇ ಕಾರ್ಗಿಲ್ ವಿಜಯ ದಿನ.

Kargil Vijay Diwas 2024
Kargil Vijay Diwas 2024

ಹುತಾತ್ಮರಾದವರು ಭಾರತದ 527 ಸೈನಿಕರು!

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೈನಿಕರ ಬಲಿದಾನ ಭಾರತಕ್ಕೆ ಒಂದು ದೊಡ್ಡ ವಿಜಯವನ್ನು ತಂದುಕೊಟ್ಟಿತ್ತು. ಅದರಲ್ಲಿ ಕರ್ನಾಟಕದ 21 ಸೈನಿಕರೂ ಇದ್ದರು. ಸಾವಿರಾರು ಯೋಧರು ತೀವ್ರವಾಗಿ ಗಾಯಗೊಂಡರು. ಪಾಕಿಸ್ತಾನವೂ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿತ್ತು.

ನಮ್ಮ ಸೈನಿಕರಾದ ಸಿಯಾಚಿನ್ ಹೀರೋ ನಾಯಬ್ ಸುಬೇದಾರ್ ಬಾಣಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಗ್ರೆನೆಡಿಯರ್ ಯೋಗೇಂದರ್ ಸಿಂಘ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನುಜ್ ನಯ್ಯರ್, ಲೆಫ್ಟಿನೆಂಟ್ ಬಲವಾನ್ ಸಿಂಘ್, ರೈಫಲ್ ಮ್ಯಾನ್ ಸಂಜಯ ಕುಮಾರ್, ಕ್ಯಾಪ್ಟನ್ ವಿಜಯವಂತ್ ಥಾಪರ್, ಮೇಜರ್ ಸೋನಂ ವಾಂಗಚುಕ್, ಲೆಫ್ಟಿನೆಂಟ್ ಕರ್ನಲ್ ವೈ.ಕೆ. ಜೋಷಿ ಇವರೆಲ್ಲರೂ ನಿಜವಾದ ಕಾರ್ಗಿಲ್ ಹೀರೋಗಳು. ಅದರಲ್ಲಿ ಹೆಚ್ಚಿನವರು ಹುತಾತ್ಮರಾದವರು. ಅವರಿಗೆಲ್ಲ ವಿವಿಧ ಸೇನಾ ಶೌರ್ಯ ಪ್ರಶಸ್ತಿಗಳನ್ನು ನೀಡಿ ಭಾರತ ಸರಕಾರವು ಗೌರವಿಸಿತು.

ಕಾರ್ಗಿಲ್ ಯುದ್ಧದ ಫಲಶ್ರುತಿ ಏನೆಂದರೆ ಮುಂದೆ ಭಾರತವು ಎಂದಿಗೂ ಪಾಕಿಸ್ತಾನವನ್ನು ನಂಬಲಿಲ್ಲ ಮತ್ತು ಪಾಕಿಸ್ತಾನ ಯಾವತ್ತೂ ಭಾರತದ ಮೇಲೆ ಮತ್ತೆ ದಂಡೆತ್ತಿ ಬರುವ ಸಾಹಸವನ್ನು ಮಾಡಲಿಲ್ಲ!

ಜೈ ಹಿಂದ್.

ಇದನ್ನೂ ಓದಿ: ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

Continue Reading
Advertisement
Paris Olympics 2024
ಕ್ರೀಡೆ3 mins ago

Paris Olympics 2024: ನೀರಿನಾಳದಲ್ಲಿ ಅಭ್ಯಾಸ ನಡೆಸಿದ ನೀರಜ್ ಚೋಪ್ರಾ; ವಿಡಿಯೊ ವೈರಲ್​

PM Narendra Modi Live
ದೇಶ9 mins ago

PM Narendra Modi Live: ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ, ವೀರ ಯೋಧರಿಗೆ ಗೌರವ ನಮನ-ಲೈವ್‌ ಇಲ್ಲಿ ವೀಕ್ಷಿಸಿ

police firing hubli
ಕ್ರೈಂ19 mins ago

Police Firing: ದರೋಡೆ, ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ

Actor Yash Case Against Toxic Movie Producers For Building A Set On Forest Land
ಸ್ಯಾಂಡಲ್ ವುಡ್28 mins ago

Actor Yash: ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾ ವಿರುದ್ಧ ದೂರು ದಾಖಲು

Women's Asia Cup
ಕ್ರೀಡೆ40 mins ago

Women’s Asia Cup: ಇಂದು ಸೆಮಿಫೈನಲ್‌ ಕಾದಾಟ: ಬಾಂಗ್ಲಾ ಸವಾಲಿಗೆ ಭಾರತ ಸಜ್ಜು

murder in PG koramangala
ಕ್ರೈಂ44 mins ago

Murder In PG: ಕೃತಿ ಕುಮಾರಿಗೆ ಮನಬಂದಂತೆ ಇರಿದ ಪಾತಕಿ, ನೋಡ್ತಾ ಇದ್ರೂ ಸಹಾಯಕ್ಕೆ ಬಾರದ ಯುವತಿಯರು

Actor Darshan wife Vijayalakshmi Darshan Visit Kollur Temple
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ಗಾಗಿ ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ವಿಜಯಲಕ್ಷ್ಮಿ!

tumkur news temple mall
ತುಮಕೂರು1 hour ago

Tumkur News: ದೇವಸ್ಥಾನ ಕೆಡವಿ ಮಾಲ್‌ ಕಟ್ಟಲು ಮುಂದಾದ ಪಾಲಿಕೆ, ಹಿಂದು ಸಂಘಟನೆಗಳ ವಿರೋಧ

Paris Olympics
ಕ್ರೀಡೆ1 hour ago

Paris Olympics: ಇಂದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅಧಿಕೃತ ಚಾಲನೆ: ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ ಆರಂಭ?

Viral video
ವೈರಲ್ ನ್ಯೂಸ್1 hour ago

Viral Video: ಲಿಫ್ಟ್‌ನಲ್ಲಿ ಯುವಕನ ಕೈಯಲ್ಲಿದ್ದ ಲೀಥಿಯಂ ಬ್ಯಾಟರಿ ಬ್ಲಾಸ್ಟ್‌; ಅಬ್ಬಾ ಎಂಥಾ ಭೀಕರ ದೃಶ್ಯ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ17 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್20 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ21 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ22 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌