Election Bond: ಚುನಾವಣಾ ಬಾಂಡ್‌ ಹಗರಣದ ಬಗ್ಗೆ SIT ತನಿಖೆಗೆ ಆಗ್ರಹ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್‌ - Vistara News

ದೇಶ

Election Bond: ಚುನಾವಣಾ ಬಾಂಡ್‌ ಹಗರಣದ ಬಗ್ಗೆ SIT ತನಿಖೆಗೆ ಆಗ್ರಹ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್‌

Election Bond: ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಅರ್ಜಿಯನ್ನು ತಿರಸ್ಕರಿಸಿದ್ದು, ಈ ಹಿಂದೆಯೇ ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ. ಫೆಬ್ರವರಿ 15 ರಂದು, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು “ಅಸಂವಿಧಾನಿಕ” ಎಂದು ತೀರ್ಪು ನೀಡಿತ್ತು.

VISTARANEWS.COM


on

Election Bond
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಚುನಾವಣಾ ಬಾಂಡ್‌(Election Bond)ಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದಿಂದ (SIT) ತನಿಖೆಗೆ ಒತ್ತಾಯಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ (Supreme Court) ತಿರಸ್ಕರಿಸಿದೆ. ಚುನಾವಣಾ ಬಾಂಡ್‌ ಎಂಬುದು ಅತಿದೊಡ್ಡ ಹಗರಣವಾಗಿದ್ದು, ಇದರ ತನಿಖೆಯನ್ನು SITಗೆ ವಹಿಸುಂತೆ ಆಗ್ರಹಿಸಿ ಎರಡು ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು(PIL) ಹೂಡಿದ್ದವು.

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಅರ್ಜಿಯನ್ನು ತಿರಸ್ಕರಿಸಿದ್ದು, ಈ ಹಿಂದೆಯೇ ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ. ಫೆಬ್ರವರಿ 15 ರಂದು, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು “ಅಸಂವಿಧಾನಿಕ” ಎಂದು ತೀರ್ಪು ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಅನಾಮಧೇಯ ಚುನಾವಣಾ ಬಾಂಡ್ ಯೋಜನೆಯು ಆರ್ಟಿಕಲ್ 19 (1) (ಎ) ಅಡಿಯಲ್ಲಿ ಮಾಹಿತಿ ಹಕ್ಕು ಉಲ್ಲಂಘನೆ ಎಂದು ಹೇಳಿತ್ತು.

ಚುನಾವಣಾ ಬಾಂಡ್‌ ಯೋಜನೆಯು ಸಂವಿಧಾನದ 19 (1) (A) ವಿಧಿ ಅಡಿಯಲ್ಲಿ ನೀಡಲಾದ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಇದರಿಂದ ಕೊಡು-ಕೊಳ್ಳುವ ವ್ಯವಹಾರಕ್ಕೆ ( ಉದಾಹರಣೆ: ನೀನೊಂದು ಸಹಾಯ ಮಾಡಿದರೆ, ಅದಕ್ಕೆ ಬದಲಾಗಿ ಬೇರೆ ರೀತಿಯಲ್ಲಿ ನಾನು ಸಹಾಯ ಮಾಡುವುದು) ಪುಷ್ಟಿ ನೀಡುತ್ತದೆ. ಹಾಗೆಯೇ, ಕಂಪನಿಗಳ ಕಾಯ್ದೆಗೆ ತಿದ್ದುಪಡಿ ತಂದಿರುವುದು ಅಸಾಂವಿಧಾನಿಕವಾಗಿದೆ. ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯ ಮೂಲ ತಿಳಿಯುವ ಹಕ್ಕು ದೇಶದ ನಾಗರಿಕರಿಗೆ ಇದೆ” ಎಂದು ನ್ಯಾಯಾಲಯ ತಿಳಿಸಿತು.

ಏನಿದು ಚುನಾವಣಾ ಬಾಂಡ್‌?

ಚುನಾವಣಾ ಬಾಂಡ್‌ ಯೋಜನೆಯನ್ನು 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬಜೆಟ್‌ ಅಧಿವೇಶನದಲ್ಲಿ ಮೊದಲು ಪ್ರಸ್ತಾಪಿಸಿದರು. ಹಣಕಾಸು ಕಾಯ್ದೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗಳಿಗೆ ತಿದ್ದುಪಡಿ ತಂದು 2018ರ ಜನವರಿಯಲ್ಲಿ ಚುನಾವಣಾ ಬಾಂಡ್‌ ಯೋಜನೆ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಯಿತು. ಆ ಮೂಲಕ ಚುನಾವಣಾ ಬಾಂಡ್‌ ಯೋಜನೆ ಜಾರಿಗೊಳಿಸಲಾಯಿತು.

ಬಿಜೆಪಿಗೆ ಹೆಚ್ಚು ದೇಣಿಗೆ

ಚುನಾವಣಾ ಬಾಂಡ್‌ ಯೋಜನೆ ಜಾರಿಯಾದ ಬಳಿಕ ಬಿಜೆಪಿಗೆ ಹೆಚ್ಚುಗೆ ದೇಣಿಗೆ ಸಂದಾಯವಾಗಿದೆ. ಆಡಳಿತಾರೂಢ ಪಕ್ಷವಾದ ಕಾರಣ ಹೆಚ್ಚು ದೇಣಿಗೆ ಸಂಗ್ರಹಿಸಿದೆ. 2022-23ನೇ ಸಾಲಿನಲ್ಲಿ ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕವೇ ಸುಮಾರು 1,300 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಇದು ಕಾಂಗ್ರೆಸ್‌ಗಿಂತ ಎಂಟು ಪಟ್ಟು ಹೆಚ್ಚಿನ ಮೊತ್ತವಾಗಿದೆ.

ಚುನಾವಣಾ ಬಾಂಡ್‌ ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಕಳೆದ ವರ್ಷದ ನವೆಂಬರ್‌ 2ರಂದು ತೀರ್ಪು ಕಾಯ್ದಿರಿಸಿತ್ತು. ಈಗ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದ್ದು, ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಅಲ್ಲಗಳೆದಿದೆ.

ಇದನ್ನೂ ಓದಿ: NEET UG 2024: ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಎರಡು ನಗರಗಳಿಗೆ ಸೀಮಿತ; ಮರು ಪರೀಕ್ಷೆ ಅಗತ್ಯವಿಲ್ಲ-ಸುಪ್ರೀಂಕೋರ್ಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Income Tax Returns: ಜುಲೈ 31ರೊಳಗೆ 7.28 ಕೋಟಿ ಐಟಿಆರ್ ಸಲ್ಲಿಕೆ! ಇದು ಹೊಸ ದಾಖಲೆ

ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಕೆ ಗಡುವಿನೊಳಗೆ ಒಟ್ಟು 7.28 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡಲಾಗಿದೆ. ಇದರಲ್ಲಿ ಜುಲೈ 31ರಂದು ಒಂದೇ ದಿನ ಅತ್ಯಧಿಕ ಐಟಿಆರ್‌ಗಳ ಫೈಲಿಂಗ್ ನಡೆದಿದೆ. ಈ ದಿನ 69.92 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಈ ಬಾರಿ ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ದರಿಂದ ಫೈಲಿಂಗ್‌ನಲ್ಲಿ ಏಕಾಏಕಿ ಹೆಚ್ಚಳಕ್ಕೆ ಕಾರಣವಾಯಿತು.

VISTARANEWS.COM


on

By

Income Tax Returns
Koo

ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಕೆ ಗಡುವಿನ ಒಳಗೆ, ಅಂದರೆ 2024ರ ಜುಲೈ 31ರೊಳಗಿನ 2024- 25ರ ಮೌಲ್ಯಮಾಪನ ವರ್ಷಕ್ಕೆ (financial year) ಒಟ್ಟು 7.28 ಕೋಟಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲಾಗಿದೆ. ಇದು ಕಳೆದ ವರ್ಷ 6.77 ಕೋಟಿಯಾಗಿದ್ದು, ಈ ವರ್ಷ ಶೇ. 7.5ರಷ್ಟು ಹೆಚ್ಚಾಗಿದೆ ಮತ್ತು ಈ ವರ್ಷದ ಐಟಿಆರ್ ಸಲ್ಲಿಕೆಯಲ್ಲಿ ಶೇ. 72ರಷ್ಟು ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಂಡಿದ್ದಾರೆ ಎಂದು ಹಣಕಾಸು ಸಚಿವರು (finance minister) ಶುಕ್ರವಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಬಾರಿ ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ದರಿಂದ ಫೈಲಿಂಗ್‌ನಲ್ಲಿ ಏಕಾಏಕಿ ಹೆಚ್ಚಳಕ್ಕೆ ಕಾರಣವಾಯಿತು. 2024ರ ಜುಲೈ 31ರವರೆಗೆ ಸಲ್ಲಿಸಿದ ಐಟಿಆರ್ ಹೊಸ ದಾಖಲೆಗೆ ಇದು ಕಾರಣವಾಯಿತು. ಆರ್ಥಿಕ ವರ್ಷ 2024ರಲ್ಲಿ ಈವರೆಗೆ ಸಲ್ಲಿಸಿರುವ ಐಟಿಆರ್ ಗಳ ಸಂಖ್ಯೆ 7.28 ಕೋಟಿಗಿಂತ ಹೆಚ್ಚು, ಇದು ಆರ್ಥಿಕ ವರ್ಷ 2023- 24ಕ್ಕೆ ಹೋಲಿಸಿದರೆ ಒಟ್ಟು ಐಟಿಆರ್‌ಗಳಿಗಿಂತ ಶೇ. 7.5ರಷ್ಟು ಹೆಚ್ಚು ಎಂದು ಸಚಿವಾಲಯ ತಿಳಿಸಿದೆ.

ತೆರಿಗೆ ಪದ್ಧತಿ ಯಾವುದು ಎಷ್ಟು?

ಆರ್ಥಿಕ ವರ್ಷ 2024-25ಕ್ಕೆ ಸಲ್ಲಿಸಿದ ಒಟ್ಟು 7.28 ಕೋಟಿ ಐಟಿಆರ್‌ಗಳಲ್ಲಿ ಹಳೆಯ ತೆರಿಗೆ ಪದ್ಧತಿಯಲ್ಲಿ ಒಟ್ಟು 2.01 ಕೋಟಿ ಐಟಿಆರ್‌ ಸಲ್ಲಿಕೆಯಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ 5.27 ಕೋಟಿ ಸಲ್ಲಿಸಲಾಗಿದೆ. ಹೀಗಾಗಿ ಶೇ.72ರಷ್ಟು ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಶೇ. 28ರಷ್ಟು ಮಂದಿ ಹಳೆಯ ತೆರಿಗೆ ಪದ್ಧತಿಯಲ್ಲಿಯೇ ಮುಂದುವರಿದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Income Tax Returns
Income Tax Returns


ಜುಲೈ 31ರಂದು ಎಷ್ಟು ಫೈಲಿಂಗ್?

2024ರ ಜುಲೈ 31ರಂದು ಐಟಿಆರ್‌ಗಳ ಫೈಲಿಂಗ್ ಗರಿಷ್ಠ ಮಟ್ಟವನ್ನು ತಲುಪಿತು. ಒಂದೇ ದಿನದಲ್ಲಿ 69.92 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಇದನ್ನು ಇ-ಫೈಲಿಂಗ್ ಪೋರ್ಟಲ್ ಗಮನಿಸಿದೆ.

31ರಂದು ಸಂಜೆ 7ರಿಂದ 8 ಗಂಟೆ ಅವಧಿಯಲ್ಲಿ ಐಟಿಆರ್ ಫೈಲಿಂಗ್ ಪ್ರತಿ ಗಂಟೆಗೆ ಗರಿಷ್ಠ ದರ 5.07 ಲಕ್ಷ. ಐಟಿಆರ್ ಫೈಲಿಂಗ್‌ನ ಪ್ರತಿ ಸೆಕೆಂಡಿಗೆ ಅತ್ಯಧಿಕ ದರ 917. ಇದು ಜುಲೈ 17ರಂದು ಬೆಳಗ್ಗೆ 8.13ಕ್ಕೆ ದಾಖಲಾಗಿದೆ. ಐಟಿಆರ್ ಫೈಲಿಂಗ್‌ನ ಪ್ರತಿ ನಿಮಿಷಕ್ಕೆ ಗರಿಷ್ಠ ದರ 9,367. ಇದು ಜುಲೈ 31ರಂದು ರಾತ್ರಿ 8.8ಕ್ಕೆ ದಾಖಲಾಗಿದೆ.

ಮೊದಲ ಬಾರಿ ಸಲ್ಲಿಸಿದವರು

ಇಲಾಖೆಯು ಜುಲೈ 31ರವರೆಗೆ ಮೊದಲ ಬಾರಿ ಸಲ್ಲಿಸುವವರಿಂದ 58.57 ಲಕ್ಷ ಐಟಿಆರ್‌ಗಳನ್ನು ಸ್ವೀಕರಿಸಿದೆ. ಇದು ತೆರಿಗೆ ಮೂಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಸೂಚನೆಯಾಗಿದೆ.

ಐತಿಹಾಸಿಕವಾಗಿ ಐಟಿಆರ್‌ಗಳನ್ನು ಐಟಿಆರ್ -1, ಐಟಿಆರ್ -2, ಐಟಿಆರ್ -4, ಐಟಿಆರ್ -6 ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಹಣಕಾಸು ವರ್ಷದ ಮೊದಲ ದಿನದಂದು ಅಂದರೆ ಏಪ್ರಿಲ್ 1ರಂದು ನಿಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಿಂದಿನ ಹಣಕಾಸು ವರ್ಷಗಳಿಗೆ ಹೋಲಿಸಿದರೆ ಐಟಿಆರ್ -3 ಮತ್ತು ಐಟಿಆರ್ -5 ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ ಬಗ್ಗೆ ತೆರಿಗೆದಾರರಿಗೆ ಶಿಕ್ಷಣ ನೀಡಲು ಹೆಚ್ಚಿನ ಒತ್ತು ನೀಡಲಾಯಿತು ಎಂದು ಅದು ಹೇಳಿದೆ.

ಯಾವುದು ಎಷ್ಟು?

7.28 ಕೋಟಿ ಐಟಿಆರ್‌ಗಳಲ್ಲಿ ಆರ್ಥಿಕ ವರ್ಷ 2024-25ರಲ್ಲಿ ಶೇ. 45.77ರಷ್ಟು ಅಂದರೆ 3.34 ಕೋಟಿ ಐಟಿಆರ್-1, ಶೇ. 14.93ರಷ್ಟು ಅಂದರೆ 1.09 ಕೋಟಿ ಐಟಿಆರ್ -2, ಶೇ.12.50ರಷ್ಟು 91.10 ಲಕ್ಷ ಐಟಿಆರ್-3, ಶೇ. 25.77ರಷ್ಟು 1.88 ಕೋಟಿ ಐಟಿಆರ್- 4 ಮತ್ತು ಶೇ. 1.03ರಷ್ಟು ಅಂದರೆ 7.48 ಲಕ್ಷ ಐಟಿಆರ್ -5ರಿಂದ ಐಟಿಆರ್ -7 ಅನ್ನು ಸಲ್ಲಿಸಲಾಗಿದೆ. ಈ ಐಟಿಆರ್‌ಗಳಲ್ಲಿ ಶೇ. 43.82ಕ್ಕಿಂತ ಹೆಚ್ಚು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಐಟಿಆರ್ ಸೌಲಭ್ಯವನ್ನು ಬಳಸಿಕೊಂಡು ಸಲ್ಲಿಸಲಾಗಿದೆ ಮತ್ತು ಬಾಕಿಯನ್ನು ಆಫ್‌ಲೈನ್ ಐಟಿಆರ್ ಉಪಯುಕ್ತತೆಗಳನ್ನು ಬಳಸಿ ಸಲ್ಲಿಸಲಾಗಿದೆ.

ಇದನ್ನೂ ಓದಿ: Stock Market: ಷೇರುಪೇಟೆಯಲ್ಲಿ ಭಾರೀ ಕುಸಿತ; ಸೆನ್ಸೆಕ್ಸ್‌ 700 ಅಂಕಗಳಷ್ಟು ಪತನ

ಗರಿಷ್ಠ ಫೈಲಿಂಗ್ ಅವಧಿಯಲ್ಲಿ ಇ-ಫೈಲಿಂಗ್ ಪೋರ್ಟಲ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು. ಐಟಿಆರ್‌ಗಳನ್ನು ಸಲ್ಲಿಸಲು ತೆರಿಗೆದಾರರಿಗೆ ತಡೆರಹಿತ ಅನುಭವವನ್ನು ನೀಡಿದೆ. ಜುಲೈ 31ರಂದು 3.2 ಕೋಟಿ ಮಂದಿ ಇದರಲ್ಲಿ ಲಾಗಿನ್ ಮಾಡಿದ್ದಾರೆ.

Continue Reading

Latest

Kriti Sanon: ನಟಿ ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವ ಈ ಕಬೀರ್ ಬಹಿಯಾ ಯಾರು?

ಬಾಲಿವುಡ್ ನಟಿ ಕೃತಿ ಸನೋನ್ (Kriti Sanon) ಹೆಸರೀಗ ಯುಕೆ ಮೂಲದ ಮಿಲಿಯನೇರ್ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಕೇಳಿ ಬರುತ್ತಿದೆ. ಈ ಹಿಂದೆ ನಟಿ ಹೆಸರು ಕಾರ್ತಿಕ್ ಆರ್ಯನ್, ಪ್ರಭಾಸ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಕೇಳಿ ಬಂದಿತ್ತಾದರೂ ಈ ಬಗ್ಗೆ ಕೃತಿ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕೃತಿ ಮತ್ತೊಮ್ಮೆ ಡೇಟಿಂಗ್ ನಲ್ಲಿರುವುದು ಸುದ್ದಿಯಾಗುತ್ತಿದ್ದಂತೆ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಬೀರ್‌ ಹಿನ್ನೆಲೆ ಏನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Kriti Sanon
Koo

ಕ್ರೂ, ಹಿರೊಪಂತಿ, ಮಿಮಿ, ದಿಲ್ವಾಲೆ, ಬರೇಲಿ ಕಿ ಬರ್ಫಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ (bollywood actress) ಕೃತಿ ಸನೋನ್ (Kriti Sanon) ಈಗ ಯುಕೆ ಮೂಲದ ಮಿಲಿಯನೇರ್ (UK based millionaire) ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ವದಂತಿಗಳು ಕೇಳಿ ಬರುತ್ತಿವೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಆಕೆಯ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ.

ಕಾರ್ತಿಕ್ ಆರ್ಯನ್, ಪ್ರಭಾಸ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಡೇಟಿಂಗ್‌ನಲ್ಲಿದ್ದರು ಎನ್ನುವ ವದಂತಿ ಇತ್ತಾದರೂ ಈ ಬಗ್ಗೆ ಕೃತಿ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕೃತಿ ಮತ್ತೊಮ್ಮೆ ಡೇಟಿಂಗ್‌ನಲ್ಲಿರುವುದು ಸುದ್ದಿಯಾಗುತ್ತಿದ್ದಂತೆ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಕೃತಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಕಬೀರ್ ಬಹಿಯಾ ಯಾರು?

1999ರ ನವೆಂಬರ್‌ನಲ್ಲಿ ಜನಿಸಿದ ಕಬೀರ್ ಬಹಿಯಾ ಇಂಗ್ಲೆಂಡ್‌ನ ಮಿಲ್‌ಫೀಲ್ಡ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಅವರು ಯುಕೆ ಮೂಲದ ಉದ್ಯಮಿಯಾಗಿದ್ದು, ಲಂಡನ್‌ನ ರೀಜೆಂಟ್ಸ್ ಯೂನಿವರ್ಸಿಟಿಯಿಂದ ವ್ಯಾಪಾರ, ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಸಂಬಂಧಿತ ಬೆಂಬಲ ಸೇವೆಗಳ ಕುರಿತು ಅಧ್ಯಯನ ಪೂರ್ಣಗೊಳಿಸಿದ್ದಾರೆ.

Kriti Sanon
Kriti Sanon


ಯುಕೆಯಲ್ಲಿ ಸೌಥಾಲ್ ಟ್ರಾವೆಲ್ ಎಂಬ ಪ್ರಮುಖ ಟ್ರಾವೆಲ್ ಕಂಪನಿಯನ್ನು ನಡೆಸುತ್ತಿರುವ ಕುಲ್ಜಿಂದರ್ ಬಹಿಯಾ ಅವರ ಮಗ ಕಬೀರ್. 2019ರ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯ ಆಧರಿಸಿ ಹೇಳುವುದಾದರೆ ಕುಲ್ಜಿಂದರ್ ಮತ್ತು ಅವರ ಕುಟುಂಬವು 427 ಮಿಲಿಯನ್ ಪೌಂಡ್‌ಗಳ (ಸುಮಾರು 4590 ಕೋಟಿ ರೂ.) ನಿವ್ವಳ ಮೌಲ್ಯವನ್ನು ಹೊಂದಿದೆ. ಕಬೀರ್ ತನ್ನದೇ ಆದ ಟ್ರಾವೆಲ್ ಕಂಪನಿಯಾದ ವರ್ಲ್ಡ್‌ವೈಡ್ ಏವಿಯೇಷನ್ ​​ಮತ್ತು ಟೂರಿಸಂ ಲಿಮಿಟೆಡ್ ಅನ್ನು ಪ್ರಾರಂಭಿಸಿದ್ದು, 2021ರ ಜೂನ್ ನಿಂದ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಕಬೀರ್ ಉದ್ಯಮಿಯಾಗಿದ್ದರೂ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಅವರ ನೆಚ್ಚಿನ ಫುಟ್‌ಬಾಲ್ ಕ್ಲಬ್ ಬೊರುಸ್ಸಿಯಾ ಡಾರ್ಟ್‌ಮಂಡ್ ಆಗಿದೆ. ಅವರು ಹಲವಾರು ಭಾರತೀಯ ಕ್ರಿಕೆಟಿಗರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ ಅವರಿಗೂ ಪರಿಚಿತರು

ನತಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರ ವಿವಾಹ ಸಮಾರಂಭದಲ್ಲಿ ಕಬೀರ್ ಭಾಗವಹಿಸಿದ್ದರು. ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಕುಟುಂಬದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. 2024ರ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಧೋನಿ ಮತ್ತು ಅವರ ಪತ್ನಿ ಸಾಕ್ಷಿಯೊಂದಿಗೆ ಕಬೀರ್ ಕಾಣಿಸಿಕೊಂಡಿದ್ದರು. ಕಬೀರ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಇಬ್ಬರೂ ಕ್ರಿಕೆಟಿಗರೊಂದಿಗೆ ಅನೇಕ ಚಿತ್ರಗಳನ್ನು ಹೊಂದಿದ್ದಾರೆ.

Kriti Sanon
Kriti Sanon


ಕೃತಿ ಸನೋನ್ ಜೊತೆ ಡೇಟಿಂಗ್ ವದಂತಿ

ಕೃತಿ ಮತ್ತು ಕಬೀರ್ ಹೊಸ ವರ್ಷವನ್ನು ಒಟ್ಟಿಗೆ ಆಚರಿಸುತ್ತಿರುವಾಗ ಅವರ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಪ್ರಾರಂಭವಾದವು. 2024ರ ಹೋಳಿ ಹಬ್ಬವನ್ನು ಕಬೀರ್ ಜೊತೆ ಕೃತಿ ನಡೆಸಿರುವುದಾಗಿ ಹೇಳುವ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದು ನಟಿಯ ಅಭಿಮಾನಿಗಳು ಕುತೂಹಲ ಕೆರಳಿಸಿದೆ. ಕಬೀರ್‌ಗಿಂತ ಒಂಬತ್ತು ವರ್ಷ ಹಿರಿಯರಾದ ಕೃತಿ ತನ್ನ ಸಹೋದರಿ ನೂಪುರ್ ಮೂಲಕ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ತಿಂಗಳು ಕಲ್ಕಿ, ಇಂಡಿಯನ್‌, ಟರ್ಬೊ ಜತೆಗೆ ಇನ್ಯಾವ ಹೊಸ ಚಿತ್ರ, ವೆಬ್‌ ಸಿರೀಸ್‌?

ಕೃತಿ ಸನೋನ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ವೇಳೆ ಕಬೀರ್ ಜೊತೆ ಪ್ರವಾಸ ನಡೆಸಿರುವುದಾಗಿ ಕೇಳಿ ಬಂದಾಗ ಅವರಿಬ್ಬರ ಡೇಟಿಂಗ್ ಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಸದ್ಯ ನಟಿ ಕೃತಿ ತನ್ನ ಸಹೋದರಿ ನೂಪುರ್ ಸನೋನ್ ಮತ್ತು ಸ್ನೇಹಿತರೊಂದಿಗೆ ಗ್ರೀಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಲ್ಲಿ ಅಭಿಮಾನಿಗಳು ಕೃತಿ ಮತ್ತು ಕಬೀರ್ ಒಟ್ಟಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಿದಾಡುತ್ತಿವೆ. ಇದನ್ನು ನೋಡಿರುವ ಅವರ ಅಭಿಮಾನಿಗಳು ನಟಿ ಕೃತಿ ತಮ್ಮ 34ನೇ ಹುಟ್ಟುಹಬ್ಬವನ್ನು ಕಬೀರ್ ಜೊತೆ ಆಚರಿಸಿದರು ಎಂಬುದಾಗಿ ಹೇಳುತ್ತಿದ್ದಾರೆ

Continue Reading

ಕ್ರೈಂ

Dog Attack: ವೃದ್ಧ ತಾಯಿಯನ್ನು ಮನೆಯ ಹೊರಗೆ ಮಲಗಿಸಿದ್ದ ಪುತ್ರರು; ಜೀವಂತವಾಗಿ ತಿಂದು ಹಾಕಿದ ಬೀದಿ ನಾಯಿಗಳು!

Dog Attack: ಮುಸ್ತಾಬಾದ್ ಮಂಡಲದ ಕೇಂದ್ರ ಕಚೇರಿಯ ಸೇವಾಲಾಲ್ ತಾಂಡಾ ಪ್ರದೇಶದಲ್ಲಿನ ಗುಡಿಸಲಿನಲ್ಲಿ ವೃದ್ಧೆ ಮಲಗಿದ್ದರು. ದೀರ್ಘಕಾಲದಿಂದ ಅವರು ಹಾಸಿಗೆ ಹಿಡಿದಿದ್ದರು. ಬೀದಿ ನಾಯಿಗಳ ಗುಂಪೊಂದು ಗುಡಿಸಲಿನೊಳಗೆ ನುಗ್ಗಿ ಅವರ ಮೇಲೆ ದಾಳಿ ಮಾಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಮಹಾಜನ್ ಹೇಳಿದ್ದಾರೆ. ಕರುಣಾಜನಕವಾದ ಈ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ.

VISTARANEWS.COM


on

By

Dog attack
Koo

ದೀರ್ಘಕಾಲದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ವೃದ್ಧೆಯ ಮೇಲೆ ರಾತ್ರಿ ಬೀದಿ ನಾಯಿಗಳು (street dog) ದಾಳಿ (Dog Attack) ನಡೆಸಿ ಕೊಂದು ಹಾಕಿರುವ ಘಟನೆ ತೆಲಂಗಾಣದ (telangana) ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಕರೀಂನಗರದಲ್ಲಿ ನಡೆದಿದೆ. 82 ವರ್ಷದ ಪಿಟ್ಲಾ ರಾಜ್ಯಲಕ್ಷ್ಮಿ ಬುಧವಾರ ರಾತ್ರಿ ಗುಡಿಸಿಲಿನಲ್ಲಿ ಮಲಗಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿದ್ದವು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮುಸ್ತಾಬಾದ್ ಮಂಡಲದ ಕೇಂದ್ರ ಕಚೇರಿಯ ಸೇವಾಲಾಲ್ ತಾಂಡಾ ಪ್ರದೇಶದಲ್ಲಿನ ಗುಡಿಸಲಿನಲ್ಲಿ ರಾಜ್ಯಲಕ್ಷ್ಮಿ ಮಲಗಿದ್ದರು. ದೀರ್ಘಕಾಲದಿಂದ ಅವರು ಹಾಸಿಗೆ ಹಿಡಿದಿದ್ದರು. ಬೀದಿ ನಾಯಿಗಳ ಗುಂಪೊಂದು ಗುಡಿಸಲಿನೊಳಗೆ ನುಗ್ಗಿ ಅವರ ಮೇಲೆ ದಾಳಿ ಮಾಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಮಹಾಜನ್ ಹೇಳಿದ್ದಾರೆ.

ನಾಯಿಗಳು ಅವರನ್ನು ಕಚ್ಚಿ ಕೊಂದು ಮುಖ ಮತ್ತು ದೇಹದ ಕೆಲವು ಭಾಗಗಳನ್ನು ತಿಂದು ಹಾಕಿವೆ. ಸಮೀಪದಲ್ಲೇ ವಾಸಿಸುವ ಮಹಿಳೆಯ ಕುಟುಂಬ ಸದಸ್ಯರು ಗುರುವಾರ ಬೆಳಗ್ಗೆ ಆಕೆಯ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರ ಪ್ರಕಾರ, ರಾಜ್ಯಲಕ್ಷ್ಮಿ ಬುಧವಾರ ರಾತ್ರಿ ಮನೆ ಸಮೀಪದ ಗುಡಿಸಲಿನಲ್ಲಿ ಮಲಗಿದ್ದರು. ಯಾವುದೇ ಬಾಗಿಲು ಇಲ್ಲದ ಕಾರಣ ಗಾಢ ನಿದ್ದೆಯಲ್ಲಿದ್ದ ಅವರ ಮೇಲೆ ನಾಯಿಗಳು ಸುಲಭವಾಗಿ ದಾಳಿ ನಡೆಸಿವೆ. ನಾಯಿಗಳು ಅವರ ತಲೆ ಮತ್ತು ಹೊಟ್ಟೆಯ ಭಾಗವನ್ನು ತಿಂದು ಹಾಕಿವೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯ ಮನೆಯ ಬಳಿ ನಾಯಿಯು ರಸ್ತೆಯಲ್ಲಿ ಮಾಂಸವನ್ನು ವಾಂತಿ ಮಾಡುವುದನ್ನು ಕಂಡ ಸ್ಥಳೀಯರು ಕೋಪಗೊಂಡು ಬೀದಿ ನಾಯಿಯನ್ನು ಕೊಂದು ಹಾಕಿದ್ದರು.

ಇದನ್ನೂ ಓದಿ: Woman Deliver Baby in Auto: ಆಸ್ಪತ್ರೆಗೆ ಹೋಗುವಾಗ ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಲಕ್ಷ್ಮಿ ಕಳೆದ ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದಿದ್ದು, ಇಬ್ಬರು ಪುತ್ರರಿದ್ದರೂ ತಾಯಿಯನ್ನು ತಮ್ಮ ಮನೆಯ ಹೊರಗೆ ಪ್ರತ್ಯೇಕ ಕೋಣೆಯಲ್ಲಿ ಇರಿಸಿದ್ದರು ಎಂದು ಮುಸ್ತಾಬಾದ್ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪುತ್ರನ ದೂರಿನ ಮೇರೆಗೆ ಬಿಎನ್‌ಎಸ್‌ನ ಸೆಕ್ಷನ್ 194ರ ಅಡಿಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

Latest

Wayanad Tragedy: ಇಡೀ ಊರು ಭೂಕುಸಿತದಿಂದ ನಾಶ; ಮೂರು ದಿನ ಬಳಿಕ ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆ!

Wayanad Tragedy: ಭಾರಿ ಭೂಕುಸಿತಕ್ಕೆ ಒಳಗಾದ ವಯನಾಡಿನ ಮುಂಡಕ್ಕೈ ಪ್ರದೇಶದಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆ ವೇಳೆ ಒಂದೇ ಮನೆಯಲ್ಲಿ ವಾಸವಾಗಿದ್ದ ಕುಟುಂಬದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರನ್ನು ಕಂಜಿರಕಥೋಟೆ ಕುಟುಂಬದ ಜಾನಿ, ಜೋಮೋಲ್, ಅಬ್ರಹಾಂ ಮತ್ತು ಕ್ರಿಸ್ಟಿ ಎಂದು ಗುರುತಿಸಲಾಗಿದೆ.ರಕ್ಷಣಾ ಕಾರ್ಯಕರ್ತರು ಅವರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ.

VISTARANEWS.COM


on

Wayanad Tragedy
Koo


ಕೇರಳದ ವಯನಾಡ್(Wayanad Tragedy) ಜಿಲ್ಲೆಯ ಮೂರು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಮೂರು ದಿನ ಕಳೆದಿದೆ. ಈ ನಡುವೆ ಪವಾಡ ಎಂಬಂತೆ, ಮುಂಡಕ್ಕೈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕಾರ್ಯಕರ್ತರು ಶುಕ್ರವಾರ ಪಡವೆಟ್ಟಿ ಕುನ್ನು ಬಳಿಯ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ಕು ಜನರನ್ನು ಜೀವಂತವಾಗಿ ಪತ್ತೆ ಮಾಡಿದ್ದಾರೆ!

ಮಂಗಳವಾರ ಭಾರಿ ಭೂಕುಸಿತಕ್ಕೆ ಒಳಗಾದ ವಯನಾಡಿನ ಮುಂಡಕ್ಕೈ ಪ್ರದೇಶದಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆ ವೇಳೆ ಒಂದೇ ಮನೆಯಲ್ಲಿ ವಾಸವಾಗಿದ್ದ ಕುಟುಂಬದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರನ್ನು ಕಂಜಿರಕಥೋಟೆ ಕುಟುಂಬದ ಜಾನಿ, ಜೋಮೋಲ್, ಅಬ್ರಹಾಂ ಮತ್ತು ಕ್ರಿಸ್ಟಿ ಎಂದು ಗುರುತಿಸಲಾಗಿದೆ.

ರಕ್ಷಣಾ ಕಾರ್ಯಕರ್ತರು ಅವರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ. ಇದರಲ್ಲಿ ಒಬ್ಬ ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ, ಭೂಕುಸಿತದಿಂದ ಅವರ ಮನೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಾಗಾಗಿ ಅವರು ಜೀವಂತವಾಗಿ ಉಳಿದಿದ್ದಾರೆ ಎನ್ನಲಾಗಿದೆ.

ಕೇರಳದಲ್ಲಿ ಜುಲೈ 30ರಂದು ಮುಂಜಾನೆ ಭಾರಿ ಮಳೆಯಿಂದಾಗಿ ವಯನಾಡ್ ಜಿಲ್ಲೆಯ ವೈತಿರಿ ತಾಲ್ಲೂಕಿನ ಸುಮಾರು ಮೂರು ಹಳ್ಳಿಗಳಾದ ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲಾ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಮುಂಜಾನೆ 2 ಮತ್ತು 4.10ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈ ಸಮಯದಲ್ಲಿ ಜನರು ಮಲಗಿದ್ದರಿಂದ ಇದು ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಮಂಗಳೂರು-ಬೆಂಗಳೂರು ರೈಲು ವೇಳಾಪಟ್ಟಿ ಬದಲು; ಪ್ರಯಾಣಿಕರಿಗೆ ಏನು ಲಾಭ?

ಈಗಾಗಲೇ ಈ ಭೂಕುಸಿತದಲ್ಲಿ 201 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಕಾಣೆಯಾದ ಸುಮಾರು 300 ಜನರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹಾಗೇ ಅನೇಕ ದೇಹದ ಭಾಗಗಳನ್ನು ಸಂಗ್ರಹಿಸಲಾಗಿದೆ ಮತ್ತು ಅವಶೇಷಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Continue Reading
Advertisement
Paris Olympics 2024
ಕ್ರೀಡೆ6 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

Kasturirangan Report
ಕರ್ನಾಟಕ11 mins ago

Kasturirangan Report: ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ಬಗ್ಗೆ ಮತ್ತೊಮ್ಮೆ ಚರ್ಚಿಸಿ ತೀರ್ಮಾನ ಎಂದ ಸಿಎಂ

Paris Olympics 2024
ಪ್ರಮುಖ ಸುದ್ದಿ27 mins ago

Paris Olympics 2024 : ಭಾರತಕ್ಕೆ ಒಂದು ಪದಕ ಜಸ್ಟ್​​ ಮಿಸ್​; ಆರ್ಚರಿ ಕಂಚಿನ ಪದಕದ ಪಂದ್ಯದಲ್ಲಿ ಸೋತ ಅಂಕಿತಾ, ಧೀರಜ್ ಜೋಡಿ​

Income Tax Returns
ವಾಣಿಜ್ಯ37 mins ago

Income Tax Returns: ಜುಲೈ 31ರೊಳಗೆ 7.28 ಕೋಟಿ ಐಟಿಆರ್ ಸಲ್ಲಿಕೆ! ಇದು ಹೊಸ ದಾಖಲೆ

Kodagu News
ಪ್ರಮುಖ ಸುದ್ದಿ1 hour ago

Wayanad landslide: ವಯನಾಡು ಭೂ ಕುಸಿತ; ಮೃತ ಬಾಲಕ ರೋಹಿತ್ ತಾಯಿಗೆ ಸಾಂತ್ವನ ಹೇಳಿ ಪರಿಹಾರ ಘೋಷಿಸಿದ ಸಿಎಂ

Paris Olympics 2024
ಪ್ರಮುಖ ಸುದ್ದಿ1 hour ago

Paris Olympics 2024 : ಪ್ಯಾರಿಸ್​​ನಲ್ಲಿ ಸಿಕ್ಕಾಪಟ್ಟೆ ಸೆಖೆ; ಅಥ್ಲೀಟ್​ಗಳಿಗಾಗಿ 40 ಎಸಿ ಕಳುಹಿಸಿದ ಕ್ರೀಡಾ ಸಚಿವಾಲಯ

Kriti Sanon
Latest1 hour ago

Kriti Sanon: ನಟಿ ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವ ಈ ಕಬೀರ್ ಬಹಿಯಾ ಯಾರು?

Viral Video
Latest1 hour ago

Reels in Railway Station: ರೈಲ್ವೆ ನಿಲ್ದಾಣದಲ್ಲಿ ರೀಲ್ಸ್‌ ಮಾಡುತ್ತ ಯುವತಿಯ ಅಸಭ್ಯ ವರ್ತನೆ; ಕಿಡಿಕಾರಿದ ನೆಟ್ಟಿಗರು!

Dog attack
ಕ್ರೈಂ2 hours ago

Dog Attack: ವೃದ್ಧ ತಾಯಿಯನ್ನು ಮನೆಯ ಹೊರಗೆ ಮಲಗಿಸಿದ್ದ ಪುತ್ರರು; ಜೀವಂತವಾಗಿ ತಿಂದು ಹಾಕಿದ ಬೀದಿ ನಾಯಿಗಳು!

karnataka Weather Forecast
ಮಳೆ2 hours ago

Karnataka Weather : ವಾರಾಂತ್ಯದಲ್ಲಿ ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆ ಎಚ್ಚರಿಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌