HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ - Vistara News

ದೇಶ

HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

HD Deve Gowda: ಮಾಜಿ ಪ್ರಧಾನಿ, ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ ಅವರು ಭಾನುವಾರ ದೆಹಲಿ ಮೆಟ್ರೋ ದಲ್ಲಿ ಸಂಚರಿಸಿದರು. ಈ ವೇಳೆ ಮೆಟ್ರೋದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಮಾಹಿತಿ ನೀಡಿದರು. ಸಂಸತ್‌ ಅಧಿವೇಶನದ ಹಿನ್ನಲೆಯಲ್ಲಿ ದೆಹಲಿಯಲ್ಲಿರುವ ದೇವೇಗೌಡ ಅವರು ಶನಿವಾರ ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಕ್ಕೆ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದರು. ಪಿಎಂ ಸಂಗ್ರಹಾಲಯವನ್ನು ಇಷ್ಟು ಸುಸಜ್ಜಿತವಾಗಿ ಮಾಡಿದ್ದಕ್ಕಾಗಿ ಅವರು ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದರು.

VISTARANEWS.COM


on

HD Deve Gowda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮಾಜಿ ಪ್ರಧಾನಿ, ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ (HD Deve Gowda) ಅವರು ಭಾನುವಾರ (ಆಗಸ್ಟ್‌ 4) ದೆಹಲಿ ಮೆಟ್ರೋ (Delhi Metro)ದಲ್ಲಿ ಸಂಚರಿಸಿದರು. ಈ ವೇಳೆ ಮೆಟ್ರೋದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಮಾಹಿತಿ ನೀಡಿದರು. ದೆಹಲಿಯ ಲೋಕ ಕಲ್ಯಾಣ ಮಾರ್ಗದಿಂದ ಎಚ್.ಡಿ.ದೇವೇಗೌಡ ಅವರು ತಮ್ಮ ಪ್ರಯಾಣ ಆರಂಭಿಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ದೆಹಲಿ ಮೆಟ್ರೋ ಸೇವೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಸಂಸತ್‌ ಅಧಿವೇಶನದ ಹಿನ್ನಲೆಯಲ್ಲಿ ದೆಹಲಿಯಲ್ಲಿರುವ ದೇವೇಗೌಡ ಅವರು ಶನಿವಾರ ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಕ್ಕೆ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದರು. ಪಿಎಂ ಸಂಗ್ರಹಾಲಯವನ್ನು ಇಷ್ಟು ಸುಸಜ್ಜಿತವಾಗಿ ಮಾಡಿದ್ದಕ್ಕಾಗಿ ಅವರು ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದರು.

ʼʼನಾನು ದೆಹಲಿಯಲ್ಲಿರುವ ಪ್ರಧಾನಿಮಂತ್ರಿಗಳ ಮ್ಯೂಸಿಯಂ ʼಪಿಎಂ ಸಂಗ್ರಹಾಲಯʼಕ್ಕೆ ಭೇಟಿ ನೀಡಿದೆ. ಇದೊಂದು ಅದ್ಭುತ ಅನುಭವ ನೀಡಿತು. ಇಂತಹದ್ದೊಂದು ಐತಿಹಾಸಿಕ ವಸ್ತು ಸಂಗ್ರಹಾಲಯ ನಿರ್ಮಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನಾರ್ಹರು. ಇದುವರೆಗಿನ ಎಲ್ಲ ಪ್ರಧಾನಿಗಳ ವಿವರ, ಅವರು ಸಲ್ಲಿಸಿರು ಸೇವೆ, ದೇಶಕ್ಕಾಗಿ ಅವರ ಕೊಡುಗೆ ಮುಂತಾದ ವಿವರಗಳು ಇಲ್ಲಿ ಸಿಗುತ್ತದೆʼʼ ಎಂದು ದೇವೇಗೌಡ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಜತೆಗೆ ತಮ್ಮನ್ನು ಮ್ಯೂಸಿಯಂಗೆ ಸ್ವಾಗತಿಸಿದ ಶ್ರೀ ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರಿಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ʼʼಮ್ಯೂಸಿಯಂಗೆ ನನ್ನನ್ನು ಸ್ವಾಗತಿಸಿದ ನೃಪೇಂದ್ರ ಮಿಶ್ರಾ ಅವರಿಗೆ ಧನ್ಯವಾದಗಳು. PMOIndia ಯೋಜನೆಯ ಸಾಕಾರಕ್ಕೆ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅದೇ ರೀತಿ ಮ್ಯೂಸಿಮಂನಲ್ಲಿ ಪ್ರತಿಯೊಂದೂ ವಿವರಗಳನ್ನು, ಮಾಹಿತಿಗಳನ್ನು ನೀಡಿದ ಡಾ. ಎ.ಸೂರ್ಯ ಪ್ರಕಾಶ್‌ ಅವರಿಗೂ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆʼʼ ಎಂದು ಹೇಳಿದ್ದಾರೆ.

ʼʼಮ್ಯೂಸಿಯಂಗೆ ಭೇಟಿ ನೀಡಿದ್ದು ನನಗೆ ನಿಜಕ್ಕೂ ತುಂಬ ಖುಷಿಯ ಅನುಭವ ನೀಡಿತು. ಕರ್ನಾಟಕದ ಕುಗ್ರಾಮವೊಂದರ ಬಡ ಕುಟುಂಬದಲ್ಲಿ ಜನಿಸಿದ ನಾನು ಇಂತಹ ಅದ್ಭುತ ದೇಶವೊಂದಕ್ಕೆ ಪ್ರಧಾನಿಯಾಗಿದ್ದು ಬಹಳ ಹೆಮ್ಮೆಯ ವಿಷಯ. ಇಂತಹ ಅದ್ಭುತ ಮ್ಯೂಸಿಯಂನ ಭಾಗವಾಗುತ್ತೇನೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಪ್ರಜಾಪ್ರಭುತ್ವದ ಶಕ್ತಿಯೇ ಅಂತಹದ್ದು. ಜನರ ಆಶೀರ್ವಾದದಿಂದ ಈ ಕನಸು ನನಸಾಗಿದೆ. ನಾನು ಪ್ರಧಾನಿಯಾಗಿದ್ದಾಗ ದೇಶಕ್ಕಾಗಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ ಎನ್ನುವ ಬಗ್ಗೆ ತೃಪ್ತಿ ಇದೆ. ಎಲ್ಲರಿಗೂ ಧನ್ಯವಾದಗಳು ಮತ್ತು ಅಭಿನಂದನೆಗಳುʼʼ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಪಿಎಂ ಸಂಗ್ರಹಾಲಯಕ್ಕೆ ಆಗಮಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ʼʼಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮ್ಯೂಸಿಯಂಗೆ ಭೇಟಿ ನೀಡಿದ್ದಾರೆ ಎನ್ನುವ ವಿಚಾರ ತಿಳಿದು ಬಹಳಷ್ಟು ಸಂತಸವಾಯ್ತುʼʼ ಎಂದು ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: HD Devegowda: ಮೋದಿ ಬಜೆಟ್‌ಗೆ ಎಚ್‌.ಡಿ.ದೇವೇಗೌಡರ ಮೆಚ್ಚುಗೆ; ಬೆಂಗಳೂರು ನೀರಿನ ಸಮಸ್ಯೆ ಬಗೆಹರಿಸಲು ಮನವಿ

ಕೆಲವು ದಿನಗಳ ಹಿಂದೆ ವ್ಹೀಲ್‌ ಚೇರ್‌ನಲ್ಲಿಯೇ ತೆರಳಿದ ದೇವೇಗೌಡ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ದೇವೇಗೌಡರು ತೆರಳಿ ಮೋದಿ ಜತೆ ಮಾತುಕತೆ ನಡೆಸಿದ್ದರು. ದೇವೇಗೌಡ ಅವರನ್ನು ಭೇಟಿಯಾಗಿರುವ ಫೋಟೊಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮೂರ್ಛೆ ಹೋದ ವರ! ವಿಡಿಯೊ ನೋಡಿ

ಮದುವೆ ಮಂಟಪದಲ್ಲಿ ಗೆಳೆಯನ ಮಾತು ಕೇಳಿ ವರ ಕುಸಿದು ಬಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ಅನಿರೀಕ್ಷಿತ ಘಟನೆಯ ವಿಡಿಯೊ ಅಚ್ಚರಿ ಉಂಟು ಮಾಡುತ್ತದೆ. ಇನ್ನೇನು ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ವರ ಮೂರ್ಛೆ ಹೋಗುತ್ತಾನೆ. ಇದನ್ನು ಕಂಡು ವಧು ಮೂಕಳಾಗಿ ನಿಂತಿರುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣ ಆಗುತ್ತಿದೆ. ಈ ವಿಡಿಯೊ ಸಾಕಷ್ಟು ಕುತೂಹಲ ಮೂಡಿಸಿದೆ. ವರನಿಗೆ ಗೆಳೆಯ ಏನು ಹೇಳಿರಬಹುದು ಎಂಬ ಬಗ್ಗೆ ಜನ ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

By

Viral Video
Koo

ಮದುವೆ (marriage) ಎಲ್ಲರ ಬದುಕಿನ ಅತ್ಯಂತ ಸುಂದರ ಕ್ಷಣವಾಗಿರುತ್ತದೆ. ಬದುಕಿನ ಹೊಸ ಅಧ್ಯಾಯ (new life) ಪ್ರಾರಂಭಿಸುವ ದಂಪತಿ ಒಟ್ಟಿಗೆ ಭವಿಷ್ಯದ ಕನಸು ಹೊತ್ತು ಸತಿಪತಿಯಾಗುವ ವಿಧಿವಿಧಾನಗಳನ್ನು ಪೂರೈಸುತ್ತಿರುತ್ತಾರೆ. ಕೆಲವರಿಗೆ ಈ ದಿನ ಅನಿರೀಕ್ಷಿತ ಮತ್ತು ಆಘಾತಕಾರಿ ನೆನಪುಗಳಾಗುತ್ತದೆ. ಇಂತಹ ಒಂದು ಘಟನೆ ನಡೆದ ವಿಡಿಯೋವೊಂದು ಇನ್‌ಸ್ಟಾಗ್ರಾಮ್‌ನಲ್ಲಿ (instagram) ವೈರಲ್ (Viral Video) ಆಗಿದೆ.

ಈ ಅನಿರೀಕ್ಷಿತ ಘಟನೆಯ ವಿಡಿಯೊ ಅಚ್ಚರಿ ಉಂಟು ಮಾಡುತ್ತದೆ. ಇನ್ನೇನು ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ವರ ಮೂರ್ಛೆ ಹೋಗುತ್ತಾನೆ. ಇದನ್ನು ಕಂಡು ವಧು ಮೂಕಳಾಗಿ ನಿಂತಿರುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣ ಆಗುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಹಾರ ವಿನಿಮಯ ಸಮಾರಂಭವನ್ನು ತೋರಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಅತಿಥಿಗಳು, ವಧು ಮತ್ತು ವರನ ಸಂಬಂಧಿಕರು ಈ ಮಹತ್ವದ ಸಂದರ್ಭವನ್ನು ಉತ್ಸಾಹದಿಂದ ನೋಡುತ್ತಿದ್ದರು. ಅನಿರೀಕ್ಷಿತವಾಗಿ ವರನ ಬಳಿಗೆ ಯುವಕನೊಬ್ಬ ಬಂದು ಅವನ ಕಿವಿಯಲ್ಲಿ ಏನೋ ಪಿಸುಗುಟ್ಟುತ್ತಾನೆ. ಅವನು ಕೇಳುವುದನ್ನು ಸಹಿಸಲಾರದ ಕಾರಣ ವರನು ಆಘಾತಕ್ಕೆ ಒಳಗಾದಂತೆ ಕುಸಿದು ಬೀಳುತ್ತಾನೆ. ವರ ನೆಲದ ಮೇಲೆ ಕುಸಿದು ಬೀಳುವುದನ್ನು ನೋಡಿ ಸುತ್ತಮುತ್ತ ಇದ್ದವರು ಗಾಬರಿಯಾಗುತ್ತಾರೆ. ವಧು ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚದೆ ನಿಂತಿದ್ದು ಗಮನ ಸೆಳೆಯುತ್ತದೆ.


ವೈರಲ್ ಆಗಿರುವ ಈ ವಿಡಿಯೋ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. 2022ರ ಜುಲೈ 11ರಂದು ಹಂಚಿಕೊಂಡಿರುವ ಈ ವಿಡಿಯೋ ಎರಡು ವರ್ಷಗಳಷ್ಟು ಹಳೆಯದಾಗಿದ್ದರೂ ಈಗ ಅದು ವೈರಲ್ ಆಗುತ್ತಿದೆ. ಸಾಕಷ್ಟು ವೀಕ್ಷಣೆಗಳು ಮತ್ತು ಕಾಮೆಂಟ್‌ಗಳನ್ನು ಪಡೆದಿದೆ. ಸಾಕಷ್ಟು ಮಂದಿ ಯುವಕ ವರನಿಗೆ ಏನು ಹೇಳಿರಬಹುದು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: 20 ವರ್ಷಗಳ ಹಿಂದೆ ಅಜ್ಜ ಖರೀದಿಸಿದ್ದ ಷೇರು; ಮೊಮ್ಮಗಳು ರಾತ್ರೋರಾತ್ರಿ ಕೋಟ್ಯಧಿಪತಿ!

ವಿಡಿಯೋ ನೋಡಿ ಸಾಕಷ್ಟು ನೆಟ್ಟಿಗರು ಪ್ರಶ್ನೆಗಳನ್ನು ಕೇಳಿದ್ದು, ಊಹಾಪೋಹಗಳನ್ನು ಬರೆಯುತ್ತಿದ್ದಾರೆ. ಹೆಚ್ಚಿನವರು ವರನ ಮೂರ್ಛೆಗೆ ಕಾರಣವಾದ ಪಿಸುಮಾತಿನ ವಿಷಯದ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದಾರೆ. ವರನು ಮದುವೆಯಾಗಲಿರುವ ಮಹಿಳೆಯ ಬಗ್ಗೆ ಸ್ನೇಹಿತನು ರಹಸ್ಯವನ್ನು ಬಹಿರಂಗಪಡಿಸಿದ. ಇದರಿಂದಾಗಿ ಅವನು ಮೂರ್ಛೆ ಹೋಗುತ್ತಾನೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ವರನ ಹಿಂದಿನ ಪ್ರೇಮಿಯ ಕುರಿತು ಹೇಳಿರಬಹುದು ಎಂದು ತಿಳಿಸಿದ್ದಾರೆ. ಮದುವೆಯಲ್ಲಿ ಈ ಅನಿರೀಕ್ಷಿತ ಟ್ವಿಸ್ಟ್ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ, ಸಂತೋಷದ ಸಂದರ್ಭವನ್ನು ಅವ್ಯವಸ್ಥೆ ಮತ್ತು ಗೊಂದಲದ ಕ್ಷಣವಾಗಿ ಪರಿವರ್ತಿಸಿದೆ.

Continue Reading

ದೇಶ

BSF DG Row: ಬಿಎಸ್‌ಎಫ್‌ ಮುಖ್ಯಸ್ಥ ನಿತಿನ್‌ ಅಗರ್ವಾಲ್‌ ತಲೆದಂಡಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

BSF DG Row: ನಿತಿನ್ ಅಗರ್ವಾಲ್ ಅವರು ಕಳೆದ ವರ್ಷದ ಜೂನ್​​ನಲ್ಲಿ ಬಿಎಸ್ಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖುರಾನಿಯಾ ಅವರು ವಿಶೇಷ ಡಿಜಿ (ಪಶ್ಚಿಮ) ಆಗಿ ಪಾಕಿಸ್ತಾನ ಗಡಿಯಲ್ಲಿ ಪಡೆ ರಚನೆಯ ನೇತೃತ್ವ ವಹಿಸಿದ್ದರು. ಕ್ಯಾಬಿನೆಟ್​ನಲ್ಲಿ ನೇಮಕಾತಿ ಸಮಿತಿ ಹೊರಡಿಸಿದ ಪ್ರತ್ಯೇಕ ಆದೇಶಗಳಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ “ಅಕಾಲಿಕವಾಗಿ” ವಾಪಸ್ ಕಳುಹಿಸಲಾಗಿದೆ. ಅದಕ್ಕೆ ಕಾರಣ ಈಗ ಸಿಕ್ಕಿದೆ.

VISTARANEWS.COM


on

BSF DG Row
Koo

ನವದೆಹಲಿ: ಗಡಿ ಭದ್ರತಾ ಪಡೆ (Border Security Force) ಮಹಾ ನಿರ್ದೇಶಕ (BSF DG Row)​ ನಿತಿನ್ ಅಗರ್ವಾಲ್ ಮತ್ತು ಸ್ಪೆಷಲ್ ಡೆಪ್ಯುಟಿ ಡೈರೆಕ್ಟರ್​ (ಪಶ್ಚಿಮ) ವೈ.ಬಿ. ಖುರಾನಿಯಾ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ರಾಜ್ಯ ಕೇಡರ್​ಗಳಿಗೆ ವಾಪಸ್ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಐಪಿಎಸ್‌ (IPS) ಅಧಿಕಾರಿ ದಲ್ಜಿತ್‌ ಸಿಂಗ್‌ ಚೌಧರಿ (Daljit Singh Chawdhary) ಅವರನ್ನು ಬಿಎಸ್‌ಎಫ್‌ ಡಿಜಿಯನ್ನಾಗಿ ನೇಮಿಸಲಾಗಿದೆ. ಇದರ ಬೆನ್ನಲ್ಲೇ, ನಿತಿನ್‌ ಅಗರ್ವಾಲ್‌ ಅವರನ್ನು ಹುದ್ದೆಯಿಂದ ತೆರವುಗೊಳಿಸಲು ಅವರು ಮಾಡಿಕೊಂಡ ಎಡವಟ್ಟುಗಳೇ ಕಾರಣ ಎಂದು ಮೂಲಗಳು ತಿಳಿಸಿವೆ.

“ಬಿಎಸ್‌ಎಫ್‌ ಡಿಜಿ ಅವರನ್ನು ಕಾರ್ಯಾಚರಣೆ ಅಥವಾ ವೃತ್ತಿಪರತೆಯಲ್ಲಿ ಲೋಪದೋಷದಿಂದಾಗಿ ಹುದ್ದೆಯಿಂದ ತೆರವುಗೊಳಿಸಿಲ್ಲ. ಆದರೆ, ಡಿಜಿ ಹಾಗೂ ಅವರ ಅಧೀನದಲ್ಲಿರುವ ಅಧಿಕಾರಿಗಳ ಜತೆಗಿನ ಮುಸುಕಿನ ಗುದ್ದಾಟ, ಒಳಜಗಳಗಳಿಂದಾಗಿ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ನಿತಿನ್‌ ಅಗರ್ವಾಲ್‌ ಹಾಗೂ ಕಿರಿಯ ಅಧಿಕಾರಿಗಳ ನಡುವಿನ ಬಿಕ್ಕಟ್ಟು ಶಮನವಾಗಬೇಕು, ಗಡಿಯಲ್ಲಿ ದಕ್ಷತೆ ಹೆಚ್ಚಾಗಬೇಕು ಎಂಬ ಕಾರಣಕ್ಕಾಗಿ ನಿತಿನ್‌ ಅಗರ್ವಾಲ್‌ ಹಾಗೂ ವೈ.ಬಿ.ಖುನರಿಯಾ ಅವರನ್ನು ಹುದ್ದೆಯಿಂದ ಕೇಂದ್ರ ಗೃಹ ಸಚಿವಾಲಯವು ಕೆಳಗಿಳಿಸಿದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.

“ಬಿಎಸ್‌ಎಫ್‌ ಡಿಜಿ ಅವರ ಅಧೀನದಲ್ಲಿರುವ ಆಪ್ತ ಅಧಿಕಾರಿಗಳು ಹಾಗೂ ಮತ್ತೊಂದಿಷ್ಟು ಕಿರಿಯ ಅಧಿಕಾರಿಗಳ ತಂಡದ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇವರ ಗುಂಪು, ಅವರ ಗುಂಪು ಎಂಬ ಭೇದ-ಭಾವ ಸೃಷ್ಟಿಯಾಗಿತ್ತು. ಇದು ಹಲವು ಸಂದರ್ಭಗಳಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವಾಗ ಪರಿಣಾಮ ಬೀರುತ್ತಿತ್ತು. ಅದರಲ್ಲೂ, ಉಗ್ರರ ಚಟುವಟಿಕೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಎಸ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸುವ ವಿಷಯದಲ್ಲೂ ಗುಂಪುಗಾರಿಕೆ ನಡೆಯುತ್ತಿತ್ತು, ಯಾವುದೇ ರೀತಿಯ ಅಶಿಸ್ತನ್ನು ಸಹಿಸದ ಸಚಿವಾಲಯವು ಕಠಿಣ ಕ್ರಮ ತೆಗೆದುಕೊಂಡಿದೆ” ಎಂದು ತಿಳಿದುಬಂದಿದೆ.

ಅಗರ್ವಾಲ್ ಅವರು ಕಳೆದ ವರ್ಷ ಜೂನ್​​ನಲ್ಲಿ ಬಿಎಸ್ಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖುರಾನಿಯಾ ಅವರು ವಿಶೇಷ ಡಿಜಿ (ಪಶ್ಚಿಮ) ಆಗಿ ಪಾಕಿಸ್ತಾನ ಗಡಿಯಲ್ಲಿ ಪಡೆ ರಚನೆಯ ನೇತೃತ್ವ ವಹಿಸಿದ್ದರು. ಅಂತಾರಾಷ್ಟ್ರೀಯ ಗಡಿಯಿಂದ ನಿರಂತರ ಒಳನುಸುಳುವಿಕೆ ಹಿನ್ನೆಲೆಯಲ್ಲಿ ಈ ಕ್ರಮ ಎಂದು ಹೇಳಲಾಗಿತ್ತು. ಸಮನ್ವಯದ ಕೊರತೆ ಸೇರಿ ನಿರ್ಣಾಯಕ ವಿಷಯಗಳ ಬಗ್ಗೆ ಬಿಎಸ್ಎಫ್ ಮುಖ್ಯಸ್ಥರ ವಿರುದ್ಧ ದೂರುಗಳು ಬಂದಿದ್ದವು ಎಂದು ಮೂಲಗಳು ತಿಳಿಸಿವೆ. ಬಿಎಸ್ಎಫ್ ಸುಮಾರು 2.65 ಲಕ್ಷ ಸಿಬ್ಬಂದಿಯನ್ನು ಹೊಂದಿದೆ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ಮತ್ತು ಪೂರ್ವದಲ್ಲಿ ಬಾಂಗ್ಲಾದೇಶದ ಗಡಿಗಳನ್ನು ಕಾಯುತ್ತಿದೆ.

ಇದನ್ನೂ ಓದಿ: BSF Chief: ಬಿಎಸ್‌ಎಫ್‌ ನೂತನ ಮುಖ್ಯಸ್ಥರಾಗಿ ದಲ್ಜಿತ್‌ ಸಿಂಗ್‌ ಚೌಧರಿ ನೇಮಕ

Continue Reading

ವಾಣಿಜ್ಯ

Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟಿಗೆ 9.60 ರೂ. ವೆಚ್ಚ!

ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಮುಖಬೆಲೆಯ ನೋಟುಗಳನ್ನು (Indian Currency) ಮುದ್ರಿಸುತ್ತದೆ. ಎಲ್ಲ ನೋಟುಗಳ ಮುದ್ರಣ ವೆಚ್ಚ ಒಂದೇ ರೀತಿ ಇರುವುದಿಲ್ಲ. ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಬದಲಾಗುತ್ತದೆ. ಈಗಾಗಲೇ ಚಲಾವಣೆಯಿಂದ ಹೊರತೆಗೆದಿರುವ 2,000 ರೂಪಾಯಿ ನೋಟಿನ ಮುದ್ರಣಕ್ಕೆ 2018 ರಲ್ಲಿ 4.18 ರೂಪಾಯಿ ವೆಚ್ಚವಾಗುತ್ತಿತ್ತು. ಬಳಿಕ ಅದು 3.53 ರೂಪಾಯಿಗೆ ಇಳಿಕೆಯಾಗಿತ್ತು. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Indian Currency
Koo

ವಿವಿಧ ನಾಣ್ಯ, ಮುಖಬೆಲೆಯ ನೋಟುಗಳನ್ನು (Indian Currency) ಮುದ್ರಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (Reserve Bank of India) ಇವುಗಳನ್ನು ಮುದ್ರಿಸಲು ಎಷ್ಟು ಖರ್ಚಾಗುತ್ತದೆ (Printing costs) ಎಂಬುದು ತಿಳಿದರೆ ಆಶ್ಚರ್ಯವಾಗಬಹುದು. ಕೆಲವು ನೋಟುಗಳ ಮುದ್ರಣ ವೆಚ್ಚ ತುಂಬಾ ದುಬಾರಿಯಾಗಿದೆ. ನೋಟ್ ಬ್ಯಾನ್ ಆದ ಬಳಿಕ ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ.

ಭಾರತೀಯ ರಿಸರ್ವ್ ಬ್ಯಾಂಕ್ 2024ರ ಮೇ ತಿಂಗಳಲ್ಲಿ 2,000 ರೂ. ಮುಖ ಬೆಲೆಯ ನೋಟುಗಳನ್ನು ತೆಗೆದು ಹಾಕಿತ್ತು. ಇದರ ವಾಪಸಾತಿಗೆ ಅಕ್ಟೋಬರ್ 7ರವರೆಗೆ ಹೊಸ ಗಡುವು ವಿಧಿಸಿದೆ. ಅಂದರೆ ಅಲ್ಲಿಯವರೆಗೆ ಮಾತ್ರ 2,000 ರೂ.ನ ನೋಟುಗಳು ಕಾನೂನು ಮೂಲಕ ಮಾನ್ಯವಾಗಿರುತ್ತವೆ. ಆದರೆ ಚಲಾವಣೆ ಮಾಡಲಾಗುವುದಿಲ್ಲ.

ಯಾವುದಕ್ಕೆ ಎಷ್ಟು ವೆಚ್ಚ?

ಆರ್‌ಬಿಐ ಮುದ್ರಿಸುವ ವಿವಿಧ ಮುಖಬೆಲೆಯ ನೋಟುಗಳ ಮುದ್ರಣ ವೆಚ್ಚವು ಒಂದೇ ರೀತಿ ಇರುವುದಿಲ್ಲ. 2,000 ರೂಪಾಯಿ ಒಂದು ನೋಟು ಮುದ್ರಣಕ್ಕೆ ಸರಿಸುಮಾರು 4 ರೂಪಾಯಿ ವೆಚ್ಚವಾಗುತ್ತದೆ. 2018ರಲ್ಲಿ 2,000 ರೂಪಾಯಿ ನೋಟಿನ ಮುದ್ರಣದ ವೆಚ್ಚ 4.18 ರೂಪಾಯಿ ಆಗಿದ್ದು, ಅನಂತರ ಅದು 3.53 ರೂಪಾಯಿಗೆ ಇಳಿಕೆಯಾಯಿತು.

ಕುತೂಹಲಕಾರಿ ವಿಷಯವೆಂದರೆ ಅತ್ಯಧಿಕ ಮುದ್ರಣ ವೆಚ್ಚವಾಗುವುದು 10 ರೂ. ನೋಟುಗಳಿಗೆ ಎಂದರೆ ಆಶ್ಚರ್ಯವಾಗಬಹುದು. 10 ರೂಪಾಯಿಯ 1,000 ನೋಟುಗಳನ್ನು ಮುದ್ರಿಸಲು 960 ರೂ. ವೆಚ್ಚವಾಗುತ್ತದೆ. ನೋಟಿನ ಮುದ್ರಣದ ವೆಚ್ಚವು ಅದರ ಮುಖಬೆಲೆಯನ್ನೂ ಮೀರುವಂತಿದೆ. ಅಂದರೆ ಹತ್ತು ರೂಪಾಯಿಯ ಒಂದು ನೋಟಿಗೆ 9.60 ರೂ. ವೆಚ್ಚವಾಗುತ್ತದೆ!

100 ರೂ. ಗಳ 1,000 ನೋಟುಗಳನ್ನು ಮುದ್ರಿಸಲು 1,770 ರೂ., 200 ರೂ. ಗಳ 1,000 ನೋಟುಗಳನ್ನು ಮುದ್ರಿಸಲು 2,370 ರೂ., 500 ರೂ.ಗಳ 1,000 ನೋಟುಗಳನ್ನು ಮುದ್ರಿಸಲು 2,290 ರೂ. ಖರ್ಚಾಗುತ್ತದೆ. 2,000 ರೂಪಾಯಿಗಳ 1000 ನೋಟುಗಳನ್ನು ಮುದ್ರಿಸುವ ವೆಚ್ಚವು ಈ ಕೆಲವು ಮುಖಬೆಲೆಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ.

Indian Currency
Indian Currency


ಚಲಾವಣೆಯಲ್ಲಿದ್ದ 2,000 ರೂ. ನೋಟುಗಳು

ಆರ್‌ಬಿಐ ಪ್ರಕಾರ ಮೇ 19ರವರೆಗೆ ಚಲಾವಣೆಯಲ್ಲಿದ್ದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂಪಾಯಿ. ಇವುಗಳಲ್ಲಿ 3.42 ಲಕ್ಷ ಕೋಟಿ ರೂಪಾಯಿಗಳು ಬ್ಯಾಂಕ್‌ಗಳಿಗೆ ಮರಳಿದ್ದು ಸೆಪ್ಟೆಂಬರ್ 29 ರ ಹೊತ್ತಿಗೆ ಕೇವಲ 0.14 ಲಕ್ಷ ಕೋಟಿ ಚಲಾವಣೆಯಲ್ಲಿ ಉಳಿದಿದೆ. ಈ ನೋಟುಗಳನ್ನು ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಆರಂಭಿಕ ಗಡುವು ಸೆಪ್ಟೆಂಬರ್ 30 ಆಗಿತ್ತು.

2023ರ ಮೇ 19ರಂತೆ ಚಲಾವಣೆಯಲ್ಲಿರುವ 2,000 ರೂಪಾಯಿಗಳ ಬ್ಯಾಂಕ್‌ನೋಟುಗಳಲ್ಲಿ ಶೇ. 96ರಷ್ಟನ್ನು ಹಿಂತಿರುಗಿಸಲಾಗಿದೆ. ಹೆಚ್ಚುವರಿಯಾಗಿ, ಅಕ್ಟೋಬರ್ 8 ರಿಂದ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ಬ್ಯಾಂಕ್ ನೋಟುಗಳನ್ನು ಠೇವಣಿ ಮಾಡುವ ಅಥವಾ ಬದಲಾಯಿಸುವ ಪ್ರಕ್ರಿಯೆಯನ್ನು ನಿಲ್ಲಿಸಲಾಗುವುದು ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

2,000 ರೂಪಾಯಿಗಳ ನೋಟುಗಳನ್ನು 19 ಆರ್‌ಬಿಐ ಇಶ್ಯೂ ಆಫೀಸ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಒಂದು ಬಾರಿಗೆ 20,000 ರೂ. ಅನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೇ ಆರ್‌ಬಿಐ ಇಶ್ಯೂ ಆಫೀಸ್‌ಗಳಲ್ಲಿ 2,000 ರೂ ಬ್ಯಾಂಕ್‌ನೋಟುಗಳನ್ನು ತಮ್ಮ ಭಾರತೀಯ ಬ್ಯಾಂಕ್ ಖಾತೆಗಳಿಗೆ ಯಾವುದೇ ಮೊತ್ತಕ್ಕೆ ಜಮಾ ಮಾಡಬಹುದು. ಹೆಚ್ಚುವರಿಯಾಗಿ, ದೇಶದೊಳಗೆ ಇರುವ ವ್ಯಕ್ತಿಗಳು ಅಥವಾ ಘಟಕಗಳು ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು 19 ಆರ್‌ಬಿಐ ಇಶ್ಯೂ ಕಚೇರಿಗಳಿಗೆ ಯಾವುದಾದರೂ ಇಂಡಿಯಾ ಪೋಸ್ಟ್ ಮೂಲಕ 2,000 ರೂ . ಬ್ಯಾಂಕ್ ನೋಟುಗಳನ್ನು ಕಳುಹಿಸುವ ಆಯ್ಕೆಯನ್ನು ಹೊಂದಿವೆ.

Continue Reading

ವೈರಲ್ ನ್ಯೂಸ್

ಮದುವೆಯಾದ ಮೇಲೂ ಪತ್ನಿಗೆ ಹಳೇ ಲವ್ವರ್‌ ಮೇಲೆ ಮೋಹ; ಆತನೊಂದಿಗೇ ಮದುವೆ ಮಾಡಿಸಿದ ಪತಿ!

ಚಂದನ್‌ ಹಾಗೂ ಖುಷ್ಬೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಸ್ನೇಹಿತರಾದ ಕೆಲವೇ ವರ್ಷಗಳಲ್ಲಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪರಿಸ್ಥಿತಿಯ ಒತ್ತಡಕ್ಕೋ, ಮನೆಯವರ ಒತ್ತಾಯಕ್ಕೋ ಮಣಿದಿದ್ದ ಖುಷ್ಬೂ, ರಾಜೇಶ್‌ ಕುಮಾರ್‌ನನ್ನು ಮದುವೆಯಾಗಿದ್ದಳು. ಆದರೂ, ಮಾಜಿ ಪ್ರೇಮಿಯನ್ನು ಖುಷ್ಬೂ ಮರೆತಿರಲಿಲ್ಲ.

VISTARANEWS.COM


on

Marriage
Koo

ಪಟನಾ: ಮದುವೆಯಾದ ಮೇಲೆ ಹೆಂಡತಿ ಮೇಲೆ ಸುಖಾಸುಮ್ಮನೆ ಅನುಮಾನ ಪಡುವವರಿದ್ದಾರೆ. ಹಾಗೊಂದು, ವೇಳೆ ಹೆಂಡತಿಗೆ ಮದುವೆಯಾದ ಮೇಲೂ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡರೆ ಆಕೆಯ ಮೇಲೆ ಹಲ್ಲೆ ನಡೆಸುವ, ಕೆಲವೊಮ್ಮೆ ಕೊಲೆಯನ್ನೂ ಮಾಡುವ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಆದರೆ, ಬಿಹಾರದಲ್ಲೊಬ್ಬ (Bihar) 26 ವರ್ಷದ ವ್ಯಕ್ತಿಯು ಮದುವೆಯಾದ ಬಳಿಕ ಹೆಂಡತಿಯನ್ನು ಆಕೆಯ ಮಾಜಿ ಪ್ರಿಯತಮನೊಂದಿಗೆ ಮದುವೆ ಮಾಡಿಸಿದ್ದಾನೆ. ಈ ಸುದ್ದಿ ಈಗ ವೈರಲ್‌ (Viral News) ಆಗಿದೆ.

ಬಿಹಾರದ ರಾಮನಗರ ಗ್ರಾಮದ ನಿವಾಸಿಯಾದ ರಾಜೇಶ್‌ ಕುಮಾರ್‌ ಎಂಬಾತನೇ ಹೆಂಡತಿಯನ್ನು ಆಕೆಯ ಮಾಜಿ ಪ್ರಿಯತನಮ ಜತೆ ಜೀವನ ಸಾಗಿಸಿಲು ಅವಕಾಶ ಮಾಡಿಕೊಟ್ಟಿದ್ದಾನೆ. ಕೆಲ ದಿನಗಳ ಹಿಂದಷ್ಟೇ ರಾಜೇಶ್‌ ಕುಮಾರ್‌ ಮನೆಯಲ್ಲಿ ಇಲ್ಲದಿದ್ದಾಗ ಆತನ ಪತ್ನಿ ಖುಷ್ಬೂ (22) ಮಾಜಿ ಪ್ರಿಯತಮ ಚಂದನ್‌ನನ್ನು (24) ಮನೆಗೆ ಕರೆಸಿದ್ದಳು. ಇಬ್ಬರೂ ಮನೆಯಲ್ಲಿ ಸರಸವಾಡುತ್ತಿದ್ದಾಗಲೇ ರಾಜೇಶ್‌ ಕುಮಾರ್‌ ಮನೆಗೆ ಬಂದಿದ್ದಾನೆ. ಆಗ ಇಬ್ಬರ ಪ್ರೇಮಪುರಾಣ ಬಯಲಾಗಿದೆ.

ಪತ್ನಿಯು ತನಗೆ ಮೋಸ ಮಾಡಿದಳು, ಅಕ್ರಮ ಸಂಬಂಧ ಹೊಂದಿದಳು ಎಂದು ಗಲಾಟೆ ಮಾಡದ, ಚಂದನ್‌ ಮೇಲೆ ಹಲ್ಲೆ ನಡೆಸದ, ಕೋಪದ ಕೈಗೆ ಬುದ್ಧಿ ಕೊಡದ ರಾಜೇಶ್‌ ಕುಮಾರ್‌, ಖುಷ್ಬೂ ಹಾಗೂ ಚಂದನ್‌ರ ಮದುವೆ ಮಾಡಿಸಿದ್ದಾರೆ. ಇಡೀ ಗ್ರಾಮದ ಜನರನ್ನು ಕರೆಸಿ, ಅವರನ್ನು ಸ್ಥಳೀಯ ದೇವಾಲಯಕ್ಕೆ ಕರೆದುಕೊಂಡು ಹೋಗಿ, ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಮದುವೆ ಮಾಡಿಸಿದ ಬಳಿಕ ಅವರಿಗೆ ಶುಭ ಹಾರೈಸಿ, ಬೀಳ್ಕೊಟ್ಟಿದ್ದಾರೆ.

ಚಂದನ್‌ ಹಾಗೂ ಖುಷ್ಬೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಸ್ನೇಹಿತರಾದ ಕೆಲವೇ ವರ್ಷಗಳಲ್ಲಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪರಿಸ್ಥಿತಿಯ ಒತ್ತಡಕ್ಕೋ, ಮನೆಯವರ ಒತ್ತಾಯಕ್ಕೋ ಮಣಿದಿದ್ದ ಖುಷ್ಬೂ, ರಾಜೇಶ್‌ ಕುಮಾರ್‌ನನ್ನು ಮದುವೆಯಾಗಿದ್ದರು. ಆದರೆ, ಮದುವೆಯಾದ ಬಳಿಕವೂ ಚಂದನ್‌ ಜತೆ ಖುಷ್ಬೂ ಸಂಪರ್ಕದಲ್ಲಿದ್ದಳು. ರಾಜೇಶ್‌ ಕುಮಾರ್‌ ಇಲ್ಲದಿದ್ದಾಗ ಚಂದನ್‌ ಮನೆಗೆ ಬರುತ್ತಿದ್ದ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಪತ್ನಿಯ ಸಂಬಂಧದ ಬಳಿಕವೂ ಗಲಾಟೆ, ಜಗಳ ಮಾಡಿಕೊಳ್ಳದ ರಾಜೇಶ್‌, ಆಕೆಯನ್ನು ಬೀಳ್ಕೊಟ್ಟಿರುವ ಸಮಾಧಾನದ ಗುಣಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪತ್ನಿ ಇದ್ದರೂ ಮಹಿಳಾ ಇನ್ಸ್‌ಪೆಕ್ಟರ್‌ ಜತೆ ವ್ಯಕ್ತಿ ಸರಸ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿ ಮಾಡಿದ್ದೇನು? Video ಇದೆ

Continue Reading
Advertisement
Jaskaran Singh
ಸ್ಯಾಂಡಲ್ ವುಡ್6 mins ago

Jaskaran Singh: ಕನ್ನಡತಿಯ್ನನೇ ಮದುವೆ ಆಗುವೆ ಎಂದ ‘ದ್ವಾಪರ’ ಹಾಡಿನ ಗಾಯಕ ಜಸ್‌ಕರಣ್‌ ಸಿಂಗ್!

Viral Video
ವೈರಲ್ ನ್ಯೂಸ್11 mins ago

Viral Video: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

Western Ghats
ಕರ್ನಾಟಕ18 mins ago

Western Ghats: ನಾಳೆಯಿಂದ ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಸಚಿವ ಈಶ್ವರ ಖಂಡ್ರೆ

Viral Video
ವೈರಲ್ ನ್ಯೂಸ್26 mins ago

Viral Video: ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮೂರ್ಛೆ ಹೋದ ವರ! ವಿಡಿಯೊ ನೋಡಿ

Chennai Super Kings
ಕ್ರಿಕೆಟ್43 mins ago

Chennai Super Kings : ಮಹಿಳೆಯರ ಪ್ರೀಮಿಯರ್ ಲೀಗ್​ಗೆ ಎಂಟ್ರಿ ಪಡೆಯಲಿದೆ ಚೆನ್ನೈ ಸೂಪರ್ ಕಿಂಗ್ಸ್​

BSF DG Row
ದೇಶ46 mins ago

BSF DG Row: ಬಿಎಸ್‌ಎಫ್‌ ಮುಖ್ಯಸ್ಥ ನಿತಿನ್‌ ಅಗರ್ವಾಲ್‌ ತಲೆದಂಡಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

Lovlina Borgohain
ಕ್ರೀಡೆ57 mins ago

Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

ಕರ್ನಾಟಕ1 hour ago

‌MB Patil: ಕುಮಾರಸ್ವಾಮಿಯದು ಅವಕಾಶವಾದಿ ಮೈತ್ರಿ ಎಂದ ಎಂ.ಬಿ. ಪಾಟೀಲ್

Bangladesh
ವಿದೇಶ2 hours ago

Bangladesh: ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ; 32 ಜನ ಸಾವು

Road Accident
ವಿಜಯಪುರ2 hours ago

Road Accident : ಅಮಾವಾಸ್ಯೆಗೆಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅಪಘಾತಕ್ಕೆ ಬಲಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ6 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌