ಮದುವೆಯಾದ ಮೇಲೂ ಪತ್ನಿಗೆ ಹಳೇ ಲವ್ವರ್‌ ಮೇಲೆ ಮೋಹ; ಆತನೊಂದಿಗೇ ಮದುವೆ ಮಾಡಿಸಿದ ಪತಿ! - Vistara News

ವೈರಲ್ ನ್ಯೂಸ್

ಮದುವೆಯಾದ ಮೇಲೂ ಪತ್ನಿಗೆ ಹಳೇ ಲವ್ವರ್‌ ಮೇಲೆ ಮೋಹ; ಆತನೊಂದಿಗೇ ಮದುವೆ ಮಾಡಿಸಿದ ಪತಿ!

ಚಂದನ್‌ ಹಾಗೂ ಖುಷ್ಬೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಸ್ನೇಹಿತರಾದ ಕೆಲವೇ ವರ್ಷಗಳಲ್ಲಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪರಿಸ್ಥಿತಿಯ ಒತ್ತಡಕ್ಕೋ, ಮನೆಯವರ ಒತ್ತಾಯಕ್ಕೋ ಮಣಿದಿದ್ದ ಖುಷ್ಬೂ, ರಾಜೇಶ್‌ ಕುಮಾರ್‌ನನ್ನು ಮದುವೆಯಾಗಿದ್ದಳು. ಆದರೂ, ಮಾಜಿ ಪ್ರೇಮಿಯನ್ನು ಖುಷ್ಬೂ ಮರೆತಿರಲಿಲ್ಲ.

VISTARANEWS.COM


on

Marriage
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಟನಾ: ಮದುವೆಯಾದ ಮೇಲೆ ಹೆಂಡತಿ ಮೇಲೆ ಸುಖಾಸುಮ್ಮನೆ ಅನುಮಾನ ಪಡುವವರಿದ್ದಾರೆ. ಹಾಗೊಂದು, ವೇಳೆ ಹೆಂಡತಿಗೆ ಮದುವೆಯಾದ ಮೇಲೂ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡರೆ ಆಕೆಯ ಮೇಲೆ ಹಲ್ಲೆ ನಡೆಸುವ, ಕೆಲವೊಮ್ಮೆ ಕೊಲೆಯನ್ನೂ ಮಾಡುವ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಆದರೆ, ಬಿಹಾರದಲ್ಲೊಬ್ಬ (Bihar) 26 ವರ್ಷದ ವ್ಯಕ್ತಿಯು ಮದುವೆಯಾದ ಬಳಿಕ ಹೆಂಡತಿಯನ್ನು ಆಕೆಯ ಮಾಜಿ ಪ್ರಿಯತಮನೊಂದಿಗೆ ಮದುವೆ ಮಾಡಿಸಿದ್ದಾನೆ. ಈ ಸುದ್ದಿ ಈಗ ವೈರಲ್‌ (Viral News) ಆಗಿದೆ.

ಬಿಹಾರದ ರಾಮನಗರ ಗ್ರಾಮದ ನಿವಾಸಿಯಾದ ರಾಜೇಶ್‌ ಕುಮಾರ್‌ ಎಂಬಾತನೇ ಹೆಂಡತಿಯನ್ನು ಆಕೆಯ ಮಾಜಿ ಪ್ರಿಯತನಮ ಜತೆ ಜೀವನ ಸಾಗಿಸಿಲು ಅವಕಾಶ ಮಾಡಿಕೊಟ್ಟಿದ್ದಾನೆ. ಕೆಲ ದಿನಗಳ ಹಿಂದಷ್ಟೇ ರಾಜೇಶ್‌ ಕುಮಾರ್‌ ಮನೆಯಲ್ಲಿ ಇಲ್ಲದಿದ್ದಾಗ ಆತನ ಪತ್ನಿ ಖುಷ್ಬೂ (22) ಮಾಜಿ ಪ್ರಿಯತಮ ಚಂದನ್‌ನನ್ನು (24) ಮನೆಗೆ ಕರೆಸಿದ್ದಳು. ಇಬ್ಬರೂ ಮನೆಯಲ್ಲಿ ಸರಸವಾಡುತ್ತಿದ್ದಾಗಲೇ ರಾಜೇಶ್‌ ಕುಮಾರ್‌ ಮನೆಗೆ ಬಂದಿದ್ದಾನೆ. ಆಗ ಇಬ್ಬರ ಪ್ರೇಮಪುರಾಣ ಬಯಲಾಗಿದೆ.

ಪತ್ನಿಯು ತನಗೆ ಮೋಸ ಮಾಡಿದಳು, ಅಕ್ರಮ ಸಂಬಂಧ ಹೊಂದಿದಳು ಎಂದು ಗಲಾಟೆ ಮಾಡದ, ಚಂದನ್‌ ಮೇಲೆ ಹಲ್ಲೆ ನಡೆಸದ, ಕೋಪದ ಕೈಗೆ ಬುದ್ಧಿ ಕೊಡದ ರಾಜೇಶ್‌ ಕುಮಾರ್‌, ಖುಷ್ಬೂ ಹಾಗೂ ಚಂದನ್‌ರ ಮದುವೆ ಮಾಡಿಸಿದ್ದಾರೆ. ಇಡೀ ಗ್ರಾಮದ ಜನರನ್ನು ಕರೆಸಿ, ಅವರನ್ನು ಸ್ಥಳೀಯ ದೇವಾಲಯಕ್ಕೆ ಕರೆದುಕೊಂಡು ಹೋಗಿ, ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಮದುವೆ ಮಾಡಿಸಿದ ಬಳಿಕ ಅವರಿಗೆ ಶುಭ ಹಾರೈಸಿ, ಬೀಳ್ಕೊಟ್ಟಿದ್ದಾರೆ.

ಚಂದನ್‌ ಹಾಗೂ ಖುಷ್ಬೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಸ್ನೇಹಿತರಾದ ಕೆಲವೇ ವರ್ಷಗಳಲ್ಲಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪರಿಸ್ಥಿತಿಯ ಒತ್ತಡಕ್ಕೋ, ಮನೆಯವರ ಒತ್ತಾಯಕ್ಕೋ ಮಣಿದಿದ್ದ ಖುಷ್ಬೂ, ರಾಜೇಶ್‌ ಕುಮಾರ್‌ನನ್ನು ಮದುವೆಯಾಗಿದ್ದರು. ಆದರೆ, ಮದುವೆಯಾದ ಬಳಿಕವೂ ಚಂದನ್‌ ಜತೆ ಖುಷ್ಬೂ ಸಂಪರ್ಕದಲ್ಲಿದ್ದಳು. ರಾಜೇಶ್‌ ಕುಮಾರ್‌ ಇಲ್ಲದಿದ್ದಾಗ ಚಂದನ್‌ ಮನೆಗೆ ಬರುತ್ತಿದ್ದ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಪತ್ನಿಯ ಸಂಬಂಧದ ಬಳಿಕವೂ ಗಲಾಟೆ, ಜಗಳ ಮಾಡಿಕೊಳ್ಳದ ರಾಜೇಶ್‌, ಆಕೆಯನ್ನು ಬೀಳ್ಕೊಟ್ಟಿರುವ ಸಮಾಧಾನದ ಗುಣಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪತ್ನಿ ಇದ್ದರೂ ಮಹಿಳಾ ಇನ್ಸ್‌ಪೆಕ್ಟರ್‌ ಜತೆ ವ್ಯಕ್ತಿ ಸರಸ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿ ಮಾಡಿದ್ದೇನು? Video ಇದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಉಂಗಾರ್ ರಸ್ತೆಯ ಬೋರ್ನ್ ಘಾಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವತಿ 100 ಅಡಿ ಆಳದ ಕಮರಿಗೆ ಬಿದ್ದು ಗಾಯಗೊಂಡಿದ್ದಾಳೆ. ಸ್ಥಳೀಯರು ಹಗ್ಗವನ್ನು ಬಳಸಿ ಆಕೆಯನ್ನು ರಕ್ಷಿಸಿದ್ದು, ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೊ ಸೆಲ್ಫಿ ಶೋಕಿ ಹೊಂದಿರುವವರಿಗೆ ಎಚ್ಚರಿಕೆಯ ಪಾಠವಾಗಿದೆ.

VISTARANEWS.COM


on

By

Viral Video
Koo

ಸತಾರಾ: ಸೆಲ್ಫಿ ತೆಗೆದುಕೊಳ್ಳುವಾಗ (Taking Selfie) ಯುವತಿಯೊಬ್ಬಳು 100 ಅಡಿ ಆಳದ ಕಮರಿಗೆ ಬಿದ್ದಿರುವ ಘಟನೆ ಮಹಾರಾಷ್ಟ್ರದ ಸತಾರಾ (Maharashtra’s Satara district) ಜಿಲ್ಲೆಯ ಉಂಗಾರ್ ರಸ್ತೆಯ ಬೋರ್ನ್ ಘಾಟ್‌ನಲ್ಲಿ ನಡೆದಿದೆ. ಭಾರೀ ಮಳೆಯಾಗುತ್ತಿರುವ ಪ್ರದೇಶಕ್ಕೆ ಅವರು ಶನಿವಾರ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಸ್ಥಳೀಯರು ಹಗ್ಗವನ್ನು ಬಳಸಿ ಆಕೆಯನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಥಳೀಯರು ದಪ್ಪ ಹಗ್ಗವನ್ನು ಕಮರಿಗೆ ಎಸೆದಿದ್ದು ಮಹಿಳೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ವ್ಯಕ್ತಿಯೊಬ್ಬರು ಇಳಿಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಮರಳಿ ಕರೆತರುವಾಗ ಆಕೆ ನೋವಿನಿಂದ ಅಳುವುದು ಕೇಳುತ್ತದೆ. ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗೆ ತೀವ್ರ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಆದರೆ ಅಪಾಯದಿಂದ ಪಾರಾಗಿದ್ದಾಳೆ.


ಇನ್ನೊಂದು ಘಟನೆಯಲ್ಲಿ ಮಹಿಳೆ ಸಾವು

ಇತ್ತೀಚೆಗೆ ನಡೆದ ಇನ್ನೊಂದು ಘಟನೆಯಲ್ಲಿ ಮುಂಬಯಿ ನಿವಾಸಿ ಮತ್ತು ಪ್ರಸಿದ್ಧ ಪ್ರವಾಸಿ ಪ್ರಭಾವಿ ಆನ್ವಿ ಕಾಮ್ದಾರ್ (26) ಅವರು ಮಹಾರಾಷ್ಟ್ರದ ರಾಯಗಢ ಬಳಿಯ ಕುಂಭೆ ಜಲಪಾತದಲ್ಲಿ ಇನ್ ಸ್ಟಾಗ್ರಾಮ್ ರೀಲ್ ಮಾಡುತ್ತಿದ್ದಾಗ ಕಮರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಯಾಣದ ವಿಷಯಕ್ಕಾಗಿ ಆನ್ವಿ ಪ್ರಸಿದ್ಧರಾಗಿದ್ದರು. ಜುಲೈ 16ರಂದು ತಮ್ಮ ಸ್ನೇಹಿತರೊಂದಿಗೆ ಚಿತ್ರೀಕರಣ ಮಾಡುವಾಗ 350 ಅಡಿ ಆಳದ ಕಮರಿಗೆ ಬಿದ್ದಿದ್ದಾರೆ.

ಕೋಸ್ಟ್ ಗಾರ್ಡ್ ಮತ್ತು ಸ್ಥಳೀಯ ರಕ್ಷಣಾ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಯನ್ನು ವೇಗವಾಗಿ ನಡೆಸಿತ್ತು. ಸುಮಾರು ಆರು ಗಂಟೆಗಳ ಅನಂತರ ಅಣ್ವಿಯನ್ನು ರಕ್ಷಿಸಲಾಯಿತು. ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮದುವೆಯಾದ ಮೇಲೂ ಪತ್ನಿಗೆ ಹಳೇ ಲವ್ವರ್‌ ಮೇಲೆ ಮೋಹ; ಆತನೊಂದಿಗೇ ಮದುವೆ ಮಾಡಿಸಿದ ಪತಿ!

ಅವರು ಬಿದ್ದ ಮಾಹಿತಿ ತಿಳಿದ ಸ್ಥಳೀಯ ರಕ್ಷಕರು ಸುಮಾರು 15 ನಿಮಿಷಗಳಲ್ಲಿ ಬಿದ್ದ ಸ್ಥಳವನ್ನು ತಲುಪಿದ್ದರು. ಅವರು ಬಿದ್ದ ಸ್ಥಳ ತಲುಪುವಾಗ ದೊಡ್ಡ ಕಲ್ಲುಗಳು ಅವರ ಮೇಲೆ ಬೀಳುವುದರಲ್ಲಿತ್ತು. ಆದರೆ ಭಾರಿ ಅನಾಹುತ ಆ ಕ್ಷಣದಲ್ಲಿ ತಪ್ಪಿತ್ತು. ಆರಂಭದಲ್ಲಿ ರಕ್ಷಕರು ಅವರು ಸತ್ತಿರಬಹುದು ಎಂದು ಭಾವಿಸಿದ್ದರು. ಆದರೆ ಪರೀಕ್ಷಿಸಿದಾಗ ಅವರು ಇನ್ನೂ ಉಸಿರಾಡುತ್ತಿರುವುದನ್ನು ಗಮನಿಸಿ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲಾಯಿತು. ಸ್ವಲ್ಪ ದೂರದವರೆಗೆ ಅವರನ್ನು ಸ್ಟ್ರೆಚರ್‌ನಲ್ಲಿ ಹೊತ್ತೊಯ್ದು ಅನಂತರ ಹಗ್ಗದ ಮೂಲಕ ಮೇಲಕ್ಕೆ ಎತ್ತಲಾಗಿತ್ತು. ಬಳಿಕ ಅವರನ್ನು ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮೂರ್ಛೆ ಹೋದ ವರ! ವಿಡಿಯೊ ನೋಡಿ

ಮದುವೆ ಮಂಟಪದಲ್ಲಿ ಗೆಳೆಯನ ಮಾತು ಕೇಳಿ ವರ ಕುಸಿದು ಬಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ಅನಿರೀಕ್ಷಿತ ಘಟನೆಯ ವಿಡಿಯೊ ಅಚ್ಚರಿ ಉಂಟು ಮಾಡುತ್ತದೆ. ಇನ್ನೇನು ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ವರ ಮೂರ್ಛೆ ಹೋಗುತ್ತಾನೆ. ಇದನ್ನು ಕಂಡು ವಧು ಮೂಕಳಾಗಿ ನಿಂತಿರುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣ ಆಗುತ್ತಿದೆ. ಈ ವಿಡಿಯೊ ಸಾಕಷ್ಟು ಕುತೂಹಲ ಮೂಡಿಸಿದೆ. ವರನಿಗೆ ಗೆಳೆಯ ಏನು ಹೇಳಿರಬಹುದು ಎಂಬ ಬಗ್ಗೆ ಜನ ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

By

Viral Video
Koo

ಮದುವೆ (marriage) ಎಲ್ಲರ ಬದುಕಿನ ಅತ್ಯಂತ ಸುಂದರ ಕ್ಷಣವಾಗಿರುತ್ತದೆ. ಬದುಕಿನ ಹೊಸ ಅಧ್ಯಾಯ (new life) ಪ್ರಾರಂಭಿಸುವ ದಂಪತಿ ಒಟ್ಟಿಗೆ ಭವಿಷ್ಯದ ಕನಸು ಹೊತ್ತು ಸತಿಪತಿಯಾಗುವ ವಿಧಿವಿಧಾನಗಳನ್ನು ಪೂರೈಸುತ್ತಿರುತ್ತಾರೆ. ಕೆಲವರಿಗೆ ಈ ದಿನ ಅನಿರೀಕ್ಷಿತ ಮತ್ತು ಆಘಾತಕಾರಿ ನೆನಪುಗಳಾಗುತ್ತದೆ. ಇಂತಹ ಒಂದು ಘಟನೆ ನಡೆದ ವಿಡಿಯೋವೊಂದು ಇನ್‌ಸ್ಟಾಗ್ರಾಮ್‌ನಲ್ಲಿ (instagram) ವೈರಲ್ (Viral Video) ಆಗಿದೆ.

ಈ ಅನಿರೀಕ್ಷಿತ ಘಟನೆಯ ವಿಡಿಯೊ ಅಚ್ಚರಿ ಉಂಟು ಮಾಡುತ್ತದೆ. ಇನ್ನೇನು ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ವರ ಮೂರ್ಛೆ ಹೋಗುತ್ತಾನೆ. ಇದನ್ನು ಕಂಡು ವಧು ಮೂಕಳಾಗಿ ನಿಂತಿರುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣ ಆಗುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಹಾರ ವಿನಿಮಯ ಸಮಾರಂಭವನ್ನು ತೋರಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಅತಿಥಿಗಳು, ವಧು ಮತ್ತು ವರನ ಸಂಬಂಧಿಕರು ಈ ಮಹತ್ವದ ಸಂದರ್ಭವನ್ನು ಉತ್ಸಾಹದಿಂದ ನೋಡುತ್ತಿದ್ದರು. ಅನಿರೀಕ್ಷಿತವಾಗಿ ವರನ ಬಳಿಗೆ ಯುವಕನೊಬ್ಬ ಬಂದು ಅವನ ಕಿವಿಯಲ್ಲಿ ಏನೋ ಪಿಸುಗುಟ್ಟುತ್ತಾನೆ. ಅವನು ಕೇಳುವುದನ್ನು ಸಹಿಸಲಾರದ ಕಾರಣ ವರನು ಆಘಾತಕ್ಕೆ ಒಳಗಾದಂತೆ ಕುಸಿದು ಬೀಳುತ್ತಾನೆ. ವರ ನೆಲದ ಮೇಲೆ ಕುಸಿದು ಬೀಳುವುದನ್ನು ನೋಡಿ ಸುತ್ತಮುತ್ತ ಇದ್ದವರು ಗಾಬರಿಯಾಗುತ್ತಾರೆ. ವಧು ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚದೆ ನಿಂತಿದ್ದು ಗಮನ ಸೆಳೆಯುತ್ತದೆ.


ವೈರಲ್ ಆಗಿರುವ ಈ ವಿಡಿಯೋ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. 2022ರ ಜುಲೈ 11ರಂದು ಹಂಚಿಕೊಂಡಿರುವ ಈ ವಿಡಿಯೋ ಎರಡು ವರ್ಷಗಳಷ್ಟು ಹಳೆಯದಾಗಿದ್ದರೂ ಈಗ ಅದು ವೈರಲ್ ಆಗುತ್ತಿದೆ. ಸಾಕಷ್ಟು ವೀಕ್ಷಣೆಗಳು ಮತ್ತು ಕಾಮೆಂಟ್‌ಗಳನ್ನು ಪಡೆದಿದೆ. ಸಾಕಷ್ಟು ಮಂದಿ ಯುವಕ ವರನಿಗೆ ಏನು ಹೇಳಿರಬಹುದು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: 20 ವರ್ಷಗಳ ಹಿಂದೆ ಅಜ್ಜ ಖರೀದಿಸಿದ್ದ ಷೇರು; ಮೊಮ್ಮಗಳು ರಾತ್ರೋರಾತ್ರಿ ಕೋಟ್ಯಧಿಪತಿ!

ವಿಡಿಯೋ ನೋಡಿ ಸಾಕಷ್ಟು ನೆಟ್ಟಿಗರು ಪ್ರಶ್ನೆಗಳನ್ನು ಕೇಳಿದ್ದು, ಊಹಾಪೋಹಗಳನ್ನು ಬರೆಯುತ್ತಿದ್ದಾರೆ. ಹೆಚ್ಚಿನವರು ವರನ ಮೂರ್ಛೆಗೆ ಕಾರಣವಾದ ಪಿಸುಮಾತಿನ ವಿಷಯದ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದಾರೆ. ವರನು ಮದುವೆಯಾಗಲಿರುವ ಮಹಿಳೆಯ ಬಗ್ಗೆ ಸ್ನೇಹಿತನು ರಹಸ್ಯವನ್ನು ಬಹಿರಂಗಪಡಿಸಿದ. ಇದರಿಂದಾಗಿ ಅವನು ಮೂರ್ಛೆ ಹೋಗುತ್ತಾನೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ವರನ ಹಿಂದಿನ ಪ್ರೇಮಿಯ ಕುರಿತು ಹೇಳಿರಬಹುದು ಎಂದು ತಿಳಿಸಿದ್ದಾರೆ. ಮದುವೆಯಲ್ಲಿ ಈ ಅನಿರೀಕ್ಷಿತ ಟ್ವಿಸ್ಟ್ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ, ಸಂತೋಷದ ಸಂದರ್ಭವನ್ನು ಅವ್ಯವಸ್ಥೆ ಮತ್ತು ಗೊಂದಲದ ಕ್ಷಣವಾಗಿ ಪರಿವರ್ತಿಸಿದೆ.

Continue Reading

ಪ್ರಮುಖ ಸುದ್ದಿ

Paris Olympics 2024 : ಪೋಲ್ ವಾಲ್ಟ್ ‌ಪಟುವಿಗೆ ಮರ್ಮಾಘಾತ! ಪದಕ ತಪ್ಪಿಸಿದ ಮರ್ಮಾಂಗ! ವಿಡಿಯೊ ನೋಡಿ

Paris Olympic 2024 : ಫ್ರೆಂಚ್ ಪೋಲ್ ವಾಲ್ಟರ್ ಆಂಥೋನಿ ಅಮ್ಮಿರಾಟಿ ವೈರಲ್ ಆದ ಕ್ರೀಡಾಪಟು. ಯಾಕೆಂದರೆ ಸ್ಪರ್ಧೆ ಅವರು ಬಯಸಿದ ರೀತಿಯಲ್ಲಿ ನಡೆಯಲಿಲ್ಲ. . ಸ್ಟೇಡ್ ಡಿ ಫ್ರಾನ್ಸ್​ನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ನಡೆದ ಸ್ಪರ್ಧೆಯಲ್ಲಿ ಆಂಥೋನಿ ಆಗಸ್ಟ್ 3 ರ ಶನಿವಾರ ಪುರುಷರ ಪೋಲ್ ವಾಲ್ಸ್​​ ಫೈನಲ್​ನಲ್ಲಿ ಸ್ಥಾನವನ್ನು ಕಳೆದುಕೊಂಡರು. ಅವರ ಸೋಲು ಕೆಲವೇ ಇಂಚುಗಲಿಂದ ಆಗಿತ್ತು. ಆದರೆ, ಅದು ಮರ್ಮಾಂಗದ ಇಂಚಿನಿಂದ ಎಂಬುದು ದೊಡ್ಡ ವಿಷಯವಾಯಿತು.

VISTARANEWS.COM


on

Paris Olympic 2024
Koo

ಬೆಂಗಳೂರು: ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ (Paris Olympics 2024) ಆತಿಥೇಯ ದೇಶದ ಪೋಲ್​ವಾಲ್ಡ್​ ಪಟುವೊಬ್ಬರು ತಮ್ಮ ಮರ್ಮಾಂಗದ ಉಬ್ಬುವಿಕೆಯ ಕಾರಣಕ್ಕೆ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುವ ವೇಳೆ ಅವರ ಮರ್ಮಾಂಗವು ಬಾರ್​ಗೆ ತಾಗಿದ್ದ ಕಾರಣ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲು ವಿಫಲಗೊಂಡರು. ಅರ್ಹತೆ ಪಡೆಯದೇ ಇರುವುದು ಸಾಮಾನ್ಯ ವಿಷಯವಾಗಿದ್ದರೂ, ಮರ್ಮಾಂಗದ ಕಾರಣಕ್ಕೆ ಅವರು ಅವಕಾಶ ಕಳೆದುಕೊಂಡಿದ್ದು ವೈರಲ್ ಸುದ್ದಿಯಾಯಿತು.

ಫ್ರೆಂಚ್ ಪೋಲ್ ವಾಲ್ಟರ್ ಆಂಥೋನಿ ಅಮ್ಮಿರಾಟಿ ವೈರಲ್ ಆದ ಕ್ರೀಡಾಪಟು. ಯಾಕೆಂದರೆ ಸ್ಪರ್ಧೆ ಅವರು ಬಯಸಿದ ರೀತಿಯಲ್ಲಿ ನಡೆಯಲಿಲ್ಲ. . ಸ್ಟೇಡ್ ಡಿ ಫ್ರಾನ್ಸ್​ನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ನಡೆದ ಸ್ಪರ್ಧೆಯಲ್ಲಿ ಆಂಥೋನಿ ಆಗಸ್ಟ್ 3 ರ ಶನಿವಾರ ಪುರುಷರ ಪೋಲ್ ವಾಲ್ಸ್​​ ಫೈನಲ್​ನಲ್ಲಿ ಸ್ಥಾನವನ್ನು ಕಳೆದುಕೊಂಡರು. ಅವರ ಸೋಲು ಕೆಲವೇ ಇಂಚುಗಲಿಂದ ಆಗಿತ್ತು. ಆದರೆ, ಅದು ಮರ್ಮಾಂಗದ ಇಂಚಿನಿಂದ ಎಂಬುದು ದೊಡ್ಡ ವಿಷಯವಾಯಿತು.

5.70 ಮೀಟರ್ ಎತ್ತರ ಹಾರುವಲ್ಲಿ ಅವರು ಮೂರು ಬಾರಿ ವಿಫಲರಾದರು. ಅದರಲ್ಲೂ ಎರಡನೇ ಪ್ರಯತ್ನದಲ್ಲಿ 21 ವರ್ಷದ ಆಟಗಾರನ ಮರ್ಮಾಂಗದ ಉಬ್ಬು ಬಾರ್ ಗೆ ತಾಗಿತು.. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೊದಲ್ಲಿ, ಆಂಥೋನಿ ಅವರ ಕಾಲುಗಳು ಆರಂಭದಲ್ಲಿ ಬಾರ್​ಗೆ ತಾಗಿದ್ದನ್ನು ತೋರಿಸುತ್ತಿತ್ತು. ಆದರೆ ನಂತರ ಶಿಶ್ನವು ಬಾರ್​ಗೆ ತಾಗಿದಾಗ ಸಂಪೂರ್ಣವಾಗಿ ಅದು ಕೆಳಕ್ಕೆ ಬಿತ್ತು.

ಆಂಥೋನಿ ಅಮ್ಮಿರಾಟಿ ಅವರು ಮ್ಯಾಚ್ ಮೇಲೆ ಬೀಳುವಾಗ ನೋವಿನಿಂದ ಬಳಲಿದ್ದು ಗೊತ್ತಾಯಿತು. ಹೀಗಾಗಿ ಮರ್ಮಾಂಗಕ್ಕೆ ಬಲವಾಗಿ ಹೊಡೆದಂತೆ ಬಿದ್ದಂತೆ ಕಂಡಿತು. ಪುರುಷತ್ವದ ಉಬ್ಬಿನ ಕಾರಣಕ್ಕೆ ಅವಕಾಶ ಕಳೆದುಕೊಂಡ ಪೋಲ್ ವಾಲ್ಟರ್ ಎಂಬ ಅಪಖ್ಯಾತಿಗೆ ಪಾತ್ರರಾದರು. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಜಪಾನ್​​ ಹಿರೋಕಿ ಒಗಿಟಾ ಅವರು ಮರ್ಮಾಗ ತಾಗಿದ್ದು ಸುದ್ದಿಯಾಗಿತ್ತು.

ಆಂಥೋನಿ ಅಮ್ಮಿರಾಟಿ ಮೂರು ಪ್ರಯತ್ನಗಳಲ್ಲಿ 5.70 ಮೀಟರ್ ವಾಲ್ಟ್ ಅನ್ನು ಪೂರ್ಣಗೊಳಿಸಲು ವಿಫಲರಾದರು ಮತ್ತು 15 ನೇ ಸ್ಥಾನ ಪಡೆದು 31 ಜನರ ಸ್ಪರ್ಧೆಯಿಂದ ಹೊರನಡೆದರು. 2022ರಲ್ಲಿ ವಿಶ್ವ ಅಂಡರ್-20 ಚಾಂಪಿಯನ್​​ಶಿಪ್​ ಗೆದ್ದಿದ್ದ ಆಂಥೋನಿ, ಅರ್ಹತೆ ಪಡೆಯಲು ಅಗ್ರ 12ರಲ್ಲಿ ಸ್ಥಾನ ಪಡೆಯಬೇಕಿತ್ತು.

ಇದನ್ನೂ ಓದಿ:Wasim Jaffer : ಪಂಜಾಬ್ ತಂಡದ ಕೋಚ್​ ಆಗಿ ಮಾಜಿ ಬ್ಯಾಟರ್​ ವಾಸಿಮ್​ ಜಾಫರ್ ನೇಮಕ

ಒಲಿಂಪಿಕ್ ಕನಸುಗಳು ಭಗ್ನಗೊಂಡಾಗ ಹೊರತಾಗಿಯೂ ಆಂಥೋನಿ ಅಮ್ಮಿರಾಟಿ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆದರು. ದುರದೃಷ್ಟಕರ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. ಜತೆಗೆ ಇದರಿಂದ ಅವರಿಗೆ ಆಗಿರುವ ಲಾಭವೇನೆಂದರೆ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಫಾಲೋಯರ್​ಗಳ ಸಂಖ್ಯೆ ಜಾಸ್ತಿಯಾಯಿತು.

ವಿಶ್ಲೇಷಕರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ವಿವರಿಸಲು ಹೆಣಗಾಡಿದರು. ಅದು ದುರದೃಷ್ಟಕರ ಎಂದರು. ಈ ದೃಶ್ಯವು ಹಾಸ್ಯಮಯ ಟೀಕೆಗಳನ್ನು ಹುಟ್ಟುಹಾಕಿದವು.

ನಿರೀಕ್ಷೆಯಂತೆ, ವಿಶ್ವ ದಾಖಲೆ ಹೊಂದಿರುವ ಸ್ವೀಡನ್​​ ಮೊಂಡೊ ಡುಪ್ಲಾಂಟಿಸ್ ತಮ್ಮ ಮೊದಲ ಪ್ರಯತ್ನದಲ್ಲಿ 5.75 ಮೀಟರ್ ದೂರವನ್ನು ಕ್ರಮಿಸುವ ಮೂಲಕ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು. ನಾರ್ವೆಯ ಗುಟ್ಟೋರ್ಮ್ಸೆನ್ ಸೊಂಡ್ರೆ ಎರಡನೇ ಸ್ಥಾನ ಪಡೆದರೆ, ಗ್ರೀಸ್ ನ ಕರಲಿಸ್ ಎಮಾನೌಲಿ ಮೂರನೇ ಸ್ಥಾನ ಪಡೆದರು. ಪ್ರಾಸಂಗಿಕವಾಗಿ, ಯಾವುದೇ ಪೋಲ್ ವಾಲ್ಟರ್ಗಳು 5.80 ಮೀಟರ್ ಸ್ವಯಂ ಅರ್ಹತೆ ಪಡೆಯಲು ಹೋಗಲಿಲ್ಲ.

Continue Reading

ವೈರಲ್ ನ್ಯೂಸ್

Viral Video: ಉ.ಪ್ರ ಪೊಲೀಸರ ʼಟ್ರೀಟ್‌‌ಮೆಂಟ್ʼ ಹೇಗಿತ್ತು ನೋಡಿ! ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಪುಂಡರು

ಕೋಚಿಂಗ್ ಸೆಂಟರ್ ಹೊರಗೆ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಮೂವರು ದುಷ್ಕರ್ಮಿಗಳಿಗೆ ಉತ್ತರ ಪ್ರದೇಶದ ಪೊಲೀಸರು ಸರಿಯಾಗಿ ಬುದ್ಧಿ ಕಳಿಸಿದ ಘಟನೆ ನಡೆದಿದೆ. ಕೋಚಿಂಗ್ ಸೆಂಟರ್ ನ ಹೊರಗೆ ಮೂವರು ದುಷ್ಕರ್ಮಿಗಳು ಹುಡುಗಿಯರಿಗೆ ಕಿರುಕುಳ ನೀಡುತ್ತಿರುವುದು, ಪೋಲೀಸರ ಟ್ರೀಟ್ ಮೆಂಟ್ ಬಳಿಕ ಆರೋಪಿಗಳಿಗೆ ನಡೆದಾಡಲೂ ಆಗುತ್ತಿಲ್ಲ ಎನ್ನುವ ದೃಶ್ಯವಾಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಮುಜಾಫರ್‌ನಗರ: ಕೋಚಿಂಗ್ ಸೆಂಟರ್‌ನ (coaching institute) ಹೊರಗೆ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ದುಷ್ಕರ್ಮಿಗಳಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಳಿಸಿದ ಘಟನೆ ಉತ್ತರ ಪ್ರದೇಶದ (uttarpradesh) ಮುಜಾಫರ್‌ನಗರದಲ್ಲಿ (Muzaffarnagar) ನಡೆದಿದೆ. ಕೋಚಿಂಗ್ ಸೆಂಟರ್ ನ ಹೊರಗೆ ಮೂವರು ದುಷ್ಕರ್ಮಿಗಳು ಹುಡುಗಿಯರಿಗೆ ಕಿರುಕುಳ ನೀಡುತ್ತಿರುವುದು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮುಜಾಫರ್‌ನಗರದ ಗಾಂಧಿ ಕಾಲೋನಿಯಲ್ಲಿ ಕೋಚಿಂಗ್ ಸೆಂಟರ್‌ಗಳ ಸಂಖ್ಯೆ ಹೆಚ್ಚಾಗಿದೆ. ಇದು ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಪೊಲೀಸರು ಸುತ್ತುಮುತ್ತ ಗಸ್ತು ತಿರುಗುತ್ತಾರೆ. ಕಳೆದ ಕೆಲ ದಿನಗಳಿಂದ ಕನ್ವರ್ ಯಾತ್ರೆಯಲ್ಲಿ ಪೊಲೀಸರು ನಿರತರಾಗಿದ್ದರು. ಈ ಪರಿಸ್ಥಿತಿಯ ಲಾಭ ಪಡೆದ ಕೆಲವು ದುಷ್ಕರ್ಮಿಗಳು ಕೋಚಿಂಗ್ ಸೆಂಟರ್ ಹೊರಗೆ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಗಾಂಧಿ ಕಾಲೋನಿಯಲ್ಲಿ ಮೂವರು ಮುಸುಕುಧಾರಿಗಳು ಬೈಕ್‌ನಲ್ಲಿ ಆಗಮಿಸಿ ಮೋಹನ್ ಭಾಟಿಯಾ ಎಂಬವರ ಕೋಚಿಂಗ್ ಸೆಂಟರ್‌ನ ಹೊರಗೆ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದರು. ದುಷ್ಕರ್ಮಿಯೊಬ್ಬನನ್ನು ವಿದ್ಯಾರ್ಥಿನಿ ಅವಮಾನಿಸಿದ್ದಾಳೆ ಎಂದು ಆರೋಪಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಲೇ ಇದ್ದರು. ಅವರನ್ನು ಅವಮಾನಿಸುವಂಥ ಯಾವುದೇ ಕೆಲಸ ಮಾಡಿಲ್ಲ ಎಂದು ವಿದ್ಯಾರ್ಥಿನಿ ಮತ್ತೆ ಮತ್ತೆ ಹೇಳಿದ್ದಳು.

ಕ್ಷಮೆ ಕೇಳದಿದ್ದರೆ ಗುಂಡು ಹಾರಿಸುವುದಾಗಿಯೂ ಪುಂಡರು ಬೆದರಿಕೆ ಹಾಕಿದ್ದರು. ಈ ದಾರಿಯಲ್ಲಿ ಸಾಕಷ್ಟು ಮಂದಿ ಹಾದುಹೋಗುತ್ತಿದ್ದರೂ ಯಾರೂ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗಳನ್ನು ತಡೆಯಲಿಲ್ಲ. ಕೊನೆಗೆ ವಿದ್ಯಾರ್ಥಿನಿ ಕ್ಷಮೆ ಕೇಳಿದ್ದರಿಂದ ದುಷ್ಕರ್ಮಿಗಳು ಸ್ಥಳದಿಂದ ಹೋಗಿದ್ದರು. ಇಡೀ ಘಟನೆ ಕೋಚಿಂಗ್ ಸೆಂಟರ್‌ನ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿತ್ತು. ವಿದ್ಯಾರ್ಥಿನಿ ತನ್ನ ತಂದೆ ಮತ್ತು ಸಹೋದರನನ್ನು ಕರೆಸಿ ಘಟನೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಿದ್ದಳು.


ಇದನ್ನೂ ಓದಿ: Abu Salem: ಮುಂಬೈ ಸ್ಫೋಟದ ಪ್ರಮುಖ ಆರೋಪಿ, ಭೂಗತ ಪಾತಕಿ ಅಬು ಸಲೇಂನನ್ನು ಮನ್ಮಾಡ್‌ಗೆ ರೈಲಿನಲ್ಲಿ ಕರೆತಂದ ಪೊಲೀಸರು

ಅವರು ದುಷ್ಕರ್ಮಿಗಳನ್ನು ಹುಡುಕಲು ಪ್ರಾರಂಭಿಸಿದರು ಮತ್ತು ಗಾಂಧಿ ಕಾಲೋನಿಯಲ್ಲಿ ಪತ್ತೆ ಹಚ್ಚಿ ಅವರನ್ನು ಹಿಡಿಯಲು ಹೋದಾಗ ಅವರು ಬೈಕ್‌ ಬಿಟ್ಟು ಪರಾರಿಯಾಗಿದ್ದರು. ಬಳಿಕ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೈಕ್ ವಶಪಡಿಸಿಕೊಂಡು ಬೈಕ್ ವಿವರ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಶೋಭಿತ್ ಶರ್ಮಾ ಮತ್ತು ಉಜ್ವಲ್ ಕುಮಾರ್ ಎಂದು ಗುರುತಿಸಲಾಗಿದೆ. ಮೂರನೇ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಇಬ್ಬರು ಆರೋಪಿಗಳಿಗೆ ಪೊಲೀಸರು ಸ್ಟೇಷನ್‌ನಲ್ಲಿ ಸಖತ್‌ ʼಉಪಚಾರʼ ಮಾಡಿದ್ದಾರೆ. ಪೊಲೀಸ್‌ ಟ್ರೀಟ್‌ಮೆಂಟ್‌ಗೆ ಒಳಗಾಗಿರುವ ಆರೋಪಿಗಳು ಈಗ ನಡೆಯಲಾರದ ಸ್ಥಿತಿಯಲ್ಲಿ ಗೋಳಿಡುತ್ತಿದ್ದಾರೆ!

Continue Reading
Advertisement
Jaskaran Singh
ಸ್ಯಾಂಡಲ್ ವುಡ್50 seconds ago

Jaskaran Singh: ಕನ್ನಡತಿಯ್ನನೇ ಮದುವೆ ಆಗುವೆ ಎಂದ ‘ದ್ವಾಪರ’ ಹಾಡಿನ ಗಾಯಕ ಜಸ್‌ಕರಣ್‌ ಸಿಂಗ್!

Viral Video
ವೈರಲ್ ನ್ಯೂಸ್6 mins ago

Viral Video: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

Western Ghats
ಕರ್ನಾಟಕ13 mins ago

Western Ghats: ನಾಳೆಯಿಂದ ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಸಚಿವ ಈಶ್ವರ ಖಂಡ್ರೆ

Viral Video
ವೈರಲ್ ನ್ಯೂಸ್20 mins ago

Viral Video: ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮೂರ್ಛೆ ಹೋದ ವರ! ವಿಡಿಯೊ ನೋಡಿ

Chennai Super Kings
ಕ್ರಿಕೆಟ್37 mins ago

Chennai Super Kings : ಮಹಿಳೆಯರ ಪ್ರೀಮಿಯರ್ ಲೀಗ್​ಗೆ ಎಂಟ್ರಿ ಪಡೆಯಲಿದೆ ಚೆನ್ನೈ ಸೂಪರ್ ಕಿಂಗ್ಸ್​

BSF DG Row
ದೇಶ40 mins ago

BSF DG Row: ಬಿಎಸ್‌ಎಫ್‌ ಮುಖ್ಯಸ್ಥ ನಿತಿನ್‌ ಅಗರ್ವಾಲ್‌ ತಲೆದಂಡಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

Lovlina Borgohain
ಕ್ರೀಡೆ51 mins ago

Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

ಕರ್ನಾಟಕ1 hour ago

‌MB Patil: ಕುಮಾರಸ್ವಾಮಿಯದು ಅವಕಾಶವಾದಿ ಮೈತ್ರಿ ಎಂದ ಎಂ.ಬಿ. ಪಾಟೀಲ್

Bangladesh
ವಿದೇಶ2 hours ago

Bangladesh: ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ; 32 ಜನ ಸಾವು

Road Accident
ವಿಜಯಪುರ2 hours ago

Road Accident : ಅಮಾವಾಸ್ಯೆಗೆಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅಪಘಾತಕ್ಕೆ ಬಲಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ6 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌