Court Verdict: 31 ವರ್ಷ ಲೈಂಗಿಕ ಸಂಬಂಧ, ನಂತರ ಪುರುಷನ ಮೇಲೆ ರೇಪ್ ಕೇಸ್! ನ್ಯಾಯಾಲಯ ಹೇಳಿದ್ದೇನು ನೋಡಿ - Vistara News

ಪ್ರಮುಖ ಸುದ್ದಿ

Court Verdict: 31 ವರ್ಷ ಲೈಂಗಿಕ ಸಂಬಂಧ, ನಂತರ ಪುರುಷನ ಮೇಲೆ ರೇಪ್ ಕೇಸ್! ನ್ಯಾಯಾಲಯ ಹೇಳಿದ್ದೇನು ನೋಡಿ

Court Verdict: 31 ವರ್ಷಗಳಿಂದ ಪುರುಷನೊಂದಿಗೆ ಒಪ್ಪಿತ ದೈಹಿಕ ಸಂಬಂಧದಲ್ಲಿದ್ದು, ನಂತರ ಆತನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆಯ ದೂರನ್ನು ಬಾಂಬೇ ಹೈಕೋರ್ಟ್‌ ರದ್ದುಗೊಳಿಸಿದೆ.

VISTARANEWS.COM


on

court verdict
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: 31 ವರ್ಷಗಳಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ (Physical relationship) ಹೊಂದಿದ್ದು ನಂತರ ಆತನ ವಿರುದ್ಧ ರೇಪ್‌ ಕೇಸ್‌ (Physical abuse) ದಾಖಲಿಸಿದ ಮಹಿಳೆಯ ದೂರನ್ನು ಬಾಂಬೆ ಹೈಕೋರ್ಟ್ (Bombay High Court Verdict) ರದ್ದುಗೊಳಿಸಿದೆ. 73 ವರ್ಷದ ಪುರುಷನ ಈಕೆ ದೂರು ದಾಖಲಿಸಿದ್ದು, 1987ರಿಂದ 2017ರವರೆಗೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಳು.

ಮಹಿಳೆ 2018ರವರೆಗೆ ಯಾವುದೇ ಪ್ರಕರಣವನ್ನು ಪುರುಷನ ವಿರುದ್ಧ ದಾಖಲಿಸಿಲ್ಲ. ಆದ್ದರಿಂದ ಇದು ಒಪ್ಪಿತ ಸಂಬಂಧವಾಗಿದ್ದು, ಇಬ್ಬರ ನಡುವಿನ ಸಂಬಂಧ ಹಳಸಿದಾಗ ದೂರು ದಾಖಲಿಸುವಂತಹ ಪ್ರಕರಣ ಇದಾಗಿದೆ ಎಂದು ನ್ಯಾಯಾಲಯ ಹೇಳಿದೆ. ವರದಿಗಳ ಪ್ರಕಾರ ಮಹಿಳೆ 1987ರಿಂದ ಪುರುಷನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಸಮಯದಲ್ಲಿ, ಪುರುಷನು ಬಲವಂತವಾಗಿ ಲೈಂಗಿಕ ಸಂಬಂಧ ಹೊಂದುವುದಾಗಿ ಮಹಿಳೆಗೆ ಒತ್ತಡ ಹಾಕಿದ್ದ ಎನ್ನಲಾಗಿದೆ.

ಎಫ್‌ಐಆರ್‌ನ ಪ್ರಕಾರ, 1987ರಿಂದ 2017 ರವರೆಗೆ ಕಲ್ಯಾಣ್, ಭಿವಂಡಿ ಮತ್ತು ಇತರ ಸ್ಥಳಗಳ ವಿವಿಧ ಹೋಟೆಲ್‌ಗಳಲ್ಲಿ 31 ವರ್ಷಗಳ ಕಾಲ ಪುರುಷ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈಗಾಗಲೇ ಮದುವೆಯಾಗಿದ್ದ ಪುರುಷ, ಮಹಿಳೆಯನ್ನು ತನ್ನ ಎರಡನೇ ಹೆಂಡತಿ ಎಂದು ಘೋಷಣೆ ಮಾಡಿ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನಂತೆ. 1993 ರಲ್ಲಿ ಅವಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟಿದ್ದನಂತೆ. ಈ ಭರವಸೆಗಳೊಂದಿಗೆ ಆತ ಮಹಿಳೆಯನ್ನು ಬೇರೆಯವರೊಂದಿಗೆ ಮದುವೆಯಾಗದಂತೆ ತಡೆದಿದ್ದನಂತೆ.

1996 ರಲ್ಲಿ ಪುರುಷನಿಗೆ ಹೃದಯಾಘಾತವಾದ ನಂತರ ಮಹಿಳೆ ಆತನ ಕಂಪನಿಯನ್ನು ನೋಡಿಕೊಳ್ಳಲು ಪ್ರಾರಂಭಿಸಿದಳು. ಆದರೆ ನಂತರ ಸೆಪ್ಟೆಂಬರ್ 2017 ರಲ್ಲಿ ಮಹಿಳೆಯ ತಾಯಿಗೆ ಕ್ಯಾನ್ಸರ್ ಪತ್ತೆಯಾಗಿದ್ದರಿಂದ ಮಹಿಳೆ ತನ್ನ ಕೆಲಸಕ್ಕೆ ರಜೆ ಹಾಕಿದಳು. ಕಂಪನಿಗೆ ವಾಪಸ್ ಬಂದಾಗ ಕಂಪನಿ ಸೇರಿದಂತೆ ಕಚೇರಿ ಬಂದ್ ಆಗಿದ್ದನ್ನ ತಿಳಿದುಕೊಂಡಳಂತೆ. ಈ ವೇಳೆ ಆಕೆ ಕಂಪನಿ ಮಾಲೀಕನನ್ನು ಸಂಪರ್ಕಿಸಿದಾಗ ಆತ ಅವಳನ್ನು ಮದುವೆಯಾಗಲು ಮತ್ತು ಭೇಟಿಯಾಗಲು ನಿರಾಕರಿಸಿದನಂತೆ. ಜೊತೆಗೆ ಬ್ಯಾಂಕಿಂಗ್, ಆದಾಯ ತೆರಿಗೆ, ಕಂಪನಿಗೆ ಸಂಬಂಧಿಸಿದ ಒಪ್ಪಂದ ಮತ್ತು ಚಿನ್ನದ ಮಂಗಳಸೂತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳಲು ನಿರಾಕರಿಸಿದನಂತೆ.

ಮಹಿಳೆಯ ಆರೋಪಗಳನ್ನು ಕೇಳಿದ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ನೀಲಾ ಗೋಖಲೆ ನೇತೃತ್ವದ ನ್ಯಾಯಾಲಯವು ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲು ನಿರಾಕರಿಸಿತು. ಪ್ರಕರಣವು ಒಮ್ಮತದ ಸಂಬಂಧವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಕಕ್ಷಿದಾರರು 31 ವರ್ಷಗಳಿಂದ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದರು. ಆದರೂ 31 ವರ್ಷದ ನಡುವೆ ಈ ಸಂಬಂಧಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ. ಇದೀಗ ಕಕ್ಷಿದಾರರ ನಡುವಿನ ಸಂಬಂಧವು ಹಳಸಿದ್ದು ಇದೇ ಕಾರಣದಿಂದ ಪೊಲೀಸ್ ದೂರು ದಾಖಲಿಸಿರುವಂತಹ ಪ್ರಕರಣ ಇದಾಗಿದೆ ಎಂದು ಹೇಳಿದರು.

ಮಹಿಳೆ ವಿದ್ಯಾವಂತಳಾಗಿದ್ದು, ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೇ ಮದುವೆ ಕಾನೂನುಬಾಹಿರವಾಗಿದ್ದರೂ ಎರಡನೇ ಮದುವೆಯ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ. ವಿಚ್ಛೇದನ ಅಂಗೀಕಾರವಾಗುವವರೆಗೆ ಎರಡನೇ ಮದುವೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿದಿದ್ದರೂ ಮಹಿಳೆ ಎರಡನೇ ಮದುವೆಯ ಭರವಸೆಯನ್ನು ಒಪ್ಪಿಕೊಂಡಿದ್ದಾಳೆ ಎಂದು ಎಫ್‌ಐಆರ್ ಸೂಚಿಸುತ್ತದೆ ಎಂದು ನ್ಯಾಯಾಧೀಶರು ಹೇಳಿದರು.

ಅಲ್ಲದೇ ಪುರುಷ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿ ನಿನ್ನನ್ನು ಮದುವೆಯಾಗುತ್ತೇನೆಂದು ಮಹಿಳೆಗೆ ಭರವಸೆ ನೀಡಿದ್ದನೆಂಬ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿಲ್ಲ. 31 ವರ್ಷದಲ್ಲಿ ಮಹಿಳೆ ಪುರುಷನ ಸಂಬಂಧದಿಂದ ಹಿಂದೆ ಸರಿಯುವ ಅಥವಾ ದೂರು ನೀಡುವ ಅವಕಾಶವಿದ್ದರೂ ಆಕೆ ಅಂತಹ ಕೆಲಸ ಮಾಡಿಲ್ಲ ಎಂದು ಹೇಳಿದ ನ್ಯಾಯಾಲಯವು ಪ್ರಕರಣವನ್ನು ರದ್ದುಗೊಳಿಸಿತು.

ಇದನ್ನೂ ಓದಿ: ಕೋರ್ಟ್‌ನಲ್ಲೇ ಅಳಿಯನನ್ನು ಗುಂಡಿಕ್ಕಿ ಕೊಂದ ಮಾಜಿ ಪೊಲೀಸ್‌ ಅಧಿಕಾರಿ; ಕೃತ್ಯಕ್ಕೆ ಕಾರಣವೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

Viral Video: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಇತ್ತೀಚೆಗೆ ಅಂತಾರಾಷ್ಟ್ರೀಯ ಸ್ನೇಹಿತರ ದಿನದಂದು ನಾಯಿಮರಿ ಮತ್ತು ಮಗುವಿನ ಸ್ನೇಹದ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅಳುತ್ತಿರುವ ಹುಡುಗನನ್ನು ಆತನ ಸ್ನೇಹಿತನಂತೆ ಇದ್ದ ಸಾಕುಪ್ರಾಣಿ ನಾಯಿಮರಿ ಸಂತೈಸುತ್ತಿದೆ. 39 ಸೆಕೆಂಡುಗಳ ಈ ವಿಡಿಯೊದಲ್ಲಿ ಪುಟ್ಟ ಹುಡುಗನೊಬ್ಬ ನೆಲದ ಮೇಲೆ ಕುಳಿತು ತನ್ನ ಬೆನ್ನನ್ನು ಮಂಚದ ಮೇಲೆ ಇಟ್ಟುಕೊಂಡು ಬೇಸರದಿಂದ ಅಳುತ್ತಿದ್ದಾನೆ. ಆಗ ಅವನ ಪಕ್ಕ ಇದ್ದ ನಾಯಿಮರಿ ಅವನನ್ನು ಸಮಾಧಾನಪಡಿಸುತ್ತಿದೆ.ಈ ಮುದ್ದಾದ ವಿಡಿಯೊ ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
Koo


ನವದೆಹಲಿ: ಜಗತ್ತಿನೆಲ್ಲೆಡೆ ಆಗಸ್ಟ್ 4ರಂದು ಸ್ನೇಹಿತರ ದಿನವನ್ನು ಆಚರಿಸಲಾಗಿದೆ. ನಮ್ಮ ರಕ್ತ ಸಂಬಂಧಿಕರ ಜೊತೆ ನಮ್ಮ ಸಂಬಂಧ ಬೆಸೆದುಕೊಳ್ಳುವುದು ಸಹಜ. ಆದರೆ ನಮ್ಮ ಜೊತೆ ಯಾವುದೇ ಸಂಬಂಧವಿಲ್ಲದೇ ಬೆಸೆದುಕೊಳ್ಳುವುದೇ ಸ್ನೇಹ. ಜಗತ್ತಿನಲ್ಲಿ ಹೆಚ್ಚಿನ ಜನರಿಗೆ ಸಂಬಂಧಿಕರಿಗಿಂತ ಹೆಚ್ಚು ನೆರವಾಗುವವರು ಸ್ನೇಹಿತರು. ತಮ್ಮ ಸುಖ, ದುಃಖಗಳನ್ನು ಹಂಚಿಕೊಳ್ಳುವ ಮನಸ್ಸೆಂದರೆ ಅದು ಸ್ನೇಹ. ಎಷ್ಟೋ ಜನರು ತಮ್ಮ ಕಷ್ಟಗಳನ್ನು ಸಂಬಂಧಿಕರಿಗಿಂತ ಹೆಚ್ಚು ಸ್ನೇಹಿತರ ಬಳಿಯೇ ಹಂಚಿಕೊಳ್ಳುತ್ತಾರೆ. ಯಾಕೆಂದರೆ ಸ್ನೇಹ ಸಂಬಂಧ ಅಷ್ಟೋಂದು ಬಲವಾಗಿರುತ್ತದೆ. ನಾವು ಸ್ನೇಹವನ್ನು ಮನುಷ್ಯರ ಜೊತೆಯೇ ಮಾಡಬೇಕೆಂದಿಲ್ಲ. ಕೆಲವರು ತಮ್ಮ ಸಾಕು ಪ್ರಾಣಿಗಳ ಜೊತೆಯೂ ಸ್ನೇಹ ಬೆಳೆಸುತ್ತಾರೆ. ಇಂತಹ ಸ್ನೇಹವನ್ನು ವ್ಯಕ್ತಪಡಿಸುವ ಸ್ನೇಹಿತರ ದಿನದಂದು ಉದ್ಯಮಿಯೊಬ್ಬರು ಉತ್ತಮ ಸ್ನೇಹಕ್ಕೆ ನಿರ್ದಶನವೆಂಬಂತೆ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದು ಅದು ಸಖತ್ ವೈರಲ್ (Viral Video) ಆಗಿದೆ.

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಇತ್ತೀಚೆಗೆ ಅಂತರರಾಷ್ಟ್ರೀಯ ಸ್ನೇಹಿತರ ದಿನದಂದು ನಾಯಿಮರಿ ಮತ್ತು ಮಗುವಿನ ಸ್ನೇಹದ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅಳುತ್ತಿರುವ ಹುಡುಗನನ್ನು ಆತನ ಸ್ನೇಹಿತನಂತೆ ಇದ್ದ ಸಾಕುಪ್ರಾಣಿ ನಾಯಿಮರಿ ಸಂತೈಸುತ್ತಿದೆ. 39 ಸೆಕೆಂಡುಗಳ ಈ ವಿಡಿಯೊದಲ್ಲಿ ಪುಟ್ಟ ಹುಡುಗನೊಬ್ಬ ನೆಲದ ಮೇಲೆ ಕುಳಿತು ತನ್ನ ಬೆನ್ನನ್ನು ಮಂಚದ ಮೇಲೆ ಇಟ್ಟುಕೊಂಡು ಬೇಸರದಿಂದ ಅಳುತ್ತಿದ್ದಾನೆ. ಆಗ ಅವನ ಪಕ್ಕ ಇದ್ದ ನಾಯಿಮರಿ ಅವನನ್ನು ಸಮಾಧಾನಪಡಿಸುತ್ತಿದೆ. ಹಾಗೇ ಅವನ ಕಣ್ಣೀರನ್ನು ಒರೆಸಿಕೊಳ್ಳಲು ಅದು ಟಿಶ್ಯೂವನ್ನು ಅವನಿಗೆ ತಂದು ನೀಡಿದೆ. ಮತ್ತು ಅಳುತ್ತಿರುವ ಅವನ ಮುಖವನ್ನೇ ಬೇಸರದಿಂದ ನೋಡುತ್ತಿದೆ. ಆ ಹುಡುಗ ಕೂಡ ನಾಯಿಮರಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಈ ದೃಶ್ಯವನ್ನು ನೋಡಿದ ಎಂತವರಿಗೂ ಹೃದಯ ಭಾರವೆನಿಸುತ್ತದೆ. ಮೂಕ ಪ್ರಾಣಿಗಳಲ್ಲಿರುವ ಸ್ನೇಹದ ಮನೋಭಾವನೆಯನ್ನು ಈ ವಿಡಿಯೊ ಎತ್ತಿ ತೋರಿಸಿದೆ.

Viral Video
Viral Video

ಇದನ್ನೂ ಓದಿ: ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!

“ನಿಜವಾದ ಸ್ನೇಹಿತರು ನಮ್ಮ ಪ್ರತಿ ಕಣ್ಣೀರನ್ನು ಹಂಚಿಕೊಳ್ಳುತ್ತಾರೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ಈ ದೃಶ್ಯ ನಿಜವಾಗಿಯೂ ಸುಂದರವಾಗಿದೆ,” ಎಂದು ಇನ್ನೊಬ್ಬರು ಹೇಳಿದರು. “ಇದು ಮುದ್ದಾದ ಸಂಬಂಧ,” ಎಂದು ಮೂರನೆಯವರು ತಿಳಿಸಿದ್ದಾರೆ. “ಸ್ನೇಹವು ಎಂದಿಗೂ ವಿಶೇಷ ಜನರೊಂದಿಗೆ ಇರುವುದಿಲ್ಲ … ನಾವು ಸ್ನೇಹಿತರಾಗಿರುವ ಜನರು ವಿಶೇಷವಾಗುತ್ತಾರೆ” ಎಂದು ಬಳಕೆದಾರ ಸುಲೇಮಾನ್ ಖಾನ್ ಎಂಬುವವರು ಹಂಚಿಕೊಂಡಿದ್ದಾರೆ.

Continue Reading

ಪ್ರಮುಖ ಸುದ್ದಿ

Valmiki Corporation scam: ವಾಲ್ಮೀಕಿ ನಿಗಮ ಹಗರಣ; ಕೋರ್ಟ್‌ಗೆ 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ

Valmiki Corporation scam: 12 ಆರೋಪಿಗಳ ವಿರುದ್ಧ ಸುಮಾರು 3 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ಬೆಂಗಳೂರಿನ ಎಸಿಎಂಎಂ ಕೋರ್ಟ್‌ಗೆ ಎಸ್‌ಐಟಿ ಸಲ್ಲಿಸಿದೆ.

VISTARANEWS.COM


on

Valmiki Corporation Scam
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ (Valmiki Corporation scam) ಸಂಬಂಧಿಸಿ ಎಸ್‌ಐಟಿ ತಂಡದಿಂದ ಕೋರ್ಟ್‌ಗೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. 12 ಆರೋಪಿಗಳ ವಿರುದ್ಧ ಸುಮಾರು 3 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ನಗರದ ಎಸಿಎಂಎಂ ಕೋರ್ಟ್ ಸಲ್ಲಿಸಲಾಗಿದೆ.

ಆರೋಪಿಗಳಾದ ಸತ್ಯನಾರಾಯಣ ವರ್ಮ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ. ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ತೇಜ, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಪ್ರಕರಣದಲ್ಲಿ ಸುಮಾರು 50 ಕೋಟಿ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಸೀಜ್ ಮಾಡಿ ನ್ಯಾಯಾಲಯದ ಸುಪರ್ದಿಗೆ ನೀಡಲಾಗಿದೆ. ಪ್ರಕರಣದಲ್ಲಿ ಮೊದಲಿಗೆ ಬಂಧನವಾದ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ | Stock Market: ಷೇರುಪೇಟೆ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕ ಕುಸಿತ; 17 ಲಕ್ಷ ಕೋಟಿ ರೂ. ಲಾಸ್‌!

Inspector Death: ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ, ಎರಡು ತಿಂಗಳ ಹಿಂದೆ ಟ್ರಾನ್ಸ್‌ಫರ್‌ ಆಗಿದ್ದ ಸಿಸಿಬಿ ಎಸ್‌ಐ

police inspector death thimmegowda
police inspector death thimmegowda

ಬೆಂಗಳೂರು: ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ (police inspector death) ಮಾಡಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಸಿಸಿಬಿಗೆ (CCB) ಟ್ರಾನ್ಸ್‌ಫರ್‌ (Tarnsfer) ಆಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ತಿಮ್ಮೇಗೌಡ (Thimmegowda) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಬಿಡದಿಯಲ್ಲಿ ಆತ್ಮಹತ್ಯೆಗೆ (Self harming) ಶರಣಾಗಿದ್ದಾರೆ.

ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ತಿಮ್ಮೇಗೌಡ ಸಾವಿಗೆ ಶರಣಾಗಿದ್ದಾರೆ. ಈ ಹಿಂದೆ ಕುಂಬಳಗೋಡಿನ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಎರಡು ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆಗೊಂಡಿದ್ದರು. ತಮ್ಮ ತೋಟದ ಜಾಗದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

ಇದನ್ನೂ ಓದಿ: Road Accident : ಅಮಾವಾಸ್ಯೆಗೆಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅಪಘಾತಕ್ಕೆ ಬಲಿ

1998ರ ರೂರಲ್ ಬ್ಯಾಚ್ ಇನ್ಸ್‌ಪೆಕ್ಟರ್ ತಿಮ್ಮೇಗೌಡ, ಚನ್ನಪಟ್ಟಣದ ಹಳ್ಳಿಯೊಂದರ ನಿವಾಸಿ. ಗ್ರಾಮೀಣ ಕೃಪಾಂಕದಲ್ಲಿ ಆಯ್ಕೆಯಾಗಿದ್ದ ತಿಮ್ಮೇಗೌಡ ವಿಧಾನಸಭೆ ಚುನಾವಣೆ ವೇಳೆಗೆ ಬಿಡದಿಯಿಂದ ಅತ್ತಿಬೆಲೆಗೆ ವರ್ಗಾವಣೆಯಾಗಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಅತ್ತಿಬೆಲೆಯಲ್ಲಿ ಪಟಾಕಿ ದುರಂತ ನಡೆದ ಬಳಿಕ ಆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು. ನಂತರ ಕುಂಬಳಗೋಡು ಠಾಣೆಗೆ ವರ್ಗಾವಣೆಯಾಗಿದ್ದು, ಇತ್ತೀಚೆಗೆ ಸಿಸಿಬಿಗೆ ವರ್ಗಾವಣೆಯಾಗಿತ್ತು.

ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗರ ಸೃಷ್ಟಿಸುವ ಬೆನ್ನಲ್ಲೇ ಇನ್ನೊಬ್ಬ ಎಸ್‌ಐ ಆತ್ಮಹತ್ಯೆ ಪ್ರಕರಣ ನಡೆದಿದೆ. ಪಿಎಸ್‌ಐ ಪರಶುರಾಮ್ ಅವರ ಟ್ರಾನ್ಸ್‌ಫರ್‌ಗಾಗಿ ಲಂಚ ಕೇಳಿದ ಸ್ಥಳೀಯ ಶಾಸಕ ಹಾಗೂ ಆತನ ಪುತ್ರನ ಮೇಲೆ ದೂರು ದಾಖಲಾಗಿದೆ.

Continue Reading

ಪ್ರಮುಖ ಸುದ್ದಿ

Stock Market News: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ, ರೂ.17.03 ಲಕ್ಷ ಕೋಟಿ ನಷ್ಟ

Stock Market News: ಷೇರು ಮಾರುಕಟ್ಟೆ ಮೌಲ್ಯ ಹಿಂದಿನ ದಾಖಲಾತಿ ರೂ.457.16 ಲಕ್ಷ ಕೋಟಿಯ ಮೌಲ್ಯದಿಂದ ರೂ.440.13 ಲಕ್ಷ ಕೋಟಿಗೆ ಒಟ್ಟಾರೆ ಮೌಲ್ಯ ಕುಸಿಯಿತು. ಸೆನ್ಸೆಕ್ಸ್ 2,037 ಅಂಕಗಳನ್ನು ಕಳೆದುಕೊಂಡು 78,944ಕ್ಕೆ ಮತ್ತು ನಿಫ್ಟಿ 661 ಅಂಕಗಳನ್ನು ಕಳೆದುಕೊಂಡು 24,056ಕ್ಕೆ ತಲುಪಿತು.

VISTARANEWS.COM


on

Indian stock market
Koo

ಮುಂಬಯಿ: ಷೇರು ಮಾರುಕಟ್ಟೆಯಲ್ಲಿ (Stock Market News) ಇಂದು ಸಂಭವಿಸಿದ ಭಾರೀ ಕುಸಿತದ ಪರಿಣಾಮ, ಹೂಡಿಕೆದಾರರ (Investors) ) ಸಂಪತ್ತು ರೂ.17.03 ಲಕ್ಷ ಕೋಟಿಯಷ್ಟು ನಷ್ಟ ಕಂಡಿತು. ಷೇರು ಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಇಂದು ಎರಡು ಸಲ ಭಾರಿ ಕುಸಿತ ದಾಖಲಿಸಿದವು. ಅಮೆರಿಕದ ಆರ್ಥಿಕತೆಯ (US Economy recession) ಹಿಂಜರಿತದ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಪಲ್ಲಟ ಆಗಿದೆ.

ಷೇರು ಮಾರುಕಟ್ಟೆ ಮೌಲ್ಯ ಹಿಂದಿನ ದಾಖಲಾತಿ ರೂ.457.16 ಲಕ್ಷ ಕೋಟಿಯ ಮೌಲ್ಯದಿಂದ ರೂ.440.13 ಲಕ್ಷ ಕೋಟಿಗೆ ಒಟ್ಟಾರೆ ಮೌಲ್ಯ ಕುಸಿಯಿತು. ಸೆನ್ಸೆಕ್ಸ್ 2,037 ಅಂಕಗಳನ್ನು ಕಳೆದುಕೊಂಡು 78,944ಕ್ಕೆ ಮತ್ತು ನಿಫ್ಟಿ 661 ಅಂಕಗಳನ್ನು ಕಳೆದುಕೊಂಡು 24,056ಕ್ಕೆ ತಲುಪಿತು. ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಎಂ & ಎಂ, ಎಸ್‌ಬಿಐ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಟೈಟಾನ್‌ನಂತಹ ಷೇರುಗಳು ಸೆನ್ಸೆಕ್ಸ್ 5.04% ವರೆಗೆ ಕುಸಿದವು. ಸೆನ್ಸೆಕ್ಸ್‌ನ 30 ಷೇರುಗಳಲ್ಲಿ 28 ಷೇರುಗಳು ರೆಡ್‌ನಲ್ಲಿ ವಹಿವಾಟಾಗುತ್ತಿವೆ.

ನಿಫ್ಟಿ ಷೇರುಗಳು ಕುಸಿದವು. 46 ನಿಫ್ಟಿ ಶೇರುಗಳು ರೆಡ್‌ನಲ್ಲಿ ವಹಿವಾಟಾಗುತ್ತಿವೆ. ಟಾಟಾ ಮೋಟಾರ್ಸ್, ಹಿಂಡಾಲ್ಕೊ, ಒಎನ್‌ಜಿಸಿ, ಶ್ರೀರಾಮ್ ಫೈನಾನ್ಸ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ನಿಫ್ಟಿಯಲ್ಲಿ ಟಾಪ್ ಲೂಸರ್ ಆಗಿದ್ದು, ಆರಂಭಿಕ ವ್ಯವಹಾರಗಳಲ್ಲಿ 4.37% ವರೆಗೆ ಕುಸಿದಿದೆ.

ಇಂದು 88 ಷೇರುಗಳು ತಮ್ಮ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಮತ್ತೊಂದೆಡೆ, ಸೋಮವಾರದ ಆರಂಭಿಕ ವ್ಯವಹಾರಗಳಲ್ಲಿ 42 ಷೇರುಗಳು ಬಿಎಸ್‌ಇಯಲ್ಲಿ ತಮ್ಮ 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿದವು. 3,421 ಷೇರುಗಳಲ್ಲಿ 394 ಷೇರುಗಳು ಹಸಿರು ಬಣ್ಣದಲ್ಲಿ ವಹಿವಾಟಾಗಿವೆ. ಸುಮಾರು 2891 ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದರೆ 136 ಷೇರುಗಳು ಬದಲಾಗದೆ ಉಳಿದಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ನಿವ್ವಳ ಆಧಾರದ ಮೇಲೆ ರೂ. 3,310 ಕೋಟಿ ಮೌಲ್ಯದ ಈಕ್ವಿಟಿಗಳನ್ನು ಮಾರಾಟ ಮಾಡಿದರು. ಆದರೆ ದೇಶೀಯ ಹೂಡಿಕೆದಾರರು ರೂ. 2,965.94 ಕೋಟಿ ಷೇರುಗಳನ್ನು ಖರೀದಿಸಿದ್ದಾರೆ. ಇದು ತಾತ್ಕಾಲಿಕ ಎನ್‌ಎಸ್‌ಇ ಡೇಟಾ.

ಶುಕ್ರವಾರದ ವಹಿವಾಟಿನಲ್ಲಿ ನಿಫ್ಟಿ 293 ಪಾಯಿಂಟ್‌ಗಳ ಕುಸಿತದೊಂದಿಗೆ 24,717 ಕ್ಕೆ ಕೊನೆಗೊಂಡಿತು ಮತ್ತು ಸೆನ್ಸೆಕ್ಸ್ 886 ಪಾಯಿಂಟ್‌ಗಳನ್ನು ಕಳೆದುಕೊಂಡು 80,982 ಕ್ಕೆ ತಲುಪಿದೆ.

ಅಮೆರಿಕದ ಮಾರುಕಟ್ಟೆಗಳು

ಯುಎಸ್ ಆರ್ಥಿಕತೆಯು ಆರ್ಥಿಕ ಹಿಂಜರಿತದ ಕಡೆಗೆ ಹೋಗಬಹುದು ಎಂದು ಆರ್ಥಿಕ ಮಾಹಿತಿ ತೋರಿಸಿದೆ. ಕಳೆದ ವಾರ ಬಿಡುಗಡೆಯಾದ ದುರ್ಬಲ US ಉದ್ಯೋಗಗಳ ಮಾಹಿತಿಯು ಶುಕ್ರವಾರ US ಮಾರುಕಟ್ಟೆಗಳಲ್ಲಿ ಕುಸಿತಕ್ಕೆ ಕಾರಣವಾಯಿತು. NASDAQ ಸಂಯೋಜಿತ ಸೂಚ್ಯಂಕವು 417 ಅಂಕಗಳು ಅಥವಾ 2.43% ರಷ್ಟು ಕುಸಿದು 16,776 ಕ್ಕೆ ತಲುಪಿದರೆ, S&P 500 ಸೂಚ್ಯಂಕ 1.84% ಅಥವಾ 100 ಪಾಯಿಂಟ್‌ಗಳು ಕಡಿಮೆಯಾಗಿ 5,346 ಕ್ಕೆ ತಲುಪಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 1.51% ಅಥವಾ 610 ಪಾಯಿಂಟ್‌ಗಳು ಶುಕ್ರವಾರ 39,737 ಕ್ಕೆ ಕುಸಿದವು.

ಅಮೆರಿಕದ ಕಾರ್ಮಿಕ ಮಾರುಕಟ್ಟೆಯಲ್ಲಿ 249,000 ಉದ್ಯೋಗ ಕುಸಿತ ಆಗಬಹುದು ಎಂದು ವರದಿಗಳು ಸೂಚಿಸಿವೆ. ಅಲ್ಲದೆ, USನಲ್ಲಿ ಜುಲೈನಲ್ಲಿ ISM ಉತ್ಪಾದನೆಯು ಕುಸಿದಿದೆ ಎಂದು ಡೇಟಾ ತೋರಿಸಿದೆ. ISM ಉತ್ಪಾದನಾ ಸೂಚ್ಯಂಕವು ಜೂನ್‌ನಲ್ಲಿ 48.5% ರಿಂದ ಜುಲೈನಲ್ಲಿ 46.8% ಕ್ಕೆ ಕುಸಿಯಿತು. ಇದು ಎಂಟು ತಿಂಗಳ ಕನಿಷ್ಠ. US ಕಾರ್ಖಾನೆಗಳು ಇನ್ನೂ ಕುಸಿಯುತ್ತಿವೆ.

ಏಷ್ಯ, ಯುರೋಪ್‌ ಮಾರುಕಟ್ಟೆಯಲ್ಲಿ ಕುಸಿತ

ಯುಎಸ್ ಮಾರುಕಟ್ಟೆಯಲ್ಲಿನ ದುರ್ಬಲತೆಯ ಭಾವನೆ ಏಷ್ಯನ್ ಮತ್ತು ಯುರೋಪಿಯನ್ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದೆ. ಜಪಾನ್‌ನ ನಿಕ್ಕಿ ಇಂದು 2747 ಅಂಕಗಳಿಂದ 33,162 ಅಂಕಗಳಿಗೆ ಕುಸಿದಿದೆ ಮತ್ತು ಹ್ಯಾಂಗ್ ಸೆಂಗ್ 36 ಅಂಕಗಳಿಂದ 16,908ಕ್ಕೆ ಕುಸಿದಿದೆ. ತೈವಾನ್ ಸೂಚ್ಯಂಕವು 1584 ಅಂಕಗಳನ್ನು ಕಳೆದುಕೊಂಡು 20,044 ಕ್ಕೆ ತಲುಪಿದೆ. ಕೊಸ್ಪಿ ಸೋಮವಾರ 182 ಅಂಕಗಳ ಕುಸಿತ ಕಂಡು 2,494 ಅಂಕಗಳಿಗೆ ತಲುಪಿತ್ತು.

FTSE ಶುಕ್ರವಾರ 108 ಅಂಕಗಳೊಂದಿಗೆ 8174ಕ್ಕೆ ಕುಸಿದಿದೆ. ಫ್ರಾನ್ಸ್‌ನ CAC 119 ಅಂಕಗಳನ್ನು ಕಳೆದುಕೊಂಡು 7251 ಕ್ಕೆ ತಲುಪಿತು ಮತ್ತು DAX 421 ಅಂಕಗಳು ಕಡಿಮೆಯಾಗಿ 17,661 ಕ್ಕೆ ಕೊನೆಗೊಂಡಿತು.

ಇದನ್ನೂ ಓದಿ: Stock Market: ಷೇರುಪೇಟೆ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕ ಕುಸಿತ; 17 ಲಕ್ಷ ಕೋಟಿ ರೂ. ಲಾಸ್‌!

Continue Reading

ಪ್ರಮುಖ ಸುದ್ದಿ

AAP VS Delhi LG: ಆಪ್‌ಗೆ ಹಿನ್ನಡೆ; ದಿಲ್ಲಿ ನಗರಸಭೆಗೆ ಸದಸ್ಯರನ್ನು ನೇಮಿಸುವ ಎಲ್‌ಜಿ ಅಧಿಕಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

AAP VS Delhi LG: ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ, ನ್ಯಾ. ಪಿ.ಎಸ್ ನರಸಿಂಹ ಅವರಿದ್ದ ಪೀಠ ತೀರ್ಪು ಪ್ರಕಟಿಸಿದೆ. ಈ ವಿಷಯದಲ್ಲಿ ರಾಜ್ಯ ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಎಲ್‌ಜಿ ಬದ್ಧರಾಗಿರಬೇಕಿಲ್ಲ. ಎಲ್‌ಜಿ ಅವರ “ಕಾನೂನುಬದ್ಧ ಕರ್ತವ್ಯ”ದ ಪ್ರಕಾರ ಆಲ್ಡರ್‌ಮೆನ್‌ಗಳ ನೇಮಕವಾಗಿದೆ ಎಂದು ನ್ಯಾಯಪೀಠ ಹೇಳಿದೆ.

VISTARANEWS.COM


on

Koo

ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು (Cabinet) ಸಮಾಲೋಚಿಸದೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (Delhi Municipal Corporation- ಎಂಸಿಡಿ)ಗೆ ಹತ್ತು ಆಲ್ಡರ್‌ಮನ್‌ಗಳನ್ನು (ನಗರಸಭೆ ಸದಸ್ಯ) ನೇಮಿಸಿರುವ ಲೆಫ್ಟಿನೆಂಟ್ ಗವರ್ನರ್ (Leftinant Governor) ಕ್ರಮವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿಹಿಡಿದಿದೆ. ಹೀಗಾಗಿ, ಎಲ್‌ಜಿ (LG) ನಡೆಯನ್ನು ಪ್ರಶ್ನಿಸಿದ್ದ ಆಮ್ ಆದ್ಮಿ ಪಕ್ಷ (Aam Admi Party- ಎಎಪಿ) ನೇತೃತ್ವದ ದೆಹಲಿ ಸರ್ಕಾರಕ್ಕೆ (AAP VS Delhi LG) ಹಿನ್ನಡೆಯಾಗಿದೆ.

ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ, ನ್ಯಾ. ಪಿ.ಎಸ್ ನರಸಿಂಹ ಅವರಿದ್ದ ಪೀಠ ತೀರ್ಪು ಪ್ರಕಟಿಸಿದೆ. ಈ ವಿಷಯದಲ್ಲಿ ರಾಜ್ಯ ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಎಲ್‌ಜಿ ಬದ್ಧರಾಗಿರಬೇಕಿಲ್ಲ. ಎಲ್‌ಜಿ ಅವರ “ಕಾನೂನುಬದ್ಧ ಕರ್ತವ್ಯ”ದ ಪ್ರಕಾರ ಆಲ್ಡರ್‌ಮೆನ್‌ಗಳ ನೇಮಕವಾಗಿದೆ ಎಂದು ನ್ಯಾಯಪೀಠ ಹೇಳಿದೆ.

1993ರಲ್ಲಿ ತಿದ್ದುಪಡಿ ಮಾಡಲಾದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಕಾಯಿದೆಯ ಸೆಕ್ಷನ್ 3(3)(ಬಿ)(ಐ) ಪ್ರಕಾರ ಎಲ್‌ಜಿಗೆ ಆಲ್ಡರ್‌ಮೆನ್‌ಗಳನ್ನು ನೇಮಿಸಲು ಅಧಿಕಾರ ಇರುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ. ಗವರ್ನರ್‌ಗೆ ನೀಡಲಾದ ಈ ಅಧಿಕಾರ ಸಾಂವಿಧಾನಿಕ ಅಧಿಕಾರದ ಅತಿಕ್ರಮಣವಲ್ಲ ಎಂದಿದೆ.

ಕಳೆದ ವರ್ಷ ಮೇ 17ರಂದು ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಆಲ್ಡರ್‌ಮೆನ್‌ಗಳನ್ನು ನಾಮನಿರ್ದೇಶನ ಮಾಡಲು ಎಲ್‌ಜಿ ಅಧಿಕಾರವನ್ನು ನೀಡುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಂಸಿಡಿಯನ್ನು ಅಸ್ಥಿರಗೊಳಿಸಬಹುದು ಎಂದು ಅದು ಹಿಂದೆ ಎಚ್ಚರಿಸಿತ್ತು. ಎಂಸಿಡಿ 250 ಚುನಾಯಿತ ಮತ್ತು 10 ನಾಮನಿರ್ದೇಶಿತ ಸದಸ್ಯರನ್ನು ಹೊಂದಿದೆ.

“ಎಂಸಿಡಿಯಲ್ಲಿ ವಿಶೇಷ ವ್ಯಕ್ತಿಗಳ ನಾಮನಿರ್ದೇಶನದ ಅಧಿಕಾರವನ್ನು ಎಲ್‌ಜಿಗೆ ನೀಡುವುದು ಎಂದರೆ ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಮುನ್ಸಿಪಲ್ ಸಮಿತಿಗಳನ್ನು ಅಸ್ಥಿರಗೊಳಿಸಿದಂತಾಗಬಹುದು. ಏಕೆಂದರೆ ಆಲ್ಡರ್‌ಮೆನ್ ಸಹ ಮತದಾನದ ಅಧಿಕಾರವನ್ನು ಹೊಂದಿರುತ್ತಾರೆ” ಎಂದು ಉನ್ನತ ನ್ಯಾಯಾಲಯ ಹಿಂದೆ ಹೇಳಿತ್ತು.

ಡಿಸೆಂಬರ್ 2022ರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) 134 ವಾರ್ಡ್‌ಗಳನ್ನು ಪೌರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತ್ತು. ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಿತ್ತು. ಎಂಸಿಡಿ ಮೇಲಿನ ಬಿಜೆಪಿಯ 15 ವರ್ಷಗಳ ನಿಯಂತ್ರಣವನ್ನು ಕೊನೆಗೊಳಿಸಿತು. ಬಿಜೆಪಿ 104 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ 9 ಸ್ಥಾನಗಳನ್ನು ಗಳಿಸಿದೆ.

ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು, ನಾಮನಿರ್ದೇಶನ ಮಾಡುವವರು ನಗರಾಡಳಿತದ ಸಹಾಯ ಮತ್ತು ಸಲಹೆಯನ್ನು ಅನುಸರಿಸಬೇಕು, ಅದು 30 ವರ್ಷಗಳ ರೂಢಿ ಎಂದರು. ಆದರೆ ದೀರ್ಘಕಾಲದ ರೂಢಿ ಇದ್ದ ಮಾತ್ರಕ್ಕೆ ಅದು ಸರಿ ಎಂದಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಪ್ರತಿಪಾದಿಸಿದರು.

ಇದನ್ನೂ ಓದಿ: Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ; ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ ಸಿಬಿಐ

Continue Reading
Advertisement
Physical Abuse
ವಿಜಯಪುರ11 mins ago

Physical Abuse : ಬಸ್‌ ಸ್ಟಾಪ್‌ನಲ್ಲಿ ನಿಂತಿದ್ದ ಮಹಿಳೆಗೆ ಕಣ್ಣು ಹೊಡೆದು ಚುಡಾಯಿಸಿದವನಿಗೆ ಚಪ್ಪಲಿ ಏಟು

Sex Racket
Latest15 mins ago

Sex Racket: ಹೋಟೆಲ್‍ನಲ್ಲಿ ಸೆಕ್ಸ್ ದಂಧೆ ಪತ್ತೆ; ನಗ್ನ ಸ್ಥಿತಿಯಲ್ಲಿದ್ದ 10 ಜೋಡಿಗಳು ಪೊಲೀಸ್‌ ಬಲೆಗೆ!

Duniya Vijay- Ganesh To Combined together make Movie in future
ಸ್ಯಾಂಡಲ್ ವುಡ್16 mins ago

Duniya Vijay- Ganesh: ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್ ಸಿನಿಮಾ ಬರೋದು ಪಕ್ಕಾ; ʻಭೀಮʼನದ್ದೇ ಆ್ಯಕ್ಷನ್‌ ಕಟ್‌!

Cloudburst
ದೇಶ18 mins ago

Cloudburst: ಮೇಘಸ್ಫೋಟದಿಂದ ಹಿಮಾಚಲ ಪ್ರದೇಶದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ; 40ಕ್ಕೂ ಹೆಚ್ಚು ಮಂದಿ ನಾಪತ್ತೆ

Viral Video
Latest22 mins ago

Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

Valmiki Corporation Scam
ಪ್ರಮುಖ ಸುದ್ದಿ32 mins ago

Valmiki Corporation scam: ವಾಲ್ಮೀಕಿ ನಿಗಮ ಹಗರಣ; ಕೋರ್ಟ್‌ಗೆ 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ

Indian stock market
ಪ್ರಮುಖ ಸುದ್ದಿ33 mins ago

Stock Market News: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ, ರೂ.17.03 ಲಕ್ಷ ಕೋಟಿ ನಷ್ಟ

Kannada New Movie idu enta lokavayya movie Kannada ananth nag
ಸಿನಿಮಾ52 mins ago

Kannada New Movie: ʻಇದು ಎಂಥಾ ಲೋಕವಯ್ಯʼ ಸಿನಿಮಾ ಬಿಡುಗಡೆಗೆ ಸಜ್ಜು; ತಂಡಕ್ಕೆ ನಟ ಅನಂತ್ ನಾಗ್ ಸಾಥ್‌!

Nursing student dies
ಕರ್ನಾಟಕ59 mins ago

Nursing Student Dies: 6ನೇ ಮಹಡಿಯಿಂದ ಬಿದ್ದು ನರ್ಸಿಂಗ್‌ ವಿದ್ಯಾರ್ಥಿನಿ ಸಾವು

Stock Market
ವಾಣಿಜ್ಯ1 hour ago

Stock Market: ಷೇರುಪೇಟೆ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕ ಕುಸಿತ; 17 ಲಕ್ಷ ಕೋಟಿ ರೂ. ಲಾಸ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌