Vastu Tips: ಅಪ್ಪಿತಪ್ಪಿಯೂ ಮನೆಯಲ್ಲಿ ಈ ವಸ್ತುಗಳನ್ನು ಖಾಲಿ ಇಡಬೇಡಿ! - Vistara News

ಧಾರ್ಮಿಕ

Vastu Tips: ಅಪ್ಪಿತಪ್ಪಿಯೂ ಮನೆಯಲ್ಲಿ ಈ ವಸ್ತುಗಳನ್ನು ಖಾಲಿ ಇಡಬೇಡಿ!

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಹೆಚ್ಚು ಸಮಯ ಬೇಕಿಲ್ಲ. ನಾವು ಮಾಡುವ ಸಣ್ಣ ತಪ್ಪುಗಳು ಸಾಕು. ಇದರಲ್ಲಿ ಮುಖ್ಯವಾಗಿ ಕೆಲವು ವಸ್ತುಗಳನ್ನು ಮನೆಯಲ್ಲಿ ಖಾಲಿ ಇಡಬಾರದು ಎಂಬ ನಿಯಮವಿದೆ. ಅಂತಹ ವಸ್ತುಗಳು ಯಾವುದು, ಅವುಗಳನ್ನು ಒಂದು ವೇಳೆ ಖಾಲಿ ಇರಿಸಿದರೆ ಏನಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

Vastu Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಸ್ತು ನಿಯಮಗಳು (Vastu Tips) ಮನೆಯಲ್ಲಿ ಧನಾತ್ಮಕತೆಯನ್ನು (positivity) ಆಕರ್ಷಿಸುವ ಹಲವಾರು ಮಾರ್ಗಸೂಚಿಗಳನ್ನು ತಿಳಿಸುತ್ತದೆ. ಇವುಗಳನ್ನು ಪಾಲಿಸದೇ ಇದ್ದರೆ ಮನೆಯಲ್ಲಿ ಸಂಕಷ್ಟ, ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮನೆಯಲ್ಲಿ ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ಮಾಡುವ ತಪ್ಪುಗಳು ಇಡೀ ಕುಟುಂಬದ ಮೇಲೆ ನಕಾರಾತ್ಮಕ (negative) ಪರಿಣಾಮ ಬೀರಲು ಕಾರಣವಾಗುತ್ತದೆ. ಅಂತಹ ತಪ್ಪುಗಳು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಹೆಚ್ಚು ಸಮಯ ಬೇಕಿಲ್ಲ. ನಾವು ಮಾಡುವ ಸಣ್ಣ ತಪ್ಪುಗಳು ಸಾಕು. ಇದರಲ್ಲಿ ಮುಖ್ಯವಾಗಿ ಕೆಲವು ವಸ್ತುಗಳನ್ನು ಮನೆಯಲ್ಲಿ ಖಾಲಿ ಇಡಬಾರದು ಎಂಬ ನಿಯಮವಿದೆ. ಇದರಿಂದ ನೆರವಾಗಿ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಕೆಲವು ವಸ್ತುಗಳನ್ನು ಖಾಲಿಯಾಗಿ ಇರಿಸಿದರೆ ಮನೆಯ ನಿವಾಸಿಗಳು ಆರ್ಥಿಕ ನಷ್ಟ ಮತ್ತು ದುರದೃಷ್ಟವನ್ನು ಅನುಭವಿಸಬೇಕಾಗುತ್ತದೆ.


ಪರ್ಸ್, ಬ್ಯಾಗ್, ತಿಜೋರಿ

ಪರ್ಸ್, ಬ್ಯಾಗ್ ಮತ್ತು ತಿಜೋರಿಗಳನ್ನು ಯಾವತ್ತಿಗೂ ಖಾಲಿಯಾಗಿಸಿ ಇಡಬಾರದು. ಈ ಕುರಿತು ವಾಸ್ತು ನಿಯಮಗಳನ್ನು ಅನುಸರಿಸುವುದು ಬಹುಮುಖ್ಯ. ಯಾವತ್ತೂ ಇವುಗಳಲ್ಲಿ ಒಂದಿಷ್ಟು ನಗದು ಇರುವುದನ್ನು ಖಚಿತಪಡಿಸಿಕೊಳ್ಳಿ.

ಪರ್ಸ್, ಬ್ಯಾಗ್, ತಿಜೋರಿ ಖಾಲಿ ಆದರೆ ನಷ್ಟಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಹಣವನ್ನು ಯಾವತ್ತೂ ಇಟ್ಟುಕೊಂಡಿರಬೇಕು. ಜೊತೆಗೆ ಕೆಂಪು ಬಟ್ಟೆಯಲ್ಲಿ ಗೋಮತಿ ಚಕ್ರ ಮತ್ತು ಅರಿಶಿನವನ್ನು ಕಟ್ಟಿ ಇಡಬೇಕು. ಇದರಿಂದ ಪರ್ಸ್, ಬ್ಯಾಗ್, ತಿಜೋರಿ ಯಾವತ್ತೂ ಖಾಲಿಯಾಗುವುದಿಲ್ಲ. ಇದರಿಂದ ಲಕ್ಷ್ಮಿ ದೇವಿಯೂ ಪ್ರಸನ್ನಳಾಗಿರುತ್ತಾಳೆ ಎಂಬ ನಂಬಿಕೆ ಇದೆ.


ಬಾತ್ ರೂಮ್‌ನಲ್ಲಿನ ಬಕೆಟ್

ಬಾತ್ ರೂಮ್‌ನಲ್ಲಿ ಬಕೆಟ್‌ಗಳನ್ನು ಎಂದಿಗೂ ಖಾಲಿಯಾಗಿ ಇಡಬಾರದು. ಬಾತ್ ರೂಮ್ ಬಕೆಟ್‌ನಲ್ಲಿ ನೀರಿಲ್ಲದಿದ್ದಾಗ ನಕಾರಾತ್ಮಕ ಶಕ್ತಿಯು ತ್ವರಿತವಾಗಿ ಮನೆಗೆ ಪ್ರವೇಶಿಸುತ್ತದೆ. ಅಲ್ಲದೇ ಬಾತ್ ರೂಮ್ ನಲ್ಲಿ ಮುರಿದ ಅಥವಾ ಕಪ್ಪು ಬಕೆಟ್ ಅನ್ನು ಎಂದಿಗೂ ಬಳಸಬೇಡಿ. ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಮತ್ತು ವಾಸ್ತು ದೋಷಗಳು ಉಂಟಾಗುತ್ತವೆ.


ಪೂಜಾ ಕೊಠಡಿಯಲ್ಲಿ ನೀರಿನ ಪಾತ್ರೆ

ಮನೆಯ ಅತ್ಯಂತ ಪವಿತ್ರವಾದ ಜಾಗ ಪೂಜಾ ಕೋಣೆ. ವಾಸ್ತು ಶಾಸ್ತ್ರವು ಭಕ್ತಿಯ ಸ್ಥಳದಲ್ಲಿ ನೀರಿನ ಪಾತ್ರೆಯನ್ನು ಎಂದಿಗೂ ಖಾಲಿ ಬಿಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನೀರಿಲ್ಲದ ಕಲಶವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವಾಗಲೂ ಕಲಶದ ಪಾತ್ರೆಯಲ್ಲಿ ನೀರು ತುಂಬಿಡಲೇಬೇಕು. ಸ್ವಲ್ಪ ನೀರು, ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಹಾಕಿ ಇಡಬೇಕು. ಇದರಿಂದ ಕುಟುಂಬದ ಮೇಲೆ ದೇವರ ಅನುಗ್ರಹ ಸದಾ ಇರುತ್ತದೆ. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿಯೂ ನೆಲೆಸುತ್ತದೆ.

ಇದನ್ನೂ ಓದಿ: Vastu Tips: ಮನೆ ಸಂತೋಷದ ತಾಣವಾಗಬೇಕೆಂದರೆ ಮಲಗುವ ಕೋಣೆ ಹೀಗಿರಲಿ


ಧಾನ್ಯದ ಡಬ್ಬಿ

ಮನೆಯಲ್ಲಿ ಅನ್ನಪೂರ್ಣ ದೇವಿಯು ಅಡುಗೆಮನೆಯಲ್ಲಿ ವಾಸಿಸುತ್ತಾಳೆ ಎನ್ನಲಾಗುತ್ತದೆ. ದೇವಿಯ ಆಶೀರ್ವಾದ ಧಾನ್ಯದ ಮೇಲೆ ಇರುತ್ತದೆ. ಹೀಗಾಗಿ ಮನೆಯಲ್ಲಿ ಯಾವತ್ತೂ ಧಾನ್ಯಗಳ ಡಬ್ಬಿಯನ್ನು ಖಾಲಿ ಬಿಡಬಾರದು. ಖಾಲಿ ಬಿಟ್ಟರೆ ದುರದೃಷ್ಟ ಮನೆಗೆ ಬರುತ್ತದೆ ಎನ್ನುತ್ತದೆ ವಾಸ್ತು ನಿಯಮ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Nagara Panchami : ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ; ಏನಿದರ ಹಿನ್ನೆಲೆ, ವಿಶೇಷ?

Nagara Panchami: ಅಷಾಢ ಕಳೆದು ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಅದರಲ್ಲಿ ಮೊದಲ ಹಬ್ಬವೆಂದರೆ ನಾಗಪಂಚಮಿ. ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ರೀತಿಯಾಗಿ ಆಚರಿಸುತ್ತಾರೆ. ಕೆಲವರು ನಾಗನಕಲ್ಲನ್ನು ಮುಟ್ಟಿ ಪೂಜಿಸಿದರೆ ಇನ್ನೊಂದು ಕಡೆ ಪುರೋಹಿತರ ಮೂಲಕ ಪೂಜೆ ಮಾಡಿಸುತ್ತಾರೆ. ನಾಗನಕಲ್ಲು ಹಾಗೂ ಹುತ್ತಕ್ಕೆ ಕೆಲವರು ತನಿ ಎರೆಯುವುದರ (ಹಾಲು, ಎಳನೀರು)ಮೂಲಕ ನಾಗಪಂಚಮಿಯನ್ನು ಆಚರಿಸುತ್ತಾರೆ. ಈ ಹಬ್ಬದ ಹಿನ್ನೆಲೆಯ ಮಾಹಿತಿ ಇಲ್ಲಿದೆ.

VISTARANEWS.COM


on

Nag Panchami
Koo

ಬೆಂಗಳೂರು: ಶ್ರಾವಣ ಮಾಸ ಶುರುವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿವರ್ಷ ಶ್ರಾವಣ ಮಾಸದ ಪ್ರಾರಂಭವಾದ ಐದನೇ ದಿನದಂದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ನಾಗರಪಂಚಮಿ(Nagara Panchami )ಯಂದು ನಾಗದೇವರನ್ನು(ಹಾವು)ಗಳನ್ನು ಪೂಜಿಸಲಾಗುತ್ತದೆ. ಅಂದು ನಾಗರ ದೇವರ ವಿಗ್ರಹಗಳಿಗೆ ಹಾಲೆರೆದು ಹೂಗಳಿಂದ ಅಲಂಕಾರ ಮಾಡಿ ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸಿ ಪೂಜೆ ಮಾಡುತ್ತಾರೆ. ಈ ಹಬ್ಬವನ್ನು ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದ ಅನುಯಾಯಿಗಳು ಆಚರಿಸುತ್ತಾರೆ.

Nagara Panchami
Nag Panchami

ಅಷಾಢ ಕಳೆದು ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಅದರಲ್ಲಿ ಮೊದಲ ಹಬ್ಬವೆಂದರೆ ನಾಗಪಂಚಮಿ. ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ರೀತಿಯಾಗಿ ಆಚರಿಸುತ್ತಾರೆ. ಕೆಲವರು ನಾಗನಕಲ್ಲನ್ನು ಮುಟ್ಟಿ ಪೂಜಿಸಿದರೆ ಇನ್ನೊಂದು ಕಡೆ ಪುರೋಹಿತರ ಮೂಲಕ ಪೂಜೆ ಮಾಡಿಸುತ್ತಾರೆ. ನಾಗನಕಲ್ಲು ಹಾಗೂ ಹುತ್ತಕ್ಕೆ ಕೆಲವರು ತನಿ ಎರೆಯುವುದರ (ಹಾಲು, ಎಳನೀರು)ಮೂಲಕ ನಾಗಪಂಚಮಿಯನ್ನು ಆಚರಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಈ ನಾಗಪಂಚಮಿ ಬಹುದೊಡ್ಡ ಹಬ್ಬವಾಗಿದೆ. ಈ ಹಬ್ಬಕ್ಕೆ ಮದುವೆಯಾದ ಹೆಣ್ಣುಮಕ್ಕಳು ತವರಿಗೆ ಬರುವ ವಾಡಿಕೆ ಇನ್ನೂ ರೂಢಿಯಲ್ಲಿದೆ.

ನಾಗಪಂಚಮಿಗೆ ಕುರಿತಂತೆ ಸಾಕಷ್ಟು ಕತೆಗಳಿವೆ. ಜೋರಾಗಿ ಮಳೆ ಬರುವ ಕಾರಣ ಬೇಳೆಗಳಿಗೆ ಕೀಟ ಬಾಧೆ ಸಮಸ್ಯೆ ಕಾಡುತ್ತಿರುತ್ತದೆ. ಹಾಗೇ ರೈತ ಬೆಳೆದ ಫಸಲನ್ನು ಇಲಿಗಳು ಕೂಡ ಹಾಳು ಮಾಡುತ್ತವೆ. ಇವುಗಳನ್ನು ಹಾವುಗಳು ತಿಂದು ರೈತನ ಫಸಲನ್ನು ಕಾಪಾಡಿ ಅವನ ಬದುಕನ್ನು ಹಸನು ಮಾಡುತ್ತದೆ. ಹಾವಿನ ಈ ಸಹಾಯಕ್ಕೆ ಧನ್ಯವಾದ ಹೇಳಲು ರೈತನು ನಾಗನಕಲ್ಲಿಗೆ ಪೂಜೆ ಮಾಡುತ್ತಾನಂತೆ. ಇದನ್ನೇ ನಾಗಪಂಚಮಿ ಎಂದು ಕರೆಯಲಾಗುತ್ತದೆ ಎಂಬ ಕತೆಯಿದೆ. ಪುರಾಣದ ಪುಟಗಳನ್ನು ತಿರುಗಿಸಿದರೆ ನಾಗಪಂಚಮಿಗೆ ಸಂಬಂಧಿಸಿದಂತೆ ಸಾಕಷ್ಟು ಕತೆಗಳನ್ನು ನೋಡಬಹುದು.

Nag Panchami
Nag Panchami

ನಾಗರ ಪಂಚಮಿಯ ಶುಭ ಮಹೂರ್ತ:

ಈ ವರ್ಷ ನಾಗರ ಪಂಚಮಿ ಆಗಸ್ಟ್ 9ರಂದು ಬಂದಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ ಆಗಸ್ಟ್ 9 ರಂದು ಬೆಳಿಗ್ಗೆ 12:36 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 10 ರಂದು ಬೆಳಿಗ್ಗೆ 03:14 ಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ನಾಗ ದೇವರ ಪೂಜೆ ಮಾಡಿದರೆ ನಿಮಗೆ ಶುಭ ಫಲ ಪ್ರಾಪ್ತಿಯಾಗುತ್ತದೆ.

ನಾಗರ ಪಂಚಮಿಯ ಮಹತ್ವ ಏನು?
ಈ ಹಬ್ಬವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ನಾಗಾದೇವರನ್ನು ಪೂಜಿಸುವವರನ್ನು ಮತ್ತು ಅವರ ಕುಟುಂಬಗಳನ್ನು ನಾಗದೇವರು ದುಷ್ಟರಿಂದ ರಕ್ಷಿಸುತ್ತದೆ. ಮತ್ತು ಆ ಕುಟುಂಬಕ್ಕೆ ಸಮೃದ್ಧಿಯನ್ನು ತರುತ್ತದೆ ಮತ್ತು ನಾಗನ ಪೂಜೆ ಮಾಡಿದ ಕುಟುಂಬದವರು ಒಗ್ಗಟ್ಟಿನಿಂದ ಇರುತ್ತಾರೆ ಎಂದು ನಂಬಲಾಗಿದೆ. ಈ ದಿನ ನಾಗದೇವರ ವಿಗ್ರಹಗಳಿಗೆ ಪೂಜೆ ಮಾಡುವುದರಿಂದ ನಾಗ ದೇವತೆಗಳನ್ನು ಸಮಾಧಾನಪಡಿಸಬಹುದು ಮತ್ತು ಅವರ ಶಾಪದಿಂದ ಮುಕ್ತರಾಗಿಸಿ ಆಶೀರ್ವಾದವನ್ನು ನೀಡುತ್ತಾರೆ ಎಂಬ ನಂಬಿಕೆ ಇದೆ. ಅಲ್ಲದೇ ಕಾಳಸರ್ಪ ದೋಷಗಳು ಹಾಗೂ ಇತರ ಸರ್ಪ ದೋಷಗಳು ನಿವಾರಣೆಯಾಗುತ್ತದೆ ಎನ್ನಲಾಗಿದೆ.

Nag Panchami
Nag Panchami

ನಾಗರ ಪಂಚಮಿಯ ಆಚರಣೆ
ಸಾಂಪ್ರದಾಯಿಕವಾಗಿ, ಭಕ್ತರು ನಾಗನನ್ನು ಪೂಜಿಸುವ ಆಲಯಗಳಿಗೆ ಹೋಗಿ ಅಲ್ಲಿ ನಾಗದೇವರ ವಿಗ್ರಹಗಳನ್ನು ಹಾಲು ಮತ್ತು ಎಳನೀರಿನಿಂದ ಅಭಿಷೇಕ ಮಾಡಿ ಅರಿಶಿನ, ಅಕ್ಕಿ ಮತ್ತು ಹೂವುಗಳನ್ನು ವಿಗ್ರಹಕ್ಕೆ ಅರ್ಪಿಸಿ. ನಾಗದೇವರ ಆಶೀರ್ವಾದ ಪಡೆಯಲು ಮಹಾನಾಗ ದೇವರು ಮತ್ತು ಮಹಾವಿಷ್ಣು ಮಂತ್ರಗಳನ್ನು ಪಠಿಸಿ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಣೆಗಳನ್ನು ಮಾಡುತ್ತಾರೆ. ಕೆಲವೊಂದು ಕಡೆ ಜೀವಂತ ಹಾವುಗಳಿಗೆ ಹಾಲನ್ನು ಅರ್ಪಿಸುವ ವಾಡಿಕೆ ಇದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬೆಳ್ಳಿ, ಮರ ಅಥವಾ ಹಸುವಿನ ಸಗಣಿಯಂತಹ ವಸ್ತುಗಳಿಂದ ನಾಗನ ವಿಗ್ರಹವನ್ನು ತಯಾರಿಸಿ ನಂತರ ಈ ವಿಗ್ರಹವನ್ನು ಅರಿಶಿನ, ಅಕ್ಕಿ, ಹಾಲು ಮತ್ತು ಹೂವುಗಳಿಂದ ಪೂಜಿಸಲಾಗುತ್ತದೆ. ಇದರಿಂದ ನಕಾರಾತ್ಮಕ ದೋಷಗಳು ಕಡಿಮೆಯಾಗಿ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನಲಾಗಿದೆ.

ಅಲ್ಲದೇ ಕೆಲವರು ನಾಗರಪಂಚಮಿಯಂದು ನಾಗದೇವರ ಆಶೀರ್ವಾದ ಪಡೆಯಲು ನಾಗನಿಗೆ ಪ್ರಿಯವಾದ ಗಿಡಗಳನ್ನು ನೆಡುತ್ತಾರೆ. ಆದರೆ ಕೆಲವೊಂದು ಕಡೆ ಹಾವಿನ ವಾಸಸ್ಥಾನವನ್ನು ರಕ್ಷಿಸಲು ಮಣ್ಣನ್ನು ಅಗೆಯಬಾರದೆಂದು ಹೇಳುತ್ತಾರೆ. ಅಲ್ಲದೇ ಈ ದಿನ ಕಬ್ಬಿಣದ ಪಾತ್ರೆಗಳಲ್ಲಿ ಆಹಾರ ತಯಾರಿಸಬಾರದಂತೆ. ಹಾಗೇ ಈ ದಿನ ವಾಸುಕಿಯ ಆರಾಧ್ಯ ದೇವರಾದ ಶಿವನಿಗೆ ಕೆಂಪು ಗುಲಾಬಿಯನ್ನು ಅರ್ಪಿಸಿದರೆ ಬಹಳ ಶುಭವಂತೆ. ಹಾಗೇ ಬಹಳ ಹಿಂದಿನ ಕಾಲದಲ್ಲಿ ಈ ಶುಭ ದಿನ ಅಕ್ಕಿಯನ್ನು ದಾನ ಮಾಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

ಅದೇನೆಯಾದರೂ ನಿಮ್ಮ ಶಾಸ್ತ್ರ, ಸಂಪ್ರದಾಯದಂತೆ ನಿಮ್ಮ ಹಿರಿಯರು ಬಹಳ ಹಿಂದಿನಿಂದ ಮಾಡಿಕೊಂಡು ಬಂದ ವಾಡಿಕೆಯಂತೆ ನೀವು ನಾಗದೇವರ ಪೂಜೆ ಮಾಡಿ, ನಾಗದೇವರ ಕೃಪೆಗೆ ಪಾತ್ರರಾಗಿ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ವಿದ್ಯೆ-ಬುದ್ಧಿ, ಧನ-ಧಾನ್ಯ, ಆರೋಗ್ಯ-ಆಯಸ್ಸು ನೀಡಿ ಹರಸುವಂತೆ ನಾಗದೇವರಲ್ಲಿ ಪ್ರಾರ್ಥಿಸಿಕೊಳ್ಳಿ.

Continue Reading

ವಿದೇಶ

Bangladesh Protest: ಶೇಖ್‌ ಹಸೀನಾ ಭಾರತಕ್ಕೆ ಬಂದ ಬೆನ್ನಲ್ಲೇ ಬಾಂಗ್ಲಾದಲ್ಲಿ 4 ಹಿಂದು ದೇಗುಲಗಳ ಧ್ವಂಸ; ಹಿಂದು ಕೌನ್ಸಿಲರ್‌ ಹತ್ಯೆ!

Bangladesh Protest: ಇಸ್ಲಾಮಿಕ್‌ ಮೂಲಭೂತವಾದಿಗಳು ಪ್ರತಿಭಟನೆಯನ್ನು ಹಿಂದು ವಿರೋಧಿ ಪ್ರತಿಭಟನೆಯನ್ನಾಗಿ ಬದಲಿಸಿದ್ದಾರೆ. ಹಿಂದು ದೇವಾಲಯಗಳ ಮೇಲೆ ದಾಳಿ, ಹಿಂದು ಕೌನ್ಸಿಲರ್‌ಗಳ ಹತ್ಯೆ, ಭಾರತೀಯ ಸಂಸ್ಕೃತಿ ಕೇಂದ್ರದ ಧ್ವಂಸ ಸೇರಿ ಹಲವು ರೀತಿಯಾಗಿ ಹಿಂದು ವಿರೋಧಿ ಕೃತ್ಯಗಳಲ್ಲಿ ಮೂಲಭೂತವಾದಿಗಳು ತೊಡಗಿದ್ದಾರೆ.

VISTARANEWS.COM


on

Bangladesh Protest
Koo

ಢಾಕಾ: ಬಾಂಗ್ಲಾದೇಶದಲ್ಲಿ ಮೀಸಲಾತಿ ಪ್ರಕರಣವೊಂದೇ ನಾಗರಿಕ ದಂಗೆಗೆ ಕಾರಣವಾಗಿದೆ. ಪ್ರಧಾನಿ ಶೇಖ್‌ ಹಸೀನಾ ಅವರೂ ರಾಜೀನಾಮೆ ನೀಡಿ, ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು (Bangladesh Protest) ಹುಚ್ಚಾಟ ಮಾಡಿದ್ದಾರೆ. ಗಲಾಟೆ, ಗಲಭೆ, ಹಿಂಸಾಚಾರದಿಂದ 100ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಇನ್ನು, ಶೇಖ್‌ ಹಸೀನಾ (Sheikh Hasina) ಅವರು ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂದು ವಿರೋಧಿ ದಂಗೆ ಆರಂಭವಾಗಿದೆ. ನಾಲ್ಕು ಹಿಂದು ದೇವಾಲಯಗಳನ್ನು (Hindu Temples) ಮೂಲಭೂತವಾದಿಗಳು ಧ್ವಂಸಗೊಳಿಸಿದ್ದಾರೆ.

ಹೌದು, ಬಾಂಗ್ಲಾದೇಶದಲ್ಲಿರುವ ನಾಲ್ಕು ಇಸ್ಕಾನ್‌ ಹಾಗೂ ಕಾಳಿ ದೇವಾಲಯಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಕಾಳಿ ದೇವಾಲಯಕ್ಕೆ ಬೆಂಕಿ ಹಚ್ಚಿದ ಇಸ್ಲಾಮಿಕ್‌ ಮೂಲಭೂತವಾದಿಗಳು ತಮ್ಮ ಮನಸ್ಥಿತಿ ಪ್ರದರ್ಶಿಸಿದ್ದಾರೆ. ಆ ಮೂಲಕ ಬಾಂಗ್ಲಾದೇಶದ ಪ್ರತಿಭಟನೆಯನ್ನು ಹಿಂದು ವಿರೋಧಿ ಪ್ರತಿಭಟನೆಯನ್ನಾಗಿ ಬದಲಿಸಿದ್ದಾರೆ.

ಅಷ್ಟೇ ಅಲ್ಲ, ರಂಗ್‌ಪುರ ಸಿಟಿ ಕಾರ್ಪೊರೇಷನ್‌ನ ಹಿಂದು ಕೌನ್ಸಿರ್‌ ಹರಧನ್‌ ರಾಯ್‌ ಹರ ಎಂಬುವರನ್ನು ಉದ್ರಿಕ್ತರು ಕೊಂದು ಹಾಕಿದ್ದಾರೆ. ಇದೇ ಪಟ್ಟಣದ ಮತ್ತೊಬ್ಬ ಹಿಂದು ಕೌನ್ಸಿಲರ್‌ ಕಾಜಲ್‌ ರಾಯ್‌ ಎಂಬವರನ್ನೂ ಕೊಲೆ ಮಾಡಿದ್ದಾರೆ. ಅಲ್ಲದೆ, ಭಾರತೀಯ ಕಲ್ಚುರಲ್‌ ಸೆಂಟರ್‌ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿ, ಕಟ್ಟಡಕ್ಕೆ ಹಾನಿ ಮಾಡಿದ್ದಾರೆ.

ರೈಲು, ವಿಮಾನ ಸಂಚಾರ ರದ್ದು

ಬಾಂಗ್ಲಾದೇಶದಲ್ಲಿ ಭಾರಿ ಅರಾಜಕತೆ ಸೃಷ್ಟಿಯಾಗಿ, ಗಲಭೆಗಳು ಆರಂಭವಾದ ಹಿನ್ನೆಲೆಯಲ್ಲಿ ಕೋಲ್ಕೊತಾದಿಂದ ಢಾಕಾಗೆ ತೆರಳುವ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹೇಗೆಯೇ, ಬಾಂಗ್ಲಾದೇಶಕ್ಕೆ ತೆರಳುವ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಭಾರತೀಯರು ಮುಂದಿನ ಸೂಚನೆ ಮೇರೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬಾರದು. ಬಾಂಗ್ಲಾದೇಶದಲ್ಲಿರುವ ಭಾರತೀಯರು, ವಿದ್ಯಾರ್ಥಿಗಳು ತುಂಬ ಎಚ್ಚರಿಕೆಯಿಂದ ಇರಬೇಕು ಎಂದು ಸರ್ಕಾರ ಸೂಚಿಸಿದೆ.

ಪರಿಸ್ಥಿತಿ ಅವಲೋಕಿಸಿದ ಮೋದಿ

ಭಾರತಕ್ಕೆ ಆಗಮಿಸಿರುವ ಶೇಖ್‌ ಹಸೀನಾ ಅವರನ್ನು ಘಾಜಿಯಾಬಾದ್‌ನ ಹಿಂಡನ್‌ ಏರ್‌ ಬೇಸ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಭೇಟಿಯಾಗಿದ್ದು, ಅವರ ಜತೆ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಶೇಖ್‌ ಹಸೀನಾ ಅವರು ಲಂಡನ್‌ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು ಶೇಖ್‌ ಹಸೀನಾ ಭಾರತಕ್ಕೆ ಬಂದಿರುವುದು, ಬಾಂಗ್ಲಾದೇಶದ ಹಿಂಸಾಚಾರ, ಗಡಿ ಬಿಕ್ಕಟ್ಟು ಸೇರಿ ಹಲವು ವಿಷಯಗಳನ್ನು ಮೋದಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೂ ಎಸ್.ಜೈಶಂಕರ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಇದನ್ನೂ ಓದಿ: Bangladesh Protests: ಬಾಂಗ್ಲಾ ಹಿಂಸಾಚಾರದ ಹಿಂದೆ ಪಾಕ್‌ ಕೈವಾಡ; ಭಾರತದ ಜತೆ ಹಸೀನಾ ಸ್ನೇಹ ಕಾರಣ?

Continue Reading

Latest

Shravan 2024: ಶ್ರಾವಣ ಮಾಸದಲ್ಲೇಕೆ ಮಾಂಸಾಹಾರ ಮಾಡಬಾರದು? ಇದಕ್ಕಿದೆ ವೈಜ್ಞಾನಿಕ ಕಾರಣ!

shravan 2024: ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸದೇ ಇರುವುದಕ್ಕೆ ಕೆಲವು ವೈಜ್ಞಾನಿಕ ಕಾರಣಗಳೂ ಇವೆ. ಈ ಸಮಯದಲ್ಲಿ ಸೀಗಡಿ ಮತ್ತು ಮೀನುಗಳ ಸಂತಾನೋತ್ಪತ್ತಿ ಕಾರ್ಯ ನಡೆಯುತ್ತದೆ. ಇದರಿಂದ ಸಮುದ್ರಾಹಾರವನ್ನು ಸೇವಿಸುವುದರಿಂದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇನ್ನು ಶ್ರಾವಣ ಮಾಸದಲ್ಲಿ ತಂಪಾದ ವಾತಾವರಣ ನಮ್ಮ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ, ಅದಕ್ಕಾಗಿಯೇ ಅನೇಕ ಜನರು ಈ ಋತುವಿನಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ

VISTARANEWS.COM


on

shravan 2024
Koo


ಶ್ರಾವಣ ಮಾಸ ಎನ್ನುವುದು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವಾದ (shravan 2024) ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಯ ಜೊತೆಗೆ ವಿಷ್ಣು, ಲಕ್ಷ್ಮಿ, ಪಾರ್ವತಿ ಮುಂತಾದ ದೇವರುಗಳ ಪೂಜೆ ಪುನಸ್ಕಾರಗಳನ್ನು ವಿಶೇಷವಾಗಿ ಮಾಡಲಾಗುತ್ತದೆ. ಹಾಗಾಗಿ ಈ ಮಾಸದಲ್ಲಿ ಮಾಂಸಹಾರಗಳನ್ನು ಸೇವಿಸಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದಕಾರಣ ಹೆಚ್ಚಿನ ಜನರು ಶ್ರಾವಣ ಮಾಸದಲ್ಲಿ ಮಾಂಸಹಾರವನ್ನು ತ್ಯಜಿಸುತ್ತಾರೆ. ಆದರೆ ಶ್ರಾವಣ (Shravan 2024) ಮಾಸದಲ್ಲಿ ಮಾಂಸಹಾರ ಸೇವಿಸಬಾರದು ಎಂದು ಹೇಳುವುದು ನಮ್ಮ ನಂಬಿಕೆ ಮಾತ್ರವಲ್ಲ, ಇದರ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳೂ ಇವೆ. ಅದೇನೆಂದು ತಿಳಿಯೋಣ.

ಆರೋಗ್ಯ ಕಾರಣ:

ಬೇಸಿಗೆ ಕಾಲದ ನಂತರ ಮಳೆಗಾಲ ಪ್ರಾರಂಭವಾಗುತ್ತದೆ. ಇದು ಬಿಸಿಲಿನ ಬೇಗೆಯಿಂದ ದಣಿದ ಜನರಿಗೆ ತಂಪಾದ ಅನುಭವವನ್ನು ನೀಡುತ್ತದೆ ನಿಜ. ಆದರೆ ಈ ಸಮಯದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ತಂಪಾದ ಗಾಳಿಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಹೊಟ್ಟೆಯ ಸೋಂಕುಗಳು, ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಡುತ್ತವೆ. ಅಲ್ಲದೇ ಈ ವಾತಾವರಣ ನಮ್ಮ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಅನೇಕ ಜನರು ಈ ಋತುವಿನಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಮೊಟ್ಟೆಗಳು, ಸಮುದ್ರಾಹಾರ, ಚಿಕನ್ ಮತ್ತು ಮಟನ್‌ನಿಂದ ದೂರವಿರಲು ಸಲಹೆ ನೀಡಲಾಗಿದೆ.

shravan 2024
shravan 2024

ಮೀನುಗಳ ಸಂತಾನೋತ್ಪತ್ತಿ ಸಮಯ:

ಈ ಸಮಯದಲ್ಲಿ ಸೀಗಡಿ ಮತ್ತು ಮೀನುಗಳ ಸಂತಾನೋತ್ಪತ್ತಿ ಕಾರ್ಯವನ್ನು ನಡೆಯುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಸಂತಾನೋತ್ಪತ್ತಿ ಸಮಯದಲ್ಲಿ ಜೀವಿಗಳನ್ನು ಕೊಲ್ಲುವುದು ಮಹಾಪಾಪ. ಈ ಸಂಗತಿಯನ್ನು ಪರಿಗಣಿಸಿ ಹಿಂದೂಗಳ ನಂಬಿಕೆಯ ಆಧಾರದ ಮೇಲೆ ಈ ಸಮಯದಲ್ಲಿ ಮಾಂಸಾಹಾರ ಮತ್ತು ಮೊಟ್ಟೆಗಳನ್ನು ಸೇವಿಸುವುದರಿಂದ ದೂರ ಇರುತ್ತಾರೆ. ಸಾಮಾನ್ಯವಾಗಿ ಈ ಸಮಯದಲ್ಲಿ ಸಮುದ್ರದಲ್ಲಿ ಮೀನುಗಾರಿಗೆ ನಿಷೇಧ ಇರುತ್ತದೆ. ಆದಾಗ್ಯೂ ಈ ಅವಧಿಯಲ್ಲಿ ಸಮುದ್ರಾಹಾರವನ್ನು ಸೇವಿಸುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಇದೊಂದು ವೈಜ್ಞಾನಿಕ ಕಾರಣವೂ ಇದೆ.

ಅಲ್ಲದೇ ಈ ಸಮಯದಲ್ಲಿ ಕೀಟಗಳ ಹಾವಳಿ ಕೂಡ ಹೆಚ್ಚಾಗಿರುತ್ತದೆ. ಇದರಿಂದ ನೀವು ಮಾಂಸವಾಗಿ ಸೇವಿಸುವಂತಹ ಜೀವಿಗಳು ಈ ಕೀಟಗಳನ್ನು ಹೆಚ್ಚು ಸೇವನೆ ಮಾಡುತ್ತದೆ. ಇದನ್ನು ನಾವು ಸೇವಿಸಿದಾಗ ಅದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಅದಕ್ಕಾಗಿಯೇ ಅನೇಕ ಜನರು ಈ ಋತುವಿನಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಮೊಟ್ಟೆಗಳು, ಸಮುದ್ರಾಹಾರ, ಚಿಕನ್ ಮತ್ತು ಮಟನ್‌ನಿಂದ ದೂರವಿರಲು ಸಲಹೆ ನೀಡಲಾಗಿದೆ.

ಇದನ್ನೂ ಓದಿ: Shravan 2024: ಇಂದಿನಿಂದ ಶ್ರಾವಣ ಶುಭಾರಂಭ; ಈ ತಿಂಗಳ ವಿಶೇಷ ಏನು?

ಈ ಮಾಸದಲ್ಲಿ ಸಸ್ಯಹಾರವನ್ನು ಹೆಚ್ಚು ಸೇವಿಸಿ. ಯಾಕೆಂದರೆ ಸಸ್ಯಹಾರ ಸುಲಭವಾಗಿ ಜೀರ್ಣವಾಗುತ್ತವೆ. ಇದರಿಂದ ನಿಮ್ಮ ಜೀರ್ಣಕ್ರಿಯೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ತರಕಾರಿ, ಸೊಪ್ಪುಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ದೇಹದ ರೋಗ ನಿರೋಧಕ ಶಕ್ತಿಗಳನ್ನುಹೆಚ್ಚಿಸುವುದರ ಮೂಲಕ ನಿಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುತ್ತವೆ. ಈ ಮೂಲಕ ಕಾಯಿಲೆ ಬೀಳುವುದನ್ನು ತಡೆಯಬಹುದು.

Continue Reading

ಧಾರ್ಮಿಕ

Shravana 2024: ಶ್ರಾವಣ ಉಪವಾಸದ ವೇಳೆ ಈ 5 ಪಾನೀಯ ಆರೋಗ್ಯಕರ

Shravana 2024:ಶ್ರಾವಣ ಮಾಸದಲ್ಲಿ (Shravana Masa) ಉಪವಾಸ ಕೈಗೊಳ್ಳುವಾಗ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ದೇವರ ಧ್ಯಾನ, ಪೂಜೆಯಲ್ಲಿ ನಿರತರಾಗಿರುವಾಗ ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಉಪವಾಸದ ಸಮಯದಲ್ಲಿ ಸೇವಿಸಬಹುದಾದ ಕೆಲವು ಆರೋಗ್ಯಕರ ಪಾನೀಯಗಳು ಇಲ್ಲಿವೆ.

VISTARANEWS.COM


on

By

Shravana 2024
Koo

ದೇಶಾದ್ಯಂತ ಅತ್ಯಂತ ಭಕ್ತಿ ಮತ್ತು ಸಂತೋಷದಿಂದ (Shravana 2024) ಆಚರಿಸಲಾಗುವ ಶ್ರಾವಣ ಮಾಸ (Shravana Masa) ಹಿಂದೂ ಚಂದ್ರನ ಕ್ಯಾಲೆಂಡರ್‌ನಲ್ಲಿ (Hindu Lunar calendar) ಪವಿತ್ರವಾದ ತಿಂಗಳು (sacred month). ಇದು ಸಾಂಸ್ಕೃತಿಕ ಚೈತನ್ಯ ಮತ್ತು ಧಾರ್ಮಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ. ಇಂದಿನಿಂದ (ಆ.5) ಶ್ರಾವಣ ಮಾಸ ಆರಂಭ. ಬಹುತೇಕ ಹಿಂದೂಗಳು ಈ ತಿಂಗಳು ಪೂರ್ತಿ ದೇವರ ಪೂಜೆ, ಧ್ಯಾನ, ಜಪ, ತಪಗಳಲ್ಲಿ ನಿರತರಾಗುತ್ತಾರೆ. ಹೆಚ್ಚಿನವರು ಸೋಮವಾರ, ಮಂಗಳವಾರ, ಶುಕ್ರವಾರ, ಶನಿವಾರದಂದು ಉಪವಾಸ ವ್ರತ ಕೈಗೊಳ್ಳುತ್ತಾರೆ.

ಶ್ರಾವಣ ಮಾಸ ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾಗಿದೆ. ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಆಚರಣೆಗಳಲ್ಲಿ ಉಪವಾಸವೂ ಒಂದಾಗಿದೆ. ಶಿವ ಭಕ್ತರು ಶಿವನ ಆಶೀರ್ವಾದ ಪಡೆಯಲು ಈ ತಿಂಗಳ ಪ್ರತಿ ಸೋಮವಾರ ಉಪವಾಸವನ್ನು ಆಚರಿಸುತ್ತಾರೆ.

ಜನರು ಈ ಸಂದರ್ಭದಲ್ಲಿ ಮಾಂಸಾಹಾರಿ ಆಹಾರಗಳು, ಈರುಳ್ಳಿ, ಬೆಳ್ಳುಳ್ಳಿ ಸೇವನೆಯನ್ನು ತ್ಯಜಿಸುತ್ತಾರೆ.
ಉಪವಾಸದೊಂದಿಗೆ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ದೇವರ ಧ್ಯಾನ, ಪೂಜೆಯಲ್ಲಿ ನಿರತರಾಗಿರುವಾಗ ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಉಪವಾಸದ ಸಮಯದಲ್ಲಿ ಸೇವಿಸಬಹುದಾದ ಕೆಲವು ಆರೋಗ್ಯಕರ ಪಾನೀಯಗಳು ಇಲ್ಲಿವೆ.

Shravana Masa
Shravana Masa


ಎಳನೀರು

ತೆಂಗಿನ ನೀರು ಉಪವಾಸ ನಿರತರಿಗೆ ಅತ್ಯತ್ತಮ ಆಯ್ಕೆಯಾಗಿದೆ. ಇದು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿದ್ದು, ಡಿಟಾಕ್ಸ್ ಪಾನೀಯವಾಗಿದೆ. ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್‌ ಮತ್ತು ಸಕ್ಕರೆಯ ಅದ್ಭುತ ಮೂಲವಾಗಿದೆ. ಇದು ಆರೋಗ್ಯಕರ ದೇಹದ ಬೆಳವಣಿಗೆಗೆಯನ್ನು ಉತ್ತೇಜಿಸುತ್ತದೆ.

Shravana Masa
Shravana Masa


ಸೌತೆಕಾಯಿ ಪುದೀನಾ ರಸ

ಶೇ. 95ಕ್ಕಿಂತ ಹೆಚ್ಚು ನೀರನ್ನು ಹೊಂದಿರುವ ಸೌತೆಕಾಯಿ ಪೌಷ್ಟಿಕಾಂಶದಿಂದ ತುಂಬಿರುವ ಸಮೃದ್ಧ ಆಹಾರ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಉಪವಾಸ ನಿರತರು ಇದನ್ನು ಸೇವಿಸಬಹುದು. ಅಗತ್ಯ ಜೀವಸತ್ವ, ಖನಿಜಾಂಶಗಳು ಸೌತೆಕಾಯಿಗಳಲ್ಲಿ ಹೇರಳವಾಗಿವೆ.


ನಿಂಬೆ ನೀರು

ಉಪವಾಸದ ಸಮಯದಲ್ಲಿ ಸೇವಿಸುವ ಆರೋಗ್ಯಕರ ಪಾನೀಯವೆಂದರೆ ನಿಂಬೆ ನೀರು. ಶ್ರಾವಣ ಮಾಸದಲ್ಲಿ ಉಪವಾಸ ನಿರತರಾಗಿರುವವರು ನಿಂಬೆ ರಸ ಅಥವಾ ನಿಂಬೆ ಪಾನಕವನ್ನು ಕುಡಿಯುವುದು ಹೈಡ್ರೇಟೆಡ್ ಆಗಿರಲು ಮತ್ತು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಕೊಡಲು ಇದು ಸಹಾಯ ಮಾಡುತ್ತದೆ.


ಹಣ್ಣಿನ ರಸಗಳು

ಸೇಬು, ಕಿತ್ತಳೆ, ದಾಳಿಂಬೆ ಮತ್ತು ಇತರ ತಾಜಾ ಹಣ್ಣುಗಳನ್ನು ಜ್ಯೂಸ್ ಮಾಡಿ ಉಪವಾಸ ನಿರತರು ದಿನವಿಡೀ ಸೇವಿಸಬಹುದು. ಇದು ದೇಹವನ್ನು ಹೈಡ್ರೀಕರಿಸುವುದರ ಜೊತೆಗೆ ತಾಜಾ ಹಣ್ಣಿನ ರಸಗಳು ದೇಹದ ಆರೋಗ್ಯಕ್ಕೆ ಬೇಕಾದ ಪ್ರಮುಖ ಪೋಷಕಾಂಶಗಳನ್ನು ಪೂರೈಸುತ್ತವೆ.

ಇದನ್ನೂ ಓದಿ: Health Tips: ಪಾದಗಳ ಊತ, ನೋವನ್ನು ಕಡಿಮೆ ಮಾಡಲು ಇಲ್ಲಿದೆ ಸರಳ ಉಪಾಯ

Shravana Masa
Shravana Masa


ಚಿಯಾ ಬೀಜಗಳು

ಚಿಯಾ ಬೀಜದ ನೀರು ಅನೇಕ ಗಮನಾರ್ಹವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉಪವಾಸದ ದಿನವನ್ನು ಪ್ರಾರಂಭಿಸಲು ತುಂಬಾ ಆರೋಗ್ಯಕರ ಮಾರ್ಗವಾಗಿದೆ. ಉತ್ಕರ್ಷಣ ನಿರೋಧಕಗಳು, ಖನಿಜಗಳು, ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧಿಯಿಂದಾಗಿ, ಚಿಯಾ ಬೀಜಗಳು ದೇಹವನ್ನು ನಿರ್ಜಲೀಕರಣಗೊಳ್ಳದಂತೆತಡೆಯುತ್ತದೆ. ಹೆಚ್ಚು ಗಂಟೆಗಳ ಕಾಲ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.

Continue Reading
Advertisement
Self Harming
Latest13 mins ago

Self Harming: ಪತಿ ಬೈದಿದ್ದಕ್ಕೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಬೆಚ್ಚಿ ಬೀಳಿಸುವ ವಿಡಿಯೊ

Bangladesh Protest
ಪ್ರಮುಖ ಸುದ್ದಿ16 mins ago

Bangladesh Protest : ಬಾಂಗ್ಲಾದೇಶ ಬಿಕ್ಕಟ್ಟು; ಸರ್ವಪಕ್ಷ ಸಭೆ ಕರೆದ ವಿದೇಶಾಂಗ ಸಚಿವ ಜೈಶಂಕರ್

Parliament Session
ರಾಜಕೀಯ21 mins ago

Parliament Session: ಸಂಸತ್‌ನಲ್ಲಿ ಇಂದು ಹಣಕಾಸು ಪ್ರಸ್ತಾವನೆಗಳ ಮಸೂದೆ ಮಂಡನೆ; ಕ್ಷಣ ಕ್ಷಣದ ಮಾಹಿತಿಗೆ ಅಧಿವೇಶನದ Live ಇಲ್ಲಿ ನೋಡಿ

Bangladesh Protest
ದೇಶ1 hour ago

Bangladesh Protest: ಮುಸ್ಲಿಂ ದೇಶಗಳಲ್ಲಿ ಯಾರೂ ಸುರಕ್ಷಿತರಲ್ಲ; ಮತ್ತೊಂದು ಕಿಡಿ ಹೊತ್ತಿಸಿದ ಕಂಗನಾ ರಣಾವತ್

Sheikh Hasina
ಪ್ರಮುಖ ಸುದ್ದಿ1 hour ago

Sheikh Hasina : ಶೇಖ್ ಹಸೀನಾ ಸೀರೆಗಳ ಜತೆ ಬ್ರಾಗಳನ್ನೂ ಬಿಡದೆ ದೋಚಿದ ಬಾಂಗ್ಲಾ ಜನ!

thawar chand gehlot cm siddaramaiah Governor versus state
ಪ್ರಮುಖ ಸುದ್ದಿ2 hours ago

CM Siddaramaiah: ಸಿಎಂ ಸಿದ್ದರಾಮಯ್ಯಗೆ ರಾಜಭವನದಿಂದ ಮೂರನೇ ನೋಟೀಸ್ ಜಾರಿ! ಯಾಕೆ ಪದೇ ಪದೆ ನೋಟೀಸ್‌?

Bangladesh Protest
ದೇಶ2 hours ago

Bangladesh Protest: ರಫೇಲ್ ಯುದ್ಧ ವಿಮಾನಗಳ ಹಾರಾಟ, ರಾಡಾರ್‌ ಮೂಲಕ ಮೇಲ್ವಿಚಾರಣೆ; ಶೇಖ್‌ ಹಸೀನಾ ಸುರಕ್ಷತೆಗೆ ಭಾರತ ಕೈಗೊಂಡ ಕ್ರಮಗಳಿವು

Smriti Mandhana,
ಕ್ರೀಡೆ2 hours ago

Smriti Mandhana : ಐಸಿಸಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಸ್ಮೃತಿ ಮಂದಾನ, ಶಫಾಲಿ ವರ್ಮಾ ಆಯ್ಕೆ

student death road accident
ಮೈಸೂರು2 hours ago

Student Death: ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು; ಮನೆ ಬಿಟ್ಟು ಹೋದ ತಂದೆಗಾಗಿ ಕಾದಿಟ್ಟಿದ್ದಾರೆ ಶವ

Nag Panchami
Latest2 hours ago

Nagara Panchami : ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ; ಏನಿದರ ಹಿನ್ನೆಲೆ, ವಿಶೇಷ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ7 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌