Physical Abuse: ಪಬ್‌ನಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ನಾಲ್ವರ ಬಂಧನ - Vistara News

ಕ್ರೈಂ

Physical Abuse: ಪಬ್‌ನಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ನಾಲ್ವರ ಬಂಧನ

pub physical abuse: ಸ್ನೇಹಿತೆಯೊಂದಿಗೆ ಪಬ್‌ಗೆ ಬಂದಿದ್ದ ಯುವತಿಯ ಮಾನಭಂಗ ಯತ್ನ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ಬಿಯರ್ ಬಾಟ್ಲಿಯಲ್ಲಿ ಹಲ್ಲೆ ನಡೆಸಲು ನಾಲ್ವರು ಯತ್ನಿಸಿದ್ದರು.

VISTARANEWS.COM


on

pub physical abuse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಗಳೂರು: ಪಬ್‌ನಲ್ಲಿ (Pub) ಯುವತಿಯ ಮೇಲೆ ಅತ್ಯಾಚಾರಕ್ಕೆ (Physical Abuse) ಯತ್ನಿಸಿದ ನಾಲ್ವರನ್ನು ಬಂಧಿಸಲಾಗಿದೆ. ಮಂಗಳೂರಿನ (Mangalore news) ಪಾಂಡೇಶ್ವರ ಫೋರಮ್ ಮಾಲ್‌ನಲ್ಲಿರುವ ಶೆರ್‌ಲ್ಯಾಕ್ ಪಬ್‌ನಲ್ಲಿ ಘಟನೆ ನಡೆದಿತ್ತು.

ಸ್ನೇಹಿತೆಯೊಂದಿಗೆ ಪಬ್‌ಗೆ ಬಂದಿದ್ದ ಯುವತಿಯ ಮಾನಭಂಗ ಯತ್ನ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ಬಿಯರ್ ಬಾಟ್ಲಿಯಲ್ಲಿ ಹಲ್ಲೆ ನಡೆಸಲು ನಾಲ್ವರು ಯತ್ನಿಸಿದ್ದರು. ಇವರನ್ನು ಪುತ್ತೂರಿನ ವಿನಯ (33), ಮಹೇಶ್ (27), ಪ್ರಿತೇಶ್ (34) ಹಾಗೂ ನಿತೇಶ್ (33) ಎಂದು ಗುರುತಿಸಲಾಗಿದೆ. ಇವರನ್ನು ಬಂಧಿಸಲಾಗಿದ್ದು, ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಾಂಡೇಶ್ವರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.

ಕುಡಿದ ಅಮಲಿನಲ್ಲಿ ತಾಯಿಯ ಮೇಲೇ ಅತ್ಯಾಚಾರಗೈದ ಪಾಪಿ ಮಗ

ಚಿಕ್ಕಬಳ್ಳಾಪುರ: ಹೆತ್ತ ತಾಯಿಯ (Mother) ಮೇಲೆಯೇ ಮಗ (Son) ಅತ್ಯಾಚಾರ (Physical Abuse) ಮಾಡಿ ಹತ್ಯೆಗೆ (Murder Attempt) ಯತ್ನಿಸಿ ವಿಕೃತಿ ಮೆರೆದ ಪೈಶಾಚಿಕ ಘಟನೆ ಚಿಕ್ಕಬಳ್ಳಾಪುರ (Chikkaballapur news) ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ನಡೆದಿದೆ.

ಗುಡಿಬಂಡೆ ತಾಲ್ಲೂಕಿನ ಚಿನ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಶೋಕ್‌ ಎಂಬಾತ ಅತ್ಯಾಚಾರ ಮಾಡಿ ತಾಯಿಯ ಕೊಲೆಗೆ ಯತ್ನಿಸಿದ ಪಾಪಿ ಮಗ. ಕುಡಿದ ಅಮಲಿನಲ್ಲಿ ಪಾತಕಿ ಅಶೋಕ್‌ ಈ ಕೃತ್ಯ ಎಸಗಿದ್ದಾನೆ. ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನು ವಿವಸ್ತ್ರಗೊಳಿಸಿ ತಿಪ್ಪೆಯಲ್ಲಿ ಎಳೆದೊಯ್ದು ಕೃತ್ಯ ಎಸಗಿದ್ದಾನೆ.

ಟಿಪ್ಪರ್ ಲಾರಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಅಶೋಕ, ಆಗಾಗ ಬಂದು ಜಗಳವಾಡುತ್ತಿದ್ದ. ಅಶೋಕನಿಗೆ ಮದುವೆಯಾಗಿದ್ದು, ಈತನ ವಿಕೃತಿ ಹಾಗೂ ಕಿರುಕುಳ ತಾಳಲಾರದೆ ಪತ್ನಿ ಮನೆ ಬಿಟ್ಟು ಹೋಗಿದ್ದರು. ತಾಯಿ ಚಿನ್ನಮ್ಮ ಅರವತ್ತು ವರ್ಷದವರಾಗಿದ್ದು, ಮಗನಿಂದ ಅತ್ಯಾಚಾರಕ್ಕೊಳಗಾಗಿ ಗಾಯಗೊಂಡು ಸದ್ಯ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃತ್ಯದ ನಂತರ ತಾಯಿಯನ್ನು ತಿಪ್ಪೆಯಲ್ಲಿಯೇ ಬಿಟ್ಟು ಮಗ ಪರಾರಿಯಾಗಿದ್ದಾನೆ. ತಂದೆ ಹಾಗೂ ಸಹೋದರ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆತಂದಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿದಿಸಿ ತನಿಖೆ ನಡೆಸುತ್ತಿದ್ದಾರೆ.

ಶಾಲಾ ವ್ಯಾನ್‌ಗೆ ಶಿಕ್ಷಕ ಬಲಿ

ವಿಜಯನಗರ: ಬೈಕ್ ಹಾಗೂ ಶಾಲಾ ವಾಹನದ ಮಧ್ಯೆ ಅಪಘಾತ (Road Accident) ಸಂಭವಿಸಿದ್ದು, ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಸರ್ಕಾರಿ ಶಾಲೆಯ ಹಿಂದಿ ಶಿಕ್ಷಕ ಮುನಿಯಪ್ಪ (55) ಮೃತ ದುರ್ದೈವಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕುಪ್ಪಿನಕೇರಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಮುನಿಯಪ್ಪನವರು ಅಮ್ಮನಕೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು. ಮೂಲತಃ ಹರಪನಹಳ್ಳಿ ತಾಲೂಕಿನ ಉಂಚಳ್ಳಿ ಗ್ರಾಮದವದ ಮುನಿಯಪ್ಪ ಅವರು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಕೊಠಡಿ ನಿರೀಕ್ಷಕರಾಗಿ ಕರ್ಥವ್ಯಕ್ಕೆ ನಿಯೋಜನೆ ಆಗಿದ್ದರು.

ಇದನ್ನೂ ಓದಿ: Murder Case : ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ; ಕೈ-ಕಾಲು ಬಿಗಿದು, ಕಲ್ಲು ಕಟ್ಟಿ ಕೆರೆಗೆ ಎಸೆದ ಹಂತಕರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಮನಗರ

Murder case : ರಾಮನಗರದಲ್ಲಿ ಸಂಬಂಧಿಕರಿಂದಲೇ ಯುವಕನ ಬರ್ಬರ ಹತ್ಯೆ

Murder Case : ಮಧ್ಯರಾತ್ರಿ ಜಮೀನಿನಲ್ಲಿ ಹುಲ್ಲು ಕೊಯ್ಯುವ ವಿಚಾರವಾಗಿ ಗಲಾಟೆ ನಡೆದಿದೆ. ಸಂಬಂಧಿಕರೇ ಯುವಕನ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದಾರೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾರೆ.

VISTARANEWS.COM


on

By

murder case
Koo

ರಾಮನಗರ: ಸಂಬಂಧಿಕರಿಂದಲೇ ಯುವಕನ ಬರ್ಬರ ಹತ್ಯೆ (Murder case) ನಡೆದಿದೆ. ಯುವಕನನ್ನು ಕೊಂದು ರಸ್ತೆ ಬದಿ ಬಿಸಾಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮವಾದ ದೊಡ್ಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ರಂಜಿತ್ ಕುಮಾರ್ (29) ಕೊಲೆಯಾದವನು.

ರಂಜಿತ್‌ ಕುಮಾರ್‌ ಖಾಸಗಿ ಶಾಲೆಯಲ್ಲಿ ಚಾಲಕನಾಗಿ ಕೆಲ ಮಾಡುತ್ತಿದ್ದ. ರಂಜಿತ್‌ ಚಿಕ್ಕಪ್ಪ ನಾಗರಾಜು, ಮಂಗಳಮ್ಮ ಮತ್ತು ಅವರ ಮಗ ಸುನೀಲ್ ಕುಮಾರ್ ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಮಧ್ಯರಾತ್ರಿ ಜಮೀನಿನಲ್ಲಿ ಹುಲ್ಲು ಕೊಯ್ಯುವ ವಿಚಾರವಾಗಿ ಗಲಾಟೆ ನಡೆದಿದೆ. ಈ ಮೂವರಿಂದ ಏಕಾಏಕಿ ರಂಜಿತ್‌ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ.

ದುಷ್ಕರ್ಮಿಗಳು ಮನಸೋ ಇಚ್ಛೆ ಹೊಡೆದು ಕೊಂದು ಬಳಿಕ ರಂಜಿತ್‌ ಮೃತದೇಹವನ್ನು ರಸ್ತೆ ಬದಿಗೆ ಎಳೆದು ಹಾಕಿದ್ದಾರೆ. ಕೊಲೆ ಬಳಿಕ ಆರೋಪಿಗಳು ತಡರಾತ್ರಿಯೇ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಗೆ ಶರಣಾಗಿದ್ದಾರೆ.

ವಿಚಾರಣೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Bengaluru News : ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಚಲಾಕಿ ಕಳ್ಳ ಅರೆಸ್ಟ್‌

ಟೋಲ್‌ ಸಿಬ್ಬಂದಿಗೆ ಲಾಂಗ್‌ ತೋರಿಸಿದ ಲಾರಿ ಚಾಲಕ

ಪಾರ್ಕಿಂಗ್ ಇಲ್ಲ ಮುಂದೆ ಹೋಗಿ ಅಂದಿದ್ದಕ್ಕೆ ಲಾರಿ ಚಾಲಕನೊಬ್ಬ ಟೋಲ್‌ ಸಿಬ್ಬಂದಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಪಾರ್ಕಿಂಗ್‌ಗೆ ಬೇರೆ ವಿಶ್ರಾಂತಿ ಸ್ಥಳವಿದ್ದರೂ ಟೋಲ್‌ನ ಬಳಿಯೇ ಲಾರಿಗಳ ಪಾರ್ಕಿಂಗ್ ಮಾಡುತ್ತಿದ್ದರು. ಅದನ್ನು ಕೇಳೊಕೆ ಹೋದರೆ ಉತ್ತರಭಾರತದ ಲಾರಿ ಡ್ರೈವರ್‌ನಿಂದ ಟೋಲ್ ಸಿಬ್ಬಂದಿಗೆ ಲಾಂಗ್ ಹಿಡಿದು ಬೆದರಿಕೆ ಹಾಕಿದ್ದಾನೆ. ದೇವನಹಳ್ಳಿ ತಾಲೂಕಿನ ನಲ್ಲೂರು ಟೋಲ್ ಬಳಿ ಘಟನೆ ನಡೆದಿದೆ.

ಲಾಂಗ್ ತೋರಿಸಿದ್ದಕ್ಕೆ ಸಿಬ್ಬಂದಿ ಲಾರಿ ಏರಿ ಮಾತನಾಡುವ ವೇಳೆ ಏಕಾ ಏಕಿ ಸಿಬ್ಬಂದಿಯನ್ನೆ ಚಾಲಕ ಲಾರಿಯಲ್ಲಿ ಎಳೆದೊಯ್ದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲವು ಲಾರಿ ಡ್ರೈವರ್‌ಗಳು ಮದ್ಯ ಸೇವಿಸಿ ಗಾಂಜಾ ಸೇವನೆ ಮಾಡಿ ಮಲಗುತ್ತಾರೆ ಎಂದು ಎಂದು ಟೋಲ್ ಸಿಬ್ಬಂದಿ ಆರೋಪಿಸಿದ್ದಾರೆ. ಕೇಳಲು ಹೋದರೆ ಕೆಲ ಚಾಲಕರು ಲಾಂಗ್ ತೋರಿಸಿ ರೌಡಿಸಂ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಸಿಬ್ಬಂದಿಯನ್ನು ಎಳೆದೊಯ್ದ ಲಾರಿ ಚಾಲಕನನ್ನು ತಡೆದು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ನಲ್ಲೂರು ಟೋಲ್ ಬಳಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Latest

Sexual Abuse : ಸಾಲ ತೀರಿಸಲಾಗದೆ ಅಪ್ರಾಪ್ತ ವಯಸ್ಸಿನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ತಾಯಿ!

Sexual Abuse: ಹೆಣ್ಣುಮಗುವನ್ನು ತಾಯಿಯಾದವಳು ಸಾಕಿ ಬೆಳೆಸುವಾಗ ಹೆಚ್ಚಿನ ಕಾಳಜಿ ವಹಿಸುತ್ತಾಳೆ. ಆದರೆ ಇಲ್ಲೊಬ್ಬಳು ತಾಯಿ ಮಾತ್ರ ಇದಕ್ಕೆ ತದ್ವಿರುದ್ಧರಾಗಿದ್ದಾಳೆ.ನೆರೆಮನೆಯವರಿಂದ ಪಡೆದ 40,000 ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ಮಗಳನ್ನು ಅವರ ಮನೆಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಬಲವಂತಪಡಿಸಿದ್ದಾಳೆ. ತಾಯಿಯ ಈ ಕೃತ್ಯವನ್ನು ಆರೋಪಿಸಿ 16 ವರ್ಷದ ಬಾಲಕಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

VISTARANEWS.COM


on

Sexual Abuse
Koo


ಚೆನ್ನೈ: ತಾಯಿ ಎಂದರೆ ದೇವರಿಗೆ ಸಮಾನದವಳು ಎಂದು ಎಲ್ಲಾ ಮಕ್ಕಳು ಭಾವಿಸುತ್ತಾರೆ. ತಾಯಿ ತನಗೆ ಎಷ್ಟೇ ಕಷ್ಟ ಬಂದರೂ ಅದನ್ನು ಸಹಿಸಿಕೊಂಡ ಮಕ್ಕಳ ಒಳಿತಿಗಾಗಿ ಶ್ರಮಿಸುತ್ತಾಳೆ. ಅದರಲ್ಲೂ ಕಾಮುಕರು ತನ್ನ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಿದರೆ ಅವರನ್ನು ಕೊಲೆ ಮಾಡಿಯಾದರೂ ತನ್ನ ಮಗಳ ಮಾನ ಕಾಪಾಡುತ್ತಾಳೆ. ಅಂತಹದರಲ್ಲಿ ಇಲ್ಲೊಬ್ಬ ತಾಯಿ ತನ್ನ ಸಾಲವನ್ನು ತೀರಿಸಲು ತಾನು ಹೆತ್ತ ಮಗಳನ್ನೇ ಕಾಮುಕರ ಬಾಯಿಗೆ ತಳ್ಳಲು ಮುಂದಾಗಿದ್ದಾಳೆ. ಆಕೆಗೆ ಲೈಂಗಿಕ ಕ್ರಿಯೆಯಲ್ಲಿ(Sexual Abuse) ತೊಡಗುವಂತೆ ಒತ್ತಾಯಿಸಿದ್ದಾಳೆ.

ನೆರೆಮನೆಯವರಿಂದ ಪಡೆದ 40,000 ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ತಾಯಿ ತನ್ನನ್ನು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಬಲವಂತಪಡಿಸಿದ್ದಾಳೆ ಎಂದು ಆರೋಪಿಸಿ 16 ವರ್ಷದ ಬಾಲಕಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತಾಯಿ ತಾನು ಮಾಡಿದ ಸಾಲವನ್ನು ತೀರಿಸಲು ತನ್ನ ಮಗಳನ್ನು ಶಾಲೆಗೂ ಕಳುಹಿಸಿದೆ ಸಾಲ ನೀಡಿದವರ ಮನೆಯಲ್ಲಿ ಮನೆಗೆಲಸ ಮಾಡಲು ನೇಮಿಸಿದ್ದಾಳೆ. ಆದರೆ ಸಾಲ ನೀಡಿದವರು ಅವಳನ್ನು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿದ್ದಾರೆ. ಆಗ ಬಾಲಕಿ ತನ್ನ ತಾಯಿಗೆ ಪರಿಸ್ಥಿತಿಯನ್ನು ತಿಳಿಸಿದರೆ ಆಕೆ ಅವರ ಮನೆಗೆ ಮರಳಿ ಹೋಗಿ ಅವರು ಹೇಳಿದಂತೆ ಕೇಳು ಎಂದು ತಿಳಿಸಿದ್ದಾಳೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ವರದಿ ಪ್ರಕಾರ ಬಾಲಕಿಯ ತಾಯಿ ಹಲವು ವರ್ಷಗಳ ಹಿಂದೆ ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಮುತ್ತುಲಕ್ಷ್ಮಿಯಿಂದ ಸಾಲ ಪಡೆದಿದ್ದರು. ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ, ಅವರು ತಮ್ಮ ಮಗಳನ್ನು ಮುತ್ತುಲಕ್ಷ್ಮಿಯ ಮನೆಯಲ್ಲಿ ಮನೆಗೆಲಸ ಮಾಡಲು ಕಳುಹಿಸಿದರು. ಕಾಲಾನಂತರದಲ್ಲಿ, ಮುತ್ತುಲಕ್ಷ್ಮಿ ಅಪ್ರಾಪ್ತ ಬಾಲಕಿಯನ್ನು ಲೈಂಗಿಕ ವೃತ್ತಿಯಲ್ಲಿ ತೊಡಗುವಂತೆ ಒತ್ತಾಯಿಸಿದಳು ಎಂದು ವರದಿಯಾಗಿದೆ. ಆದರೆ ಬಾಲಕಿ ಅದನ್ನು ವಿರೋಧಿಸಿದಳು ಮತ್ತು ಮುತ್ತುಲಕ್ಷ್ಮಿಯೊಂದಿಗೆ ಜಗಳವಾಡಿ ಅಲ್ಲಿಂದ ಓಡಿಹೋದಳು. ಕೊನೆಗೆ ಆಕೆ ತನ್ನ ತಾಯಿಯ ಬಳಿಗೆ ಬಂದಿದ್ದಾಳೆ. ಆದರೆ ಆಕೆಯ ಅಲ್ಲಿನ ಪರಿಸ್ಥಿತಿಯ ಬಗ್ಗೆ ತಾಯಿಗೆ ಹೇಳಿದರೂ ಆಕೆಯ ತಾಯಿ ಮುತ್ತುಲಕ್ಷ್ಮಿಯ ಮನೆಗೆ ಹಿಂತಿರುಗುವಂತೆ ಒತ್ತಾಯಿಸಿದಳು. ಆಗ ಬಾಲಕಿ ಬೇರೆ ದಾರಿ ಕಾಣದೆ ಮತ್ತೆ ಮನೆ ಬಿಟ್ಟು ತನ್ನ ಗೆಳೆಯನೊಂದಿಗೆ ಹೋಗಿದ್ದಾಳೆ.

ಇದನ್ನೂ ಓದಿ: ತನ್ನ ಸ್ನೇಹಿತನ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಒತ್ತಡ; ಇವನೆಂಥ ಗಂಡ!

ಆದರೆ ಇಷ್ಟಕ್ಕೆ ಸುಮ್ಮನಾಗದ ಬಾಲಕಿಯ ತಾಯಿ ಫೋನ್ ಮಾಡಿ ಬಾಲಕಿಗೆ ಕಿರುಕುಳ ನೀಡಲು ಶುರುಮಾಡಿದ್ದಾಳೆ. ಇದರಿಂದ ಬೇಸತ್ತ ಬಾಲಕಿ ಎಂಕೆಬಿ ನಗರ ಆಲ್ ವುಮೆನ್ ಪೊಲೀಸ್ ಠಾಣೆಯಲ್ಲಿ (ಎಡಬ್ಲ್ಯೂಪಿಎಸ್) ದೂರು ದಾಖಲಿಸಿದ್ದಾಳೆ. ಆಕೆಯ ದೂರಿನ ನಂತರ, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮುತ್ತುಲಕ್ಷ್ಮಿ, ಆಕೆಯ ಪತಿ ನಿಶಾಂತ್, ಅವರ ಸಂಬಂಧಿಕರಾದ ಅಜಿತ್ (22), ಸಂಜಯ್ (22) ಮತ್ತು ಮಗೇಶ್ವರನ್ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಗಿದೆ. ಎಲ್ಲಾ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Continue Reading

ಬೆಂಗಳೂರು

Bengaluru News : ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಚಲಾಕಿ ಕಳ್ಳ ಅರೆಸ್ಟ್‌

Bengaluru News : ಲಾಕ್ ಅಪ್ ಅಲ್ಲಿ ಇರುವ ಆರೋಪಿ ಬಗ್ಗೆ ಮತ್ತು ಕೇಸ್‌ನ ಪೂರ್ವಪರ ತಿಳಿದುಕೊಳ್ಳುತ್ತಿದ್ದ ಚಾಲಕಿ ಚೋರನೊಬ್ಬ ಪೊಲೀಸರನ್ನೇ ಹಿಂಡಿ ಹಿಪ್ಪೆ ಮಾಡುತ್ತಿದ್ದ. ಪೊಲೀಸರಿಗೆ ಯಾಮಾರಿಸಿ ನಾಪತ್ತೆ ಆಗಿದ್ದವನು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ.

VISTARANEWS.COM


on

By

Bengaluru News
Koo

ಬೆಂಗಳೂರು: ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಚಲಾಕಿ ಚೋರನಾ ಬಂಧನವಾಗಿದೆ. ನಗರದ ಪೂರ್ವ ವಿಭಾಗದ (Bengaluru News) ಹಲವು ಪೊಲೀಸರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪಿ ಸೈಯದ್ ಸರ್ಫರಾಜ್ ಅಹಮದ್‌ನನ್ನು ಬಂಧಿಸಿದ್ದಾರೆ.

ಪ್ರತಿ ಪೊಲೀಸ್ ಠಾಣೆಗೆ ಹೋಗುತ್ತಿದ್ದ ಈ ಅಸಾಮಿ ಠಾಣೆಯ ಸಿಬ್ಬಂದಿ, ಅಧಿಕಾರಿಗಳ ಬಳಿ ಪುಸಲಾಯಿಸುತ್ತಿದ್ದ. ಹೀಗೆ ಠಾಣೆಗೆ ಹೋದಾಗ ಸೆಲ್‌ವೊಳಗೆ ಇರುವ ಆರೋಪಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದ. ಸೆಲ್ ಒಳಗಿನ ಆರೋಪಿಗಳನ್ನು ಮಾತಾಡಿಸುತ್ತಾ, ಪರಿಚಯ ಮಾಡಿಕೊಂಡು ವಿಶ್ವಾಸ ಗಳಿಸುತ್ತಿದ್ದ.

ಲಾಕ್ ಅಪ್ ಅಲ್ಲಿ ಇರುವ ಆರೋಪಿ ಬಗ್ಗೆ ಮತ್ತು ಕೇಸ್‌ನ ಪೂರ್ವಪರ ತಿಳಿದುಕೊಳ್ಳುತ್ತಿದ್ದ. ಅಷ್ಟು ಮಾಹಿತಿ ಸಿಕ್ಕಿದ್ದರೆ ಸಾಕು, ಚಾಲಕಿ ಚೋರ ಪೊಲೀಸರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದ. ಯಾಕೆಂದರೆ ನೇರವಾಗಿ ರಾಜ್ಯ ಮಾನವ ಹುಕ್ಕಗಳ ಆಯೋಗಕ್ಕೆ ದೂರು ಕೊಡುತ್ತಿದ್ದ.

ಕಾನೂನು‌ ಬಾಹಿರವಾಗಿ ಪೊಲೀಸರ ಅಭಿರಕ್ಷೆಯಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿ ಪೊಲೀಸರ ವಿರುದ್ಧವೇ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುತ್ತಿದ್ದ. ಸೈಯದ್ ಸರ್ಫರಾಜ್ ಅಹಮದ್ ಎಂಬಾತ ಸುಳ್ಳು ದೂರು ದಾಖಲು ಮಾಡಿ ಬಂಧಿಯಾದವನು. ಜೈಲುಪಾಲಾದ ಆರೋಪಿಗಳಿಗೂ ಈ ಸೈಯದ್‌ಗೂ ಯಾವುದೇ ಸಂಬಂಧ ಇಲ್ಲ. ಹಣ ಸುಲಿಗೆ ಮಾಡುವ ಸಲುವಾಗಿ ಮಾನವ ಹಕ್ಕುಗಳಿಗೆ ದೂರು ಕೊಡುತ್ತಿದ್ದ. ಬಳಿಕ ದೂರು ಹಿಂಪಡೆಯುವ ಸಲುವಾಗಿ ಪೊಲೀಸರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ.

ಇದನ್ನೂ ಓದಿ: Physical Abuse: ತಾಯಿಯ ಮೇಲೆಯೇ ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿದ ಪಾಪಿ ಮಗ; ಇವನ ವಿಕೃತಿಗೆ ಪತ್ನಿಯೂ ದೂರ

ಹೀಗೆ ಶಿವಾಜಿನಗರ ಪೊಲೀಸ್ ಇನ್‌ಸ್ಪೆಕ್ಟರ್‌ ವಿರುದ್ಧ ಈ ಸೈಯದ್‌ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದ. ಕ್ರೈಂ ನಂಬರ್ 82ಗೆ ಸಂಬಂಧಿಸಿದ ಹಾಗೆ ಓರ್ವ ಆರೋಪಿಯ ಬಂಧನವಾಗಿತ್ತು. ಬಂಧನ ಮಾಡಿದ್ದ ಪೊಲೀಸರ ವಿರುದ್ಧ ದೂರು ನೀಡಿದ್ದ. ಬಳಿಕ ಸೈಯದ್ ಸರ್ಪರಾಜ್ ಶಿವಾಜಿನಗರ ಪೊಲೀಸ್ ಇನ್‌ಸ್ಪೆಕ್ಟರ್‌ಗೆ 50 ಸಾವಿರ ರೂ.ಗೆ ಡಿಮ್ಯಾಂಡ್ ಇಟ್ಟಿದ್ದ.

ಬಳಿಕ ನೆರವು ಪೊಲೀಸ್ ಚೌಕಿ ಬಳಿ 25 ಸಾವಿರ ಹಣ ಪಡೆದು ಎಸ್ಕೇಪ್ ಆಗಿದ್ದ. ಶಿವಾಜಿನಗರ ಪೊಲೀಸರು ಹಣ ಕೊಡುವ ನೆಪದಲ್ಲಿ ಬಂಧನಕ್ಕೆ ಮುಂದಾಗಿದ್ದರು. ಆದರೆ ಪೊಲೀಸರಿಗೆ ಯಾಮಾರಿಸಿ ಕಾಲ್ಕಿತ್ತಿದ್ದ. ಇದೀಗ ಬಂಧಿತ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಈ ಸೈಯದ್‌ ಸುಮಾರು 30ಕ್ಕೂ ಅಧಿಕ ಕಡೆ ಪೊಲೀಸರಿಗೆ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಹಲವು ಪೊಲೀಸರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ಶಿವಾಜಿನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Self Harming: ಅಪಾರ್ಟ್‌ಮೆಂಟ್‌ನ ಬಾಲ್ಕಿನಿಯಲ್ಲಿ ನೇಣು ಬಿಗಿದುಕೊಂಡ ಅಪರಿಚಿತ ಮಹಿಳೆ

Self Harming : ಅಪರಿಚಿತ ಮಹಿಳೆಯೊಬ್ಬಳು ಅಪಾರ್ಟ್‌ಮೆಂಟ್‌ನ ಬಾಲ್ಕಿನಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

VISTARANEWS.COM


on

By

Self Harming
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೇಣು ಬಿಗಿದುಕೊಂಡು (Self Harming) ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ಮಾರ್ಗೊಸಾ ರಸ್ತೆಯ ಸಾಯಿ ರೆಸಿಡೆನ್ಸಿ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದೆ.

ಸುಮಾರು 45 ವರ್ಷದ ಮಹಿಳೆ ಅಪಾರ್ಟ್ಮೆಂಟ್‌ನ ಬಾಲ್ಕನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಲ್ಲೇಶ್ವರ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಮಹಿಳೆ ಯಾರು ಎಂಬುದು ಗೊತ್ತಿಲ್ಲ, ಬೆಳಗ್ಗೆ 7.30ಕ್ಕೆ ನೋಡಿದಾಗ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಕೂಡಲೇ ನಾವು ಪೊಲೀಸರಿಗೆ ಕಾಲ್ ಮಾಡಿದ್ದವಿ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಹಿಳೆ ಫೋಟೊವನ್ನು ತೆಗೆದುಕೊಂಡಿದ್ದಾರೆ. 6.15ಕ್ಕೆ ಮೆಜೆಸ್ಟಿಕ್‌ನಿಂದ ಬಸ್ ಮೂಲಕ ಇಲ್ಲಿಗೆ ಬಂದಿದ್ದಾರೆ. ಒಂದು ಬ್ಯಾಗ್, ಬಸ್ ಟಿಕೆಟ್ ಇತ್ತು. ಇನ್ನೂ ನವರಂಗ್ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಬಂದಿದ್ದಾರೆ. ಸದ್ಯ ಪೊಲೀಸರು ಬಂದು ತನಿಖೆ ನಡೆಸುತ್ತಿದ್ದಾರೆ. ಯಾರು ಏನು ಎನ್ನುವುದು ತನಿಖೆ ನಂತರ ತಿಳಿಯಲಿದೆ. ನಮ್ಮ ಅಪಾರ್ಟ್ಮೆಂಟ್‌ಗೆ ಯಾಕೆ ಬಂದಿದ್ದರೂ ಎಂದು ಗೊತ್ತಿಲ್ಲ ಎಂದು ಅಪಾರ್ಟ್ಮೆಂಟ್ ನಿವಾಸಿ ಎನ್ ಕೆ ರಾವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Sheikh Hasina : ಶೇಖ್ ಹಸೀನಾ ಸೀರೆಗಳ ಜತೆ ಬ್ರಾಗಳನ್ನೂ ಬಿಡದೆ ದೋಚಿದ ಬಾಂಗ್ಲಾ ಜನ!

ಕೊಲೆ ಶಂಕೆ

ಇನ್ನೂ ಮಹಿಳೆ ನವರಂಗ್ ಚಿತ್ರಮಂದಿರಲ್ಲಿ ರಾಯನ್ ಸಿನಿಮಾ ನೋಡಿ ಬಂದಿದ್ದಾರೆ. ಎರಡು ಸಿನಿಮಾ ಟಿಕೆಟ್ ಪೊಲೀಸರಿಗೆ ಲಭ್ಯವಾಗಿದೆ. ಸದ್ಯ ಮಹಿಳೆಯ ಜತೆ ಮತ್ತೊಬ್ಬ ವ್ಯಕ್ತಿ ಇರುವುದು ಖಚಿತವಾಗಿದೆ. ಹೀಗಾಗಿ ಇದು ಕೊಲೆ ಇರಬಹುದಾ ಎಂಬ ಶಂಕೆಯೂ ಇದೆ. ಮಹಿಳೆಯ ಯಾವುದೇ ಗುರುತು ಪತ್ತೆಗೆ ಬೇಕಾದ ಸಾಕ್ಷಿಗಳಿಲ್ಲ. ಮೊಬೈಲ್ ಸೇರಿ ಯಾವುದೇ ಕ್ಲೂ ಇಲ್ಲ. ಹೀಗಾಗಿ ಸುತ್ತಮುತ್ತಲ್ಲ ಸಿಸಿಟಿವಿ ಪರಿಶೀಲನೆಗೆ ಮುಂದಾಗಿದ್ದಾರೆ.

ಸಾಯಿ ರೆಸಿಡೆನ್ಸಿಯಲ್ಲಿ ಅಪರಿಚಿತ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ನೈಟಿಯ ಜೇಬಿನಲ್ಲಿ ಬಸ್ ಟಿಕೆಟ್ ಮತ್ತು ಸಿನಿಮಾ ಟಿಕೆಟ್ ಪತ್ತೆಯಾಗಿದೆ. ನವರಂಗ್ ಥಿಯೇಟರ್‌ನಲ್ಲಿ ನಿನ್ನೆ ಸೋಮವಾರ ರಾಯನ್ ಸಿನಿಮಾ ನೋಡಿದ್ದಾರೆ. ಇಂದು ಮಂಗಳವಾರ ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂಗೆ ಬಿಎಂಟಿಸಿ ಬಸ್‌ನಲ್ಲಿ ಬಂದಿದ್ದಾರೆ. ಬೆಳಿಗ್ಗೆ 7:20ಕ್ಕೆ ಅಪಾರ್ಟ್ಮೆಂಟ್ ಬಳಿ ಬಂದಿದ್ದ ಮಹಿಳೆ‌ ನೇಣು ಹಾಕಿಕೊಳ್ಳಲು ಹೊಸ ಹಗ್ಗ ಖರೀದಿ ಮಾಡಿ ತಂದಿದ್ದಾರೆ. ಬಿಲ್ಡಿಂಗ್‌ನಲ್ಲಿ ಸಿಸಿ ಕ್ಯಾಮೆರಾ ಮತ್ತು ಸೆಕ್ಯೂರಿಟಿ ಇಲ್ಲದನ್ನು ಗಮನಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕೆಸಿ ಜನರಲ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಹಿಳೆ ಯಾರು, ಯಾರ ಜತೆಗೆ ಈ ಅಪಾರ್ಟ್‌ಮೆಂಟ್‌ಗೆ ಬಂದಿದ್ದಾರೆ ಎಂಬುದರ ಕುರಿತಾಗಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Muhammad Yunus
ಪ್ರಮುಖ ಸುದ್ದಿ14 mins ago

Muhammad Yunus : ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್​ ಬಾಂಗ್ಲಾ ಮಧ್ಯಂತರ ಸರ್ಕಾರದ ಸಲಹೆಗಾರ

murder case
ರಾಮನಗರ20 mins ago

Murder case : ರಾಮನಗರದಲ್ಲಿ ಸಂಬಂಧಿಕರಿಂದಲೇ ಯುವಕನ ಬರ್ಬರ ಹತ್ಯೆ

Gold Rate Today
ಚಿನ್ನದ ದರ43 mins ago

Gold Rate Today: ಕೊನೆಗೂ ಇಳಿಯಿತು ಬಂಗಾರದ ದರ; ಇಂದು ಚಿನ್ನ ಇಷ್ಟು ಅಗ್ಗ

Sexual Abuse
Latest56 mins ago

Sexual Abuse : ಸಾಲ ತೀರಿಸಲಾಗದೆ ಅಪ್ರಾಪ್ತ ವಯಸ್ಸಿನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ತಾಯಿ!

Dinesh Karthik
ಪ್ರಮುಖ ಸುದ್ದಿ1 hour ago

Dinesh Karthik : ದಕ್ಷಿಣ ಆಫ್ರಿಕಾದ ಲೀಗ್​ನಲ್ಲಿ ಪಾರ್ಲ್​ ರಾಯಲ್ಸ್​ ತಂಡ ಸೇರಿದ ದಿನೇಶ್ ಕಾರ್ತಿಕ್​

actor yash 1
ಸಿನಿಮಾ1 hour ago

Actor Yash: ಧರ್ಮಸ್ಥಳದಲ್ಲಿ ರಾಕಿಂಗ್ ಸ್ಟಾರ್ ಯಶ್, ಟಾಕ್ಸಿಕ್‌ ಶೂಟಿಂಗ್‌ಗೂ ಮುನ್ನ ಟೆಂಪಲ್‌ ರನ್

Bengaluru News
ಬೆಂಗಳೂರು1 hour ago

Bengaluru News : ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಚಲಾಕಿ ಕಳ್ಳ ಅರೆಸ್ಟ್‌

Wayanad Landslide
ದೇಶ1 hour ago

Wayanad Landslide: ವಯನಾಡು ಭೂಕುಸಿತದಲ್ಲಿ ಮೃತರ ಸಂಖ್ಯೆ 402: ಸರ್ವಧರ್ಮ ಪ್ರಾರ್ಥನೆ ಮೂಲಕ ಸಾಮೂಹಿಕ ಶವ ಸಂಸ್ಕಾರ

NEET PG
ಪ್ರಮುಖ ಸುದ್ದಿ2 hours ago

NEET PG : ನೀಟ್​ ಪಿಜಿ ಪರೀಕ್ಷೆಯ ಗೌಪ್ಯ ಮಾಹಿತಿಗಳು ಸೋರಿಕೆ, ಅಭ್ಯರ್ಥಿಗಳಿಗೆ ಆತಂಕ

Self Harming
ಬೆಂಗಳೂರು2 hours ago

Self Harming: ಅಪಾರ್ಟ್‌ಮೆಂಟ್‌ನ ಬಾಲ್ಕಿನಿಯಲ್ಲಿ ನೇಣು ಬಿಗಿದುಕೊಂಡ ಅಪರಿಚಿತ ಮಹಿಳೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ7 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌