Student Abuse: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ! - Vistara News

Latest

Student Abuse: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

Student Abuse: ತರಗತಿಯಲ್ಲಿ ಮೊಬೈಲ್ ಪೋನ್ ರಿಂಗ್ ಆಗಿದ್ದಕ್ಕೆ ಅನುಮಾನಗೊಂಡ ಶಿಕ್ಷಕಿ ಜಯಾ ಪನ್ವಾರ್ 5 ವಿದ್ಯಾರ್ಥಿಗಳನ್ನು ಶೌಚಾಲಯಕ್ಕೆ ಕರೆದೊಯ್ದು ಬಟ್ಟೆ ಬಿಚ್ಚುವಂತೆ ಹೇಳಿದ್ದಾರೆ. ಅಲ್ಲದೇ ಈ ವೇಳೆ ವಿರೋಧಿಸಿದ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅವರ ಒಳ ಉಡುಪುಗಳನ್ನು ಸಹ ತೆಗೆದು ಹಾಕಲು ಹೇಳಿದ್ದಾರೆ. ಒಬ್ಬ ವಿದ್ಯಾರ್ಥಿನಿಯೊಬ್ಬರು ಋತುಸ್ರಾವದ ಸಮಸ್ಯೆ ಇದ್ದ ಕಾರಣ ತನ್ನ ಬಟ್ಟೆಗಳನ್ನು ತೆಗೆಯಲು ನಿರಾಕರಿಸಿದಳು, ಆದರೆ ಶಿಕ್ಷಕಿ ಅವಳ ಮಾತಿಗೆ ಕಿವಿಗೊಡದೆ ಅವಳ ಪ್ಯಾಡ್ ಅನ್ನು ಸಹ ಪರಿಶೀಲಿಸಿದ್ದಾರಂತೆ.

VISTARANEWS.COM


on

Student Abuse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಕಾಲೇಜಿನಲ್ಲಿ ಮೊಬೈಲ್ ಬಳಸುವಂತಿಲ್ಲ ಎಂಬ ನಿಯಮವಿದ್ದರೂ (Student Abuse) ಕೂಡ ಕೆಲವೊಂದು ವಿದ್ಯಾರ್ಥಿಗಳು ಮೊಬೈಲ್ ಪೋನ್ ಅನ್ನು ಶಿಕ್ಷಕರ ಕಣ್ಣು ತಪ್ಪಿಸಿ ಬಳಸುತ್ತಾರೆ. ವಿದ್ಯಾರ್ಥಿಗಳ ಈ ತಪ್ಪಿನಿಂದಾಗಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶಿಕ್ಷಕಿ(School Teacher)ಯೊಬ್ಬರು ಮೊಬೈಲ್ ಫೋನ್ ಹುಡುಕಲು ಹತ್ತನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿ ಟೀಕೆಗೆ ಒಳಗಾಗಿದ್ದಾರೆ. ಈ ಬಗ್ಗೆ ತನಿಖೆ ನಡೆದಿದ್ದು, ಇದು ಶಿಕ್ಷಕಿಯ ವರ್ಗಾವಣೆಗೆ ಕಾರಣವಾಗಿದೆ.

ವರದಿ ಪ್ರಕಾರ, ಈ ಘಟನೆ ಸರ್ಕಾರಿ ಶಾರದಾ ಬಾಲಕಿಯರ ಹೈಯರ್ ಸೆಕೆಂಡರಿ ಸ್ಕೂಲ್‍ನಲ್ಲಿ ಶುಕ್ರವಾರ ನಡೆದಿದ್ದು, ಅಲ್ಲಿನ ಶಿಕ್ಷಕಿ ಜಯಾ ಪನ್ವಾರ್ ತರಗತಿಯಲ್ಲಿ ಮೊಬೈಲ್ ಪೋನ್ ರಿಂಗ್ ಆಗಿದ್ದಕ್ಕೆ ಅನುಮಾನಗೊಂಡ 5 ವಿದ್ಯಾರ್ಥಿಗಳನ್ನು ಶೌಚಾಲಯಕ್ಕೆ ಕರೆದೊಯ್ದು ಬಟ್ಟೆ ಬಿಚ್ಚುವಂತೆ ಹೇಳಿದ್ದಾರೆ. ಅಲ್ಲದೇ ಈ ವೇಳೆ ವಿರೋಧಿಸಿದ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪೋಷಕರು ಮಲ್ಹಾರ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿನಿಯರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ವಿದ್ಯಾರ್ಥಿಗಳಿಗೆ ತಮ್ಮ ಒಳ ಉಡುಪುಗಳನ್ನು ಸಹ ತೆಗೆದು ಹಾಕಲು ಹೇಳಿದ್ದಾರೆ. ಒಬ್ಬ ವಿದ್ಯಾರ್ಥಿನಿ ಋತುಸ್ರಾವದ ಸಮಸ್ಯೆ ಇದ್ದ ಕಾರಣ ತನ್ನ ಬಟ್ಟೆಗಳನ್ನು ತೆಗೆಯಲು ನಿರಾಕರಿಸಿದಳು. ಆದರೆ ಶಿಕ್ಷಕರು ಅವಳ ಮಾತಿಗೆ ಕಿವಿಗೊಡದೆ ಅವಳ ಪ್ಯಾಡ್ ಅನ್ನು ಸಹ ತೆಗೆದು ಪರಿಶೀಲಿಸಿದರು ಎಂದು ತಿಳಿಸಿದ್ದಾರೆ.

“ನಾನು ನನ್ನ ಋತುಚಕ್ರದ ಸಮಯದಲ್ಲಿ ನನ್ನ ಬಟ್ಟೆಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದು ಶಿಕ್ಷಕಿ ಜಯಾ ಪನ್ವಾರ್ ಮೇಡಂಗೆ ಹಲವಾರು ಬಾರಿ ಹೇಳಿದೆ. ಆದರೆ ನಾನು ನನ್ನ ಸಲ್ವಾರ್ ತೆಗೆಯದಿದ್ದರೆ, ತಾನೇ ಅದನ್ನು ತೆಗೆಯುತ್ತೇನೆ ಎಂದು ನನಗೆ ಬೆದರಿಕೆ ಹಾಕಿದರು. ಇದನ್ನು ಹೇಳುತ್ತಿರುವಾಗ, ಮೇಡಮ್ ನನ್ನ ಸಲ್ವಾರ್ ಅನ್ನು ಕೆಳಕ್ಕೆ ಎಳೆದರು. ಜಯಾ ಮೇಡಂ ನನ್ನ ಒಳ ಉಡುಪುಗಳನ್ನು ತೆಗೆಯುವಂತೆ ಮಾಡಿದರು. ಮೇಡಂ ನಾನು ನನ್ನ ಋತುಚಕ್ರದಲ್ಲಿದ್ದೇನೆ ಎಂದು ನಾನು ಅವರಿಗೆ ಪರಿಪರಿಯಾಗಿ ಹೇಳಿದೆ. ಆದರೆ ಮೇಡಮ್ ನನ್ನನ್ನು ಪರೀಕ್ಷಿಸಲು ನನ್ನ ಪ್ಯಾಡ್ ತೆಗೆಯುವಂತೆ ಹೇಳಿದರು ಎಂದು ಸಂತ್ರಸ್ತ ವಿದ್ಯಾರ್ಥಿನಿಯೊಬ್ಬಳು ದುಃಖದಿಂದ ಹೇಳಿದ್ದಾಳೆ.

ಇದನ್ನೂ ಓದಿ: ಮಹಿಳೆಯರು ಸಿಂಧೂರ, ಮಂಗಳಸೂತ್ರ ಧರಿಸಬಾರದು ಎಂದ ಶಿಕ್ಷಕಿ ಅಮಾನತು!

ಶುಕ್ರವಾರ ನಡೆದ ಘಟನೆಯ ನಂತರ, ಆಡಳಿತ ಮಂಡಳಿಯು ತನಿಖೆಯನ್ನು ಪ್ರಾರಂಭಿಸಿತು ಮತ್ತು ಆರೋಪಿ ಶಿಕ್ಷಕಿಯನ್ನು ಶಾಲೆಯಿಂದ ವರ್ಗಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಕಿಯ ವಿರುದ್ಧದ ಪೊಲೀಸ್ ದೂರಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: 11 ವರ್ಷಗಳ ಹಿಂದೆ ಸತ್ತಿದ್ದ ಗಂಡ ಕನಸಲ್ಲಿ ಬಂದು ʼಸೇರಿದʼ; ಹಾಗಾಗಿ ಮಗು ಹುಟ್ಟಿತು ಅಂತಿದ್ದಾಳೆ ಈ ಹೆಂಗಸು!

Viral Video: ಮಹಿಳೆಯೊಬ್ಬಳು 11 ವರ್ಷಗಳ ಹಿಂದೆ ಸತ್ತ ಪತಿ ಕನಸಿನಲ್ಲಿ ಬಂದು ತನ್ನ ಜೊತೆ ಸಂಸಾರ ಮಾಡಿ ತನ್ನನ್ನು ಗರ್ಭಿಣಿ ಮಾಡಿ ಮಗುವನ್ನು ನೀಡಿದ್ದಾನೆ ಎಂದು ಹೇಳುತ್ತಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈಕೆ ಹೇಳುವ ಕತೆ ದಿಗಿಲು ಹುಟ್ಟಿಸುತ್ತದೆ. 11 ವರ್ಷಗಳ ಹಿಂದೆ ಗಂಡ ಸತ್ತ ಮೇಲೆ ಆತನಿಂದ ಮಗುವನ್ನು ಹೇಗೆ ಪಡೆದೆ ಎಂಬ ಪ್ರಶ್ನೆಗೆ ಆಕೆ ನೀಡಿರುವ ಉತ್ತರ ಬೆಚ್ಚಿ ಬೀಳಿಸುತ್ತದೆ. ಈ ವಿಡಿಯೊ ನೋಡಿ.

VISTARANEWS.COM


on

Viral Video
Koo


ದೆವ್ವದ ಜೊತೆ ಮದುವೆಯಾಗಿ ಸಂಸಾರ ಮಾಡುವಂತಹ ಹಾಗೂ ದೆವ್ವಗಳು ಬಂದು ಹುಡುಗಿಯನ್ನು ರೇಪ್ ಮಾಡುವಂತಹ ಘಟನೆಗಳನ್ನು ನಾವು ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ 11 ವರ್ಷಗಳ ಹಿಂದೆ ಸತ್ತ ಪತಿ ಕನಸಿನಲ್ಲಿ ಬಂದು ತನ್ನ ಜೊತೆ ಸಂಸಾರ ಮಾಡಿ ತನ್ನನ್ನು ಗರ್ಭಿಣಿ ಮಾಡಿ ಮಗುವನ್ನು ನೀಡಿದ್ದಾನೆ ಎಂದು ಹೇಳುತ್ತಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಗತಿ ಹೊಂದುತ್ತಿರುವ ಇಂದಿನ ವಿಜ್ಞಾನಯುಗಕ್ಕೆ ಈ ಘಟನೆ ಒಂದು ಸವಾಲು ಹಾಕಿದಂತಾಗಿದೆ. ಈ ವಿಡಿಯೊವನ್ನು ನೋಡುತ್ತಿರುವವರು ಒಮ್ಮೆ ತಲೆ ಹಿಡಿದುಕೊಂಡು ಯೋಚಿಸುವುದಂತೂ ಖಂಡಿತ. ಯಾಕೆಂದರೆ ಇದು ಮಾನವ ಜೀವನದಲ್ಲಿ ಅಸಾಧ್ಯವಾದುದ್ದಾಗಿದೆ.

ಈ ವಿಡಿಯೊದಲ್ಲಿ ಯೂಟ್ಯೂಬರ್ ಒಬ್ಬರು ಕೈಯಲ್ಲಿ ಹಸು ಕಂದನನ್ನು ಎತ್ತಕೊಂಡ ಮಹಿಳೆಯೊಬ್ಬರಿಗೆ ಪ್ರಶ್ನೆ ಕೇಳುತ್ತಿದ್ದಾರೆ. ಆಕೆಯ ಉತ್ತರ ಕ್ಷಣ ಕ್ಷಣಕ್ಕೂ ವಿಚಿತ್ರ ಎನಿಸುತ್ತದೆ. ಯಾಕೆಂದರೆ ಆಕೆ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗೂ ಆ ಮಗು ತನ್ನ ಗಂಡನಿಂದ ತನಗೆ ದೊರಕಿದೆ ಎಂದು ಹೇಳುತ್ತಾಳೆ. ಆದರೆ ಆಕೆ ತನ್ನ ಪತಿ 11 ವರ್ಷಗಳ ಹಿಂದೆಯೇ ಸತ್ತು ಹೋಗಿದ್ದಾರೆ ಎಂದು ಹೇಳಿದ್ದಾಳೆ.

ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತಿದೆ. ಹಾಗಾದ್ರೆ ಆಕೆಯ ಪತಿ 11 ವರ್ಷಗಳ ಹಿಂದೆ ಸತ್ತ ಮೇಲೆ ಆತನಿಂದ ಮಗುವನ್ನು ಹೇಗೆ ಪಡೆದಳು ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಅದಕ್ಕೆ ಉತ್ತರಿಸಿದ ಮಹಿಳೆ ತನ್ನ ಪತಿ ತನ್ನ ಕನಸಿನಲ್ಲಿ ಬಂದು ತನ್ನ ಜೊತೆ ಸಂಸಾರ ಮಾಡುತ್ತಿದ್ದನು. ಹಾಗಾಗಿ ಅವಳು ಗರ್ಭಿಣಿಯಾದಳು ಎಂದು ಹೇಳಿದ್ದಾಳೆ. ಮಹಿಳೆಯ ಈ ಉತ್ತರ ಕೇಳುಗರಲ್ಲಿ ಆಶ್ಚರ್ಯನ್ನುಂಟು ಮಾಡಿದೆ. ಮಹಿಳೆಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

ಮಹಿಳೆಯು ಒಂಬತ್ತು ತಿಂಗಳ ಗರ್ಭಧಾರಣೆಯ ನಂತರ ಮಗುವಿಗೆ ಜನ್ಮ ನೀಡುತ್ತಾಳೆ. ಅಂದರೆ ಮಹಿಳೆ ಸಾಮಾನ್ಯವಾಗಿ ಒಂಬತ್ತು ತಿಂಗಳವರೆಗೆ ಮಾತ್ರ ಗರ್ಭಧರಿಸಲು ಸಾಧ್ಯ. ಇದಕ್ಕೆ ಹೊರತಾಗಿ, ಕೆಲವು ಮಹಿಳೆಯರ ಗರ್ಭಧಾರಣೆಯ ಅವಧಿಯಲ್ಲಿ ವ್ಯತ್ಯಾಸವಾಗಿ ಒಂದು ಅಥವಾ ಎರಡು ವಾರಗಳವರೆಗೆ ಬದಲಾಗಬಹುದು. ಆದರೆ ಪತಿಯ ಮರಣದ 11 ವರ್ಷಗಳ ನಂತರ ಆತನ ಮಗುವಿಗೆ ಮಹಿಳೆ ಜನ್ಮ ನೀಡಿದ್ದು, ಅದೂ ಆತ ಕನಸಿನಲ್ಲಿ ಬಂದು ಆಕೆಯ ಜೊತೆ ಸಂಸಾರ ಮಾಡಿದ್ದು, ಮತ್ತು ಅದರಿಂದ ಅವಳು ಗರ್ಭಿಣಿಯಾದಳು ಎಂಬ ತರ್ಕ ಊಹೆಗೆ ನಿಲುಕದ್ದು! ಹಾಗಾಗಿ ಈ ವಿಡಿಯೊ ವಿಚಿತ್ರ ಕಾರಣಕ್ಕಾಗಿ ಭಾರಿ ಸದ್ದು ಮಾಡುತ್ತಿದೆ.

Continue Reading

Latest

Viral Video: ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

Viral Video: ರೀಲ್ಸ್ ಮಾಡುವ ಹುಚ್ಚು ಈಗ ಜನರಿಗೆ ಹೆಚ್ಚಾಗಿದೆ. ಸಾಮಾನ್ಯ ಜನರ ವಿಷಯ ಬಿಡಿ ಈ ಬಗ್ಗೆ ಜನರಿಗೆ ತಿಳಿ ಹೇಳಬೇಕಾಗಿದ್ದ ಪೊಲೀಸ್ ಅಧಿಕಾರಿಗೂ ಕೂಡ ರೀಲ್ಸ್ ಮಾಡುವ ಹುಚ್ಚು ಹಿಡಿದಿದೆ. ಇತ್ತೀಚೆಗೆ ಕರ್ತವ್ಯ ಪ್ರಜ್ಞೆಯನ್ನು ಮರೆತು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪ್ರೇಯಸಿಯ ಕೈಗೆ ಪಿಸ್ತೂಲ್ ಕೊಟ್ಟು ರೀಲ್ಸ್ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
Koo


ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಯುವ ಜನರಲ್ಲಿ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫೇಮಸ್ ಆಗಲು ಹಾಗೂ ಹೆಚ್ಚು ಫಾಲೋವರ್ಸ್‍ಗಳನ್ನು ಪಡೆಯಲು ಜನರು ಎಲ್ಲೆಂದರಲ್ಲಿ ಜೀವದ ಅಪಾಯವನ್ನು ಅರಿಯದೇ ರೀಲ್ಸ್ ಮಾಡಲು ಮುಂದಾಗುತ್ತಾರೆ. ಈಗಾಗಲೇ ಅನೇಕ ಜನರು ರೀಲ್ಸ್ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದಾರೆ ಹಾಗೇ ಎಷ್ಟೋ ಜನರು ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಅಲ್ಲದೇ ಇಂತಹ ಅಪಾಯಕಾರಿ ರೀಲ್ಸ್ ಮಾಡುವವರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟಾದರೂ ಜನರಿಗೆ ಇನ್ನೂ ರೀಲ್ಸ್ ಮಾಡುವ ಹುಚ್ಚು ಬಿಡಲಿಲ್ಲ. ಸಾಮಾನ್ಯ ಜನರ ವಿಷಯ ಬಿಡಿ ಈ ಬಗ್ಗೆ ಜನರಿಗೆ ತಿಳಿ ಹೇಳಬೇಕಾಗಿದ್ದ ಪೊಲೀಸ್ ಅಧಿಕಾರಿಗೂ ಕೂಡ ರೀಲ್ಸ್ ಮಾಡುವ ಹುಚ್ಚು ಹಿಡಿದಿದೆ. ಇತ್ತೀಚೆಗೆ ಕರ್ತವ್ಯ ಪ್ರಜ್ಞೆಯನ್ನು ಮರೆತು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪ್ರೇಯಸಿಯ ಕೈಗೆ ಪಿಸ್ತೂಲ್ ಕೊಟ್ಟು ರೀಲ್ಸ್ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video)ಆಗಿದೆ.‌

ವೈರಲ್ ಆದ ವಿಡಿಯೊದಲ್ಲಿ ಬೆಡ್ ರೂಂನಲ್ಲಿ ಅರೆ ನಗ್ನ ಸ್ಥಿತಿಯಲ್ಲಿ ಕುಳಿತಿದ್ದ ಗರ್ಲ್ ಫ್ರೆಂಡ್ ಕೈಗೆ ಪಿಸ್ತೂಲ್ ಕೊಟ್ಟು ಸಮವಸ್ತ್ರದಲ್ಲಿಯೇ ಪೊಲೀಸ್ ಅಧಿಕಾರಿ ರೀಲ್ಸ್ ಮಾಡಿದ್ದಾರೆ. ಇಬ್ಬರೂ ಜೊತೆಯಾಗಿ ಕುಳಿತು ಮೇರಾ ಬಲಂ ತಾನೆದಾ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಅಜಯ್ (ajayku68704718) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದು, ಅದಕ್ಕೆ “ಗೆಳತಿಯ ಕೈಗೆ ಪಿಸ್ತೂಲ್ ಕೊಟ್ಟು ರೀಲ್ಸ್ ವಿಡಿಯೊ ಮಾಡುತ್ತಾ ಕುಳಿತ ಪೊಲೀಸ್ ಅಧಿಕಾರಿ” ಎಂಬ ಶೀರ್ಷಿಕೆ ನೀಡಿದ್ದಾರೆ.

ಆಗಸ್ಟ್ 5ರಂದು ಹಂಚಿಕೊಳ್ಳಲಾದ ಈ ವಿಡಿಯೊ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಹಾಗೂ ಹಲವರು ಇದಕ್ಕೆ ಕಾಮೆಂಟ್ ಮಾಡದ್ದಾರೆ. ಒಬ್ಬ ಬಳಕೆದಾರರು ʼಛಿ… ಛೀ ನಾಚಿಕೆಗೇಡಿನ ಸಂಗತಿʼ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂಬ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ರಸ್ತೆಯಲ್ಲಿ ಚುಡಾಯಿಸಿದ ಪುಂಡನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ; ವಿಡಿಯೊ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಪಾಯಕಾರಿ ರೀಲ್ಸ್ ಗಳನ್ನು ಕಂಡು ಕೆಲವರು ಇಂತಹ ಅಪಾಯಕಾರಿ ರೀಲ್ಸ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರು. ಆದರೆ ಇಲ್ಲಿ ‘ಬೇಲಿಯೇ ಎದ್ದು ಹೊಲ ಮೇದಂತೆ’ ಎಂಬಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾದ ಅಧಿಕಾರಿಯೇ ಇಂತಹ ಘನ ಕಾರ್ಯದಲ್ಲಿ ತೊಡಗಿದ ಮೇಲೆ ಜನರು ಮನವಿ ಮಾಡುವುದಾದರೂ ಯಾರ ಬಳಿ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಮನೆಮಾಡಿದೆ.

Continue Reading

Latest

Viral News: ಚಹಾ ಮಾರಾಟದಿಂದ ಇವರಿಗೆ ಪ್ರತಿ ತಿಂಗಳು 2 ಲಕ್ಷ ರೂ. ಆದಾಯ!

Viral News: ಚಹಾ ಎಂದರೆ ಬಹಳ ಇಷ್ಟಪಡುವಂತಹ ಸ್ಥಳವಾದ ಮಹಾರಾಷ್ಟ್ರದ ಧಾರಾಶಿವ್‌ನ ಸ್ಥಳೀಯ ಚಹಾ ಮಾರಾಟಗಾರರೊಬ್ಬರು ತಮ್ಮ ವಿಶಿಷ್ಟ ವ್ಯವಹಾರದಿಂದಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ತೇರ್ ಗ್ರಾಮದ ನಿವಾಸಿ ಮಹಾದೇವ್ ನಾನಾ ಮಾಲಿ, ಚಹಾ ಮಾರಾಟಕ್ಕೆ ವಿಶಿಷ್ಟ ವಿಧಾನವನ್ನು ಬಳಸಿಕೊಂಡಿದ್ದಾರೆ. ಅದು ಹೆಚ್ಚು ಲಾಭದಾಯಕವೆಂದು ಸಾಬೀತುಪಡಿಸಿದ್ದಾರೆ. ಫೋನ್ ಮೂಲಕ ಆರ್ಡರ್‌ಗಳನ್ನು ತೆಗೆದುಕೊಂಡು ಚಹಾ ಪೂರೈಸುತ್ತ ಭಾರಿ ಲಾಭ ಗಳಿಸುತ್ತಿದ್ದಾರೆ.

VISTARANEWS.COM


on

Viral News
Koo


ಚಹಾ ಹೆಚ್ಚಿನವರಿಗೆ ಪ್ರಿಯವಾದ ಪಾನೀಯವಾಗಿದೆ. ಹೆಚ್ಚಿನ ಜನರು ತಮ್ಮ ದಿನವನ್ನು ಚಹಾ ಕುಡಿಯುವ ಮೂಲಕ ಪ್ರಾರಂಭಿಸುತ್ತಾರೆ. ಕೆಲವರು ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿದರೆ ಇಡೀ ದಿನ ಲವಲವಿಕೆಯಿಂದ ಕೆಲಸ ಮಾಡುತ್ತಾರೆ. ಇದೇ ಚಹಾವನ್ನು ಬಂಡವಾಳವಾಗಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಒಬ್ಬ ಚಹಾ ಮಾರಾಟಗಾರರೊಬ್ಬರು ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಒಂದು ಕಪ್ ಚಹಾಕ್ಕೆ 5-10 ರೂ. ಪಡೆದು ಅದು ಹೇಗೆ ಆತ ಲಕ್ಷಾಗಟ್ಟಲೆ ಸಂಪಾದಿಸುತ್ತಾನೆ ಎಂದು ನಿಮಗೆ ಕೇಳಿ ಆಶ್ಚರ್ಯವಾಗಬಹುದು. ಅದರ ಬಗ್ಗೆ ಮಾಹಿತಿ ಈಗ ವೈರಲ್‌ (Viral News) ಆಗಿದೆ.

ಚಹಾ ಎಂದರೆ ಬಹಳ ಇಷ್ಟಪಡುವಂತಹ ಸ್ಥಳವಾದ ಮಹಾರಾಷ್ಟ್ರದ ಧಾರಾಶಿವ್‌ನ ಸ್ಥಳೀಯ ಚಹಾ ಮಾರಾಟಗಾರರೊಬ್ಬರು ತಮ್ಮ ವಿಶಿಷ್ಟ ವ್ಯವಹಾರದಿಂದಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ತೇರ್ ಗ್ರಾಮದ ನಿವಾಸಿ ಮಹಾದೇವ್ ನಾನಾ ಮಾಲಿ ಅವರು ಚಹಾ ಮಾರಾಟಕ್ಕೆ ವಿಶಿಷ್ಟ ವಿಧಾನವನ್ನು ಬಳಸಿಕೊಂಡಿದ್ದಾರೆ. ಅದು ಹೆಚ್ಚು ಲಾಭದಾಯಕವೆಂದು ಸಾಬೀತುಪಡಿಸಿದ್ದಾರೆ. ಕೇವಲ ಮೂರನೇ ಕ್ಲಾಸ್‍ವರೆಗೆ ಓದಿದ್ದ ಮಹಾದೇವ್ ಮಾಲಿ ಕಳೆದ 20 ವರ್ಷಗಳಿಂದ ಚಹಾ ಮಾರಾಟ ಮಾಡುತ್ತಿದ್ದಾರೆ. ಫೋನ್ ಮೂಲಕ ಆರ್ಡರ್‌ಗಳನ್ನು ತೆಗೆದುಕೊಳ್ಳುವ ಹೊಸ ವಿಧಾನದ ಮೂಲಕ ಅವರ ಈ ಚಹಾ ಮಾರಾಟ ವ್ಯವಹಾರವು ತುಂಬಾ ಲಾಭದಾಯಕವಾಗಿ ನಡೆಯುತ್ತಿದೆ. ಬಿಸಿಲು ಮಳೆ ಎನ್ನದೇ ಮಾಲಿ ತಮಗೆ ಬಂದ ಆರ್ಡರ್ ಗಳನ್ನು ಸ್ವೀಕರಿಸಿ ಸಮಯಕ್ಕೆ ಸರಿಯಾಗಿ ಚಹಾವನ್ನು ತಲುಪಿಸುತ್ತಾರೆ.

ಈ ಪ್ರದೇಶದ ಸುಮಾರು 15,000 ಗ್ರಾಮಸ್ಥರ ಚಹಾ ಬೇಡಿಕೆಯನ್ನು ಪೂರೈಸಲು, ಮಾಲಿಗೆ ಪ್ರತಿದಿನ 50ರಿಂದ 60 ಲೀಟರ್ ಹಾಲು ಬೇಕಾಗುತ್ತದೆ. ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರ ಸಹಾಯದಿಂದ ಈ ಕೆಲಸ ಮಾಡುತ್ತಿದ್ದಾರೆ ಮತ್ತು 2ರಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಟೆರ್ ಮತ್ತು ನೆರೆಯ ಹಳ್ಳಿಗಳಿಗೆ ಸೇವೆ ಸಲ್ಲಿಸುತ್ತಾರೆ. ಪ್ರತಿ ಕಪ್ ಚಹಾದ ಬೆಲೆ ಕೇವಲ 5 ರೂ. ಮಾತ್ರ.

ಇದನ್ನೂ ಓದಿ: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

ಮಾಲಿಯು ಈ ವ್ಯವಹಾರದಲ್ಲಿ ಪ್ರತಿದಿನ 1,500ರಿಂದ 2,000 ಕಪ್ ಚಹಾದವರೆಗೆ ಮಾರಾಟ ಮಾಡುತ್ತಾರೆ. ಇದರಿಂದ ಅವರ ದಿನದ ಗಳಿಕೆ ಸುಮಾರು 7,000ರಿಂದ 10,000 ರೂ. ಆಗಿದೆ. ಈ ಆದಾಯದಿಂದ ಮಾಲಿ ಮತ್ತು ಅವರ ಕುಟುಂಬ ಹಣಕಾಸಿನ ಸಮಸ್ಯೆಯಿಲ್ಲದೇ ಸುಖಕರವಾದ ಜೀವನ ನಡೆಸುತ್ತಿದೆ. ಪ್ರತಿ ತಿಂಗಳು ಅವರು ಚಹಾ ಮಾರಾಟದಿಂದ ಸುಮಾರು 2 ಲಕ್ಷ ರೂ. ಗಳಿಸುತ್ತಾರೆ.

Continue Reading

ಸಿನಿಮಾ

OTT Releases: ಇಂಡಿಯನ್ 2, ಟರ್ಬೊ ಸೇರಿದಂತೆ ಹಲವು ಹೊಸ ಚಿತ್ರಗಳು ಈ ವಾರ ಒಟಿಟಿಯಲ್ಲಿ!

ಸಂಜಯ್ ದತ್, ರವೀನಾ ಟಂಡನ್ ಅಭಿನಯದ ಘುಡಚಡಿ, ಕಮಲ್ ಹಾಸನ್ ಅವರ ಇಂಡಿಯನ್ 2 ಸೇರಿದಂತೆ ಹಲವು ಹೊಸ ಚಿತ್ರಗಳು, ವೆಬ್ ಸರಣಿಗಳು ಈ ವಾರ ಒಟಿಟಿ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ (OTT Releases) ಒದಗಿಸಲಿದೆ. ಒಟಿಟಿಯ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಸಿನಿಮಾದಲ್ಲಿ ಈ ವಾರ ಪ್ರದರ್ಶನ ಕಾಣಲಿರುವ ಚಿತ್ರ, ಸರಣಿಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

OTT Releases
Koo

ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಸಿನಿಮಾ ವೀಕ್ಷಕರು ನೀವಾಗಿದ್ದರೆ ಈ ವಾರ ಪೂರ್ತಿ ಭರ್ಜರಿ ಮನೋರಂಜನೆ ಗ್ಯಾರಂಟಿ. ಹಲವು ಹೊಸ ಚಿತ್ರಗಳು (new film), ವೆಬ್ ಸರಣಿಗಳು (Web series) ಈ ವಾರ ಒಟಿಟಿಯಲ್ಲಿ ತೆರೆ (OTT Releases) ಕಾಣಲಿದೆ. ಹೀಗಾಗಿ ಈ ವಾರಾಂತ್ಯದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಕಾಲ ಕಳೆಯಲು ಪ್ರವಾಸ, ಲಂಚ್, ಡಿನ್ನರ್ ಯೋಜನೆ ಮಾಡಬೇಕಿಲ್ಲ. ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ, ಸರಣಿಗಳನ್ನು ಮನೆಯಲ್ಲೇ ವೀಕ್ಷಿಸಬಹುದು.

ಈ ಬಾರಿ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಘುಡಚಡಿ, ಇಂಡಿಯನ್ 2, ಟರ್ಬೊ ಸೇರಿದಂತೆ ಇನ್ನು ಹಲವು ಸಿನಿಮಾ, ವೆಬ್ ಸರಣಿಗಳು ಬಿಡುಗಡೆಯಾಗಲಿದೆ.


ಆರ್ ಯು ಶ್ಯೂರ್‌?

ಪ್ರವಾಸದ ಕುರಿತಾಗಿರುವ ವೆಬ್ ಸರಣಿ ಇದಾಗಿದ್ದು, ಜಂಗ್‌ಕುಕ್ ಮತ್ತು ಜಿಮಿನ್ ಅವರು ವಿವಿಧ ಪ್ರದೇಶಗಳನ್ನು ಅನ್ವೇಷಿಸಿ ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದಾರೆ. ಅಮೆರಿಕದ ಜೆಜು ದ್ವೀಪ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನ ಸಪೊರೊಗೆ ಅವರು ಭೇಟಿ ನೀಡುವ ಸಂಪೂರ್ಣ ಚಿತ್ರಣವನ್ನು ಈ ವೆಬ್ ಸರಣಿ ಹೊಂದಿದೆ. ಇದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಆಗಸ್ಟ್ 8ರಂದು ಬಿಡುಗಡೆಯಾಗಲಿದೆ.


ದಿ ಅಂಬ್ರೆಲಾ ಅಕಾಡೆಮಿ ಸರಣಿ- 4

ವಿಶೇಷ ಶಕ್ತಿ ಹೊಂದಿರುವ ದತ್ತು ಪಡೆದ ಒಡಹುಟ್ಟಿದವರ ಕಥೆಯನ್ನು ‘ದಿ ಅಂಬ್ರೆಲಾ ಅಕಾಡೆಮಿ’ ಹೊಂದಿದೆ. ತಂದೆಯ ಸಾವಿನ ಸತ್ಯವನ್ನು ತಿಳಿಯಲು ಅವರು ಒಂದಾಗುವ ಈ ಸರಣಿಯಲ್ಲಿ ಎಲಿಯಟ್ ಪೇಜ್, ಟಾಮ್, ಹಾಪರ್, ಡೇವಿಡ್ ಕ್ಯಾಸ್ಟನೆಡಾ, ಎಮ್ಮಿ ರೇವರ್- ಲ್ಯಾಂಪ್‌ಮನ್, ರಾಬರ್ಟ್ ಶೀಹನ್ ಮತ್ತು ಏಡನ್ ಗಲ್ಲಾಘರ್ ನಟಿಸಿದ್ದಾರೆ. ಇದು ನಾಲ್ಕನೆಯ ಮತ್ತು ಅಂತಿಮ ಸರಣಿಯಾಗಿದ್ದು, ನೆಟ್‌ಫ್ಲಿಕ್ಸ್ ನಲ್ಲಿ ಆಗಸ್ಟ್ 8ರಂದು ಬಿಡುಗಡೆಯಾಗಲಿದೆ.


ಘುಡಚಡಿ

ವಿಭಿನ್ನ ತಲೆಮಾರುಗಳ ಎರಡು ಜೋಡಿಗಳ ಪ್ರೇಮಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್, ಪಾರ್ಥ್ ಸಮತಾನ್, ಖುಶಾಲಿ ಕುಮಾರ್, ಅರುಣಾ ಇರಾನಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಆಗಸ್ಟ್ 9ರಂದು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ.


ಗ್ಯಾರಹ್ ಗ್ಯಾರಹ್

ಕೊಲೆ ಪ್ರಕರಣವನ್ನು ಭೇದಿಸಲು ಹೊರಟ ಇಬ್ಬರು ಪೊಲೀಸ್ ಅಧಿಕಾರಿಗಳ ಕಥೆ ಇದು. ರಾಘವ್ ಜುಯಲ್, ಕೃತಿಕಾ ಕಮ್ರಾ ಮತ್ತು ಧೈರ್ಯ ಕರ್ವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಝೀ5ನಲ್ಲಿ ಆಗಸ್ಟ್ 9ರಂದು ಬಿಡುಗಡೆಯಾಗಲಿದೆ.


ಇಂಡಿಯನ್ 2

ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಇಂಡಿಯನ್ 2’ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಹೊರಗೆಳೆಯಲು ಬಂದ ಸೇನೆಯ ನಾಯಕನೊಬ್ಬನ ಹೋರಾಟದ ಕಥೆ ಇದು. ಇಂಡಿಯನ್ 1996ರ ಹಿಟ್ ಚಲನಚಿತ್ರದ ಮುಂದುವರಿದ ಭಾಗ ಇದಾಗಿದೆ. ಎಸ್. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಮತ್ತು ಕಾಜಲ್ ಅಗರ್ವಾಲ್ ನಟಿಸಿರುವ ಈ ಚಿತ್ರ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಈ ನಾಲ್ಕು ಭಾಷೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 9ರಂದು ಬಿಡುಗಡೆಯಾಗಲಿದೆ.


ಲೈಫ್ ಹಿಲ್ ಗಯಿ

ಹಳೆಯ ಹೊಟೇಲ್‌ವೊಂದರ ಉತ್ತರಾಧಿಕಾರಕ್ಕಾಗಿ ಒಡಹುಟ್ಟಿದವರು ಪರಸ್ಪರ ಸ್ಪರ್ಧೆಗೆ ಇಳಿಯುವ ಕಥೆಯನ್ನು ಹೊಂದಿರುವ ಇದರಲ್ಲಿ ಕುಶಾ ಕಪಿಲ ಮತ್ತು ದಿವ್ಯೆಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ಆಗಸ್ಟ್ 9ರಂದು ಬಿಡುಗಡೆಯಾಗಲಿದೆ.


ಫಿರ್ ಆಯಿ ಹಸೀನ್ ದಿಲ್ರುಬಾ

‘ಹಸೀನ್ ದಿಲ್ರುಬಾʼದ ಮುಂದುವರಿದ ಭಾಗವಾಗಿರುವ ಇದು ರಾಣಿ ಮತ್ತು ರಿಷು ನಡುವೆ ಸುತ್ತುತ್ತದೆ. ತಾಪ್ಸಿ ಪನ್ನು, ವಿಕ್ರಾಂತ್ ಮಾಸ್ಸಿ ಮತ್ತು ಸನ್ನಿ ಕೌಶಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 9 ರಂದು ಇದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Divya Seth: ಸುಷ್ಮಾ ಸೇಠ್ ಮೊಮ್ಮಗಳು, ʻಜಬ್ ವಿ ಮೆಟ್ ʼಚಿತ್ರದ ಖ್ಯಾತ ನಟಿಯ ಪುತ್ರಿ ನಿಧನ


ಟರ್ಬೊ

ತೊಂದರೆಗೆ ಸಿಲುಕಿದ ಜೀಪ್ ಚಾಲಕ ಚೆನ್ನೈಗೆ ಹೋಗುತ್ತಾನೆ. ಅಲ್ಲಿ ವಿಚಿತ್ರ ಘಟನೆಗಳನ್ನು ಎದುರಿಸಬೇಕಾಗುತ್ತದೆ. ವೆಟ್ರಿವೇಲ್ ಷಣ್ಮುಘ ಸುಂದರಂ ಅವರ ಚಿತ್ರದಲ್ಲಿ ಮಮ್ಮುಟ್ಟಿ ಜೊತೆ ರಾಜ್ ಬಿ. ಶೆಟ್ಟಿ, ಸುನಿಲ್ ಮತ್ತು ಅಂಜನಾ ಜಯಪ್ರಕಾಶ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 9ರಂದು ಸೋನಿ ಲೈವ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.


ಡಿಜಾಂಗೋ

ಆಗಸ್ಟ್ 9ರಂದು ಒಟಿಟಿಯಲ್ಲಿ ಇದು ಬಿಡುಗಡೆಯಾಗಲಿದೆ. ಕಾಲ್ಪನಿಕ ನಗರದಲ್ಲಿ ಹುಟ್ಟಿಕೊಳ್ಳುವ ಕಥೆ ಇದು. ಡಿಜಾಂಗೊ ಕಳೆದುಹೋದ ಮಗಳು ಸಾರಾಳನ್ನು ಹುಡುಕುವ ಕಥೆಯನ್ನು ಹೊಂದಿದೆ. ಲಿಸಾ ವಿಕಾರಿ, ಮಥಿಯಾಸ್ ಸ್ಕೋನೆರ್ಟ್ಸ್ ಮತ್ತು ನಿಕೋಲಸ್ ಪಿನೋಕ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಿ ಲೈವ್‌ನಲ್ಲಿ ಇದು ಲಭ್ಯ.

Continue Reading
Advertisement
National Handloom day 2024
ಫ್ಯಾಷನ್31 mins ago

National Handloom day 2024: ಕರ್ನಾಟಕದ ಹೆಮ್ಮೆಯ ವಿಶ್ವ ಪ್ರಸಿದ್ಧ ಹ್ಯಾಂಡ್‌ ಲೂಮ್‌ ಸೀರೆಗಳಿವು

Viral Video
Latest41 mins ago

Viral Video: 11 ವರ್ಷಗಳ ಹಿಂದೆ ಸತ್ತಿದ್ದ ಗಂಡ ಕನಸಲ್ಲಿ ಬಂದು ʼಸೇರಿದʼ; ಹಾಗಾಗಿ ಮಗು ಹುಟ್ಟಿತು ಅಂತಿದ್ದಾಳೆ ಈ ಹೆಂಗಸು!

Vinesh Phogat
ಕ್ರೀಡೆ53 mins ago

Vinesh Phogat: ವಿನೇಶ್‌ ಫೋಗಟ್‌ ಅನರ್ಹ; ದಿಢೀರ್ 2-3 ಕೆ.ಜಿ ತೂಕ ಇಳಿಸಲು ಮುಂದಾದರೆ ದೇಹಕ್ಕೆ ಏನಾಗುತ್ತದೆ?

Lalbagh Flower Show
ಕರ್ನಾಟಕ1 hour ago

Lalbagh Flower Show: ಲಾಲ್‌ಬಾಗ್ ಫ್ಲವರ್‌ ಶೋ; ನಾಳೆಯಿಂದ ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧ

Viral Video
Latest1 hour ago

Viral Video: ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

Viral News
Latest1 hour ago

Viral News: ಚಹಾ ಮಾರಾಟದಿಂದ ಇವರಿಗೆ ಪ್ರತಿ ತಿಂಗಳು 2 ಲಕ್ಷ ರೂ. ಆದಾಯ!

Viral video
ವೈರಲ್ ನ್ಯೂಸ್2 hours ago

Viral Video: ಐದನೇ ಮಹಡಿಯಿಂದ ಬಾಲಕಿ ಮೇಲೆ ಬಿದ್ದ ಶ್ವಾನ; ಆಮೇಲೆ ಆಗಿದ್ದೇನು? ವಿಡಿಯೋ ಇದೆ

OTT Releases
ಸಿನಿಮಾ2 hours ago

OTT Releases: ಇಂಡಿಯನ್ 2, ಟರ್ಬೊ ಸೇರಿದಂತೆ ಹಲವು ಹೊಸ ಚಿತ್ರಗಳು ಈ ವಾರ ಒಟಿಟಿಯಲ್ಲಿ!

Gowri Movie Saanya Iyer Samar Lankesh eating dosa with together
ಸಿನಿಮಾ2 hours ago

Gowri Movie: ಸಮರ್ಜಿತ್‌ಗೆ ನಾಚಿಕೆಯಿಂದ ದೋಸೆ ತಿನ್ನಿಸಿದ ಸಾನ್ಯಾ ಅಯ್ಯರ್; ಇದೇನು ಡೇಟಿಂಗಾ ಎಂದು ಪ್ರಶ್ನೆ ಇಟ್ಟ ಫ್ಯಾನ್ಸ್!

Self Harming
ಕರ್ನಾಟಕ2 hours ago

Self Harming: ಇನ್‍ಸ್ಟಾಗ್ರಾಂ ಪ್ರೇಯಸಿ ಕೈಕೊಟ್ಟಿದ್ದಕ್ಕೆ ನೇಣಿಗೆ ಶರಣಾದ ಯುವಕ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು1 day ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 day ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌