Railway Line: ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಇನ್ನೂ ಬ್ರಿಟಿಷರ ಅಧೀನದಲ್ಲಿದೆ ಈ ರೈಲು ಮಾರ್ಗ! - Vistara News

ವಾಣಿಜ್ಯ

Railway Line: ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಇನ್ನೂ ಬ್ರಿಟಿಷರ ಅಧೀನದಲ್ಲಿದೆ ಈ ರೈಲು ಮಾರ್ಗ!

ಮಹಾರಾಷ್ಟ್ರದ ರೈಲು ಮಾರ್ಗವನ್ನು (Railway Line) ಬ್ರಿಟಿಷ್ ಕಂಪನಿಯೊಂದು ನಿರ್ವಹಿಸುತ್ತಿದೆ. ಭಾರತೀಯ ರೈಲ್ವೇ ಈ ರೈಲು ಮಾರ್ಗವನ್ನು ಖರೀದಿಸಲು ಹಲವಾರು ಪ್ರಯತ್ನಗಳನ್ನು ಮಾಡಿತು. ಆದರೆ ಅವು ವಿಫಲವಾಯಿತು. ಹೀಗಾಗಿ ಇನ್ನೂ ಆ ರೈಲು ಮಾರ್ಗವನ್ನು ನಿರ್ವಹಿಸುತ್ತಿರುವ ಬ್ರಿಟಿಷ್ ಕಂಪನಿಗೆ ಇತ್ತೀಚಿನ ವರ್ಷಗಳವರೆಗೂ ರಾಯಧನವನ್ನು ಪಾವತಿಸಲಾಗುತ್ತಿತ್ತು! ಈಗಲೂ ಈ ರೈಲ್ವೆ ಮಾರ್ಗ ಬ್ರಿಟಿಷ್‌ ಕಂಪನಿಯ ಸುಪರ್ದಿಯಲ್ಲೇ ಇದೆ.

VISTARANEWS.COM


on

Railway Line
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಭಾರತದ ಈ ಒಂದು ರೈಲು ಮಾರ್ಗ (Railway Line) ಮಾತ್ರ ಇನ್ನೂ ಬ್ರಿಟಿಷರ (British owned railway line) ನಿಯಂತ್ರಣದಲ್ಲಿದೆ! ಭಾರತೀಯ ರೈಲ್ವೇಸ್ (Indian Railways) ಅದನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ ಈಗಲೂ ಅದಕ್ಕೆ ಬ್ರಿಟಿಷರಿಗೆ ರಾಯಧನವನ್ನು (royalty) ಪಾವತಿಸುತ್ತಿದೆ!

ಮಹಾರಾಷ್ಟ್ರದ ರೈಲು ಮಾರ್ಗವನ್ನು (maharastra railway line) ಬ್ರಿಟಿಷ್ ಕಂಪನಿಯೊಂದು ನಿರ್ವಹಿಸುತ್ತಿದೆ. ಭಾರತೀಯ ರೈಲ್ವೇ ಈ ರೈಲು ಮಾರ್ಗವನ್ನು ಖರೀದಿಸಲು ಹಲವಾರು ಪ್ರಯತ್ನಗಳನ್ನು ಮಾಡಿತು. ಆದರೆ ಅವು ವಿಫಲವಾಯಿತು. ಹೀಗಾಗಿ ಇನ್ನೂ ಆ ರೈಲು ಮಾರ್ಗವನ್ನು ಬ್ರಿಟಿಷ್ ಕಂಪನಿ, ‘ಕಿಲ್ಲಿಕ್ ನಿಕ್ಸನ್ ಆಂಡ್ ಕೋʼ ಈಗಲೂ ಸೆಂಟ್ರಲ್ ಪ್ರಾವಿನ್ಸ್ ರೈಲ್ವೆ ಕಂಪನಿಯನ್ನು ನಿರ್ವಹಿಸುತ್ತದೆ.

ಇತ್ತೀಚಿನವರೆಗೂ ರಾಯಧನ ಪಾವತಿ

ಈ ಕಂಪನಿಯು ಅಮರಾವತಿಯಿಂದ ಮಹಾರಾಷ್ಟ್ರದ ಮುರ್ತಜಾಪುರಕ್ಕೆ 190 ಕಿ.ಮೀ ರೈಲು ಮಾರ್ಗದಲ್ಲಿ ಶಕುಂತಲಾ ಎಕ್ಸ್‌ಪ್ರೆಸ್ ಅನ್ನು ಓಡಿಸುತ್ತಿತ್ತು. ಸ್ವಾತಂತ್ರ್ಯದ ಅನಂತರ ಬ್ರಿಟಿಷರು ಭಾರತವನ್ನು ತೊರೆದರು. ಆದರೆ ಬ್ರಿಟಿಷ್ ಖಾಸಗಿ ಕಂಪನಿಯು ಈ ಮಾರ್ಗದ ಮೇಲೆ ಅಧಿಕಾರವನ್ನು ಮುಂದುವರಿಸಿದೆ. ಭಾರತೀಯ ರೈಲ್ವೇಯು ಆ ಕಂಪನಿಗೆ ಇತ್ತೀಚಿನ ವರ್ಷಗಳವರೆಗೂ ಬರೋಬ್ಬರಿ 1.20 ಕೋಟಿ ರೂ. ರಾಯಧನವನ್ನು ಪಾವತಿಸುತ್ತಿತ್ತು.


ಶಕುಂತಲಾ ರೈಲ್ವೇ ಲೈನ್

ಅಮರಾವತಿಯಿಂದ ಮುರ್ತಜಾಪುರದವರೆಗಿನ 190 ಕಿ.ಮೀ ರೈಲು ಮಾರ್ಗವನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ರೈಲ್ವೇ ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ಅವರು ಯಶಸ್ವಿಯಾಗಲಿಲ್ಲ. ಶಕುಂತಲಾ ಪ್ಯಾಸೆಂಜರ್ ಎಂಬ ಒಂದು ಪ್ಯಾಸೆಂಜರ್ ರೈಲು ಮಾತ್ರ ಈ ರೈಲು ಮಾರ್ಗದಲ್ಲಿ ಓಡುತ್ತಿತ್ತು. ಅಂದಹಾಗೆ, ಶಕುಂತಲಾ ರೈಲ್ವೇ ಲೈನ್ ಈ ಮಾರ್ಗದ ಹೆಸರು. ಶಕುಂತಲಾ ಎಕ್ಸ್‌ಪ್ರೆಸ್ ಅಚಲಪುರ ಮತ್ತು ಯವತ್ಮಾಲ್ ನಡುವಿನ 17 ನಿಲ್ದಾಣಗಳಲ್ಲಿ ನಿಲ್ಲುತ್ತಿತ್ತು. ಈ ರೈಲು ಸುಮಾರು 70 ವರ್ಷಗಳ ಕಾಲ ಸ್ಟೀಮ್ ಎಂಜಿನ್‌ನಲ್ಲಿ ಓಡಿದೆ.

ಡೀಸೆಲ್ ಎಂಜಿನ್

1994ರಲ್ಲಿ ಶಕುಂತಲಾ ಪ್ಯಾಸೆಂಜರ್ ರೈಲಿಗೆ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತು. ಅನಂತರ ಅನಿರೀಕ್ಷಿತ ಕಾರಣಗಳಿಂದ ರೈಲನ್ನು ನಿಲ್ಲಿಸಲಾಗಿತ್ತು. ಇದನ್ನು ಪುನರಾರಂಭಿಸಬೇಕು ಎಂಬುದು ಸ್ಥಳೀಯರ ಆಗ್ರಹ. 5 ಬೋಗಿಗಳಿರುವ ಈ ರೈಲು ಪ್ರತಿದಿನ 800 ರಿಂದ 1,000 ಪ್ರಯಾಣಿಕರನ್ನು ಅವರವರ ಸ್ಥಳಗಳಿಗೆ ಸಾಗಿಸುತ್ತಿತ್ತು. ಭಾರತೀಯ ರೈಲ್ವೆಯನ್ನು 1951ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಈ ರೈಲು ಮಾರ್ಗವು ಭಾರತ ಸರ್ಕಾರದ ವ್ಯಾಪ್ತಿಗೆ ಬರಲಿಲ್ಲ.

1.20 ಕೋಟಿ ರೂ. ರಾಯಧನ

ಅಮರಾವತಿ- ಮುರ್ತಜಾಪುರ ರೈಲು ಮಾರ್ಗವನ್ನು ಬಳಸುವುದಕ್ಕಾಗಿ ಭಾರತೀಯ ರೈಲ್ವೇಯು ಇಂಗ್ಲೆಂಡ್ ಕಂಪನಿಗೆ 1.20 ಕೋಟಿ ರೂ.ಗಳ ರಾಯಧನವನ್ನು ಪಾವತಿಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಹಲವಾರು ವರದಿಗಳು ಹೇಳುತ್ತವೆ. ಈಗ ರಾಯಲ್ಟಿ ನೀಡಲಾಗುತ್ತಿಲ್ಲ ಎನ್ನಲಾಗಿದೆ.

Railway Line
Railway Line


ಹತ್ತಿ ಸಾಗಿಸಲು ನಿರ್ಮಾಣ

ಮಹಾರಾಷ್ಟ್ರದ ಅಮರಾವತಿಯಲ್ಲಿ ಹತ್ತಿಯನ್ನು ಬೆಳೆಯಲಾಗುತ್ತದೆ. ಅಮರಾವತಿಯಿಂದ ಮಂಬಯಿ ಬಂದರಿಗೆ ಹತ್ತಿಯನ್ನು ಸಾಗಿಸಲು ಬ್ರಿಟಿಷರು ಈ ರೈಲು ಮಾರ್ಗವನ್ನು ನಿರ್ಮಿಸಿದರು. ಈ ರೈಲು ಮಾರ್ಗವನ್ನು ನಿರ್ಮಿಸಲು ಸೆಂಟ್ರಲ್ ಪ್ರಾವಿನ್ಸ್ ರೈಲ್ವೇ ಕಂಪೆನಿ (CPRC) ಬ್ರಿಟನ್‌ನ ಕಿಲಿಕ್ ನಿಕ್ಸನ್ ಆಂಡ್ ಕಂ ಅನ್ನು ಸ್ಥಾಪಿಸಿತು.

ಇದನ್ನೂ ಓದಿ: PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

ನಿರ್ಮಾಣ ಕಾರ್ಯ

ಈ ರೈಲು ಮಾರ್ಗದ ನಿರ್ಮಾಣವು 1903ರಲ್ಲಿ ಪ್ರಾರಂಭವಾಯಿತು ಮತ್ತು 1916ರಲ್ಲಿ ಪೂರ್ಣಗೊಂಡಿತು. ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದಾಗ, ಭಾರತೀಯ ರೈಲ್ವೇ ಈ ಕಂಪನಿಯೊಂದಿಗೆ ಸುದೀರ್ಘ ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಹಾಗಾಗಿ ಈ ಮಾರ್ಗವನ್ನು ಬಳಸುವುದಕ್ಕಾಗಿ ಪ್ರತಿ ವರ್ಷ ಬ್ರಿಟಿಷ್‌ ಕಂಪನಿಗೆ ರಾಯಲ್ಟಿ ಪಾವತಿಸಬೇಕಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Recurring Deposit: ಸಣ್ಣ, ಆರಂಭಿಕ ಹೂಡಿಕೆದಾರರಿಗೆ ಸೂಕ್ತ ಪೋಸ್ಟ್ ಆಫೀಸ್‌ನ ಆರ್‌ಡಿ; ಏನಿದರ ಲಾಭ?

ಪೋಸ್ಟ್ ಆಫೀಸ್‌ನಲ್ಲಿರುವ ಆರ್‌ಡಿ (Recurring Deposit) ಸಣ್ಣ ಹೂಡಿಕೆದಾರರು ಅಥವಾ ಆರಂಭಿಕರು ತೆರೆಯಬಹುದಾದ ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆಯಾಗಿದೆ. ಈ ಉಳಿತಾಯ ಯೋಜನೆಯಲ್ಲಿ ಹಣಕಾಸಿನ ಅವಶ್ಯಕತೆಗಳಿಗೆ ಸಾಕಷ್ಟು ಹಣವನ್ನು ಸಂಗ್ರಹಿಸಬಹುದು. ಮಾತ್ರವಲ್ಲದೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಯೋಜನೆಯ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Recurring Deposit
Koo

ಪ್ರತಿಯೊಬ್ಬರಿಗೂ ದೊಡ್ಡ ಪ್ರಮಾಣದಲ್ಲಿ ಹಣವನ್ನು ಹೂಡಿಕೆ (investment) ಮಾಡುವುದು ಸಾಧ್ಯವಿಲ್ಲ. ವಿಶೇಷವಾಗಿ ಉದ್ಯೋಗಕ್ಕೆ ಇತ್ತೀಚೆಗಷ್ಟೇ ಸೇರಿದವರು, ಸಣ್ಣ ಹೂಡಿಕೆದಾರರು ಅಥವಾ ಆರಂಭಿಕರಿಗಾಗಿ (small investors or beginners) ಸಹಾಯ ಮಾಡಲು ಕೇಂದ್ರ ಸರ್ಕಾರವು (Indian Govt) ಉಳಿತಾಯ ಯೋಜನೆಯೊಂದನ್ನು (Recurring Deposit) ಪರಿಚಯಿಸಿದೆ.

ಇದು ಕೇಂದ್ರ ಸರ್ಕಾರದಿಂದ ನಿಯಂತ್ರಿಸಲ್ಪಟ್ಟಿರುವುದರಿಂದ ಹೂಡಿಕೆ ಮಾಡಲು ಸುರಕ್ಷಿತ ಆಯ್ಕೆಯಾಗಿದೆ. ಹಾಗಾದರೆ ಈ ಉಳಿತಾಯ ಯೋಜನೆ ಯಾವುದು, ಅದರ ವಿಶೇಷತೆಗಳು ಏನು ಎಂಬುದನ್ನು ನೋಡೋಣ.
ಪೋಸ್ಟ್ ಆಫೀಸ್‌ನಲ್ಲಿರುವ ಆರ್ ಡಿ ಸಣ್ಣ ಹೂಡಿಕೆದಾರರು ಅಥವಾ ಆರಂಭಿಕರು ತೆರೆಯಬಹುದಾದ ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆಯಾಗಿದೆ.

ಆರ್ ಡಿ ಯೋಜನೆ

ಈ ಉಳಿತಾಯ ಯೋಜನೆಯು ನಿರ್ದಿಷ್ಟವಾಗಿ ಸಣ್ಣ ಹೂಡಿಕೆದಾರರಿಗಾಗಿ ಮಾಡಲ್ಪಟ್ಟಿದೆ. ಇದರಿಂದ ಅವರು ತಮ್ಮ ಹಣಕಾಸಿನ ಅವಶ್ಯಕತೆಗಳಿಗೆ ಸಾಕಷ್ಟು ಹಣವನ್ನು ಸಂಗ್ರಹಿಸಬಹುದು. ಇದಲ್ಲದೆ, ಠೇವಣಿಯ ಮೇಲೆ ಯಾವುದೇ ಗರಿಷ್ಠ ಮಿತಿಯಿಲ್ಲ.

ಯೋಜನೆ ಅವಧಿ ಎಷ್ಟು?

ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆಯು 5 ವರ್ಷಗಳ ಮೆಚುರಿಟಿ ಅವಧಿಯ ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಉಳಿತಾಯ ಯೋಜನೆಯೊಂದಿಗೆ ಮಾಸಿಕ ಆಧಾರದ ಮೇಲೆ ಹೂಡಿಕೆ ಮಾಡಬಹುದು. ಇದಲ್ಲದೆ ಈ ಯೋಜನೆಯು ಒಬ್ಬ ವ್ಯಕ್ತಿಗೆ ಏಕ ಮತ್ತು ಜಂಟಿ ಖಾತೆಯನ್ನು ತೆರೆಯಲು ಅನುಮತಿಸುತ್ತದೆ.


ಹೂಡಿಕೆ ಹೇಗೆ?

ತಿಂಗಳಿಗೆ ಕನಿಷ್ಠ 100 ರೂ.ನಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು. ಯಾವುದೇ ಗರಿಷ್ಠ ಮಿತಿ ಇಲ್ಲದಿರುವುದರಿಂದ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಬಹುದು. ಆದರೆ ಕ್ಯಾಲೆಂಡರ್ ತಿಂಗಳ 15ರಂದು ಖಾತೆಯನ್ನು ತೆರೆದರೆ ತಿಂಗಳ 15ನೇ ದಿನದವರೆಗೆ ಠೇವಣಿ ಮಾಡಬೇಕು ಎಂಬುದನ್ನು ಗಮನಿಸಬೇಕು. ಕ್ಯಾಲೆಂಡರ್ ತಿಂಗಳ 16ನೇ ದಿನ ಮತ್ತು ಕೊನೆಯ ಕೆಲಸದ ದಿನದ ನಡುವೆ ಖಾತೆಯನ್ನು ತೆರೆದರೆ, ಅನಂತರದ ಠೇವಣಿ ತಿಂಗಳ ಕೊನೆಯ ಕೆಲಸದ ದಿನದವರೆಗೆ ಮಾಡಲಾಗುತ್ತದೆ.

ಖಾತೆಯ ಬಡ್ಡಿ ದರ

ಈ ಉಳಿತಾಯ ಯೋಜನೆಯು ವಾರ್ಷಿಕ ಶೇ. 6.7ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಐದು ವರ್ಷಗಳವರೆಗೆ 10,000 ರೂ. ಮಾಸಿಕ ಹೂಡಿಕೆಯೊಂದಿಗೆ 7 ಲಕ್ಷ ರೂ.ಗಳಿಗಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ: Anil Ambani: ಅನಿಲ್‌ ಅಂಬಾನಿಗೆ ಸೆಬಿ ಶಾಕ್‌; 5 ವರ್ಷ ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ ನಿಷೇಧ, 25 ಕೋಟಿ ರೂ. ದಂಡ

ಯಾರು ಅರ್ಜಿ ಸಲ್ಲಿಸಬಹುದು?

ಯಾವುದೇ ಒಬ್ಬ ವಯಸ್ಕ, ಅಪ್ರಾಪ್ತ ವಯಸ್ಕ, ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ ಪೋಷಕರು, 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ತಮ್ಮ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದು. ಇದರ ಹೊರತಾಗಿ ಈ ಯೋಜನೆಯು ಹೂಡಿಕೆದಾರರಿಗೆ ಜಂಟಿ ಖಾತೆಯನ್ನು ತೆರೆಯಲು ಅವಕಾಶವಿದೆ. ಇದಲ್ಲದೆ ಬಹು ಖಾತೆಗಳನ್ನು ತೆರೆಯಲು ಅವಕಾಶವಿದೆ.

Continue Reading

ವಾಣಿಜ್ಯ

Cheapest Currency: ವಿಶ್ವದಲ್ಲೇ ಅಗ್ಗದ ಕರೆನ್ಸಿ ಹೊಂದಿರುವ ದೇಶಗಳಲ್ಲಿ ಭಾರತದ 1 ರೂ.ನ ಮೌಲ್ಯ ಎಷ್ಟಾಗುತ್ತೆ ನೋಡಿ!

ವಿಶ್ವದ ಬಹುತೇಕ ಕರೆನ್ಸಿಗಳ ಬಗ್ಗೆ ನಾವು ಪರಿಚಿತರಾಗಿದ್ದೇವೆ. ಕೆಲವೊಂದು ದೇಶಗಳ ಕರೆನ್ಸಿಗಳು ಹೆಚ್ಚು ಮೌಲ್ಯ, ಇನ್ನು ಕೆಲವು ದೇಶದ ಕರೆನ್ಸಿಗಳು ಕಡಿಮೆ ಮೌಲ್ಯವನ್ನು (Cheapest Currency) ಹೊಂದಿದೆ. ಅದರಲ್ಲೂ ಕೆಲವು ದೇಶಗಳ ಕರೆನ್ಸಿಗಳು ಅತ್ಯಂತ ಕಡಿಮೆ ಮೌಲ್ಯವನ್ನು ಹೊಂದಿದೆ. ಅಂತಹ ಕರೆನ್ಸಿಗಳು ಯಾವುದು, ಯಾವ ದೇಶದ್ದು ಎಂಬುದು ಗೊತ್ತಿದೆಯೇ? ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Cheapest Currency
Koo

ವಿಶ್ವದಲ್ಲೇ ಅತ್ಯಂತ ಪ್ರಬಲ ಮತ್ತು ಪ್ರಭಾವಶಾಲಿ ಕರೆನ್ಸಿಗಳ (currency) ಬಗ್ಗೆ ನಮಗೆ ತಿಳಿದಿದೆ. ಆದರೆ ಅತ್ಯಂತ ಕಡಿಮೆ ಮೌಲ್ಯವಿರುವ ಕರೆನ್ಸಿ (Cheapest Currency) ಬಗ್ಗೆ ಎಷ್ಟು ಮಂದಿಗೆ ಗೊತ್ತು? ಕೆಲವು ದೇಶಗಳ ಕರೆನ್ಸಿಗಳು ತೀರಾ ಕಡಿಮೆ ಮೌಲ್ಯವನ್ನು ಹೊಂದಿದೆ. ಒಂದಲ್ಲ ಒಂದು ರೀತಿಯ ವ್ಯವಹಾರ ನಡೆಸುವ ನಾವು ಈ ಅಗ್ಗದ ಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳಬೇಕಿದೆ.

ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ (British Pound Sterling), ಸ್ವಿಸ್ ಫ್ರಾಂಕ್ (Swiss Franc) ಮತ್ತು ಯುಎಸ್ ಡಾಲರ್‌ (US Dollar) ವಿಶ್ವದಲ್ಲೇ ಎಲ್ಲರಿಗೂ ಪರಿಚಿತ ದುಬಾರಿ ಮೌಲ್ಯ ಹೊಂದಿರುವ ಕರೆನ್ಸಿಗಳಾಗಿವೆ. ಆದರೆ ವಿಶ್ವದ ಅತ್ಯಂತ ಕಡಿಮೆ ಬೆಲೆಬಾಳುವ ಕರೆನ್ಸಿಗಳ ಪಟ್ಟಿ ಮಾಡುವುದು ತುಸು ಕಷ್ಟ. ಯಾಕೆಂದರೆ ಆರ್ಥಿಕ ಪರಿಸ್ಥಿಗಳು ಅತ್ಯಂತ ವೇಗವಾಗಿ ಬದಲಾಗುತ್ತದೆ. ಇದು ಒಂದು ರೀತಿಯಲ್ಲಿ ಎಲ್ಲರಿಗೂ ಸವಾಲಾಗಿರುತ್ತದೆ.

ಇತ್ತೀಚೆಗೆ ಗಮನಾರ್ಹವಾದ ಅಪಮೌಲ್ಯೀಕರಣವನ್ನು ಅನುಭವಿಸಿದ ನಿರ್ದಿಷ್ಟ ರಾಷ್ಟ್ರೀಯ ಕರೆನ್ಸಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಯುಎಸ್ ಡಾಲರ್ ಮತ್ತು ಭಾರತೀಯ ರೂಪಾಯಿಗೆ ಹೋಲಿಸಿದರೆ ವಿಶ್ವದ ಹತ್ತು ದೇಶಗಳ ಕರೆನ್ಸಿಗಳು ಅತ್ಯಂತ ಕಡಿಮೆ ಮೌಲ್ಯ ಹೊಂದಿದೆ. ಇದರಲ್ಲಿ ಇರಾನಿನ ರಿಯಾಲ್, ವಿಯೆಟ್ನಾಮೀಸ್ ಡಾಂಗ್, ಸಿಯೆರಾ ಲಿಯೋನಿಯನ್ ಲಿಯೋನ್, ಲಾವೊ/ಲಾವೋಟಿಯನ್ ಕಿಪ್, ಇಂಡೋನೇಷಿಯನ್ ರುಪಿಯಾ, ಉಜ್ಬೇಕಿಸ್ತಾನಿ ಸೋಮ್, ಗಿನಿಯನ್ ಫ್ರಾಂಕ್, ಪರಾಗ್ವೆಯ ಗೌರಾನಿ, ಕಾಂಬೋಡಿಯನ್ ರಿಯಲ್, ಉಗಾಂಡಾದ ಶಿಲ್ಲಿಂಗ್ ಸೇರಿದೆ.

Cheapest Currency
Cheapest Currency


ಇರಾನಿನ ರಿಯಾಲ್ (IRR)

ಪ್ರಸ್ತುತ 1 ಭಾರತೀಯ ರೂಪಾಯಿಯು 501.73 ಐಆರ್‌ಆರ್‌ಗೆ ಸಮನಾಗಿದೆ. ಇರಾನಿನ ರಿಯಾಲ್ ಅನ್ನು ವಿಶ್ವದ ಅತ್ಯಂತ ಕಡಿಮೆ ಮೌಲ್ಯಯುತ ಕರೆನ್ಸಿ ಎಂದು ಗುರುತಿಸಲಾಗಿದೆ. ಇದಕ್ಕೆ ದೇಶದಲ್ಲಿ ನಡೆಯುವ ರಾಜಕೀಯ ಅಶಾಂತಿ, ಇರಾನ್-ಇರಾಕ್ ಯುದ್ಧ ಮತ್ತು ಪರಮಾಣು ಕಾರ್ಯಕ್ರಮದಂತಹ ಅಂಶಗಳು ಕಾರಣ ಎನ್ನಲಾಗುತ್ತದೆ.


ವಿಯೆಟ್ನಾಮೀಸ್ ಡಾಂಗ್ (VND)

ವಿಯೆಟ್ನಾಂ ಐತಿಹಾಸಿಕವಾಗಿ ಕೇಂದ್ರೀಕೃತ ಆರ್ಥಿಕತೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾರುಕಟ್ಟೆ ಆರ್ಥಿಕತೆಯನ್ನು ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗಿದ್ದರೂ ಇನ್ನೂ ಬಹಳ ದೂರ ಹೋಗಬೇಕಾಗಿದೆ. ಪ್ರಸ್ತುತ, ವಿಯೆಟ್ನಾಮೀಸ್ ಡಾಂಗ್ ಗಣನೀಯ ಅಪಮೌಲ್ಯವನ್ನು ಅನುಭವಿಸುತ್ತಿದೆ. ಇಲ್ಲಿ 1 ಭಾರತೀಯ ರೂಪಾಯಿಯು 297.72ವಿಎನ್ ಡಿಗೆ ಸಮನಾಗಿದೆ.


ಲಾವೋ/ಲಾವೋಟಿಯನ್ ಕಿಪ್ (LAK)

1952ರಲ್ಲಿ ಸ್ಥಾಪನೆಯಾದಾಗಿನಿಂದ ಲಾವೊ ಕರೆನ್ಸಿಯ ಮೌಲ್ಯವು ತುಲನಾತ್ಮಕವಾಗಿ ಕಡಿಮೆಯಾಗಿದೆ. ಇಲ್ಲಿ ಪ್ರಸ್ತುತ 1 ಭಾರತೀಯ ರೂಪಾಯಿಯು 263.00 ಎಲ್‌ಎಕೆಗೆ ಸಮವಾಗಿದೆ.


ಸಿಯೆರಾ ಲಿಯೋನಿಯನ್ ಲಿಯೋನ್ (SLL)

ಆಫ್ರಿಕನ್ ರಾಷ್ಟ್ರವಾದ ಸಿಯೆರಾ ಲಿಯೋನ್ ತೀವ್ರ ಬಡತನವನ್ನು ಎದುರಿಸುತ್ತಿದೆ. ವಿನಾಶಕಾರಿ ಅಂತರ್ಯುದ್ಧ ಸೇರಿದಂತೆ ಪಶ್ಚಿಮ ಆಫ್ರಿಕಾದಲ್ಲಿ ಹಗರಣಗಳು, ಭ್ರಷ್ಟಾಚಾರ ಮತ್ತು ಯುದ್ಧಗಳ ಇತಿಹಾಸವನ್ನು ದೇಶ ಹೊಂದಿದೆ. ಇದರಿಂದಾಗಿ ಕರೆನ್ಸಿ ಮೌಲ್ಯ ಮತ್ತು ದೇಶದ ಆರ್ಥಿಕತೆ ಎರಡೂ ಕುಸಿದಿದೆ. ಇಲ್ಲಿ ಭಾರತೀಯ 1 ರೂಪಾಯಿಯು 267.39 ಎಸ್ ಎಲ್ ಎಲ್‌ಗೆ ಸಮವಾಗಿದೆ.


ಇಂಡೋನೇಷಿಯನ್ ರುಪಿಯಾ (IDR)

ಕಳೆದ ಏಳು ವರ್ಷಗಳಿಂದ ಇಂಡೋನೇಷ್ಯಾದ ರೂಪಾಯಿ ಯಾವುದೇ ಸುಧಾರಣೆಯನ್ನು ತೋರಿಸಿಲ್ಲ. ವಿದೇಶಿ ವಿನಿಮಯ ಮೀಸಲು ಕಡಿಮೆಯಾಗುವುದು, ಕರೆನ್ಸಿಯನ್ನು ರಕ್ಷಿಸುವಲ್ಲಿ ಕೇಂದ್ರೀಯ ಬ್ಯಾಂಕ್ ವಿಫಲತೆ ಮತ್ತು ಸರಕು ರಫ್ತಿನ ಮೇಲೆ ದೇಶದ ಭಾರೀ ಅವಲಂಬನೆ ಸೇರಿದಂತೆ ವಿವಿಧ ಅಂಶಗಳು ಇದಕ್ಕೆ ಕಾರಣ. ಇದಲ್ಲದೆ, ಸರಕುಗಳ ಬೆಲೆಗಳಲ್ಲಿನ ಕುಸಿತವು ಕರೆನ್ಸಿಯ ಮೌಲ್ಯದಲ್ಲಿನ ಇಳಿಕೆಗೆ ಮತ್ತಷ್ಟು ಕೊಡುಗೆ ನೀಡಿದೆ. ರೂಪಾಯಿಯ ಸಾರ್ವಭೌಮ ಬಾಂಡ್‌ಗಳ ಗಮನಾರ್ಹ ಭಾಗವನ್ನು ಹೊಂದಿರುವ ವಿದೇಶಿ ಹೂಡಿಕೆದಾರರ ಉಪಸ್ಥಿತಿಯು ಬಂಡವಾಳದ ಹರಿವಿಗೆ ಅಪಾಯವನ್ನುಂಟು ಮಾಡುತ್ತದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 185.66 ಐಡಿಆರ್‌ಗೆ ಸಮವಾಗಿದೆ.


ಉಜ್ಬೇಕಿಸ್ತಾನಿ ಸೋಮ್ (UZS)

ಉಜ್ಬೇಕಿಸ್ತಾನ್‌ನ ಆರ್ಥಿಕತೆಯು ದುರ್ಬಲವಾಗಿದೆ. ಇದು ದುರ್ಬಲ ಕರೆನ್ಸಿಗೆ ಕಾರಣವಾಗಿದೆ. ಸಾಂಕ್ರಾಮಿಕ ರೋಗವು ರಾಷ್ಟ್ರದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದ್ದರೂ, 2022ರ ಮೂರನೇ ತ್ರೈಮಾಸಿಕದಲ್ಲಿ ಆಂತರಿಕ ಕಾರ್ಯಾಚರಣೆಗಳು ಪುನರಾರಂಭಗೊಂಡಿದೆ. ಆದರೂ ಕೈಗಾರಿಕಾ ಉತ್ಪಾದನೆಯಲ್ಲಿನ ಕುಸಿತವು ಕರೆನ್ಸಿಯ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 150.24 ಯುಝೆಡ್‌ಎಸ್‌ಗೆ ಸಮವಾಗಿದೆ.


ಗಿನಿಯನ್ ಫ್ರಾಂಕ್ (GNF)

ಗಿನಿಯನ್ ಫ್ರಾಂಕ್ ಗಿನಿಯಾದ ಅಧಿಕೃತ ಕರೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರವು ವ್ಯಾಪಕ ಭ್ರಷ್ಟಾಚಾರ ಮತ್ತು ರಾಜಕೀಯ ಅಶಾಂತಿಯಿಂದ ಬಳಲುತ್ತಿದೆ. ಇದು ಅದರ ಕರೆನ್ಸಿಯನ್ನು ದುರ್ಬಲಗೊಳಿಸಿದೆ. ವರ್ಷದಿಂದ ವರ್ಷಕ್ಕೆ, ರಾಷ್ಟ್ರದ ಕರೆನ್ಸಿಯ ಮೌಲ್ಯವು ಕಡಿಮೆಯಾಗುತ್ತಲೇ ಇದೆ.ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 102.41 ಜಿಎನ್ ಎಫ್ ಗೆ ಸಮವಾಗಿದೆ.


ಪರಗ್ವೆಯ ಗೌರಾನಿ (PYG)

ಹೆಚ್ಚಿನ ಹಣದುಬ್ಬರ, ಭ್ರಷ್ಟಾಚಾರ, ಹೆಚ್ಚಿನ ನಿರುದ್ಯೋಗ ಮತ್ತು ಹೆಚ್ಚಿದ ಬಡತನದ ಪರಿಣಾಮವಾಗಿ ದೇಶವು ವಿನಾಶಕಾರಿ ಆರ್ಥಿಕ ಕುಸಿತವನ್ನು ಅನುಭವಿಸಿತು. ಈ ಪ್ರತಿಯೊಂದು ಅಂಶಗಳು ಕರೆನ್ಸಿಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಿವೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 89.88 ಪಿವೈಜಿಗೆ ಸಮವಾಗಿದೆ.


ಕಾಂಬೋಡಿಯನ್ ರಿಯಲ್ (KHR)

ದುರ್ಬಲವಾದ ಕಾಂಬೋಡಿಯನ್ ರಿಯಲ್ ಹಿಂದಿನ ಪ್ರಮುಖ ಕಾರಣವೆಂದರೆ ದೇಶದ ಹೆಚ್ಚಿನ ಡಾಲರೀಕರಣ. 80ರ ದಶಕದ ಉತ್ತರಾರ್ಧ ಮತ್ತು 90ರ ದಶಕದ ಆರಂಭದಲ್ಲಿ ರಾಜಕೀಯ ಅಸಾಮರ್ಥ್ಯಗಳಿಂದಾಗಿ ದೇಶದ ರಿಯಲ್‌ನಲ್ಲಿ ವಿದೇಶಿ ಹೂಡಿಕೆಯನ್ನು ನಡೆಸಿ ಸಾರ್ವಜನಿಕ ವಿಶ್ವಾಸವನ್ನು ಗಳಿಸಲಾಯಿತು. 90 ರ ದಶಕದಲ್ಲಿ ಯುಎಸ್ ಡಾಲರ್ ಜನರಿಗೆ ಅನುಕೂಲಕರವಾಯಿತು. ಅತ್ಯಧಿಕ ಮಟ್ಟದಲ್ಲಿ ಯುಎಸ್ ಡಾಲರ್ ದೇಶದಲ್ಲಿ ಚಲಾವಣೆಯಾಯಿತು. ಹೀಗಾಗಿ ಶೇ. 90 ರಷ್ಟು ರಿಯಲ್ ಡಾಲರ್ ರೂಪದಲ್ಲಿದೆ. ಕಳೆದ ಎರಡು ದಶಕಗಳಲ್ಲಿ ನ್ಯಾಷನಲ್ ಬ್ಯಾಂಕ್ ಆಫ್ ಕಾಂಬೋಡಿಯಾ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದು ರಿಯಲ್ ಚಲಾವಣೆಯಲ್ಲಿ ಶೇ. 80ರಷ್ಟು ಹೆಚ್ಚಳಕ್ಕೆ ಕಾರಣವಾಯಿತು. ಆದರೂ ಇದು ಇನ್ನೂ ಹೆಚ್ಚು ಯುಎಸ್ ಡಾಲರ್ ಅನ್ನು ಅವಲಂಬಿಸಿದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 48.62 ರಿಯಲ್ ಗೆ ಸಮವಾಗಿದೆ.

ಇದನ್ನೂ ಓದಿ: Richest Village: ಗುಜರಾತ್‌ನಲ್ಲಿದೆ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ! ಇಲ್ಲಿಯ ಜನ ಇಟ್ಟಿರುವ ಫಿಕ್ಸೆಡ್‌ ಡಿಪಾಸಿಟ್‌ ಮೌಲ್ಯ 7,000 ಕೋಟಿ ರೂ!


ಉಗಾಂಡಾ ಶಿಲ್ಲಿಂಗ್ (UGX)

1966ರಲ್ಲಿ ಉಗಾಂಡಾದ ಶಿಲ್ಲಿಂಗ್ ಪೂರ್ವ ಆಫ್ರಿಕಾದ ಶಿಲ್ಲಿಂಗ್ ಅನ್ನು ಬದಲಿಸಿತು. ಪ್ರಸ್ತುತ ಉಗಾಂಡಾದ ಶಿಲ್ಲಿಂಗ್ ಅತ್ಯಂತ ಕಡಿಮೆ ಬೆಲೆಬಾಳುವ ಕರೆನ್ಸಿಗಳಲ್ಲಿ ಒಂದಾಗಿದೆ. ಇದಿ ಅಮೀನ್ ಆಳ್ವಿಕೆಯ ಅಡಿಯಲ್ಲಿ ಉಗಾಂಡಾವು ರಾಷ್ಟ್ರದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಲಸೆ ಕಾನೂನುಗಳಂತಹ ಕ್ರಮಗಳಿಂದ ಗಮನಾರ್ಹ ಹಿನ್ನಡೆ ಅನುಭವಿಸಿತು. ಅಧ್ಯಕ್ಷರ ಆರ್ಥಿಕ ಕುಸಿತದ ಪರಿಣಾಮಗಳು ದೇಶದ ಪ್ರಗತಿಗೆ ಅಡ್ಡಿಯಾಗುತ್ತಲೇ ಇವೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಕರೆನ್ಸಿಯ ಮೌಲ್ಯವು ಹೆಚ್ಚಿದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 44.22 ಯುಜಿಎಕ್ಸ್ ಆಗಿದೆ.

ಈ ಹತ್ತು ಅಗ್ಗದ ದೇಶಗಳ ಕರೆನ್ಸಿಯೊಂದಿಗೆ ಭಾರತೀಯ ರೂಪಾಯಿ ಮೌಲ್ಯದ ಹೋಲಿಕೆಯು 2024ರ ಆಗಸ್ಟ್ 19ರ ಅಂಕಿ ಅಂಶಗಳನ್ನು ಆಧರಿಸಿ ನೀಡಲಾಗಿದೆ. ಇದು ಕೆಲವೊಮ್ಮೆ ಕೊಂಚ ಏರಿಳಿತ ಕಾಣಬಹುದು.

Continue Reading

ದೇಶ

Air India: ನಿಯಮ ಉಲ್ಲಂಘನೆ: ಏರ್‌ ಇಂಡಿಯಾಕ್ಕೆ ಬಿತ್ತು ಬರೋಬ್ಬರಿ 90 ಲಕ್ಷ ರೂ. ದಂಡ

Air India: ನಾಗರಿಕ ವಿಮಾನಯಾನ ನಿರ್ದೇಶನಾಲಯವು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಗೆ ಬರೋಬ್ಬರಿ 90 ಲಕ್ಷ ರೂ. ದಂಡ ವಿಧಿಸಿದೆ. ಅರ್ಹತೆ ಹೊಂದಿರದ ಸಿಬ್ಬಂದಿಯೊಂದಿಗೆ ವಿಮಾನಗಳನ್ನು ನಿರ್ವಹಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಜತೆಗೆ ಏರ್ ಇಂಡಿಯಾದ ನಿರ್ದೇಶಕರ ಕಾರ್ಯಾಚರಣೆ ಮತ್ತು ನಿರ್ದೇಶಕರ ತರಬೇತಿ ಸಂಸ್ಥೆಗೂ ನಾಗರಿಕ ವಿಮಾನಯಾನ ನಿಯಂತ್ರಕ ಕ್ರಮವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ. ದಂಡ ವಿಧಿಸಿದೆ.

VISTARANEWS.COM


on

Air India
Koo

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು (Directorate General of Civil Aviation-DGCA) ಏರ್‌ ಇಂಡಿಯಾ (Air India) ವಿಮಾನಯಾನ ಸಂಸ್ಥೆಗೆ ಬರೋಬ್ಬರಿ 90 ಲಕ್ಷ ರೂ. ದಂಡ ವಿಧಿಸಿದೆ. ಅರ್ಹತೆ ಹೊಂದಿರದ ಸಿಬ್ಬಂದಿಯೊಂದಿಗೆ ವಿಮಾನಗಳನ್ನು ನಿರ್ವಹಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಜತೆಗೆ ಏರ್ ಇಂಡಿಯಾದ ನಿರ್ದೇಶಕರ ಕಾರ್ಯಾಚರಣೆ ಮತ್ತು ನಿರ್ದೇಶಕರ ತರಬೇತಿ ಸಂಸ್ಥೆಗೂ ನಾಗರಿಕ ವಿಮಾನಯಾನ ನಿಯಂತ್ರಕ ಕ್ರಮವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ. ದಂಡ ವಿಧಿಸಿದೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಪೈಲಟ್‌ಗೆ ಸೂಚಿಸಲಾಗಿದೆ ಎಂದು ಡಿಜಿಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. “ಏರ್ ಇಂಡಿಯಾ ವಿಮಾನ ತರಬೇತಿ ಹೊಂದಿರದ ಲೈನ್ ಕ್ಯಾಪ್ಟನ್ ಮತ್ತು ನಾನ್-ಲೈನ್-ರಿಲೀಸ್ಡ್‌ ಫಸ್ಟ್‌ ಆಫೀಸರ್‌ಗಳೊಂದಿಗೆ ಕಾರ್ಯ ನಿರ್ವಹಿಸಿದೆ. ಇದು ಸ್ಪಷ್ಟವಾದ ಸುರಕ್ಷತಾ ಮಾನದಂಡದ ಉಲ್ಲಂಘನೆ ಎನ್ನುವುದು ಗಮನಕ್ಕೆ ಬಂದಿದೆ. ಹೀಗಾಗಿ ದಂಡ ವಿಧಿಸಲಾಗಿದೆʼʼ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿವರಿಸಿದೆ.

ಜುಲೈ 10ರಂದು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಸಲ್ಲಿಸಿದ ಸ್ವಯಂಪ್ರೇರಿತ ವರದಿಯ ಮೂಲಕ ಈ ಘಟನೆ ಗಮನಕ್ಕೆ ಬಂದ ನಂತರ ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳು ಮತ್ತು ವೇಳಾಪಟ್ಟಿ ಸೌಲಭ್ಯದ ಸ್ಥಳ ಪರಿಶೀಲನೆ ಸೇರಿದಂತೆ ಕಾರ್ಯಾಚರಣೆಗಳ ತನಿಖೆ ನಡೆಸಿತು. “ತನಿಖೆಯ ಆಧಾರದ ಮೇಲೆ, ಹಲವಾರು ಪೋಸ್ಟ್ ಹೋಲ್ಡರ್‌ಗಳು ಮತ್ತು ಸಿಬ್ಬಂದಿಯಿಂದ ನಿಯಂತ್ರಕದ ಅನೇಕ ನಿಬಂಧನೆಗಳ ಉಲ್ಲಂಘನೆಯಾಗಿದೆ ಎನ್ನುವುದು ತಿಳಿದು ಬಂತು. ಈ ನಿರ್ಲಕ್ಷ್ಯ ಸುರಕ್ಷತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ” ಎಂದು ಪ್ರಕಟಣೆ ತಿಳಿಸಿದೆ.

ಜುಲೈ 22ರಂದು ನೀಡಲಾದ ಶೋಕಾಸ್ ನೋಟಿಸ್‌ಗಳ ಮೂಲಕ ತಮ್ಮ ನಿಲುವನ್ನು ವಿವರಿಸಲು ವಿಮಾನದ ಕಮಾಂಡರ್ ಮತ್ತು ಏರ್‌ಲೈನ್‌ನ ಪೋಸ್ಟ್ ಹೋಲ್ಡರ್‌ಗಳಿಗೆ ಅವಕಾಶ ನೀಡಲಾಗಿತ್ತು ಎಂದು ಡಿಜಿಸಿಎ ತಿಳಿಸಿದೆ. ಅದಾಗ್ಯೂ ಅವರು ನೀಡಿದ ಉತ್ತರ ತೃಪ್ತಿಕರವಾಗಿರಲಿಲ್ಲ. ಹೀಗಾಗಿ ಡಿಜಿಸಿಎ ಅಸ್ತಿತ್ವದಲ್ಲಿರುವ ನಿಯಮಗಳು / ನಿಬಂಧನೆಗಳ ಪ್ರಕಾರ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಅದರ ಭಾಗವಾಗಿ 99 ಲಕ್ಷ ರೂ. ದಂಡವನ್ನು ವಿಧಿಸಿದೆ. ನಿಯಮ ಉಲ್ಲಂಘನೆಗಾಗಿ ಡಿಜಿಸಿಎ ಏರ್ ಇಂಡಿಯಾಗೆ 90 ಲಕ್ಷ ರೂ., ವಿಮಾನಯಾನ ಕಾರ್ಯಾಚರಣೆ ನಿರ್ದೇಶಕರಿಗೆ 6 ಲಕ್ಷ ರೂ., ವಾಹಕದ ತರಬೇತಿ ನಿರ್ದೇಶಕರಿಗೆ 3 ಲಕ್ಷ ರೂ.ಗಳ ದಂಡ ವಿಧಿಸಿದೆ.

ಇದನ್ನೂ ಓದಿ: Air India: 180 ಉದ್ಯೋಗಿಗಳನ್ನು ವಜಾಗೊಳಿಸಿದ ಏರ್‌ ಇಂಡಿಯಾ; ನೀಡಿದ ಕಾರಣ ಇಲ್ಲಿವೆ

ಏರ್‌ ಇಂಡಿಯಾಕ್ಕೆ 1.10 ಕೋಟಿ ರೂ. ದಂಡ

ನವದೆಹಲಿ: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಏರ್‌ ಇಂಡಿಯಾ ಕಂಪನಿಗೆ ಕೆಲವು ತಿಂಗಳ ಹಿಂದೆಯಷ್ಟೇ ಬರೋಬ್ಬರಿ 1.10 ಕೋಟಿ ರೂ. ದಂಡ ವಿಧಿಸಲಾಗಿತ್ತು. ಬೋಯಿಂಗ್ ಬಿ 777 ವಿಮಾನಗಳ ಕಾರ್ಯಾಚರಣೆ ವೇಳೆ ಆಮ್ಲಜನಕಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಸುರಕ್ಷತಾ ಕೈಪಿಡಿಗಳನ್ನು ಅನುಸರಿಸದ ಕಾರಣ ಈ ದಂಡ ವಿಧಿಸಲಾಗಿತ್ತು. ಮುಂಬೈ / ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೋ ಮಧ್ಯೆ ಸಂಚರಿಸುವ ಬೋಯಿಂಗ್ ಬಿ 777 ವಿಮಾನದಲ್ಲಿ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು ಮೇಲೆ ಏರ್ ಇಂಡಿಯಾ ವಿರುದ್ಧ ವಿಮಾನಯಾನ ಸಂಸ್ಥೆಯ ಉದ್ಯೋಗಿಯಿಂದ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

Continue Reading

ವಾಣಿಜ್ಯ

Anil Ambani: ಅನಿಲ್‌ ಅಂಬಾನಿಗೆ ಸೆಬಿ ಶಾಕ್‌; 5 ವರ್ಷ ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ ನಿಷೇಧ, 25 ಕೋಟಿ ರೂ. ದಂಡ

Anil Ambani: ಭಾರತದ ಖ್ಯಾತ ಉದ್ಯಮಿ ಅನಿಲ್‌ ಅಂಬಾನಿ ಅವರಿಗೆ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಬಹುದೊಡ್ಡ ಶಾಕ್‌ ನೀಡಿದೆ. ಅನಿಲ್‌ ಅಂಬಾನಿ ಮತ್ತು ಅವರಿಗೆ ಸೇರಿದ 24 ಘಟಕಗಳಿಗೆ ಭಾರೀ ಮೊತ್ತದ ದಂಡ ವಿಧಿಸಿದೆ. ಜತೆಗೆ ಐದು ವರ್ಷಗಳ ಕಾಲ ಸೆಕ್ಯೂರಿಟೀಸ್‌ ಮಾರುಕಟ್ಟೆ (ಷೇರುಪೇಟೆ)ಯಿಂದ ನಿಷೇಧ ಹೇರಿದೆ. ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಕಂಪನಿಯಿಂದ ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಸೆಬಿ ಈ ಮಹತ್ವದ ಆದೇಶ ನೀಡಿದೆ.

VISTARANEWS.COM


on

Anil Ambani
Koo

ಮುಂಬೈ: ಭಾರತದ ಖ್ಯಾತ ಉದ್ಯಮಿ ಅನಿಲ್‌ ಅಂಬಾನಿ (Anil Ambani) ಅವರಿಗೆ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಬಹುದೊಡ್ಡ ಶಾಕ್‌ ನೀಡಿದೆ. ಅನಿಲ್‌ ಅಂಬಾನಿ ಮತ್ತು ಅವರಿಗೆ ಸೇರಿದ 24 ಘಟಕಗಳಿಗೆ ಭಾರೀ ಮೊತ್ತದ ದಂಡ ವಿಧಿಸಿದೆ. ಜತೆಗೆ ಐದು ವರ್ಷಗಳ ಕಾಲ ಸೆಕ್ಯೂರಿಟೀಸ್‌ ಮಾರುಕಟ್ಟೆ (ಷೇರುಪೇಟೆ)ಯಿಂದ ನಿಷೇಧ ಹೇರಿದೆ.

ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಹೋಮ್‌ ಫೈನಾನ್ಸ್‌ (Reliance Home Finance Limited-RHFL) ಕಂಪನಿಯಿಂದ ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಸೆಬಿ ಈ ಮಹತ್ವದ ಆದೇಶ ನೀಡಿದೆ. ಅನಿಲ್‌ ಅಂಬಾನಿಗೆ 25 ಕೋಟಿ ರೂ. ದಂಡ ವಿಧಿಸಲಾಗಿದ್ದು, ಉಳಿದವರಿಗೂ ಭಾರೀ ಮೊತ್ತದ ದಂಡ ಹಾಕಲಾಗಿದೆ. ಕ್ರಮ ಎದುರಿಸಿದವರಲ್ಲಿ ರಿಲಯನ್ಸ್‌ ಹೋಮ್‌ನ ಮಾಜಿ ಅಧಿಕಾರಿಗಳೂ ಸೇರಿದ್ದಾರೆ.

ಸೆಬಿ ಹೇಳಿದ್ದೇನು?

ಅನಿಲ್‌ ಅಂಬಾನಿ 5 ವರ್ಷಗಳ ಕಾಲ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಬಾರದು ಎಂದು ಸೂಚಿಸಿರುವ ಸೆಬಿ, ಯಾವುದೇ ಪಟ್ಟಿ ಮಾಡಲಾದ ಕಂಪನಿಯ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಹುದ್ದೆ ಹೊಂದುವುದಾಗಲಿ ಅಥವಾ ಸೆಬಿಯಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಜತೆ ಸಂಪರ್ಕ ಸಾಧಿಸುವುದಾಗಲಿ ಮಾಡಬಾರದು ಎಂದು ಹೇಳಿದೆ. ಜತೆಗೆ ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಅನ್ನೂ ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ 6 ತಿಂಗಳ ಕಾಲ ನಿರ್ಬಂಧಿಸಲಾಗಿದ್ದು, 6 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಘಟಕಗಳು ಹಣವನ್ನು ದುರುಪಯೋಗಪಡಿಸಿಕೊಳ್ಳುವ ವಂಚನೆಯಲ್ಲಿ ಭಾಗಿಯಾಗಿವೆ. ಇದು ಸೆಕ್ಯುರಿಟೀಸ್ ಕಾನೂನುಗಳ ಉಲ್ಲಂಘನೆ ಮತ್ತು ಹೂಡಿಕೆದಾರರ ನಂಬಿಕೆಯ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಸೆಮಿ ತೀರ್ಮಾನಿಸಿ ಈ ನಿರ್ಧಾರ ಪ್ರಕಟಿಸಿದೆ.

222 ಪುಟಗಳ ಅಂತಿಮ ಆದೇಶದಲ್ಲಿ ಸೆಬಿಯು, ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಸಹಾಯದಿಂದ ಅನಿಲ್ ಅಂಬಾನಿಯು ಆರ್‌ಎಚ್‌ಎಫ್‌ಎಲ್‌ನಿಂದ ಹಣವನ್ನು ಬೇರೆಡೆಗೆ ವರ್ಗಾಯಿಸುವ ವಂಚನೆಯ ಯೋಜನೆ ರೂಪಿಸಿದ್ದರು. ಸಾಲ ಎಂದು ಹೇಳಿ ಅವರು ತಮಗೆ ಸಂಬಂಧಿಸಿದ ಕಂಪನಿಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು ಎಂದು ಹೇಳಿದೆ.

ಆರ್‌ಎಚ್‌ಎಫ್‌ಎಲ್‌ನ ನಿರ್ದೇಶಕರ ಮಂಡಳಿ ಸಾಲ ನೀಡುವ ಅಭ್ಯಾಸಗಳನ್ನು ತಕ್ಷಣವೇ ನಿಲ್ಲಿಸುವಂತೆ ಹೇಳಿದ್ದಲ್ಲದೆ, ಕಾರ್ಪೊರೇಟ್ ಸಾಲಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವಂತೆ ತಿಳಿಸಿತ್ತು. ಆದರೆ ಕಂಪನಿಯ ಆಡಳಿತ ಈ ಆದೇಶಗಳನ್ನೆಲ್ಲ ನಿರ್ಲಕ್ಷಿಸಿತ್ತು. ಇದಲ್ಲದೆ ರಿಲಯನ್ಸ್ ಯೂನಿಕಾರ್ನ್ ಎಂಟರ್‌ಪ್ರೈಸಸ್, ರಿಲಯನ್ಸ್ ಎಕ್ಸ್‌ಚೇಂಜ್ ನೆಕ್ಸ್ಟ್ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಲೀನನ್ ಲಿಮಿಟೆಡ್, ರಿಲಯನ್ಸ್ ಬ್ಯುಸಿನೆಸ್ ಬ್ರಾಡ್‌ಕಾಸ್ಟ್ ನ್ಯೂಸ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಬಿಗ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ 21 ಘಟಕಗಳಿಗೆ ತಲಾ 25 ಕೋಟಿ ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ: SEBI: ಅದಾನಿ ವರದಿ: ಹಿಂಡನ್‌ಬರ್ಗ್‌ಗೆ ಸೆಬಿಯಿಂದ ಶೋಕಾಸ್ ನೋಟಿಸ್

2022ರ ಫೆಬ್ರವರಿಯಲ್ಲಿ ಸೆಬಿ ಮಧ್ಯಂತರ ಆದೇಶವನ್ನು ಹೊರಡಿಸಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್, ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಅಮಿತ್ ಬಾಪ್ನಾ, ರವೀಂದ್ರ ಸುಧಾಕರ್ ಮತ್ತು ಪಿಂಕೇಶ್ ಆರ್. ಶಾ ಅವರನ್ನು ಮುಂದಿನ ಆದೇಶದವರೆಗೆ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿರ್ಬಂಧಿಸಿತ್ತು. ಇದೀಗ ಇದೀಗ ಅಂತಿಮ ಆದೇಶ ಹೊರಡಿಸಿದೆ.

Continue Reading
Advertisement
ಕರ್ನಾಟಕ19 mins ago

Muda Scam: ದೆಹಲಿಯಲ್ಲಿ ರಾಹುಲ್‌ ಗಾಂಧಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ; ಕಾನೂನು ಹೋರಾಟದ ಬಗ್ಗೆ ಚರ್ಚೆ

Uttara Kannada News
ಉತ್ತರ ಕನ್ನಡ27 mins ago

Uttara Kannada News: ಹೊಸ ಆಧಾರ್ ನೋಂದಣಿ, ತಿದ್ದುಪಡಿಗೆ ಅವಕಾಶ

Invest Karnataka
ಬೆಂಗಳೂರು29 mins ago

Invest Karnataka: ಇಂಧನ ತಂತ್ರಜ್ಞಾನ; ರಾಜ್ಯದಲ್ಲಿ 8,300 ಕೋಟಿ ರೂ. ಹೂಡಿಕೆ ಮಾಡಲಿರುವ ಷೆರ್ವನ್‌ ಇಂಡಿಯಾ

UPSC Exam calendar
ದೇಶ57 mins ago

UPSC Exam calendar: UPSC ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್‌ ರಿಲೀಸ್‌; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

7th pay commission
ಕರ್ನಾಟಕ1 hour ago

7th pay commission: ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಶ್ರೇಣಿ ಪ್ರಕಟ; ಯಾರಿಗೆ ಎಷ್ಟು ಏರಿಕೆ?

Viral Video
Latest1 hour ago

Viral Video: ವಿಮಾನ ನಿಲ್ದಾಣದಲ್ಲಿ ಹೃದಯಾಘಾತ; ಸಿಪಿಆರ್ ಮಾಡಿ ಜೀವ ಉಳಿಸಿದ ಅಧಿಕಾರಿಗಳು

Recurring Deposit
ಮನಿ-ಗೈಡ್2 hours ago

Recurring Deposit: ಸಣ್ಣ, ಆರಂಭಿಕ ಹೂಡಿಕೆದಾರರಿಗೆ ಸೂಕ್ತ ಪೋಸ್ಟ್ ಆಫೀಸ್‌ನ ಆರ್‌ಡಿ; ಏನಿದರ ಲಾಭ?

Kannada New Movie
ಬೆಂಗಳೂರು2 hours ago

Kannada New Movie: ರಕ್ಷಿತ್ ಶೆಟ್ಟಿ ನಿರ್ಮಾಣದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಟ್ರೇಲರ್ ರಿಲೀಸ್‌; ಸಿನಿಮಾ ಬಿಡುಗಡೆ ಯಾವಾಗ?

UPSC Admit Card
ಪ್ರಮುಖ ಸುದ್ದಿ2 hours ago

UPSC Admit Card: NDA ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆಗೊಳಿಸಿದ UPSC; ಎಲ್ಲಿ ಡೌನ್ಲೋಡ್‌ ಮಾಡಬಹುದು?

Non Vegetarian Population
ಆಹಾರ/ಅಡುಗೆ2 hours ago

Non Vegetarian Population: ಜಗತ್ತಿನಲ್ಲಿ ಕುಸಿಯುತ್ತಿದೆ ಮಾಂಸಾಹಾರಿಗಳ ಸಂಖ್ಯೆ! ಕಡಿಮೆ ಮಾಂಸಾಹಾರದ ದೇಶಗಳಲ್ಲಿ ಭಾರತವೇ ನಂ.1

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌