Yogaraj Bhat :30 ಅಡಿ ಎತ್ತರದಿಂದ ಬಿದ್ದು ಲೈಟ್‌ ಮ್ಯಾನ್‌ ಸಾವು; ಚಿತ್ರ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ಐಆರ್ - Vistara News

ಸ್ಯಾಂಡಲ್ ವುಡ್

Yogaraj Bhat :30 ಅಡಿ ಎತ್ತರದಿಂದ ಬಿದ್ದು ಲೈಟ್‌ ಮ್ಯಾನ್‌ ಸಾವು; ಚಿತ್ರ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ಐಆರ್

Yogaraj Bhat : ಅಡಕಮಾರನಹಳ್ಳಿಯ ಗೋಡೌನ್‌ನಲ್ಲಿ ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಚಿತ್ರೀಕರಣದ ವೇಳೆ 30 ಅಡಿ ಎತ್ತರದ ಅಲ್ಯೂಮಿನಿಯಂ ರೋಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುವಾಗ ಆಯತಪ್ಪಿ ಬಿದ್ದು ಲೈಟ್‌ ಮ್ಯಾನ್‌ ಮೃತಪಟ್ಟಿದ್ದಾರೆ. ಈ ಸಂಬಂಧ ಯೋಗರಾಜ್‌ ಭಟ್‌ ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

VISTARANEWS.COM


on

Lightman dies after falling from 30 feet height FIR against film director Yogaraj Bhat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚಿತ್ರ ನಿರ್ದೇಶಕ ಯೋಗರಾಜ್‌ ಭಟ್‌ (Yogaraj Bhat) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಯೋಗರಾಜ್‌ ಭಟ್‌ ನಿರ್ದೇಶನದ ಮನದ ಕಡಲು (Manada kadalu Film) ಸಿನಿಮಾ ಚಿತ್ರಿಕರಣದ ವೇಳೆ ಅವಘಡವೊಂದು ಸಂಭವಿಸಿತ್ತು. ಮೂವತ್ತು ಅಡಿ ಎತ್ತರದಿಂದ ಬಿದ್ದು ಲೈಟ್ ಮ್ಯಾನ್ (Light man) ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲ ಬಳಿಯ ಅಡಕಮಾರನಹಳ್ಳಿಯಲ್ಲಿ ನಡೆದಿತ್ತು.

ಲೈಟ್ ಮ್ಯಾನ್ ಮೋಹನ್ ಕುಮಾರ್ ಮೃತ ದುರ್ದೈವಿ. ಕಳೆದ ಸೆ. 3ರ ಸಂಜೆ ಶೂಟಿಂಗ್‌ ಸೆಟ್‌ನಲ್ಲಿ ಲೈಟ್ ಬಿಚ್ಚುವಾಗ ಆಯಾ ತಪ್ಪಿ ಮೋಹನ್‌ ಕುಮಾರ್‌ ಕೆಳಗೆ ಬಿದ್ದಿದ್ದರು. ಕೆಳಗೆ ಬಿದ್ದ ರಭಸಕ್ಕೆ ಮೋಹನ್ ಕುಮಾರ್ ತಲೆಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವವಾಗಿತ್ತು. ಅಲ್ಲಿದ್ದವರು ಕೂಡಲೇ ಮೋಹನ್ ಕುಮಾರ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಇದನ್ನೂ ಓದಿ: Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜು; ಕ್ರೈಂ ಥ್ರಿಲ್ಲರ್‌ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣ

ಆದರೆ ಗೊರಗುಂಟೆಪಾಳ್ಯ ಖಾಸಗಿ ಆಸ್ಪತ್ರೆಯಲ್ಲಿ ಮೋಹನ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್, ಅಡಕಮಾರನಹಳ್ಳಿಯ ಕೃಷ್ಣಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ A4 ಎಂದು ಯೋಗರಾಜ್ ಭಟ್ ವಿರುದ್ಧ ಕೇಸ್ ದಾಖಲಾಗಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಚಿತ್ರವನ್ನು ಅಡಕಮಾರನಹಳ್ಳಿಯ ಗೋಡೌನ್‌ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. 30 ಅಡಿ ಎತ್ತರದ ಅಲ್ಯೂಮಿನಿಯಂ ರೋಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುವ ವೇಳೆ ಅವಘಡ ಸಂಭವಿಸಿದೆ. ಮೃತನ ಸಹೋದರ ಶಿವರಾಜ್ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan : ನಾವಿಬ್ಬರು ಮದುವೆ ಆಗಿಲ್ಲ.. ಜಸ್ಟ್‌ ಲಿವಿಂಗ್‌ ಟುಗೆದರ್‌ನಲ್ಲಿ ಇದ್ದೀವಿ- ವಿಚಾರಣೆಯಲ್ಲಿ ನಟ ದರ್ಶನ್‌ ಹೇಳಿಕೆ

Living together : ನಟ ದರ್ಶನ್‌ (Actor Darshan) ಹಾಗೂ ಪವಿತ್ರಾಗೌಡ (Pavitra gowda) ಗ್ಯಾಂಗ್‌ ಕೊಲೆ ಕೇಸ್‌ನಲ್ಲಿ ಜೈಲು ಕಂಬಿ ಎಣಿಸುತ್ತಿದೆ. ಈ ನಡುವೆ ನಾವಿಬ್ಬರು ಮದುವೆ ಆಗಿಲ್ಲ, ಲಿವಿಂಗ್‌ ಟುಗೆದರ್‌ನಲ್ಲಿ ಇದ್ದೇವೆ ಎಂದು ವಿಚಾರಣೆ ವೇಳೆ ದರ್ಶನ್‌ ಬಾಯ್ಬಿಟ್ಟಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

VISTARANEWS.COM


on

By

Actor Darshan says he is not married to Pavithra Gowda
Koo

ಬೆಂಗಳೂರು:‌ ನಾನು ಪವಿತ್ರಾಗೌಡ ಮದುವೆ ಆಗಿಲ್ಲ, ಆದರೆ ಇಬ್ಬರು ಜತೆಯಲ್ಲಿ ಇದ್ದೀವಿ ಎಂದು ಕೊಲೆ ಆರೋಪಿ ನಟ ದರ್ಶನ್‌ (Actor Darshan) ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌, ಗೆಳತಿ ಪವಿತ್ರಾಗೌಡ ಸೇರಿ 17 ಮಂದಿ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಮಸೇಜ್‌ಗಳನ್ನು ಮಾಡಿದ್ದಕ್ಕೆ, ಆತನನ್ನು ಕಿಡ್ನ್ಯಾಪ್‌ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಇದೀಗ ಇದೇ ಪ್ರಕರಣದಲ್ಲಿ ನಟ ದರ್ಶನ್‌ ಗ್ಯಾಂಗ್‌ ಕಂಬಿ ಎಣಿಸುತ್ತಿದ್ದಾರೆ.

ಖುದ್ದು ಡಿಸಿಪಿಯಿಂದಲೇ ವಿಚಾರಣೆ ನಡೆದಾಗ ನಟ ದರ್ಶನ್‌ ತನ್ನ ಹಾಗೂ ಪವಿತ್ರಗೌಡ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ನಾನು ಪವಿತ್ರಾಗೌಡ ಮದುವೆ ಆಗಿಲ್ಲ. ಆದರೆ ಇಬ್ಬರು ಜತೆಯಲ್ಲಿ ಇದ್ದೀವಿ ಎಂದಿದ್ದಾರೆ. ದರ್ಶನ್‌ ಹಾಗೂ ಪವಿತ್ರಾಗೌಡ ಲಿವಿಂಗ್‌ ಟುಗೆದರ್‌ನಲ್ಲಿಇರುವುದಾಗಿ ಬಾಯ್ಬಿಟ್ಟಿದ್ದಾರೆ. ಸದ್ಯ ಇಬ್ಬರ ಸಂಬಂಧದ ಬಗ್ಗೆಯೂ ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Actor Darshan says he is not married to Pavithra Gowda
Actor Darshan says he is not married to Pavithra Gowda

ಕಿಡ್ನ್ಯಾಪ್‌ಗೂ ಮೊದಲು ಪವಿತ್ರಾಗೌಡಗೆ ರೇಣುಕಾಸ್ವಾಮಿಯ ಫೋಟೊ ಕಳಿಸಿದ್ದ ರಾಘವೇಂದ್ರ

ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡುವ ಮುನ್ನ ರಾಘವೇಂದ್ರ ಪವಿತ್ರಾಗೌಡಗೆ ರೇಣುಕಾಸ್ವಾಮಿಯ ಫೋಟೊವನ್ನು ಕಳಿಸಿದ್ದ. ಇವನೇನಾ ರೇಣುಕಾಸ್ವಾಮಿ ಎಂದು ಕನ್ಫರ್ಮ್ ಮಾಡಲು ರಾಘವೇಂದ್ರ ಪವನ್‌ಗೆ ಫೋಟೊ ಕಳಿಸಿದ್ದ. ರಾಘವೇಂದ್ರ ಕಾರಲ್ಲಿ ಕೂತು ತೆಗೆದ ಫೋಟೊವನ್ನು ಪವನ್ ಮೂಲಕ ಪವಿತ್ರ ಹಾಗೂ ದರ್ಶನ್‌ಗೆ ಕಳುಹಿಸಿದ್ದರು. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ರೇಣುಕಸ್ವಾಮಿ ಫೋಟೊ ತೆಗೆದಿದ್ದರು.

Actor Darshan says he is not married to Pavithra Gowda
Actor Darshan says he is not married to Pavithra Gowda

ನಟ ದರ್ಶನ್ ಸಿನಿಮಾ ಪೋಸ್ಟರ್‌ಗಳಲ್ಲಿ ಆರೋಪಿಗಳು

ಆರೋಪಿಗಳಾದ ರಾಘವೇಂದ್ರ, ಅನುಕುಮಾರ್ ಹಾಗೂ ಜಗದೀಶ್ ನಟ ದರ್ಶನ್ ಸಿನಿಮಾ ಪೋಸ್ಟರ್‌ಗಳಲ್ಲಿಯೂ ಇರುವುದನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ನಟ ದರ್ಶನ್‌ನ ಪಕ್ಕ ಅಭಿಮಾನಿಗಳಾಗಿದ್ದ ಆರೋಪಿಗಳು, ಕ್ರಾಂತಿ ಹಾಗೂ ಕಾಟೇರಾ ಸಿನಿಮಾದ ಪೋಸ್ಟರ್‌ನಲ್ಲಿ ಪೋಸ್‌ ಕೊಟ್ಟಿದ್ದರು. ಸದ್ಯ ಪೋಸ್ಟರ್‌ಗಳ ಫೋಟೊಗಳನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

Actor Darshan says he is not married to Pavithra Gowda
Actor Darshan says he is not married to Pavithra Gowda

ಟೆನ್ಷನ್‌ನಲ್ಲೇ ಓಡಾಡುತ್ತಿದ್ದ ದರ್ಶನ್‌

ರೇಣುಕಾಸ್ವಾಮಿ ಕೊಲೆ ಬಳಿಕ ಮೈಸೂರಿನ‌ ರ‍್ಯಾಡಿಸನ್ ಹೋಟೆಲ್‌ನಲ್ಲಿ ನಾಗರಾಜ್ ಜತೆ ದರ್ಶನ್ ಚರ್ಚೆ ಮಾಡುತ್ತಿರುವ ಫೋಟೊಗಳು ಲಭ್ಯವಾಗಿವೆ. ರೇಣುಕಾಸ್ವಾಮಿ ಕೊಲೆ ಬಳಿಕ ದರ್ಶನ್‌ ಟೆನ್ಷನ್‌ನಲ್ಲೇ ಓಡಾಡುತ್ತಿದ್ದರು. 10ನೇ ತಾರೀಖು ರಾತ್ರಿ 10 ಗಂಟೆ ಸಮಯದಲ್ಲಿ ಸೆರೆಯಾದ ದೃಶ್ಯವಿದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜು; ಕ್ರೈಂ ಥ್ರಿಲ್ಲರ್‌ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣ

Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಕ್ರೈಂ ಥ್ರಿಲ್ಲರ್‌ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣಗೊಳ್ಳಲಿದೆ.

VISTARANEWS.COM


on

By

Koo

ಸಿನಿಮಾ ತಂತ್ರಜ್ಞಾನರೇ ಸೇರಿ ಮಾಡಿರುವ ಕನ್ನಡದ ಹೊಚ್ಚ ಹೊಸ ಚಲನಚಿತ್ರ ‘ದ್ವಿಜ’ ಇದೇ (Dvija Film) ಅಕ್ಟೋಬರ್‌ಗೆ ತೆರೆಗೆ ಬರಲು ಸಜ್ಜಾಗಿದೆ. ‘ದ್ವಿಜ’ ಅನ್ನೋ ಹೆಸರೇ ವಿಶೇಷವಾಗಿದ್ದು, ಇದಕ್ಕೆ ಎರಡನೇ ಹುಟ್ಟು ಎಂಬ ಅರ್ಥದಲ್ಲಿ ‘ದ್ವಿಜ’ ಅನ್ನೋ ಹೆಸರಿಡಲಾಗಿದೆ ಎಂದು ಸಿನಿಮಾದ ನಿರ್ದೇಶಕ ಗಿರಿ ಲಕ್ಷ್ಮಣ್ ಹೇಳಿದ್ದಾರೆ.

ರಸ್ತೆ ಅಪಘಾತದಲ್ಲಿ ತಾನು ಪ್ರೀತಿಸುತಿದ್ದ ಹುಡುಗನನ್ನ ಕಳೆದುಕೊಂಡ ಯುವತಿಯೊಬ್ಬಳ ಕಥೆಯನ್ನು ಈ ‘ದ್ವಿಜ’ ಸಿನಿಮಾ ಹೇಳುತ್ತಿದ್ದು, ಸೈಬರ್ ಕ್ರಿಮಿನಲ್ ಜಗತ್ತಿನ ಅನಾವರಣ ಮಾಡುವ ಪ್ರಯತ್ನ ಇದರಲ್ಲಾಗಿದೆ. ಈಗಾಗಲೇ ‘ದ್ವಿಜ’ ಸಿನಿಮಾದ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆಗೆ ತಂಡ ತಯಾರಿ ನಡೆಸಿದೆ.

ಕ್ರೈಂ ಥ್ರಿಲ್ಲರ್ ಕಥೆಯನ್ನು ಒಳಗೊಂಡ ಸಿನಿಮಾದಲ್ಲಿ ಯುವ ನಟರಾದ ಲಡ್ಡು ಗೋಪಾಲ್, ಸೃಷ್ಟಿ ರಾಘವೇಂದ್ರ, ಸತ್ಯ, ದಿಲೀಪ್ ಕುಮಾರ್ ಎಲ್, ಮನೀಶಾ ಭಟ್, ಗಗನ್ ಟಿ ಜಿ ಮುಂತಾದವರು ನಟಿಸಿದ್ದಾರೆ. ಹೊಸಬರ ತಂಡಕ್ಕೆ ಗೌರಿ ಲಕ್ಷ್ಮಣ್ ಬಂಡವಾಳ ಹೂಡಿದ್ದು, ಶ್ಯಾಮಲ್ ಭೌಮಿಕ್, ರಿಥ್ವಿಕ್ ಶರ್ಮಾ, ಸುಬ್ರಮಣಿಯನ್ ಶೋಭಾ ಮತ್ತು ನವೀನ್ ಎಂ ಬಿ ರವರು ಸಹ-ನಿರ್ಮಾಪಣೆಯ ಹೊಣೆ ಹೊತ್ತಿದ್ದಾರೆ.

Dvija Film to release in October
Dvija Film to release in October

ಇದನ್ನೂಓದಿ: Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ

ಯುವ ಪ್ರತಿಭೆಗಳಾದ ಕೀರ್ತನ್ ಭಟ್‌ರ ಛಾಯಾಗ್ರಹಣ, ಪ್ರಶಾಂತ್ ಅಂಬಿಲಿ ಯವರ ಸಂಕಲನ, ಶ್ರೀಹರಿ ಅವರ ಗ್ರಾಫಿಕ್ಸ್ , ಪ್ರಬೋಧ್ ಶ್ಯಾಮ್ ಮತ್ತು ಹೇಮಾದ್ರಿ ಶ್ರೀನಿವಾಸ್ ರವರ ಸಂಗೀತ ಸಂಯೋಜನೆ ಈಗಾಗಲೇ ಜನರ ಮನ ಸೆಳೆಯುತ್ತಿದೆ.

“ಹೊಸ ಅಲೆಗಳ ಅಂಚಿನಲ್ಲಿರುವ ಕನ್ನಡ ಚಿತ್ರರಂಗಕ್ಕೆ, ದ್ವಿಜ ಸಿನಿಮಾ ಮತ್ತೊಂದು ಗರಿಯಾಗಲಿದೆ. ಈ ಚಿತ್ರ ಒಂದು ಸುಂದರ ಅನುಭವವನ್ನು ಕೊಡಲಿದ್ದು, ಬರುವ ದಿನಗಳಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದರಲ್ಲಿ ಸಂಶಯವಿಲ್ಲ” ಎಂದು ಈಗಾಗಲೇ ಚಿತ್ರವನ್ನು ವೀಕ್ಷಿಸಿರುವ ಲೂಸಿಯಾ ಪವನ್ ಕುಮಾರ್, ಬ್ಲಿಂಕ್ ನಿರ್ದೇಶಕ ಶ್ರೀನಿಧಿ ಬೆಂಗಳೂರು, ಖ್ಯಾತ ನಟರಾದ ರಿಷಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ದ್ವಿಜ’ ಸಿನಿಮಾದ ಹೆಚ್ಚಿನ ಮಾಹಿತಿಯನ್ನು ‘ಡಿಸೈರ್ಲೆಸ್ ಪ್ರೊಡಕ್ಷನ್ಸ್’ ಅನ್ನೋ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

Actor Darshan : ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ಸಲ್ಲಿಕೆ ಆಗಿದೆ. ಈ ಮಧ್ಯೆ ಡಿ ಗ್ಯಾಂಗ್‌ಗೆ ಜಾಮೀನು ಸಿಗುತ್ತಾ ಇಲ್ವಾ ಎಂಬ ಕುತೂಹಲ ಮೂಡಿದೆ. ಜತೆಗೆ ಮನೆ ಊಟಕ್ಕೆ ಸಲ್ಲಿಸಿದ್ದ ಅರ್ಜಿವಿಚಾರಣೆ ನಡೆಯಲಿದೆ.

VISTARANEWS.COM


on

By

actor darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ (Actor Darshan) ಹಾಗೂ ಪವಿತ್ರಾಗೌಡ ಫೋನ್‌ಗಳು ಕೊನೆಗೂ ರಿಟ್ರೀವ್ ಆಗಿಲ್ಲ. ಕಳೆದ ಒಂದೂವರೆ ತಿಂಗಳಿಂದ ಹೈದರಾಬಾದ್ ಸಿಎಫ್ಎಸ್ಎಲ್‌ನಲ್ಲಿದ್ದ ಇಬ್ಬರು ಆರೋಪಿಗಳ ಐಫೋನ್‌ಗಳು ರಿಟ್ರೀವ್ ಆಗದೇ ರಿಟರ್ನ್ ಆಗಿವೆ. ಸದ್ಯ ಎರಡು ಐಫೋನ್‌ಗಳನ್ನು ಗುಜರಾತ್‌ಗೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಗುಜರಾತ್‌ನ ಎಫ್ಎಸ್ಎಲ್ ಯೂನಿವರ್ಸಿಟಿಯಲ್ಲಿ ಆತ್ಯಾಧುನಿಕ ತಂತ್ರಜ್ಞಾನ, ಎಕ್ಪ್ಮೆಂಟ್ ಇದೆ. ಎಫ್ಎಸ್ಎಲ್ ತಜ್ಞರ ತಂಡದಿಂದ ಎರಡು ಐಫೋನ್‌ಗಳ ರಹಸ್ಯ ಭೇದಿಸಲು ಚಿಂತನೆ ನಡೆದಿದೆ.

ನಟ ದರ್ಶನ್‌ಗೆ ಇಂದಾದರೂ ಸಿಗುತ್ತಾ ಮನೆ ಊಟ?

ಬೆಂಗಳೂರು/ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (renukaswamy murder case) ಜೈಲುಪಾಲಾಗಿರುವ ನಟ ದರ್ಶನ್‌ (Actor Darshan) ಮನೆ ಊಟದ ಅರ್ಜಿ ವಿಚಾರಣೆಯು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಗುರುವಾರ ನಡೆದಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯದ ಬಳಿಕ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು. ನಿನ್ನೆ ಬುಧವಾರವಷ್ಟೇ ಪೊಲೀಸರು ಪ್ರಕರಣದ ಚಾರ್ಜ್‌ ಶೀಟ್‌ ಅನ್ನು ಸಲ್ಲಿಸಿದ್ದರು. ಇಂದು ಮನೆ ಊಟದ ಅರ್ಜಿ ವಿಚಾರಣೆ ನಡೆಯಲಿದ್ದು, ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿಯಿಂದ ವಾದ ಮಂಡಿಸಲಿದ್ದಾರೆ.

ಚಾರ್ಜ್‌ಶೀಟ್‌ ಸಲ್ಲಿಕೆ ಬಳಿಕ ಡಿ ಗ್ಯಾಂಗ್‌ ಮುಂದಿನ ನಡೆ ಏನು?

ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೆಪ್ಟೆಂಬರ್ 9ರಂದು ದರ್ಶನ್ ನ್ಯಾಯಾಂಗ ಅವಧಿ ಮುಕ್ತಾಯ ಆಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೆ 09ರಂದು 24ನೇ ಎಸಿಎಂಎಂ ( ACMM) ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.

ಅದೇ ದಿನ ಚಾರ್ಜ್ ಶೀಟ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಸೆಷನ್ಸ್ ಕೋರ್ಟ್‌ಗೆ ವರ್ಗಾವಣೆ ಆಗಲಿದೆ. ಚಾರ್ಜ್ ಶೀಟ್ ವರ್ಗಾವಣೆ ಆದ 2 /3 ದಿನಗಳಲ್ಲಿ ಕೇಸ್‌ಗೆ ಸಂಬಂಧಿಸಿದಂತೆ ಸ್ಕ್ರೂಟಿನಿ ಆಗಲಿದೆ. ಕೇಸ್ ಸ್ಕ್ರೂಟಿನಿ ಆದ ನಂತರ ಕೋರ್ಟ್‌ನಿಂದ ಪ್ರಕರಣಕ್ಕೆ ಸಿಸಿ ನಂಬರ್‌ ನೀಡಲಾಗುತ್ತದೆ. ಕೇಸ್‌ನ ಸಿಸಿ ನಂಬರ್ ಪಡೆದ ನಂತರ ಆರೋಪಿಗಳ ಪರ ವಕೀಲರಿಗೆ ಚಾರ್ಜ್ ಶೀಟ್ ಪ್ರತಿಯನ್ನು ನೀಡಲಾಗುತ್ತದೆ. ಆರೋಪಿ ಪರ ವಕೀಲರು ಚಾರ್ಜ್ ಸೀಟ್ ಪ್ರತಿ ಕೈಗೆ ಸಿಕ್ಕ ನಂತರ, ಜಾಮೀನಿಗೆ ಅರ್ಜಿ ಸಲ್ಲಿಸಲಿಸಬಹುದು.

ಸೆಪ್ಟೆಂಬರ್ 9 ರ ನಂತರ ಜಾಮೀನಿಗೆ ಅರ್ಜಿ ಸಲ್ಲಿಸುವುದಕ್ಕೆ ದರ್ಶನ್, ಪವಿತ್ರ ಗೌಡ ಸೇರಿ ಉಳಿದ ಆರೋಪಿಗಳ ಪರ ವಕೀಲರಿಂದ ಸಿದ್ಧತೆ ನಡೆಯುತ್ತಿದೆ. ಚಾರ್ಜ್ ಶೀಟ್‌ಗೂ ಮುನ್ನ ಪವಿತ್ರ ಗೌಡ, ಅನು ಕುಮಾರ್ ಸೇರಿ ಹಲವರು ಸಲ್ಲಿಸಿದ್ದ ಜಾಮೀನು ಅರ್ಜಿಗಳು ವಜಾ ಆಗಿತ್ತು.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ಡಿ ಗ್ಯಾಂಗ್‌ಗೆ ಸಿಗುತ್ತಾ ಜಾಮೀನು?

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17 ಜನ ಆರೋಪಿಗಳು ಇದ್ದಾರೆ. ಆರೋಪಿಗಳ ಪರ ವಕೀಲರು ತಮ್ಮ ತಮ್ಮ ಕಕ್ಷಿದಾರ ದೋಷಾರೋಪಣ ಪಟ್ಟಿ ಪಡೆದುಕೊಳ್ಳುತ್ತಾರೆ. ಒಬ್ಬೊಬ್ಬ ಆರೋಪಿಯ ಮೇಲೆ ಇರುವ ಪ್ರತ್ಯೇಕ ಆರೋಪದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ದೋಷಾರೋಪಣ ಪಟ್ಟಿಯಿಂದ ಆರೋಪಿಯನ್ನು ಹೊರತರಲು ಚಿಂತನೆ ನಡೆಸಲಿದ್ದಾರೆ. ರಿಸರ್ಚ್ ಮಾಡಿಕೊಂಡು ಬೇರೆ ತೀರ್ಪುಗಳನ್ನು ಉಲ್ಲೇಖ ಮಾಡಿಕೊಳ್ಳುತ್ತಾರೆ. ಬಳಿಕ ಸಂಬಂಧಪಟ್ಟ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತಾರೆ.

ಮೊದಲು ವಕಾಲತ್ತು ಹಾಕಿದ ಅರ್ಜಿಯನ್ನು ಸಲ್ಲಿಕೆ ಮಾಡಲಾಗುತ್ತದೆ. ಕೋರ್ಟ್‌ನಲ್ಲಿ ಅರ್ಜಿ ದಾಖಲಾದ ಬಳಿಕ ಅರ್ಜಿ ವಿಚಾರಣೆ ಬರಲಿದೆ. ಈ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಲಿದ್ದಾರೆ. ಅರ್ಜಿ ವಿಚಾರಣೆ ಸಾಕ್ಷ್ಯಾಧಾರ ಪರಿಶೀಲನೆ ನಡೆಸಿ ಜಾಮೀನು ಕೊಡುವುದು ಬಿಡುವುದು ಕೋರ್ಟ್ ವಿವೇಚನೆಗೆ ಬಿಟ್ಟಿದ್ದಾಗಿದೆ. ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದರೆ ಹೈಕೋರ್ಟ್ ಮೊರೆ ಹೋಗಲಿದ್ದಾರೆ. ಅಲ್ಲೂ ಕೂಡ ಜಾಮೀನು ಅರ್ಜಿ ವಜಾ ಆದರೆ ಸುಪ್ರಿಂ ಕೋರ್ಟ್ ಮೊರೆ ಹೋಗಬೇಕು.

ಇಷ್ಟೆಲ್ಲ ಸರ್ಕಸ್ ನಡುವೆಯೂ ಜಾಮೀನು ಸಿಗದಿದ್ದರೆ ಆರೋಪಿತರು ಜೈಲಿನಲ್ಲಿ ಕಾಲ ಕಳೆಯಬೇಕು. ಇದರ ಜತೆಗೆ ತನಿಖಾಧಿಕಾರಿಗಳು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮನವಿ ಮಾಡಬಹುದು. ಮಾಡಿ ಅದನ್ನ ನ್ಯಾಯಾಲಯ ಪುರಸ್ಕರಿಸಿದರೆ ಪ್ರಕರಣದ ಟ್ರಯಲ್ ಆರಂಭವಾಗುತ್ತದೆ. ಟ್ರಯಲ್ ಮುಗಿದು ಆರೋಪಿಗಳ ತಪ್ಪು ಸಾಬೀತು ಆದರೆ ಸಜಾ ಆಗಬಹುದು. ಇಲ್ಲ ಪೊಲೀಸರು ಸರಿಯಾದ ಸಾಕ್ಷಿ ನೀಡಿ ಆರೋಪವನ್ನು ಸಾಬೀತು ಮಾಡದಿದ್ದರೆ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋಗಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshan : ರೇಣುಕಾಸ್ವಾಮಿ ಕೊಲೆ (Renukaswamy murder case) ಆರೋಪಿಗಳು ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ ಹೋಗಿದ್ದರು. ರೇಣುಕಾ ಸ್ವಾಮಿ‌ ಹತ್ಯೆಯ ಮ್ಯಾಪಿಂಗ್ ಮಾಡಿ ಇಂಚಿಂಚು ಮಾಹಿತಿಯನ್ನು ಪೊಲೀಸರು ಕಲೆ ಹಾಕಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

VISTARANEWS.COM


on

By

Actor Darshans gang moves Google to destroy evidence after Renukaswamys murder
Koo

ಬೆಂಗಳೂರು: ರೇಣುಕಾ ಸ್ವಾಮಿ‌ ಹತ್ಯೆ (Renuka swamy Murder case) ಪ್ರಕರಣದ ಇಂಚಿಂಚು ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ರೇಣುಕಾ ಸ್ವಾಮಿ‌ ಹತ್ಯೆಯ ಮ್ಯಾಪಿಂಗ್ ಮಾಡಿ ಚಾರ್ಜ್ ಶೀಟ್ ಮಾಡಿದ್ದಾರೆ. ಇಷ್ಟಕ್ಕೂ ಹೇಗಿದೆ ಗೊತ್ತಾ ಪೊಲೀಸರಿಂದ ಮರ್ಡರ್ ಕಹಾನಿಯ ಮ್ಯಾಪಿಂಗ್?

ಪವಿತ್ರಗೌಡ ರೇಣುಕಾಸ್ವಾಮಿಯ ಮೆಸೇಜ್ ವಿಚಾರವನ್ನು ಮೊದಲಿಗೆ ಪವನ್‌ಗೆ ತಿಳಿಸುತ್ತಾಳೆ. ಬಳಿಕ ಪವನ್ ಫೇಕ್‌ ಐಡಿ ಮಾಡಿ ಗೌತಮ್ ಹೆಸರಲ್ಲಿ ರೇಣುಕಾಸ್ವಾಮಿ ಜತೆಗೆ ಚಾಟಿಂಗ್‌ ಮಾಡುತ್ತಾನೆ. ಚಾಟ್ ಮಾಡಿ ರೇಣುಕಾ ಸ್ವಾಮಿ ಲೊಕೇಶನ್ ಕಂಡು ಹಿಡಿತ್ತಾರೆ. ಅದಕ್ಕೂ ಮೊದಲು ರೇಣುಕಾಸ್ವಾಮಿ ಫೇಕ್ ವಿಳಾಸವನ್ನು ಕೊಟ್ಟಿದ್ದ.

ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್ ಮಾಡಿರುವುದನ್ನು ಪವನ್‌ ದರ್ಶನ್‌ಗೆ ತೋರಿಸುತ್ತಾನೆ. ನಂತರ ದರ್ಶನ್‌ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬರುವಂತೆ ತಿಳಿಸುತ್ತಾನೆ. ನಂತರ ರಾಘವೇಂದ್ರ ಮುಖಾಂತರ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿಸಿ, ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬರುತ್ತಾರೆ.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ಇತ್ತ ಶೂಟಿಂಗ್ ಮುಗಿಸಿ ಊಟಕ್ಕೆ ಹೋಗಿದ್ದ ದರ್ಶನ್‌ಗೆ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿರುವ ವಿಚಾರವನ್ನು ಮುಟ್ಟಿಸುತ್ತಾರೆ. ಅಲ್ಲಿಂದ ದರ್ಶನ್, ನಾಗರಾಜು, ಪವಿತ್ರಾಳನ್ನು ಪಿಕ್ ಅಪ್‌ ಮಾಡಿಕೊಂಡು ಶೆಡ್‌ಗೆ ಬರುತ್ತಾರೆ. ದರ್ಶನ್‌ ಬರುವ ಮುನ್ನ ಪವನ್‌ ಮತ್ತು ಗ್ಯಾಂಗ್‌ ಮೊದಲೇ ರೇಣುಕಾಸ್ವಾಮಿಯನ್ನು ಥಳಿಸಿರುತ್ತಾರೆ.

ನಂತರ ಶೆಡ್ಡಿಗೆ ಬಂದಿದ್ದ ದರ್ಶನ್ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಬಳಿಕ ಲಾಠಿಯಿಂದ ಹೊಡೆದು ರೇಣುಕಾಸ್ವಾಮಿ ಗುಪ್ತಾಂಗಕ್ಕೆ ಬಲವಾಗಿ ಒದ್ದಿದ್ದ. ನಂತರ ಪವಿತ್ರಾಗೌಡ ನಿನ್ನಂತವರು ಇರಬಾರೆಂದು ಎಂದು ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ರೇಣುಕಾಸ್ವಾಮಿಗೆ ಥಳಿಸಿದ ನಂತರ ದರ್ಶನ್‌ ಅಲ್ಲಿಂದ ಮನೆಗೆ ವಾಪಸ್‌ ಹೋಗಿದ್ದ.

ನಂತರ ರೇಣುಕಾ ಸ್ವಾಮಿಯನ್ನು ಎಳೆದುಕೊಂಡು ಹೋಗಿ ವಾಚ್ ಮ್ಯಾನ್ ರೂಮಿಗೆ ಬಿಸಾಡುತ್ತಾರೆ. ಎಲ್ಲರ ಬಲವಾದ ಹೊಡೆತಕ್ಕೆ ರೇಣುಕಾಸ್ವಾಮಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ರೇಣುಕಾ ಸ್ವಾಮಿಯ ಪಲ್ಸ್ ಚೆಕ್‌ ಮಾಡಿದ ಪ್ರದೋಶ್, ದರ್ಶನ್‌ಗೆ ಫೋನ್‌ ಮಾಡಿ ಸತ್ತಿರುವ ವಿಷ್ಯವನ್ನು ಮುಟ್ಟಿಸುತ್ತಾನೆ. ಡೆಡ್‌ ಬಾಡಿಯನ್ನು ಡಿಸ್ಪಾಚ್‌ ಮಾಡುವ ಕೆಲಸದ ಜತೆಗೆ ಸೆರಂಡರ್‌ ಆಗುವವರನ್ನು ರೆಡಿ ಮಾಡುತ್ತಾರೆ. ಬಳಿಕ ರಾಘವೇಂದ್ರ, ಕಾರ್ತಿಕ್‌, ನಿಖಿಲ್ ನಾಯ್ಕ, ಕೇಶವ್ ಮೂರ್ತಿಯನ್ನು ಸರೆಂಡರ್‌ ಆಗಲು ಒಪ್ಪಿಸುತ್ತಾರೆ.

ಮಾರನೇ ದಿನ ನಟ ದರ್ಶನ್ ಮನೆಯಲ್ಲಿ ನಡೆದಿದ್ದ ಪೂಜೆಯಲ್ಲಿ ಭಾಗಿಯಾಗಿದ್ದು, ಮುಂದೆ ಏನು ಆಗುತ್ತೋ ಏನೋ ಎಂದು ಟೆನ್ಷನ್‌ನಲ್ಲೇ ಓಡಾಡಿದ್ದಾರೆ. ಪೂಜೆ ಮುಗಿಸಿ ರಾತ್ರೋ ರಾತ್ರಿ‌ ದರ್ಶನ್‌ ಮೈಸೂರಿಗೆ ತೆರಳಿದ್ದರು. ಇದಾದ ಬಳಿಕ ಹಣ ಪಡೆದು ಬಂದು ಕೆಲವರು ಸರೆಂಡರ್ ಆಗಿದ್ದರು. ಇತ್ತ ಮೋರಿಯಲ್ಲಿ ಸಿಕ್ಕಿದ್ದ ಮೃತದೇಹವನ್ನು ಕಂಡು ಅಸಹಜ ಸಾವು ಎಂದು ದೂರು ದಾಖಲಿಸಲು ಮುಂದಾಗಿದ್ದರು. ಗಾಯಗಳನ್ನು ನೋಡಿ ಡಿಸಿಪಿ ಕೊಲೆ ಕೇಸ್ ಎಂದು ದಾಖಲಿಸಿಕೊಳ್ಳಿ ಎಂದಿದ್ದರು. ಇತ್ತ ತಾವಾಗಿಯೇ ಸರೆಂಡರ್ ಆಗಿದ್ದು ಕಂಡು ಪೊಲೀಸರಿಗೆ ಅನುಮಾನ ಬಂದಿತ್ತು.

ಪೊಲೀಸರಿಗೆ ಮೊದಲಿಗೆ ಇದು ರೌಡಿಯೊಬ್ಬನ ಕೊಲೆ ಎಂಬ ಸಂಶಯ ಇತ್ತು. ಡಿಸಿಪಿ ಮತ್ತು ಎಸಿಪಿ ಹೋದಾಗ ರಾಘವೇಂದ್ರನ‌ ಬಗ್ಗೆ ಪೊಲೀಸರು ಹೇಳುತ್ತಾರೆ. ಈತ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಎನ್ನುವ ಮಾಹಿತಿ ಲಭ್ಯವಾಗುತ್ತದೆ. ಚಿತ್ರದುರ್ಗದಿಂದ ಇಲ್ಲಿ ಯಾಕೆ ಬಂದ ಎಂದು ಅನುಮಾನ ಮೂಡಿದೆ. ಆಗ ಪವಿತ್ರಾಗೌಡ ಬಗ್ಗೆ ಕೆಟ್ಟ ಮೆಸೇಜ್ ಮಾಡಿದ್ದ ಎಂದು ಹೇಳುತ್ತಾನೆ.

ಬೆಳಗಿನ ಜಾವ ಮೂರು ಗಂಟೆಗೆ ಎಸಿಪಿ ಚಂದನ್ ಡಿಸಿಪಿ ಗಿರೀಶ್‌ ಅವರಿಗೆ ಕರೆ ಮಾಡಿ ದರ್ಶನ್ ಭಾಗಿ ಬಗ್ಗೆ ಹೇಳುತ್ತಾರೆ. ಡಿಸಿಪಿ ಗಿರೀಶ್‌ 6 ಗಂಟೆಗೆ ನಗರ ಪೊಲೀಸ್ ಆಯುಕ್ತರಿಗೆ ಹೇಳಿದ್ದರು. ಅಷ್ಟರಾಗಲೇ ಕೇಶವ ಮೂರ್ತಿ ಪವಿತ್ರಾ ಗೌಡ ಹೆಸರು ಬಾಯಿಬಿಟ್ಟಿದ್ದ.

ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ ಹೋಗಿದ್ದ ಆರೋಪಿಗಳು

ತನಿಖೆ ವೇಳೆ ಹಂತಕರು ಸಾಕ್ಷಿ ನಾಶಕ್ಕೆ ಏನೇನು ಮಾಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಡಿಜಿಟಲ್ ಸಾಕ್ಷಿಗಳನ್ನು ನಾಶ ಮಾಡಲು ಆರೋಪಿಗಳು ಗೂಗಲ್ ಮೊರೆ ಹೋಗಿದ್ದರು. ಒಂದು ವೇಳೆ ಅರೆಸ್ಟ್ ಆದರೆ ತಮ್ಮ ಬಗ್ಗೆ ಯಾವುದೇ ಸಾಕ್ಷಿ ಸಿಗಬಾರದು ಎಂದು ಮಾಸ್ಟರ್ ಪ್ಲಾನ್ ಮಾಡಿದ್ದರು. ಆರೋಪಿಗಳು ಓಡಾಡಿದ್ದ ಲೋಕೇಷನ್ ಸಿಗದಂತೆ ಡಾಟಾ ಡಿಲೀಟ್‌ಗೆ ಯತ್ನಿಸಿದ್ದರು. ಯಾವ ರೀತಿ ಡಿಲೀಟ್ ಮಾಡಬೇಕು ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು. ಆರೋಪಿ ಟೆಕ್ಕಿ ಪ್ರದೂಶ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ವೇಳೆ ಕಳ್ಳಾಟ ಬಯಲಾಗಿದೆ. ಪ್ರದೂಶ್, ಇತರೆ ಆರೋಪಿಗಳ ಲೋಕೇಷನ್ ಜತೆ ಸರ್ಚ್ ಹಿಸ್ಟರಿ ಕೂಡ ಪತ್ತೆಯಾಗಿದೆ. ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ಬಗ್ಗೆ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor Darshan says he is not married to Pavithra Gowda
ಸ್ಯಾಂಡಲ್ ವುಡ್54 seconds ago

Actor Darshan : ನಾವಿಬ್ಬರು ಮದುವೆ ಆಗಿಲ್ಲ.. ಜಸ್ಟ್‌ ಲಿವಿಂಗ್‌ ಟುಗೆದರ್‌ನಲ್ಲಿ ಇದ್ದೀವಿ- ವಿಚಾರಣೆಯಲ್ಲಿ ನಟ ದರ್ಶನ್‌ ಹೇಳಿಕೆ

Lightman dies after falling from 30 feet height FIR against film director Yogaraj Bhat
ಸ್ಯಾಂಡಲ್ ವುಡ್51 mins ago

Yogaraj Bhat :30 ಅಡಿ ಎತ್ತರದಿಂದ ಬಿದ್ದು ಲೈಟ್‌ ಮ್ಯಾನ್‌ ಸಾವು; ಚಿತ್ರ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ಐಆರ್

ಸಿನಿಮಾ4 hours ago

Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜು; ಕ್ರೈಂ ಥ್ರಿಲ್ಲರ್‌ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣ

Theft case
ಬೆಂಗಳೂರು ಗ್ರಾಮಾಂತರ5 hours ago

Theft Case : ಪ್ರೇಯಸಿಯ ಜತೆಗೆ ಹೈಫೈ ಲೈಫ್‌ ಎಂಜಾಯ್‌ ಮಾಡಲು ಮನೆಗಳ್ಳತನಕ್ಕೆ ಇಳಿದ ಪ್ರೇಮಖೈದಿ!

karnataka weather Forecast
ಮಳೆ6 hours ago

Karnataka Weather : ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಿನಲ್ಲಿ ಹೇಗೆ?

Dina Bhavishya
ಭವಿಷ್ಯ7 hours ago

Dina Bhavishya : ಈ ದಿನ ನಿಮ್ಮನ್ನು ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ; ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ

TA Sharavana
ಕರ್ನಾಟಕ17 hours ago

TA Sharavana : ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾದ ಬಳಿಕ ಕಚೇರಿ ಉದ್ಘಾಟನೆ ಮಾಡಿದ ಟಿ.ಎ ಶರವಣ

actor darshan
ಸಿನಿಮಾ19 hours ago

Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

Actor Darshans gang moves Google to destroy evidence after Renukaswamys murder
ಸಿನಿಮಾ19 hours ago

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshan gang
ಬೆಂಗಳೂರು20 hours ago

Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್6 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌