Areca Nut Price: ದರ ಏರಿಳಿಕೆ; ಅಡಿಕೆ ಮಾರುಕಟ್ಟೆಯಲ್ಲೂ ಶುರುವಾಗಿದೆ ಷೇರುಪೇಟೆಯಂತೆ ಗೂಳಿ ಕಾಳಗ, ಕರಡಿ ಕುಣಿತ! - Vistara News

ಕೃಷಿ

Areca Nut Price: ದರ ಏರಿಳಿಕೆ; ಅಡಿಕೆ ಮಾರುಕಟ್ಟೆಯಲ್ಲೂ ಶುರುವಾಗಿದೆ ಷೇರುಪೇಟೆಯಂತೆ ಗೂಳಿ ಕಾಳಗ, ಕರಡಿ ಕುಣಿತ!

Areca Nut Price: ಅಡಿಕೆ ರೈತರ ಮುಖದಲ್ಲಿ ಗಾಬರಿ, ಆತಂಕ, ಗೊಂದಲಗಳ ಎಮೋಜಿಗಳು ಎದ್ದು ಕಾಣುತ್ತಿವೆ. ಕಳೆದ ವರ್ಷ 23,000 ರೂ. ತಲುಪಿದ್ದ ಸಿಪ್ಪೆ ಗೋಟು ಧಾರಣೆ, ಈ ಬಾರಿ 18,000 ತಲುಪಿ ರಿವರ್ಸ್ ಗೇರ್‌ಗೆ ಹಾಕಿದ್ದು, ಮತ್ತೆ ಮುಂದೆ ಹೋಗಲಿಲ್ಲ. ಈಗ 16,000 ರೂ.ಗೆ ಬಂದು ಹಿಮ್ಮುಖ ಚಲನೆಯಲ್ಲೇ ಇದೆ. ಅಡಿಕೆ ಮಾರುಕಟ್ಟೆಯಲ್ಲಿ ಏನು ನಡೆಯುತ್ತಿದೆ? ಈ ಕುರಿತ ‘ಗ್ರೌಂಡ್ ರಿಪೋರ್ಟ್’ ಇಲ್ಲಿದೆ.

VISTARANEWS.COM


on

rate fluctuations In the arecanut have started like the stock market
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅರವಿಂದ ಸಿಗದಾಳ್, ಮೇಲುಕೊಪ್ಪ

ಕಳೆದೊಂದು ವಾರದಿಂದ ಗ್ರಾಫ್‌ನಲ್ಲಿ ಅಡಿಕೆ ಧಾರಣೆಯ ಬಾಣ ಕೆಂಪು ಬಣ್ಣದೊಂದಿಗೆ ಇಳಿಮುಖವಾಗಿ ಚಲಿಸುತ್ತಿದೆ. ಅಡಿಕೆ ಮಾರುಕಟ್ಟೆಯಲ್ಲಿನ (Areca Nut Price) ಧಾರಣೆ ಕುಸಿತಕ್ಕೆ ಕಾರಣಗಳನ್ನು ಪತ್ರಿಕೆಗಳು ಬಿಚ್ಚಿಡುತ್ತಿವೆ. ವಾಟ್ಸಪ್, ಫೇಸ್‌ಬುಕ್‌ಗಳಂತಹ ಜಾಲತಾಣಗಳಲ್ಲಿ ಧಾರಣೆ ಕುಸಿತಕ್ಕೆ ಕಾರಣವಾದ ಅಂಶಗಳೊಂದಿಗೆ ದೊಡ್ಡ ಚರ್ಚೆ ನೆಡೆಯುತ್ತಿದೆ.

ಅಡಿಕೆ ರೈತರ ಮುಖದಲ್ಲಿ ಗಾಬರಿ, ಆತಂಕ, ಗೊಂದಲಗಳ ಎಮೋಜಿಗಳು ಎದ್ದು ಕಾಣುತ್ತಿವೆ. ಕಳೆದ ವರ್ಷ ₹23000 ತಲುಪಿದ್ದ ಸಿಪ್ಪೆ ಗೋಟು ಧಾರಣೆ, ಈ ಬಾರಿ ₹18000 ತಲುಪಿ ರಿವರ್ಸ್ ಗೇರ್‌ಗೆ ಹಾಕಿದ್ದು, ಮತ್ತೆ ಮುಂದೆ ಹೋಗಲಿಲ್ಲ. ಈಗ ₹16,000 ಬಂದು, ಹಿಮ್ಮುಖ ಚಲನೆಯಲ್ಲೇ ಇದೆ. ರಾಶಿ ಇಡಿ ಧಾರಣೆಯಲ್ಲಿ ಮೂರು ದಿನದಲ್ಲಿ ₹.3000 ಇಳಿದು ಹೋಗಿದೆ. ₹.50,000 ಇದ್ದ ರಾಶಿ ಇಡಿ ದರ ಈಗ ₹.47,000 ಬಂದಿದೆ. ಮಂಡಿ, ಸಹಕಾರಿ ಸಂಘಗಳಲ್ಲಿ ಒಂದೆರಡು ಲಾಟ್‌ಗಳಿಗೆ ₹.48,000+ ತೋರಿಸಿ, ಬೆಳೆಗಾರರನ್ನು ಸಮಾಧಾನ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಅಡಿಕೆ ವ್ಯಾಪಾರದಲ್ಲಿ ನೆಡೆಯುತ್ತಿದ್ದ ಮುಸುಕಿನ ಕೈ ವ್ಯಾಪಾರದಲ್ಲಿ ರಾಶಿ ಇಡಿ ಧಾರಣೆ ₹.45,000 ಕ್ಕೆ ಕುಸಿದಿದೆ. ಅಡಿಕೆ ಧಾರಣೆಯ ಇಳಿಮುಖದ ಕಂಪನಕ್ಕೆ ಅನಧಿಕೃತ (ಬಿಲ್ ಇಲ್ಲದೆ, ಮನೆ ಅಂಗಳದಲ್ಲಿ, ಪೇಟೆಯ ಮೂಲೆ ಗಲ್ಲಿಯಲ್ಲಿ) ವ್ಯಾಪಾರಗಳು ತಟಸ್ಥವಾಗಿವೆ.

ಶ್ರಾವಣ ಮಾಸದಲ್ಲಿ ಅಡಿಕೆಗೆ ಬೆಲೆ ಬರುತ್ತೆ ಎಂಬ ಪ್ರಬಲ ಸಾಂಪ್ರದಾಯಿಕ ನಂಬಿಕೆಯಿಂದ ಮನೆಯಲ್ಲೇ ಇಟ್ಟುಕೊಂಡ ರೈತರ 20, 50 ಕೆಜಿ ಅಡಿಕೆಗೆ ಈ ಬಾರಿ ಮೌಲ್ಯ ಬರುವುದಿಲ್ಲ ಅಂತ ಪಂಚಾಂಗದ ಕ್ರೋಧಿ ಸಂವತ್ಸರಕ್ಕೂ ಗೊತ್ತಾಗಿದೆ!

ರೈತರು ಡೈರಿ ತೆಗೆದು, ಕನ್ನಡಕ ಧರಿಸಿ, ಬೇಸಿಕ್ ಸೆಟ್ ಫೋನಿನ ಕೀ ಪ್ಯಾಡ್‌ನ ನಂಬರ್ ಒತ್ತಿ ಮಧ್ಯವರ್ತಿ ವ್ಯಾಪಾರಿಗಳನ್ನು, ಅನಧಿಕೃತ ಏಜೆಂಟರುಗಳನ್ನು ಸಂಪರ್ಕಿಸಿದರೆ “ಈಗ ರೇಟಿಲ್ಲ ಗೌಡ್ರೆ, ಹಬ್ಬ ಮುಗಿಯಲಿ ಆಮೇಲೆ ಫೋನ್ ಮಾಡಿ, ನೋಡುವಾ” ಅಂತಿದಾರೆ.

ಸಹಕಾರಿ ಸಂಘಗಳಲ್ಲಿ ವಾರಗಳ ಹಿಂದೆ ₹.48,000 ಕ್ಕೆ ಬಿಡ್ಡಿಂಗ್ ಆಗಿದ್ದ ರಾಶಿ ಇಡಿ ‘ಲಾಟ್‌’ಗೆ ಈಗ ₹.35,000 ಬಿಡ್ಡಿಂಗ್ ದರ ಹಾಕಿ, ಗಾಬರಿ ಆತಂಕ ಮೂಡುವಂತೆ ಮಾಡಲಾಗಿದೆ! ಒಂದು ಕಡೆ ಮಳೆಗಾಲದಲ್ಲಿ ಬಿಸಿಲು ರಣಗುಡುತ್ತಿದೆ. ಇದ್ದಕ್ಕಿದ್ದಂತೆ ದಿನಕ್ಕೊಂದೆರಡು ಬಾರಿ ಹತ್ತು ನಿಮಿಷಗಳ ಆರ್ಭಟದ ಮಳೆ ಬಂದು ‘ರೌಡಿಸಮ್’ ತೋರಿಸುತ್ತಿದೆ! ಇಂತಹ ಒಂದು ವಿಶಿಷ್ಟ, ವಿಪರೀತ, ವಿಸ್ಮಯ ಸನ್ನಿವೇಷದ ಮಲೆನಾಡು/ಕರಾವಳಿಯಲ್ಲಿ, ಭೇಟಿಯಾದ ಅಡಿಕೆ ಬೆಳೆಗಾರರು ಪರಸ್ಪರ ಮಾತಾಡಿಕೊಳ್ಳುತ್ತಿರುವುದು ಎರಡು-ಮೂರು ಕಾಮನ್ ಸಬ್ಜೆಕ್ಟ್‌ಗಳ ಬಗ್ಗೆ ಮಾತ್ರ!!

ಮಾತಾಡಿಕೊಳ್ಳುವ ಟಾಪ್ ಟೆನ್ ವಿಷಯಗಳಲ್ಲಿ ಮೊದಲ ಮೂರು ವಿಷಗಳು: ಅಡಿಕೆ ಧಾರಣೆ ಇಳಿತ! ಅಡಿಕೆ ಕೊಳೆ ಉದುರಿದ್ದು! ಅಡಿಕೆ ಭೂಮಿಯ ಒತ್ತುವರಿ ತೆರವು! ಮೂರ್ನಾಲ್ಕು ದಿನಗಳಿಂದ ಅಡಿಕೆ ಧಾರಣೆ ಇಳಿತದ ವಿಚಾರವೇ ಅತ್ಯಂತ ಪ್ರಮುಖವಾದುದು. ಮತ್ತು ಪರಸ್ಪರ ಆಡಿಕೊಳ್ಳುತ್ತಿರುವ ಮಾತುಗಳಲ್ಲಿರುವುದು ಪ್ರಶ್ನೆ ಪತ್ರಿಕೆ ಮಾತ್ರ. ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳೆಲ್ಲವೂ ಔಟ್ ಆಫ್ ಸಿಲಬಸ್‌ ಮಾಹಿತಿಯವು! ಯಾರಿಗೂ ನಿಖರ ಉತ್ತರ ಗೊತ್ತಿಲ್ಲ!

1) ಅದಾನಿ ಗ್ರೂಪ್ ಆಫ್ ಕಂಪನೀಸ್ v/s ಹಿಂಡನ್ ಬರ್ಗ್ ಪ್ರಕರಣಗಳ ರೀತಿ ಸಹಕಾರಿ ವಲಯ v/s ಖಾಸಗೀ ವಲಯಗಳ ನಡುವೆ ಒಂದು ವ್ಯಾಪಾರೀ ಘರ್ಷಣೆಯ ವ್ಯವಹಾರ ಶುರುವಾಗಿದೆಯಾ?

2) ಹಿಂಡನ್ ಬರ್ಗ್ ಪ್ರಕರಣದಿಂದ ಷೇರು ಪೇಟೆ ತಲ್ಲಣವಾದಂತೆ, ಅಡಿಕೆ ಮಾರುಕಟ್ಟೆಯಲ್ಲೂ ಸಂಚಲನ ಉಂಟಾಗುತ್ತಿದೆಯಾ!!? ಮುಂದುವರೆಯಲಿದೆಯಾ?

3) ಹೂಡಿಕೆ ಮಾಡಿದ ಷೇರುದಾರರ ರೀತಿ, ಶ್ರಮ ಹೂಡಿ, ಅಡಿಕೆ ಬೆಳೆದ ಬೆಳೆಗಾರರ ಮೇಲೆ ಮಾರುಕಟ್ಟೆ ವಿಪರೀತ ದರ ಏರಿಳಿತದ ಪರಿಣಾಮ ಬೀರಲಿದೆಯಾ?

4) ಕೆಲವು ಖಾಸಗೀ ವರ್ತಕರು, ಮಧ್ಯವರ್ತಿಗಳು, ಬಿಲ್ ಇಲ್ಲದೇ ವ್ಯವಹಾರ ಮಾಡುವ ಏಜಂಟರ್‌ಗಳು ತಮ್ಮ ‘ಫಾರಂ ಹೌಸ್‌‌ಗಳಲ್ಲಿ’, ಶೆಡ್‌ಗಳಲ್ಲಿ ದೇಶೀ ಅಡಿಕೆ ಜೊತೆ, ವಿದೇಶಿ ಕಳಪೆ ಅಡಿಕೆ ಮತ್ತು ದೇಶೀಯ ಕಲ್ಲುಗೋಟಿನಂತಹ ಅಡಿಕೆಗಳನ್ನು ಕ್ವಾಲಿಟಿ ಅಡಿಕೆ ಜೊತೆ ಮಿಶ್ರಣ ಮಾಡುವ ದಂದೆ ಮಾಡುತ್ತಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ! ಇದು ನಿಜವಾ?

5) ವಿದೇಶಿ ಕಳಪೆ ಅಡಿಕೆ ಅವ್ಯಾಹತವಾಗಿ ಕಳ್ಳದಾರಿಯಲ್ಲಿ ಒಳ ನುಸುಳುತ್ತಿದ್ದರೂ… ಅನೇಕ ಸಂಸದರು, ಶಾಸಕರು ಮೌನವಾಗಿರುವುದರ ಹಿಂದಿನ ‘ಚಿದಂಬರ ರಹಸ್ಯ’ ಏನು?

6) ವಿದೇಶಿ ಕಳಪೆ ಅಡಿಕೆ ಅಕ್ರಮವಾಗಿ ದೇಶ ವ್ಯಾಪಿ ಸಿಗುವಂತಾಗಿದೆ ಎಂದು ಪತ್ರಿಕೆಗಳಲ್ಲಿ ವ್ಯಾಪಕ ಸುದ್ದಿ ಆಗುತ್ತಿದ್ದರೂ ಸರಕಾರದ ದಿಟ್ಟತನದ ಕ್ರಮ ಆಗದಿರುವುದಕ್ಕೆ ‘ಯಾರೆಲ್ಲ’ಕಾರಣರಾಗಿದ್ದಾರೆ?

7) ಗುಟ್ಕಾ ಕಂಪನಿಯವರು ಸಡನ್ನಾಗಿ ಕ್ವಾಲಿಟಿ ಕಾನ್ಸೆಪ್ಟ್ ತಂದು ಮಾರ್ಕೇಟ್‌ನಲ್ಲಿ ಅಡಿಕೆ ಧಾರಣೆ ಇಳಿಸುವ ಡ್ರಾಮಾ ಆಡ್ತಾ ಇದಾರಾ?

8) ಗುಟ್ಕಾ ಕಂಪನಿಯ ಹೆಸರು ಹೇಳಿ, ಕಳಪೆ ಅಡಿಕೆ ಕತೆ ಹಣೆದು, ಗೊರಬಲು ಫಾಲಿಷರ್ ಯಂತ್ರದ ಮೇಲೆ ಗೂಬೆ ಕೂರಿಸಿ ಮಧ್ಯವರ್ತಿಗಳೇ ಗೇಮ್ ಆಡ್ತಾ ಇದಾರಾ?

9) ವಿದೇಶಿ ಕಳಪೆ ಅಡಿಕೆಯನ್ನು ತಂದು ಮಿಶ್ರ ಮಾಡಿದ ಮಧ್ಯವರ್ತಿ ವ್ಯಾಪಾರಿಗಳು, ಆ ‘ಕಳಪೆ ಅಡಿಕೆಯ’ ಆಪಾದನೆಯನ್ನು ರೈತರ ಫಾಲೀಷ್ಡ್ ಗೊರಬಲು ಅಡಿಕೆಯ ಕಡೆ ತಿರುಗಿಸಿ, ತಾವು ಸಾಚಾ ಆಗಲು ರಂಗ ಸಜ್ಜಿಕೆ ನಿರ್ಮಾಣ ಮಾಡಿದ್ದಾರಾ?

10) ಸಹಕಾರಿ ಮತ್ತು ಖಾಸಗೀ ಅಡಿಕೆ ವ್ಯಾಪಾರಿಗಳ ಮಧ್ಯೆ ನೆಡೆಯುತ್ತಿರುವ ಘರ್ಷಣೆಗೆ ನಿಜವಾದ ಕಾರಣ ಏನು? ಅಡಿಕೆ GST?, ಅಕ್ರಮ ಸಾಗಾಣಿಕೆ?, ಲಾಭದ ವ್ಯತ್ಯಾಸ? ಬಿಗಿ ಕ್ರಮಗಳು, ವ್ಯಾಪಾರಿಗಳು/ಗುಟ್ಕಾ ಕಂಪನಿಗಳು ಖಾಸಗಿ ಮಂಡಿಯಲ್ಲಿನ ಅಡಿಕೆಯಲ್ಲಿ ಕಳಪೆ ಅಡಿಕೆ ಹೆಚ್ಚು ಮಿಶ್ರಣವಾಗಿದೆ ಎಂದಿದ್ದು?

11) ಚೇಣಿದಾರರು ಲಾಭದ ಆಸೆಯಿಂದ 100 ಕೆಜಿ ಹಸಿ ಅಡಿಕೆಗೆ 13 ಕೆಜಿ ರಾಶಿ ಇಡಿ ಕೊಡುವಾಗ ಕಳಪೆ ಗೊರಬಲು ಅಡಿಕೆಯನ್ನು ಮಿಶ್ರ ಮಾಡಿ ಕೊಡುತ್ತಿರುವುದು?

12) ಸಿಪ್ಪೆ ಗೋಟು ಸುಲಿದು, ನೆನಸಿ, ಚೊಗರಿನ ಬಣ್ಣ ಹಚ್ಚಿ, ಕಳಪೆ ಅಡಿಕೆಯನ್ನು “ತಲೆ ಮೇಲೆ ಹೊಡೆದಂತೆ” ಅದನ್ನು ರಾಶಿ ಇಡಿ ಅಡಿಕೆಯಾಗಿಸಿ ಮಾರಾಟ ದಂದೆ ಮಾಡುವ ಶಿರಸಿ, ಸಾಗರದ ಕೆಲವು ಮಧ್ಯವರ್ತಿಗಳು ಮಾಡುವ ಅವ್ಯವಹಾರ ವಿಪರೀತವಾಗಿ ಇಡೀ ಮಾರುಕಟ್ಟೆಯ ಎಲ್ಲ ಅಡಿಕೆಯ ಕ್ವಾಲಿಟಿಯನ್ನು ಅನುಮಾನಿಸುವಂತೆ ಮಾಡಿದೆಯಾ?

13) ಪಾನ್ ಮಸಾಲ ತಯಾರಕ ಪ್ರತಿನಿಧಿಗಳು ಕರ್ನಾಟಕಕ್ಕೆ ಬಂದು ಅಡಿಕೆ ಕ್ವಾಲಿಟಿ ಚೆಕ್ ಮಾಡ್ತಾ ಇದ್ದಾರೆ. ಕೆಲವು ಖಾಸಗಿ ದೊಡ್ಡ ಮಂಡಿಗಳಲ್ಲೇ ಹೆಚ್ಚು ಕಳಪೆ ಅಡಿಕೆ ಇರುವುದು ಬಯಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿಜವೇ?

14) ಮಲೆನಾಡು ಮತ್ತು ಕರಾವಳಿಯ ಕೆಂಪಡಿಕೆಯ ಒಟ್ಟು ವ್ಯವಹಾರದಲ್ಲಿ 20-25% ಗೊರಬಲು ಅಡಿಕೆಯೇ ಇರುತ್ತಿತ್ತು. ಆಗ ಗುಟ್ಕಾ ತಯಾರಿಕೆಗೆ ಕಳಪೆ ಅಡಿಕೆ ಆಗಿರದ ಅದು ಈಗ ಕಳಪೆ ಅಂತ ಸುದ್ದಿ ಆಗುತ್ತಿರುವುದೇಕೆ? ಗುಟ್ಕಾದಲ್ಲಿ ಈ ಅಡಿಕೆ ಬಳಸುವುದಿಲ್ಲ ಅಂತಾದರೆ, ಇಷ್ಟು ಸಮಯ ಈ ಎರಡನೇ ದರ್ಜೆಯ ಅಡಿಕೆ ಏನಾಗುತ್ತಿತ್ತು? ರಾತ್ರಿ ಬೆಳಗಾಗುವುದರೊಳಗೆ ಗುಟ್ಕಾದಲ್ಲಿ ಗಟ್ಟಿ ಅಡಿಕೆ ಬಳಸದಿರುವ ನಿರ್ಧಾರ ತೀರ್ಮಾನ ಆಯ್ತಾ?

15) ಇರುವ ಮಾಹಿತಿ ಪ್ರಕಾರ ಮತ್ತು ಗುಟ್ಕಾ ತಿನ್ನುವವರ ಅಭಿಪ್ರಾಯ ಗುಟ್ಕಾಕ್ಕೆ ಒಳ್ಳೆಯ ಸಾಫ್ಟ್ ಅಡಿಕೆ ಬೇಡ, ಗೋಟು, ಕಲ್ಲುಗೊಟು ರಾಮಡಿಕೆ ತರಹದ ಗಟ್ಟಿ ಅಡಿಕೆಗಳೇ ಬೇಕು. ಹಾಗಾದರೆ, ಅದು ಹೌದಾದರೆ ಈಗ ಶುರು ಆಗಿರುವ ಕ್ವಾಲಿಟಿ ಅಡಿಕೆ ಪ್ರಹಸನದ ಹಿಂದಿನ ಸೂತ್ರದಾರರು ಯಾರು? ವ್ಯಾಪಾರಿಗಳಾ? ಮಧ್ಯವರ್ತಿಗಳಾ? ಸ್ವತಃ ಗುಟ್ಕಾ ಕಂಪೆನಿಗಳಾ?

16) ಗಟ್ಟಿ ಅಡಿಕೆಯನ್ನು ಗುಟ್ಕಾದಲ್ಲಿ ಬಳಸುವುದಿಲ್ಲಾ ಅಂತಾದರೆ, ಈಗಲೂ ಎರಡನೇ ದರ್ಜೆಯ ಅಡಿಕೆ, ಕಳಪೆ ಅಡಿಕೆ, ಗೊರಬಲು ಅಡಿಕೆ, ಗಟ್ಟಿ ಅಡಿಕೆ, ಕಲ್ಲುಗೋಟು ಅಡಿಕೆ, ಗಟ್ಟಿ ಚಾಲಿ ಅಡಿಕೆಗಳನ್ನು ವಿಭಾಗಿಸಿ ಕೊಡುವುದನ್ನು ಪಾನ್ ಮಸಾಲ/ಗುಟ್ಕಾ ಕಂಪನಿಗಳು ಖರೀಧಿ ಮಾಡುತ್ತಿವೆ. ಅದನ್ನು ಏನು ಮಾಡುತ್ತಾರೆ?

17) ಸಹಕಾರಿ ಸಂಘಗಳು ಕೊಟ್ಟ ಅಧಿಕೃತ ಮಾಹಿತಿ ಪ್ರಕಾರ, ಎಲ್ಲಾ ಅಡಿಕೆಗಳು ತಿನ್ನುವುದಕ್ಕಾಗಿಯೇ ಸರಬರಾಜು ಆಗುತ್ತಿರುವುದು. ಅದರಲ್ಲೂ ಬಹುತೇಕ ಎಲ್ಲಾ ಅಡಿಕೆಗಳು ಗುಟ್ಕಾ‌ಕ್ಕೇ ಹೋಗುವುದು. ಅದು ಹೌದಾದರೆ, ಬೇಯಿಸಿದ ಕೆಂಪಡಿಕೆ ರಾಶಿ ಇಡಿ ಮತ್ತು ಬೇಯಿಸದ ಚಾಲಿ ಇಡಿ ಎಂದು ಯಾಕೆ ಬೇರೆ ಬೇರೆ ವರ್ಗೀಕರಣದಲ್ಲಿ ವ್ಯವಹಾರ ನೆಡೆಯುತ್ತಿದೆ?

18) ತೀರ್ಥಹಳ್ಳಿಯ ಸಾಂಪ್ರದಾಯಿಕ ಅಡಿಕೆ ಎಂಬ ಒಂದು ವಿಶೇಷ ಪ್ರಾಧಾನ್ಯತೆ ತೀರ್ಥಹಳ್ಳಿ ಭಾಗದ ಅಡಿಕೆಗೆ ಇತ್ತು ಮತ್ತು ಧಾರಣೆಯಲ್ಲೂ ಸ್ವಲ್ಪ ಮಟ್ಟದ ಮೌಲ್ಯ ಹೆಚ್ಚಿತ್ತು. ಆದರೆ, ಈಗ ಅಷ್ಟೇ ಸಾಂಪ್ರದಾಯಿಕ ಪದ್ದತಿಯಲ್ಲೇ ಮಾಡಿದ ತೀರ್ಥಹಳ್ಳಿ ಅಡಿಕೆಗಿಂತ, ಸಾಂಪ್ರದಾಯಕ ಪದ್ದತಿ ಅನುಸರಿಸದೇ ಸಂಸ್ಕರಣೆ ಮಾಡಿದ ಚನ್ನಗಿರಿ-ಚಿತ್ರದುರ್ಗದ ಅಡಿಕೆಗೆ ದರದ ಮೌಲ್ಯ ಹೆಚ್ಚಿದೆ. ಇದು ಹೇಗೆ?

19) ಅಡಿಕೆಯಲ್ಲದ ಅಡಿಕೆಯಂತಹ ಒಂದು ರೀತಿಯ ಬೀಜಕ್ಕೆ ಅಡಿಕೆ ಬಣ್ಣ ಬಳಿದು, ಅಡಿಕೆಗೆ ಸೇರಿಸುವ ಒಂದು ಸಂಚು ಬಹಿರಂಗಗೊಂಡಿದ್ದರ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿದೆ. ಏನಿದರ ಒಳ ಮರ್ಮ?

ಹಿಂಡನ್ ಬರ್ಗ್ ಷೇರು ಮಾರುಕಟ್ಟೆ ಅಲ್ಲಾಡಿಸಿದರೆ, ಅಡಿಕೆ ಕ್ವಾಲಿಟಿಯ hidden bug ಅಡಿಕೆ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡುತ್ತಿದೆ. ಅಡಿಕೆ ಮಾರುಕಟ್ಟೆಯಲ್ಲಿ ಗೂಳಿ ಕರಡಿಗಳ ಕಾಂತಾರ ಕುಣಿತ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Tungabhadra Dam: ಗೇಟ್‌ ರಿಪೇರಿಗಾಗಿ 60 ಟಿಎಂಸಿ ನೀರು ಖಾಲಿ, 8 ಜಿಲ್ಲೆಗಳ ರೈತರಿಗೆ ನೀರಿಲ್ಲ!

Tungabhadra Dam: ಎರಡನೇ ಬೆಳೆಗಿಂತ ಮೊದಲ ಬೆಳೆಗಾದರೂ ಸರಿಯಾಗಿ ನೀರು ಸಿಗುವುದೇ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. 60 ಟಿಎಂಸಿ ನೀರು ಖಾಲಿಯಾದ್ರೆ ಡ್ಯಾಂನಲ್ಲಿ ಉಳಿಯುವುದು ಕೇವಲ 45 ಟಿಎಂಸಿ ನೀರು ಮಾತ್ರ. ಇದರಲ್ಲಿ ಆಂಧ್ರಪ್ರದೇಶದ ಕೋಟಾ ಕೂಡಾ ಇದೆ.

VISTARANEWS.COM


on

Koppala News
Koo

ವಿಜಯನಗರ: ಹೊಸಪೇಟೆಯ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರೆಸ್ಟ್‌ ಗೇಟ್ ಮುರಿದಿರುವುದು (Crest Gate Crash) ಮಳೆಗಾಲ ಮುಗಿಯುವ ಮುನ್ನವೇ ಕಲ್ಯಾಣ ಕರ್ನಾಟಕ (Kalyana Karntaka) ಭಾಗದ ಅನ್ನದಾತರಿಗೆ (Farmers) ಶಾಕ್ ನೀಡಿದೆ. ಕ್ರೆಸ್ಟ್‌ ಗೇಟ್‌ ಮುರಿದುದರಿಂದ ಸುಮಾರು 15 ಟಿಎಂಸಿಯಷ್ಟು (TMC) ನೀರು ಹರಿದುಹೋಗಿದ್ದು, ಭರ್ತಿಯಾಗಿದ್ದ ಜಲಾಶಯ ಅಷ್ಟರ ಮಟ್ಟಿಗೆ ಈಗ ಖಾಲಿಯಾಗಿದೆ. ಇದರ ಪರಿಣಾಮ ಮೂರು ರಾಜ್ಯಗಳ 8 ಜಿಲ್ಲೆಗಳ ಲಕ್ಷಾಂತರ ರೈತರು ತಮ್ಮ ಎರಡು ಬೆಳೆಗಳನ್ನು ಕಳೆದುಕೊಳ್ಳುವ ಅನುಮಾನ ಮೂಡಿದೆ.

ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ಒಟ್ಟು ಹನ್ನೆರಡು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮೂರು ರಾಜ್ಯದ 8 ಜಿಲ್ಲೆಗಳಿಗೆ ಆಸರೆ ಆಗಿರುವ ತುಂಗಭದ್ರಾ ಜಲಾಶಯ ಕಲ್ಯಾಣ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ‌, ರಾಯಚೂರು, ಆಂಧ್ರ ಪ್ರದೇಶದ ಕರ್ನೂಲ್, ಅನಂತಪುರ, ಕಡಪ, ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಗಳಿಗೆ ಜೀವನಾಡಿ.

ಈ ಬಾರಿ ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಅಷ್ಟಾಗಿ ಮಳೆ ಆಗಿಲ್ಲ. ಆದರೆ ಡ್ಯಾಂ ತುಂಬಿದ್ದರಿಂದ ಕಾಲುವೆ ನೀರು ನಂಬಿಕೊಂಡು ರೈತು ಬಿತ್ತನೆ ಮಾಡಿದ್ದಾರೆ. ಬಳ್ಳಾರಿಯಲ್ಲಿ 70 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಲಾಗಿದೆ. 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ.

ಆದರೆ ಗೇಟ್ ರಿಪೇರಿಗಾಗಿ 60 TMC ನೀರನ್ನು ಅಣೆಕಟ್ಟಿನಿಂದ ಖಾಲಿ ಮಾಡುವ ಅನಿವಾರ್ಯತೆ ಇದೆ. 105 TMC ಸಾಮರ್ಥ್ಯದ TB ಡ್ಯಾಂನಲ್ಲಿ 20 ಅಡಿ ನೀರು ಕುಗ್ಗಿಸಿ 60 TMCಯಷ್ಟು ನೀರನ್ನು‌ ಅಧಿಕಾರಿಗಳು ಖಾಲಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ ಮಳೆ ಪ್ರಮಾಣ ಕುಗ್ಗಬಹುದು. ಹೀಗಾಗಿ ಖಾಲಿಯಾದ 60 ಟಿಎಂಸಿ ನೀರನ್ನು ಮತ್ತೆ ತುಂಬಿಸುವುದು ಕಷ್ಟಸಾಧ್ಯ. ಬೇಸಿಗೆಯಲ್ಲಿ ನಿರ್ವಹಣೆಗಾಗಿ ಡ್ಯಾಂ ತುಂಬಿಸುವುದು ಅಧಿಕಾರಿಗಳಿಗೆ ಸವಾಲು ಆಗುತ್ತದೆ. ಸೆಪ್ಟೆಂಬರ್ ಬಳಿಕ ಕಾಲುವೆ ನೀರು ಕೈಕೊಟ್ಟರೆ ಬೆಳೆಗಳು ಬಾಡುತ್ತವೆ. ಹೀಗಾಗಿ ಈ ಬಾರಿ ಬೆಳೆಗಳಿಗೆ‌ ಡ್ಯಾಂ ನೀರು ಸಿಗುವುದೇ ಅನುಮಾನ ಎಂಬಂತಾಗಿದೆ.

ಎರಡನೇ ಬೆಳೆಗಿಂತ ಮೊದಲ ಬೆಳೆಗಾದರೂ ಸರಿಯಾಗಿ ನೀರು ಸಿಗುವುದೇ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. 60 ಟಿಎಂಸಿ ನೀರು ಖಾಲಿಯಾದ್ರೆ ಡ್ಯಾಂನಲ್ಲಿ ಉಳಿಯುವುದು ಕೇವಲ 45 ಟಿಎಂಸಿ ನೀರು ಮಾತ್ರ. ಇದರಲ್ಲಿ ಆಂಧ್ರಪ್ರದೇಶದ ಕೋಟಾ ಕೂಡಾ ಇದೆ. ಹೀಗಾಗಿ ಕರ್ನಾಟಕ ಕೋಟಾ ಉಳಿಯುವುದು ಕೇವಲ ಇಪ್ಪತ್ತೈದು ಟಿಎಂಸಿ ನೀರು. ಇದರಲ್ಲಿಯೇ ಕುಡಿಯುವ ನೀರಿಗೆ ಹೆಚ್ಚಿನ ನೀರು ಇಟ್ಟುಕೊಳ್ಳುವುದರಿಂದ ರೈತರಿಗೆ ಇದೀಗ ಬೆಳೆಗೆ ನೀರು ಸಿಗುತ್ತಾ ಇಲ್ಲವೋ ಅನ್ನೋ ಆತಂಕ ಎದುರಾಗಿದೆ.

ತುಂಗಭದ್ರಾ ಜಲಾಶಯದ ನೀರಿನ ಮೇಲೆಯೇ ನಾಲ್ಕು ಜಿಲ್ಲೆಗಳ ಅನೇಕ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಡ್ಯಾಂನಲ್ಲಿರೋ ನೀರು ಖಾಲಿಯಾದ್ರೆ ಕುಡಿಯುವ ನೀರಿಗೆ ಕೂಡಾ ತತ್ವಾರವಾಗುತ್ತದೆ. ಕಳೆದ ಬೇಸಿಗೆಯಲ್ಲಿ ಅನೇಕ ಕಡೆ ಕುಡಿಯಲು ಕೂಡಾ ನೀರು ಬಿಡದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಡ್ಯಾಂ ಖಾಲಿಯಾಗುತ್ತಿರುವುದರಿಂದ ಬೇಸಿಗೆಯಲ್ಲಿ ಈ ಬಾರಿ ಕೂಡಾ ತತ್ವಾರವಾಗೋ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: Tungabhadra Dam: ತುಂಗಭದ್ರಾ ಜಲಾಶಯದಿಂದ 15 ಟಿಎಂಸಿ ನೀರು ವ್ಯರ್ಥ; ಇಂದು ಸಿಎಂ ಸಿದ್ದರಾಮಯ್ಯ ಭೇಟಿ

Continue Reading

ಕೃಷಿ

Areca Nut Illegal Import: ಭಾರತದೊಳಗೆ 3 ತಿಂಗಳಲ್ಲಿ 3009 ಟನ್‌ ವಿದೇಶಿ ಅಡಿಕೆ ಅಕ್ರಮ ಆಮದು; ಬೆಳೆಗಾರರಿಗೆ ಕಾದಿದೆ ಆಪತ್ತು!

Areca Nut Illegal Import: ವರ್ಷದಿಂದ ವರ್ಷಕ್ಕೆ ವಿದೇಶಿ ಅಕ್ರಮ ಅಡಿಕೆ ಆಮದಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ. ಕೇವಲ ಮೂರು ತಿಂಗಳಲ್ಲಿ 84 ವಿದೇಶಿ ಅಡಿಕೆ ಅಕ್ರಮ ಆಮದು ಪ್ರಕರಣಗಳನ್ನು ಪತ್ತೆ ಆಗಿವೆ ಅಂದರೆ, ಸರಾಸರಿ, ಪ್ರತೀ ಒಂದು ದಿನ ಒಂದು ಅಕ್ರಮ ವಿದೇಶ ಅಡಿಕೆ ಕಳ್ಳಸಾಗಣಿಕೆ ಆಗುತ್ತಿದೆ ಎಂದಾಯ್ತು! ಇದು ಅಡಿಕೆ ಬೆಳೆಗಾರರ ಪಾಲಿಗೆ ಆತಂಕಕಾರಿಯಾಗಿದೆ.

VISTARANEWS.COM


on

By

Areca Nut Illegal Import
Koo

ಅರವಿಂದ ಸಿಗದಾಳ್, ಮೇಲುಕೊಪ್ಪ
ಪ್ರಸಕ್ತ ಹಣಕಾಸು ವರ್ಷದ (Areca Nut Illegal Import) ಜೂನ್‌ ಅಂತ್ಯದವರೆಗೆ ಒಟ್ಟು 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಹಚ್ಚಿ 3,009 ಟನ್‌ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ವಿದೇಶಿ ಅಕ್ರಮ ಅಡಿಕೆ ಆಮದಿನ ‍ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.

ಸರಾಸರಿ ಪ್ರತೀ ದಿನ ಒಂದು ಅಕ್ರಮ ಪ್ರಕರಣ!

ಮೂರು ತಿಂಗಳಲ್ಲಿ 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಆಗಿವೆ ಅಂದರೆ, ಸರಾಸರಿ, ಪ್ರತೀ ಒಂದು ದಿನ ಒಂದು ಅಕ್ರಮ ವಿದೇಶ ಅಡಿಕೆ ಕಳ್ಳಸಾಗಣಿಕೆ ಆಗುತ್ತಿದೆ ಎಂದಾಯ್ತು! ಇದು ಬಯಲಿಗೆ ಬಂದು, ವಶಪಡಿಸಿಕೊಂಡ ಅಕ್ರಮ ಪ್ರಕರಣಗಳು. ಬಯಲಿಗೆ ಬಾರದೆ ಡೀಲ್ ಆದ ಪ್ರಕರಣಗಳು ಎಷ್ಟಿರಬಹುದು? ಡ್ರೈ ಫ್ರೂಟ್ ಹೆಸರಲ್ಲಿ, ಇನ್ಯಾವುದೋ ಕಡಿಮೆ ಬೆಲೆಯ ವಸ್ತುವಿನ ಹೆಸರಲ್ಲಿ ಬಂದ ಅಕ್ರಮ ವಿದೇಶಿ ಅಡಿಕೆ ಪ್ರಕರಣಗಳು ಎಷ್ಟಿರಬಹುದು? ಈಶಾನ್ಯ ರಾಜ್ಯಗಳ ಚೆಕ್‌ಪೋಸ್ಟ್‌ಗಳಲ್ಲಿ, ನಮ್ಮಲ್ಲಿ ಅಕ್ರಮ ಮರಳು ಸಾಗಾಣಿಕೆ ರೀತಿಯಲ್ಲಿ ಆದಂತೆ, ದೇಶದ ಒಳಗೆ ಬಂದು ಉದುರುತ್ತಿರುವ ಅಕ್ರಮ ವಿದೇಶಿ ಅಡಿಕೆ ಪ್ರಕರಣಗಳು ಎಷ್ಟಿರಬಹುದು? ಅವುಗಳ ಒಟ್ಟು ತೂಕ ಎಷ್ಟು ಲಕ್ಷ ಟನ್ ಇರಬಹುದು? ಅವುಗಳ ಮೌಲ್ಯದ ಕತೆ ಏನು?

ಈಗ ಬಹಿರಂಗಗೊಂಡ 84 ಪ್ರಕರಣಗಳಲ್ಲಿನ ಒಟ್ಟು ಅಡಿಕೆ 3009 ಟನ್‌ಗಳು

ಅಂದರೆ, 30,09,000 ಕೆ.ಜಿ! ಸರಾಸರಿ ಪ್ರತೀ ಕೆಜಿ ಅಡಿಕೆಗೆ ₹ 400 ಎಂದು ಪರಿಗಣಿಸಿದರೆ, ₹ 120 ಕೋಟಿ ಮೌಲ್ಯದ ಅಕ್ರಮ ವಿದೇಶಿ ಅಡಿಕೆ ಭಾರತಕ್ಕೆ ಸಾಗಾಣಿಕೆ ಆಗಿದೆ. ಇದು ಲೆಕ್ಕ ಸಿಕ್ಕಿದ ಅಕ್ರಮ ಅಡಿಕೆ! ಲೆಕ್ಕ ಸಿಗದೇ ಇರುವ ಅಕ್ರಮ ಅಡಿಕೆಯ ಮೌಲ್ಯ ಎಷ್ಟಿರಬಹುದು? ಖಂಡಿತವಾಗಿ ಅದು ಭಯಾನಕವಾದ ಮೊತ್ತವೇ ಆಗಿರುತ್ತದೆ. ಇಷ್ಟಕ್ಕೂ ಇದು ಮೂರು ತಿಂಗಳ ವ್ಯವಹಾರದ್ದು! ವರ್ಷ ಪೂರ್ತಿಗೆ ಎಷ್ಟಾಗಬಹುದು?

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇದೇ ರೀತಿ ಅಕ್ರಮವಾಗಿ ವಿದೇಶಿ ಅಡಿಕೆ ಭಾರತಕ್ಕೆ ಬರುತ್ತಿರುವ ಅಂಕಿ ಅಂಶಗಳು ಕೇಂದ್ರ ಸರಕಾರ ನಿರ್ಮಿಸಿರುವ ವ್ಯವಸ್ಥೆಯ ಒಳಗಿನ ಬಿಗಿ ಹಿಡಿತವನ್ನು ಅನುಮಾನಿಸುವಂತಿವೆ.
2020–21ರಲ್ಲಿ 278 ಪ್ರಕರಣಗಳನ್ನು ಪತ್ತೆ ಹಚ್ಚಿ 3,449 ಟನ್ ವಶಪಡಿಸಿಕೊಂಡಿದ್ದರೆ, 2021–22ರಲ್ಲಿ 260 ಪ್ರಕರಣಗಳಲ್ಲಿ 3,388 ಟನ್‌ ವಶಪಡಿಸಿಕೊಳ್ಳಲಾಗಿದೆ. 2022–23ರಲ್ಲಿ 454 ಪ್ರಕರಣಗಳಲ್ಲಿ 3,400 ಟನ್ ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ಬಂದಿದೆ. 2023–24ರಲ್ಲಿ 643 ಪ್ರಕರಣಗಳಲ್ಲಿ 12,881 ಟನ್‌ ಅಡಿಕೆ ವಶಪಡಿಸಿಕೊಂಡಿತ್ತು ಎಂದು ಕೇಂದ್ರ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇಷ್ಟೊಂದು ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ರಾಜಾರೋಷವಾಗಿ ಪ್ರತೀ ವರ್ಷವೂ ನುಗ್ಗಿ ಬರುತ್ತಿದೆ ಎಂದಾದರೆ, ದೇಶದ ಆರ್ಥಿಕ ಮತ್ತು ಭದ್ರತೆಯ ವಿಷಯದಲ್ಲೂ ಸಂಶಯ ಮತ್ತು ಭಯ ಹುಟ್ಟಿಸುತ್ತಿದೆ. ಅಡಿಕೆಯೇ ಅಕ್ರಮವಾಗಿ ಈ ಪರಿ ಬರುತ್ತಿರುವಾಗ, ಬೇರೆ ವಸ್ತುಗಳೂ ಕೂಡ ಹೀಗೇ ಬರುತ್ತಿರಬಹುದಲ್ಲವೆ? ಅವುಗಳ ಕತೆ ಏನು?
ಈ ಬಾರಿ ಕಾಫಿ, ಮೆಣಸು, ಕೋಕೊ ಬೆಲೆಗಳು ಏರಿದಂತೆ, ದೇಶೀಯ ಅಡಿಕೆಗೂ ಕ್ವಿಂಟಾಲ್‌ಗೆ ‘ಅಬ್ ಕಿ ಬಾರ್ 60,000 ಪಾರ್’ ಎಂದು ನಿರೀಕ್ಷಿಸಿದ್ದ ಅಡಿಕೆಗೆ, ಈಗ ವಿದೇಶಿ ಅಕ್ರಮ ಆಮದಿನಿಂದಾಗಿ ಅಡಿಕೆ ದರ ಇಳಿ ಮುಖವಾಗಿದೆ.

ಇದನ್ನೂ ಓದಿ: Train services: ಎಡಕುಮೇರಿಯಲ್ಲಿ ಭೂಕುಸಿತ; ಆಗಸ್ಟ್‌ 4ರವರೆಗೆ 14 ರೈಲುಗಳ ಸಂಚಾರ ರದ್ದು

ಸಂಸದರ ಮೌನವೇಕೆ?

ಇಷ್ಟೆಲ್ಲ ಅಕ್ರಮಗಳು ನೆಡೆಯುತ್ತಿದ್ದರೂ ಬಹಿರಂಗವಾಗಿ ಸುದ್ದಿಯಾಗುತ್ತಿದ್ದರೂ, ಅಡಿಕೆ ಬೆಳೆಯುವ ಜಿಲ್ಲೆಗಳ (ಎಲ್ಲಾ ರಾಜ್ಯಗಳ) ಸಂಸದರು ಯಾಕೆ ಗಟ್ಟಿ ಧ್ವನಿ ಎತ್ತುತ್ತಿಲ್ಲ? ಅಕ್ರಮ ಅಡಿಕೆ ಆಮದಿಗೆ ಮೌನ ಸಮ್ಮತಿಯ ಬೆಂಬಲ ಕೊಡುತ್ತಿದ್ದಾರಾ? ಅಕ್ರಮವನ್ನು ತಡೆಯಲು ಸಂಸದರಿಗೆ ಸಾಧ್ಯವಾಗುತ್ತಿಲ್ಲವಾ? ಅಥವಾ ಪರೋಕ್ಷವಾಗಿ ಅಕ್ರಮ ಅಡಿಕೆ ಆಮದಿನಲ್ಲಿ ಕೆಲವು ಸಂಸದರು ಫಲಾನುಭವಿಗಳಾಗಿದ್ದಾರಾ? ಹಾಗಾಗಿಯೇ ಅಕ್ರಮ ಅಡಿಕೆ ಸಾಗಾಣಿಕೆಯಲ್ಲಿ ಮೌನವಾಗಿದ್ದಾರಾ? ವರ್ಷದಲ್ಲಿ ಒಂದೋ ಎರಡೋ ಪ್ರಕರಣಗಳಾದರೆ ಅದು ಅಷ್ಟು ಗಂಭೀರವಲ್ಲದ್ದಿರಬಹುದು.

ಇದು ಕಳೆದ ಮೂರು ತಿಂಗಳಲ್ಲಿ ಬಯಲಿಗೆ ಬಂದ ಪ್ರಕರಣಗಳೇ 84 ಅಂದರೆ? ಯಾವ ಸಂಸದರಿಗೂ ಇದು ಸೀರಿಯಸ್ ವಿಷಯ ಅಂತ ಅನಿಸುತ್ತಿಲ್ಲವಾ? ವಿರೋಧ ಪಕ್ಷಗಳ ಸಂಸದರಿಗೂ ಇದು ಮಹತ್ವದ ವಿಚಾರ ಅಂತ ಅನಿಸುತ್ತಿಲ್ಲವಾ? ಸೂಕ್ತ ಕಡಿವಾಣದ ಚಿಂತನೆಗೆ ಯಾರೂ ಮುಂದಾಗುತ್ತಿಲ್ಲವಾ? ಆಡಳಿತ ಮತ್ತು ವಿರೋಧ ಪಕ್ಷಗಳ ಸಂಸದರು, ದೇಶದ ಬಹುದೊಡ್ಡ ಹಗರಣದಂತೆ ಕಂಡು ಬರುವ ಈ ವಿದೇಶಿ ಅಕ್ರಮ ಅಡಿಕೆ ಆಮದನ್ನು ನಿಯಂತ್ರಣ ಮಾಡಲು ಸಮರೋಪಾದಿಯಲ್ಲಿ ಮುನ್ನುಗ್ಗಬೇಕಲ್ವಾ? ಯಾಕೆ ಮೌನ? ಕಳೆದ ವಾರ ಇದೇ ರೀತಿ ಅಕ್ರಮ ವಿದೇಶಿ ಅಡಿಕೆ ಒಳ ಬಂದ ಪ್ರಕರಣವನ್ನು ತನಿಖೆಗಾಗಿ ಸಿಬಿಐ(CBI) ಗೆ ವಹಿಸಿದ ಸುದ್ದಿ ಪ್ರಕಟವಾಗಿತ್ತು.

ಈಗ ಎಲ್ಲಾ 84 ಪ್ರಕರಣಗಳನ್ನೂ, ಮತ್ತು ಬಹಿರಂಗವಾಗದ, ವಶಪಡಿಸಿಕೊಳ್ಳದ ಅಕ್ರಮ ಅಡಿಕೆ ಸಾಗಾಣಿಕೆಗಳ ಪ್ರಕರಣಗಳನ್ನು ಸಿಬಿಐ(CBI) ತನಿಖೆಗೆ ವಹಿಸಬೇಕೆಂದು ಕೇಂದ್ರ ಸಂಸದರೆಲ್ಲ ಕೇಂದ್ರ ಸರಕಾರವನ್ನು ಗಂಭೀರವಾಗಿ ಒತ್ತಾಯಿಸುತ್ತಿಲ್ಲ ಏಕೆ? ಅಕ್ರಮ ವಿದೇಶಿ ಅಡಿಕೆಯ ಸಾಗಾಣಿಕೆಯ ಒಂದೇ ಒಂದು ಪ್ರಕರಣವೂ ಮುಂದೆ ನಡೆಯದಂತೆ ದೇಶದ ಎಲ್ಲಾ ಮಾರ್ಗಗಳನ್ನು (ಭೂ, ಜಲ, ವಾಯು) ಬಿಗಿಗೊಳಿಸಬೇಕಾದ ಅನಿವಾರ್ಯತೆ ಇಲ್ಲವಾ?
ದೇಶದೊಳಕ್ಕೆ ಬರುತ್ತಿರುವ ಅಕ್ರಮ ವಿದೇಶಿ ಅಡಿಕೆ ಸಮಸ್ಯೆ ಕೇವಲ ದೇಶೀಯ ಅಡಿಕೆ ಬೆಲೆಯ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ. ಸಮಸ್ಯೆಯ ಗಂಭೀರತೆ ನೋಡಿದರೆ, ಇದು ಸಮಗ್ರ ದೇಶದ ಅರ್ಥ ವ್ಯವಸ್ಥೆ ಮತ್ತು ಭದ್ರತಾವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದಾದ ಪ್ರಕರಣಗಳಾಗಿ ಕಾಣುತ್ತಿವೆ.
ದಯವಿಟ್ಟು ರಾಜ್ಯದ ಎಲ್ಲ ಸಂಸದರು, ಶಾಸಕರು, ಸಚಿವರು ಈ ಅಕ್ರಮ ವಿದೇಶಿ ಅಡಿಕೆ ಸಾಗಾಣಿಕೆ ಬಗ್ಗೆ ಪರಿಣಾಮಕಾರಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಲಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Tomato Price: ದಿಢೀರ್‌ ಕುಸಿದ ಟೊಮೆಟೊ ಬೆಲೆ, ಕೋಲಾರ ಎಪಿಎಂಸಿಯಲ್ಲಿ ತಳಮಳ

Tomato Price: ಒಂದು ವಾರದಿಂದ ಟೊಮೆಟೋ ಬಾಕ್ಸ್ ಬೆಲೆ ಸಾವಿರ ರೂಪಾಯಿ ಗಡಿ ದಾಟಿ ಟೊಮೆಟೊ ಬೆಳೆಗಾರನ (Tomato farmer) ಮುಖದಲ್ಲಿ ಮದಹಾಸ ಮೂಡಿಸಿತ್ತು. ಎರಡು ದಿನಗಳಿಂದ ದಿಢೀರನೇ ಕುಸಿತ ಕಂಡಿದ್ದು ಟೊಮೊಟೊ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

VISTARANEWS.COM


on

tomato price
Koo

ಕೋಲಾರ : ನಿಲ್ಲದ ಮಳೆಯ ಆರ್ಭಟದ (Karnataka Rain news) ಪರಿಣಾಮ ಕೋಲಾರದ ಕೆಂಪು ಸುಂದರಿ ಟೊಮೊಟೊ ಬೆಲೆ (Tomato Price) ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ.

ಒಂದು ವಾರದಿಂದ ಟೊಮೆಟೋ ಬಾಕ್ಸ್ ಬೆಲೆ ಸಾವಿರ ರೂಪಾಯಿ ಗಡಿ ದಾಟಿ ಟೊಮೆಟೊ ಬೆಳೆಗಾರನ (Tomato farmer) ಮುಖದಲ್ಲಿ ಮದಹಾಸ ಮೂಡಿಸಿತ್ತು. ಎರಡು ದಿನಗಳಿಂದ ದಿಢೀರನೇ ಕುಸಿತ ಕಂಡಿದ್ದು ಟೊಮೊಟೊ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಹದಿನೈದು ಕೆಜಿ ಬಾಕ್ಸ್ ಬೆಲೆ ಒಂದು ಸಾವಿರದ ನೂರ ಐವತ್ತರಿಂದ ಇನ್ನೂರರ ವರೆಗೆ ಮಾರಾಟವಾಗುತ್ತಿತ್ತು. ಆದರೆ ಎರಡು ದಿನಗಳಿಂದ ಟೊಮೊಟೊ ದಿಢೀರ್ ಎಂದು ಕುಸಿದಿದ್ದು 330ರಿಂದ 650 ರೂ.ಗೆ ಇಳಿದಿದೆ.

ಕೋಲಾರ ಎಪಿಎಂಸಿ (Kolar APMC) ಮಾರುಕಟ್ಟೆಗೆ ಪ್ರತಿ ದಿನ ಎರಡು ಲಕ್ಷಕ್ಕೂ ಹೆಚ್ಚು ಟೊಮೊಟೊ ಬಾಕ್ಸ್ (Tomato Box) ಬರುತ್ತಿವೆ. ಹೊರಗಿನ ಬೇಡಿಕೆಯಷ್ಟೇ ಟೊಮೊಟೊ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಧಾರಣೆ ಮಾತ್ರ ಕುಸಿತ ಕಂಡಿದೆ.

ಬೆಲೆ ಕುಸಿತಕ್ಕೆ ಕಾರಣವೇನು?

ದೇಶದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿರುವುದರಿಂದ ಟೊಮೊಟೊ ಸಾಗಾಣಿಕೆಗೆ ತೊಂದರೆಯಾಗಿದೆ. ಭಾರಿ ಮಳೆಯ ಹೊಡೆತದಿಂದ ರಸ್ತೆ ಸಂಪರ್ಕವಿಲ್ಲದೆ ಸಾಗಾಣಿಕೆಯಾದ ಟೊಮೆಟೊ ಲಾರಿಗಳು ಎಲ್ಲೆಂದರೆ ಅಲ್ಲಿ ನಿಂತಿವೆ. ಮಳೆ ಅಡ್ಡಿಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದೆ ಟೊಮೊಟೊ ಧಾರಣೆ ಕುಸಿತವಾಗಿದೆ. ರೈತರು ಆತಂಕ ಪಡಬೇಕಿಲ್ಲ; ಮಳೆ ನಿಂತರೆ ಮತ್ತೆ ಟೊಮೆಟೊ ಧಾರಣೆ ಚೇತರಿಕೆಯಾಗಲಿದೆ ಎಂದು ಕೋಲಾರ ಎಪಿಎಂಸಿ ಮಾರುಕಟ್ಟೆಯ ಸಹಾಯಕ ಕಾರ್ಯದರ್ಶಿ ಕಿರಣ್ ಸ್ಪಷ್ಟಪಡಿಸಿದ್ದಾರೆ.

ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂಬ‌ ಹೆಗ್ಗಳಿಕೆ ಪಡೆದಿರುವ ಕೋಲಾರ ಎಪಿಎಂಸಿ (Kolar APMC) ಮಾರುಕಟ್ಟೆಯಲ್ಲಿ ಕಳೆದ ವಾರ ಟೊಮೆಟೊಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿತ್ತು. 15 ಕೆ.ಜಿಯ ಬಾಕ್ಸ್​​ಗೆ 900ರಿಂದ 1200 ರೂ.ಗಳಿಗೆ ಹರಾಜಾಗಿತ್ತು. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.

ಕಳೆದ ವರ್ಷ ಇದೇ ಸಮಯದಲ್ಲಿ ಟೊಮೆಟೊಗೆ ಚಿನ್ನದ ಬೆಲೆ ಬಂದು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿತ್ತು. ಬಾಕ್ಸ್‌ಗೆ ಸುಮಾರು 2000ರಿಂದ 2700 ರೂ.ವರೆಗೂ ಮಾರಾಟವಾಗಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.

ಕೋಲಾರ ಮತ್ತು‌ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈ ಸೀಸನ್‌ನಲ್ಲಿ ಅತಿ‌ ಹೆಚ್ಚು ಟೊಮೆಟೊವನ್ನು ಬೆಳೆಯುತ್ತಾರೆ. ಆದರೆ ಇತ್ತೀಚಿನ ತಾಪಮಾನ, ಮಳೆ ಮತ್ತು ವೈರಸ್ ಹಾವಳಿಯಿಂದ ಟೊಮೆಟೊ ಬೆಳೆಯಿಲ್ಲದೆ ಆವಕ ಕಡಿಮೆಯಾಗಿದೆ. ಜೊತೆಗೆ ಟೊಮೆಟೊ ಬೆಳೆ ಬೆಳೆಯವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಕಷ್ಟಪಟ್ಟು ಬೆಳೆದರೂ ಸಹ ಟೊಮೆಟೊಗೆ ಬೆಲೆ ಸಿಗುತ್ತೆ ಎಂಬ ವಿಶ್ವಾಸವಿಲ್ಲದ ಕಾರಣ ರೈತ ಇತ್ತೀಚಿಗೆ ಟೊಮೆಟೊ ಬಿಟ್ಟು ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾನೆ.

ಮೊದಲು ಆಂಧ್ರ, ತಮಿಳುನಾಡು, ಮಂಡ್ಯ, ಚಾಮರಾಜನಗರ, ‌ಮೈಸೂರು, ನೆಲಮಂಗಲ ಕಡೆಯಿಂದ ಟೊಮೆಟೊ ಬರುತ್ತಿತ್ತು.‌ ಆದರೆ ಈಗ ಬರುತ್ತಿಲ್ಲ. ಆಗಸ್ಟ್ ತಿಂಗಳವರೆಗೂ ಟೊಮೆಟೊ ಸೀಜನ್‌ ಇರುವುದರಿಂದ ಟೊಮೆಟೊ ಬೆಲೆ ಇನ್ನೂ ಏರಿಕೆಯಾಗುವ ಸಂಭವವಿದೆ. ಕೋಲಾರದ ಟೊಮೆಟೊಗೆ ದೆಹಲಿ, ಒರಿಸ್ಸಾ, ಗುಜರಾಜ್​, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ಕಡೆ ಹೆಚ್ಚಿನ ಬೇಡಿಕೆ ಇದೆ.

ಇದನ್ನೂ ಓದಿ: Superfood Tomato: ಬಲ್ಲಿರಾ ಟೊಮೆಟೊ ಎಂಬ ಹಣ್ಣಿನ ಸದ್ಗುಣಗಳನ್ನು?

Continue Reading

ಯಾದಗಿರಿ

Yadgiri News: ಬೆಳೆ ಸಮೀಕ್ಷೆ ಗುರಿ ಸಾಧನೆಗೆ ಅಧಿಕಾರಿಗಳು ಒತ್ತುಕೊಡಿ: ಡಿಸಿ ಡಾ. ಸುಶೀಲ

Yadgiri News: ರೈತರು ಮಾಡಿದ ಬೆಳೆ ಸಮೀಕ್ಷೆ ದತ್ತಾಂಶವು ಮುಂಬರುವ ದಿನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಬೆಂಬಲ ಬೆಲೆ, ಬೆಳೆವಿಮೆ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ತಿಳಿಸಿದ್ದಾರೆ.

VISTARANEWS.COM


on

Officers should emphasize on achieving crop survey targets says yadgiri DC Dr Sushila b
Koo

ಯಾದಗಿರಿ: ಬೆಳೆ ಸಮೀಕ್ಷೆಯಲ್ಲಿ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿಗಳು ಕಾರ್ಯ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ನಿರ್ದೇಶನ (Yadgiri News) ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಾತನಾಡಿದ ಅವರು, ರೈತರು ನಡೆಸುವ ಬೆಳೆ ಸಮೀಕ್ಷೆಯನ್ನು ಇಲಾಖೆಯ ಮೇಲ್ವಿಚಾರಕರು ಸರಿಯಾಗಿ ಪರಿಶೀಲಿಸಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರಸ್ತಕ ಸಾಲಿನಲ್ಲಿ ಕೂಡ ಬೆಳೆ ಸಮೀಕ್ಷೆ ಗುರಿ ಸಾಧನೆಗೆ ಒತ್ತುಕೊಡಬೇಕು. ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರಿಂದ ಸ್ವೀಕರಿಸಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿ ಪ್ರಗತಿ ಸಾಧಿಸಿ ಎಂದರು.

ರೈತರು ಮಾಡಿದ ಬೆಳೆ ಸಮೀಕ್ಷೆ ದತ್ತಾಂಶವು ಮುಂಬರುವ ದಿನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಬೆಂಬಲ ಬೆಲೆ, ಬೆಳೆವಿಮೆ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಎಂದು ಡಿಸಿ ತಿಳಿಸಿದರು.

ಇದನ್ನೂ ಓದಿ: Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

ಜಿಲ್ಲೆಯಲ್ಲಿ ಜಮೀನು ಸರ್ವೇ ಕಾರ್ಯಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ, ಇಲಾಖೆಯ ಹಾಗೂ ನೋಂದಾಯಿತ ಸರ್ವೇಯರ್‌ಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡಿದ ನಂತರ, ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ನೀಡಿ, ಶೀಘ್ರದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸರ್ವೇಯರ್‌ಗಳ ಪ್ರಗತಿಯನ್ನು ನಿರಂತರವಾಗಿ ಗಮನಿಸಲು ತಿಳಿಸಿದ ಅವರು, ಎಲ್ಲಾ ತಹಸೀಲ್ದಾರರು ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಲ್ಯಾಂಡ್ ಬೀಟ್ ಆ್ಯಪ್‌ನಲ್ಲಿ ಕಾಲೋಚಿತ ಗೊಳಿಸಲು ಸೂಚಿಸಿದರು.

ಜಿಲ್ಲೆಯಲ್ಲಿ ವ್ಯಾಪಕ ಮಳೆಯಾದ ಸಂದರ್ಭದಲ್ಲಿ ಪ್ರವಾಹ, ಜನ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ ಹಾಗೂ ಸಾರ್ವಜನಿಕ ಆಸ್ತಿಹಾನಿಯಾಗುವ ಸಾಧ್ಯತೆಗಳಿದ್ದು, ಅಂತಹ ಸಂದರ್ಭದಲ್ಲಿ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮಕೈಗೊಳ್ಳಬೇಕು ಎಂದರು.

ಮಳೆಯಿಂದ ಜಾನುವಾರು ಪ್ರಾಣ ಹಾನಿ, ವಾಸದ ಮನೆ ಹಾನಿಯಾಗಿದ್ದಲ್ಲಿ ತಕ್ಷಣ ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಸೂಚನೆ ನೀಡಿದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ; ಇಂದಿನ ದರ ಇಷ್ಟಿದೆ

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಕೃಷಿ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಸೇರಿದಂತೆ ಎಲ್ಲಾ ತಾಲೂಕಿನ ತಹಶೀಲ್ದಾರರು, ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Continue Reading
Advertisement
unified pension scheme
ಪ್ರಮುಖ ಸುದ್ದಿ2 hours ago

Unified pension scheme: ಕೇಂದ್ರ ಸರ್ಕಾರದ ಯುಪಿಎಸ್ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಂಘಗಳ ವಿರೋಧ

Sunita Williams
ದೇಶ2 hours ago

Sunita Williams: ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಸುನೀತಾ ವಿಲಿಯಮ್ಸ್;‌ ನಾಸಾ ಘೋಷಣೆ

karnataka weather forecast
ಮಳೆ2 hours ago

Karnataka Weather : ಬೆಂಗಳೂರು ಸೇರಿದಂತೆ ಉಡುಪಿ, ಉತ್ತರ ಕನ್ನಡದಲ್ಲಿಂದು ಭಾರಿ ಮಳೆ ಎಚ್ಚರ

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರ ಬಹು ದಿನಗಳ ಕನಸು ನನಸು; ಕುಟುಂಬದ ಆಪ್ತರಿಂದ ಶುಭ ಸುದ್ದಿ

Rahul Gandhi
ದೇಶ8 hours ago

Rahul Gandhi: ಮಿಸ್‌ ಇಂಡಿಯಾ ಪಟ್ಟಿಯಲ್ಲಿ ದಲಿತ, ಬುಡಕಟ್ಟು, ಒಬಿಸಿ ಮಹಿಳೆಯರು ಇಲ್ಲವೇ ಇಲ್ಲ-ರಾಹುಲ್‌ ಗಾಂಧಿ ಹೊಸ ಆರೋಪ

Sudha Murthy
ಬೆಂಗಳೂರು9 hours ago

Sudha Murthy: ವೈದ್ಯಕೀಯ ಸೇವೆಯಲ್ಲಿ ಬದ್ಧತೆ, ನೈತಿಕತೆ ಇಂದಿನ ಅಗತ್ಯ: ಸುಧಾಮೂರ್ತಿ

Unified Pension scheme
ಪ್ರಮುಖ ಸುದ್ದಿ9 hours ago

Unified Pension scheme: ಏಕೀಕೃತ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಕೇಂದ್ರ ನೀಡುತ್ತಿರುವ ಆರ್ಥಿಕ ಭದ್ರತೆ- ಪ್ರಧಾನಿ ನರೇಂದ್ರ ಮೋದಿ

Amit Shah
ದೇಶ10 hours ago

Amit Shah: 2026ರ ವೇಳೆಗೆ ನಕ್ಸಲಿಸಂ ಸಂಪೂರ್ಣ ನಿರ್ಣಾಮ; ಬಿಗ್‌ ಟಾರ್ಗೆಟ್‌ ಫಿಕ್ಸ್‌ ಮಾಡಿದ ಕೇಂದ್ರ

Vijayanagara News
ವಿಜಯನಗರ10 hours ago

Vijayanagara News: ಮೀನುಗಾರರಿಗೆ ರಾಜ್ಯ‌ ಸರ್ಕಾರದಿಂದ ನಾನಾ ಸೌಕರ್ಯ; ಸಚಿವ ಮಂಕಾಳ ವೈದ್ಯ

NPS v/s UPS
ದೇಶ11 hours ago

NPS v/s UPS: ಏಕೀಕೃತ ಪಿಂಚಣಿ ಯೋಜನೆ ಅಂದ್ರೆ ಏನು? ಇದು NPSಗಿಂತ ಹೇಗೆ ಭಿನ್ನ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ17 hours ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌