ಸಣ್ಣ ಕಥೆ | ಕಾಲ ವಟಿ - Vistara News

ಕಲೆ/ಸಾಹಿತ್ಯ

ಸಣ್ಣ ಕಥೆ | ಕಾಲ ವಟಿ

ಭೂತ ಭವಿಷ್ಯದ ಭಾರದಿಂದ ಮುಕ್ತವಾಗಿ ಮಾಡುವ ಆ ಅಪರೂಪದ ಔಷಧ ಕೈಲಾಜಿಗೆ ಸಿಕ್ಕಿತು. ಆದರೆ ಅದರ ಹಿಂದಿನ ಕಥೆ? ಆ ಸುಂದರಿಯೂ ಅದರ ಹಿಂದಿದ್ದಾಳೆಯೇ? ಓದಿ, ಡಾ.ಅಜಿತ್‌ ಹರೀಶಿ ಬರೆದ ಸಣ್ಣ ಕಥೆ.

VISTARANEWS.COM


on

short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ajith harishi

| ಡಾ. ಅಜಿತ್ ಹರೀಶಿ

‘ರಾತ್ರಿಯಿಡೀ ಒಂದು ಹನಿ ಕಣ್ಣು ಮುಚ್ಚಲಿಲ್ಲ. ಅರಮನೆ, ಐಶ್ವರ್ಯ ಕೊಡಿ ಅಂತೇನೂ ನಾನು ನಿಮಗೆ ಕೇಳಲಿಲ್ಲ. ಒಂದು ನೆಮ್ಮದಿಯ ನಿದ್ದೆಯನ್ನು ಕೇಳಿ ಪಡೆದು ಬಂದಿಲ್ಲ ನಾನು ಈ ಮನೆಗೆ. ಬೆಳಿಗ್ಗೆ ಏನೂ ಮಾಡಿ ಹಾಕುವ ವಶ ಸಾ ಇರಲಿಲ್ಲ ನಂಗೆ. ಆದರೆ ದುಡಿಯೋ ಗಂಡಸಿಗೆ ಕೈಲಾಗಿದ್ದು ಬೇಯಿಸಿ ಹಾಕಬೇಕು ಅನ್ನುವಷ್ಟು ಸಂಸ್ಕಾರ ನಮ್ಮಮ್ಮ ನನಗೆ ಕೊಟ್ಟಿದ್ದಾರೆ.’ ಹೆಂಡತಿ ಮಾಡಿದ ಬಿಸಿ ಒಗ್ಗರಣೆ ಅವಲಕ್ಕಿಯ ತುತ್ತು ಗಂಟಲಿನಲ್ಲಿ ಇಳಿಯದೇ ಒದ್ದಾಡುತ್ತಿದ್ದ ಕೈಲಾಜಿ, ಅವಳಿಗೆ ಗೊತ್ತಾಗದಂತೆ ಪ್ಲೇಟಿನಲ್ಲಿದ್ದ ಅವಲಕ್ಕಿಯನ್ನು ಚೆಲ್ಲಲು ಹೋಗಿ ಮತ್ತಷ್ಟು ಅವಾಂತರ ಮಾಡಿಕೊಂಡಿದ್ದ. ನಿಜಕ್ಕೂ ಆತನಿಗೆ ಅವಲಕ್ಕಿ ಎಂದರೆ ಅಲರ್ಜಿಯಾಗಿತ್ತು. ಅದನ್ನು ಬೆಳಿಗ್ಗೆ ತಿಂದರೆ ಹೊಟ್ಟೆ ನಿಬ್ಬರ, ಗ್ಯಾಸು ಆಗುತ್ತಿತ್ತು. ಆದರೆ ಹಿಂದಿನ ದಿನ ಮಾಡಿದ ತಪ್ಪಿಗಾಗಿ ಆತ ಸುಮ್ಮನೆ ತಿಂದು ಎದ್ದು ಹೋಗಿದ್ದರೆ ಒಳಿತಾಗುತ್ತಿತ್ತು. ಒಳಿತು- ಪದವನ್ನು ಭಗವಂತ ತನ್ನ ಬದುಕಿನ ನಿಘಂಟಿನಿಂದ ಎಗುರಿಸಿ ಯಾವುದೋ ಕಾಲವಾಯಿತು ಎಂಬ ಯೋಚನೆ ಒಮ್ಮೆ ಕೈಲಾಜಿಯ ಮನಸ್ಸಿನಲ್ಲಿ ಸುಳಿದು ಹೋಯಿತು.

ʻಏನೋ… ಸಂಸಾರ ಎಂದಮೇಲೆ ಒಂದು ಮಾತು ಬರುತ್ತದೆ, ಹೋಗುತ್ತದೆ. ಆಹಾರದ ಮೇಲೆ, ಅದರಲ್ಲಿಯೂ ಸುಧಾಮನ, ಕೃಷ್ಣನ ಪ್ರೀತಿಯ ಅವಲಕ್ಕಿ ಮೇಲ್ಯಾಕೆ ಸಿಟ್ಟು ತೀರಿಸ್ತೀರಿ? ನಿನ್ನೆ ರಾತ್ರಿನೂ ನಾನು ಬೈತಾ ಇದ್ದೆ. ಗ್ಲಾಸಿನಲ್ಲಿದ್ದ ನಿಮ್ಮ ಪರಮಾತ್ಮನ್ನ ಚೆಲ್ಲಿ ಬರಬಹುದಿತ್ತಲ್ವಾ? ಸಿಟ್ಟು ಬಂದರೆ ಮೂಡಾಫ್ ಆದರೆ ಅದು ಒಳಕ್ಕೆ, ಇದು ಹೊರಕ್ಕೆ ಯಾಕೋ? ಒಟ್ನಲ್ಲಿ ನಮ್ ಪ್ರಾಣ ತಿಂತೀರ. ನಂಗಂತೂ ಸಾಕಾಯ್ತು ಬದುಕು. ಮಕ್ಕಳ ಮುಖ ನೋಡ್ಕೊಂಡು ಬದುಕಿದೀನಿ.’ ಮರುದಿನ ಅವಳ ಮಾತು ಕೇಳುವಾಗಲೆಲ್ಲ ಕೈಲಾಶ್ ಕೈಲಾಜಿಗೆ ಇನ್ನೆಂದೂ ಕುಡಿಯಬಾರದು ಅನ್ಸುತ್ತಿತ್ತು. ಆದರೆ ಸದ್ಯದ ತನ್ನ ಪರಿಸ್ಥಿತಿ ಹಾಗಿದೆ ಎಂಬ ಸಮರ್ಥನೆಯೂ ಸೆಲ್ಫ್ ಡಿಫೆನ್ಸ್‌ಗೆ ಬರುತ್ತಿತ್ತು. ಮಾತಿಗೆ ಮಾತು ಎಂದೂ ಮುಗಿಯದ್ದು ಎಂದುಕೊಳ್ಳುತ್ತಾ ಎದ್ದು ಹೋದ. ‘ಟಿಫನ್ ಕ್ಯಾರಿಯರ್ ಟೇಬಲ್ ಮೇಲಿದೆ. ಬರ್ತಾ ಕೊತ್ತಂಬರಿ ಸೊಪ್ಪು ತರಲು ಮರೆಯಬೇಡಿ. ಈ ಜಗತ್ತಿನಲ್ಲಿ ನೀವೊಬ್ಬರೇ ಬ್ಯಾಂಕ್ ಕೆಲಸ ಮಾಡೋದು ಅಂತ ಕಾಣುತ್ತೆ’ ಧ್ವನಿ ದೂರವಾಗಲು ಆತ ಬೈಕಿನ ಕಿಕ್ ಹೊಡೆದು, ಎಕ್ಸಲರೇಟರ್ ಮತ್ತಷ್ಟು ತಿರುಪಿ ಕ್ಲಚ್ ಬಿಟ್ಟ.

ಕೈಲಾಶ್ ಕೈಲಾಜಿ ಗ್ರಾಮೀಣ ಬ್ಯಾಂಕ್ ಒಂದರಲ್ಲಿ ಕ್ಲರ್ಕ್ ಹುದ್ದೆಗೆ ಸೇರಿ ಹತ್ತಾರು ಕಡೆ ನೌಕರಿ ಮಾಡಿ, ಮುಂಬಡ್ತಿ ಪಡೆದು ಮ್ಯಾನೇಜರ್ ಆಗಿದ್ದ. ಮೊದಮೊದಲು ಸಣ್ಣ ಹಳ್ಳಿಗಳಲ್ಲಿ ಕೆಲಸ ಮಾಡಿದ್ದ ಆತನಿಗೆ ಒಳ್ಳೆಯ ಹೆಸರಿತ್ತು. ಹೋದಲ್ಲೆಲ್ಲಾ ಹೊಸಬರನ್ನು ಬೇಗ ಪರಿಚಯ ಮಾಡಿಕೊಳ್ಳುತ್ತಿದ್ದ. ಬ್ಯಾಂಕಿನಲ್ಲಿ ಜನರನ್ನು ಕಾಯಿಸುತ್ತಿರಲಿಲ್ಲ. ಹಳ್ಳಿಗಳಲ್ಲಿ ಬ್ಯಾಂಕುಗಳು ಆಗಷ್ಟೇ ಸ್ಥಾಪಿತವಾಗುತ್ತಿದ್ದವು. ಶಿಕ್ಷಕರು, ವೈದ್ಯರ ಜೊತೆಗೆ ಊರವರು ಇವರಿಗೂ ವಿಶೇಷ ಗೌರವ ಕೊಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಮಧ್ಯಾಹ್ನದ ಊಟಕ್ಕೆ ಕರೆಯ ಬರುತ್ತಿತ್ತು. ಮಧ್ಯಾಹ್ನ ಆಗದಿದ್ದರೆ ಸಂಜೆ ಆದರೂ ಬನ್ನಿ ಎಂದಾಗ ಅದರ ಗಮ್ಮತ್ತು ಕೈಲಾಜಿಗೆ ತಿಳಿಯಿತು. ಆಮೇಲೆ ಆತ ಮಧ್ಯಾಹ್ನ ಊಟಕ್ಕೆ ಹೋಗುವುದು ಕಡಿಮೆಯಾಯಿತು. ಮೂತ್ರಪಿಂಡದಲ್ಲಿ ಕಲ್ಲಿನ ಫಾರ್ಮೇಶನ್ ಆಗುವ ಬಗೆಯಂತೆ, ಊಟಕ್ಕೆ ಹಿಂದೆ ಮುಂದೆ ತೀರ್ಥ ಮತ್ತು ಇಸ್ಪೀಟಾಟಗಳು ಸೇರಿಕೊಂಡವು. ರಾತ್ರಿ ಅವಕ್ಕೆ ಕೈಲಾಜಿ ಬರುತ್ತಾನೆಂಬ ಸೂಟು ಸಿಕ್ಕ ಕೂಡಲೇ ಸಾಲ ಮಂಜೂರಾತಿ ಪಡೆಯುವವರ ಮನೆಯಲ್ಲಿ ದೇವಕಾರ್ಯಗಳು ಯೋಜಿತಗೊಳ್ಳತೊಡಗಿದವು. ಅದು ಶಾಕಾಹಾರಿ ಕೈಲಾಜಿಯನ್ನು ಆರಿದ್ರಾ ಮಳೆಯ ಹಬ್ಬದ ಬೋನಿನವರೆಗೂ ತಂದುಬಿಟ್ಟಿತ್ತು. ಕ್ರಮೇಣ ಆತ ವರ್ಷಾಂತ್ಯದಲ್ಲಿ ಲೋನ್ ರಿನೀವಲ್ ಮಾಡಿಕೊಟ್ಟು ಬಡ್ಡಿ ಪೀಕುವ ಮಾಫಿಯಾ ಹೆಗಲ ಮೇಲೆ ಕೈಯಿಟ್ಟ. ಪ್ರತಿ ವ್ಯವಸ್ಥೆಯೂ ಸಣ್ಣದೋ, ದೊಡ್ಡದೋ ರೂಪದಲ್ಲಿ ಸರ್ವಾಂತರ್ಯಾಮಿ ಎಂಬ ಸತ್ಯ ಕೈಲಾಜಿಗೆ ಅರಿವಾಗತೊಡಗಿತ್ತು. ಮದುವೆಯಾದ ಮೇಲೆ, ಹತ್ತಿರದ ಪೇಟೆಯಲ್ಲಿ ಸಂಸಾರ ಹೂಡಿದ್ದು, ಹೆಂಡತಿಗೆ ಪ್ರೆಸ್ಟೀಜೂ, ಕೈಲಾಜಿಯ ಕಾರುಬಾರಿಗೆ ನಿರ್ವಿಘ್ನವೂ ಆಗಿತ್ತು. ವಾರಕ್ಕೊಮ್ಮೆ ಪೇಟೆಗೆ ಹೋದರಾಗಿತ್ತು. ಮಕ್ಕಳು, ವಿದ್ಯಾಭ್ಯಾಸ ಅಂತ ಅವನ ಖರ್ಚು ಏರತೊಡಗಿತ್ತು. ಅವನ ವ್ಯಾಪ್ತಿಯೂ ವಿಸ್ತರಿಸುತ್ತಾ, ಕೆಲಸ ಮಾಡಿದ ಬ್ರಾಂಚುಗಳ ವಿಶೇಷ ಕಸ್ಟಮರುಗಳೆಲ್ಲಾ ಆಗಾಗ ಕರೆಯ ಕಳಿಸುತ್ತಿದ್ದರು. ಸಂಬಳವನ್ನು ಬಿಟ್ಟು ಬೇರೆ ಆಮದನಿ ಹುಡುಕಿಕೊಳ್ಳುವುದು ಕೈಲಾಜಿಗೆ ಅನಿವಾರ್ಯವಾಗತೊಡಗಿತು. ಆತ ಪಳಗತೊಡಗಿದ. ಬಾಹುಗಳು ವಿಸ್ತಾರವಾದವು. ಸ್ವಲ್ಪ ಮುಂಚೆಯೇ ಮ್ಯಾನೇಜರ್ ಆಗಿ ಭಡ್ತಿ ಪಡೆದುಕೊಂಡ. ಸ್ವತಃ ಒಂದು ಹಂತದ ಲೋನ್ ಸ್ಯಾಂಕ್ಷನ್ ಮಾಡುವ ಪವರ್ ಬಂತು. ಹೆಡ್ಡಾಫೀಸಿನ ಲೋನ್ ಸ್ಯಾಂಕ್ಷನ್ ವಿಭಾಗದ ಜೊತೆ ಬೈಠಕ್ ಕನೆಕ್ಷನ್ ಆದಮೇಲೆ ಎಲ್ಲವೂ ಸರಾಗವಾಗಿತ್ತು. ಬಹುಶಃ ಆ ದಿನಗಳು ಕೈಲಾಜಿಯ ಬದುಕಿನ ಸುವರ್ಣ ಯುಗವಾಗಿತ್ತು.

ಕೈಲಾಜಿಯು ಕೈಗೆ ಮದರಂಗಿ ಹಚ್ಚಿಕೊಂಡಿದ್ದು ಎಂದು ಭಾವಿಸಿದ್ದು ಇಡೀ ದೇಹಕ್ಕೆ, ಬದುಕಿಗೆ ಮೆತ್ತಿಕೊಂಡ ಬಣ್ಣವಾಗಿತ್ತು. ಮೊದಮೊದಲು ಎದ್ದು ಕಾಣುತ್ತಿದ್ದ ಗಾಢವಾದ ವರ್ಣಗಳು ಕಪ್ಪುಗೂಡತೊಡಗಿದ್ದವು. ರಂಜನೆಗೆ ಎಂದು ಶುರುವಾದ ಹವ್ಯಾಸಗಳು ಪ್ರಜ್ಞಾಪರಾಧದ ಬೇಗುದಿಗೆ ಸಿಕ್ಕು, ಅದೇ ಮರೆಯುವ ಮತ್ತಾಗಿದ್ದು ಆತನ ಗಮನಕ್ಕೆ ಬಂದಿರಲಿಲ್ಲ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದವನೊಬ್ಬ ಇದೇ ವೇಳೆಗೆ ಮಂದ ಬೆಳಕಿನಲ್ಲಿ ಭೇಟಿಯಾದ ಹೊಸ ಸ್ನೇಹಿತನಾಗಿದ್ದ. ಕೈಲಾಜಿಯ ಬ್ಯಾಂಕಿನ ಬ್ರಾಂಚಿದ್ದ ಊರಿನ ಹತ್ತಿರವೇ ಉದ್ಯಮಿಯ ಜಮೀನಿತ್ತು. ಆದರೆ ಆತನಿಗೆ ಬೇಕಾಗಿದ್ದು ಅದರ ಹತ್ತುಪಟ್ಟು ಮೊತ್ತ. ಅದನ್ನು ಮಂಜೂರಾತಿ ಪಡೆಯುವವರೆಗಿನ ಖರ್ಚುವೆಚ್ಚಗಳನ್ನು ಮತ್ತು ಕೈಲಾಜಿಗೆ ದೊಡ್ಡ ಮೊತ್ತದ ಕಮಿಷನ್ ನೀಡುವ ಆಮಿಷವನ್ನು ಅವನು ನೀಡಿದ್ದ. ಬೆಂಗಳೂರಿನ ಫೈನಾನ್ಸ್ ಫಂಟರುಗಳನ್ನು ಹ್ಯಾಂಡಲ್ ಮಾಡಿದ್ದ ಹುಲಿ ಅವನು. ಆದರೆ ಮಂಜೂರಾತಿ ವಿಭಾಗದಲ್ಲಿ ಯಾಕೋ ಫೈಲ್ ಮೂವ್ ಆಗಿರಲಿಲ್ಲ. ಉದ್ಯಮಿಯ ಸಿಬಿಲ್ ಸ್ಕೋರ್ ಗೋತಾ ಹೊಡೆದಿತ್ತು. ಅದರ ವಿವರ ತೆಗೆಯಲಾಗಿ ಕ್ರೆಡಿಟ್ ಕಾರ್ಡ್ ರೀಪೇಮೆಂಟ್ ಬಾಕಿ ಉಳಿದಿತ್ತು. ಕೈಲಾಜಿ ಅವನಿಗೆ ವಿಷಯ ತಿಳಿಸಿದಾಗ ‘ನೀವು ಅದೊಂದು ತುಂಬಿ, ರೆಡಿ ಮಾಡಿ ಪ್ಲೀಸ್. ನಂದೊಂದು ಪ್ರಾಪರ್ಟಿ ಡೀಲ್ ಆದರೆ ನಿಮಗೊಂದು ಸೈಟ್ ಫ್ರೀ ಕೊಡೋಣ. ನಿಮ್ಮ ಕೈಗುಣ ಚೆನ್ನಾಗಿದೆ ಅಂತ ಜನ ಹೇಳ್ತಾರೆ, ಹಾಗಾಗಲಿ. ಸದ್ಯ ನಿಮ್ಮ ಬಾಯಿಗೆ ಬೆಲ್ಲ ಹಾಕಿಸುವ ಬನ್ನಿ.’

ಆನೆಗಾತ್ರದ ಕಾರನ್ನು ನಿಲ್ಲಿಸುತ್ತಾ ಉದ್ಯಮಿ ಕೇಳಿದ ‘ನೀವು ಕಲ್ಯಾಣಿ ನೋಡಿದ್ದೀರಾ?’
‘ಈ ಊರಿನಲ್ಲಿ ಕಲ್ಯಾಣಿಯಾ ಇಲ್ವಲ್ಲ?’
‘ಆ ಕಲ್ಯಾಣಿಯಲ್ಲ. ಅವಳು… ಅವಳು… ಬಕ್ಕೆ ಕಲ್ಯಾಣಿ, ಗೊತ್ತಿಲ್ವಾ?’

‘ಓಹ್! ಕೇಳಿದ್ದೇನೆ ಅಷ್ಟೇ. ಅವತ್ತೊಬ್ಬ ರೈತ ಕಾಡಿನಿಂದ ಹಲಸಿನ ಹಣ್ಣು ತಂದುಕೊಟ್ಟಿದ್ದ. ಮನೆಗೆ ಒಯ್ದಿದ್ದೆ. ಒಳ್ಳೆಯ ಚಂದ್ರಬಕ್ಕೆ. ಅದರ ತೊಳೆಗಳ ಕಲರ್ ಬಣ್ಣಿಸೋದು ಕಷ್ಟ. ಕವಿಯಾಗಿರಬೇಕಿತ್ತು ಅಂತ ಅನ್ನಿಸಿಬಿಡ್ತು. ಬಿಳಿಯಾ? ಬಿಳಿಯಲ್ಲ! ಮುಟ್ಟಿದರೆ ಕೆಂಪಾಗಿ ಬಿಡಬಹುದು ಅನ್ನಿಸಿತು. ಕಿತ್ತಳೆ ಅನ್ನೊದು ಕಷ್ಟ. ಜೇನು ತುಪ್ಪದಲ್ಲಿ ಅದ್ದಿ ಬಾಯಿಗಿಟ್ಟರೆ ಎಂತಹ ರುಚಿ ಅಂತೀರಾ! ಆಮೇಲೆ ಒಂದು ದಿನ ಮತ್ತೆ ತಿನ್ನಬೇಕೆಂಬ ಆಸೆಯಾಗಿ, ಸ್ನೇಹಿತರೊಬ್ಬರಿಗೆ ಕೇಳ್ದೆ. ಅವರು ನಗಲಿಕ್ಕೇ ಶುರುಮಾಡಿದರು. ಬೇಣದಲ್ಲಿ ಒಂಟಿಯಾಗಿರುವ ಆ ಮರವನ್ನು ಹತ್ತಿ, ಯಾರು ಬೇಕಾದರೂ ತಿನ್ನಬಹುದು. ಹಾಗೇ ಈ ಊರಿನಲ್ಲಿ ಇರುವ ಕಲ್ಯಾಣಿ ಎಂಬ ಹೆಂಗಸನ್ನೂ… ಎಂದರು. ಅಷ್ಟು ಮಾತ್ರ ಗೊತ್ತು’

‘ಅವೆಲ್ಲ ಪೂರ್ತಿ ನಿಜವಲ್ಲ ಕೈಲಾಜಿ ಸಾಹೇಬ್ರೇ. ಕಲ್ಯಾಣಿ ಹಾಗೆಲ್ಲ ಅಡ್ನಾಡಿಗಳಿಗೆ ಆಹಾರವಾದವಳಲ್ಲ. ಅವರು ಹೊಟ್ಟೆಕಿಚ್ಚಿನಿಂದ ಹೇಳೋದು ಅದು. ಅವಳು ಸೆಲೆಕ್ಟಿವ್ ಮತ್ತು ಕಾಸ್ಟ್ಲೀ. ಇನ್ನು ಅವಳನ್ನು ವರ್ಣಿಸೋದು, ನೀವು ಹೇಳಿದ ಹಣ್ಣಿನ ವರ್ಣನೆಯ ಹಾಗೆ. ಬನ್ನಿ ಬನ್ನಿ…’ ಆತ ಡೋರ್ ತೆಗೆದು ಇಳಿದ.

ಕಲ್ಯಾಣಿಯ ಮನೆಯ ಬಾಗಿಲು ತೆರೆದುಕೊಂಡೇ ಇತ್ತು. ಡೋರ್ ಲಾಕ್ ಸದ್ದು ಕೇಳಿ ಅವಳು ಹೊರಗೆ ಬಂದಿದ್ದಳು. ಅವನನ್ನು ನೋಡಿ ನಕ್ಕು ಕೈಲಾಜಿಗೆ ನಮಸ್ಕಾರ ಮಾಡಿದಳು. ʻʻಇವರು ಕೈಲಾಜಿ ಸಾಹೇಬ್ರು. ಬ್ಯಾಂಕ್ ಮ್ಯಾನೇಜರ್. ಬ್ಯಾಂಕ್ ಕೆಲಸ ಟೆನ್ಶನ್ ನೋಡು, ರಿಲಾಕ್ಸ್ ಆಗೋಕೆ ಸಮಯವೇ ಇರುವುದಿಲ್ಲ. ಕಲ್ಯಾಣಿ ಬಕ್ಕೆ ರಾಶಿ ಇಷ್ಟ ಆಯ್ತಂತೆ. ಕೊಡು ಅವ್ರಿಗೆ’ʼ

ʻʻನಾನು ಬ್ಯಾಂಕಿಗೆ ಹೋಗೋದು ಕಮ್ಮಿ, ಆದರೂ ಇವರನ್ನು ನೋಡಿದ್ದೆ. ಸಾಹೇಬರು ಈ ಬಡವಿಯನ್ನು ನೋಡಿಲ್ಲ. ಕ್ಯಾಶ್ ಕೌಂಟರ್‌ನಲ್ಲಿ ಕೆಲಸ ಅಷ್ಟೇ ಅಲ್ಲವ್ರಾ ನಮಿಗೆ! ಬನ್ನಿ ದೊರೆ ಒಳಗೆ.’ ಕೈಲಾಜಿ ಕಲ್ಯಾಣಿಯನ್ನು ಹಿಂಬಾಲಿಸಿದ.

ಉದ್ಯಮಿ ಫೋನ್ ಬಂದ ನೆವದಲ್ಲಿ ಹೊರಗೆ ಹೋದ. ಹಲಸಿನ ಹಣ್ಣು ಹೊರಗಿನಿಂದ ಆಕರ್ಷಕವಾಗಿಯೇನೂ ಕಾಣಲಿಲ್ಲ ಕೈಲಾಜಿಗೆ. ಬಲಿತಿದ್ದು, ಸೀಳಿದ ಯಾಂತ್ರಿಕವಾಗಿ. ತಿನ್ನಬೇಕು ಅನ್ನಿಸಲಿಲ್ಲ. ಒಂದು ತೊಳೆಯನ್ನು ತಿಂದರೂ ಮೇಣ ಕೈಗೆ ಅಂಟಿತ್ತು. ರುಚಿಯನ್ನು ರಸನೇಂದ್ರಿಯ ಗ್ರಹಿಸಲಿಲ್ಲವೋ, ಮೆದುಳಿಗೆ ರವಾನಿಸಲಿಲ್ಲವೋ ತಿಳಿಯದಾಯಿತು. ಎಣ್ಣೆ ಹಚ್ಚಿಕೊಳ್ಳಬೇಕಿತ್ತು, ತಿನ್ನದೆಯೂ ಇರಬಹುದಿತ್ತು ಎಂದೆಲ್ಲಾ ಅನ್ನಿಸಿತ್ತು. ಕ್ರಿಯೆ ಯಾಂತ್ರಿಕವಾಗಿತ್ತು. ಕಲ್ಯಾಣಿ ಗ್ರಹಿಸಿದ್ದಳು, ಜೇನುತುಪ್ಪದ ಪ್ರಯೋಗ ಮಾಡಿದ್ದಳು. ‘ಪ್ರೀತಿ ಹುಟ್ಟಿದವರು ಕಲಾ ಅಂತ ಕರೆಯಬಹುದು’ ಕಲ್ಯಾಣಿ ಹೇಳುತ್ತಿದ್ದಾಗ, ಕೈಲಾಜಿಗೆ ಫೋನ್ ಕರೆ ಬಂದು ಬಚಾವಾದೆ ಎಂದುಕೊಂಡು, ಅವಳಿಗೆ ಬೈ ಎಂದು ಸನ್ನೆ ಮಾಡುತ್ತಾ ಕಾರಿನ ಬಳಿ ಬಂದಿದ್ದ. ‘ಬೇಗ ಬಂದ್ರಿ, ಈಗಲೇ ಹೀಗೆ ಆಕೆ. ಇಪ್ಪತ್ತು ವರ್ಷಗಳ ಹಿಂದೆ ಹೇಗಿರಬೇಡ. ಜನರಿಗೆ ಅಸೂಯೆ ಅವಳ ಬಗ್ಗೆ” ಆತನ ಪ್ರವರಕ್ಕೆ ಗಮನ ಕೊಡದೇ ವಾಹನ ಚಲಾಯಿಸಲು ಸಿಗ್ನಲ್ ಮಾಡಿ, ಕೈಲಾಜಿ ಇನ್ನೊಂದು ಕರೆ ಸ್ವೀಕರಿಸಿದ. ‘ಪೇಟೆಯ ಕ್ಲಬ್ಬಿನಲ್ಲಿ ಎಲೆ ಹಿಡಿಯುವ ಬನ್ನಿ’ ಉದ್ಯಮಿ ಪಟ್ಟು ಸಡಿಲಿಸಲಿಲ್ಲ.

*

ಆ ಕೋಟಿ ವ್ಯವಹಾರದ ಕೇಸಿನಲ್ಲಿ ಕೈಲಾಜಿ ಸಿಕ್ಕಿಬಿದ್ದ, ರಿಯಲ್ ಎಸ್ಟೇಟ್ ಕುಳ ಕೈಯೆತ್ತಿ ಬಿಟ್ಟ. ಅತ್ತ ಲೋನ್ ಕಂತುಗಳು ಹಾಗೆ ಉಳಿದವು, ಅದು ಸಾಯಲಿ, ಕೈಲಾಜಿಯ ಸ್ವಂತ ದುಡ್ಡೂ ಕೈಬಿಟ್ಟಿತ್ತು. ಅಲ್ಲಿಂದ ಶುರುವಾದ ಸಣ್ಣ ಹೊಂಡ ಮುಚ್ಚುವ ಕೆಲಸ, ಕೈಲಾಜಿಗೆ ಬದುಕಿನ ಕಂದಾಯ ಕಟ್ಟುವಂತೆ ಮಾಡಿತ್ತು. ಆತನ ಹಣಕಾಸಿನ ಪರಿಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಸಾಲ ಸಾಗರದಷ್ಟಾಗಿತ್ತು. ಹಾರಲು ಹತ್ತಿರ ಕಡಲೂ ಇರಲಿಲ್ಲ. ಮೇಲಧಿಕಾರಿಗಳಿಗೆ ದೂರು ಹೋಗತೊಡಗಿದವು. ಒಂದು ದಿನ ಬಂದು ಕುಳಿತ ಅವರು ಎಲ್ಲ ಲೆಕ್ಕ ತೆಗೆದು ಡಿಸ್ಮಿಸ್ ಮಾಡುವುದು ಅನಿವಾರ್ಯವಾಗುತ್ತದೆ. ಯಪರಾತಪರಾ ಆದ ಹಣವನ್ನು ಸೈಲೆಂಟ್ ಆಗಿ ಕಟ್ಟಿ ಬಿಟ್ಟುಹೋಗಿ. ರಿಸೈನ್ ಮಾಡಿದೆ, ಬ್ಯುಸಿನೆಸ್ ಮಾಡುವೆ ಅಂತ ಹೇಳಿಕೊಳ್ಳಲು ನಮ್ಮ ಅಭ್ಯಂತರವಿಲ್ಲ ಎಂದರು. ಒಂದಿಷ್ಟು ಆತ್ಮೀಯರು ತಾತ್ಪೂರ್ತಿಕ ಸಮಸ್ಯೆ ಬಗೆಹರಿಸಿದರು. ಕೈಲಾಜಿ ಬ್ಯಾಂಕಿನಿಂದ ಬಿಡುಗಡೆಯಾದ. ಆದರೆ ಮನೆಯಲ್ಲಿ ಹೇಳಲಿಲ್ಲ, ಧಗೆಯನ್ನು ಮುಚ್ಚಿಟ್ಟ. ಸಂಭಾವ್ಯ ದಾರಿಗಳನ್ನು ಹುಡುಕತೊಡಗಿದ. ಸಾಯುವುದೇ ಮೇಲು ಎಂದು ಅನ್ನಿಸತೊಡಗಿದಾಗ, ಅವನಿಗೆ ಗೆಳೆಯರ ಬಳಗದ ಅದ್ಯಾರೋ ಸೂಚಿಸಿದ್ದು ಕುಂಟ ಪಂಡಿತರ ಹೆಸರನ್ನ!

*

ಕುಂಟ ಪಂಡಿತರು ಪೇಟೆಯ ಹೊರವಲಯದ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದರು. ಅವರು ಪಾರಂಪರಿಕ ಔಷಧಿಗಳನ್ನು ತಯಾರಿಸಿ ಕೊಡುತ್ತಿದ್ದರು. ಇದು ತಲೆತಲಾಂತರದಿಂದ ಬಂದ ವೃತ್ತಿ. ಜೊತೆಗೆ ಜಾತಕ, ಹಸ್ತ ಸಾಮುದ್ರಿಕಾಶಾಸ್ತ್ರದ ಜ್ಞಾನವಿತ್ತು. ಅವತ್ತು ಹೆಂಡತಿಯ ಏರು ಧ್ವನಿಯಿಂದ ದೂರವಾಗುತ್ತ ಹೊರಟ ಕೈಲಾಜಿ ಬಂದು ತಲುಪಿದ್ದು ಇವರ ಧನ್ವಂತರಿ ದವಾಖಾನೆಗೆ. ಅಷ್ಟು ಮುಂಚೆ ಸಾಮಾನ್ಯವಾಗಿ ಪಂಡಿತರ ದವಾಖಾನೆಯ ಮುಂದೆ ಜನರು ಇರುತ್ತಿರಲಿಲ್ಲ. ಹಾಗಾಗಿ ಅವರಿಗೆ ಕೈಲಾಜಿಯೊಂದಿಗೆ ಪ್ರತಿಸ್ಪಂದನಕ್ಕೆ ಹೆಚ್ಚು ಸಮಯ ದೊರಕಿತು. ಅವರು ಒಂದು ಮಣೆಯ ಮೇಲೆ ಕುಳಿತಿದ್ದರು. ಮುಖ್ಯವಾದ ಔಷಧಿಗಳನ್ನು ಅವರು ಕೈಗೆಟುಕುವ ದೂರದಲ್ಲಿ ಇಟ್ಟುಕೊಂಡಿದ್ದರು. ಬಿಳಿಯಾದ ಉದ್ದನೆಯ ಕೂದಲನ್ನು ಗಂಟುಕಟ್ಟಿ ಸ್ವಲ್ಪ ಇಳಿಬಿಟ್ಟಿದ್ದರು. ಮೀಸೆಯು ತುಟಿಗಳನ್ನು ಆವರಿಸಿತ್ತು ಮತ್ತು ಗಡ್ಡವನ್ನು ಹಣಿಗೆಯಲ್ಲಿ ಬಾಚಿ ಕೆಳಗೆ ಬಿಟ್ಟಂತೆ ನೀಟಾಗಿತ್ತು. ಆ ಗಡ್ಡದ ಕೆಲವು ಕೂದಲುಗಳ ತುದಿ ಚಕ್ರಾಸನ ಹಾಕಿ ಕುಳಿತ ಸ್ಥಿತಿಯಲ್ಲಿ ತೊಡೆಗೆ ತಾಗುತ್ತಿತ್ತು.

ಮೊದಲ ನೋಟಕ್ಕೆ ಗೌರವ ಭಾವನೆ ಕೈಲಾಜಿಗೆ ಉಂಟಾಯಿತು. ಸೋತು ಸೊರಗಿದಾಗ ಹೀಗಾಗಬಹುದು ಎಂದುಕೊಂಡ. ಇಂತಹವರ ಬಳಿ ಹೆಚ್ಚು ಬಾಯಿಬಿಡಬಾರದು ಎಂದುಕೊಂಡ. ಅವರು ‘ಏನಾಯ್ತು ತಮ್ಮಾ’ ಎಂದು ಕೇಳಿದಾಗಲೂ, ‘ಸ್ವಲ್ಪ ನಿದ್ದೆ ಬರ್ತಿಲ್ಲ. ವಿಚಿತ್ರ ಯೋಚನೆಗಳು ಕಾಡುತ್ತವೆ. ಹೀಗಾದಾಗ ಬೆಳಿಗ್ಗೆ ಕೆಲಸಕ್ಕೆ ಹೋಗಲು ತೊಂದರೆ ಆಗುತ್ತದೆ’ ಅಂದ. ಅವರು ಇವನನ್ನೇ ದಿಟ್ಟಿಸಿ ನೋಡುತ್ತಾ ಇದ್ದರು. ಮುಂದೆ ಆತನಿಗೆ ತನ್ನನ್ನು ತಾನು ನಿಗ್ರಹಿಸಿಕೊಳ್ಳಲು ಆಗಲಿಲ್ಲ. ಎಲ್ಲವನ್ನೂ ಕಾರಿದ, ಬಿಕ್ಕಿ ಬಿಕ್ಕಿ ಅತ್ತ, ಕುಸಿದು ಕುಳಿತ. ಪಂಡಿತರು ಅವರ ತಲೆಯನ್ನು ನೇವರಿಸಿದರು. ಹಣೆಯನ್ನು ಹೆಬ್ಬೆಟ್ಟಿನ ತುದಿಯಿಂದ ಒತ್ತಿ ಏನನ್ನೋ ಗುನುಗುನಿಸಿದರು. ‘ಸಮಾಧಾನ’ ಎನ್ನುತ್ತಾ ಎದ್ದು ಒಳಗಡೆ ಹೋಗಿ ಬಂದರು. ಜನ ಹೇಳುವಷ್ಟು ತೀರಾ ಕುಂಟರಲ್ಲ ಅವರು ಎಂಬುದನ್ನು ಕೈಲಾಜಿ ಗಮನಿಸಿದ್ದ. ‘ಕುಂಟ ಅಂದರೆ ಕುಂಟ ಅಂತಲ್ಲ ಅರ್ಥ! ನಡಿಗೆ ಸರಿಯಿಲ್ಲ ಎಂಬರ್ಥವೂ ಇರಬಹುದು. ಸಾಮಾನ್ಯವಾಗಿ ಸಮಾಜಕ್ಕೆ ನ್ಯೂನತೆಯನ್ನು ಹುಡುಕುವ ಚಪಲ. ಅದಕ್ಕೆ ಅನುಕಂಪ ವ್ಯಕ್ತಪಡಿಸುವ ಹಂಬಲ, ಕೊನೆಗೆ ಹಂಗಿಸುವ ಮನೋಭಾವ’ ಇವನ ನೋಟವನ್ನು ಗಮನಿಸಿ ಪಂಡಿತರು ಹೇಳಿದ್ದರು.

ಇದನ್ನೂ ಓದಿ | ಸಾಲಭಂಜಿಕೆ ಅಂಕಣ | ಬಂಗಾರದಂಥ ಹುಡುಗಿ ನಗ ಬಯಸಿದಳೇ?

ಕೈಯಲ್ಲಿ ಕಾಕೆಹಣ್ಣಿನ ಬಣ್ಣದ, ಗುಲಗಂಜಿ ಗಾತ್ರದ ಗುಳಿಗೆಗಳನ್ನು ಹಿಡಿದುಕೊಂಡು ಬಂದು, ಒಂದು ಕಾಗದದಲ್ಲಿ ಹಾಕಿ, ಮಡಚಿ ಪಟ್ಟಲ ಮಾಡಿ ಕೊಡುತ್ತಾ ಪಂಡಿತರು ‘ಇದರಲ್ಲಿನ ಎರಡು ಮಾತ್ರೆಗಳನ್ನು ವಿಶ್ರಾಂತಿ ಮಾಡಬಹುದಾದ ಸ್ಥಳದಲ್ಲಿ ಸೇವಿಸು. ಸದ್ಯಕ್ಕೆ ನಿನ್ನ ಮಾನಸಿಕ ಪರಿಸ್ಥಿತಿಗೆ ಮೂರು ಹೊತ್ತು ತೆಗೆದುಕೊಳ್ಳಬೇಕು. ನಂತರ ಎರಡು ಬಾರಿ, ಆಮೇಲೆ ದಿನಕ್ಕೆ ಒಂದು ಬಾರಿ ಮಾಡುತ್ತಾ, ಎರಡರಿಂದ ಒಂದು ಮಾತ್ರೆಗೆ ತರೋಣ. ಇದಕ್ಕೆ ಆರೆಂಟು ತಿಂಗಳು ಬೇಕಾಗಬಹುದು’ ಎಂದರು. ‘ಗುರುಗಳೇ…’ ಅಯಾಚಿತವಾಗಿ ಕೈಲಾಜಿಯ ಬಾಯಿಯಿಂದ ಈ ಶಬ್ದ ಅವನ ಊಹೆಗೂ ಮೀರಿ ಬಂದಿತ್ತು. ‘ನಾನು ಮನೆಗಾಗಲಿ, ಬ್ಯಾಂಕಿಗಾಗಲಿ ಹೋಗುವಂತಿಲ್ಲ. ಬೇರೆ ಸ್ಥಳವಿಲ್ಲ!’

‘ಸರಿ ಹಾಗಾದರೆ, ಅಡುಗೆ ಮನೆಯಲ್ಲಿ ಕೊಡದಲ್ಲಿ ನೀರಿದೆ ನೋಡು, ಮಾತ್ರೆ ಸೇವಿಸಿ, ಹಿಂಬದಿ ಪಕ್ಕದಲ್ಲಿರುವ ಕೋಣೆಗೆ ಹೋಗಿ ವಿಶ್ರಾಂತಿ ಪಡೆ. ಆಮೇಲೆ ನೋಡೋಣ’ ಪಂಡಿತರು ಪರಿಹಾರ ತೋರಿದರು. ನಿಧಾನವಾಗಿ ಬೇರೆ ಬೇರೆ ಸಮಸ್ಯೆ ಇದ್ದವರು, ಅಲ್ಲಿಗೆ ಬರಲು ಆರಂಭಿಸಿದ್ದರು. ಕೈಲಾಜಿ ಮಾತ್ರೆ ಸೇವಿಸಿ, ಒಳಗೆ ಕೋಣೆಯಲ್ಲಿದ್ದ ಚಾಪೆ ಹಾಸಿ ಮಲಗಿದ. ಅರೆನಿದ್ರಾವಸ್ಥೆ ಅಥವಾ ಕನಸಿನ ಸ್ಥಿತಿಯಲ್ಲಿ ಅವನ ಬದುಕು, ಸಿನಿಮಾ ದೃಶ್ಯಗಳಂತೆ ಒಂದಿಷ್ಟು ಚಲಿಸಿ, ರೀಲ್ ಕಟ್ ಆದಂತಾಗಿ ಗಾಢಾಂಧಕಾರ ಆವರಿಸಿತು. ಮತ್ತೆ ಎಷ್ಟು ಕಣ್ಣು ಮುಚ್ಚಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಲವು ಸಮಯದ ನಂತರ ಪಂಡಿತರು ಬಂದು ಕೇಳಿದರು. ತನಗಾದ ಅನುಭವವನ್ನು ಕೈಲಾಜಿ ಹೇಳಿದ. ‘ಮನೆಯ ಹಿಂದುಗಡೆ ಒಂದಿಷ್ಟು ಬೇರುಗಳಿವೆ. ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಲು ಬರುತ್ತದಾ?’ ಎಂದು ಪಂಡಿತರು ಕೇಳಿದಾಗ, ಹೂಂ ಎಂದು ತಲೆಯಾಡಿಸಿದ. ಮಧ್ಯಾಹ್ನ ಊಟವನ್ನು ಒಟ್ಟಿಗೆ ಮಾಡುತ್ತಾ ‘ಅಡಿಗೆ ಮಾಡಲು ಬರುತ್ತದೆಯೇ?’ ಎಂದು ಕೇಳಿದರು. ‘ಮದುವೆಗಿಂತ ಮುಂಚೆ ಸ್ವಂತ ಅಡುಗೆ ಮಾಡಿಕೊಳ್ಳುತ್ತಿದ್ದೆ. ನಾಳೆಯಿಂದ ನಾನೇ ಮಾಡ್ಲಾ?’ ಕೊನೆಯ ಸಾಲು ಹೆಚ್ಚಾಯಿತು ಅಂತ ತುಟಿ ಕಚ್ಚಿಕೊಂಡ ಕೈಲಾಜಿ. ‘ಹಾಗೇ ಮಾಡು’ ಕೊನೆಯಲ್ಲಿ ಉಳಿದ ಮಜ್ಜಿಗೆ ಸುರಿಯುತ್ತಾ ಪಂಡಿತರು ಹೇಳಿದ್ದರು. ಊಟವಾದ ಮೇಲೆ ಮತ್ತೆರಡು ಮಾತ್ರೆಗಳನ್ನು ನುಂಗಿದರೂ ಕೈಲಾಜಿಗೆ ಪರಿಣಾಮ ಕಾಣಲಿಲ್ಲ. ಬ್ಯಾಂಕ್ ಬಿಡುವ ಸಮಯಕ್ಕೆ ಮನೆಗೆ ಹೊರಟ ಕೈಲಾಜಿಗೆ ಪಂಡಿತರು ಕೇಳಿದ್ದರು ‘ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮನದಲ್ಲಿ ಸುಳಿಯುತ್ತಿದೆಯೇ?’. ಕೈಲಾಜಿ ತಲೆತಗ್ಗಿಸಿದ್ದ. ‘ಆಗುವುದು ಆಗಿಹೋಯಿತು, ಬದುಕಿದ್ದರೆ ಸಂಸಾರ ದಡ ಸೇರುತ್ತದೆ. ಇಲ್ಲಾಂದ್ರೆ ನೀನು ಹೋಗುವುದರ ಜೊತೆಗೆ ಆ ಹೆಣ್ಣುಮಗಳು, ಹಸುಳೆಗಳನ್ನು ಮುಳುಗಿಸಿ ಹೋಗುತ್ತಿ. ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ಬದುಕು. ದುಡಿದು ದುಡಿದು ಪರಿಹಾರ ಕಂಡುಕೋ. ನಿನ್ನ ಸಮಸ್ಯೆ ಹೆಚ್ಚೆಂದರೆ ಐದು ವರ್ಷಗಳಲ್ಲಿ ಬಗೆಹರಿಯುತ್ತದೆ. ನಿಧಾನವಾಗಿ ಕುಟುಂಬಕ್ಕೆ ಸತ್ಯ ಹೇಳು. ಜಗತ್ತನ್ನು ಎದುರಿಸು. ನಾಳೆ ಬಾ. ದೃಢವಾಗಿ ಸಾಯುವುದಿಲ್ಲ ಎಂದು ನಿರ್ಧರಿಸಿ ಬಾ.’

ಇದನ್ನೂ ಓದಿ | ಕೇರಂ ಬೋರ್ಡ್‌ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!

ಮರುದಿನದಿಂದ ಅಡುಗೆ, ದಿನನಿತ್ಯದ ಕೆಲಸ, ಔಷಧ ತಯಾರಿಕೆಯಲ್ಲಿ ಪಂಡಿತರಿಗೆ ಕೈಲಾಜಿ ಸಹಾಯ ಮಾಡತೊಡಗಿದ್ದ. ಆನಂತರ ಅವನಿಗೆ ಕ್ರಮೇಣವಾಗಿ ಔಷಧಿ ಕೆಲಸ ಮಾಡತೊಡಗಿತು. ಅವನಿಗೆ, ಕಾಲದಿಂದ ಮುಂದಕ್ಕೆ ಹೋಗಿ ತನ್ನ ಜೀವನವನ್ನು ಕಾಣುವ ಅಪರೂಪದ ಶಕ್ತಿ ಪ್ರಾಪ್ತವಾಯಿತು. ದಿನಾಲೂ ಅಷ್ಟಷ್ಟೇ ಮುಂದಿನ ದಿನಮಾನಗಳು ಕಣ್ಮುಂದೆ ಬರಲಾರಂಭಿಸಿದವು. ಆ ದೃಶ್ಯಗಳಲ್ಲಿ ಆತ ನಿಧಾನವಾಗಿ ಸಹಜ ಸ್ಥಿತಿಗೆ ಬರಲಾರಂಭಿಸಿದ್ದ. ಸಂಸಾರದಲ್ಲಿ ಸಾಮರಸ್ಯ ಸಾಧ್ಯವಾಗಿತ್ತು. ಬ್ಯಾಂಕ್ ಬಿಟ್ಟು ಪಂಡಿತರ ಜೊತೆ ಔಷಧ ತಯಾರಿಕೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೆಂಡತಿಗೆ ಹೇಳಿದ. ಆಕೆ ಒಂದೆರಡು ದಿನ ಅಸಮಾಧಾನ ವ್ಯಕ್ತಪಡಿಸಿದಳು. ನಂತರ ಬದಲಾದ ಕೈಲಾಜಿಯ ಮನಸ್ಥಿತಿ ಆಕೆಯನ್ನು ಒಲಿಸಿತು. ಮುಂದೊಂದು ದಿನ ಆಕೆಗೆ ನಿಜವಾದ ವಿಷಯವನ್ನು ಅರುಹಿದಾಗಲೂ ಅದನ್ನು ಆಕೆ ಸಮಾಧಾನ ಚಿತ್ತದಿಂದಲೇ ಸ್ವೀಕರಿಸಿದಳು.

ನಿಧಾನವಾಗಿ ಪಂಡಿತರು ಗುಳಿಗೆಯ ಅವಧಿಯನ್ನು ಇಳಿಸಿದರು. ಪ್ರತಿ ಹಂತದಲ್ಲೂ ಕೈಲಾಜಿ ಅವರ ವಿಶ್ವಾಸ ಗಳಿಸಿದ್ದ. ‘ಗುರುಗಳೇ ಈ ಗುಳಿಗೆಯ ಹೆಸರೇನು?’

ʻಇಲ್ಲಿಯವರೆಗೆ ಬಹಳ ಕಡಿಮೆ ಜನರಿಗೆ ಈ ಔಷಧ ಕೊಟ್ಟಿದ್ದೇನೆ. ಇದರ ಹೆಸರನ್ನು ಯಾರೂ ಕೇಳಲಿಲ್ಲ. ಕೇಳಿದ್ದರೆ ಹೇಳುತ್ತಿದ್ದೆನೋ, ಇಲ್ಲವೋ. ಎಷ್ಟು ಹೇಳುತ್ತಿದ್ದೆನೋ ಗೊತ್ತಿಲ್ಲ! ಕೇಳು ಇವತ್ತು ಎಲ್ಲ ಹೇಳಿಬಿಡುತ್ತೇನೆ.’ ದೀರ್ಘವಾಗಿ ಉಸಿರನ್ನು ಒಳಗೆ ಎಳೆದುಕೊಂಡು ಹೇಳಿದ್ದರು. ದವಾಖಾನೆ ಮುಚ್ಚಿ, ಒಳಬಂದು ದೇವರ ಕೋಣೆಯಲ್ಲಿ ಜಮಖಾನ ಹಾಸಿ ಕುಳಿತುಕೊಂಡು, ಕೈಲಾಜಿಗೆ ಕುಳಿತುಕೊಳ್ಳಲು ಹೇಳಿದರು.

ʻಐವತ್ತು ವರ್ಷಗಳ ಹಿಂದೆ ನಾನು ಹೀಗೆ ಸೋತು ಬಂದು ನಿನ್ನ ಹಾಗೆ ನನ್ನ ಗುರುಗಳ ಎದುರು ಕುಳಿತಿದ್ದೆ. ನಾನು ಅವತ್ತಿನ ಕಾಲದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪಾಸಾದವ. ಬಿಸಿರಕ್ತದ ಯುವಕ, ಏನೋ ಸಾಹಸ ಮಾಡಲು ಹೋಗಿ ಇನ್ನೇನೋ ಆಗಿತ್ತು. ಅವಿಭಕ್ತ ಕುಟುಂಬ, ಮನೆಯಿಂದ ಹೊರಗೆ ಹಾಕಿದರು. ಅವೆಲ್ಲ ಒಂದು ದೊಡ್ಡ ಕಥೆ, ಅದು ಬಿಡು. ಗುರುಗಳು ಕಲಿಸಿದ್ದು ಕಲಿಯುತ್ತಾ ಹೋದೆ. ಒಂದು ದಿನ ಅವರ ಬಳಿಯಿದ್ದ ಗ್ರಂಥದಲ್ಲಿ ಒಂದು ಅಪರೂಪದ ವಟಿಯ ವಿವರಣೆ ಇತ್ತು. ಅದನ್ನು ಆ ಗ್ರಂಥದಲ್ಲಿ ವಯ ವಟಿ ಎಂದು ಕರೆದಿದ್ದರು. ನಾನು ಅದರಲ್ಲಿ ಹೇಳಿದ್ದ ಗಿಡಮೂಲಿಕೆಗಳನ್ನು ಗುರುಗಳ ಸಹಾಯದಿಂದ ತಿಳಿದು, ಈ ವಟಿಯನ್ನು ತಯಾರಿಸಿದೆ. ನನ್ನ ಮೇಲೆಯೇ ಪ್ರಯೋಗಿಸಿಕೊಂಡೆ. ಅದು ಕಾಲವನ್ನು ಮುಂದೆ ಹೋಗಿ ನೋಡುವ ವಿಶಿಷ್ಟ ಅನುಭವವನ್ನು ನೀಡಿತ್ತು. ಅದನ್ನು ತಯಾರಿಸಿ, ಪ್ರಯೋಗಿಸಿದಾಗ ನನಗೆ ಒಂದು ಭ್ರಮೆ ಆವರಿಸಿತು. ಏನೋ ಆಗುತ್ತದೆ ಅನ್ನಿಸುತ್ತಿತ್ತು, ಹುಚ್ಚು ಹಿಡಿದ ಹಾಗೆ! ಅಪರೂಪದ್ದು ಸಿದ್ಧಿಸುವಾಗ ಹೀಗಾಗುತ್ತದೆ ಎಂದು ಗುರುಗಳು ಧೈರ್ಯ ತುಂಬಿದರು. ಆದರೂ ಏನೋ ಹಸಿವು, ಅರ್ಥವಾಗದ ಕ್ಷೋಭೆ. ಏನು ಮಾಡಲಿ, ಏನು ಬಿಡಲಿ, ಎನ್ನುವಾಗ ಗುರುಗಳನ್ನು ಹುಡುಕಿಕೊಂಡು ಒಂದು ಸುಂದರ ತರುಣಿ ಬಂದಿದ್ದಳು. ಎಂತಹ ಚೆಂದವದು ಎಂದು ಬಾಯಿಮಾತಿನಲ್ಲಿ ಹೇಳಲಾಗದು. ಅಧ್ಯಯನ ಮಾಡುತ್ತಿದ್ದವನ ಮನಸ್ಸು ಚಂಚಲವಾಯಿತು. ಅವಳನ್ನು ಹೊಂದುವುದು ಪರಮ ಗುರಿಯಾಯಿತು. ಅವಳಿಗೆ ಏನೂ ತಿಳಿಯದ ವಯಸ್ಸು. ನಾನು ಕಾಮಿಸಿದೆ. ಅವಳು ಆರಾಧಿಸಿದಳು. ಗುರುಗಳು ಸಾಕು ಬಿಡು ಎಂದು ಎಚ್ಚರಿಸುವವರೆಗೂ ಮುಂದುವರೆದಿತ್ತು. ಅವಳನ್ನು ಮುಂದೆಂದೂ ಭೇಟಿಯಾಗಲಿಲ್ಲ. ಆಕೆ ಮತ್ತೆ ಇಲ್ಲಿ ಬರದಿದ್ದುದು ಅಚ್ಚರಿ ಮೂಡಿಸಿತ್ತು. ಅದನ್ನು ಮರೆಯಲೆಂಬಂತೆ ಈ ಅಪರೂಪದ ವಟಿಯ ಮೇಲೆ ಮತ್ತಷ್ಟು ಪ್ರಯೋಗ ನಡೆಸಿದೆ. ಗುರುಗಳ ಸಹಾಯದಿಂದ ರಸೌಷಧ ಸೇರಿಸಿದೆ. ಈ ಕಾರಣದಿಂದಾಗಿ, ಇನ್ನೊಂದಿಷ್ಟು ಹೆಚ್ಚಿನ ಪ್ರಯೋಜನ ಈ ವಟಿಯಿಂದ ಜನರಿಗೆ ಸಿಗುವ ಹಾಗಾಯಿತು. ಗ್ರಂಥದಿಂದ ಹೊರತಾಗಿ ಇದನ್ನು ತಯಾರಿಸಿದ್ದರಿಂದ ಬೇರೆಯದೇ ಹೆಸರಿಡುವಂತೆ ಗುರುಗಳು ಸೂಚಿಸಿದರು. ಬಹಳ ಆಲೋಚನೆ ಮಾಡಿದೆ. ಆ ತರುಣಿಯ ಮೋಹ ಕೆಲಸ ಮಾಡಿತೋ, ಪಶ್ಚಾತ್ತಾಪದಿಂದ ಆಯಿತೋ ಒಂದು ನಾಮವನ್ನು- ಕಲಾ ವಟಿ- ನಿದ್ದೆಯಲ್ಲಿ ಉಚ್ಛರಿಸಿದ್ದೆ ಎಂದು ಗುರುಗಳು ಹೇಳಿದ್ದರು’ ಒಮ್ಮೆ ಪಂಡಿತರು ಮೌನ ತಾಳಿದರು.

ಇದನ್ನೂ ಓದಿ | ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ

‘ಆ ತರುಣಿಯ ಹೆಸರು ಕಲಾ ಎಂದಾಗಿತ್ತೆ?’ ಕೈಲಾಜಿ ಕುತೂಹಲ ತಡೆಯಲಾಗದೆ ಕೇಳಿದ್ದ. ‘ಅವಳ ಹೆಸರನ್ನು ಹೇಳುವುದು ತಪ್ಪಾಗುತ್ತದೆ. ಅದು ಅವಳ ಹೆಸರಲ್ಲ. ನಾನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು.’ ಕೈಲಾಜಿ ಒಮ್ಮೆ ನಡುಗಿಹೋದ. ಅವತ್ತು ರಾತ್ರಿ ಅವನಿಗೆ ವಿಪರೀತ ಜ್ವರ ಬಂದಿತ್ತು. ಆತ ಜ್ವರ ಏರಿ ಏನೇನೋ ಬಡಬಡಿಸಿದ್ದ ಎಂದು ಮರುದಿನ ಬೆಳಿಗ್ಗೆ ಅವನ ಹೆಂಡತಿ ಹೇಳಿದ್ದಳು.

ಮರುದಿನ ಊಟ ಮಾಡುವಾಗ ಕೈಲಾಜಿ, ಪಂಡಿತರ ಬಳಿ ಕೇಳಿದ, `ಹಾಗಾದರೆ ಈ ಮಾತ್ರೆಯನ್ನು ಕಲಾ ವಟಿ ಎಂದು ಕರೆಯಬೇಕೇ?’

ಗಡ್ಡವನ್ನು ಎಡಗೈಯಿಂದ ನೀವುತ್ತಾ ಪಂಡಿತರು ಹೇಳಿದ್ದರು ‘ಇಲ್ಲ, ಗುರುಗಳು ತಿದ್ದಿದ್ದರು. ಕಾಲ ವಟಿ ಅಂತ. ಆಂಗ್ಲ ಭಾಷೆಯಲ್ಲಿ ಅದನ್ನು ಬರೆದು ನೋಡು, ಎಲ್ಲಾ ಒಂದೇ! ಆಮೇಲೆ ನಾನು ಅದನ್ನೆಂದೂ ಉಪಯೋಗಿಸಲಿಲ್ಲ. ನಿನಗೆ ಪ್ರಯೋಜನ ತಂದಿತಲ್ಲ. ಅಷ್ಟು ಸಾಕು. ಇನ್ನೊಂದು ವಿಶೇಷವೆಂದರೆ ಇದು, ಈಗಿನ ಹೊಸ ತಲೆಮಾರಿಗೆ ಬೇರೆಯದೇ ಪರಿಣಾಮ ಬೀರುತ್ತಿದೆ ಎಂದು ತಿಳಿಯಿತು, ಕೆಲವು ಯುವಕರಿಗೆ ಕೊಟ್ಟಾಗ. ಅದು ಅವರನ್ನು ವರ್ತಮಾನದಲ್ಲಿ ಮಾತ್ರ ಇಡುತ್ತದೆ. ಭೂತ, ಭವಿಷ್ಯದ ಭಾರದಿಂದ ಮುಕ್ತರಾಗಿ, ತುಂಬಾ ಉತ್ಸಾಹದಿಂದ ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದಾರೆ. ಇವಿಷ್ಟು ನಾನು ಹೇಳಬೇಕಿತ್ತು. ಇನ್ನು ಕೊನೆಯ ದಿನ ನೀನು ಈ ಮಾತ್ರೆ ಸೇವಿಸಬೇಕು. ಅಲ್ಲಿಗೆ ಈ ಚಿಕಿತ್ಸೆ ನಿನಗೆ ಕೊನೆಗೊಳ್ಳುತ್ತದೆ. ಸ್ವಾರ್ಥಕ್ಕೆ ಸೇವಿಸಿದರೆ ಇನ್ನೆಂದೂ, ಈ ವಿದ್ಯೆ ಒಲಿಯದು.’ ಎಂದು ಹೇಳುತ್ತಾ ದೇವರ ಮುಂದೆ ಪ್ರಮಾಣ ಮಾಡಿಸಿ, ತಯಾರಿಯ ವಿಧಾನವನ್ನು ಕೈಲಾಜಿಗೆ ಧಾರೆ ಎರೆದಿದ್ದರು. ಮೊದಲ ಬಾರಿಗೆ ಕೈಲಾಶ್ ಕೈಲಾಜಿಗೆ ಕಾಲ ವಟಿ ಸೇವಿಸದೆಯೂ, ತನ್ನ ಭವಿಷ್ಯ ಕಣ್ಮುಂದೆ ಗೋಚರಿಸತೊಡಗಿತ್ತು….. ಎಲ್ಲಿದ್ದೇನೆ ಎಂದು ಅರೆಕ್ಷಣ ಯೋಚಿಸುವಂತಾಯಿತು. ಒಮ್ಮೆಲೇ ಕೈಲಾಜಿಗೆ ಪತ್ನಿಯು ಕೊತ್ತಂಬರಿ ಸೊಪ್ಪು ತರಲು ಹೇಳಿದ್ದು ನೆನಪಾಯಿತು. ಆದರೆ ಯಾವಾಗ ಹೇಳಿದ್ದು ಎಂಬುದು ಮರೆತುಹೋಗಿತ್ತು. ಯಾವುದಕ್ಕೂ ಇರಲಿ, ಒಂದು ಕಟ್ಟು ಕೊತ್ತಂಬರಿ ಸೊಪ್ಪು ಒಯ್ದರೆ ಗಂಟೇನೂ ಹೋಗುವುದಿಲ್ಲ ಎಂದು ತಲೆ ಕೆರೆದುಕೊಳ್ಳುತ್ತಾ, ಕೈಲಾಜಿ ಮುಂದೆ ಹೆಜ್ಜೆ ಹಾಕತೊಡಗಿದ.

(ಡಾ. ಅಜಿತ್ ಹರೀಶಿ ಪ್ರಸ್ತುತ ಹರೀಶಿಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು. ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಆರೋಗ್ಯದ ಅರಿವು (ವೈದ್ಯಕೀಯ ಸಾಹಿತ್ಯ) ಮತ್ತು ಕೃತಿಕರ್ಷ (ವಿಮರ್ಶಾ ಕೃತಿ) ಪ್ರಕಟಗೊಂಡಿವೆ.)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading

ಪ್ರಮುಖ ಸುದ್ದಿ

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

ವರನಟ, ಗಾನಗಂಧರ್ವ ಡಾ.ರಾಜ್‌ಕುಮಾರ್‌ ಅವರು ಕನ್ನಡಿಗರಿಗೆ ಸದಾ ಕಾಲ ಸ್ಫೂರ್ತಿ ನೀಡುವಂಥ ನೂರಾರು ಹಾಡುಗಳನ್ನು ಕೊಟ್ಟು ಹೋಗಿದ್ದಾರೆ. ಅವುಗಳಲ್ಲಿ ಬೆಸ್ಟ್‌ ಅನಿಸುವ 7 ಹಾಡುಗಳು ಇಲ್ಲಿವೆ. ಇದು ಡಾ.ರಾಜ್‌ ಬರ್ತ್‌ಡೇ ವಿಶೇಷ.

VISTARANEWS.COM


on

Koo

1. ಯಾರೇ ಕೂಗಾಡಲಿ ಊರೇ ಹೋರಾಡಲಿ

ʼಸಂಪತ್ತಿಗೆ ಸವಾಲ್‌ʼ ಚಿತ್ರದಲ್ಲಿ ಅಣ್ಣಾವ್ರು ಎಮ್ಮೆಯ ಮೇಲೆ ಕುಳಿತು ಹಾಡುತ್ತಾ ಸಾಗುವ ಈ ದೃಶ್ಯ ಕನ್ನಡ ಚಲನಚಿತ್ರ ರಂಗದ ಐಕಾನಿಕ್‌ ಅನಿಸುವ ಹಾಡು. ʼಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆʼ ಎಂದು ಎಮ್ಮೆಯ ನೆಮ್ಮದಿಯ ಸೂತ್ರವನ್ನು ಮನುಷ್ಯನಿಗೆ ಅನ್ವಯಿಸಿ, ಪ್ರಾಣಿಗಳ ಗುಣಗಳಿಂದ ಮನುಷ್ಯರು ಕಲಿಯಬೇಕಾದ್ದನ್ನು ಉದಾಹರಿಸಿ ಹಾಡಿದ್ದಾರೆ.

2. ನಗುತನಗುತ ಬಾಳು ನೀನು ನೂರು ವರುಷ
ʼಪರಶುರಾಮ್‌ʼ ಫಿಲಂನ ʼನಗುತಾ ನಗುತಾ ಬಾಳು ನೀನು ನೂರು ವರುಷʼ ಹಾಡು ಕನ್ನಡದ ಎರಡು ಬೆಲೆಬಾಳುವ ಮುತ್ತುಗಳನ್ನು ಒಳಗೊಂಡ ಮಾಣಿಕ್ಯ. ಇದರಲ್ಲಿ ವರನಟ ರಾಜ್‌ ಅವರು ಮುದ್ದು ಬಾಲನಟ ಪುನೀತ್‌ ರಾಜ್‌ಕುಮಾರ್‌ಗೆ ಬರ್ತ್‌ಡೇ ಕೇಕ್‌ ತಿನ್ನಿಸುತ್ತಾ ಹಾಡುತ್ತಾರೆ. ʼದೇವರು ತಂದ ಸೃಷ್ಟಿಯ ಅಂದ ಎಲ್ಲರು ನಗಲೆಂದೇʼ ಎಂಬಂಥ ಅರ್ಥಪೂರ್ಣವಾದ ಸಾಲುಗಳನ್ನು ಇದು ಒಳಗೊಂಡಿದೆ.

3. ಬಾನಿಗೊಂದು ಎಲ್ಲೆ ಎಲ್ಲಿದೆ
ʼಬೆಳದಿಂಗಳಾಗಿ ಬಾʼ ಚಲನಚಿತ್ರದಲ್ಲಿ ನಾಯಕಿ ಆರತಿ ಅವರಿಗೆ ಡಾ.ರಾಜ್‌ ಬುದ್ಧಿವಾದ ಹೇಳುವ ಹಾಡು ಇದು. ಚಿಕ್ಕಮಗಳೂರಿನ ಹಸಿರು ಸಿರಿಯ ನಡುವೆ ಕಾರು ಚಲಾಯಿಸುತ್ತಾ ʼಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆʼ ʼಹೂವೂ ಮುಳ್ಳೂ ಎರಡೂ ಉಂಟು ನಮ್ಮ ಬಾಳಲಿʼ ಎಂದು ಹಾಡುತ್ತಾ ಸಾಗುವ ಈ ದೃಶ್ಯ ಮನಮೋಹಕವಾಗಿದೆ.

4. ಬಾಳುವಂಥ ಹೂವೆ ಬಾಡುವಾಸೆ ಏಕೆ?
ʼಆಕಸ್ಮಿಕʼ ಚಲನಚಿತ್ರದಲ್ಲಿ ಅಣ್ಣಾವ್ರು ನಾಯಕಿ ಮಾಧವಿಗೆ ಬುದ್ಧಿ ಹೇಳುವ ಹಾಡು ʼಬಾಳುವಂಥ ಹೂವೆ ಬಾಡುವಾಸೆ ಏಕೆ?ʼ ʼಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು, ವ್ಯರ್ಥವ್ಯಸನದಿಂದ ಸಿಹಿಯು ಕೂಡ ಬೇವುʼ ʼಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯʼ ʼಸಣ್ಣ ಬಿರುಕು ಸಾಲದೇ ತುಂಬು ದೋಣಿ ತಳ ಸೇರಲು?ʼ ಎಂಬಂಥ ಸಾರ್ವಕಾಲಿಕವಾದ ನೀತಿಮುತ್ತುಗಳನ್ನು ಹೇಳುತ್ತಾರೆ.

5. ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ
ಶಿವರಾಜ್‌ ಕುಮಾರ್‌ ಅವರು ನಟಿಸಿರುವ ʼರಣರಂಗʼ ಚಿತ್ರಕ್ಕೆ ಡಾ.ರಾಜ್‌ ಅವರು ಹಾಡಿರುವ ಹಾಡು ಇದು. ಇದರ ಬೀಟ್‌ ಹಾಗೂ ಒಕ್ಕಣೆಗಳು ಎಂಥವನನ್ನೂ ಹೋರಾಡಲು ಪ್ರಚೋದಿಸುವಂತಿವೆ. ಹಿಡಿಯೋ ಆತ್ಮಬಲದಸ್ತ್ರ, ಅದುವೇ ಜಯದ ಮಹಾ ಮಂತ್ರ, ನಿನ್ನ ದಾರಿಯಲ್ಲಿ ಎಲ್ಲೂ ಸೋಲೇ ಇಲ್ಲ, ಬಾಳ ಯುದ್ಧದಲ್ಲಿ ನಿನ್ನ ಗೆಲ್ಲೋರಿಲ್ಲ, ಛಲವೇ ಬಲವು ಮುಂದೆ ನುಗ್ಗಿ ನುಗ್ಗಿ ಬಾʼ ಎಂದು ಧೈರ್ಯ ತುಂಬುತ್ತಾರೆ ಇದರಲ್ಲಿ.

6. ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
ಕನ್ನಡ ನಾಡಿನ ಮೊದಲ ಸಾಮ್ರಾಟ ಕದಂಬರ ಮಯೂರವರ್ಮನಾಗಿ ʼಮಯೂರʼ ಫಿಲಂನಲ್ಲಿ ನಟಿಸಿದ ರಾಜ್‌, ʼನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ, ಬಾಳುವಿರೆಲ್ಲ ಹಾಯಾಗಿʼ, “ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾʼʼ ಎಂದು ಧೈರ್ಯ ಹೇಳಿದ್ದು ಒಂದು ಕಾಲದ ನಾಡಿನ ಜನತೆಯಲ್ಲಿ ಧೈರ್ಯವನ್ನು ತುಂಬುವ ನಾಯಕ ಗುಣವನ್ನು ಸ್ಪಷ್ಟವಾಗಿ ಚಿತ್ರಿಸಿತು.

7. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ʼಜೀವನಚೈತ್ರʼ ಚಿತ್ರದಲ್ಲಿ ಹಳದಿ ಪೇಟ ಕಟ್ಟಿಕೊಂಡು ಜಟಕಾ ಬಂಡಿಯನ್ನು ಹೊಡೆಯುತ್ತಾ ಅಣ್ಣಾವ್ರು ಸಾಗುವ ಈ ಹಾಡು ಐತಿಹಾಸಿಕ, ಕನ್ನಡ ಹೋರಾಟಕ್ಕೆ ಸದಾ ಸ್ಫೂರ್ತಿ ತುಂಬುವ ಒಂದು ಹಾಡು. ʼʼಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ, ಕಸ್ತೂರಿ ಕನ್ನಡʼ ಎಂದು ಅವರು ಸಾರಿದ್ದು ಇಂದೂ ಮುಂದೂ ಕನ್ನಡ ನಾಡಿನ ಆತ್ಮಗೀತೆಯಂತೆ ಇದ್ದೇ ಇರುತ್ತದೆ, ನಮಗೆ ಸ್ಫೂರ್ತಿ ತುಂಬುವಂತಿದೆ.

ಇದನ್ನೂ ಓದಿ: Dr.Rajkumar Memory: ಪ್ಯಾನ್‌ ಇಂಡಿಯಾ ಫಿಲಂಗಳ ಕಾಲದಲ್ಲಿ ಅಣ್ಣಾವ್ರ ಚಿತ್ರ ನೋಡೋಕೆ 8 ಕಾರಣಗಳು

Continue Reading

ಅಂಕಣ

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ದಶಮುಖ ಅಂಕಣ: ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ?

VISTARANEWS.COM


on

dashamukha column madness
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ʻಹುಚ್ಚುʼ (madness) ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ನೆನಪಾಗುವ ಚಿತ್ರಗಳ ಬಗ್ಗೆ ಹೆಚ್ಚು ಹೇಳುವುದು ಬೇಡವಲ್ಲ. ಯಾವುದೇ ದೇಶ, ಭಾಷೆ, ಸಂಸ್ಕೃತಿಗಳಲ್ಲಿ ನೋಡಿದರೂ ʻಹುಚ್ಚಿಗೆʼ ಹೆಚ್ಚಿಗೆ ಅರ್ಥಗಳಿಲ್ಲ… ಅದೊಂದೇ ಅರ್ಥ! ಹಾಗಾಗಿಯೇ ʻಅದೊಂಥರಾ ಹುಚ್ಚು, ಅವನಿಗೊಂದು ಹುಚ್ಚುʼ ಎಂಬಿತ್ಯಾದಿ ಮಾತುಗಳ ಬೆನ್ನಿಗೇ ʻಅಲ್ಲೇನೋ ಒಂದು ಅತಿರೇಕವಿದೆʼ ಎಂಬ ಭಾವ ಬಂದುಬಿಡುತ್ತದೆ. ಅದಕ್ಕಾಗಿಯೇ ʻಹುಚ್ಚು ಸಾಹಸ, ಹುಚ್ಚು ಪ್ರೀತಿʼ ಮುಂತಾದ ಪ್ರಯೋಗಗಳನ್ನು ಮಾಡುತ್ತಾ, ಬೈಯ್ಯುವುದಕ್ಕೆ, ವ್ಯಂಗ್ಯಕ್ಕೆ, ಕುಹಕಕ್ಕೆ, ಟೀಕೆಗೆ, ತಮಾಷೆಗೆ… ಅಥವಾ ಇಂಥದ್ದೇ ಋಣಾತ್ಮಕ ಎನ್ನಬಹುದಾದ ಛಾಯೆಗಳಲ್ಲಿ ಈ ಶಬ್ದವನ್ನು ಬಳಸುತ್ತೇವೆ. ನಿಜಕ್ಕೂ ಈ ಶಬ್ದವನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಬದುಕಿನಲ್ಲಿ ಪ್ರೀತಿ, ಸೌಖ್ಯ, ಖುಷಿಯನ್ನು ಅರಸುವವರಿಗೂ ಇದನ್ನು ಬಳಸಬಹುದೇ? ಸಾಹಿತ್ಯ-ಸಿನೆಮಾಗಳಲ್ಲಿ ಕಾಣುವ ಪ್ರೀತಿ, ಪ್ರೇಮಗಳಿಗೆ ಹುಚ್ಚನ್ನು ಪರ್ಯಾಯವಾಗಿ ಬಳಸುವುದು ಹೊಸದೇನಲ್ಲ. ಆದರೆ ಇಲ್ಲೀಗ ಅಂಥ ಹರೆಯದ ಪ್ರೀತಿಯ ಬಗ್ಗೆಯಲ್ಲ ಹೇಳುತ್ತಿರುವುದು. ಇತರರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವವರಿಗೂ ಈ ಶಬ್ದ ಸಲ್ಲುತ್ತದೆಯೇ?

ಇತ್ತೀಚೆಗೆ ಭೇಟಿ ಮಾಡಿದ ಒಂದಿಬ್ಬರು ವ್ಯಕ್ತಿಗಳು ಇಂಥದ್ದೊಂದು ಮಂಥನವನ್ನು ಹುಟ್ಟು ಹಾಕಿದ್ದು ಹೌದು. ಎಲ್ಲರಿಗಿಂತ ಭಿನ್ನವಾದ ಬದುಕನ್ನು ಆಯ್ದುಕೊಳ್ಳುವವರು, ತಮ್ಮ ಜೀವನದ ರೀತಿ-ನೀತಿಗಳನ್ನು ಅಥವಾ ಧ್ಯೇಯ-ಆದರ್ಶಗಳನ್ನು ʻಹುಚ್ಚುʼ ಎನ್ನುವಷ್ಟು ಪ್ರೀತಿಸದಿದ್ದರೆ, ಖುಷಿಯಿಂದ ಬದುಕುವುದು ಸಾಧ್ಯವೇ? ಎಷ್ಟೇ ಸುಭಿಕ್ಷವಾದ ಬದುಕನ್ನೂ ಹಳಿಯುತ್ತಲೇ ಬದುಕುವ ಇಂದಿನ ದಿನಗಳಲ್ಲಿ, ಇರುವ ಬದುಕಲ್ಲಿ ಸುಭಿಕ್ಷವನ್ನು ಸೃಷ್ಟಿಸುವ ಅವರನ್ನು ಹುಚ್ಚರೆಂದರೆ ಅತಿರೇಕವಾದೀತೇ? ಬದುಕನ್ನು ಕೊರಗಿನಲ್ಲೇ ಕಳೆಯುವುದು ಹುಚ್ಚೋ ಅಥವಾ ಇತರರ ಕೊರಗನ್ನು ಕಳೆಯುವುದು ಹುಚ್ಚೋ?

ಹೀಗೆನ್ನುವಾಗ ಅನಂತ್‌ ಸರ್‌ ನೆನಪಾಗುತ್ತಾರೆ. ಬದುಕಲ್ಲಿ ವಿದ್ಯೆ ದೊರೆಯದ ಮಕ್ಕಳನ್ನು ಶಿಕ್ಷಣದ ಹಾದಿಗೆ ಹಚ್ಚಿ, ನೆಲೆ ಕಾಣಿಸುವ ಅವರ ಸಾಹಸವನ್ನು ವರ್ಣಿಸುವುದಕ್ಕೆ ಬೇರೆ ಪದಗಳಿಗೆ ಸಾಧ್ಯವಿಲ್ಲ. ಮನೆ ಇದ್ದೂ ಇಲ್ಲದಂತಾದವರು, ಮನೆಯೇ ಇಲ್ಲದವರು, ಪಾಲಕರು ಇಲ್ಲದವರು, ಪಾಲಕರು ಯಾಕಾದರೂ ಇದ್ದಾರೋ ಎನ್ನುವಂಥ ಹಲವು ನಮೂನೆಯ ವಾತಾವರಣದಿಂದ ಬಂದ ಮಕ್ಕಳಿಗೆ ಊಟ, ವಸತಿಯ ಜೊತೆಗೆ ವಿದ್ಯೆ ನೀಡುವುದನ್ನೇ ಧ್ಯೇಯವಾಗಿಸಿಕೊಂಡವರು. ಹತ್ತು-ಹನ್ನೆರಡು ವರ್ಷಗಳವರೆಗೆ ಶಾಲೆಯ ಮುಖವನ್ನೂ ಕಾಣದವರು, ಎಂದೊ ಶಾಲೆಗೆ ಹೋಗಿ ನಡುವಲ್ಲೇ ಕಳೆದುಹೋದವರು- ಇಂಥ ನೂರಾರು ಮುಖಗಳಲ್ಲಿ ನಗು ಅರಳಿಸುವುದಕ್ಕೆ ಇರಬೇಕಾದ ಅದಮ್ಯ ಪ್ರೀತಿಯೂ ಒಂದು ಬಗೆಯ ಹುಚ್ಚೇ ತಾನೇ? ಹಾಗಿಲ್ಲದಿದ್ದರೆ, ಇಂಥ ಸಾಹಸಿಗಳು ಲೋಕದಲ್ಲಿ ನಮಗೆ ವಿರಳವಾಗಿ ಕಾಣುವುದೇಕೆ?

ಆರೇಳು ವರ್ಷದವರನ್ನು ಒಂದನೇ ಕ್ಲಾಸಿಗೆ ಕೂರಿಸುವಲ್ಲಿ ಅಷ್ಟೇನು ಸಮಸ್ಯೆಯಾಗಲಿಕ್ಕಿಲ್ಲ. ವರ್ಷದ ಆಧಾರದ ಮೇಲೆಯೇ ತಾನೆ ನಮ್ಮ ಶಿಕ್ಷಣ ವ್ಯವಸ್ಥೆ ರೂಪುಗೊಂಡಿರುವುದು. ಆದರೆ ಹದಿಹರೆಯಕ್ಕೆ ಕಾಲಿಟ್ಟವರು ಇನ್ನೂ ಶಾಲೆಯ ಮೆಟ್ಟಿಲನ್ನೇ ಹತ್ತದಿರುವಾಗ ಅವರನ್ನೂ ಒಂದನೇ ಕ್ಲಾಸಿಗೆ ಕೂರಿಸುವುದು ಹೇಗೆ? ʻಹಾಗಾಗಿಯೇ ದೈಹಿಕ ವಯಸ್ಸಿನ ಆಧಾರದ ಮೇಲಲ್ಲದೆ, ಮಕ್ಕಳ ಬೌದ್ಧಿಕ ವಯಸ್ಸಿಗೆ ಅನುಗುಣವಾಗಿ ಕಲಿಯುವ ಗುಂಪುಗಳನ್ನಾಗಿ ವಿಂಗಡಿಸಿಕೊಳ್ಳುತ್ತೇವೆ. ಹಾಗೆಯೇ ಅವರ ಕಲಿಕೆ ಮುಂದುವರಿಯುತ್ತದೆʼ ಎನ್ನುವುದು ಅನಂತ್‌ ಸರ್‌ ಹೇಳುವ ಮಾತು. ದೂರದ ಅಸ್ಸಾಂ, ಬಿಹಾರಗಳಿಂದ ಬಂದ ಮಕ್ಕಳಿಗೆ ಶಾಲೆಯ ಕಲ್ಪನೆಯೂ ಇಲ್ಲದಿರುವಾದ, ಇವರ ಭಾಷೆ ಅವರಿಗೆ-ಅವರ ಭಾಷೆ ಇವರಿಗೆ ತಿಳಿಯದಿರುವಾಗ, ವಿದ್ಯೆಯ ಶ್ರೀಕಾರ ಆಗುವುದು ಹೇಗೆ? ʻಇದೊಂಥರಾ ಹುಚ್ಚು. ಇದೂ ಆಗತ್ತೆʼ ಎನ್ನುವಾಗಿನ ಇವರ ಮುಖದ ನಗುವನ್ನು ಏನೆಂದು ಅರ್ಥ ಮಾಡಿಕೊಳ್ಳುವುದು?

ಈ ಚೌಕಟ್ಟಿನಾಚೆಯ ಮನೆಯಲ್ಲಿ ಕಲಿತು ಹೊರಬಿದ್ದು, ದುಡಿದು ಸಂಪಾದಿಸಿ ಬದುಕುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳುವಾಗ ಅವರ ಮುಖದ ನಗುವಿಗಿರುವ ಅರ್ಥದ ಅರಿವಾಗುತ್ತದೆ ನಮಗೆ. ಹುಚ್ಚಿಗೂ ಎಷ್ಟೊಂದು ಸುಂದರ, ಸಲ್ಲಕ್ಷಣಗಳಿವೆ ಎಂಬುದನ್ನು ತಿಳಿಯುವುದಕ್ಕೆ ಅದೊಂದು ನಗು ಸಾಕು. ಕೊರಗಿ ಕಳೆಯುವುದಕ್ಕಿಂತ, ಹೀಗೆ ಕೊರಗು ಕಳೆಯುವ ಹುಚ್ಚು ಒಳ್ಳೆಯದಲ್ಲವೇ? ನಮಗಿರುವ ಹುಚ್ಚು ಯಾವುದು ಎಂದು ಎಂದಾದರೂ ಯೋಚಿಸಿದ್ದೇವೆಯೇ?

ಈ ಎಲ್ಲ ಮಾತಿನ ನಡುವೆ ಪ್ರದೀಪ ಎನ್ನುವ ಆ ವ್ಯಕ್ತಿ ನೆನಪಾಗುತ್ತಾನೆ. ಕಪ್ಪು ಬಣ್ಣದ ಸಾಧಾರಣ ಮೈಕಟ್ಟಿನ ಆತ ಪುಟ್ಟ ದ್ವೀಪ ರಾಷ್ಟ್ರವೊಂದರ ನಿವಾಸಿ. ಅರಳಿದಂತಿರುವ ಕನ್ನಡಿಗಣ್ಣು, ಅವನದ್ದೇ ಆದ ವಿಶಿಷ್ಟ ಲಯದ ಇಂಗ್ಲಿಷ್‌ ಭಾಷೆಯ ಆತ ನಮಗೆ ಪರಿಚಯವಾಗಿದ್ದು ಪ್ರವಾಸವೊಂದರ ಭಾಗವಾಗಿ. ಅಲೆಯುವ ಹುಚ್ಚಿರುವ ಜನ ಲೋಕದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ ಜೊತೆಗೆ ತಿರುಗಾಡುವವರ ಸೌಖ್ಯವೇ ತನಗೆ ಪ್ರೀತಿ ಎನ್ನುವವರೂ ಇದ್ದಾರೆಂಬುದು ತಿಳಿದಿದ್ದು ಆಗಲೇ. ಈತ ವೃತ್ತಿಯಲ್ಲಿ ಪ್ರವಾಸಿ ಗೈಡ್‌. ನಮ್ಮ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೆ ಅಲ್ಲಿ ʻಗೈಡ್‌ ಬೇಕೆ?ʼ ಎಂದು ಮುತ್ತಿಗೆ ಹಾಕುವ ಗುಂಪಿನಲ್ಲಿ ಆತನೂ ಇರಬಹುದಾಗಿದ್ದವ. ಆದರೆ ತಮಗೆ ತಿಳಿದಷ್ಟನ್ನು ತೋಚಿದಂತೆ ಒದರಿ, ಬಂದವರಿಂದ ದುಡ್ಡು ಕಿತ್ತು ಕಳಿಸುವ ಗೈಡ್‌ಗಳ ಸಾಲಿನಿಂದ ಗಾವುದಗಟ್ಟಲೆ ದೂರದಲ್ಲಿ ಇರುವವ ಈತ.

ʻತಿರುಗಾಡಿದಷ್ಟೇ, ತಿರುಗಾಡಿಸುವುದೂ ನನಗಿಷ್ಟʼ ಎನ್ನುವ ಈತ, ತನ್ನ ಕಾರು ಓಡುವ ಪ್ರತಿಯೊಂದು ರಸ್ತೆಯ ಪರಿಚಯವನ್ನೂ ಮಾಡಿಕೊಡಬಲ್ಲ. ಯಾವ ಊರಿನ ಮಳೆ-ಬೆಳೆ ಹೇಗೆ ಎಂಬುದರಿಂದ ಹಿಡಿದು ಅಲ್ಲಿನ ಡೆಮಗ್ರಾಫಿಕ್‌ ವಿಶ್ಲೇಷಣೆಯನ್ನೂ ನೀಡಬಲ್ಲ. ʻಈ ಭಾಗದಲ್ಲಿ ತುಂಬಾ ಎಮ್ಮೆ ಸಾಕುತ್ತಾರೆ. ಮಣ್ಣಿನ ಗಡಿಗೆಯಲ್ಲಿ ಹಾಲು ಹೆಪ್ಪಾಕಿ, ಮೊಸರು ಮಾರುತ್ತಾರೆ. ಅದನ್ನೊಮ್ಮೆ ತಿನ್ನದಿದ್ದರೆ ಈ ರಸ್ತೆಯಲ್ಲಿ ಪ್ರಯಾಣ ಮಾಡಿದ್ದೇ ವ್ಯರ್ಥʼ ಎಂದು ಸರಕ್ಕನೆ ಗಾಡಿ ನಿಲ್ಲಿಸಿ, ಎರಡು ಪುಟ್ಟ ಗಡಿಗೆಗಳನ್ನು ಹಿಡಿದು ತರುತ್ತಾನೆ. ʻಇಷ್ಟು ದೂರ ಬಂದವರು ಈ ಸಿಹಿ ತಿನ್ನದಿದ್ದರೆ, ನಿಮ್ಮ ತಿರುಗಾಟವೇ ಅಪೂರ್ಣʼ ಎನ್ನುತ್ತಾ ಯಾವುದೋ ಸಿಹಿ ಎದುರಿಗಿಡುತ್ತಾನೆ. ʻಇಲ್ಲಿ ಭರಪೂರ ತರಕಾರಿ ಬೆಳೆಯುತ್ತಾರೆ. ಇದರಲ್ಲೊಂದು ಸಲಾಡ್‌ ಮಾಡುತ್ತೇನೆ ನೋಡಿ, ತಿನ್ನುವುದಕ್ಕೆ ಪುಣ್ಯ ಬೇಕುʼ ಎಂದು ಉಪಚಾರ ಮಾಡುತ್ತಾನೆ. ಇಂಥ ಯಾವುದನ್ನೂ ಮಾಡಬೇಕಾದ ಅಗತ್ಯ ಆತನಿಗಿಲ್ಲ. ನಮ್ಮ ಜಾಗಕ್ಕೆ ಕರೆದೊಯ್ದರೆ ಅವನ ಕೆಲಸ ಮುಗಿಯಿತು; ಅವನ ದುಡ್ಡು ಅವನ ಕೈ ಸೇರುತ್ತದೆ. ʻತಿರುಗಾಡುವುದು, ತಿರುಗಾಡಿಸುವುದು ನಂಗೊಂಥರಾ ಹುಚ್ಚು. ಹೊಸ ಜನರೊಂದಿಗೆ ನಂಟು ಬೆಸೆಯುವುದು, ಅವರನ್ನು ಖುಷಿಯಾಗಿಡುವುದು ನಂಗಿಷ್ಟʼ ಎನ್ನುತ್ತಾ ಹಿಂದಿ ನಟ ದೇವಾನಂದ್‌ ರೀತಿಯಲ್ಲಿ ನಗೆ ಬೀರುತ್ತಾನೆ.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಗುರಿ ತಲುಪುವುದಕ್ಕಿಂತ ಖುಷಿ ನೀಡುವುದು ಗಮ್ಯದೆಡೆಗಿನ ದಾರಿಗಳಲ್ಲವೇ? ಯಾವುದೇ ದಾರಿಯಲ್ಲಿ ಎದುರಾಗುವ ಊರೊಂದರ ಹೆಸರಿನ ಹಿಂದಿನ ಗಮ್ಮತ್ತು ತಿಳಿಸುವುದು, ಯಾವುದೋ ದೇಶದಿಂದ ಬರುವ ಚಿತ್ರವಿಚಿತ್ರ ಅಲೆಮಾರಿಗಳ ಜಾಯಮಾನ ವಿಸ್ತರಿಸುವುದು- ಇವೆಲ್ಲ ತನ್ನ ಪ್ರಯಾಣಿಕರ ದಾರಿಯನ್ನು ಬೋರಾಗದಂತೆ ಕಳೆಯುವ ಮತ್ತು ಅವರೊಂದಿಗೆ ನಂಟು ಬೆಸೆಯುವ ಆತನ ಉದ್ದೇಶಕ್ಕೆ ಒದಗುವಂಥವು. ವಿಹಾರಕ್ಕೆ, ವಿರಾಮಕ್ಕೆ, ಅಧ್ಯಯನಕ್ಕೆ ಮುಂತಾದ ಹಲವು ಕಾರಣಗಳನ್ನು ಹೊತ್ತು ಬರುವ ಜನರ ಕಥೆಗಳು ಆತನ ಸಂಚಿಯಲ್ಲಿವೆ. ಎಲ್ಲರಿಗೂ ಅವರವರ ಉದ್ದೇಶ ಈಡೇರುವಂತೆ ಶ್ರಮಿಸುವುದು ತನಗೆ ಪ್ರಿಯವಾದ ಸಂಗತಿ ಎನ್ನುವ ಇಂಥವರು ಜೊತೆಗಿದ್ದರೆ, ಅಲ್ಲಾವುದ್ದೀನನ ಮಾಂತ್ರಿಕ ಚಾಪೆಯ ಮೇಲೆ ತೇಲಿದಂತೆ ದಾರಿ ಸಾಗುತ್ತದೆ. ಇಂಥವರನ್ನು ನೋಡಿದಾಗ, ಇನ್ನೊಬ್ಬರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವ ಸ್ವಭಾವದ ಬಗ್ಗೆ ಬೇರೆ ಶಬ್ದಗಳು ನೆನಪಾಗುತ್ತಿಲ್ಲ.

ಹಣ, ಸಂಪತ್ತು, ಖ್ಯಾತಿ, ಅಧಿಕಾರಗಳ ಹುಚ್ಚು ಅಂಟಿಸಿಕೊಂಡವರು ನಮ್ಮೆದುರಿಗೆ ಮೆರವಣಿಗೆ ಹೊರಟಿದ್ದಾರೆ ಈಗ. ಚುನಾವಣೆಯ ಕಣದಲ್ಲಿಳಿದು ಅಧಿಕಾರ ದಕ್ಕಿಸಿಕೊಳ್ಳಲು, ದಕ್ಕದಿದ್ದರೆ ಯಾವ ಮಟ್ಟಕ್ಕೂ ಇಳಿಯುವಷ್ಟು ಹುಚ್ಚರಾಗಿದ್ದಾರೆ ಇಂದು. ಯಾರಿಗಾಗಿ ತಾವು ಆಯ್ಕೆಯಾಗುತ್ತಿದ್ದೇವೆಯೋ ಅವರ ಸೌಖ್ಯವನ್ನು ಗಮನಿಸುವುದೇ ಮರುಳು ಎನಿಸುತ್ತಿದೆ ಅಭ್ಯರ್ಥಿಗಳಿಗೆ. ಇಂಥವುಗಳನ್ನು ನೋಡಿದಾಗ ಮತ್ತದೇ ಪ್ರಶ್ನೆಗಳು ಮೂಡುತ್ತವೆ. ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ? ಹುಚ್ಚಿಗೆ ಹೆಚ್ಚಿಗೆ ಅರ್ಥಗಳಿಲ್ಲವೆಂದು ಈಗಲೂ ಹೇಳಬಹುದೇ?

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading
Advertisement
Drought Relief
ಕರ್ನಾಟಕ1 min ago

Drought Relief: ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

IRCTC Jyotirlinga Yatra
ಪ್ರವಾಸ3 mins ago

IRCTC Jyotirlinga Yatra: ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ವೀಕ್ಷಣೆ ಪ್ರವಾಸ; ದರ ವಿವರ ಇಲ್ಲಿದೆ

Viral Video
ವೈರಲ್ ನ್ಯೂಸ್4 mins ago

Fact Check: ಓವೈಸಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮಹಿಳೆ ಅಲ್ಲವೆ?

Road Accident in kalaburagi
ಕಲಬುರಗಿ5 mins ago

Road Accident : ಲಾರಿ- ಬೈಕ್‌ ಅಪಘಾತ; ಪತ್ನಿ ಕಣ್ಣೇದುರೇ ಒದ್ದಾಡಿ ಪ್ರಾಣಬಿಟ್ಟ ಪತಿ

food poisoning raichur news
ಕ್ರೈಂ7 mins ago

Food Poisoning: ಹಾಸ್ಟೆಲ್‌ ಊಟ ಸೇವಿಸಿ 24 ವಿದ್ಯಾರ್ಥಿನಿಯರು ಅಸ್ವಸ್ಥ

Anupama Parameswaran Paradha next
ಟಾಲಿವುಡ್30 mins ago

Anupama Parameswaran: ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ ಅನೌನ್ಸ್‌: ನಟಿಯ ಲುಕ್‌ಗೆ ಫ್ಯಾನ್ಸ್‌ ಫಿದಾ!

PU Board exam girl writing exam
ಪ್ರಮುಖ ಸುದ್ದಿ52 mins ago

Public Exam: ಇನ್ನು ಮುಂದೆ ವರ್ಷಕ್ಕೆರಡು ಬಾರಿ ಬೋರ್ಡ್‌ ಪರೀಕ್ಷೆ ? ಪರಿಶೀಲನೆಗೆ ಸಿಬಿಎಸ್‌ಇಗೆ ಸೂಚನೆ

ಕ್ರೈಂ1 hour ago

Child Welfare commission: ಅಕ್ರಮವಾಗಿ ಸಾಗಿಸುತ್ತಿದ್ದ 95 ಮುಸ್ಲಿಂ ಮಕ್ಕಳ ರಕ್ಷಣೆ

jai sriram slogan viral news
ವೈರಲ್ ನ್ಯೂಸ್2 hours ago

Jai SriRam Slogan: ಉತ್ತರಪತ್ರಿಕೆಯಲ್ಲಿ `ಜೈ ಶ್ರೀರಾಮ್’ ಬರೆದ ವಿದ್ಯಾರ್ಥಿಗಳು ಪಾಸ್;‌ ಪ್ರಾಧ್ಯಾಪಕರು ವಜಾ!

Ayushman Bharat Yojana
ಆರೋಗ್ಯ2 hours ago

 Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ23 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202424 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

ಟ್ರೆಂಡಿಂಗ್‌