ಹೊಸ ಪುಸ್ತಕ | ಕಾದಂಬರಿ ವಿಮರ್ಶೆ | ಕಳೆದುಹೋದ ಮೌಲ್ಯಗಳನ್ನು ಹುಡುಕುತ್ತಾ ಸಾಗುವ ಕಥಾನಕ ʼಅಬ್ಬೆʼ - Vistara News

ಕಲೆ/ಸಾಹಿತ್ಯ

ಹೊಸ ಪುಸ್ತಕ | ಕಾದಂಬರಿ ವಿಮರ್ಶೆ | ಕಳೆದುಹೋದ ಮೌಲ್ಯಗಳನ್ನು ಹುಡುಕುತ್ತಾ ಸಾಗುವ ಕಥಾನಕ ʼಅಬ್ಬೆʼ

ಅಬ್ಬೆ ಎಂದರೆ ವಿಷಕಾರಿ ಜೇಡ. ಪ್ರಕೃತಿಯನ್ನೂ ಮಾನವ ಸಂಬಂಧಗಳನ್ನೂ ಮಾನವವ ಧನದಾಹವನ್ನೂ ಮುಖಾಮುಖಿಯಾಗಿಸುವ ಈ ಕೃತಿಯಲ್ಲಿ ಕಳೆದುಹೋದ ಮೌಲ್ಯಗಳ ಹುಡುಕಾಟವಿದೆ.

VISTARANEWS.COM


on

abbe novel shashidhar halady
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
narayana yaji
ನಾರಾಯಣ ಯಾಜಿ

| ನಾರಾಯಣ ಯಾಜಿ

ಶಶಿಧರ ಹಾಲಾಡಿಯವರು ಮೂಲತಃ ಪರಿಸರವನ್ನು ಪ್ರೀತಿಸುವ ಕವಿಹೃದಯವನ್ನು ಹೊಂದಿರುವವರು. ಅದೇ ರೀತಿ ಅವರು ಇತಿಹಾಸವನ್ನೂ ಸಹ ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಬಲ್ಲರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ವಿಮರ್ಶಿಸುವಾಗ ಲಭ್ಯವಿರುವ ಕಥೆಗಳನ್ನು ಹೇಳದೇ ಕಾಲಗರ್ಭದಲ್ಲಿ ಇಣುಕಿ ಮಹತ್ವದ ಸಾಧನೆಯನ್ನು ಮಾಡಿಯೂ ಯಾರ ಕಣ್ಣಿಗೂ ಬೀಳದೇ ಅವಿತು ಹೋದವರ ಸಂಗತಿಗಳನ್ನು ಅಥವಾ ಮಹತ್ವದ ಹೋರಾಟಗಳನ್ನು ತಮ್ಮ ಅಂಕಣದಲ್ಲಿ ದಾಖಲಿಸಿದ್ದಾರೆ. ಅಂಕಣಕಾರ ಘಟನೆಯನ್ನು ದಾಖಲಿಸುವತ್ತಲೇ ತನ್ನ ಬರಹದ ಕಡೆಗೆ ಲಕ್ಷ್ಯ ವಹಿಸುತ್ತಾನೆ. ಆತನಿಗೆ ಬರೆಯುವದು ಮತ್ತು ಆ ಕಾರಣಕ್ಕಾಗಿ ಹೊಸ ಹೊಸ ಓದನ್ನು ರೂಢಿಸಿಕೊಳ್ಳುವದು ಅಭ್ಯಾಸವಾಗಿರುತ್ತದೆ. ಈ ಬರೆಯುವ ಕ್ರಿಯೆಯಲ್ಲಿ ಅವನಿಗೆ ಅರಿವಿಲ್ಲದಂತೆಯೇ ಕಥನ ಕಟ್ಟುವ ಒಂದು ಚೌಕಟ್ಟು ರೂಪುಗೊಂಡಿರುತ್ತದೆ. ಆ ಮಿತಿಯನ್ನು ಮೀರದೇ ವಿಷಯಗಳನ್ನು ಅಚ್ಚುಕಟ್ಟಾಗಿ ಹೇಳುವ ತವಕ ಅಂಕಣಕಾರನಿಗೆ ಯಾವಾಗಲೂ ಇರುತ್ತದೆ.

ಆದರೆ ಕಾದಂಬರಿಯಲ್ಲಿ ಹಾಗಲ್ಲ. ಈ ಬೇಲಿಯನ್ನು ಮುರಿಯಲು ಆತನಿಗೆ ಸ್ವಚ್ಛಂದ ಅವಕಾಶಗಳಿರುತ್ತವೆಯಾದರೂ ಅಭ್ಯಾಸಬಲದಿಂದ ವಿಷಯಗಳು ಒಂದು ಚೌಕಟ್ಟಿನೊಳಗೇ ವಿಹರಿಸಲು ತೊಡಗುತ್ತವೆ. ಅಂಕಣ ವಿಸ್ತ್ರತ ಸಾಹಿತ್ಯವಾಗುವದಿಲ್ಲ. ವಿಸ್ತ್ರತ ಸಾಹಿತ್ಯಕ್ಕೆ ಅದು ಬುನಾದಿಯನ್ನು ಹಾಕಿಕೊಡಬಹುದು. ಈ ಹಿನ್ನೆಲೆಯಲ್ಲಿ ಹಾಲಾಡಿಯವರ ಎರಡನೇ ಕಾದಂಬರಿ “ಅಬ್ಬೆ”ಯನ್ನು ಓದಿದರೆ ಇದು ಪರಿಸರವನ್ನು ಅಧರಿಸಿದ ಕಾದಂಬರಿಯಾದರೂ ಪರಿಸರದಲ್ಲಿಯೇ ಬದುಕುವ ಮನುಷ್ಯ, ಪರಿಸರದಲ್ಲಿನ ವಿಷಜಂತುಗಳಿಗಿಂತ ಹೇಗೆ ಅಪಾಯವನ್ನು ತರಬಲ್ಲ ಎಂದು ಹೇಳಲು ಹೊರಟಿದ್ದಾರೆ. ಮನುಷ್ಯನ ಕ್ರೌರ್ಯ ಮತ್ತು ಹಿಂಸೆಯ ವಿಜೃಂಭಣೆ ಅನಾವರಣಗೊಳ್ಳಲು ಕಾರಣವೇ ಬೇಕಿಲ್ಲ. ಅಬ್ಬೆಯೆನ್ನುವುದು ಒಂದು ಪ್ರಕಾರದ ಜೇಡ. ತುಂಬಾ ವಿಷದ ಪ್ರಾಣಿ. ಅದು ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟೂ ಸಮಯವಿಲ್ಲದೇ ಕಚ್ಚಿಸಿಕೊಂಡ ವ್ಯಕ್ತಿ ಸಾಯುತ್ತಾನೆ ಎನ್ನುವ ನಂಬಿಕೆ ಇಂದಿಗೂ ಹಳ್ಳಿಗಳಲ್ಲಿ ರೂಢಿಯಲ್ಲಿದೆ. ಇಂತಹ ಜೇಡಕ್ಕೆ ಕೆಲವು ಕಡೆ ಅಬ್ಬೆ ಎನ್ನುತ್ತಾರೆ, ಇನ್ನು ಕೆಲವು ಕಡೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಹಾಗಂತ ಅದು ಕಚ್ಚಿರುವದನ್ನು ನೇರವಾಗಿ ಯಾರೂ ನೋಡಿಲ್ಲ. ಅಕಸ್ಮಾತ್ತಾಗಿ ಯಾರಾದರೂ ಸತ್ತರೂ ಹಾಗೇ ಸತ್ತವನ ಸುತ್ತಮುತ್ತ ಎಲ್ಲಿಯಾದರೂ ವಿಲಕ್ಷಣವಾದ ಜೇಡ ಕಾಣಿಸಿತು ಎಂದರೆ ಅದು ಅಬ್ಬೆ ಕಡಿದು ಆದ ಸಾವು ಎನ್ನುವುದನ್ನು ನಂಬುತ್ತಾರೆ. ಕಂಡ ಕಂಡ ಜೇಡಗಳ ಮಾರಣಹೋಮ ನಡೆಯುತ್ತದೆ.

shashidhara halady
ಶಶಿಧರ ಹಾಲಾಡಿ

ಉತ್ತರ ಕನ್ನಡದ ಕೆಲವೆಡೆ ಮದ್ದು ಹಾಕುವದು ಎನ್ನುವ ನಂಬಿಕೆ ಇದೆ. ಇಲ್ಲಿನ ಹಳ್ಳಿಗಳಲ್ಲಿ ಯಾವುದಾದರೂ ಒಂದು ಮನೆಗೆ ಮದ್ದು ಹಾಕುವವರ ಮನೆ ಎನ್ನುವ ಅಭಿಶಾಪವಿರುತ್ತದೆ. ಗೊತ್ತಿಲ್ಲದೇ ಆ ಮನೆಗೆ ಹೋದ ಅಂತ ಇಟ್ಟುಕೊಳ್ಳಿ. ಆ ಮನೆಯ ಯಾವುದೋ ಹೆಂಗಸು ಆತನ ಊಟದಲ್ಲಿ ಸತ್ತ ಉಡದ್ದೋ ಅಥವಾ ಹಲ್ಲಿಯದ್ದೋ ಅಥವಾ ಅನಾಮಧೇಯ ಪ್ರಾಣಿಯದ್ದೋ ದೇಹದಿಂದ ತೆಗೆದ ವಿಷದ ಪುಡಿಯನ್ನು ತನ್ನ ಕೈ ಉಗುರಿನಲ್ಲಿಯೋ ಎಲ್ಲೋ ಬಚ್ಚಿಟ್ಟು ಚಿಟಿಕೆ ಉದುರಿಸಿಬಿಡುತ್ತಾಳಂತೆ. ಆ ಹೆಂಗಸು ಯಾರೆಂದು ಆ ಮನೆಯವರಿಗೂ ತಿಳಿದಿಲ್ಲದ ಗೂಢ ವಿಷಯ. ಅಲ್ಲಿ ಊಟ ಮಾಡಿದವನನ್ನು ನಿಶ್ಯಕ್ತಿ ಕಾಡಿ ದೈಹಿಕವಾಗಿ ಸೊರಗುತ್ತಾನೆ. ಡಾಕ್ಟರುಗಳಿಗೂ ಈ ವಿಷವನ್ನು ಕಂಡುಹಿಂಡಿಯಲಾಗುವುದಿಲ್ಲ. ಅದೇ ಊರಿನಲ್ಲಿ ಇಂತಹ ವಿಷವನ್ನು ವಾಂತಿ ಮಾಡಿ ತೆಗೆಯುವ ಮನೆಯಿರುತ್ತದೆ. ಆ ಮನೆಯವರು ವಾಂತಿ ಮಾಡಿಸಿದರೆ ಹಸಿರು ಬಣ್ಣದ ವಾಂತಿ ಬಂತೋ, ಅದು ಮದ್ದು ಹಾಕಿದುದರ ಪರಿಣಾಮ ಎನ್ನುವುದು ಖಾತ್ರಿಯಾಗುತ್ತದೆ. ಇದಕ್ಕೂ ಆಧಾರವಿಲ್ಲ. ಹೀಗೆ ತಳವಿಲ್ಲದ ಅನೇಕ ನಂಬಿಕೆಗಳು ಹಳ್ಳಿಗಳಲ್ಲಿವೆ. ಅಂತಹ ಕಥೆಗಳಲ್ಲಿ ಅಬ್ಬೆ ಜೇಡದ ಕಥೆಯೂ ಒಂದು.

ಇಲ್ಲಿನ ನಾಯಕ ಶಿವರಾಂ ಕರಾವಳಿಯಿಂದ ಕಲ್ಕೆರೆ ಎನ್ನುವ ಬಯಲುಸೀಮೆಯ ಕಡೆ ಹೊಸತಾಗಿ ಬ್ಯಾಂಕಿನ ನೌಕರಿಗೆ ಹೋಗುತ್ತಾನೆ. ಸುಮಾರು 1980ರ ದಶಕದಲ್ಲಿ ಲೇಖಕರು ಬ್ಯಾಂಕಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕಾಲದಲ್ಲಿ ನಡೆದಿರಬಹುದಾಗಿರುವ ಘಟನೆಗಳನ್ನು ಆಧರಿಸಿದ ಸಂಗತಿಗಳು ಇಲ್ಲಿವೆ. ಕಲ್ಕೆರೆ ಮಲೆನಾಡಿನಂತೆ ಅಲ್ಲವೇ ಅಲ್ಲ, ಹಾಗಂತ ಬಯಲುಸೀಮೆಯೂ ಅಲ್ಲ. ಶಿವರಾಂನಿಗೆ ಕುತೂಹಲಕ್ಕೆ ಕಾರಣವಾಗುವದು ಉದ್ಯೋಗಕ್ಕೆ ಸೇರುವ ದಿವಸ ಬಸ್ಸಿನಲ್ಲಿ ಬರುವಾಗಲೇ ನೋಡಿದ “ಗರುಡನಗಿರಿ ರಕ್ಷಿತಾರಣ್ಯ” ಎನ್ನುವ ಬ್ರಿಟಿಷರ ಕಾಲದ ಮಸುಕು ಮಸುಕಾಗಿದ್ದ ಬೋರ್ಡ್. ಈಗೊಂದಿನ್ನೂರು ವರ್ಷಗಳಲ್ಲಿ ದಟ್ಟಕಾಡಿನ ಪ್ರದೇಶವೊಂದು ಹೇಗೆ ಮನುಷ್ಯನ ದಾಳಿಗೆ ಸಿಕ್ಕು ಬೋಳಾಗಿಹೋಗಿದೆ ಎನ್ನುವದರ ಕುರುಹನ್ನು ಪ್ರಾರಂಭದಲ್ಲಿಯೇ ತೋರಿಸಿಬಿಡುತ್ತಾರೆ.

ಬ್ಯಾಂಕಿನ ಲೋಕವೆನ್ನುವದು ಹೊರಗಿನಿಂದ ಅಂದವಾಗಿ ಕಾಣಿಸುತ್ತದೆ. ಆದರೆ ಅಲ್ಲಿ ಹಣದ ವ್ಯವಹಾರವಿರುವ ಕಡೆ ಅನೇಕ ದುರ್ಬಲ ಮನಸ್ಸುಗಳನ್ನು ಚಂಚಲಚಿತ್ತರನ್ನಾಗಿಸಿ ದುರ್ಬಳಕೆಗೆ ಪ್ರೇರೇಪಿಸುವ ಅನೇಕ ಘಟನೆಗಳು ಆಗುತ್ತಲೇ ಇರುತ್ತವೆ. ಹಣದ ಒಂದು ಗುಣವೆಂದರೆ ಅದು ಯಾರನ್ನೂ ನಂಬಲು ಆಸ್ಪದ ಮಾಡಿಕೊಡುವದಿಲ್ಲ. ಎಲ್ಲರನ್ನೂ ಸಂಶಯದಿಂದಲೇ ನೋಡುವ ಸ್ವಭಾವ ಹಾಗೂ ತಮ್ಮ ತಪ್ಪನ್ನು ಇನ್ನೊಬ್ಬರ ತಲೆಗೆ ತಣ್ಣಗೆ ದಾಟಿಸಿ ಅವರನ್ನು ಹೊಂಡಕ್ಕೆ ಹಾಕಿ ತಾವು ಸಂಭಾವಿತರಂತೆ ಇದ್ದುಬಿಡುವ ಅನೇಕ ವ್ಯಕ್ತಿಗಳು ಅಲ್ಲಿ ಸಿಗುತ್ತಾರೆ. ಕಲ್ಕೆರೆಗೆ ಬಂದ ಶಿವರಾಮನಿಗೆ ಮ್ಯಾನೇಜರನ ಅಸಹನೆಯ ಸ್ವಾಗತ, ಸಿಬ್ಬಂದಿಗಳೆಲ್ಲರ ಹಿತಮಿತವಾದ ಮಾತುಗಳು ಅಧೈರ್ಯವನ್ನು ಹುಟ್ಟಿಸಿಬಿಟ್ಟಿದೆ. ಆದರೂ ಉದ್ಯೋಗವೆನ್ನುವದು ಅನಿವಾರ್ಯವಾದ ಕಾರಣ ಸಹಿಸಿಕೊಂಡು ಇರಬೇಕಾಗಿದೆ. ಇಡೀ ಬ್ಯಾಂಕೇ ತನ್ನ ತಲೆಯ ಮೇಲೇ ಇದೆಯೇನೋ ಎಂದು ಸದಾ ಒದ್ದಾಡುತ್ತಾ ಉಳಿದವರ ಮೇಲೆ ಸಿಡುಕುವ ಮ್ಯಾನೇಜರ್ ಕೈ, ಬಾಯಿ, ದೇಹ ಎಲ್ಲವೂ ಸಡಿಲವಾಗಿರುವ ವ್ಯಕ್ತಿ, ಕ್ಯಾಷಿಯರ್, ಮತ್ತೋರ್ವ ಕ್ಲರ್ಕ್ ಹಾಗೂ ಅರೆಕಾಲಿಕ ಸಿಬ್ಬಂದಿಗಳು ಈ ಎಲ್ಲರೂ ಕಥಾನಾಯಕ ಶಿವರಾಮನಿಗೆ ಒಗಟಾಗಿಯೇ ತೋರುತ್ತಾರೆ.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಮತ್ತೆ ಹಾಡಾಗಿದೆ ಮಳೆ ಸಂಗೀತ

ಹಳ್ಳಿಯಾದುದರಿಂದ ಎಲ್ಲರೂ ಅವರವರ ಸಂಸಾರವನ್ನು ಎಲ್ಲಿಯೋ ಬಿಟ್ಟು ಇಲ್ಲಿ ಅಂಕೆ ತಪ್ಪಿ ರಾತ್ರಿ ಹೊತ್ತು ಕಳೆಯಲು ರೂಢಿಸಿಕೊಂಡ ಚಟಗಳು; ಇವೆಲ್ಲವುಗಳಿಂದ ಪಾರಾಗುವ ಚಿಂತೆಯ ಜೊತೆಗೆ ಅನನುಭವಿಯನ್ನು ಶಾಖೆಗೆ ಹಾಕಿದ್ದಾರೆಂದು ಸಿಡುಕುವ ಮ್ಯಾನೇಜರ್ ಮತ್ತೊಂದು ಕಡೆ. ಈ ಎಲ್ಲದರ ಜೊತೆಗೆ ಏಗುತ್ತಿರುವಾಗಲೇ ಕುಪ್ಪೂರು ತಿಮ್ಮಪ್ಪನ ನಿಗೂಢ ಸಾವಾಗುತ್ತದೆ. ಅದನ್ನು ಸರಳವಾಗಿ ಆತ್ಮಹತ್ಯೆಯೆಂದು ಮುಚ್ಚಿಹಾಕುವ ವ್ಯವಸ್ಥೆಗಳೆಲ್ಲಾ ಸಲೀಸಾಗಿ ಮೂಡಿಬಂದಿದೆ. ತಿಮ್ಮಪ್ಪನ ಸಾವಿನೊಂದಿಗೆ ಊರಿನ ಫಾಸಲೆಯಲ್ಲಿ ಮರಗಳನ್ನು ಕಡಿದು ಕಳ್ಳಸಾಗಾಟ ಮಾಡುವ ಮತ್ತು ಅದಕ್ಕೆ ಇಡೀ ಊರಿಗೆ ಊರೇ ಇಂತಹ ಕೆಲಸ ಒಂದು ಅಪರಾಧವೆಂದು ಗ್ರಹಿಸದ ವ್ಯವಸ್ಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತಿರುವಂತೆ ಪರಿಸರದ ಜೊತೆ ಬೆಳೆದ ನಾಯಕನಿಗೆ ಅಚ್ಚರಿಯ ಜೊತೆಗೆ ಅದನ್ನು ತಡೆಯಬೇಕೆನ್ನುವ ಹಂಬಲವೂ ಜಾಸ್ತಿಯಾಗುತ್ತಾ ಹೋಗುತ್ತದೆ. ಇದೇ ಹೊತ್ತಿನಲ್ಲಿ ಅದೇ ಕುಪ್ಪೂರು ತಿಮ್ಮಪ್ಪನ ಮಗನ ಮದುವೆಯಲ್ಲಿ ಪಾರ್ಟಿ ಮುಗಿಸಿ ಹೋಗುವಾಗ ಧರ್ಮ ಎನ್ನುವವನ ಅಸಹಜ ಸಾವನ್ನು “ಅಬ್ಬೆ ಕಚ್ಚಿ ಆತ ಸತ್ತʼʼ ಎನ್ನುವ ತೀರ್ಮಾನಕ್ಕೆ ಬಂದಾಗ ಶಿವರಾಮನಿಗೆ ಅಬ್ಬೆ ಎನ್ನುವ ಜೇಡದ ಕುರಿತು ಮೊದಲ ಸುದ್ದಿ ತಿಳಿಯುತ್ತದೆ.

ಅಬ್ಬೆ ಕಚ್ಚಿದರೆ ತಕ್ಷಣವೇ ಸಾವು ಬರುತ್ತದೆ; ಆದರೆ ಯಾರೂ ಪ್ರತ್ಯಕ್ಷವಾಗಿ ಅಬ್ಬೆ ಕಡಿಯುವದನ್ನು ನೋಡಿರುವದಿಲ್ಲ. ಅಲ್ಲಿದ್ದ ಅಮಾಯಕ ಜೇಡಗಳನ್ನು ಈ ಕಾರಣಕ್ಕಾಗಿ ಕೊಂದು ಹಾಕಲಾಗುತ್ತದೆ. ಅದೇ ರೀತಿ ಕಲ್ಕೆರೆಯ ಪರಿಸರವನ್ನೂ ಸಹ ಅವರಿಗರಿವಿಲ್ಲದೇ ನಾಶ ಮಾಡುವತ್ತ ಕೇವಲ ಊರಿನ ಜನ ಮಾತ್ರವಲ್ಲ. ಅಲ್ಲಿಗೆ ಆ ಕಾರಣಕ್ಕಾಗಿಯೇ ಬರುವ ಬಳ್ಳಾರಿಯ ಕಡೆಯ ಕೆಂಚಪ್ಪನಂತಹವರಿಗೆ ಚಿಪ್ಪುಹಂದಿಯನ್ನು ಹಿಡಿದು ಮಾರಿ ಹಣ ಮಾಡುವ ಧಾವಂತ. ಅನಕ್ಷರಸ್ಥನಾದ ಆತನ ಹತ್ತಿರ ಬ್ಯಾಂಕಿನ ಸಿಬ್ಬಂದಿಗಳಿಗಿಂತಲೂ ಜಾಸ್ತಿ ಹಣವಿದೆ. ಪರಿಸರ ನಾಶಕ್ಕೆ ತೊಡಗಿದವರಿಗೆ ತಾವು ಚಿನ್ನದ ಕೋಳಿಯ ಕತ್ತನ್ನು ಕೊಯ್ಯುತ್ತೇವೆನ್ನುವ ಅರಿವಿಲ್ಲ. ಬ್ಯಾಂಕಿನವರೆಲ್ಲ ಬಿಡುವಿನ ಸಮಯದಲ್ಲಿ ಇಸ್ಪೀಟು ಅದೂ ಇದೂ ಅಂತ ಕಾಲಕ್ಷೇಪ ಮಾಡುತ್ತಿದ್ದರೆ ಶಿವರಾಮ ಪಡ್ಡೆ ಹುಡುಗರೊಂದಿಗೆ ಸೇರಿ ಕ್ರಿಕೆಟ್ ಆಡುತ್ತಾ ಇರುವುದು ಮ್ಯಾನೇಜರನ ಅಸಹನೆಗೆ ಕಾರಣ. ಇದೇ ಹೊತ್ತಿಗೆ ಅಲ್ಲಿನ ಕಾಲೇಜೊಂದಕ್ಕೆ ಪ್ರಿನ್ಸಿಪಾಲ್ ಆಗಿ ಬರುವ ಡಾ. ಕಲ್ಲೂರಾಯರು ಸಹ ಕರಾವಳಿ ಕಡೆಯವರೇ. ಜೀವಶಾಸ್ತ್ರ, ಸಸ್ಯಶಾಸ್ತ್ರವೆಲ್ಲವನ್ನೂ ಓದಿಕೊಂಡಿದ್ದಾರೆ. ಅವರೂ ಸಹ ಈ ಅಬ್ಬೆ ಕಚ್ಚಿದರೆ ಸಾಯುವದು ಎನ್ನುವದು ಕೇವಲ ಭ್ರಮೆ ಎನ್ನುತ್ತಾರೆ. ಹುಡುಗರೊಂದಿಗೆ ಹಿರೇಕಲ್ಲು ಗುಡ್ಡ ಗರುಡನಗಿರಿಯ ಬೆಟ್ಟಕ್ಕೆ ಚಾರಣ ಹೋಗುವ ಅವರು ಅಲ್ಲಿನ ಸಸ್ಯಗಳ ವೈವಿಧ್ಯಗಳನ್ನು ನೋಡಿ ಅಪೂರ್ವ ಸಸ್ಯ ಸಂಪತ್ತು ನಾಶವಾಗುವ ಕುರಿತು ಖೇದ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ Sunday read | ಹೊಸ ಪುಸ್ತಕ | ಮಹಾಭಾರತದ ನೈಜ ನಾಯಕ ವಿದುರ

ಬ್ಯಾಂಕಿನ ನೀರಸ ಬದುಕು, ಊರವರ ಹಣ ಮಾಡುವ ಮತ್ತು ವಿದ್ಯಾವಂತರಾದವರೆಲ್ಲ ಊರು ಬಿಡುವವರ ನಡುವೆ ಅರಣ್ಯ ಬರಿದಾಗಿದೆ. ಮೊದಲು ಕೇವಲ ಗರುಡನಗಿರಿ ಬೆಟ್ಟ ನಾಶವಾಗಿ ಹೋಗಿದೆ. ಈಗ ಹಿರೇಕಲ್ಲು ಗುಡ್ಡದಲ್ಲಿನ ಪ್ರಾಣಿಗಳ ಸಹಿತ ಅರಣ್ಯನಾಶವಾಗಲು ಹೆಚ್ಚಿನ ಸಮಯವಿಲ್ಲ ಎನ್ನುವ ಅರಿವಾಗುತ್ತ ಇದ್ದಕ್ಕಿದ್ದಂತೆ ಪರಿಸರದ ಹುಡುಕಾಟದ ತೇಜಸ್ವಿಯವರ ಕಾದಂಬರಿಯನ್ನು ನೆನಪಿಸುವ ಜಾಡಿನಲ್ಲಿ ಸಾಗುತ್ತದೆ. ಕಲ್ಲೂರಾಯರಿಗೆ ಇಲ್ಲಿನ ಸಸ್ಯ ವೈವಿದ್ಯತೆಯನ್ನು ಹೊರಜಗತ್ತಿಗೆ ತಿಳಿಸುವುದು ಮುಖ್ಯ. ಹಣಕ್ಕಾಗಿ ಹೌದಾದರೂ ಅರೆಕಾಲಿಕ ಉದ್ಯೋಗದಲ್ಲಿರುವ ಅವರಿಗೆ ಹಣವನ್ನು ಹೇಗೋ ಹೇಗೋ ಗಳಿಸುವ ಹುಚ್ಚಿಲ್ಲ. ಕಾಣದ ಅಬ್ಬೆಗಿಂತ ಪಕ್ಕದಲ್ಲಿರುವ ಜನರ ಅಸೂಯೆಯ ವಿಷವೇ ಹೆಚ್ಚಿನ ಅಪಾಯಕಾರಿ ಎನ್ನುವ ಮಾತುಗಳು ಶಿವರಾಮನನ್ನು ಎಚ್ಚರಿಸುತ್ತಿರುತ್ತವೆ. ಅಸೂಯೆ ದ್ವೇಷವೆನ್ನುವುದು ಹೆಣ್ಣಿನ ರೂಪದಲ್ಲಿ ಶಿವರಾಮನ ಮೇಲೆ ಮ್ಯಾನೇಜರ್ ಮಸಲತ್ತು ಮಾಡಿಸುವದು ಈ ಹೊತ್ತಿನಲ್ಲಿ ಬ್ಯಾಂಕಿನ ಯೂನಿಯನ್ನಿನ ಪ್ರತಿನಿಧಿಯಾದ ಕ್ಯಾಷಿಯರ್ ಸಹಾಯಕ್ಕೆ ಬಂದು ಅದನ್ನು ತಪ್ಪಿಸುವ ಘಟನೆಗಳು ಚೆನ್ನಾಗಿ ಬಂದಿವೆ. ಪರಿಸರದ ಹುಡುಕಾಟದಲ್ಲಿ ಇನ್ನೇನು ಬಿಜಿಎಲ್ ಸ್ವಾಮಿಯವರ ಹಸಿರು ಹೊನ್ನು ಅಥವಾ ತೇಜಸ್ವಿಯವರ ಕರ್ವಾಲೋ ತರಹದ ಹುಡುಕಾಟ ಪ್ರಾರಂಭವಾಗುತ್ತದೆ ಎನ್ನುವಾಗ ಮತ್ತೆ ಬ್ಯಾಂಕಿನ ಸಮಸ್ಯೆಗಳಲ್ಲಿ ಸಿಕ್ಕು ಅದರಿಂದ ಪಾರಾಗಲು ಒದ್ದಾಡುವ ನಾಯಕನ ಸುತ್ತಲೇ ಕಥೆ ಸುತ್ತುತ್ತದೆ. ಇದು ಕಾದಂಬರಿಯ ಮಿತಿಯೂ ಹೌದು.

ಹಿರೇಕಲ್ಲು ಗುಡ್ಡವೆನ್ನುವದು ಭೂವೈವಿಧ್ಯದ ಪಳೆಯುಳಿಕೆ ಎನ್ನುವುದನ್ನು ತಿಳಿಸುವಲ್ಲಿ ಕಾದಂಬರಿ ಯಶಸ್ವಿಯಾದರೂ ಏಕಕಾಲದಲ್ಲಿ ಕಥೆ, ಉದ್ಯೋಗ ಮತ್ತು ಒಂದು ಕಾಲದ ರಕ್ಷಿತಾರಣ್ಯವಾದ ಗರುಡನಗಿರಿಯ ಮಸುಕಾದ ಬೋರ್ಡು, ಪಾಳು ಬಂಗಲೆ, ಎಲ್ಲಿಂದಲೋ ಬರುವ ಸಂನ್ಯಾಸಿಗಳು, ಮುಕುಂದೂರು ಸ್ವಾಮಿಗಳು, ಅಮಾಯಕನಾಗಿ ನಟಿಸುವ ಕೆಂಚಪ್ಪ ಈ ನಡುವೆ ಪೂಜಾರಿಯು ಸಾಲಮೇಳ ಹೇಗೆ ದಿಕ್ಕು ತಪ್ಪಿತೆನ್ನುವುದನ್ನು ವಿವರಿಸುವ ರೀತಿ ಇವುಗಳ ದೊಡ್ಡ ಬೀಸಿನಲ್ಲಿ ಕಥೆ ಸಾಗುತ್ತಾ ಹೋಗುತ್ತದೆ. ಊರಿನಲ್ಲಿ ತನಗಿಂತ ಶಿವರಾಮ ಜನಪ್ರಿಯನಾಗುವುದನ್ನು ಸಹಿಸದ ಮ್ಯಾನೇಜರ್ ಆತನ ಪ್ರೊಬೇಷನರಿಯನ್ನು ಮುಂದುವರಿಸಲು ಶಿಫಾರಸು ಮಾಡುತ್ತಾನೆ. ಆ ಚಿಂತೆ ಶಿವರಾಮನನ್ನು ತೀವ್ರವಾಗಿ ಕಾಡುವಂತೆ ಅನಿಸಿದರೂ ಅಬ್ಬೆ ಕಚ್ಚುವದು ಎನ್ನುವದು ಕೇವಲ ಭ್ರಮೆ ಎನ್ನುವದನ್ನು ಮೊದಲೇ ಸಾರುತ್ತಾ ಹೋಗುವುದರಿಂದ ಕಥೆ ಬ್ಯಾಂಕಿನಲ್ಲಿ ಇರುವ ವಿಷವ್ಯೂಹದಲ್ಲಿ ಸಿಲುಕಿಸುತ್ತದೆ. ಹೃದಯಾಘಾತದಿಂದ ಆದ ಸಾವನ್ನು ಅಬ್ಬೆಯ ತಲೆಗೆ ಕಟ್ಟುವುದನ್ನು ವಿವರಿಸುತ್ತಾ ಪ್ರಯತ್ನ ಪೂರ್ವಕವಾಗಿ ಓದುಗರನ್ನು ಕಥೆಯ ಬಂಧಕ್ಕೆ ತಂದು ಕೂರಿಸುತ್ತಾರೆ. ಒಂದು ಕಾಲಕ್ಕೆ ಸಮೃದ್ಧ ಮಳೆಯ ಪ್ರದೇಶವಾಗಿದ್ದ ಕಲ್ಕೆರೆಯಂತಹ ಪ್ರದೇಶ ಇಂದು ಮಳೆಯ ನೆರಳಿನ (Rain Shade) ಪ್ರದೇಶವಾಗಿ ಬದಲಾಗಿರುವದರ ಸೂಕ್ಷ್ಮತೆಯನ್ನು ವಿವರಿಸುತ್ತಾ ಹೋಗುವಾಗ ಮೂಲತಃ ಪ್ರಕೃತಿಯನ್ನು ಪ್ರೀತಿಸುವ ಹಾಲಾಡಿಯವರ ಸಾತ್ವಿಕ ನೋವು ಎದ್ದು ಕಾಣಿಸುತ್ತದೆ. ಓದುಗ ಇಲ್ಲಿ ಕಥಾನಾಯಕನೊಂದಿಗೆ ತಾನೂ ಮಿಳಿತವಾಗುತ್ತಾನೆ. ಊರಿನಲ್ಲಿ ಮರಗಳೊಟ್ಟಿಗೆ ಚಿನ್ನದ ನಿಧಿಯೂ ಇರುವ ವಿಷಯಗಳೆಲ್ಲವೂ ಬಂದು ಹಳ್ಳಿಯ ವ್ಯವಸ್ಥೆಯಲ್ಲಿ ಇವೆಲ್ಲ ಮಾಮೂಲು ಎಂದು ಅಷ್ಟೇ ವೇಗವಾಗಿ ಅವೆಲ್ಲವೂ ಮುಚ್ಚಿಹೋಗಿಬಿಡುತ್ತವೆ. ಇದು ಕಲ್ಕೆರೆಯಲ್ಲಿ ವಿದ್ಯುತ್ ಇದ್ದೂ ಇಲ್ಲದಂತಿರುವ ವಿವರಣೆಗೆ ಪೂರಕವಾಗುತ್ತದೆ. ಕಾರಣವಿಲ್ಲದೇ ಮ್ಯಾನೇಜರ್ ಇವರನ್ನು ದ್ವೇಷಿಸುವುದಕ್ಕೆ ನರಸಿಂಹಯ್ಯನವರ ಬಾಯಿಯಿಂದ ಜನ್ಮಾಂತರದ ಸಂಚಿತ ಕರ್ಮದ ಸಮಾಧಾನವಿಲ್ಲದೇ ಇದ್ದಿದ್ದರೆ ಒಳ್ಳೆಯದಿತ್ತು. ಕೆಲವೊಮ್ಮೆ ಕೆಲವು ಜನರ Maladaptive behavior (ಅಸಮರ್ಪಕ ನಿರ್ವಹಣೆ) ಇಂತಹುದಕ್ಕೆಲ್ಲಾ ಕಾರಣವಾಗುತ್ತದೆ. ನಾಗರ ಹಾವನ್ನೂ, ಅಮಾಯಕ ಜೇಡವನ್ನೂ ಕಂಡಕಂಡಲ್ಲಿ ಜಜ್ಜಿ ಕೊಲ್ಲುವ ವಿಷಯಗಳೆಲ್ಲವೂ ಇಲ್ಲಿ ಸಾಂಕೇತಿಕವಾಗಿ ಬಂದಿರುವದರಿಂದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಹೇಳದೇ ಹಾಗೇ ಬಿಡುವದು ಒಳ್ಳೆಯದು.

ಇದನ್ನೂ ಓದಿ | Sunday read | ಹೊಸ ಪುಸ್ತಕ | ತಟ್ಟನೆ ಮನಮಂ ಪಸಾಯದಾನ ಕೊಟ್ಟಳು

ಗರುಡನಗಿರಿ ರಕ್ಷಿತಾರಣ್ಯವಾಗಿರುವದು ಬರಡುಗಿರಿ ರಕ್ಷಿತಾರಣ್ಯವಾಗಿ ಬದಲಾಗಿರುವ ವರದಿ ಪತ್ರಿಕೆಗಳಲ್ಲಿ ಬಂದಿರುವದು ಕಥೆಗೆ ಕೊಡುವ ಬಹುಮುಖ್ಯ ತಿರುವು. ಶಿವರಾಮ ಊರಿನವರ ಯಾರ ಸಂಗಡವೂ ವಿರೋಧ ಕಟ್ಟಿಕೊಳ್ಳದೇ ಅವರೆಲ್ಲರಿಗೂ ತಮ್ಮ ತಪ್ಪುಗಳನ್ನು ಅರಿಯಲು ಸಹಾಯ ಮಾಡಿರುವುದು, ಊರಲ್ಲಿ ಧನಾತ್ಮಕ ಗುಣಗಳುಳ್ಳವರು ತುಂಬಾ ಜನರಿದ್ದಾರೆ. ಕೆಲವೊಂದಿಷ್ಟು ಪುಂಡರು ತಮ್ಮ ಸ್ವಾರ್ಥಕ್ಕೋಸ್ಕರ ಮಾಡುವ ಆಟದಲ್ಲಿ ಇವರ ಮೌನ ಹೇಗೆ ಸಹಕಾರಿಯಾಗುತ್ತದೆ ಎನ್ನುವದನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ. ತನ್ನದಲ್ಲದ ಊರಿನಲ್ಲಿ ಶಿವರಾಮನಿಗೆ ಯಾವ ಬಂಧನವೂ ಇಲ್ಲ; ಆದರೂ ದೂರದ ಅಂಡಮಾನಿಗೆ ವರ್ಗವನ್ನು ಮ್ಯಾನೇಜರ್ ಮಾಡಿಸಿದಾಗ ಅಲ್ಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲು ಯತ್ನಿಸುತ್ತಾನೆ. ಈತನಿಗೆ ತೊಂದರೆ ಕೊಟ್ಟ ಮ್ಯಾನೇಜರ್ ಸಹ ದೂರದ ಕಲ್ಕತ್ತಾಕ್ಕೆ ವರ್ಗವಾಗುವ ಕ್ರಿಯೆಯಲ್ಲಿ Karma hits back ಎನ್ನುವುದು ನೆನಪಿಗೆ ಬರುತ್ತದೆ. ಬೋಳಾದ ಕಾಡಿಗಿಂತ ಜೀವ ವೈವಿಧ್ಯತೆಯಿಂದ ತುಂಬಿರುವ ಅಂಡಮಾನ್ ದ್ವೀಪವನ್ನು ನಾಯಕ ಸಮಾಧಾನದಿಂದಲೇ ಸ್ವೀಕರಿಸುವದು ಒಂದು ಆಶಾವಾದದ ಸೂಚನೆಯೂ ಹೌದು.

ಅಬ್ಬೆ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷಕ್ಕೆ ಕಾರಣವಾಗುವದಿಲ್ಲ. ಆದರೆ ಮಾನವನ ಅಜ್ಞಾನವೆನ್ನುವುದು ಅವನಿಗೆ ಅರಿಯದೇ ವಿನಾಶಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ವಿವರಿಸುತ್ತದೆ. ಸಮಸ್ಯೆಯನ್ನು ಎದುರಿಸಲು ತಾನೊಬ್ಬ ಏನು ಮಾಡಬಲ್ಲೆ ಎನ್ನುವುದಕ್ಕಿಂತ ಯಾರಾದರೂ ಒಬ್ಬರು ಪ್ರಾರಂಬಿಸುವುದು ಒಳ್ಳೆಯದು; ನಂತರ ಅದು ಹೇಗೋ ಮುಂದುವರಿಯುವುದು ಎನ್ನುವುದನ್ನು ಶಿವರಾಮ ಕಲ್ಕೆರೆಯಿಂದ ಹೊರಡುವ ಸಮಯಕ್ಕೆ ಅರಣ್ಯ ಇಲಾಖೆಯವರು ಗರುಡನಗಿರಿಗೆ ಬೇಲಿ ಹಾಕಲು ಬರುವುದನ್ನು ನೋಡಿ ಸಮಾಧಾನ ಪಡುತ್ತಾನೆ.

ಈ ಕಾದಂಬರಿಯಲ್ಲಿ ಪಾತ್ರಗಳ ಸಂಘರ್ಷ ಅಥವಾ ಮುಖಾಮುಖಿಯಿಲ್ಲ. ಆದರೆ ಪ್ರಸ್ತುತ ಸಮಾಜದಲ್ಲಿ ಕಾಡುವ ಸಮಸ್ಯೆಗಳತ್ತ ಗಮನ ಸೆಳೆಯುವ ತುಡಿತವಿದೆ. ಜೀವವೈವಿಧ್ಯದ ವಿವರಗಳಿರುವ ವಸ್ತುಗಳ ಕೊರತೆಯಿರುವ ವರ್ತಮಾನದಲ್ಲಿ ಶಶಿಧರ ಹಾಲಾಡಿಯವರು ಆ ಕುರಿತು ಹೇಳುವ ಮನಸ್ಸು ಮಾಡಿದ್ದಾರೆ. ಎಲ್ಲಿಯೂ ನೀರಸ ಅಂತ ಅನಿಸುವದಿಲ್ಲ. ಹಣದ ಹಿಂದೆ ಸಾಗುವ ಆಧುನಿಕ ವರ್ತಮಾನದ ಪ್ರತಿನಿಧಿಯಾಗಿ ಬ್ಯಾಂಕು ಇದ್ದರೆ; ಕೊನೆಗೆ ಬರುವ ಅರಣ್ಯ ಅಧಿಕಾರಿಗಳು ಬೇಲಿ ಹಾಕಲು ಬಂದು ಕಳೆದು ಹೋದ ಮಾನವನ್ನು ಪುನರುಜ್ಜೀವನಗೊಳಿಸುವ ಸಂಕೇತವಾಗಿ ಆಶಾವಾದದ ಮುಕ್ತಾಯವನ್ನು ಕೊಟ್ಟಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮೈಸೂರು

Mysore News: ಮೈಸೂರಿನಲ್ಲಿ ಗಾಯಕ ಎಚ್ ಎಸ್ ನಾಗರಾಜ್ ಗೆ ಶ್ರೀ ವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ

Mysore News: ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ವತಿಯಿಂದ ಮೈಸೂರಿನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವದ ವಿದ್ವತ್ ಸಭೆ ಜರುಗಿತು. ಈ ವೇಳೆ ವಿದ್ವಾನ್ ಶೃಂಗೇರಿ ನಾಗರಾಜ್ ರಿಗೆ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’, ವಿದ್ವಾನ್ ಎಚ್.ಕೆ.ನರಸಿಂಹಮೂರ್ತಿ ರಿಗೆ ‘ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ’, ವಿದುಷಿ ಪುಷ್ಪಾ ಶ್ರೀನಿವಾಸ್ ರಿಗೆ ‘ಕರ್ನಾಟಕ ಸಂಗೀತಾಚಾರ್ಯ ಪ್ರಶಸ್ತಿ’ ಯನ್ನು ನೀಡಿ, ಗೌರವಿಸಲಾಯಿತು.

VISTARANEWS.COM


on

Mysore Vasudevacharya Memorial Music utsav Vidwat Sabha and award ceremony
Koo

ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಹಾಮಹಿಮರಾದ ಮೈಸೂರು ವಾಸುದೇವಾಚಾರ್ಯರ ಕೊಡುಗೆ ಅನನ್ಯವಾಗಿದೆ ಎಂದು ಶಿವಮೊಗ್ಗದ ಖ್ಯಾತ ಗಾಯಕ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ (Mysore News) ಹೇಳಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ವತಿಯಿಂದ ಮೈಸೂರಿನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವದ ವಿದ್ವತ್ ಸಭೆಯಲ್ಲಿ ಅವರು ಪ್ರತಿಷ್ಠಿತ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

ಮೈಸೂರು ವಾಸುದೇವಾಚಾರ್ಯ ಮನೆ ಮೈಸೂರಿನಲ್ಲಿ ಸಂಗೀತಕ್ಕೆ ಮಹೋನ್ನತ ವೇದಿಕೆಯಾಗಿ ರೂಪುಗೊಂಡಿದೆ. ಅಲ್ಲಿ ಹಾಡಿದವರ ಧನ್ಯತೆಯೇ ವಿಶೇಷವಾಗಿದ್ದು ಎಂದು ಅವರು ಸ್ಮರಿಸಿದರು.

ಪ್ರಶಸ್ತಿ ಪ್ರದಾನ

ವಿದ್ವಾನ್ ಶೃಂಗೇರಿ ನಾಗರಾಜ್ ಅವರಿಗೆ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’, ವಿದ್ವಾನ್ ಎಚ್.ಕೆ. ನರಸಿಂಹಮೂರ್ತಿ ಅವರಿಗೆ ‘ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ’, ವಿದುಷಿ ಪುಷ್ಪಾ ಶ್ರೀನಿವಾಸ್ ಅವರಿಗೆ ‘ಕರ್ನಾಟಕ ಸಂಗೀತಾಚಾರ್ಯ ಪ್ರಶಸ್ತಿ’ ಯನ್ನು ನೀಡಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ರಮಾ ಬೆಣ್ಣೂರು ಮಾತನಾಡಿ, ವಯೋಲಿನ್ ವಿದ್ವಾಂಸ ಎಚ್.ಕೆ. ನರಸಿಂಹ ಮೂರ್ತಿ ಅವರು ಕಲಾ ಲೋಕಕ್ಕೆ ಅಹರ್ನಿಷಿ ಸೇವೆ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಯುವಕರು ವಯಲಿನ್ ಹಿಡಿದು ಸಾಗುತ್ತಿದ್ದರೆ ಅವರು ಎಚ್.ಕೆ. ಎನ್. ಸ್ಟೂಡೆಂಟ್ ಎಂದು ಧೈರ್ಯವಾಗಿ ಹೇಳಬಹುದು. ಜೀವಮಾನದಲ್ಲಿ ಅವರು ಬಹುತೇಕ ಸಮಯವನ್ನು ಈ ವಾದ್ಯದ ನುಡಿಸಾಣಿಕೆ ಮತ್ತು ಪಾಠಕ್ಕಾಗಿ ಮೀಸಲಿಟ್ಟಿದ್ದಾರೆ. ಅವರಿಗೆ ಜೀವಮಾನದ ಪ್ರಶಸ್ತಿ ನೀಡಿ ಗೌರವಿಸಿರುವುದು ಮಹತ್ತರ ಕಾರ್ಯ ಎಂದು ಶ್ಲಾಘಿಸಿದರು.

ಇದನ್ನೂ ಓದಿ: Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

ಖ್ಯಾತ ಸಂಗೀತ ವಿದ್ವಾಂಸ ಮತ್ತು ಟ್ರಸ್ಟಿ ಡಾ. ರಾ. ನಂದಕುಮಾರ್ ಮಾತನಾಡಿ, ಕನ್ನಡ ನಾಡಿನ ಖ್ಯಾತ, ವಿಖ್ಯಾತ ಸಂಗೀತ ವಿದ್ವಾಂಸರನ್ನು ಒಳಗೊಂಡ ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ (ಕೆಸಿಎಂಸಿ) ಕಳೆದ ಮೂರು ವರ್ಷಗಳಿಂದ ಕಲಾಕ್ಷೇತ್ರದ ಅಭ್ಯುದಯಕ್ಕೆ ಸೇವೆ ಸಲ್ಲಿಸುತ್ತಿದೆ. ಮುಂದೆ ನೂರಾರು ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಮ್ಮಿಕೊಂಡು ಯುವ ಸಂಗೀತಗಾರರ ಏಳಿಗೆಗೆ ಶ್ರಮಿಸಲು ಸಂಕಲ್ಪ ಮಾಡಿದೆ. ಸಂಗೀತ ಲೋಕದ ದಿಗ್ಗಜರನ್ನು ಗುರುತಿಸಿ, ಗೌರವಿಸುವ ಸೇವೆಯನ್ನೂ ಟ್ರಸ್ಟ್ ಮಾಡುತ್ತಿದೆ. ಒಟ್ಟಾರೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹತ್ವ ಕಾಪಾಡಲು ನಮ್ಮ ಕೆಸಿಎಂಸಿ ಟ್ರಸ್ಟ್ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಹಿರಿಯ ವೀಣಾ ವಿದ್ವಾಂಸ ವಿದ್ವಾನ್ ಡಾ. ರಾ. ವಿಶ್ವೇಶ್ವರನ್ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಸಿದ್ಧಿ ಪಡೆದ ಅನೇಕರು ಪ್ರಸಿದ್ಧಿಗೆ ಬರಲೇ ಇಲ್ಲ. ಅವರ ಸಾಲಿನಲ್ಲಿ ಮೈಸೂರು ವಾಸುದೇವಾಚಾರ್ಯರೂ ಒಬ್ಬರು. ಮೈಸೂರಿನಲ್ಲಿ ಅವರಿಗೆ ರಾಜಾಶ್ರಯ ಮಾತ್ರ ಇತ್ತು. ಆದರೆ ರಾಷ್ಟ್ರಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಇನ್ನಷ್ಟು ಮಾನ್ಯವಾಗಬೇಕಿತ್ತು. ಇಂದಿನ ಪೀಳಿಗೆ ಇಂಥ ಮಹಾನ್ ಕಲಾವಿದರ ರಚನೆಗಳನ್ನು ಶ್ರದ್ಧೆಯಿಂದ ಕಲಿತು ಹಾಡಬೇಕು. ಕೆಸಿಎಂಸಿ ಟ್ರಸ್ಟ್ ಈ ನಿಟ್ಟಿನಲ್ಲಿ ಸಾವಿರಾರು ಕೆಲಸಗಳನ್ನು ಮಾಡಲಿ ಎಂದು ಹಾರೈಸುವೆ ಎಂದು ತಿಳಿಸಿದರು.

ರೇವತಿ ಕಾಮತ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ

ಇದೇ ವೇಳೆ ಖ್ಯಾತ ವೀಣಾ ವಿದುಷಿ ರೇವತಿ ಕಾಮತ್ ಅವರ ‘ರೇವತಿ ಕಾಮತ್ ಚಾರಿಟಬಲ್ ಟ್ರಸ್ಟ್’ ಅನ್ನು ವಿದ್ವಾನ್ ಆರ್. ವಿಶ್ವೇಶ್ವರನ್ ಅವರು ಉದ್ಘಾಟಿಸಿದರು. ಪರಿಸರ ಸಂರಕ್ಷಣೆ, ಗ್ರಾಮೀಣ ಮಕ್ಕಳ ಶಿಕ್ಷಣ ಅಭಿವೃದ್ಧಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಪೋಷಣೆ ಮತ್ತು ಸಂವರ್ಧನೆಗೆ ಟ್ರಸ್ಟ್ ಸಂಕಲ್ಪ ಮಾಡಿದೆ ಎಂದು ರೇವತಿ ಕಾಮತ್ ತಿಳಿಸಿದರು.

ಈ ಸಂದರ್ಭದಲ್ಲಿ ಕಲಾಕ್ಷೇತ್ರದ ಹಿರಿಯ ಚೇತನ ವಿದ್ವಾನ್ ಡಾ.ರಾ. ವಿಶ್ವೇಶ್ವರನ್, ಲೇಖಕ ಮತ್ತು ಪತ್ರಕರ್ತ ಎ.ಆರ್. ರಘುರಾಮ, ಡಾ.ರಮಾ ಬೆಣ್ಣೂರು, ಭ್ರಮರಾ ಟ್ರಸ್ಟ್‌ನ ಸಂಸ್ಥಾಪಕಿ ಮಾಧುರಿ ತಾತಾಚಾರಿ, ವಿದ್ವಾನ್ ಡಾ.ರಾ.ಸ.ನಂದಕುಮಾರ್ ಮತ್ತು ವೀಣಾ ವಿದ್ವಾಂಸ ಪ್ರಶಾಂತ ಅಯ್ಯಂಗಾರ್, ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ (ಶಿವು) ಮತ್ತು ಪುಸ್ತಕಂ ರಮಾ ಉಪಸ್ಥಿತರಿದ್ದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಹೀಗಿದೆ

ಇದಕ್ಕೂ ಮುನ್ನ ವಾಸುದೇವಾಚಾರ್ಯರ ಕೃತಿಗಳ ಗೋಷ್ಠಿ ಗಾಯನ, ವಿದುಷಿ ಮೈಸೂರು ರಾಜಲಕ್ಷ್ಮೀ ಅವರ ವೀಣಾವಾದನ ನೂರಾರು ಪ್ರೇಕ್ಷಕರನ್ನು ರಂಜಿಸಿತು.

Continue Reading

ಪ್ರಮುಖ ಸುದ್ದಿ

ಗುರು ಸಕಲಮಾ ಆತ್ಮಕಥನ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳುʼ ಮುಖಪುಟ ಅನಾವರಣ

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ಅಧ್ಯಾತ್ಮದ ಹಾದಿಯಲ್ಲಿ ಪಯಣಿಸಬಹುದು. ತಂತ್ರಮಾರ್ಗದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ ಎಂದು ಗುರು ಸಕಲಮಾ ನುಡಿದರು. ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕೃತಿಯ ಮುಖಪುಟವನ್ನು ಸಾಹಿತಿ ಜೋಗಿ ಅನಾವರಣಗೊಳಿಸಿದರು.

VISTARANEWS.COM


on

ಹಿಮಾಲಯ book cover page launch 2
Koo

ಹಿಮಾಲಯದ ಗುರು ಪರಂಪರೆ ಅವಿನಾಶಿ: ಗುರು ಸಕಲಮಾ

ಬೆಂಗಳೂರು: ಅಧ್ಯಾತ್ಮದ (Spirituality) ಬಗ್ಗೆ ಸಮಾಜದಲ್ಲಿ ಇರುವ ತಪ್ಪು ತಿಳುವಳಿಕೆಗಳು, ಭಯಗಳಿಂದಾಗಿ ಮೊದಲಿನಷ್ಟು ಮೌಲ್ಯಯುತವಾಗಿ ಅದನ್ನು ನಮಗೆ ಉಳಿಸಿಕೊಳ್ಳಲಾಗಿಲ್ಲ. ಆದರೆ, ನಾವು ಅದನ್ನು ಕಳೆದುಕೊಂಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ಇದನ್ನು ನಾಶ ಮಾಡಲು ಸಾಧ್ಯವಿಲ್ಲ. ಈ ನಮ್ಮ ಸಂಸ್ಕೃತಿ ಅವಿನಾಶಿ ಎಂದು ಹಿಮಾಲಯ ಯೋಗಿ ಸ್ವಾಮಿ ರಾಮ (Swami Rama) ಹಾಗೂ ಬಹುಶ್ರುತ ವಿದ್ವಾಂಸ ಡಾ. ಆರ್‌ ಸತ್ಯನಾರಾಯಣ (Dr. R Satyanarayana) ಅವರ ನೇರ ಶಿಷ್ಯೆ, ಶ್ರೀವಿದ್ಯಾ ಗುರು ಸಕಲಮಾ (Guru Sakalamaa) ಅವರು ಹೇಳಿದ್ದಾರೆ.

ಅವರು ತಮ್ಮ, ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಪುಸ್ತಕದ ಇಂಗ್ಲೀಷ್‌ ಹಾಗೂ ಕನ್ನಡ ಆತ್ಮಚರಿತ್ರೆಯ ಮುಖಪುಟ ಅನಾವರಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಆದರೆ ಇದಕ್ಕೆ ಇನ್ನೊಂದು ಮುಖವಿದೆ ಅದು ತಂತ್ರಶಾಸ್ತ್ರ. ತಂತ್ರ ನಿಮ್ಮನ್ನು ನೀವು ಹೇಗಿದ್ದೇವೋ ಹಾಗೆಯ ಸ್ವೀಕರಿಸುತ್ತದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ನೀವು ಅಧ್ಯಾತ್ಮ ದ ಹಾದಿಯಲ್ಲಿ ಪಯಣಿಸಬಹುದು. ಈ ತಂತ್ರದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ. ಇದು ಇವತ್ತಿನ ಸಮಸ್ಯೆಯಲ್ಲ. ಶಂಕರಾಚಾರ್ಯರ ಕಾಲದಿಂದಲೂ ಇತ್ತು. ಅವರು ಇದಕ್ಕೆ ಅಂಟಿದ ಜಾಡ್ಯಗಳನ್ನು ಕಿತ್ತೆಸೆದು ಅದನ್ನು ಪ್ರವರ್ಧಮಾನಕ್ಕೆ ತರಲು ಶ್ರಮಿಸಿದರು ಎಂದರು.

ನನ್ನಮ್ಮ ನನಗೆ ಋಷಿಮುನಿಗಳ ಕತೆಗಳನ್ನೆಲ್ಲ ಹೇಳುವಾಗ ಈ ಕತೆಗಳ ಋಷಿಮುನಿಗಳಿಗೂ ನಮಗೂ ಸಂಬಂಧವಿಲ್ಲ, ಅವರು ಯಾವುದೋ ಲೋಕದಲ್ಲಿ ಕೂತಿರುವವರು. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದೇ ನಾನಂದುಕೊಂಡಿದ್ದೆ. ಆದರೆ, ಶ್ರದ್ಧೆಯಿಂದ ನೀವು ಈ ಲೋಕಕ್ಕೆ ಬಂದರೆ, ಇವು ಕತೆಗಳಲ್ಲ, ಅಧ್ಯಾತ್ಮಿಕ ಸತ್ಯಗಳು ಎಂಬುದು ನಿಮಗೆ ಗೋಚರವಾಗಬಹುದು. ನೀವು ಬಯಸಿದಲ್ಲಿ, ಈ ಪುಸ್ತಕದಲ್ಲಿ ಬಂದಿರುವ ಋಷಿಮುನಿಗಳನ್ನೆಲ್ಲ ನೀವು ಭೇಟಿ ಮಾಡಬಹುದು. ನಿಮ್ಮ ಕನಸಿನಲ್ಲೂ ಅವರು ಬಂದು ನಿಮ್ಮ ಜೊತೆ ಮಾತನಾಡಬಹುದು. ಪಕ್ಕದಲ್ಲೇ ಗೆಳೆಯನ ರೀತಿಯಲ್ಲಿ ಬಂದು ನಿಮಗೆ ಅರಿವು ಮೂಡಿಸಿ ಹೋಗಬಹುದು. ಅವರೆಲ್ಲ ಬೇರೊಂದು ಲೋಕದಲ್ಲಿ ಕುಳಿತು, ಈ ಲೋಕಕಲ್ಯಾಣಕ್ಕಾಗಿ ಕಂಕಣ ಬದ್ಧರಾಗಿ ನಿಂತಿದ್ದಾರೆ, ಸದಾ ನಮ್ಮನ್ನು ಪೊರೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಬದುಕಿನ ಪಯಣದಲ್ಲಿ ಗುರುವಿನ ಸ್ಥಾನ ದೊಡ್ಡದು. ನಾನು, ನನ್ನದು ಎಂಬುದನ್ನು ಬಿಟ್ಟಾಗ ಗುರು ಸಿಕ್ಕುತ್ತಾನೆ. ಗುರುವಿನ ಅನ್ವೇಷಣೆಯಲ್ಲಿ ನಾವಿದ್ದೇವೆ ಎಂಬುದು ಅನೇಕ ಸಾರಿ ನಮಗೆ ಅರಿವೇ ಇರುವುದಿಲ್ಲ. ಅದಕ್ಕಾಗಿಯೇ, ಅರಿವೇ ಗುರುವು ಗುರುವೇ ಅರಿವು. ಗುರು ಸಿಕ್ಕ ಮೇಲೆ ಕೆಲವರಿಗೆ ಅರಿವು ಸಿಕ್ಕರೆ, ಇನ್ನು ಕೆಲವರಿಗೆ ಅರಿವಾಗಿ ಗುರು ಬೇಕು ಅನಿಸುತ್ತದೆ ಎಂದು ಹೇಳಿದರು.

ಹಿಮಾಲಯ book cover page launch 2

ಕನ್ನಡಪ್ರಭದ ಪುರವಣಿ ಸಂಪಾದಕ, ಸಾಹಿತಿ ಜೋಗಿ (Writer Jogi) ಮಾತನಾಡಿ, ಒಂದು ಪುಸ್ತಕವನ್ನು ಗೆಲ್ಲಿಸುವ ಅಂಶಗಳೆಂದರೆ ಮುಗ್ದತೆ ಹಾಗೂ ಪ್ರಾಮಾಣಿಕತೆ. ಇಂದು ಎಷ್ಟೋ ಪುಸ್ತಕಗಳು ಅಪ್ರಾಮಾಣಿಕವಾಗಿ ಇರುತ್ತದೆ, ಪುಸ್ತಕದ ಕೆಲವು ಪುಟಗಳನ್ನು ತೆರೆದು ನೋಡಿದ ತಕ್ಷಣ ಇದು ಪ್ರಾಮಾಣಿಕವೋ, ಅಪ್ರಾಮಾಣಿಕವೋ ಎಂಬುದು ಅರ್ಥವಾಗುತ್ತದೆ. ಈ ಪುಸ್ತಕ ಕೆಲವು ಪುಟಗಳನ್ನು ಮುಂಚಿತವಾಗಿ ಓದಿದ್ದರಿಂದ ನನಗೆ ಇದರಲ್ಲಿ ಮುಗ್ಧತೆ ಹಾಗೂ ಪ್ರಾಮಾಣಿಕತೆ ಎದ್ದು ಕಾಣುತ್ತಿವೆ. ಹಾಗಾಗಿ ಇದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ ಎಂದರು.

ಇಂದು ಪಾರಲೌಕಿಕ ಅಂದ ತಕ್ಷಣ ನಮಗೊಂದು ತಪ್ಪು ಕಲ್ಪನೆಯಿದೆ. ನಮಗೆ ಆ ವೇಷವನ್ನು ತೊಟ್ಟುಕೊಳ್ಳುವ ಧೈರ್ಯ ಇದೆಯೇ? ನಾವು ಆ ಜಗತ್ತಿಗೆ ಹೋಗಬಲ್ಲೆವಾ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡಿ ನಾವು ಅದರ ಗೊಡವೆಗೇ ಹೋಗುವುದಿಲ್ಲ. ಪುರಂದರ ದಾಸರೇ ʻಇಷ್ಟು ದಿನ ಈ ವೈಕುಂಠ ಎಷ್ಟು ದೂರ ಎನ್ನುತಲಿದ್ದೆʼ ಎಂದು ಬರೆಯುವ ಮೂಲಕ ವೈಕುಂಠ ಇಲ್ಲೇ ಇದ್ದರೂ, ಅಲ್ಲಿದೆ ಎಂದು ತಿಳಿದಿದ್ದೆ ಎನ್ನುವ ಸತ್ಯವನ್ನು ಹೇಳಿದ್ದಾರೆ. ಈ ಪುಸ್ತಕ ಈ ರೀತಿಯಲ್ಲಿ ಅಂಜಿಕೆಗಳನ್ನು ದೂರ ಮಾಡಿ ಸಂಕೋಚದ ತೆರೆಯನ್ನು ಸರಿಸಲು ದಾರಿದೀಪವಾಗಬಹುದು ಎಂದರು.

ಜೀವನದಲ್ಲಿ ನಾವು ಕಳೆದುಕೊಳ್ಳುವುದು ಅಪನಂಬಿಕೆಯಿಂದ. ನಮ್ಮಲ್ಲಿ ಅಪನಂಬಿಕೆಯಿದೆ ಎಂದರೆ ಅದು ನಮ್ಮ ವ್ಯಕ್ತಿತ್ವದ ದೋಷವೇ ಹೊರತು ಗುರುವಿನ ದೋಷವಲ್ಲ. ಒಂದು ಕತೆಯ ಒಳಗೆ ನನಗೆ ಹೋಗಲಾಗದಿದ್ದರೆ, ಅದು ಆ ಕಥನದ ದೋಷವಲ್ಲ, ಆ ಕಥನವನ್ನು ಸ್ವೀಕರಿಸುವ ಅನುಭವದ ಕೊರತೆಯೇ ಕಾರಣ. ಮನುಷ್ಯ ಎಲ್ಲ ದುಃಖಗಳನ್ನೂ, ಸುಖವನ್ನು ಬದುಕಿನಲ್ಲಿ ಅನುಭವಿಸಿದ ಮೇಲೆ ಒಂದು ಹುಡುಕಾಟ ಹಾದಿಯತ್ತ ಹೊರಳುತ್ತಾನೆ. ಈ ಹಾದಿಯಲ್ಲಿ ಸಿಗುವ ಗುರು ಯಾವುದೇ ರೂಪದಲ್ಲಿರಬಹುದು. ಇಂಥ ಸಂದರ್ಭ ನಂಬಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಪುಸ್ತಕ ಜಗತ್ತಿಗೆ ಇಂಥದ್ದೊಂದು ಸಮಾರಂಭ ಬೇಕಿದೆ. ಮುಖಪುಟ ಅನಾವರಣವನ್ನೂ ಸಂಭ್ರಮಿಸುವ ಈ ನಡೆ ಪುಸ್ತಕ ಜಗತ್ತಿನಲ್ಲಿ ಸ್ವಾಗತಾರ್ಹ ಎಂದೂ ಅವರು ಹೇಳಿದರು.

ಸಕಲಮಾ ಅವರ ಯುಟ್ಯೂಬ್ ಅನಾವರಣಗೊಳಿಸಿದ ಕಾಂತಾರ (Kantara Movie) ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಮಾತನಾಡಿ, ಮುಖಪುಟವನ್ನು ನೋಡಿ ಪುಸ್ತಕವನ್ನು ಅಳೆಯಬೇಡಿ ಎಂಬ ಇಂಗ್ಲೀಷ್‌ ನುಡಿಗಟ್ಟಿದೆ. ಆದರೆ, ಸಾಮಾನ್ಯವಾಗಿ ನಾವು ಮುಖಪುಟವನ್ನು, ಟ್ರೈಲರ್‌ಗಳನ್ನು ನೋಡಿ ಅಳೆಯುವ ಪರಿಸ್ಥಿತಿ ಈಗ ಎಲ್ಲೆಡೆ ಇದೆ. ಒಳ ಹೂರಣ ಇದ್ದರೆ ಸಿನಿಮಾವಿರಲಿ, ಪುಸ್ತಕವಿರಲಿ ಗೆದ್ದೇ ಗೆಲ್ಲುತ್ತದೆ ಎಂಬುದು ನಾನು ಕಾಂತಾರದಿಂದ ಕಲಿತ ಪಾಠ ಎಂದರು.

ಒಂದು ಸಿನಿಮಾ ಮಾಡುವಂತೆ, ಪುಸ್ತಕ ಬರೆಯುವುದೂ ಕೂಡಾ ಸಾಕಷ್ಟು ಶ್ರಮ ಬೇಡುವ ಕೆಲಸ. ಅದರ ಹಿಂದೆ ಅಪಾರ ಶ್ರದ್ಧೆಯಿದೆ. ಸಿನಿಮಾ ಮಂದಿ ತಮ್ಮ ಸಿನಿಮಾದ ಕುತೂಹಲ ಮೊದಲೇ ಹೆಚ್ಚಿಸಲು ಟ್ರೈಲರ್, ಟೀಸರ್‌ ಬಿಡುಗಡೆಯನ್ನು ಇಟ್ಟುಕೊಳ್ಳುತ್ತಾರೆ. ಹಾಗಾಗಿ, ಪುಸ್ತಕವನ್ನೂ ಹೆಚ್ಚು ಮಂದಿಗೆ ತಲುಪಿಸಲು, ಕುತೂಹಲ ಹುಟ್ಟು ಹಾಕಿಲು ಇಂಥ ಮುಖಪುಟ ಅನಾವರಣದಂತಹ ಕಾರ್ಯಕ್ರಮಗಳು ನಡೆಯಬೇಕು. ಜನರು ಸೇರಬೇಕು. ಓದುವ ಪರಂಪರೆ ಹೆಚ್ಚಬೇಕು ಎಂದರು.

ಗುರು ಯಾರೇ ಇರಲಿ, ಅವರ ಮೇಲೆ ನಮಗೆ ನಂಬಿಕೆ ಇರಬೇಕು. ಜೀವನದಲ್ಲಿ ಕಲಿಯುವ ಹಾದಿ ದೊಡ್ಡದಿದೆ. ಆ ಸಂದರ್ಭ ಗುರು ತಿದ್ದಿದ್ದನ್ನು ನಾವು ಕಲಿತುಕೊಳ್ಳುವ ಆಸಕ್ತಿ ಇರಬೇಕು. ಅದಕ್ಕಾಗಿ ಗುರು ತೋರಿದ ಹಾದಿಯಲ್ಲಿ ನಾವು ನಡೆಯಬೇಕು ಎಂದೂ ಹೇಳಿದರು.

ಜುಲೈ 21ರಂದು ಚಂಡೀಗಢದಲ್ಲಿ ಆಂಗ್ಲ ಭಾಷೆಯ `Messages from the Himalayan Sages- Timely and Timeless’ ಹಾಗೂ ಸೆಪ್ಟೆಂಬರ್22ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕನ್ನಡ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಗುರು ಸಕಲಮಾ ಅವರ ಯುಟ್ಯೂಬ್‌ ಲಿಂಕ್- https://youtube.com/@gurusakalamaa?feature=shared

ಇದನ್ನೂ ಓದಿ: ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

Continue Reading

ವಿದೇಶ

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ವಿಶ್ವದ ಕಿರಿಯ ಚಿತ್ರಕಲಾವಿದ (Youngest Artist) ಘಾನಾದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ್ದಾನೆ! ಈ ಅತಿ ಕಿರಿಯ ಕಲಾವಿದನ ಕುರಿತು ವ್ಯಾಪಕ ಕುತೂಹಲ ಉಂಟಾಗಿದೆ.

VISTARANEWS.COM


on

By

Youngest Artist
Koo

ಅಂಬೆಗಾಲಿಡುವ (Toddler) ಮಗು ವರ್ಣಚಿತ್ರಗಳನ್ನು (Youngest Artist) ರಚಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records) ಬರೆದಿದೆ. ವಿಶ್ವದ ಅತ್ಯಂತ ಕಿರಿಯ ಚಿತ್ರ ಕಲಾವಿದ ಎನ್ನುವ ಖ್ಯಾತಿಗೆ ಈ ಮಗು ಪಾತ್ರವಾಗಿದೆ. ಘಾನಾದ (Ghana) 1 ವರ್ಷ 152 ದಿನಗಳ ಏಸ್-ಲಿಯಾಮ್ ನಾನಾ ಸ್ಯಾಮ್ ಆಂಕ್ರಾ (Ace-Liam Nana Sam Ankrah) ತಾನೇ ರಚಿಸಿದ 9 ವರ್ಣಚಿತ್ರಗಳನ್ನು ಮಾರಾಟ ಮಾಡಿ ಈ ದಾಖಲೆ ನಿರ್ಮಿಸಿದೆ.

ಏಸ್- ಲಿಯಾಮ್ ನಾನಾ ಸ್ಯಾಮ್ ಆಂಕ್ರಾ ವಿಶ್ವದ ಅತ್ಯಂತ ಕಿರಿಯ ಪುರುಷ ಚಿತ್ರ ಕಲಾವಿದನಾಗಿ ಪ್ರತಿಷ್ಠಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ. ಆಂಕ್ರಾನ ಈ ಸಾಧನೆ ಹಲವಾರು ಮಂದಿಯ ಗಮನ ಸೆಳೆದಿದ್ದ್ದು, ಜಾಗತಿಕ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ವಿಶ್ವ ದಾಖಲೆ ಪಟ್ಟಿಯಲ್ಲಿ ಆಂಕ್ರಾ ಹೆಸರು ಸೇರ್ಪಡೆಗೆ ಸಾಕಷ್ಟು ಮಂದಿ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.


ಯಾವಾಗ ಚಿತ್ರಕಲೆ ಪ್ರಾರಂಭಿಸಿದ್ದು?

ಈಗಷ್ಟೇ ಅಂಬೆಗಾಲಿಡುತ್ತಿರುವ ಆಂಕ್ರಾ ಕೇವಲ ಆರು ತಿಂಗಳಲ್ಲೇ ಚಿತ್ರಕಲೆಯನ್ನು ಪ್ರಾರಂಭಿಸಿದನು ಎನ್ನುತ್ತಾರೆ ಆತನ ತಾಯಿ. ಚಿತ್ರಕಲೆಯ ಮೇಲಿನ ಆತನ ಉತ್ಸಾಹವು ಚಿಕ್ಕ ವಯಸ್ಸಿನಿಂದಲೂ ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆತ ಕಲಿಯಲು ಪ್ರಾರಂಭ ಮಾಡಿದಾಗಲೇ ಕ್ಯಾನ್ವಾಸ್‌ನ ತುಂಡನ್ನು ನೆಲದ ಮೇಲೆ ಹರಡಿ ಅದರ ಮೇಲೆ ಸ್ವಲ್ಪ ಬಣ್ಣವನ್ನು ಬೀಳಿಸಿದೆ. ಕ್ಯಾನ್ವಾಸ್‌ನಾದ್ಯಂತ ಆತ ಬಣ್ಣವನ್ನು ಹರಡಿ ಕೊನೆಗೊಳಿಸಿದ. ಇದು ಆತನ ಮೊದಲ ವರ್ಣಚಿತ್ರ ‘ದಿ ಕ್ರಾಲ್’ ಎಂದು ಅವರು ವಿವರಿಸಿದರು.


ಅಂಬೆಗಾಲಿಡುವ ಘಾನಾದ ಆಂಕ್ರಾ ಈಗ ಸೆಲೆಬ್ರಿಟಿಯಾಗಿದ್ದಾನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಮಾತ್ರವಲ್ಲದೆ ಘಾನಾ ಗಣರಾಜ್ಯದ ಪ್ರಥಮ ಮಹಿಳೆಯ ಗಮನವನ್ನೂ ಆತ ಸೆಳೆದಿದ್ದಾನೆ.

ಮೊದಲ ಪ್ರದರ್ಶನ

ಏಸ್- ಲಿಯಾಮ್ ಆಂಕ್ರಾ ಇತ್ತೀಚೆಗೆ ತನ್ನ ಚಿತ್ರಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನಡೆಸಿದ. ಇದರಲ್ಲಿ ಆತನ ಹತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ಒಂಬತ್ತು ಮಾರಾಟವಾಗಿವೆ. ಏಸ್- ಲಿಯಾಮ್‌ನ ಕಲೆಯು ನಿರ್ದಿಷ್ಟ ಸಂದೇಶಗಳನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಬಗ್ಗೆ ಹೆಚ್ಚಾಗಿದೆ ಎಂದು ಆತನ ತಾಯಿ ಹೇಳಿದ್ದಾರೆ.

ಅವನ ಅಮೂರ್ತ ವರ್ಣಚಿತ್ರಗಳು ಸುತ್ತಲಿನ ಪ್ರಪಂಚದಿಂದ ಪ್ರೇರಿತವಾಗಿವೆ. ಬಣ್ಣ, ಆಕಾರ, ಟೆಕಶ್ಚರ್ ಮತ್ತು ಅವನ ಮನಸ್ಥಿತಿಯನ್ನು ಇದು ಅವಲಂಬಿಸಿದೆ. ಪ್ರತಿ ಚಿತ್ರಕಲೆಯು ಹೊಸ ವಿಷಯಗಳನ್ನು ಕಂಡುಹಿಡಿಯುವಲ್ಲಿ ಆತನ ಕುತೂಹಲ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ ಎಂದಿದ್ದಾರೆ ಅವರು.


ಭವಿಷ್ಯದ ಯೋಜನೆಗಳು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ವಿಶ್ವದ ಅತ್ಯಂತ ಕಿರಿಯ ಕಲಾವಿದ ಲಿಯಾಮ್ ಅವರ ದಾಖಲೆಯನ್ನು ಅನುಮೋದಿಸಿದ ಬಳಿಕ ಆತನ ಕುಟುಂಬವು ಆತನ ಕಲಾತ್ಮಕ ಪ್ರತಿಭೆಗೆ ಗುಣಮಟ್ಟದ ಶಿಕ್ಷಣದ ಮೂಲಕ ಪೋಷಿಸಲು ಅವಕಾಶಗಳನ್ನು ಹುಡುಕುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನದ ಅವಕಾಶಗಳು ಅವರಿಗೆ ದೊರೆಯುತ್ತದೆ ಮತ್ತು ಆತನ ಕಲಾಕೃತಿಗಳನ್ನು ಮಾರಾಟ ಮಾಡಲು ಬಯಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

ಏಸ್-ಲಿಯಾಮ್ ತಾಯಿಯ ಸಲಹೆ ಏನು?

ತಮ್ಮ ಆಸಕ್ತಿಗಳನ್ನು ಕಂಡುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲು ಪೋಷಕರಿಗೆ ಸಲಹೆ ನೀಡಿದ ಅವರು, ಪ್ರತಿ ಮಗು ಅನನ್ಯವಾಗಿದೆ ಮತ್ತು ಅವರ ಭಾವೋದ್ರೇಕಗಳನ್ನು ಪೋಷಿಸುವುದು ಅದ್ಭುತ ಆವಿಷ್ಕಾರಗಳು ಮತ್ತು ಸಾಧನೆಗಳಿಗೆ ಕಾರಣವಾಗಬಹುದು. ಅದನ್ನು ಪ್ರಯತ್ನಿಸುವ ಮೊದಲು ಅದನ್ನು ಮತ್ತೆ ಮತ್ತೆ ಓದಿ ಮತ್ತು ನೆನಪಿಡಿ. ಪ್ರಯಾಣ ಮತ್ತು ಅದು ತರುವ ಸಂತೋಷವು ತುಂಬಾ ತೃಪ್ತಿಕರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

Bengaluru News: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ನಲ್ಲಿ ನಡೆಯಲಿದೆ. ಸಾಹಿತಿ ಎಸ್‌.ಎಲ್‌.ಭೈರಪ್ಪ ಕೃತಿ ಬಿಡುಗಡೆ ಮಾಡಲಿದ್ದಾರೆ.

VISTARANEWS.COM


on

Bharathada dheera chethanagalu kruthi lokarpane in Bengaluru on May 26
Koo

ಬೆಂಗಳೂರು: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಗರದ (Bengaluru News) ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಜರುಗಲಿದೆ.

ಇದನ್ನೂ ಓದಿ: COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಎಸ್‌.ಎಲ್‌. ಭೈರಪ್ಪನವರ ಇಂಗ್ಲೀಷ್‌ ಅನುವಾದಿತ 3 ಕಾದಂಬರಿಗಳನ್ನು ಡಾ. ವಿಕ್ರಮ್‌ ಸಂಪತ್‌ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

ಕಾರ್ಯಕ್ರಮದಲ್ಲಿ ಡಾ. ವಿಕ್ರಮ್‌ ಸಂಪತ್‌ ಅವರೊಂದಿಗೆ ಅರ್ಧಗಂಟೆಯ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅನುವಾದಕರಾದ ಎಲ್‌.ವಿ. ಶಾಂತಕುಮಾರಿ, ಪ್ರೊ. ಜಿ.ಎಲ್‌. ಶೇಖರ್‌ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಎಂ.ಎ. ಸುಬ್ರಮಣ್ಯ ಮತ್ತು ಎಂ.ಎಸ್‌. ಋತ್ವಿಕ್‌ ತಿಳಿಸಿದ್ದಾರೆ.

Continue Reading
Advertisement
AC Side Effects
ಆರೋಗ್ಯ6 mins ago

AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

karnataka weather forecast
ಮಳೆ36 mins ago

Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Rishab Pant
ಪ್ರಮುಖ ಸುದ್ದಿ1 hour ago

Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

Wildlife Sanctuaries
ಪರಿಸರ1 hour ago

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

T20 World Cup
ಕ್ರೀಡೆ2 hours ago

T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

namaz on road
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ನಡುರಸ್ತೆಯಲ್ಲೇಕೆ ನಮಾಜ್‌ ಮಾಡಬೇಕು?

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ಜಂಟಿ ಹೂಡಿಕೆ ವ್ಯವಹಾರದಿಂದ ದೂರವಿರಿ

Prajwal Revanna Case
ಪ್ರಮುಖ ಸುದ್ದಿ8 hours ago

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

chakravarthy sulibele
ಕರ್ನಾಟಕ8 hours ago

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Cyber Crime
ಪ್ರಮುಖ ಸುದ್ದಿ9 hours ago

Cyber Crime : ಹೆಣ್ಣು ಮಕ್ಕಳ ಫೋಟೋ ಅಶ್ಲೀಲಗೊಳಿಸಿ ಪೋಸ್ಟ್​ ಮಾಡುತ್ತಿದ್ದವನ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ12 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು20 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌