ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಒಂದು ಗುಡ್ ಮಾರ್ನಿಂಗ್ ಮೆಸೇಜು - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಒಂದು ಗುಡ್ ಮಾರ್ನಿಂಗ್ ಮೆಸೇಜು

ಆರೈಕೆಯನ್ನೇ ನಿರೀಕ್ಷಿಸದೆ ಅರಳುವ ಗೌರಿಹೂವಿಗೂ, ಮಣಿಪುರದ ಯಾವುದೋ ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಜಾಮಿನಿಗೂ ಎಷ್ಟೆಲ್ಲ ಹೋಲಿಕೆಯಿದೆಯಲ್ಲ ಎನ್ನಿಸುತ್ತಿತ್ತು. ಇಂಥವಳು ಹೀಗೊಂದು ಮಾರ್ನಿಂಗ್ ಮೆಸೇಜಿನ ಸಲುವಾಗಿ ಅಧೀರಳಾಗುವುದೆಂದರೆ!

VISTARANEWS.COM


on

one good morning message short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
anjana hegade short story writer

:: ಅಂಜನಾ ಹೆಗಡೆ

“ಒಂದು ಗುಡ್ ಮಾರ್ನಿಂಗ್ ಮೆಸೇಜು ಇಷ್ಟು ಡಿಫರನ್ಸ್ ಮಾಡುತ್ತೆ ಅಂತಾದ್ರೆ!”

ತನ್ನ ಕನ್ನಡ ಬೆರೆತ ಇಂಗ್ಲಿಷಿನಲ್ಲಿ ಜಾಮಿನಿ ಮಾತನಾಡಲು ಆರಂಭಿಸಿದಾಗ ಅವಳ ಕಣ್ಣುಗಳನ್ನೇ ದಿಟ್ಟಿಸಿದೆ. ಎಡಗೈಯಲ್ಲಿ ಊಟದ ತಟ್ಟೆಯನ್ನು ಹಿಡಿದುಕೊಂಡು ಬಲಗೈಯಲ್ಲಿರುವ ಚಮಚದಿಂದ ಎಲೆಕೋಸಿನ ಪಲ್ಯವನ್ನು ಅನ್ನಕ್ಕೆ ಕಲಸುವುದರಲ್ಲಿ ಮಗ್ನಳಾಗಿದ್ದ ಅವಳ ಕಣ್ಣುಗಳಲ್ಲಿ ಯಾವ ಭಾವವಿದೆಯೋ ತಿಳಿಯಲಿಲ್ಲ. ಅವಳು ಯಾವ ಗುಡ್ ಮಾರ್ನಿಂಗ್ ಮೆಸೇಜಿನ ಬಗ್ಗೆ ಮಾತನಾಡಲು ಹೊರಟಿದ್ದಾಳೋ ಅದು ಬಂದಿದೆಯೆನ್ನುವ ಕಾರಣಕ್ಕೆ ಸಂತೋಷವಾಗಿರಬಹುದೋ ಅಥವಾ ಬರಲಿಲ್ಲವೆಂದು ಬೇಸರದಲ್ಲಿದ್ದಾಳೋ ಒಂದೂ ಅರ್ಥವಾಗಲಿಲ್ಲ. ಅವಳು ಮುಖ ಮೇಲೆತ್ತುವುದನ್ನೇ ಕಾಯತೊಡಗಿದೆ.

      ಅವಳು ಏನನ್ನು ಹೇಳಲಿದ್ದಾಳೆಯೋ ಅದನ್ನು ಕೇಳಿಸಿಕೊಳ್ಳಲೇಬೇಕಾಗಿತ್ತು ನಾನು. ನನ್ನ ಹೊರತಾಗಿ ಬೇರೆ ಯಾರಲ್ಲಿಯೂ ಅವಳು ಮನಸ್ಸುಬಿಚ್ಚಿ ಮಾತನಾಡುತ್ತಿರಲಿಲ್ಲ ಎನ್ನುವುದು ನನ್ನ ಭಾವನೆ. ತಾನಾಯಿತು ತನ್ನ ಕೆಲಸವಾಯಿತು ಎನ್ನುವಂತೆ ದಿನ ಕಳೆಯುತ್ತಿದ್ದ ಅವಳ ಮೇಲೆ ಯಾರಿಗೂ ವಿಶೇಷವಾದ ಕಾಳಜಿಯೂ ಇರಲಿಲ್ಲ. ಅವಳಿಗೂ ಅದರ ಅಗತ್ಯವಿರಲಿಲ್ಲ. ತಣ್ಣಗೆ ತನ್ನ ಪಾಡಿಗೆ ತಾನು ಬದುಕುತ್ತಿದ್ದ ಇಬ್ಬನಿಯಂಥ ಜಾಮಿನಿ ಯಾರ ಗುಡ್ ಮಾರ್ನಿಂಗ್ ಮೆಸೇಜಿನ ಬಗ್ಗೆ ಮಾತನಾಡುತ್ತಿರಬಹುದು ಎನ್ನುವ ಕುತೂಹಲದಲ್ಲಿಯೇ ನನ್ನ ಊಟದ ಬಾಕ್ಸಿನಲ್ಲಿದ್ದ ಇಡ್ಲಿಯನ್ನು ಅವಳ ತಟ್ಟೆಗೆ ಹಾಕಿದೆ. ಆಗಲಾದರೂ ಮುಖ ಮೇಲೆತ್ತಿ ಮಾತು ಮುಂದುವರಿಸಬಹುದೆಂದುಕೊಂಡಿದ್ದ ನನ್ನ ಊಹೆ ತಪ್ಪಾಯಿತು. ಅವಳು ಅದೇ ಎಲೆಕೋಸಿನ ಪಲ್ಯದೊಂದಿಗೆ ಇಡ್ಲಿಯನ್ನೂ ತಿಂದು ಮುಗಿಸಿ, ಅರ್ಧ ಮಿಗಿಸಿದ ಅನ್ನದೊಂದಿಗೆ ತಟ್ಟೆಯನ್ನೆತ್ತಿಕೊಂಡು ಕೈತೊಳೆಯಲು ಹೊರಟುಹೋದಳು. ನನ್ನ ಬಾಕ್ಸಿನಲ್ಲಿ ಉಳಿದಿದ್ದ ಕೆಂಪುಚಟ್ನಿ ಅರ್ಧಕ್ಕೇ ನಿಂತುಹೋದ ಜಾಮಿನಿಯ ಮಾತಿನಂತೆ ಭಾಸವಾಗಿ, ಮುಚ್ಚಳ ಹಾಕಿ ಪರ್ಸಿನೊಳಗೆ ಸೇರಿಸಿದೆ. ಅವಳು ಮಾತು ಮುಂದುವರಿಸುವುದನ್ನೇ ಕಾಯುತ್ತ, ಅವಳ ತಟ್ಟೆಗೆ ಚಟ್ನಿ ಹಾಕುವುದನ್ನೇ ಮರೆತಿದ್ದಕ್ಕೆ ನನ್ನ ಮೇಲೆಯೇ ಬೇಸರಿಸಿಕೊಳ್ಳುವುದರ ಹೊರತಾಗಿ ಬೇರೆ ದಾರಿ ಕಾಣಿಸಲಿಲ್ಲ.

      ಊಟವಾದ ನಂತರ ಕೈತೊಳೆಯದೇ ವೆಟ್ ಟಿಶ್ಯೂ ಉಪಯೋಗಿಸುವ ನನ್ನ ಅಭ್ಯಾಸ ಜಾಮಿನಿಗೆ ಒಪ್ಪಿಗೆಯಾಗುತ್ತಿರಲಿಲ್ಲ. ನಾನು ಬಾಕ್ಸ್ ತಂದಿರದ ದಿನಗಳಲ್ಲಿ ಊಟ ಮುಗಿದಮೇಲೆ ಇಬ್ಬರ ತಟ್ಟೆಯನ್ನೂ ಅವಳೇ ಎತ್ತಿಕೊಂಡು ಹೋಗುವುದು ರೂಢಿ. ಹಾಗೆ ತಟ್ಟೆ ಎತ್ತುವಾಗಲೆಲ್ಲ ಅವಳು ತುಟಿಗಳನ್ನು ಸೊಟ್ಟ ಮಾಡಿಕೊಂಡು "ಐ ಹೇಟ್ ಯೂ" ಎನ್ನುತ್ತಿದ್ದಳು. ನಾನದನ್ನು ಇನ್ನಿಲ್ಲದಂತೆ ಪ್ರೀತಿಸುತ್ತೇನೆ. ಅವಳು ಮೊದಲಸಲ "ಹೇಟ್ ಯೂ" ಅಂದಾಗ ನಾನು ಪೆದ್ದುಪೆದ್ದಾಗಿ ನಕ್ಕಿದ್ದನ್ನು ನೋಡಿ, "ನಿಮ್ಮೂರಲ್ಲಿ ಇದಕ್ಕೂ ಸ್ಮೈಲ್ ಮಾಡ್ತಾರಾ? ನಾನು ಹೇಟ್ ಮಾಡ್ತೀನಿ ಅಂದಿದ್ದು ಮಾ, ಲವ್ಯೂ ಅಂತಲ್ಲ" ಎನ್ನುತ್ತ ಜುಟ್ಟು ಕುಣಿಸಿದ್ದಳು. ನೀಳವಾದ ಅವಳ ಬೆನ್ನಮೇಲೆ ಕೆಂಪುಬಣ್ಣದ ಹೈಲೈಟುಗಳಿರುವ ಜುಟ್ಟು ಆ ಕ್ಷಣಕ್ಕೆ ಬೆಟ್ಟದಲ್ಲಿ ಬಳುಕುವ ಗೌರಿಹೂವಿನಂತೆ ಕಾಣಿಸಿತ್ತು. ಹಾಗೆ ಥಟ್ಟನೆ ನೆನಪಾದ ಗೌರಿಹೂವಿಗೂ, ಮಣಿಪುರದ ಯಾವುದೋ ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಜಾಮಿನಿಗೂ ಎಷ್ಟೆಲ್ಲ ಹೋಲಿಕೆಯಿದೆಯಲ್ಲ ಎನ್ನಿಸಿತ್ತು. ಆರೈಕೆಯನ್ನೇ ನಿರೀಕ್ಷಿಸದೆ ಅರಳುವ ಗೌರಿಹೂವಿನಂಥ ಸ್ವತಂತ್ರ ಪ್ರವೃತ್ತಿಯ ಜಾಮಿನಿ ಹೀಗೊಂದು ಮಾರ್ನಿಂಗ್ ಮೆಸೇಜಿನ ಸಲುವಾಗಿ ಅಧೀರಳಾಗುವುದೆಂದರೆ!

      ಸರಿಸುಮಾರು ಮೂರು ಗಂಟೆಗಳ ಕಾಲ ನಡೆದ ಕ್ಲೈಂಟ್ ಮೀಟಿಂಗಿನ ನಂತರವೂ ಅವಳ ಮನಃಸ್ಥಿತಿಯಲ್ಲೇನೂ ಬದಲಾವಣೆಯಾದಂತೆ ಕಾಣಿಸಲಿಲ್ಲ. "ಕ್ಯಾ ಹೇ ಯಾರ್ ಯೇ ಲೋಗ್. ಚಲೋ ಏಕ್ ಕಾಫಿ ಪೀನಾ ಹೇ" ಎಂದವಳನ್ನು ಮರುಮಾತಿಲ್ಲದೆ ಹಿಂಬಾಲಿಸಿದೆ. ಮಧ್ಯರಾತ್ರಿಯ ಸಮಯದಲ್ಲಿ ತುಸು ಹೆಚ್ಚೇ ಸಿಹಿಯೆನ್ನಿಸುವ ಕಾಫಿಯನ್ನು ಮಗ್ ತುಂಬ ತುಂಬಿಕೊಂಡು, ಪ್ಯಾಂಟ್ರಿಯ ಪಕ್ಕ ಇರುವ ಮೀಟಿಂಗ್ ರೂಮಿನಲ್ಲಿ ಕುಡಿಯುತ್ತ ಕುಳಿತುಕೊಳ್ಳುವುದು ಅವಳ ದಿನಚರಿಯ ಭಾಗವಾಗಿತ್ತು. ಹಾಗೆ ಕಾಫಿ ಕುಡಿಯುವಾಗ ಬಲತೊಡೆಯ ಮೇಲೆ ಎಡಗಾಲಿನ ಭಾರವನ್ನೆಲ್ಲ ಹಾಕಿ, ದೂರದಿಂದ ಕಾಣುವ ರಿಂಗ್ ರೋಡಿನ ಮೇಲೆ ಹಾದುಹೋಗುವ ವಾಹನಗಳನ್ನು ತನ್ಮಯತೆಯಿಂದ ನೋಡುತ್ತ ಅವಳು ಸೃಷ್ಟಿಸಿಕೊಳ್ಳುತ್ತಿದ್ದ ಏಕಾಂತವನ್ನು ನಾನು ತುಂಬಾ ಪ್ರೀತಿಸುತ್ತೇನೆ; ಕಾಫಿ ಮಗ್ ಮೇಲಿರುವ ಕೆಂಪು ಟೀಶರ್ಟಿನ ಅವಳ ಫೋಟೋವನ್ನೂ; ನಮ್ಮಿಬ್ಬರ ನಡುವಿನ ಮೌನವನ್ನೂ! ಒಂದು ಹನಿ ಕಾಫಿಯನ್ನೂ ಹಾಳುಮಾಡದೆ ಕುಡಿದು ಮುಗಿಸಿ, ನನ್ನ ಮಗ್ಗನ್ನೂ ಹೊಳೆಯುವಂತೆ ತೊಳೆದು, ಡೆಸ್ಕಿನ ಮೇಲೆ ಜೋಡಿಸಿಟ್ಟು ಕೆಲಸಕ್ಕೆ ಕುಳಿತಳೆಂದರೆ ಮತ್ತದೇ ಮೌನ! ಆವತ್ತು ಮಾತ್ರ ತನ್ನ ಮಾಮೂಲು ಭಂಗಿಯಲ್ಲಿ ಕುಳಿತು ರಿಂಗ್ ರೋಡಿನ ಕಡೆಗೆ ನೋಡಿದವಳೇ, "ದೇಖೋ ಆ ವೆಹಿಕಲ್ಸ್ ಸೌಂಡ್ ನಮ್ಮವರೆಗೆ ಬರೋದೇ ಇಲ್ಲ. ಈ ಗ್ಲಾಸ್ ವಾಲ್ ಹತ್ರ ಬಂದು ವಾಪಸ್ ಹೋಗಿರುತ್ತೆ ಅಲ್ವಾ. ಲೈಟ್ ಮಾತ್ರ ಕಾಣ್ಸುತ್ತೆ, ಯಾವ ಲೈಟಿಗೆ ಯಾವ ಸೌಂಡ್ ಅನ್ನೋದು ಗೊತ್ತಾಗೋದೇ ಇಲ್ಲ" ಎನ್ನುತ್ತ ಕುಳಿತಲ್ಲಿಂದಲೇ ಕೊಂಚ ಬಾಗಿ ಗಾಜಿನ ಗೋಡೆಯನ್ನು ಸವರಿದಳು. ನಾನು ಅವಳ ಮಾತಿಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೇ, " ಬಾ ಲಾಗೌಟ್ ಟೈಂ ಆಗ್ಹೋಯ್ತು" ಎಂದು ಅವಳನ್ನು ಎಬ್ಬಿಸಿಕೊಂಡು ಬಂದೆ.

      ಸುತ್ತ ಇರುವ ಪ್ರಪಂಚ ಇನ್ನೇನು ಮಲಗಲಿದೆ ಎನ್ನುವ ಸಮಯದಲ್ಲಿ ಪಾಸ್ವರ್ಡುಗಳಾಗಿರುವ ಹಳೆಯ ಪ್ರೇಮಿಗಳನ್ನು, ಬಿಟ್ಟುಬಂದ ಊರುಗಳನ್ನು ನೆನಪಿಸಿಕೊಂಡು ಲಾಗಿನ್ ಆಗುವ ಇಡೀ ಫ್ಲೋರು ಆ ಗಾಜಿನ ಗೋಡೆಗಳಾಚೆ ಬೆಳಕು ಹರಿಯುವುದನ್ನೇ ಕಾಯುವುದು ಸಾಮಾನ್ಯವಾಗಿತ್ತು. ಹಾಗೊಂದು ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಅವತರಿಸಿದ ಜಾಮಿನಿಯ ಗುಡ್ ಮಾರ್ನಿಂಗ್ ಮೆಸೇಜಿನ ಸಂಗತಿಯಿಂದಾಗಿ ಆ ಬೆಳಕಿಗೊಂದು ವಿಶೇಷ ಅರ್ಥ ಲಭ್ಯವಾಯಿತು. ಸುತ್ತ ಇರುವ ಇನ್ನೆಷ್ಟೋ ಜನರೂ ಇವಳಂತೆಯೇ ಯಾವುದೋ ಒಂದು ಮೆಸೇಜಿಗಾಗಿ ಕಾಯುತ್ತಿರಬಹುದೇ, ಹಾಗೆ ಇವರನ್ನು ತಲುಪುವ ಮಾರ್ನಿಂಗ್ ಮೆಸೇಜುಗಳು ಇವರ ನಡುಮಧ್ಯಾಹ್ನದ ನಿದ್ರೆಯನ್ನು ಸಲಹುವ ಸುಂದರ ಕನಸುಗಳಾಗಿರಬಹುದೇ ಎನ್ನುವ ಯೋಚನೆ ಆಗಾಗ ಹಾದುಹೋಗುತ್ತಿತ್ತು. ಯಾವುದೋ ಗಂಭೀರವಾದ ಮೀಟಿಂಗುಗಳಲ್ಲಿ, ಟ್ರೇನಿಂಗುಗಳಲ್ಲಿ ಮಾತನಾಡುತ್ತಿರುವವರ ಕಣ್ಣುಗಳನ್ನು ದಿಟ್ಟಿಸಿದರೆ ಅಲ್ಲಿಯೂ ಗುಡ್ ಮಾರ್ನಿಂಗ್ ಮೆಸೇಜಿನ ಪಸೆಯೊಂದು ಅಂಟಿಕೊಂಡಿರುವಂತೆ ಕಾಣಿಸಲಾರಂಭಿಸಿತು. ತಿಂಗಳಿಗೊಮ್ಮೆ ಪಾಸ್ವರ್ಡ್ ಬದಲಾಯಿಸಬೇಕೆಂಬ ಮೆಸೇಜು ಮಾನಿಟರ್ ಮೇಲೆ ಕಾಣಿಸಿಕೊಂಡಾಗಲೂ, ಎಲ್ಲರ ಬೆರಳುಗಳೂ ಆ ಮೆಸೇಜಿನವನ ಹೆಸರನ್ನೇ ಟೈಪ್ ಮಾಡುತ್ತಿರಬಹುದೆನ್ನುವ ಯೋಚನೆಯನ್ನು ತಡೆಹಿಡಿಯಲಾಗಲಿಲ್ಲ. ಆ ಅವನೇ ಇಲ್ಲಿ ಅವಳೂ ಆದಂತೆ, ಅವರಿಬ್ಬರ ನಡುವಿನ ವ್ಯತ್ಯಾಸಗಳೆಲ್ಲ ಒಂದೇ ಒಂದು ಮೆಸೇಜಿನಿಂದಾಗಿ ಕಾಣೆಯಾಗಿಹೋದಂತೆ, ಇಡೀ ಫ್ಲೋರಿಗೆ ಫ್ಲೋರೇ ಸಮಾನತೆಯ ಪ್ರಾಂಗಣವಾಗಿಹೋದಂಥ ಅನುಭವವಾಯಿತು. ಅದರೊಂದಿಗೇ ಈ ಜಾಮಿನಿಯ ಪಾಸ್ವರ್ಡ್ ಏನಿರಬಹುದೆನ್ನುವ ಕುತೂಹಲವೂ ಹುಟ್ಟಿಕೊಂಡಿತು.

      ಒಂದು ಸಂಜೆ ಏಳೂವರೆಯ ಸುಮಾರಿಗೆ ಇನ್ನೇನು ಲಾಗಿನ್ ಆಗಬೇಕು ಎನ್ನುವಷ್ಟರಲ್ಲಿ ಫ್ಲೋರಿನ ತುಂಬಾ ಗುಸುಗುಸು ಶುರುವಾಗಿತ್ತು. "ಕಾಸ್ಟ್ ಮ್ಯಾನೇಜ್ ಮಾಡೋದು ಕಷ್ಟ ಆಗ್ತಿದ್ಯಂತೆ, ಪ್ರಾಸೆಸ್ ವಾಪಸ್ ಹೋಗ್ತಿದ್ಯಂತೆ, ಪ್ರಾಡಕ್ಟ್ ಸ್ಟಾಪ್ ಆಗ್ತಿದ್ಯಂತೆ" ಹೀಗೇ ಒಬ್ಬೊಬ್ಬರು ಒಂದೊಂದು ಸುದ್ದಿಯೊಂದಿಗೆ ಗುಂಪುಗೂಡಿ ಚರ್ಚಿಸುತ್ತಿದ್ದರು. ಜಾಮಿನಿ ಮಾತ್ರ ಯಾವತ್ತಿನಂತೆ ಯಾವ ವಿದ್ಯಮಾನವೂ ತನಗೆ ಸಂಬಂಧಪಟ್ಟಿಲ್ಲವೆನ್ನುವಂತೆ ಲಾಗಿನ್ ಆಗಿ ಈಮೇಲ್ ಓದಲಾರಂಭಿಸಿದಳು. ವಿಪಿಯೊಂದಿಗೆ ಮೀಟಿಂಗ್ ನಿಗದಿಯಾಗಿರುವ ಈಮೇಲ್ ನನಗೆ ತೋರಿಸುತ್ತ, "ಸೀ, ಕುಛ್ ತೊ ಹೇ" ಎಂದವಳೇ ಮತ್ತೆ ಮೌನಕ್ಕೆ ಜಾರಿದಳು. ಫ್ಲೋರಿನಲ್ಲಿ ಗುಸುಗುಸು ಆರಂಭವಾದಾಗಲೆಲ್ಲ ಅದರ ಹಿಂದೊಂದು ಗಹನವಾದ ಸಂಗತಿ ಇದ್ದೇ ಇರುತ್ತದೆಯೆನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದ್ದರೂ, ನಾಳೆಯಿಂದಲೇ ಫ್ಲೋರು ಖಾಲಿಮಾಡುವ ಪ್ರಕ್ರಿಯೆ ಆರಂಭವಾಗಲಿದೆಯೆನ್ನುವುದನ್ನು ಒಪ್ಪಿಕೊಳ್ಳಲು ಮಾತ್ರ ಯಾರಿಂದಲೂ ಸಾಧ್ಯವಾಗಲಿಲ್ಲ. ಹೀಗೆ ಒಟ್ಟಿಗೆ ಕುಳಿತು ಕಾಫಿ ಕುಡಿಯುವ ಸಮಯ ಮತ್ತೆ ಯಾವತ್ತೂ ಸಿಗದೇ ಹೋದರೆ ಎನ್ನುವ ಕಳವಳದಲ್ಲಿ ನಾನಿದ್ದರೆ, ಜಾಮಿನಿ ಮಾತ್ರ ಅದೇ ರಿಂಗ್ ರೋಡಿನ ವಾಹನಗಳನ್ನು ಕಣ್ಮರೆಯಾಗುವವರೆಗೂ ನೋಡುತ್ತ ಕುಳಿತಿದ್ದಳು. ಇವತ್ತಾದರೂ ಇವಳು ಒಂದಾದರೂ ಮಾತನ್ನಾಡಬಾರದೇ, ಕೆಲಸ ಹೋದರೆ ಹೋಗಲಿ ಗುಡ್ ಮಾರ್ನಿಂಗ್ ಮೆಸೇಜಿನ ವಿಷಯವನ್ನಾದರೂ ಮುಂದುವರಿಸಬಾರದೇ ಎಂದು ನಾನು ಅಲವತ್ತುಕೊಳ್ಳುತ್ತಿದ್ದರೆ ಎರಡೂ ಮಗ್ಗುಗಳೊಂದಿಗೆ ಪ್ಯಾಂಟ್ರಿಯೊಳಗೆ ಮರೆಯಾಗಿಹೋದಳು. ಡೆಸ್ಕಿಗೆ ಬಂದವಳೇ ತನ್ನ ಮಗ್ಗನ್ನು ನನ್ನ ಕೈಗೆ ಕೊಟ್ಟು, ನನ್ನದನ್ನು ತನ್ನ ಪರ್ಸಿನೊಳಗೆ ಸೇರಿಸುತ್ತ "ರಿಂಗ್ ರೋಡ್ ಮೆಮರೀಸ್! ನಾನು ರಿಸೈನ್ ಮಾಡಿ ಬೇರೆ ಜಾಬ್ ಸರ್ಚ್ ಮಾಡ್ತೀನಿ" ಎಂದು ಮಾತು ಮುಗಿಸಿದಳು.

ನಾನು ಅಲ್ಲಿಯೇ ಬೇರೆ ಟೀಮೊಂದಕ್ಕೆ ಶಿಫ್ಟ್ ಆದೆ. ಜಾಮಿನಿ ಬೇರೊಂದು ಕಂಪನಿಯಲ್ಲಿ ಒಳ್ಳೆಯ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದಾಳೆಂದು ಮುಕುಂದ್ ಹೇಳಿದ್ದು ಬಿಟ್ಟರೆ ಅವಳಾಗಿಯೇ ಏನನ್ನೂ ಹೇಳಲಿಲ್ಲ; ನಾನು ಕೇಳಲೂ ಇಲ್ಲ. ಎಲ್ಲ ಪ್ರಶ್ನೋತ್ತರಗಳ ಮಟ್ಟವನ್ನು ದಾಟಿ ನಮ್ಮ ಸ್ನೇಹ ಉಳಿದುಕೊಂಡಿತ್ತೋ ಅಥವಾ ಕಾಫಿ-ಡಿನ್ನರ್ ಬ್ರೇಕುಗಳನ್ನು ಮೀರಿದ ಸಂಬಂಧವೊಂದು ಹುಟ್ಟಿಕೊಂಡಿರಲೇ ಇಲ್ಲವೋ ಎನ್ನುವುದನ್ನು ನಿರ್ಧರಿಸಲಾಗಲೂ ಇಲ್ಲ. “ಶಿವ, ಚಂಡಿಪ್ರಸಾದ್, ಶಾಂತಲಾ ವೀಕೆಂಡಿನಲ್ಲಿ ಜಾಮಿನಿಯನ್ನು ಭೇಟಿಯಾಗಿದ್ದರಂತೆ. ನೀನು ಹೋಗಲಿಲ್ವಾ?” ಎಂದು ರಾಮ್ ಪ್ರಶ್ನಿಸಿದಾಗ, “ಎಲ್ಲಿದ್ದಾಳಂತೆ ಅವ್ಳು? ಆರಾಮಾಗಿದಾಳಾ?” ಎಂದು ತಿರುಗಿ ಪ್ರಶ್ನಿಸುವುದರ ಹೊರತಾಗಿ ಬೇರೇನೂ ತೋಚಲಿಲ್ಲ. ಅವಳನ್ನು ಒಮ್ಮೆಯಾದರೂ ಭೇಟಿಯಾಗಬೇಕೆಂಬ ಬಯಕೆ ನನ್ನಲ್ಲೇಕೆ ಹುಟ್ಟಿಕೊಳ್ಳಲಿಲ್ಲ, ಗೊತ್ತಿಲ್ಲ. ರಿಂಗ್ ರೋಡಿನ ಸದ್ದಿಲ್ಲದ ಚಲನೆ ನಮ್ಮಿಬ್ಬರನ್ನು ಹಿಡಿದು ಕೂರಿಸಿದಂತೆ ಇನ್ಯಾವ ಸಂಗತಿಯೂ ನಮ್ಮನ್ನು ಆಕರ್ಷಿಸಲಿಕ್ಕಿಲ್ಲ ಎನ್ನುವ ನಂಬಿಕೆಯೊಂದು ಗಟ್ಟಿಯಾಗಿಹೋಯಿತು. ಫಾರ್ವರ್ಡ್ ಗುಡ್ ಮಾರ್ನಿಂಗ್ ಮೆಸೇಜುಗಳು ಬಂದರೂ ಶೋಕೇಸಿನಲ್ಲಿಟ್ಟಿದ್ದ ಜಾಮಿನಿಯ ಕಾಫಿ ಮಗ್ಗಿನ ಕಡೆಗೆ ಬೇಡವೆಂದರೂ ದೃಷ್ಟಿ ಹೋಗುತ್ತಿತ್ತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಕಿಂಡಿ

      ಜಾಮಿನಿಯ ಮದುವೆಯಾಯಿತಂತೆ ಎನ್ನುವುದು ಕೂಡಾ ಮುಕುಂದ್ ಬಂದು ಹೇಳಿದಾಗಲೇ ನನಗೆ ಗೊತ್ತಾಗಿದ್ದು. "ಮಮ್ಮಿ ತುಂಬಾ ಫೋರ್ಸ್ ಮಾಡ್ತಿದಾರೆ ಮ್ಯಾರೇಜ್ ಅಂತ" ಎಂದು ಅವಳು ಯಾವಾಗಲೋ ಒಮ್ಮೆ ಊಟದ ಸಮಯದಲ್ಲಿ ಹೇಳಿದ್ದು ನೆನಪಿನಲ್ಲಿ ಉಳಿದಿತ್ತಾದರೂ, ಅಂಥದ್ದೊಂದು ಕನಸು ಅವಳ ಕಣ್ಣುಗಳಲ್ಲಿ ಹೊಳಪು ಮೂಡಿಸಿದ ನೆನಪಿರಲಿಲ್ಲ. "ಇದಾನಲ್ಲ ನಿನ್ನ ಮಾರ್ನಿಂಗ್ ಮೆಸೇಜಿನ ಹುಡುಗ" ಎಂದು ನಾನು ನಕ್ಕಾಗಲೂ ಅವಳು ನಿರ್ಲಿಪ್ತಳಾಗಿಯೇ ಇದ್ದಳು. ಹಾಗೊಂದು ಹೊಸ ಕನಸು ಅವಳಲ್ಲಿ ಹುಟ್ಟಿಕೊಂಡಿದ್ದಕ್ಕಾಗಿ ಸಂತೋಷಪಡಬೇಕೋ, ಬದುಕನ್ನೇ ಬದಲಿಸುವ ಅಂಥದ್ದೊಂದು ನಿರ್ಧಾರ ತೆಗೆದುಕೊಳ್ಳುವಾಗಲೂ ನನ್ನನ್ನು ನೆನಪಿಸಿಕೊಳ್ಳಲಿಲ್ಲವಲ್ಲ ಎಂದು ಬೇಸರಿಸಿಕೊಳ್ಳಬೇಕೋ ಎನ್ನುವ ನಿರ್ಧಾರಕ್ಕೂ ಬರಲಾಗಲಿಲ್ಲ. ಅವಳು ನನ್ನನ್ನು ಮರೆತಿದ್ದಾಳೆ ಎನ್ನುವುದನ್ನು ಮಾತ್ರ ಮನಸ್ಸು ಒಪ್ಪಲೇ ಇಲ್ಲ. ನಮ್ಮ ನಡುವಿನ ಮಾತುಕತೆಗಿಂತ ಮೌನವನ್ನೇ ಅವಳು ಹೆಚ್ಚು ಪ್ರೀತಿಸುತ್ತಿದ್ದಳೆನ್ನುವುದನ್ನು ನಾನು ಬಲ್ಲೆ. ಹಾಗೆ ಹೇಳದೆಯೇ ಉಳಿದುಹೋದ ಮಾತುಗಳನ್ನು, ಅರ್ಧಕ್ಕೇ ನಿಂತುಹೋದ ಅವಳೊಂದಿಗಿನ ಸಂಭಾಷಣೆಗಳನ್ನು ನಾನು ಪ್ರೀತಿಸುತ್ತಲೇ ಇರುತ್ತೇನೆ.

      ಫಾರ್ವರ್ಡ್ ಮೆಸೇಜುಗಳನ್ನು ಓದುತ್ತ, ಪಾಸ್ವರ್ಡ್ ಬದಲಾಯಿಸುತ್ತ ಎರಡು ವರ್ಷಗಳು ಕಳೆದುಹೋಗಿದ್ದೇ ಗೊತ್ತಾಗಲಿಲ್ಲ. ಬೇರೆ ಟೀಮಿಗೆ ಹೋದರೂ ಶಿಫ್ಟ್ ಮಾತ್ರ ಬದಲಾಗಲಿಲ್ಲ. ಯಾವಾಗಲೋ ಒಮ್ಮೆ ಮೀಟಿಂಗಿಗೆಂದು ರಿಂಗ್ ರೋಡ್ ಕಾಣಿಸುವ ರೂಮಿಗೆ ಹೋದಾಗ ಜಾಮಿನಿಯ ನೆನಪು ತೀವ್ರವಾಗಿ ಕಾಡುತ್ತಿತ್ತು ಎನ್ನುವುದನ್ನು ಬಿಟ್ಟರೆ ಎಲ್ಲವೂ ಮಾಮೂಲಾಗಿಯೇ ಇತ್ತು. ಎಲ್ಲ ನೆನಪುಗಳ ಲಕ್ಷಣವೂ ಹಾಗೆಯೇ ಇರಬಹುದೇನೋ, ನೋವಿನದಿರಲೀ ನಲಿವಿನದಾಗಿರಲೀ ಕಾಲವೆನ್ನುವುದು ಅವುಗಳ ತೀವ್ರತೆಯನ್ನು ತನ್ನ ಹತೋಟಿಗೆ ತೆಗೆದುಕೊಂಡುಬಿಡುತ್ತದೆಯೇನೋ ಎನ್ನಿಸಿ ಕಳವಳ-ಸಮಾಧಾನಗಳೆರಡೂ ಒಟ್ಟೊಟ್ಟಿಗೇ ಅನುಭವಕ್ಕೆ ಸಿಗುತ್ತಿದ್ದವು.

ಒಂದು ಶುಕ್ರವಾರದ ಶಿಫ್ಟ್ ಮುಗಿಸಿ ಮನೆಗೆ ಬಂದು ಮಲಗಿದವಳಿಗೆ ಎಚ್ಚರವಾಗಿದ್ದು ಶನಿವಾರ ಸಂಜೆಯೇ. ಎದ್ದು ಮೊಬೈಲ್ ಮೇಲೆ ಕಣ್ಣಾಡಿಸಿದವಳಿಗೆ ಎಂಟ್ಹತ್ತು ಮೆಸೇಜುಗಳ ನಡುವೆ ಕಾಣಿಸಿದ್ದು ಜಾಮಿನಿಯ “ಗುಡ್ ಮಾರ್ನಿಂಗ್ ಡಿಯರ್”. ಸಂಜೆಯ ಹೊತ್ತಿನಲ್ಲಿ ಕಣ್ಣಿಗೆ ಬಿದ್ದ ಮಾರ್ನಿಂಗ್ ಮೆಸೇಜಿಗೆ ಹೇಗೆ ಪ್ರತಿಕ್ರಿಯಿಸುವುದೆಂದು ಗೊಂದಲವಾಗಿ, ನೂರಾರು ಎಮೋಜಿಗಳ ನಡುವೆ ಸದ್ದುಮಾಡದೆ ಕುಳಿತಿದ್ದ ಬಣ್ಣಬಣ್ಣದ ಹಾರ್ಟುಗಳನ್ನು ಹುಡುಕಿ ಕಳುಹಿಸಿದೆ. ತಕ್ಷಣವೇ ಅವಳಿಂದ ಬಂದ “ಮೀಟ್ ಮೀ ಒನ್ಸ್ ಪ್ಲೀಸ್” ಮೆಸೇಜಿಗೆ “ಓಕೆ” ಎಂದು ಉತ್ತರಿಸಿದ್ದು ನೆನಪಿದೆ; ಭೇಟಿಯಾಗದಿರಲು ಕಾರಣವೇನಿತ್ತು ಎನ್ನುವುದು ಮಾತ್ರ ನೆನಪಿಲ್ಲ. ಅಸಲಿಗೆ ನಾನು ಆ ಭೇಟಿಯನ್ನು ಮುಂದೂಡಿದ್ದೇನಷ್ಟೇ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಚೆಕ್‍ಔಟ್‌

      ಹಾಗೆ ನಾನು ಮುಂದೂಡಿದ್ದು ಕೇವಲ ಭೇಟಿಯನ್ನು ಮಾತ್ರ ಆಗಿರಲಿಲ್ಲ, ನಮ್ಮಿಬ್ಬರ ನಡುವೆ ಮತ್ತೆ ಸಂಭವಿಸಬಹುದಾಗಿದ್ದ ಅದೇ ಸುಂದರ ಮೌನವನ್ನು ಎನ್ನುವುದು ಅರಿವಿಗೆ ಬಂದಾಗ ತಡವಾಗಿಹೋಗಿತ್ತು. ಅವಳಿನ್ನು ಒಮ್ಮೆ ಕೂಡಾ ಒಂದೇ ಒಂದು ಮಾತಿಗೂ ಸಿಕ್ಕುವುದಿಲ್ಲ, ಬಯಸಿದರೂ ಆ ಚೆಂದದ ಮೌನ ಮತ್ತೆಂದೂ ಈ ಜನ್ಮದಲ್ಲಿ ಸಿಗುವುದಿಲ್ಲ ಎನ್ನುವುದು ತಿಳಿದಾಗ ಅತ್ತು ಸಮಾಧಾನ ಮಾಡಿಕೊಳ್ಳಬೇಕೆಂದರೂ ಸಾಧ್ಯವಾಗಲಿಲ್ಲ. 

      ಜಾಮಿನಿಯ ಸಾವಿನ ಸುದ್ದಿ ನನಗೆ ತಲುಪಿದ್ದು ಮುಕುಂದ್ ಕಳುಹಿಸಿದ ಮೆಸೇಜಿನ ಮುಖಾಂತರವೇ. ಈ ವೀಕೆಂಡಾದರೂ ಅವಳನ್ನು ಭೇಟಿಯಾಗಲೇಬೇಕು ಎನ್ನುವ ಯೋಚನೆಗೂ ನನಗೆ ಸಿಕ್ಕಿದ್ದು ನಾಲ್ಕೇ ದಿನಗಳ ಅವಕಾಶ. ಐದನೇ ದಿನವೇ ತಾನು ಬೆಂಗಳೂರನ್ನು ಬಿಟ್ಟು ಗಂಡನ ಮನೆಗೆ ಶಿಫ್ಟ್ ಆಗುತ್ತಿರುವುದಾಗಿಯೂ, ಅಲ್ಲಿಯೇ ಬೇರೆ ಕೆಲಸ ಹುಡುಕಿಕೊಳ್ಳಲು ಪ್ರಯತ್ನಿಸುವುದಾಗಿಯೂ ಅವಳು ಕಳುಹಿಸಿದ್ದ ಮೆಸೇಜನ್ನು ನಾನು ಓದಿದ್ದು ಕೂಡಾ ತಡವಾಗಿಯೇ. "ಆಲ್ ದಿ ಬೆಸ್ಟ್" ಎನ್ನುವುದೋ ಅಥವಾ "ಟೇಕ್ ಕೇರ್" ಹೇಳುವುದೋ ಗೊಂದಲವಾಗಿ, ಎರಡೂ ಬೇಡವೆಂದು ಕಳಿಸಿದ್ದ ಹೂವಿನ ಎಮೋಜಿಗಳು ಅವಳನ್ನು ತಲುಪಿರಲೇ ಇಲ್ಲ. ಅವಳು ಗಂಡನೊಂದಿಗೆ ಆರಾಮಾಗಿ ಸಮಯ ಕಳೆಯುತ್ತಿದ್ದಿರಬಹುದೆಂದು ಊಹಿಸಿ ಸುಮ್ಮನಾಗಿದ್ದು ನಾನು ಮಾಡಿದ ಮತ್ತೊಂದು ತಪ್ಪಾಗಿತ್ತು ಎನ್ನುವುದು ಅರ್ಥವಾಗಿದ್ದು ಮುಕುಂದ್ ಕಳುಹಿಸಿದ ಮೆಸೇಜ್ ಓದಿದಾಗಲೇ.

      ಜಾಮಿನಿ ನನಗೆ ಮೆಸೇಜ್ ಮಾಡಿ ಎರಡೇ ಎರಡು ತಿಂಗಳಿಗೆ ಆ ಘಟನೆ ನಡೆದಿದ್ದು. ಮುಕುಂದನ ಯಾವ ಮೆಸೇಜಿಗೂ ಅವಳು ಉತ್ತರಿಸದೇ ಇದ್ದಾಗ ಅವನು ಅವಳಿಗೆ ಕರೆ ಮಾಡಿದ್ದ. ಅದನ್ನೂ ಸ್ವೀಕರಿಸದೇ ಇದ್ದಾಗ, ಮತ್ತೆಮತ್ತೆ ಪ್ರಯತ್ನಿಸಿದ್ದಕ್ಕೆ ಉತ್ತರಿಸಿದ್ದು ಅವಳ ಗಂಡನ ತಾಯಿ. ಆಕೆ ಹೇಳಿದ್ದಿಷ್ಟೇ, ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಜಾಮಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ; ಮತ್ತೆ ಅವಳನ್ನು ಸಂಪರ್ಕಿಸುವ ಪ್ರಯತ್ನ ಬೇಡ. ಅದಾಗಿ ಎರಡೇ ತಾಸಿಗೆ ಜಾಮಿನಿಯ ಫೇಸ್ಬುಕ್ ಪ್ರೊಫೈಲಿನಲ್ಲಿಯೂ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನುವ ಪೋಸ್ಟ್ ಕಾಣಿಸಿಕೊಂಡಿತ್ತು. ಎಲ್ಲರೂ ಅದನ್ನು ನಂಬಿಕೊಂಡು ಹಾಗೊಂದು ಸಾವನ್ನು ಒಪ್ಪಿಕೊಂಡರಾದರೂ ಇಲ್ಲಿ ನಾನು, ಅಲ್ಲಿ ಮುಕುಂದ್ ಇಬ್ಬರಿಗೂ ಜಾಮಿನಿಯಂಥ ಜಾಮಿನಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆನ್ನುವುದು ಒಪ್ಪಿಕೊಳ್ಳುವ ಸಂಗತಿಯಾಗಿರಲಿಲ್ಲ. 

      ಮುಕುಂದನಿಗೆ ಜಾಮಿನಿಯ ಬಹಳಷ್ಟು ಖಾಸಗಿ ವಿಷಯಗಳು ತಿಳಿದಿತ್ತೆನ್ನುವುದು ನನಗೆ ಗೊತ್ತಾಗಿದ್ದು ಅವಳ ಸಾವಿನ ನಂತರವೇ. ಒಂದೇ ಬಿಲ್ಡಿಂಗಿನಲ್ಲಿ ಕೆಲಸ ಮಾಡುತ್ತಿದ್ದ ನಾವು ಮೊದಲು ಎದುರುಬದುರಾದಾಗ ಹಾಯ್ ಹಲೋಗಳಿಗೆ ನಮ್ಮ ಪರಿಚಯವನ್ನು ಸೀಮಿತಗೊಳಿಸಿದ್ದರೂ, ಅವಳ ಸಾವಿನ ನಂತರ ದಿನಕ್ಕೊಮ್ಮೆಯಾದರೂ ಭೇಟಿಯಾಗಲಾರಂಭಿಸಿದೆವು. ನನಗೆ ಅವಳ ಮೌನ ಇಷ್ಟವಾದಂತೆ, ಅವನಿಗೆ ಅವಳ ಮಾತು ಪ್ರಿಯವಾಗಿತ್ತು ಎನ್ನುವುದು ನನಗೆ ಗೊತ್ತಾಗಿದ್ದೂ ಅವಳ ಸಾವಿನ ನಂತರವೇ. ನಾವು ಮೂವರೂ ಸೇರಿ ಸಂಭ್ರಮಿಸಬಹುದಾಗಿದ್ದ ಮಾತುಕತೆ, ಮೌನ, ನಗು ಎಲ್ಲವನ್ನೂ ಹೀಗೆ ಸಾವಿನೊಂದಿಗೆ ನೆನಪಿಸಿಕೊಳ್ಳಬೇಕಾಗಿಬಂದ ಪರಿಸ್ಥಿತಿಗೆ ನಾವಿಬ್ಬರೂ ನಮ್ಮನ್ನು ನಾವು ಶಪಿಸಿಕೊಂಡೆವು. ಅವನು ಯಾವ ಕಾರಣಕ್ಕೆ ಪಶ್ಚಾತ್ತಾಪಪಡುತ್ತಿದ್ದಾನೆ ಎನ್ನುವುದನ್ನು ಅವನು ಬಾಯಿಬಿಟ್ಟು ಹೇಳಲಿಲ್ಲ; ಅವಳು ನನ್ನನ್ನು ಭೇಟಿಯಾಗಲು ಬಯಸಿದ್ದ ವಿಷಯವನ್ನು ನಾನೂ ಬಾಯಿಬಿಡಲಿಲ್ಲ.

      "ಅವಳು ಗುಡ್ ಮಾರ್ನಿಂಗ್ ಮೆಸೇಜಿಗೆ ಕೊಟ್ಟ ಇಂಪಾರ್ಟನ್ಸ್ ತನ್ನ ಲೈಫಿಗೆ ಕೊಟ್ಟಿದ್ದಿದ್ರೆ!?" ಜಾಮಿನಿಯ ಕನ್ನಡ ಬೆರೆತ ಇಂಗ್ಲಿಷಿನ ಧಾಟಿಯಲ್ಲಿಯೇ ಇದ್ದ ಮುಕುಂದನ ಮಾತಿಗೆ ಚಕಿತಳಾಗಿದ್ದೆ. ಅದ್ಯಾವುದೋ ಮೆಸೇಜಿನ ವಿಷಯ ನನಗಿಂತ ಜಾಸ್ತಿ ಈತನಿಗೆ ತಿಳಿದಿರಬಹುದೆನ್ನುವ ಯೋಚನೆಗೆ ಸಣ್ಣದೊಂದು ನೋವಿನ ಅನುಭವವಾಯಿತು. ತೋರಿಸಿಕೊಳ್ಳದೇ, "ಯಾವ ಗುಡ್ ಮಾರ್ನಿಂಗ್ ಮೆಸೇಜು?" ಎಂದೆ. ಅದೇನೂ ಅಂಥ ದೊಡ್ಡ ಸಂಗತಿಯಾಗಿರಲಿಕ್ಕಿಲ್ಲ ಎಂದು ಅವಳು ಬದುಕಿದ್ದಾಗ ನಿರ್ಲಕ್ಷ್ಯಿಸಿದ್ದ ಒಂದು ಮೆಸೇಜಿನ ವಿಷಯ , ಅವಳ ಸಾವಿಗೆ ಕಾರಣವನ್ನು ಕಂಡುಹಿಡಿಯಲು ನೆರವಾಗುವ ಆಶಾಕಿರಣದಂತೆ ಕಾಣಿಸಿಕೊಂಡಿತು. ನನ್ನ ಪ್ರಶ್ನೆಗೆ ಉತ್ತರ ನೀಡದೇ, "ನಾಳೆ ಸಿಗ್ತೀನಿ" ಎಂದು ಹೊರಟುಹೋದ ಮುಕುಂದನನ್ನೇ ನೋಡುತ್ತ ನಿಂತಿದ್ದೆ. ಈತನೇ ಇರಬಹುದೇ ಅವಳ ಹಗಲು-ರಾತ್ರಿಗಳ ನೆಮ್ಮದಿಯನ್ನು ನಿರ್ಧರಿಸುತ್ತಿದ್ದ ಮೆಸೇಜಿನ ಹುಡುಗ ಎನ್ನುವ ಸಂದೇಹವೂ ಹುಟ್ಟಿಕೊಂಡಿತು.

      ಜಾಮಿನಿಯ ಪರಿಚಿತ ವಲಯದವರನ್ನೆಲ್ಲ ಹೇಗ್ಹೇಗೋ ಕಷ್ಟಪಟ್ಟು ಸಂಪರ್ಕಿಸಿ ಮಾಹಿತಿಗಳನ್ನು ಸಂಗ್ರಹಿಸತೊಡಗಿದ್ದ ಮುಕುಂದ್. ತಿಂಗಳುಗಟ್ಟಲೆ ಮುಂದುವರಿಸಿದ ಸತತ ಪ್ರಯತ್ನದ ಫಲವೆನ್ನುವಂತೆ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದ ಕೂಡಾ. ಜಾಮಿನಿ ಮದುವೆಯಾಗಿದ್ದ ಹುಡುಗ ಮೂಲತಃ ಗುಜರಾತಿನವನು. ಇವಳು ಕೆಲಸಕ್ಕೆ ಸೇರಿಕೊಂಡಿದ್ದ ಕಂಪನಿಯಲ್ಲಿಯೇ ಮ್ಯಾನೇಜರ್ ಆಗಿದ್ದ. ತಂದೆ-ತಾಯಿಯರ ಒಬ್ಬನೇ ಮಗ. ಇವಳು ಅಂತಹ ಆಸಕ್ತಿ ತೋರಿಸದಿದ್ದರೂ ತನ್ನ ತಂದೆ-ತಾಯಿಯರನ್ನೂ, ಇವಳ ತಾಯಿಯನ್ನೂ ಒಪ್ಪಿಸಿ ಮದುವೆಯಾಗಿದ್ದ. ಮಗ ಇವಳನ್ನು ಮದುವೆಯಾಗಿದ್ದು ಅವನ ತಾಯಿಗೆ ಇಷ್ಟವಿರಲಿಲ್ಲವೆಂದೂ, ಒಂದಲ್ಲ ಒಂದು ಕಾರಣ ಹುಡುಕಿ ಇವಳ ಪ್ರತಿ ತಿಂಗಳ ಸಂಬಳವನ್ನು ತನ್ನ ಕೈಗೆ ತಂದುಕೊಡುವಂತೆ ತಾಕೀತು ಮಾಡುತ್ತಿದ್ದಳೆಂದೂ, ಮದುವೆಯಾದ ನಾಲ್ಕೇ ತಿಂಗಳಿಗೆ ಮೊಮ್ಮಗುವಿನ ಪ್ರಸ್ತಾಪ ಎತ್ತಿದ್ದಳೆಂದೂ ಮುಕುಂದ ಹೇಳುತ್ತ ಹೋದಾಗ ಅವಳು ಹುಟ್ಟುವ ಮುಂಚೆಯೇ ತೆರೆಕಂಡಿರಬಹುದಾದ ಸಾಂಸಾರಿಕ ಚಲನಚಿತ್ರವೊಂದರ ಕತೆಯನ್ನು ಕೇಳಿಸಿಕೊಳ್ಳುತ್ತಿರುವ ಅನುಭವವಾಗಿತ್ತು. ಅವಳಿಗೆ ತಂದೆಯಾಗಲೀ, ಒಡಹುಟ್ಟಿದವರಾಗಲೀ ಇರಲಿಲ್ಲವೆನ್ನುವ ವಿಷಯವೂ ಮುಕುಂದ ಹೇಳಿದಮೇಲೆಯೇ ನನಗೆ ಗೊತ್ತಾಗಿದ್ದು.

      ಪ್ರತಿದಿನವೂ ಒಂದೊಂದು ಹೊಸ ಸಂಶೋಧನೆಯೊಂದಿಗೆ ಹಾಜರಾಗುತ್ತಿದ್ದ ಮುಕುಂದ ಹುಡುಕಿದ ಯಾವ ಕಾರಣಗಳಿಗೂ ಅವಳು ತನ್ನ ಇಡೀ ಬದುಕನ್ನೇ ಕೊಟ್ಟುಬಿಡುವಷ್ಟು ದುರ್ಬಲಳಲ್ಲ ಎಂದೇ ನಾನು ವಾದಿಸುತ್ತಿದ್ದೆ. ಅಷ್ಟಕ್ಕೂ ಜಾಮಿನಿ ಸತ್ತುಹೋಗಿದ್ದಾಳೆ ಎನ್ನುವುದನ್ನೇ ನಾನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅವಳು ಪ್ರತಿ ತಿಂಗಳೂ ಡಾಕ್ಟರ್ ಅಪಾಯ್ಟ್ಮೆಂಟ್ ಎಂದು ಓಡಾಡಿದ್ದು ತನಗೆ ಗೊತ್ತಿದೆ; ಕೆಲಸ ಬಿಟ್ಟಾದರೂ ಸರಿ ಮಗು ಮಾಡಿಕೊಳ್ಳಬೇಕು ಎನ್ನುವುದೇ ಅವಳ ಗೋಲ್ ಆಗಿತ್ತು ಎಂದು ಮುಕುಂದ್ ಹೇಳಿದಾಗ, ಗುಡ್ ಮಾರ್ನಿಂಗ್ ಮೆಸೇಜಿಗೆ ಹಂಬಲಿಸಿದಷ್ಟೇ ತೀವ್ರವಾಗಿ ಅವಳು ಮಗುವಿಗಾಗಿಯೂ ಹಂಬಲಿಸಿದ್ದಿರಬಹುದು ಎನ್ನುವ ಯೋಚನೆಯೇ ನೋವನ್ನುಂಟುಮಾಡಿತು. ಆ ನೋವನ್ನು ಹೇಳಿಕೊಳ್ಳಲೆಂದೇ ಅವಳು ನನ್ನನ್ನು ಭೇಟಿಯಾಗಲು ಬಯಸಿದ್ದಿರಬಹುದೇ, ಬೆಂಗಳೂರನ್ನು ಬಿಟ್ಟುಹೋಗುವ ನೋವನ್ನು ಕಡಿಮೆಮಾಡಿಕೊಳ್ಳಲು ನನ್ನ ಸಾಮೀಪ್ಯದ ಅಗತ್ಯ ಕಾಣಿಸಿಕೊಂಡಿರಬಹುದೇ, ಆ ಮಾರ್ನಿಂಗ್ ಮೆಸೇಜಿನ ನಿರೀಕ್ಷೆಯಲ್ಲಿ ಅವಳು ಸಾಯುವವರೆಗೂ ನೋವನ್ನನುಭವಿಸಿರಬಹುದೇ ಅಥವಾ ಅವಳ ಎಲ್ಲ ನೋವುಗಳ ಮೂಲ ಮುಕುಂದನೇ ಆಗಿರಬಹುದೇ! ಕೇಳಿಸಿಕೊಳ್ಳಲು ಅಲ್ಲಿ ನಾನಿರಲಿಲ್ಲ; ಹೇಳಲು ಈಗ ಇಲ್ಲಿ ಅವಳಿಲ್ಲ.

      ಒಂದೇ ಒಂದು ಸಾವಿನೊಂದಿಗೆ ಅವಳು ಬಚ್ಚಿಟ್ಟುಕೊಂಡ ಗುಟ್ಟುಗಳು, ಹೊಟ್ಟೆಯಲ್ಲಿಟ್ಟುಕೊಂಡ ಮಾತುಗಳು ಎಲ್ಲವೂ ಉಳಿದುಹೋಗಿದ್ದವು ಅಲ್ಲಲ್ಲಿಯೇ. ಇನ್ನು ನಾನೆಷ್ಟೇ ಪ್ರಯತ್ನಪಟ್ಟರೂ ನಿಜಸ್ವರೂಪದಲ್ಲಿ ಅವು ನನ್ನನ್ನೆಂದೂ ತಲುಪಲಾರವು ಎನ್ನುವುದು ಅರಿವಾದಾಗ ಪಾಪಪ್ರಜ್ಞೆಯನ್ನು ಹೊರತುಪಡಿಸಿ ಇನ್ನೇನೂ ಉಳಿದುಕೊಂಡಿರಲು ಸಾಧ್ಯವೇ ಇರಲಿಲ್ಲ. ಒಮ್ಮೆ ಅವಳನ್ನು ಭೇಟಿಯಾಗಿದ್ದಿದ್ದರೆ ಸಾವನ್ನು ತಪ್ಪಿಸಬಹುದಿತ್ತೇ, ಭೇಟಿಯನ್ನು ಮುಂದೂಡದಿದ್ದರೆ ಸಾವನ್ನು ಮುಂದೂಡಬಹುದಾಗಿತ್ತೇ ಎನ್ನುವ ಪ್ರಶ್ನೆಗಳೆಲ್ಲ ನೋವಾಗಿ ಮಾರ್ಪಾಡಾಗಿ ಉಳಿದುಕೊಂಡವು ನನ್ನಲ್ಲಿಯೇ. ಅವಳ ನೋವೆಲ್ಲವೂ ನನ್ನದೇ ಆಗಿಹೋದಂತೆ; ನನ್ನ ನೋವಿಗೆ ಸಾವೇ ಇಲ್ಲದಿರುವಂತೆ! ಅವಳ ಮಾತಿಗಾಗಿ ಹಂಬಲಿಸುವ ನಾನು; ನನ್ನೊಂದಿಗಿನ ಮೌನವನ್ನು ಪ್ರೀತಿಸುವ ಅವಳು! "ನಿನ್ನ ಮೌನಕ್ಕಿಂತ ಜಾಸ್ತಿ ನಿನ್ನ ನಗುವನ್ನೂ, ಮಾತನ್ನೂ ಪ್ರೀತಿಸುತ್ತೇನೆ ನಾನು ಜಾಮಿನಿ" ಎಂದು ಬಾಯಿಬಿಟ್ಟು ಹೇಳುವ ಅವಕಾಶ ಒಂದೇ ಒಂದು ಸಲ ಸಿಗಬಾರದಿತ್ತೇ!

      ಬಡಿಸದೇ ಉಳಿದುಹೋದ ಕೆಂಪುಚಟ್ನಿಯ ನೆನಪಿನ ಭಾರವನ್ನು ಹೊರಲಾರದಂಥ, ಸುಖ ನೀಡುತ್ತಿದ್ದ ಸಮಾನತೆಯ ಅನುಭವ ಸುಳ್ಳಾಗಿಹೋದಂಥ ಭಾವ!

ಮುಕುಂದ ಈಗಲೂ ಭೇಟಿಯಾಗುತ್ತಾನೆ. ನಮ್ಮ ಮಾತುಗಳಲ್ಲಿ ಜಾಮಿನಿ ಇನ್ನೂ ಜೀವಂತವಾಗಿಯೇ ಇದ್ದಾಳೆ; ನಮ್ಮ ನಡುವೆಯೇ ಸದ್ದುಮಾಡದೆ ಓಡಾಡಿಕೊಂಡಿರುವ ಹೆಣ್ಣುಮಕ್ಕಳ ಹೃದಯದಲ್ಲೂ! ಅವಳ ಸುಖ-ದುಃಖಗಳನ್ನು ನಿರ್ಧರಿಸುತ್ತಿದ್ದ ಆ ಗುಡ್ ಮಾರ್ನಿಂಗ್ ಮೆಸೇಜು ಇನ್ಯಾರದೋ ಹಗಲು-ರಾತ್ರಿಗಳ ಹಣೆಬರಹವನ್ನು ಬರೆಯುತ್ತಿರಬಹುದು! ರಿಂಗ್ ರೋಡಿನ ವಾಹನಗಳ ಸದ್ದು ಗೋಡೆಗಳಿಗೆ ಬಡಿದು ವಾಪಸ್ಸಾಗುತ್ತಿರಬಹುದು! ಮೌನವನ್ನು ಪ್ರೀತಿಸುವುದಕ್ಕೂ, ಸಹಿಸಿಕೊಳ್ಳುವುದಕ್ಕೂ, ಒಪ್ಪಿಕೊಳ್ಳುವುದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಅವಳಲ್ಲದೇ ಇನ್ಯಾರು ಕಲಿಸಿಕೊಡಬಹುದಿತ್ತು!

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮುಕ್ಕೋಡ್ಲು ಗ್ರಾಮ ಮತ್ತು ಅಂಚೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಧವಳ ಧಾರಿಣಿ ಅಂಕಣ: ಕಾಮವೆನ್ನುವುದು ಎಂತಹವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುತ್ತಾನೆ.

VISTARANEWS.COM


on

king dasharatha kaikeyi dhavala dharini column
Koo

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ದಕ್ಷಿಣ ಕನ್ನಡ

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Gangadhar Puttur : ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ (Yakshagana Artist) ಗಂಗಾಧರ ಪುತ್ತೂರು ಇಹಲೋಕ ತ್ಯಜಿಸಿದ್ದಾರೆ. ಮುಖದ ಬಣ್ಣವನ್ನು ಅಳಿಸುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

VISTARANEWS.COM


on

By

Yakshagana Artist No more
Koo

ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ (Heart attack) ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ (Yakshagana Artist) ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ.

ನಿನ್ನೆ ಬುಧವಾರ (ಮೇ 1) ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.

ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.

ಇದನ್ನೂ ಓದಿ: Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) (Srinivas Prasad) ಅವರು ತೀವ್ರ ಹೃದಯಾಘಾತದಿಂದ (Heart Aattack) ವಿಧಿವಶರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1:20ಕ್ಕೆ (Manipal Hospital ) ಅವರು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಇನ್ನು ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾಹಿತಿ ನೀಡಿದ್ದು, ಶ್ರೀನಿವಾಸ್ ಪ್ರಸಾದ್ ಅವರು ರಾತ್ರಿ 1:20ರ ಸುಮಾರಿಗೆ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಅವರ ಈ ಅಗಲಿಕೆ ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಂತವರು. ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡೋದಕ್ಕೆ ಬಿಟ್ಟು ಹೋಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟದ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದರು. ನನ್ನನ್ನು ಅವರು ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದ್ದಾರೆ ಯಾವುದೆ ವಿಚಾರ ಆಗಿದ್ದರೂ ಅವರ ಜೊತೆ ಚರ್ಚೆ ಮಾಡಿಯೇ ನಿರ್ಧಾರಕ್ಕೆ ಬರುತ್ತಿದೆ. ಈಗ ಯಾರ ಬಳಿ ಹೋಗಿ ಕೇಳಲಿ ಎಂದು ಅನಿಸಿ ಬಿಟ್ಟಿದೆ ಎಂದು ಭಾವುಕರಾಗಿ ಮಾತನಾಡಿದರು.

ಇದನ್ನೂ ಓದಿ:Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading
Advertisement
Drought Relief
ಕರ್ನಾಟಕ17 mins ago

Drought Relief: ಚುನಾವಣೆ ಖರ್ಚಿಗಾಗಿ ಬರ ಪರಿಹಾರ ತಡೆಹಿಡಿದ ಕಾಂಗ್ರೆಸ್‌ ಸರ್ಕಾರ: ಆರ್‌.ಅಶೋಕ್‌

Prajwal Revanna Case No evidence against me its a conspiracy says HD Revanna
ಕರ್ನಾಟಕ23 mins ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Beef smuggling suspected Hindu activists pelt stones at vehicle
ಯಾದಗಿರಿ43 mins ago

Beef Smuggling: ಗೋಮಾಂಸ ಸಾಗಾಟ ಶಂಕೆ; ಹಿಂದುಪರ ಕಾರ್ಯಕರ್ತರಿಂದ ವಾಹನಕ್ಕೆ ಕಲ್ಲು ತೂರಾಟ

Narendra Modi
ದೇಶ43 mins ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Vijay Namdevrao Wadettiwar
ದೇಶ1 hour ago

ಮುಂಬೈ ದಾಳಿ ಉಗ್ರ ಅಜ್ಮಲ್‌ ಕಸಬ್‌ ನಿರಪರಾಧಿ ಎಂದ ಕಾಂಗ್ರೆಸ್‌ ನಾಯಕ; ಭುಗಿಲೆದ್ದ ವಿವಾದ!

Beer Shortage
ಕರ್ನಾಟಕ1 hour ago

Beer Shortage: ಬೇಸಿಗೆಯಲ್ಲಿ ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್; ಇನ್ನೆರಡು ತಿಂಗಳು ಬಿಯರ್‌ ಸಿಗೋದು ಕಷ್ಟ!

Torn Jeans Styling Tips
ಫ್ಯಾಷನ್2 hours ago

Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

lok sabha Election 2024 Bus Fare Hike
Lok Sabha Election 20242 hours ago

Lok Sabha Election 2024 : ಮತದಾನದ ಹಬ್ಬದಲ್ಲೂ ಲೂಟಿಗೆ ಇಳಿದ ಖಾಸಗಿ ಬಸ್‌! ವೋಟ್‌ ಹಾಕಲು ಬಸ್‌ ಏರುವವರಿಗೆ ಟಿಕೆಟ್ ದುಬಾರಿ!‌

IPL 2024
Latest2 hours ago

IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

MI vs SRH
ಕ್ರೀಡೆ2 hours ago

MI vs SRH: ಸನ್ ಸ್ಟ್ರೋಕ್​ನಿಂದ ತಪ್ಪಿಸಿಕೊಂಡೀತೇ ಮುಂಬೈ ಇಂಡಿಯನ್ಸ್​​?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case No evidence against me its a conspiracy says HD Revanna
ಕರ್ನಾಟಕ23 mins ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ43 mins ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌