ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು

ಇಂಟರ್‌ಸೆಕ್ಸ್ ಮಕ್ಕಳು ಹುಟ್ಟಿದ ಮೇಲೆ ಏನು ಮಾಡುವುದಾದರೂ ಅವರ ಅಭಿಪ್ರಾಯ ಪರಿಗಣನೆಗೆ ತೆಗೆದುಕೊಳ್ಳಬೇಕಾ ಬೇಡವಾ? ನಮಗೆ ತೋಚಿದ್ದನ್ನು ನಾವು ಮಾಡಿದೆವು. ಮಕ್ಕಳು ಮುಂದೆ ‘ವಿ ಆರ್ ನಾಟ್ ಜಸ್ಟ್ ಯುವರ್‌ ಪಪೆಟ್ಸ್!’ ಎಂದು ಕಣ್ಣೀರು ಹಾಕಿದರೆ…. ಓದಿ, ವಿಸ್ತಾರ ಯುಗಾದಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪುರಸ್ಕೃತ, ದಾದಾಪೀರ್‌ ಜೈಮನ್‌ ಅವರ ಸಣ್ಣಕಥೆ.

VISTARANEWS.COM


on

short story dadapeer jyman
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
dadapeer jyman
ದಾದಾಪೀರ್‌ ಜೈಮನ್

:: ದಾದಾಪೀರ್‌ ಜೈಮನ್

ಕನಸಿನಲ್ಲೊಬ್ಬ ಹುಡುಗ ಬರುತ್ತಾನೆ. ಉದ್ದಗೆ ಬೆಳೆದ ಕೂದಲಿದೆ. ಬರಿಮೈ ಹಾಗೂ ಅನಾಥ ಪಾದಗಳ ಅವನ ಕೈಯಲ್ಲೊಂದು ಕಟ್ಟಿಗೆಯ ಕೋಲಿದೆ. ಅದನ್ನು ಚಮತ್ಕಾರದ ಮಂತ್ರದಂಡದಂತೆ ಹಿಡಿದು ಗಾಳಿಯಲ್ಲಿ ಬೀಸುತ್ತಾ ಬರುತ್ತಾನೆ. ಚಿತ್ರವಿಚಿತ್ರಗಳನ್ನು ಸೃಷ್ಟಿಸುತ್ತಾ ನಡೆಯುತ್ತಿದ್ದಾನೆ. ಮೊದಲು ಊರಿನ ದಿಡ್ಡಿಬಾಗಿಲು ಪ್ರವೇಶಿಸುತ್ತಾನೆ. ಊರ ಗಲ್ಲಿಗಳ ತುಂಬಾ ಅಡ್ಡಾಡುತ್ತಾನೆ. ಕುಣಿಯುತ್ತಾನೆ. ಓಡುತ್ತಾನೆ. ಮಾಂತ್ರಿಕನ ಹಾಗೆ ನಡೆಯುತ್ತಾನೆ. ಒಮ್ಮೊಮ್ಮೆ ತೆವಳುತ್ತಾನೆ… ಮೆಲ್ಲಗೆ ಮನೆಯೊಳಗೆ ಲಗ್ಗೆ ಇಡುತ್ತಾನೆ. ಕಿಟಕಿಯ ಪೊಳಕುಗಳಿಂದ ಕೋಣೆಗಳಲ್ಲೂ ಇಣುಕುತ್ತಾನೆ. ಕೈಯಲ್ಲಿ ಗಾಳಿಗುದ್ದಾಟ ನಡೆಸುತ್ತಲೇ ಇದ್ದಾನೆ. ಅವನು ಮಾತನಾಡುತ್ತಿಲ್ಲ. ಬಹುಷಃ ಅವನಿಗೆ ಭಾಷೆಯಿಲ್ಲ. ಅಥವಾ ಅವನಿಗೆ ಇಡೀ ಪ್ರಪಂಚದ  ಭಾಷೆಯೆಲ್ಲಾ ಒಂದೇ ಎನಿಸುತ್ತಿರಬಹುದು…  ಅದೆಷ್ಟೋ ಹೊತ್ತು ಕನ್ನಡಿಯ ಮುಂದೆ ಕುಳಿತುಕೊಳ್ಳುತ್ತಾನೆ. ಮಹಾಮೌನದದಲ್ಲಿ ತನ್ನ ಪ್ರತಿಬಿಂಬವನ್ನೇ ನೋಡುತ್ತಾ ಕೈಗೋಲನ್ನು ಮತ್ತೆ ಆಡಿಸುವಾಗ ಅದು ಎರಡಾಗುವ ಚಮತ್ಕಾರವನ್ನು ಕಂಡು ಜೋರಾಗಿ ನಗುತ್ತಾನೆ. ಅದೇ ಹೊತ್ತಿಗೆ ನಾನವನನ್ನು ನೋಡಿಬಿಡುತ್ತೇನೆ. ಅವನೂ ನನ್ನನ್ನು ನೋಡಿ ಮುಗುಳ್ನಕ್ಕು ನನ್ನ ಮುಂದೆ ಅವನ ಕೈಗೋಲನ್ನು ವೃತ್ತಾಕಾರವಾಗಿ ತಿರುಗಿಸುತ್ತಾನೆ. ಅವನನ್ನು ಕರೆಯಲು ನನಗೆ ಮಾತು ಬರುವುದಿಲ್ಲ. ನಾಲಗೆಯ ತುದಿವರೆಗೂ ಬಂದದ್ದು ಮಾತಾಗುವುದಿಲ್ಲ. ಇನ್ನೇನು ಮಾತಾಯಿತು ಎನ್ನುವಲ್ಲಿಗೆ ಮುಗಿಲುsss ಎಂದು ಜೋರಾಗಿ ಕೂಗಿ ಎಚ್ಚರಾಗುತ್ತೇನೆ. ಕಣ್ಣು ಬಿಟ್ಟಾಗ ಏದುಸಿರು ಬಿಡುತ್ತಿರುತ್ತೇನೆ. ಹಣೆಯ ಮೇಲೆ ಬೆವರಿನ ಹನಿಗಳು ಕಿತ್ತು ಬರುತ್ತವೆ. ಇವರು ಪ್ರತಿದಿನ ಅದೇ ಸಮಾಧಾನದಿಂದ ಎದ್ದು ನನ್ನ ಬೆನ್ನದಡವಿ ನೀರು ಕೊಟ್ಟು ಸ್ವಲ್ಪ ಹೊತ್ತು ದಿಂಬಿಗಾನಿಸಿ ಕೂರಿಸಿ ದೊಡ್ಡ ದೀಪ ಹತ್ತಿಸಿ ಫ್ಯಾನನ್ನು ಚೂರು ಜೋರು ಮಾಡಿ ಬೆನ್ನದಡವುತ್ತಾ ನಿದ್ದೆ ಹೋಗುತ್ತಾರೆ. ನಾನು ಅದೆಷ್ಟೋ ಹೊತ್ತು ಕೂತೆ ಇರುತ್ತೇನೆ.

*** 

ನನಗಿದನ್ನೆಲ್ಲಾ ಖಂಡಿತಾ ಬರೆಯಬೇಕಿರಲಿಲ್ಲ. ಏಕೆಂದರೆ ನನಗೆ ಇತ್ತೀಚಿಗೆ ನನ್ನ ಗಂಡನ ಹಾಗೆ ಈ ಜಗತ್ತನ್ನು ಉದ್ಧರಿಸಬೇಕೆನ್ನುವ ಯಾವ ಹಕೀಕತ್ತೂ ಇಲ್ಲ. ಅವರ ಹಾಗೆ ನಾನೀಗ ಪೊಲಿಟಿಕಲ್ ಜೀವಿಯೂ ಅಲ್ಲ. ಜಗತ್ತು ಕರೆಯುವ ಹಾಗೆ ಆಂದೋಲನ ಜೀವಿಯೂ ಅಲ್ಲ. ನಾನೊಬ್ಬಳು ತಾಯಿ. ಕೇವಲ ತಾಯಿ. ಅದರ ಬಗ್ಗೆಯೂ ನನಗೆ ಗೊಂದಲವಿದೆ. ನನ್ನನ್ನು ಇದನ್ನೆಲ್ಲಾ ಬರೆಯಹಚ್ಚಿರುವುದು ನನ್ನ ಥೆರಪಿಸ್ಟ್ ಸುಮಾ. ಮತ್ತೆ ಮತ್ತೆ ಕನಸಿನಲ್ಲಿ ಸುಳಿಯುವ ಆ ಹುಡುಗನ ಚಿತ್ರ. ನಿದ್ದೆ ಇಲ್ಲದ ರಾತ್ರಿಗಳು. ಭಯ. ಇವೆಲ್ಲದರಿಂದ ಹೊರಬರಲು ಬರೆವುದೊಂದೇ ದಾರಿ ಅಂದಳು ಸುಮಾ!  ಚಳುವಳಿಗಳ ಕರಪತ್ರಗಳ ಕಂಟೆಂಟನ್ನು ಸಲೀಸಾಗಿ ಬರೆಯುತ್ತಿದ್ದ ನಾನು ನನ್ನ ಡೈರಿಯನ್ನು ದಿನನಿತ್ಯ ಬರೆಯಲೇ ಇಲ್ಲ. ‘ಭೂಮಿ ಪ್ರಕಾಶನ’ ಸಂಸ್ಥೆಯ ಒಡತಿಯಾದ ಮೇಲೂ ಅದೆಷ್ಟೇ ಪುಸ್ತಕಗಳನ್ನು ಓದಿದರೂ, ನಮ್ಮ ಪ್ರಕಾಶನ ಸಂಸ್ಥೆಯಿಂದ ಬೆಳಕಿಗೆ ಬಂದ ಪುಸ್ತಕಗಳಿಗೆ ಪ್ರಕಾಶಕಿಯ ಮಾತುಗಳನ್ನು ಬರೆಯುವಾಗಲೂ ಅದು ನನ್ನ ಖಾಸಗಿ ಬದುಕಿನ ವಿಮರ್ಶೆಯ ಹತ್ತಿರಕ್ಕೂ ಸುಳಿಯಲಿಲ್ಲ. ಅಥವಾ ಅದರಿಂದ ದೂರವಿರುವ ಪುಸ್ತಕಗಳನ್ನು ಮಾತ್ರ ನಾನು ಪ್ರಕಾಶಿಸಿದೆನೆ? ಜಗತ್ತಿನಲ್ಲಿ ಎರಡೇ ಇರುವುದು ಒಂದು ಪಂಜರ ಮತ್ತೊಂದು ಅದರಿಂದ ತಪ್ಪಿಸಿಕೊಳ್ಳುವುದು. ಟ್ರ್ಯಾಪ್ ಅಂಡ್ ಎಸ್ಕೇಪ್. ಮತ್ತದಕ್ಕೆ ನಾವು ಕೊಟ್ಟುಕೊಳ್ಳುವ ಕಾರಣಗಳು. ನಾನು ನನ್ನಿಂದ ಬರಿ ತಪ್ಪಿಸಿಕೊಂಡು ಬಂದೆನೆ? ಹೊರಗಡೆಯಿಂದ ನೋಡಿದಾಗ ಎಲ್ಲಾ ಸರಿಯಾಗಿಯೇ ಇದೆ ಅನಿಸುತ್ತದಲ್ಲ! ಈಗ ಮಕ್ಕಳಿಬ್ಬರು ಬೆಳೆದು ದೊಡ್ಡವರಾಗಿ ಕೇಳುವ ಪ್ರಶ್ನೆಗಳು ನನ್ನ ಇಡೀ ಜೀವನವನ್ನು ಅಣಕಿಸುವ ಸಂದರ್ಭ ಬಂದಿದೆಯಾದ್ದರಿಂದ ಈಗ ಬರೆಯದೆ ವಿಧಿಯಿಲ್ಲವೆನಿಸುತ್ತಿದೆಯೇ?  ನನ್ನ ಅಸ್ತಿತ್ವವನ್ನು ಮರು ಕಟ್ಟಿಕೊಳ್ಳುವುದು ಎಂದರೆ ಬರೆಯುವುದು ಎಂದರ್ಥವೇ? ಈಗ ಎಲ್ಲದಕ್ಕೂ ಕಾರಣಗಳನ್ನು ಹೆಕ್ಕಿಕೊಳ್ಳಬೇಕೇ? ಅದಕ್ಕಿದು ತಕ್ಕನಾದ ವಯಸ್ಸೇ? ಹೀಗೆ ಯೋಚಿಸುವಾಗ ಸುಮಾ ಹೇಳಿದ್ದು ನೆನಪಾಗುತ್ತದೆ ‘ಯು ಜಸ್ಟ್ ರೈಟ್ ಭಾಗೀರಥಿ. ಜಸ್ಟ್ ರೈಟ್ ಫಾರ್ ಯುವರ್ ಸೆಲ್ಫ್’. ಅಥವಾ ಕನಸಿನಲ್ಲಿ ಬರುವ ಆ ಹುಡುಗ ಬರೆಯಲೇ ಬೇಕೆಂದು ಹಠ ಹಿಡಿದಿದ್ದಾನೆಯೇ? ನಾನು ಯಾವುದಕ್ಕಾಗಿ ಬರೆಯುತ್ತೇನೆ? 

*** 

ನಾನು ಭಾಗೀರಥಿ. ಗಂಡನ ಹೆಸರು ಪ್ರಸಾದ್. ನಮಗಿಬ್ಬರು ಮಕ್ಕಳು ಭೂಮಿ ಮತ್ತು ಮುಗಿಲು. ಮನೆಯಲ್ಲಿ ವಸು ಚಿಕ್ಕಿ ಕೂಡ ಇದ್ದಾರೆ. ನಾನೊಂದು ಪ್ರಕಾಶನ ಸಂಸ್ಥೆ ನಡೆಸುತ್ತೇನೆ. ಭೂಮಿ ಪ್ರಕಾಶನ. ಅದು ಮೊದಲ ಮಗಳ ಮುದ್ದಿನ ಕಾರಣಕ್ಕೆ ಇಟ್ಟ ಹೆಸರು. ಮುಗಿಲು ನನ್ನ ಮಗ. ಮದುವೆಯ ವಯಸ್ಸಾಗಿದೆ. ಪ್ರಸಾದ್ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಆರ್. ಟಿ. ನಗರದ ಮುಖ್ಯಮಂತ್ರಿಗಳ ಖಾಸಗಿ ಮನೆಯಿಂದ ಒಂದು ಮುನ್ನೂರು ಮೀಟರ್ ದಾಟಿದರೆ ನಮ್ಮ ಮನೆ. ಸ್ವಿಮ್ಮಿಂಗ್ ಪೂಲ್ ಇರುವ ಮನೆ. ಮುಗಿಲು ಹುಟ್ಟಿದ ಮೇಲೆ ಈ ಮನೆಗೆ ಬಂದದ್ದು! ಪ್ರಸಾದ್ ಮತ್ತೆ ನಾನು ವಿಶ್ವವಿದ್ಯಾಲಯದಿಂದ ಸ್ನೇಹಿತರು. ಆಗಿನಿಂದಲೇ ನಾವು ಜನಪರ ಚಳುವಳಿಗಳಲ್ಲಿ, ವಿದ್ಯಾರ್ಥಿ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದೆವು. ವಿದ್ಯಾರ್ಥಿ ಸಂಘಟನೆಗಳ, ಸಾಂಸ್ಕೃತಿಕ ಸಂಘಗಳ ನಾಯಕರಾಗಿದ್ದ ನಾವು ಪ್ರೇಮಿಗಳೂ ಆದೆವು. ಕ್ರಾಂತಿಯ ಕಿಚ್ಚು ಪ್ರೇಮದ ಕಿಚ್ಚು ಒಳಗೊಳಗೇ ಇಬ್ಬರನ್ನೂ ಭಸ್ಮ ಮಾಡುತ್ತಿತ್ತು. ವಾರಕ್ಕೊಮ್ಮೆ ಹೋಟೆಲ್ ರೂಮುಗಳಲ್ಲಿ ಒಬ್ಬರ ತೆಕ್ಕೆಯಲ್ಲಿ ಮತ್ತೊಬ್ಬರು ಒಂದಾಗುವಾಗ ನಾವೇ ಶಿವ ಶಿವೆಯರೆಂದರೆನಿಸಿಹೋಗುತ್ತಿತ್ತು. ಇಬ್ಬರಿಗೂ ಮದುವೆ ಎನ್ನುವ ವಿಷಯದಲ್ಲಿ ನಂಬಿಕೆಯಿರಲಿಲ್ಲ. ಹೇಗೂ ಒಟ್ಟಿಗೆ ಇರುವುದೇ ನಿಜವೆಂದ ಮೇಲೆ ಮದುವೆಯಾಗುವುದರಲ್ಲಿ ತಪ್ಪೇನು ಅಂದುಕೊಳ್ಳುವಾಗಲೇ ಮದುವೆಯೂ ಆಯಿತು. ನನ್ನ ಮತ್ತು ಅವನ ನಡುವೆ ಮೊದಲ ಬಾರಿಗೆ ಮನಸ್ತಾಪ ಬಂದಿದ್ದು ಮಗುವಿನ ವಿಷಯದಲ್ಲಿ. ನನಗೆ ಮಕ್ಕಳೆಂದರೆ ಆಗುತ್ತಿರಲಿಲ್ಲ. ನನ್ನ ದೇಹದಿಂದ ಏನೋ ಒಂದು ಹೊರಗಡೆ ಬರುತ್ತದೆ ಎನ್ನುವ ಕಲ್ಪನೆಯೇ ನನ್ನ ದೇಹದಲ್ಲಿ ಮುಳ್ಳು ಮೂಡಿಸುತ್ತಿತ್ತು. ಆದರೆ ಪ್ರಸಾದನಿಗೆ ಮಕ್ಕಳೆಂದರೆ ಪಂಚಪ್ರಾಣ. ಇಂತಹ ಕೆಟ್ಟ ಪ್ರಪಂಚದಲ್ಲಿ ಮಕ್ಕಳನ್ನು ಹುಟ್ಟಿಸುವ ಐಡಿಯಾಕ್ಕೇನೆ ಹೆದರುತ್ತಿದ್ದನಾದರೂ ಒಳಗೊಳಗೇ ಮಗು ಇದ್ದರೆ ಚೆನ್ನ ಎನಿಸುವ ಇರಾದೆಯೂ ಇತ್ತು. ಕೊನೆಗೂ ಈ ದ್ವಂದ್ವವನ್ನು ದಾಟಿ ನಮಗೆ ಮಕ್ಕಳಾಯಿತು. ಇಷ್ಟು ಬರೆದು ಕನ್ನಡಿಯನ್ನು ನೋಡಿದೆ. ಆ ಕೈಗೋಲಿನ ಹುಡುಗ ಕನ್ನಡಿ ನೋಡುತ್ತಾ ಮುಗುಳ್ನಗುತ್ತಿದ್ದ. 

*** 

ಮೊನ್ನೆ ಇವರು ಫೋನಿನಲ್ಲಿ ಜೋರಾಗಿ ಕೂಗುತ್ತಿದ್ದರು. ‘ಏನ್ರೋ ಇವತ್ತು ಫುಲ್ ಐಟಿ ಸೆಲ್ ನನ್ನ ಟಾರ್ಗೆಟ್ ಮಾಡ್ತಿದೆ. ಏನ್ ಸಮಾಚಾರ? ನಾನು ಮೊನ್ನೆ ಹಾಕಿದ ಪೋಸ್ಟ್ ಇಂದ ಫುಲ್ ಉರಿದು ಹೋಗಿದ್ಯಾ? ಇರ್ಲಾ! ನಾನೂ ನೋಡಿಕೊಳ್ತೀನಿ.’ ಎಂದು ಜೋರಾಗಿ ವದರಿ ಫೋನಿಟ್ಟರು. ಇಡೀ ಸೋಶಿಯಲ್ ನೆಟ್ವರ್ಕಿಂಗ್ ಸೈಟ್ ತುಂಬಾ ಇವರ ವೈಯಕ್ತಿಕ ಜೀವನದ ಬಗ್ಗೆ ಹೊಲಸು ಬರೆದಿದ್ದರು. ಇವರು ಬೈ ಸೆಕ್ಷುಯಲ್ ಎನ್ನುವ ವಿಷಯ ಹೇಗೋ ತಿಳಿದು ಇವರ ಗೇ ಬಾಯ್ ಫ್ರೆಂಡ್ ಜೊತೆ ಇದ್ದ ಫೋಟೋಗಳನ್ನು ಸೆರೆ ಹಿಡಿದು ಅವೆಲ್ಲ ಕಡೆ ಹರಿದಾಡುತ್ತಿದ್ದವು. ಇವೆಲ್ಲದರಲ್ಲಿ ಪಾಪ ಆ ಹುಡುಗ ಸಿಕ್ಕಿಹಾಕಿಕೊಂಡಿದ್ದ. ಆಗ ಆ ಹುಡುಗನ ಖಾಸಗಿತನದ ಬಗ್ಗೆ ಯಾರೂ ಕಿಂಚಿತ್ ಯೋಚನೆಯನ್ನೂ ಮಾಡಿರಲಿಲ್ಲ. ನನ್ನ ಮೇಲೆ ಕಾಳಜಿ ತೋರಿ ಒಂದಿಷ್ಟು ಪೋಸ್ಟುಗಳೂ ಕೂಡ ಬಂದಿದ್ದವು. ನನಗೇ ಇಲ್ಲದ ಸಮಸ್ಯೆ ಇವರಿಗೆ ಅದು ಹೇಗೋ ಹುಟ್ಟಿಕೊಂಡಿತ್ತು?! ಇಲ್ಲ ಇಲ್ಲ, ನನಗೆ ಆಗಾಗ ಹೊಟ್ಟೆಕಿಚ್ಚಾಗುತ್ತಿತ್ತು. ಒಬ್ಬರನ್ನು ಹಂಚಿಕೊಳ್ಳುವುದು ತುಂಬಾ ಕಷ್ಟ. ಅದು ನಮ್ಮ ಪ್ರೀತಿ ಪಾತ್ರರನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳುವುದು ಆಗುವುದೇ ಇಲ್ಲ. ಆಮೇಲೆ ಈ ಹೊಟ್ಟೆಕಿಚ್ಚನ್ನು ನಿಯಂತ್ರಿಸೋದು ಎಷ್ಟು ಕಷ್ಟ?! ಗೋಡೆಗೆ ತಟ್ಟಿದ ಸಗಣಿ ಬೆರಣಿಯ ಹಾಗೆ ಮುಖದ ಮೇಲೆ ಕಾಣುತ್ತದೆ. (ಇದಿಷ್ಟು ನಿಜವನ್ನು ಒಪ್ಪಿಕೊಳ್ಳದೆ ಇದ್ದರೆ ನನಗಷ್ಟೇ ಕಾಣುವ ಹುಡುಗನಿಗೆ ಕೋಪ ಬರುತ್ತಿತ್ತು. ಅವನಾಗ ನನ್ನತ್ತ ತಿರುಗಿ ತನ್ನ ಮಂತ್ರದಂಡವನ್ನು ಪ್ರಯೋಗ ಮಾಡಿದ್ದರೆ?! ಭಯ!!! )  ಹಾಗಂತ ಇವರೇನೂ ಸಾಚಾ ಅಂತೇನೂ ನಾನು ಹೇಳುತ್ತಿಲ್ಲ. ಮತ್ತೊಮ್ಮೆ ಯಾರೋ ಇವರ ಫ್ರೆಂಡ್ ಮನೆಗೆ ಬಂದಾಗ ‘ಆ ರಾಜಕಾರಣಿದು ಬಹಳ ಆಗಿದೆ ಮಾರ್ರೆ. ಆ ಮನುಷ್ಯ ಹೆಣ್ಣುಮಕ್ಕಳ ವಿಷ್ಯದಲ್ಲಿ ತುಂಬಾ ವೀಕಂತೆ! ಚೂರು ವಿಚಾರಿಸಿ ಹೇಳಿ. ಹನಿ ಟ್ರ್ಯಾಪ್ ವ್ಯವಸ್ಥೆ ಮಾಡುವ!’ ಎಂದು ಹೇಳಿದ್ದನ್ನ ನಾನೇ ಕೇಳಿಸಿಕೊಂಡಿದ್ದೇನೆ. ನನಗೀಗ ಭಯ. ಎಲ್ಲಿ ಏನಾಗಿಬಿಡುತ್ತದೋ ಎನ್ನುವ ಭಯ. ನಾನು ಮೊದಮೊದಲಿಗೆ ತುಂಬಾ ಧೈರ್ಯವಂತೆಯಾಗಿದ್ದೆ. ಮಕ್ಕಳು ಹುಟ್ಟಿದ ಮೇಲೆ ನಾನಿಷ್ಟು ಮೆತ್ತಗಾದೆನೆ? ತಾಯಿಯಾಗುವುದೆಂದರೆ ಅಳ್ಳಕವಾಗುವುದೇ? ನನ್ನ ಮತ್ತು ಪ್ರಸಾದ್ ನಡುವೆ ಹೇಳತೀರದ ಒಂದು ಪವರ್ ಡೈನಾಮಿಕ್ಸ್ ಯಾಕೆ ಮೂಡುತ್ತಿದೆ? ಅದಕ್ಕೆ ನಾನೇ ಅವಕಾಶ ಮಾಡಿಕೊಡುತ್ತಿರುವೆನೆ? ತಾಯಿಯಾದಾಗಿನಿಂದಲೇ ಇದೆಲ್ಲ ಶುರುವಾಯಿತೇ? ಅಥವಾ ಇದು ಪ್ರಸಾದನ ಹುನ್ನಾರ ಮಾತ್ರವಲ್ಲ ಅಲ್ಲವೇ?!! ತಾಯಿಯಾದರೂ ನಾನು ನಿಜವಾದ ತಾಯಿಯಾದೆನೆ?  

ಹುಡುಗ ಅದ್ಯಾಕೋ ಚೂರು ಹೊತ್ತು ಆ ಕಡ್ಡಿ ಆಡಿಸುವುದನ್ನು ನಿಲ್ಲಿಸಿ ಕನ್ನಡಿಯ ಶೂನ್ಯದೊಳಗೆ ದಿಟ್ಟಿಸಿದ. 

***

ಪ್ರಸಾದನ ರಾಜಕೀಯ ಜೀವನ ಉನ್ನತ ಮಟ್ಟಕ್ಕೆ ಹೋಗುವುದಿತ್ತು. ಇದರ ನಡುವೆ ಅವನ ಖಾಸಗಿ ಜೀವನದ ದೃಶ್ಯಗಳು ಹೊರಬಂದಿದ್ದವು. ರಾಜಕಾರಣದಲ್ಲಿ ಒಳಗೊಳಗೆ ಏನಾದರೂ ಮಾಡಿಕೋ ಆದರೆ ಹೊರಗಡೆ ಬಂದರೆ ಅದನ್ನು ವೋಟ್ ಬ್ಯಾಂಕಿಗೆ ಪೂರಕವಾಗಿ ಬಳಸುವ ಅವಕಾಶ ಅದಕ್ಕಿರಬೇಕು. ಪಕ್ಷಕ್ಕೆ ಅದು ಮುಜುಗರ ತರಿಸುವ ವಿಷಯವಾಗಿರಬಾರದು ಎನ್ನುವುದು ತೀರಾ ಕಾಮನ್ ಸೆನ್ಸ್ ಮಟ್ಟಿಗಿನ ವಿಷಯವೇ! ಇವರ ದೃಶ್ಯಗಳು ಹೊರಗಡೆ ಬಂದಾಗ ಇವರು ತುಂಬಾ ಒದ್ದಾಡಿ ಹೋಗಿದ್ದರು. ನಾನೇ ‘ ‘ನಿಮ್ಮ ಓರಿಯಂಟೇಷನ್ ಬಗ್ಗೆ ಮೊದಲೇ ಗೊತ್ತಿತ್ತು. ಲೆಟ್ಸ್ ಗೆಟೌಟ್ ಆಫ್ ಬೈಫೋಬಿಯಾ! ಬೈಫೋಬಿಯಾ ಈಸ್ ನಾಟ್ ಅ ಫೇಸ್. ಇಟ್ಸ್ ಅ ಚಾಯ್ಸ್ ಅಂತ ನಾನು ಟ್ವಿಟರಿನಲ್ಲಿ ಹಾಕಬಲ್ಲೆ. ಅದು ನನ್ನ ಪಬ್ಲಿಷಿಂಗ್ ಜೀವನಕ್ಕೆ ಯಾವುದೇ ತೊಂದರೆ ಮಾಡಲ್ಲ. ಅದಕ್ಕಿಂತ ಹೆಚ್ಚಿಗೆ ನನಗೆ ಮಾಡಕ್ಕಾಗಲ್ಲ.’ ಎಂದೆ. ಹಾಗೆ ಮಾಡಿದೆ ಕೂಡ. ಅದಾದ ಮೇಲೆ ಅವರಿಗೇ ಸಮಸ್ಯೆ ಇಲ್ಲವೆಂದ ಮೇಲೆ ನಮಗೇನು ಎಂದು ಸುಮ್ಮನೆ ಬಿಟ್ಟಿತ್ತಾದರೂ ಇವರನ್ನು ಸಂಶಯಾಸ್ಪದ ದೃಷ್ಟಿಯಿಂದ ನೋಡುವುದು ಇದ್ದೇ ಇತ್ತು. ಕಡೆಗೆ ಅವರ ಪಕ್ಷ ಪ್ರಸಾದನ ಲೈಂಗಿಕ ಅಸ್ಮಿತೆಯನ್ನೂ ಒಂದು ರಾಜಕಾರಣದ ದಾಳವಾಗಿ ಬಳಸಿತ್ತು. ‘ದಿ ಫಸ್ಟ್ ಕ್ವೀರ್ ಪರ್ಸನ್ ಟು ಗೆಟ್ ಟಿಕೆಟ್.’ ಎಂದು ಘೋಷಿಸಿತ್ತು. ಇವೆಲ್ಲವೂ ರಾಜಕೀಯ ಜೀವನವನ್ನು ಸಲೀಸು ಮಾಡಿತ್ತು. ಈ ನಡುವೆ ಭೂಮಿ ಮತ್ತು ಮುಗಿಲು ವಿಷಯ ಕೂಡ ಮೀಡಿಯಾದಿಂದ ಹೊರಗಡೆ ಬಂದರೆ ಅದನ್ನು ಎದುರಿಸುವುದು ಹೇಗೆ ಎನ್ನವುದು ಪ್ರಸಾದನ ಹೊಸ ತಲೆನೋವಾಗಿತ್ತು. ಅದಕ್ಕೆ ಸರಿಯಾಗಿ ಮುಗಿಲು ನಮ್ಮ ಮನೆ ಬಿಟ್ಟು ಹೊರಟು ಹೋಗಿದ್ದ. 

ಹುಡುಗ ಈಗ ತನ್ನ ಕೈಗೋಲಿನ ಮೇಲೆ ಬಿದ್ದ ಧೂಳನ್ನು ಬಾಯಿಯಿಂದ ಊದಿ ತೆಗೆಯುತ್ತಿದ್ದ. 

***

ನನಗೆ ಮೊದಲ ಹೆರಿಗೆಯಾದ ದಿನ ಅಷ್ಟೊಂದು ಸಂತಸ ಇಡೀ ಆಸ್ಪತ್ರೆಯಲ್ಲಿ ಇರಲಿಲ್ಲ. ನರ್ಸ್ ಮೆತ್ತಗೆ ಬಂದು ಅವಳ ಲೋಕಲ್ ಭಾಷೆಯಲ್ಲಿ ‘ಈ ಮಗುಗೆ ಏನಿದೆ ಅಂತಾನೆ ಗೊತ್ತಾಗ್ತಾ ಇಲ್ಲ, ಪಾಪ!’ ಎಂದು ಬೇಜಾರಿನಲ್ಲೊ, ಹೇವರಿಕೆಯಲ್ಲೊ, ಕೊಂಕಿನಲ್ಲೊ, ಹಾಸ್ಯದಲ್ಲೊ ಮತ್ತೇನೋ ಭಾವದಲ್ಲಿ ಹೇಳಿದ್ದಳು. ಅವಳ ಮುಖಭಾವ ಏನಾಗಿತ್ತು ಎಂಬುದು ನನಗೆ ಇವತ್ತಿಗೂ ಅರ್ಥವಾಗಿಲ್ಲ. ನಾನಾಗ ‘ನನ್ನ ಕೂಸೆಲ್ಲಿ?’ ಎಂದು ಕೇಳಿದೆ. ಮೆಲ್ಲಗೆ ಅದಕ್ಕೆ ಸುತ್ತಿದ್ದ ಬಟ್ಟೆ ತೆಗೆದು ನೋಡಿದರೆ ಜನನಾಂಗ ಪೂರ್ತಿ ಬೆಳೆದಿರಲಿಲ್ಲ. ಅದು ಹುಡುಗನ ಶಿಶ್ನದಂತೆ ಕಾಣುತ್ತಿದ್ದರೂ ಅದು ಯೋನಿಯೊ ಶಿಶ್ನವೋ ತಿಳಿಯುತ್ತಿರಲಿಲ್ಲ. ನನ್ನ ಕಣ್ಣುಗಳಲ್ಲಿ ಧಾರಾಕಾರ ನೀರು. ಮೊದಲ ಬಾರಿಗೆ ‘ಅಯ್ಯೋ ಶಿವನೇ!’ ಎನ್ನುವ ಉದ್ಘಾರ ನನ್ನಿಂದ ಹೊರಬಿದ್ದಿತ್ತು. ಆ ಅಯ್ಯೋ ಶಿವನೇ ಎಂದದ್ದು ಮಗುವಿನ ಮೇಲಿನ ಕನಿಕರದಿಂದಲಾ ಅಥವಾ ನನ್ನನ್ನು ಯಾಕೆ ಇಂಥ ಘೋರವಾದ ಪರಿಸ್ಥಿತಿಯ ಪಾಲುದಾರಳನ್ನಾಗಿ ಮಾಡಿದೆ ಎನ್ನುವ ಕಾರಣದಿಂದಲಾ? ನಾನೊಬ್ಬ ವಿಚಿತ್ರವಾದ ಕೂಸನ್ನು ಹೆತ್ತೆ ಎನ್ನುವ ಭಾವದಿಂದಲಾ? ಏನೇ ಆಗಲಿ ನನ್ನ ಈ ಕೂಸನ್ನು ಬೆಳೆಸಬೇಕು ಎನ್ನುವ ಜಿದ್ದಿನಿಂದಲಾ? ಯಾಕೆ ನಾನು ಅಯ್ಯೋ ಶಿವನೇ ಎಂದಿದ್ದೆ? ನನ್ನ ಮೇಲೆ ಅಗಾಧ ಪ್ರೀತಿ ಇದೆ ಎಂದುಕೊಂಡಿದ್ದ ನನ್ನ ಶಿವ ಅದೆಷ್ಟೋ ಹೊತ್ತು ನನ್ನ ಹತ್ತಿರ ಸುಳಿಯಲೇ ಇಲ್ಲ. ನಮ್ಮ ನಡುವಿನ ಮೊದಲ ಮೌನದ ಬಿರುಕು ಅಲ್ಲಿಂದಲೇ ಆರಂಭವಾಗಿತ್ತು. ಅದರಾಚೆಗೆ ನನ್ನೊಳಗೊಬ್ಬ ತಾಯಿ ಹುಟ್ಟಿದ್ದಳು. ಅಥವಾ ನನ್ನೊಳಗಿನ ಜಿದ್ದಿಗೆ ತಾಯಿ ಎನ್ನುವ ಭಾವ ಅಂಟಿಸಿಕೊಂಡೆನಾ? ಡಾಕ್ಟರ್ ಬಂದು ಯು ಹ್ಯಾವ್ ಆನ್ ಇಂಟೆರ್ ಸೆಕ್ಸ್ ಕಿಡ್.  ಪ್ರತಿ ಐವತ್ತು ಸಾವಿರದಲ್ಲಿ ಒಂದು ಮಗು ಹೀಗಾಗುತ್ತದೆ. ತುಂಬಾ ಸುಲಭದ ಆಯ್ಕೆಯೆಂದರೆ ಶಿಶ್ನವನ್ನು ಸರ್ಜರಿಯ ಮೂಲಕ ತೆಗೆದು ಯೋನಿ ಆಗಿಸುವುದು. ಚಿಕ್ಕ ವಯಸ್ಸಾದ್ದರಿಂದ ಬೇಗನೆ ಗುಣವಾಗುತ್ತದೆ ಎಂದರು. ಪ್ರಸಾದನಿಗೆ ನನ್ನ ಮೇಲೆ ಹೇಳಲಾಗದ ಹೇವರಿಕೆಯೋ ಏನೋ ಕಡೆಗೂ ಒಪ್ಪಿದ. ಅಸಾಧ್ಯ ಮೌನಗಳ ನಡುವೆ ಮಗುವಿಗೆ ಸರ್ಜರಿ ಆಯಿತು. ಅದಕ್ಕೆ ಭೂಮಿ ಎಂದು ಹೆಸರಿಟ್ಟೆವು. ನನಗೆ ಭೂಮಿ ಮೇಲೆ ಇನ್ನಿಲ್ಲದ ಮುದ್ದು. ಅಥವಾ ಪ್ರಸಾದ್ ಗೆ ಭೂಮಿಯ ಮೇಲೆ ಅಸಡ್ಡೆಯಿದ್ದದ್ದರಿಂದ ನಾನು ಮುದ್ದುವನ್ನು ನನ್ನ ಮೇಲೆ ಹೇರಿಕೊಂಡೆನೇ? ಯೋಚಿಸಿದರೆ ಕಾರಣಗಳು ಗೋಜಲು ಗೋಜಲು. 

ಹುಡುಗ ಕನ್ನಡಿಯನ್ನು ಕ್ಯಾನ್ವಾಸ್ ಆಗಿಸಿ ಕೈಗೋಲನ್ನು ಬ್ರಷ್ ಮಾಡಿಕೊಂಡು ಅದರ ಮೇಲೆ ಚಿತ್ರ ಬಿಡಿಸುತ್ತಿದ್ದ. ಅದರ ಮೇಲೆ ಯಾವ ಬಣ್ಣವೂ ಮೂಡುತ್ತಿರಲಿಲ್ಲ. ಅಥವಾ ನನಗದು ಕಾಣುತ್ತಿರಲಿಲ್ಲ. 

*** 

ಒಂದಿಷ್ಟು ಕಾಲ ನನ್ನ ಮತ್ತು ಪ್ರಸಾದ್ ನಡುವೆ ಈಗೀಗ ಸಹಿಸಲಸಾಧ್ಯವಾದ ಮೌನ ತುಂಬಿಹೋಗಿತ್ತು.  ಒಂದು ಇಂಟೆರ್ ಸೆಕ್ಸ್ ಚೈಲ್ಡ್ ಎಂದಾಗ ಹಾರ್ಡ್ ಕೋರ್ ಪ್ರೊಗ್ರೆಸ್ಸಿವ್ ಆಗಿದ್ದ ಪ್ರಸಾದ್, ತಾನೊಬ್ಬ ಬೈ ಸೆಕ್ಷುಯಲ್ ಎನ್ನುವ ವಿಚಾರವೇ ಅವನ ರಾಜಕಾರಣದ ಪ್ರಯಾಣಕ್ಕೆ ವರ ಮಾಡಿಕೊಂಡ ಮನುಷ್ಯ ಈ ಹೊತ್ತಿನಲ್ಲಿ ಇಲ್ಲವಾಗಿದ್ದ. ಅಥವಾ ಅವನೊಳಗೂ ಒಂದು ಅಂತರ್ಯುದ್ಧ ನಡೆಯುತ್ತಿದ್ದಿರಬಹುದೇ? ಮಾತುಗಳು ನಿಂತಾಗ ಮೌನದೊಳಗೆ ಅಡಗಿ ಕುಳಿತ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನಾನು ಭೂಮಿಯನ್ನು ನಿರ್ವಹಿಸುತ್ತಲೇ ಭೂಮಿ ಪ್ರಕಾಶನವನ್ನೂ ಕಟ್ಟಿದೆ. ಅದ್ಯಾಕೋ ಭೂಮಿ ಹುಡುಗರ ಡ್ರೆಸ್ಸನ್ನ ಹಾಕಿಕೊಳ್ಳುವುದನ್ನೇ ಇಷ್ಟ ಪಡುತ್ತಿದ್ದಳು. ಪ್ರಸಾದನನ್ನ ಕೇಳಿದರೆ ನಮಗೆ ‘ಅವಳಿಗೆ ಹೇಗೆ ಬೇಕೋ ಹಾಗಿರಲಿ ಭಾಗಿ. ಒತ್ತಾಯ ಮಾಡ್ಬೇಡ.’ ಎಂದನಾದರೂ ಅವನ ಹಿಂದಿನ ಮಾತಿನ ಅರ್ಥ ನನಗೆ ಈ ಅಂತರ್ಲಿಂಗಿ ಮಗುವಿನ ಬಗ್ಗೆ ಹೇಳದೆ ಇದ್ದರೇನೇ ಒಳ್ಳೇದು ಅನ್ನುವ ಅರ್ಥವಿತ್ತೇ?! ನನಗೆ ಈ ನಡುವೆ ಮಗು, ಇವರ ರಾಜಕಾರಣ, ಪ್ರಕಾಶನ ಸಂಸ್ಥೆ, ಮನೆಗೆಲಸ ಎಲ್ಲವೂ ಒಂದು ರೀತಿ ಮಗ್ಗುಲು ಮಾಡುತ್ತಿದ್ದವು. ಮನೆಯಲ್ಲಿ ಸಹಾಯಕ್ಕೆಂದು ವಸು ಚಿಕ್ಕಿ ಇದ್ದರೂ ಅದು ನನಗೆ ಒಮ್ಮೊಮ್ಮೆ ಅವರ ಇರುವೆ ಇರಿಟೇಟ್ ಮಾಡುತ್ತಿತ್ತು. 

**

ಪ್ರಸಾದ್ ಕೆಲಸ ಮಾಡುತ್ತಿದ್ದ ಪಕ್ಷದಲ್ಲಿ ಒಬ್ಬ ಹೆಣ್ಣುಮಗಳಿದ್ದಳು. ಧಾರಾವಾಹಿ ಕ್ಷೇತ್ರದಿಂದ ಬಂದ ಆ ಹೆಣ್ಣುಮಗಳು ಇದ್ದಕ್ಕಿದ್ದಂತೆ ತಮ್ಮ ಸೆಕ್ಯೂಲರ್ ಪಕ್ಷ ತೊರೆದು ಮಹಾ ನಾಸ್ತಿಕಳಂತಿದ್ದ ಹೆಣ್ಣುಮಗಳು ಆಸ್ತಿಕ ಪಕ್ಷಕ್ಕೆ ಸೇರಿ ಮಠ ಮಾನ್ಯ ತಿರುಗಿ ಮಹಾ ದೈವಭಕ್ತೆಯಾಗಿ ಕೈಲಾಸ ಪೀಠ ಕಟ್ಟುತ್ತೇನೆ ಎಂದು ಕುಳಿತ ನಿತ್ಯಕಾಮ ಪ್ರಭುಗಳ ಪಟ್ಟಾ ಶಿಷ್ಯೆಯಾಗಿ ಹೋದದ್ದು ನಮ್ಮ ಹೈ ಪೊಲಿಟಿಕಲ್ ಪಾರ್ಟಿಗಳಲ್ಲಿ ಆಡಿಕೊಳ್ಳುವ ವಿಷಯವಾಗಿತ್ತಾದರೂ ಅದಕ್ಕೆಲ್ಲಾ ಅವಳ ವಿಕಲಚೇತನ ಮಗು ಅದಕ್ಕೆ ಕಾರಣ ಎಂದು ಗೊತ್ತಾದಾಗ ನಡುಗಿಹೋಗಿದ್ದೆ. ಅದನ್ನೊಮ್ಮೆ ದೆಹಲಿಯಲ್ಲೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿ ವಾಪಾಸಾಗುವಾಗ ಪ್ರಸಾದ್ ಮೆತ್ತಗೆ ನನಗೆ ಹರ್ಟ್ ಆಗದೆ ಇರುವ ರೀತಿಯಲ್ಲಿ ಹೇಳಿದ್ದರು. ವಸು ಚಿಕ್ಕಿ ಒಬ್ಬ ತಾಯಿ ತನ್ನ ಮಗುವಿಗಾಗಿ ಅದೆಂತಹ ತ್ಯಾಗಕ್ಕಾಗಿಯಾದರೂ ತಯಾರಾಗ್ತಾಳೆ ಭಾಗಿ…’  ಎನ್ನುವ ಮಾತು ಹೇಳಿದ್ದರು. ಅದಕ್ಕೆ ನಾನಾಗ ‘ಚಿಕ್ಕಿ ಪ್ಲೀಸ್. ನಿಮಗೆ ಮದುವೆಯೇ ಆಗಿಲ್ಲ. ಸುಮ್ಮನೆ ಆರು ಮಕ್ಕಳು ಹಡೆದವರ ಹಾಗೆ ಆಡ್ಬೇಡಿ.’ ಎನ್ನುವ ಕಠೋರ ಹುಂಬ ಮಾತುಗಳನ್ನು ಆಡಿದ್ದೆ. ಚಿಕ್ಕಿ ಎಂದಿನಂತೆ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಮುಸಿ ಮುಸಿ ಅಳತೊಡಗಿದರು. ಡ್ರೈವ್ ಮಾಡುತ್ತಿದ್ದ ಪ್ರಸಾದ್ ಹಿಂತಿರುಗಿ ನನ್ನನ್ನು ಕೆಂಡದ ಕಣ್ಣುಗಳಲ್ಲಿ ನೋಡಿದರು. ಪಕ್ಕದಲ್ಲಿಯೇ ಕೂತಿದ್ದ ಭೂಮಿ, ಚಿಕ್ಕಿ ಅಳುವುದನ್ನು ನೋಡಿ ಇವಳೂ ಜೋರಾಗಿ ದುಃಖಿಸಿ ಅಳಲು ಶುರು ಮಾಡಿದಳು. ನಾನೊಂದು ಛಟೀರ್ ಎಂದು ಭೂಮಿಯ ಕೆನ್ನೆಗೆ ಬಿಗಿದೆ. ಮತ್ತೆ ತಾರುಮಾರು ಒಂದಾಗುವಂತೆ ಚೀರತೊಡಗಿದಳು. ಕೂಸು ಹುಟ್ಟಿದಾಗ ಕ್ಯಾರೇ ಎನ್ನದವರು ಗಾಡಿಯನ್ನು ಪಕ್ಕಕ್ಕೆ ಹಾಕಿ ಮಗುವನ್ನು ರಮಿಸಲು ಕರೆದೊಯ್ದರು. ನಾನು ಮುಖ ಊದಿಸಿಕೊಂಡು ಕೂತಿದ್ದೆ. ನಾನು ಯಾಕೆ ಹಾಗೆ ಹೇಳಿದೆ? ಭೂಮಿ ನನ್ನ ಬಿಟ್ಟು ವಸು ಚಿಕ್ಕಿಯ ಜೊತೆಗೆ ಹತ್ತಿರವಾಗುತ್ತಿದ್ದದ್ದು ನನಗೆ ಸಹಿಸಲು ಆಗುತ್ತಿರಲಿಲ್ಲ… ಆ ಉರಿ ನನ್ನಿಂದ ಆ ಮಾತುಗಳನ್ನು ಆಡಿಸಿದ್ದವು. 

ಕನಸಿನ ಹುಡುಗ ಕೋಣೆಯ ತುಂಬಾ ಶತಪಥ ತಿರುಗುತ್ತಿದ್ದ. 

***  

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

ಊರಿನಲ್ಲಿಯೂ ಅಮ್ಮನಿಗೆ ವಸು ಚಿಕ್ಕಿಯ ಕಂಡರೆ ಆಗುತ್ತಿರಲಿಲ್ಲ. ಮದುವೆಯೇ ಆಗದೆ ಹಾಗೆ ಉಳಿದುಬಿಟ್ಟ ವಸು ಚಿಕ್ಕಿಯನ್ನು ಅಮ್ಮ ಗೋಳು ಹೊಯ್ದುಕೊಳ್ಳುತ್ತಿದ್ದಳು. ಅಪ್ಪನಿಲ್ಲದೆ ಇರುವಾಗ ‘ಇವಳೊಂದು ಗೊಡ್ಡೆಮ್ಮೆ’ ಎಂದು ಆಡಿಕೊಳ್ಳುತ್ತಿದ್ದುದನ್ನು ಕೇಳಿದ್ದ ನಾನು ಅಪ್ಪನಿದ್ದಾಗ ‘ಚಿಕ್ಕಿ ಗೊಡ್ಡೆಮ್ಮೆ, ಗೊಡ್ಡೆಮ್ಮೆ ಚಿಕ್ಕಿ’ ಎಂದು ಅವಳನ್ನು ಅಣಕಿಸುವಾಗ ಹಿಂದೆ ನಿಂತಿದ್ದ ಅಪ್ಪ ಮೊದಲಬಾರಿಗೆ ನನ್ನ ಕೆನ್ನೆಗೆ ಬಿಗಿದಿದ್ದರು. ಅವರು ಬಿಗಿದ ಏಟಿಗೆ ನನಗೆ ತಲೆಸುತ್ತು ಬರುವುದೊಂದು ಬಾಕಿ. ಅಪ್ಪನ ಎರಡನೇ ಸಂಬಂಧದ ಸಲುವಾಗಿ ರಸಿಕಸಿ ಮಾಡುತ್ತಿದ್ದ ಅಮ್ಮ ಅಂದು ನನ್ನ ಸಹಾಯಕ್ಕೆ ಬಂದಿರಲಿಲ್ಲ… 

ಅದೇ ಅಮ್ಮ ಅಂದು ರಾತ್ರಿ ವಸು ಚಿಕ್ಕಮ್ಮನ್ನ ಉಸ್ ಅನಿಸಬೇಡವೇ ಆ ಕನ್ಯೆಯ ಶಾಪ ನಮ್ಮ ಮನೆಗೆ ಒಳ್ಳೇದು ಮಾಡೋದಿಲ್ಲ. ಕಡೆಗೆ ಅಮ್ಮ ಅಪ್ಪ ಸತ್ತು ವಸು ಚಿಕ್ಕಮ್ಮ ನಮ್ಮ ಜೊತೆಗೆ ಇದ್ದುಬಿಟ್ಟರು ನನಗೆ ಅವಳ ಮೇಲೆ ಅಂತ ಅಕ್ಕರೆಯೇನು ಇರಲಿಲ್ಲ.  ತಾಯಿಯ ಸೆಡವು, ತಾಯಿಯ ಹೊಟ್ಟೆಕಿಚ್ಚು ಕಲ್ಲನ್ನು ಭಸ್ಮ ಮಾಡಿಬಿಡುತ್ತದೆನೋ…ವಸುಧ ಚಿಕ್ಕಿ ನನ್ನ ಅಜ್ಜನಿಗೆ ಅನಾಥಾಲಯದಲ್ಲಿ ಸಿಕ್ಕ ಮಗು. ಅವಳನ್ನು ಮನೆಗೆ ತಂದು ಮನೆಗೆಲಸಾಕ್ಕಾಗಿ ಉಳಿಸಿಕೊಂಡುಬಿಟ್ಟದ್ದಕ್ಕೆ ಅವಳಿಗೆ ಬೇಸರ ಇಲ್ಲವಾದರೂ ಅನಾಥಾಲಯದಲ್ಲಿದ್ದರೆ ಇಲ್ಲಿಂದಕ್ಕಿಂತ ಜೋರು ಜೀವನ ಸಿಗುತ್ತಿತ್ತೇನೋ ಎನ್ನುವ ಕನಸು ಅವಳ ಕಡೆಯಿಂದ ಮುಳ್ಳಿನ ಮಾತಾಡಿಸುತ್ತವೆ. ವಸು ಚಿಕ್ಕಿ ಓಡಿಹೋಗಬಹುದಿತ್ತು. ಆದರೆ ವಸು ಚಿಕ್ಕಿ ಹೋಗಲಿಲ್ಲ. ಮನೆಯಲ್ಲೇ ಚಾಕರಿ ಮಾಡಿಕೊಂಡು ಅಮ್ಮನ ಸಹಾಯಕಿಯಾಗಿಯೇ ಉಳಿದು ನಮ್ಮ ಮನೆಗೂ ಬಂದು ನನ್ನ ಮಕ್ಕಳಿಗೂ ಹತ್ತಿರವಾಗಿಬಿಟ್ಟಳು! ಅಮ್ಮನಿಗೆ ವಸು ಚಿಕ್ಕಿ ಮತ್ತು ನನ್ನಪ್ಪನಿಗೆ ಸಂಬಂಧವಿದೆ ಎನ್ನುವ ಸಂಶಯವಿದ್ದದ್ದರಿಂದ ಅವಳು ಒಂದಷ್ಟು ಕಾಲ ಚಿಕ್ಕಿಯನ್ನು ಸೊಸೆಯ ತರ ನಡೆಸಿಕೊಂಡಳು. ಕಡೆಗೆ ಅಪ್ಪ ಸತ್ತು ಅಮ್ಮ ಹಾಸಿಗೆ ಹಿಡಿದಾಗ ಚಿಕ್ಕಿಯೇ ಅಮ್ಮನನ್ನು ತೊಳೆದು ಬಳಿದು ಮಾಡಿದ್ದಳು. ಅಮ್ಮ ಸಾಯುವ ಮುಂಚೆ ‘ಏನೇ ಆಗಿರಲೇ ಭಾಗಿ. ಇದೊಂದು ಜೀವ ಎಲ್ಲರ ಚಾಕರಿ ಮಾಡಿದೆ. ಇವಳನ್ನು ಕೈಬಿಡಬೇಡವೇ! ಇವಳನ್ನು ಉಸ್ ಅನಿಸಬೇಡ.’ ಎಂದು ನನ್ನ ಕೈಹಿಡಿಯುವಾಗ, ಕಣ್ಣೀರು ಕಪಾಳಕ್ಕೆ ಸುರಿಯುವಾಗ ಚಿಕ್ಕಿಯ ಕಣ್ಣಲ್ಲೂ ನೀರು ತುಂಬಿಕೊಂಡು ಅಮ್ಮನ ಹಣೆಯನ್ನು ನೇವರಿಸುತ್ತಿದ್ದಳು. ಚಿಕ್ಕಿಯ ಕಣ್ಣುಗಳಲ್ಲಿ ಅದ್ಯಾವ ಭಾವವಿತ್ತು. ತಾನು ಅನಾಥಳಾಗಿಬಿಡುತ್ತೇನೆ ಅನ್ನುವ ಭಾವವಿತ್ತೆ? ಮುಂದಿನ ದಿನಗಳ ಅನಿಶ್ಚಿತತೆ ಇತ್ತೇ? 

*** 

ಚಿಕ್ಕಿಗೆ ಅದೇನೋ ಪುರಾಣದ ಕಥೆಗಳ ಮೇಲೆ ಇನ್ನಿಲ್ಲದ ಮೋಹ. ನಮ್ಮ ಹೊಸ ಮನೆಗೆ ಬಂದ ಮೇಲೆ ಅವಳ ಒತ್ತಾಯದಿಂದಲೇ ಕೃಷ್ಣ ಅರ್ಜುನನ ಸಾರಥಿಯಾಗಿ ಯುದ್ಧ ಮುನ್ನಡೆಸುವ ಚಿತ್ರವನ್ನು ಬಾಗಿಲ ಮೇಲೆ ಕೆತ್ತಿಸಿದ್ದೆವು. ಪ್ರತಿ ಬಾರಿ ಹೊರಗಿನಿಂದ ಮನೆಯೊಳಗಡೆ ಪ್ರವೇಶಿಸುವಾಗ ಮತ್ತು ಹೊರಗಡೆ ಹೋಗುವಾಗ ಅದಕ್ಕೊಂದು ನಮಸ್ಕಾರ ಹಾಕುತ್ತಿದ್ದಳು. ಭೂಮಿಯ ಕಾರಣಕ್ಕೆ ನಾವೆಲ್ಲೆ ಹೋದರೂ ಚಿಕ್ಕಿಯ ಉಪಸ್ಥಿತಿ ಬೇಕೇಬೇಕಾಗುತ್ತಿದ್ದರಿಂದ ಒಮ್ಮೆ ಬೆಂಗಳೂರಿನ 1 ಶಾಂತಿ ರೋಡ್ ನಲ್ಲಿನ ಆರ್ಟ್ ಗ್ಯಾಲರಿಗೆ ಚಿತ್ರಕಲಾಪ್ರದರ್ಶನಕ್ಕೆ ಎಂದು ಕರೆದುಕೊಂಡು ಹೋಗಿದ್ದಾಗ ಮಹಾಭಾರತದ ಭೀಷ್ಮ ಪ್ರತಿಜ್ಞೆ ಮಾಡುತ್ತಿರುವ ಅಮೂರ್ತವಾದ ಪೇಂಟಿಂಗ್ ಒಂದನ್ನು ಐವತ್ತು ಸಾವಿರ ಕೊಟ್ಟು ಮನೆಗೆ ತರಬೇಕಾಯಿತು. ಚಿಕ್ಕಿ ಮತ್ತವಳ ನಿರುಪದ್ರವಿ ಬೇಡಿಕೆಗಳು ನನಗೆ ಒಮ್ಮೊಮ್ಮೆ ಮುದ್ದು ಮುದ್ದೆನಿಸುತ್ತಿದ್ದವಾದರೂ ಸೆಕ್ಯೂಲರ್ ಗಳ ಮನೆಯ ತುಂಬಾ ಇಂತ ಪೇಂಟಿಂಗ್ ಇರುವುದು ಅದೇಕೋ ಇರುಸುಮುರುಸಾಗಿ ಕಡೆಗೆ ಭೂಮಿಯ ಕೋಣೆಯ ಮೇಲೆ ಪ್ರತಿಷ್ಠಪಿತವಾಗಿತ್ತು…

***

ಇದೆ ನಡುವೆ ನನ್ನ ಮತ್ತು ಪ್ರಸಾದನ ನಡುವೆ ಮೌನ ಕಡಿಮೆಯಾಗಿ ಮತ್ತೊಂದು ಚಿಗುರು ಕುಡಿಯೊಡೆದಿತ್ತು. ಆದರೆ ನನ್ನ ಪಾಲಿನ ಬದುಕು ನನ್ನ ಜೀವನದಲ್ಲಿ ಮತ್ತೊಂದು ಸಿಡಿಲನ್ನು ಎಸೆದಿತ್ತು. ಎರಡನೇ ಮಗುವಿನದು ಅದೇ ಸ್ಥಿತಿ ಇತ್ತು. ಇಂಟೆರ್ ಸೆಕ್ಸ್ ಕಿಡ್. ಇದಕ್ಕೂ ಅದರ ಜೆನಿಟಿಲಿಯ ಸರಿಯಾಗಿ ಬೆಳೆದಿರಲಿಲ್ಲ. ಡಾಕ್ಟರ್ ಯಥಾವತ್ತಾಗಿ ಹುಡುಗಿ ಮಾಡುವುದೇ ಸುಲಭ ಎಂದರು. ಪ್ರಸಾದ್ ‘ಬೇಡ ಬೇಡ. ನಮಗೆ ಗಂಡು ಮಗು ಬೇಕು. ಶಿಶ್ನವನ್ನೇ ಉಳಿಸೋ ಹಾಗೆ ಸರ್ಜರಿ ಮಾಡಿ ಎಂದ.’. ಡಾಕ್ಟರ್ ಫಾರಮ್ಮಿಗೆ ಸಹಿ ಹಾಕಿಸಿಕೊಂಡು ಆರು ತಿಂಗಳಾದ ಮೇಲೆ ಸರ್ಜರಿ ಮಾಡಿದರು. ಹಾಗೆ ನಮಗೆ ಮಗ ಹುಟ್ಟಿದ. ಮುಗಿಲು ಎಂದು ಹೆಸರಿಟ್ಟೆವು. ನಮ್ಮ ಪಾಲಿನ ಭಾಗ್ಯವೂ ಬದಲಾಯಿತು. ಮನೆ ಕಟ್ಟಿದೆವು. ಮುಗಿಲು ಭೂಮಿಯ ಕೋಣೆಯ ಪೇಂಟಿಂಗನ್ನು ತನ್ನ ಕೋಣೆಗೆ ವರ್ಗಾಯಿಸಿಕೊಂಡ…

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು

ಮುಗಿಲು ಬೆಳೆಯುವುದಕ್ಕೆ ಅಷ್ಟೇನೂ ತೊಂದರೆಯಾಗಲಿಲ್ಲ. ಆದರೆ ಅವನೊಂದು ದಿನ ಬಂದು ‘ಐ ಡೋಂಟ್ ವಾಂಟ್ ಟು ಗೆಟ್ ಮ್ಯಾರೀಡ್’ ಎಂದು ಘೋಷಿಸಿದ. ಪ್ರಸಾದ್ ನನ್ನ ಕಡೆ ನೋಡಿದ್ದರು. ಎಲ್ಲದಕ್ಕೂ ನನ್ನ ಕಡೆ ನೋಡಿದರೆ ನಾನೇನು ಮಾಡಲಿ? ಭೂಮಿಯನ್ನು ಕೇಳಿನೋಡಿದೆ. ಅವಳಿಂದಲೂ ಏನೂ ಉತ್ತರ ಬರಲಿಲ್ಲ. ಕಡೆಗೆ ಇವನ ಇನ್ಸ್ಟಾ ಬಯೋದಲ್ಲಿ ‘ರೈನ್ಬೋ ರಾಗ’ ಎಂದು ಬರೆದು ಅದರ ಪಕ್ಕ ಮಳೆಬಿಲ್ಲಿನ ಎಮೋಜಿ ಹಾಕಿಕೊಂಡಿದ್ದ. ಸಾಯ್ಲಿ, ನಮ್ಮ ಮನೇಲಿ ಇದೂ ಒಂದು ಬೇಕಿತ್ತು ಎಂದು ಕಿರಿಕಿರಿಯಾಗಿತ್ತು. ಹೀಗಂದುಕೊಳ್ಳುವಾಗಲೇ ಕೋಣೆಯಲ್ಲಿ ತಿರುಗುತ್ತಿದ್ದ ಕೂಸು ಎಡವಿಬಿತ್ತು. ನಾನು ಓಡಿ ಹೋಗಿ ಎತ್ತುವಲ್ಲಿ ಅಲ್ಲಿಂದ ಅದು ಮಾಯವಾಗಿತ್ತು. 

***

ಮುಗಿಲಿನ ಮದುವೆ ತಯಾರಿ ಮಾಡೋಣ ಎಂದಾಗ ಅವನು ಒಲ್ಲೆನೆಂದ. ಭೂಮಿಯ ಬರ್ತ್ಡೇ ಪಾರ್ಟಿ ಇಟ್ಟುಕೊಂಡಿದ್ದೆವು. ನಮ್ಮ ಆಪ್ತೆಷ್ಟರನ್ನಷ್ಟೇ ಕರೆದಿದ್ದವು. ಮುಗಿಲು ಮನೆಬಿಟ್ಟು ಹೋಗಿ ಒಂದು ವಾರವಾಗಿತ್ತು. ನಮ್ಮ ಫೋನಿಗೆ ಸಿಗುತ್ತಿರಲಿಲ್ಲ. ಪ್ರಸಾದ್ ನ ಒಂದು ಪೊಲಿಟಿಕಲ್ ಮೂವ್ ಗೆ ಮನೆಗೆ ಅತಿಥಿಗಳನ್ನು ಕರೆಯುವುದಕ್ಕೆ ಒಂದು ನೆಪ ಬೇಕಿತ್ತು. ಭೂಮಿಯ ಬರ್ತ್ಡೇ ಸಹಾಯಕ್ಕೆ ಬಂದಿತ್ತು.ಅದಕ್ಕೆ ಇಬ್ಬರೂ ಮಕ್ಕಳಿಗೆ ಸರ್ಜರಿ ಮಾಡಿದ್ದ ಡಾಕ್ಟರ್ ಕೂಡ ಪ್ರೀತಿಯಿಂದ ಬಂದಿದ್ದರು. ಭೂಮಿ ಎಂದಿನಂತೆ ಅವಳ ಟಾಮ್ ಬಾಯ್ ದಿರಿಸನಲ್ಲೆ ಕೇಕ್ ಕಟ್ ಮಾಡಿದ್ದಳು. ಡಾಕ್ಟರ್ ಸುಮ್ಮನೆ ಇರಲಾರದೆ ‘ನಿಮ್ಮ ತಮ್ಮ ಅಂತೂ ಮದ್ವೆ ಬೇಡ ಅಂತಿದಾನೆ. ನಿಮ್ಮಪ್ಪ ತುಂಬಾ ಟೆನ್ಶನ್ ಮಾಡಿಕೊಂಡಿದ್ದಾರೆ. ನೀನಾದ್ರೂ ಮದ್ವೆ ಗಿದ್ವೆ ಮಾಡಿಕೊಳ್ತೀಯಾ ಹೇಗೆ?!’ ಎಂದು ಕೇಳಿದ್ದೆ ತಡ ಅವರನ್ನು ಕೂರಿಸಿಕೊಂಡು, ನನ್ನನ್ನೂ ಕರೆದು ‘ನನ್ನ ತಮ್ಮನನ್ನು ಹುಡುಗನಾಗಿ ಮಾಡಿದಿರಿ. ನನ್ಯಾಕೆ ಹುಡುಗಿ ಮಾಡಿದ್ರಿ? ಐ ಫೀಲ್ ಅಯಾಮ್ ಅ ಬಾಯ್…’ ಎಂದು ಅಳುತ್ತಾ ಕೇಳಿದ್ದಳು. ಅದಕ್ಕೆ ನಮ್ಮ ಬಳಿ ಉತ್ತರ ಇರಲಿಲ್ಲ. ಮುಗಿಲು ನಡೆದಿದ್ದ. ಈಗ ಇವಳು ಈ ರೀತಿ ಹೇಳುತ್ತಿದ್ದಾಳೆ. ನನಗೊಂದು ರೀತಿಯ ಭಯ. ಪ್ರಸಾದ್ ಗೆ ಒಂದು ರೀತಿಯ ಭಯ…

ಇಂಟೆರ್ ಸೆಕ್ಸ್ ಮಕ್ಕಳನ್ನು ಹುಟ್ಟಿದ ಮೇಲೆ ಅವರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾ ಬೇಡವಾ ಎನ್ನುವ ಚರ್ಚೆಗಳು ವೈದ್ಯಕೀಯ ವಲಯದಲ್ಲಿ ನಡೆಯುತ್ತಿರಬೇಕಾದರೆ ನಮಗೆ ತೋಚಿದ್ದನ್ನು ಮಾಡಿದ್ದೇವೆ. ಈಗ ಮಕ್ಕಳು ಇದಕ್ಕೆ ಪೂರ್ತಿ ಹೊಣೆಗಾರರನ್ನಾಗಿ ಮಾಡಿ ‘ವಿ ಹೇಟ್ ಯೂ… ವಿ ಆರ್ ನಾಟ್ ಜಸ್ಟ್ ಪಪೆಟ್ಸ್!’ ಎಂದು ಕಣ್ಣೀರು ಹಾಕುತ್ತಾ ಕುಳಿತರೆ ಏನು ಮಾಡುವುದು? ಯಾರ ಕಣ್ಣೀರಿಗೆ ಇಲ್ಲಿ ಹೆಚ್ಚು ಬೆಲೆಯಿದೆ? ಎಲ್ಲರೂ ಏನನ್ನು ಹುಡುಕುತ್ತಿದ್ದೇವೆ? 

ನಾವೆಷ್ಟೇ ನಿಭಾಯಿಸಿದ್ದೇವೆ ಎನಿಸಿದರೂ ನೋಡಿಲ್ಲಿ ನೀನು ಇದನ್ನ ಹೇಗೆ ನಿಭಾಯಿಸುತ್ತಿ ಎಂದು ಹೊಸ ಪ್ರಶ್ನೆಪತ್ರಿಕೆಯನ್ನು ನಮ್ಮೆಡೆಗೆ ಎಸೆದರೆ?! ನನಗೆ ಮತ್ತೆ ಭಯ… ನಿದ್ದೆಯಿಲ್ಲದ ರಾತ್ರಿಗಳು. ಕನವರಿಕೆಗಳು. ಮಕ್ಕಳದೇ ಚಿಂತೆ.. 

ಪ್ರತಿದಿನ ಸಂಜೆ ತಾರಸಿಯ ಮೇಲೆ ಬಸವಳಿದು ನಿಂತಾಗ ಎಡಕ್ಕೆ ನಿಂತ ತೆಂಗಿನ ಗರಿಗಳ ಮಿಸುಕಾಟ ಆತ್ಮಸಂಗಾತಿಯ ಪಿಸುಗುಡುವಿಕೆಯಂತೆ ಕೇಳಿಸುತ್ತದೆ. ತಲೆಯೆತ್ತಿ ನೋಡಿದರೆ ಮುಗಿಲು ಚೂರು ಕೆಳಗಿಳಿದು ತನ್ನ ಕೈಬೆರಳುಗಳಿಂದ ಮಾಂತ್ರಿಕವಾಗಿ ಸ್ಪರ್ಶಿಸಿದ ಹಾಗೆ ಭಾಸವಾಗುತ್ತದೆ. ಸುತ್ತ ಸುಳಿವ ಗಾಳಿಯು ಅದೆಷ್ಟೇ ದೀರ್ಘ ಉಸಿರಾದರೂ ಬೇಸರಿಸಿಕೊಳ್ಳದೆ ಒಳಗಿಳಿದು ಊಟ ಮಾಡಿಸಿ ಡಬ್ಬಿಗೂ ತುಂಬುವ ತಾಯಿಯಂತೆ ತಂಗಾಳಿಯೊಂದು ಬೆಚ್ಚಗೆ ಮೈಸವರುತ್ತದೆ. ತಾರಸಿಯ ಹೊದಿಕೆಯ ಮೇಲೆ ಗುಟುರು ಹಾಕುವ ಪಾರಿವಾಳಗಳು ಚಿಕ್ಕಪುಟ್ಟ ಹೆಜ್ಜೆ ಹಾಕುತ್ತಾ ಹತ್ತಿರ ಬಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿ ರೆಕ್ಕೆ ಬಿಚ್ಚಿ ಹಾರಿ ಹೋಗುತ್ತವೆ. ಅದೆಲ್ಲಿಂದಲೋ ಹುಡುಕಿಕೊಂಡು ಓಡಿ ಬರುವ ಬೆಕ್ಕು ಕಾಲು ಸವರುತ್ತಾ ತಲೆಯೆತ್ತಿ ಮಿಯಾವ್ ಎಂದು ಗೋಗರೆಯುತ್ತದೆ. ಒಂದಿಷ್ಟು ಅರೆಘಳಿಗೆ ಇವೆಲ್ಲದರಲಿ ಕಳೆದು ಹೋದಾಗ ಉರಿವ ಸೂರ್ಯ ಅಸ್ತoಗತನಾಗಿ ಚಂದ್ರ ಹುಟ್ಟುತ್ತಾನೆ. ಜೀವದುಸಿರಿನ ಲಯ ವಿಶ್ವಶಕ್ತಿಯ ಲಯದ ಜೊತೆ ಮಾತಿಗೆ ಕೂತ ಹೊತ್ತು… ಒಳಗೆ ದಿವ್ಯ ಪ್ರಭೆಯೊಂದು ಹುಟ್ಟುತ್ತದೆ. ಕಾಯುತ್ತದೆ. ನಾಳೆ ಹೊಸ ಹಾದಿ. ನಾಳೆ ಹೊಸ ಹಾಡು. ಕನಸು ಕಟ್ಟುತ್ತದೆ ಜೀವ. ನಾನು ಒಳ್ಳೆಯ ತಾಯಿಯಾಗುತ್ತೇನೆಯೇ? ಕನಸು ಕಟ್ಟುತ್ತದೆ ಜೀವ. ಹಾಗಾಗುವುದಕ್ಕೆ ಏನು ಮಾಡಬೇಕು? ಇದೆಲ್ಲಾ ಕನಸಿನಲ್ಲಿ ಬರುವ ಹುಡುಗ ಸೃಷ್ಟಿಸುವ ಗಾಳಿ ಚಿತ್ರ ಮಾತ್ರವೇ? ಮಕ್ಕಳ ಪರವಾಗಿ ನಿಂತರೆ ನಾನು ಒಳ್ಳೆಯ ತಾಯಿಯಾಗುತ್ತೇನೆಯೇ?! 

ರಾತ್ರಿಯ ಹೊತ್ತು ಕಣ್ಣಾಲಿಗಳನ್ನು ತುಂಬಿಕೊಂಡು ಮಗನ ಓದುವ ಟೇಬಲ್ಲಿನಲ್ಲಿ ಕೂತು ಅವನದೇ ಡೈರಿಯನ್ನು ತಡಕಿದೆ.

 ‘ನೀವು ಡಾಕ್ಟರ್ ಸೇರಿಕೊಂಡು ನನ್ನ ಪರವಾಗಿ ನಾನೇನಾಗಬೇಕೆನ್ನುವ ನಿರ್ಧಾರ ತೆಗೆದುಕೊಂಡಿರಿ. ಈ ನಡುವೆ ನಮ್ಮ ಒಂದು ಮಾತನ್ನೂ ಕೇಳಲಿಲ್ಲ. ಯಾಕಮ್ಮ? ನಮಗೇನಾಗಬೇಕು ಎಂದು ನಾನು ನಿರ್ಧರಿಸುವುದು ನಮಗೆ ಹಕ್ಕಿಲ್ಲವಾ? ನನ್ನ ಜೆನಿಟಿಲಿಯಾದ ಒಂದೇ ಕಾರಣಕ್ಕೆ ನೀನು ನನ್ನ ಗಂಡಾಗಿ ಸರ್ಜರಿ ಮಾಡಿಸಿದ್ದಿ? ಅಯಾಮ್ ನಾಟ್ ಯುವರ್ ಪೊಲಿಟಿಕಲ್ ಪಪೆಟ್. ಐ ಹೇಟ್ ಯು!’  ಎಂದು ಬರೆದಿತ್ತು. ಕೂಗಿ ಹೇಳಿದ್ದರೆ ಸ್ವಲ್ಪ ಹೊತ್ತು ಗಾಳಿಯಲ್ಲಿ ತೇಲಿ ದಿನಕಳೆದಂತೆ ಮರೆತುಹೋಗಬಹುದು… ಹೀಗೆ ಬರೆದಿಟ್ಟು ಹೋದರೆ ಗಾಯವೆಂತು ಮಾಯುವುದು?!  ದೊಡ್ಡ ಮನೆ. ಅಗಾಧ ಮೌನ. ನಮ್ಮ ಮಾತು, ಉಚ್ವಾಸ ನಿಶ್ವಾಸಗಳು ಮಾರ್ದನಿಸುತ್ತವೆ. ಒಬ್ಬ ತಾಯಿಗೆ ‘ಐ ಹೇಟ್ ಯು.’ ಎಂದು ತನ್ನದೇ ಕೂಸಿನಿಂದ ಕೇಳಿಸಿಕೊಳ್ಳುವುದು ಅದೆಷ್ಟು ಹಿಂಸೆ ಎನ್ನುವುದು ತಾಯಂದಿರಿಗಷ್ಟೇ ಅರ್ಥವಾಗುವ ವಿಷಯ… 

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

ತಡಕಿ ಅಲ್ಲಿಯೇ ಸ್ಟ್ಯಾಂಡಿನಲ್ಲಿದ್ದ ಪೆನ್ನನ್ನು ಕೈಗೆತ್ತಿಕೊಂಡು ಕೊನೆಯ ಪುಟದಲ್ಲಿ ನಾನು ಬರೆಯತೊಡಗಿದೆ. 

‘ನನ್ನ ಹೆಸರೂ ಭಾಗೀರಥಿಯೇ.. ನನಗೆ ಒಬ್ಬನೇ ಮಗ ಭಾಗೀರಥಿ. ನಿನ್ನಂತೆ ನಿನ್ನ ತಟದಲ್ಲಿ ಪ್ರಮಾಣಗೈಯುವ ಪ್ರತಿಯೊಬ್ಬರನ್ನೂ ಮಕ್ಕಳೆಂದು ತಿಳಿಯಲಾರೆ. ಅದಕ್ಕೆ ನನ್ನ ಮಗ ನಾನು ಮದುವೆಯನ್ನೇ ಆಗುವುದಿಲ್ಲ ಎಂದಾಗ ತಡೆಯದೇ ಇರಲಾಗಲಿಲ್ಲ.’ 

ಇಷ್ಟು ಬರೆದು ಕಣ್ಣೆತ್ತಿ ನೋಡಿದೆ. ಅಲ್ಲೇ ಗೋಡೆಯಲ್ಲಿದ್ದ ಚಿತ್ರ ಕಲಾಕೃತಿಯಲ್ಲಿ ಭೀಷ್ಮ ಪ್ರತಿಜ್ಞೆಗೈಯುತ್ತಿದ್ದ. ಭಾಗೀರಥಿ ತಣ್ಣಗೆ ಹರಿಯುತ್ತಿದ್ದಳು. ಕಣ್ಣೀರು ನಾನು ಬರೆದ ಆ ಸಾಲುಗಳ ಮೇಲೆ ಬಿತ್ತು… ನನ್ನ ಭುಜದ ಮೇಲೆ ಮೆತ್ತಗೆ ಅಮುಕಿದ ಬಿಸುಪನ್ನು ಅನುಭವಿಸಿ ಹಿಂತಿರಿಗೆ ನೋಡಿದೆ. ಚಿಕ್ಕಿ ನಿಂತಿದ್ದಳು. ಅವಳ ಕಣ್ಣಲ್ಲೂ ನೀರಿದ್ದವು… ಅವಳ ಕೈಗಳು ನನ್ನ ಕಣ್ಣೀರನ್ನು ಒರೆಸಿದವು. ಪಕ್ಕಕ್ಕೆ ಚೇರ್ ಎಳೆದು ಕುಳಿತು ಬೆನ್ನ ನೇವರಿಸಿದವು. ‘ಯಾಕಳ್ತಿಯೇ ಭಾಗಿ… ಅಂದವರು ನಮ್ಮ ಮಕ್ಕಳಲ್ಲವೇನೇ?! ಎಲ್ಲಾ ಸರಿ ಹೋಗತ್ತೆ. ನೀನಳಬೇಡ.’ ಎಂದು ಸಮಾಧಾನಿಸಿದಳು. ನಾನು ನನ್ನ ಥೆರಪಿಸ್ಟ್ ಸುಮಾಗೆ ಕರೆ ಮಾಡಿ ಸ್ಪೀಕರಿನಲ್ಲಿ ಹಾಕಿಟ್ಟು ಅವಳು ಕರೆ ಎತ್ತುವುದನ್ನೇ ಕಾಯುತ್ತಾ ಕುಳಿತೆ. ಕೋಣೆಯ ಬಾಗಿಲನ್ನು ಮೆಲ್ಲಗೆ ತಳ್ಳಿ ಸೀದಾ ಕನ್ನಡಿಯ ಮುಂದೆ ಹೋಗಿ ಕನಸಿನಲ್ಲಿ ಕಾಣಿಸಿದ ಹುಡುಗ ತನ್ನ ಕೈಗೋಲನ್ನು ಹಿಡಿದು ಚಿತ್ರ ಸೃಷ್ಟಿಸುತ್ತಾ ಕುಳಿತ. ಹಾಗೆ ಕುಳಿತವನೇ ಮೊದಲ ಬಾರಿಗೆ ನನ್ನತ್ತ ತಿರುಗಿ ಕೋಪದಿಂದ ಕೆಂಡಗಣ್ಣುಗಳನ್ನು ಮಾಡಿಕೊಂಡು ಜೋರಾಗಿ ಬಾಯಿತೆರೆಯಲು ಶುರುಮಾಡಿದ. ಅದೆಷ್ಟು ದೊಡ್ಡ ಬಾಯಿಯೆಂದರೆ ನನ್ನನ್ನೇ ನುಂಗಿಬಿಡುವಷ್ಟು… ನನಗೆ ಭಯ. ಇದೆಲ್ಲಿ ನನ್ನನ್ನು ಆಪೋಶನ ತೆಗೆದುಕೊಂಡುಬಿಡುವುದೋ ಎಂದು! ನಾನೇನು ಹೇಳುವುದನ್ನು ಮಿಸ್ ಮಾಡಿಕೊಂಡೆ?! ನನಗಾಗ ದೈತ್ಯಾಕಾರದಲ್ಲಿ ಬಾಯಿ ತೆರೆದ ಆ ಪುಟ್ಟ ಹುಡುಗ ಬ್ರಹ್ಮಾoಡವನ್ನೇ ತೋರಿಸಿದ ಕೃಷ್ಣನ ಹಾಗೆ ಕಾಣಿಸಿದ. ಅವನನ್ನು ಕರೆಯಲು ಒಳಗಿನಿಂದ ಒಂದು ಧ್ವನಿ ಕಿತ್ತು ಬರುತ್ತಿತ್ತು. ಸುಮಾ ಕರೆ ಎತ್ತಿದಳು.. ‘ಮಿಸಸ್ ಭಾಗೀರಥಿ. ಏನಾಯ್ತು?’ ಎಂದು ಕೂಗುತ್ತಿದ್ದಾಳೆ. ವಸು ಚಿಕ್ಕಿ ‘ಉಸಿರು ತಗೋ ಭಾಗಿ.’ ಎಂದು ಗಾಳಿ ಹಾಕುತ್ತಿದ್ದಾಳೆ. ಇನ್ನೇನು ಅವನು ನುಂಗಬೇಕು ಎನ್ನುವಲ್ಲಿ ನಾನು ಅಳುತ್ತಾ ಕೈಮುಗಿದು ‘ಮುಗಿಲುsss’ ಎಂದು ಕೂಗಿದೆ. ಕತ್ತಲು ಆವರಿಸಿತು. ಅದಷ್ಟೇ ನೆನಪು… 

ಇದಾದ ಮೇಲೆ ಆಸ್ಪತ್ರೆಯಲ್ಲಿ ಒಂದು ವಾರವಿದ್ದೆ. ಮನೆಗೆ ಬಂದ ಮೇಲೆ ನಾನೇನನ್ನೋ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನಿಸುತ್ತಿರುತ್ತದೆ. ಮತ್ತೆ ಎಂದಾದರೂ ಆ ಹುಡುಗ ನನ್ನ ಕನಸಿನಲ್ಲಿ ಸುಳಿದು ಅಲ್ಲಿಂದ ಮತ್ತೆ ಎದ್ದು ಬಂದು ಕನ್ನಡಿಯ ಮುಂದೆ ಕೂರುತ್ತದೇನೋ ಎಂಬ ಭಯಮಿಶ್ರಿತ ನಿಗೂಢ ಆಸೆ ಹುಟ್ಟಿ ಮಾಯವಾಗುತ್ತದೆ. 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

ಉತ್ತರದ ಹಿಮಾಲಯ ಭಾರತೀ ಗುರು ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಗುರು ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುತ್ತಿರುವ ಗುರು ಸಕಲಮಾ ಅವರ ಆತ್ಮಕಥನ ಸದ್ಯದಲ್ಲೇ ಹೊರಬರಲಿದೆ.

VISTARANEWS.COM


on

ಗುರು ಸಕಲಮಾ guru sakalamaa
Koo

ಹಿಮಾಲಯದ ಮಹಾನ್‌ ಯೋಗಿ ಸ್ವಾಮಿ ರಾಮ (Himalayan Yogi Swami Rama) ಹಾಗೂ ಬಹುಶ್ರುತ ವಿದ್ವಾಂಸ, ಶ್ರೀವಿದ್ಯಾ ಗುರು, ಪದ್ಮಶ್ರೀ ಪುರಸ್ಕೃತ ಡಾ. ರಾ. ಸತ್ಯನಾರಾಯಣ (R Satyanarayana) ಅವರುಗಳ ನೇರ ಶಿಷ್ಯೆ, ಶ್ರೀವಿದ್ಯಾ (Shrividya) ಸಾಧಕಿ ಸಕಲಮಾ ಅವರ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಆತ್ಮಕಥನ ಪುಸ್ತಕ ರೂಪದಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ (Messages from Himalayan Sages- Timely and Timeless) ಸದ್ಯದಲ್ಲೇ ಹೊರಬರಲಿದೆ. ಈ ಹಿನ್ನೆಲೆಯಲ್ಲಿ, ಕೃತಿಯ ಮುಖಪುಟ ಅನಾವರಣ (cover page launch) ಇದೇ ಮೇ 26ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆಯಲಿದೆ. ಸಂಸದ ತೇಜಸ್ವಿ ಸೂರ್ಯ (Tejaswi Surya), ಸಾಹಿತಿ, ಪತ್ರಕರ್ತ ಜೋಗಿ (Jogi), ಕಾಂತಾರ (Kantara) ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗುರು ಸಕಲಮಾ ತಮ್ಮ ಪೂರ್ವಾಶ್ರಮದಲ್ಲಿ ಜ್ಯೋತಿ ಪಟ್ಟಾಭಿರಾಂ ಹೆಸರಿನಿಂದಲೇ ನೃತ್ಯವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದವರು. ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಪ್ರೊಫೆಸರ್‌ ಆಗಿ ಸಾವಿರಾರು ಮಕ್ಕಳಿಗೆ ಇಂಗ್ಲೀಷ್‌ ಬೋಧನೆ ಮಾಡಿದವರು. ಇದರ ಜೊತೆಜೊತೆಗೇ, ತಾನು ಬಾಲ್ಯದಿಂದ ಕಲಿತ ಭರತನಾಟ್ಯವನ್ನೂ ಪೋಷಿಸಿ, ತನ್ನದೇ ಆದ ನೃತ್ಯ ಸಂಸ್ಥೆಯನ್ನು ಕಟ್ಟಿ ನೀರೆರೆದು, ಹಲವಾರು ನೃತ್ಯಪ್ರತಿಭೆಗಳನ್ನು ಬೆಳೆಸಿದವರು. ನೃತ್ಯಕ್ಷೇತ್ರದ ಇವರ ಸಾಧನೆಗೆ ಕರ್ನಾಟಕ ಸರ್ಕಾರ ಕೊಡುವ ಉನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿರುವುದು ಇವರ ಸಾಧನೆಯ ಹಾದಿಯ ಮೈಲುಗಲ್ಲುಗಳಲ್ಲಿ ಒಂದು. ಇವಿಷ್ಟೇ ಅಲ್ಲದೆ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಯೋಗ- ನಾಟ್ಯ ಸರಸ್ವತಿ, ಆಸ್ಟ್ರೇಲಿಯಾ ಕನ್ನಡ ಸಂಘ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರ ಸನ್ಮಾನಗಳು ಇವರಿಗೆ ಸಂದಿವೆ. ನೂರಾರು ಪ್ರದರ್ಶನಗಳನ್ನೂ ನೀಡಿ ಅಪಾರ ನೃತ್ಯಾಭಿಮಾನಿಗಳನ್ನೂ ಹೊಂದಿದ್ದಾರೆ.

ಇವೆಲ್ಲ ಸಾಧನೆಯ ಜೊತೆಜೊತೆಗೇ, ಜ್ಯೋತಿ ಪಟ್ಟಾಭಿರಾಂ ಅವರು ಇನ್ನೊಂದು ಕ್ಷೇತ್ರದಲ್ಲೂ ಸಮನಾಗಿ ಹೆಜ್ಜೆಯೂರಿ ಬೆಳೆದಿದ್ದೇ ಒಂದು ವಿಸ್ಮಯದ ಗಾಥೆ. ಅದು ಅಧ್ಯಾತ್ಮ. 1992ರವರೆಗೆ ಜ್ಯೋತಿ ಪಟ್ಟಾಭಿರಾಂ ಅವರು ತಮ್ಮ ಬದುಕಿನ ಹಾದಿ ಈ ದಿಕ್ಕಿನಲ್ಲಿ ಹೊರಳೀತು ಎಂಬ ಕಲ್ಪನೆಯನ್ನೂ ಹೊಂದಿರಲಿಲ್ಲ. ಯೋಗಾಚಾರ್ಯ ಪಟ್ಟಾಭಿರಾಂ ಅವರ ಜೀವನ ಸಂಗಾತಿಯಾಗಿ, ತನ್ನ ಕಾಲೇಜು, ನೃತ್ಯ ತರಗತಿಗಳು, ನೃತ್ಯ ಪ್ರದರ್ಶನಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರಿಗೆ ಹಿಮಾಲಯನ್‌ ಯೋಗಿ ಸ್ವಾಮಿ ರಾಮ ಅವರ ಭೇಟಿಯಾದದ್ದೇ ಒಂದು ಆಸಕ್ತಿದಾಯಕ ಕತೆ. ಅಲ್ಲಿಂದ ನಂತರ ಬದುಕು ಬೇರೆಯದೇ ದಿಕ್ಕಿನತ್ತ ಮುಖ ಮಾಡಿದರೂ, ಅಧ್ಯಾತ್ಮವನ್ನೂ, ನೃತ್ಯವನ್ನೂ, ತನ್ನ ಉದ್ಯೋಗವನ್ನೂ ಸಮದೂಗಿಸಿಕೊಂಡು ಕೆಲಸ ಮಾಡಿದರು. ತಮ್ಮ ಗುರು ಸ್ವಾಮಿ ರಾಮ ಅವರಿಂದ ಶ್ರೀವಿದ್ಯೆಯಲ್ಲಿ ಅತ್ಯಂತ ಶ್ರೇಷ್ಠವಾದ ಶಾಂಭವ ದೀಕ್ಷೆಯನ್ನು ಪಡೆದ ಇವರು, ಗುರುವಿನ ದೇಹತ್ಯಾಗದ ನಂತರವೂ ಅವರಿಂದ ಮಾರ್ಗದರ್ಶನಗಳನ್ನು ಪಡೆಯುತ್ತಾ ಬಂದವರು. ಅವರ ಈ ಅಧ್ಯಾತ್ಮದ ಹಾದಿಗೆ ಇನ್ನಷ್ಟು ಬಲ ಬಂದಿದ್ದು ಸ್ವಾಮಿ ರಾಮ ಅವರ ಮಾರ್ಗದರ್ಶನದ ಮೇರೆಗೆ ಮೈಸೂರಿನ ಖ್ಯಾತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ರಾ ಸತ್ಯನಾರಾಯಣ ಅವರ ಬಳಿ ದಕ್ಷಿಣದ ವಿದ್ಯಾರಣ್ಯ ಪರಂಪರೆಯಲ್ಲಿ ಶ್ರೀವಿದ್ಯೆಯ ಹೆಚ್ಚಿನ ಕಲಿಕೆಗೆ ತೆರಳಿದ ಮೇಲೆ.

ಹೀಗಾಗಿ ಉತ್ತರದ ಹಿಮಾಲಯನ್‌ ಭಾರತೀ ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಈಗ ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುವಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಅವರ ಈ ಬದುಕಿನ ಪುಟಗಳಲ್ಲಿ ನೂರಾರು ರೋಮಾಂಚನಗೊಳಿಸುವ ಅಧ್ಯಾತ್ಮದ ಅನುಭವಗಳಿವೆ. ಸುಮಾರು 30 ವರ್ಷಗಳ ಸುದೀರ್ಘ ಅಧ್ಯಾತ್ಮ ಸಾಧನೆಯ ವಿವಿಧ ಮಜಲುಗಳೆಲ್ಲವೂ, ಮೈನವಿರೇಳಿಸುವಂತ ಹಲವಾರು ಅನುಭವಗಳ ಜೊತೆಗೆ ಪುಸ್ತಕದ ಮೂಲಕ ಅಧ್ಯಾತ್ಮ ಆಸಕ್ತರನ್ನೂ ಸಾಧಕರನ್ನೂ, ಜನಸಾಮಾನ್ಯರನ್ನೂ ತಲುಪಲಿದ್ದು, ಋಷಿ ಪರಂಪರೆಯ ಬಗೆಗಿನ ಸಾಮಾನ್ಯರ ಅರಿವಿನ ವಿಸ್ತಾರಕ್ಕೆ ಹೊಸ ಭಾಷ್ಯ ಬರೆಯಲಿದ್ದಾರೆ.

ಕೃತಿ ಮುಖಪುಟ ಅನಾವರಣ, ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ
ದಿನಾಂಕ: ಮೇ 26, ಭಾನುವಾರ
ಸಮಯ: ಬೆಳಗ್ಗೆ 10.30
ಸಾನಿಧ್ಯ: ಗುರು ಸಕಲಮಾ
ಅತಿಥಿಗಳು: ಸಾಹಿತಿ ಜೋಗಿ, ಸಂಸದ ತೇಜಸ್ವಿ ಸೂರ್ಯ, ನಟಿ ಸಪ್ತಮಿ ಗೌಡ

ಇದನ್ನೂ ಓದಿ: Daredevil Mustafa: ಪುಸ್ತಕ ರೂಪ ಪಡೆದ ʻಡೇರ್ ಡೆವಿಲ್‌ ಮುಸ್ತಾಫಾʼ ಸಿನಿಮಾ!

Continue Reading

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಮೇ 19ರಂದು ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ

Bengaluru News: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ.ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

VISTARANEWS.COM


on

7 books release programme on May 19 in Bengaluru
Koo

ಬೆಂಗಳೂರು: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ (Bengaluru News) ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ.

ಇದನ್ನೂ ಓದಿ: SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ. ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

ವೀರಕಪುತ್ರ ಆಶಯನುಡಿಗಳನ್ನಾಡಲಿದ್ದಾರೆ. ಶೋಭಾ ರಾವ್‌ ಮತ್ತು ಅನಂತ ಕುಣಿಗಲ್‌ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.

ಇದನ್ನೂ ಓದಿ: Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

ಲೋಕಾರ್ಪಣೆಗೊಳ್ಳಲಿರುವ ಕೃತಿಗಳು ಹಾಗೂ ಕೃತಿಕಾರರ ವಿವರ

ಡಾ. ಲಕ್ಷ್ಮಣಕೌಂಟೆ ಅವರ ಮಹಾವಿನಾಶ (ಕಾದಂಬರಿ), ಕೌಂಡಿನ್ಯ ಅವರ ಬೆಳವಡಿ ಮಲ್ಲಮ್ಮ (ಕಾದಂಬರಿ), ರಾಘವೇಂದ್ರ ಪ್ರಭು ಎಂ. ಅವರ ಬಹುತ್ವ ಭಾರತ ಕಟ್ಟಿದವರು (ಬದುಕು ಬರಹಗಳು), ವಿ. ಗೋಪಕುಮಾರ್‌ ಅವರ ಕಗ್ಗಕ್ಕೊಂದು ನ್ಯಾನೋ ಕಥೆ (ನ್ಯಾನೋ ಕತೆಗಳು), ಗೀತಾ ದೊಡ್ಮನೆ ಅವರ ನೀಲಿ ಶಾಯಿಯ ಕಡಲು (ಕವಿತೆಗಳು), ಮೇದಿನಿ ಕೆಸವಿನಮನೆ ಅವರ ಮಿಸ್ಸಿನ ಡೈರಿ (ಅನುಭವ ಕಥನ), ಪಾರ್ವತಿ ಪಿಟಗಿ ಅವರ ಪುನರುತ್ಥಾನ (ಕಾದಂಬರಿ) ಲೋಕಾರ್ಪಣೆಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಕಲೆ/ಸಾಹಿತ್ಯ

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್- ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಕೃತಿಯನ್ನು ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Konkani Book Release ) ಬಿಡುಗಡೆಗೊಳಿಸಿದರು. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಜಿಎಸ್‌ಬಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇದೊಂದು ಅಪೂರ್ವ ಕೃತಿಯಾಗಿದೆ.

VISTARANEWS.COM


on

By

Konkani Book Release
Koo

ಮಂಗಳೂರು: ಇಟಾಲಿಯನ್- ಬ್ರಿಟಿಷ್ ಲೇಖಕ (Italian-born British citizen) ಗಿನೋ ಡಿ’ಕ್ಲೆಮೆಂಟೆ ಅವರು ಸಂಪಾದಿಸಿದ ಕೃತಿ ”ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ’ ಕೃತಿಯನ್ನು (Konkani Book Release) ಕೇರಳದ (kerala) ಎರ್ನಾಕುಲಂನಲ್ಲಿರುವ (Ernakulam) ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Samyameendra Thirtha Swamiji ) ಬಿಡುಗಡೆಗೊಳಿಸಿದರು.

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್-ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಸಂವಾದಾತ್ಮಕ ಜಿಎಸ್‌ಬಿ (ಗೌಡ ಸಾರಸ್ವತ ಬ್ರಾಹ್ಮಣ) ಕೊಂಕಣಿ ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ರಚಿಸಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಪ್ರತಿಷ್ಠಿತ ದಿಗ್ವಿಜಯ್ ಮಹೋತ್ಸವದಲ್ಲಿ ಅನಾವರಣಗೊಂಡ ಈ ಮಾರ್ಗದರ್ಶಿ ಕೃತಿ ಶ್ರೀಮಂತ ಭಾರತೀಯ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಮಹತ್ವದ ಮೈಲುಗಲ್ಲನ್ನು ಗುರುತಿಸುತ್ತದೆ.


Gino’s Guide for Conversational GSB Konkani ಕೃತಿಯು ಜಿ ಎಸ್ ಬಿ ಸಮುದಾಯದ ಪರಂಪರೆಯನ್ನು ಪೋಷಿಸುವ ಸಮರ್ಪಿತ ಸಂಸ್ಥೆಯಾದ ಜಿಎಸ್ ಬಿ ವರ್ಲ್ಡ್‌ವೈಡ್‌ನ ಯುವಜನರಿಂದ ಸುಗಮಗೊಳಿಸಲ್ಪಟ್ಟ ಅಡ್ಡ-ಸಾಂಸ್ಕೃತಿಕ ತಿಳುವಳಿಕೆ ಮತ್ತು ಭಾಷಾ ಸಂರಕ್ಷಣೆಗೆ ಅಸಾಧಾರಣ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಕೃತಿಯ ಕುರಿತು ಮಾತನಾಡಿದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಇದು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ಮೇಲೆ ಬೀರುವ ಮಹತ್ವದ ಪರಿಣಾಮವನ್ನು ಒತ್ತಿ ಹೇಳುತ್ತದೆ ಎಂದರು.

ಗಿನೋ ಡಿ ಕ್ಲೆಮೆಂಟೆ ಅವರ ಕೆಲಸವು ಸಮರ್ಪಣಾ ಶಕ್ತಿ ಮತ್ತು ಸಾಂಸ್ಕೃತಿಕ ಮೆಚ್ಚುಗೆಗೆ ಸಾಕ್ಷಿಯಾಗಿದೆ. ನಮ್ಮ ಸಮುದಾಯದ ಹೊರಗಿನವರಿಂದ ಅಂತಹ ಆಳವಾದ ತೊಡಗಿಸಿಕೊಳ್ಳುವಿಕೆಯನ್ನು ನೋಡುವುದು ಅಪರೂಪ. ಈ ಮಾರ್ಗದರ್ಶಿ ನಮ್ಮ ಭಾಷಾ ಸಂರಕ್ಷಣೆಯ ಪ್ರಯತ್ನಗಳಲ್ಲಿ ಒಂದು ಸ್ಮಾರಕ ಸಾಧನೆಯಾಗಿದೆ ಎಂದು ಹೇಳಿದರು.

ಮಾರ್ಗದರ್ಶಿಯು ದೈನಂದಿನ ಸಂಭಾಷಣೆಗಳಿಗೆ ಪ್ರಾಯೋಗಿಕ ನುಡಿಗಟ್ಟುಗಳು ಮತ್ತು ಉದಾಹರಣೆಗಳೊಂದಿಗೆ ಉಚ್ಚಾರಣೆ, ವ್ಯಾಕರಣ ಮತ್ತು ಶಬ್ದಕೋಶದ ವಿವರವಾದ ಅವಲೋಕನವನ್ನು ನೀಡುತ್ತದೆ. ಇದು ಆರಂಭಿಕ ಮತ್ತು ಮುಂದುವರಿದ ಕಲಿಯುವವರಿಬ್ಬರನ್ನೂ ಪೂರೈಸುತ್ತದೆ, ಜಿಎಸ್ ಬಿ ಕೊಂಕಣಿಯನ್ನು ಕರಗತ ಮಾಡಿಕೊಳ್ಳಲು ಉತ್ಸುಕರಾಗಿರುವ ಯಾರಿಗಾದರೂ ಇದೊಂದು ಬಹುಮುಖ್ಯ ಸಂಪನ್ಮೂಲವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

ಲೇಖಕರ ಹಿನ್ನೆಲೆ ಏನು?

ಜಿನೋ ಡಿ ಕ್ಲೆಮೆಂಟೆ ಮೂಲತಃ ಇಟಲಿಯವರಾಗಿದ್ದು, ಈಗ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಮದುವೆಯ ಮೂಲಕ ಜಿ ಎಸ್ ಬಿ ಸಂಸ್ಕೃತಿಗೆ ಆಳವಾದ ವೈಯಕ್ತಿಕ ಸಂಪರ್ಕವನ್ನು ಹೊಂದಿದ್ದಾರೆ. ಅವರ ಸಂಗಾತಿಯು ಕರ್ನಾಟಕದ ಕಾರ್ಕಳ ತಾಲೂಕಿನ ಮೂಲದವರಾಗಿದ್ದಾರೆ. ಈ ಕೌಟುಂಬಿಕ ಬಂಧವು ಜಿನೋ ಅವರ ಜಿಎಸ್‌ಬಿ ಕೊಂಕಣಿಯ ತಲ್ಲೀನಗೊಳಿಸುವ ಅಧ್ಯಯನಕ್ಕೆ ಪ್ರೇರೇಪಿಸಿತು. ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಉತ್ಸಾಹವು ಈ ಸಮಗ್ರ ಮಾರ್ಗದರ್ಶಿಯಲ್ಲಿ ಉತ್ತುಂಗಕ್ಕೇರಿತು. ಭಾರತೀಯ ಭಾಷೆಗಳ ದಾಖಲೀಕರಣ ಮತ್ತು ಪ್ರಚಾರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ.

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

ಧವಳ ಧಾರಿಣಿ ಅಂಕಣ: ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು.

VISTARANEWS.COM


on

king dasharatha dhavala dharini
Koo

ಕರ್ಮಫಲವನ್ನು ತಾನೇ ಅರಿತು ಅನುಭವಿಸಿದ ಸೂರ್ಯವಂಶದ ಮಹಾನ್ ಚಕ್ರವರ್ತಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕವೆನ್ನುವುದು ದಶರಥನಿಗೆ ಮಹಾನ್ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ಆತ ಏನೆಲ್ಲ ಕಸರತ್ತನ್ನು ಮಾಡಿದ್ದ ಎನ್ನುವುದನ್ನು ನೋಡಿದ್ದೇವೆ.

ಕೈಕೇಯಿ ಮಂಥರೆಯ ದುರ್ಬೋಧನೆಯಿಂದ ಎಷ್ಟರಮಟ್ಟಿಗೆ ಪ್ರಭಾವಿತಳಾಗಿದ್ದಳೆಂದರೆ ಅರಸನ ಯಾವ ಒದ್ದಾಟವೂ ಅವಳನ್ನು ಕರಗಿಸಲಿಲ್ಲ. ರಾಮನನ್ನು ಬಿಟ್ಟರೆ ತಾನು ಬದುಕಿರಲಾರೆ ಎನ್ನುವ ಮಾತುಗಳು ಕಾದ ಮರಳಲ್ಲಿ ಬಿದ್ದ ನೀರಿನಂತೆಯೇ ಇಂಗಿಹೋಯಿತು. ಕೈಕೇಯಿ ತಿರುಗಿ ರಾಜನಿಗೆ ಧರ್ಮೋಪದೇಶ ಮಾಡುತ್ತಾಳೆ. ಶೈಭ್ಯ, ಅಲರ್ಕ ಮೊದಲಾದ ರಾಜರ್ಷಿಗಳು ಪ್ರತಿಜ್ಞಾಬದ್ಧರಾಗಿ ತಮ್ಮ ತಮ್ಮ ಜೀವವನ್ನೇ ಒತ್ತೆಯಾಗಿರಿಸಿದ ಸಂಗತಿಯನ್ನು ಹೇಳುತ್ತಾ ಪರೋಕ್ಷವಾಗಿ ದೊರೆಯ ಸಾವಿನ ಕುರಿತು ತಾನು ಅಂಜುವವಳಲ್ಲ ಎನ್ನುತ್ತಾಳೆ. ಅವಳಿಗೆ ತನ್ನ ಮಗ ಭರತ ಪಟ್ಟಕ್ಕೇರಲೇ ಬೇಕಾಗಿದೆ. ಆಕೆ ಕೌಸಲ್ಯೆಯನ್ನು ಎಷ್ಟರಮಟ್ಟಿಗೆ ದ್ವೇಷಿಸುತ್ತಿದಳೆಂದರೆ “ರಾಮ ಪಟ್ಟಾಭಿಷೇಕವಾದೊಡನೆಯೇ ರಾಜಮಾತೆಯಾಗಿ ಸಕಲಪ್ರಜೆಗಳಿಂದ ಗೌರವವನ್ನು ಸ್ವೀಕರಿಸುವ ಕೌಸಲ್ಯೆಯನ್ನು ತಾನು ಒಂದು ದಿನವೂ ನೋಡಿಸಹಿಸಲಾರೆ ಎನ್ನುತ್ತಾಳೆ. ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಕೌಸಲ್ಯೆಯೊಂದಿಗೆ ನಿತ್ಯವೂ ರಮಿಸಲು ಇಚ್ಛಿಸುವ ನಿನ್ನ ಹುನ್ನಾರ ತನಗೆ ಗೊತ್ತು ಎಂದು ಜರಿಯುತ್ತಾಳೆ.

ದಶರಥನಿಗೆ ಮಾತು ಬಾರದಾಗಿದೆ. ಆತ ರಾಮನನ್ನು ಕಾಡಿಗೆ ಕಳುಹಿಸುವುದು ಬೇಡವೆಂದು ಬಗೆಬಗೆಯಲ್ಲಿ ಗೋಳಾಡುತ್ತಾನೆ. ಸ್ತ್ರೀಸುಖಕ್ಕೊಸ್ಕರವಾಗಿ ತನ್ನ ಪ್ರಿಯಸುತನನ್ನೇ ಅರಣ್ಯಕ್ಕೆ ಕಳುಹಿಸಿದ ತನ್ನನ್ನು ಅತಿಕಾಮಿಯೆಂದು ಪುರಜನರು ಆಡಿಕೊಳ್ಳುವರು, ಆ ಅಪವಾದ ಬರುತ್ತದೆಯೆಂದು ಗೋಗೆರೆಯುತ್ತಾನೆ. “ಹೆಂಗಸರೆಲ್ಲ ಮೋಸಗಾರರು, ಸ್ವಾರ್ಥಪರಾಯಣರು ಎಂದು ಉದ್ವೇಗದಿಂದ ಕೂಗಾಡುತ್ತಾನೆ. ಬಹುಶಃ ಆಗ ಆತನಿಗೆ ತನ್ನ ಹಿರಿಯ ಹೆಂಡತಿಯರಾದ ಕೌಸಲ್ಯೆ ಮತ್ತು ಸುಮಿತ್ರೆಯರ ನೆನಪಾಗಿರಬೇಕು. ಇಲ್ಲ, ಪ್ರಪಂಚದಲ್ಲಿ ಎಲ್ಲಾ ಹೆಂಗಸರೂ ಹಾಗಿಲ್ಲ’ ಕೇವಲ ಭರತನ ತಾಯಿಗೆ ಮಾತ್ರ ತನ್ನ ಮಾತು ಅನ್ವಯಿಸುತ್ತದೆ ಎಂದು ಕೂಗಾಡುತ್ತಾನೆ. ರಾಮನನ್ನು ಅರಣ್ಯಕ್ಕೆ ಕಳುಹಿಸುವ ಒಂದು ಮಾತನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು ಎನ್ನುವ ಮಾತುಗಳು ಕೈಕೇಯಿಯ ಮೇಲೆ ಪರಿಣಾಮ ಬೀರದಿದ್ದಾಗ ಕೊನೆಯ ಅಸ್ತ್ರವೆನ್ನುವಂತೆ ದಶರಥ ಲೋಕಮರ್ಯಾದೆಯನ್ನು ಮೀರಿ ಅನಾಥನಂತೆ ಗೋಳಾಡುತ್ತಾ ಆಕೆಯ ಕಾಲಿಗೆ ನಮಸ್ಕರಿಸಲು ಹೋಗುತ್ತಾನೆ. ಆಗ ಕೈಕೇಯಿ ತಿರಸ್ಕಾರದಿಂದ ತನ್ನ ಕಾಲನ್ನು ದೂರಕ್ಕೆ ಚಾಚಿದುದರಿಂದ ಅವೂ ಆತನಿಗೆ ಸಿಕ್ಕದೇ ರೋಗಿಯೊಬ್ಬ ತತ್ತರಿಸಿ ಬೀಳುವಂತೆ ನೆಲದಮೇಲೆ ಬೀಳುತ್ತಾನೆ. ಅವನ ಈ ಸ್ಥಿತಿಯನ್ನು ನೋಡಿದ ರಾಮಾಯಣದ ಕವಿ ವಾಲ್ಮೀಕಿಗೂ ದಶರಥನ ಮೇಲೆ ಹೇಸಿಗೆಯುಂತಾಗುತ್ತದೆ. ಚಕ್ರವರ್ತಿ ತನ್ನ ಘನತೆಯನ್ನು ಮರೆತು ಹೀಗೆ ಮಾಡಬಾರದಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ.

ಅತದರ್ಹಂ ಮಹಾರಾಜಂ ಶಯಾನಮತಥೋಚಿತಮ್.
ಯಯಾತಿಮಿವ ಪುಣ್ಯಾನ್ತೇ ದೇವಲೋಕಾತ್ಪರಿಚ್ಯುತಮ್৷৷ಅಯೋ. .13.1৷৷

ರಾಜಾಧಿರಾಜನಾದಂತಹ ದಶರಥನು ಕೈಕೇಯಿಯ ಪಾದಗಳ ಮೇಲೆ ಬೀಳಲು ಹೋಗಬಾರದಿತ್ತು(ಅತದರ್ಹಂ) ಎಂದು ಬಹಿರಂಗವಾಗಿಯೇ ಸಿಡಿಮಿಡಿಗೊಳ್ಳುತ್ತಾನೆ. ರಾಮಾಯಣದ ಈ ಸನ್ನಿವೇಶ ವಾಲ್ಮೀಕಿಯ ಕಣ್ಣಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣುತ್ತಿದೆ. ನಿರುಧ್ವಿಘ್ನವಾಗಿ ಕಥೆಯನ್ನು ಹೇಳುತ್ತಾಹೋಗಬೇಕಾದ ಕವಿ ಸೀತೆಗೆ ತೊಂದರೆಯಾದ ಉತ್ಕಟಕ್ಷಣಗಳಲ್ಲಿ ರಸಭಾವವನ್ನು ಹತ್ತಿಕ್ಕಲಾರದೇ ತಾನೇ ಕಥೆಯೊಳಗೆ ಪ್ರವೇಶಿಸುವುದುಂಟು. ಆದರೆ ಇಲ್ಲಿ ಮಾತ್ರ ಆತನಿಗೆ ದಶರಥನ ಒಟ್ಟಾರೆಯ ವ್ಯವಹಾರವೇ ರೇಜಿಗೆ ಹುಟ್ಟಿಸಿದೆ. ಕೈಕೇಯಿಯನ್ನು ಇಕ್ಷಾಕುವಂಶಕ್ಕೇ ಅನರ್ಥಕಾರಿಣಿಯೆಂದು ತಿರಸ್ಕಾರದಿಂದ ಕವಿಹೇಳುತ್ತಾನೆ. ಸೂರ್ಯವಂಶದ ಪುಣ್ಯದ ಕಾರಣದಿಂದ ದಶರಥನಿಗೆ ಕೈಕೇಯಿಯ ಪಾದಗಳು ಸಿಗಲಿಲ್ಲ. ಎನ್ನುತ್ತಾನೆ. ಈ ಭಾಗವನ್ನು ದಶರಥವಿಲಾಪವೆನ್ನುವ ಹೆಸರಿನಿಂದ ಕರೆದರೂ ಇಲ್ಲಿ ಕಾಳಿದಾಸನ ಪ್ರಸಿದ್ಧಕಾವ್ಯ ರಘುವಂಶದ ಅಜವಿಲಾಪ ನೆನಪಿಗೆ ಬರುತ್ತದೆ. ರಘುವಂಶದಲ್ಲಿ ಅಜ ಮತ್ತು ಇಂದುಮತಿ ದಂಪತಿಗಳ ಪ್ರೇಮದ ವಿಷಯ ಪ್ರಸಿದ್ಧ. ದಿವ್ಯಪುಷ್ಪಮಾಲೆಯೊಂದು ಅಜನ ಪತ್ನಿ ಇಂದುಮತಿಯಮೇಲೆ ಬಿದ್ದಾಗ ಅವಳು ಮೃತಳಾಗುತ್ತಾಳೆ. ಆಗ ಅಜ ತನ್ನ ಪತ್ನಿಗಾಗಿ ಮಾಡುವ ದುಃಖವು ಅಜವಿಲಾಪವೆಂದೇ ಪ್ರಸಿದ್ಧಿಯಾಗಿದೆ. ಪತ್ನಿಯ ವಿರಹವನ್ನು ತಾಳಲಾರದೇ ಕುಗ್ಗಿ ಕುಗ್ಗಿ ಸಾಯುವ ಅಜನೂ ಸ್ತ್ರೀ ಕಾರಣದಿಂದ ಸಾಯುತ್ತಾನಾದರೂ ಅದು ಪ್ರೇಮಕಾವ್ಯದ ಉತ್ತುಂಗಗಳಲ್ಲೊಂದೆಂದು ಪರಿಗಳಿಸಲ್ಪಟ್ಟಿದೆ. ಅದರ ವಿರುದ್ಧವಾಗಿ ಅಜನ ಮಗನಾದ ದಶರಥನ ಒದ್ದಾಟವಿದೆ. ಅವನ ವಿಲಾಪಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಯಾರೂ ಬರುವುದಿಲ್ಲ. ಅವನ ವಿಲಾಪಕ್ಕೆ ರಾತ್ರಿಯೇ ಹೆದರಿ ಓಡಿಹೋಯಿತು.

ಬೆಳಗಾದರೂ ದೊರೆ ಗೋಳಾಡುವುದನ್ನು ಬಿಟ್ಟು ರಾಮನನ್ನು ಪಟ್ಟಗಟ್ಟುವ ಯಾವ ಸೂಚನೆಯನ್ನೂ ನೀಡುವುದಿಲ್ಲ. ಎಲ್ಲಿಯಾದರೂ ಬೇರೆಯವರಿಗೆ ತಿಳಿದರೆ ತನ್ನ ಕೆಲಸ ಕೆಟ್ಟಿತೆನ್ನುವ ಚಿಂತೆ ಕೈಕೇಯಿಯಲ್ಲುಂಟಾಯಿತು. ರಾಜನನ್ನು ಧರ್ಮಪರಿಪಾಲನೆಯೆನ್ನುವ ಹಗ್ಗದಲ್ಲಿ ಕಟ್ಟಿಹಾಕಿದ್ದಳು.

ಸತ್ಯಮೇಕಪದಂ ಬ್ರಹ್ಮ ಸತೇ ಧರ್ಮಃ ಪ್ರತಿಷ್ಠಿತಃ
ಸತ್ಯಮೇವಾಕ್ಷಯಾ ವೇದಾಃ ಸತ್ಯೇನೈವಾಪ್ಯತೇ ಪರಮ್ II ಅಯೋ.14-7II

ಸತ್ಯವೆನ್ನುವುದೇ ಬ್ರಹ್ಮವಾಚಕವಾದ ಪ್ರಣವಸ್ವರೂಪವು. ಸತ್ಯದಲ್ಲಿಯೇ ಸಮಸ್ತ ಧರ್ಮಗಳೂ ಅಡಗಿರುವವು. ಕ್ಷಯವೃದ್ಧಿಗಳಿಲ್ಲದ ವೇದಗಳು ಸತ್ಯದ ಸ್ವರೂಪಗಳೇ ಆಗಿವೆ. ಪರಮೋತ್ಕ್ರಷ್ಟವಾದ ಲೋಕಗಳೂ ಸತ್ಯದ ಅವಲಂಬನೆಯಿಂದಲೇ ಲಭಿಸುತ್ತವೆ.

ಸಮಗ್ರವಾದ ಉಪನಿಷತ್ತಿನ ಸಾರವನ್ನು ಸಾರುವ ಈ ಮಾತು ಕೈಕೇಯಿಯಿಂದ ಬೇರೆ ಯಾವ ಸಂದರ್ಭದಲ್ಲಿಯಾದರೂ ಬಂದಿದ್ದರೆ ಆಕೆಯನ್ನು ಗಾರ್ಗಿ, ಲೋಪಾಮುದ್ರಾ ಮೊದಲಾದವರಸಾಲಿಗೆ ಸೇರಿಸಿಬಿಡುತ್ತಿದ್ದರೇನೋ. ಆಕೆಯ ತಂದೆ ಅಶ್ವಪತಿ ವೈಶ್ವಾನರ ವಿದ್ಯೆಯನ್ನು ಉದ್ಧಾಲಕನಿಗೆ ಕಲಿಸಿದ ಕುರಿತು “ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ”. ರಾವಣನೂ ಸಹ ಎಲ್ಲಾ ವೇದಗಳನ್ನು ಓದಿಕೊಂಡಿದ್ದ. ಮೂಲತಃ ಸ್ವಭಾವದಲ್ಲಿ ಸಾತ್ವಿಕ ಗುಣಗಳಿಲ್ಲದಿದ್ದರೆ ಅವೆಲ್ಲವೂ ವ್ಯರ್ಥವಾಗುತ್ತದೆ. ಕೈಕೇಯಿಗಾಗಿರುವುದೂ ಅದೇ. ತನಗೆ ತಿಳಿದಿರುವ ಧರ್ಮಸೂತ್ರಗಳನ್ನು ತನ್ನ ಸ್ವಾಥಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ. ಗಂಗಾನದಿಯೇ ಆದರೂ, ಬಚ್ಚಲುಮನೆಯಿಂದ ಹೊರಬಂದರೆ ಅದನ್ನು ಯಾರೂ ತೀರ್ಥವೆಂದು ಪರಿಗಣಿಸುವುದಿಲ್ಲ. ರಾಜನನ್ನು ಕರೆದೊಯ್ಯಲು ಸುಮಂತ್ರ ಕೈಕೇಯಿಯ ಅರಮನೆಗೆ ಬಂದಾಗ ಎಲ್ಲದರಲ್ಲಿಯೂ ಸೋತ ರಾಜನೇ “ರಾಮನನ್ನು ನೋಡಬೇಕೆಂದಿದ್ದೇನೆ, ಅವನನ್ನಿಲ್ಲಿಗೆ ಕರೆದುಕೊಂಡು ಬಾ” ಎನ್ನುತ್ತಾನೆ. ಆಗಲೆಂದು ಹೊರಟ ಸುಮಂತ್ರನಿಗೆ ಮನಸ್ಸಿನಲ್ಲಿ ಏನೋ ಒಂಡು ಸಂಶಯಕಾಡಿತು. ಸಭೆಗೆಬಂದವ ಅದಾಗಲೇ ಬಂದುಸೇರಿದ್ದ ಅರಸರ ವಿಷಯಗಳನ್ನು ತಿಳಿಸುವ ನೆವಮಾಡಿ ಮತ್ತೊಮ್ಮೆ ಕೈಕೇಯಿಯ ಅಂತಃಪುರಕ್ಕೆ ಬಂದ. ಕೈಕೇಯಿಗೆ ರಾಮನನ್ನು ಗುಪ್ತವಾಗಿ ಅರಣ್ಯಕ್ಕೆ ಕಳುಹಿಸಿ ಭರತನನ್ನು ಪಟ್ಟಾಭಿಷೇಕಕ್ಕೆ ಏರಿಸಬೇಕಿತ್ತು. ಚಾಣಾಕ್ಷಳಾಗಿದ್ದ ಆಕೆಗೆ ಈ ವಿಷಯ ಬಹಿರಂಗಕ್ಕೆ ಬಂದರೆ ಸಾಮಂತರೆಲ್ಲರೂ ತಿರುಗಿಬೀಳುವರು ಎನ್ನುವುದರ ಅರಿವಿತ್ತು. ಅದಕ್ಕಾಗಿಯೇ ಅವಳು ರಾಮ ತನ್ನ ಮನೆಗೇ ಬರಲಿ ಎಂದು ರಾಜನನ್ನು ಒತ್ತಾಯಿಸಿದಳು. ಎರಡನೆಯ ಸಾರಿ ಸುಮಂತ ಬಂದಾಗ ಸ್ವಲ್ಪ ಸಿಟ್ಟಿನಿಂದಲೇ ರಾಮನನ್ನು ಇಲ್ಲಿಗೆ ಕರೆತರಬೇಕು. ಇದು ತನ್ನ ಆಜ್ಞೆ ಎಂದು ಕಠೋರವಾಗಿಯೇ ಹೇಳುತ್ತಾನೆ. “ದಶರಥನ ಮಾತು ಸೋತ ಹೊತ್ತು ಅದು”. ದೊರೆ ಅಸಹಾಯಕನಾಗಿದ್ದ. ತನ್ನೆದುರೇ ತನ್ನ ಪರವಾಗಿ ಕೈಕೇಯಿ ರಾಮನಲ್ಲಿ ತನ್ನ ವರದ ಕುರಿತು ಒಡಂಬರಿಸುತ್ತಿರುವಾಗ ಮೌನವಾಗಿದ್ದ. ನಾಲಿಗೆ ಮಾತನ್ನು ಆಡುವುದು ಬುದ್ಧಿಯಬಲದಿಂದ. ದಶರಥನ ಬುದ್ಧಿಯನ್ನು ಸಂಪೂರ್ಣವಾಗಿ ಕೈಕೇಯಿ ಆಕ್ರಮಿಸಿಕೊಂಡಿದ್ದಳು. ರಾಮನ ಪ್ರಿಯಮಾತೆ ಕೈಕೇಯಿ ರಾಜನ ಪರವಾಗಿ ಆಡುವ ಮಾತಾಗಿದ್ದಳು. ಸಮಯ ಸರಿದಷ್ಟೂ ತನಗೇ ಅಪಾಯವೆಂದು ಅವಳಿಗೆ ಅರಿವಾಗತೊಡಗಿತು. ತಂದೆಯ ನೋಡಲು ಬಂದ ರಾಮ ಆತನ ಚಿಂತೆಗೆ ಕಾರಣವನ್ನು ಕೇಳೆದರೆ ಆತನಲ್ಲಿ ದೊರೆಯ ಮನಸ್ಸಿನಲ್ಲಿರುವುದು ಭರತನು ರಾಜನಾಗುವ ಮತ್ತು ರಾಮನ ಅರಣ್ಯಗಮನದ ವರಗಳನ್ನು ಹೇಳುತ್ತಾಳೆ. ಅಷ್ಟೇ ಅಲ್ಲ,’ “ಎಲ್ಲಿಯವರೆಗೆ ನೀನು ಈ ಅಯೋಧ್ಯೆಯನ್ನು ಬಿಟ್ಟು ಅರಣ್ಯಕ್ಕೆ ಹೋಗುವುದಿಲ್ಲವೋ ಅಲ್ಲಿಯವರೆಗೆ ರಾಜನು ಸ್ನಾನವನ್ನೂ ಮಾಡುವುದಿಲ್ಲ, ಊಟವನ್ನೂ ಮಾಡುವುದಿಲ್ಲ” ಎನ್ನುವ ಮಾತನ್ನು ಹೇಳಿದಾಗ ರಾಮ ಇನ್ನು ತಡಮಾಡುವುದು ಸರಿಯಲ್ಲವೆಂದು ಅರಣ್ಯಕ್ಕೆ ಹೊರಟಕಥೆ ಎಲ್ಲರಿಗೂ ಚಿರಪರಿಚಿತ.

dhavala dharini king dasharatha

ದಶರಥನಿಗೆ ರಾಮನ ಅಗಲುವಿಕೆಯ ದುಃಖಕ್ಕಿಂತ ಆತ ಸುಮಂತ್ರನ ಹತ್ತಿರ ತನ್ನ ತಂದೆ ಮತ್ತು ತಾಯಿಗೆ ಹೇಳುವ ಸಂದೇಶ ಇನ್ನಷ್ಟು ಶೋಕವನ್ನು ಕೊಡುತ್ತದೆ. ರಾಮ ತನ್ನ ತಾಯಿಗೆ ತಾಳ್ಮೆಯಿಂದ ಇರಲು ಹೇಳಿಕಳುಹಿಸುತ್ತಾನೆ. ಹದಿನಾಲ್ಕುವರ್ಷಗಳ ತನಕ ಹೇಗೋ ಭರತನ ಜೊತೆ ಹೊಂದಿಕೊಂಡು ಹೋಗು ಎಂದಿದ್ದ. ಭರತನಿಗೂ ಕೈಕೇಯಿಯಂತೇ ತನ್ನ ತಾಯಯಿಂದರನ್ನು ನೋಡಿಕೊಳ್ಳುವಂತೆ ಕಾಠಿಣ್ಯದಿಂದ ತುಂಬಿದ ಎಚ್ಚರಿಕೆಯ ಸಂದೇಶನ್ನು ಕಳಿಹಿಸುತ್ತಾನೆ. ಕೌಸಲ್ಯಯ ಕುರಿತು ಹೇಳುವಾಗ ರಾಮನ ಕಣ್ಣಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಲಕ್ಷ್ಮಣ ಕ್ರುದ್ಧನಾಗಿರುವ ವಿಷಯವನ್ನು ಹೇಳುವಾಗ ಅರಸನಿಗೆ ಕಾಮಮೋಹಿತನಾಗಿದ್ದ ತಾನೇ ಅವಸರದಿಂದ ಕೈಕೇಯಿಯನ್ನು ಓಲೈಸಲು ಹೋದೆ ಅನಿಸುತ್ತದೆ. ರಾಜ ಯಾವ ನಿರ್ಣಯಗಳನ್ನು ಕೈಗೊಳ್ಳುವಾಲೂ ಮೊದಲು ಅಮಾತ್ಯರೊಡನೆ ಸಮಾಲೋಚಿಸಿ ಅವರ ಸಲಹೆಪಡೆದು, ಅದು ಧರ್ಮಸಮ್ಮತವಾಗಿದ್ದರೆ ತನಗೆ ಯುಕ್ತವಾದ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲಿ ಅದೇನನ್ನೂ ಮಾಡದೇ ಇರುವ ಅಪರಾಧೀ ಭಾವ ಕಾಡುತ್ತದೆ. ವನವಾಸಕ್ಕೆ ಹೊರಟ ರಾಮ, ಸೀತಾ ಲಕ್ಷ್ಮಣರು ನಗುತ್ತಲೇ ಹೊರಟರು, ಗುಹನಲ್ಲಿ ಆಲದ ಹಾಲನ್ನು ತರಿಸಿ ತಪಸ್ವಿಗಳಂತೆ ಜಟಾಧಾರಿಯಾದ ವಿಷಯವನ್ನು ಕೇಳಿದ ಕೌಸಲ್ಯೆಯ ಮಾತ್ರಭಾವಕ್ಕೆ ಬಲವಾದ ನೋವನ್ನು ಕೊಡುತ್ತದೆ. ಅನೇಕವರ್ಷಗಳಕಾಲ ಧಶರಥನಿಂದ ಅಲಕ್ಷಕ್ಕೆ ಒಳಗಾದರೂ ಆಕೆ ಅದನ್ನೆಲ್ಲ ಸಹಿಸಿಕೊಂಡು ಮೌನಿಯಾಗಿದ್ದವಳು ಬಲುತೀಕ್ಷ್ಣವಾದ ಮಾತುಗಳಿಂದ ಗಂಡನನ್ನು ನಿಂದಿಸುತ್ತಾಳೆ. ಕೊನೆಯದಾಗಿ “ಮಹರಾಜಾ! ನಿನ್ನ ಈ ದುಶ್ಚರ್ಯೆಯಿಂದಾಗಿ ನಾನು ಮತ್ತು ನನ್ನ ಮಗನು ಮಾತ್ರ ವಿನಾಶ ಹೊಂದಲಿಲ್ಲ. ರಾಮನನ್ನು ಕಾಡಿಗಟ್ಟಿ ರಾಷ್ಟ್ರಸಹಿತವಾದ ರಾಜ್ಯವನ್ನು ಹಾಳುಮಾಡಿದೆ. (ಹತಂ ತ್ವಯಾ ರಾಜ್ಯಮಿದಂ ಸರಾಷ್ಟ್ರಂ ಹತಸ್ತಥಾತ್ಮಾ ಸಹ ಮಂನ್ತ್ರಿಭಿಶ್ಚ) ಮಂತ್ರಿಗಳೊಡನೇ ನೀನೂ ಹಾಳಾದೆ” ಎನ್ನುವ ಕಠೋರಮಾತುಗಳನ್ನಾಡುತ್ತಾಳೆ.

ಅದುತನಕ ಅದುಮಿಟ್ಟುಕೊಂಡ ಅವಮಾನ, ತಿರಸ್ಕಾರಗಳೆಲ್ಲವೂ ಸ್ಪೋಟಗೊಂಡಹೊತ್ತು ಅದು. ಆಕೆಯ ಮಾತುಗಳು ಎಷ್ಟು ತೀಕ್ಷ್ಣವಾಗಿತ್ತೆಂದರೆ ದಶರಥ ಅದನ್ನು ಕೇಳಿದವನೇ ಮೂರ್ಛಿತನಾದ. ಆತನನ್ನು ಉಪಚರಿಸಿದ ಕೌಸಲ್ಯೆ ತಾನು ಹಾಗೇ ಮಾತಾಡಬಾರದಾಗಿತ್ತೆಂದು ದುಃಖಪಡುತ್ತಾಳೆ. ದಶರಥನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾಳೆ. ಕೌಸಲ್ಯಾ ಮತ್ತು ಸುಮಿತ್ರಾ ಇಬ್ಬರೂ ಸೇರಿ ಗಂಡನ ಶುಶ್ರೂಷೇ ಮಾಡುತ್ತಾ ತಾವೇ ದುಃಖಿಸುತ್ತಲೂ ಇರುತ್ತಾರೆ. ದಶರಥನಿಗೆ ತಾನು ಇಷ್ಟೆಲ್ಲಾ ಒಳ್ಳೆಯ ಕಾರ್ಯವನ್ನು ಮಾಡಿದರೂ ತನಗೆ ಏಕೆ ಹೀಗೆ ಆಯಿತು ಎಂದು ಚಿಂತಿಸುತ್ತಾ ಯಾವುದೋ ಒಂದು ವಿಷಯವನ್ನು ಹೇಳಲೋ ಬೇಡವೋ ಎನ್ನುವಂತೆ ಇದ್ದ. ಆರನೆಯದಿನದ ಅರ್ಧರಾತ್ರಿಯಲ್ಲಿ ಇದ್ದಕ್ಕಿದ್ದಂತೆ ತನ್ನ ಪುತ್ರವಿಯೋಗಕ್ಕೆ ಕಾರಣವಾದ ತನ್ನ ಕರ್ಮಫಲದ ಕುರಿತು ಹೇಳಲು ನಿಶ್ಚಯಿಸಿದ. ಅದು ಎಲ್ಲರಿಗೂ ತಿಳಿದ ಕಥೆಯಾದ ಶ್ರವಣಕುಮಾರನ ಕಥೆ, ರಾಮಾಯಣದಲ್ಲಿ ಶ್ರವಣಕುಮಾರ ಎನ್ನುವ ಹೆಸರಿಲ್ಲ. ಕರಣ ಎಂದು ಆತನ ಹೆಸರು. ಆತನ ತಂದೆ ಓರ್ವ ಋಷಿಯಾಗಿದ್ದ. ಈ ಕಥೆ ಒಂದೇ ರೀತಿಯದಾದರೂ ಕಾಲಾಂತರದಲ್ಲಿ ಬೇರೆ ಬೇರೆ ರಾಮಾಯಣಗಳಲ್ಲಿ ಶ್ರವಣಕುಮಾರ ಎನ್ನುವ ಹೆಸರು ಬಂತು.

ಈ ಘಟನೆ ನಡೆಯುವಾಗ ದಶರಥನಿಗೆ ಪ್ರಾಯದ ಕಾಲ. ಆತ ಶಬ್ದವೇಧಿ ವಿದ್ಯೆಯಲ್ಲಿ ಮಹಾಚತುರ ಎನ್ನುವ ಕೀರ್ತಿ ಹಬ್ಬಿತ್ತು. ಅದನ್ನು ಪ್ರಯೋಗಿಸುವ ಹವ್ಯಾಸ ದೊರೆಗೆ. ಹಾಗಾಗಿ ಕಾಡಿಗೆ ಹೋಗಿ ಬೇಟೆಯಾಡುವ ವ್ಯಸನವನ್ನು ಹಚ್ಚಿಕೊಂಡಿದ್ದ. ಯುವರಾಜನಾಗಿದ್ದ ಆತನಿಗೆ ಆಗಿನ್ನೂ ಮದುವೆಯಾಗಿರಲಿಲ್ಲ (ದೇವ್ಯನೂಢಾ ತ್ವಮಭವೋ ಯುವರಾಜೋ ಭವಾಮ್ಯಹಮ್). ಮಳೆಗಾಲದ ಒಂದು ದಿನ ಬೇಟೆಗೆ ಹೋದಾಗ ಅನೆ ನೀರು ಕುಡಿಯುತ್ತಿರುವ ಸದ್ದು ಕೇಳಿಬಂತು. ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು. ಆತನೇ ಕುರುಡರಾದ ತನ್ನ ತಂದೆಯ ವಿಷಯವನ್ನು ಹೇಳಿ ಅವರಿಗೆ ನೀರನ್ನು ತೆಗೆದುಕೊಂಡು ಹೋಗು ಎಂದು ಕೇಳಿದ. ದಶರಥ ಯೌವನ ಮದದಿಂದ ಅಪರಾಧವನ್ನು ಮಾಡಿದರೂ ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಕುರುಡ ದಂಪತಿಗಳ ಬಳಿಗೆ ಬಂದು ಪ್ರಾಮಾಣಿಕವಾಗಿ ನಡೆದ ಸಂಗತಿಯನ್ನು ಹೇಳಿದ. ಬಾಲಕನ ಶವ ಸಂಸ್ಕಾರವನ್ನು ಅವರ ಹತ್ತಿರವೇ ಮಾಡಿಸಿದ. ಉದ್ಧೇಶಪೂರ್ವಕವಾಗಿ ತನ್ನ ಮಗನನ್ನು ಕೊಲ್ಲದ ಕಾರಣ ದೊರೆಗೆ ಬ್ರಹ್ಮಹತ್ಯಾ ಶಾಪವು ತಟ್ಟದು ಎಂದು ಹೇಳಿದರು. ಸಾಯುವ ಕಾಲದಲ್ಲಿ ತಮಗೆ ಆದ ರೀತಿಯಲ್ಲಿಯೇ ನಿನಗೂ ಪುತ್ರವಿಯೋಗವುಂಟಾಗಲಿ ಎಂದು ಶಾಪವನ್ನಿತ್ತು ಮಗನ ಚಿತೆಯನ್ನು ಏರಿ ದಿವ್ಯ ಶರೀರವನ್ನು ಧರಿಸಿ ಸ್ವರ್ಗಕ್ಕೆ ಹೋದರು.

king dasharatha kaikeyi dhavala dharini column

ರಾಜ ಕಾಲಾಂತರದಲ್ಲಿ ಅದನ್ನೆಲ್ಲ ಮರೆತಿದ್ದ. ಈಗ ರಾಮನ ಅಗಲುವಿಕೆಯೆನ್ನುವದು ಆತನಲ್ಲಿ ಅಪರಾಧೀ ಭಾವವನ್ನು ಮೂಡಿಸಿದೆ. ತನ್ನ ಕೊನೆಯ ದಿನಗಳು ಹತ್ತಿರ ಬಂತು ಎಂದು ದೊರೆಗೆ ಅನಿಸಲು ಸುರುವಾಯಿತು. ಸತ್ಯವಂತನಾದ, ಧರ್ಮಮಾರ್ಗದಲ್ಲಿ ನಡೆದ ತನಗೆ ಈ ಗತಿ ಏಕೆ ಬಂತು ಎಂದು ಚಿಂತಾಮಗ್ನನಾಗಿರುವಾಗ ಅವನಿಗೆ ತಾನೆಸಗಿದ ಈ ದುಷೃತ್ಯ ನೆನಪಿಗೆ ಬಂತು. ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಮುನಿಯ ಶಾಪ ಫಲಿಸುವ ಕಾಲ ಬಂತು ಎಂದು ಕೌಸಲ್ಯೆಗೆ ಹೇಳಿ ಇದಕ್ಕೆ ಕಾರಣ ತನ್ನ ಕರ್ಮಫಲ ಎನ್ನುತ್ತಾನೆ. ಮಾಡಿದ್ದಕ್ಕೆ ತಕ್ಕ ಕರ್ಮಫಲವನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆ ಪುನರ್ಜನ್ಮದಷ್ಟೇ ಪ್ರಾಚೀನವಾದುದು. ತಾನು ಬದುಕಬೇಕೆಮ್ದರೆ ರಾಮ ಬಂದು ತನ್ನನ್ನು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ತಾನು ಬದುಕುವೆ ರಾಘವನ ವಿಷಯದಲ್ಲಿ ಘನತೆಯಿಂದ ತಾನು ನಡೆದುಕೊಳ್ಳಲಿಲ್ಲ ವೆಂದು ನಿರಂತರವಾಗಿ ಶೋಕಿಸುತ್ತಾನೆ. ಇಷ್ಟಾದರೂ ಪಾಯಸದ ಮಹಿಮೆಯಿಂದ ಜನಿಸಿದ ಮಕ್ಕಳು ಎನ್ನುವ ವಿಷಯವೇ ಮರೆತುಹೋಗಿದೆ. ಋಷಿಮುನಿಗಳಿಗೆ ಕಂಡ ರಾಮನ ನಿಜರೂಪದ ಅರಿವು ದಶರಥನಿಗೆ ಆಗಲೇ ಇಲ್ಲ. ಅತನನ್ನು ಸಮಾಧಾನ ಮಾಡುತ್ತಾ ಕೌಸಲ್ಯೆ ಮತ್ತು ಸುಮಿತ್ರೆಯರು ತಮ್ಮ ನಡುವೆ ಮಲಗಿಸಿಕೊಂಡಿದ್ದರು ಆರುದಿನಗಳಿಂದಲೂ ಬಾರದ ನಿದ್ರೆ ಇಬ್ಬರೂ ರಾಣಿಯರಿಗೂ ತಡರಾತ್ರಿ ಬಂತು. ರಾಘವನ ನೆನಪು ಮಾಡುತ್ತಲೇ ಇದ್ದ ರಾಜನನ್ನು ಚಿರನಿದ್ರೆ ಸೆಳೆದುಬಿಟ್ಟಿತು.

ರಘುವಂಶದ ಘನತೆಯ ಚಕ್ರವರ್ತಿಯೆಂದು ಹೆಸರು ಮಾಡಿದ ಯಶೋವಂತನಾದ ದೊರೆ ತನ್ನ ಕರ್ಮ ಫಲವನ್ನು ಅನುಭವಿಸಿ ಕೊನೆಗಾಲವನ್ನು ಕಂಡ. ಯಾವಾತ ತನ್ನ ಕರ್ಮಫಲವನ್ನು ಜೀವಿತಾವಧಿಯಲ್ಲಿ ಅನುಭವಿಸುತ್ತಾನೆಯೋ, ಆ ಕಾರಣದಿಂದ ಅವರು ಪಶ್ಚಾತ್ತಾಪ ಪಡುತ್ತಾರೆಯೋ ಅಂತವರು ಸತ್ತಮೇಲೆ ನರಕದಲ್ಲಿ ಆ ಶಿಕ್ಷೆ ಅನುಭವಿಸುವುದಿಲ್ಲ. ಈ ಎಲ್ಲಾ ಅವಸ್ಥೆಯನ್ನು ಅನುಭವಿಸಿದ ಸೂರ್ಯವಂಶದ ಯಶೋವಂತ ಅರಸನೂ ಸಹ ಸ್ವರ್ಗಕ್ಕೆ ನಡೆದ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Continue Reading
Advertisement
Naxals
ದೇಶ8 mins ago

Naxals: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಎನ್‌ಕೌಂಟರ್

IPL 2024
ಪ್ರಮುಖ ಸುದ್ದಿ20 mins ago

IPL 2024 : ಐಪಿಎಲ್​ನಲ್ಲಿ ಕಳಪೆ ದಾಖಲೆಯೊಂದನ್ನು ಸೃಷ್ಟಿಸಿ ನಿರ್ಗಮಿಸಿದ ಆರ್​ಸಿಬಿ

arecanut price
ಕರ್ನಾಟಕ52 mins ago

Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್‌ ಕಿ ಬಾರ್ ₹60,000 ಪಾರ್ ಆಗಲಿದೆಯಾ?

Self Harming Husband commits suicide for taking his wife home
ಕರ್ನಾಟಕ1 hour ago

Self Harming: ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ!

WhatsApp AI
ತಂತ್ರಜ್ಞಾನ1 hour ago

WhatsApp AI: WhatsAppಗೂ ಬಂತು ಎಐ; ನಿಮ್ಮ ಪ್ರೊಫೈಲ್‌ ಫೋಟೊ ಇನ್ನು AI ಜನರೇಟೆಡ್!‌

T20 world cup 2024
ಕ್ರೀಡೆ1 hour ago

T20 World Cup 2024 : ಭಾರತ ತಂಡ ವಿಶ್ವ ಕಪ್​ ಗೆಲ್ಲುವುದಿಲ್ಲ; ಇಂಗ್ಲೆಂಡ್​ ಮಾಜಿ ಆಟಗಾರನ ಭವಿಷ್ಯ

Udupi Tour
ಪ್ರವಾಸ1 hour ago

Udupi Tour: ಉಡುಪಿಗೆ ಹೋದಾಗ ನೀವು ನೋಡಲೇಬೇಕಾದ 10 ಸ್ಥಳಗಳಿವು

Agee hunnime Thousands of devotees have darshan of Shri Renukamba Devi of Chandragutti
ಶಿವಮೊಗ್ಗ1 hour ago

Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

an inscription of Hulagi Katte built during the Vijayanagara kings was discovered
ಕೊಪ್ಪಳ2 hours ago

Koppala News: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನ ಪತ್ತೆ

CM Siddaramaiah inaugurated the website of the inter caste marriage registration website in Mysore
ಕರ್ನಾಟಕ2 hours ago

Mysore News: ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು, ಆದರೆ ಆ ಹುಡುಗಿ ಒಪ್ಪಲಿಲ್ಲ ಎಂದ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ18 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌