Movie Review | ಭಾವಗಳ ತೀವ್ರತೆ ನೋಡಲು 'ಸಕುಟುಂಬ ಸಮೇತ' ರಾಗಿ ಹೋಗಬಹುದು - Vistara News

ಪ್ರಮುಖ ಸುದ್ದಿ

Movie Review | ಭಾವಗಳ ತೀವ್ರತೆ ನೋಡಲು ‘ಸಕುಟುಂಬ ಸಮೇತ’ ರಾಗಿ ಹೋಗಬಹುದು

ಸಕುಟುಂಬ ಸಮೇತ ಸಿನಿಮಾ ಒಂದು ಅತ್ಯುತ್ತಮ ಅನುಭವವನ್ನು ನೀಡುತ್ತದೆ. ಮನದ ಮೂಲೆಯಲ್ಲಿ ಎಲ್ಲಿಯೋ ಅಡಗಿರುವ ಭಾವನೆಗಳನ್ನು ಎಬ್ಬಿಸಿ ಒಮ್ಮೆ ಕದಡುತ್ತದೆ.

VISTARANEWS.COM


on

ಸಕುಟುಂಬ ಸಮೇತ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿತ್ರ: ಸಕುಟುಂಬ ಸಮೇತ
ನಿರ್ದೇಶನ: ರಾಹುಲ್ ಪಿ.ಕೆ ಮತ್ತು ತಂಡ
ನಿರ್ಮಾಪಕ: ರಕ್ಷಿತ್ ಶೆಟ್ಟಿ
ಬ್ಯಾನರ್: ಪರಂವ್ಹಾ ಸ್ಟುಡಿಯೋಸ್
ಸಂಗೀತ: ಮಿಧುನ್ ಮುಕುಂದನ್
ಛಾಯಾಗ್ರಹಣ: ಕರ್ಮ್ ಚಾವ್ಲ ಹಾಗೂ ಸಂದೀಪ್ ವಲ್ಲೂರಿ
ತಾರಾಗಣ: ಭರತ್, ಸಿರಿ ರವಿಕುಮಾರ್, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಪುಷ್ಪ ಬೆಳವಾಡಿ, ರೇಖಾ ಕುಡ್ಲಿಗಿ ಹಾಗೂ ಜಯಲಕ್ಷ್ಮೀ ಪಾಟೀಲ್
ರೇಟಿಂಗ್: 3.5/5

ಗಾಢವಾದ ಮೌನ. ಸುದೀರ್ಘವಾದ ನಿಟ್ಟುಸಿರು. ಎದೆಯಲ್ಲಿ ಅವ್ಯಕ್ತ ತಳಮಳ. ಒದ್ದೆಯಾದ ಕಣ್ಣಂಚು. ಸಕುಟುಂಬ ಸಮೇತ ಸಿನಿಮಾ ನೋಡಿ ಮುಗಿದಾಗ ಈ ಭಾವಗಳು ಮೂಡುತ್ತವೆ. ಈ ಕಥೆ ನಮ್ಮ ಮನೆಯದೇ ಆಗಿರಬಹುದೇ? ಅಥವಾ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವುದೇ? ಎಂಬ ಪ್ರಶ್ನೆ ಮೂಡಿಸುವಷ್ಟು ಆಪ್ತವಾಗಿದೆ. ಎಲ್ಲೆಡೆ ಬಿಗ್ ಬಜೆಟ್, ಪ್ಯಾನ್ ಇಂಡಿಯಾ ಕ್ರೇಝ್ ಇರುವ ನಡುವೆ ಈ ರೀತಿಯ ಸಿಂಪಲ್ ಸಿಂಪಲ್ ಸಿನಿಮಾ ಸದ್ದಿಲ್ಲದೇ ಅದ್ಭುತವಾಗಿ ಮೂಡಿಬಂದಿದೆ.

ಮನೆಮನೆಯ ಸಿಂಪಲ್ ಕಥೆ !

ಸಕುಟುಂಬ ಸಮೇತ

ಈಗಿನ ಕಾಲಮಾನದಲ್ಲಿ ಲವ್ ಮ್ಯಾರೇಜ್ ಆಗುವುದಕ್ಕಿಂತ ಅರೇಂಜ್ ಮ್ಯಾರೇಜ್ ಆಗುವುದೇ ಕಷ್ಟ ಎಂಬ ವಾತಾವರಣದ ಸುತ್ತ ಈ ಕಥೆ ಸಾಗುತ್ತದೆ. ಲವ್ ಮ್ಯಾರೇಜ್ ಆಗುವವರು ಕಾಡಿ ಬೇಡಿ, ಮನೆಯವರನ್ನು ಒಪ್ಪಿಸಿ ಅಥವಾ ಮನೆಯವರನ್ನು ವಿರೋಧಿಸಿ ಮದುವೆ ಆಗುವ ಸಾಧ್ಯತೆಯಿರುತ್ತದೆ. ಆದರೆ ಅರೇಂಜ್ ಮ್ಯಾರೇಜ್ ವಿಷಯ ಹಾಗಲ್ಲ. ಒಬ್ಬರಿಗೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದರಿಂದ ಶುರುವಾಗಿ ಮನೆಯಲ್ಲಿ ಹೊಂದಾಣಿಕೆಯಾಗುತ್ತದೆಯೇ? ಎಂಬುವವರೆಗೆ ದೊಡ್ಡ ಪ್ರೊಸೆಸ್ ಇರುತ್ತದೆ. ಈ ಪ್ರೊಸೆಸ್ ಸುತ್ತಲೂ ಕಥೆ ಸಾಗುತ್ತದೆ. ಮನೆಯವರೆಲ್ಲರೂ ಒಟ್ಟಿಗೆ ಕುಳಿತು ನೋಡಬೇಕಾದ ಸಿನಿಮಾ ಇದು. ಚಿತ್ರದ ಸುಂದರವಾದ ಟ್ರೇಲರ್ ನೋಡಿದರೆ ಈ ನಂಬಿಕೆ ಬರುತ್ತದೆ.

ಒಂದು ಮನೆಯಲ್ಲಿ ನಡೆಯುವ ಸರಳವಾದ ಕಥೆ ಇದು. ಒಂದು ಮಿಡಲ್ ಕ್ಲಾಸ್ ಫ್ಯಾಮಿಲಿ ಹಾಗೂ ಸ್ವಲ್ಪ ಶ್ರೀಮಂತರ ನಡುವೆ ಸಂಬಂಧ ಬೆಸೆದಾಗ ಏನಾಗುತ್ತದೆ? ಹಾಗೂ ಮದುವೆಗೆ ಹುಡುಗಿ ಮಾನಸಿಕವಾಗಿ ಸಿದ್ಧವಿರದಿದ್ದಾಗ ಮದುವೆಯನ್ನು ಬೇಡ ಎಂದು ಹೇಳುವುದು ಎಷ್ಟು ಕಷ್ಟವಾಗುತ್ತದೆ? ಅದರಿಂದ ಕುಟುಂಬದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಈ ಅಂಶಗಳನ್ನು ಒಳಗೊಂಡಿರುವ ಸಿಂಪಲ್ ಕಥೆ. ನಿರ್ದೇಶಕ ರಾಹುಲ್ ಕೆ.ಪಿ. ಈ ಚಿತ್ರವನ್ನು ವಿಭಿನ್ನವಾಗಿ ನಿರ್ದೇಶಿಸಿ ಓಪನ್ ಎಂಡೆಡ್ ಆಗಿ ಬಿಟ್ಟಿದ್ದಾರೆ.

ಚಿತ್ರದಲ್ಲಿ ಗಮನಸೆಳೆಯುವ ಅಂಶಗಳು !

1. ಕಥೆಯನ್ನು ಕಟ್ಟಿದ ರೀತಿ ಮನಮುಟ್ಟುವಂತಿದೆ. ಮಲಯಾಳಂ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಅಂಶಗಳಿಗೂ ಮಹತ್ವವನ್ನು ನೀಡಿ ದೃಶ್ಯವನ್ನು ಶೂಟ್ ಮಾಡುತ್ತಾರೆ. ಅದೇ ರೀತಿ ಸಿನಿಮಾದಲ್ಲಿ ಕೂಡ ಒಂದು ಮನೆಯಲ್ಲಿ ನಡೆಯುವ, ಕಥೆಗೆ ಅನಿವಾರ್ಯವಿರುವ ಸಣ್ಣ ಸಣ್ಣ ಅಂಶಗಳನ್ನೂ ಸೊಗಾಸಗಿ ರೂಪಿಸಿದ್ದಾರೆ.

2. ಚಿತ್ರದ ನಾಯಕನ ಪಾತ್ರದಲ್ಲಿ ಭರತ್‌ ಹಾಗೂ ನಾಯಕಿ ಸಿರಿ ರವಿಕುಮಾರ್ ಎಲ್ಲಿಯೂ ಚ್ಯುತಿ ಬಾರದಂತೆ ಅಭಿನಯಿಸಿದ್ದಾರೆ. ಸಹಾಯಕ ಪಾತ್ರದಲ್ಲಿ ಅಭಿನಯಿಸಿದ ಕೃಷ್ಣ ಹೆಬ್ಬಾಳೆ, ಪುಷ್ಪ ಬೆಳವಾಡಿ, ರೇಖಾ ಕುಡ್ಲಿಗಿ, ಜಯಲಕ್ಷ್ಮೀ ಪಾಟೀಲ್ ತಮ್ಮ ಪಾತ್ರವನ್ನು ಗಟ್ಟಿಯಾಗಿ ಕಟ್ಟಿದ್ದಾರೆ.

3. ಇವರೆಲ್ಲರ ಅಭಿನಯದ್ದು ಒಂದು ತೂಕವಾದರೆ, ಅಚ್ಯುತ್ ಕುಮಾರ್ ಅವರ ಅಭಿನಯದ ತೂಕವೇ ಬೇರೆ. ಮಿಡಲ್ ಕ್ಲಾಸ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡು ಪ್ರತಿಯೊಂದು ಸನ್ನಿವೇಶವೂ ಅಚ್ಚುಮೂಡಿಸುವಂತೆ ಅಭಿನಯಿಸಿದ್ದಾರೆ. ಮನಸ್ಸಿಗೆ ಕಷ್ಟವಾಗುವ ವಿಷಯವನ್ನು ಮಾತಿನಲ್ಲಿ ವಿವರಿಸುವಾಗ ಅವರ ಧ್ವನಿಯಲ್ಲಿ ಉಂಟಾಗುವ ನಡುಕವೇ ಇದಕ್ಕೆ ಸಾಕ್ಷಿ.

4. ಚಿತ್ರದ ಹಾಡುಗಳು ಸುಮಧುರವಾಗಿವೆ. ಕಿವಿಗೆ ಹಿತ ಮೂಡಿಸುವಂತಹ ಸಂಗೀತ ನೀಡಿದ ಮಿಧುನ್ ಮುಕುಂದನ್ ನಿಜಕ್ಕೂ ಅಭಿನಂದನಾರ್ಹ.

5. ಒಂದೇ ಸೂರಿನಡಿಯಲ್ಲಿ ನಡೆಯುವ ಈ ಚಿತ್ರಕ್ಕೆ ಅದ್ಭುತವಾದ ಛಾಯಾಗ್ರಹಣ ಕೂಡ ಮಾಡಲಾಗಿದೆ. ಕರ್ಮ್ ಚಾವ್ಲ ಹಾಗೂ ಸಂದೀಪ್ ವಲ್ಲೂರಿ ಅವರು ಕ್ಯಾಮೆರಾ ಹಿಂದೆ ಅಚ್ಚುಕಟ್ಟಾದ ಕಾರ್ಯ ನಿರ್ವಹಿಸಿದ್ದಾರೆ.

6. ಚಿತ್ರದ ಸಹಜ ಸಂಭಾಷಣೆ ಆಪ್ತವಾಗಿದೆ. ಕೆಲವೊಂದು ದೃಶ್ಯಗಳು, ಕೆಲವು ಮಾತುಗಳು ಮೈ ರೋಮಾಂಚನಗೊಳಿಸುತ್ತವೆ. ಒಂದು ಕುಟುಂಬದಲ್ಲಿ ತಂದೆ-ತಾಯಿ ಪಡುವ ಕಷ್ಟ, ಮಾಡುವ ತ್ಯಾಗವನ್ನು ಮನಸ್ಸಿಗೆ ಕಾಡುವಂತೆ ಚಿತ್ರಿಸಿದ್ದಾರೆ. ಈ ಚಿತ್ರದಲ್ಲಿ ಮನಸ್ಸುಗಳ ತೊಳಲಾಟ ಹಾಗೂ ಭಾವನೆಗಳು ತೀವ್ರವಾಗಿ ಕಾಣುತ್ತವೆ.

ಯಾಕೆ ಈ ಸಿನಿಮಾ ನೋಡಬೇಕು?

1. ನೀವು ಅರೇಂಜ್ ಮ್ಯಾರೇಜ್ ಆಗಿದ್ದರೆ ಈ ಸಿನಿಮಾ ನೋಡಬೇಕು.
2. ನಿಮಗೆ ಮನೆಯಲ್ಲಿ ಮದುವೆಗೆ ಹುಡುಗ/ಹುಡುಗಿ ಹುಡುಕುತ್ತಿದ್ದರೆ ನೋಡಬೇಕು.
3. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನೋಡಬೇಕು.
4. ನಿಮಗೆ 20 ವರ್ಷ ವಯಸ್ಸು ದಾಟಿದ್ದರೆ ಹಾಗೂ ಮದುವೆ ಆಗುವ ಯೋಚನೆ ಇದ್ದರೆ ನೋಡಬೇಕು.
5. ನಿಮಗೆ ಒಳ್ಳೆಯ ಕನ್ನಡ ಸಿನಿಮಾ ನೋಡುವ ಅಭ್ಯಾಸವಿದ್ದರೆ ನೋಡಬೇಕು.
6. ಕೊನೆಯದಾಗಿ ನಿಮಗೆ ಸಿನಿಮಾ ನೋಡುವ ಅಭ್ಯಾಸ ಇಲ್ಲದಿದ್ದರೂ ನೋಡಬೇಕು.

ಚಿತ್ರ ಸೋತಿದ್ದು ಎಲ್ಲಿ?

ಇದು ಒಂದು ಅತ್ಯುತ್ತಮ ಸಿನಿಮಾ. ಆದರೆ, ಹೆಚ್ಚಿನವರಿಗೆ ಈ ಸಿನಿಮಾ ಬಿಡುಗಡೆಯಾಗಿರುವ ವಿಷಯ ತಲುಪಿಲ್ಲ. ಚಿತ್ರದ ಪ್ರಮೋಷನ್‌ನಲ್ಲಿ ಸೋತಿರಬಹುದು.

ಇದನ್ನೂ ಓದಿ: Movie Review | ಕಣ್ಣಾಮುಚ್ಚಾಲೆ ಆಟದಂತಿರುವ ʼ 21 ಅವರ‍್ಸ್‌ ʼ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
1 Comment

1 Comment

  1. Krishna Bhat

    23 May 2022, 9:51 AM at 9:51 am

    ವಿಮರ್ಶೆಯೇ ಸುಂದರವಾಗಿದೆ.. ಸಿನಿಮಾ ಮತ್ತ್‌ ಇನ್ನೆಂಗಿರಬಹುದು?
    ಗುಡ್‌ ಗೋಯಿಂಗ್‌ ಪ್ರಮೋದ್‌

Leave a Reply

Your email address will not be published. Required fields are marked *

ದೇಶ

Rahul Gandhi: ಸಂಸತ್‌ ಅಧಿವೇಶನದಲ್ಲಿ ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಚಕ್ಕರ್?

Rahul Gandhi: ಸಂಸತ್‌ ಅಧಿವೇಶನ ಆರಂಭವಾಗುವ ಮೊದಲು ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡುವುದು ವಾಡಿಕೆ. ಆದರೆ, ನರೇಂದ್ರ ಮೋದಿ ಅವರಿಂದ ಹಿಡಿದು ಎಲ್ಲರೂ ರಾಷ್ಟ್ರಗೀತೆ ಹಾಡುವಾಗ ರಾಹುಲ್‌ ಗಾಂಧಿ ಅವರು ಗೈರಾಗಿದ್ದರು ಎಂಬುದಾಗಿ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಕುರಿತ ವಿಡಿಯೊ ವೈರಲ್‌ ಆಗಿದೆ. ಇದಕ್ಕೆ ಕಾಂಗ್ರೆಸ್‌ ನಾಯಕರು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

VISTARANEWS.COM


on

Rahul Gandhi
Koo

ನವದೆಹಲಿ: ಸೋಮವಾರದಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Session 2024) ಆರಂಭವಾಗಿದ್ದು, ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ 280 ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು, ನರೇಂದ್ರ ಮೋದಿ ಅವರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವಾಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸಂವಿಧಾನದ ಪ್ರತಿಯನ್ನು ತೋರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಸಂಸತ್‌ ಅಧಿವೇಶನದ ವೇಳೆ ರಾಷ್ಟ್ರಗೀತೆ ಹಾಡುವಾಗ ರಾಹುಲ್‌ ಗಾಂಧಿ ಗೈರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಹೌದು, ಸಂಸತ್‌ ಅಧಿವೇಶನ ಆರಂಭವಾಗುವ ಮೊದಲು ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡುವುದು ವಾಡಿಕೆ. ಆದರೆ, ನರೇಂದ್ರ ಮೋದಿ ಅವರಿಂದ ಹಿಡಿದು ಎಲ್ಲರೂ ರಾಷ್ಟ್ರಗೀತೆ ಹಾಡುವಾಗ ರಾಹುಲ್‌ ಗಾಂಧಿ ಅವರು ಗೈರಾಗಿದ್ದರು ಎಂಬುದಾಗಿ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಆಂಧ್ರಪ್ರದೇಶ ಬಿಜೆಪಿ ಉಪಾಧ್ಯಕ್ಷ ವಿಷ್ಣು ಕುಮಾರ್‌ ರೆಡ್ಡಿ ಅವರು ವಿಡಿಯೊ ಒಂದನ್ನು ಪೋಸ್ಟ್‌ ಮಾಡಿದ್ದು, “ರಾಹುಲ್‌ ಗಾಂಧಿ ಅವರು ಭಾರತದ ರಾಷ್ಟ್ರಗೀತೆಗಿಂತ ದೊಡ್ಡವರು ಎಂಬುದಾಗಿ ಭಾವಿಸಿದ್ದಾರೆ. ರಾಷ್ಟ್ರಗೀತೆ ಮುಗಿದ ಬಳಿಕ ಅವರು ಸಂಸತ್‌ಗೆ ತಡವಾಗಿ ಬಂದಿದ್ದಾರೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದ್ದಾರೆ.

ರಾಹುಲ್‌ ಗಾಂಧಿ ಅವರು ಸಂಸತ್‌ ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆ ಹಾಡುವಾಗ ಇರಲಿಲ್ಲ ಎಂಬ ಆರೋಪ ಕೇಳಿಬಂದು, ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ರಾಹುಲ್‌ ಗಾಂಧಿ ಅವರು ರಾಷ್ಟ್ರಗೀತೆ ಹಾಡುವ ಉಪಸ್ಥಿತರಿದ್ದರು. ಅವರು ಕೂಡ ಎದ್ದು ನಿಂತು ರಾಷ್ಟ್ರಗೀತೆ ಹಾಡಿ, ಗೌರವ ನೀಡಿದ್ದಾರೆ. ಇದೆಲ್ಲ ಬಿಜೆಪಿ ನಾಯಕರು, ಐಟಿ ಸೆಲ್‌ ಹರಡಿಸುತ್ತಿರುವ ಸುಳ್ಳು ಸುದ್ದಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದಕ್ಕೆ ಹೀಗೆ ಸುಳ್ಳು ಅನುಭವಿಸುತ್ತಿದ್ದಾರೆ” ಎಂದು ಕಾಂಗ್ರೆಸ್‌ ನಾಯಕರು ತಿರುಗೇಟು ನೀಡಿದ್ದಾರೆ.

ರಾಹುಲ್‌ ಗಾಂಧಿ ಅವರು ಬಿಳಿ ಟಿ ಶರ್ಟ್‌ ಹಾಗೂ ಕಪ್ಪು ಪ್ಯಾಂಟ್‌ ಧರಿಸಿ ಸಂಸತ್‌ ಅಧಿವೇಶನಕ್ಕೆ ಹಾಜರಾಗಿದ್ದರು. ಅವರು ರಾಷ್ಟ್ರಗೀತೆ ಹಾಡುವಾಗ ಉಪಸ್ಥಿತರಿದ್ದರು. ಸಂಸತ್‌ ಟಿವಿ ಲೋಗೊ ರಾಹುಲ್‌ ಗಾಂಧಿ ಅವರ ಮುಖದ ಮೇಲೆ ಇರುವುದರಿಂದ ವೈರಲ್‌ ಆಗಿರುವ ವಿಡಿಯೊದಲ್ಲಿ ರಾಹುಲ್‌ ಗಾಂಧಿ ಕಾಣಿಸುತ್ತಿಲ್ಲ. ಬಿಜೆಪಿ ಐಟಿ ಸೆಲ್‌ ಹರಡಿಸುವ ಸುಳ್ಳು ಸುದ್ದಿಗಳನ್ನು ಜನ ನಂಬುವುದಿಲ್ಲ ಎಂಬುದಾಗಿ ಫೋಟೊ ಸಮೇತ ಕಾಂಗ್ರೆಸ್‌ ನಾಯಕರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್‌ ಗಾಂಧಿ ಭಾವುಕ ಪತ್ರ

Continue Reading

Latest

Viral Video: ಶಾಪಿಂಗ್‌ ಮಾಲ್‌ನ ಆಟಿಕೆ ರೈಲು ಪಲ್ಟಿಯಾಗಿ ಬಾಲಕ ಸಾವು

Viral Video: ಮಕ್ಕಳ ಚಿಕ್ಕಪುಟ್ಟ ಖುಷಿಯಾಗಿ ತಂದೆ-ತಾಯಂದಿರೂ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಆದರೆ ಇದು ಅವರ ಪ್ರಾಣಕ್ಕೆ ಒಮ್ಮೊಮ್ಮೆ ಕುತ್ತು ತಂದೊಡ್ಡಬಹುದು. ಚಂಡೀಗಢ್ ನ ಮಾಲ್ ನಲ್ಲಿ ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 10 ವರ್ಷದ ಬಾಲಕ ಆಟಿಕೆ ರೈಲಿನ ಬೋಗಿ ಉರುಳಿಬಿದ್ದು ಸಾವನಪ್ಪಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video )ಆಗಿದೆ. ಆತ ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಿಟಕಿಯಿಂದ ಹೊರಗೆ ವಾಲಿದ್ದಾನೆ. ಇಷ್ಟಕ್ಕೇ ಅನಾಹುತ ಸಂಭವಿಸಿದೆ.

VISTARANEWS.COM


on

Viral Video
Koo

ಚಂಡೀಗಢ: ಸಾಮಾನ್ಯವಾಗಿ ಪೋಷಕರು ಮಕ್ಕಳ ಮನೋರಂಜನೆಗಾಗಿ ಮಾಲ್‌ಗಳಿಗೆ ಹೋಗಿ ಅಲ್ಲಿ ಆಟಿಕೆಗಳ ಜೊತೆ ಮಕ್ಕಳನ್ನು ಆಟವಾಡಿಸುತ್ತಾರೆ. ಆದರೆ ಈ ಆಟಿಕೆಗಳು ಕೆಲವೊಮ್ಮೆ ಮಕ್ಕಳ ಜೀವಕ್ಕೆ ಆಪತ್ತು ತರಬಹುದು. ಅಂತಹದೊಂದು ಘಟನೆ ಇದೀಗ ಚಂಡೀಗಢ್ ನ ಮಾಲ್‌ನಲ್ಲಿ ನಡೆದಿದೆ. ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಟಿಕೆ ರೈಲಿನ ಬೋಗಿ ಉರುಳಿಬಿದ್ದು 10 ವರ್ಷದ ಬಾಲಕ ಸಾವನಪ್ಪಿದ ಘಟನೆ ಚಂಡೀಗಢದ ಮಾಲ್ ವೊಂದರಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video )ಆಗಿದೆ.

ಶಹಬಾಜ್ (10 ವರ್ಷ) ಸಾವನಪ್ಪಿದ ಬಾಲಕ. ಈತ ಶನಿವಾರ ಜೂನ್ 22ರಂದು ರಾತ್ರಿ ತನ್ನ ಕುಟುಂಬದವರ ಜೊತೆ ಎಲಾಂಟೆ ಮಾಲ್ ಗೆ ಬಂದಿದ್ದಾನೆ. ಅಲ್ಲಿ ಆತ ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಿಟಕಿಯಿಂದ ಹೊರಗೆ ವಾಲಿದ್ದಾನೆ. ಆಗ ರೈಲಿನ ಬೋಗಿ ಪಲ್ಟಿಯಾಗಿ ಬಾಲಕ ಸಾವನಪ್ಪಿದ್ದಾನೆ. ಆತನ ಜೊತೆ ಕುಳಿತಿದ್ದ ಆತನ ಸೋದರ ಸಂಬಂಧಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ ಬಾಲಕ ಕೊನೆಯ ಕಂಪಾರ್ಟ್ ಮೆಂಟ್ ನಲ್ಲಿ ಕುಳಿತಿದ್ದು, ಆತ ಕಿಟಕಿಯಿಂದ ಹೊರಗೆ ವಾಲಿದ್ದಾನೆ. ಆಗ ರೈಲು ತಿರುವು ಪಡೆಯುತ್ತಿದ್ದಾಗ ಪಲ್ಟಿಯಾಗಿ ಬಿದ್ದು ಬಾಲಕನ ತಲೆಗೆ ತೀವ್ರವಾದ ಪೆಟ್ಟಾಗಿದೆ. ಇದರಿಂದ ಆತ ಸಾವನಪ್ಪಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

ಈ ಬಗ್ಗೆ ಪೊಲೀಸರು ಎಫ್ ಐಆರ್ ದಾಖಲಿಸಿ ರೈಲಿನ ಚಾಲಕನನ್ನು ಬಂಧಿಸಿದ್ದಾರೆ ಹಾಗೂ ಆಟಿಕೆ ರೈಲನ್ನು ವಶಕ್ಕೆ ಪಡೆದಿದ್ದಾರೆ. ಹಾಗೇ ಮಾಲ್ ನ ಆಡಳಿತ ಮಂಡಳಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

ಪ್ರಮುಖ ಸುದ್ದಿ

Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್​ಮನ್ ಗಿಲ್​ಗೆ ನಾಯಕತ್ವ

Team India : ಭಾರತ ಮತ್ತು ಜಿಂಬಾಬ್ವೆ ನಡುವಿನ ಸರಣಿ ಜುಲೈ 6 ರಿಂದ 14 ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ. ಅಭಿಷೇಕ್ ಶರ್ಮಾ, ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ರಿಯಾನ್ ಪರಾಗ್ ಮತ್ತು ತುಷಾರ್ ದೇಶಪಾಂಡೆ ಅವರಂತಹ ಹಲವಾರು ಆಟಗಾರರಿಗೆ ಆಯ್ಕೆದಾರರು ಮೊದಲ ಬಾರಿಗೆ ಕರೆ ನೀಡಿದ್ದಾರೆ.

VISTARANEWS.COM


on

Team India
Koo

ಬೆಂಗಳೂರು: ಜಿಂಬಾಬ್ವೆ ಪ್ರವಾಸದಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ 20 ಐ ಸರಣಿಗೆ ಬಿಸಿಸಿಐ ಸೋಮವಾರ (ಜೂನ್ 24) ಭಾರತ ತಂಡವನ್ನು (Team India) ಪ್ರಕಟಿಸಲಾಗಿದೆ. ಇದು ಸೀಮಿತ ಓವರ್​ಗಳ ಸರಣಿಯಾಗಿದ್ದು ಯುವ ಆಟಗಾರರನ್ನು ಹೊಂದಿರುವ ಮೆನ್ ಇನ್ ಬ್ಲೂ ಜಿಂಬಾಬ್ವೆಗೆ ಭೇಟಿ ನೀಡಲಿದೆ. ನಿರೀಕ್ಷೆಯಂತೆ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಪ್ರವಾಸಕ್ಕಾಗಿ ಎರಡನೇ ಹಂತದ ತಂಡವನ್ನು ಆಯ್ಕೆ ಮಾಡಿದೆ. ಭಾರತ ತಂಡವು ಪ್ರಸ್ತುತ ಟಿ 20 ವಿಶ್ವಕಪ್​ನಲ್ಲಿ ಆಡುತ್ತಿರುವುದರಿಂದ, ವಿಶ್ವಕಪ್ ತಂಡದ ಹೆಚ್ಚಿನ ಆಟಗಾರರಿಗೆ ಜಿಂಬಾಬ್ವೆ ವಿರುದ್ಧದ ಸರಣಿಗೆ ವಿಶ್ರಾಂತಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಅಂತೆಯೇ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಿರುವುದರಿಂದ ಮುಂಬರುವ ಸರಣಿಗೆ ಶುಭ್ಮನ್ ಗಿಲ್ ಅವರನ್ನು ನಾಯಕರನ್ನಾಗಿ ಹೆಸರಿಸಲಾಗಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಸರಣಿ ಜುಲೈ 6 ರಿಂದ 14 ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ. ಅಭಿಷೇಕ್ ಶರ್ಮಾ, ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ರಿಯಾನ್ ಪರಾಗ್ ಮತ್ತು ತುಷಾರ್ ದೇಶಪಾಂಡೆ ಅವರಂತಹ ಹಲವಾರು ಆಟಗಾರರಿಗೆ ಆಯ್ಕೆದಾರರು ಮೊದಲ ಬಾರಿಗೆ ಕರೆ ನೀಡಿದ್ದಾರೆ. ಎಲ್ಲಾ ಆಟಗಾರರು ಈ ವರ್ಷ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ: Irfan Pathan : ಇರ್ಫಾನ್ ಪಠಾಣ್​ ಮೇಕಪ್ ಆರ್ಟಿಸ್ಟ್​​ ವೆಸ್ಟ್​ ಇಂಡೀಸ್​ನ ಸ್ವಿಮ್ಮಿಂಗ್​ ಪೂಲ್​ನಲ್ಲಿ ಶವವಾಗಿ ಪತ್ತೆ!

ಕಳೆದ ವರ್ಷ, ರೋಹಿತ್ ಅನುಪಸ್ಥಿತಿಯಲ್ಲಿ ಪಾಂಡ್ಯ ಮತ್ತು ಸೂರ್ಯಕುಮಾರ್ ಟಿ 20 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದರು. ಇಬ್ಬರೂ ಜಿಂಬಾಬ್ವೆ ಸರಣಿಗೆ ತಂಡದ ಭಾಗವಾಗದ ಕಾರಣ, ಗಿಲ್​ಗೆ ಜವಾಬ್ದಾರಿ ನೀಡಲಾಗಿದೆ. ಗಿಲ್ ಎಂದಿಗೂ ಭಾರತೀಯ ತಂಡವನ್ನು ಮುನ್ನಡೆಸಿಲ್ಲ. ಆದರೆ ಅವರು ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್ ತಂಡ ನಾಯಕತ್ವ ವಹಿಸಿದ್ದರು.

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ:

ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ 20 ವಿಶ್ವಕಪ್ ಸರಣಿಗೆ ಭಾರತದ ಇಬ್ಬರು ಆಟಗಾರರನ್ನು ಮಾತ್ರ ಹೆಸರಿಸಲಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಆ ಪ್ರಮುಖ ಆಟಗಾರರು. ಜೈಸ್ವಾಲ್ ಅಥವಾ ಸ್ಯಾಮ್ಸನ್ ಟಿ20 ವಿಶ್ವ ಕಪ್​ನಲ್ಲಿ ಇಲ್ಲಿಯವರೆಗೆ ಒಂದು ಪಂದ್ಯವನ್ನೂ ಆಡಿಲ್ಲ. ಸ್ಪರ್ಧೆಯ ಉಳಿದ ಭಾಗಕ್ಕೆ ಅವರು ಪ್ಲೇಯಿಂಗ್ ಹನ್ನೊಂದರಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿಲ್ಲ.

ತಂಡ: ಶುಬ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.

Continue Reading

ಪ್ರಮುಖ ಸುದ್ದಿ

Artificial Colours Ban: ರಾಜ್ಯದಲ್ಲಿ ಚಿಕನ್‌, ಫಿಶ್‌ ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ!

Artificial Colours Ban: ಈ ಹಿಂದೆ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಕೆಯನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಿತ್ತು. ಇದೀಗ ಕಬಾಬ್‌ಗೂ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಎಚ್ಚರಿಕೆ ನೀಡಲಾಗಿದೆ.

VISTARANEWS.COM


on

Artificial Colours Ban
Koo

ಬೆಂಗಳೂರು: ಗೋಬಿ ಬಳಿಕ ಇದೀಗ ಕಬಾಬ್‌ಗೂ ಕೃತಕ ಬಣ್ಣ (Artificial Colours Ban) ಬಳಕೆಗೂ ರಾಜ್ಯ ಸರ್ಕಾರ ನಿಷೇಧ ಹೇರಿದೆ. ರಾಜ್ಯಾದ್ಯಂತ ಮಾರಾಟವಾಗುತ್ತಿರುವ ವೆಜ್/ಚಿಕನ್/ಫಿಶ್ ಇತರೆ ಕಬಾಬ್‌ಗಳಲ್ಲಿ ಕೃತಕ ಬಣ್ಣದ ಬೆರೆಸುವಿಕೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಬಾಬ್‌ (chicken, fish kebab) ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಬಂಧಿಸಿದೆ.

ಬಾಯಿ ಚಪ್ಪರಿಸಿಕೊಂಡು ತಿನ್ನುವ ಗೋಬಿ ಮಂಚೂರಿ, ಬಾಂಬೆ ಮಿಠಾಯಿಗೆ ಕಲರ್‌ ಹಾಕುವುದನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಕಬಾಬ್‌ ಸರದಿಯಾಗಿದೆ. ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗೆ (artificial colours in Kebab) ಬೆರಸುವ ಕೃತಕ ಬಣ್ಣ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿತ್ತು.

ರಾಜ್ಯಾದ್ಯಂತ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಿದಾಗ, ಅದರಲ್ಲಿ 8 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ – 7 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 1) ಕೂಡಿರುವುದರಿಂದ ಅಸುರಕ್ಷಿತ ಎಂದು ವರದಿಗಳಲ್ಲಿ ಕಂಡುಬಂದಿದೆ. ಹೀಗಾಗಿ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ ಎಂದು ಸೂಚಿಸಿದೆ.

ಇದನ್ನೂ ಓದಿ | Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

ಕೃತಕ ಬಣ್ಣಗಳು ಬಳಕೆದಾರರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತವೆ. ಈ ಹಿನ್ನೆಲೆಯಲ್ಲಿ ಕಬಾಬ್‌ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ. ವೆಜ್/ಚಿಕನ್/ಫಿಶ್ ಇತರೆ ಕಬಾಬ್‌ಗಳ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆದೇಶಿಸಿದೆ. ಒಂದು ವೇಳೆ ಕೃತಕ ಬಣ್ಣಗಳನ್ನು ಬಳಸಿರುವುದು ಕಂಡುಬಂದಲ್ಲಿ ತಯಾರಿಸುವವರ ಮೇಲೆ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು 10 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

Continue Reading
Advertisement
Rahul Gandhi
ದೇಶ1 min ago

Rahul Gandhi: ಸಂಸತ್‌ ಅಧಿವೇಶನದಲ್ಲಿ ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಚಕ್ಕರ್?

Viral Video
Latest27 mins ago

Viral Video: ಶಾಪಿಂಗ್‌ ಮಾಲ್‌ನ ಆಟಿಕೆ ರೈಲು ಪಲ್ಟಿಯಾಗಿ ಬಾಲಕ ಸಾವು

Team India
ಪ್ರಮುಖ ಸುದ್ದಿ29 mins ago

Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್​ಮನ್ ಗಿಲ್​ಗೆ ನಾಯಕತ್ವ

karnataka Weather Forecast
ಮಳೆ31 mins ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

Artificial Colours Ban
ಪ್ರಮುಖ ಸುದ್ದಿ37 mins ago

Artificial Colours Ban: ರಾಜ್ಯದಲ್ಲಿ ಚಿಕನ್‌, ಫಿಶ್‌ ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ!

Divorce
ದೇಶ1 hour ago

Divorce: ತೂಕ ಇಳಿಸಿಕೊಳ್ಳಲು ನೆರವಾಗದ ‘ಜಿಮ್‌ ಟ್ರೇನರ್‌’ ಗಂಡನಿಗೆ ಮಹಿಳೆ ಡಿವೋರ್ಸ್‌!

Crush Saree Fashion
ಫ್ಯಾಷನ್1 hour ago

Crush Saree Fashion: ಸೆಲೆಬ್ರೆಟಿ ಲುಕ್‌ ನೀಡುವ ಡಿಸೈನರ್‌ ಕ್ರಶ್‌ ಸೀರೆಗಳು

ಕರ್ನಾಟಕ1 hour ago

Renuka Swamy Murder: ರೇಣುಕಾಸ್ವಾಮಿ ಹತ್ಯೆ ಕೇಸ್‌ನ 4 ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್; ಕಾರಣವೇನು?

union Minister Pralhad Joshi took oath in the name of God in his mother tongue
ಕರ್ನಾಟಕ1 hour ago

Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

Divisional Level Progress Review Meeting of Revenue Department by Minister Krishna Byregowda
ಕಲಬುರಗಿ1 hour ago

krishna byre gowda: ಪಹಣಿ-ಆಧಾರ್ ಲಿಂಕ್‌ ಮಾಡಲು ಜುಲೈಗೆ ಅಂತಿಮ ಗಡುವು; ಕೃಷ್ಣ ಬೈರೇಗೌಡ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ31 mins ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌