5G and Cancer | 5G ಮೊಬೈಲ್‌ಗಳಿಂದ ಕ್ಯಾನ್ಸರ್‌ ಬರುತ್ತಾ?, ಅಧ್ಯಯನ ವರದಿಗಳು ಹೇಳುವುದೇನು? - Vistara News

ತಂತ್ರಜ್ಞಾನ

5G and Cancer | 5G ಮೊಬೈಲ್‌ಗಳಿಂದ ಕ್ಯಾನ್ಸರ್‌ ಬರುತ್ತಾ?, ಅಧ್ಯಯನ ವರದಿಗಳು ಹೇಳುವುದೇನು?

ಭಾರತವೂ ಸೇರಿದಂತೆ ಬಹುತೇಕ ರಾಷ್ಟ್ರಗಳ 5ಜಿ ತಂತ್ರಜ್ಞಾನ ಬಳಕೆಗೆ ಮುಂದಾಗುತ್ತಿವೆ. ಆದರೆ, 5ಜಿ ಮೊಬೈಲ್‌ಗಳಿಂದ ಕ್ಯಾನ್ಸರ್ ಬರುತ್ತದೆ ಎಂಬ ಸುದ್ದಿಗಳಿವೆ. ಈ ಬಗ್ಗೆ ಅಧ್ಯಯನ ವರದಿಗಳು ಏನು ಹೇಳುತ್ತವೆ(5G and Cancer)?

VISTARANEWS.COM


on

5g
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊಬೈಲ್‌ (Mobile) ದೂರವಾಣಿಗಳು ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿದ ದಿನಗಳಲ್ಲಿ, ಅಂದರೆ ಸುಮಾರು ಮೂರು ದಶಕಗಳ ಹಿಂದೆ, ಅವುಗಳ ಸಾಧಕ-ಬಾಧಕಗಳ ಬಗ್ಗೆ ಜನರಲ್ಲಿ ಕುತೂಹಲವಿತ್ತು. ನಿಸ್ತಂತುವಾಗಿ ಕೆಲಸ ಮಾಡುವ ಇವುಗಳು ವಿಕಿರಣ ಸೂಸುತ್ತವೆಯೇ? ಇವುಗಳು ಸೂಸುವ ಕಿರಣಗಳು ಕ್ಯಾನ್ಸರ್‌ಕಾರಕವೇ ಎಂಬ ಬಗ್ಗೆ ಅಂದು ಆರಂಭವಾದ ಚರ್ಚೆ ಇಂದಿಗೂ ಜಾರಿಯಲ್ಲಿದೆ. ಅದರಲ್ಲೂ ಈಗ ೫ಜಿ ತಂತ್ರಜ್ಞಾನದ (5G Technology) ಹೊಸಿಲಲ್ಲಿರುವ ನಾವು ವಿಕಿರಣಗಳಿಗೆ ಎಷ್ಟು ಒಡ್ಡಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಎಲ್ಲರ ಕುತೂಹಲ, ಆತಂಕ ಸಹಜವಾದದ್ದು. ವಿದ್ಯುದಯಸ್ಕಾಂತೀಯ ತರಂಗಗಳ ಸ್ತರಗಳಲ್ಲಿ ರೇಡಿಯೊ ಫ್ರಿಕ್ವೆನ್ಸೀ ವಲಯದಲ್ಲಿ ಮೊಬೈಲ್‌ ದೂರವಾಣಿಗಳು ಕಿರಣಗಳನ್ನು ಸೂಸುತ್ತವೆ. ೨ಜಿ, ೩ಜಿ ಮತ್ತು ೪ಜಿ ಮೊಬೈಲುಗಳು ೦.೭ ರಿಂದ ೨.೭ ಗಿಗಾ ಹರ್ಡ್ಸ್‌ ಕಂಪನಾಂಕಗಳಲ್ಲಿ ಕೆಲಸ ಮಾಡಿದರೆ, ೫ಜಿ ದೂರವಾಣಿಗಳು ೮೦ ಗಿಗಾ ಹರ್ಟ್ಸ್‌ ಕಂಪನಗಳಲ್ಲಿ, ಅಂದರೆ ತುಂಬ ಕಡಿಮೆ ಶಕ್ತಿ ಮತ್ತು ಕಂಪನಗಳಲ್ಲಿ ಕೆಲಸ ಮಾಡುತ್ತವೆ. ಅಂದಾಜಿಗೆ ಹೇಳುವುದಾದರೆ, ಮೈಕ್ರೋವೇವ್ ಅವನ್‌ಗಳಿಂದ ಬರುವಷ್ಟೇ ರೇಡಿಯೇಶನ್‌ ಈ ದೂರವಾಣಿಗಳಿಂದ ಸೂಸುತ್ತದೆ. ಈ ಕಿರಣಗಳಿಂದ ನಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳೇನು ಎಂಬ ಬಗ್ಗೆ ಹಲವಾರು ವರ್ಷಗಳಿಂದ ಅಧ್ಯಯನ ನಡೆಸಲಾಗುತ್ತಿದೆ. ಜನರಿಂದ ಈ ಬಗ್ಗೆ ಮತ್ತೆಮತ್ತೆ ಕೇಳಿ ಬರುತ್ತಿರುವ ಆತಂಕದ ದನಿಯನ್ನು ಆಲಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ೧೯೯೬ರಿಂದಲೇ ಈ ಕುರಿತು ಹಲವಾರು ಅಧ್ಯಯನಗಳನ್ನು ಹಮ್ಮಿಕೊಂಡಿದೆ. ಮೊಬೈಲ್‌ ಬಳಕೆ ಮತ್ತು ಕ್ಯಾನ್ಸರ್‌ ನಡುವಿನ ಸಂಬಂಧ ಏನು ಎನ್ನುವ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ, ನಡೆಯುತ್ತಿವೆ(5G and Cancer).

ಔದ್ಯೋಗಿಕ ಮತ್ತು ಪಾರಿಸರಿಕ ಔಷಧಗಳ ಬಗೆಗಿನ ಭಾರತೀಯ ನಿಯತಕಾಲಿಕ ೨೦೧೬ರಲ್ಲಿ ನಡೆಸಿದ ಅಧ್ಯಯನ ಅಥವಾ ೨೦೧೯ರಲ್ಲಿ ಕ್ಯಾನ್ಸರ್‌ ರಿಸರ್ಚ್‌ ಸೊಸೈಟಿಯ ಅಧ್ಯಯನದ ಪ್ರಕಾರ, ಮೊಬೈಲ್‌ ಬಳಕೆಯಿಂದ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಿಲ್ಲ. ಬ್ರಿಟನ್‌ನಲ್ಲಿ ನಡೆಸಲಾಗಿದ್ದ ಅಧ್ಯಯನವೊಂದರಲ್ಲಿ ಮೆದುಳಿನ ಗಡ್ಡೆಗೆ ಮೊಬೈಲ್‌ ವಿಕಿರಣ ಲಾರಣವಾಗುವ ಬಗ್ಗೆ ಕೆಲವು ಶಂಕೆಗಳು ವ್ಯಕ್ತವಾಗಿದೆ. ಆದರೆ ಇಡಿ ಅಧ್ಯಯನಕ್ಕೆ ಸೂಕ್ತ ಮುಕ್ತಾಯ ಒದಗಿಬಂದಿಲ್ಲ. ಕ್ಯಾನ್ಸರ್‌ ಹೆಚ್ಚಳಕ್ಕೆ ಮೊಬೈಲ್‌ ಬಳಕೆಗಿಂತಲೂ ದೋಷಪೂರಿತ ಜೀವನಶೈಲಿ, ವ್ಯಸನಗಳು, ಆನುವಂಶಿಕತೆ, ನಾನಾ ರೀತಿಯ ಸೋಂಕುಗಳು ಮುಂತಾದ ಹಲವು ಕಾರಣಗಳನ್ನು ನೀಡಲಾಗಿದೆ. ಮೊಬೈಲ್‌ ಬಳಕೆ ಮಾತ್ರವಲ್ಲ, ಎಷ್ಟು ದೀರ್ಘವಾಗಿ ಬಳಸಲಾಗುತ್ತದೆ, ದೇಹದಿಂದ ಎಷ್ಟು ಸಮೀಪಕ್ಕೆ ಅದನ್ನು ಹಿಡಿಯಲಾಗುತ್ತದೆ, ಯಾವ ಮಾಡೆಲ್‌ ಮೊಬೈಲ್‌ ಉಪಕರಣವದು, ಮೊಬೈಲ್‌ ಟವರ್‌ ಎಷ್ಟು ದೂರವಿದೆ- ಇಂತಹ ಹಲವಾರು ಪ್ರಶ್ನೆಗಳು ಸಹ ಮಹತ್ವ ಪಡೆದುಕೊಂಡಿವೆ.

ವಿಕಿರಣಗಳು ಇನ್ನೆಲ್ಲಿ?: ಹಾಗಾದರೆ ಆಧುನಿಕ ಜೀವನಶೈಲಿಯಲ್ಲಿ ಇನ್ನೂ ಎಲ್ಲೆಲ್ಲಿ ನಾವು ವಿಕಿರಣಗಳಿಗೆ ಒಡ್ಡಿಕೊಳ್ಳುತ್ತಿದೇವೆ ಎಂಬ ಕುತೂಹಲ ಇರಬಹುದು. ಮೊಬೈಲ್‌ ದೂರವಾಣಿ, ಮೈಕ್ರೋವೇವ್‌ ಅವನ್‌ಗಳು, ಇಂಡಕ್ಷನ್‌ ಕುಕ್‌ಟಾಪ್‌ಗಳು- ಇಂಥವು ಕಡಿಮೆ ವಿಕಿರಣಗಳನ್ನು ಹೊಮ್ಮಿಸುವಂಥವು. ಆರೋಗ್ಯ ತಪಾಸಣೆಗಾಗಿ ಎಕ್ಸ್‌ ರೇ ಅಥವಾ ಸಿಟಿ ಸ್ಕ್ಯಾನ್‌ ಸೇರಿದಂತೆ ನಡೆಸಲಾಗುವ ನಾನಾ ರೀತಿಯ ಪರೀಕ್ಷೆಗಳು ಇವೆಲ್ಲದಕ್ಕಿಂತ ಹೆಚ್ಚಿನ ರೇಡಿಯೇಶನ್‌ ಹೊಮ್ಮಿಸುತ್ತವೆ. ಸೈದ್ಧಾಂತಿಕವಾಗಿ ಹೇಳುವುದಾದರೆ, ಆರೋಗ್ಯ ತಪಾಸಣೆಯಲ್ಲಿ ಬಳಸಲಾಗುವ ಹಲವು ರೀತಿಯ ವಿಕಿರಣಗಳು ದೇಹಕ್ಕೆ ಹಾನಿಯುಂಟುಮಾಡಬಲ್ಲವು. ಅದರಲ್ಲೂ, ದೇಹವನ್ನು ಒಡ್ಡಿಕೊಳ್ಳಬಹುದಾದ ಕನಿಷ್ಟ ಅಥವಾ ಗರಿಷ್ಟ ಮಟ್ಟದ ವಿಕಿರಣ ಎಂಬುದಿಲ್ಲ. ಎಲ್ಲಿ ಸಾಧ್ಯವೋ ಅಲ್ಲಿ ವಿಕಿರಣಗಳಿಂದ ದೂರವಿರುವುದು ಕ್ಷೇಮ. ಹಾಗೆಂದು ಅಗತ್ಯ ಆರೋಗ್ಯ ತಪಾಸಣೆಗಳನ್ನು ತಪ್ಪಿಸಿ, ಮತ್ತೊಂದು ಸಮಸ್ಯೆ ಸೃಷ್ಟಿಸಿಕೊಳ್ಳುವುದೂ ಜಾಣತನವಲ್ಲ. ಈ ನಿಟ್ಟಿನಲ್ಲಿ ಎಂಆರ್‌ಐ ಪರೀಕ್ಷೆ ಎಲ್ಲದಕ್ಕಿಂತ ಸುರಕ್ಷಿತ ಎನಿಸಿದೆ.

ಈ ಬಗ್ಗೆ ಅಮೆರಿಕದ ರಾಷ್ಟ್ರೀಯ ಕ್ಯಾನ್ಸರ್‌ ಸಂಸ್ಥೆಯ ಅಭಿಪ್ರಾಯ ಹೀಗಿದೆ- “ಒಂದು ಸರಳ ಎಕ್ಸ್‌ರೇ ಪರೀಕ್ಷೆಯಿಂದ ನಮ್ಮ ದೇಹಕ್ಕೆ ಸೇರುವ ವಿಕಿರಣಕ್ಕಿಂತ ವಾರ್ಷಿಕವಾಗಿ ನೈಸರ್ಗಿಕ ಸ್ವರೂಪದಲ್ಲಿ ದೇಹ ಪ್ರವೇಶಿಸುವ ವಿಕಿರಣ ಅಂಶವೇ ಸಾಕಷ್ಟು ಹೆಚ್ಚಿದೆ. ಹಾಗೆಂದು ಅಲ್ಪ ವಿಕಿರಣವೂ ಹಾನಿ ಮಾಡಬಹುದು, ಕ್ಯಾನ್ಸರ್‌ ತರಬಹುದು ಅಥವಾ ವಂಶವಾಹಿಗಳನ್ನು ವಿರೂಪ ಮಾಡಬಹುದು ಎಂಬುದನ್ನು ಅಲ್ಲಗಳೆಯಲಾಗದು. ಅದಕ್ಕಾಗಿಯೇ ಅಗತ್ಯವಿಲ್ಲದ ಎಷ್ಟು ಸಣ್ಣ ರೇಡಿಯೇಶನ್‌ ಪರೀಕ್ಷೆಯನ್ನೂ ವೈದ್ಯವಿಜ್ಞಾನ ಸಮರ್ಥಿಸುವುದಿಲ್ಲ. ಹಾಗೆಂದು ಮಾಡಲೇಬೇಕಾದ ಪರೀಕ್ಷೆಗಳನ್ನು ಇಂಥ ಕಾರಣಗಳಿಂದ ತಪ್ಪಿಸುವುದೂ ಸರಿಯಲ್ಲ.

ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಮೊಬೈಲ್‌ ಬಳಕೆ ಅತಿಯಾದರೆ ಹಾನಿ ಕಟ್ಟಿಟ್ಟಿದ್ದು. ಕ್ಯಾನ್ಸರ್‌ ಬಂದರೆ ಮಾತ್ರವೇ ಆರೋಗ್ಯಕ್ಕೆ ಹಾನಿ ಎಂದಕೊಳ್ಳದೇ, ಅತಿಯಾದ ಸ್ಕ್ರೀನ್‌ಟೈಮ್‌ ತರಬಹುದಾದ ಸಮಸ್ಯೆಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು ಸೂಕ್ತ. ಬ್ಯಾಟರಿ ಮುಗಿಯುತ್ತಿರುವಾಗ ಫೋನ್‌ ಉಪಯೋಗಿಸದೆ ಚಾರ್ಜ್‌ ಮಾಡುವುದು, ಕಿವಿಗಿಟ್ಟು ಮಾತಾಡುವ ಬದಲು ಸ್ಪೀಕರ್‌ ಅಥವಾ ಇಯರ್‌ ಪ್ಲಗ್‌ ಉಪಯೋಗಿಸುವುದು- ಇಂಥ ಕ್ರಮಗಳು ಸದಾ ಸುರಕ್ಷಿತ.

ಇದನ್ನೂ ಓದಿ | 5G Service Launch | ಮೊದಲ ಹಂತದಲ್ಲಿ ಬೆಂಗಳೂರಲ್ಲೂ 5ಜಿ ಲಭ್ಯ ಇದೆಯಾ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

Four Digit PIN: ಇಂಥ ಪಿನ್ ನಂಬರ್ ಕೊಡ್ತಾ ಇದ್ದೀರಾ? ನಿಮ್ಮ ದುಡ್ಡಿಗೆ ಕಾದಿದೆ ಅಪಾಯ!

ಸಾಮಾನ್ಯವಾಗಿ 1234, 0000, ಜನ್ಮ ದಿನಾಂಕ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ಆಧರಿಸಿದಂತಹ ದುರ್ಬಲ ಪಿನ್ ನಂಬರ್ (Four Digit PIN) ಅನ್ನು ಹೊಂದಿದ್ದರೆ ನಮ್ಮ ವಯಕ್ತಿಕ ಮಾಹಿತಿಗಳು ಸುಲಭವಾಗಿ ಸೈಬರ್ ದಾಳಿಕೋರರಿಗೆ ಲಭ್ಯವಾಗುವುದು.

VISTARANEWS.COM


on

By

Four Digit PIN
Koo

ಸಾಮಾನ್ಯವಾಗಿ ನಾವು ನಾಲ್ಕು ಅಂಕೆಯ (Four Digit PIN) ಪಿನ್ ನಂಬರ್ ಹಾಕಬೇಕಾದಾಗ ನಮಗೆ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಅಂಕೆಗಳನ್ನು (numbers) ಹಾಕುತ್ತೇವೆ. ಆದರೆ ಇದು ತುಂಬಾ ಅಪಾಯಕಾರಿ. ಯಾಕೆಂದರೆ ಸುಲಭವಾದ ಪಿನ್ ಸಂಖ್ಯೆಯು ಶೀಘ್ರದಲ್ಲಿ ಸೈಬರ್ ವಂಚಕರ (cyber attacks) ಪಾಲಾಗಬಹುದು. ಹೀಗಾಗಿ ಅತ್ಯಂತ ಸರಳ ಪಿನ್ ಗಳನ್ನು ನೀವು ಯಾವುದೇ ಉದ್ದೇಶಕ್ಕೆ ಬಳಸಿದ್ದರೆ ಕೂಡಲೇ ಅದನ್ನು ಬದಲಾಯಿಸುವುದು ಒಳ್ಳೆಯದು.

ಸಾಮಾನ್ಯವಾಗಿ ನಾವು 1234 ಅಥವಾ 0000 ಅಥವಾ ಜನ್ಮ ದಿನಾಂಕ (date of birth) ಅಥವಾ ಫೋನ್ ಸಂಖ್ಯೆಯಂತಹ (phone number) ವೈಯಕ್ತಿಕ ಮಾಹಿತಿಯನ್ನು ಆಧರಿಸಿದಂತಹ ದುರ್ಬಲ ಪಿನ್ ನಂಬರ್ ಅನ್ನು ನಾವು ಹೊಂದಿರುತ್ತೇವೆ. ಇದು ಸೈಬರ್ ದಾಳಿಕೋರರಿಗೆ ಸುಲಭವಾಗಿ ಸಿಗುತ್ತದೆ.

ವರ್ಷದಿಂದ ವರ್ಷಕ್ಕೆ ಸೈಬರ್ ದಾಳಿಗಳು ಹೆಚ್ಚಾಗುತ್ತಲೇ ಇದೆ. 2024 ರ ಮೊದಲ ತ್ರೈಮಾಸಿಕದಲ್ಲಿ ಸೈಬರ್ ದಾಳಿಯ ಪ್ರಮಾಣ ಶೇ. 33ರಷ್ಟು ಹೆಚ್ಚಾಗಿದೆ. ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಸೈಬರ್ ದಾಳಿಗೆ ಒಳಗಾದ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಚೆಕ್ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್ ವರದಿ ತಿಳಿಸಿದೆ.

ಕಂಪ್ಯೂಟರ್ ವ್ಯವಸ್ಥೆಗಳು, ನೆಟ್‌ವರ್ಕ್‌ಗಳಲ್ಲಿನ ದೌರ್ಬಲ್ಯಗಳನ್ನು ಕಂಡುಹಿಡಿಯುವ ಮೂಲಕ ಸೈಬರ್ ಅಪರಾಧಿಗಳು ಜನರ ವ್ಯವಹಾರ ಖಾತೆಗಳು ಮತ್ತು ಸರ್ಕಾರದ ಖಾತೆಗಳ ಮೇಲೆ ದಾಳಿ ನಡೆಸುತ್ತಾರೆ. ಸೂಕ್ಷ್ಮ ಮಾಹಿತಿಯನ್ನು ಕದಿಯಲು, ಬ್ಯಾಂಕ್ ಖಾತೆಗಳಿಂದ ಹಣವನ್ನು ದೋಚಲು ವಿವಿಧ ವಿಧಾನಗಳನ್ನು ಬಳಸುತ್ತಾರೆ.


ಏನು ಕಾರಣ?

ಸೈಬರ್ ದಾಳಿಯಲ್ಲಿ ದಿಢೀರ್ ಏರಿಕೆಗೆ ಮುಖ್ಯ ಕಾರಣ ನಾವು ಬಳಸುವ ದುರ್ಬಲ ಪಿನ್ ಗಳು. ಇದು ಯಾವುದೇ ವ್ಯವಸ್ಥೆಯನ್ನು ಉಲ್ಲಂಘಿಸಲು ಸುಲಭವಾದ ಮಾರ್ಗವಾಗಿದೆ. ದುರ್ಬಲವಾದ ಪಿನ್ “1234” ಅಥವಾ “0000” ನಂತಹ ಸ್ಪಷ್ಟವಾಗಿರಬಹುದು ಅಥವಾ ಜನ್ಮ ದಿನಾಂಕ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯ ಆಧಾರದ ಮೇಲೆ ಸುಲಭವಾಗಿ ಊಹಿಸಬಹುದಾಗಿದೆ.

ಸಾಮಾನ್ಯವಾದ ಪಿನ್‌ಗಳು ಯಾವುವು?

ಸೈಬರ್‌ ಸೆಕ್ಯುರಿಟಿ ಅಧ್ಯಯನವು ಅನೇಕರು ತಮ್ಮ ಭದ್ರತಾ ಕೋಡ್‌ಗಳಲ್ಲಿ ಸರಳ ಮಾದರಿಗಳ ಪಿನ್ ಗಳನ್ನು ಬಳಸುತ್ತಾರೆ ಎಂದು ತೋರಿಸಿದ್ದಾರೆ. ಪರೀಕ್ಷಿಸಿದ 3.4 ಮಿಲಿಯನ್ ಪಿನ್‌ಗಳಲ್ಲಿ ಸಾಮಾನ್ಯ ಮಾದರಿಗಳು ಹೀಗಿವೆ.

1234, 1111, 0000, 1212, 7777, 1004, 2000, 4444, 2222, 6969 ಈಗಾಗಲೇ ಈ ಮಾದರಿಯ ಪಿನ್ ಗಳು ಸೈಬರ್ ದಾಳಿಗೆ ತುತ್ತಾಗಿದ್ದು, ಯಾರಾದರೂ ಈಗಲೂ ಇಂತಹ ಪಿನ್ ಬಳಸುತ್ತಿದ್ದಾರೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.
ಸರಳವಾದ ಅಥವಾ ಸುಲಭವಾಗಿ ಊಹಿಸಬಹುದಾದ ಪಿನ್ ಅನ್ನು ಆಯ್ಕೆ ಮಾಡುವುದರಿಂದ ಸೈಬರ್ ಅಪರಾಧಿಗಳಿಗೆ ನೀವು ಸುಲಭ ಗುರಿಯಾಗಬಹುದು. ನಿಮ್ಮ ಖಾತೆಗಳು ಮತ್ತು ಸಾಧನಗಳನ್ನು ರಕ್ಷಿಸಲು ಪಿನ್ ಅನ್ನು ಆಯ್ಕೆ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಬಲವಾದ, ವಿಶಿಷ್ಟವಾದ ಪಿನ್ ಸೂಕ್ಷ್ಮ ಮಾಹಿತಿಗೆ ಅನಧಿಕೃತ ಪ್ರವೇಶದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಇಎಸ್ ಇ ಟಿ ಸೈಬರ್ ಸೆಕ್ಯುರಿಟಿ ತಜ್ಞ, ಜೇಕ್ ಮೂರ್, ಸರಳವಾದ ಪಾಸ್‌ಕೋಡ್‌ಗಳನ್ನು ಬಳಸದಂತೆ ಸಲಹೆ ನೀಡಿದ್ದಾರೆ. ಇದು ಜನರನ್ನು ಸೈಬರ್‌ಟಾಕ್‌ಗಳಿಗೆ ಗುರಿಯಾಗಿಸಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಪರಿಣಿತ ಹ್ಯಾಕರ್‌ಗಳು ಸೀಮಿತ ಸಂಖ್ಯೆಯ ಪ್ರಯತ್ನಗಳಲ್ಲಿ ಪಾಸ್ಕೋಡ್ ಗಳನ್ನು ಊಹಿಸಿ ಶೀಘ್ರದಲ್ಲೇ ಖಾತೆಗಳಿಗೆ, ವಯಕ್ತಿಕ ಮಾಹಿತಿಗಳ ಮೇಲೆ ಕನ್ನ ಹಾಕಬಹುದು. ಸಾಮಾಜಿಕ ಮಾಧ್ಯಮ ಸೇರಿದಂತೆ ವೈಯಕ್ತಿಕ ಖಾತೆಗಳಿಗೆ ಜನ್ಮ ವರ್ಷಗಳು, ವೈಯಕ್ತಿಕ ಮಾಹಿತಿ ಅಥವಾ ಪುನರಾವರ್ತಿತ ಪಾಸ್‌ವರ್ಡ್‌ಗಳನ್ನು ಬಳಸದಂತೆ ಜಾಗತಿಕ ಸೈಬರ್‌ ಸೆಕ್ಯುರಿಟಿ ಸಲಹೆಗಾರರು ಶಿಫಾರಸು ಮಾಡುತ್ತಾರೆ. ಸುಲಭವಾಗಿ ಊಹಿಸಬಹುದಾದ ಪಿನ್‌ಗಳನ್ನು ಬಳಸುವುದರಿಂದ ಜನರು ಸುಲಭವಾಗಿ ದಾಳಿಕೋರರು ಬಲಿಯಾಗುತ್ತಾರೆ.

ಇದನ್ನೂ ಓದಿ: Google Update: ಕೃತಕ ಬುದ್ಧಿಮತ್ತೆ, ವಂಚನೆ ತಡೆಯಲು ಅಲರ್ಟ್‌; ಗೂಗಲ್‌ ಹೊಸ ಘೋಷಣೆಗಳು ಏನೇನು?

ಕಡಿಮೆ ಬಳಕೆಯ ಸಾಮಾನ್ಯ ಪಿನ್

ಕಡಿಮೆ ಬಳಸುವ ಆದರೆ ತೀರಾ ಸಾಮಾನ್ಯವಾದ 4-ಅಂಕಿಯ ಪಿನ್‌ಗಳು ಹೀಗಿವೆ. 8557, 8438, 9539,7063, 6827, 0859, 6793, 0738, 6835.

ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿದ್ದರೂ ಪಾಸ್‌ಕೋಡ್‌ಗಳನ್ನು ಹ್ಯಾಕ್ ಮಾಡಬಹುದು. ಆದ್ದರಿಂದ ಹೆಚ್ಚುವರಿ ಭದ್ರತೆಗಾಗಿ ಪಾಸ್‌ವರ್ಡ್ ನಿರ್ವಾಹಕರನ್ನು ಬಳಸಲು ಶ್ರೀ ಮೂರ್ ಸಲಹೆ ನೀಡಿದ್ದಾರೆ. ಇದರಿಂದ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಬಹುದು ಮತ್ತು ಸಂಪೂರ್ಣವಾಗಿ ಯಾದೃಚ್ಛಿಕ ಕೋಡ್‌ಗಳನ್ನು ರಚಿಸಲು ಸಹಾಯ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

Car Care Tips: ಕಾರು ಅಥವಾ ಇನ್ಯಾವುದೇ ವಾಹನವನ್ನು ಸರಿಯಾಗಿ ಮೆಂಟೇನ್​ ಅದು ಕೆಲಸ ಮಾಡುತ್ತಲೇ ಇರುತ್ತದೆ ಎಂಬುದು ಒಂದು ನಂಬಿಕೆ. ಆದರೆ ಅವಧಿ ಮುಗಿದ ಬಿಡಿಭಾಗಗಳನ್ನು ಹೊಂದಿರುವ ಕಾರನ್ನು ಓಡಿಸುವುದು ಖಂಡಿತವಾಗಿಯೂ ಅಪಾಯಕಾರಿ. ಹೀಗಾಗಿ ಬಿಡಿಭಾಗಗಳು ಏನೂ ಆಗಿಲ್ಲ. ಸರಿಪಡಿಸಬೇಡ ಎಂಬ ಮನಸ್ಥಿತಿಯಿಂದ ಹೊರಕ್ಕೆ ಬರಲೇಬೇಕು.

VISTARANEWS.COM


on

Car Care tips
Koo

ಬೆಂಗಳೂರು: ಕೆಲವರಿಗೆ ಈ ಅಭ್ಯಾಸ ಇಲ್ಲ ಹಾಗೂ ಇನ್ನೂ ಕೆಲವರು ಈ ವಿಷಯದ ಬಗ್ಗೆ ನಿಧಾನವಾಗಿ ಜಾಗೃತರಾಗುತ್ತಿದ್ದಾರೆ. ಅದೇನೆಂದರೆ ವಸ್ತುಗಳ ಎಕ್ಸ್​ಪೈರಿ ಡೇಟ್​ (Expiry Date) ಪರಿಶೀಲನೆ ಮಾಡುವುದು. ಅಂದರೆ ತಾವು ಖರೀದಿಸುವ ಯಾವುದೇ ವಸ್ತುವಿನ ಉತ್ಪಾದನಾ ಮತ್ತು ಮುಕ್ತಾಯ ದಿನಾಂಕವನ್ನು ಪರಿಶೀಲಿಸುವುದು. ಸಾಕಷ್ಟು ಮಂದಿ ಮನೆಗೆ ತರುವ ದೀನಸಿ ವಸ್ತುಗಳಿಗೆ ಮಾತ್ರ ಇದು ಸೀಮಿತ ಎಂದು ನಂಬಿ ದ್ದಾರೆ. ಆದರೆ, ಉತ್ಪಾದನಾ ಘಟಕವೊಂದರಲ್ಲಿ ತಯಾರಾಗುವ ಎಲ್ಲ ವಸ್ತುಗಳಿಗೂ ಎಕ್ಸ್​ಪೈರಿ ಡೇಟ್​ ಇರುತ್ತದೆ. ಹೀಗಾಗಿ ಈ ಸಲಹೆಯು ಕಾರಿನ ಬಿಡಿ ಭಾಗಗಳು ಮತ್ತು ಪರಿಕರಗಳಿಗೂ ಅನ್ವಯಿಸುತ್ತದೆ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಆದರೆ, ಬಹುತೇಕ ಕಾರು ಮಾಲೀಕರು ಈ ಬಗ್ಗೆ ಜಾಗೃತವಾಗಿಲ್ಲ. ಕೆಟ್ಟು ಕಳಚಿ ಬಿದ್ದ ಮೇಲೆ ಮಾತ್ರ ಸರಿಪಡಿಸುತ್ತಾರೆ. (Car Care Tips) ಇದು ಸರಿಯಾದ ಅಭ್ಯಾಸವಲ್ಲ ಎಂಬುದು ಸತ್ಯ.

ಕಾರು ಅಥವಾ ಇನ್ಯಾವುದೇ ವಾಹನವನ್ನು ಸರಿಯಾಗಿ ಮೆಂಟೇನ್​ ಆದರೆ ಅದು ಕೆಲಸ ಮಾಡುತ್ತಲೇ ಇರುತ್ತದೆ ಎಂಬುದು ಒಂದು ನಂಬಿಕೆ. ಆದರೆ ಅವಧಿ ಮುಗಿದ ಬಿಡಿಭಾಗಗಳನ್ನು ಹೊಂದಿರುವ ಕಾರನ್ನು ಓಡಿಸುವುದು ಖಂಡಿತವಾಗಿಯೂ ಅಪಾಯಕಾರಿ. ಹೀಗಾಗಿ ‘ಬಿಡಿಭಾಗಗಳು ಏನೂ ಆಗಿಲ್ಲ. ಸರಿಪಡಿಸಬೇಡ’ ಎಂಬ ಮನಸ್ಥಿತಿಯಿಂದ ಹೊರಕ್ಕೆ ಬರಲೇಬೇಕು. ಯಾಕೆಂದರೆ ಒಂದು ಭಾಗಕ್ಕೆ ಆಗಿರುವ ಹಾನಿಯು ವಾಹನದ ಸಂಪೂರ್ಣ ದಕ್ಷತೆಯನ್ನು ಹಾಳು ಮಾಡುವ ಜತೆಗೆ ಪ್ರಯಾಣವನ್ನು ಅಪಾಯಕ್ಕೆ ತಳ್ಳಬಹುದು. ಹೀಗಾಗಿ ನಿಮ್ಮ ಕಾರಿನಲ್ಲಿ ಯಾವೆಲ್ಲ ವಸ್ತುಗಳನ್ನು ಅವಧಿ ಮುಗಿದ ತಕ್ಷಣ ಬದಲಾಯಿಸಬೇಕು ಎಂಬುದನ್ನು ಈ ಕೆಳಗೆ ತಿಳಿಸಿಕೊಡಲಾಗಿದೆ.

ಎಂಜಿನ್ ಆಯಿಲ್​

ಎಂಜಿನ್ ಆಯಿಲ್ ಎಂಜಿನ್​ ಒಳಗಿನ ಘರ್ಷಣೆಯನ್ನು ನಿಯಂತ್ರಿಸುವ ಬಹುಮುಖ್ಯ ದ್ರಾವಣ. 12ರಿಂದ 18 ತಿಂಗಳ ಒಳಗೆ ಎಂಜಿನ್ ಆಯಿಲ್ ಬದಲಾಯಿಸಬೇಕು ಹಾಗೂ ಬಳಸಲು ಶುರು ಮಾಡಿದ ಮೇಲೆ ಅದರ ಅವಧಿ ಮುಕ್ತಾಯಗೊಳ್ಳುತ್ತದೆ. ಅಥವಾ 10,000 ಕಿ.ಮೀ.ಗೆ ಬದಲಾವಣೆ ಮಾಡಲೇಬೇಕು. ಕೆಲವರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಸರ್ವಿಸ್​ ಮಾಡಿದಾಗ ಮಾಡಿದರಾಯ್ತು ಎಂದು ಅಂದುಕೊಳ್ಳುತ್ತಾರೆ. ಇದು ಎಂಜಿನ್​ ಒಳಗಿನ ಭಾಗಗಳ ಸವೆತ ಹಾಗೂ ಮುರಿತಕ್ಕೆ ಕಾರಣವಾಗುತ್ತದೆ.

ಬ್ರೇಕ್ ಆಯಿಲ್

ಕಾರಿನಲ್ಲಿ ಸುರಕ್ಷತೆ ಎಂದರೆ ಮೊದಲು ಬರುವುದು ಸೂಕ್ತವಾಗಿ ಕಾರ್ಯನಿರ್ವಹಿಸುವ ಬ್ರೇಕಿಂಗ್ ಸಿಸ್ಟಮ್​. ಬ್ರೇಕ್​ ವ್ಯವಸ್ಥೆಯಲ್ಲಿ ಬ್ರೇಕ್​ ಆಯಿಲ್​ ಕೆಲಸ ದೊಡ್ಡದು.. ಪ್ರತಿ 10,000 ಕಿ.ಮೀಗೆ ಬ್ರೇಕ್ ಆಯಿಲ್ ಬಾಳಿಕೆ ಮುಗಿಯುತ್ತದೆ. ಹೀಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಬ್ರೇಕ್ ಆಯಿಲ್ ಅನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಆಯಿಲ್ ದಪ್ಪವಾದರೆ ಬ್ರೇಕಿಂಗ್ ದಕ್ಷತೆ ಇಳಿಯುತ್ತದೆ.

ಎಸಿ ರೆಫ್ರಿಜರೇಟರ್ ರೀಫಿಲ್​

ಎಸಿ ರೆಫ್ರಿಜರೇಟರ್ ಗ್ಯಾಸ್​ ರಿಫಿಲ್ ಮಾಡುವ ಕೆಲಸವನ್ನು ಕಾಲಕಾಲಕ್ಕೆ ಮಾಡಬೇಕು. ಎಸಿ ವೆಂಟ್ ಗಳಿಂದ ಹೊರಬರುವ ಗಾಳಿಯು ಸಾಕಷ್ಟು ತಂಪಾಗಿಲ್ಲದಿದ್ದರೆ ವಾಹನದಲ್ಲಿನ ಹವಾನಿಯಂತ್ರಣ ವ್ಯವಸ್ಥೆ ಸರಿಯಿಲ್ಲ ಎಂದು ಅರ್ಥ. ಫಿಲ್ಟರ್ ಜತೆಗೆ ಎಸಿ ಗ್ಯಾಸ್​ ನ ಬಾಳಿಕೆಯೂ ಮುಗಿದಿದೆ ಎಂದರ್ಥ. ಹೀಗಾಗಿ ಅದನ್ನು ಅವಧಿ ಮುಗಿದಾಗ ಬದಲಾಯಿಸಬೇಕು.

ಟೈರ್ ಗಳು

ಕಾರನ್ನು ಓಡಿಸಿಲ್ಲ ಮತ್ತು ಸವೆದಿಲ್ಲ ಎಂದ ತಕ್ಷಣ ಕಾರಿನ ಟೈರಿನ ಬಾಳಿಕೆ ಮುಗಿದಿಲ್ಲ ಎಂದರ್ಥವಲ್ಲ. ಯಾಕೆಂದರೆ ಅದಕ್ಕೂ ಒಂದು ಎಕ್ಸ್​ಪಯರೀ ಡೇಟ್​ ಇದೆ. ಮೊದಲಾಗಿ 3 ಎಂಎಂಗಿಂತ ಕಡಿಮೆ ಥ್ರೆಡ್​ ಇದ್ದರೆ ಸವೆದಿದೆ ಎಂದರ್ಥ. ಆದರೆ, ಟೈರ್​ನ ಮೇಲೆ ಬರೆದಿರುವ ಎಕ್ಸ್​ಪಯರೀ ಡೇಟ್​ ಪರಿಶೀಲನೆ ಮಾಡಲೇಬೇಕು. ಹೊರ ಅಂಚಿ ಉತ್ಪಾದನಾ ವಾರ ಮತ್ತು ಉತ್ಪಾದನೆಯ ವರ್ಷವನ್ನು ಬರೆದಿರಲಾಗುತ್ತದೆ. ಉದಾಹರಣೆಗೆ ಡಾಟ್ ಸಂಖ್ಯೆ 5011 ಇದ್ದರೆ ಟೈರ್ ಅನ್ನು 2011 ರ 50 ನೇ ವಾರದಲ್ಲಿ ತಯಾರಿಸಲಾಗಿದೆ ಎಂದರ್ಥ.

ಕ್ಯಾಬಿನ್ ಏರ್ ಫಿಲ್ಟರ್

ಕ್ಯಾಬಿನ್ ಏರ್ ಫಿಲ್ಟರ್ ಕ್ಯಾಬಿನ್ ಏರ್ ಫಿಲ್ಟರ್ ಬಾಳಿಕೆ ಕಾರು ಚಾಲನೆ ಮಾಡುವ ಪ್ರದೇಶದ ಗಾಳಿಯ ಗುಣಮಟ್ಟ ಅವಲಂಬಿಸಿರುತ್ತದೆ. ಆದರೆ, ಕಾರನ್ನು 25,000 ಕಿ.ಮೀ ನಿಂದ 30,000 ಕಿ.ಮೀ ಓಡಿಸಿದ ನಂತರ ಅದನ್ನು ಬದಲಾಯಿಸಲೇಬೇಕು. ನೀವು ಡಿಫ್ರಾಸ್ಟ್ ಆನ್ ಮಾಡಿದಾಗ ಆದರೆ ಕ್ಯಾಬಿನ್ ನಲ್ಲಿ ಗಾಳಿಯ ಹರಿವು ತುಂಬಾ ದುರ್ಬಲವಾಗಿದ್ದರೆ ಬ್ಲೋವರ್ ಸ್ವಿಚ್ ಮೂಲಕ ಶಬ್ದ ಹೆಚ್ಚಾಗಿದ್ದರೆ ಫಿಲ್ಟರ್ ಬಾಳಿಕೆ ಮುಗಿದಿದೆ ಎಂದರ್ಥ.

ಏರ್ ಬ್ಯಾಗ್ ಗಳು

ಏರ್ ಬ್ಯಾಗ್ ಗಳು ಮತ್ತು ಸೀಟ್ ಟೈಟರ್ ಗಳ ಬಾಳಿಕ 10 ವರ್ಷಕ್ಕೆ ಮುಗಿಯುತ್ತದೆ. ಅದಕ್ಕಿಂತ ಹೆಚ್ಚಾಗಿ ಬೆಲ್ಟ್ ಹರಿದಿದ್ದರೆ ತಕ್ಷಣ ಬದಲಾಯಿಸಬೇಕಾಗುತ್ತದೆ.

ಪ್ರಥಮ ಚಿಕಿತ್ಸಾ ಕಿಟ್

ಪ್ರಥಮ ಚಿಕಿತ್ಸಾ ಕಿಟ್ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕಾರುಗಳಲ್ಲಿ ಇರುತ್ತವೆ. ಅದರು ಅಗತ್ಯ ಕೂಡ. ಆದರೆ, ಅದರಲ್ಲಿರುವ ಕೆಲವು ಮುಲಾಮುಗಳು ಮತ್ತು ಅನೇಕ ರೀತಿಯ ಡ್ರೆಸ್ಸಿಂಗ್ ವಸ್ತುಗಳು ಮುಕ್ತಾಯ ದಿನಾಂಕಗಳನ್ನು ಹೊಂದಿರುತ್ತವೆ. ಆದರೆ ಹೆಚ್ಚಿನ ಕಿಟ್​ಗಳು ಉತ್ಪಾದನೆಯ ದಿನಾಂಕದಿಂದ 3 ರಿಂದ 5 ವರ್ಷಗಳ ಜೀವಿತಾವಧಿ ಹೊಂದಿರುತ್ತವೆ.

ಇದನ್ನೂ ಓದಿ: Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

ಟೈಮಿಂಗ್ ಬೆಲ್ಟ್

ಇದು ಎಂಜಿನ್ ಒಳಗಿನ ಸಾಧನ. ಟೈಮಿಂಗ್ ಬೆಲ್ಟ್ ಬದಲಾಯಿಸುವ ಅವಧಿಯ ಅಂತರವು ಕಂಪನಿ ಮತ್ತು ಕಾರು ಮಾದರಿಯಿಂದ ಬದಲಾಗುತ್ತದೆ. ಸಾಮಾನ್ಯವಾಗಿ ಇದನ್ನು 60,000 ಮತ್ತು 80,000 ಕಿಲೋಮೀಟರ್ ನಡುವೆ ಬದಲಾಯಿಸಬೇಕು. ಕಂಪನಿ ಜತೆ ಈ ಬಗ್ಗೆ ಚರ್ಚೆ ನಡೆಸಬೇಕು. ದೋಷಯುಕ್ತ ಬೆಲ್ಟ್ ಅನ್ನು ಬಳಸಿದರೆ ಅದು ಕಾಲಾನಂತರದಲ್ಲಿ ಎಂಜಿನ್ ಹಾಳಾಗಲು ಕಾರಣವಾಗಬಹುದು.

Continue Reading

ಆರೋಗ್ಯ

UPI in Healthcare: ಆರೋಗ್ಯ ಕ್ಷೇತ್ರದಲ್ಲೂ ಡಿಜಿಟಲ್ ಕ್ರಾಂತಿ!

ಆರೋಗ್ಯ ಕ್ಷೇತ್ರದಲ್ಲೂ ಈಗ ಡಿಜಿಟಲ್ ಬಳಕೆ (UPI in Healthcare) ಹೆಚ್ಚಾಗಿದ್ದು, ನೋಂದಣಿ, ಓಪಿಡಿ ಟೋಕನ್ ಪಡೆಯಲು, ಪಾವತಿಗಳನ್ನು ನಡೆಸಲು ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಸ್ಕ್ಯಾನರ್ ಗಳನ್ನು ಬಳಸಿರುವುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ

VISTARANEWS.COM


on

By

UPI in Healthcare
Koo

ಡಿಜಿಟಲ್ ಕ್ಷೇತ್ರದಲ್ಲಿ (digital wave) ಈಗ ಕ್ರಾಂತಿಯಾಗುತ್ತಿದೆ. ಎಲ್ಲ ಕಡೆಯೂ ಯುಪಿಐ ಆಧಾರಿತ ಪಾವತಿಗಳು (UPI in Healthcare) ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಆರೋಗ್ಯ ಕ್ಷೇತ್ರದಲ್ಲೂ (health sector) ಡಿಜಿಟಲ್ ಪಾವತಿ, ಇತರ ತಂತ್ರಜ್ಞಾನಗಳ ಬಳಕೆ ಹೊಸ ಅಲೆಯನ್ನೇ ಸೃಷ್ಟಿಸುತ್ತಿದೆ. ಭಾರತದ (India) ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ತರಂಗ ಹೊರಹೊಮ್ಮುವ ಲಕ್ಷಣಗಳು ಕಾಣುತ್ತಿರುವುದು ಸರ್ಕಾರದ ಅಂಕಿಅಂಶಗಳಿಂದ ತಿಳಿದುಬರುತ್ತವೆ.

ಪ್ರತಿ ದಿನ ಸುಮಾರು ಒಂದು ಲಕ್ಷ ರೋಗಿಗಳು ಭಾರತದಾದ್ಯಂತ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳ ಹೊರರೋಗಿ ವಿಭಾಗದಲ್ಲಿ (OPD) ತಮ್ಮನ್ನು ನೋಂದಾಯಿಸಿಕೊಳ್ಳಲು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುತ್ತಾರೆ. ಈ ಟ್ರೆಂಡ್ ವೇಗವನ್ನು ಪಡೆದಿರುವುದು ಕೇವಲ ಮೆಟ್ರೋಪಾಲಿಟನ್ ಪ್ರದೇಶಗಳಲ್ಲ. ಉತ್ತರ ಪ್ರದೇಶವು ಆಂಧ್ರಪ್ರದೇಶ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ದೆಹಲಿಯಲ್ಲೂ ಹೆಚ್ಚಾಗಿ ಜನರು ಡಿಜಿಟಲ್ ಬಳಕೆಯನ್ನು ಹೆಚ್ಚಿಸಿದ್ದಾರೆ. ಯುಪಿಯಲ್ಲಿ, 86 ಲಕ್ಷಕ್ಕೂ ಹೆಚ್ಚು ಕ್ಯೂಆರ್ ಕೋಡ್ ಆಧಾರಿತ ನೋಂದಣಿಗಳನ್ನು ನೋಂದಾಯಿಸಲಾಗಿದೆ. ಕಾನ್ಪುರ್ ನಗರ ಮತ್ತು ಪ್ರಯಾಗ್‌ರಾಜ್ ನಲ್ಲೂ ಗರಿಷ್ಠ ನೋಂದಣಿಗಳು ನಡೆದಿವೆ.

ಎಲ್ಲ ವರದಿಗಳೂ ಡಿಜಿಟಲ್‌ನಲ್ಲಿ ಲಭ್ಯ

ರೋಗಿಗಳು ಸ್ಕ್ಯಾನಿಂಗ್ ಮಾಡುವುದಲ್ಲದೆ ತಮ್ಮ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ರಚಿಸುತ್ತಿದ್ದಾರೆ ಅಥವಾ ಬಳಸುತ್ತಿದ್ದಾರೆ. ಇದರರ್ಥ ಅವರು ಡಿಜಿಟಲ್ ಪ್ರಿಸ್ಕ್ರಿಪ್ಷನ್‌ಗಳು, ಫಾರ್ಮಸಿ ದಾಖಲೆಗಳು, ರೋಗನಿರ್ಣಯದ ವರದಿಗಳು ಮತ್ತು ಬಹು ಆರೋಗ್ಯ ದಾಖಲೆಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿಡುತ್ತಿದ್ದಾರೆ. ಮೊಬೈಲ್ ಫೋನ್‌ನಲ್ಲಿ ಎಲ್ಲ ದಾಖಲೆ ಲಭ್ಯವಾಗುವುದರಿಂದ ಕಾಗದ ಆಧಾರಿತ ಪ್ರಿಸ್ಕ್ರಿಪ್ಷನ್‌ಗಳು ಅಥವಾ ವರದಿಗಳನ್ನು ಸಾಗಿಸುವ ಅಗತ್ಯವಿರುವುದಿಲ್ಲ.

1 ಲಕ್ಷ ಮಂದಿ ಬಳಕೆ

ಸರಕಾರದ ಅಂಕಿಅಂಶಗಳು ಪ್ರತಿದಿನ ಸರಾಸರಿ 1 ಲಕ್ಷಕ್ಕೂ ಹೆಚ್ಚು ನಾಗರಿಕರು ಈ ವೈಶಿಷ್ಟ್ಯವನ್ನು ಬಳಸುತ್ತಿದ್ದಾರೆ. ಇದು ಏಪ್ರಿಲ್ 2023 ಮತ್ತು ಏಪ್ರಿಲ್ 2024 ರ ನಡುವೆ ಮಾಸಿಕ ಟೋಕನ್‌ಗಳ ಸಂಖ್ಯೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವನ್ನು ತೋರಿಸುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (NHA) ವಿಶೇಷ ಕರ್ತವ್ಯದ ಅಧಿಕಾರಿ ಹಿಮಾಂಶು ಬುರಾದ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.


ಹೆಚ್ಚು ಬಳಸಿದ ಆಸ್ಪತ್ರೆಗಳು

ಏಪ್ರಿಲ್‌ನಲ್ಲಿ ಸ್ಕ್ಯಾನ್ ಮತ್ತು ಟೋಕನ್ ಹಂಚಿಕೆ ವೈಶಿಷ್ಟ್ಯವನ್ನು ಹೆಚ್ಚು ವ್ಯಾಪಕವಾಗಿ ಬಳಸಿದ ಉತ್ತಮ ಪ್ರದರ್ಶನ ನೀಡುವ ಆಸ್ಪತ್ರೆಗಳೆಂದರೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS), ನವದೆಹಲಿ ಅನಂತರ AIIMS ಭೋಪಾಲ್ (ಮಧ್ಯಪ್ರದೇಶ), ಸರ್ಕಾರಿ ಜನರಲ್ ಆಸ್ಪತ್ರೆ, ಕಾಕಿನಾಡ (ಆಂಧ್ರ ಪ್ರದೇಶ) , ಗೌತಮ್ ಬುದ್ಧ ನಗರದಲ್ಲಿ (ಉತ್ತರ ಪ್ರದೇಶ) ಜಿಲ್ಲಾ ಸಂಯೋಜಿತ ಆಸ್ಪತ್ರೆ ಮತ್ತು ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜು.

ಅತೀ ಹೆಚ್ಚು ನೋಂದಣಿ

ಅಧಿಕೃತವಾಗಿ ‘ಸ್ಕ್ಯಾನ್ ಮತ್ತು ಶೇರ್’ ಎಂದು ಕರೆಯಲ್ಪಡುವ ವೈಶಿಷ್ಟ್ಯವನ್ನು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಅಕ್ಟೋಬರ್ 2022 ರಲ್ಲಿ ಪರಿಚಯಿಸಲಾಯಿತು. ಇದು ರೋಗಿಗಳಿಗೆ OPD ನೋಂದಣಿ ಕೌಂಟರ್‌ನಲ್ಲಿ ಇರಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ತ್ವರಿತ ನೋಂದಣಿಗಾಗಿ ಅವರ ABHA ಪ್ರೊಫೈಲ್ ಅನ್ನು ಹಂಚಿಕೊಳ್ಳಲು ಅನುಮತಿಸುತ್ತದೆ.

ABHA ಎಂಬುದು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಯ ಪೂರ್ಣ ರೂಪವಾಗಿದೆ. ABHA ಕಾರ್ಡ್ ABHA ID ಎಂಬ ವಿಶಿಷ್ಟ 14-ಅಂಕಿಯ ಗುರುತಿನ ಸಂಖ್ಯೆಯನ್ನು ಒಳಗೊಂಡಿದೆ. ಸಂಪೂರ್ಣ ವೈದ್ಯಕೀಯ ಇತಿಹಾಸ, ಸಮಾಲೋಚನೆ ವಿವರಗಳು ಮತ್ತು ಪ್ರಿಸ್ಕ್ರಿಪ್ಷನ್‌ಗಳನ್ನು ABHA ID ಯಲ್ಲಿ ಸೇರಿಸಲಾಗಿದೆ.

ಈ ಸೇವೆಯು ಪ್ರಸ್ತುತ ಭಾರತದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 529 ಜಿಲ್ಲೆಗಳಾದ್ಯಂತ 4,694 ಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳಲ್ಲಿ ಸಕ್ರಿಯವಾಗಿದೆ. ಮೇ 14ರಂದು 1.60 ಲಕ್ಷಕ್ಕೂ ಹೆಚ್ಚು ಟೋಕನ್‌ಗಳನ್ನು ಪಡೆಯಲಾಗಿದೆ ಎಂದು ಬುರಾದ್ ತಿಳಿಸಿದ್ದು, ಈ ಪ್ರವೃತ್ತಿಯು ಭಾರತೀಯರು ಡಿಜಿಟಲ್ ಆರೋಗ್ಯದ ಸೌಕರ್ಯವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಕ್ರಮೇಣ ತಮ್ಮ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ರಚಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಸರಾಸರಿ, ಒಂದು ಲಕ್ಷ ರೋಗಿಗಳು ಈಗ ಪ್ರತಿದಿನ ಈ ಸೌಲಭ್ಯವನ್ನು ಬಳಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Hepatitis-A: ಅಲರ್ಟ್‌..ಅಲರ್ಟ್‌! ಜನರ ನಿದ್ದೆಗೆಡಿಸ್ತಿದೆ ಮತ್ತೊಂದು ಡೆಡ್ಲಿ ವೈರಸ್‌

ಶೀಘ್ರದಲ್ಲೇ ವಿಸ್ತರಣೆ

ಒಪಿಡಿ ಕೌಂಟರ್‌ಗಳಲ್ಲಿ ನೀಡಲಾಗುವ ಸ್ಕ್ಯಾನ್ ಮತ್ತು ಶೇರ್ ಸೇವೆಯು ತಂತ್ರಜ್ಞಾನ ಆಧಾರಿತ ಪರಿಹಾರವಾಗಿದ್ದು ಇದು ಸುಮಾರು ಒಂದು ಲಕ್ಷ ರೋಗಿಗಳಿಗೆ ಪ್ರತಿದಿನ ಆಸ್ಪತ್ರೆಯ ಸರತಿ ಸಾಲಿನಲ್ಲಿ ಕಾಯುವ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ರೋಗಿಗಳು ತಮ್ಮ ಆರೋಗ್ಯ ಭೇಟಿಗಳ ಸಮಯದಲ್ಲಿ ಎದುರಿಸುವ ಹೊರೆಗಳನ್ನು ಕಡಿಮೆ ಮಾಡಲು, ನಾವು ಇದನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ. ಔಷಧಾಲಯ ಕೌಂಟರ್‌ಗಳು ಮತ್ತು ಪ್ರಯೋಗಾಲಯಗಳನ್ನು ಈ ಸೇವೆಯಡಿ ಸೇರಿಸಲು ನಿರ್ಧರಿಸಿದ್ದೇವೆ ಎಂದರು.

ವಯಸ್ಸಾದ ರೋಗಿಗಳು, ಗರ್ಭಿಣಿಯರು ಮತ್ತು ಇತರ ನಾಗರಿಕರು ಆರೋಗ್ಯ ಸೇವೆಗಳನ್ನು ಪಡೆಯಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಸರ್ಕಾರದ ಗುರಿಯಾಗಿದೆ. ಹೆಚ್ಚುವರಿಯಾಗಿ, ABHA- ಆಧಾರಿತ ನೋಂದಣಿಗಳು ರೋಗಿಗಳಿಗೆ ಅವರ OPD ಡಿಜಿಟಲ್ ಪ್ರಿಸ್ಕ್ರಿಪ್ಷನ್‌ಗಳು, ಫಾರ್ಮಸಿ IPD ದಾಖಲೆಗಳು ಮತ್ತು ರೋಗನಿರ್ಣಯದ ವರದಿಗಳಿಗೆ ಇದು ಡಿಜಿಟಲ್ ಪ್ರವೇಶಕ್ಕೆ ಅನುಮತಿಯನ್ನು ನೀಡುತ್ತದೆ.

Continue Reading

ಆಟೋಮೊಬೈಲ್

Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

Mahindra XUV 3XO: ಎಕ್ಸ್​ಯುವಿ 3 ಎಕ್ಸ್ ಒ ದೇಶಾದ್ಯಂತ ಗ್ರಾಹಕರ ಮನ ಗೆದ್ದಿದೆ. ಮೊದಲ 10 ನಿಮಿಷಗಳಲ್ಲಿ 27000 ಕ್ಕೂ ಹೆಚ್ಚು ಬುಕಿಂಗ್ ಗಳನ್ನು ದಾಖಲಿಸಿದೆ. ಇದು ಮಹೀಂದ್ರಾ ಕಂಪನಿಯು ಹೊಸ ಎಸ್ ಯುವಿ ಕಡೆಗೆ ಹೊಸ ಆಕರ್ಷಣೆಯನ್ನು ಪ್ರದರ್ಶಿಸಿದೆ

VISTARANEWS.COM


on

XVU300
Koo

ನವದೆಹಲಿ: ಭಾರತದ ಮುಂಚೂಣಿ ಎಸ್​ಯುವಿ (Sport Utility Vehicle) ತಯಾರಕ ಕಂಪನಿಯಾದ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಲಿಮಿಟೆಡ್ ಇತ್ತೀಚೆಗೆ ಬಿಡುಗಡೆ ಮಾಡಿದ ಕಾಂಪ್ಯಾಕ್ಟ್ ಎಸ್​​ಯುವಿ ಕಾರಾಗಿರುವ ಎಕ್ಸ್​ಯುವಿ 3ಎಕ್ಸ್ (Mahindra XUV 3XO) ಕಾರು ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಮೇ 15ರಂದು ಬುಕಿಂಗ್ ಆರಂಭಗೊಂಡ ಕೇವಲ ಒಂದು ಗಂಟೆಯಲ್ಲಿ (60 ನಿಮಿಷ) 50 ಸಾವಿರ ಬುಕಿಂಗ್​ ಪಡೆದುಕೊಂಡಿದೆ. ಈ ಮೂಲಕ ಬಿಡುಗಡೆಗೊಂಡು ಬುಕಿಂಗ್ ಆರಂಭಗೊಂಡ ಒಂದೇ ಗಂಟೆಯಲ್ಲಿ 50 ಸಾವಿರ ಬುಕಿಂಗ್​ ಪಡೆದ ವಿನೂತನ ಸಾಧನೆ ಮಾಡಿದೆ.

ಎಕ್ಸ್​ಯುವಿ 3 ಎಕ್ಸ್ ಒ ದೇಶಾದ್ಯಂತ ಗ್ರಾಹಕರ ಮನ ಗೆದ್ದಿದೆ. ಮೊದಲ 10 ನಿಮಿಷಗಳಲ್ಲಿ 27000 ಕ್ಕೂ ಹೆಚ್ಚು ಬುಕಿಂಗ್ ಗಳನ್ನು ದಾಖಲಿಸಿದೆ. ಇದು ಮಹೀಂದ್ರಾ ಕಂಪನಿಯು ಹೊಸ ಎಸ್ ಯುವಿ ಕಡೆಗೆ ಹೊಸ ಆಕರ್ಷಣೆಯನ್ನು ಪ್ರದರ್ಶಿಸಿದೆ. ಈ ಮೈಲಿಗಲ್ಲು ಎಕ್ಸ್ ಯುವಿ 3 ಎಕ್ಸ್ ಒನ ಅತ್ಯುತ್ತಮ ವಿನ್ಯಾಸ, ಪ್ರೀಮಿಯಂ ಒಳಾಂಗಣ, ಆರಾಮದಾಯಕ ಸವಾರಿ, ಅತ್ಯಾಧುನಿಕ ತಂತ್ರಜ್ಞಾನ, ರೋಮಾಂಚಕ ಕಾರ್ಯಕ್ಷಮತೆ ಮತ್ತು ಸಾಟಿಯಿಲ್ಲದ ಸುರಕ್ಷತೆಯ ಕಡೆಗೆ ಗ್ರಾಹಕರ ಗಮನವಾಗಿದೆ.

ಈ ಕುರಿತು ಮಹೀಂದ್ರಾ ಆ್ಯಂಡ್​ ಮಹಿಂದ್ರಾ ಲಿಮಿಟೆಡ್ ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಮಾತನಾಡಿ, ಎಕ್ಸ್ ಯುವಿ 3 ಎಕ್ಸ್ ಒ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ 50,000 ಬುಕಿಂಗ್ ಗಳನ್ನು ಸ್ವೀಕರಿಸಿದೆ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ಇದು ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿ. ಇಂತಹ ಅಗಾಧ ಮಾರುಕಟ್ಟೆ ಪ್ರತಿಕ್ರಿಯೆಯು ನಾವೀನ್ಯತೆ ಮತ್ತು ನಿರೀಕ್ಷೆಗಳನ್ನು ಮೀರಿ ಮೌಲ್ಯವನ್ನು ತಲುಪಿಸುವ ನಮ್ಮ ಬದ್ಧತೆಗೆ ಪೂರಕ. ಎಕ್ಸ್ ಯುವಿ 3 ಎಕ್ಸ್ ಸಾರಿಗೆ ವ್ಯವಸ್ಥೆಯ ಭವಿಷ್ಯದತ್ತ ಒಂದು ಮಹತ್ವದ ಹೆಜ್ಜೆ. ಇದನ್ನು ಗ್ರಾಹಕರಿಗೆ ಬೇಕಾದ ಹಾಗೆ ಮತ್ತು ಇನ್ನಷ್ಟು ಸೌಲಭ್ಯಗಳನ್ನ ಕೊಡುವುದಕ್ಕೆ ವಿನ್ಯಾಸಗೊಳಿಸಲಾಗಿದೆ. ಈ ನಂಬಲಾಗದ ಬೇಡಿಕೆಯನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಎಕ್ಸ್ ಯುವಿ 3 ಎಕ್ಸ್ ಒ ಅನ್ನು ತಲುಪಿಸಲು ಪ್ರಾರಂಭಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ಎಕ್ಸ್ ಯುವಿ 3 ಎಕ್ಸ್ ಒ ವಿತರಣೆಯು ಮೇ 26, 2024 ರಂದು ಪ್ರಾರಂಭವಾಗಲಿದೆ. ಉತ್ಸಾಹವನ್ನು ನಿರೀಕ್ಷಿಸಿ ನಾವು ಈಗಾಗಲೇ 10000 ಕ್ಕೂ ಹೆಚ್ಚು ಯುನಿಟ್ ಗಳನ್ನು ಉತ್ಪಾದಿಸಿದ್ದೇವೆ. ಗ್ರಾಹಕರ ಅನುಭವದ ಮೇಲೆ ಹೆಚ್ಚಿನ ಗಮನ ಹರಿಸುತ್ತೇವೆ. ಸಮಯೋಚಿತ ವಿತರಣೆಗ ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಮಹೀಂದ್ರಾ ತೆಗೆದುಕೊಳ್ಳುತ್ತದೆ. ಎಕ್ಸ್ ಯುವಿ 3 ಎಕ್ಸ್ ಒ ಗಾಗಿ ಬುಕಿಂಗ್ ಆನ್ ಲೈನ್ ನಲ್ಲಿ ಮತ್ತು ಎಲ್ಲಾ ಅಧಿಕೃತ ಮಹೀಂದ್ರಾ ಡೀಲರ್ ಶಿಪ್ ಗಳಲ್ಲಿ ತೆರೆದಿರುತ್ತದೆ.

Continue Reading
Advertisement
Prajwal Revanna Case Lawyer Devarajegowda sent to judicial custody End of police custody
ಕ್ರೈಂ35 mins ago

Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್‌ ಕಸ್ಟಡಿ ಅಂತ್ಯ

RCB vs CSK
ಕ್ರೀಡೆ48 mins ago

RCB vs CSK: ನಾಳಿನ ಪಂದ್ಯಕ್ಕೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ಆರ್​ಸಿಬಿ ಆಟಗಾರರು; ವಿಡಿಯೊ ವೈರಲ್​

Kannada New Movie The judgement Trailer Out Kannada
ಸ್ಯಾಂಡಲ್ ವುಡ್50 mins ago

Kannada New Movie: ಕುತೂಹಲ ಮೂಡಿಸಿದೆ ರವಿಚಂದ್ರನ್ ಅಭಿನಯದ ‘ದ ಜಡ್ಜ್ ಮೆಂಟ್’ ಟ್ರೈಲರ್‌!

Crime News
ದೇಶ52 mins ago

ಶಾಲೆ ಸಮೀಪದ ಚರಂಡಿಯಲ್ಲಿ 4 ವರ್ಷದ ಮಗುವಿನ ಮೃತದೇಹ ಪತ್ತೆ; ಭುಗಿಲೆದ್ದ ಹಿಂಸಾಚಾರ

Bal Jeevan Bima
ಮನಿ ಗೈಡ್1 hour ago

Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ

road Accident in Bengaluru mysore
ಬೆಂಗಳೂರು1 hour ago

Road Accident : ಮೈಸೂರು- ಬೆಂಗಳೂರಲ್ಲಿ ಮೂವರ ಪ್ರಾಣ ಕಸಿದ ಮೂರು ಪ್ರತ್ಯೇಕ ಅಪಘಾತ

Swati Maliwal
ದೇಶ1 hour ago

Swati Maliwal: “ಪೀರಿಯೆಡ್ಸ್‌ ಆಗಿದೆ.. ಪ್ಲೀಸ್‌ ಬಿಟ್ಟು ಬಿಡು ಅಂದ್ರೂ ಕೇಳಲಿಲ್ಲ”-ಆಘಾತಕಾರಿ ಸಂಗತಿ ಬಿಚ್ಚಿಟ್ಟ ಸ್ವಾತಿ ಮಲಿವಾಲ್‌

Viral Video
ವೈರಲ್ ನ್ಯೂಸ್1 hour ago

Viral Video: ಅಳುತ್ತಾ ವಿದಾಯ ಹೇಳಿದ್ದೇಕೆ ಪಾಕಿಸ್ತಾನದ ಅತ್ಯಂತ ಕಿರಿಯ ಯೂಟ್ಯೂಬರ್?

1 year of CM Siddaramaiah government BJP prepares chargesheet and Congress gears up for counter
ರಾಜಕೀಯ2 hours ago

CM Siddaramaiah: ಸಿದ್ದರಾಮಯ್ಯ ಸರ್ಕಾರಕ್ಕೆ 1 ವರ್ಷ; ಚಾರ್ಜ್‌ಶೀಟ್‌ ರೆಡಿ ಮಾಡಿದ ಬಿಜೆಪಿ; ಕೌಂಟರ್‌ಗೆ ಕಾಂಗ್ರೆಸ್‌ ತಯಾರಿ

RCB vs CSK
ಕ್ರೀಡೆ2 hours ago

RCB vs CSK: ಆರ್​ಸಿಬಿ-ಚೆನ್ನೈ ಪಂದ್ಯಕ್ಕೆ ಮಳೆ ನಿಯಮ ಹೇಗಿದೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ8 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ22 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌